Diabetes Diet | ಮಧುಮೇಹದ ನಿಯಂತ್ರಣ ಹೇಗೆ? ಇಲ್ಲಿದೆ ಸರಳ ಸೂತ್ರ Vistara News
Connect with us

ಆರೋಗ್ಯ

Diabetes Diet | ಮಧುಮೇಹದ ನಿಯಂತ್ರಣ ಹೇಗೆ? ಇಲ್ಲಿದೆ ಸರಳ ಸೂತ್ರ

ಮಧುಮೇಹದ ಪ್ರಮಾಣದಲ್ಲಿ ಭಾರತದಲ್ಲಿ ತೀವ್ರ ಏರುಗತಿಯಲ್ಲಿದೆ. ೭.೪ ಕೋಟಿ ಜನ ಮಧುಮೇಹಿಗಳಿದ್ದು, ಸುಮಾರು ೮ ಕೋಟಿ ಜನ ಮಧುಮೇಹ-ಪೂರ್ವ ಸ್ಥಿತಿಯಲ್ಲಿದ್ದಾರೆ. ಆದರೆ ಆತಂಕವಿಲ್ಲದೇ ಆಹಾರದಲ್ಲಿ ಮರೆಯದೇ ಈ ಒಂದು ಸೂತ್ರವನ್ನು ಅನುಸರಿಸಿದರೆ ಸಾಕು ಅಂತಾರೆ ತಜ್ಞರು.

VISTARANEWS.COM


on

Diabetes control
Koo

ಒತ್ತಡದ ಜೀವನಶೈಲಿಯ ಪರಿಣಾಮಗಳು ನಾನಾ ರೀತಿಯಲ್ಲಿ ದೇಹದ ಮೇಲಾಗುತ್ತವೆ. ಅದರಲ್ಲೂ ಕೆಲವು ಆರೋಗ್ಯ ಸಮಸ್ಯೆಗಳು ಬೆನ್ನು ಬಿದ್ದವೆಂದರೆ ಬೇತಾಳದಂತೆಯೇ. ಮಧುಮೇಹ ಅಂಥದ್ದೇ ಕಾಯಿಲೆ. ಆರಂಭದಲ್ಲಿ ಅಷ್ಟೇನು ಸಮಸ್ಯೆ ಅನಿಸದಿದ್ದರೂ, ಕ್ರಮೇಣ ವಿಪರೀತ ಉಪದ್ರವಕಾರಿ ಎನಿಸುತ್ತದೆ ಈ ಸಮಸ್ಯೆ. ಆದರೆ ನಮ್ಮ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡುವುದರಿಂದ (Diabetes Diet) ಮಧುಮೇಹವನ್ನು ಔಷಧಿಯಿಲ್ಲದೆಯೇ ದೀರ್ಘಕಾಲದವರೆಗೆ ಹತೋಟಿಯಲ್ಲಿ ಇಡಬಹುದು ಎನ್ನುತ್ತದೆ ಇತ್ತೀಚಿನ ಒಂದು ಅಧ್ಯಯನ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಆಶ್ರಯದಲ್ಲಿ ನಡೆಸಲಾದ ಈ ಮಧುಮೇಹ ಅಧ್ಯಯನದಲ್ಲಿ, ಹೊಸದಾಗಿ ಮಧುಮೇಹಕ್ಕೆ ತುತ್ತಾಗಿರುವವರ ದೈನಂದಿನ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿಳಿ ಅಕ್ಕಿ ಮತ್ತು ಗೋಧಿಯನ್ನು ಕಡಿಮೆ ಮಾಡಿ, ಪ್ರೊಟೀನ್‌ ಪ್ರಮಾಣವನ್ನು ಹೆಚ್ಚಿಸಲಾಗಿತ್ತು. ಮಧುಮೇಹ-ಪೂರ್ವ ಸ್ಥಿತಿಯಲ್ಲಿರುವವರನ್ನೂ ಸೇರಿ ಒಟ್ಟು ೧೮,೦೯೦ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಶೇ. ೬.೫ಕ್ಕೆ ಮೀರದಂತೆ ಮಾಡುವುದಕ್ಕಾಗಿ ಪಿಷ್ಟ ಪದಾರ್ಥಗಳನ್ನು ಶೇ. ೫೪ಕ್ಕೆ ಮೀರದಂತೆ ಇರಿಸಲಾಗಿತ್ತು.

ಉದಾ, ದಿನದ ಆಹಾರದಲ್ಲಿ ಬೆಳಗಿನ ತಿಂಡಿಗೆ ೨ ದೋಸೆ ಅಥವಾ ಇಡ್ಲಿ ಮತ್ತು ಒಂದು ಮಲ್ಟಿಗ್ರೇನ್‌ ಬ್ರೆಡ್‌ಗೆ ಕಾರ್ಬ್‌ ಪ್ರಮಾಣವನ್ನು ಸೀಮಿತಗೊಳಿಸಿದರೆ, ಪ್ರೊಟೀನ್‌ ಪ್ರಮಾಣವನ್ನು ಸೋಯಾ ಸಾಂಬಾರ್‌ ಮತ್ತು ಮೂರು ಮೊಟ್ಟೆಯ ಬಿಳಿ ಭಾಗಗಳು ಎಂದು ನಿರ್ಧರಿಸಲಾಗಿತ್ತು. ಅಂದರೆ, ಕಾರ್ಬ್‌ ಕಡಿತದಿಂದ ಉಂಟಾಗುವ ಕೊರತೆಯನ್ನು ಪ್ರೊಟೀನ್‌ನಿಂದ ತುಂಬಿಸಲು ಯೋಜಿಸಲಾಗಿತ್ತು. ಇದೇ ಮಾದರಿಯನ್ನು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಯೋಜಿಸಲಾಗಿತ್ತು. ಊಟ-ತಿಂಡಿಗಳ ನಡುವೆ ಲಘುವಾಗಿ ಬಾಯಾಡುವುದಕ್ಕೆ ಹಣ್ಣು-ತರಕಾರಿಗಳನ್ನು ಸೂಚಿಸಲಾಗಿತ್ತು.

ಇದನ್ನೂ ಓದಿ | Sleep secret | ಇಷ್ಟಿದ್ದರೆ ದೇಹಕ್ಕೊಂದು ನೆಮ್ಮದಿಯ ಗುಡ್‌ ನೈಟ್‌!

ಇದು ನೂತನ ಮಧುಮೇಹಿಗಳಿಗಾದರೆ, ಇನ್ನೂ ಮಧುಮೇಹ-ಪೂರ್ವ ಸ್ಥಿತಿಯಲ್ಲಿರುವವರಿಗೆ ಎಚ್‌ಬಿಎ೧ಸಿ ಪ್ರಮಾಣವನ್ನು ಶೇ. ೫.೬ ಕ್ಕೆ ನಿಲ್ಲಿಸುವುದು ಸಂಶೋಧಕರ ಉದ್ದೇಶವಾಗಿತ್ತು. ಇವರಲ್ಲಿ ಪ್ರೊಟೀನ್‌ ಮತ್ತು ನಾರಿನ ಪ್ರಮಾಣವನ್ನು ಇನ್ನೂ ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಈ ಎರಡೂ ಗುಂಪಿನಲ್ಲಿ ಶೇ. ೮೦ರಷ್ಟು ಮಂದಿಯಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶ ನಿರ್ದೇಶಿತ ರೀತಿಯಲ್ಲೇ ಹತೋಟಿಗೆ ಬಂದಿರುವುದನ್ನು ದಾಖಲಿಸಲಾಗಿದೆ. ಸ್ಥೂಲವಾಗಿ ಹೇಳುವುದಾದರೆ, ಮಧುಮೇಹಿಗಳಿಗೆ ಶೇ. ೪೯-೫೪ ಕಾರ್ಬ್‌, ಶೇ. ೧೯-೨೦ ಪ್ರೊಟೀನ್‌, ಶೇ. ೨೧-೨೬ ಕೊಬ್ಬಿನ ಅಂಶ ಮತ್ತು ಶೇ. ೫-೬ ನಾರಿನ ಅಂಶಗಳನ್ನು ಆಹಾರದಲ್ಲಿ ನಿರ್ವಹಿಸಲು ಸೂಚಿಸಲಾಗಿತ್ತು. ಮಧುಮೇಹ-ಪೂರ್ವದಲ್ಲಿರುವವರಿಗೆ ಈ ಪ್ರಮಾಣಗಳನ್ನು ಕ್ರಮವಾಗಿ ಶೇ. ೫೦-೫೬, ಶೇ. ೧೮-೨೦, ಶೇ. ೨೧-೨೭ ಮತ್ತು ಶೇ. ೩-೫ರಷ್ಟು ಇರಿಸಲು ತಿಳಿಸಲಾಗಿತ್ತು. ಯಾವುದೇ ಔಷಧವಿಲ್ಲದೆ ಆಹಾರಕ್ರಮದಲ್ಲಿಯೇ ಇದನ್ನು ಸಾಧಿಸಿರುವುದರಿಂದ, ಒಟ್ಟಾರೆಯಾಗಿ ಅಧ್ಯಯನ ಫಲಿತಾಂಶ ಆಶಾದಾಯಕವಾಗಿದೆ ಎನ್ನಲಾಗಿದೆ.

ಮಧುಮೇಹದ ಪ್ರಮಾಣದಲ್ಲಿ ಭಾರತದಲ್ಲಿ ತೀವ್ರ ಏರುಗತಿಯಲ್ಲಿದೆ. ೭.೪ ಕೋಟಿ ಜನ ಮಧುಮೇಹಿಗಳಿದ್ದು, ಸುಮಾರು ೮ ಕೋಟಿ ಜನ ಮಧುಮೇಹ-ಪೂರ್ವ ಸ್ಥಿತಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ICMR ನಡೆಸಿದ ಅಧ್ಯಯನಕ್ಕೆ ಮಹತ್ವ ಒದಗಿದೆ. ಇದಕ್ಕಾಗಿ ೨೯ ರಾಜ್ಯಗಳು ಮತ್ತು ೨ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಅಧ್ಯಯನ ನಡೆಸಲಾಗಿದ್ದು, ಬೇರೆ ಬೇರೆ ಸಂಸ್ಕೃತಿ ಮತ್ತು ಆಹಾರ ಪದ್ಧತಿಗಳ ಜನರು ಇದರಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಭಾರತದ ಹೆಚ್ಚಿನ ಜನಸಂಖ್ಯೆಗೆ ಈ ಅಧ್ಯಯನದಲ್ಲಿ ಸೂಚಿತ ಆಹಾರಪದ್ಧತಿಯನ್ನು ಅನುಸರಿಸಲು ಸಾಧ್ಯವಿದೆ ಎಂಬುದು ಸಂಶೋಧಕರ ಅಭಿಮತ.

ಇದನ್ನೂ ಓದಿ | Snapping footwear: ಮಧುಮೇಹಿಗಳಿಗೆ IIScಯಿಂದ ಸ್ಪೆಷಲ್‌ ಪಾದರಕ್ಷೆ, ನೋವಾಗಲ್ಲ, ಕೀವಾಗಲ್ಲ!

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ

ಆರೋಗ್ಯ

Sugar Cane Juice Benefits: ರಸಭರಿತ ಕಬ್ಬಿನ ಹಾಲು, ಏನೇನಿವೆ ಇದರ ಲಾಭಗಳು?

ಶುದ್ಧ ಕಬ್ಬಿನ ಹಾಲು (sugar cane juice benefits) ಕೆಲವು ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಆಗಬಲ್ಲದು. ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡಿ, ಸೋಂಕುಗಳಿಂದ ಕಾಪಾಡಬಲ್ಲದು. ಇದರಿಂದ ಇನ್ನೂ ಏನೇನು ಲಾಭಗಳಿವೆ?

VISTARANEWS.COM


on

Edited by

Sugar Cane Juice
Koo

ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿಕೊಳ್ಳುವುದಕ್ಕೆ ಒಳ್ಳೆಯ ಪೇಯಗಳ ಬಗ್ಗೆ ಹೇಳಿದರೂ ಬಾಯಾರಿಕೆ ಹೆಚ್ಚುತ್ತದೆ, ಅಂಥ ಬಿಸಿಲು ಹೊರಗೆ! ಅದರಲ್ಲೂ ಮನೆಯಿಂದ ಹೊರಗೆ ತಿರುಗಾಟದಲ್ಲಿದ್ದಾಗ, ಕೈಯಲ್ಲಿರುವ ನೀರೂ ಖಾಲಿಯಾದರೆ, ಬೇಸಿಗೆಯಲ್ಲಿ ಬೇರೆ ಶಾಪವೇ ಬೇಕಿಲ್ಲ. ದೇಹದ ನವರಂಧ್ರಗಳಿಂದ ಬೆವರಿಳಿಯುತ್ತಿರುವಾಗ ಯಾರಾದರೂ ಪುಣ್ಯಾತ್ಮರು ದೊಡ್ಡದೊಂದು ಗ್ಲಾಸ್‌ ತಂಪಾದ, ಸಿಹಿಯಾದ ಕಬ್ಬಿನ ಹಾಲು ತಂದುಕೊಟ್ಟರೆ…? ಅವರ ಜನ್ಮ ಸವೆದರೂ ಮುಗಿಯದಷ್ಟು ಹರಸುತ್ತೇವೆ ಅವರನ್ನು. ಆ ಹೊತ್ತಿನ ದಾಹ ತಣಿಸುವುದಂತೂ ಸರಿ, ಅದಲ್ಲದೆ ಇನ್ನೇನೇನು ಲಾಭಗಳಿವೆ ಕಬ್ಬಿನ ಹಾಲು (sugar cane juice benefits) ಕುಡಿಯುವುದರಿಂದ ಎಂಬುದನ್ನು ತಿಳಿಯಬಹುದಲ್ಲ.

ಪ್ರತಿರೋಧ ಶಕ್ತಿ ಹೆಚ್ಚಳ

ಹೆಚ್ಚೇನು ಫ್ಯಾನ್ಸಿ ಮಾಡದ ಶುದ್ಧ ಕಬ್ಬಿನ ಹಾಲು ಕೆಲವು ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಆಗಬಲ್ಲದು. ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡಿ, ಸೋಂಕುಗಳಿಂದ ಕಾಪಾಡಬಲ್ಲದು. ಅದರಲ್ಲೂ ಈ ರಸದಲ್ಲಿರುವ ಎಲೆಕ್ಟ್ರೋಲೈಟ್‌ಗಳಿಂದಾಗಿ ದಣಿದ, ಆಯಾಸಗೊಂಡ ದೇಹಕ್ಕೆ ಸಂಜೀವಿನಿ ಎನಿಸಬಲ್ಲದು. ಕಬ್ಬಿನ ರಸದಲ್ಲಿರುವ ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಶಿಯಂ ಮತ್ತು ಇತೆ ಸೂಕ್ಷ್ಮ ಪೋಷಕಾಂಶಗಳಿಂದಾಗಿ, ದೇಹದ ಪ್ರೊಟೀನ್‌ ಹೀರಿಕೊಳ್ಳುವ ಸಾಮರ್ಥ್ಯವೂ ಹೆಚ್ಚಿ, ಸಾಮಾನ್ಯ ಶೀತ-ಜ್ವರಗಳ ಬಾಧೆ ಕಡಿಮೆಯಾಗುತ್ತದೆ.

Jal Jeera Benefits

ಪಚನಕಾರಿ

ನಮ್ಮ ಜೀರ್ಣಾಂಗಗಳ ಹಿತ ಕಾಪಾಡುವಲ್ಲೂ ಕಬ್ಬಿನ ರಸದ್ದು ಶ್ಲಾಘನೀಯ ಕೆಲಸ. ಹೊಟ್ಟೆಯ ಪಿಎಚ್‌ ಮಟ್ಟವನ್ನು ಕಾಪಾಡಿಕೊಂಡು, ಆಹಾರ ಪಚನವಾಗುವುದಕ್ಕೆ ಬೇಕಾದ ಜೀರ್ಣ ರಸಗಳ ಬಿಡುಗಡೆಗೆ ನೆರವಾಗುತ್ತದೆ. ಇದರಿಂದಾಗಿ ಹೊಟ್ಟೆಯನ್ನು ಆಗಾಗ ಕಾಡುವ ಅಸಿಡಿಟಿ, ಹುಳಿತೇಗು ಮುಂತಾದ ಸಮಸ್ಯೆಗಳು ದೂರ ಉಳಿಯುತ್ತವೆ.

Sugar Cane Juice

ಮಧುಮೇಹ ನಿಯಂತ್ರಣ

ಹೌದೇಹೌದು! ಇಷ್ಟೊಂದು ಸಿಹಿಯಾದ ಪೇಯವನ್ನು ಮಧುಮೇಹಿಗಳು ಕುಡಿಯಬಹುದೇ, ಕುಡಿದರೆ ಆರೋಗ್ಯ ಏನಾದೀತು ಎಂಬ ಅನುಮಾನ ಬರುವುದು ಸಹಜವೇ. ಆದರೆ ಇದರ ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆಯೇ ಇದ್ದು, ರಕ್ತದಲ್ಲಿ ಸಕ್ಕರೆ ಅಂಶ ಏರುವಂತೆ ಮಾಡುವುದಿಲ್ಲ. ಹಾಗಾಗಿ ಮಧುಮೇಹಿಗಳೂ ಇದನ್ನು ಮಿತ ಪ್ರಮಾಣದಲ್ಲಿ ಕುಡಿಯಬಹುದು.

ಹಲ್ಲು ಮತ್ತು ಮೂಳೆಗಳ ಬಲವರ್ಧನೆ

ತನ್ನಲ್ಲಿ ವಿಫುಲವಾಗಿರುವ ಪ್ರೊಟೀನ್‌ ಸತ್ವದಿಂದಾಗಿ ಮೂಳೆಗಳನ್ನು ಸದೃಢ ಮಾಡುವ ಸಾಧ್ಯತೆ ಕಬ್ಬಿನ ಹಾಲಿಗಿದೆ. ಜೊತೆಗೆ, ಹಲ್ಲುಗಳು ಹುಳುಕಾಗದಂತೆ ಕಾಪಾಡುವುದರೊಂದಿಗೆ, ದಂತಗಳ ಬೇರನ್ನೂ ಬಲಗೊಳಿಸು ಸಾಮರ್ಥ್ಯ ಇದರಲ್ಲಿರುವ ಫಾಸ್ಫರಸ್‌ ಅಂಶಕ್ಕಿದೆ. ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯದೆ ಇದ್ದಾಗ ಉಂಟಾಗುವ ಬಾಯಿಯ ದುರ್ಗಂಧ ತಡೆಯಲೂ ಇದು ಸಹಕಾರಿ.

ನೋವು ಉಪಶಮನಕ್ಕೆ

ಕಬ್ಬಿನ ರಸವನ್ನು ಎಳನೀರು ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಕುಡಿದಾಗ ಇನ್ನಷ್ಟು ಲಾಭಗಳು ದೇಹಕ್ಕೆ ದೊರೆಯುತ್ತವೆ. ಮೂತ್ರನಾಳದ ಸೋಂಕು, ಮೂತ್ರಪಿಂಡದಲ್ಲಿ ಕಲ್ಲು ಮುಂತಾದ ಹಲವಾರು ಸಮಸ್ಯೆಗಳಿಂದ ಕಾಡುವ ನೋವುಗಳ ನಿವಾರಣೆಗೆ ಈ ಮಿಶ್ರಣ ಉಪಯೋಗಿ ಎನಿಸಿದೆ. ದೇಹದಲ್ಲಿ ಉರಿಯೂತವನ್ನು ನಿವಾರಿಸುವ ಇದರ ಗುಣವೇ ಈ ನೋವು ಉಪಶಮನಕ್ಕೂ ಕಾರಣವಾಗಿದೆ.

Sugar Cane Juice

ಸೌಂದರ್ಯವರ್ಧಕ

ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಮೊಡವೆಯಂಥ ಸಮಸ್ಯೆಗಳಿಗೂ ಕಬ್ಬಿನ ರಸ ಮದ್ದಾಗಬಲ್ಲದು. ಇದರಲ್ಲಿರುವ ಗ್ಲೈಕೋಲಿಲಕ್‌ ಆಮ್ಲವು ತ್ವಚೆಯ ಮೇಲಿನ ನಿರ್ಜೀವ ಕೋಶಗಳನ್ನು ತೆಗೆದು, ಹೊಳಪು ಮೂಡಿಸಲು ಉಪಯುಕ್ತ. ಮುಲ್ತಾನಿ ಮಿಟ್ಟಿಯ ಜೊತೆಗೆ ಕಬ್ಬಿನ ರಸವನ್ನು ಮಿಶ್ರ ಮಾಡಿ, ಫೇಸ್‌ಪ್ಯಾಕ್‌ ಮಾಡುವುದರಿಂದ ಚರ್ಮದ ಹೊಳಪು, ನುಣುಪು ವೃದ್ಧಿಸುತ್ತದೆ.

ಇದನ್ನೂ ಓದಿ: Healthy Drink: ಹೋಳಿಯ ನಂತರ ಚರ್ಮ ಸರಿಯಾಗಬೇಕಾದರೆ ಕುಡಿಯಲೇ ಬೇಕಾದ ಪೇಯಗಳಿವು!

Continue Reading

ಆರೋಗ್ಯ

Jal Jeera Benefits: ಬೇಸಿಗೆಯಲ್ಲಿ ಕುಡಿದು ನೋಡಿ ಜಲ್‌ಜೀರಾ ನೀರು

ಎಷ್ಟು ಲೀಟರುಗಟ್ಟಲೆ ನೀರು ಕುಡಿದರೂ ಬಾಯಾರಿಕೆಗೆ ಕೊನೆಯೇ ಇರುವುದಿಲ್ಲ. ಇಂಥ ಹೊತ್ತಿನಲ್ಲಿ ನೆರವಿಗೆ ಬರುವುದು ಜಲ್‌ಜೀರಾ. ಇದರ (Jal Jeera Benefits) ಪ್ರಯೋಜನಗಳೇನು?

VISTARANEWS.COM


on

Edited by

Jal Jeera Benefits
Koo

ಬೇಸಿಗೆಯಲ್ಲಿ ಬಗೆಬಗೆ ತಿನ್ನುವುದಕ್ಕಿಂತ, ತಂಪಾಗಿ ದಾಹ ತಣಿಸುವಂಥ ಪೇಯಗಳದ್ದೇ ಭರಾಟೆ. ಎಷ್ಟು ಲೀಟರುಗಟ್ಟಲೆ ನೀರು ಕುಡಿದರೂ ಬಾಯಾರಿಕೆಗೆ ಕೊನೆಯೇ ಇರುವುದಿಲ್ಲ. ಇಂಥ ಹೊತ್ತಿನಲ್ಲಿ ನೆರವಿಗೆ ಬರುವುದು (Jal Jeera Benefits) ಜಲ್‌ಜೀರಾ. ಮಾರುಕಟ್ಟೆಯಲ್ಲಿ ದೊರೆಯುವ ಜಲ್‌ಜೀರಾ ಪುಡಿಯನ್ನು ನೀರಿಗೆ ಬೆರೆಸಿ ಕುಡಿಯುವುದು ಒಂದು ರೀತಿ. ಈ ನೀರಿಗೆ ಪುದೀನಾ ಅಥವಾ ಕೊತ್ತಂಬರಿ ಸೊಪ್ಪುಗಳನ್ನು ಬೆರೆಸಿ ಕುಡಿಯುವುದು ಇನ್ನೊಂದು ರೀತಿ. ಹಾಗೆ ನೋಡಿದರೆ, ಜಲ್‌ಜೀರಾ ಪುಡಿಯಲ್ಲೇ ಹಲವು ರೀತಿಯ ಮಸಾಲೆಗಳು ಸೇರಿರುತ್ತವೆ. ಜೀರಿಗೆ, ಶುಂಠಿ ಮತ್ತು ಕಾಳುಮೆಣಸಿನ ಪುಡಿ, ಸೈಂಧವ ಲವಣ, ಒಣಮಾವಿನ ಪುಡಿ, ಕೊತ್ತಂಬರಿ ಮತ್ತು ಪುದೀನಾ ಎಲೆಗಳ ಪುಡಿಗಳು ಇದರಲ್ಲಿ ಸೇರಿರುತ್ತವೆ. ಹಾಗೆಂದೇ ಇದನ್ನು ಕುಡಿದಾಕ್ಷಣ ದಣಿವಾರಿದ ಅನುಭವ ನೀಡುತ್ತದೆ. ಇದನ್ನು ಕುಡಿಯುವುದರಿಂದ ಇನ್ನೂ ಕೆಲವು ಲಾಭಗಳಿವೆ. ಅದೇನೆಂದು ನೋಡೋಣ

Jal Jeera Benefits

ಬೇಸಿಗೆಗೆ ಸೂಕ್ತ

ದೇಹವನ್ನು ತಣಿಸುವುದಕ್ಕೆ ಅಗತ್ಯವಾದ ವಸ್ತುಗಳು ಜಲ್‌ಜೀರಾದಲ್ಲಿ ಅಡಕವಾಗಿವೆ. ದೇಹಕ್ಕೆ ಅಗತ್ಯವಾದ ಎಲೆಕ್ಟ್ರೋಲೈಟ್‌ಗಳನ್ನು ಈ ಪಾನೀಯ ಪೂರೈಸುತ್ತದೆ. ಜೊತೆಗೆ ನೀರಿನ ಅಂಶವೂ ದೇಹಕ್ಕೆ ದೊರೆಯುತ್ತದೆ. ಬೇಸಿಗೆಯಲ್ಲಿ ಬೆವರಿ, ಬಳಲಿ , ಬೆಂಡಾಗುವ ಸಂದರ್ಭದಲ್ಲಿ ಒಂದು ಲೋಟ ಜಲ್‌ಜೀರಾ ಬೆರೆಸಿದ ನೀರು ಚೇತೋಹಾರಿ ಅನುಭವವನ್ನು ನೀಡಬಲ್ಲದು.

Jal Jeera Benefits

ಜೀರ್ಣಕಾರಿ

ಜಲ್‌ಜೀರಾದಲ್ಲಿರುವ ಶುಂಠಿ, ಪುದೀನಾ ಇತ್ಯಾದಿಗಳು ಪಚನಕಾರಿ ಗುಣವನ್ನು ಹೊಂದಿವೆ. ಜೀರಿಗೆಯ ಅಂಶದಿಂದಾಗಿ ಹೊಟ್ಟೆಯುಬ್ಬರ, ಅಸಿಡಿಟಿಯಂಥ ತೊಂದರೆಗಳು ಕಡಿಮೆಯಾಗುತ್ತವೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಅಥವಾ ಮದುವೆ ಮನೆಯ ಊಟ ಹೆಚ್ಚಾಗಿ ಹೊಟ್ಟೆ ಭಾರವಾದರೆ, ಊಟದ ಸ್ವಲ್ಪ ಹೊತ್ತಿನ ನಂತರ ಜಲ್‌ಜೀರಾ ಸೇವನೆ ಅನುಕೂಲ ಎನಿಸುತ್ತದೆ.

Jal Jeera Benefits

ಹೊಟ್ಟೆಯ ತಳಮಳ ಶಮನ

ಹೊಟ್ಟೆಯಲ್ಲಿ ತಳಮಳ ಆಗುವುದಕ್ಕೆ ಬಹಳಷ್ಟು ಕಾರಣಗಳು ಇರುತ್ತವೆ- ಅಜೀರ್ಣ, ಆಸಿಡಿಟಿ, ಹೊಟ್ಟೆ ಉಬ್ಬರ, ನೋವು, ಹೊಟ್ಟೆ ತೊಳೆಸುವುದು ಇತ್ಯಾದಿ. ಶುಂಠಿಯಿಂದ ಹೊಟ್ಟೆ ತೊಳೆಸುವುದು, ಕಿಬ್ಬೊಟ್ಟೆಯ ನೋವು ಕಡಿಮೆಯಾದರೆ, ಜೀರಿಗೆ ಮತ್ತು ಕಾಳುಮೆಣಸಿನ ಅಂಶಗಳಿಂದ ಹೊಟ್ಟೆ ಉಬ್ಬರ, ಅಜೀರ್ಣ ಕಡಿಮೆಯಾಗುತ್ತದೆ. ಆದರೆ ರಕ್ತದೊತ್ತಡ ಹೆಚ್ಚಿರುವವರು ಜಲ್‌ಜೀರಾವನ್ನು ಮಿತಿಯಲ್ಲಿ ಸೇವಿಸುವುದು ಸೂಕ್ತ.

Jal Jeera Benefits

ಹಸಿವು ಹೆಚ್ಚಿಸುತ್ತದೆ

ಬೇಸಿಗೆಯಲ್ಲಿ ಹಸಿವೆ ಕೆಲವೊಮ್ಮೆ ಕಡಿಮೆ ಎನಿಸುತ್ತದೆ. ತಿನ್ನುವುದೇ ಬೇಡ, ತಂಪಾಗಿ ಪಾನೀಯಗಳಿದ್ದರೆ ದಿನ ಕಳೆಯಬಹುದು ಎಂದೆನಿಸಿದರೂ, ಹಸಿವಿಲ್ಲವೆಂದು ತಿನ್ನದೇ ಕುಳಿತ ಪರಿಣಾಮವಾಗಿ ಒಂದೆರಡು ದಿನಗಳಲ್ಲಿ ಸುಸ್ತು, ಆಯಾಸ, ನಿಶ್ಶಕ್ತಿ ಮುಂತಾದವೆಲ್ಲಾ ಆರಂಭವಾಗುತ್ತವೆ. ಜಲ್‌ಜೀರಾದಲ್ಲಿರುವ ಮಸಾಲೆಗಳ ಮಿಶ್ರಣವು, ಜೀರ್ಣಾಂಗವನ್ನು ಚುರುಕುಗೊಳಿಸಿ, ಹಸಿವೆ ಹೆಚ್ಚಿಸುತ್ತದೆ. ಒಂದೊಮ್ಮೆ ಅಜೀರ್ಣದಿಂದ ಹಸಿವಾಗದಿದ್ದರೆ, ಅದನ್ನೂ ಸರಿಪಡಿಸುತ್ತದೆ.

ಮಾರುಕಟ್ಟೆಯಲ್ಲಿ ದೊರೆಯುವ ಜಲ್‌ಜೀರಾ ಪುಡಿಗಳು ಬೇಡ ಎನಿಸಿದರೆ, ಬೇಕಾದ ರೀತಿಯಲ್ಲಿ ಮನೆಯಲ್ಲೂ ಮಾಡಿಕೊಳ್ಳಬಹುದು. ಕೆಲವು ಮಸಾಲೆಪ್ರಿಯರು ಜಲ್‌ಜೀರಾ ಪುಡಿಗಳಿಗೆ ಕೊಂಚ ಗರಂ ಮಸಾಲೆ ಸೇರಿಸಿಕೊಳ್ಳುವವರಿದ್ದಾರೆ. ಇದಕ್ಕೆ ಕೊಂಚ ಬೆಲ್ಲ ಸೇರಿಸಿ, ಪಾನಕದಂತೆ ಕುಡಿದು ಸುಖಿಸುವವರಿದ್ದಾರೆ. ಒಣ ಮಾವಿನ ಪುಡಿ ದೊರೆಯದಿದ್ದರೆ, ನಿಂಬೆ ರಸ ಹಾಕಿಕೊಂಡರೂ ಸರಿ- ಬಾಯಿ, ದೇಹ ಎರಡಕ್ಕೂ ಹಿತ. ಬಿಸಿಲಿನಲ್ಲಿ ಬಂದಾಗ ತಂಪಾದ ಜಲ್‌ಜೀರಾ ನೀರು ನಿಜಕ್ಕೂ ಚೈತನ್ಯಕ್ಕೆ ತಂಪೆರೆಯಬಲ್ಲದು.

ಇದನ್ನೂ ಓದಿ: Drumstick Tea Health Benefits: ನುಗ್ಗೆ ಸೊಪ್ಪಿನ ಚಹಾದ ಸ್ಪೆಷಲ್ ಇವು!

Continue Reading

ಆರೋಗ್ಯ

Vitamin C Benefits: ವಿಟಮಿನ್‌ ಸಿ ನಮಗೇಕೆ ಬೇಕು? ಇಲ್ಲಿವೆ ಕಾರಣಗಳು

ಬೇಸಿಗೆಯಲ್ಲಿ ನಮ್ಮನ್ನು ಅತಿ ಉಷ್ಣದಿಂದ ಕಾಪಾಡುವುದಕ್ಕೆ ವಿಟಮಿನ್‌ ಸಿ (Vitamin C Benefits) ಪ್ರಧಾನವಾಗಿ ಬೇಕಾಗುತ್ತದೆ. ಇದರ ಉಪಯೋಗ ಇನ್ನೂ ಏನೇನು? ಇಲ್ಲಿದೆ ಮಾಹಿತಿ.

VISTARANEWS.COM


on

Edited by

Vitamin C Benefits
Koo

ದೇಹಕ್ಕೆ ಅಗತ್ಯವಾಗಿ ಬೇಕಿರುವ ಪೋಷಕಾಂಶಗಳ ಪಟ್ಟಿಯಲ್ಲಿ ವಿಟಮಿನ್‌ ಸಿ (Vitamin C Benefits) ಮುಂಚೂಣಿಯಲ್ಲಿ ಇರುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಜೀವಸತ್ವ ಬೇಕು ಎಂಬುದನ್ನು ಪದೇಪದೆ ಕೇಳಿರುತ್ತೇವೆ. ಹಾಗಾದರೆ ಅದೊಂದೇ ಕಾರಣಕ್ಕೆ ನಮಗೆ ಸಿ ಜೀವಸತ್ವ ಅಗತ್ಯವೇ? ಇದಲ್ಲದೆ ಇನ್ನೂ ಯಾವೆಲ್ಲಾ ಕಾರಣಗಳಿಗಾಗಿ ವಿಟಮಿನ್‌ ಸಿ ಬೇಕು? ಇನ್ನೇನೇನು ಕೆಲಸವಿದೆ ಇದಕ್ಕೆ ನಮ್ಮ ದೇಹದಲ್ಲಿ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯಿದು.

Vitamin C Benefits

ಬೇಸಿಗೆಯಲ್ಲಿ ನಮ್ಮನ್ನು ಅತಿ ಉಷ್ಣದಿಂದ ಕಾಪಾಡುವುದಕ್ಕೆ ವಿಟಮಿನ್‌ ಸಿ (Vitamin C) ಪ್ರಧಾನವಾಗಿ ಬೇಕು. ಮಾತ್ರವಲ್ಲ, ವಾತಾವರಣದಲ್ಲಿರುವ ಅತಿಯಾದ ಹೊಗೆ, ಮಾಲಿನ್ಯದಿಂದ ನಮ್ಮನ್ನು ರಕ್ಷಿಸಲು, ಬಿಸಿಲಿಗೆ ದೇಹ ಸೊರಗದೆ ಇರಲು, ಶರೀರಕ್ಕೆ ಅಗತ್ಯವಾದ ಕೊಲಾಜಿನ್‌ ಮತ್ತು ಎಲಾಸ್ಟಿನ್‌ ಉತ್ಪಾದನೆಗೆ ಈ ಪೋಷಕತತ್ವ ಆವಶ್ಯಕ. ಇದಲ್ಲದೆ, ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ದೇಹಕ್ಕೆ ಅನುಕೂಲ ಮಾಡಿಕೊಡುವ ಪಾತ್ರವೂ ಇದೇ ಜೀವಸತ್ವದ್ದು. ಹಾಗಾಗಿ, ನಮ್ಮ ಚರ್ಮ, ಕೂದಲು, ಶ್ವಾಸಕೋಶಗಳನ್ನು ರಕ್ಷಿಸುವುದೇ ಅಲ್ಲದೆ, ಅನೀಮಿಯದಿಂದ ದೂರವಿರಿಸಿ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಮಲ್ಟಿಟಾಸ್ಕಿಂಗ್‌ ಕೆಲಸ ಇದರದ್ದು. ಇವಿಷ್ಟು ವಿಟಮಿನ್‌ ಸಿ ಮಾಡುವ ಕೆಲಸದ ಸ್ಥೂಲ ಪರಿಚಯವಾದರೆ, ಇವುಗಳ ವಿವರಗಳು ಇಲ್ಲಿವೆ.

Vitamin C Benefits

ಸೂರ್ಯನ ಪ್ರಕೋಪದಿಂದ ರಕ್ಷಿಸುತ್ತದೆ

ಸೂರ್ಯ ಸ್ನಾನ ಮಾಡುವವರ ಸಂಖ್ಯೆ ಪಶ್ಚಿಮ ದೇಶಗಳಲ್ಲಿ ಬಹಳ ಹೆಚ್ಚು. ವರ್ಷದ ಆರೆಂಟು ತಿಂಗಳು ಚಳಿ ಅಥವಾ ಹಿಮದಲ್ಲೇ ಹುಗಿದುಕೊಂಡಿರುವ ಭೂಭಾಗಗಳ ಜನರಿಗೆ ಬೇಸಿಗೆಯಲ್ಲಿ ಬಿಸಿಲಿಗೆ ಮೊಸಳೆಯಂತೆ ಒಡ್ಡಿಕೊಳ್ಳುವುದು ಬಲುಪ್ರಿಯವಾದ ಸಂಗತಿ. ಆದರೆ ಓಝೋನ್‌ ಪದರಕ್ಕೆ ಹಾನಿಯಾಗಿ, ಭೂಮಿಗೆ ಅತಿನೇರಳೆ ಕಿರಣಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗೆ ಸೂರ್ಯ ಸ್ನಾನ ಮಾಡಿದವರಲ್ಲಿ ಅಪರೂಪಕ್ಕೆ ಚರ್ಮದ ಕ್ಯಾನ್ಸರ್‌ ಕಾಣಿಸಿಕೊಳ್ಳುವುದಿದೆ. ಸೂರ್ಯನ ಬಿಸಿಲಿಗೆ ಹಾನಿಯಾದ ಕೋಶಗಳನ್ನು ಚುರುಕಾಗಿ ಸರಿಪಡಿಸಿ, ಕ್ಯಾನ್ಸರ್‌ ತಡೆಗಟ್ಟಲು ವಿಟಮಿನ್‌ ಸಿ (Vitamin C) ಅವಶ್ಯವಾಗಿ ಬೇಕು.

Vitamin C Benefits

ಗುಣಪಡಿಸಲು

ಯಾವುದೇ ಗಾಯಗಳು ಗುಣವಾಗುವುದಕ್ಕೆ, ಗಾಯಗೊಂಡ ಕೋಶಗಳನ್ನು ರಿಪೇರಿ ಮಾಡಲು ಸಿ ಜೀವಸತ್ವ ಅಗತ್ಯ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ಹಾನಿ ಸರಿಪಡಿಸಲು ನೆರವಾಗುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿ ಸುತ್ತುವ ಮುಕ್ತ ಕಣಗಳನ್ನು ನಿರ್ಬಂಧಿಸುತ್ತವೆ. ಇದರಿಂದ ಮಾರಕ ರೋಗಗಳ ದಾಳಿಯ ಸಾಧ್ಯತೆ ಕ್ಷೀಣಿಸುತ್ತದೆ.

ಜೊತೆಗೆ, ಚರ್ಮದ ಆರೋಗ್ಯ ಕಾಪಾಡುವಂಥ ಕೊಲಾಜಿನ್‌ ಉತ್ಪತ್ತಿಗೆ ಈ ಪೋಷಕಾಂಶ ಪೂರಕ. ಹಾಗಾಗಿ, ಕೂದಲು ಮತ್ತು ಚರ್ಮದ ತೊಂದರೆಗಳು ಶೀಘ್ರವೇ ಗುಣವಾಗುತ್ತವೆ. ಮೂಳೆಗಳು ಮತ್ತು ಕೀಲುಗಳ ನಡುವಿನ ಕೋಶಗಳು- ಇವೆಲ್ಲವುಗಳು ಆರೋಗ್ಯಕರವಾಗಿ ಇರುವುದಕ್ಕೆ ದೇಹದಲ್ಲಿ ಸಾಕಷ್ಟು ಎಲಾಸ್ಟಿನ್‌ ಮತ್ತು ಕೊಲಾಜಿನ್‌ ತಯಾರಾಗಲೇ ಬೇಕು. ಕೊಲಾಜಿನ್‌ ಕಡಿಮೆಯಾದರೆ ಮಂಡಿ ಕೀಲುಗಳ ಸವೆತ, ಚರ್ಮ ಸುಕ್ಕಾಗುವುದು, ಕೂದಲು ಉದುರುವುದು ಇತ್ಯಾದಿ ಸಮಸ್ಯೆಗಳು ಗಂಟಾಗುತ್ತವೆ.

Vitamin C Benefits

ಬೇಸಿಗೆಯಲ್ಲಿ ಅನುಕೂಲ

ಸೆಖೆಗಾಲದಲ್ಲಿ ತೀಕ್ಷ್ಣವಾಗಿ ಏರುವ ತಾಪಮಾನವನ್ನು ಸಹಿಸಿಕೊಳ್ಳಲು, ಅದಕ್ಕೆ ಹೊಂದಿಕೊಳ್ಳಲು ಅಗತ್ಯ ಸಾಮರ್ಥ್ಯವನ್ನು ದೇಹಕ್ಕೆ ಒದಗಿಸುವಲ್ಲಿ ವಿಟಮಿನ್‌ ಸಿ ಪ್ರಧಾನ ಭೂಮಿಕೆ ನಿರ್ವಹಿಸುತ್ತದೆ. ಬೆವರು ಹರಿಸುವ ಮೂಲಕ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಬೆವರುಸಾಲೆಯಂಥ ಚರ್ಮದ ಕಿರಿಕಿರಿಗಳನ್ನು ದೂರವಿರಿಸುತ್ತದೆ.

ಹೇಗೆ ದೊರೆಯುತ್ತದೆ?

ವಿಟಮಿನ್‌ ಸಿ (Vitamin C) ಬೇಕು ಎನ್ನುವುದು ನಿಜ. ಆದರೆ ದೇಹಕ್ಕೆ ಹೇಗೆ ದೊರೆಯುತ್ತದೆ? ದಿನನಿತ್ಯ ಸೇವಿಸುವ ಹಣ್ಣು ತರಕಾರಿಗಳಲ್ಲೇ ಸಿ ಜೀವಸತ್ವ ಹೇರಳವಾಗಿರುತ್ತದೆ. ಉದಾ, ಕಿತ್ತಳೆ, ದ್ರಾಕ್ಷಿಯಂಥ ಹುಳಿ ಹಣ್ಣುಗಳಲ್ಲಿ, ಸೇಬು, ಕಿವಿ, ಅನಾನಸ್‌, ಪಪ್ಪಾಯಿ, ದಪ್ಪ ಮೆಣಸಿನ ಕಾಯಿ ಇತ್ಯಾದಿಗಳನ್ನು ಸೇವಿಸುವುದರಿಂದ ವಿಟಮಿನ್‌ ಸಿ ಪಡೆಯಬಹುದು. ಪೂರಕಗಳ ಮೂಲಕವೂ ವಿಟಮಿನ್‌ ಸಿ ಸೇವಿಸಬಹುದು. ಅದನ್ನು ಸೇವಿಸುವ ಪ್ರಮಾಣವೆಷ್ಟು ಎಂಬುದಕ್ಕೆ ತಜ್ಞರ ಮಾರ್ಗದರ್ಶನ ಸೂಕ್ತ.

ಇದನ್ನೂ ಓದಿ: Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್‌ ಡ್ರಿಂಕ್‌!

Continue Reading

ಆರೋಗ್ಯ

Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್‌ ಡ್ರಿಂಕ್‌!

ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ ಕೆಲವರ ಸಮಸ್ಯೆಯಾದರೆ, ಇನ್ನೂ ಕೆಲವರದ್ದು ಹೊಟ್ಟೆನೋವಿನ ಸಮಸ್ಯೆ. ಇಂತಹ ಸಮಸ್ಯೆಗಳಿಗೆ ಕೊಂಚ ಆರಾಮದಾಯಕವೆನಿಸುವ ಸರಳ ಉಪಾಯವೊಂದಿದೆ. ಮನೆಯಲ್ಲೇ ನಾವು ನಿತ್ಯ ಪಾಲಿಸಬಹುದಾದ ಸರಳ ಉಪಾಯ. ಅದೂ ಕೇವಲ ನೀರಿನಿಂದ!

VISTARANEWS.COM


on

Edited by

drinking water
Koo

ಪ್ರತಿ ತಿಂಗಳ ಮುಟ್ಟಿನ ನೋವು (Menstruation) ಯಾತನಾಮಯ. ಎಲ್ಲರಿಗೂ ಒಂದೇ ತೆರನಾಗಿ ಆಗಬೇಕೆಂದೇನೂ ಇಲ್ಲವಾದರೂ, ಬಹುತೇಕರಿಗೆ ಋತುಚಕ್ರದ ದಿನಗಳೆಂದರೆ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಹೊಟ್ಟೆಯುಬ್ಬರ, ಕಾಲು ನೋವು, ಸೊಂಟ ನೋವು, ಮಾಂಸಖಂಡಗಳ ಸೆಳೆತ, ನರಸೆಳೆತ, ಶಕ್ತಿಹೀನತೆ, ಉದಾಸೀನತೆ, ಕೆಟ್ಟ ಮೂಡು, ವಿಪರೀತ ಸಿಟ್ಟು ಬರುವುದು ಇತ್ಯಾದಿ ಇತ್ಯಾದಿ ಅಡ್ಡ ಪರಿಣಾಮಗಳು ಇದ್ದೇ ಇರುತ್ತವೆ. ಅತಿಯಾದ ರಕ್ತಸ್ರಾವ ಕೆಲವರ ಸಮಸ್ಯೆಯಾದರೆ, ಇನ್ನೂ ಕೆಲವರದ್ದು ಹೊಟ್ಟೆನೋವಿನ ಸಮಸ್ಯೆ. ಇಂತಹ ಸಮಸ್ಯೆಗಳಿಗೆ ಕೊಂಚ ಆರಾಮದಾಯಕವೆನಿಸುವ ಸರಳ ಉಪಾಯವೊಂದಿದೆ. ಮನೆಯಲ್ಲೇ ನಾವು ನಿತ್ಯ ಪಾಲಿಸಬಹುದಾದ ಸರಳ ಉಪಾಯ. ಅದೂ ಕೇವಲ ನೀರಿನಿಂದ!

ಹೌದು. ಋತುಚಕ್ರದ ಸಂಬಂಧ ಆಗುವ ಹೊಟ್ಟೆಯುಬ್ಬರ, ಮಾಂಸಖಂಡಗಳ ಸೆಳೆತ ಇತ್ಯಾದಿಗಳಿಗೆಲ್ಲ ಕೊಂಚ ಆರಾಮವೆನಿಸುವ ಮದ್ದೊಂದಿದೆ. ಮನೆಯಲ್ಲೇ ಸುಲಭವಾಗಿ ನಿಮಿಷದಲ್ಲಿ ಮಾಡಬಹುದಾದ ಈ ನೀರು ಕೇವಲ ಋತುಚಕ್ರದ ಹೊಟ್ಟೆನೋವಿಗೆ ಮಾತ್ರ ಮುಕ್ತಿ ನೀಡುವುದಿಲ್ಲ, ಬದಲಾಗಿ ಹೊಟ್ಟೆಯ ಬೊಜ್ಜು ಕರಗಿಸಿ ತೂಕ ಇಳಿಸಲೂ ಕೂಡಾ ಸಹಾಯ ಮಾಡುತ್ತದೆ.

ಜೀರಿಗೆ, ಓಂಕಾಳು ಹಾಗೂ ಮೆಂತ್ಯಕಾಳಿನ ನೀರನ್ನು ನಿತ್ಯವೂ ಕುಡಿಯುವುದರಿಂದ ದೇಹದ ಆರೋಗ್ಯಕ್ಕೆ ಸಂಬಂಧಿಸಿ ಸಾಕಷ್ಟು ಬದಲಾವಣೆ ಕಾಣಬಹುದಂತೆ,

ನಿತ್ಯವೂ ಜೀರಿಗೆಯ ನೀರು ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ನಿಧಾನವಾಗಿ ಚುರುಕಾಗುತ್ತದೆಯಂತೆ. ಒಳ್ಳೆಯ ಜೀರ್ಣವ್ಯವಸ್ಥೆಯಿದ್ದರೆ ನಮ್ಮ ಹತ್ತು ಹಲವು ಸಣ್ಣಸಣ್ಣ ಸಮಸ್ಯೆಗಳು ಸರಿಯಾಗುವುದರೊಂದಿಗೆ ಹೊಟ್ಟೆಯುಬ್ಬರದಂತಹ ಆಗಾಗ ಕಾಡುವ ಸಮಸ್ಯೆಗಳೂ ದೂರಾಗುತ್ತವೆ. ಜೀರಿಗೆಯಲ್ಲಿರುವ ಥೈಮಾಲ್‌ ಎಂಬ ಅಂಶವು ಗ್ಯಾಸ್ಟ್ರಿಕ್‌ ಗ್ರಂಥಿಗಳಿಗೆ ಚುರುಕು ಮುಟ್ಟಿಸಿ ಪಚನಕ್ರಿಯೆಯನ್ನು ವೇಗವಾಗಿಸುತ್ತದೆ. ಮುಟ್ಟಿನ ಸಮಯದ ಹೊಟ್ಟೆಯುಬ್ಬರವನ್ನೂ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಇದು ದೇಹದಲ್ಲಿನ ವಿಷಕಾರಿ ಕಲ್ಮಶಗಳನ್ನು ಹೊರಕ್ಕೆ ಹಾಕಿ, ಕೆಟ್ಟ ಕೊಲೆಸ್ಟೆರಾಲ್‌ ಕರಗಿಸುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: Period problems | ಚಳಿಗಾಲದಲ್ಲೇ ಮುಟ್ಟಿನ ತೊಂದರೆಗಳು ಉಲ್ಬಣಿಸುವುದ್ಯಾಕೆ? ಇಲ್ಲಿವೆ ಪರಿಹಾರಗಳು!

ಜೀರಿಗೆ ಹಾಗೂ ಓಂಕಾಳಿನ ನೀರು ನಿತ್ಯವೂ ಕುಡಿಯುವುದರಿಂದ ಕೇವಲ ಇಷ್ಟೇ ಉಪಯೋಗಗಳಲ್ಲ. ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಹಾಗಾದರೆ ಬನ್ನಿ, ಈ ಬೆಳಗಿನ ಡಿಟಾಕ್ಸ್‌ ಫೇಯವನ್ನು ಮಾಡುವುದು ಹೇಗೆ ಎಂದು ನೋಡೋಣ.

ಕಾಲು ಚಮಚ ಜೀರಿಗೆ, ಕಾಲು ಚಮಚ ಮೆಂತ್ಯಕಾಳು ಹಾಗೂ ಕಾಲು ಚಮಚ ಓಂಕಾಳುನ್ನು ನೀರಿಗೆ ಹಾಕಿ ರಾತ್ರಿ ನೆನೆಸಿಡಿ. ರಾತ್ರಿ ಪೂರ ಅವು ನೆನೆಯಲಿ. ನಂತರ ಬೆಳಗ್ಗೆ ಎದ್ದು ಇದನ್ನು ಸೋಸಿಕೊಳ್ಳಿ. ನಂತರ ಈ ನೀರನ್ನು ಕುಡಿಯಿರಿ. ದಿನವೂ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಸಾಕಷ್ಟು ಬದಲಾವಣೆ ನಿಮಗೆ ಕಾಣಬಹುದು. ನೀವು ಚಹಾ ಪ್ರೇಮಿಗಳಾಗಿದ್ದರೆ, ಇದೇ ಮೂರಿ ವಸ್ತುಗಳನ್ನು ಹಾಕಿ ಚಹಾ ಮಾಡಿಕೊಳ್ಳಬಹುದು. ಜೀರಿಗೆ, ಮೆಂತ್ಯಕಾಳು  ಹಾಗೂ ಓಂಕಾಳನ್ನು ನೀರಿಗೆ ಹಾಕಿ ಕುದಿಸಿ ಸೋಸಿಕೊಂಡು ಅದಕ್ಕೆ ಸ್ವಲ್ಪ ನಿಂಬೆಹಣ್ಣು ಹಿಂಡಿ ಕುಡಿಯಬಹುದು. ಇದಕ್ಕೆ ಒಂದು ಚಮಚ ಜೇನುತುಪ್ಪ ಅಥವಾ ಒಂದು ಚಮಚ ಬೆಲ್ಲದ ಹುಡಿಯನ್ನು ಹಾಕಿ ರುಚಿ ಹೆಚ್ಚಿಸಬಹುದು. ಆ ಮೂಲಕ ಋತುಚಕ್ರದ ದಿನಗಳಲ್ಲಿ ಹೊಟ್ಟೆಯುಬ್ಬರಕ್ಕೆ ಹಾಗೂ ಹೊಟ್ಟೆಯಲ್ಲಿರುವ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: Health Tips: ಪ್ರತಿ ಮಹಿಳೆಯನ್ನೂ ಮೌನವಾಗಿ ಕಾಡುವ ಆರೋಗ್ಯ ಸಮಸ್ಯೆಗಳಿವು! ನಿರ್ಲಕ್ಷ್ಯ ಬೇಡ

Continue Reading
Advertisement
World’s first 7.2-metre high-rise train set on trial on Delhi-Jaipur route, video out
ದೇಶ27 mins ago

Viral Video: ಭಾರತದಲ್ಲಿ ವಿಶ್ವದಲ್ಲೇ ಎತ್ತರದ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ, ಇಲ್ಲಿದೆ ವಿಡಿಯೊ

Road Accident
ಕರ್ನಾಟಕ29 mins ago

Road Accident: ನೆಲಮಂಗಲದ ಬಳಿ ಲಾರಿ ಹರಿದು ಯುವತಿ ಸ್ಥಳದಲ್ಲೇ ಸಾವು

High way robbery
ಕರ್ನಾಟಕ54 mins ago

Highway robbery : ಯುವಕ-ಯುವತಿಯನ್ನು ಅಡ್ಡಗಟ್ಟಿ ಬೈಕ್‌, ಐಫೋನ್‌ ಕಿತ್ತುಕೊಂಡು ಹೋದ ಮೂವರು ಸುಲಿಗೆಕೋರರು ಅರೆಸ್ಟ್‌

Restrictions on entry to Dharwad, Supreme Court dismisses Vinay Kulkarni's plea seeking exemption
ಕರ್ನಾಟಕ1 hour ago

Vinay kulkarni: ಧಾರವಾಡಕ್ಕೆ ಪ್ರವೇಶ ನಿರ್ಬಂಧ; ವಿನಾಯಿತಿ ಕೋರಿ ವಿನಯ್‌ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಜಾ

Ram Navami 2023
ಧಾರ್ಮಿಕ2 hours ago

Ram Navami 2023: ಶ್ರೀರಾಮನ ಪರಿಪೂರ್ಣತೆ ನಮ್ಮಲ್ಲಿ ತುಂಬಿಕೊಳ್ಳೋದು ಹೇಗೆ? 

IPL 2023: Rohit likely to be unavailable for some IPL matches to relieve stress
ಕ್ರಿಕೆಟ್2 hours ago

IPL 2023: ಒತ್ತಡ ನಿವಾರಣೆಗಾಗಿ ಕೆಲ ಐಪಿಎಲ್​ ಪಂದ್ಯಗಳಿಗೆ ರೋಹಿತ್​ ಅಲಭ್ಯ ಸಾಧ್ಯತೆ

Karnataka Elections 2023
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಮತ ಪ್ರಮಾಣ ಹೆಚ್ಚಿಸುವ ಆಯೋಗದ ಕ್ರಮವನ್ನು ಬೆಂಬಲಿಸೋಣ

Aam Aadmi Party announces 300 units of free electricity, Rs 3,000. unemployment allowance, Implementation of OPS guarantee scheme
ಕರ್ನಾಟಕ2 hours ago

Karnataka Election: ಎಎಪಿಯಿಂದ 300 ಯೂನಿಟ್‌ ವಿದ್ಯುತ್‌ ಉಚಿತ, 3000 ರೂ. ನಿರುದ್ಯೋಗ ಭತ್ಯೆ, ಒಪಿಎಸ್‌ ಜಾರಿ ಗ್ಯಾರಂಟಿ

Indian govt let go of Rs 7 lakh in GST to save a baby girl’s life
ದೇಶ3 hours ago

ಬಾಲಕಿಯ ಪ್ರಾಣ ಉಳಿಸಲು 7 ಲಕ್ಷ ರೂ. ಜಿಎಸ್‌ಟಿ ಬಿಟ್ಟ ಕೇಂದ್ರ, ಮಾನವೀಯತೆ ಮೆರೆದ ಶಶಿ ತರೂರ್‌

IPL 2023: AB de Villiers wrote an emotional message about RCB
ಕ್ರಿಕೆಟ್3 hours ago

IPL 2023: ಆರ್​ಸಿಬಿ ಬಗ್ಗೆ ಭಾವನಾತ್ಮಕ ಸಂದೇಶ ಬರೆದ ಎಬಿ ಡಿ ವಿಲಿಯರ್ಸ್​

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Paid leave for govt employees involved in the strike
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

amit shah convoy
ಕರ್ನಾಟಕ2 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ2 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 week ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 week ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ1 week ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ1 week ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ1 week ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

ಟ್ರೆಂಡಿಂಗ್‌

error: Content is protected !!