Wayanad Tragedy : ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ! - Vistara News

Latest

Wayanad Tragedy : ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ!

Wayanad Tragedy: ಮನುಷ್ಯ ಪ್ರಕೃತಿಯ ಮೇಲೆ ನಿರಂತರವಾಗಿ ಹಾನಿ ಮಾಡುತ್ತಾ ಬಂದಿದ್ದಾನೆ. ಅದಕ್ಕೆ ಸಾಕ್ಷಿಯೆಂಬಂತೆ ಈಗ ವಯನಾಡ್‌ನಲ್ಲಿ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಹಲವರ ಮನೆ ನೆಲಸಮವಾಗಿದೆ. ಅನೇಕರು ಜೀವ ಕಳೆದುಕೊಂಡಿದ್ದಾರೆ. ಈಗ ಒಬ್ಬರನ್ನು ಒಬ್ಬರು ನಂಬದ ಕಾಲದಲ್ಲಿ ನಾವಿದ್ದೇವೆ. ಅಂತಥದರಲ್ಲಿ ಕಾಡುಪ್ರಾಣಿಗಳು ಮನುಷ್ಯನ ಕಷ್ಟಕ್ಕೆ ಸ್ಪಂದಿಸಿದ ಘಟನೆಯೊಂದು ಸಾಕಷ್ಟು ವೈರಲ್ ಆಗಿದೆ. ವಯನಾಡಿನ ಚೂರಲ್ಮಾಲಾದಲ್ಲಿ ಭೂಕುಸಿತದಲ್ಲಿ ಸುಜಾತಾ ಅನಿನಂಚಿರಾ ಮತ್ತು ಅವರ ಕುಟುಂಬವು ಮಾರಣಾಂತಿಕ ಪರಿಸ್ಥಿತಿಯಲ್ಲಿ ಸಿಲುಕಿದೆ.ಆ ಸಂದರ್ಭದಲ್ಲಿ ಆನೆಗಳೆರಡು ಅವರಿಗೆ ಸಹಾಯ ಮಾಡಿದ ಘಟನೆ ನಿಜಕ್ಕೂ ಎಲ್ಲರ ಕಣ್ಣಂಚನ್ನು ಒದ್ದೆ ಮಾಡುತ್ತೆ.

VISTARANEWS.COM


on

Wayanad Tragedy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಭಾರೀ ಮಳೆಯಿಂದಾಗಿ ವಯನಾಡ್‍ನಲ್ಲಿ (Wayanad Tragedy )ಉಂಟಾದ ಭೂಕುಸಿತಕ್ಕೆ ಹಲವರ ಮನೆ ನೆಲಸಮವಾಗಿದೆ. ಅನೇಕರು ಜೀವ ಕಳೆದುಕೊಂಡಿದ್ದಾರೆ. ವಯನಾಡಿನ ಚೂರಲ್ಮಾಲಾದಲ್ಲಿ ಭೂಕುಸಿತದಲ್ಲಿ ಅದೃಷ್ಟವಶಾತ್ ಕೆಲವರು ಬದುಕುಳಿದಿದ್ದಾರೆ. ಅವರಲ್ಲಿ ಒಬ್ಬರು ಅಂದು ತಮ್ಮ ಹಾಗೂ ತಮ್ಮ ಕುಟುಂಬದವರ ಜೀವ ಉಳಿಸಿಕೊಳ್ಳಲು ಎಷ್ಟು ಪರಿದಾಡಿದರು. ಹಾಗೇ ಕಾಡು ಸೇರಿ ಅಲ್ಲಿ ತಾವು ಎದುರಿಸಿದ ಸಂದಿಗ್ಧ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ವರದಿ ಪ್ರಕಾರ ಚೂರಲ್ಮಾಲಾದಲ್ಲಿ ಭಾರಿ ಭೂಕುಸಿತದಿಂದಾಗಿ ಸುಜಾತಾ ಅನಿನಂಚಿರಾ ಮತ್ತು ಅವರ ಕುಟುಂಬವು ಮಾರಣಾಂತಿಕ ಪರಿಸ್ಥಿತಿಯಲ್ಲಿ ಸಿಲುಕಿತ್ತು. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಸುಜಾತಾ, ಅವರ ಮಗಳು ಸುಜಿತಾ, ಪತಿ ಕುಟ್ಟನ್ ಮತ್ತು ಮೊಮ್ಮಕ್ಕಳಾದ ಸೂರಜ್ (18) ಮತ್ತು ಮೃದುಲಾ (12) ಅವರು ಅತ್ಯಂತ ಧೈರ್ಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

18 ವರ್ಷಗಳಿಂದ ಮುಂಡಕ್ಕೈನ ಹ್ಯಾರಿಸನ್ ಮಲಯಾಳಂ ಟೀ ಎಸ್ಟೇಟ್‍ನಲ್ಲಿ ಚಹಾದ ಎಲೆಗಳನ್ನು ಕೀಳುವ ಕೆಲಸ ಮಾಡುತ್ತಿದ್ದ ಸುಜಾತಾ ಅಂದು ಭೂಕುಸಿತದ ವೇಳೆ ತಮಗೆ ಎದುರಾದ ಭಯಾನಕ ಅಗ್ನಿಪರೀಕ್ಷೆಯನ್ನು ನೆನಪಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ 4 ಗಂಟೆಯಿಂದ ಭಾರಿ ಮಳೆ ಸುರಿಯುತ್ತಿದ್ದರಿಂದ ಮುಂಜಾನೆ ಬೇಗನೆ ಎದ್ದ ಸುಜಾತ ಅವರಿಗೆ ದೊಡ್ಡ ಶಬ್ದವನ್ನು ಕೇಳಿದೆ, ಆಗ ನೋಡಿದರೆ ನೀರು ಅವರ ಮನೆಗೆ ನುಗ್ಗಿ ಮನೆಯ ಚಾವಣಿ ಕುಸಿದು ಅವರ ಮಗಳು ಗಂಭೀರವಾಗಿ ಗಾಯಗೊಂಡಳು. ಕುಸಿದ ಗೋಡೆಯ ಅವಶೇಷಗಳನ್ನು ತೆಗೆದು ಹಾಕಿ ಅವರು ತಮ್ಮ ಮಗಳು ಹಾಗೂ ಮೊಮ್ಮಕ್ಕಳನ್ನು ಕಾಪಾಡಿದ್ದಾರೆ. ನಂತರ ಕುಟುಂಬದ ಉಳಿದವರು ಸಹ ತಮ್ಮನ್ನು ತಾವು ರಕ್ಷಿಸಿಕೊಂಡು ಉಕ್ಕಿ ಹರಿಯುವ ನೀರಿನ ಮೂಲಕ ನಡೆದು ಅಂತಿಮವಾಗಿ ಹತ್ತಿರದ ಗುಡ್ಡಕ್ಕೆ ಏರಿದ್ದಾರಂತೆ.

ಆದರೆ ಒಂದು ಸಂಕಷ್ಟದಿಂದ ಪಾರಾದ ಸುಜಾತ ಅವರಿಗೆ ಎದುರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆಯಂತೆ. ಅದೇನೆಂದರೆ ಗುಡ್ಡ ಏರಿದ ಅವರ ಎದುರಿಗೆ ಎರಡು ಹೆಣ್ಣು ಆನೆಗಳು ನಿಂತಿದ್ದವಂತೆ. ಆಗ ಹೆದರಿದ ಸುಜಾತ ಅವರು ಆನೆಗಳಲ್ಲಿ ರಾತ್ರಿ ಇಲ್ಲಿ ಮಲಗಲು ಅವಕಾಶ ನೀಡಿ ಎಂದು ಬೇಡಿಕೊಂಡಿದ್ದಾರಂತೆ. ಆಗ ಅವರ ಕಷ್ಟ ಅರ್ಥಮಾಡಿಕೊಂಡ ಆನೆಗಳು ಅವರಿಗೆ ಯಾವುದೇ ಹಾನಿ ಮಾಡದೆ ಅಲ್ಲೇ ನಿಂತಿದ್ದವಂತೆ. ಮರುದಿನ ಬೆಳಿಗ್ಗೆ ಕೆಲವು ಜನರು ಅವರನ್ನು ರಕ್ಷಿಸುವವರೆಗೂ ಆನೆಗಳು ಸಹ ಅಲ್ಲಿಯೇ ನಿಂತಿದ್ದವು. ಆದರೆ ಆ ವೇಳೆ ಅವುಗಳ ಕಣ್ಣಿನಲ್ಲಿ ನೀರು ಸುರಿಯುತ್ತಿರುವುದನ್ನು ಅವರು ಗಮನಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

ಇದರಿಂದ ತಿಳಿಯುದೇನೆಂದರೆ ಪ್ರಾಣಿಗಳಿಗೂ ಮನುಷ್ಯರ ಭಾವನೆ ಅರ್ಥವಾಗುತ್ತದೆ. ಅವುಗಳು ಮನುಷ್ಯರ ಭಾವನೆಗಳಿಗೆ ಸ್ಪಂದಿಸುತ್ತವೆ ಎಂಬುದು. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, “ಮನೆಯಿಲ್ಲದ ಭೂಕುಸಿತ ಸಂತ್ರಸ್ಥರು ತಮ್ಮ ದುಃಖವನ್ನು ಆನೆಗೆ ತಿಳಿಸಿದರು, ಅದು ಅವರಿಗಾಗಿ ಕಣ್ಣೀರು ಹಾಕಿದೆ ಮತ್ತು ರಾತ್ರಿಯಿಡೀ ಅವರಿಗೆ ಆಶ್ರಯ ನೀಡಿದೆ ಎಂದು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಮೈಗೆ ಟವೆಲ್ ಸುತ್ತಿಕೊಂಡು ಬೀದಿ ತುಂಬಾ ಓಡಾಡಿದ ಯುವತಿ; ನೋಡಿದ ಜನ ಸುಸ್ತು!

Viral Video: ಮಿಂತ್ರಾ ಫ್ಯಾಷನ್ ಸೂಪರ್ ಸ್ಟಾರ್ ವಿಜೇತೆ ಮತ್ತು ಇನ್ಸ್ಟಾಗ್ರಾಂನಲ್ಲಿ 37,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ತನುಮಿತಾ ಘೋಷ್ ಇತ್ತೀಚೆಗೆ ಮುಂಬೈನ ಜನರು ಓಡಾಡುತ್ತಿದ್ದ ಬೀದಿಗಳಲ್ಲಿ ದೇಹಕ್ಕೆ ಟವೆಲ್ ಸುತ್ತಿಕೊಂಡು ಪ್ರದರ್ಶನ ನೀಡಿದವರು. ಈ ವೈರಲ್ ಆಗಿರುವ ವಿಡಿಯೊದಲ್ಲಿ, ತನುಮಿತಾ ಟವೆಲ್ ಸುತ್ತಿಕೊಂಡು ಯಾವುದೇ ಮುಜುಗರವಿಲ್ಲದೇ ನಡೆದಿದ್ದು ಕಂಡು ಬಂದಿದೆ. ಇದನ್ನು ನೋಡಿದವರಿಗೆ ಆಕೆ ಬಾತ್‍ರೂಂನಿಂದ ಹೊರಬಂದಂತೆ ಕಾಣಿಸುತ್ತದೆ. ಆದರೆ ಅಸಲಿ ಕತೆ ಬೇರೆಯೇ ಇದೆ!

VISTARANEWS.COM


on

Viral Video
Koo


ಮುಂಬೈ : ಯುವಕ ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ವಿವಿಧ ರೀತಿಯ ರೀಲ್ಸ್ ಗಳನ್ನು ಮಾಡಲು ಹೋಗಿ ಕೋಲಾಹಲವನ್ನು ಸೃಷ್ಟಿಸುತ್ತಿದ್ದಾರೆ. ಸಾಮಾನ್ಯವಾಗಿ ಯುವತಿಯರು ಸ್ನಾನ ಮಾಡಿ ಬಾತ್‍ರೂಂನಿಂದ ಹೊರಗೆ ಬರುವಾಗ ದೇಹಕ್ಕೆ ಟವೆಲ್ ಸುತ್ತಿಕೊಂಡು ಮನೆಯೊಳಗೆ ಓಡಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಯುವತಿ ತನ್ನ ದೇಹವನ್ನು ಟವೆಲ್‍ನಿಂದ ಸುತ್ತಿಕೊಂಡು ರಸ್ತೆಗೆ ಬಂದಿದ್ದಾಳೆ. ಇವಳನ್ನು ನೋಡಿ ದಾರಿಹೋಕರು ದಿಗ್ಭ್ರಮೆಗೊಂಡಿದ್ದಾರೆ. ಈ ವಿಡಿಯೊ ಸೊಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ.

ಮಿಂತ್ರಾ ಫ್ಯಾಷನ್ ಸೂಪರ್ ಸ್ಟಾರ್ ವಿಜೇತೆ ಮತ್ತು ಇನ್ಸ್ಟಾಗ್ರಾಂನಲ್ಲಿ 37,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ತನುಮಿತಾ ಘೋಷ್ ಇತ್ತೀಚೆಗೆ ಮುಂಬೈನ ಜನರು ಓಡಾಡುತ್ತಿದ್ದ ಬೀದಿಗಳಲ್ಲಿ ದೇಹಕ್ಕೆ ಟವೆಲ್ ಸುತ್ತಿಕೊಂಡು ಪ್ರದರ್ಶನ ನೀಡಿದವರು. ಈ ವೈರಲ್ ಆಗಿರುವ ವಿಡಿಯೊದಲ್ಲಿ, ತನುಮಿತಾ ಟವೆಲ್ ಸುತ್ತಿಕೊಂಡು ಯಾವುದೇ ಮುಜುಗರವಿಲ್ಲದೇ ನಡೆಯುತ್ತಿದ್ದಾರೆ. ಇದನ್ನು ನೋಡಿದವರಿಗೆ ಆಕೆ ಬಾತ್‍ರೂಂನಿಂದ ಹೊರಬಂದಂತೆ ಕಾಣಿಸುತ್ತದೆ. ವಿಡಿಯೊದಲ್ಲಿ ‘ತೌಬಾ-ತೌಬಾ’ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದೆ. ಈ ವಿಡಿಯೊ ಶೀರ್ಷಿಕೆಯಲ್ಲಿ, ಮುಂಬೈನ ಪ್ರೇಕ್ಷಕರು ತನ್ನ ನೋಟವನ್ನು ನೋಡಿ ‘ತೌಬಾ-ತೌಬಾ’ ಎಂದು ಉದ್ಗರಿಸುತ್ತಿದ್ದಾರೆ ಎಂದು ಅವರು ಹಾಸ್ಯಮಯವಾಗಿ ಬರೆದಿದ್ದಾರೆ.

ಈ ಅಸಾಮಾನ್ಯ ಉಡುಗೆಯ ಜೊತೆಗೆ ಕಿವಿಯೋಲೆಗಳನ್ನು ಧರಿಸಿದ್ದರು ಮತ್ತು ಸ್ಟೈಲಿಶ್ ಸ್ಪೋರ್ಟ್ಸ್ ಶೂಗಳನ್ನು ಧರಿಸಿದ್ದರು. ಅವರು ಈ ವೇಷದಲ್ಲಿ ಬಸ್ ನಿಲ್ದಾಣದಿಂದ ಅಂಗಡಿಯ ಕಡೆಗೆ ಹೋಗುತ್ತಿದ್ದಾಗ, ಅಲ್ಲಿದ್ದ ದಾರಿಹೋಕರು ಇವರನ್ನು ದಿಟ್ಟಿಸಿ ನೋಡುತ್ತಿದ್ದಾರೆ. ಈ ವಿಡಿಯೊದ ಕೊನೆಯಲ್ಲಿ ತನುಮಿತಾ ತನ್ನ ಕೂದಲಿಗೆ ಹಾಗೂ ದೇಹಕ್ಕೆ ಸುತ್ತಿದ್ದ ಟವೆಲ್ ಅನ್ನು ತೆಗೆದಿದ್ದಾರೆ. ಆದರೆ ಅದರೊಳಗೆ ಅವರು ಬಟ್ಟೆ ಧರಿಸಿದರು. ಈ ವಿಡಿಯೊ ಪ್ರೇಕ್ಷಕರಿಗೆ ಹಾಗೂ ದಾರಿಹೋಕರಿಗೆ ಆಶ್ಚರ್ಯ ಮತ್ತು ಕುತೂಹಲವನ್ನುಂಟು ಮಾಡಿದಂತು ನಿಜ.

ಈ ವಿಡಿಯೊ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾವಿರಾರು ಲೈಕ್‍ಗಳು ಮತ್ತು ಶೇರ್ ಗಳನ್ನು ಗಳಿಸಿದೆ. ಇದಕ್ಕೆ ಹಲವಾರು ಕಾಮೆಂಟ್‍ಗಳು ಸಹ ಬಂದಿವೆ, ಹೆಚ್ಚಿನವರು ಅವರ ಈ ಕಾರ್ಯದ ಉದ್ದೇಶ ಮತ್ತು ಪರಿಣಾಮವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಪ್ಯಾರಿಸ್‌ಗೆ ಹೋದರೂ ಅಂಬಾನಿ ಸೊಸೆ ಕರಿಮಣಿ ಮರೆಯಲಿಲ್ಲ! ಸೋಷಿಯಲ್‌ ಮೀಡಿಯಾದಲ್ಲೀಗ ಇದೇ ಚರ್ಚೆ!

ಆದರೆ ತನುಮಿತಾ ಅವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಮತ್ತು ಸೋನಾಕ್ಷಿ ಸಿನ್ಹಾ, ಶಲೀನಾ ನಥಾನಿ, ಮನೀಶ್ ಮಲ್ಹೋತ್ರಾ ಮತ್ತು ಡಿನೋ ಮೋರಿಯಾ ಅವರಂತಹ ಸೆಲೆಬ್ರಿಟಿಗಳಂತೆ ತಾನು ಮನರಂಜನೆಗಾಗಿ ಮಾಡಿರುವುದಾಗಿ ತಿಳಿಸಿದ್ದಾರೆ.ಅವರ ವಿವರಣೆಯ ಹೊರತಾಗಿಯೂ, ಕೆಲವು ಬಳಕೆದಾರರು ನಿರಾಶೆಯನ್ನು ವ್ಯಕ್ತಪಡಿಸುತ್ತಲೇ ಇದ್ದರು, ಇದು ಸಂಪ್ರದಾಯಸ್ಥ ಕುಟುಂಬದವರಿಗೆ ಮುಜುಗರವನ್ನುಂಟು ಮಾಡುವಂತಿದೆ ಎಂದು ಹೇಳಿದ್ದಾರೆ.

Continue Reading

ಆಟೋಮೊಬೈಲ್

Bike Mileage Tips: ಬೈಕ್‌‌ಗೆ ಟ್ಯೂಬ್, ಟ್ಯೂಬ್ ಲೆಸ್ ಟಯರ್; ಇವೆರಡರಲ್ಲಿ ಯಾವುದು ಬೆಸ್ಟ್?

ಬೈಕ್ ಉತ್ತಮ ಮೈಲೇಜ್ (Bike Mileage Tips) ನೀಡಬೇಕಾದರೆ ಉತ್ತಮ ಗುಣಮಟ್ಟದ ಟಯರ್ ಬಳಕೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ನಿರ್ವಹಣೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಟಯರ್ ನ ಪ್ರಕಾರವು ಬೈಕ್ ನ ಮೈಲೇಜ್ ಅನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಯಾವ ಟಯರ್ ಸೂಕ್ತ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Bike Mileage Tips
Koo

ವಾಹನದ ಮೈಲೇಜ್ (Bike Mileage Tips) ಹಲವಾರು ಅಂಶಗಳ ಮೇಲೆ ನಿರ್ಧರಿಸಲ್ಪಡುತ್ತದೆ. ಇದರಲ್ಲಿ ಯಾವ ಟಯರ್ (tyres) ಬಳಸುತ್ತಿದ್ದೀರಿ ಎಂಬುದು ಕೂಡ ಒಂದಾಗಿದೆ. ಬೈಕ್ ಉತ್ತಮ ಮೈಲೇಜ್ (Bike mileage) ನೀಡಬೇಕಾದರೆ ಉತ್ತಮ ಗುಣಮಟ್ಟದ ಟಯರ್ (bike tyres) ಬಳಕೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ನಿರ್ವಹಣೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಟಯರ್ ನ ಪ್ರಕಾರವು ಬೈಕ್ ನ ಮೈಲೇಜ್ ಅನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

ಸಾಮಾನ್ಯವಾಗಿ ಟ್ಯೂಬ್ ಲೆಸ್ ಬೈಕ್ ಟಯರ್ ಗಳು ಟ್ಯೂಬ್ ಟಯರ್ ಗಳಿಗಿಂತ ಹೆಚ್ಚು ದುಬಾರಿ. ಇದರ ಹಿಂದೆ ಕೆಲವು ಕಾರಣಗಳಿವೆ. ಟ್ಯೂಬ್‌ಲೆಸ್ ಟಯರ್ ಗಳ ಉತ್ಪಾದನಾ ಪ್ರಕ್ರಿಯೆ ಮತ್ತು ತಾಂತ್ರಿಕ ಸಂಕೀರ್ಣತೆ ಹೆಚ್ಚಾಗಿರುತ್ತದೆ. ಗಾಳಿಯ ಸೋರಿಕೆಯನ್ನು ಕಡಿಮೆ ಮಾಡಲು ಅವರಿಗೆ ವಿಶೇಷ ರಬ್ಬರ್ ಮತ್ತು ಸೀಲಿಂಗ್ ಅಗತ್ಯವಿರುತ್ತದೆ. ಇದು ತಯಾರಿಸಲು ಹೆಚ್ಚು ದುಬಾರಿಯಾಗಿದೆ. ಅಲ್ಲದೇ ಟ್ಯೂಬ್‌ಲೆಸ್ ಟಯರ್ ಗಳು ಹೆಚ್ಚು ಪಂಕ್ಚರ್ ನಿರೋಧಕವಾಗಿರುತ್ತವೆ ಮತ್ತು ರೋಲಿಂಗ್ ಪ್ರತಿರೋಧವನ್ನು ಹೊಂದಿರುತ್ತವೆ. ಇದು ದೀರ್ಘಾವಧಿಯಲ್ಲಿ ಉತ್ತಮ ಕಾರ್ಯಕ್ಷಮತೆ ಮತ್ತು ಕಡಿಮೆ ನಿರ್ವಹಣೆಗೆ ಕಾರಣವಾಗುತ್ತದೆ.

ಇನ್ನು ಟ್ಯೂಬ್ಡ್ ಟಯರ್ ಗಳು ಸಾಮಾನ್ಯವಾಗಿ ಅಗ್ಗವಾಗಿರುತ್ತವೆ. ಯಾಕೆಂದರೆ ಅವುಗಳ ಉತ್ಪಾದನಾ ಪ್ರಕ್ರಿಯೆಯು ಸರಳವಾಗಿದೆ ಮತ್ತು ಟ್ಯೂಬ್ ಅನ್ನು ಬದಲಾಯಿಸಲು ಮತ್ತು ಸರಿಪಡಿಸಲು ಸಹ ಸುಲಭವಾಗಿದೆ.

ಟ್ಯೂಬ್ಲೆಸ್ ಮತ್ತು ಟ್ಯೂಬ್ಡ್ ಟಯರ್ ಗಳ ನಡುವಿನ ವ್ಯತ್ಯಾಸ ಏನು?

Bike Mileage Tips
Bike Mileage Tips


ರಚನೆ

ಟ್ಯೂಬ್‌ಲೆಸ್ ಟಯರ್ ಗಳಿಗೆ ಟ್ಯೂಬ್ ಅಗತ್ಯವಿಲ್ಲ. ಟಯರ್ ಮತ್ತು ರಿಮ್ ನಡುವೆ ಏರ್ ಸೀಲ್ ಅನ್ನು ರಚಿಸಲು ವಿಶೇಷ ರೀತಿಯ ರಬ್ಬರ್ ಸೀಲಿಂಗ್ ಇದೆ. ಗಾಳಿಯು ನೇರವಾಗಿ ಟಯರ್ ಒಳಗೆ ಉಳಿಯುತ್ತದೆ ಮತ್ತು ರಿಮ್ ನೊಂದಿಗೆ ಸೀಲ್ ಅನ್ನು ರೂಪಿಸುತ್ತದೆ.

ಟ್ಯೂಬ್ ಟಯರ್ ಒಳಗೆ ಗಾಳಿಯನ್ನು ಆವರಿಸುವ ಒಳಗಿನ ಟ್ಯೂಬ್ ಅನ್ನು ಹೊಂದಿರುತ್ತವೆ. ಈ ಟ್ಯೂಬ್ ರಬ್ಬರ್‌ನಿಂದ ಮಾಡಲ್ಪಟ್ಟಿದೆ ಮತ್ತು ಟಯರ್ ಒಳಗೆ ಗಾಳಿಯನ್ನು ಇರಿಸಲು ಕೆಲಸ ಮಾಡುತ್ತದೆ.

ಪಂಕ್ಚರ್ ಪ್ರೂಫ್ನೆಸ್

ಟ್ಯೂಬ್‌ಲೆಸ್ ಟಯರ್ ಗಳು ಪಂಕ್ಚರ್‌ಗಳಿಗೆ ಹೆಚ್ಚು ನಿರೋಧಕವಾಗಿರುತ್ತವೆ. ಯಾಕೆಂದರೆ ಕಡಿಮೆ ಗಾಳಿಯ ಸೋರಿಕೆ ಇರುತ್ತದೆ. ಸಣ್ಣ ಪಂಕ್ಚರ್‌ಗಳು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳಬಹುದು, ತುರ್ತು ಪರಿಸ್ಥಿತಿಯಲ್ಲಿ ಕಡಿಮೆ ಸಮಸ್ಯೆಗಳನ್ನು ಉಂಟುಮಾಡಬಹುದು.

ಟ್ಯೂಬ್ ಟಯರ್ ಪಂಕ್ಚರ್ ಆದ ಸಂದರ್ಭದಲ್ಲಿ ಗಾಳಿಯು ಟ್ಯೂಬ್ ನಿಂದ ವೇಗವಾಗಿ ಹೊರಬರುತ್ತದೆ.

ಉತ್ತಮ ಮೈಲೇಜ್

ಟ್ಯೂಬ್ ಲೆಸ್ ಟಯರ್ ಗಳು ಸಾಮಾನ್ಯವಾಗಿ ಟ್ಯೂಬ್ ಟಯರ್ ಗಳಿಗಿಂತ ಉತ್ತಮ ಮೈಲೇಜ್ ನೀಡಬಲ್ಲವು. ಇದಕ್ಕೆ ಕೆಲವು ಕಾರಣಗಳಿವೆ.

ಪ್ಯಾಚಿಂಗ್ ಮತ್ತು ಪಂಕ್ಚರ್ ಪ್ರೂಫ್ನೆಸ್

ಟ್ಯೂಬ್‌ಲೆಸ್ ಟಯರ್ ಗಳು ಕಡಿಮೆ ಗಾಳಿಯನ್ನು ಸೋರಿಕೆ ಮಾಡುತ್ತವೆ ಮತ್ತು ಪಂಕ್ಚರ್‌ಗಳಿಗೆ ಹೆಚ್ಚು ನಿರೋಧಕವಾಗಿರುತ್ತವೆ. ಇದರರ್ಥ ಕಡಿಮೆ ಬಾರಿ ಗಾಳಿಯನ್ನು ತುಂಬಿದರೆ ಸಾಕಾಗುತ್ತದೆ. ಈ ಟಯರ್ ನ ಬಾಳಿಕೆ ಹೆಚ್ಚು.

ಕಡಿಮೆ ರೋಲಿಂಗ್ ಪ್ರತಿರೋಧ

ಟ್ಯೂಬ್‌ಲೆಸ್ ಟಯರ್ ಗಳು ಕಡಿಮೆ ರೋಲಿಂಗ್ ಪ್ರತಿರೋಧವನ್ನು ಹೊಂದಿವೆ. ಇದು ಬೈಕ್‌ನ ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ.

ಹಗುರ

ಟ್ಯೂಬ್‌ಲೆಸ್ ಟಯರ್ ಗಳು ಸಾಮಾನ್ಯವಾಗಿ ಹಗುರವಾಗಿರುತ್ತವೆ. ಯಾಕೆಂದರೆ ಅವುಗಳಿಗೆ ಟ್ಯೂಬ್ ಅಗತ್ಯವಿಲ್ಲ. ಇದು ಬೈಕಿನ ಒಟ್ಟಾರೆ ತೂಕವನ್ನು ಕಡಿಮೆ ಮಾಡುತ್ತದೆ. ಇದು ಮೈಲೇಜ್ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: 4 ಲಕ್ಷ ಬೈಕ್‌, ಸ್ಕೂಟರ್‌ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ; ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ? ಹೀಗೆ ಚೆಕ್‌ ಮಾಡಿ

ಇನ್ನು ಕೆಲವು ಕಾರಣಗಳಿವೆ

ಸರಿಯಾದ ಟಯರ್ ಅನ್ನು ಆಯ್ಕೆ ಮಾಡುವುದು ಚಾಲನಾ ಶೈಲಿ, ರಸ್ತೆ ಪರಿಸ್ಥಿತಿಗಳು ಮತ್ತು ಬೈಕು ಪ್ರಕಾರವನ್ನು ಅವಲಂಬಿಸಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಟ್ಯೂಬ್ಡ್ ಟಯರ್ ಗಳು ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತವೆ.

ಟ್ಯೂಬ್‌ಲೆಸ್ ನ ಪ್ರಯೋಜನವೇನು?

ಟ್ಯೂಬ್‌ಲೆಸ್ ಟಯರ್ ಗಳು ಟ್ಯೂಬ್ಡ್ ಟಯರ್ ಗಳಿಗೆ ಹೋಲಿಸಿದರೆ ಹೆಚ್ಚು ದುಬಾರಿಯಾಗಿರುತ್ತವೆ. ಆದರೆ ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಸುಲಭವಾಗಿ ದುರಸ್ತಿ ಮಾಡಬಹುದಾಗಿದೆ.

Continue Reading

Latest

Robbery Case: ಹಾಡಹಗಲೇ ಬಂದೂಕು ತೋರಿಸಿ ಆಭರಣ ಮಳಿಗೆ ದೋಚಿದ ದರೋಡೆಕೋರರು; ವಿಡಿಯೊ ನೋಡಿ

Robbery Case: ಹಾಡಹಗಲೇ ಮೂವರು ವ್ಯಕ್ತಿಗಳು ಬಂದೂಕು ತೋರಿಸಿ ಆಭರಣ ಅಂಗಡಿಯನ್ನು ಲೂಟಿ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ. ದರೋಡೆಕೋರರು ಅಂಗಡಿಗೆ ನುಗ್ಗಿ ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಅಂಗಡಿಯೊಳಗಿನ ವ್ಯಕ್ತಿಯ ಮೇಲೆ ಬಂದೂಕನ್ನು ಗುರಿಯಾಗಿಸಿಕೊಂಡು ಆಭರಣ ಮಳಿಗೆಯಲ್ಲಿದ್ದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಇಡೀ ಘಟನೆ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Robbery Case
Koo


ಪುಣೆ: ಇತ್ತೀಚಿನ ದಿನಗಳಲ್ಲಿ ಹಾಡಹಗಲಿನಲ್ಲಿ ಕಳ್ಳರು ಕಳ್ಳತನ ಶುರುಮಾಡಿದ್ದಾರೆ. ಹಗಲಿನಲ್ಲಿ ಜನಸಂದಣಿ ಇರುವಂತಹ ಸ್ಥಳಗಳಲ್ಲೇ ದರೋಡೆಕೋರರು ಜನರ ಮೇಲೆ, ಅಂಗಡಿಗಳ ಮೇಲೆ ದಾಳಿ ಮಾಡಿ ಲೂಟಿ ಮಾಡುತ್ತಿದ್ದಾರೆ. ಅದೇರೀತಿ ಇತ್ತೀಚೆಗೆ ಹಾಡಹಗಲೇ ಮೂವರು ವ್ಯಕ್ತಿಗಳು ಬಂದೂಕು ತೋರಿಸಿ ಆಭರಣ ಅಂಗಡಿಯನ್ನು ಲೂಟಿ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ. ಇಡೀ ಘಟನೆ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Robbery Case) ಆಗಿದೆ.

ದರೋಡೆಕೋರರು ಅಂಗಡಿಗೆ ನುಗ್ಗಿ ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ವಿಡಿಯೊದಲ್ಲಿ, ದರೋಡೆಕೋರರಲ್ಲಿ ಒಬ್ಬರು ಅಂಗಡಿಯೊಳಗಿನ ವ್ಯಕ್ತಿಯ ಮೇಲೆ ಬಂದೂಕನ್ನು ಗುರಿಯಾಗಿಸಿಕೊಂಡರೆ, ಇನ್ನೊಬ್ಬ ವ್ಯಕ್ತಿಯ ಕಾಲರ್ ಹಿಡಿದು ಕೆಳಕ್ಕೆ ತಳ್ಳುತ್ತಿದ್ದಾನೆ. ಮೂರನೆಯವನು ಅಂಗಡಿಯೊಳಗೆ ಇದ್ದ ವಸ್ತುಗಳನ್ನು ತೆಗೆದುಕೊಂಡಿದ್ದಾನೆ ಮತ್ತು ನಂತರ, ಮೂವರು ಅಂಗಡಿಯಿಂದ ಹೊರಗೆ ಹೋಗಿದ್ದಾರೆ.

ಪುಣೆಯ ಲಕ್ಷ್ಮಿ ಚೌಕ್ ಹಿಂಜೇವಾಡಿಯಲ್ಲಿ ಬೆಳಿಗ್ಗೆ 10:30 ಕ್ಕೆ ಈ ಘಟನೆ ನಡೆದಿದ್ದು, ಕೆಲವೇ ಸೆಕೆಂಡುಗಳಲ್ಲಿ ದರೋಡೆಕೋರರು ಅಂಗಡಿಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಜಾಗ ಖಾಲಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಪೊಲೀಸರು ಅದನ್ನು ಪರೀಶಿಲಿಸಿ ಕಳ್ಳರನ್ನು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ನಿನಗೆಷ್ಟು ಬಾಯ್‌ಫ್ರೆಂಡ್‌ ಎನ್ನುತ್ತ ಗೆಳತಿಗೆ ಭೀಕರವಾಗಿ ಇರಿದ ಯುವ ಕಾಂಗ್ರೆಸ್ ಮುಖಂಡ!

ಕಳೆದ ತಿಂಗಳು, ಇದೇ ರೀತಿಯ ಕಳ್ಳತನದ ಪ್ರಕರಣ ನಡೆದಿದ್ದು, ಖಾರ್ಘರ್ ಪ್ರದೇಶದಲ್ಲಿ ರಾತ್ರಿ 10:00 ರ ಸುಮಾರಿಗೆ ಮೂವರು ದರೋಡೆಕೋರರು ಹೆಲ್ಮೆಟ್ ಧರಿಸಿ ಆಭರಣ ಅಂಗಡಿಗೆ ನುಗ್ಗಿ ಬಂದೂಕು ತೋರಿಸಿ ಆಭರಣ ಅಂಗಡಿಯನ್ನು ಲೂಟಿ ಮಾಡಿದ್ದರು. ಕಳ್ಳತನದ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಹಿಡಿಯಾಗಿದೆ, ಮುಖವಾಡ ಧರಿಸಿದ ಮೂವರು ದರೋಡೆಕೋರರನ್ನು ಪತ್ತೆಹಚ್ಚಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ. ದರೋಡೆಯ ಸಮಯದಲ್ಲಿ, ದರೋಡೆಕೋರರು ಅಂಗಡಿಯೊಳಗೆ ಹಲವಾರು ಬಾರಿ ಗುಂಡುಗಳನ್ನು ಹಾರಿಸಿದರು. ಅವರು ತಪ್ಪಿಸಿಕೊಳ್ಳುವಾಗ, ಅವರು ಹೆಚ್ಚುವರಿ ಸುತ್ತು ಗುಂಡು ಹಾರಿಸಿದ್ದಾರೆ.

Continue Reading

Latest

Land Dispute: ಭೂ ವಿವಾದ ಪ್ರಕರಣ; ಜೀವಂತ ಸಮಾಧಿಯಾದವನನ್ನು ರಕ್ಷಿಸಿದ ಬೀದಿನಾಯಿಗಳು!

Land Dispute: ಭೂ ವಿವಾದದಲ್ಲಿ ಜೀವಂತವಾಗಿ ಸಮಾಧಿ ಮಾಡಿದ ವ್ಯಕ್ತಿಯನ್ನು ನಾಯಿಗಳು ರಕ್ಷಿಸಿದ್ದು ಹೇಗೆ ಗೊತ್ತಾ?ಆಸ್ತಿ, ಹಣದ ಆಸೆಗೆ ಜನರು ಮನುಷ್ಯತ್ವವನ್ನು ಮರೆಯುತ್ತಿದ್ದಾರೆ.ಇದರ ಮುಂದೆ ಸಂಬಂಧಗಳಿಗೂ ಬೆಲೆಯಿಲ್ಲ.ಆಸ್ತಿಗಾಗಿ ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೂ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳು ಹಲವು ನಡೆದಿದೆ. ಇದೀಗ ಭೂ ವಿವಾದಕ್ಕೆ ಸಂಬಂಧಿಸಿದಂತೆ 24 ವರ್ಷದ ವ್ಯಕ್ತಿಯನ್ನು ನಾಲ್ವರು ಜೀವಂತವಾಗಿ ಸಮಾಧಿ ಮಾಡಿದ್ದು, ಬೀದಿನಾಯಿಗಳು ಆತನನ್ನು ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

VISTARANEWS.COM


on

Land Dispute
Koo


ಆಗ್ರಾ: ಹಣ, ಆಸ್ತಿ, ಅಧಿಕಾರದ ಆಸೆಗೆ ಮನುಷ್ಯರು ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೆ ಹೋಗುತ್ತಾರೆ ಎಂಬುದಕ್ಕೆ ರಾಮಾಯಣ, ಮಹಾಭಾರತ ಸಾಕ್ಷಿಯಾಗಿದೆ. ಇಂದಿಗೂ ಆಸ್ತಿ, ಹಣದ ಆಸೆಗೆ ಜನರು ಮನುಷ್ಯತ್ವವನ್ನು ಕಳೆದುಕೊಂಡು ಬಹಳ ಕ್ರೂರವಾಗುತ್ತಿದ್ದಾರೆ. ಅದಕ್ಕಾಗಿ ಅವರು ತಮ್ಮವರನ್ನೇ ಕೊಲ್ಲುವ ಮಟ್ಟಕ್ಕೂ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳು ಹಲವು ನಡೆದಿದೆ. ಇದೀಗ ಭೂ ವಿವಾದಕ್ಕೆ (Land Dispute )ಸಂಬಂಧಿಸಿದಂತೆ 24 ವರ್ಷದ ವ್ಯಕ್ತಿಯನ್ನು ನಾಲ್ವರು ಜೀವಂತವಾಗಿ ಸಮಾಧಿ ಮಾಡಿದ್ದು, ನಾಯಿಗಳು ಆತನನ್ನು ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಸಂತ್ರಸ್ತ ರೂಪ್ ಕಿಶೋರ್ (24) ಎಂಬುದಾಗಿ ತಿಳಿದುಬಂದಿದೆ. ಆಗ್ರಾದ ಆರ್ಟೋನಿ ಪ್ರದೇಶದಲ್ಲಿ ಜುಲೈ 18 ರಂದು ರೂಪ್ ಕಿಶೋರ್ ಮೇಲೆ ಅಂಕಿತ್, ಗೌರವ್, ಕರಣ್ ಮತ್ತು ಆಕಾಶ್ ಎಂಬ ನಾಲ್ವರು ಹಲ್ಲೆ ನಡೆಸಿದ್ದರು. ಅವರು ಅವನನ್ನು ಕತ್ತು ಹಿಸುಕಿ ನಂತರ ಅವನು ಸತ್ತಿದ್ದಾನೆಂದು ಭಾವಿಸಿ ತಮ್ಮ ಜಮೀನಿನಲ್ಲಿ ಹೂತುಹಾಕಿದ್ದಾರೆ. ಆದರೆ ಅದೃಷ್ಟವಶಾತ್ ಕಿಶೋರ್ ಅವರನ್ನು ಸಮಾಧಿ ಮಾಡಿದ ಪ್ರದೇಶವನ್ನು ಬೀದಿ ನಾಯಿಗಳು ಅಗೆದು ಅವರ ದೇಹವನ್ನು ಕಚ್ಚಿ ತಿನ್ನಲು ಮುಂದಾದಾಗ ಕಿಶೋರ್ ಗೆ ಪ್ರಜ್ಞೆ ಬಂದಿದೆ. ಆಗ ಅವರು ಅಲ್ಲೇ ಹತ್ತಿರದ ಪ್ರದೇಶಕ್ಕೆ ನಡೆದುಕೊಂಡು ಹೋಗಿ ಅಲ್ಲಿನ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆರೋಪಿಗಳು ತನ್ನ ಮಗನನ್ನು ಬಲವಂತವಾಗಿ ಮನೆಯಿಂದ ಕರೆದೊಯ್ದು, ಕ್ರೂರವಾಗಿ ಹಲ್ಲೆ ನಡೆಸಿ ಕತ್ತು ಹಿಸುಕಿ, ನಂತರ ತಮ್ಮ ಜಮೀನಿನಲ್ಲಿ ಹೂತುಹಾಕಿದ್ದಾರೆ ಎಂದು ಕಿಶೋರ್ ತಾಯಿ ಹೇಳಿದ್ದಾರೆ. ಈ ಬಗ್ಗೆ ಕಿಶೋರ್ ತಾಯಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಿದ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ಯಾರಿಸ್‌ಗೆ ಹೋದರೂ ಅಂಬಾನಿ ಸೊಸೆ ಕರಿಮಣಿ ಮರೆಯಲಿಲ್ಲ! ಸೋಷಿಯಲ್‌ ಮೀಡಿಯಾದಲ್ಲೀಗ ಇದೇ ಚರ್ಚೆ!

ಆಸ್ತಿಯ ವಿಚಾರಕ್ಕೆ ಜನರು ತಮ್ಮವರ ಮೇಲೆ ಹಲ್ಲೆ ಮಾಡುವ ಪ್ರಕರಣ ಇದೇ ಮೊದಲಲ್ಲಾ. ಈ ಹಿಂದೆ ಜುಲೈ ತಿಳಗಳಿನಲ್ಲಿ ಅನಂತಪುರ ಜಿಲ್ಲೆಯ ಗರ್ಲದಿನ್ನೆ ಮಂಡಲದ ಪೆನಕಚೆರ್ಲಾ ಗ್ರಾಮದಲ್ಲಿ ಆಸ್ತಿ, ಮನೆ ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಆಕೆಯನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ. ಜಿಲಾನಿ ಎಂಬ ವ್ಯಕ್ತಿ ತನ್ನ ಸಹೋದರಿ ಮೆಹಬೂಬಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Continue Reading
Advertisement
Paris Olympics 2024
ಪ್ರಮುಖ ಸುದ್ದಿ6 mins ago

Paris Olympics 2024 : ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಮದುವೆ ಪ್ರಪೋಸ್ ಮಾಡಿದ ಚೀನಾದ ಷಟ್ಲರ್​!

Cloudburst
ದೇಶ20 mins ago

Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಾಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

Union Minister Pralhad Joshi latest statement in Bengaluru
ಕರ್ನಾಟಕ28 mins ago

Pralhad Joshi: ವಯನಾಡ್ ದುರಂತದ ವಿಚಾರದಲ್ಲಿ ಕಾಂಗ್ರೆಸ್‌‌ನಿಂದ ರಾಜಕೀಯ; ಪ್ರಲ್ಹಾದ್‌ ಜೋಶಿ

Kannada New Movie Kann Kann Talking Kai Kai Touching Gopilola
ಸ್ಯಾಂಡಲ್ ವುಡ್32 mins ago

Kannada New Movie: ʻಗೋಪಿಲೋಲ’ನ ಜೊತೆ ಹೆಜ್ಜೆ ಹಾಕಿದ ಜಾಹ್ನವಿ!

ginger
ಆರೋಗ್ಯ49 mins ago

Ginger Benefits: ಮಳೆಗಾಲದ ಸೋಂಕುಗಳಿಗೆ ಬೇಕು ಶುಂಠಿಯೆಂಬ ಮದ್ದು!

Wayanad Landslide
ದೇಶ55 mins ago

Wayanad Landslide: ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ; ಅವರ ವಿವರಣೆ ಹೀಗಿದೆ!

Western Ghats
ದೇಶ59 mins ago

Western Ghats: ಪಶ್ಚಿಮ ಘಟ್ಟದ 57 ಸಾವಿರಕ್ಕೂ ಹೆಚ್ಚು ಚ.ಕಿಮೀ. ಪರಿಸರ ಸೂಕ್ಷ್ಮ ಪ್ರದೇಶ; ಕೇಂದ್ರದಿಂದ ಕರಡು ಅಧಿಸೂಚನೆ

MS Dhoni
ಕ್ರೀಡೆ59 mins ago

MS Dhoni : 2007 ವಿಶ್ವ ಕಪ್ ಹೀರೋ ಜೋಗಿಂದರ್​ ಶರ್ಮಾ ಭೇಟಿಯಾದ ಎಂ. ಎಸ್​ ಧೋನಿ

KAS Recruitment 2024
ಕರ್ನಾಟಕ1 hour ago

KAS Recruitment 2024: ಆ.25ರಂದೇ ನಡೆಯಲಿದೆ ಕೆಎಎಸ್‌ ಪೂರ್ವ ಭಾವಿ ಪರೀಕ್ಷೆ: ಕೆಪಿಎಸ್‌ಸಿ ಸ್ಪಷ್ಟನೆ

Wild Animals
ದಾವಣಗೆರೆ1 hour ago

Wild Animals : ರಸ್ತೆಗೆ ಅಡ್ಡಲಾಗಿ ಮಲಗಿಕೊಂಡ ಚಿರತೆ; ಕಾಡಿನಿಂದ ಹಸು ಜತೆಗೆ ಓಡೋಡಿ ಬಂದ ಜಿಂಕೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ4 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌