Mother's Day : ಅಮ್ಮನ ಅಕ್ಕರೆ ತೋರುವ ಎಂಟು ಸಿನಿಮಾಗಳು - Vistara News

ಲೈಫ್‌ಸ್ಟೈಲ್

Mother’s Day : ಅಮ್ಮನ ಅಕ್ಕರೆ ತೋರುವ ಎಂಟು ಸಿನಿಮಾಗಳು

ತಾಯಂದಿರ ದಿನಾಚರಣೆ ಅಂಗವಾಗಿ ಇಲ್ಲಿ ಸಾಕಷ್ಟು ಸಿನಿಮಾಗಳು ಇವೆ. ಮನೆಯಲ್ಲಿಯೇ ಸಿನಿಮಾ ನೋಡುವುದರ ಮೂಲಕ ಮದರ್ಸ್‌ ಡೇ ಆಚರಿಸಿ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ʼಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ..? ಭೂಮಿಗೆ ಬಂದ ಮೊದಲನೆ ಕಂದನ ಅಳುವ ದನಿಯಿಂದ ʼ ಈ ಸಾಲುಗಳು ಯಾವಾಗಲೂ ನಮ್ಮನ್ನ ಬಿಡದೇ ಕಾಡುತ್ತವೆ. ʼಅಮ್ಮ ʼ ಅನ್ನೋ ಶಬ್ದಕ್ಕೆ ಅರ್ಥ ನಿಡುವುದು ಕೂಸೇ ಆದ್ರೂ ಆ ಕೂಸಿಗೆ ರೆಕ್ಕೆ ಕಟ್ಟಿ ಹಾರೋ ಹಾಗೇ ಮಾಡೋಳು ತಾಯಿ. ಮೇ 8 ವಿಶ್ವ ಅಮ್ಮಂದಿರ ದಿನ. ಇವತ್ತಿನ ದಿನ ಮಕ್ಕಳು ತಾಯಿಗೆ ಸಾಕಷ್ಟು ಉಡುಗೊರೆ, ಹಾಗೇ ಟ್ರಿಪ್‌, ಏನೇ ಪ್ಲಾನ್‌ ಮಾಡಿಕೊಂಡಿದ್ದರೂ, ಮನೆಯಲ್ಲೇ ಕೂತು ಅಮ್ಮನ ಜೊತೆ ಟೈಮ್‌ ಸ್ಪೆಂಡ್‌ ಮಾಡಬಹುದು.

ತಾಯಿಯ ತ್ಯಾಗ, ಸ್ಪೂರ್ತಿ, ಧೈರ್ಯ, ಸ್ವಾಭಿಮಾನ, ಸಹನಾ ಗುಣಗಳನ್ನು ಕೇಂದ್ರವಾಗಿಸಿಕೊಂಡು ಹಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೆ ಬಂದ ಸಿನಿಮಾಗಳಿಗೆ ಲೆಕ್ಕವಿಲ್ಲ. ತಾಯಿ ಸೆಂಟಿಮೆಂಟ್‌ ಕೇಂದ್ರಿತ ಚಿತ್ರಗಳನ್ನು ಹುಡುಕುತ್ತ ಹೋದರೆ ಕೊನೆಯೇ ಇಲ್ಲ. ಇವುಗಳಲ್ಲಿ ಕೆಲವೊಂದು ಸಿನಿಮಾಗಳು ನಮ್ಮನ್ನ ಯಾವಾಗಲೂ ಕಾಡುತ್ತಲೇ ಇರುತ್ತವೆ. ಭಾಷೆ ಯಾವುದೇ ಇದ್ರೂ ಅಮ್ಮನ ಬಗ್ಗೆ ಹೊಂದಿದ ಭಾವ ಮಾತ್ರ ಅದು ಎಲ್ಲರಿಗೂ ಒಂದೆ. ಹಾಗಾದ್ರೆ ಅಮ್ಮನ ಸಂಬಂಧಿತ ಸಿನಿಮಾ ಯಾವುದ್ಯಾವುದು? ಮೇ 8ರ ಆಚರಣೆಗೆ ಎಂಟು ಸಿನಿಮಾ ಲಿಸ್ಟ್‌ ಇಲ್ಲಿದೆ. ಒಮ್ಮೆ ನೋಡಿ, ಅಮ್ಮ ಲವ್‌ ಯು ಅಂದುಬಿಡಿ.

ಲಾಲಿ ಹಾಡು [ಕನ್ನಡ]

ಚಾಲೆಂಜಿಗ್‌ ಸ್ಟಾರ್‌ ಅಭಿನಯದ ಲಾಲಿ ಹಾಡು ಚಿತ್ರ 2003ರಲ್ಲಿ ತೆರೆ ಕಂಡಿತು. ಇದರಲ್ಲಿ ಇಬ್ಬರು ಸಂಗೀತ ನಿರ್ದೇಶಕರಾದ ವಿ.ಮನೋಹರ್ ಮತ್ತು ರಾಜೇಶ್ ರಾಮನಾಥ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ ಅವರು ಸಂಯೋಜಿಸಿದ ಹಾಡುಗಳು ದೊಡ್ಡ ಹಿಟ್ ಆದವು. ತಾಯಿಯ ಪಾತ್ರದಲ್ಲಿ ನಟಿಸಿದವರು ಹಿರಿಯ ಕಲಾವಿದೆ ಉಮಾಶ್ರೀ. ಅಂದಮೇಲೆ ಕೇಳಬೇಕೆ? ಎಂದಿನಂತೆ ಅವರ ಸುಲಲಿತ ಶೈಲಿಯಲ್ಲಿ ತಾಯಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಹಲವಾರು ಪ್ರಸಸ್ತಿಗಳನ್ನು ತಂದುಕೊಟ್ಟರು.

ಈ ಚಿತ್ರದಲ್ಲಿ ನಾಯಕ ಹಾಡುಗಾರನಾಗಿದ್ದರೂ, ತಾಯಿ ಜೋಗುಳ ಪದ್ಯದಲ್ಲೇ ಸಂಗೀತವನ್ನು ಕಲಿತು, ತಾನು ಹುಟ್ಟಿ ಬಂದ ಹಳೆಯ ಜೀವನಕ್ಕೆ ತಾಯಿಯನ್ನು ಎಂದಿಗೂ ಹೊಸ ಬದುಕಿಗೆ ಹೋಲಿಕೆ ಮಾಡದೇ ತಾಯಿಯೇ ತನ್ನ ಸಾದನೆಗೆ ಕಾರಣ ಎಂಬ ಸಂದೇಶ ಇಲ್ಲಿ ಇದೆ. ಅಷ್ಟೇ ಅಲ್ಲದೇ, ತಾನು ಅಕ್ಷರ ಕಲಿಯದಿದ್ದರೂ, ಹೇಗೆ ತನ್ನ ಮಗನನ್ನು ಒಂದು ಹಂತಕ್ಕೆ ತಾಯಿ ತಲುಪಿಸಿದಳು ಎಂಬ ಚಿತ್ರಣವನ್ನು ಇಲ್ಲಿ ಕಾಣಬಹುದು.
2003ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮೂರನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇದನ್ನೂ ಓದಿ : Gallery | ಎ.ಆರ್. ರೆಹಮಾನ್ ಮಗಳ ಮದುವೆಯ ಸಂಭ್ರಮದ ಚಿತ್ರಗಳು

ವೆರಾ ಡ್ರೇಕ್ [Vera Drake] (ಇಂಗ್ಲಿಷ್‌)

2004ರಲ್ಲಿ ತೆರೆ ಕಂಡ ಇಂಗ್ಲಿಷ್‌ ಸಿನಿಮಾ. ಬ್ರಿಟಿಷ್ ಅವಧಿಯ ನಾಟಕ ಚಲನಚಿತ್ರವಾಗಿದ್ದು ಮೈಕ್ ಲೀ ಬರೆದು ನಿರ್ದೇಶಿಸಿದ್ದಾರೆ. ಇದು 1950ರಲ್ಲಿ ಲಂಡನ್‌ನಲ್ಲಿ ಕಾನೂನುಬಾಹಿರ ಗರ್ಭಪಾತವನ್ನು ಮಾಡುವ ಕಾರ್ಮಿಕ ವರ್ಗದ ಮಹಿಳೆಯ ಕಥೆಯನ್ನು ಸಾರುತ್ತದೆ. ಬಾಳ್ಯದ ಸಂಬಂಧಿತ ಸಿನಿಮಾ ಆಗಿದ್ದು, ಇದು ವೆನಿಸ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಲಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಜತೆಗೆ ಮೂರು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು, ಮೂರು BAFTAಗಳನ್ನು ಗೆದ್ದಿತು. ಈ ಸಿನಿಮಾ ಕೇವಲ ಮನರಂಜನೆ ಅಲ್ಲದೇ ಪಾತ್ರವನ್ನು ತಿಂಗಳುಗಳಕಾಲ ಅದ್ಯಯನ ಮಾಡಿ ವಿಷಯವನ್ನು ಸಂಗ್ರಹಿಸಿ ಕೌಟುಂಬಿಕ ಜೀವನವನ್ನು ಸ್ಪಷ್ಟವಾಗಿ ವಿವರಿಸಿದ ಪ್ರಯೋಗವಾಗಿತ್ತು.

ಪ್ಲೇಸಸ್‌ ಇನ್‌ ದಿ ಹಾರ್ಟ್‌ [Places in The Heart]

ಅಮೆರಿಕನ್‌ ಚಿತ್ರಕಥೆಗಾರ, ನಿರ್ದೇಶಗ ರಾಬರ್ಟ್‌ ಡಗ್ಲಸ್‌ ಬೆಂಟನ್‌ ಅವರು 1964 ರಲ್ಲಿ ಅವರೇ ಬರೆದು ನಿರ್ದೇಶಿಸಿದ ಚಿತ್ರ. ಟೆಕ್ಸಾಸ್‌ನಲ್ಲಿ ನಡೆದ ಮಹಾ ಆರ್ಥಿಕ ಕುಸಿತದ ಸಮಯದಲ್ಲಿ ಯುವತಿ ಎಡ್ನಾ ಸ್ಪಾಲ್ಡಿಂಗ್ ಹೋರಾಡಿದ ಕಥೇಯನ್ನಾಧರಿಸಿ ಮಾಡಿದ ಸಿನಿಮಾ. ಆಕೆ ತನ್ನ ಗಂಡನ ಮರಣದ ನಂತರ ತನ್ನ ಜಮೀನಿನ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾಳೆ. ಒಬ್ಬಳೆ ಅದನ್ನು ಹೇಗೆ ನಿರ್ವಹಿಸಿ ಗೆಲ್ಲುತ್ತಾಳೆ ಎಂಬುದೇ ಇದರಲ್ಲಿರುವ ಸ್ವಾರಸ್ಯ,
35ನೇ ಬರ್ಲಿನ್ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ಲೇಸಸ್ ಇನ್ ದಿ ಹಾರ್ಟ್ ಪ್ರಥಮ ಪ್ರದರ್ಶನಗೊಂಡಿತು. ಅಲ್ಲಿ ಅದು ಗೋಲ್ಡನ್ ಬೇರ್‌ಗಾಗಿ ಸ್ಪರ್ಧಿಸಿತು. ಬೆಂಟನ್ ಅತ್ಯುತ್ತಮ ನಿರ್ದೇಶಕರಾಗಿ ಸಿಲ್ವರ್ ಬೇರ್ ಪ್ರಶಸ್ತಿ ಗೆದ್ದರು.

ಮಾತೃ ದೇವೋ ಭವ [ತೆಲುಗು]

1993ರ ತೆಲಗು ನಾಟಕದ ಆಧರಿತ ಚಲನಚಿತ್ರವಾಗಿದ್ದು, ಕೆ. ಅಜಯ್ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಚಾಲಕ ಮತ್ತು ಸಂಗೀತ ಶಿಕ್ಷಕಿ ಗಂಡ ಹೆಂಡತಿಯ ಕೇಂದ್ರಿತ ಕಥೆ. ಇಬ್ಬರೂ ಸೇವಾ ಆಶ್ರಮದಲ್ಲಿ ಅನಾಥರಾಗಿದ್ದು, ನಂತರದಲ್ಲಿ ಪ್ರೀತಿ ಬೆಳೆದು ಒಂದಾಗುತ್ತಾರೆ. ನಾಲ್ಕು ಮಕ್ಕಳಿಗೆ ಪಾಲಕರಾಗುತ್ತಾರೆ. ಮದ್ಯವ್ಯಸನಿ ತಂದೆ, ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಯಿ, ಈ ಮಕ್ಕಳನ್ನು, ಇಂತಹ ವಾತಾವರಣದಲ್ಲಿ ಹೇಗೆ ಬೆಳೆಸುತ್ತಾಳೆ ಎಂಬುದೇ ಮುಖ್ಯ ತಿರುಳು. ಚಲನಚಿತ್ರವು “ರಾಳಿಪೋಯೆ ಪುವ್ವ” ಹಾಡಿಗಾಗಿ ವೆಟೂರಿಯವರ ಅತ್ಯುತ್ತಮ ಸಾಹಿತ್ಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು (ತೆಲುಗು) ಕೂಡ ಗೆದ್ದುಗೊಂಡಿತು.

ಮನಸ್ಸಿನಕ್ಕರೆ [ಮಲೆಯಾಳಂ]

2003 ರಲ್ಲಿ ತೆರೆಕಂಡ ತಾಯಿ ಆಧಾರಿತ ಮಲೆಯಾಳಂ ಚಿತ್ರ ಮನಸ್ಸಿನಕ್ಕರೆ. ಶ್ರೀಮಂತ ವಿಧವೆ ತಾಯಿ ಕೊಚು ಥ್ರೇಸಿಯಾ. ತಾನು ವಾಸಿಸುವ ಸುಂದರ ಹಳ್ಳಿಯ ಎಲ್ಲ ಒಳ್ಳೆಯತನವನ್ನೂ ಸವಿಯಬೇಕು, ಸ್ವಚ್ಛಂದದ ಜೀವನ ನಡೆಸಬೇಕೆನ್ನುವಾಕೆ. ತನ್ನ ಮೊದಲ ಮನೆಯಲ್ಲಿರುವ ಥ್ರೇಸಿಯಾ ಜೀವನವನ್ನು ಆನಂದಿಸುವುದೇ ವಿಶೇಷ, ವಿಚಿತ್ರ. ಆದರೆ ಈಕೆಯ ವಯಸ್ಸಿಗೆ ನಡೆದುಕೊಳ್ಳುವ ರೀತಿ ಇದಲ್ಲ ಎನ್ನುವುದು ಮಗ, ಕುಟುಂಬದ ಅಭಿಪ್ರಾಯ.
ದೇಹಕ್ಕೆ ವಯಸ್ಸಾಗಿದ್ದರೂ ಆಕೆಯ ಮನಸ್ಸು ಮಾತ್ರ ಯುವ. ಈ ಸಮಯದಲ್ಲಿ ಎದುರಾಗುವ ಒಬ್ಬ ಯುವ ಸ್ನೇಹಿತ ರೇಜಿ. ಇಬ್ಬರ ನಡುವೆ ತಾಯಿ ಮಗನ ವಾತ್ಸಲ್ಯ ಬೆಳೆಯುತ್ತದೆ. ಬಾಯೂರಿಸುವ ಬೀಫ್‌ ತಂದುಕೊಡುವುದರಿಂದ ಆನೆ ಸವಾರಿವರೆಗೆ ಥ್ರೇಸಿಯಾ ಬಯಸುವ ಎಲ್ಲವನ್ನೂ ರೇಜಿ ಈಡೇರಿಸುತ್ತಾನೆ. ಇದೆಲ್ಲವನ್ನೂ ನೋಡುವ ಥ್ರೇಸಿಯಾ ಮಕ್ಕಳಿಗೆ ಮುಜುಗರ ಹೆಚ್ಚಾಗುತ್ತದೆ. ಇದೆಲ್ಲಕ್ಕೂ ಕೊನೆ ಹಾಡಬೇಕು ಎಂದು ಒಂದು ದಿನ ಥ್ರೇಸಿಯಾ ನಿರ್ಧರಿಸುತ್ತಾಳೆ.
ಸತ್ಯನ್ ಅಂತಿಕ್ಕಾಡ್ ನಿರ್ದೇಶಿಸಿದ್ದಾರೆ ಮತ್ತು ರಂಜನ್ ಪ್ರಮೋದ್ ಬರೆದಿದ್ದಾರೆ. ಚಿತ್ರದ ಸಂಗೀತ ವನ್ನ ಇಳಯರಾಜ ಸಂಯೋಜಿಸಿರುವುದು ವಿಶೇಷ

ಪಾ[Paa] (ಹಿಂದಿ):

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ತನ್ನ ಮಗುವಿನ ಬಗ್ಗೆ ತಾಯಿಯ ಹೋರಾಟದ ಬಗ್ಗೆ ಇದೆ ಪಾ (2009) ಚಿತ್ರ. ಆರ್‌. ಬಾಲ್ಕಿ ನಿರ್ದೇಶಿಸಿದ ಚಿತ್ರವಾಗಿದ್ದು, ಚಿತ್ರದ ನಾಯಕ ಅಮಿತಾಭ್ ಬಚ್ಚನ್. ಪಾತ್ರದ ಹೆಸರು ಆರೋ(Auro). ಪ್ರೊಜೆರಿಯಾ, ಅಪರೂಪದ ಆನುವಂಶಿಕ ಕಾಯಿಲೆ. 12 ವರ್ಷದ ಮತ್ತು ಸಾಕಷ್ಟು ಬುದ್ಧಿವಂತ ಮತ್ತು ಚೇಷ್ಟೆಯ ಮಗು. ಮಾನಸಿಕವಾಗಿ ಈ ವಯಸ್ಸಿನ ಇತರೆ ಮಕ್ಕಳಂತೆಯೇ ಸಾಮಾನ್ಯ. ಆದರೆ ದೈಹಿಕವಾಗಿ ಅವನು ತನ್ನ ವಯಸ್ಸಿಗಿಂತ ಐದು ಪಟ್ಟು ಹೆಚ್ಚು ಎಂದು ತೋರುತ್ತಾನೆ. ಸ್ತ್ರೀರೋಗತಜ್ಞರಾಗಿರುವ ತಾಯಿ ವಿದ್ಯಾ ಅವರೊಂದಿಗೆ ವಾಸಿಸುತ್ತಾನೆ. ಮಹತ್ವಾಕಾಂಕ್ಷಿ ರಾಜಕಾರಣಿ ಅಮೋಲ್‌ ಆರ್ತೆಯೇ ಆರೋನ ತಂದೆ ಎನ್ನುವುದನ್ನು ತಾಯಿ ವಿದ್ಯಾ ಮುಚ್ಚಿಟ್ಟಿರುತ್ತಾಳೆ. ಇಂತಹ ಸ್ಥಿತಿಯಲ್ಲಿರುವ ಮಗನನನ್ನು ತಾಯಿ ನೋಡಿಕೊಳ್ಳುವುದು, ಪುರುಷರ ದಬ್ಬಾಳಿಕೆ, ತಾಯಿಯ ಗಟ್ಟಿತನ ಇದರಲ್ಲಿ ವ್ಯಕ್ತವಾಗಿದೆ.

ಇದನ್ನೂ ಓದಿ : ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!

ಮಾಮ್ [MOM] (ಹಿಂದಿ)

ರವಿ ಉದಯವಾರ್‌ ನಿರ್ದೇಶಿಸಿದ ಮಾಮ್‌(2017) ಈ ಚಿತ್ರದಲ್ಲಿ ಶ್ರೀದೇವಿ ಅಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಲ ಮಗಳು ಆರ್ಯಾ. ಚಿತ್ರದಲ್ಲಿ ಅತ್ಯಾಚಾರಕ್ಕೆ ಒಳಗಾದ ಮಗಳಿಗೆ ಸಿಂಹಣಿಯಂತೆ ಸೇಡು ತೀರಿಸಿಕೊಳ್ಳೋ ಮದರ್‌ ಸೆಂಟಿಮೆಂಟ್‌ ಈ ಸಿನಿಮಾದಲ್ಲಿದೆ. ಮೊದ ಮೊದಲು ಮಗಳು ತಾಯಿಯನ್ನು ಹೇಟ್‌ ಮಾಡ್ತಾ ಇರುತ್ತಾಳೆ. ನಂತರದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲು ಆದಾಗ, ಶ್ರೀದೇವಿ ತನ್ನ ಮಗಳಿಗೋಸ್ಕರ ಆರೋಪಿಗಳನ್ನು ಕಂಡು ಹಿಡಿದು ಎಲ್ಲರನ್ನೂ ಕೊನೆಯಲ್ಲಿ ಸಾಯಿಸುತ್ತಾಳೆ. ಅಮ್ಮನ ಧೈರ್ಯಕ್ಕೆ ಮೆಚ್ಚಿ ಮಗಳು ಒಂದಾಗುವ ಬಗೆ ಹಾಗೂ ತಾಯಿ ಒಬ್ಬಳು ಇದ್ದರೆ ಏನು ಬೇಕಾದರೂ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದೆ ಈ ಚಿತ್ರ.

ಅಮ್ಮಚ್ಚಿಯೆಂಬ ನೆನಪು

2008 ರಲ್ಲಿ ಬಂದ ಕನ್ನಡ ಚಲನಚಿತ್ರ. ಚಂಪಾ ಪಿ. ಶೆಟ್ಟಿ ನಿರ್ದೇಶಿಸಿದ ಈ ಚಿತ್ರವು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಬರಹಗಾರ್ತಿ ವೈದೇಹಿಯವರ ಮೂರು ಸಣ್ಣಕಥೆಗಳ ಮೇಲೆ ಆಧಾರಿತವಾಗಿದೆ. ಇದರಲ್ಲಿ ಅಮ್ಮಚ್ಚಿಗೆ ತಾಯಿ ಇಲ್ಲದೇ ತಾಯಿಯ ಸ್ಥಾನವನ್ನು ಅಜ್ಜಿ ತುಂಬಿರುತ್ತಾಳೆ. ಮತ್ತು ತನಗೆ ಬಂದಿರುವ ಸಮಸ್ಯೆಗಳು, ಮದುವೆ, ಮತ್ತು ಸ್ವಾತಂತ್ರ್ಯಕ್ಕೂ ಕೈ ಚಾಚಿ ನಿಲ್ಲುವಂತಹ ನಿರ್ಮಾಣ. ಹಾಗೂ ವಿದ್ಯಾಭ್ಯಾಸಕ್ಕೂ ಅಮ್ಮಚ್ಚಿ ಅಜ್ಜಿಯೊಂದಿಗೆ ಸೆಣಸಾಟ ಮಾಡುವ ಪರಿ. ತಾಯಿ ಒಬ್ಬಳು ಇಲ್ಲದಿದ್ದರೆ ಹೆಣ್ಣು ಹೇಗೆ ದುರ್ಬಲಳು ಎಂಬುದು ಈ ಚಲನಚಿತ್ರದಲ್ಲಿ ಮಾರ್ಮಿಕವಾಗಿ ಚಿತ್ರಿತವಾಗಿದೆ.

ಇದನ್ನೂ ಓದಿ : ದೀಪಿಕಾ Cannes ಚಿತ್ರೋತ್ಸವ ತೀರ್ಪುಗಾರ್ತಿ: 9 ವರ್ಷದ ನಂತರ ದೊರೆತ ಅವಕಾಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Eating Style: ಉಣ್ಣುವ ರೀತಿ ನಾವು ಎಂಥವರು ಎನ್ನುವುದನ್ನು ಬಯಲು ಮಾಡುತ್ತದೆ! ಅದು ಹೇಗೆ?

ನಮ್ಮ ಹಲವಾರು (Eating Style) ಅಭ್ಯಾಸಗಳಿಂದ, ಕೈಯ ರೇಖೆಗಳಿಂದ, ನಡೆಯುವ ವಿಧಾನದಿಂದ, ಬೆರಳಿನ ಉದ್ದದಿಂದ, ದೇಹದ ಆಕಾರದಿಂದ, ಬರೆಯುವ ಶೈಲಿಯಿಂದ, ಹಸ್ತಾಕ್ಷರದಿಂದ ಹೀಗೆ ಹಲವಾರು ವಿಧಾನಗಳಿಂದ ಪ್ರತಿಯೊಬ್ಬರ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ಲೆಕ್ಕಾಚಾರ ಹಾಕುವ ವಿಧಾನವಿದೆ. ಆದರೆ ಉಣ್ಣುವ ವಿಧಾನದಿಂದಲೂ ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದು ಎಂಬುದು ತಿಳಿದಿದೆಯೇ? ಹೌದು, ನೀವು ಹೇಗೆ ಉಣ್ಣುತ್ತೀರಿ ಎಂಬುದನ್ನು ಆಧರಿಸಿಯೂ ನಿಮ್ಮ ವ್ಯಕ್ತಿತ್ವ ಹೀಗೆ ಎಂದು ಹೇಳಬಹುದಂತೆ! ಈ ಬಗ್ಗೆ ಈ ಲೇಖನ (Eating Style) ಓದಿ.

VISTARANEWS.COM


on

Eating Style
Koo

ಒಬ್ಬ ವ್ಯಕ್ತಿತ್ವ ಒಟ್ಟಾರೆ (Eating Style) ಹೇಗೆ ಎಂದು ತಿಳಿಯಲು ಹಲವಾರು ಮಾನದಂಡಗಳಿರುತ್ತವೆ. ಒಮ್ಮೆ ಒಬ್ಬ ವ್ಯಕ್ತಿಯನ್ನು ಭೇಟಿಯಾದ ತಕ್ಷಣ ಈತ ಹೀಗೆಯೇ ಎಂದು ನಾವು ಹೇಳಲಾಗುವುದಿಲ್ಲ. ಒಂದಿಷ್ಟು ಕಾಲ ಜೊತೆಗೆ ಪಳಗಬೇಕು. ಆದರೆ, ವ್ಯಕ್ತಿತ್ವ ಹೀಗೆ ಎಂದು ಹೇಳಲು ಜ್ಯೋತಿಷ್ಯ ಸೇರಿದಂತೆ ಹಲವಾರು ವಿಧಾನಗಳಿವೆ. ನಮ್ಮ ಹಲವಾರು ಅಭ್ಯಾಸಗಳಿಂದ, ಕೈಯ ರೇಖೆಗಳಿಂದ, ನಡೆಯುವ ವಿಧಾನದಿಂದ, ಬೆರಳಿನ ಉದ್ದದಿಂದ, ದೇಹದ ಆಕಾರದಿಂದ, ಬರೆಯುವ ಶೈಲಿಯಿಂದ, ಹಸ್ತಾಕ್ಷರದಿಂದ ಹೀಗೆ ಹಲವಾರು ವಿಧಾನಗಳಿಂದ ಪ್ರತಿಯೊಬ್ಬರ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ಲೆಕ್ಕಾಚಾರ ಹಾಕುವ ವಿಧಾನವಿದೆ. ಆದರೆ ಉಣ್ಣುವ ವಿಧಾನದಿಂದಲೂ ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದು ಎಂಬುದು ತಿಳಿದಿದೆಯೇ? ಹೌದು, ನೀವು ಹೇಗೆ ಉಣ್ಣುತ್ತೀರಿ ಎಂಬುದನ್ನು ಆಧರಿಸಿಯೂ ನಿಮ್ಮ ವ್ಯಕ್ತಿತ್ವ ಹೀಗೆ ಎಂದು ಹೇಳಬಹುದಂತೆ. ಬನ್ನಿ, ಈ ಕೆಳಗಿನವರಲ್ಲಿ ನೀವು ಯಾವುದನ್ನು ಹೋಲುತ್ತೀರಿ ಎಂದು ಕಂಡುಕೊಳ್ಳಿ.

Family eating lunch

ನಿಧಾನವಾಗಿ ಉಣ್ಣುವವರು

ನಮ್ಮ ಪರಿಚಿತ ವರ್ಗದಲ್ಲಿ, ಸ್ನೇಹವರ್ಗದ ಗುಂಪಿನಲ್ಲಿ ಕೆಲವರಿರುತ್ತಾರೆ. ಅವರು ನಿಧಾನವಾಗಿ ಉಣ್ಣುವವರು. ಜೊತೆಗೆ ಕೂತರೆ, ಎಲ್ಲರೂ ಉಂಡ ನಂತರ ಕೊನೆಯಲ್ಲಿ ಊಟ ಮುಗಿಸಿ ಏಳುವವರು. ನಿಧಾನವಾಗಿ ಉಣ್ಣುವವರು ಯಾವಾಗಲೂ ಸವಿದು, ಪ್ರತಿ ತುತ್ತನ್ನೂ ಅನುಭವಿಸಿ ಉಣ್ಣುತ್ತಾರೆ. ಜೊತೆಯಲ್ಲಿ ಒಂದಿಷ್ಟು ಹರಟುತ್ತಾರೆ. ಎಲ್ಲಿಯದೋ ಸುದ್ದಿಯನ್ನು ಚಪ್ಪರಿಸಿ ಮಾತನಾಡುವ ಜೊತೆಗೆ ಊಟದಲ್ಲೂ ಮಾತಿನಲ್ಲೂ ಕಳೆದು ಹೋಗುತ್ತಾರೆ. ಬೇಗ ಉಣ್ಣುವುದೆಂದರೆ ಇವರಿಗೆ ಆಗದು. ಬೇಗ ಉಂಡರೆ ಸುಸ್ತಾಗಿಬಿಡುವ ಇವರು ಬಹಳ ಆತ್ಮವಿಶ್ವಾಸ ಉಳ್ಳವರು. ಆದರೆ ಪ್ರದರ್ಶನ, ಶೋಆಫ್‌ ಇವರಿಗೆ ಇಷ್ಟವಾಗದು. ನಾಯಕತ್ವ ಗುಣವೂ ಇವರಿಗಿದ್ದು, ಅಂತಹ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಆದರೆ, ತಮ್ಮದೇ ಆದ ಸಮಯವನ್ನು ಇಷ್ಟಪಡುವವರು.

ಬೇಗ ಉಣ್ಣುವವರು

ಬೇಗ ಉಣ್ಣುವವರು ಯಾವಾಗಲೂ ಉಳಿದವರು ಅರ್ಧ ಉಂಡು ಮುಗಿಸುವಷ್ಟರಲ್ಲಿ ತಮ್ಮ ಊಟವನು ಮುಗಿಸಿರುತ್ತಾರೆ. ಇಂತಹ ಮಂದಿ ಯಾವಾಗಲೂ ಇನ್ನಷ್ಟು ಬೇಕು ಎಂಬ ಹಸಿವಿನಿಂದ ಕೂಡಿರುವ ವ್ಯಕ್ತಿತ್ವ ಉಳ್ಳವರು. ಬಹಳ ಮಹತ್ವಾಕಾಂಕ್ಷೆಯಿರುವ ಈ ಮಂದಿ ಸದಾ ಕೆಲಸ ಮಾಡಿಕೊಂಡಿರುವವರು. ಅವರು ಸಮಯಕ್ಕೆ ಬಹಳ ಮಹತ್ವ ಕೊಡುತ್ತಾರೆ. ಹಾಗೂ ಕೆಲವೊಮ್ಮೆ ತಮ್ಮ ಸಂತೋಷದ ಕ್ಷಣವನ್ನೂ ಬದಿಗೊತ್ತಿಬಿಡುವ ಗುಣದವರು.

Indian girl eating rice

ಕುತೂಹಲದಿಂದ ಉಣ್ಣುವವರು

ಸದಾ ಹೊಸ ಬಗೆಯ ಊಟಕ್ಕೆ, ಹೊಸ ಅಡುಗೆಯ ಬಗ್ಗೆ ಕುತೂಹಲ ಉಳಿಸಿಕೊಂಡಿರುವವರು. ಹೊಸದರ ಅನ್ವೇಷಣೆಯಲ್ಲಿರುವ, ಹೊಸತನಕ್ಕೆ ತುಡಿಯುವ ಮನಸ್ಥಿತಿಯ ಮಂದಿ ಇವರು. ಬಗೆಬಗೆಯ ಕಾಂಬಿನೇಶನ್‌ಗಳಲ್ಲಿ ಆಹಾರವನ್ನು ತಿಂದು ನೋಡುವ, ಹೊಸತನ್ನು ಟ್ರೈ ಮಾಡುವ ಮಂದಿ ಇವರು. ಇಂತಹ ಮಂದಿ ಹೃದಯ ಶ್ರೀಮಂತಿಕೆಯ ಮಂದಿ. ಜೀವನವನ್ನು ಚೆನ್ನಾಗಿ ಅನುಭವಿಸಬೇಕು, ಸುಖವಾಗಿ ಇರಬೇಕು ಎಂದು ಆ ಕ್ಷಣದ ಸುಖವನ್ನು ಅನುಭವಿಸುವವರು. ತಮ್ಮ ಕಂಫರ್ಟ್‌ ಝೋನ್‌ನಿಂದ ಹೊರಗೆ ಹೋಗುವುದಕ್ಕೆ ಇವರು ಹಿಂದೆಮುಂದೆ ನೋಡಲಾರರು.

ಇದನ್ನೂ ಓದಿ: Benefits of Poppy Seeds: ಗಸೆಗಸೆ ನಿದ್ದೆಗಷ್ಟೇ ಅಲ್ಲ, ಪೌಷ್ಟಿಕಾಂಶಗಳ ಆಗರವೂ ಹೌದು!

ಆಯ್ದು ತಿನ್ನುವವವರು

ಇಂತಹ ಮಂದಿ ಏನೇ ಕೊಟ್ಟರೂ ಅದರಲ್ಲಿ ಒಂದಿಷ್ಟು ಆಹಾರವನ್ನು ಎತ್ತಿಡುತ್ತಾರೆ. ಒಂದಿಷ್ಟನ್ನು ಮಾತ್ರ ಹೆಕ್ಕಿ ತಿಂದು ಉಳಿದುದನ್ನು ತಟ್ಟೆಯಲ್ಲಿ ಹಾಗೆಯೇ ಬಿಟ್ಟು ಏಳುತ್ತಾರೆ. ಈ ಮಂದಿ ಎಲ್ಲೇ ಹೋದರೂ ಒಂದಿಷ್ಟು ಬಗೆಯ ಆಹಾರವನ್ನು ಮಾತ್ರ ತಿನ್ನುತ್ತಾರೆ. ಇಂಥವರು ಆಹಾರದಲ್ಲಿ ಪ್ರಯೋಗಶೀಲ ಮನಸ್ಸನ್ನು ಹೊಂದಿರುವುದಿಲ್ಲ. ಹೊಸತನ್ನು ಟ್ರೈ ಮಾಡಲು ಅತೀವ ಆಸಕ್ತಿ ಇರುವುದಿಲ್ಲ. ಇಂತಹ ಮಂದಿ ಜೀವನದಲ್ಲಿ ನಿರ್ಧಿಷ್ಟ ಗುರಿಯನ್ನು ಹೊಂದಿರುತ್ತಾರೆ. ಆದರೆ, ಅತಿಯಾದ ಯೋಚನೆ, ಅತಿಯಾದ ಪ್ಲಾನಿಂಗ್‌ ಇವರು ಮಾಡುವುದಿಲ್ಲ.

Continue Reading

ಆರೋಗ್ಯ

5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

ನಮ್ಮ ಜೀರ್ಣಾಂಗಗಳು ಅವಿಶ್ರಾಂತವಾಗಿ ದುಡಿಯುವಂತೆ ಹೊಟ್ಟೆಗೆ ಆಹಾರ ನೀಡುತ್ತಲೇ ಇದ್ದರೆ, ದೇಹದ ಚಯಾಪಚಯ ವ್ಯವಸ್ಥೆ ಕ್ರಮೇಣ ಕುಸಿಯುತ್ತವೆ. ಹೀಗಾದರೆ ತೂಕ, ಬೊಜ್ಜು ಇಳಿಸುವುದು ಅಸಾಧ್ಯ. ಬದಲಿಗೆ, ನಿಗದಿತವಾಗಿ ಹೊಟ್ಟೆಯನ್ನು ಖಾಲಿ ಬಿಡುವುದು ಮತ್ತು ಆಹಾರ ಸೇವನೆಯ ಸಂದರ್ಭದಲ್ಲಿ ಸಮತೋಲನೆಯತ್ತ ಗಮನ ನೀಡುವುದು ಮಧ್ಯಂತರ ಉಪವಾಸದ ಕ್ರಮ. ಈ ಬಗ್ಗೆ ಹೆಚ್ಚಿನ (5:2 Diet)ವಿವರಗಳು ಇಲ್ಲಿವೆ.

VISTARANEWS.COM


on

5:2 Diet
Koo

ತೂಕ ಇಳಿಕೆಯ ಭರಾಟೆಯಲ್ಲಿ ಯಾರು ಏನು ಸಲಹೆಯನ್ನು ಕೊಟ್ಟರೂ ಕೇಳಬೇಕೆನಿಸುತ್ತದೆ. ಅದು ಒಳ್ಳೆಯದೇ, ಕೆಟ್ಟದ್ದೇ, ಇದರಿಂದ ಆರೋಗ್ಯ ಏನಾಗುತ್ತದೆ- ಇಂಥ ವಿಷಯಗಳನ್ನು ಅಷ್ಟಾಗಿ ಯೋಚಿಸುವುದಿಲ್ಲ. ತೂಕ ಇಳಿಸುವಾಗ ದೇಹದ ಸ್ವಾಸ್ಥ್ಯ ಕ್ಷೀಣಿಸದಂತೆ ನೋಡಿಕೊಳ್ಳುವುದು ಮುಖ್ಯ. ಅಂದರೆ, ಊಟ ಬಿಟ್ಟು ಉಪವಾಸ ಮಾಡುವುದು, ಯಾವುದೋ ಒಂದೇ ರೀತಿಯ ಆಹಾರ ತಿನ್ನುವುದು ಮುಂತಾದ ಹುಚ್ಚು ಖಯಾಲಿಗಳು ದೇಹವನ್ನು ಅಪಾಯಕ್ಕೆ ದೂಡುವಂಥವು. ಈ ಎಲ್ಲವುಗಳ ಹಿನ್ನೆಲೆಯಲ್ಲಿ, ಮಧ್ಯಂತರ ಉಪವಾಸಕ್ಕೆ ಪೋಷಕಾಂಶ ತಜ್ಞರು ಹೆಚ್ಚಿನ ಅಂಕಗಳನ್ನು ನೀಡುತ್ತಾರೆ. ಅದೇ ಹಿನ್ನೆಲೆಯಲ್ಲಿ ಜಾರಿಯಲ್ಲಿ ಇರುವಂಥದ್ದು 5:2 (5:2 Diet) ಉಪವಾಸ.

Dieting concept. Healthy Food. Beautiful Young Asian Woman

ಏನಿದು?

ಇದು ಸಹ ಮಧ್ಯಂತರ ಉಪವಾಸದ ಒಂದು ಕ್ರಮ. ಇದನ್ನು ತಿಳಿಯುವ ಮುನ್ನ ಮಧ್ಯಂತರ ಉಪವಾಸ ಎಂದರೇನು ಎಂಬುದನ್ನು ತಿಳಿಯೋಣ. ಈ ಕ್ರಮದಲ್ಲಿ ಇಂಥದ್ದೇ ಆಹಾರಗಳನ್ನು ತಿನ್ನಬೇಕೆಂಬ ಕಟ್ಟುನಿಟ್ಟಿಲ್ಲ. ಬದಲಿಗೆ ಆಹಾರ ಸೇವಿಸುವ ಹೊತ್ತಿನಲ್ಲಿ ವ್ಯತ್ಯಾಸ ಮಾಡಲಾಗುತ್ತದೆ. ನಮ್ಮ ಜೀರ್ಣಾಂಗಗಳು ಅವಿಶ್ರಾಂತವಾಗಿ ದುಡಿಯುವಂತೆ ಹೊಟ್ಟೆಗೆ ಆಹಾರ ನೀಡುತ್ತಿಲೇ ಇದ್ದರೆ, ದೇಹದ ಚಯಾಪಚಯ ವ್ಯವಸ್ಥೆ ಕ್ರಮೇಣ ಕುಸಿಯುತ್ತವೆ. ಹೀಗಾದರೆ ತೂಕ, ಬೊಜ್ಜು ಇಳಿಸುವುದು ಅಸಾಧ್ಯ. ಬದಲಿಗೆ, ನಿಗದಿತವಾಗಿ ಹೊಟ್ಟೆಯನ್ನು ಖಾಲಿ ಬಿಡುವುದು ಮತ್ತು ಆಹಾರ ಸೇವನೆಯ ಸಂದರ್ಭದಲ್ಲಿ ಸಮತೋಲನೆಯತ್ತ ಗಮನ ನೀಡುವುದು. ಉದಾ, ಒಂದು ಊಟದಿಂದ ಇನ್ನೊಂದು ಊಟಕ್ಕೆ 4 ತಾಸುಗಳ ಬಿಡುವು ಸಾಮಾನ್ಯವಾಗಿದ್ದರೆ, ಅದನ್ನು 6 ತಾಸುಗಳಿಗೆ, ನಂತರ 8, ಆಮೇಲೆ 12 ತಾಸುಗಳಿಗೆ ಹೆಚ್ಚಿಸುವುದು… ಹೀಗೆ.

5:2 ಎಂದರೆ…:

ಇದೇ ಕ್ರಮದ ಮುಂದುವರಿಕೆಯಾಗಿ 5:2 ಉಪವಾಸ ಚಾಲ್ತಿಯಲ್ಲಿದೆ. ಅಂದರೆ ವಾರದಲ್ಲಿ 5 ದಿನ ಸಾಮಾನ್ಯ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು; 2 ದಿನ ಹೊಟ್ಟೆಗೆ ಕೊಂಚ ಬಿಡುವು ನೀಡುವುದು. ಎರಡು ದಿನಗಳನ್ನು ವಾರದಲ್ಲಿ ಬೇಕಾದಂತೆ ಇರಿಸಿಕೊಳ್ಳಬಹುದು. ಅಂದರೆ ಒಂದು ಭಾನುವಾರ, ಇನ್ನೊಂದು ಬುಧವಾರ… ಹೀಗೆ. ಆ ದಿನಗಳಲ್ಲೂ ಪೂರ್ಣ ಉಪವಾಸವಲ್ಲ, ಮಹಿಳೆಯರು 500-600 ಕ್ಯಾಲರಿಯಷ್ಟು ಆಹಾರ ಮತ್ತು ಪುರುಷರು 600-800 ಕ್ಯಾಲರಿಯಷ್ಟು ಆಹಾರ ಸೇವಿಸಬಹುದು. ಉಳಿದ ಐದು ದಿನಗಳಲ್ಲಿ ಇಡೀ ಧಾನ್ಯಗಳು, ಸಲಾಡ್‌ಗಳು, ಹಣ್ಣುಗಳು, ಡೇರಿ ಉತ್ಪನ್ನಗಳು, ಕಾಳು-ಬೇಳೆಗಳು, ಬೀಜಗಳು, ಮೀನು-ಮೊಟ್ಟೆಯಂಥವು ಹೊಟ್ಟೆ ಸೇರಬೇಕು. ಅಲ್ಲಿಯೂ ಸಂಸ್ಕರಿತ ಪಿಷ್ಟಗಳು, ಸಕ್ಕರೆ, ಕೆಟ್ಟ ಕೊಬ್ಬುಗಳನ್ನೆಲ್ಲ ತಿನ್ನುವುದಕ್ಕೆ ಅವಕಾಶವಿಲ್ಲ. ಹಾಗಾದರೆ ಉಪವಾಸದ ಎರಡು ದಿನಗಳಲ್ಲಿ ಏನು ತಿನ್ನಬಹುದು? ಬೇಕಾದಷ್ಟು ಹಸಿ ತರಕಾರಿಗಳು, ಕೋಸಂಬರಿ, ಸಿಹಿ ಸೇರಿಲ್ಲದ ಯೋಗರ್ಟ್‌, ಮನೆಯಲ್ಲಿ ಮಾಡಿದ ಮೊಸರು-ಮಜ್ಜಿಗೆ, ಬೇಯಿಸಿದ ಮೊಟ್ಟೆ, ತರಕಾರಿ ಸೂಪ್‌ಗಳು, ಸ್ವಲ್ಪ ಪ್ರಮಾಣದ ಧಾನ್ಯ- ಅಂದರೆ ಒಂದು ಚಪಾತಿ ಅಥವಾ ಸಣ್ಣ ಕಪ್‌ನಲ್ಲಿ ಅನ್ನ- ಇಂಥವುಗಳಲ್ಲಿ ಒಂದೆರಡನ್ನು ಆಯ್ದುಕೊಳ್ಳಬಹುದು.

diet woman with salad and measuring tape

ಲಾಭಗಳೇನು?

ಯಾವುದೇ ಕಾರಣಕ್ಕೆ ಇಂಥ ಮಧ್ಯಂತರ ಉಪವಾಸಗಳನ್ನು ಮಾಡುತ್ತಿದ್ದರೂ, ಊಟ ಮಾಡುವಾಗ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮಹತ್ವದ್ದು. ಉಪವಾಸದ ಹೆಸರಿನಲ್ಲಿ ಶರೀರವನ್ನು ನಿಶ್ಶಕ್ತಗೊಳಿಸುವುದಲ್ಲ; ಬದಲಿಗೆ, ಚೈತನ್ಯವನ್ನು ಹೆಚ್ಚಿಸಿಕೊಳ್ಳುವುದು ನಮ್ಮ ಉದ್ದೇಶ. ತೂಕ ಇಳಿಸುವವರು ಇದನ್ನು ಹೆಚ್ಚಾಗಿ ನೆಚ್ಚಿಕೊಳ್ಳುತ್ತಿರುವುದರಿಂದ, ದೇಹದ ಕೊಬ್ಬು ಮಾತ್ರವೇ ಕರಗಬೇಕೆ ಹೊರತು, ಚರ್ಮ ಸುಕ್ಕಾಗುವುದು, ಕೂದಲುದುರುವುದು ಮುಂತಾದ ಸಮಸ್ಯೆಗಳು ಹೆಚ್ಚುವರಿಯಾಗಿ ಬರಬಾರದು.

ಇದನ್ನೂ ಓದಿ: Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

ರೋಗಗಳು ದೂರ

ಈಗಾಗಲೇ ಮಧುಮೇಹ ಇರುವವರು ಉಪವಾಸ ಮಾಡುವಂತಿಲ್ಲ. ಹಾಗಾಗಿ ಮಧ್ಯಂತರ ಉಪವಾಸಗಳು ಅವರಿಗೆ ಹೇಳಿಸಿದ್ದಲ್ಲ. ಆದರೆ ಇಂಥ ಕ್ರಮಗಳನ್ನು ಅನುಸರಿಸುವುದರಿಂದ, ಆರೋಗ್ಯವಂತರಿಗೆ ಮಧುಮೇಹ ಬರುವಂಥ ಸಾಧ್ಯತೆಗಳು ಕಡಿಮೆ ಎನ್ನುತ್ತವೆ ಅಧ್ಯಯನಗಳು. ಕಾರಣ, ತನಗೆ ದೊರೆಯುವ ಗ್ಲೂಕೋಸ್‌ ಮತ್ತು ಉತ್ಪತ್ತಿಯಾಗುವ ಇನ್‌ಸುಲಿನ್‌ ಪ್ರಮಾಣಗಳನ್ನು ಶರೀರ ಸಮರ್ಥವಾಗಿ ನಿಭಾಯಿಸುತ್ತದೆ.
ಮಧ್ಯಂತರ ಉಪವಾಸಗಳು ರಕ್ತದೊತ್ತಡವನ್ನು ನಿಯಂತ್ರಿಸಿ, ಶರೀರದಲ್ಲಿರುವ ಕೊಬ್ಬು ಕರಗಿಸಬಲ್ಲವು. ಇವೆರಡೂ ಅಂಶಗಳು ಹೃದಯದ ಆರೋಗ್ಯಕ್ಕೆ ಪೂರಕವಾದಂಥವು. ಆಹಾರ ತೆಗೆದುಕೊಳ್ಳುವ ಸಮಯದಲ್ಲಿ ಆರೋಗ್ಯಕರ ಕೊಬ್ಬುಗಳನ್ನು ಸೇವಿಸಿದರೆ, ದೇಹದ ಮೇಲೆ ಅತ್ಯಂತ ಒಳ್ಳೆಯ ಪರಿಣಾಮವನ್ನು ಈ ಉಪವಾಸದ ಕ್ರಮ ನೀಡಬಲ್ಲದು.

Continue Reading

ಫ್ಯಾಷನ್

Ambani Family Fashion: ಅಂಬಾನಿ ಕುಟುಂಬದ ಮಹಿಳೆಯರ ಜ್ಯುವೆಲರಿ ಡಿಸೈನ್ಸ್ ಕಾಪಿ ಮಾಡಿ ಟ್ರೆಂಡಿಯಾದ ಜ್ಯುವೆಲರಿಗಳಿವು!

ಅಂಬಾನಿ ಫ್ಯಾಮಿಲಿಯ (Ambani Family Fashion) ಮಹಿಳೆಯರು ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ ಧರಿಸಿದ ಎಮಾರಾಲ್ಡ್ ಜ್ಯುವೆಲರಿಗಳ ಕಲೆಕ್ಷನನ್ನು ಕಾಪಿ ಮಾಡಿದ ಇಮಿಟೇಷನ್‌ ಜ್ಯುವೆಲರಿಗಳು ಇದೀಗ ಬೇಡಿಕೆ ಹೆಚ್ಚಿಸಿಕೊಂಡಿವೆ. ಯಾವ್ಯಾವ ಡಿಸೈನ್‌ಗಳು ದೊರೆಯುತ್ತಿವೆ? ಬೇಡಿಕೆ ಹೆಚ್ಚಲು ಕಾರಣವೇನು? ಇಲ್ಲಿದೆ ವಿವರ.

VISTARANEWS.COM


on

Ambani Family Fashion
ಚಿತ್ರಗಳು: ಅಂಬಾನಿ ಫ್ಯಾಮಿಲಿಯ ಮಹಿಳೆಯರು ಧರಿಸಿರುವ ಅತ್ಯಮೂಲ್ಯ ಎಮಾರಾಲ್ಡ್ ಜ್ಯುವೆಲರಿಗಳ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಸಾಮಾನ್ಯ ಮಹಿಳೆ ಕೂಡ ಅಂಬಾನಿ ಫ್ಯಾಮಿಲಿಯ (Ambani Family Fashion) ಮಹಿಳೆಯರು ಧರಿಸುವ ಜ್ಯುವೆಲರಿಗಳನ್ನು, ತಾವು ಕೂಡ ಧರಿಸಿ ಸಂತಸ ಪಡಬಹುದು! ಹೌದು. ಅದು ಹೇಗೆ? ಎಂದು ಯೋಚಿಸುತ್ತಿದ್ದೀರಾ! ಅವರಂತೆ ಒರಿಜಿನಲ್‌ ಜ್ಯುವೆಲರಿಗಳನ್ನು ಖರೀದಿಸಲು ಸಾಧ್ಯವಾಗದಿದ್ದರೂ, ಥೇಟ್‌ ಅವರು ಧರಿಸಿರುವಂತಹ ಜ್ಯುವೆಲರಿಗಳನ್ನೇ ಹೋಲುವಂತಹ ಕೃತಕ ಪ್ರಿಶಿಯಸ್‌ ಸ್ಟೋನ್‌ನಿಂದ ಸಿದ್ಧಗೊಂಡ ಇಮಿಟೇಷನ್‌ ಜ್ಯುವೆಲರಿಗಳನ್ನು ಕೊಂಡು ಧರಿಸಿ ಖುಷಿ ಪಡಬಹುದು. ಇದಕ್ಕೆ ಪ್ರಮುಖ ಕಾರಣ, ಕೈಗೆಟಕುವ ಬೆಲೆ. ಹಾಗಾಗಿ ಈ ಕೃತಕ ಇಮಿಟೇಷನ್‌ ಜ್ಯುವೆಲರಿಗಳು ಇದೀಗ ಸಖತ್‌ ಟ್ರೆಂಡಿಯಾಗಿವೆ.

Ambani Family Fashion

ಅಂಬಾನಿ ಫ್ಯಾಮಿಲಯ ಮಹಿಳೆಯರ ಜ್ಯುವೆಲರಿ ಮೋಹ

ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಸೇರಿದಂತೆ ಅಂಬಾನಿ ಕುಟುಂಬದ ಮಹಿಳೆಯರ ಪ್ರೆಸ್ಟಿಜ್‌ನ ಧ್ಯೋತಕವಾದ ಅಮೂಲ್ಯವಾದ ಎಮಾರಾಲ್ಡ್ ಜ್ಯುವೆಲರಿಗಳ ರಿಪ್ಲೀಕಾದಂತೆ ಕಾಣುವ ಈ ಆರ್ಟಿಫಿಶಿಯಲ್‌ ಇಮಿಟೇಷನ್‌ ಆಭರಣಗಳು, ಎಲ್ಲಾ ವರ್ಗದ ಮಹಿಳೆಯರನ್ನು ಆಕರ್ಷಿಸಿವೆ. ಕೋಟಿಗಟ್ಟಲೆ ಬೆಲೆ ಬಾಳುವ ಜ್ಯುವೆಲರಿ ಧರಿಸಲಾಗದಿದ್ದರೂ, ಅದರಂತೆಯೇ ಕಾಣಿಸುವ ಜ್ಯುವೆಲರಿಗಳನ್ನು ಧರಿಸುವ ಇಚ್ಛೆ ಸಾಕಷ್ಟು ಮಹಿಳೆಯರದ್ದಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಡಿಸೈನ್‌ನ ಆಭರಣಗಳು ಕಾಲಿಟ್ಟಿವೆ ಎನ್ನುತ್ತಾರೆ ಇಮಿಟೇಷನ್‌ ಜ್ಯುವೆಲರಿ ಮಾರಾಟಗಾರಾದ ರಾಕೇಶ್‌.

Ambani Family Fashion

ಎಮಾರಾಲ್ಡ್ ಸೆಟ್‌ನಂತೆ ಕಾಣುವ ಇಮಿಟೇಷನ್‌ ಜ್ಯುವೆಲರಿ

ಅಂದಹಾಗೆ, ಎಲ್ಲರಿಗೂ ತಿಳಿದಿರುವಂತೆ ನೀತಾ ಅಂಬಾನಿಯವರ ಬಳಿ ಎಮರಾಲ್ಡ್‌ನ ದೊಡ್ಡ ಸೆಟ್‌ ಜ್ಯುವೆಲರಿಗಳಿವೆ. ಮಗಳು ಮತ್ತು ಸೊಸೆಯ ಬಳಿಯೂ ಸಾಕಷ್ಟಿವೆ. ಪ್ರಪಂಚದ ಅತ್ಯಂತ ದುಬಾರಿ ಎಮರಾಲ್ಡ್‌ನಿಂದ ಮಾಡಿದ ಜ್ಯುವೆಲರಿ ಸೆಟ್‌ಗಳಿವು. ಪ್ರಿ-ವೆಡ್ಡಿಂಗ್‌ನಲ್ಲಿ ಇವರೆಲ್ಲರೂ ಧರಿಸಿದ್ದೇ ತಡ, ಕೃತಕ ಆಭರಣ ಲೋಕದಲ್ಲಿ, ಇವುಗಳ ರಿಪ್ಲೀಕಾ ಜ್ಯುವೆಲರಿಗಳ ಆಗಮನವಾಗತೊಡಗಿತು. ಕೇವಲ ಎರಡ್ಮೂರು ಸಾವಿರ ರೂ.ಗಳಿಗೆ ದೊರಕುಲಾರಂಭಿಸಿತು. ಹಾಗಾಗಿ ಬೇಡಿಕೆಯು ಹೆಚ್ಚಿತು ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್ಸ್. ಅಷ್ಟೇಕೆ, ಇದೀಗ ಬ್ರೈಡಲ್‌ ಸೆಟ್‌ಗಳಲ್ಲೂ ನಾನಾ ಡಿಸೈನ್‌ನವು ಕಾಲಿಟ್ಟಿವೆ. ಖರೀದಿ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಕೃತಕ ಆಭರಣದ ಮಾರಾಟಗಾರರು.

ಇದನ್ನೂ ಓದಿ: Saree Fashion: ಸೆಲೆಬ್ರೆಟಿ ಲುಕ್‌ಗಾಗಿ ಬಂತು ಬಂಗಾರ ವರ್ಣದ ಸೀರೆಗಳು!

ಇಮಿಟೇಷನ್‌ ಎಮಾರಾಲ್ಡ್ ಜ್ಯುವೆಲರಿ ಪ್ರಿಯರಿಗೆ ಸಿಂಪಲ್‌ ಟಿಪ್ಸ್

  • ಫಿನಿಶಿಂಗ್‌ ಇರುವಂತಹ ಜ್ಯುವೆಲ್‌ ಸೆಟ್‌ ಆಯ್ಕೆ ಮಾಡಿ.
  • ಗೋಲ್ಡನ್‌ ಹಾಗೂ ಸಿಲ್ವರ್‌ ಕೋಟೆಡ್‌ ಸೆಟ್‌ಗಳು ಟ್ರೆಂಡ್‌ನಲ್ಲಿವೆ.
  • ಈ ಸೆಟ್‌ನೊಂದಿಗೆ ಮ್ಯಾಚ್‌ ಆಗದ ಇತರೇ ಮೆಟಲ್‌ನ ಜ್ಯುವೆಲರಿಗಳನ್ನು ಧರಿಸಕೂಡದು.
  • ಕ್ಲಾಸಿ ಲುಕ್‌ಗೆ ಇವು ಮ್ಯಾಚ್‌ ಆಗುತ್ತವೆ.
  • ಡಾರ್ಕ್ ಶೇಡ್‌ ಹಾಗೂ ಮಿಂಟ್‌ ಗ್ರೀನ್‌ ಶೇಡ್‌ನವು ಪ್ರಚಲಿದಲ್ಲಿವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಆರೋಗ್ಯ

Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

ವ್ಯಸ್ತ ಬದುಕಿನ ಕಾರಣಕ್ಕೆ ಇನ್‌ಸ್ಟಂಟ್‌ ನೂಡಲ್‌ಗಳು ಸ್ವಸ್ಥ ಆಯ್ಕೆ ಎನ್ನುವಂತಿಲ್ಲ. ಹಲವು ರೀತಿಯ ಆರೋಗ್ಯ ತೊಂದರೆಗಳನ್ನು ಇವು ತಂದಿಡಬಹುದು. ಅಪರೂಪಕ್ಕೆ ತಿಂದರೆ, ಜೀವಕ್ಕೆ ಅಪಾಯವಿಲ್ಲದಿದ್ದರೂ, ಇದೇ ಆಹಾರವಾದರೆ ಮಾತ್ರ ಅಪಾಯ ತಪ್ಪಿದ್ದಲ್ಲ. ಈ ಕುರಿತ ಉಪಯುಕ್ತ ಆಹಾರ ಮತ್ತು ಆರೋಗ್ಯ (Food Tips Kannada) ಮಾಹಿತಿ ಇಲ್ಲಿದೆ.

VISTARANEWS.COM


on

Food Tips Kannada
Koo

ಸಮಯದ ಅಭಾವ ಇರುವಾಗ ಹೊಟ್ಟೆಯ ಗಲಾಟೆಯನ್ನು ತಣಿಸುವುದು ಕಷ್ಟದ ಕೆಲಸ ಎನಿಸುತ್ತದೆ. ಅದರಲ್ಲೂ ಹೊರಗಿನ ಆಹಾರ ಬೇಡ, ಮನೆಯದ್ದೇ ಇರಲಿ ಎನ್ನುವವರಿಗೆ ಹೊಟ್ಟೆ ತಾಳ ಹಾಕುವಾಗ ಬೇಯಿಸಿಕೊಳ್ಳುವುದಕ್ಕೆ ಸಮಯ ಇಲ್ಲದಿದ್ದರೆ ಅವಸ್ಥೆಯೇ ಸರಿ. ಇಂಥ ಹೊತ್ತಿಗೆಂದೇ ತ್ವರಿತವಾಗಿ ಸಿದ್ಧವಾಗುವ ಇನ್‌ಸ್ಟಂಟ್‌ ನೂಡಲ್‌ಗಳು ಅಡುಗೆಮನೆಯ ಕಪಾಟನ್ನು ಅಲಂಕರಿಸಿರುತ್ತವೆ. ಬೇಕಷ್ಟು ಪ್ಯಾಕೆಟ್‌ಗಳನ್ನು ತೆಗೆದು ಬಾಣಲೆಗೆ ಹಾಕಿದರಾಯ್ತು, ಮಸಾಲೆ ಸುರಿದರಾಯ್ತು, ನಿಮಿಷಗಳಲ್ಲಿ ಆಹಾರ ಸಿದ್ಧ. ಯಾವತ್ತೋ ಒಂದಿನ ಇಂಥವನ್ನು ಮಾಡಿದಾಗ ಆರೋಗ್ಯಕ್ಕೇನೂ ವ್ಯತ್ಯಾಸವಾಗದು. ಆದರೆ ಇನ್‌ಸ್ಟಂಟ್‌ ನೂಡಲ್‌ಗಳನ್ನು ಆಗಾಗ ತಿನ್ನುವ ಅಭ್ಯಾಸ ಇದೆ ಎಂದರೆ… ಈ (Food Tips Kannada) ಲೇಖನ ನಿಮಗಾಗಿ! ವ್ಯಸ್ತ ಬದುಕು ಕಾರಣಕ್ಕೆ ಇದನ್ನು ಸ್ವಸ್ಥ ಆಯ್ಕೆ ಎನ್ನುವಂತಿಲ್ಲ. ರೋಲ್‌ ಮಾಡಿದ ಓಟ್‌ಮೀಲ್‌ ಕುಕ್ಕರ್‌ಗೆ ಹಾಕಿದರೆ, ತನ್ನಷ್ಟಕ್ಕೆ ಬೆಂದುಕೊಳ್ಳುತ್ತದೆ. ಅದನ್ನು ತೆಗೆದು ಬೇಕಾದಂತೆ ಹಾಲು, ಹಣ್ಣು, ಜೇನುತುಪ್ಪ ಮುಂತಾದವನ್ನು ಸೇರಿಸಿ ಸೇವಿಸಿದರಾಯ್ತು. ಸ್ವಲ್ಪ ಗಮನ ನೀಡಿದರೆ, ಇಂಥ ಸರಳ ಮತ್ತು ಆರೋಗ್ಯಕರ ಆಯ್ಕೆಗಳು ನಮ್ಮ ಸುತ್ತ ಬಹಳಷ್ಟಿವೆ. ಇದಕ್ಕಾಗಿ ಇನ್‌ಸ್ಟಂಟ್‌ ನೂಡಲ್ಸ್‌ಗೇ ಮೊರೆ ಹೋಗಬೇಕೆಂದಿಲ್ಲ. ಇಂಥ ಸಂಸ್ಕರಿತ ಆಹಾರಗಳು ಆರೋಗ್ಯಕರವಲ್ಲ ಎಂದು ಹೇಳುವುದಕ್ಕೆ ಕಾರಣಗಳು ಒಂದೆರಡಲ್ಲ. ಏನು ಕಾರಣಗಳವು?

Instant noodles. Instant yakisoba

ಸೋಡಿಯಂ ಅಧಿಕ

ಇನ್‌ಸ್ಟಂಟ್‌ ನೂಡಲ್‌ಗಳು ತಮ್ಮಲ್ಲಿರುವ ಸೋಡಿಯಂ ಪ್ರಮಾಣಕ್ಕಾಗಿ ಕುಖ್ಯಾತವಾಗಿವೆ. ಕೆಲವು ನೂಡಲ್‌ಗಳಂತೂ ಒಂದು ಸರ್ವಿಂಗ್‌ನಲ್ಲಿ ಇಡೀ ದಿನಕ್ಕೆ ನಾವು ತಿನ್ನಬಹುದಾದ ಸೋಡಿಯಂನ ಅರ್ಧ ಭಾಗದಷ್ಟನ್ನು ದೇಹಕ್ಕೆ ಸೇರಿಸಿಬಿಡುತ್ತವೆ. ಹೀಗೆ ಅತಿಯಾಗಿ ಸೋಡಿಯಂ ಅಥವಾ ಉಪ್ಪಿನಂಶವನ್ನು ತಿನ್ನುವುದರಿಂದ ರಕ್ತದೊತ್ತಡ ಹೆಚ್ಚುತ್ತದೆ, ಹೃದಯ ರೋಗಗಳು ಅಮರಿಕೊಳ್ಳುತ್ತವೆ, ಪಾರ್ಶ್ವವಾಯು ದಾಳಿ ಮಾಡುತ್ತದೆ. ಹಾಗಾಗಿ ಇನ್‌ಸ್ಟಂಟ್‌ ನೂಡಲ್‌ಗಳನ್ನು ಹೊಟ್ಟೆಗಿಳಿಸುವ ಮುನ್ನ ಈ ವಿಷಯಗಳ ಬಗ್ಗೆ ಗಮನ ಇರಲಿ.

ಸತ್ವಹೀನ

ಹೊಟ್ಟೆ ಹಸಿದಾಗ ಏನು ಸಿಕ್ಕರೂ ತಿನ್ನುವಂತೆನಿಸುವುದು ಸಹಜ. ಆ ಹೊತ್ತಿಗೆ ಇಂಥ ಗುಜರಿ ತಿಂಡಿಗಳು ಸಿಕ್ಕಿಬಿಟ್ಟರೆ ಕೆಲಸ ಕೆಟ್ಟಂತೆ. ಕಾರಣ, ಇನ್‌ಸ್ಟಂಟ್‌ ನೂಡಲ್‌ಗಳು ಕ್ಯಾಲರಿಯನ್ನೇನೋ ನೀಡುತ್ತವೆ; ಆದರೆ ಸತ್ವಗಳು ಇರುವುದಿಲ್ಲ. ಅಂದರೆ ಶರೀರಕ್ಕೆ ಬೇಕಾದಂಥ ಪ್ರೊಟೀನ್‌, ನಾರು, ಖನಿಜಗಳಂಥ ಒಳ್ಳೆಯ ಅಂಶಗಳೇನೂ ಇರುವುದಿಲ್ಲ ಇದರಲ್ಲಿ. ಬದಲಿಗೆ ಕೆಟ್ಟ ಕೊಬ್ಬುಗಳು ಮತ್ತು ಸಂಸ್ಕರಿತ ಪಿಷ್ಟ ಹೊಟ್ಟೆ ಸೇರಿತ್ತದೆ. ಸಾಲದೆಂಬಂತೆ ಕೃತಕ ಬಣ್ಣ, ರುಚಿಗಳೂ ಇದರಲ್ಲಿ ಸೇರಿರುತ್ತವೆ. ಹಾಗಾಗಿ ಇದನ್ನು ಸದಾ ತಿಂದರೆ, ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯಾಗುವುದು ನಿಶ್ಚಿತ.

Man Eats Instant Noodles at Home

ಅನಾರೋಗ್ಯಕರ ಕೊಬ್ಬು

ಟ್ರಾನ್ಸ್‌ ಫ್ಯಾಟ್‌ ಮತ್ತು ಸ್ಯಾಚುರೇಟೆಡ್‌ ಫ್ಯಾಟ್‌ನಂಥ ಅನಾರೋಗ್ಯಕರ ಕೊಬ್ಬುಗಳು ಇದರಲ್ಲಿ ಭರಪೂರ ಇರಬಹುದು. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಜಮೆಯಾಗುವುದು ಸಹ ಅಧಿಕವಾಗುತ್ತದೆ. ಮೊದಲಿಗೆ ಈ ನೂಡಲ್‌ಗಳನ್ನು ಕರಿಯುವ ಸಂದರ್ಭದಲ್ಲಿ ಅಧಿಕ ಪ್ರಮಾಣದ ಎಣ್ಣೆಯನ್ನು ಇವು ಹೀರಿಕೊಂಡಿರುತ್ತವೆ. ನಂತರ ನಮ್ಮ ಅಡುಗೆ ಮನೆಗಳಲ್ಲಿ ನಿಮಿಷಗಳಲ್ಲಿ ಸಿದ್ಧ ಆಗುವಾಗ, ಆ ಕೊಬ್ಬಿನಂಶವೆಲ್ಲ ಸೇರುವುದು ನಮ್ಮ ಹೊಟ್ಟೆಯನ್ನೇ.

ಸಂರಕ್ಷಕಗಳು

ತಯಾರಿಕೆಯ ಹಂತದಲ್ಲೇ ಒಂದಿಷ್ಟು ಕೃತಕ ವಸ್ತುಗಳು ಇದಕ್ಕೆ ಸೇರ್ಪಡೆಯಾಗುತ್ತವೆ. ಕೃತಕವಾದ ಬಣ್ಣ, ರುಚಿ, ಘಮಗಳೆಲ್ಲ ಇದರಲ್ಲಿ ಸೇರಿವೆ. ಮಾತ್ರವಲ್ಲದೆ ಸಂರಕ್ಷಕಗಳೂ ಇದಕ್ಕೆ ಜೊತೆಯಾಗಿರುತ್ತವೆ. ಮಾನೊಸೋಡಿಯಂ ಗ್ಲೂಟಮೇಟ್‌ನಂಥ (ಎಂಎಸ್‌ಜಿ) ರಾಸಾಯನಿಕಗಳನ್ನು ಹೆಚ್ಚಿನ ನೂಡಲ್‌ಗಳಲ್ಲಿ ಸೇರಿಸಲಾಗುತ್ತದೆ. ಇಂಥ ಅಂಶಗಳು ದೇಹದಲ್ಲಿ ಸೇರಿದರೆ ತಲೆನೋವು, ಅಲರ್ಜಿಗಳು, ಜೀರ್ಣಾಂಗಗಳ ತೊಂದರೆಗಳು ಕಟ್ಟಿಟ್ಟಿದ್ದು.

ಜೀವಶೈಲಿಯ ಕಾಯಿಲೆಗಳು

ಸಂಸ್ಕರಿತ ಪಿಷ್ಟ, ಕೆಟ್ಟ ಕೊಬ್ಬು, ಅಧಿಕ ಸೋಡಿಯಂನಂಥ ಅಂಶಗಳು ದೇಹಕ್ಕೆ ಸೇರಿದರೆ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್‌, ಬೊಜ್ಜಿನಂಥ ಜೀವನಶೈಲಿಯ ಖಾಯಿಲೆಗಳು ಬೆನ್ನು ಬೀಳುತ್ತವೆ. ಕಿಬ್ಬೊಟ್ಟೆಯಲ್ಲಿ ಕೊಬ್ಬು ಸೇರಿಕೊಳ್ಳುತ್ತದೆ. ದೇಹದ ಚಯಾಪಚಯವನ್ನೇ ಬುಡಮೇಲು ಮಾಡಿ, ಶರೀರವನ್ನು ರೋಗಗಳ ಗೂಡಾಗಿಸುತ್ತದೆ. ಹಾಗಾಗಿ ಬಾಯಿಗೆ ರುಚಿ ಎನಿಸುವ ಇನ್‌ಸ್ಟಂಟ್‌ ನೂಡಲ್‌ಗಳ ಬಗ್ಗೆ ಈ ಅರಿವು ಹೊಂದುವುದು ಅಗತ್ಯ.

healthy internal organs of human digestive system

ಜೀರ್ಣಾಂಗಗಳ ಸಮಸ್ಯೆ

ನಾರು ಇಲ್ಲದಂಥ ಆಹಾರಗಳು ಜೀರ್ಣಾಂಗಗಳ ಸಂಕಷ್ಟವನ್ನು ಹೆಚ್ಚಿಸುತ್ತವೆ. ಅದರಲ್ಲೂ ಅತಿಯಾಗಿ ಸಂಸ್ಕರಿಸಿದ ತಿನಿಸುಗಳು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳನ್ನೂ ಕೊಲ್ಲುತ್ತವೆ. ಇವೆಲ್ಲವುಗಳ ಫಲವಾಗಿ ಅಜೀರ್ಣ, ಹೊಟ್ಟೆಯುಬ್ಬರ, ಆಸಿಡಿಟಿಯಂಥ ಕಿರಿಕಿರಿಗಳು ಹೆಚ್ಚುತ್ತವೆ. ಮಲಬದ್ಧತೆಯೂ ಕಾಡಬಹುದು. ಇವೆಲ್ಲವುಗಳಿಂದ ಜೀರ್ಣಾಂಗಗಳ ಆರೋಗ್ಯ ಸಂಪೂರ್ಣ ಹಾಳಾಗುತ್ತದೆ. ಇದರ ಬದಲಿಗೆ, ಹಣ್ಣು-ತರಕಾರಿಗಳು, ಇಡೀ ಧಾನ್ಯಗಳು, ಪ್ರೊಬಯಾಟಿಕ್‌ಗಳು ಜೀರ್ಣಾಂಗಗಳ ಆರೋಗ್ಯವನ್ನು ಸುಧಾರಿಸುತ್ತವೆ.

Belly Fat Reduction

ಬೊಜ್ಜು

ಸತ್ವಗಳಿಲ್ಲದ ಖಾಲಿ ಕ್ಯಾಲರಿಗಳು ದೇಹವನ್ನು ನಿತ್ರಾಣದತ್ತ ದೂಡುತ್ತವೆ. ಹಾಗೆಂದು ಆ ವ್ಯಕ್ತಿ ಸಪೂರ ಕಡ್ಡಿಯಂತೇನೂ ಇರುವುದಿಲ್ಲ. ಸ್ಥೂಲಕಾಯವೇ ಇದ್ದರೂ, ನಿತ್ಯದ ಚಟುವಟಿಕೆಗೆ ಬೇಕಾದ ಚೈತನ್ಯ ಇರುವುದಿಲ್ಲ. ಇವೆಲ್ಲ ಕೆಟ್ಟ ಆಹಾರಕ್ರಮದ ಪರಿಣಾಮಗಳು. ಇನ್‌ಸ್ಟಂಟ್‌ ನೂಡಲ್‌ಗಳ ನಿಯಮಿತ ಸೇವನೆಯು ದೇಹದ ತೂಕವನ್ನು ಹೆಚ್ಚಿಸಿ, ದೇಹದಲ್ಲಿ ಬೊಜ್ಜು ತುಂಬಿಸುತ್ತದೆ. ಖಾಲಿ ಕ್ಯಾಲರಿಗಳು ಹಸಿವು ಹೆಚ್ಚಿಸುತ್ತವೆ. ಮತ್ತೆ ಇದನ್ನೇ ತಿನ್ನುತ್ತೀರಿ, ಹಸಿವು ತಣಿಯುವುದೇ ಇಲ್ಲ. ತೂಕ ಏರುತ್ತಲೇ ಹೋಗುತ್ತದೆ.

ಇದನ್ನೂ ಓದಿ: World Brain Tumor Day: ಇಂದು ವಿಶ್ವ ಬ್ರೇನ್‌ ಟ್ಯೂಮರ್‌ ದಿನ; ಮೊದಲೇ ಎಚ್ಚೆತ್ತುಕೊಂಡರೆ ಈ ಕಾಯಿಲೆಯಿಂದ ಪಾರಾಗಬಹುದು

Continue Reading
Advertisement
Valmiki Corporation Scam
ಕರ್ನಾಟಕ17 mins ago

Valmiki Corporation Scam: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ; ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಪರಮೇಶ್ವರ್‌

Niveditha Gowda chandan matters told by Prashanth Sambargi
ಸ್ಯಾಂಡಲ್ ವುಡ್27 mins ago

Niveditha Gowda: ದುಡ್ಡಿನ ಹಿಂದೆ ಹೋದವರು ಯಾರಂತ ಗೊತ್ತಾಗುತ್ತೆ; ಚಂದನ್‌ಗೆ ನಮ್ಮ ಸಪೋರ್ಟ್‌ ಎಂದ ಪ್ರಶಾಂತ್‌ ಸಂಬರಗಿ!

assault Case in Bengaluru
ಬೆಂಗಳೂರು28 mins ago

Assault case : ಮೊದಲನೇ ಹೆಂಡ್ತಿ ಮಕ್ಕಳೊಂದಿಗೆ ಬಂದು 2ನೇ ಹೆಂಡ್ತಿಗೆ ರಕ್ತ ಬರುವಂತೆ ಬಾರಿಸಿದ ಭೂಪ

Puja Tomar
ಕ್ರೀಡೆ43 mins ago

Puja Tomar: ಯುಎಫ್​ಸಿ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಪೂಜಾ ತೋಮರ್

road Accident
ಕಲಬುರಗಿ1 hour ago

Road Accident : ಟೆಂಪೋ ಪಲ್ಟಿ; ಓವರ್‌ಟೇಕ್‌ ಧಾವಂತಕ್ಕೆ ಕಾರ್ಮಿಕ ಸಾವು, ಮತ್ತೋರ್ವ ಗಂಭೀರ

Modi 3.0 Cabinet
ದೇಶ1 hour ago

Modi 3.0 Cabinet: ರಾಜ್ಯದಿಂದ ಜೋಶಿ, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿಗೆ ಸಚಿವ ಸ್ಥಾನ; ಡಾ. ಮಂಜುನಾಥ್‌ಗೆ ಇಲ್ಲ ಅವಕಾಶ

Gold Rate Today
ಚಿನ್ನದ ದರ1 hour ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಬೆಲೆ ಗಮನಿಸಿ

Maharaj Movie Objects by Bajrang Dal Starring Junaid Khan
ಬಾಲಿವುಡ್1 hour ago

Maharaj Movie: ಹಿಂದು ಧರ್ಮ, ಶ್ರೀಕೃಷ್ಣನ ಅವಹೇಳನ; ಆಮೀರ್ ಖಾನ್ ಪುತ್ರನಿಗೆ ಬಜರಂಗದಳ ವಾರ್ನಿಂಗ್!

Electric shock
ಬೆಂಗಳೂರು ಗ್ರಾಮಾಂತರ1 hour ago

Electric shock : ಬಟ್ಟೆ ಒಣ ಹಾಕಲು ಹೋದಾಗ ಕರೆಂಟ್‌ ಶಾಕ್‌ನಿಂದ ವಿದ್ಯಾರ್ಥಿ ಸಾವು

JEE Advanced Result 2024
ಶಿಕ್ಷಣ2 hours ago

JEE Advanced 2024 Result: ಜೆಇಇ ಅಡ್ವಾನ್ಸ್ಡ್‌ ಫಲಿತಾಂಶ ಪ್ರಕಟ; ರಿಸಲ್ಟ್‌ ಹೀಗೆ ಚೆಕ್‌ ಮಾಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌