Viral Video: 3 ತಿಂಗಳಿಂದ ಕಾಣೆಯಾಗಿದ್ದ ಬಾಲಕಿ ಗುಹೆಯಲ್ಲಿ ಡಿಢೀರ್‌ ಪ್ರತ್ಯಕ್ಷ; ಹಾವಿನಂತೆ ವರ್ತನೆ ಕಂಡು ಜನ ಶಾಕ್‌-ವಿಡಿಯೋ ಇದೆ - Vistara News

Latest

Viral Video: 3 ತಿಂಗಳಿಂದ ಕಾಣೆಯಾಗಿದ್ದ ಬಾಲಕಿ ಗುಹೆಯಲ್ಲಿ ಡಿಢೀರ್‌ ಪ್ರತ್ಯಕ್ಷ; ಹಾವಿನಂತೆ ವರ್ತನೆ ಕಂಡು ಜನ ಶಾಕ್‌-ವಿಡಿಯೋ ಇದೆ

Viral Video ಜಾರ್ಖಂಡ್‌ನಲ್ಲಿ ಮೂರು ತಿಂಗಳಿನಿಂದ ಕಾಣೆಯಾದ ಬಾಲಕಿಯೊಬ್ಬಳು ಗುಹೆಯೊಂದರಲ್ಲಿ ಪತ್ತೆಯಾಗಿದ್ದು, ಹಾವಿನಂತೆ ತೆವಳುತ್ತಾ, ನಾಲಗೆ ಹೊರಗೆ ಚಾಚುತ್ತಾ ಇರುವ ವಿಡಿಯೊವೊಂದು ವೈರಲ್ ಆಗಿದೆ. ಗುಹೆಯಲ್ಲಿ ಕಂಡುಬರುವ ಈ ಹುಡುಗಿಯ ಈ ರೂಪವನ್ನು ನೋಡಲು ಗ್ರಾಮಸ್ಥರ ಗುಂಪು ಅಲ್ಲಿ ನೆರೆದಿದ್ದು, ಅವಳನ್ನು ಹುಡುಕುತ್ತಿದ್ದ ಆಕೆಯ ಕುಟುಂಬ ಸದಸ್ಯರು ಪೂಜೆ ಮಾಡಿ ಅಂತಿಮವಾಗಿ ಅವಳನ್ನು ಮನೆಗೆ ಕರೆತಂದರು ಎನ್ನಲಾಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಜಾರ್ಖಂಡ್ : ಕೆಲವರು ದೇವರು ಮೈಮೇಲೆ ಬಂದಂತೆ ವರ್ತಿಸುವುದನ್ನು ನಾವು ಹಲವು ಬಾರಿ ನೋಡಿರುತ್ತೇವೆ. ಅಂತವರಿಗೆ ದೇವರ ಅನುಗ್ರಹವಿದೆ. ಹಾಗಾಗಿ ದೇವರು ಅವರ ಮೇಲೆ ಆಹ್ವಾನವಾಗಿ ನಂಬಿದ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾನೆ ಎಂಬ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಇದೆ. ಇದನ್ನು ನಾವು ಇಂದಿನ ಕಾಲದಲ್ಲಿಯೂ ಕೆಲವು ಕಡೆ ನೋಡಬಹುದು. ಹೆಚ್ಚಾಗಿ ದೇವಸ್ಥಾನದ ಜಾತ್ರೆಯ ಸಮಯದಲ್ಲಿ ಕೆಲವರು ದೇವರು ಮೈಮೇಲೆ ಬರುವಂತೆ ವರ್ತಿಸುವ ದೃಶ್ಯವನ್ನು ನೊಡಬಹುದು. ಅದೇರೀತಿ ಜಾರ್ಖಂಡ್‍ನಲ್ಲಿ ಕೂಡ ಇಂತಹದೊಂದು ಘಟನೆ ನಡೆದಿದೆ. ಕಾಣೆಯಾದ ಬಾಲಕಿಯೊಬ್ಬಳು ಗುಹೆಯೊಂದರಲ್ಲಿ ಪತ್ತೆಯಾಗಿದ್ದು, ಆದರೆ ಅವಳು ಹಾವಿನಂತೆ ವರ್ತಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ವಿಡಿಯೊದಲ್ಲಿರುವ ಹುಡುಗಿ ಗುಹೆಯ ನೆಲದ ಮೇಲೆ ಹಾವಿನಂತೆ ತೆವಳುತ್ತಾ ತನ್ನ ನಾಲಿಗೆಯನ್ನು ಹಾವಿನಂತೆ ಹೊರಗೆ ಚಾಚುತ್ತಿದ್ದಾಳೆ. ಗುಹೆಯಲ್ಲಿ ಕಂಡುಬರುವ ಈ ಹುಡುಗಿಯ ಈ ರೂಪವನ್ನು ನೋಡಲು ಗ್ರಾಮಸ್ಥರ ಗುಂಪು ಅಲ್ಲಿ ನೆರೆದಿದ್ದು, ಮನೆಯವರು ಆಕೆಗೆ ಪೂಜೆ ಮಾಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ಬಾಲಕಿ ಕಾಣೆಯಾಗಿದ್ದಳು. ಆದರೆ ಇತ್ತೀಚೆಗೆ ಆಕೆ ರಾಣಿದಿಹ್ ಗುಪ್ತಾ ಧಾಮ್ ಗುಹೆಯಲ್ಲಿ ಪತ್ತೆಯಾಗಿದ್ದಾಳೆ. ಆದರೆ ಅವಳು ಹಾವಿನಂತೆ ವರ್ತಿಸುತ್ತಿದ್ದಾಳೆ ಎನ್ನಲಾಗಿದೆ. ಆಕೆ ಹಾವಿನಂತೆ ವರ್ತಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಇದನ್ನು ಕಂಡು ಜನರು ಆಶ್ಚರ್ಯ ಚಕಿತರಾಗಿದ್ದಾರೆ. ಈ ಘಟನೆ ದೊಡ್ಡ ಜನಸಮೂಹವನ್ನು ಸೆಳೆದಿದ್ದು, ಆಕೆಯ ಅಸಾಮಾನ್ಯ ನಡವಳಿಕೆಯನ್ನು ನೋಡಲು ಅನೇಕ ಜನರು ಆ ಗುಹೆಯ ಬಳಿ ಜಮಾಯಿಸಿದ್ದಾರೆ. ಅವಳನ್ನು ಹುಡುಕುತ್ತಿದ್ದ ಆಕೆಯ ಕುಟುಂಬ ಸದಸ್ಯರು ಪೂಜೆ ಮಾಡಿ ಅಂತಿಮವಾಗಿ ಅವಳನ್ನು ಮನೆಗೆ ಕರೆತಂದರು ಎನ್ನಲಾಗಿದೆ.

ರಾಣಿದಿಹ್ ಗುಪ್ತ ಧಾಮ್ ಗುಹೆಯಲ್ಲಿ ಬಹಳ ಹಿಂದಿನ ಕಾಲದಲ್ಲಿ ಭಗವಾನ್ ಶಿವನನ್ನು ಸ್ಥಾಪನೆ ಮಾಡಲಾಗಿತ್ತು. ಶಿವನ ಪೂಜೆ ಮಾಡಲು ದೂರದ ಸ್ಥಳಗಳಿಂದ ಭಕ್ತರ ಗುಂಪು ಇಲ್ಲಿಗೆ ಬಂದು ಸೇರುತ್ತಿದ್ದರು. ಪ್ರತಿ ವರ್ಷದಂತೆ, ಈ ಬಾರಿಯೂ ಜನರು ಇಲ್ಲಿಗೆ ಭೇಟಿ ನೀಡಲು ಬಂದಿದ್ದರು, ನಂತರ ಸೋಮವಾರ, ಈ ಹುಡುಗಿಯನ್ನು ಗುಹೆಯ ಮುಖ್ಯ ದ್ವಾರದಲ್ಲಿ ಸರ್ಪದ ರೂಪದಲ್ಲಿ ನೋಡಿದ ಕೂಡಲೇ ಇದು ಗ್ರಾಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಬಾಲಕಿಯ ಕುಟುಂಬದ ಪ್ರಕಾರ, ಕಳೆದ ಮೂರು ತಿಂಗಳಿನಿಂದ ಅವಳು ಮನೆಯಿಂದ ಕಾಣೆಯಾಗಿದ್ದಳು.

ಇದನ್ನೂ ಓದಿ: ಮಲಗಿದ್ದ ಮಹಿಳೆಯ ತಲೆಕೂದಲಿನಲ್ಲಿ ಹರಿದಾಡಿದ ಹಾವು!

ಕುಟುಂಬವು ಅವಳನ್ನು ಹುಡುಕಲು ಸಾಕಷ್ಟು ಪ್ರಯತ್ನಿಸಿತು. ಆದರೆ ಅವಳು ಸಿಗಲಿಲ್ಲ. ಅಲ್ಲಿಯ ತನಕ ಆಕೆ ಎಲ್ಲಿದ್ದಳು, ಏನು ಮಾಡುತ್ತಿದ್ದಳು ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಕುಟುಂಬವು ಹುಡುಗಿಯನ್ನು ಈ ರೂಪದಲ್ಲಿ ಕಂಡುಕೊಂಡಾಗ, ಅವರು ಮೊದಲು ಅವಳನ್ನು ಪೂಜಿಸಿದರು ಮತ್ತು ಹಾಡುಗಳೊಂದಿಗೆ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Triple Talaq: ವರದಕ್ಷಿಣೆ ತರಲು ನಿರಾಕರಿಸಿದ ಪತ್ನಿಗೆ ವಾಟ್ಸಾಪ್‍ನಲ್ಲೇ ತ್ರಿವಳಿ ತಲಾಖ್!

Triple Talaq: ಮೆಡಿಕಲ್ ಸ್ಟೋರ್ ಮಾಲೀಕನೊಬ್ಬ ತನ್ನ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತನ್ನ ಪತಿ 15 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದಾಗ ವಾಟ್ಸ್‌ಆಪ್‌ನಲ್ಲೇ ತ್ರಿವಳಿ ತಲಾಖ್‌ ನೀಡಿದ್ದಾನೆ. ತಲಾಕ್‌ ವಿರುದ್ಧ ಕಠಿಣ ಕಾಯಿದೆ ಜಾರಿಯಲ್ಲಿದ್ದರೂ ತಲಾಕ್‌ ಪ್ರಕರಣಗಳು ಇನ್ನೂ ಮುಂದುವರಿದಿರುವುದು ಅಚ್ಚರಿ ಮೂಡಿಸಿದೆ.

VISTARANEWS.COM


on

Triple Talaq
Koo


ತ್ರಿವಳಿ ತಲಾಖ್ (Triple Talaq) ಅನ್ನು ನ್ಯಾಯಾಲಯ ನಿಷೇಧಿಸಿದ್ದರೂ ಕೂಡ ಇದನ್ನು ಇಂದಿಗೂ ಅಲ್ಲಲ್ಲಿ ಬಳಸುತ್ತ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ನ್ಯಾಯಾಲಯದ ತೀರ್ಪನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಸಾದತ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಥ ಘಟನೆಯೊಂದು ನಡೆದಿದೆ.

ಸಾದತ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮೆಡಿಕಲ್ ಸ್ಟೋರ್ ಮಾಲೀಕನೊಬ್ಬ ತನ್ನ ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತನ್ನ ಪತಿ 15 ಲಕ್ಷ ರೂ. ವರ ದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾನೆ. ಅದನ್ನು ವಿರೋಧಿಸಿದಾಗ ಅವನು ತನ್ನ ಮೇಲೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮಹಿಳೆ 2010ರಲ್ಲಿ ಮಲಿಹಾಬಾದ್ ಕಾಸ್ಮಂಡಿ ಕಲಾದ ಸದಾಫ್ ಮುನೀರ್ ಎಂಬಾತನನ್ನು ಮದುವೆಯಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಆತ ಮೆಡಿಕಲ್ ಸ್ಟೋರ್ ತೆರೆಯಲು 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಅವನ ಬೇಡಿಕೆ ಈಡೇರದಿದ್ದಾಗ, ಗರ್ಭಿಣಿಯಾಗಿದ್ದ ಆಕೆಗೆ ಗರ್ಭಪಾತ ಮಾಡಿಸಲು ಪ್ರಯತ್ನಿಸಿದ್ದಾನೆ. ಅದು ಸಾಧ್ಯವಾಗದಿದ್ದಾಗ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ. ಆಗ ಆಕೆಯ ಕುಟುಂಬವು ಹೇಗೋ 10 ಲಕ್ಷ ರೂ.ಗಳನ್ನು ವ್ಯವಸ್ಥೆ ಮಾಡಿ ಆತನಿಗೆ ನೀಡಿ ಮತ್ತೆ ಆಕೆಯನ್ನು ಗಂಡನ ಮನೆಗೆ ಕಳುಹಿಸಿತ್ತು.

ಇದನ್ನೂ ಓದಿ: 115 ರೂ.ಗೆ ಚುಂಬನ, 11 ರೂ.ಗೆ ಬಿಸಿ ಅಪ್ಪುಗೆಯ ಸುಖ; ಸ್ಟ್ರೀಟ್‌ ಗರ್ಲ್‌ಫ್ರೆಂಡ್ ಟ್ರೆಂಡ್‌!

ಇಷ್ಟಾದರೂ ಆತ, ಆಗಸ್ಟ್ 2022ರಲ್ಲಿ ಮತ್ತೆ ತನ್ನ ವ್ಯವಹಾರವನ್ನು ವಿಸ್ತರಿಸಲು ಇನ್ನೂ 15 ಲಕ್ಷ ರೂ.ಗಳನ್ನು ತರುವಂತೆ ಒತ್ತಡ ಹೇರಲು ಪ್ರಾರಂಭಿಸಿದ್ದಾನೆ. ಇದನ್ನು ಆಕೆ ನಿರಾಕರಿಸಿದ್ದಕ್ಕೆ ಆಕೆಯನ್ನು ಥಳಿಸಿ ಇಬ್ಬರು ಮಕ್ಕಳ ಜೊತೆ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ನಂತರ ಆಗಸ್ಟ್ 10, 2022ರಂದು ಆತ ವಾಟ್ಸಾಪ್‌ನಲ್ಲೇ ತ್ರಿವಳಿ ತಲಾಖ್ ಸಂದೇಶವನ್ನು ಕಳುಹಿಸಿದ್ದಾನೆ. ಈ ಬಗ್ಗೆ ವಿವರಿಸಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೇ ಆಕೆ ಮಕ್ಕಳ ಜೊತೆ ಮತ್ತೆ ಗಂಡನ ಮನೆಗೆ ಬಂದಾಗ ಅವರನ್ನು ಒಳಗೆ ಬಿಡಲಿಲ್ಲ ಮತ್ತು ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಮಹಿಳೆ ತಿಳಿಸಿದ್ದಾಳೆ.

Continue Reading

ವಿದೇಶ

Ismail Haniyeh: ಹತ್ಯೆಗೀಡಾದ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹಿನ್ನೆಲೆ ಏನು? ಈತನನ್ನು ಇಸ್ರೇಲ್‌ ಮುಗಿಸಿದ್ದೇಕೆ?

ಇರಾನ್‌ನಲ್ಲಿ ಇಸ್ರೇಲ್‌ನಿಂದ ಹತ್ಯೆಗೀಡಾಗಿರುವ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh) ಹಲವು ದಾಳಿಗಳನ್ನು ನಡೆಸಿದ್ದ ಉಗ್ರ ನಾಯಕ. ಮಧ್ಯಪ್ರಾಚ್ಯ ರಾಜಕೀಯ ಬಿಕ್ಕಟ್ಟಿನಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಹನಿಯೆಹ್ ಪ್ಯಾಲೇಸ್ಟಿನಿಯನ್ ಪ್ರಾಧಿಕಾರದ ಸರ್ಕಾರದ ಪ್ರಧಾನ ಮಂತ್ರಿಯಾಗಿದ್ದಾಗಲೂ ಒಮ್ಮೆ ಈತನ ಮೇಲೆ ದಾಳಿ ನಡೆದಿತ್ತು. ಆಗ ಈತ ಪಾರಾಗಿದ್ದ. ಆದರೆ ಈಗ ಇಸ್ರೇಲ್‌ ಈತನ ಕತೆ ಮುಗಿಸಿದೆ. ಈತನ ಹಿನ್ನೆಲೆಯ ಚಿತ್ರಣ ಇಲ್ಲಿದೆ.

VISTARANEWS.COM


on

By

Ismail Haniyeh
Koo

ಇರಾನ್‌ನ (Iran) ಟೆಹ್ರಾನ್‌ನಲ್ಲಿ (Tehran) ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh) ಮತ್ತು ಅವರ ಅಂಗರಕ್ಷಕನೊಬ್ಬನನ್ನು ಇಸ್ರೇಲ್‌ ಹತ್ಯೆ ಮಾಡಿರುವುದು ಭಾರೀ ಸಂಚಲನ ಮೂಡಿಸಿದೆ. ಪ್ಯಾಲೇಸ್ಟಿನಿಯನ್ ಉಗ್ರಗಾಮಿ (Palestinian militant group) ತಂಡ ಬುಧವಾರ ಇದನ್ನು ಖಚಿತಪಡಿಸಿದೆ. ಟೆಹ್ರಾನ್‌ನಲ್ಲಿರುವ ಇಸ್ಮಾಯಿಲ್‌ ನಿವಾಸದ ಮೇಲೆ ದಾಳಿ ನಡೆದಿದ್ದು ಈ ವೇಳೆ ಇಸ್ಮಾಯಿಲ್ ಹನಿಯೆಹ್ ಕೊಲ್ಲಲ್ಪಟ್ಟಿದ್ದಾನೆ. ಈ ನಟೋರಿಯಸ್‌ ಇಸ್ಮಾಯಿಲ್‌ ಯಾರು ಎಂಬ ಮಾಹಿತಿ ಇಲ್ಲಿದೆ.

ಇಸ್ಮಾಯಿಲ್ ಹನಿಯೆಹ್ ಯಾರು?

ಮಧ್ಯಪ್ರಾಚ್ಯ ರಾಜಕೀಯ ವಲಯದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಇಸ್ಮಾಯಿಲ್ ಹನಿಯೆಹ್ ಗಾಜಾದ ಶತಿ ನಿರಾಶ್ರಿತರ ಶಿಬಿರದಲ್ಲಿ 1963ರಲ್ಲಿ ಜನಿಸಿದ್ದ. ವಿಶ್ವಸಂಸ್ಥೆಯ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಈತ 1987ರಲ್ಲಿ ಅರೇಬಿಕ್ ಸಾಹಿತ್ಯದಲ್ಲಿ ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದಿದ್ದ. ವಿಶ್ವವಿದ್ಯಾನಿಲಯದಲ್ಲಿದ್ದಾಗ ಹಮಾಸ್‌ ಉಗ್ರಗಾಮಿ ಸಂಘಟನೆ ಜತೆ ಸೇರಿಕೊಂಡಿದ್ದ.

ಮೊದಲ ಬಾರಿಗೆ ಇಸ್ಮಾಯಿಲ್ ಹನಿಯೆಹ್ ಇಂತಿಫಾಡಾದಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ. ಇದಕ್ಕಾಗಿ ಇಸ್ರೇಲಿ ಮಿಲಿಟರಿ ನ್ಯಾಯಾಲಯದಿಂದ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ಆಕ್ರಮಿತ ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳ ಇಸ್ರೇಲ್ ಮಿಲಿಟರಿ ಅಧಿಕಾರಿಗಳು ಹನಿಯೆಹ್‌ನನ್ನು ಹಿರಿಯ ಹಮಾಸ್ ನಾಯಕರಾದ ಅಬ್ದೆಲ್-ಅಜೀಜ್ ಅಲ್-ರಾಂಟಿಸ್ಸಿ, ಮಹಮೂದ್ ಜಹರ್, ಅಜೀಜ್ ದುವೈಕ್ ಮತ್ತು ಇತರ 400 ಕಾರ್ಯಕರ್ತರೊಂದಿಗೆ ಲೆಬನಾನ್‌ಗೆ ಗಡಿಪಾರು ಮಾಡಿದರು.

1997ರಲ್ಲಿ ಇಸ್ರೇಲ್ ಹಮಾಸ್ ಸಂಸ್ಥಾಪಕ ಅಹ್ಮದ್ ಯಾಸಿನ್ ಅವರನ್ನು ಬಿಡುಗಡೆ ಮಾಡಿದ ಅನಂತರ ಈತನನ್ನು ಹಮಾಸ್ ಕಚೇರಿಯ ಮುಖ್ಯಸ್ಥನನ್ನಾಗಿ ನೇಮಿಸಲಾಯಿತು. 2005ರ ಡಿಸೆಂಬರ್‌ನಲ್ಲಿ ಹನಿಯೆಹ್ ಹಮಾಸ್ ಮುಖ್ಯಸ್ಥನಾಗಿ ಆಯ್ಕೆಯಾದ. 2006ರ ಶಾಸಕಾಂಗ ಚುನಾವಣೆಯಲ್ಲಿ ಹಮಾಸ್‌ನ ಗೆಲುವಿನ ಅನಂತರ ಹನಿಯೆಹ್ ಪ್ಯಾಲೇಸ್ಟಿನಿಯನ್ ಪ್ರಾಧಿಕಾರದ ಸರ್ಕಾರದ ಪ್ರಧಾನ ಮಂತ್ರಿಯಾದ.

ಇದನ್ನೂ ಓದಿ: Ismail Haniyeh: ಇಸ್ರೇಲ್‌ನಿಂದ ಪ್ರತೀಕಾರದ ಎಚ್ಚರಿಕೆ ಬೆನ್ನಲ್ಲೇ ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆಹ್ ಬರ್ಬರ ಹತ್ಯೆ

ಫತಾಹ್- ಹಮಾಸ್ ಘರ್ಷಣೆಯ ನಡುವೆಯೇ 2006ರಲ್ಲಿ ಪ್ರಧಾನಿಯಾಗಿದ್ದ ಹನಿಯೆಹ್ ವಿದೇಶದಲ್ಲಿ ತನ್ನ ಮೊದಲ ಅಧಿಕೃತ ಪ್ರವಾಸದಿಂದ ಹಿಂದಿರುಗುತ್ತಿದ್ದಾಗ ರಫಾ ಬಾರ್ಡರ್ ಕ್ರಾಸಿಂಗ್‌ನಲ್ಲಿ ಈಜಿಪ್ಟ್‌ನಿಂದ ಗಾಜಾಕ್ಕೆ ಪ್ರವೇಶವನ್ನು ನಿರಾಕರಿಸಲ್ಪಟ್ಟ. ಅನಂತರ ಈತ ಗಡಿ ದಾಟಲು ಪ್ರಯತ್ನಿಸಿದಾಗ, ಗುಂಡಿನ ಚಕಮಕಿ ನಡೆದು ಒಬ್ಬ ಅಂಗರಕ್ಷಕ ಮೃತಪಟ್ಟು, ಹನಿಯೆಹ್ ಹಿರಿಯ ಮಗ ಗಾಯಗೊಂಡಿದ್ದ.

2007ರಲ್ಲಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅಧಿಕಾರಕ್ಕೆ ಬಂದಾಗ ಹನಿಯೆಹ್‌ನನ್ನು ಹುದ್ದೆಯಿಂದ ವಜಾಗೊಳಿಸಿದರು. ಇದು ಫತಾಹ್ ಮತ್ತು ಹಮಾಸ್ ಬಣಗಳ ನಡುವಿನ ರಾಜಕೀಯ ಸಂಘರ್ಷವನ್ನು ಹೆಚ್ಚಿಸಿತ್ತು. 2016ರ ಚುನಾವಣೆಯಲ್ಲಿ ಈತ ಹಮಾಸ್‌ನ ಮುಖ್ಯ ನಾಯಕ ಖಲೀದ್ ಮಶಾಲ್‌ನ ಉತ್ತರಾಧಿಕಾರಿಯಾಗಿದ್ದ. ಈತ ಇಸ್ರೇಲ್‌ ಭಾರೀ ತಲೆ ನೋವಾಗಿದ್ದ. ಹಾಗಾಗಿ ಇಸ್ರೇಲ್‌ ತಂತ್ರಜ್ಞಾನಗಳನ್ನೆಲ್ಲ ಬಳಸಿ ಪ್ಲ್ಯಾನ್‌ ಮಾಡಿ ಈತನ ಕತೆ ಮುಗಿಸಿದೆ.

Continue Reading

ಆರೋಗ್ಯ

Health Tips: ಉಪಾಹಾರದಲ್ಲಿ ಇವುಗಳು ಬೇಡವೇ ಬೇಡ ಎನ್ನುತ್ತಾರೆ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ

ಕಾರ್ಡಿಯೊಥೊರಾಸಿಕ್ ಸರ್ಜನ್ ಆಗಿರುವ ಡಾ. ನೆನೆ ಈಗ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕರ ಜೀವನಕ್ಕಾಗಿ (Health Tips) ನಾವು ತಪ್ಪಿಸಬೇಕಾದ ಉಪಹಾರದ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಿಳಿ ಬ್ರೆಡ್, ಸಕ್ಕರೆಯ ಧಾನ್ಯಗಳು, ಹಣ್ಣಿನ ರಸ, ಸಂಸ್ಕರಿಸಿದ ಮಾಂಸ, ಸಿಹಿಯಾದ ಮೊಸರು ಈ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

By

Health Tips
Koo

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ (Bollywood actress Madhuri Dixit) ಅವರ ಪತಿ ಡಾ. ಶ್ರೀರಾಮ್ ನೆನೆ (Dr Shriram Nene) ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ನಿಯಮಿತವಾಗಿ ಆರೋಗ್ಯ ಸಂಬಂಧಿತ (health tips) ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಹೃದಯಾಘಾತದ (heart attack case) ಅಪಾಯವು ಏಕೆ ಹೆಚ್ಚು ಎಂಬುದನ್ನು ಹಂಚಿಕೊಂಡಿದ್ದು, ಇದಕ್ಕಾಗಿ ಆರೋಗ್ಯಕರ ಉಪಹಾರ ಹೇಗಿರಬೇಕು ಎಂದು ಹೇಳಿದ್ದಾರೆ.

ಕಾರ್ಡಿಯೊಥೊರಾಸಿಕ್ ಸರ್ಜನ್ ಆಗಿರುವ ಡಾ. ನೆನೆ ಈಗ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಆರೋಗ್ಯಕರ ಜೀವನಕ್ಕಾಗಿ ನಾವು ತಪ್ಪಿಸಬೇಕಾದ ಉಪಹಾರದ ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಿಳಿ ಬ್ರೆಡ್, ಸಕ್ಕರೆಯ ಧಾನ್ಯಗಳು, ಹಣ್ಣಿನ ರಸ, ಸಂಸ್ಕರಿಸಿದ ಮಾಂಸ, ಸಿಹಿಯಾದ ಮೊಸರು ಈ ಆಯ್ಕೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

ಬಿಳಿ ಬ್ರೆಡ್

ಬಿಳಿ ಬ್ರೆಡ್ ಅನ್ನು ಕಡಿಮೆ ಗುಣಮಟ್ಟದ ಕಾರ್ಬೋಹೈಡ್ರೇಟ್‌ಗಳೊಂದಿಗೆ ಸಂಸ್ಕರಿಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಬಿಳಿ ಬ್ರೆಡ್ ಅನ್ನು ಅತಿಯಾಗಿ ಸೇವಿಸುವುದರಿಂದ ಬೊಜ್ಜು, ಹೃದ್ರೋಗ ಮತ್ತು ಮಧುಮೇಹ ಉಂಟಾಗುತ್ತದೆ.

ಸಕ್ಕರೆ ಧಾನ್ಯಗಳು

ಸಕ್ಕರೆ ಸಿರಿಧಾನ್ಯಗಳು ಸರಳವಾದ ಕಾರ್ಬೋಹೈಡ್ರೇಟ್ ಆಹಾರ ಪದಾರ್ಥಗಳಾಗಿವೆ. ಇದು ಹೆಚ್ಚಿನ ಹಸಿವು ಮತ್ತು ಶುಗರ್ ಮಟ್ಟ ಹೆಚ್ಚಿಸಲು ಕಾರಣವಾಗಬಹುದು. ಇದು ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಹಣ್ಣಿನ ರಸ

ಹಣ್ಣುಗಳನ್ನು ಜ್ಯೂಸ್ ಮಾಡುವುದರಿಂದ ಅವುಗಳಲ್ಲಿರುವ ಅಗತ್ಯ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ. ಜ್ಯೂಸ್ ಮಾಡುವುದು ಹೆಚ್ಚಿನ ಸಕ್ಕರೆಗಳನ್ನು ಬಿಡುಗಡೆ ಮಾಡುತ್ತದೆ. ಹಣ್ಣಿನ ರಸವು ಬೊಜ್ಜು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು.


ಸಂಸ್ಕರಿಸಿದ ಮಾಂಸ

ಬೆಳಗಿನ ಉಪಾಹಾರಕ್ಕಾಗಿ ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ಹೊಟ್ಟೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಕೂಡ ಸಂಸ್ಕರಿಸಿದ ಮಾಂಸವನ್ನು ಸೇವಿಸುವ ಕೆಲವು ಅಡ್ಡಪರಿಣಾಮಗಳಾಗಿವೆ.

ಇದನ್ನೂ ಓದಿ: Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

ಸಿಹಿಯಾದ ಮೊಸರು

ಮೊಸರಿನಲ್ಲಿರುವ ನೈಸರ್ಗಿಕ ಸಕ್ಕರೆ ಆರೋಗ್ಯಕರವಾಗಿದ್ದರೂ ಸುವಾಸನೆಯ ಮೊಸರು ಅಧಿಕ ಸಕ್ಕರೆಯನ್ನು ಹೊಂದಿರುತ್ತದೆ. ಇದು ತೂಕ ಹೆಚ್ಚಾಗುವುದು, ಟೈಪ್ 2 ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತದೆ.

Continue Reading

Latest

Charminar Clock: 135 ವರ್ಷ ಇತಿಹಾಸ ಇರೋ ಚಾರ್‌ಮಿನಾರ್ ಗಡಿಯಾರ ಸೌಂದರ್ಯಕ್ಕೆ ಪಾರಿವಾಳಗಳಿಂದ ಧಕ್ಕೆ

Charminar Clock: ಐತಿಹಾಸಿಕ ಸ್ಥಳವಾದ ಹೈದರಾಬಾದ್ ಚಾರ್ ಮಿನಾರ್‌ನ ಪೂರ್ವ ಭಾಗದಲ್ಲಿರುವ 135 ವರ್ಷ ಹಳೆಯ ಗಡಿಯಾರ ಭಾಗಶಃ ಹಾನಿಯಾಗಿರುವುದು ಕಂಡುಬಂದಿದೆ. ಬಿಳಿ ಬಣ್ಣದ ಪದರವನ್ನು ಹೊಂದಿರುವ ಗಡಿಯಾರದಲ್ಲಿ ಕಪ್ಪು ರಂಧ್ರಗಳು ಬಿದ್ದಿರುವುದು ಎದ್ದು ಕಾಣುತ್ತಿದೆ. ಅದರಲ್ಲೂ 25 ನಿಮಿಷಗಳ ಗುರುತಿಸುವಲ್ಲಿ ರಂಧ್ರ ಇರುವುದನ್ನು ಗಮನಿಸಲಾಗಿದೆ. ಪಾರಿವಾಳಗಳು ಗಡಿಯಾರದಲ್ಲಿ ಯಾವಾಗಲೂ ಬೀಡುಬಿಟ್ಟಿರುತ್ತವೆ. ಹಾಗಾಗಿ ಪಾರಿವಾಳಗಳು ಗಡಿಯಾರವನ್ನು ಹಾನಿಗೊಳಿಸಿವೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ (ಎಎಸ್ಐ) ಸಿಬ್ಬಂದಿ ಹೇಳಿದ್ದಾರೆ.

VISTARANEWS.COM


on

Charminar Clock
Koo


ಹೈದರಾಬಾದ್: ಐತಿಹಾಸಿಕ ಸ್ಥಳವಾದ ಹೈದರಾಬಾದ್ ಚಾರ್ ಮಿನಾರ್‌ನ ಪೂರ್ವ ಭಾಗದಲ್ಲಿರುವ 135 ವರ್ಷ ಹಳೆಯ ಗಡಿಯಾರ ಭಾಗಶಃ ಹಾನಿಯಾಗಿರುವುದು ಕಂಡುಬಂದಿದೆ. ಸೋಮವಾರ ಸ್ಮಾರಕಕ್ಕೆ ಭೇಟಿ ನೀಡಿದ ಸಂದರ್ಶಕರೊಬ್ಬರು ಗಡಿಯಾರ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಗಡಿಯಾರದ ಹಾನಿಗೊಳಗಾದ ಭಾಗದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ (Charminar Clock)ಆಗಿದೆ.

ಬಿಳಿ ಬಣ್ಣದ ಪದರವನ್ನು ಹೊಂದಿರುವ ಗಡಿಯಾರದಲ್ಲಿ ಕಪ್ಪು ರಂಧ್ರಗಳು ಬಿದ್ದಿರುವುದು ಎದ್ದು ಕಾಣುತ್ತಿದೆ. ಅದರಲ್ಲೂ 25 ನಿಮಿಷಗಳ ಗುರುತಿಸುವಲ್ಲಿ ರಂಧ್ರ ಇರುವುದನ್ನು ಗಮನಿಸಲಾಗಿದೆ. ಪಾರಿವಾಳಗಳು ಗಡಿಯಾರದಲ್ಲಿ ಯಾವಾಗಲೂ ಬೀಡುಬಿಟ್ಟಿರುತ್ತವೆ. ಹಾಗಾಗಿ ಪಾರಿವಾಳಗಳು ಗಡಿಯಾರವನ್ನು ಹಾನಿಗೊಳಿಸಿವೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ (ಎಎಸ್ಐ) ಸಿಬ್ಬಂದಿ ಹೇಳಿದ್ದಾರೆ. ಅಲ್ಲದೇ ಗಡಿಯಾರವನ್ನು ಸ್ಥಾಪಿಸಿದ ವಾಹಿದ್ ವಾಚ್ ಕಂಪನಿಯ ಕುಟುಂಬ ಸದಸ್ಯರೊಂದಿಗೆ ಹಾನಿಯ ಬಗ್ಗೆ ತಿಳಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಚಾರ್‌ ಮಿನಾರ್ ಹೈದರಾಬಾದ್‍ನಲ್ಲಿರುವ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ. ರಾಜಧಾನಿಯನ್ನು ಗೋಲ್ಕೊಂಡದಿಂದ ಹೈದರಾಬಾದ್‍ಗೆ ಸ್ಥಳಾಂತರಿಸಿದ ನಂತರ, ಕುತುಬ್ ಶಾಹಿ ರಾಜವಂಶದ ಐದನೇ ರಾಜನು ಇದನ್ನು 1591 ರಲ್ಲಿ ನಿರ್ಮಿಸಿದನು. ಅದಕ್ಕೆ ನಾಲ್ಕು ಮಿನಾರ್‌ಗಳಿರುವ ಕಾರಣ , ಇದನ್ನು “ಚಾರ್ ಮಿನಾರ್” ಎಂದು ಹೆಸರಿಸಲಾಯಿತು. ತನ್ನ ನಗರವನ್ನು ಹಾಳುಗೆಡವುತ್ತಿದ್ದ ಪ್ಲೇಗ್ ರೋಗದ ಅಂತ್ಯಕ್ಕಾಗಿ ರಾಜನು ತನ್ನ ದೇವರನ್ನು ಪ್ರಾರ್ಥಿಸಿದ ಮತ್ತು ತಾನು ಪ್ರಾರ್ಥಿಸುತ್ತಿದ್ದ ಅದೇ ಸ್ಥಳದಲ್ಲಿಯೇ ಮಸ್ಜಿದ್ (ಇಸ್ಲಾಮಿನ ಮಸೀದಿ) ಒಂದನ್ನು ನಿರ್ಮಿಸುವುದಾಗಿ ಅವನು ಹರಸಿಕೊಂಡ ಎಂದು ಹೇಳಲಾಗುತ್ತದೆ. ಹಾಗಾಗಿ ಆ ಸ್ಥಳದಲ್ಲಿ 1591ರಲ್ಲಿ ಚಾರ್ ಮಿನಾರ್‌ಗೆ ಅಡಿಪಾಯವನ್ನು ಹಾಕಿದ್ದಾನೆ.

ಈ ಕಟ್ಟಡ ರಚನೆಯು ಗ್ರಾನೈಟ್, ಸುಣ್ಣ, ಗಾರೆಯಿಂದ ಮಾಡಲ್ಪಟ್ಟಿದೆ, ಮತ್ತು ಕೆಲವೊಬ್ಬರು ಹೇಳುವ ಪ್ರಕಾರ, ಪುಡಿಮಾಡಲ್ಪಟ್ಟ ಅಮೃತಶಿಲೆಯನ್ನೂ ಇದಕ್ಕೆ ಬಳಸಲಾಗಿದೆ ಎನ್ನಲಾಗಿದೆ. ಆಗ್ರಾದಲ್ಲಿನ ತಾಜ್‍ಮಹಲ್ ಮತ್ತು ಪ್ಯಾರಿಗಳಲ್ಲಿ ಐಫೆಲ್ ಟವರ್ ಗೆ ಸಮಾನವಾದ ಪ್ರಾಮುಖ್ಯತೆ ಚಾರ್ ಮಿನಾರ್ ಗೆ ಇದೆ ಎಂದು ಹೇಳಬಹುದು. ಭಾರತದ ಟಾಪ್ 10 ಐತಿಹಾಸಿಕ ಸ್ಥಳಗಳಲ್ಲಿ ಚಾರ್ಮಿನಾರ್ ಕೂಡ ಸೇರಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

ಪ್ರಸ್ತುತ, ಎಎಸ್ಐ ಈ ಐತಿಹಾಸಿಕ ಸ್ಮಾರಕವನ್ನು ನೋಡಿಕೊಳ್ಳುತ್ತಿದೆ. 2014 ರಲ್ಲಿ ತೆಲಂಗಾಣ ರಾಜ್ಯ ರಚನೆಯಾದ ನಂತರ, ಸರ್ಕಾರವು ವಾರಂಗಲ್‌ನ ಕಾಕತೀಯ ಕಲಾ ತೋರಣಂ ಜೊತೆಗೆ ಈ ಸ್ಮಾರಕವನ್ನು ರಾಜ್ಯದ ಅಧಿಕೃತ ಲಾಂಛನದಲ್ಲಿ ಸೇರಿಸಿತು.

Continue Reading
Advertisement
Triple Talaq
Latest6 mins ago

Triple Talaq: ವರದಕ್ಷಿಣೆ ತರಲು ನಿರಾಕರಿಸಿದ ಪತ್ನಿಗೆ ವಾಟ್ಸಾಪ್‍ನಲ್ಲೇ ತ್ರಿವಳಿ ತಲಾಖ್!

Paris Olympics 2024
ಕ್ರೀಡೆ14 mins ago

Paris Olympics 2024: ಪರ್‌ಫೆಕ್ಟ್‌ ಕ್ಲಿಕ್‌ ಎಂದರೆ ಇದು; ಭಾರಿ ಸದ್ದು ಮಾಡುತ್ತಿದೆ ಒಲಿಂಪಿಕ್ಸ್‌ನ ಈ ವೈರಲ್‌ ಫೋಟೊ

Ismail Haniyeh
ವಿದೇಶ24 mins ago

Ismail Haniyeh: ಹತ್ಯೆಗೀಡಾದ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹಿನ್ನೆಲೆ ಏನು? ಈತನನ್ನು ಇಸ್ರೇಲ್‌ ಮುಗಿಸಿದ್ದೇಕೆ?

Nice Road Kannada Movie Receive Notice To Change Its Name
ಸ್ಯಾಂಡಲ್ ವುಡ್46 mins ago

Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?

BJP Protest
ಕರ್ನಾಟಕ48 mins ago

BJP Protest: ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ; ಪುನೀತ್‌ ಕೆರೆಹಳ್ಳಿ ಮತ್ತೆ ವಶಕ್ಕೆ, ಪ್ರತಾಪ್‌ ಸಿಂಹ ವಿರುದ್ಧ ದೂರು

Health Tips
ಆರೋಗ್ಯ52 mins ago

Health Tips: ಉಪಾಹಾರದಲ್ಲಿ ಇವುಗಳು ಬೇಡವೇ ಬೇಡ ಎನ್ನುತ್ತಾರೆ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ

Wayanad Landslide
ದೇಶ1 hour ago

Wayanad Landslide: ಮಣ್ಣಿನ ರಾಶಿಯಂತಾದ ಮುಂಡಕೈ; 400 ಮನೆಗಳ ಪೈಕಿ ಉಳಿದಿದ್ದು 30 ಮಾತ್ರ!

Emmanuel Macron
ವಿದೇಶ1 hour ago

Emmanuel Macron: ಕ್ರೀಡಾ ಸಚಿವೆಗೆ ಎಲ್ಲರೆದುರೇ ಚುಂಬಿಸಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌-ವಿಡಿಯೋ ಇದೆ

Asim Riaz Drops Cryptic Post After Fight With Rohit Shetty
ಬಾಲಿವುಡ್1 hour ago

Asim Riaz: ಸ್ಪರ್ಧಿಯನ್ನು ಹೊರಗೆ ಹಾಕಿದ ʻಖತ್ರೋನ್ ಕೆ ಖಿಲಾಡಿʼ ಶೋ; ಪೋಸ್ಟ್‌ ಮೂಲಕ ಪರೋಕ್ಷವಾಗಿ ತಿರುಗೇಟು ಕೊಟ್ಟ ಅಸಿಮ್ ರಿಯಾಜ್!

hd kumaraswamy in bjp jds meet
ಪ್ರಮುಖ ಸುದ್ದಿ2 hours ago

HD Kumaraswamy: ಬಿಜೆಪಿ ಪಾದಯಾತ್ರೆಗೆ ನಾವು ಬೆಂಬಲ ಕೊಡಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ: ಎಚ್‌ಡಿಕೆ ಕಿಡಿ; ಮೈತ್ರಿಕೂಟದಲ್ಲಿ ಅಪಸ್ವರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ20 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌