Puneeth Rajkumar: ಎತ್ತರದಲ್ಲಿದ್ದೂ ಹತ್ತಿರವಿದ್ದ ಅಭಿಜಾತ ಕಲಾವಿದ ಪುನೀತ್ ರಾಜಕುಮಾರ್ - Vistara News

ಕರ್ನಾಟಕ

Puneeth Rajkumar: ಎತ್ತರದಲ್ಲಿದ್ದೂ ಹತ್ತಿರವಿದ್ದ ಅಭಿಜಾತ ಕಲಾವಿದ ಪುನೀತ್ ರಾಜಕುಮಾರ್

Puneeth Rajkumar: ಪುನೀತರನ್ನು ಕಳೆದುಕೊಂಡಾಗ ಎದೆಯೊಳಗೆ ನೋವು ತುಂಬಿಕೊಂಡಿತ್ತು. ವಿಸ್ತಾರ ನ್ಯೂಸ್ ವೆಬ್‌ನಲ್ಲಿ ಇದನ್ನು ಬರೆದು ಇದೀಗ ಆ ನೋವನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದೇನೆ.

VISTARANEWS.COM


on

Attempt to defame Puneeth Rajkumar's name on his Birthday, what is the trend on Twitter?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ನಾರಾಯಣ ಯಾಜಿ, ಖ್ಯಾತ ಲೇಖಕರು, ಅಂಕಣಕಾರರು

ಕರಾವಳಿಯವರಾದ ನಮಗೆ ಸಿನಿಮಾ ಎನ್ನುವುದು ಬದುಕಿನಲ್ಲಿ ಅಷ್ಟೇನೂ ಮುಖ್ಯ ಅಂತ ಅನಿಸ್ತಿರಲಿಲ್ಲ. ನಾವೆಲ್ಲರೂ ಯಕ್ಷಗಾನಕ್ಕೆ ಆತುಕೊಂಡವರು. ಬೆಳತನಕ ಯಕ್ಷಗಾನವನ್ನು ನೋದುವ ಸಲುವಾಗಿ ಆಟ ಪ್ರಾರಂಭವಾಗುವಾಗ ನೆಲದ ಮೇಲೆ ಕುಳಿತು ನಂತರ ಮಧ್ಯರಾತ್ರಿ ಆಗುತ್ತಿದ್ದಂತೆ ಪುಸಕ್ಕನೆಂದು ಗೇಟ್ ಕೀಪರನ ಕಣ್ಣು ತಪ್ಪಿಸಿ ಆರಾಂ ಖುರ್ಚಿಯ ಮೇಲೆ ಕುಳಿತು ರಾಕ್ಷಸ ವೇಷವನ್ನೋ, ಶಂಭುಹೆಗಡೆಯವರ ಕರ್ಣನನ್ನೋ ನೋಡುತ್ತಾ ಮೈಮರೆಯುತ್ತಿದ್ದೆವು. ಮತ್ತೊಂದು ಕಾರಣವೆಂದರೆ ತಾಲೂಕು ಕೇಂದ್ರದಲ್ಲಿ ಮಾತ್ರ ಸಿನಿಮಾ ಟಾಕೀಸ್ ಇರುವುದು ಹಾಗೂ ಅಲ್ಲಿಗೆ ಹೋಗಲು ಸರಿಯಾದ ಬಸ್ಸಿನ ವ್ಯವಸ್ಥೆಯಿಲ್ಲದಿರುವುದು. ಆ ಕಾಲದಲ್ಲಿ ಮನರಂಜನೆಯೆಂದರೆ ಯಕ್ಷಗಾನ ಮಾತ್ರ. ಆದರೂ ಆಗ ಡಾ. ರಾಜಕುಮಾರ್ ಸಿನಿಮಾ ಅಂದರೆ ಮಾತ್ರ ಊರಿನ ಎಲ್ಲರನ್ನೂ ಬಡಿದೆಬ್ಬಿಸುವುದು ಸಾಮಾನ್ಯವಾಗಿತ್ತು. ಹಿರಿಯರು ಕಿರಿಯರು ಎನ್ನುವ ಭೇದವಿಲ್ಲದೆ ಹೊನ್ನಾವರಕ್ಕೆ ಹೋಗಿ ಟಿಕೆಟ್ ಪಡೆವ ಗಲಾಟೆಯಲ್ಲಿ ಸಿನಿಮಾ ನೋಡಿ ನಂತರ ರಾತ್ರಿಹೊತ್ತು ಅವರ ಅಭಿನಯವನ್ನು ವಿಮರ್ಶೆ ಮಾಡುತ್ತಾ ಊರಿಗೆ ಬರುವುದಿತ್ತು.

ಈಗ ನಮಗನಿಸುವುದು ರಾಜಕುಮಾರ್ ಅವರ ಸಿನಿಮಾ ಮಾತ್ರ ನಮ್ಮನ್ನು ಸೆಳೆಯುತ್ತಿರುವುದು ಏಕೆಂದರೆ ಅವರ ಅಭಿನಯದಲ್ಲಿನ ವೈವಿಧ್ಯತೆ. ಮೂಲತಃ ನಾಟಕರಂಗದಿಂದ ಬಂದ ಅವರ ಅಭಿನಯದಲ್ಲಿ ನಾಟಕೀಯತೆಯ ಅಂಶ ಪ್ರಧಾನವಾಗಿರುತ್ತಿತ್ತು. ಈಗೇನಾದರೂ ಪೂನಾದ Film Institute ನವರ ಹತ್ತಿರ ಹೀಗೆ ಅಭಿನಯಿಸಬಹುದೋ ಎಂದು ಕೇಳಿದರೆ ಖಂಡಿತವಾಗಿ ಒಪ್ಪಲಿಕ್ಕಿಲ್ಲ. ಡಾ. ರಾಜ್ ಅವರು ಅಮ್ಮಾS ಅಮ್ಮಾS .. ಎನುತ್ತ ತುಂಬುತೋಳಿನ ಅಂಗಿಯನ್ನು ಹಾಕಿ ಬಿಳಿ ಬಣ್ನದ ಪ್ಯಾಂಟಿನಲ್ಲಿ ಹೊರಗಿನಿಂದ ಬರುವ ದೃಶ್ಯವನ್ನು ಮರೆಯಲಾರೆವು. ಅವೆಲ್ಲವೂ ಆದರ್ಶಮಯ ಪಾತ್ರಗಳು. ಅವರು ಯಾವತ್ತಿಗೂ ದೃಶ್ಯ ಮಾಧ್ಯಮದಲ್ಲಿ ಕುಡಿಯುವ ಅಥವಾ ಸಿಗರೇಟ್ ಸೇದುವ ದೃಶ್ಯಕ್ಕೆ ವಿರೋಧವಾಗಿದ್ದರು. ಅವರ ಒಂದು ಚಿತ್ರದ ಹೆಸರು ನೆನಪಾಗುತ್ತಿಲ್ಲ. ಅದರಲ್ಲಿ ಖಳನಾಯಕನಾಗಿ ತೂಗುದೀಪ ಇದ್ದರು ಎನ್ನುವ ನೆನಪು. ಅವರ ಮನೆಯಲ್ಲಿ ನಡೆಯುತಿರುವ ಪಾರ್ಟಿಯಲ್ಲಿ ವೇಟರ್ ಗ್ಲಾಸಿನಲ್ಲಿ ವಿಸ್ಕಿ ತಂದು ಎಲ್ಲರಿಗೂ ಕೊಡುತ್ತಿರುವಂತೆ ರಾಜ ಅವರ ಹತ್ತಿರವೂ ಬರುತ್ತಾನೆ. ಆಗ ತಮ್ಮ ಬಲಗಡೆ ತಿರುಗಿ ಆ ಉದ್ದ ಮೂಗು ಮತ್ತು ಚೂಪು ಮೀಸೆಯ ಕೆಳಗಡೆ ತುಂಟ ನಗುವಿನೊಂದಿಗೆ ತಲೆಯಲ್ಲಾಡಿಸಿ ಮತ್ತೊಬ್ಬ ವೇಟರನನ್ನು ಕರೆದು ಅವನಲ್ಲಿರುವ ತಂಪುಪಾನೀಯದ ಬಾಟಳನ್ನು ತೆಗೆದುಕೊಳ್ಳುತ್ತಾರೆ. ಆಗ ಖಳನಾಯಕಾನ ಹೆಂದತಿ Good, Keep it up ಎನ್ನುವ ಸೀನ್ ಒಂದಿದೆ. ಇದು ಅವರು ಪರದೆಯಮೇಲೂ ಕಾಣಿಸುವ ಇಮೇಜ್ ಆಗಿತ್ತು. ಇಂತಹ ಅನೇಕ ಸಂಗತಿಗಳು ಅವರನ್ನು ನಟಸಾರ್ವಭೌಮರನ್ನಾಗಿಸಿತ್ತು. ಇಂತಹ ಹೊತ್ತಿನಲ್ಲಿ ಬಂದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಆರತಿಯ ಸಂಗಡ ಆರುತಿಂಗಳ ಮಗುವೊಂದು ಕಂಡು ಬಂದಾಗ ಅದು ರಾಜಕುಮಾರ ಅವರ ಮಗನಂತೆ ಎನ್ನುವುದು ದೊಡ್ಡ ಸುದ್ಧಿಯಾಗಿತ್ತು. ಮುದ್ದಾಗಿರುವ ಆತನನ್ನು ನೋಡಲು ನನ್ನ ಆಯಿಯ ಸಮೇತ ನಮ್ಮೂರಿನಲ್ಲಿ ಎಲ್ಲರೂ ಓಡೋಡಿ ಹೋಗಿ ಚಿತ್ರವನ್ನು ನೋಡಿ ಚಿತ್ರದ ಕಥೆಯನ್ನು ಅವರ ಮಗನ ವಿಷಯವನ್ನು ಬಣ್ಣಿಸ್ವ್ದುದನ್ನು ಕೇತ್ತಾ ಬೆಳೆದಿದ್ದೆವು. ಅದೇ ಕಾರಣಕ್ಕಾಗಿ ಈ ಚಿತ್ರವನ್ನೊಮ್ಮೆ ಕಾರಣಕ್ಕಾಗಿಯಾದರೂ ನೋಡಬೇಕೆಂದು ಹಂಬಲಿಸಿದುದರ ನೆನಪಾಗುತ್ತದೆ.

ಇದು ಡಾ. ರಾಜಕುಮಾರ್‌ ಅವರು ಕನ್ನಡಿಗರನ್ನು ಆವರಿಸಿರುವ ರೀತಿ. ಹೀಗೆ ಇರುವಾಗ ನಾವೂ ಬೆಳೆದು ದೊಡ್ದವರಾಗಿ ಹಾಯ್ಸ್ಕೂಲಿನ ಕೊನೆಯ ವರ್ಷದಲ್ಲಿಯೋ ಕಾಲೇಜಿನ ಮೊದಲ ವರ್ಷದಲ್ಲಿಯೋ ಇರಬೇಕು ಭಾಗ್ಯವಂತ ಸಿನೇಮಾ ಬಿಡುಗಡೆಯಾಯಿತು. ಇಡೀ ಕನ್ನಡನಾಡನ್ನು ಸೆರೆಹಿಡಿದ ಸಿನೇಮಾ ಅಂದರೆ ಇದು. “ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ” ಎನ್ನುವ ಈ ಒಂದು ಹಾಡಿನ ಕುರಿತು ಎಷ್ಟು ಹೇಳಿದರೂ ಕಡಿಮೆಯೇ. ಈ ಹಾಡಿನಲ್ಲಿ ಪುನೀತ ತನ್ನ ತಾತನನ್ನು ಮಲಗಿಸುವ ರೀತಿ ನಮ್ಮ ಮಕ್ಕಳು ಚಿಕ್ಕರವರಿರುವಾಗ ನಮ್ಮನ್ನು ತನ್ನ ಮಡಿಲಲ್ಲಿ ಮಲಗಿಸಿ ಆಟಾವಾಡುವ ಪರಿಯಲ್ಲಿದೆ. ಸರಿಯಾಗಿ ಹಲ್ಲು ಬಾರದ ಪುನೀತ ಅಶ್ವತ್ಥರನ್ನು ಮಲಗಿಸುವಾಗ ಥಟ್ಟಂತ ಹಾರಿ ಹಾಸಿಗೆಯಮೇಲೆ ಅಜ್ಜನ ಪಕ್ಕದಲ್ಲಿ ಕುಳಿತು ಅವನ ಎದೆಯಮೇಲೆ ಪುಟ್ಟ ಕೈ ಇಡುವರೀತಿ ಇದೆಯಲ್ಲಾ, ಅದು ನಿರ್ದೇಶಕರು ಹೇಳಿ ಬರುವಂತಹದ್ದಲ್ಲ. ತಕ್ಷಣವೇ ಹಾಸಿಗೆಯಿಂದ ಹಾರಿ ದೇವರ ಫೋಟೋಕ್ಕೆ ಅಜ್ಜನ ಕ್ಷೇಮಕ್ಕಾಗಿ ಹಾರೈಸುವ ಮತ್ತು ತಿರುಗಿ ಬಂದು ಅಶ್ವತ್ಥರನ್ನು ಲಾಲಿಸುವ ದೃಶ್ಯ ಇನ್ನೂ ನನ್ನ ಭಿತ್ತಿಯಲ್ಲಿ ಹಸಿರಾಗಿ ಇದೆ. ಅಶ್ವತ್ಥ ಅವರು ಅಸಾಮಾನ್ಯ ನಟ.

ಅವರೆದುರು ನಟನೆಯಲ್ಲಿ ಯಾರೂ ನಿಲ್ಲಲಾರರು. ಆ ಗಾಂಭೀರ್ಯ, ದೇಹದ ಭಾಷೆ, ನಾಟಕದ ಹಿನ್ನೆಲೆಯನ್ನು ಮೀರಿ ಸಿನೇಮಾದ ಕ್ಯಾಮರಾಕ್ಕೆ ಬದಲಾಯಿಸುವ ಅವರಂತೆ ನಟನಾ ಸಾಮರ್ಥ್ಯವುಳ್ಳ ನಟ ಭಾರತೀಯ ಇತಿಹಾಸದಲ್ಲಿ ಮತ್ತೊಬ್ಬ ಸಿಗಲಿಕ್ಕಿಲ್ಲ. ಅಂತಹ ಅಶ್ವತ್ಥ ಅವರು ಪುನೀತ ಅಭಿನಯವನ್ನು ನೋಡುತ್ತಾ ಅದನ್ನು ಅನುಭವಿಸಿ ಮೆಚ್ಚುಗೆಯನ್ನು ಸೂಚಿಸುವ ಕಣ್ಣುಗಳು ಈ ಪದ್ಯದ್ದುದ್ದಕ್ಕೂ ಇವೆ. ಅಭಿಜಾತ ಕಲಾವಿದನಾಗಿ ಹುಟ್ಟುವುದೆಂದೆರೆ ಇದೆ ಹೊರತೂ ಬೇರೇನೂ ಅಲ್ಲ. ಭಕ್ತ ಪ್ರಹ್ಲಾದ ಎನ್ನುವ ಸಿನೇಮಾವನ್ನು ಮಾಡುವ ಕನಸು ಡಾ. ರಾಜಕುಮಾರ ಅವರಿಗೆ ಯಾವತ್ತಿಗೂ ಇತ್ತಂತೆ. ಹಿರಣ್ಯ ಕಶಿಪುವನ್ನು ಅವರು ಅಭಿನಯಿಸಿದ ರೀತಿಗೆ ಅವರೇ ಉದಾಹರಣೆಯಾಗಿ ನಿಲ್ಲಬಲ್ಲರು. ಅದಕ್ಕೆ ಸರಿಯಾಗಿ ಸರಿತಾ ಕಯಾದುವಿನ ಪಾತ್ರ. ಲವಲವಿಕೆಯ ನಾರದನಾಗಿ ಅನಂತನಾಗ್ ಈ ಎಲ್ಲದರ ನಡುವೆ ಅವರೆಲ್ಲರನ್ನೂ ಮೀರಿಸಿದ ನಟನೆ ಬಾಲಕ ಪ್ರಹ್ಲಾದನದ್ದು. ಇಂತಹ ಪ್ರಹ್ಲಾದ ಸಿಕ್ಕಿದುದರಿಂದಲೇ ಡಾ. ರಾಜ್ ಈ ಚಿತ್ರವನ್ನು ಮಾಡಿರಬೇಕು. ಬಾಲನತ ಪುನೀಟ ಅಭಿನಯಿಸುತ್ತಿರಲಿಲ್ಲ. ಅದನ್ನು ಅನುಭವಿಸಿ ತನ್ನ ಎಚ್ಚರದಲ್ಲಿಯೇ ತಾನು ವಹಿಸಿದ ಪಾತ್ರವಾಗಿ ಬಿಡುತ್ತಿದ್ದರು.

ಹಾಡಿನ ಅಭಿನಯದ ಸಂಧರ್ಭ ಬಂದಾಗ ಹಾಲುಗಲ್ಲದ ಮುಗ್ಧಮನಸ್ಸಿನ ಅವರ ನಡತೆಯೆನ್ನುವುದು ನಾಟ್ಯಶಾಸ್ತ್ರದ ಯಾವ ಪ್ರಮೇಯಕ್ಕೂ ಸಿಗುವಂತಹದಲ್ಲ. ಪರಕಾಯ ಪ್ರವೇಶವಾಗಿರುತ್ತಿತ್ತು. ನಾಯಕನಟನಾಗಿ ಅವರ ಮಿಲನ ಸಿನೇಮಾ ಕನ್ನಡ ಚಿತ್ರರಂಗದಲ್ಲಿಯೇ ಒಂದು ಮಹತ್ವದ ಸಿನೇಮಾವಾಗಿ ನಿಲ್ಲುತ್ತದೆ. ಅರಿವಿಲ್ಲದೇ ಮದುವೆಯಾಗಿ, ಆಕೆ ಮತ್ತೊಬ್ಬನನ್ನು ಪ್ರೀತಿಸುವ ಸಂಗತಿ ತಿಳಿದು ಬೇಸರಿಸದೇ ಆಕೆಯ ಹಿತವನ್ನು ಬಯಸುವ ತನ್ನೊಳಗೆ ಆಕೆಯ ಮೇಲೆ ಪ್ರೀತಿಯಿದ್ದೂ ಅದನ್ನು ತೋರ್ಪಡಿಸದ ನಟನಾ ಸಾಮರ್ಥ್ಯವನ್ನು ಅವರು ಇಲ್ಲಿ ತೋರಿದ್ದಾರೆ. ಪುನೀತ ಅವರ ಅಭಿನಯ ತನ್ನ ತಂದೆಯಂತೆ ಅಲ್ಲ; ಹೆಬ್ಬೆರಳನ್ನು ಮೇಲಕ್ಕೆತ್ತಿ ಕಿರುಬೆರಳನ್ನು ಹೊರಚಾಚಿ ಏನು ಎಂದು ಕೇಳುವ ಅವರ ಭಾವವೇ ಚಂದ. ಪಾಶ್ಚಾತ್ಯ ಪ್ರಭಾವದಿಂದ ಅಭಿನಯದಲ್ಲಿ ಸಹಜತೆ ಎಂದು ಮುಖಭಾವವನ್ನಷ್ಟೇ ಅಭಿವ್ಯಕ್ತಿಸುವ ಪರಂಪರೆಯನ್ನು ಹಿಂದೀ ಚಿತ್ರರಂಗದಲ್ಲಿ ಕಾಣಬಹುದು. ದಕ್ಷಿಣಭಾರತೀಯ ಚಿತ್ರಗಳಲ್ಲಿ ಮಲೆಯಾಳಂ ಭಾಷೆಯನ್ನುಳಿದು ಚಿತ್ರಗಳಲ್ಲಿ ನಟನೆಯಲ್ಲಿ ಓವರ ಆಕ್ಟಿಂಗ್ ಇದೆ. ಕರ್ನಾಟದ ನಾಟಕ ಕಂಪನಿಗಳಂತೆ. ಆದರೆ ಪುನೀತರ ಅಭಿನಯದಲ್ಲಿ ಯಾರ ಹೋಲಿಕೆಯೂ ಇಲ್ಲ. ತಾನೇ ಹುತ್ತದಿಂದ ಉದ್ಭವಗೊಂಡ ವಾಲ್ಮೀಕಿಯಾಗಿ ಅವರು ಕಾಣಿಸಿಕೊಳ್ಳುತ್ತಾರೆ.

ಈ ನಡುವೆ ಪುನೀತ ನಡುವೆ ಅಭಿನಯದಿಂದ ಕೆಲಕಾಲ ಹೊರ ಉಳಿದುಬಿಟ್ಟಿದ್ದರು. ಆಗ ಶಿವರಾಜ ಕುಮಾರ, ರಾಘವೇಂದ್ರ ರಾಜಕುಮಾರ ತಮ್ಮ ತಮ್ಮ ಸಹಜಾಭಿನಯದಿಂದ ಕನ್ನಡದ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ. ಡಾ. ರಾಜ ಮತ್ತು ಕನ್ನಡನಾಡಿನ ನಡುವೆ ಒಂದು ಅಸ್ಮಿತತೆಯಿದೆ. ಅದನ್ನು ನಾವು ಗೋಕಾಕ ಚಳುವಳಿಯ ಕಾಲದಲ್ಲಿ ನೋಡಿದ್ದೇವೆ. ಕಾರ್ಯ ಆದಮೇಲೆ ಎಂತಹ ಒತ್ತಡವಿದ್ದರೂ ಅದನ್ನು ನಿರಾಕರಿಸಿ ರಾಜಕೀಯದೆಡೆ ತಲೆ ಹಾಕಿಯೂ ಮಲಗಲಿಲ್ಲ. ಈ ಗುಣ ಪುನೀತರಲ್ಲಿತ್ತು. ಇದನ್ನು ಗುರುತಿಸಿದ್ದು ಕರುನಾಡ ಸಹೃದಯ ಮನಸ್ಸುಗಳು. ಸಹಜವಾಗಿ ಇದು ಅವರನ್ನು ಎಲ್ಲ ಕಲಾವಿದರನ್ನು ಮೀರಿಸಿ ಡಾ. ರಾಜಕುಮಾರ ಅವರ ಜಾಗದಲ್ಲಿ ನೋಡಲು ಪ್ರಾರಂಭಿಸಿತೇ ಹೊರತು ಆ ಮಹಾನ್ ನಟನ ಮಗ ಎನ್ನುವ ಒಂದೇ ಕಾರಣದಿಂದ ಅಲ್ಲ.

ಈ ಗುಣವೇ ಅವರು ನಿರೂಪಕರಾಗಿ ನಡೆಸಿಕೊಟ್ಟ ಕನ್ನಡದ ಕೋಟ್ಯಧಿಪತಿಯ ಯಶಸ್ಸಿಗೆ ಕಾರಣ. ನಾನೊಮ್ಮೆ ನನ್ನ ಓರ್ವ ಸ್ನೇಹಿತರಿಗೆ ಈ ಕಾರ್ಯಕ್ರಮಕ್ಕೆ ಫೋನ್ ಫ್ರೆಂಡ್ ಆಗಿ ಭಾಗವಹಿದ್ದೆ. 1972ರಲ್ಲಿ ಇಳಾಬೆನ್ ಭಟ್ಟ್ ಅವರು ಸ್ಥಾಪಿಸಿದ ಸೇವಾ ಸಂಸ್ಥೆಯ ಕುರಿತಾದ ಪ್ರಶ್ನೆ ಅದಾಗಿತ್ತು. ತುಂಬಾ ಕ್ಲಿಷ್ಟಕರ ಪ್ರಶ್ನೆ. ನಾನು ತಕ್ಷಣವೇ ಉತ್ತರಿಸಿವುದನ್ನು ಗಮನಿಸಿ ನನ್ನೊಟ್ಟಿಗೆ ಮತ್ತೂ ಮಾತಾಡಿ ನನ್ನಿಂದಲೇ ಆ ವಿಷಯದ ವಿವರಣೆಯನ್ನು ಹೇಳಿಸಿರುವುದನ್ನು ಈಗ ನೆನಪಿಗೆ ಬರುತ್ತದೆ. ಅದನ್ನು ಟೀವಿ ಕಾರ್ಯಕ್ರಮದ ತಂತ್ರಗಾರಿಕೆ ಎನ್ನಬಹುದೇನೋ, ಆದರೆ ಆ ದಿವಸ ಕಾರ್ಯಕ್ರ್ಮ ಮುಗಿದ ತಕ್ಷಣ ಮತ್ತೆ ನನಗೆ ಫೋನ್ ಮಾಡಿ ಅವರ ವಯಕ್ತಿಕ ಅಭಿನಂದನೆಗಳನ್ನು ತಿಳಿಸಿ “ನೀವೇಕೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಬಂದಿಲ್ಲ” ಎಂದು ಕೇಳಿದ್ದರು. ನಾನು ಏನೋ ತೇಲಿಸಿ ಉತ್ತರ ಕೊಟ್ಟಿದ್ದೆ. ಆಗ ನನಗೆ ಡಾ. ರಾಜ ಕುಮಾರ ಕುಟುಂಬದವರು ಎತ್ತರದಲ್ಲಿದ್ದವರಾದರೂ, ಹತ್ತಿರದಲ್ಲಿಯೂ ಇರುತ್ತಾರೆ ಎನ್ನುವ ಅನುಭವವಾಯಿತು.

ಪುನೀತರನ್ನು ಕಳೆಕೊಂಡಾಗ ಎದೆಯೊಳಗೆ ಈ ನೋವು ತುಂಬಿಕೊಂಡಿತ್ತು. ವಿಸ್ತಾರ ನ್ಯೂಸ್ ನಲ್ಲಿ ಇದನ್ನು ಬರೆದು ಇದೀಗ ಆ ನೋವನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದೇನೆ.

ಇದನ್ನೂ ಓದಿ: Kabzaa Movie: ಕಬ್ಜ ಸೆಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌: ಸಿನಿಮಾದಲ್ಲಿದ್ದಾರ ನಟ? ವಿಡಿಯೊ ವೈರಲ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Car Catches Fire: ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ

Car Catches Fire: ಬಾಗಲಕೋಟೆ ಜಿಲ್ಲೆಯ ಕಮತಗಿ ಸಮೀಪದ ಇಂಗಳಗಿ ರಸ್ತೆಯಲ್ಲಿ ಅವಘಡ ನಡೆದಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ಕಾರಿನಲ್ಲಿದ್ದ ವ್ಯಕ್ಯಿ ಸಜೀವ ದಹನವಾಗಿದ್ದಾರೆ.

VISTARANEWS.COM


on

car catches fire
Koo

ಬಾಗಲಕೋಟೆ: ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ವ್ಯಕ್ತಿಯೊಬ್ಬ ಸಜೀವ ದಹನವಾಗಿರುವ ಘಟನೆ (Car Catches Fire) ಜಿಲ್ಲೆಯ ಕಮತಗಿ ಸಮೀಪದ ಇಂಗಳಗಿ ರಸ್ತೆಯಲ್ಲಿ ನಡೆದಿದೆ. ಹುನಗುಂದ ತಾಲೂಕಿನ ಚಿಕ್ಕಮಾಗಿ ಗ್ರಾಮದ ಸಂಗನಗೌಡ ಪಾಟೀಲ (ಗೌಡರ) (50) ಮೃತ ವ್ಯಕ್ತಿ. ಕಾರಿಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ರಸ್ತೆ ಪಕ್ಕ ಕಾರು ಹೊತ್ತಿ ಉರಿದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿಗೆ ಬೆಂಕಿ

ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಧಾರವಾಡದ ಕಣಿವಿ ಹೊನ್ನಾಪುರ ಬಳಿ ನಡೆದಿದೆ. ಕೇರಳದಿಂದ ದೆಹಲಿಗೆ ಕಡೆಗೆ ಹೊರಟಿದ್ದ ಲಾರಿ ಪಲ್ಟಿಯಾಗಿದ್ದು, ಈ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಬ್ಯಾಟರಿ, ಟಿವಿ ಸಾಮಗ್ರಿ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ | Murder Case: ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ; ಬಾಲಕಿಯ ಅಪಹರಿಸಿ ಕತ್ತು ಕೊಯ್ದ ಕಿರಾತಕರು

Continue Reading

ಬೆಂಗಳೂರು

Child Actor Master OM: ಓದಿಗೂ ಸೈ, ಮಾಡೆಲಿಂಗ್‌ಗೂ ಸೈ ಈ ಸೂಪರ್‌ ಟೀನ್‌ ಮಾಡೆಲ್‌ ಮಾಸ್ಟರ್‌ ಓಂ!

Child Actor Master OM: ಕರ್ನಾಟಕ ಸೂಪರ್‌ ಟೀನ್‌ ಮಾಡೆಲ್‌ ಹಾಗೂ ಬಾಲ ನಟ ಮಾಸ್ಟರ್ ಓಂ‌, ಇದೀಗ 10ನೇ ತರಗತಿಯ ಬೋರ್ಡ್‌ ಎಕ್ಸಾಂ (ಐಸಿಎಸ್‌ಇ ಸಿಲಬಸ್)ನಲ್ಲಿ 97% ಅಂಕ ಗಳಿಸುವ ಮೂಲಕ ಬೆಂಗಳೂರಿನ ಆಚಾರ್ಯ ಪಾಠಶಾಲೆಯ ಟಾಪರ್ಸ್‌ ಲಿಸ್ಟ್‌ಗೆ ಸೇರಿದ್ದಾನೆ. ನಟನೆ, ಮಾಡೆಲಿಂಗ್‌ನಂಥ ಪಠ್ಯೇತರ ಚಟುವಟಿಕೆ ತನ್ನ ಓದಿಗೆ ಅಡ್ಡಿಯಾಗಲಿಲ್ಲ ಎನ್ನುವ ಓಂ, ಮುಂದಿನ ತರಗತಿಗಳಲ್ಲೂ ಉತ್ತಮ ಅಂಕ ಗಳಿಸುವ ಗುರಿ ಹೊಂದಿದ್ದಾನೆ.

VISTARANEWS.COM


on

ಕರ್ನಾಟಕ ಸೂಪರ್‌ ಟೀನ್‌ ಮಾಡೆಲ್‌ ಮತ್ತು ಬಾಲ ನಟ ಓಂ
Koo

ಬೆಂಗಳೂರು: ಕರ್ನಾಟಕ ಸೂಪರ್‌ ಟೀನ್‌ ಮಾಡೆಲ್‌ ಹಾಗೂ ಬಾಲ ನಟನಾಗಿದ್ದ (Child Actor Master OM) ಮಾಸ್ಟರ್ ಓಂ, ಇದೀಗ 10ನೇ ತರಗತಿ ಬೋರ್ಡ್‌ ಎಕ್ಸಾಂ (ಐಸಿಎಸ್‌ಇ ಸಿಲಬಸ್) ಪರೀಕ್ಷೆಯಲ್ಲಿ 97% ಅಂಕ ಗಳಿಸುವ ಮೂಲಕ ಪ್ರತಿಷ್ಠಿತ ಆಚಾರ್ಯ ಪಾಠಶಾಲೆಯ ಟಾಪರ್ಸ್‌ ಲಿಸ್ಟ್‌ಗೆ ಸೇರಿದ್ದಾನೆ. ಐಸಿಎಸ್‌ಸಿ ಸಿಲಬಸ್‌ನಲ್ಲಿ ಓದುವವರು ಕನ್ನಡವೆಂದರೇ ಕಬ್ಬಿಣದ ಕಡಲೆ ಎಂದು ಭಾವಿಸುತ್ತಾರೆ. ಆದರೆ, ಓಂ ಕನ್ನಡದಲ್ಲಿ 100 ಕ್ಕೆ 97 ಅಂಕಗಳನ್ನು ಗಳಿಸುವ ಮೂಲಕ ಇದನ್ನು ಸಾಧಿಸಿ ತೋರಿಸಿದ್ದಾನೆ. ಗಣಿತ ಹಾಗೂ ಹಿಸ್ಟರಿಯಲ್ಲಿ 100ಕ್ಕೆ 99 ಮಾರ್ಕ್ಸ್‌ ಗಳಿಸಿದ್ದಾನೆ. ಇನ್ನುಳಿದ ಎಲ್ಲಾ ವಿಷಯಗಳಲ್ಲೂ ಕ್ರಮವಾಗಿ 95, 96, 97 ಹೀಗೆ ಅತ್ಯಧಿಕ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ಇದಕ್ಕೆಲ್ಲಾ ಶಾಲೆಯ ಪ್ರಾಂಶುಪಾಲರು, ಟೀಚರ್ಸ್‌ ಹಾಗೂ ಪೋಷಕರ ಸಹಕಾರವೇ ಕಾರಣ ಎಂದು ಸಂತಸ ಹಂಚಿಕೊಂಡಿದ್ದಾನೆ.

ಓಂ ಸಿನಿಮಾ, ಫ್ಯಾಷನ್‌ ಜರ್ನಿ

ಮದುವೆಯ ಮಮತೆಯ ಕರೆಯೊಲೆ, ಲೀ, ವೇಷಧಾರಿ, ಪ್ರೇಮಂ, ಸಂತೋಷ-ಸಂಗೀತ, ಕಾಳಿದಾಸ ಕನ್ನಡ ಮೇಷ್ಟ್ರು, ಕಾಫಿ(ತಮಿಳು) ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾ, 35ಕ್ಕೂ ಅಧಿಕ ಜಾಹೀರಾತು ಮತ್ತು ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್‌ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿರುವ ಓಂ ಓದಿನಲ್ಲೂ ಮುಂದಿರುವುದು ಸಿನಿಮಾ ಬಾಲ ನಟ-ನಟಿಯರಿಗೆ ಮಾದರಿಯಾಗುವಂತಿದೆ. ಇವೆಲ್ಲದರ ಜೊತೆಗೆ ಶಾಲೆಯ ಕ್ಯಾಪ್ಟನ್‌ಶಿಪ್‌ ಹಾಗೂ ತೇಜಸ್ವಿ ಸೂರ್ಯರ ಸೌತ್‌ ಸ್ಕೂಲ್‌ ಲೀಡರ್ಸ್‌ ಟೀಮ್‌ನ ಸಾಮಾಜಿಕ ಕಾರ್ಯಾಗಾರಗಳಲ್ಲೂ ಶಾಲೆಯ ಪ್ರತಿನಿಧಿಯಾಗಿ ಪಾಲ್ಗೊಂಡ ಹೆಗ್ಗಳಿಕೆ ಓಂನದು.

ಇದನ್ನೂ ಓದಿ | Girls Pleats Skirts Fashion: ಹುಡುಗಿಯರ ಮೆಚ್ಚಿನ ಆಯ್ಕೆ ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್ಸ್‌ಗಳು

ನಟನೆ, ಮಾಡೆಲಿಂಗ್‌ನಂಥ ಪಠ್ಯೇತರ ಚಟುವಟಿಕೆ ತನ್ನ ಓದಿಗೆ ಅಡ್ಡಿಯಾಗಲಿಲ್ಲ ಎನ್ನುವ ಓಂ, ಮುಂದಿನ ತರಗತಿಗಳಲ್ಲೂ ಉತ್ತಮ ಅಂಕ ಗಳಿಸುವ ಗುರಿ ಹೊಂದಿದ್ದಾನೆ. ಹಾಗೆಯೇ, ನಟನೆ-ಮಾಡೆಲಿಂಗ್‌ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಬಯಕೆಯನ್ನೂ ವ್ಯಕ್ತಪಡಿಸಿದ್ದಾನೆ.

Continue Reading

ಬೆಂಗಳೂರು

LuLu Fashion Week 2024: ಲುಲು ಫ್ಯಾಷನ್ ವೀಕ್ 2024; ಕಲರ್ ಫುಲ್ ಬಟ್ಟೆ ತೊಟ್ಟು ಕಂಗೊಳಿಸಿದ ನಾರಿಮಣಿಗಳು

LuLu Fashion Week 2024: ಬೆಂಗಳೂರಿನ ಲುಲು ಮಾಲ್‌ನಲ್ಲಿ ಮೇ 10ರಿಂದ 12ರವರೆಗೆ ಮೂರು ದಿನಗಳವರೆಗೆ ಲುಲು ಫ್ಯಾಷನ್ ವೀಕ್ʼ 2ನೇ ಆವೃತ್ತಿ ಆಯೋಜಿಸಲಾಗಿದೆ. ಶನಿವಾರ ನಡೆದ ಸ್ಪ್ರಿಂಗ್‌ ಸಮ್ಮರ್‌ 2024 ಕಾರ್ಯಕ್ರಮದಲ್ಲಿ ವಿವಿಧ ಬ್ರ್ಯಾಂಡ್‌ಗಳ ಫ್ಯಾಷನ್ ಶೋ ನಡೆಯಿತು. ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್‌ ಮಾಧ್ಯಮ ಸಹಯೋಗ ನೀಡಿದೆ.

VISTARANEWS.COM


on

Koo

ಬೆಂಗಳೂರು: ನಗರದ ಲುಲು ಮಾಲ್‌ನಲ್ಲಿ ʼಲುಲು ಫ್ಯಾಷನ್ ವೀಕ್ʼ 2ನೇ ಆವೃತ್ತಿಯ (LuLu Fashion Week 2024) ಭಾಗವಾಗಿ ನಡೆದ ಸ್ಪ್ರಿಂಗ್‌ ಸಮ್ಮರ್‌ 2024 ಕಾರ್ಯಕ್ರಮವು 2ನೇ ದಿನವೂ ಅದ್ಧೂರಿಯಾಗಿ ನೆರವೇರಿತು. ಕಲರಫುಲ್ ಸಂಜೆಯಲ್ಲಿ ಮೂಡಿಬಂದ ಫ್ಯಾಷನ್ ಶೋ ನೋಡಲು ಸಾವಿರಾರು ಜನರು ಆಗಮಿಸಿದ್ದರು.

ಮೇ 10ರಂದು ಆರಂಭವಾದ ಕಾರ್ಯಕ್ರಮ ಮೇ 12 ಭಾನುವಾರದವರೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್‌ ಮಾಧ್ಯಮ ಸಹಯೋಗ ನೀಡಿದೆ. ಶನಿವಾರ ನಡೆದ ಸ್ಪ್ರಿಂಗ್‌ ಸಮ್ಮರ್‌ 2024 ಕಾರ್ಯಕ್ರಮದಲ್ಲಿ ನುವಾ, ಪೆಪೆ ಜೀನ್ಸ್ ಲಂಡನ್, ಪೀಟರ್ ಇಂಗ್ಲೆಂಡ್, ಅಮೆರಿಕನ್ ಟೂರಿಸ್ಟರ್, ಕ್ರೊಯ್ಡಾನ್ ಸೇರಿದಂತೆ ಹಲವಾರು ಬ್ರ್ಯಾಂಡ್‌ಗಳ ಫ್ಯಾಷನ್ ಶೋ ನಡೆಯಿತು. ಜೊತೆಗೆ ಬಿಗ್ ಚೋಕೋ ಡೇಸ್ ಲೋಗೋ ಲಾಂಚ್ ಮಾಡಲಾಯಿತು. ನಂತರ ಫ್ಯಾಷನ್ ಫೋರಂನಲ್ಲಿ ಭವಿಷ್ಯದ ಫ್ಯಾಷನ್ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಚಂದನವನದ ನಟ ರಿಷಿ ಭಾಗಿಯಾಗಿದ್ದರು.

ಇನ್ನು ಹಲವಾರು ಕಲೆಗಳಿಗೆ ಕಾರ್ಯಕ್ರಮ ವೇದಿಕೆಯಾಯಿತು. ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಲುಲು ಮಾಲ್ ಅಂಗಳದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ವಿಭಿನ್ನವಾದ ಬಟ್ಟೆ ತೊಟ್ಟು ನಾರಿಯರು ಕಂಗೊಳಿಸಿದರು. ವಾರಾಂತ್ಯವಾಗಿದ್ದರಿಂದ ಹೆಚ್ಚಿನ ಜನರು ಆಗಮಿಸಿದ್ದು, ಮಕ್ಕಳು ಸಹ ಖುಷಿಪಟ್ಟರು.

ಇದನ್ನೂ ಓದಿ | Hair Color Fashion: ವೈರಲ್‌ ಆದ ಹೇರ್‌ ಕಲರ್ ಸ್ಟೈಲ್‌

ಒಟ್ಟಿನಲ್ಲಿ ಲುಲು ಫ್ಯಾಷನ್ ವೀಕ್ ಬಹು ಜೋರಾಗಿದ್ದು, ಪ್ಯಾಷನ್ ಶೋ ನೋಡಿ ನೆರೆದಿದ್ದ ಜನರು ಫುಲ್ ಫಿದಾ ಆಗಿದ್ದಾರೆ. ಇನ್ನು ಮೇ 12 ಭಾನುವಾರ ಫ್ಯಾಷನ್ ವೀಕ್ ಮುಕ್ತಾಯಗೊಳ್ಳಲಿದೆ.

Continue Reading

ಕರ್ನಾಟಕ

ಮಹಿಳೆಗೆ ಲೈಂಗಿಕ ದೌರ್ಜನ್ಯ ಕೇಸ್;‌ ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಹೊಳೆನರಸೀಪುರದ ಜೆಎಂಎಫ್‌ಸಿ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಿದೆ.

VISTARANEWS.COM


on

Devarajegowda
Koo

ಹಾಸನ: ಮಹಿಳೆಗೆ ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ, ವಕೀಲರೂ ಆಗಿರುವ ದೇವರಾಜೇಗೌಡ (Devaraje Gowda) ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಮೇ 24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಹೊಳೆನರಸೀಪುರದ ಜೆಎಂಎಫ್‌ಸಿ ನ್ಯಾಯಾಲಯವು ಆದೇಶ ಹೊರಡಿಸಿದೆ. ಇದರೊಂದಿಗೆ, ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ನಲ್ಲಿ (Prajwal Revanna Case) ಸುದ್ದಿಯಾಗಿದ್ದ ದೇವರಾಜೇಗೌಡ ಅವರೂ ಜೈಲುಪಾಲಾದಂತಾಗಿದೆ.

ಹಿರಿಯೂರಿನಲ್ಲಿ ವಕೀಲ ದೇವರಾಜೇಗೌಡ ಅವರನ್ನು ಮೇ 10ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಹೊಳೆನರಸೀಪುರ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿನಿಂದ ಬಳ್ಳಾರಿಗೆ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹೊಳೆನರಸೀಪುರ ಠಾಣೆಯಲ್ಲಿ ದೇವರಾಜೇಗೌಡ ವಿರುದ್ಧ ಏ.1ರಂದು ಕೇಸ್‌ ದಾಖಲಾಗಿತ್ತು. ಹಾಗಾಗಿ, ಅವರನ್ನು ವಶಕ್ಕೆ ಪಡೆಯಲಾಗಿತ್ತು.

Prajwal Revanna Case

ಆಡಿಯೊ ವೈರಲ್‌

ಪೊಲೀಸರು ವಶಕ್ಕೆ ಪಡೆಯುವ ಮುನ್ನ ವಿಡಿಯೊದಲ್ಲಿ ಮಾತನಾಡಿದ್ದ ವಕೀಲ ದೇವರಾಜೇಗೌಡ, ನಾನು ಎಲ್ಲೂ ಕಾಣೆ ಆಗಿಲ್ಲ. ಮೂರು ದಿನ ರಜೆ ಇರುವುದರಿಂದ ದೇವಾಲಯಕ್ಕೆ ಹೊಗುತ್ತಿದ್ದೇನೆ. ಕಾಣೆ ಆಗುವ ಪರಿಸ್ಥಿತಿ ನನಗೆ ಬಂದಿಲ್ಲ. ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಿದ್ದೇನೆ. ಆಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.

ಇನ್ನು ಇದೇ ವೇಳೆ ಹಾಸನ ಅಶ್ಲೀಲ‌ ವಿಡಿಯೋ ಪ್ರಕರಣದ ಸಂಬಂಧ ಅಜ್ಞಾತ ಸ್ಥಳದಿಂದ ದೇವರಾಜೇಗೌಡ ಮೂರು ಆಡಿಯೊ ಕ್ಲಿಪ್ ಬಿಡುಗಡೆ ಮಾಡಿದ್ದರು. ಮಾಜಿ ಸಂಸದ ಶಿವರಾಮೇಗೌಡ ಜತೆ ಮಾತನಾಡಿರುವ ಎನ್ನಲಾದ ಎರಡು ಆಡಿಯೊ ತುಣುಕು ವೈರಲ್‌ ಆಗಿದ್ದವು. ಹನಿಟ್ರ್ಯಾಪ್ ಸಂಬಂಧ ಮಹಿಳೆ ಗಂಡನ ಜತೆ ಮಾತನಾಡಿದ ಒಂದು ಆಡಿಯೊ ಇದೆ. ಇನ್ನು ಡಿಕೆಶಿ ವಿಚಾರ ಶಿವರಾಮೇಗೌಡ ಜತೆ ದೇವರಾಜೇಗೌಡ ಮಾತನಾಡುತ್ತಿರುವ ಆಡಿಯೊ ಕೂಡ ಇದ್ದು, ಎಸ್‌ಐಟಿ ವಿಚಾರಣೆಯಲ್ಲಿ ಡಿಕೆಶಿ ಹೆಸರೇಳದಂತೆ ಶಿವರಾಮೇಗೌಡ ಸೂಚಿಸಿದ್ದರು.

ಕಾರ್ತಿಕ್‌, ದೇವರಾಜೇಗೌಡ ಪೆನ್‌ಡ್ರೈವ್‌ ರೂವಾರಿಗಳು

ದೇವರಾಜೇಗೌಡ ಬಂಧನದ ಬಳಿಕ ಮಾತನಾಡಿದ್ದ ಮಾಜಿ ಸಂಸದ ಶಿವರಾಮೇಗೌಡ, ಹಲವು ಆರೋಪ ಮಾಡಿದ್ದಾರೆ. “ಪೆನ್‌ಡ್ರೈವ್‌ ರಿಲೀಸ್‌ ಮಾಡಿರುವುದರ ಹಿಂದೆ ಕಾರು ಚಾಲಕ ಕಾರ್ತಿಕ್‌ ಹಾಗೂ ದೇವರಾಜೇಗೌಡ ಇದ್ದಾರೆ. ಏಟ್ರಿಯಾ ಹೋಟೆಲ್‌ನಲ್ಲಿ ಮಾತನಾಡುವಾಗ ನನ್ನ ವಿರುದ್ಧ ತನಿಖೆ ಮಾಡಬೇಕು ಅಂತಿದ್ದಾರೆ ಎಂದ. ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಬಗ್ಗೆ ಪದೇಪದೆ ಮಾತನಾಡಬೇಡ ಎಂದೆ. ನಿನ್ನದು ನೀನು ಸರಿಮಾಡಿಕೊ. ಉಳಿದ ಉಸಾಬರಿ ನಿನಗೆ ಬೇಡ ಎಂಬುದಾಗಿ ಹೇಳಿದ್ದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Continue Reading
Advertisement
car catches fire
ಕ್ರೈಂ12 mins ago

Car Catches Fire: ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ

jay Shah
ಪ್ರಮುಖ ಸುದ್ದಿ59 mins ago

Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

ಬೆಂಗಳೂರು1 hour ago

Child Actor Master OM: ಓದಿಗೂ ಸೈ, ಮಾಡೆಲಿಂಗ್‌ಗೂ ಸೈ ಈ ಸೂಪರ್‌ ಟೀನ್‌ ಮಾಡೆಲ್‌ ಮಾಸ್ಟರ್‌ ಓಂ!

ಬೆಂಗಳೂರು2 hours ago

LuLu Fashion Week 2024: ಲುಲು ಫ್ಯಾಷನ್ ವೀಕ್ 2024; ಕಲರ್ ಫುಲ್ ಬಟ್ಟೆ ತೊಟ್ಟು ಕಂಗೊಳಿಸಿದ ನಾರಿಮಣಿಗಳು

IPL 2024
ಕ್ರಿಕೆಟ್2 hours ago

IPL 2024 : ಗುಜರಾತ್​ ತಂಡ ಸೇರಿದ ಗುರ್ನೂರ್ ಬ್ರಾರ್; ಎಲ್ಲಿಯ ಆಟಗಾರ ಇವರು?

Devarajegowda
ಕರ್ನಾಟಕ3 hours ago

ಮಹಿಳೆಗೆ ಲೈಂಗಿಕ ದೌರ್ಜನ್ಯ ಕೇಸ್;‌ ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

Murder Case
ಕರ್ನಾಟಕ3 hours ago

Murder Case: ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ; ಬಾಲಕಿಯ ಅಪಹರಿಸಿ ಕತ್ತು ಕೊಯ್ದ ಕಿರಾತಕರು

Richard Hansen
ಕರ್ನಾಟಕ4 hours ago

Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

Legislative Council Election
ಕರ್ನಾಟಕ4 hours ago

ವಿಧಾನ ಪರಿಷತ್ ಚುನಾವಣೆ; 5 ಕ್ಷೇತ್ರ ಬಿಜೆಪಿಗೆ, 1 ಕ್ಷೇತ್ರ ಜೆಡಿಎಸ್‌ಗೆ; ಕಮಲ ಪಾಳಯದ ಪಟ್ಟಿ ಇಲ್ಲಿದೆ

Rain News
ಮಳೆ4 hours ago

Rain News: ಮಳೆ ಆರ್ಭಟ: ಸಿಡಿಲು ಬಡಿದು ಇಬ್ಬರ ಸಾವು, ಮತ್ತಿಬ್ಬರಿಗೆ ಗಾಯ; ನೆಲಕಚ್ಚಿದ ಬಾಳೆ ತೋಟ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru News
ಬೆಂಗಳೂರು9 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ19 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ1 day ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ1 day ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

ಟ್ರೆಂಡಿಂಗ್‌