Rainbow Diet: ಬಣ್ಣದ ಕಾಮನಬಿಲ್ಲು ಡಯಟ್‌: ಕಲರ್‌ ಕಲರ್‌ ತಿನ್ನಿ, ಆರೋಗ್ಯವಾಗಿರಿ! - Vistara News

ಆಹಾರ/ಅಡುಗೆ

Rainbow Diet: ಬಣ್ಣದ ಕಾಮನಬಿಲ್ಲು ಡಯಟ್‌: ಕಲರ್‌ ಕಲರ್‌ ತಿನ್ನಿ, ಆರೋಗ್ಯವಾಗಿರಿ!

ರೇನ್‌ಬೋ ಅಥವಾ ಕಾಮನಬಿಲ್ಲು ಡಯಟ್‌ನಲ್ಲಿ (Rainbow Diet) ಏನೇನು ತಿನ್ನಬೇಕು ಅಂತೀರಾ? ಹಾಗೆ ನೋಡಿದರೆ ಇದು ಸರಳ ಆಹಾರ ಪದ್ಧತಿ. ಇಲ್ಲಿ ಏಳು ಬಣ್ಣಗಳಿಗೆ ಹೊಂದುವ ತರಕಾರಿ ಹಣ್ಣುಗಳನ್ನು ನೀವು ನಿಮ್ಮ ತಟ್ಟೆಯಲ್ಲಿರುವಂತೆ ನೋಡಿಕೊಂಡರೆ ಆಯಿತು.

VISTARANEWS.COM


on

rainbow diet
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸದ್ಯಕ್ಕೆ ಭಾರೀ ಚಾಲ್ತಿಯಲ್ಲಿರುವ ರೈನ್‌ಬೋ ಡಯಟ್‌ ಅಂದರೆ ಕಾಮನಬಿಲ್ಲು ಡಯಟ್‌, ಡಯಟ್‌ ಪ್ರಿಯರ ಪಾಲಿಗೇನೂ ಹೊಸತಲ್ಲ. ಇತ್ತೀಚೆಗೆ ತನ್ನ ಕ್ರೇಜ್‌ ಹೆಚ್ಚಿಸಿಕೊಳ್ಳುತ್ತಿರುವ ಈ ಆಹಾರ ಪದ್ಧತಿ ಕಲರ್‌ಫುಲ್.‌ ಇದನ್ನು ಪಾಲಿಸುತ್ತಿರುವ ಮಂದಿ ಇದರ ಫಲವನ್ನು ಪಡೆದು ಹೆಚ್ಚು ಹೆಚ್ಚು ಮಂದಿಗೂ ಈ ಬಗೆಯ ಆಹಾರ ಪದ್ಧತಿ (health tips) ಅನುಸರಿಸಲು ಪ್ರೇರಣೆ ನೀಡುತ್ತಿದ್ದಾರಂತೆ. ಏನಿದು ಕಾಮನಬಿಲ್ಲು ಡಯಟ್‌ (rainbow diet) ಅಂತೀರಾ? ಕಾಮನಬಿಲ್ಲಿನಲ್ಲಿರುವ ಬಣ್ಣಗಳ ಹಣ್ಣುಗಳನ್ನು ಅಥವಾ ತರಕಾರಿಗಳನ್ನು ಸೇವಿಸುವುದು!

ದೇಹಕ್ಕೆ ಒಂದೇ ಬಗೆಯ ಪೋಷಕಾಂಶಗಳು ಲಭ್ಯವಾಗುವುದಕ್ಕಿಂತ ಎಲ್ಲ ಬಗೆಯ ವಿಟಮಿನ್ನು, ಖನಿಜಾಂಶಗಳೂ ಲಭ್ಯವಾಗುವುದು ಮುಖ್ಯ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಈ ಆಹಾರ ಪದ್ಧತಿಯೂ ಕೂಡಾ ಅದೇ ತತ್ವದ ತಳಹದಿಯಲ್ಲಿ ನಿಲ್ಲುತ್ತದೆ. ಎಲ್ಲ ಬಗೆಯ ಬಣ್ಣಗಳು ಅಂದರೆ ಪ್ರಕೃತಿಯ ಏಳು ಬಣ್ಣಗಳನ್ನು ಹೊಂದಿರುವ ಆಹಾರವನ್ನು ಸೇವಿಸುವ ಮೂಲಕ ಎಲ್ಲ ಬಗೆಯ ಪೋಷಕಾಂಶಗಳೂ ನಿತ್ಯವೂ ದೇಹಕ್ಕೆ ಸೇರುವಂತೆ ಮಾಡುವುದು ಹಾಗೂ ತೂಕವನ್ನೂ ಸಮತೋಲನದಲ್ಲಿರಿಸುವುದು ಇದರ ಮುಖ್ಯ ಉದ್ದೇಶ.

ಹಾಗಾದರೆ ರೇನ್‌ಬೋ ಅಥವಾ ಕಾಮನಬಿಲ್ಲು ಡಯಟ್‌ನಲ್ಲಿ ಏನೇನು ತಿನ್ನಬೇಕು ಅಂತೀರಾ? ಹಾಗೆ ನೋಡಿದರೆ ಇದು ಸರಳ ಆಹಾರ ಪದ್ಧತಿ. ಇಲ್ಲಿ ಏಳು ಬಣ್ಣಗಳಿಗೆ ಹೊಂದುವ ತರಕಾರಿ ಹಣ್ಣುಗಳನ್ನು ನೀವು ನಿಮ್ಮ ತಟ್ಟೆಯಲ್ಲಿರುವಂತೆ ನೋಡಿಕೊಂಡರೆ ಆಯಿತು.

1. ಕೆಂಪು: ಕಾಮನಬಿಲ್ಲಿನ ಕೆಂಪು ಬಣ್ಣಕ್ಕೆ ಯಾವ ತರಕಾರಿ/ ಹಣ್ಣನ್ನು ಆರಿಸುತ್ತೀರಿ ಯೋಚಿಸಿ. ಟೊಮೇಟೋ, ಕೆಂಪು ಬಣ್ಣದ ದೊಣ್ಣೆ ಮೆಣಸಿನಕಾಯಿ, ಸ್ಟ್ರಾಬೆರ್ರಿ, ಕಲ್ಲಂಗಡಿ ಹಣ್ಣು ಇತ್ಯಾದಿ ಇತ್ಯಾದಿಗಳ ಪಟ್ಟಿ ಮಾಡಿ. ಪ್ರಕೃತಿಯಲ್ಲಿ ಸಿಗುವ ತರಕಾರಿ ಹಣ್ಣುಗಳ ಪೈಕಿ ಯಾವುದು ಕೆಂಪು ಬಣ್ಣದಲ್ಲಿಯೇ ಲಭ್ಯವಾಗುತ್ತದೆ ಯೋಚಿಸಿ ನೋಡಿ. ಅದರಂತೆ ಯಾವುದಾದರೊಂದು ಕೆಂಪಿ ಬಣ್ಣದ ಹಣ್ಣೋ ತರಕಾರಿಯನ್ನೋ ಆಯ್ಕೆ ಮಾಡಿದರಾಯಿತು. ಆ ದಿನದ ಕೆಂಪು ಬಣ್ಣ ಲಭ್ಯವಾದಂತೆ. ಕೆಂಪು ಬಣ್ಣದ ಇವುಗಳಲ್ಲಿರುವ ಪೋಷಕಾಂಶಗಳು ಹೃದಯ, ಮೂತ್ರಕೋಶ ಹಾಗೂ ಮೂತ್ರನಾಳಗಳನ್ನು ಕಾಯುತ್ತದೆ ಎಂಬುದು ನಂಬಿಕೆ.

2. ಕೇಸರಿ: ಕೇಸರಿ ಅಥವಾ ಕಿತ್ತಳೆ ಬಣ್ಣ ಯಾವೆಲ್ಲ ತರಕಾರಿ ಹಣ್ಣುಗಳಲ್ಲಿವೆ ಎಂದು ಯೋಚಿಸಿ ನೋಡಿ. ಕಿತ್ತಳೆ ಹಣ್ಣು, ಸಿಹಿ ಗೆಣಸು, ಆಪ್ರಿಕಾಟ್‌, ಕ್ಯಾರೆಟ್‌ ಇತ್ಯಾದಿಗಳು ಸಿಕ್ಕಾವು. ಕೇಸರಿ ಬಣ್ಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆಯಂತೆ.

rainbow diet

3. ಹಳದಿ: ಹಳದಿ ಬಣ್ಣ ಕಣ್ಣಿಗೆ ಒಳ್ಳೆಯದಂತೆ. ಅನನಾಸು, ಬಾಳೆಹಣ್ಣು, ಹಳದಿ ದೊಣ್ಣೆ ಮೆಣಸು, ನಿಂಬೆ, ಮುಸಂಬಿ ಇತ್ಯಾದಿಗಳು ಹಳದಿ ಬಣ್ಣವನ್ನು ಧ್ವನಿಸುತ್ತದೆ. ಕಣ್ಣಿನ ಆರೋಗ್ಯಕ್ಕೆ ಇವು ಒಳ್ಳೆಯದು.

ಇದನ್ನೂ ಓದಿ: Menopause Diet: ಋತುಬಂಧದ ಲಕ್ಷಣ ನಿಭಾಯಿಸಲು ಈ ಆಹಾರ ಸಹಕಾರಿ

4. ಹಸಿರು: ಹಸಿರು ಬಣ್ಣಕ್ಕೆ ಹೇರಳವಾಗಿ ಹಣ್ಣು ತರಕಾರಿಗಳು ಸಿಕ್ಕಾವು. ಮುಖ್ಯವಾಗಿ ಬ್ರೊಕೋಲಿ, ಬೆಣ್ಣೆಹಣ್ಣು, ಕಿವಿ, ಹಾಗೂ ಹಸಿರು ಬಣ್ಣದ ಸೊಪ್ಪು ತರಕಾರಿಗಳು ಈ ವಿಭಾಗಕ್ಕೆ ಬರುತ್ತವೆ. ಗರ್ಭಿಣಿ ಸ್ತ್ರೀಯರಿಗೆ ಇವೆಲ್ಲ ಒಳ್ಳೆಯದು.

5. ನೀಲಿ ಹಾಗೂ ನೇರಳೆ: ಈ ಬಣ್ಣದ ಹಣ್ಣು ತರಕಾರಿಗಳಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ಅಧಿಕ ರಕ್ತದೊತ್ತಡವನ್ನು ಸಮತೋಲನಕ್ಕೆ ತರಲು ಅತ್ಯಂತ ಪ್ರಯೋಜನಕಾರಿ. ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ ಗಳಿಗೆ ಇವು ಒಳ್ಳೆಯದು.

6. ಬಿಳಿ: ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ಹಾಡು ಹೇಳಿದರೆ ಸಾಲದು. ಬಿಳಿಯ ಬಣ್ಣದ ತರಕಾರಿ ಹಣ್ಣುಗಳನ್ನೂ ಸೇವಿಸಬೇಕು. ಹೂಕೋಸು, ಈರುಳ್ಳಿ, ಬೆಳ್ಳುಳ್ಳಿ, ಅಣಬೆ ಇತ್ಯಾದಿಗಳನ್ನು ಈ ವಿಭಾಗದಡಿ ಸೇರಿಸಿಕೊಂಡು ಆಹಾರದಲ್ಲಿ ಅಭ್ಯಾಸ ಮಾಡಿಕೊಳ್ಳಬಹುದು. ಈ ಬಣ್ಣದ ಆಹಾರ ಹಲ್ಲು ಹಾಗೂ ಎಲುಬಿನ ಆರೋಗ್ಯಕ್ಕೆ ಒಳ್ಳೆಯದು. 

ಇದನ್ನೂ ಓದಿ: Mono Diet: ಏಕಾಹಾರ ಪದ್ಧತಿಯೆಂಬ ಶಾರ್ಟ್‌ಕಟ್:‌ ದಿಢೀರ್‌ ತೂಕ ಇಳಿಕೆ ಒಳ್ಳೆಯದೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Top 10 Puddings: ಭಾರತದ ಫಿರ್ನಿ, ಖೀರು, ಸಿಹಿ ಪೊಂಗಲ್‌ಗೆ ವಿಶ್ವದ ಟಾಪ್‌ 10 ತಿಂಡಿ ಪಟ್ಟಿಯಲ್ಲಿ ಸ್ಥಾನ!

ಭಾರತ ತನ್ನ ಸಿಹಿತಿಂಡಿಯ (Top 10 Puddings) ವಿಚಾರದಲ್ಲೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಟೇಸ್ಟ್‌ ಅಟ್ಲಾಸ್‌ ನಡೆಸುವ ಸ್ಪರ್ಧೆಯಲ್ಲಿ ವಿಶ್ವದ ಅತ್ಯಂತ ರುಚಿಕರ ಟಾಪ್‌ 10 ರೈಸ್‌ ಪುಡ್ಡಿಂಗ್‌ಗಳ ಪೈಕಿ ಭಾರತದ ಮೂರು ಬಗೆಯ ಪುಡ್ಡಿಂಗ್‌ ಸ್ಥಾನ ಪಡೆದಿರುವುದು ವಿಶೇಷ. ಆ ಮೂಲಕ ನಮ್ಮ ಸರಳವಾದ ಸಿಹಿತಿನಿಸುಗಳ ಪೈಕಿ ಒಂದಾದ ತಮಿಳುನಾಡಿನ ಸಿಹಿ ಪೊಂಗಲ್‌, ಪಂಜಾಬಿನ ಫಿರ್ನಿ ಹಾಗೂ ಒಡಿಶಾದ ಖೀರ್‌ ವಿಶ್ವಮಟ್ಟದಲ್ಲಿ ಸಿಹಿರುಚಿಯ ಮಾನ್ಯತೆ ಪಡೆದಿವೆ.

VISTARANEWS.COM


on

Top 10 Puddings
Koo

ಭಾರತ ಪಾಕಶಾಸ್ತ್ರದಲ್ಲಿ (Top 10 Puddings) ಹೆಸರು ಮಾಡಿದ ದೇಶ. ಭಾರತದ ಬಗೆಬಗೆಯ ಆಹಾರಗಳು, ತಿನಿಸುಗಳು, ವೈವಿಧ್ಯಮಯ ಸಿಹಿತಿಂಡಿಗಳು ಪ್ರಪಂಚದಾದ್ಯಂತ ಹೆಸರು ಮಾಡಿದೆ. ದೇಶವಿದೇಶಗಳಿಂದ ಇಲ್ಲಿನ ಆಹಾರ ಸವಿಯಲೆಂದೇ ಪ್ರವಾಸಿಗರು ಬರುತ್ತಾರೆ. ಸಿಹಿತಿಂಡಿ ಇಲ್ಲಿನ ಜನರ ನಿತ್ಯದ ಆಹಾರಾಭ್ಯಾಸ. ಹಬ್ಬಗಳು ಬಂದರಂತೂ ಈ ಸಿಹಿ ತಿನಿಸುಗಳ ಸಡಗರ ಇನ್ನೂ ಹೆಚ್ಚುತ್ತದೆ. ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಧರ್ಮಗಳ, ಬೇಋಎ ಬೇರೆ ಆಚರಣೆಗಳನ್ನು ಹೊಂದಿದ ಜನರ ಬಗೆಬಗೆಯ ಆಹಾರಾಭ್ಯಾಸಗಳು, ತಿನಿಸುಗಳು ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಸಾಕ್ಷಿ. ಇದೀಗ, ಭಾರತ ತನ್ನ ಸಿಹಿತಿಂಡಿಯ ವಿಚಾರದಲ್ಲೂ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಟೇಸ್ಟ್‌ ಅಟ್ಲಾಸ್‌ ನಡೆಸುವ ಸ್ಪರ್ಧೆಯಲ್ಲಿ ವಿಶ್ವದ ಅತ್ಯಂತ ರುಚಿಕರ ಟಾಪ್‌ 10 ರೈಸ್‌ ಪುಡ್ಡಿಂಗ್‌ಗಳ ಪೈಕಿ ಭಾರತದ ಮೂರು ಬಗೆಯ ಪುಡ್ಡಿಂಗ್‌ ಸ್ಥಾನ ಪಡೆದಿರುವುದು ವಿಶೇಷ. ಆ ಮೂಲಕ ನಮ್ಮ ಸರಳವಾದ ಸಿಹಿತಿನಿಸುಗಳ ಪೈಕಿ ಒಂದಾದ ತಮಿಳುನಾಡಿನ ಸಿಹಿ ಪೊಂಗಲ್‌, ಪಂಜಾಬಿನ ಫಿರ್ನಿ ಹಾಗೂ ಒಡಿಶಾದ ಖೀರ್‌ ವಿಶ್ವಮಟ್ಟದಲ್ಲಿ ಸಿಹಿರುಚಿಯ ಮಾನ್ಯತೆ ಪಡೆದಿವೆ. ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಅಕ್ಕಿ ಪಾಯಸ ಅಥವಾ ಖೀರ್‌ ಮಾಡುವುದು ಸಾಮಾನ್ಯ. ಈ ಅಕ್ಕಿ ಪಾಯಸಕ್ಕೆ ಐದನೇ ಸ್ಥಾನ ಸಿಕ್ಕಿದರೆ, ನಾಲ್ಕನೇ ಸ್ಥಾನದಲ್ಲಿ ಫಿರ್ನಿ ಇದೆ. ಒಂಭತ್ತನೇ ಸ್ಥಾನದಲ್ಲಿ ತಮಿಳುನಾಡಿನ ಪ್ರಸಿದ್ಧ ಸಕ್ಕರೆ ಪೊಂಗಲ್‌ ಅಥವಾ ಸಿಹಿ ಪೊಂಗಲ್‌ ಆಯ್ಕೆಯಾಗಿದೆ.
ಸಾಂಪ್ರದಾಯಿಕ ತಿನಿಸು ಫಿರ್ನಿಯನ್ನು ಸಾಮಾನ್ಯವಾಗಿ ಪುಟ್ಟ ಪುಟ್ಟ ಮಣ್ಣಿನ ಮಡಕೆಗಳಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ತಿನ್ನುವುದು ರೂಢಿ. ಬೇಸಿಗೆಯಲ್ಲಿ ಐಸ್‌ಕ್ರೀಂನಂತೆ ಹಿತವಾಗಿರುವ ಸಾಂಪ್ರದಾಯಿಕ ಶೈಲಿಯ ಸಿಹಿತಿನಿಸಿದು. ಗುಲಾಬಿ ದಳಗಳು, ಪಿಸ್ತಾ ಬಾದಾಮಿಯ ಚೂರುಗಳಿಂದ ಅಲಂಕರಿಸಿ ಕೊಡಲಾಗುತ್ತದೆ.

Sweet kheer

ಸಿಹಿಯಾದ ಖೀರು

ಅಕ್ಕಿಯನ್ನು ಬಳಸಿ ಮಾಡಲಾಗುವ ಸಿಹಿಯಾದ ಖೀರು, ಯಾವುದೇ ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ದೇವರಿಗೆ ನೈವೇದ್ಯ ಇಡಲು ಮಾಡಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಹಾಲು ಹಾಕಿ ಕೇಸರಿಯನ್ನು ಉದುರಿಸಿ ಮಾಡುವ ಸರಳವಾದ ಪಾಯಸವಿದು. ಉತ್ತರ ಭಾರತ, ದಕ್ಷಿಣ ಭಾರತವೆಂಬ ಬೇಧವಿಲ್ಲದೆ, ಈ ಸಿಹಿಯನ್ನು ಎಲ್ಲೆಡೆ ಮಾಡುತ್ತಾರೆ.

Sweet Pongal

ಸಿಹಿ ಪೊಂಗಲ್‌

ಸಿಹಿ ಪೊಂಗಲ್‌ ಅಥವಾ ಸಕ್ಕರೆ ಪೊಂಗಲ್‌ ತಮಿಳುನಾಡಿನ ಪ್ರಖ್ಯಾತ ಸಿಹಿತಿನಿಸು. ಹೆಸರು ಬೇಳೆ ಹಾಗೂ ಅಕ್ಕಿಯನ್ನು ಒಟ್ಟಿಗೆ ಬೇಯಿಸಿ ಬೆಲ್ಲ ಹಾಗೂ ತುಪ್ಪ ಹಾಕಿ ಮಾಡುವ ಘಮಘಮಿಸುವ ಸಿಹಿ ಪಾಯಸವಿದು. ಸಾಂಪ್ರದಾಯಿಕ ಹೊಸ ವರ್ಷವಾದ ಪೊಂಗಲ್‌ ಹಬ್ಬದ ಆಚರಣೆಯ ಸಂದರ್ಭ ಸಿಹಿ ಪೊಂಗಲ್‌ ಅನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಮಾಡಿ, ದೇವರಿಗೆ ಇಟ್ಟು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಬಹಳ ರುಚಿಯಾದ ಸರಳವಾದ ಪಾಯಸವಿದು.

Firin Sutlac

ಟರ್ಕಿಗೆ ಮೊದಲ ಸ್ಥಾನ

ಈ ಸ್ಪರ್ಧೆಯಲ್ಲಿ, ಮೊದಲ ಸ್ಥಾನದಲ್ಲಿ ಟರ್ಕಿಯ ಫಿರಿನ್‌ ಸುಟ್‌ಲ್ಯಾಕ್‌, ಎರಡನೇ ಸ್ಥಾನದಲ್ಲಿ ಥಾಯ್ಲೆಂಡಿನ ಖಾವೋ ನಿಯಾವೋ ಮಾಮುಅಂಗ್‌, ಮೂರನೇ ಸ್ಥಾನದಲ್ಲಿ ಶೋಲೆಹ್‌ ಝರ್ದ್‌ ಇವೆ. ನಾಲ್ಕನೇ ಸ್ಥಾನದಲ್ಲಿ ಭಾರತದ ಫಿರ್ನಿ, ಐದನೇ ಸ್ಥಾನದಲ್ಲಿ ನಮ್ಮ ಖೀರ್‌ ಇವೆ. ಇವಲ್ಲದೆ, ಡೆನ್ಮಾರ್ಕ್‌, ಟರ್ಕಿ, ಪೋರ್ಚುಗಲ್‌ನ ಸಿಹಿ ತಿನಿಸುಗಳೂ ಸ್ಥಾನ ಪಡೆದುಕೊಂಡಿವೆ.

ಇದನ್ನೂ ಓದಿ: Special Food In Kashi: ನೀವು ಕಾಶಿಗೆ ಹೋದರೆ ಈ ತಿಂಡಿಗಳ ರುಚಿ ನೋಡಲು ಮರೆಯದಿರಿ!

Continue Reading

Latest

Cake Tragedy: ಕೇಕ್‌ ತಿಂದು ಬಾಲಕಿ ಸಾವಿನ ಪ್ರಕರಣ; ಸಾವಿಗೆ ನಿಖರ ಕಾರಣ ಬಯಲು

Cake Tragedy: ಹುಟ್ಟು ಹಬ್ಬದಂದು ಕೇಕ್ ತಿಂದು ಬಾಲಕಿ ಮೃತಪಟ್ಟ ಪ್ರಕರಣದಲ್ಲಿ ಬಾಲಕಿ ತಿಂದ ಕೇಕ್ ನಲ್ಲಿ ಹೆಚ್ಚಿನ ಪ್ರಮಾಣದ ಕೃತಕ ಸಿಹಿಕಾರಕ ಬೆರೆಸಲಾಗಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈ ಘಟನೆ ದೇಶಾದ್ಯಂತ ಆತಂಕ ಮೂಡಿಸಿತ್ತು.

VISTARANEWS.COM


on

By

Cake Tragedy
Koo

ಪಟಿಯಾಲಾ: ಹುಟ್ಟು ಹಬ್ಬದಂದು (birthday) ಬೇಕರಿಯೊಂದರಿಂದ ಆನ್‌ಲೈನ್ (online) ಮೂಲಕ ತರಿಸಲಾಗಿದ್ದ ಕೇಕ್ (Cake Tragedy) ತಿಂದು ಹತ್ತು ವರ್ಷದ ಬಾಲಕಿ ಸಾವನ್ನಪ್ಪಿದ (death) ಪ್ರಕರಣಕ್ಕೆ ಸಂಬಂಧಿಸಿ ನಡೆದ ತನಿಖೆಯಲ್ಲಿ ಕೇಕ್ ನಲ್ಲಿ ಹೆಚ್ಚಿನ ಸಾಂದ್ರತೆಯ ಕೃತಕ ಸಿಹಿಕಾರಕ ಬೆರೆಸಲಾಗಿತ್ತು; ಸಾವಿಗೆ ಇದೇ ಕಾರಣ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪಂಜಾಬ್‌ನ (punjab) ಪಟಿಯಾಲಾದಲ್ಲಿ (patiyala) ಮಾರ್ಚ್ 24ರಂದು ಈ ಘಟನೆ ನಡೆದಿತ್ತು. ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಬಾಲಕಿ ಮಾನ್ವಿಯ ಸಾವಿನ ತನಿಖೆಗೆ ಆದೇಶಿಸಿದ್ದರು.

ಮಾನ್ವಿಯ ಹುಟ್ಟುಹಬ್ಬದಂದು ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಚಾಕೊಲೇಟ್ ಕೇಕ್ ಅನ್ನು ತರಿಸಲಾಗಿತ್ತು. ಇದನ್ನು ತಿಂದು ಇಡೀ ಕುಟುಂಬ ಅಸ್ವಸ್ಥಗೊಂಡಿತ್ತು.

ಇದನ್ನೂ ಓದಿ: Belagavi News: ಬಿಲ್ ಮಂಜೂರಾತಿ ವಿಚಾರ ಗ್ರಾಪಂ ಅಧ್ಯಕ್ಷ-ಸದಸ್ಯರ ಮಧ್ಯೆ ಮಾರಾಮಾರಿ; ಸಿಸಿ ಕ್ಯಾಮೆರಾದಲ್ಲಿ ಸೆರೆ

ಕೃತಕ ಸಿಹಿ

ಕೇಕ್‌ನ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದು, ವರದಿಯಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಕ್ರರಿನ್, ಸಿಹಿ ರುಚಿಯ ಸಿಂಥೆಟಿಕ್ ಸಂಯುಕ್ತವನ್ನು ಬಳಸಲಾಗಿದೆ ಎಂದು ಕಂಡು ಹಿಡಿಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ, ಡಿಎಚ್‌ಒ ಡಾ. ವಿಜಯ್ ಜಿಂದಾಲ್ ತಿಳಿಸಿದ್ದಾರೆ.

ಸಣ್ಣ ಪ್ರಮಾಣದ ಸ್ಯಾಕ್ರರಿನ್ ಅನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಸಲಾಗಿದ್ದರೂ ಹೆಚ್ಚಿನ ಮಟ್ಟಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.

ಬೇಕರಿ ವಿರುದ್ಧ ಕ್ರಮ

ಶೀಘ್ರದಲ್ಲೇ ಬೇಕರಿ ವಿರುದ್ಧ ಕ್ರಮ ಜರುಗಿಸಿ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಬೇಕರಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.


ಏನಾಗಿತ್ತು?

10 ವರ್ಷದ ಬಾಲಕಿ ಮಾನ್ವಿಯ ಹುಟ್ಟುಹಬ್ಬಕ್ಕೆ ಪೋಷಕರು ಆನ್‌ಲೈನ್‌ ಮೂಲಕ ಕೇಕ್ ಆರ್ಡರ್ ಮಾಡಿದ್ದರು. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹಂಚಲಾಗಿತ್ತು. ಕೆಲವೇ ಹೊತ್ತಲ್ಲಿ ಕೇಕ್ ತಿಂದವರು ಅಸ್ವಸ್ಥಗೊಂಡಿದ್ದರು. ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಾಲಕಿ ಮಾನ್ವಿ ಸ್ವಲ್ಪ ಹೆಚ್ಚಾಗಿಯೇ ಕೇಕ್ ತಿಂದಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಬಾಲಕಿ ಮೃತಪಟ್ಟಿದ್ದಳು.

ಬಾಲಕಿಯ ಸಾವಿನ ಕುರಿತು ತನಿಖೆಗೆ ಮುಂದಾದ ರಾಜ್ಯದ ಆಹಾರ ಸುರಕ್ಷತಾ ಪ್ರಯೋಗಾಲಯದಿಂದ ಕೇಕ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಮಾನ್ವಿ ಸಾವಿಗೆ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡ ವೀಡಿಯೊದಲ್ಲಿ ಮಾನ್ವಿ ತನ್ನ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಳು.

ಅವಳು ಕೇಕ್ ಕತ್ತರಿಸಿ ಎಲ್ಲರೂ ತಿಂದ ಕೆಲವೇ ಗಂಟೆಗಳ ಅನಂತರ ಅವಳ ಕಿರಿಯ ಸಹೋದರಿ ಸೇರಿದಂತೆ ಇಡೀ ಕುಟುಂಬವು ಅನಾರೋಗ್ಯಕ್ಕೆ ಒಳಗಾಯಿತು. ಹುಡುಗಿಯರು ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ಮಾನ್ವಿ ಅವರ ಬಾಯಿಯಲ್ಲಿ ಶುಷ್ಕತೆ ಉಂಟಾಗಿತ್ತು ಎಂದು ಆಕೆಯ ಅಜ್ಜ ಹೇಳಿದರು.

ಆಕೆ ನಿತ್ರಾಣಗೊಂಡಾಗ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆಕೆಗೆ ಆಮ್ಲಜನಕವನ್ನು ಹಾಕಲಾಯಿತು ಆದರೆ ಯಾವುದಕ್ಕೂ ಸ್ಪಂದಿಸದೆ ಅವಳು ಮೃತಪಟ್ಟಿದ್ದಳು. ‘ಕೇಕ್ ಕನ್ಹಾ’ನಿಂದ ಆರ್ಡರ್ ಮಾಡಿದ್ದ ಚಾಕೊಲೇಟ್ ಕೇಕ್ ನಲ್ಲಿ ವಿಷಕಾರಿ ಅಂಶವಿತ್ತು ಎಂದು ಮಾನ್ವಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

Continue Reading

ಪ್ರವಾಸ

Special Food In Kashi: ನೀವು ಕಾಶಿಗೆ ಹೋದರೆ ಈ ತಿಂಡಿಗಳ ರುಚಿ ನೋಡಲು ಮರೆಯದಿರಿ!

ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಈ ಕುರಿತ ಮಾಹಿತಿ (Special Food In Kashi) ಇಲ್ಲಿದೆ.

VISTARANEWS.COM


on

Special Food In Kashi
Koo

ಕಾಶಿ ಅಥವಾ ವಾರಣಾಸಿಗೆ ಜೀವನದಲ್ಲೊಮ್ಮೆಯಾದರೂ ಹೋಗಬೇಕು, ಕಾಶಿ ವಿಶ್ವನಾಥನ ದರ್ಶನ ಮಾಡಬೇಕು. ಗಂಗೆಯನ್ನು ಕಂಡು ಕೈಮುಗಿದು ಮುಳುಗೆದ್ದು ಗಂಗಾರತಿಯನ್ನು ನೋಡಿ ಈ ಬದುಕು ಧನ್ಯ ಎಂದು ನೆಮ್ಮದಿ ಪಡೆಯಬೇಕು ಎಂಬುದು ಬಹುತೇಕ ಹಿಂದೂಗಳ ಜೀವಿತಾವಧಿಯ ಕನಸು. ಹಿಂದೆಲ್ಲ ಕಾಶಿಗೆ ಹೋಗುವುದೇ ಜೀವಿತಾವಧಿಯ ಅತ್ಯುನ್ನತವಾದ ದೊಡ್ಡ ಕನಸು. ಬಹಳ ದೂರ ಎಂಬ ಕಾರಣದಿಂದ ಹಿಡಿದು ಬದುಕಿನ ಜಂಜಡಗಳನ್ನೆಲ್ಲ ಮುಗಿಸಿದ ಮೇಲೆ ವೃದ್ಧಾಪ್ಯ ಸಮೀಪಿಸುವ ಹೊತ್ತಿಗೆ ಕಾಶಿಗೊಮ್ಮೆ ಹೇಗಾದರೂ ಮಾಡಿ ಹೋಗಿ ನೋಡಿ ಪ್ರಾಣ ಬಿಡುತ್ತೇನೆ ಎಂಬ ಸ್ಥಿತಿ ಹಲವರದ್ದಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜಗತ್ತು ಬದಲಾಗಿದೆ. ಕಾಶಿಯನ್ನು ನೋಡಲು ವೃದಾಪ್ಯದವರೆಗೆ ಕಾಯುವ ತಾಳ್ಮೆ ಯಾರಿಗೂ ಇಲ್ಲ. ಅಂದುಕೊಂಡ ತಕ್ಷಣ ವಿಮಾನದಲ್ಲೋ, ರೈಲಿನಲ್ಲೋ ಯುವಜನರೂ ಕೂಡಾ ಕಾಶಿಗೆ ಹೋಗಿ ಧನ್ಯರಾಗುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಕಾಶಿಯ ವಿಶ್ವನಾಥನನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಷ್ಟೇ ಅಲ್ಲ, ಯುವಜನರ ಸಂಖ್ಯೆಯಲ್ಲಿಯೂ ಭಾರೀ ಏರಿಕೆಯಾಗಿದೆ.
ಆದರೆ, ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಬನ್ನಿ, ಕಾಶಿಯ ಗಲ್ಲಿಗಳಲ್ಲೊಮ್ಮೆ ಸುತ್ತಾಡಿ, ಇಲ್ಲಿ ಬಂದರೆ ತಿನ್ನಲೇಬೇಕಾದ ತಿನಿಸುಗಳು ಯಾವುವು ಎಂಬುದನ್ನು ನೋಡಿಕೊಂಡು (Special Food In Kashi) ಬರೋಣ.

Kachodi Subji

ಕಚೋಡಿ ಸಬ್ಜಿ

ಕಾಶಿಯಲ್ಲಿ ನೀವು ಯಾವದೇ ಹೊಟೇಲಿನಲ್ಲಿ ಉಳಿದುಕೊಂಡರೂ, ತಿನ್ನಲೆಂದು ಕಾಶಿಯ ಯಾವುದೇ ಗಲ್ಲಿಗಿಳಿದರೂ ಸಾಕು ನಿಮ್ಮನ್ನು ಕಚೋಡಿ ಸಬ್ಜಿ ಸ್ವಾಗತಿಸುತ್ತದೆ. ಕಾಶಿಯ ಬೆಳಗ್ಗಿನ ಉಪಹಾರಗಳ ಪೈಕಿ ಕಚೋಡಿ ಸಬ್ಜಿ ಪ್ರಮುಖವಾದುದು. ಒಳಗಡೆ ಬೇಳೆಕಾಳುಗಳ ಹೂರಣ ಹಾಕಿ ವಡೆಯಂತೆ ತಟ್ಟಿ ಎಣ್ಣಿಯಲ್ಲಿ ಬೇಯಿಸಿ ಆಲೂಗಡ್ಡೆಯ ಸಬ್ಜಿಯೊಂದಗೆ ಅವರು ಸವಿಯಲು ಕೊಡುವ ಕಚೋಡಿಯು ಆಹಾ ಎಂಬ ರುಚಿ. ವೃದ್ಧರಿಂದ ಮಕ್ಕಳವರೆಗೆ ಎಲ್ಲರೂ ಸವಿದು ಚಪ್ಪರಿಸುವ ಈ ಬೆಳಗಿನ ತಿಂಡಿಯನ್ನು ಕಾಶಿಯಲ್ಲಿದ್ದಾಗ ತಿನ್ನದೇ ಇದ್ದರೆ ಏನೋ ಕಳೆದುಕೊಂಡಂತೆ.

Tomato chaat

ಟಮಾಟರ್‌ ಚಾಟ್‌

ಕಾಶಿಯ ಜನಪ್ರಿಯ ಚಾಟ್‌ ಎಂದರೆ ಟಮಾಟರ್‌ ಚಾಟ್‌. ಇಲ್ಲಿನ ಸ್ಥಳೀಯರೂ, ಇಲ್ಲಿಗೆ ಬರುವ ಪ್ರವಾಸಿಗರೂ ಇಷ್ಟಪಟ್ಟು ತಿನ್ನುವ ಚಾಟ್‌ ಇದು. ಗೋಲ್‌ಗಪ್ಪ, ಸೇವ್‌ಪುರಿ, ದಹಿ ಪುರಿ, ಟಿಕ್ಕಿ ಚಾಟ್‌ ಮತ್ತಿತರ ಚಾಟ್‌ಗಳು ಎಲ್ಲೆಡೆಯೂ ದೊರೆತರೂ, ಈ ಟಮಾಟರ್‌ ಚಾಟ್‌ ಮಾತ್ರ ಕಾಶಿಯ ಸ್ಪೆಷಲ್‌. ಇಲ್ಲಿ ಟಮಾಟರ್‌ ಚಾಟ್‌ನ ರುಚಿ ಜೀವನದಲ್ಲೊಮ್ಮೆಯಾದರೂ ನೋಡಬೇಕು ಎನ್ನುತ್ತಾರೆ ಚಾಟ್‌ ಪ್ರಿಯರು.

malaiyo sweet

ಮಲೈಯೋ

ಬಾಯಿಗಿಟ್ಟರೆ ಕರಗುವ ಹಾಲಿನ ಕೆನೆಯಿಂದಲೇ ಮಾಡುವ ಈ ಸಿಹಿತಿನಿಸು ಐಸ್‌ಕ್ರೀಮಿನಂತೆ. ಆಹಾ ಎನ್ನುವ ರುಚಿಯ, ಕೇಸರಿಯ ಘಮದ ತಿನಿಸು. ಕೇವಲ ಚಳಿಗಾಲದಲ್ಲಿ ಮಾತ್ರ ಲಭ್ಯವಿರುವ ಈ ತಿನಿಸು, ಚಳಿಗಾಲದಲ್ಲಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಾರೆ ಕೂಡ.

Rabdi Jalebi

ರಬ್ಡಿ ಜಿಲೇಬಿ

ರಬ್ಡೀ ಜೊತೆಗೆ ಜೀಲೇಬಿ ಸೇರಿಸಿ ತಿನ್ನುವ ಮಜಾವೇ ಬೇರೆ. ಹಾಲಿನಿಂದ ಮಾಡುವ ರಬ್ಡೀ ಎಂಬ ಸಿಹಿತಿನಿಸನ್ನು ಹಾಗೆಯೇ ತಿನ್ನಬಹುದಾದರೂ, ಬಿಸಿಬಿಸಿ ಜಿಲೇಬಿ ಜೊತೆಗೆ ಚಳಿಚಳಿಯಾಗ ರಬ್ಡೀ ಸುರಿದು ತಿಂದರೇನೇ ರುಚಿ.

Banarasi Paan

ಬನಾರಸಿ ಪಾನ್‌

ಭರ್ಜರಿ ಊಟವೊಂದನ್ನು ಉಂಡ ಮೇಲೆ ಒಂದು ಪಾನ್‌ ಹಾಕಿ ಬಾಯಿ ಚಪ್ಪರಿಸದಿದ್ದರೆ ಊಟ ಉಂಡಂತಾಗದು. ಕಾಶೀಯ ಪಾನ್‌ನ ರುಚಿಯನ್ನು ವರ್ಣಿಸಿ ಬರೆಯದ ಕವಿತೆಗಳಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಕಾಶಿಗೆ ಹೋಗಿ ಕವಳ ಹಾಕದಿದ್ದರೆ ಅದು ವ್ಯರ್ಥ ಜೀವನವೇ ಸರಿ.

Banarasi Lassi

ಲಸ್ಸೀ

ಲಸ್ಸಿಯ ನಿಜವಾದ ರುಚಿಯನ್ನು ಸವಿಯಬೇಕೆಂದಿದ್ದರೆ ಕಾಶಿಗೆ ಹೋಗಬೇಕು. ದಪ್ಪ ಮೊಸರಿನಿಂದ ಮಾಡಿದ ಈ ಲಸ್ಸಿಯ ಮೇಲೆ ಕೆನೆಯನ್ನೂ ಹಾಕಿ ಮಣ್ಣಿನ ಕಪ್‌ಗಳಲ್ಲಿ ನೀಡಿದರೆ, ಹೊಟ್ಟೆಗೂ ಮನಸ್ಸಿಗೂ ತಂಪು. ಕಾಶಿ ಗಲ್ಲಿಗಳಲ್ಲೆಲ್ಲ ಸುತ್ತಾಡಿ ಸುಸ್ತಾದ ಮೇಲೆ ಒಂದು ಲಸ್ಸಿ ಕುಡಿದರೆ ಸುಸ್ತೆಲ್ಲ ಮಾಯ!

ಇದನ್ನೂ ಓದಿ: Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

Continue Reading

ದೇಶ

Everest Spices: ಸಿಂಗಾಪುರ ಬಳಿಕ ಹಾಂಕಾಂಗ್‌ನಲ್ಲೂ ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ ಬ್ಯಾನ್!

Everest Spices: ಮಸಾಲಾ ಉತ್ಪನ್ನಗಳಿಗಾಗಿ ಜಾಗತಿಕವಾಗಿ ಹೆಸರು ಗಳಿಸಿರುವ ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ ಕಂಪನಿಗಳು ಈಗ ನಕಾರಾತ್ಮಕವಾಗಿ ಸುದ್ದಿಯಾಗುತ್ತಿವೆ. ಸಿಂಗಾಪುರ ಬಳಿಕ ಹಾಂಕಾಂಗ್‌ಲ್ಲೂ ಎವರೆಸ್ಟ್‌ ಹಾಗೂ ಎಂಡಿಎಚ್‌ ಕಂಪನಿಯ ನಾಲ್ಕು ಮಸಾಲಾ ಪದಾರ್ಥಗಳ ಮಾರಾಟ ನಿಷೇಧಿಸಿದ್ದು, ಕಂಪನಿಗಳು ಈಗ ಸಂಕಷ್ಟಕ್ಕೆ ಸಿಲುಕಿವೆ.

VISTARANEWS.COM


on

Everest Spices
Koo

ಸಿಟಿ ಆಫ್‌ ವಿಕ್ಟೋರಿಯಾ: ಸಿಂಗಾಪುರದಲ್ಲಿ ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ (Spices) ತಯಾರಕ ಎವರೆಸ್ಟ್‌ನ (Everest Spices) ಫಿಶ್ ಕರಿ ಮಸಾಲಾ (Fish Curry Masala) ಮಾರಾಟ ನಿಷೇಧಗೊಳಿಸಿದ ಬೆನ್ನಲ್ಲೇ, ಹಾಂಕಾಂಗ್‌ನಲ್ಲೂ (Hong Kong) ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲಾ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ. ಹಾಗಾಗಿ, ಜಾಗತಿಕವಾಗಿ ಭಾರತದ ಎರಡು ಮಸಾಲಾ ಬ್ರ್ಯಾಂಡ್‌ಗಳು ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾಗಿವೆ. ಇದರ ಪರಿಣಾಮ ಭಾರತದ ಉತ್ಪನ್ನಗಳ ಮೇಲೂ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.

ಭಾರತ ಸೇರಿ ಜಗತ್ತಿನೆಲ್ಲೆಡೆ ಖ್ಯಾತಿ ಗಳಿಸಿರುವ ಎಂಡಿಎಚ್‌ನ ಮೂರು ಮಸಾಲಾ ಪದಾರ್ಥಗಳು ಹಾಗೂ ಎವರೆಸ್ಟ್‌ನ ಒಂದು ಮಸಾಲಾ ಪದಾರ್ಥದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕಾರ್ಸಿನೋಜೆನಿಕ್‌ ರಾಸಾಯನಿಕ ಇರುವ ಕಾರಣ ಹಾಂಕಾಂಗ್‌ ಆಹಾರ ನಿಯಂತ್ರಣ ಪ್ರಾಧಿಕಾರವು ನಾಲ್ಕೂ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ. ಎಂಡಿಎಚ್‌ನ ಕರಿ ಪೌಡರ್‌, ಮಿಕ್ಸ್ಡ್‌ ಮಸಾಲಾ ಪೌಡರ್‌ ಹಾಗೂ ಸಾಂಬಾರ್‌ ಮಸಾಲಾ ಮತ್ತು ಎವರೆಸ್ಟ್‌ನ ಫಿಶ್‌ ಕರಿ ಮಸಾಲಾವನ್ನು ನಿಷೇಧಿಸಲಾಗಿದೆ.

“ಎಂಡಿಎಚ್‌ನ ಮೂರು ಹಾಗೂ ಎವರೆಸ್ಟ್‌ನ ಒಂದು ಉತ್ಪನ್ನದ ಸ್ಯಾಂಪಲ್‌ ಪಡೆದು ಪರಿಶೀಲನೆ ನಡೆಸಲಾಗಿದೆ. ಇವುಗಳಲ್ಲಿ ಪೆಸ್ಟಿಸೈಡ್‌ ಎಥಿಲೀನ್‌ ಆಕ್ಸೈಡ್‌ ಪತ್ತೆಯಾಗಿದೆ. ಈ ಆಕ್ಸೈಡ್‌ ಮನುಷ್ಯನು ಸೇವಿಸಲು ಅಪಾಯಕಾರಿಯಾಗಿದೆ. ಕ್ಯಾನ್ಸರ್‌ ಕಾರಕ ಕಾರ್ಸಿನೋಜೆನಿಕ್‌ ರಾಸಾಯನಿಕವೂ ಪತ್ತೆಯಾಗಿದೆ. ಹಾಗಾಗಿ, ದೇಶದ ಮಾರಾಟಗಾರರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡದಂತೆ, ಮಳಿಗೆಗಳಲ್ಲಿ ಇರಿಸದಂತೆ ಸೂಚಿಸಲಾಗಿದೆ” ಎಂಬುದಾಗಿ ಹಾಂಕಾಂಗ್‌ನ ಸೆಂಟರ್‌ ಫಾರ್‌ ಫುಡ್‌ ಸೇಫ್ಟಿ ತಿಳಿಸಿದೆ. ಇವುಗಳನ್ನು ನಿಷೇಧಿಸಿ ಏಪ್ರಿಲ್‌ 5ರಂದೇ ಆದೇಶ ಹೊರಡಿಸಿದೆ.

ಕ್ಯಾನ್ಸರ್‌ ಕುರಿತು ಸಂಶೋಧನೆ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆಯೇ ಎಥಿಲೀನ್‌ ಆಕ್ಸೈಡ್‌ನ ಅಪಾಯದ ಕುರಿತು ವರದಿ ನೀಡಿದೆ. ಇದು ಕ್ಯಾನ್ಸರ್‌ ಕಾರಕ ಎಂಬುದಾಗಿ ಜಾಗತಿಕ ಸಂಸ್ಥೆ ತಿಳಿಸಿದೆ. ಹಾಗಾಗಿ, ನಾಲ್ಕೂ ಉತ್ಪನ್ನಗಳ ಸಂಗ್ರಹ, ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಹಾಂಕಾಗ್‌ ತಿಳಿಸಿದೆ. ಅನುಮತಿ ನೀಡಿದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿ ಇಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಸಿಂಗಾಪುರ ಕೂಡ ಎವರೆಸ್ಟ್‌ ಫಿಶ್‌ ಕರಿ ಮಸಾಲಾ ನಿಷೇಧಿಸುವಾಗ ತಿಳಿಸಿತ್ತು.

ಇದನ್ನೂ ಓದಿ: Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

Continue Reading
Advertisement
Lok sabha Election
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ಈ ದಿನ ನಮ್ಮದು, ನಮ್ಮ ಅಧಿಕಾರ ಚಲಾಯಿಸೋಣ

food
ಕರ್ನಾಟಕ3 hours ago

Food Poisoning : ಮದುವೆ ಮನೆ ಊಟ ತಿಂದ ನೂರಾರು ಮಂದಿ ಅಸ್ವಸ್ಥ; ಆಸ್ಪತ್ರೆಯಲ್ಲಿ ಹಾಹಾಕಾರ

PM Narendra Modi will visit Sirsi on April 28
ಉತ್ತರ ಕನ್ನಡ4 hours ago

Lok Sabha Election 2024: ಶಿರಸಿಯಲ್ಲಿ ಏಪ್ರಿಲ್‌ 28ರಂದು ಪ್ರಧಾನಿ ನರೇಂದ್ರ ಮೋದಿ ಸಮಾವೇಶ

Bus Driver attacked
ಕರ್ನಾಟಕ4 hours ago

Bus driver Attacked : ಮುಸ್ಲಿಮ್ ಯುವಕರಿಂದ ಬಸ್​ ಚಾಲಕನ ಮೇಲೆ ಹಲ್ಲೆ, ನೌಕರರಿಂದ ​ ಠಾಣೆ ಮುಂಭಾಗ ಧರಣಿ

IPL 2024
ಪ್ರಮುಖ ಸುದ್ದಿ4 hours ago

IPL 2024 : ಆರ್​​ಸಿಬಿಗೆ ಸಿಕ್ಕಿತು ಕೊನೆಗೂ ಒಂದು ವಿಜಯ; ಎಸ್​ಆರ್​ಎಚ್​ ವಿರುದ್ಧ 35 ರನ್ ಗೆಲುವು

Viral News
ವೈರಲ್ ನ್ಯೂಸ್4 hours ago

Viral News: ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿದ ಬುದ್ಧಿವಂತ ಮಂಗ; ವಿಡಿಯೊ ನೀವೂ ನೋಡಿ

lok sabha Election
ಪ್ರಮುಖ ಸುದ್ದಿ4 hours ago

lok sabha election : ಒಂದು ವರ್ಷದ ಕೂಸಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಬಂದ ಪೊಲೀಸ್​​!

Car Accident
ಪ್ರಮುಖ ಸುದ್ದಿ5 hours ago

Car Accident : ಟೈರ್​ ಬ್ಲಾಸ್ಟ್​ ಆಗಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕಾರು; ಇಬ್ಬರ ದುರ್ಮರಣ

Narendra Modi
ದೇಶ5 hours ago

Narendra Modi: ಪ್ರಧಾನಿ ಮೋದಿಗೆ ಜಿ 7 ಶೃಂಗಸಭೆಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

khalistan movement
ಪ್ರಮುಖ ಸುದ್ದಿ5 hours ago

khalistan Movement : ಲಂಡನ್​ ಭಾರತ ಹೈಕಮಿಷನ್​ ಮೇಲೆ ದಾಳಿ ಮಾಡಿದ್ದ ಖಲಿಸ್ತಾನಿ ಉಗ್ರ ಎನ್​ಐಎ ವಶಕ್ಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ11 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ11 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ15 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 202416 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು4 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET 2024 Exam
ಬೆಂಗಳೂರು4 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌