Actress Milana Nagaraj: ಪತಿಯ ಹುಟ್ಟುಹಬ್ಬದಂದೇ ಮಿಲನಾ ನಾಗರಾಜ್ ʼಬೇಬಿ ಶವರ್ʼ; ವಿಡಿಯೊ ನೋಡಿ - Vistara News

Latest

Actress Milana Nagaraj: ಪತಿಯ ಹುಟ್ಟುಹಬ್ಬದಂದೇ ಮಿಲನಾ ನಾಗರಾಜ್ ʼಬೇಬಿ ಶವರ್ʼ; ವಿಡಿಯೊ ನೋಡಿ

Actress Milana Nagaraj: ಹೊಟ್ಟೆಯೊಳಗೆ ಹೊಸ ಜೀವವೊಂದು ಮಿಸುಕಾಡುತ್ತಿದ್ದರೆ ಅದರ ಖುಷಿ ಹೇಳತೀರದು. ನಟಿ ಮಿಲನಾ ನಾಗರಾಜ್ ಅವರು ಈಗ ಈ ಖುಷಿಯ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪುಟಾಣಿ ಜೀವವೊಂದು ಅವರ ಮಡಿಲು ಸೇರಲಿದೆ. ಈಗಂತೂ ಎಲ್ಲರೂ ಬೇಬಿ ಶವರ್ ಅನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ನಟಿ ಮಿಲನಾ ನಾಗರಾಜ್ ಕೂಡ ತಮ್ಮ ಬೇಬಿ ಶವರ್ ಅನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.ಪತಿ ಡಾರ್ಲಿಂಗ್ ಕೃಷ್ಣ ಅವರ ಜನುಮದಿನದಂದೇ ತಮ್ಮ ಬೇಬಿ ಶವರ್ ಅನ್ನು ಸೆಲೆಬ್ರೆಟ್ ಮಾಡಿಕೊಳ್ಳುವ ಮೂಲಕ ಹುಟ್ಟುಹಬ್ಬವನ್ನು ವಿಶೇಷಗೊಳಿಸಿದ್ದಾರೆ.

VISTARANEWS.COM


on

Actress Milana Nagaraj
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್‌ಗಳಲ್ಲಿ ನಟಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ ಕೂಡ ಒಂದು. ಪ್ರೀತಿಸಿ ಮದುವೆಯಾದ ಈ ದಂಪತಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇದೀಗ ತಾಯಿಯಾಗುತ್ತಿರುವ ಮಿಲನಾ ನಾಗರಾಜ್ (Actress Milana Nagaraj) ಅವರು ತಮ್ಮ ಬೇಬಿ ಶವರ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನಟ ಡಾರ್ಲಿಂಗ್ ಕೃಷ್ಣ ಅವರ ಜನುಮ ದಿನ ಜೂನ್ 12ರಂದು. ಈ ಬಾರಿ ಮಿಲನಾ ನಾಗರಾಜ್ ಅವರ ಬೇಬಿ ಶವರ್ ಕೂಡ ಅದೇ ದಿನ ಮಾಡಲಾಗಿದೆ. ಮಿಲನಾ ನಾಗರಾಜ್ ಅವರು ಪತಿಯ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ತಮ್ಮ ಬೇಬಿ ಶವರ್‌ ಅನ್ನು ಒಟ್ಟಿಗೇ ಸೆಲೆಬ್ರೆಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪೋಟೊಗಳನ್ನು ಮಿಲನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತು ಈ ದಿನವನ್ನು ತಮ್ಮ ಪತಿಗಾಗಿ ವಿಶೇಷಗೊಳಿಸಲು ಅವರು ಈ ರೀತಿ ಯೋಜನೆ ಮಾಡಿದ್ದರು ಎಂಬುದಾಗಿ ತಿಳಿಸಿದ್ದಾರೆ.

ಹಾಗೆಯೇ ಮಿಲನಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಪಾರ್ಟಿಯ ಸಣ್ಣ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿಶೇಷವಾದುದೆಂದರೆ, ಪಿಂಟ್ ರೆಸ್ಟ್ ಶೈಲಿಯ ಹೊರಾಂಗಣ ಸೆಟಪ್ ನಲ್ಲಿರುವ ಬೋರ್ಡ್. ಇದರಲ್ಲಿ “ತಂದೆಯಾಗಲಿರುವವರಿಗೆ ಹುಟ್ಟು ಹಬ್ಬದ ಶುಭಾಶಯಗಳು” ಎಂದು ಬರೆಯಲಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಪೋಟೊವೊಂದನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದರು. ಹಾಗೂ “ನಮ್ಮನ್ನು ಆಶೀರ್ವದಿಸಿ” ಎಂದು ಶೀರ್ಷಿಕೆ ನೀಡಿದ್ದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮಗು ಜನಿಸಲಿದೆ ಎಂದು ದಂಪತಿ ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್ ಗೆ ಕನ್ನಡ ಚಿತ್ರರಂಗದವರು ಅಭಿನಂದನೆ ಸಲ್ಲಿಸಿದ್ದರು.

ಇದನ್ನೂ ಓದಿ: ರೈಲ್ವೆ ಟಿಕೆಟ್ ಈ ರೀತಿ ಬುಕ್ ಮಾಡಿದರೆ ಜೈಲೂಟ ಗ್ಯಾರಂಟಿ!

ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದ ಚಿತ್ರೀಕರಣದ ವೇಳೆ ಭೇಟಿಯಾದ ಈ ಜೋಡಿ 2015ರಿಂದ ಡೇಟಿಂಗ್ ಪ್ರಾರಂಭಿಸಿದರು. ನಂತರ 2021ರಲ್ಲಿ ಬೆಂಗಳೂರಿನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು. ಇದೀಗ ಮೊದಲ ಮಗುವಿನ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kalki 2898AD: ಕಲಿಯುಗದಲ್ಲಿ ʼಕಲ್ಕಿʼಯ ಆಗಮನದ ಚರ್ಚೆ ಹುಟ್ಟು ಹಾಕಿದ ‘ಕಲ್ಕಿ 2898ಎಡಿ’ ಸಿನಿಮಾ!

ಭಗವಾನ್ ವಿಷ್ಣುವಿನ 10ನೇ ಅವತಾರವಾದ ಕಲ್ಕಿಯು ಕಲಿಯುಗವನ್ನು ಕೊನೆಗೊಳಿಸಿ ಸತ್ಯಯುಗವನ್ನು ಪ್ರಾರಂಭಿಸಲು ಕಲಿಯುಗದ ಕೊನೆಯಲ್ಲಿ ಅವತಾರವೆತ್ತುತ್ತಾನೆ ಎಂದೇ ನಂಬಲಾಗಿದೆ. ಈಗ ಬಿಡುಗಡೆಯಾಗಿರುವ ಕಲ್ಕಿ 2898ಎಡಿ (Kalki 2898AD) ಚಿತ್ರ ಹಿಂದುಗಳಲ್ಲಿ ಕಲ್ಕಿಯ ಆಗಮನದ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ. ಈ ಕುರಿತ ಕುತೂಹಲಕರ ಮಾಹಿತಿಯ ವರದಿ ಇಲ್ಲಿದೆ.

VISTARANEWS.COM


on

By

Kalki 2898AD
Koo

ವಿಶ್ವದಾದ್ಯಂತ (world) ತೆರೆಗೆ ಬಂದ ಅತ್ಯಂತ ದುಬಾರಿ ಚಿತ್ರ (film) ʼಕಲ್ಕಿ 2898 ಎಡಿʼ (Kalki 2898AD) ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಹಿಂದೂ ಧರ್ಮದ (hindu dharma) ವಿಷಯದ ಮೇಲೆ ಕೇಂದ್ರೀಕೃತವಾಗಿರುವುದು. ಭಗವಾನ್ ವಿಷ್ಣುವಿನ (baghavan vishnu) 10ನೇ ಅವತಾರ ಕಲ್ಕಿ (kalki). ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಕಲ್ಕಿ, ಕಲಿಯುಗವನ್ನು ಕೊನೆಗೊಳಿಸಿ ಮತ್ತೆ ಸತ್ಯಯುಗದ ಸುವರ್ಣ ಯುಗವನ್ನು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.

Kalki 2898AD

ಕಲ್ಕಿಯ ಆಗಮನವು ಹಿಂದೂಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಈತ ಕಲಿಯುಗದ ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದೇ ಭಾವಿಸಲಾಗಿದೆ. ಕಲಿಯುಗ ವಂಚನೆ, ಪಾಪ ಮತ್ತು ಅನೈತಿಕತೆಯಿಂದ ತುಂಬಿರುವ ಯುಗವಾಗಿದೆ. ಇದೀಗ ತೆರೆಗೆ ಬಂದಿರುವ ‘ಕಲ್ಕಿ 2898 ಎಡಿ’ ಈ ಕುರಿತು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ತೆಲುಗು ಸೂಪರ್‌ಸ್ಟಾರ್ ಪ್ರಭಾಸ್, ಬಾಲಿವುಡ್ ತಾರೆಗಳಾದ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ತಮಿಳಿನ ಹಿರಿಯ ನಟ ಕಮಲ್ ಹಾಸನ್ ಒಳಗೊಂಡ ಈ ಚಿತ್ರದಲ್ಲಿ ಪೌರಾಣಿಕ ಕಥೆ ಮತ್ತು ವಿಜ್ಞಾನವನ್ನು ಹದವಾಗಿ ಬೆರೆಸಿ ಅದ್ಭುತವಾಗಿ ನಿರ್ಮಿಸಲಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಬಹುತೇಕ ಎಲ್ಲಾ ಪ್ರಮುಖ ಪಾತ್ರಗಳನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಗುರುತಿಸಬಹುದು. ಟ್ರೇಲರ್‌ನಲ್ಲಿ ಭವಿಷ್ಯ ನುಡಿದ ಕಲ್ಕಿಯ ಗುರುತಿನ ಬಗ್ಗೆ ಅಶ್ವಿನ್ ಯಾವುದೇ ಸುಳಿವು ನೀಡಲಿಲ್ಲ.

ಕಲ್ಕಿಯ ಆಗಮನವು ಹಿಂದೂಗಳಲ್ಲಿ ಹೆಚ್ಚು ಚರ್ಚಾಸ್ಪದ ವಿಷಯಗಳಲ್ಲಿ ಒಂದಾಗಿದೆ. ಕಲ್ಕಿಯ ಆಗಮನ ಮತ್ತು ಪ್ರಸ್ತುತ ಕಲಿಯುಗ ಹೌದೋ ಅಲ್ಲವೋ ಎಂಬುದು ಇನ್ನೂ ಚರ್ಚೆಯಲ್ಲೇ ಇದೆ. ಈ ಘಟನೆಗಳ ನಿಖರವಾದ ಕಾಲಮಿತಿಯನ್ನು ಕೆಲವು ವಿದ್ವಾಂಸರು ಒಪ್ಪುವುದಿಲ್ಲ. ಕಲ್ಕಿಯ ಆಗಮನಕ್ಕೆ ಹಿಂದೂಗಳಲ್ಲಿ ಸಾಕಷ್ಟು ಮಂದಿ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ. ಈ ನಿಗೂಢ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.

ಯಾವುದರಲ್ಲಿದೆ ಕಲ್ಕಿಯ ಮಾಹಿತಿ?

ಕಲ್ಕಿಯನ್ನು ಮೊದಲು ಉಲ್ಲೇಖಿಸಿದ್ದು ಮಹಾಕಾವ್ಯ ‘ಮಹಾಭಾರತ’. ಮಹಾಭಾರತದಲ್ಲಿ ಕಲ್ಕಿಯ ಉಲ್ಲೇಖವು 3.188.85-3.189.6 ಪದ್ಯಗಳಲ್ಲಿ ಒಮ್ಮೆ ಮಾತ್ರ ಕಾಣ ಸಿಗುತ್ತದೆ. ಗರುಡ ಪುರಾಣದಂತಹ ಹಲವಾರು ಪವಿತ್ರ ಹಿಂದೂ ಗ್ರಂಥಗಳಲ್ಲಿ ಆತನನ್ನು ಉಲ್ಲೇಖಿಸಲಾಗಿದೆ. ಗರುಡ ಪುರಾಣವು ಕಲ್ಕಿಯನ್ನು ವಿಷ್ಣುವಿನ ಹತ್ತನೇ ಅವತಾರ ಎಂದು ವಿವರಿಸುತ್ತದೆ. ಅವನು ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾನೆ ಮತ್ತು ಕಲಿಯುಗವನ್ನು ಕೊನೆಗೊಳಿಸುತ್ತಾನೆ. ಸತ್ಯ ಯುಗ ಅಥವಾ ಸದ್ಗುಣ ಮತ್ತು ಸದಾಚಾರದ ಯುಗವನ್ನು ಪ್ರಾರಂಭಿಸುತ್ತಾನೆ.

Kalki

ಕಲ್ಕಿಯು ದೇವದತ್ತ ಎಂಬ ಬಿಳಿ ಕುದುರೆಯ ಮೇಲೆ ಸವಾರಿ ಮಾಡುತ್ತಾ ಮತ್ತು ಖಡ್ಗವನ್ನು ಹಿಡಿದುಕೊಂಡು ಬರುವ ಅದ್ಭುತ ವ್ಯಕ್ತಿ ಎಂದು ವಿವರಿಸಲಾಗಿದೆ. ಶ್ರೀಮದ್ ಭಾಗವತ ಪುರಾಣದ ಪ್ರಕಾರ ಕಲ್ಕಿಯು ಶಂಬಲಾ ಗ್ರಾಮದಲ್ಲಿ ಕಲಿತ ಬ್ರಾಹ್ಮಣ ವಿಷ್ಣುಯಾಶ ಮತ್ತು ಅವನ ಹೆಂಡತಿ ಸುಮತಿಯ ಕುಟುಂಬದಲ್ಲಿ ಹದಿಮೂರನೇ ದಿನದಂದು ಬೆಳೆಯುತ್ತಿರುವ ಚಂದ್ರನ ಹದಿನೈದನೇ ದಿನದಂದು ಜನಿಸುತ್ತಾನೆ. ಪರಾಕ್ರಮಿ ಯೋಧನ ಹೊರತಾಗಿ ಕಲ್ಕಿ ಹೆಸರಾಂತ ವಿದ್ವಾಂಸನೂ ಆಗಿರುತ್ತಾನೆ. ಅವನು ಪವಿತ್ರ ಗ್ರಂಥಗಳ ಬಗ್ಗೆ ಜ್ಞಾನವನ್ನು ಪಡೆಯುತ್ತಾನೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಆಶ್ರಯದಲ್ಲಿ ತರಬೇತಿಯನ್ನು ಪಡೆಯುತ್ತಾನೆ. ಕಲ್ಕಿ ಕೂಡ ಭಕ್ತ ಶೈವನಾಗಿರುತ್ತಾನೆ. ಅವನಿಗೆ ಶಿವನು ಎರಡು ಉಡುಗೊರೆಗಳನ್ನು ನೀಡುತ್ತಾನೆ. ದೇವದತ್ತ ಎಂಬ ಬಿಳಿ ಕುದುರೆ, ಶುಕ ಎಂಬ ಗಿಳಿ. ಇದು ಭೂತ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಜ್ಞಾನವನ್ನು ಹೊಂದಿರುತ್ತದೆ ಮತ್ತು ಹೊಳೆಯುವ, ರತ್ನಖಚಿತ ಖಡ್ಗವನ್ನು ನೀಡುತ್ತದೆ ಎಂಬ ಉಲ್ಲೇಖವಿದೆ.

ಇದನ್ನೂ ಓದಿ: Kalki 2898 AD: ಕ್ಯೂ ನಿಂತು ಟಿಕೆಟ್‌ ಖರೀದಿಸಿ ʼಕಲ್ಕಿʼ ವೀಕ್ಷಿಸಿದ ಸ್ಟಾರ್‌ ನಿರ್ದೇಶಕ! ವೈರಲ್‌ ಫೋಟೊ ಇಲ್ಲಿದೆ

ಕಲ್ಕಿಯು ತಪ್ಪು ಮಾಡುವವರ ವಿರುದ್ಧ ಹೋರಾಡುತ್ತಾನೆ. ಶಂಬಲಕ್ಕೆ ಹಿಂದಿರುಗಿ ಅಲ್ಲಿ ಅವನು ಸತ್ಯ ಯುಗವನ್ನು ಸ್ಥಾಪಿಸುತ್ತಾನೆ. ಅದು ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುತ್ತದೆ. ಅಂತಿಮವಾಗಿ ವಿಷ್ಣುವಿನ ವಾಸಸ್ಥಾನವೆಂದು ಪರಿಗಣಿಸಲಾದ ವೈಕುಂಠಕ್ಕೆ ತೆರಳುತ್ತಾನೆ ಎಂದು ಉಲ್ಲೇಖಿಸಲಾಗಿದೆ.

ಕಲ್ಕಿ ಯಾವಾಗ ಬರುತ್ತಾನೆ?

ಕಲ್ಕಿಯ ಆಗಮನದ ಸಂಭವನೀಯ ಸಮಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಶ್ರೀಕೃಷ್ಣನ ಮರಣದ ಅನಂತರ 5,125 ವರ್ಷಗಳ ಹಿಂದೆ ಕಲಿಯುಗ ಪ್ರಾರಂಭವಾಯಿತು ಎಂದು ಅನೇಕ ಹಿಂದೂಗಳು ನಂಬುತ್ತಾರೆ. ಇದು 4,32,000 ವರ್ಷಗಳವರೆಗೆ ಇರುತ್ತದೆ. ಆದ್ದರಿಂದ ಕಲ್ಕಿಯು ಜನನದ ಮೊದಲು 4,26,875 ವರ್ಷಗಳು ಪೂರ್ಣವಾಗಬೇಕು ಎಂದೂ ಹೇಳಲಾಗುತ್ತದೆ. ಅಂತೂ Kalki 2898AD ಚಿತ್ರ ಕಲ್ಕಿ ಮತ್ತು ಆತನ ಆಗಮನದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

Continue Reading

Latest

Railway New Rules: ರೈಲು ಪ್ರಯಾಣಿಕರೇ, ಬರ್ತ್‌ನಲ್ಲಿ ಮಲಗುವ ಕುರಿತ ಈ ಹೊಸ ರೂಲ್ಸ್‌ ನೆನಪಿನಲ್ಲಿರಲಿ!

Railway New Rules : ಇನ್ನು ಮುಂದೆ ರೈಲಿನ ಮಧ್ಯದ ಸೀಟ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಸೀಟ್ ಅನ್ನು ತೆರೆದ ನಂತರ ಉಕ್ಕಿನ ಚೌಕಟ್ಟಿಗೆ ಲಗತ್ತಿಸಲಾದ 2 ಸರಪಳಿಗಳಿಂದ ಭದ್ರಗೊಳಿಸಿದ್ದು ಖಚಿತಪಡಿಸಿಕೊಳ್ಳಬೇಕು. ಪ್ರಯಾಣ ಮುಗಿದ ನಂತರ ಅಥವಾ ಮಲಗಿದ ನಂತರ ಅದನ್ನು ಮೊದಲಿನಂತೆ ಮಡಚಿ ಇಡಬೇಕು. ಕೆಳಗಿನ ಪ್ರಯಾಣಿಕರಿಗೆ ಹಗಲಿನಲ್ಲಿ ಕುಳಿತುಕೊಳ್ಳಲು ಅನಾನುಕೂಲ ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಬದಲಾವಣೆ ಮಾಡಿದೆ.

VISTARANEWS.COM


on

Railway New Rules
Koo

ನವದೆಹಲಿ: ಭಾರತೀಯ ರೈಲ್ವೆಯು (Railway) ಎಸಿ ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಮಧ್ಯಮ ಬರ್ತ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೆಲವು ನಿಯಮವನ್ನು (Railway New Rules) ಜಾರಿಗೆ ತಂದಿದೆ. ಪ್ರಯಾಣಿಕರ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ರೈಲು ಪ್ರಯಾಣವನ್ನು ಆರಾಮದಾಯಕವಾಗಿಲು ಈ ಬದಲಾವಣೆಗಳನ್ನು ತರಲಾಗಿದೆ. ಮಧ್ಯಮ ಬರ್ತ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಬರ್ತ್ ಅನ್ನು ತೆರೆದ ನಂತರ ಉಕ್ಕಿನ ಚೌಕಟ್ಟಿಗೆ ಲಗತ್ತಿಸಲಾದ 2 ಸರಪಳಿಗಳಿಂದ ನಿಮ್ಮ ಬರ್ತ್ ಅನ್ನು ಭದ್ರಗೊಳಿಸಬೇಕು. ಪ್ರಯಾಣ ಮುಗಿದ ನಂತರ ಅಥವಾ ಮಲಗಿದ ನಂತರ ಅದನ್ನು ಮೊದಲಿನಂತೆ ಮಡಚಿ ಇಡಬೇಕು.

ಭಾರತೀಯ ರೈಲ್ವೆಯ ಕೈಪಿಡಿ, ಸಂಪುಟ-1ರ ಪ್ಯಾರಾ 652ರ ತಿದ್ದುಪಡಿಯ ಮೂಲಕ 3 ಹಂತದ ಸ್ಲೀಪರ್ ಕೋಚ್ ಗಳ ಮಧ್ಯಮ ಬರ್ತ್ ಗಳಲ್ಲಿ ಮಲಗುವ ಪ್ರಯಾಣಿಕರ ವಸತಿಗೆ ಸಂಬಂಧಿಸಿದ ಸುತ್ತೋಲೆಯಲ್ಲಿ ಭಾರತೀಯ ರೈಲ್ವೆ ಈ ತಿದ್ದುಪಡಿಯನ್ನು ಮಾಡಿದೆ. ಎಸಿ ಮತ್ತು ಸ್ಲೀಪರ್ ಕೋಚ್ ಗಳಲ್ಲಿ ಮಧ್ಯಮ ಬರ್ತ್ ಅನ್ನು ನಿಗದಿಪಡಿಸಿದ ಪ್ರಯಾಣಿಕರು ರೈಲು ಪ್ರಯಾಣದ ಸಮಯದಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮಾತ್ರ ಬರ್ತ್ ಅನ್ನು ತೆರೆದಿರಬೇಕು ಎಂದು ಷರತ್ತು ವಿಧಿಸಲಾಗಿದೆ.

ಈ ಹಿಂದೆ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಒಟ್ಟು 9 ಗಂಟೆಗಳ ಕಾಲ ತೆರೆದಿಡಬಹುದಾಗಿದ್ದ ಬರ್ತ್ ಅನ್ನು 8 ಗಂಟೆಗಳ ಕಾಲಾವಧಿಗೆ ಇಳಿಸಲಾಗಿದೆ. ಕೆಳ ಬರ್ತ್ ನ ಪ್ರಯಾಣಿಕರಿಗೆ ಹಗಲಿನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಹಿನೆಲೆಯಲ್ಲಿ ಈ ಬಗ್ಗೆ ಪ್ರಯಾಣಿಕರು ದೂರು ದಾಖಲಿಸಿದ ಕಾರಣ ಭಾರತೀಯ ರೈಲ್ವೆ ಈ ಬದಲಾವಣೆ ಮಾಡಿದೆ. ಈ ಷರತ್ತಿನ ಮೂಲಕ ಕೆಳ ಬರ್ತ್ ಪ್ರಯಾಣಿಕರು ಬೆಳಗ್ಗೆ 6 ಗಂಟೆಯ ನಂತರ ತಮ್ಮ ಬರ್ತ್ ಅನ್ನು ಮಡಚುವಂತೆ ಮಧ್ಯಮ ಬರ್ತ್ ಪ್ರಯಾಣಿಕರಿಗೆ ವಿನಂತಿಸಬಹುದು. ಸೈಡ್ ಲೋವರ್ ಬರ್ತ್ ನ ಪ್ರಯಾಣಿಕರು ಹಗಲಿನಲ್ಲಿ ಸೈಡ್ ಮೇಲಿನ ಬರ್ತ್ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕು. ಆದರೆ ಸೈಡ್ ಮೇಲಿನ ಬರ್ತ್ ಪ್ರಯಾಣಿಕರು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸೈಡ್ ಲೋವರ್ ಬರ್ತ್ ನಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ಭಾರತೀಯ ರೈಲ್ವೆ ಸುತ್ತೋಲೆಯಲ್ಲಿ ತಿಳಿಸಿದೆ. ಇದು ಎಲ್ಲಾ ವಿಧದ ಸೈಡ್ ಬರ್ತ್ ಪ್ರಯಾಣಿಕರಿಗೂ ಅನ್ವಯಿಸುತ್ತದೆ.

ಇದನ್ನೂ ಓದಿ: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

ಆದರೆ ಭಾರತೀಯ ರೈಲ್ವೆಯ ಈ ನಿಯಮ ಅನಾರೋಗ್ಯ ಪೀಡಿತ ವ್ಯಕ್ತಿಗಳು, ಗರ್ಭಿಣಿಯರು ಹಾಗೂ ಅಂಗವಿಕಲರಿಗೆ ವಿನಾಯಿತಿ ನೀಡಲು ಹಾಗೂ ಅವರಿಗೆ ಹೆಚ್ಚು ಕಾಲ ಮಲಗಲು ಅವಕಾಶ ನೀಡುವಂತೆಯೂ ಅವಕಾಶ ಕಲ್ಪಿಸಿದೆ.
ಇತ್ತೀಚೆಗೆ ನವದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ ಮಧ್ಯಮ ಬರ್ತ್ ನಲ್ಲಿ ಮಲಗಿದ್ದ ಪ್ರಯಾಣಿಕ ಸರಿಯಾಗಿ ಸರಪಳಿಯನ್ನು ಹಾಕದೇ ಇದ್ದ ಕಾರಣ ಬರ್ತ್ ಕುಸಿದು ಕೆಳ ಬರ್ತ್‌ನಲ್ಲಿ ಮಲಗಿದ್ದ 62 ವರ್ಷದ ವ್ಯಕ್ತಿಯ ಮೇಲೆ ಬಿದ್ದಿತ್ತು. ಇದರಿಂದ ಆ ವ್ಯಕ್ತಿಯ ಕತ್ತಿನ ಮೂಳೆ ಮುರಿದು ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದನ್ನು ಸ್ಮರಿಸಬಹುದು.

Continue Reading

Latest

Viral News: ಆರ್ಡರ್ ಮಾಡಿ 6 ವರ್ಷ ಕಳೆದರೂ ವಸ್ತು ಕಳುಹಿಸದ ಫ್ಲಿಪ್‌ಕಾರ್ಟ್!

Viral News: ಈಗ ಮನೆಗೆ ಬೇಕಾಗಿರುವ ವಸ್ತುಗಳಿಂದ ಹಿಡಿದು ತಿನ್ನುವುದಕ್ಕೆ ಬೇಕಾಗಿರುವ ಆಹಾರದವರೆಗೆ ಎಲ್ಲವನ್ನೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳುವ ಕಾಲ! ಕಣ್ಣು ಮುಚ್ಚಿ ತೆರೆಯುವುದರೊಳಗೆ ಮನೆಬಾಗಿಲಿಗೆ ನೀವು ಆರ್ಡರ್ ಮಾಡಿದ ವಸ್ತು ಬಂದು ಬೀಳುತ್ತೆ. ಅಂಥದ್ದರಲ್ಲಿ ಇಲ್ಲೊಬ್ಬರಿಗೆ ಆರ್ಡರ್ ಮಾಡಿ 6 ವರ್ಷದ ಬಳಿಕ ಪೇಡಿಂಗ್‌ ಆರ್ಡರ್‌ ಕುರಿತು ಫ್ಲಿಪ್‌ಕಾರ್ಟ್‌ನಿಂದ ಕರೆ ಬಂದಿದೆಯಂತೆ. ಅಹ್ಸಾನ್ ಖರ್ಬಾಯಿ ಎಂಬ ಮುಂಬೈ ನಿವಾಸಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅವರ ಆರ್ಡರ್ ಹಿಸ್ಟ್ರಿಯನ್ನು ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿ ತಮಗಾದ ಈ ವಿಚಿತ್ರ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Viral News
Koo

ಮುಂಬೈ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಬಹುತೇಕ ಸಮಯ ಈ ಆರ್ಡರ್ ಅವರು ತಿಳಿಸಿದ ಸಮಯಕ್ಕೆ ಸರಿಯಾಗಿ ಬರುತ್ತದೆ, ಕೆಲವೊಮ್ಮೆ ಅದಕ್ಕೂ ಮುಂಚಿತವಾಗಿ ಬರುತ್ತದೆ. ಆದರೆ ಮುಂಬೈ ವ್ಯಕ್ತಿಯೊಬ್ಬರಿಗೆ ವಸ್ತುವನ್ನು ಆರ್ಡರ್ ಮಾಡಿದ 6 ವರ್ಷಗಳ ನಂತರ ಕಸ್ಟಮರ್ ಕೇರ್‌ನಿಂದ ಕರೆ ಬಂದಿದೆಯಂತೆ. ಅಂದ ಹಾಗೆ ಆರು ವರ್ಷ ಕಳೆದರೂ ಅವರಿಗೆ ಆರ್ಡರ್‌ ಮಾಡಿದ ವಸ್ತು ಬಂದಿರಲಿಲ್ಲ. ಈ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್(Viral News) ಆಗಿದೆ.

ಅಹ್ಸಾನ್ ಖರ್ಬಾಯಿ ಎಂಬ ಮುಂಬೈ ನಿವಾಸಿ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅವರ ಆರ್ಡರ್ ಹಿಸ್ಟ್ರಿಯನ್ನು ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿ ತಮಗಾದ ಈ ವಿಚಿತ್ರ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಅವರು ತಿಳಿಸಿದಂತೆ 2018ರಲ್ಲಿ ಫ್ಲಿಪ್ ಕಾರ್ಟ್ ಇ ಕಾಮರ್ಸ್ ವೆಬ್ ಸೈಟ್‌ನಲ್ಲಿ ಅಹ್ಸಾನ್ ಸ್ಪಾರ್ಕ್ಸ್ ಚಪ್ಪಲಿಯನ್ನು ಆರ್ಡರ್ ಮಾಡಿದ್ದರಂತೆ. ಆದರೆ ಚಪ್ಪಲಿಯನ್ನು ಅವರು ಇಂದಿಗೂ ಡೆಲಿವರಿ ನೀಡಲಿಲ್ಲ. ಆದರೆ 6 ವರ್ಷಗಳು ಕಳೆದ ನಂತರ ಅದು ಡೆಲಿವರಿ ಆಗಲಿದೆ ಎಂದು ತೋರಿಸುತ್ತಿದ್ದ ಕಾರಣ ಅವರು ಅದನ್ನು ಕ್ಲಿಕ್ ಮಾಡಿದ್ದಾರೆ. ಆಗ ಫ್ಲಿಪ್ ಕಾರ್ಟ್ ಕಸ್ಟಮರ್ ಕೇರ್ ನಿಂದ ಕರೆ ಬಂದಿದೆಯಂತೆ. “ನೀವು ಆರ್ಡರ್ ನೊಂದಿಗೆ ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ?” ಎಂದು ಕೇಳುವ ಕರೆಯನ್ನು ಸ್ವೀಕರಿಸಿದ ಅಹ್ಸಾನ್ ಅದಕ್ಕೆ ಉತ್ತರಿಸಿದ್ದಕ್ಕೆ “ಫ್ಲಿಪ್ ಕಾರ್ಟ್ ನಿಂದ ನಿಮಗೆ ಯಾವುದೇ ಕರೆ ಬರಲಿಲ್ಲವೇ? ಇದಕ್ಕಾಗಿ ನಾವು ವಿಷಾದಿಸುತ್ತೇವೆ ಸರ್” ಎಂದು ಹೇಳಿ ಕರೆ ಕಟ್ ಆಗಿದೆಯಂತೆ.

ಅಹ್ಸಾನ್ ಅವರು ಆರ್ಡರ್ ಅನ್ನು ಕ್ಯಾಶ್ ಆನ್ ಡೆಲಿವರಿಗೆ ಮಾಡಿದ್ದರಿಂದ ಅವರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಲಿಲ್ಲವಂತೆ. ಆದರೆ ಅದನ್ನು ರದ್ದುಗೊಳಿಸಲು ಅದರಲ್ಲಿ ಯಾವುದೇ ಆಯ್ಕೆ ಇರಲಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ. ಆದರೆ ಅವರ ಆರ್ಡರ್ ಲಿಸ್ಟ್ ತೆಗೆದಾಗ ಮೊದಲು ಅದೇ ಆರ್ಡರ್ ಬರುವ ಕಾರಣ ಅದನ್ನು ಅವರೇ ರದ್ದುಗೊಳಿಸಬೇಕೆಂದು ಅಹ್ಸಾನ್ ಕೇಳಿಕೊಂಡಿದ್ದಾರೆ.

Viral News

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಗೆ 1.3 ಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದೆ. ಜೊತೆಗೆ ಅನೇಕ ಕಾಮೆಂಟ್ ಗಳು ಕೂಡ ಬಂದಿದೆ. ಅದರಲ್ಲಿ ಕೆಲವರು ಫ್ಲಿಪ್ ಕಾರ್ಟ್ ನಲ್ಲಿ ತಮಗೂ ಇದೇ ರೀತಿಯ ಅನುಭವವಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಅದರಲ್ಲಿ ಯಾವುದೂ 6 ವರ್ಷಗಳ ದೀರ್ಘಕಾಲದವರೆಗೆ ವಿಳಂಬವಾಗಿರಲಿಲ್ಲ.

ಇದನ್ನೂ ಓದಿ: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

ಹಾಗಾಗಿ ಫ್ಲಿಪ್ ಕಾರ್ಟ್ ಸೇರಿದಂತೆ ಯಾವುದೇ ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಮೋಸ, ವಂಚನೆ ನಡೆಯುತ್ತಿರುತ್ತದೆ. ಆದಕಾರಣ ಇವುಗಳಲ್ಲಿ ಯಾವುದೇ ವಸ್ತುಗಳನ್ನು ಆರ್ಡರ್ ಮಾಡುವಾಗ ಕ್ಯಾಶ್ ಆನ್ ಡೆಲಿವರಿ ಗೆ ಆರ್ಡರ್ ಮಾಡಿ. ಇದರಿಂದ ನಿಮಗೆ ಯಾವುದೇ ನಷ್ಟವಾಗುವುದಿಲ್ಲ.

Continue Reading

Latest

Bengaluru Metro: ಸೆಪ್ಟೆಂಬರ್ ಅಂತ್ಯಕ್ಕೆ ‘ನಮ್ಮ ಮೆಟ್ರೋ ಗ್ರೀನ್ ಲೈನ್’ ವಿಸ್ತರಣೆ ಕಾರ್ಯಾರಂಭ‌

Metro Green Line: ನಮ್ಮ ಮೆಟ್ರೋ ಗ್ರೀನ್ ಲೈನ್ ವಿಸ್ತರಣಾ ನಿರ್ಮಾಣವು 2019ರ ಮಧ್ಯದಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿಂದ 2017ರಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಅಡ್ಡಿಯಿಂದಾಗಿ ಇದು ವಿಳಂಬವಾಯಿತು. ಆದರೆ ಸದ್ಯದಲ್ಲೇ ಟ್ರ್ಯಾಕ್ ನ ನಿರ್ಮಾಣ ಕಾರ್ಯ ಪೂರ್ಣಗೊಂಡು ಮುಂದಿನ ಎರಡು ತಿಂಗಳಲ್ಲಿ ಲೈನ್ ಪರೀಕ್ಷೆಗೆ ಒಳಗಾಗಲಿದೆ. ನಂತರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಗ್ರೀನ್ ಲೈನ್ ವಿಸ್ತರಣೆ ಕಾರ್ಯಾರಂಭವಾಗಲಿದೆಯಂತೆ.

VISTARANEWS.COM


on

Metro Green Line
Koo

ಬೆಂಗಳೂರು: ನಾಗಸಂದ್ರದಿಂದ ಮಾದಾವರವರೆಗಿನ 3.7 ಕಿಮೀ ಉದ್ದದ ಬೆಂಗಳೂರು ನಮ್ಮ ಮೆಟ್ರೋ ಗ್ರೀನ್ ಲೈನ್(Metro green line) ವಿಸ್ತರಣಾ ಕಾರ್ಯಚರಣೆ ವಿಳಂಬವಾಗಿದ್ದು, ಈಗ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಾರ್ಯಾರಣೆಯನ್ನು ಪ್ರಾರಂಭಿಸುವ ನಿರೀಕ್ಷೆ ಇದೆ ಎಂಬುದಾಗಿ ತಿಳಿದುಬಂದಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್)ನ ಅಧಿಕಾರಿಗಳಿಂದ ಉಪಕರಣಗಳ ಆಯ್ಕೆ ಮತ್ತು ಮೂಲ ಸೌಕರ್ಯಗಳ ಅಂತಿನ ಪರೀಕ್ಷೆ ಬಾಕಿ ಇದೆ ಎನ್ನಲಾಗಿದೆ.

ಬೆಂಗಳೂರು ನಮ್ಮ ಮೆಟ್ರೋ ಗ್ರೀನ್ ಲೈನ್ ವಿಸ್ತರಣಾ ನಿರ್ಮಾಣವು 2019ರ ಮಧ್ಯದಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿಂದ 2017ರಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಅಡ್ಡಿಯಿಂದಾಗಿ ಇದು ವಿಳಂಬವಾಯಿತು. ಆದರೆ ಸದ್ಯದಲ್ಲೇ ಟ್ರ್ಯಾಕ್ ನ ನಿರ್ಮಾಣ ಕಾರ್ಯ ಪೂರ್ಣಗೊಂಡು ಮುಂದಿನ ಎರಡು ತಿಂಗಳಲ್ಲಿ ಲೈನ್ ಪರೀಕ್ಷೆಗೆ ಒಳಗಾಗಲಿದೆ. ನಂತರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಗ್ರೀನ್ ಲೈನ್ ವಿಸ್ತರಣೆ ಕಾರ್ಯಾರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(ಬಿಎಂ ಆರ್ ಸಿಎಲ್)ನ ಅಧಿಕಾರಿಗಳು ತಿಳಿಸಿದ್ದಾರೆ.

ನಾಗಸಂದ್ರದಿಂದ ಮಾದಾವರವರೆಗಿನ ಎತ್ತರದ ಮಾರ್ಗವು ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರದಂತಹ ಮೂರು ನಿಲ್ದಾಣಗಳನ್ನು ಒಳಗೊಂಡಿದ್ದು, ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ(ಬಿಐಇಸಿ)ಕ್ಕೆ ಸಂಪರ್ಕವನ್ನು ನೀಡುತ್ತದೆ.
ಬೆಂಗಳೂರು ಮೆಟ್ರೋಗ್ರೀನ್ ಲೈನ್‌ನಿಂದ ಪ್ರಯಾಣಿಕರಿಗೆ ಬಹಳ ಪ್ರಯೋಜನವಾಗಲಿದೆ. ಗ್ರೀನ್ ಲೈನ್ ವಿಸ್ತರಣೆಯಾದ ನಂತರ ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ, ತುಮಕೂರು ರಸ್ತೆ, ಅಂಚೆಪಾಳ್ಯ ಮತ್ತು ಜಿಂದಾಲ್ ನಗರ ಪ್ರದೇಶಗಳ ನಿವಾಸಿಗಳಿಗೆ ಕಡಿಮೆ ಸಮಯದಲ್ಲಿ ಬೆಂಗಳೂರು ನಗರ ತಲುಪುವ ಅವಕಾಶ ಸಿಗುತ್ತದೆ.

ಇದನ್ನೂ ಓದಿ:ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ

ಬೆಂಗಳೂರು ಮೆಟ್ರೋದ ಗ್ರೀನ್ ಲೈನ್ ವಿಸ್ತರಣೆಯಲ್ಲಿ, ಮೊದಲ ಕಾರಿಡಾರ್ 31 ನಿಲ್ದಾಣಗಳನ್ನು ಹೊಂದಿದ್ದರೆ, ಎರಡನೇಯದು 9 ನಿಲ್ದಾಣಗಳನ್ನು ಹೊಂದಿರುತ್ತದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(ಬಿಎಂ ಆರ್ ಸಿಎಲ್) ಪಿಐಬಿ ಡಿಪಿಆರ್ ಅನ್ನು ಈಗಾಗಲೇ ತೆರವುಗೊಳಿಸಿದೆ. ಆದರೆ ಕೇಂದ್ರ ಸಂಪುಟದ ಅನುಮೋದನೆ ಇನ್ನೂ ಬಾಕಿ ಇದೆ ಎಂಬುದಾಗಿ ತಿಳಿದುಬಂದಿದೆ.

Continue Reading
Advertisement
NEET Aspirant
ದೇಶ26 mins ago

NEET Aspirant: ನೀಟ್‌ ಅಕ್ರಮ ಬಯಲಾದ ಬೆನ್ನಲ್ಲೇ 17 ವರ್ಷದ NEET ಅಭ್ಯರ್ಥಿ ಆತ್ಮಹತ್ಯೆ; ಸಾವಿಗೆ ಯಾರು ಹೊಣೆ?

Tata Motors has taken the lead in the SUV market with Nexon Punch
ಕರ್ನಾಟಕ52 mins ago

Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Rohit Sharma
ಕ್ರೀಡೆ54 mins ago

Rohit Sharma: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್

virat kohli
ಕ್ರೀಡೆ1 hour ago

Virat Kohli: ಮೊದಲ ಬಾರಿಗೆ ಸೆಮಿಫೈನಲ್​ನಲ್ಲಿ ಸಿಂಗಲ್​ ಡಿಜಿಟ್​ಗೆ ಔಟ್​ ಆದ​ ಕೊಹ್ಲಿ; ಸಮಾಧಾನಪಡಿಸಿದ ಕೋಚ್​

DCM DK Shivakumar latest statement about CM change issue
ಪ್ರಮುಖ ಸುದ್ದಿ1 hour ago

DK Shivakumar: ಸಿಎಂ ಬದಲಾವಣೆ; ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಡಿ.ಕೆ. ಶಿವಕುಮಾರ್

roopantara Movie First Look Poster released
ಕರ್ನಾಟಕ2 hours ago

Kannada New Movie: ‘ರೂಪಾಂತರ’ಗೊಂಡ ರಾಜ್ ಬಿ. ಶೆಟ್ಟಿ! ಮತ್ತೊಂದು ವಿಭಿನ್ನ ಚಿತ್ರ

Hosur Airport
ಪ್ರಮುಖ ಸುದ್ದಿ2 hours ago

Hosur Airport: ಬೆಂಗಳೂರಿನಿಂದ ಕೇವಲ 40 ಕಿ.ಮೀ ದೂರದ ಹೊಸೂರಿನಲ್ಲಿ ಹೊಸ ಏರ್‌ಪೋರ್ಟ್‌!

Sudipa Chatterjee
ದೇಶ2 hours ago

Sudipa Chatterjee: ಗೋಮಾಂಸ ಸೇವನೆಗೆ ಪ್ರಚಾರ- TMC ನಾಯಕ ಬಬೂಲ್‌ ಸುಪ್ರಿಯೋ ಆಪ್ತೆ, ಬೆಂಗಾಳಿ ನಟಿಗೆ ಜೀವ ಬೆದರಿಕೆ

Kalki 2898AD
ಸಿನಿಮಾ2 hours ago

Kalki 2898AD: ಕಲಿಯುಗದಲ್ಲಿ ʼಕಲ್ಕಿʼಯ ಆಗಮನದ ಚರ್ಚೆ ಹುಟ್ಟು ಹಾಕಿದ ‘ಕಲ್ಕಿ 2898ಎಡಿ’ ಸಿನಿಮಾ!

Agumbe Ghats
ಕರ್ನಾಟಕ2 hours ago

Agumbe Ghat: ಭಾರಿ ಮಳೆ; ಸೆ.15ರವರೆಗೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ4 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು7 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ11 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌