Mind- Body Nexus: ದೇಹ-ಮನಸ್ಸುಗಳು ಬೇರೆಯಲ್ಲ, ಅಖಂಡ; ಹೊಸ ಅಧ್ಯಯನ - Vistara News

ಆರೋಗ್ಯ

Mind- Body Nexus: ದೇಹ-ಮನಸ್ಸುಗಳು ಬೇರೆಯಲ್ಲ, ಅಖಂಡ; ಹೊಸ ಅಧ್ಯಯನ

Mind- Body Nexus: ಮೆದುಳಿನ ಜೈವಿಕ ಲೆಕ್ಕಾಚಾರದ ಕಾರ್ಯಗಳ ಒಟ್ಟು ಮೊತ್ತವನ್ನೇ ʻಮನಸ್ಸುʼ ಎನ್ನಬಹುದು. ಈ ಹಿನ್ನೆಲೆಯಲ್ಲಿ, ಮೆದುಳು ಮಾತ್ರವಲ್ಲದೆ, ʻಮನಸ್ಸುʼ ಮತ್ತು ದೇಹದ ಹೊಂದಾಣಿಕೆಯ ಬಗ್ಗೆ ಈಗಿನ ಅಧ್ಯಯನ ಹೆಚ್ಚಿನ ವಿಷಯ ತಿಳಿಸುತ್ತದೆ.

VISTARANEWS.COM


on

Body-minds are not separate, are same, Says new study
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾನವನ ಮೆದುಳು ಅಥವಾ ಮನಸ್ಸು ಮತ್ತು ದೇಹದ ನಡುವಿನ ನಂಟಿನ ಬಗೆಗಿನ ಕುತೂಹಲಕ್ಕೆ ಕೊನೆಯೇ ಇಲ್ಲ. ಅರಿಸ್ಟಾಟಲ್‌ನಿಂದ ಹಿಡಿದು ಆಧುನಿಕ ಕಾಲದ ತತ್ವಜ್ಞಾನಿಗಳವರೆಗೆ, ವಿಜ್ಞಾನಿಗಳವರೆಗೆ ಎಲ್ಲರಿಗೂ ಚಕ್ರವ್ಯೂಹದಂಥ ಮೆದುಳಿನ ಬಗ್ಗೆ ಅದರ ಕಾರ್ಯವ್ಯಾಪ್ತಿಯ ಬಗ್ಗೆ ಚೋದ್ಯ ಹೆಚ್ಚುತ್ತಲೇ ಇದೆ. ಇತ್ತೀಚೆಗಿನ ಸಂಶೋಧನೆಯೊಂದು ಮೆದುಳಿನ ಅಥವಾ ಮನಸ್ಸಿನ ನಂಟು (Mind- body nexus) ದೇಹದೊಂದಿಗೆ ಹೇಗಿದೆ ಎಂಬ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದೆ.

ಮೆದುಳಿನ ಮೋಟರ್‌ ಕಾರ್ಟೆಕ್ಸ್‌ ಎಂಬ ಭಾಗದ ಕ್ಯಾರ್ಯವ್ಯಾಪ್ತಿಯ ಮೇಲೆ ಹೆಚ್ಚಿನ ಸಂಶೋಧನೆ ನಡೆಸಿರುವ ವಿಜ್ಞಾನಿಗಳು, ಈವರೆಗೆ ತಿಳಿದಿದ್ದಕ್ಕಿಂತ ಇನ್ನಷ್ಟು ಹೊಸ ವಿಷಯಗಳನ್ನು ಅರಿತುಕೊಂಡಿದ್ದಾರೆ. ಮುಖ, ಕೈ, ಕಾಲು ಸೇರಿದಂತೆ ದೇಹದ ಹಲವಾರು ಭಾಗಗಳ ಚಲನೆಯ ಒಡೆತನವು ಮೆದುಳಿನ ಈ ಮೋಟರ್‌ ಕಾರ್ಟೆಕ್ಸ್‌ ಭಾಗದ ಮೇಲಿತ್ತು. ಆದರೆ ಅದಷ್ಟೇ ಅಲ್ಲ, ಯೋಚನೆ, ಯೋಜನೆ, ನೋವು ಮತ್ತಿತರ ಭಾವನೆಗಳು, ರಕ್ತದೊತ್ತಡ ಮತ್ತು ಎದೆ ಬಡಿತವನ್ನೂ ಇದೇ ಭಾಗ ನಿರ್ವಹಿಸುತ್ತದೆ (Mind- body nexus) ಎನ್ನುವ ವಿಷಯ ಪತ್ತೆಯಾಗಿದೆ.

ಮೋಟರ್‌ ಕಾರ್ಟೆಕ್ಸ್‌ ಒಳಗಿನ ಒಂದು ಮಡಿಕೆಯ ಗೆಣ್ಣಿನಲ್ಲಿ ಸುಪ್ತವಾಗಿರುವ ಈ ಭಾಗವನ್ನು ಶಾರೀರಿಕ ಅರಿವಿನ ಕ್ರಿಯಾ ಜಾಲ (Somato-cognitive action network) ಎಂದು ವಿಜ್ಞಾನಿಗಳು ಕರೆದಿದ್ದಾರೆ. ದೇಹದ ಕ್ರಿಯಾ ಯೋಜನೆಗಳನ್ನು, ಅಂದರೆ ಯೋಜನೆಗಳನ್ನು ರೂಪಿಸುವ ಮತ್ತು ಗುರಿ ಹೊಂದುವಂಥ ಕೆಲಸಗಳನ್ನು ನಿರ್ವಹಿಸಲು ಅಗತ್ಯವಾದ ಕೆಲಸಗಳನ್ನು ಮೆದುಳಿನ ಈ ಭಾಗ ನಡೆಸುತ್ತದೆ. ಮೆದುಳಿನ ಹೊರಭಾಗದ ಸೆರೆಬ್ರೆಲ್‌ ಕಾರ್ಟೆಕ್ಸ್‌ನ ಒಂದು ಭಾಗ ಈ ಮೋಟರ್‌ ಕಾರ್ಟೆಕ್ಸ್‌.

ಮಂಗಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ, ಮೆದುಳಿನ ಈ ಭಾಗವು ಹೊಟ್ಟೆ, ಅಡ್ರಿನಲ್‌ ಗ್ರಂಥಿ ಸೇರಿದಂತೆ ದೇಹದ ಆಂತರಿಕ ಅಂಗಗಳ ಮೇಲೆಯೂ ಕೆಲವು ವಿಷಯಗಳಲ್ಲಿ ಹಿಡಿತ ಹೊಂದಿದ್ದು ಕಂಡುಬಂದಿದೆ. ಬೆವರುವುದು, ಎದೆಬಡಿತ ಹೆಚ್ಚಿಸುವುದು ಮುಂತಾದ ಪ್ರತಿಕ್ರಿಯೆಗಳನ್ನು ಇದು ನಿರ್ವಹಿಸುತ್ತದೆ. “ಮಾನದ ದೇಹದ ಚಲನೆಗಳ ಕೇಂದ್ರ ಕೇವಲ ಒಂದೇ ಅಲ್ಲ. ಇದಕ್ಕೆ ಎರಡು ಪ್ರತ್ಯೇಕ ನಿಯಂತ್ರಣ ಕೇಂದ್ರಗಳಿವೆ. ನಮ್ಮ ಕೈ, ಮುಖ ಮತ್ತು ಕಾಲುಗಳ ಚಲನೆಗೆ ಕಾರಣವಾಗುವಂಥದ್ದು ಒಂದು. ಇದರಿಂದ ಬರೆಯುವುದು, ಮಾತಾಡುವುದು ಮುಂತಾದ ಕೆಲಸಗಳು ನಡೆಯುತ್ತವೆ. ಅಂದರೆ ಇದರಲ್ಲಿ ಕೇವಲ ಒಂದು ಕೆಲಸ ಒಮ್ಮೆಲೆ ಆಗುತ್ತದೆ. ಇನ್ನೊಂದು- ಒಂದಕ್ಕಿಂತ ಹೆಚ್ಚು ಕೆಲಸಗಳು ಒಟ್ಟಿಗೆ ಜರುಗುವಂಥ ಏಕೀಕೃತವಾದ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಉನ್ನತ ಮಟ್ಟದ ಯೋಜನೆ ಮತ್ತು ಯೋಜನೆಗಳೂ ಇಲ್ಲಿ ನಡೆಯುತ್ತವೆ” ಎಂಬುದು ಈ ಅಧ್ಯಯನದಲ್ಲಿ ಪಾಲ್ಗೊಂಡ ತಜ್ಞರ ಅಭಿಮತ.

ಇದನ್ನೂ ಓದಿ: World Liver Day: ಯಕೃತ್ತಿನ ಕ್ಷೇಮದಲ್ಲಿದೆ ಆರೋಗ್ಯದ ಸೂತ್ರ

ಅಧ್ಯಯನದ ಕೆಲವು ವಿವರಗಳನ್ನು ಹೇಳುವುದಾದರೆ, ಮೆದುಳಿನ ಜೈವಿಕ ಲೆಕ್ಕಾಚಾರದ ಕಾರ್ಯಗಳ ಒಟ್ಟು ಮೊತ್ತವನ್ನೇ ʻಮನಸ್ಸುʼ ಎನ್ನಬಹುದು. ಆಧುನಿಕ ನರವಿಜ್ಞಾನದಲ್ಲಿ ಮನಸ್ಸು-ದೇಹದ ಸಂವಹನದ ಬಗ್ಗೆ ಹೆಚ್ಚಿನ ಸಂವಾದಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ, ಮೆದುಳು ಮಾತ್ರವಲ್ಲದೆ, ಮನಸ್ಸು ಮತ್ತು ದೇಹದ ಹೊಂದಾಣಿಕೆಯ ಬಗ್ಗೆ ಈಗಿನ ಅಧ್ಯಯನ ಹೆಚ್ಚಿನ ವಿಷಯ ತಿಳಿಸುತ್ತದೆ. ಅದರಲ್ಲೂ, ಅಸಂಬದ್ಧ ಅಥವಾ ಸುಸಂಬದ್ಧ ಯೋಚನೆ-ಯೋಜನೆಗಳು, ಪ್ರೇರಣೆಯಂಥ ಸಂಪೂರ್ಣ ಮಾನಸಿಕ ಮಟ್ಟದ್ದೇ ಆದ ವಿಷಯಗಳು ಮತ್ತು ಇದಕ್ಕೆ ದೇಹ ಸ್ಪಂದಿಸುವ ರೀತಿಯ ಬಗ್ಗೆ ಬಹಳಷ್ಟು ವಿಷಯಗಳು ಈಗ ಬಹಿರಂಗಗೊಂಡಿವೆ. ದೇಹ ಮತ್ತು ಮನಸ್ಸು ಒಂದಕ್ಕೊಂದು ಭಿನ್ನವಾದದ್ದಲ್ಲ (Mind-body nexus) ಎಂಬ ವಾದಕ್ಕೆ ಈಗ ಪುಷ್ಟಿ ದೊರೆಯುವ ಹಂತದಲ್ಲಿದೆ.

ಇದಕ್ಕಾಗಿ ನವಜಾತ ಶಿಶುಗಳಿಂದ ಹಿಡಿದು, ವಯಸ್ಕರವರೆಗೆ ಹಲವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅದರಲ್ಲೂ ನವಜಾತ ಶಿಶುಗಳಲ್ಲಿ ಶಾರೀರಿಕ ಅರಿವಿನ ಕ್ರಿಯಾ ಜಾಲ ಇನ್ನೂ ಬಲಿತಿಲ್ಲದಿರುವುದು ಕಂಡುಬಂದಿದೆ. ಹತ್ತು ವರ್ಷದೊಳಗಿನ ಮಕ್ಕಳಲ್ಲೂ ಈ ಜಾಲ, ವಯಸ್ಕರಲ್ಲಿದ್ದಂತೆ ಹೆಚ್ಚಿನ ಪ್ರವರ್ಧಮಾನವನ್ನು ತೋರಿಸಿಲ್ಲ.

“ಮೆದುಳಿನ ಉದ್ದೇಶದ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ. ನಮ್ಮ ಸುತ್ತಲಿನ ಜಗತ್ತನ್ನು ಅರಿತು, ವಿ‍ಶ್ಲೇಷಿಸುವುದು ಮೆದುಳಿನ ಉದ್ದೇಶ ಎಂದು ಕೆಲವು ನರಶಾಸ್ತ್ರಜ್ಞರು ವಿವರಿಸುತ್ತಾರೆ. ಆದರೆ ಇನ್ನೂ ಹಲವರ ಪ್ರಕಾರ, ಯಾವುದೇ ಒಂದು ಸನ್ನಿವೇಶದಲ್ಲಿ ಉಳಿಯುವ ಮತ್ತು ವಿಕಾಸ ಹೊಂದುವ ಅತ್ತ್ಯುತ್ತಮ ಮಾರ್ಗವನ್ನು ನಮ್ಮ ಶಾರೀರಿಕ ಕ್ರಿಯೆ ಮತ್ತು ಬೌಧ್ಧಿಕ ನಡವಳಿಕೆಯ ಮೂಲಕ ತೋರ್ಪಡಿಸುವುದು ಮೆದುಳಿನ ಉದ್ದೇಶ. ಈ ಎರಡೂ ಸರಿಯೆಂದೇ ತೋರುತ್ತದೆ” ಎಂಬುದು ಅಧ್ಯಯನಕಾರರ ಮಾತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!

ಪುಟ್ಟ ಚೆರ್ರಿಗಳನ್ನು ತಿನ್ನುವುದರ ಲಾಭಗಳು (Benefits Of Cherries) ಬಹಳಷ್ಟಿವೆ. ಮೈಕೈ ನೋವು ಮಾಯ ಮಾಡುವುದರಿಂದ ಹಿಡಿದು, ಹೃದಯದ ಆರೋಗ್ಯ ಕಾಪಾಡುವವರೆಗೆ ಇದರ ಸಾಮರ್ಥ್ಯವಿದೆ. ಇದಲ್ಲದೆ ಇನ್ನೂ ಏನೇನು ಲಾಭಗಳಿವೆ ಚೆರ್ರಿ ತಿನ್ನುವುದರಿಂದ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

VISTARANEWS.COM


on

Benefits Of Cherries
Koo

ಯಾವುದೇ ಕೇಕ್‌ ಮೇಲೆ ಅಥವಾ ಸೋಡಾದಲ್ಲಿ ಕೂತು ಕರೆಯುವ ಚೆರ್ರಿಯನ್ನು ನೋಡಿ ತಿನ್ನಲು ಆಸೆ ಪಡುವವರು ಎಷ್ಟೋ ಮಂದಿ. ಕೆಲವೊಮ್ಮೆ ಸಕ್ಕರೆಭರಿತ ಕೃತಕ ಚೆರ್ರಿಗಳು ಕೇಕ್‌ಗಳನ್ನು ಅಲಂಕರಿಸಿದರೆ, ಹಲವು ಬಾರಿ ನಿಜವಾದ ಚೆರ್ರಿ ಹಣ್ಣುಗಳೇ ಕೂತು, ತಿನ್ನುವವರ ನಡುವೆ ಜಗಳ ಸೃಷ್ಟಿಸುತ್ತವೆ. ವಿಶ್ವದೆಲ್ಲೆಡೆ ದೊರೆಯುವ ಚೆರ್ರಿಗಳನ್ನು ಗಮನಿಸಿದರೆ ನೂರಾರು ಬಗೆಗಳಿವೆ. ಆದರೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ದೊರೆಯುವುದು ಬಿಂಗ್‌ ಚೆರ್ರಿ. ಕಡುಕೆಂಪು ಬಣ್ಣದ ಸಿಹಿಯಾದ ಚೆರ್ರಿಗಳಿವು. ಇದೊಂದೇ ಅಲ್ಲ, ಹುಳಿಯಾದ ಟಾರ್ಟ್‌ ಚೆರ್ರಿ, ರೇನರ್‌ ಚೆರ್ರಿ, ಕಪ್ಪು ಚೆರ್ರಿ, ತುಸು ಕೆಂಪು ಬಣ್ಣದ್ದು, ಅಚ್ಚ ಕೆಂಪು ಬಣ್ಣದ್ದು- ಹೀಗೆ ನಾನಾ ರೀತಿಯ ಚೆರ್ರಿಗಳು ಪ್ರಾಂತ್ಯಾವಾರ ಭಿನ್ನತೆಯೊಂದಿಗೆ ಲಭ್ಯವಿವೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೇನು ಲಾಭಗಳಿವೆ (Benefits Of Cherries) ಎಂಬುದನ್ನು ನೋಡೋಣ.

Cherries Fruits You Can Easily Grow In Your Home Garden

ಸತ್ವಗಳೇನು?

ನೂರು ಗ್ರಾಂ ಚೆರ್ರಿಯಲ್ಲಿ ಇರುವಂಥ ಸತ್ವಗಳನ್ನು ಗಮನಿಸಿದರೆ- ಇದರಿಂದ ಸುಮಾರು 97 ಕ್ಯಾಲರಿ ಶಕ್ತಿ ದೊರೆಯುತ್ತದೆ. ಪ್ರೊಟೀನ್-‌ 2 ಗ್ರಾಂ, ಪಿಷ್ಟ- 26 ಗ್ರಾಂ, ಸಕ್ಕರೆ- 20 ಗ್ರಾಂ, ನಾರು- 3 ಗ್ರಾಂ, ವಿಟಮಿನ್‌ ಸಿ- 18%, ಪೊಟಾಶಿಯಂ- 10%, ತಾಮ್ರ ಮತ್ತು ಮೆಗ್ನೀಶಿಯಂ- 5% ಮುಂತಾದವು. ಕಪ್ಪು ಮತ್ತು ಕಡುಕೆಂಪು ಬಣ್ಣದಿಂದ ಹಿಡಿದು ಹಳದಿ ಬಣ್ಣದವರೆಗೆ ಚೆರ್ರಿಯ ವರ್ಣಗಳು ಭಿನ್ನವಾಗಿವೆ. ಎಲ್ಲವೂ ಆರೋಗ್ಯಕ್ಕೆ ಒಳ್ಳೆಯವೇ ಆದರೂ ವರ್ಣ ಗಾಢವಾದಷ್ಟೂ ಅದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು ಎಂದು ಹೇಳಬಹುದು.

Pain in knee joint inflammation on gray background Lemon Water Benefits

ಉರಿಯೂತ ಶಾಮಕ

ಬಣ್ಣ ಯಾವುದೇ ಆದರೂ, ಚೆರ್ರಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿವೆ. ಇದರಲ್ಲಿ ಪಾಲಿಫೆನಾಲ್‌ಗಳು ಹೇರಳವಾಗಿವೆ. ಮುಕ್ತ ಕಣಗಳಿಂದ ದೇಹದ ಕೋಶಗಳಿಗೆ ಹಾನಿಯಾಗುವುದನ್ನು ತಪ್ಪಿಸಬಲ್ಲಂಥ ಸಸ್ಯಜನ್ಯ ರಾಸಾಯನಿಕಗಳಿವು. ಕೆಲವು ರೀತಿಯ ಕ್ಯಾನ್ಸರ್‌ಗಳಿಂದ ಹಿಡಿದು, ಹೃದಯದ ತೊಂದರೆಗಳು, ಮಧುಮೇಹದವರೆಗೆ ಮಾರಕ ರೋಗಗಳ ದಾಳಿಯಿಂದ ಶರೀರವನ್ನು ಕಾಪಾಡುವಂಥವು. ಜೊತೆಗೆ ಇದರಲ್ಲಿರುವ ಕೆರೊಟಿನಾಯ್ಡ್‌ಗಳು ಸಹ ಉರಿಯೂತ ನಿವಾರಣೆ ಮಾಡುವಂಥ ಸಾಮರ್ಥ್ಯವನ್ನು ಹೊಂದಿವೆ.

ಶೀಘ್ರ ಚೇತರಿಕೆ

ಕಠಿಣವಾದ ದೇಹಶ್ರಮ ಇಲ್ಲವೇ ವ್ಯಾಯಾಮದ ನಂತರ ಕಾಣಿಸಿಕೊಳ್ಳುವ ಸ್ನಾಯುಗಳ ನೋವಿನಿಂದ ಚೆರ್ರಿಗಳು ಶೀಘ್ರ ಚೇತರಿಕೆ ನೀಡುತ್ತವೆ. ಸ್ನಾಯುಗಳ ನೋವು, ಊತದಿಂದ ಬೇಗ ಉಪಶಮನ ಒದಗಿಸುತ್ತವೆ. ಈ ಕೆಲಸಕ್ಕೆ ಟಾರ್ಟ್‌ ಚೆರ್ರಿಯನ್ನು ವಿಶೇಷವಾಗಿ ಉಪಯೋಗಿಸಲಾಗುತ್ತದೆ. ಸಿಹಿ ಚೆರ್ರಿಗಳಿಗಿಂತ ಕೊಂಚ ಹುಳಿಯಾದ ಚೆರ್ರಿಯಲ್ಲಿ ಈ ಸಾಮರ್ಥ್ಯ ಹೆಚ್ಚು ಎನ್ನಲಾಗುತ್ತದೆ. ಇದನ್ನು ಮ್ಯಾರಥಾನ್‌ ಓಡುವವರು, ಸೈಕ್ಲಿಸ್ಟ್‌ಗಳಂಥ ಕ್ರೀಡಾಳುಗಳು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಅವರು ಮಾತ್ರವೇ ಅಲ್ಲ, ಸಾಮಾನ್ಯರು ಸಹ ಹುಳಿ ಚೆರ್ರಿಯನ್ನು ಚೇತರಿಕೆಗಾಗಿ ಬಳಸಬಹುದು.

Heart Health Fish Benefits

ಹೃದಯದ ಸ್ನೇಹಿತ

ಪೊಟಾಶಿಯಂ ಭರಪೂರ ಇರುವಂಥ ಹಣ್ಣಿದು. ರಕ್ತದೊತ್ತಡ ನಿರ್ವಹಣೆಯಲ್ಲಿ ಪೊಟಾಶಿಯಂ ಪಾತ್ರ ಹಿರಿದು. ದೇಹಕ್ಕೆ ಹೊರೆಯಾಗಿರುವ ಸೋಡಿಯಂ ಅಂಶವನ್ನು ಹೊರಹಾಕಲು ಪೊಟಾಶಿಯಂ ಅಗತ್ಯ. ದಿನವೊಂದಕ್ಕೆ ದೇಹಕ್ಕೆ ಬೇಕಾದ ಶೇ. ೧೦ ಪೊಟಾಶಿಯಂ ಒಂದು ಕಪ್‌ ಚೆರ್ರಿಯಿಂದ ದೊರೆಯುತ್ತದೆ. ಜೊತೆಗೆ, ಇದರಲ್ಲಿರುವ ಪಾಲಿಫೆನಾಲ್‌ಗಳು, ಆಂಥೋಸಯನಿನ್‌ಗಳು ಮತ್ತು ಫ್ಲೆನಾಲ್‌ಗಳು ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಕೆಲಸ ಮಾಡುತ್ತವೆ.

Image Of Anti Infective Foods

ಆರ್ಥರೈಟಿಸ್‌ ನೋವು ಶಮನ

ದೇಹದಲ್ಲಿ ಉರಿಯೂತ ಹೆಚ್ಚಿದಾಗ ಕಾಡುವ ರೋಗಗಳಲ್ಲಿ ಆರ್ಥರೈಟಿಸ್‌ ಸಹ ಒಂದು. ಶರೀರದಲ್ಲಿ ಯೂರಿಕ್‌ ಆಮ್ಲದ ಜಮಾವಣೆ ಹೆಚ್ಚಿ ಕಾಡುವಂಥದ್ದು ಗೌಟ್‌ ಆರ್ಥರೈಟಿಸ್‌. ಇವುಗಳ ನೋವು ಶಮನಕ್ಕೆ ಚೆರ್ರಿ ಸೇವನೆಯು ನೆರವು ನೀಡುತ್ತದೆ. ದೇಹದಲ್ಲಿ ಯೂರಿಕ್‌ ಆಮ್ಲ ಜಮೆಯಾಗುವುದನ್ನು ಚೆರ್ರಿ ಕಡಿಮೆ ಮಾಡುತ್ತದೆ. ಇದಲ್ಲದೆ, ಉಳಿದ ನೋವುಗಳ ಶಮನಕ್ಕೂ ಚೆರ್ರಿ ಸಹಕಾರಿ ಎನ್ನುತ್ತದೆ ಹಲವು ಅಧ್ಯಯನಗಳು.

Mouth Sleeping

ನಿದ್ದೆಗೆ ಪೂರಕ

ಚೆರ್ರಿಯಲ್ಲಿ ಮೆಲಟೋನಿನ ಅಂಶವಿದೆ. ಇದು ನಿದ್ರೆಯನ್ನು ಗಾಢವಾಗಿಸುತ್ತದೆ. ಜೊತೆಗೆ ನಿದ್ದೆಗೊಂದು ಸಮಯವನ್ನು ನಿಗದಿ ಮಾಡುವ ಸನ್ನಾಹದಲ್ಲಿದ್ದರೆ, ಚೆರ್ರಿ ತಿನ್ನುವುದು ಸೂಕ್ತವಾದದ್ದು. ಇದರಿಂದ ನಿದ್ದೆಯಲ್ಲಿ ಆಗಾಗ ಎಚ್ಚರಾಗುವುದು, ಕಡಿಮೆ ನಿದ್ದೆ, ಸೂಕ್ಷ್ಮ ನಿದ್ದೆಯಂಥ ತೊಂದರೆಗಳು ಮಾಯವಾಗಿ, ಗಡದ್ದಾಗಿ ರಾತ್ರಿ ಮಲಗಿ ಬೆಳಗ್ಗೆ ಎಚ್ಚರಾಗುವಂತೆ ಮಾಡುತ್ತದೆ.

Continue Reading

ಬಳ್ಳಾರಿ

Bellary VIMS Hospital : ಲೇಡಿ ಡಾಕ್ಟರ್‌ ಜುಟ್ಟು ಹಿಡಿದು ಎಳೆದಾಡಿ ಹೊಡೆದ; ವಿಮ್ಸ್‌ ಆಸ್ಪತ್ರೆಯಲ್ಲಿ ದಿಢೀರ್‌ ಪ್ರತಿಭಟನೆ

VIMS Hospital : ತಂದೆ ಸಾವಿನಿಂದ ಸಿಟ್ಟಾದ ವ್ಯಕ್ತಿಯೊಬ್ಬ ವಿಮ್ಸ್‌ ಆಸ್ಪತ್ರೆಯ ವೈದ್ಯೆಗೆ ಹಲ್ಲೆ ನಡೆಸಿದ್ದಾನೆ. ಮಹಿಳಾ ವೈದ್ಯೆಯ ಜುಟ್ಟು ಹಿಡಿದು ಎಳೆದಾಡಿ ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದು, ಇದನ್ನೂ ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳು (Bellary VIMS Hospital) ಪ್ರತಿಭಟಿಸಿದ್ದಾರೆ.

VISTARANEWS.COM


on

By

Bellary VIMS Hospital
Koo

ಬಳ್ಳಾರಿ: ವಿಮ್ಸ್‌ ಆಸ್ಪತ್ರೆಯಲ್ಲಿ (Bellary VIMS Hospital) ಚಿಕಿತ್ಸೆ ಪಡೆಯುತ್ತಿದ್ದ ತಂದೆ ವೈದ್ಯರ ನಿರ್ಲಕ್ಷ್ಯದಿಂದಲೇ (Medical Negligence) ಸಾವನ್ನಪ್ಪಿದ್ದಾರೆ ಎಂದು ಸಿಟ್ಟಾದ ಮಗನೊಬ್ಬ ವಿಮ್ಸ್‌ನ ಮಹಿಳಾ (VIMS Hospital ) ವೈದ್ಯೆ ಮೇಲೆ ಹಲ್ಲೆ (Assault Case) ನಡೆಸಿದ್ದಾನೆ. ವೈದ್ಯೆಯ ತಲೆ ಜುಟ್ಟು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೈದ್ಯೆ ಮೇಲಿನ ಹಲ್ಲೆ ಖಂಡಿಸಿ ಬಳ್ಳಾರಿಯ ವಿಮ್ಸ್ ತುರ್ತು ಚಿಕಿತ್ಸಾ ಘಟಕದ ಮುಂದೆ ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ತಡರಾತ್ರಿ ದಿಢೀರ್ ಪ್ರತಿಭಟಿಸಿದರು. ವೈದ್ಯರ ರಕ್ಷಣೆ ಕೋರಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಗೂಡಾರ್‌ನಗರ ನಾಗೇಶ್ ಎಂಬಾತ ಕರ್ತವ್ಯ ನಿರತ ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾನೆ. ನಾಗೇಶ್‌ನ ತಂದೆ ಅನಾರೋಗ್ಯದಿಂದ ವಿಮ್ಸ್‌ಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ನಾಗೇಶ್‌ ಕರ್ತವ್ಯದಲ್ಲಿದ್ದ ವೈದ್ಯೆ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಸೆಕ್ಯುರಿಟಿ ಸಮಸ್ಯೆಯಿಂದಲೇ ಹೀಗೆ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದೆ. ವಿಮ್ಸ್‌ನಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು. ವಿಷಯ ತಿಳಿಯುತ್ತಿದ್ದಂತೆ ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದ ವಿಮ್ಸ್ ನಿರ್ದೇಶಕ ಡಾ.ಗಂಗಾಧರ‌ಗೌಡ್ ಹಾಗೂ ಕೌಲ್‌ಬಜಾರ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಹಲ್ಲೆ ನಡೆಸಿದವರ ವಿರುದ್ಧ ಕ್ರಮವಹಿಸಲಾಗುವುದು. ಜತೆಗೆ ವಿಮ್ಸ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೆ ಸೂಕ್ತ ರೀತಿಯ ಭದ್ರತೆಯನ್ನು ವಹಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ದಿಢೀರ್‌ ಕೈಗೊಂಡ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ಇದನ್ನೂ ಓದಿ: Election Results 2024: ಜಯನಗರ ಮತ ಎಣಿಕೆ ಕೇಂದ್ರದಲ್ಲಿ ಟಿ ಶರ್ಟ್‌ ಕಿರಿಕ್‌; ಕೆಆರ್‌ಎಸ್ ಪಾರ್ಟಿಯ ಅಭ್ಯರ್ಥಿ ಔಟ್‌

ಪ್ರತ್ಯೇಕ ಕಡೆ‌ ಕರೆಂಟ್‌ ಶಾಕ್‌ಗೆ ಲೈನ್‌ಮ್ಯಾನ್‌ ಸೇರಿ ಹಸು ಬಲಿ

ಉಡುಪಿ/ ಆನೇಕಲ್‌: ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ (Electric shock) ಲೈನ್‌ಮ್ಯಾನ್ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಉಡುಪಿಯ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಅವಘಡ ನಡೆದಿದೆ.

ಲೈನ್ ಮ್ಯಾನ್ ಸಲೀಂ (38) ಮೃತ ದುರ್ದೈವಿ. ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವಾಗ ಶಾಕ್‌ ಹೊಡೆದಿದೆ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕರ್ನಾಟಕದ ಮುಂಡಗೋಡು ನಿವಾಸಿಯಾಗಿರುವ ಸಲೀಂ, ಬೈಂದೂರು ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೈಂದೂರಿನಲ್ಲಿ ಸಲೀಂ ಜನಸ್ನೇಹಿ ಲೈನ್‌ಮ್ಯಾನ್ ಆಗಿದ್ದರು.

ಇದನ್ನೂ ಓದಿ: Road Accident : ಎದುರಿಗೆ ಬಂದ ಬೈಕ್‌ ತಪ್ಪಿಸಲು ಹೋಗಿ ಮಹಿಳೆಗೆ ಗುದ್ದಿದ ಕಾರು; ಎಗರಿ ಬಿದ್ದವಳು ಸ್ಥಳದಲ್ಲೇ ಸಾವು

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೂಕಜೀವಿ ಬಲಿ

ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಮಂಚನಹಳ್ಳಿಯಲ್ಲಿ ವಿದ್ಯುತ್ ಶಾಕ್‌ನಿಂದ ಹಸುವೊಂದು ದಾರುಣವಾಗಿ ಮೃತಪಟ್ಟಿದೆ. ಕರೆಂಟ್ ಶಾಕ್‌ನಿಂದ ಹಸು ಮೃತಪಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕರಗಪ್ಪ ಎಂಬುವವರು ಹಸುಗಳನ್ನ ಮೇಯಿಸಿಕೊಂಡು ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದ ಬಳಿ ಕರೆಂಟ್ ಗ್ರೌಂಡಿಂಗ್ ಆಗಿ ಹಸು ಮೃತಪಟ್ಟಿದೆ. ಇದೇ ರೀತಿ ನಾಲ್ಕೈದು ಹಸುಗಳಿಗೆ ಅದೇ ಜಾಗದಲ್ಲಿ ಗ್ರೌಂಡಿಂಗ್‌ನಿಂದ ಶಾಕ್ ಆಗಿದೆ.

ರೈತನ ಜೀವನಾಧಾರೆಯಾಗಿದ್ದ ಹಸು ಮೃತಪಟ್ಟಿದ್ದಕ್ಕೆ ಜಿಗಣಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಒಂದು ಲಕ್ಷಕ್ಕೂ ಬೆಲೆಬಾಳುವ ಹಸುವನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ. ಬೆಸ್ಕಾಂ ಇಲಾಖೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಕರಗಪ್ಪ ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Benefits Of Litchi: ಸಿಹಿಯಾದ, ರುಚಿಯಾದ ಲಿಚಿ ಹಣ್ಣನ್ನು ತಿಂದರೆ ಆರೋಗ್ಯ ಲಾಭ ಹಲವಾರು

ಬೇಸಿಗೆಯ ಧಗೆಗೆ ಲಿಚಿ ಹಣ್ಣು ನೀಡುವ ತಂಪಾದ ಅನುಭೂತಿ ನೀಡುವ ಹಣ್ಣುಗಳಲ್ಲಿ ಒಂದು. ಹೊರಮೈ ಒರಟಾದರೂ, ಸಿಪ್ಪೆ ಸುಲಿದರೆ ಮೆದುವಾದ ರಸಭರಿತ ರುಚಿಯಾದ ಹಣ್ಣು ನಮ್ಮನ್ನು ಸ್ವಾಗತಿಸುತ್ತದೆ. ಕೇವಲ ರುಚಿಯಲ್ಲಷ್ಟೇ ಅಲ್ಲ, ಪೋಷಕಾಂಶಗಳ ವಿಚಾರದಲ್ಲೂ ಈ ಹಣ್ಣು ಯಾವುದಕ್ಕೂ ಕಡಿಮೆಯಿಲ್ಲ. ಈ ಹಣ್ಣುಗಳ ಸೇವನೆಯಿಂದ ನಮ್ಮ ದೇಹಕ್ಕೆ ಸಿಗುವ ಪ್ರಯೋಜನಗಳೇನು? ಇಲ್ಲಿದೆ (benefits of litchi) ಮಾಹಿತಿ.

VISTARANEWS.COM


on

Benefits Of Litchi
Koo

ಈಗ ಲಿಚಿ ಹಣ್ಣಿನ ಕಾಲ. ರಸ್ತೆಬದಿಯ ಗಾಡಿಗಳಲ್ಲಿ, ಮಾರುಕಟ್ಟೆಯಲ್ಲಿ ಎಲ್ಲೆಲ್ಲೂ ಮಾವಿನಹಣ್ಣಿನ ಜೊತೆ ಲಿಚಿಯದ್ದೇ ಕಾರುಬಾರು. ಬೇಸಿಗೆಯ ಧಗೆಗೆ ಲಿಚಿ ಹಣ್ಣು ನೀಡುವ ತಂಪಾದ ಅನುಭೂತಿ ನೀಡುವ ಹಣ್ಣುಗಳಲ್ಲಿ ಒಂದು. ಹೊರಮೈ ಒರಟಾದರೂ, ಸಿಪ್ಪೆ ಸುಲಿದರೆ ಮೆದುವಾದ ರಸಭರಿತ ರುಚಿಯಾದ ಹಣ್ಣು ನಮ್ಮನ್ನು ಸ್ವಾಗತಿಸುತ್ತದೆ. ಕೇವಲ ರುಚಿಯಲ್ಲಷ್ಟೇ ಅಲ್ಲ, ಪೋಷಕಾಂಶಗಳ ವಿಚಾರದಲ್ಲೂ ಈ ಹಣ್ಣು ಯಾವುದಕ್ಕೂ ಕಡಿಮೆಯಿಲ್ಲ.
ವಿಟಮಿನ್‌ ಸಿ, ವಿಟಮಿನ್‌ ಡಿ, ಮೆಗ್ನೀಶಿಯಂ, ರೈಬೋ ಫ್ಲೇವಿನ್‌, ತಾಮ್ರ, ಪಾಸ್ಪರಸ್‌, ಹಾಗೂ ಭರಪೂರ ನೀರಿನಂಶವನ್ನು ಹೊಂದಿರುವ ಈ ಹಣ್ಣು ಬೇಸಿಗೆಗೆ ಹೇಳಿ ಮಾಡಿಸಿದ ಹಣ್ಣು. ಬನ್ನಿ, ಲಿಚಿ ಮಾರುಕಟ್ಟೆಯಿಂದ ಮರೆಯಾಗುವ ಮೊದಲು ಅದರ ಲಾಭಗಳನ್ನು (benefits of litchi) ತಿಳಿದು ಸೇವಿಸೋಣ.

Litchi Monsoon Fruits

ಸಾಕಷ್ಟು ನಾರಿನಂಶ

ಲಿಚಿಯಲ್ಲಿ ಸಾಕಷ್ಟು ನಾರಿನಂಶವಿದೆ. ಈ ನಾರಿನಂಶವಿರುವುದರಿಂದ ಬಹಳ ಹೊತ್ತು ಹೊಟ್ಟೆ ತುಂಬಿದ ಅನುಭವವಿರುತ್ತದೆ. ಸಂತೃಪ್ತಿಯ ಭಾವನೆ ಇರುವುದರಿಂದ ಆಗಾಗ ಏನಾದರೂ ತಿನ್ನಬೇಕೆಂಬ ಬಯಕೆ ಆಗುವುದಿಲ್ಲ. ಇದರಲ್ಲಿ ಅತಿಯಾದ ನೀರಿನಂಶವಿರುವುದರಿಂದ ತೂಕ ಇಳಿಸಲೂ ಕೂಡಾ ಇದು ನೆರವಾಗುತ್ತದೆ. ದಿನದ ಯಾವುಧೇ ಹೊತ್ತಿನಲ್ಲಿ ಈ ಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದು.

Beauty Skin Care Woman Why Do Our Bodies Need Minerals

ಸೌಂದರ್ಯ ವರ್ಧಕ

ಸೌಂದರ್ಯಕ್ಕೂ ಈ ಹಣ್ಣಿನಿಂದ ಅತ್ಯುತ್ತಮ ಲಾಭವಿದೆ. ಇದರಲ್ಲಿ ವಿಟಮಿನ್‌ ಸಿ ಹೇರಳವಾಗಿ ಇರುವುದರಿಂದ ಚರ್ಮದ ಆರೋಗ್ಯಕ್ಕೆ ಇದು ಒಳ್ಳೆಯದು. ಚರ್ಮ ಸುಕ್ಕಾಗುವುದನ್ನೂ ಇದು ತಡೆಯುತ್ತದೆ. ನಿರಿಗೆಗಳಾಗದಂತೆ ನೋಡಿಕೊಳ್ಳುವ ಇದು ಆಂಟಿ ಏಜಿಂಗ್‌ ಗುಣಗಳನ್ನು ಹೊಂದಿದೆ. ಹೇರಳವಾಗಿ ಆಂಟಿ ಆಕ್ಸಿಡೆಂಟ್‌ ಇದರಲ್ಲಿ ಇರುವುದರಿಂದ ಆಕ್ಸಿಡೇಟಿವ್‌ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ.

Antioxidants in it keep immunity strong Benefits Of Mandakki

ರೋಗ ನಿರೋಧಕ ಶಕ್ತಿ

ಲಿಚಿ ಹಣ್ಣುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್‌ ಸಿ ರೋಗ ನಿರೋಧಕತೆಗೆ ಅತ್ಯಂತ ಅಗತ್ಯವಾದ ಪೋಷಕಾಂಶ.

Blood Pressure

ರಕ್ತದೊತ್ತಡ ಸಮತೋಲನ

ಲಿಚಿಯಲ್ಲಿ ಪೊಟಾಶಿಯಂ ಅಂಶ ಇರುವುದರಿಂದ ಇದು ರಕ್ತದೊತ್ತಡವನ್ನು ಸಮತೋಲನಗೊಳಿಸಲು ನೆರವಾಗುತ್ತದೆ. ರಕ್ತದೊತ್ತಡ ಕಡಿಮೆ ಮಾಡಿ ಸಮತೋಲನಕ್ಕೆ ತರಲು ಇದು ಒಳ್ಳೆಯದು.

healthy internal organs of human digestive system

ಜೀರ್ಣಕ್ರಿಯೆಗೂ ಒಳ್ಳೆಯದು

ಲಿಚಿಯಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಇದು ಜೀರ್ಣಕ್ರಿಯೆಗೂ ಒಳ್ಳೆಯದು. ಮಲಬದ್ಧತೆಯಂತ ಸಮಸ್ಯೆ ಇರುವ ಮಂದಿಗೆ ಲಿಚಿ ಒಳ್ಳೆಯದು. ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗಿ ಬೇಡದ ಅಂಶಗಳು ಸುಲಭವಾಗಿ ದೇಹದಿಂದ ಹೊರಹೋಗಲು ಇದು ಸಹಾಯ ಮಾಡುತ್ತದೆ.
ಆದರೆ, ಲಿಚಿಯ ಬಗ್ಗೆ ಸಾಕಷ್ಟ ತಪ್ಪುತಿಳುವಳಿಕೆಗಳೂ ಇವೆ. ಲಿಚಿ ಸಿಹಿಯಾಗಿರುವುದರಿಂದ ಇದನ್ನು ಹೆಚ್ಚು ತಿನ್ನುವುದು ಒಳ್ಳೆಯದಲ್ಲ ಎಂಬ ಭಾವನೆಯೂ ಇದೆ. ಆದರೆ, ಈ ಜ್ಯೂಸಿಯಾದ ಹಣ್ಣಿನಲ್ಲಿ ಹೆಚ್ಚು ಸಕ್ಕರೆ ಇರುವುದಾದರೂ, ಇದನ್ನು ಬೇಡವೇ ಬೇಡ ಎಂಬಷ್ಟು ದೂರ ತಳ್ಳುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. ಯಾಕೆಂದರೆ, ಇದರಿಂದ ಸಿಗುವ ಅಪರೂಪದ ಪೋ಼ಷಕಾಂಶಗಳಿಗೆ ಇದನ್ನು ಹಿತಮಿತವಾಗಿಯಾದರೂ ಸೇವಿಸುವುದು ಒಳ್ಳೆಯದು ಎನ್ನುತ್ತಾರೆ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಲಿಚಿಯಲ್ಲಿರುವ ವಿಶೇಷ ಗುಣ

ಲಿಚಿಯಲ್ಲಿರುವ ಎಪಿಕ್ಯಾಟೆಚಿನ್‌ ಎಂಬ ಅಂಶವು ಸಾಕಷ್ಟು ಇರುವುದರಿಂದ ಇದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಕ್ಯಾನ್ಸರ್‌ ಹಾಗೂ ಮಧುಮೇಹವನ್ನು ಮೊದಲೇ ನಿಯಂತ್ರಿಸುವ ಗುಣವನ್ನೂ ಹೊಂದಿದೆ. ಅಷ್ಟೇ ಅಲ್ಲ, ಲಿಚಿಯಲ್ಲಿ ಆಲಿಗೋನಲ್‌ ಎಂಬ ವಿಶೇಷವಾದ ಪೋಷಕಾಂಶವಿದ್ದು ಇದು ನೈಟ್ರಿಕ್‌ ಆಕ್ಸೈಡ್‌ನ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ದೇಹದಲ್ಲಿ ನೈಟ್ರಿಕ್‌ ಆಕ್ಸೈಡ್‌ ರಕ್ತನಾಳವನನು ಅಗಲವಾಗಿಸುವ ಗುಣ ಹೊಂದಿದ್ದು ಇದರಂದ ರಕ್ತ ಸಹಜವಾಗಿ ಹರಿಯುತ್ತದೆ. ಲಿಚಿಯಲ್ಲಿ ತಾಮ್ರವೂ ಇರುವುದರಿಂದ ಕೂದಲ ಆರೋಗ್ಯಕ್ಕೆ ಇದು ತನ್ನದೇ ಆ ಕಾಣಿಕೆ ಸಲ್ಲಿಸುತ್ತದೆ. ಕೂದಲ ಬೆಳವಣಿಗೆಗೆ ಇದು ಅತ್ಯಂತ ಒಳ್ಳೆಯದು. ಲಿಚಿಯಲ್ಲಿ ಬಯೋ ಫ್ಲೇವನಾಯ್ಡ್‌ಗಳಾದ ರುಟೀನ್‌ ಎಂಬ ಪಾಲಿ ಫಿನಾಲ್‌ ಇದೆ. ಇದು ರಕ್ತನಾಳವನ್ನು ಗಟ್ಟಿಗೊಳಿಸುತ್ತದೆ. ಈ ಎಲ್ಲ ಕಾರಣಕ್ಕಾಗಿಯಾದರೂ, ಈ ಕಾಲದಲ್ಲಿ ಕೆಲವೇ ಸಮಯ ದೊರೆಯುವ ಲಿಚಿ ಹಣ್ಣನ್ನು ಮರೆಯದೆ ತಿನ್ನಿ.

Continue Reading

ಆರೋಗ್ಯ

Home Remedies For Mosquito Bite: ಸೊಳ್ಳೆ ಕಚ್ಚಿದ ಜಾಗದಲ್ಲಿ ವಿಪರೀತ ಉರಿಯೇ? ಈ ಸರಳ ಮನೆಮದ್ದುಗಳನ್ನು ಬಳಸಿ

ಸಂಜೆಯಾದ ಕೂಡಲೇ ತೆರೆದ ಕಿಟಕಿ ಬಾಗಿಲುಗಳಿಂದ, ಸಂದಿಗೊಂದಿಗಳಿಂದ ನುಸುಳಿ ಸೊಳ್ಳೆಗಳು ಮನೆಯೊಳಗೆ ಬಂದೇ ಬರುತ್ತವೆ. ಬಹಳಷ್ಟು ಸಾರಿ ಸೊಳ್ಳೆ ಕಚ್ಚಿದರೂ ಅಂಥದ್ದೇನೂ ಸಮಸ್ಯೆ ಆಗಲಾರದಾದರೂ, ಕೆಲವೊಮ್ಮೆ ಸೊಳ್ಳೆಯದ ಕಡಿತದಿಂದ ಹಲವು ರೋಗಗಳೂ ಬರುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ, ಸೊಳ್ಳೆ ಕಡಿತದಿಂದ ದೂರವಿರುವುದು ಒಳ್ಳೆಯದು. ಡೆಂಗ್ಯು, ಮಲೇರಿಯಾ, ಚಿಕುನ್‌ಗುನ್ಯ ಸೇರಿದಂತೆ ಹಲವು ಬಗೆಯ, ನಮೂನೆಯ ಜ್ವರಗಳು ಸೊಳ್ಳೆ ಕಡಿತದಿಂದಲೇ ಬರುವುದರಿಂದ ಈ ವಿಚಾರದಲ್ಲಿ ಜಾಗರೂಕತೆ (home remedies for mosquito bite) ಅತ್ಯಂತ ಅಗತ್ಯ.

VISTARANEWS.COM


on

Home Remedies For Mosquito Bite
Koo

ಬೇಸಿಗೆಯ ವಿಪರೀತ ಸೆಖೆ ಎಂದು ತಲೆಕೆಡಿಸಿಕೊಳ್ಳುವ ಮೊದಲೇ ಮಳೆಗಾಲ ಬಂದೇ ಬಿಟ್ಟಿದೆ. ಮಳೆಗಾಲ ಬರುವ ಸಂದರ್ಭ ಸೊಳ್ಳೆಗಳ ಹಾವಳಿ ವಿಪರೀತ. ಈಗಾಗಲೇ ಸಂಜೆಯಾದ ಕೂಡಲೇ ತೆರೆದ ಕಿಟಕಿ ಬಾಗಿಲುಗಳಿಂದ, ಸಂದಿಗೊಂದಿಗಳಿಂದ ನುಸುಳಿ ಸೊಳ್ಳೆಗಳು ಮನೆಯೊಳಗೆ ಬಂದೇ ಬರುತ್ತವೆ. ಬಹಳಷ್ಟು ಸಾರಿ ಸೊಳ್ಳೆ ಕಚ್ಚಿದರೂ ಅಂಥದ್ದೇನೂ ಸಮಸ್ಯೆ ಆಗಲಾರದಾದರೂ, ಕೆಲವೊಮ್ಮೆ ಸೊಳ್ಳೆಯದ ಕಡಿತದಿಂದ ಹಲವು ರೋಗಗಳೂ ಬರುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ, ಸೊಳ್ಳೆ ಕಡಿತದಿಂದ ದೂರವಿರುವುದು ಒಳ್ಳೆಯದು. ಡೆಂಗ್ಯು, ಮಲೇರಿಯಾ, ಚಿಕುನ್‌ಗುನ್ಯ ಸೇರಿದಂತೆ ಹಲವು ಬಗೆಯ, ನಮೂನೆಯ ಜ್ವರಗಳು ಸೊಳ್ಳೆ ಕಡಿತದಿಂದಲೇ ಬರುವುದರಿಂದ ಈ ವಿಚಾರದಲ್ಲಿ ಜಾಗರೂಕತೆ ಅತ್ಯಂತ ಅಗತ್ಯ. ಇನ್ನೂ ಕೆಲವರಿಗೆ ಸಾಮಾನ್ಯ ಸೊಳ್ಳೆ ಕಚ್ಚಿದರೂ, ಉರಿ, ಕಜ್ಜಿ, ಕೆಂಪು ಗುಳ್ಳೆಗಳಾಗುತ್ತದೆ. ಅಲ್ಲಿ ತುರಿಕೆ, ನೋವು ಇತ್ಯಾದಿಗಳೂ ಆಗುತ್ತವೆ. ಹಾಗಾಗಿ, ಸೊಳ್ಳೆ ಕಡಿತವಾದ ಮೇಲೆ ಆಗುವ ಇಂಥ ಪರಿಣಾಮಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದುಕೊಂಡರೆ, ಮನೆಯಲ್ಲೇ ಮಾಡಿಕೊಳ್ಳಬಹುದಾದ ಕೆಲವು ಉಪಾಯಗಳಿವೆ. ಬನ್ನಿ ಸೊಳ್ಳೆ ಕಚ್ಚಿದ ಉರಿ, ಕೆಂಪುಗುಳ್ಳೆಯ ಶಮನಕ್ಕೆ ಏನು ಪರಿಹಾರಗಳಿವೆ (home remedies for mosquito bite) ಎಂಬುದನ್ ನೋಡೋಣ.

Ice cube

ಐಸ್‌ ಕ್ಯೂಬ್‌

ಐಸ್‌ ಕ್ಯೂಬ್‌ ಯಾವಾಗಲೂ ಚರ್ಮದ ಮೇಲೆ ಆಗುವ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ತುರಿಕೆಯಾಗುತ್ತಿದ್ದರೆ, ಅಲ್ಲಿ ಉರಿಯಾಗುತ್ತಿದ್ದರೆ, ಐಸ್‌ ಕ್ಯೂಬ್‌ ಇಡುವುದರಿಂದ ಈ ನೋವು ಶಮನವಾಗುತ್ತದೆ. ಉರಿಯ ತೀವ್ರತೆ ಹತೋಟಿಗೆ ಬರುತ್ತದೆ.

Aloe vera leaf and aloevera gel on wood table

ಆಲೋವೆರಾ

ಚರ್ಮದ ಏನೇ ಸಮಸ್ಯೆಗಳಿದ್ದರೂ ಆಲೋವೆರಾದಲ್ಲಿ ಉತ್ತರವಿದೆ. ಸೂರ್ಯನ ಬಿಸಿಲಿಗೆ ಸುಟ್ಟ ಚರ್ಮವಿರಬಹುದು, ಸೊಳ್ಳೆ ಕಚ್ಚಿದ ಗುಳ್ಳೆಗಳಿರಬಹುದು, ಅಥವಾ ಮೊಡವೆ, ಕಪ್ಪು ಕಲೆಗಳಿರಬಹುದು, ಅಲೋವೆರಾ ಇಂತಹ ಸಮಸ್ಯೆಗಳಿಗೆಲ್ಲ ರಾಮಬಾಣವೇ. ಸೊಳ್ಳೆ ಕಚ್ಚಿದ ಜಾಗಕ್ಕೆ ಅಲೋವೆರಾ ಜೆಲ್‌ ಲೇಪಿಸಿ. ತಂಪಾದ ಅನುಭವವಾಗುತ್ತದೆ. ಅಷ್ಟೇ ಅಲ್ಲ, ಒಡನೆಯೇ ಉರಿ, ನೋವು ಹತೋಟಿಗೆ ಬರುತ್ತದೆ. ಮಕ್ಕಳಿಗೂ ಸಲಭವಾಗಿ ಮಾಡಬಹುದಾದ ಉಪಾಯ ಇದು.

honey

ಜೇನುತುಪ್ಪ

ಚರ್ಮಕ್ಕೆ ಒಳ್ಳೆಯದು ಮಾಡುವ ಗುಣ ಜೇನುತುಪ್ಪದಲ್ಲಿದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್‌ ಹಾಗೂ ಆಂಟಿ ಇನ್‌ಫ್ಲಮೇಟರಿ ಗುಣಗಳಿಂದ ಇದೂ ಕೂಡಾ ಸೊಳ್ಳೆ ಕಚ್ಚಿದ ಗಾಯಕ್ಕೆ ಒಳ್ಳೆಯ ಮನೆಮದ್ದು. ಸೊಳ್ಳೆ ಕಚ್ಚಿದ ಜಾಗದಲ್ಲಿ ಎದ್ದ ದದ್ದಿನ ಮೇಲೆ ಜೇನುತುಪ್ಪ ಹಚ್ಚಿ ನೋಡಿ. ಉರಿ ಹಾಗೂ ದದ್ದು ಎರಡೂ ಕಡಿಮೆಯಾಗುತ್ತದೆ.

Tulsi Leaves

ತುಳಸಿ

ಪ್ರತಿಮನೆಯಲ್ಲೂ ಇರುವ ತುಳಸಿಯಿಂದ ಮಳೆಗಾಲದಲ್ಲಿ ಸಾಕಷ್ಟು ಪ್ರಯೋಜನಗಳಿವೆ. ಶೀತ, ನೆಗಡಿ, ಕೆಮ್ಮುಗಳ ಜೊತೆಗೆ, ಇಂಥ ಕಜ್ಜಿ, ತುರಿಕೆ ಗಾಯಗಳಿಗೂ ತುಳಸಿಯಲ್ಲಿ ಉತ್ತರವಿದೆ. ಸೊಳ್ಳೆ ಕಚ್ಚಿದ ಜಾಗಕ್ಕೆ ತುಳಸಿ ರಸ ಹಚ್ಚಿದರೆ ಸಾಕು, ಉರಿಯೂತ ಕಡಿಮೆಯಾಗುತ್ತದೆ.

Onion Benefits

ಈರುಳ್ಳಿ

ಪ್ರತಿ ಮನೆಯ ಅಡುಗೆ ಕೋಣೆಯಲ್ಲಿ ಸುಲಭವಾಗಿ ಯಾವಾಗಲೂ ಇರುವ ಈರುಳ್ಳಿಯಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಆಹಾರದಲ್ಲಿ ನಿತ್ಯವೂ ಬಳಕೆಯಾಗುವ ಈರುಳ್ಳಿಯನ್ನು ಹೀಗೂ ಬಳಸುವ ಬಗ್ಗೆ ನಿಮಗೆ ಗೊತ್ರಲಿಕ್ಕಿಲ್ಲ. ಆದರೆ, ಸೊಳ್ಳೆ ಕಚ್ಚಿದ ಜಾಗಕ್ಕೆ ಈರುಳ್ಳಿಯನ್ನು ವೃತ್ತಾಕಾರಕ್ಕೆ ಕತ್ತರಿಸಿ ಅದರಿಂದ ಒಸರುವ ರಸವನ್ನು ಹಚ್ಚಿ. ಸ್ವಲ್ಪ ಹೊತ್ತಿನ ನಂತರ ಅದನ್ನು ತೊಳೆಯಬಹುದು. ಉರಿ, ದದ್ದು ಎರಡೂ ಕಡಿಮೆಯಾಗುತ್ತದೆ

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Continue Reading
Advertisement
Anna Lezhneva
ರಾಜಕೀಯ4 hours ago

Anna Lezhneva: ಚುನಾವಣೆ ಗೆದ್ದು ಬಂದ ಪವನ್‌ಗೆ ತಿಲಕವಿಟ್ಟು ಸ್ವಾಗತಿಸಿದ ಈ ವಿದೇಶಿ ಮಹಿಳೆ ಯಾರು?

BJP celebration about lok sabha election results
ಕರ್ನಾಟಕ4 hours ago

R Ashok: ಸೋಲಿನ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಆರ್‌. ಅಶೋಕ್‌ ಆಗ್ರಹ

MLC TA Sharavana latest statement about lok sabha election results 2024
ಕರ್ನಾಟಕ4 hours ago

TA Sharavana: ಫಲಿತಾಂಶದಿಂದ ಬಲಿಷ್ಠವಾದ ಜೆಡಿಎಸ್‌: ಟಿ.ಎ.ಶರವಣ

Election Results 2024
ಪ್ರಮುಖ ಸುದ್ದಿ4 hours ago

Election Results 2024: ಬಿಜೆಪಿ ಹಿನ್ನಡೆ ನಡುವೆಯೂ ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿ ಆಗುವುದು ಖಚಿತ!

Election Results 2024
ಪ್ರಮುಖ ಸುದ್ದಿ4 hours ago

Election Results 2024: ಲೋಕಸಭೆ ಚುನಾವಣೆಯ ರಾಜ್ಯವಾರು ಬಲಾಬಲ ಹೀಗಿದೆ

Assault Case
ಕರ್ನಾಟಕ4 hours ago

Assault Case: ಬೆಳ್ತಂಗಡಿಯಲ್ಲಿ ಬಿಜೆಪಿ ಮುಖಂಡನ ಮೇಲೆ ತಲ್ವಾರ್‌ನಿಂದ ಹಲ್ಲೆ; ಸುರಪುರದಲ್ಲಿ ರಾಜುಗೌಡ ಅಳಿಯನ ಕಾರಿನ ಮೇಲೆ ಕಲ್ಲೆಸೆತ

Narendra Modi Election
ದೇಶ5 hours ago

Narendra Modi Election: ಚುನಾವಣೆ ಫಲಿತಾಂಶದ ಬಳಿಕ ತಾಯಿಯ ನೆನೆದು ಭಾವುಕರಾದ ಮೋದಿ

Karnataka Election Results 2024
ಕರ್ನಾಟಕ5 hours ago

Karnataka Election Results 2024: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಮೈತ್ರಿ ಆಗಿದ್ರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರ್ತಿರಲಿಲ್ಲ: ಎಚ್‌ಡಿಕೆ

Novak Djokovic
ಕ್ರೀಡೆ5 hours ago

Novak Djokovic: ಫ್ರೆಂಚ್ ಓಪನ್‌ ಟೂರ್ನಿಯಿಂದ ಹಿಂದೆ ಸರಿದ ಜೊಕೊವಿಕ್

Election Results 2024
Lok Sabha Election 20245 hours ago

Election Results 2024: ತ.ನಾಡಿನಲ್ಲಿ ಪೈಪೋಟಿ ನೀಡಿ ಸೋತ ಅಣ್ಣಾಮಲೈ; ಬಿಜೆಪಿ ಮತ ಪ್ರಮಾಣ ಶೇ. 3.57ರಿಂದ 11.04ಕ್ಕೆ ಜಿಗಿತ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ19 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 day ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌