Ugadi 2024: ಯುಗಾದಿಗೆ ಏನ್‌ ವಿಶೇಷ? ಇಲ್ಲಿದೆ ನಿಮಗಾಗಿ ಸ್ಪೆಷಲ್‌ ಮೆನು! - Vistara News

ಆಹಾರ/ಅಡುಗೆ

Ugadi 2024: ಯುಗಾದಿಗೆ ಏನ್‌ ವಿಶೇಷ? ಇಲ್ಲಿದೆ ನಿಮಗಾಗಿ ಸ್ಪೆಷಲ್‌ ಮೆನು!

ಈ ಯುಗಾದಿಗೆ (Ugadi 2024) ಪ್ರತಿವರ್ಷಕ್ಕಿಂತ ಏನಾದರೂ ಬೇರೆ ಮಾಡುವ ಆಸೆಯಿದ್ದರೆ, ಈ ಸವಿರುಚಿಗಳನ್ನು ಪ್ರಯತ್ನಿಸಬಹುದು. ಇವುಗಳ ಜೊತೆಗೆ ಎಂದಿನ ವ್ಯಂಜನಗಳನ್ನೂ ಮಾಡುವ ಉತ್ಸಾಹವಿದ್ದರೆ, ಅದು ನಿಮ್ಮ ರಟ್ಟೆ ಬಲ, ತಿನ್ನುವವರ ಹೊಟ್ಟೆ ಬಲ!

VISTARANEWS.COM


on

Ugadi sweets
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯುಗಾದಿಗೆ ವಿಶೇಷವೇನೆಂದು ಕೇಳಿದರೆ ಬೇವು-ಬೆಲ್ಲ, ಮಾವಿನಕಾಯಿ ಚಿತ್ರಾನ್ನ, ಹೋಳಿಗೆ… ಎಂಬ ಮಾಮೂಲು ಮೆನುಗಳೇ ದೊರೆಯುತ್ತವೆ ಹೆಚ್ಚಿನ ಕಡೆಗಳಲ್ಲಿ. ಆದರೆ ಈ ಹಬ್ಬಕ್ಕೆ ಬೇರೇನಾದರೂ ವಿಶೇಷವಾಗಿ ಮಾಡುವ ಬಯಕೆಯಿದ್ದು, ಏನು ಮಾಡುವುದು ಎಂಬ ಯೋಚನೆಯೇ? ಇಲ್ಲಿದೆ ಕೆಲವು ರುಚಿಕಟ್ಟಾದ ಹಬ್ಬದಡುಗೆಗಳು. ಮಾಡಿ ಸವಿಯಿರಿ.

avalakki ladu

ಸುಲಭವಾಗಿ ಮಾಡುವ ಅವಲಕ್ಕಿ ಲಾಡು

ಬೇಕಾಗುವ ವಸ್ತುಗಳು: ದಪ್ಪ ಅವಲಕ್ಕಿ- 1 ಕಪ್‌, ಪುಡಿ ಸಕ್ಕರೆ- 1 ಕಪ್‌, ಕೊಬ್ಬರಿ ತುರಿ- 1/2 ಕಪ್‌, ತುಪ್ಪ- 1/2 ಕಪ್‌, ಏಲಕ್ಕಿ ಘಮಕ್ಕೆ
ವಿಧಾನ: ಬಾಣಲೆಯಲ್ಲಿ ಅವಲಕ್ಕಿಯನ್ನು ಕೆಂಪಾಗುವವರೆಗೆ ಹುರಿದುಕೊಳ್ಳಿ. ಅದು ಸ್ವಲ್ಪ ಆರಿದ ನಂತರ ಮಿಕ್ಸಿಗೆ ಹಾಕಿ ಪುಡಿಮಾಡಿ. ಇದಕ್ಕೆ ಸಕ್ಕರೆ ಪುಡಿ, ಕೊಬ್ಬರಿ ತುರಿ ಮತ್ತು ಏಲಕ್ಕಿಯನ್ನು ಸೇರಿಸಿ, ಮತ್ತೆ ಮಿಕ್ಸಿಗೆ ಹಾಕಿಕೊಳ್ಳಿ. ಇವೆಲ್ಲವನ್ನೂ ಅಗಲ ಬಾಯಿಯ ಪಾತ್ರೆಗೆ ಹಾಕಿ ತುಪ್ಪ ಸೇರಿಸಿಕೊಳ್ಳಿ. ಈ ಮಿಶ್ರಣ ಬೆಚ್ಚಗಿರುವಾಗಲೇ ಉಂಡೆ ಮಾಡಿ.

ರುಚಿಕರ ಅತಿರಸ

ಬೇಕಾಗುವ ವಸ್ತುಗಳು: ಹಿಟ್ಟು ಮಾಡಿದ ಅಕ್ಕಿ – 1/4 ಕೆ.ಜಿ, ತೆಂಗಿನ ಕಾಯಿ 1/2, ಬೆಲ್ಲ- 1/4 ಕೆಜಿ. ಕರಿಯಲು ಎಣ್ಣೆ
ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು ಹತ್ತಿಯ ಬಟ್ಟೆಯ ಮೇಲೆ ನೆರಳಿನಲ್ಲಿ ಒಣಗಿಸಿ. ಅದರ ತೇವಾಂಶ ಶೇ. ೭೫ರಷ್ಟು ಹೋಗುತ್ತಲೇ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಇದನ್ನು ಜರಡಿ ಮಾಡಿ, ತರಿಯನ್ನು ತೆಗೆಯಿರಿ. ತೆಂಗಿನ ಕಾಯನ್ನು ಹೆಚ್ಚು ನೀರು ಸೇರಿಸದೆಯೆ ರುಬ್ಬಿ. ಬೆಲ್ಲವನ್ನು ಪಾಕಕ್ಕಿಡಿ. ನೂಲು ಪಾಕ ಬಂದ ಮೇಲೆ ಇದಕ್ಕೆ ರುಬ್ಬಿದ ತೆಂಗಿನ ಕಾಯಿ ಮತ್ತು ಅಕ್ಕಿಯ ನುಣ್ಣನೆಯ ಹಿಟ್ಟನ್ನು ಸೇರಿಸಿ, ಚೆನ್ನಾಗಿ ಕಲೆಸಿ. ಸಣ್ಣ ಉಂಡೆಗಳಾಗಿ ಮಾಡಿ ಅಂಗೈಯಲ್ಲೇ ತಟ್ಟಿಕೊಳ್ಳಿ. ಕಾದ ಎಣ್ಣೆಯಲ್ಲಿ ಕರಿಯಿರಿ.

ಕಟ್ಟಿ ನೋಡಿ ಕೊಟ್ಟೆ ಕಡುಬು

ಬೇಕಾಗುವ ವಸ್ತುಗಳು: ಕುಚ್ಚಲಕ್ಕಿ ಅಥವಾ ಇಡ್ಲಿ ಅಕ್ಕಿ- 1 ಕಪ್‌, ಉದ್ದಿನ ಬೇಳೆ- 1/2 ಕಪ್‌, ಹಸಿಶುಂಠಿ- ಒಂದಿಂಚು, ಹಸಿಮೆಣಸು- ಖಾರಕ್ಕೆ, ಕರಿಬೇವಿನ ಎಲೆಗಳು- ಸ್ವಲ್ಪ, ಸ್ವಲ್ಪ ಉಪ್ಪು, ಕೊಟ್ಟೆ ಮಾಡುವುದಕ್ಕೆ ಬಾಳೆಲೆ
ವಿಧಾನ: ಅಕ್ಕಿ, ಬೇಳೆಯನ್ನು ಪ್ರತ್ಯೇಕವಾಗಿ ೬ ತಾಸುಗಳ ಕಾಲ ನೆನೆಸಿ. ನಂತರ ಅವುಗಳನ್ನು ಚೆನ್ನಾಗಿ ತೊಳೆದು ಪ್ರತ್ಯೇಕವಾಗಿಯೇ ರುಬ್ಬಿ. ಉದ್ದನ್ನು ನುಣ್ಣಗೆ ರುಬ್ಬಿಕೊಂಡರೆ, ಅಕ್ಕಿಯನ್ನು ತರಿಯಾಗಿ ರುಬ್ಬಿಕೊಳ್ಳಿ. ಎಲ್ಲವನ್ನೂ ಒಟ್ಟಿಗೆ ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಸಿದ್ಧಪಡಿಸಿ. ಇದಕ್ಕೆ ಹಸಿಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸಣ್ಣಗೆ ಕೊಚ್ಚಿಹಾಕಿ. ಎಲ್ಲವನ್ನೂ ಸೇರಿಸಿ ಚೆನ್ನಾಗಿ ಹುದುಗು ಬರಿಸಿ. ಬಾಳೆಯಲ್ಲಿ ಸಣ್ಣ ವೃತ್ತಾಕಾರದ ಕೊಟ್ಟೆಗಳನ್ನು ಮಾಡಿ. ಕೆಲವರು ದೊಡ್ಡ ಹಲಸಿನ ಎಲೆಗಳನ್ನೂ ಕೊಟ್ಟೆಗಳನ್ನು ಮಾಡುತ್ತಾರೆ. ಹುದುಗಿದ ಹಿಟ್ಟನ್ನು ಕೊಟ್ಟೆಯಲ್ಲಿ ಹಾಕಿ ಹಬೆಯಲ್ಲಿ ಬೇಯಿಸಿ. ಇದನ್ನು ನಿಮ್ಮಿಷ್ಟದ ಯಾವುದೂ ಕಾಯಿ ಚಟ್ಣಿಯೊಂದಿಗೆ ಸವಿಯಬಹುದು.

kai vada

ಹಬ್ಬಕ್ಕೊಂದು ಕರುಂಕುರುಂ ಖಾರ ತಿಂಡಿ ಬೇಡವೇ? ಇಲ್ಲಿದೆ ನೋಡಿ.

ಗರಿಗರಿಯಾದ ಕಾಯಿ ವಡೆಗೆ

ಬೇಕಾಗುವ ವಸ್ತುಗಳು: ಅಕ್ಕಿ- 1 ಕಪ್‌, ಕಾಯಿತುರಿ- 1/2 ಕಪ್‌, ಜೀರಿಗೆ- 1 ಚಮಚ, ಬ್ಯಾಡಗಿ ಮೆಣಸಿನ ಕಾಯಿ- 5-6, ಉಪ್ಪು ರುಚಿಗೆ, ಚಿಟಿಕೆ ಅರಿಶಿನ, ಕರಿಯಲು ಎಣ್ಣೆ
ವಿಧಾನ: ಅಕ್ಕಿಯನ್ನು ನಾಲ್ಕು ತಾಸುಗಳಷ್ಟು ನೆನೆಸಿ. ಚೆನ್ನಾಗಿ ತೊಳೆದು ಉಳಿದೆಲ್ಲ ಪರಿಕರಗಳನ್ನು ಹಾಕಿ ನುಣ್ಣಗೆ ರುಬ್ಬಿ. ಆದರೆ ರುಬ್ಬುವಾಗ ಹೆಚ್ಚು ನೀರು ಸೇರಿಸದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಈ ಹಿಟ್ಟನ್ನು ಪುಟ್ಟದಾಗಿ ತಟ್ಟಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ನಾಲ್ಕಾರು ದಿನಗಳವರೆಗೆ ಇದನ್ನು ಕೆಡದಂತೆ ಇಡಬಹುದು.

 Puran Poli

ಹೋಳಿಗೆ ತಪ್ಪಿದರೂ ಲೊಟ್ಟೆ ಹೊಡೆಯುವಂಥ ಒಬ್ಬಟ್ಟು ಸಾರು ತಪ್ಪಬಾರದು

ಬೇಕಾಗುವ ವಸ್ತುಗಳು: ಬೇಳೆ ಹೋಳಿಗೆ ಮಾಡುವಾಗ ಬಸಿದ ಕಟ್ಟು ಎಷ್ಟಿದ್ದರೂ ತೆಗೆದುಕೊಳ್ಳಿ, ಅದಿಲ್ಲದಿದ್ದರೆ 1/4 ಕಪ್‌ ಕಡಲೆಬೇಳೆಯನ್ನು ಕುಕ್ಕರ್‌ನಲ್ಲಿ ಚೆನ್ನಾಗಿ ಮೆತ್ತಗಾಗುವಂತೆ ಬೇಯಿಸಿಕೊಳ್ಳಿ. ಜೊತೆಗೆ, ಬೆಲ್ಲ- 1/4 ಕಪ್‌, ತೆಂಗಿನ ತುರಿ- 1/4 ಕಪ್‌, ಏಲಕ್ಕಿ- ನಾಲ್ಕಾರು. ರಸಂ ಪುಡಿ ಮಾಡುವುದಕ್ಕೆ- ಮೆಂತೆ- 1/2 ಚಮಚ, ಜೀರಿಗೆ- 1 ಚಮಚ, ಕೊತ್ತಂಬರಿ- 2 ಚಮಚ, ಬ್ಯಾಡಗಿ ಮೆಣಸಿನ ಕಾಯಿ- 5,6, ಈರುಳ್ಳಿ- 1, ಟೊಮೇಟೊ- 1, ಹುಣಸೆ ಹಣ್ಣಿನ ರಸ- ಸ್ವಲ್ಪ, ಕೊತ್ತಂಬರಿ ಮತ್ತು ಕರಿಬೇವು, ಒಗ್ಗರಣೆಗೆ ತುಪ್ಪ.
ವಿಧಾನ: ರಸಂ ಪುಡಿ ಮಾಡುವುದಕ್ಕೆ ಹೇಳಿದ ವಸ್ತುಗಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ. ಇದಕ್ಕೆ ಈರುಳ್ಳಿ, ಟೊಮೇಟೊ, ಕರಿಬೇವಿನ ಕೆಲವು ಎಲೆಗಳನ್ನು ಹಾಕಿ ಹುರಿಯಿರಿ. ಇವೆಲ್ಲ ಬಾಡಿದ ಮೇಲೆ ಮಿಕ್ಸಿಗೆ ಹಾಕಿ. ರಸಂಪುಡಿ ಮತ್ತು ತೆಂಗಿನ ಜೊತೆಗೆ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೇಯಿಸಿದ ಬೇಳೆ ಅಥವಾ ಬೇಳೆ ಕಟ್ಟಿನೊಂದಿಗೆ ಸೇರಿಸಿ ಕುದಿಸಿ. ಇದಕ್ಕೆ ಉಪ್ಪು, ಬೆಲ್ಲ, ಹುಣಸೆಹಣ್ಣಿನ ರಸ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಇದನ್ನು ರಸಂ ಹದಕ್ಕಿಟ್ಟು, ಚೆನ್ನಾಗಿ ಮರಳಿಸಿ. ಇದಕ್ಕೆ ಘಮ್ಮೆನ್ನುವಂತೆ ಇಂಗಿನ ಒಗ್ಗರಣೆ ಹಾಕಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಆಹಾರ/ಅಡುಗೆ

Krishna janmastami 2024: ಕೃಷ್ಣ ಜನ್ಮಾಷ್ಟಮಿಗೆ ಏನೆಲ್ಲ ಸಿಹಿ ತಿನಿಸು ತಯಾರಿಸಬಹುದು? ಇಲ್ಲಿದೆ ಟಿಪ್ಸ್‌

ನಾಲಿಗೆಯ ರುಚಿಯನ್ನು ತೃಪ್ತಿಪಡಿಸುವ, ಜೊತೆಗೆ ಆರೋಗ್ಯವನ್ನೂ ಕಾಪಾಡುವ ಕೆಲವು ಪೌಷ್ಟಿಕ ಖಾದ್ಯಗಳ ಕುರಿತು ಮಾಹಿತಿ ಇಲ್ಲಿದೆ. ಈ ಬಾರಿ ಜನ್ಮಾಷ್ಟಮಿಯಲ್ಲಿ (Krishna janmastami 2024) ಇದನ್ನು ಮಾಡಿ ದೇವರಿಗೂ ನೈವೇದ್ಯ ಮಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ನೀವು ಧಾರಾಳವಾಗಿ ಮೆಲ್ಲಬಹುದು, ಅತಿಥಿಗಳಿಗೂ ನೀಡಬಹುದು.

VISTARANEWS.COM


on

By

Krishna janmastami 2024
Koo

ಕೃಷ್ಣ ಜನ್ಮಾಷ್ಟಮಿ (Krishna janmastami 2024) ಎಂದರೆ ದೇವರಿಗೆ ನೈವೇದ್ಯ ಮಾಡಲು, ಬಂದಂಥ ಅತಿಥಿಗಳನ್ನು ಸತ್ಕರಿಸಲು ಮನೆಯಲ್ಲಿ ಬಗೆಬಗೆಯ ಖಾದ್ಯ, ಸಿಹಿ ತಿಂಡಿಗಳನ್ನು (sweets) ಮಾಡಲೇಬೇಕು. ಹಾಗಂತ ಹಬ್ಬದ ಸಂದರ್ಭದಲ್ಲಿ ಆರೋಗ್ಯವನ್ನೂ ಕಡೆಗಣಿಸುವಂತಿಲ್ಲ. ಹೀಗಾಗಿ ಈ ಬಾರಿ ಜನ್ಮಾಷ್ಟಮಿಯಲ್ಲಿ (janmastami) ಸಿಹಿ ಜೊತೆಗೆ ಆರೋಗ್ಯಕರವಾದ (Healthy Sweets) ಖಾದ್ಯಗಳನ್ನು ಮನೆಯಲ್ಲೇ ಮಾಡಲು ಟ್ರೈ ಮಾಡಿನೋಡಬಹುದು.

ನಾಲಿಗೆಯ ರುಚಿಯನ್ನು ತೃಪ್ತಿ ಪಡಿಸುವ, ಜೊತೆಗೆ ಆರೋಗ್ಯವನ್ನೂ ಕಾಪಾಡುವ ಕೆಲವು ಪೌಷ್ಟಿಕ ಖಾದ್ಯಗಳ ಕುರಿತು ಮಾಹಿತಿ ಇಲ್ಲಿದೆ. ಈ ಬಾರಿ ಜನ್ಮಾಷ್ಟಮಿಯಲ್ಲಿ ಇದನ್ನು ಮಾಡಿ ದೇವರಿಗೂ ನೈವೇದ್ಯ ಮಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ನೀವು ಮೆಲ್ಲಬಹುದು, ಅತಿಥಿಗಳಿಗೂ ನೀಡಬಹುದು.


ಖರ್ಜೂರ ಮತ್ತು ಒಣ ಹಣ್ಣಿನ ಲಡ್ಡು

ಖರ್ಜೂರದ ನೈಸರ್ಗಿಕ ಮಾಧುರ್ಯವನ್ನು ವಿವಿಧ ಒಣ ಹಣ್ಣುಗಳೊಂದಿಗೆ ಸವಿಯಬಹುದು. ಖರ್ಜೂರದ ಬೀಜಗಳನ್ನು ತೆಗೆದು ಹಾಲಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿ ಇಡಿ. ಬಾದಾಮಿ, ಗೋಡಂಬಿ ಮತ್ತು ಪಿಸ್ತಾಗಳಂತಹ ಬೀಜಗಳನ್ನು ಖರ್ಜೂರದೊಂದಿಗೆ ಸೇರಿಸಿ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ ಫ್ರಿಜ್‌ನಲ್ಲಿ ಇಡಿ. ಜನ್ಮಾಷ್ಟಮಿಗೆ ಪರಿಪೂರ್ಣವಾದ ಆರೋಗ್ಯಕರ, ಶಕ್ತಿ-ಉತ್ತೇಜಿಸುವ ಲಡ್ಡು ಇದಾಗಿದೆ.

Krishna janmashtami
Krishna janmashtami


ಸೀಡ್ಸ್ ಲಡ್ಡು

ಚಿಯಾ, ಫ್ಲಾಕ್ಸ್ ಮತ್ತು ಸೂರ್ಯಕಾಂತಿಗಳಂತಹ ಬೀಜಗಳ ಮಿಶ್ರಣವನ್ನು ಲಘುವಾಗಿ ಹುರಿದು ಪುಡಿ ಮಾಡಿ. ಬೀಜದ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ಲಡ್ಡು ಮಾಡಿ. ಪೋಷಕಾಂಶಗಳಿರುವ ಈ ಲಡ್ಡಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫೈಬರ್‌ ಸಮೃದ್ಧವಾಗಿವೆ.

Krishna janmashtami
Krishna janmashtami


ಫ್ರೂಟ್ ಸಲಾಡ್

ಬಾಳೆಹಣ್ಣು, ಸೇಬು, ದ್ರಾಕ್ಷಿ ಮತ್ತು ದಾಳಿಂಬೆಗಳಂತಹ ತಾಜಾ ಹಣ್ಣುಗಳನ್ನು ಕತ್ತರಿಸಿ ಹಾಲಿನ ಕೆನೆಯೊಂದಿಗೆ ಸೇರಿಸಿ. ಜೇನುತುಪ್ಪ ಬೆರೆಸಿ ಸಿಹಿಗೊಳಿಸಿ. ಈ ತಿಳಿ ಮತ್ತು ಕೆನೆ ಖಾದ್ಯವು ರುಚಿಕರವಾದದ್ದು ಮಾತ್ರವಲ್ಲದೆ ಅಗತ್ಯವಾದ ಜೀವಸತ್ವ, ಖನಿಜಾಂಶಗಳನ್ನು ಹೊಂದಿದೆ.


ಡ್ರೈ ಫ್ರೂಟ್ ಚಿಕ್ಕಿ

ಒಣ ಹಣ್ಣುಗಳಾದ ಶೇಂಗಾ, ಬಾದಾಮಿ ಮತ್ತು ಎಳ್ಳನ್ನು ಬೆಲ್ಲದೊಂದಿಗೆ ಹುರಿದು ಬೆರೆಸಿ ಡ್ರೈಫ್ರೂಟ್ ಚಿಕ್ಕಿ ತಯಾರಿಸಿ. ಮಿಶ್ರಣವನ್ನು ತುಪ್ಪ ಹಚ್ಚಿದ ಟ್ರೇಗೆ ಸುರಿಯಿರಿ. ಅದನ್ನು ತಣ್ಣಗಾಗಲು ಬಿಡಿ, ತದನಂತರ ತುಂಡುಗಳಾಗಿ ಕತ್ತರಿಸಿ. ಇದು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ.

ಇದನ್ನೂ ಓದಿ: Health Tips Kannada: ಮಾರಕ ರೋಗಗಳನ್ನು ದೂರ ಇರಿಸುತ್ತದೆ ಬೂದುಗುಂಬಳದ ರಸ!


ಡ್ರೈಫ್ರೂಟ್ ಲಡ್ಡು

ವಾಲ್‌ನಟ್ಸ್, ಬಾದಾಮಿ, ಗೋಡಂಬಿ ಮತ್ತು ಖರ್ಜೂರದಂತಹ ಒಣ ಹಣ್ಣುಗಳನ್ನು ಬ್ಲೆಂಡರ್‌ನಲ್ಲಿ ಮಿಶ್ರಣ ಮಾಡಿ. ಮಿಶ್ರಣಕ್ಕೆ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣ ಉಂಡೆಗಳಾಗಿ ಆಕಾರ ಮಾಡಿ ಮತ್ತು ತಣ್ಣಗಾಗಿಸಿ. ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಇದು ನೈಸರ್ಗಿಕ ಸಿಹಿಯನ್ನು ನೀಡುತ್ತದೆ.

Continue Reading

ಆಹಾರ/ಅಡುಗೆ

Non Vegetarian Population: ಜಗತ್ತಿನಲ್ಲಿ ಕುಸಿಯುತ್ತಿದೆ ಮಾಂಸಾಹಾರಿಗಳ ಸಂಖ್ಯೆ! ಕಡಿಮೆ ಮಾಂಸಾಹಾರದ ದೇಶಗಳಲ್ಲಿ ಭಾರತವೇ ನಂ.1

ಆರೋಗ್ಯದ ಕಾಳಜಿಯಿಂದ, ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು (Non Vegetarian Population) ಹೊಂದಿದೆ.

VISTARANEWS.COM


on

By

Non Vegetarian Population
Koo

ಆರೋಗ್ಯಕರ ಜೀವನಶೈಲಿಗಾಗಿ ಅನೇಕರು ಮಾಂಸಾಹಾರವನ್ನು (Non Vegetarian Population) ತ್ಯಜಿಸಿ ಸಸ್ಯಾಹಾರವನ್ನು (vegetarian) ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿಂದಾಗಿ ಸಸ್ಯಾಹಾರವನ್ನೇ ಆಹಾರದಲ್ಲಿ (food) ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಜನರು ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು ಹೊಂದಿದೆ.


ಭಾರತ

ಭಾರತವು ವಿಶ್ವದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾಂಸಾಹಾರ ಸೇವಿಸುವ ಜನರನ್ನು ಹೊಂದಿರುವ ದೇಶವಾಗಿದೆ. ʼವರ್ಲ್ಡ್‌ ಅಟ್ಲಾಸ್ʼ ಪ್ರಕಾರ ಪ್ರತಿ ವರ್ಷಕ್ಕೆ ತಲಾ ಒಬ್ಬರು ಕೇವಲ 3 ಕೆಜಿ ಮಾಂಸವನ್ನು ಮಾತ್ರ ಸೇವಿಸುತ್ತಾರೆ. ಇದಕ್ಕೆ ಹಲವಾರು ಅಂಶಗಳು ಕೊಡುಗೆ ನೀಡುತ್ತದೆ. ಇದರಲ್ಲಿ ಧರ್ಮವು ಅತ್ಯಂತ ಪ್ರಮುಖವಾದದ್ದು.


ಮೆಕ್ಸಿಕೋ

ಮೆಕ್ಸಿಕೋದಲ್ಲಿ ಸುಮಾರು ಶೇ. 19ರಷ್ಟು ಜನರು ಸಸ್ಯಾಹಾರಿಗಳು. ಅಲ್ಲಿನ ಜನರು ಆರೋಗ್ಯ ಕಾಳಜಿ, ಪ್ರಾಣಿ ಹಕ್ಕುಗಳು ಮತ್ತು ಪರಿಸರ ಸಮಸ್ಯೆಗಳಿಂದಾಗಿ ಸಸ್ಯ ಆಧಾರಿತ ಆಹಾರಕ್ಕೆ ಬದಲಾಗುತ್ತಿದ್ದಾರೆ. ಪ್ರಮುಖ ನಗರಗಳಲ್ಲಿ ಹೆಚ್ಚು ಸಸ್ಯಾಹಾರಿ ರೆಸ್ಟೋರೆಂಟ್‌ಗಳೇ ಇವೆ.

ಇಸ್ರೇಲ್

ಮಾಂಸಾಹಾರ ಸೇವನೆಯನ್ನು ನಿರ್ಬಂಧಿಸುವ ಜುದಾಯಿಸಂನಿಂದಾಗಿ ಇಸ್ರೇಲ್ ಕಡಿಮೆ ಮಾಂಸಾಹಾರಿ ಜನಸಂಖ್ಯೆಯನ್ನು ಹೊಂದಿದೆ. ದೇಶವು ವೇಗವಾಗಿ ಸಸ್ಯಾಹಾರಿಗಳಿಗೆ ಸ್ವರ್ಗವಾಗಿ ಮಾರ್ಪಡುತ್ತಿದೆ. ನೂರಾರು ರೆಸ್ಟೋರೆಂಟ್‌ಗಳು ಇಲ್ಲಿ ಸಸ್ಯಾಹಾರಿ ಊಟವನ್ನೇ ನೀಡುತ್ತಿವೆ. 2014 ರಲ್ಲಿ ವಿಶ್ವದ ಅತಿದೊಡ್ಡ ಸಸ್ಯಾಹಾರಿ ಉತ್ಸವವನ್ನು ಟೆಲ್ ಅವಿವ್‌ನಲ್ಲಿ ಆಯೋಜಿಸಲಾಯಿತು.

ಇಥಿಯೋಪಿಯಾ

ಆಫ್ರಿಕನ್ ದೇಶವು ಮಾಂಸ ಸೇವನೆಯ ಪ್ರಮಾಣವನ್ನು ಬಹಳ ಕಡಿಮೆ ಹೊಂದಿದೆ. ಬಡತನದ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಜನರಿಗೆ ಮಾಂಸಾಹಾರ ಇಲ್ಲಿ ದೊರೆಯುತ್ತಿಲ್ಲ. ಸರಾಸರಿಯಾಗಿ ದೇಶದ ಜನರು ತಲಾ 2.58 ಕೆ.ಜಿ. ಗೋಮಾಂಸ ಮತ್ತು ಕರುವಿನ ಮಾಂಸವನ್ನು ಸೇವಿಸುತ್ತಾರೆ. ಕೇವಲ 0.45 ಕೆ.ಜಿ. ಕೋಳಿ ಮಾಂಸಗಳನ್ನು ಸೇವಿಸುತ್ತಾರೆ.

ತೈವಾನ್

ಬೌದ್ಧಧರ್ಮದ ಕಾರಣದಿಂದಾಗಿ ತೈವಾನ್ ಗಣನೀಯ ಪ್ರಮಾಣದ ಸಸ್ಯಾಹಾರಿ ಜನಸಂಖ್ಯೆಯನ್ನು ಹೊಂದಿದೆ. ಯಾಕೆಂದರೆ ಧರ್ಮವು ಮಾಂಸ ಮುಕ್ತ ಆಹಾರಕ್ಕಾಗಿ ಪ್ರತಿಪಾದಿಸುತ್ತದೆ. ಅಲ್ಲದೇ ದೇಶದಲ್ಲಿ ಹಲವಾರು ಬಾಯಲ್ಲಿ ನೀರೂರಿಸುವಂತ ಸಸ್ಯಾಹಾರಿ ಪಾಕಪದ್ಧತಿಗಳಿವೆ. ಸರ್ಕಾರವು ಶಾಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಸ್ಯಾಹಾರಿ ಆಯ್ಕೆಗಳನ್ನೇ ಒದಗಿಸುತ್ತದೆ.


ಜರ್ಮನಿ

ಜರ್ಮನಿಯಲ್ಲಿ ಹೆಚ್ಚು ಜನರು ಮಾಂಸಾಹಾರಿ ಜೀವನಶೈಲಿಯನ್ನು ಬಿಟ್ಟು ಸಸ್ಯಾಹಾರಿ ಆಹಾರವನ್ನು ಆರಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಬಲವಾದ ಪ್ರಾಣಿ ಹಕ್ಕುಗಳ ಆಂದೋಲನವನ್ನು ಹೊಂದಿದೆ. ಇದು ಮಾಂಸಾಹಾರಿ ಜನಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ. ಬರ್ಲಿನ್‌ನಂತಹ ಪ್ರಮುಖ ನಗರಗಳು ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್‌ಗಳನ್ನು ಹೊಂದಿದ್ದು ಅವು ಸೌರ್‌ಕ್ರಾಟ್ ಮತ್ತು ಪ್ರಿಟ್ಜೆಲ್‌ಗಳಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ನೀಡುತ್ತವೆ.

ಇದನ್ನೂ ಓದಿ: Indian Dessert 2024: ವಿಶ್ವದ ಪ್ರಸಿದ್ಧ ʼಸಿಹಿತಿಂಡಿ ತಾಣʼಗಳ ಪಟ್ಟಿಯಲ್ಲಿ ಸ್ಥಾನ ಪಡೆದ 10 ಭಾರತೀಯ ಸ್ವೀಟ್‌ ಸ್ಟಾಲ್‌ಗಳಿವು

ಮೊಜಾಂಬಿಕ್

ಪೂರ್ವ ಆಫ್ರಿಕಾದ ದೇಶವು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ. ಪರಿಣಾಮವಾಗಿ, ಸರಾಸರಿ ಮಾಂಸ ಸೇವನೆಯು ಅಲ್ಲಿ ಕಡಿಮೆಯಾಗಿದೆ. ಮೊಜಾಂಬಿಕ್‌ನಲ್ಲಿರುವ ಜನರು ಹೆಚ್ಚಾಗಿ ಆಮದು ಮಾಡಿಕೊಂಡ ಮಾಂಸವನ್ನು ಸೇವಿಸುತ್ತಾರೆ.

Continue Reading

ಆಹಾರ/ಅಡುಗೆ

Desserts For Tea Lovers: ಚಹಾ ಪ್ರಿಯರಿಗಾಗಿ ಇಲ್ಲಿವೆ ಬಗೆಬಗೆಯ ಡೆಸರ್ಟುಗಳು! ನೀವೂ ಟ್ರೈ ಮಾಡಿ ನೋಡಿ

Desserts For Tea Lovers: ಚಹಾಪ್ರಿಯರು ದಿನಕ್ಕೆರಡು ಬಾರಿಯಾದರೂ ಚಹಾ ಕುಡಿಯದೆ ಬಿಡಲಾರರು. ನೀವು ಏನೇ ಹೇಳಿ, ಯಾವುದೇ ವಾದ ಮಂಡಿಸಿ, ಚಹಾಪ್ರಿಯರಿಗೆ ತಮ್ಮ ಚಹಾ ಪ್ರೇಮವನ್ನು ಸಮರ್ಥಿಸಲು ಕಾರಣ ನೂರಾರು. ಯಾವುದೇ ಕ್ರೇಜಿ ಐಡಿಯಾ ಮಾಡಿಯಾದರೂ ಅವರು ಚಹಾ ಸೇವಿಸುತ್ತಾರೆ. ಇಂಥ ಚಹಾಪ್ರಿಯರಿಗೊಂದು ಕ್ರೇಜಿ ಡೆಸರ್ಟ್‌ಗಳು ಇಲ್ಲಿವೆ.

VISTARANEWS.COM


on

Koo

ಚಹಾ ಕುಡಿಯುವ ಗಮ್ಮತ್ತೇ ಬೇರೆ. ಬಿಸಿ ಬಿಸಿ ಹೊಗೆಯಾಡುವ ಬಗೆಬಗೆಯ ಚಹಾವನ್ನು ನಾವು ಲೋಟಗಟ್ಟಲೇ ದಿನವಿಡೀ ಕುಡಿದೇವು ಎಂದು ಚಹಾಪ್ರಿಯರು ತಮ್ಮ ಚಹಾಪ್ರೇಮದ ಬಗ್ಗೆ ವ್ಯಾಖ್ಯಾನ ನೀಡಬಹುದು. ಚಹಾಪ್ರಿಯರು ದಿನಕ್ಕೆರಡು ಬಾರಿಯಾದರೂ ಚಹಾ ಕುಡಿಯದೆ ಬಿಡಲಾರರು. ನೀವು ಏನೇ ಹೇಳಿ, ಯಾವುದೇ ವಾದ ಮಂಡಿಸಿ, ಚಹಾಪ್ರಿಯರಿಗೆ ತಮ್ಮ ಚಹಾ ಪ್ರೇಮವನ್ನು ಸಮರ್ಥಿಸಲು ಕಾರಣ ನೂರಾರು. ಯಾವುದೇ ಕ್ರೇಜಿ ಐಡಿಯಾ ಮಾಡಿಯಾದರೂ ಅವರು ಚಹಾ ಸೇವಿಸುತ್ತಾರೆ. ಇಂಥ ಚಹಾಪ್ರಿಯರಿಗೊಂದು ಕ್ರೇಜಿ ಡೆಸರ್ಟ್‌ಗಳು ಇಲ್ಲಿವೆ. ನಿಮ್ಮ ಚಹಾಪ್ರೇಮಕ್ಕೆ ಕಳಶವಿಟ್ಟಂತೆ ಈ ಚಿತ್ರವಿಚಿತ್ರ ಚಹಾದ ಡೆಸರ್ಟ್‌ಗಳು ಇಂದು ಕೆಲವೆಡೆ ವಿಶೇಷವಾಗಿ ಲಭ್ಯ ಇವೆ. ಬನ್ನಿ ಚಹಾದ ಈ ಚಿತ್ರವಿಚಿತ್ರ ಡೆಸರ್ಟ್‌ಗಳ ಹೆಸರು ಕೇಳಿ ನೀವೂ (Desserts For Tea Lovers) ಮನೆಯಲ್ಲಿ ಪ್ರಯತ್ನಿಸಿ.

Masala tea ice cream
Cutting Chai Kulfi

ಮಸಾಲಾ ಚಹಾ ಐಸ್‌ಕ್ರೀಂ

ಐಸ್‌ಕ್ರೀಂ ಅನ್ನು ಯಾರಾದರೂ ಬೇಡ ಎನ್ನುತ್ತಾರೆಯೋ. ಖಂಡಿತ ಇಲ್ಲ. ಆದರೆ ಇದು ಮಸಾಲೆ ಚಹಾ ಐಸ್‌ ಕ್ರೀಂ. ಎಲ್ಲಿಯ ಚಹಾ ಎಲ್ಲಿಯ ಐಸ್‌ಕ್ರೀಂ ಎನ್ನಬೇಡಿ. ಬಿಸಿಬಿಸಿಯಾದ ಚಹಾದ ಬದಲಿಗೆ ಬಾಯಲ್ಲಿಟ್ಟರೆ ಕರಗುವ ಮಸಾಲೆ ಚಹಾದ ರುಚಿಯ ಐಸ್‌ಕ್ರೀಂ ರೂಪದ ಡೆಸರ್ಟ್‌ ನಿಮಗೆ ಸಿಕ್ಕರೆ?! ವಾಹ್‌ ಎನಿಸೀತೇ? ಹಾಗಿದ್ದರೆ ಒಮ್ಮೆ ನೀವೂ ಮನೆಯಲ್ಲಿ ಟ್ರೈ ಮಾಡಿ ನೋಡಬಹುದು. ಈಗ ಸಾಕಷ್ಟು ಟ್ರೆಂಡ್‌ನಲ್ಲಿರುವ ಈ ಹೊಸ ಐಸ್‌ಕ್ರೀಂ ಹುಡುಕಿ ತಿನ್ನಿ, ಇಲ್ಲವೇ ಮನೆಯಲ್ಲೇ ಟ್ರೈ ಮಾಡಿ ತಿನ್ನಿ!

ಮಸಾಲಾ ಚಹಾ ಕೇಕ್

ಮಸಾಲೆ ಚಹಾದ ರುಚಿಯಿರುವ ಘಮವಿರುವ ಕೇಕ್‌ ಕೂಡಾ ತಯಾರಿಸಬಹುದು. ಚಹಾ ಪ್ರಿಯರಿಗೆ ಇದು ಖಂಡಿತ ಇಷ್ಟವಾಗಲೂಬಹುದು. ಕಾಫಿ ಫ್ಲೇವರ್‌ನ ಕೇಕ್‌ನಂತೆ ಈಗ ಚಹಾ ಪ್ರಿಯರಿಗೆ ಚಹಾ ಫ್ಲೇವರಿನ ಕೇಕುಗಳೂ ಕೆಲವೆಡೆ ಲಭ್ಯವಾಗುತ್ತಿವೆಯಂತೆ. ಹಾಗಾಗಿ ನೀವೂ ಕೇಕ್‌ ತಜ್ಞರಾಗಿದ್ದರೆ, ಮಾಡುವ ಅಭ್ಯಾಸ ನಿಮಗಿದ್ದರೆ ಒಮ್ಮೆ ಈ ರುಚಿಯನ್ನು ಪ್ರಯತ್ನಿಸಿ. ಈ ಕೇಕ್‌ ಅನ್ನು ರಬ್ಡೀ ಜೊತೆಗೆ ಸವಿದರೆ ಇನ್ನೂ ರುಚಿಯಂತೆ!

Cutting Chai Kulfi
Cutting Chai Kulfi

ಕಟ್ಟಿಂಗ್‌ ಚಾಯ್‌ ಕುಲ್ಫಿ

ನೀವು ಮುಂಬೈಯ ಕಟ್ಟಿಂಗ್‌ ಚಾಯ್‌ ಪ್ರಿಯರಾಗಿದ್ದಲ್ಲಿ ಈ ಬಗೆಯ ಕುಲ್ಫಿ ಟ್ರೈ ಮಾಡಬಹುದು. ಕಟ್ಟಿಂಗ್‌ ಚಾಯ್‌ ತಯಾರಿಸಿ ಕುಲ್ಫಿ ಮೌಲ್ಡ್‌ಗಳಲ್ಲಿ ಹಾಕಿಟ್ಟು, ಅದಕ್ಕೆ ಇನ್ನೂ ಆಕರ್ಷಕವಾಗಿಸಲು ಗುಲಾಬಿದಳಗಳು, ಪಿಸ್ತಾ ಹಾಗೂ ಬಾದಾಮಿ ಚೂರುಗಳು ಮತ್ತಿತರ ಬೀಜಗಳನ್ನೂ ಸೇರಿಸಬಹುದು. ನಿಮ್ಮ ಚಹಾ ಕುಲ್ಫಿ ರೆಡಿ. ಬಗೆಬಗೆಯ ಫ್ಲೇವರ್‌ಗಳ ಕುಲ್ಫಿಗಳ ಜೊತೆಗೆ ಈಗ ಈ ಕಟ್ಟಿಂಗ್‌ ಚಾಯ್‌ ಕುಲ್ಫಿ ಕೂಡಾ ಟ್ರೆಂಡ್‌ನಲ್ಲಿದೆ. ಯುವಜನರನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ: Homemade Tofu Recipe: ಸೋಯಾ ಹಾಲಿನ ತೋಫು ಮನೆಯಲ್ಲೇ ಮಾಡಿಕೊಳ್ಳುವುದು ಹೇಗೆ?

ಮಸಾಲಾ ಚಾಯ್‌ ಕುಕ್ಕೀಸ್‌

ನಿಮ್ಮ ಚಹಾ ಟೈಮ್‌ಗೆ ನೀವು ತಿನ್ನುವ ಕುಕ್ಕೀಸ್‌ ಕೂಡಾ ಚಹಾ ಫ್ಲೇವರ್‌ನದ್ದೇ ಆಗಿದ್ದರೆ!? ವಾಹ್‌, ಎಂಥಾ ಐಡಿಯಾ ಎನ್ನುತ್ತೀರಾ? ಚಹಾ ಘಮವಿರುವ ಕುಕ್ಕೀಸ್‌ ಕೂಡಾ ತಯಾರು ಮಾಡಬಹುದು. ಸಂಜೆಯ ಹೊತ್ತು ಕೂತು ಚಹಾವನ್ನೂ ಜೊತೆಗೆ ಚಹಾದ ಘಮವಿರುವ ಕುಕ್ಕೀಸನ್ನೂ ಸವಿಯಬಹುದು!

Continue Reading

ಆಹಾರ/ಅಡುಗೆ

Homemade Tofu Recipe: ಸೋಯಾ ಹಾಲಿನ ತೋಫು ಮನೆಯಲ್ಲೇ ಮಾಡಿಕೊಳ್ಳುವುದು ಹೇಗೆ?

Homemade Tofu Recipe: ನಮಗೆ ಪನೀರ್‌ ಮಾಡುವುದು ಗೊತ್ತು. ಆದರೆ ಅದರಂತೆಯೇ ಕಾಣುವ ತೋಫು ಮಾಡುವುದು ಹೇಗೆ? ಅಂಗಡಿಯಿಂದ ತರುವುದಕ್ಕೆ ಏನೆಲ್ಲಾ ಮಿಶ್ರ ಮಾಡಿರುತ್ತಾರೊ ಏನೊ? ನಾವೇ ಮನೆಯಲ್ಲಿ ಮಾಡಿಕೊಳ್ಳುವುದಾದರೆ ಸೋಯಾ ಹಾಲಿನ ತೋಫು ಮಾಡುವುದು ಹೇಗೆ ಎಂಬುದನ್ನು ಹಂತ-ಹಂತವಾಗಿ ಇಲ್ಲಿ ವಿವರಿಸಲಾಗಿದೆ.

VISTARANEWS.COM


on

Tofu
Koo

ಸೋಯಾ ಹಾಲಿನಿಂದ (Homemade Tofu Recipe) ತಯಾರಾಗುವ, ನೋಡುವುದಕ್ಕೆ ಪನೀರ್‌ನಂತೆಯೇ ಕಾಣುವ, ತೋಫು ಈಗ ಮೊದಲಿನಷ್ಟು ಅಪರಿಚಿತವಲ್ಲ. ಇದೊಂದು ಸಂಪೂರ್ಣ ಪ್ರೊಟೀನ್‌ ಆಹಾರ ಎಂಬುದು ಪ್ರಚಾರ ಪಡೆಯುತ್ತಿದೆ. ರುಚಿಯಲ್ಲಿ ಪನೀರ್‌ನಂತೆ ಅಲ್ಲವಾದರೂ, ಅಂತೆಯೇ ಬಳಕೆ ಮಾಡಬಹುದು. ಸಸ್ಯಾಹಾರಿಗಳಿಗೆ ಪ್ರೊಟೀನ್‌ ಸಾಲುವುದಿಲ್ಲ ಎಂಬ ದೂರು ಸಾಮಾನ್ಯ. ಆದರೆ ನಿಯಮಿತವಾಗಿ ಪನೀರ್‌, ತೋಫು ಸೇವನೆಯನ್ನು ರೂಢಿಸಿಕೊಂಡರೆ ಸಸ್ಯಾಹಾರಿಗಳೂ ಪ್ರೊಟೀನ್‌ ಕೊರತೆಯನ್ನು ನೀಗಿಸಿಕೊಳ್ಳಬಹುದು. ಅರ್ಧ ಕಪ್‌ ತೋಫುವಿನಲ್ಲಿ ೧೮೧ ಕ್ಯಾಲೊರಿಗಳು, 21.8 ಗ್ರಾಂನಷ್ಟು ಪ್ರೊಟೀನ್‌, 11 ಗ್ರಾಂ ಕೊಬ್ಬು ಪ್ರಮುಖವಾಗಿ ದೊರೆಯುತ್ತದೆ. ಇದರಲ್ಲಿ ಅಗತ್ಯವಾದ ಎಲ್ಲ 9 ಅಮೈನೊ ಆಮ್ಲಗಳು ಸಮೃದ್ಧವಾಗಿ ದೊರೆಯುತ್ತವೆ. ಸ್ನಾಯುಗಳ ದುರಸ್ತಿ ಮಾಡಿ, ಬೆಳವಣಿಗೆಗೆ ಅಗತ್ಯವಾದಂಥ ಸಂಪೂರ್ಣ ಪ್ರೊಟೀನ್‌ ತೋಫುವಿನಲ್ಲಿ ದೊರೆಯುತ್ತದೆ.

Health Benefits Of Tofu

ಹೇಗೆ ಮಾಡುವುದು?

ನಮಗೆ ಪನೀರ್‌ ಮಾಡುವುದು ಗೊತ್ತು. ಆದರೆ ತೋಫು ಮಾಡುವುದು ಹೇಗೆ? ಮನೆಯಲ್ಲೇ ಮಾಡಿಕೊಳ್ಳಲು ಸಾಧ್ಯವೇ? ಅಂಗಡಿಯಿಂದ ತರುವುದಕ್ಕೆ ಏನೆಲ್ಲಾ ಮಿಶ್ರ ಮಾಡಿರುತ್ತಾರೊ ಎಂದು ಕಳವಳಿಸುವವರಿರುತ್ತಾರೆ. ನಾವೇ ಮನೆಯಲ್ಲಿ ಮಾಡಿಕೊಳ್ಳುವುದಾದರೆ ತೋಫು ಮಾಡುವುದು ಹೇಗೆ? ಇದನ್ನು ಹಂತ-ಹಂತವಾಗಿ ಇಲ್ಲಿ ವಿವರಿಸಲಾಗಿದೆ.

ಬೇಕಾಗುವ ವಸ್ತುಗಳು

ಒಣಗಿದ ಸೋಯಾ ಕಾಳುಗಳು- 2 ಕಪ್‌, ನೀರು- 10 ಕಪ್‌, ವಿನೇಗರ್‌ ಅಥವಾ ನಿಂಬೆರಸ- 3 ದೊಡ್ಡ ಚಮಚ

Tofu Protein Foods

ವಿಧಾನ

ಸುಮಾರು 10-12 ತಾಸುಗಳಷ್ಟು ಕಾಲ ಸೋಯಾ ಕಾಳುಗಳನ್ನು ನೆನೆಸಿಡಿ. ಅವು ಉಬ್ಬಿದಂತಾಗಿ ಇರುವ ಗಾತ್ರಕ್ಕೆ ದುಪ್ಪಟ್ಟಾಗುತ್ತವೆ. ಅದನ್ನು ನೆನೆಸಿದ ನೀರನ್ನು ಚೆಲ್ಲಿ, ಕಾಳುಗಳನ್ನು ಚೆನ್ನಾಗಿ ತೊಳೆಯಿರಿ. ಇದಕ್ಕೆ ಒಂದೊಂದೇ ಕಪ್‌ ನೀರು ಹಾಕುತ್ತಾ ಮಿಕ್ಸಿಯಲ್ಲಿ ರುಬ್ಬುತ್ತಾ ಬನ್ನಿ. ಸಣ್ಣ ಗ್ರೈಂಡರ್‌ ಇದ್ದರೆ, ಅದನ್ನೂ ಉಪಯೋಗಿಸಬಹುದು. ಇದಿಷ್ಟೂ ಕಾಳುಗಳು ನಯವಾದ ಪೇಸ್ಟ್‌ ಆಗಿ, ಹಾಲಿನಂತಾಗುವುದಕ್ಕೆ ಸುಮಾರು 8-10 ಕಪ್‌ಗಳಷ್ಟು ನೀರು ಬೇಕಾಗುತ್ತದೆ.
ಈ ಹಾಲನ್ನು ಅಗಲ ಬಾಯಿಯ ಕಡಾಯಿಗೆ ಹಾಕಿ ಕುದಿಯುವುದಕ್ಕೆ ಇಡಿ. ಆಗಾಗ ಕೈಯಾಡಿಸದಿದ್ದರೆ ತಳ ಸೀದು ಹೋಗಬಹುದು. ಕುದಿಯಲು ಪ್ರಾರಂಭಿಸಿದ ೧೦ ನಿಮಿಷಗಳ ನಂತರ, ಇದನ್ನು ತೆಳುವಾದ ಮಲ್ಲಿನಂಥ ಬಟ್ಟೆಗೆ ಹಾಕಿ ಶೋಧಿಸಿಕೊಳ್ಳಿ. ಇದರಿಂದ ಸೋಯಾ ಕಾಳುಗಳ ಪಲ್ಪ್‌ ಬೇರೆಯಾಗುತ್ತದೆ. ಬಿಳಿ ಬಣ್ಣದ ದ್ರವ ಮಾತ್ರವೇ ಉಳಿದುಕೊಳ್ಳುತ್ತದೆ. ಇದನ್ನೇ ಸೋಯಾ ಹಾಲು ಎಂದು ಕರೆಯಲಾಗುತ್ತದೆ. ಪಲ್ಪ್‌ನಲ್ಲಿ ಉಳಿದ ಹಾಲನ್ನು ಸಹ ಹಿಂಡಿ ತೆಗೆದುಕೊಳ್ಳಿ. ಹೀಗೆ ಶೋಧಿಸಿ ತೆಗೆದ ಹಾಲನ್ನು ಮತ್ತೆ ಉರಿಯಲ್ಲಿಡಿ. ಆದರೆ ಕುದಿಯಲು ಪ್ರಾರಂಭಿಸುವ ಮುನ್ನವೇ ಇದಕ್ಕೆ ವಿನೇಗರ್‌ ಅಥವಾ ನಿಂಬೆ ರಸ ಸೇರಿಸಿ. ಚೆನ್ನಾಗಿ ಕೈಯಾಡಿಸಿ, ಉರಿಯಿಂದ ಪಾತ್ರೆಯನ್ನು ತೆಗೆಯಿರಿ. ೧೫ ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ಪನೀರ್‌ ಮಾಡುವುದಕ್ಕೆ ಹಾಲು ಒಡೆಸಿದಂತೆಯೇ ಸೋಯಾ ಹಾಲು ಸಹ ಒಡೆದು ನೀರು ಪ್ರತ್ಯೇಕವಾಗಿರುತ್ತದೆ. ಇದರ ನೀರು ತೆಗೆಯುವುದಕ್ಕೆ ಬಟ್ಟೆಯಲ್ಲಿ ಕಟ್ಟಿ ನೇತಾಡಿಸಬಹುದು ಅಥವಾ ಇತರ ಯಾವುದೇ ಕ್ರಮ ಸೂಕ್ತವಾಗಿದ್ದಲ್ಲಿ ಅನುಸರಿಸಬಹುದು. ನಂತರ ಥೇಟ್‌ ಪನೀರ್‌ನಂತೆಯೇ ತಟ್ಟೆಯಲ್ಲಿ ಹರವಿ, ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಬಹುದು. ಮನೆಯಲ್ಲೇ ಮಾಡಿದ ತೋಫು ಈಗ ಸಿದ್ಧ. ಇದು ಹಲವು ರೀತಿಯಲ್ಲಿ ದೇಹಕ್ಕೆ ಉಪಕಾರಿ.

ಇದನ್ನೂ ಓದಿ: Sodium reduction: ಉಪ್ಪು ಸೇವನೆ ಕಡಿಮೆಯಾದರೆ ಈ ಎಲ್ಲ ಸಮಸ್ಯೆಗಳು ಕಾಡುತ್ತವೆ

ತೋಫುವಿನಲ್ಲಿ ಸಾಕಷ್ಟು ನಾರಿನಂಶವಿದೆ. ಇದು ಮಲಬದ್ಧತೆಯ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ, ನಾರು ಹೆಚ್ಚಿರುವ ಆಹಾರಗಳಿಂದ ಜೀರ್ಣಾಂಗಗಳಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ವೃದ್ಧಿಸಬಹುದು. ಇದಲ್ಲದೆ, ಕೆಲವು ಬಗೆಯ ತೋಫುಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಒಂದಿಷ್ಟು ಪ್ರೊಬಯಾಟಿಕ್‌ ಬ್ಯಾಕ್ಟೀರಿಯಗಳು ಸೇರಿಕೊಳ್ಳುತ್ತವೆ. ಈ ಎಲ್ಲದರಿಂದ ಜೀರ್ಣಾಂಗಗಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ. ತೋಫುವಿನ ಗ್ಲೈಸೆಮಿಕ್‌ ಸೂಚಿ ಕಡಿಮೆಯಿದೆ. ಅಂದರೆ ರಕ್ತದಲ್ಲಿರುವ ಸಕ್ಕರೆಯಂಶ ದಿಢೀರ್‌ ಏರಿಕೆಯಾಗಲು ಇದು ಅವಕಾಶ ನೀಡುವುದಿಲ್ಲ. ದೇಹದ ಚಯಾಪಚಯವನ್ನು ಹೆಚ್ಚಿಸುವ ಇದು, ನಾರು ಮತ್ತು ಪ್ರೊಟೀನನ್ನು ಸಾಂದ್ರವಾಗಿ ಹೊಂದಿದೆ. ಕಡಿಮೆ ಕ್ಯಾಲರಿ ಮತ್ತು ಹೆಚ್ಚು ಪ್ರೊಟೀನ್‌ ಹೊಂದಿರುವ ಕಾರಣದಿಂದ, ತೂಕ ಇಳಿಸುವವರಿಗೆ ಹೇಳಿ ಮಾಡಿಸಿದ ಆಹಾರವಿದು. ಮೂಳೆಗಳ ಸಾಂದ್ರತೆಯ ರಕ್ಷಣೆಗೆ ಮತ್ತು ಆಸ್ಟಿಯೊಪೊರೊಸಿಸ್‌ ಇರುವಂಥವರಿಗೆ ಇದು ಒಳ್ಳೆಯ ಆಹಾರ. ಜೊತೆಗೆ, ಋತುಬಂಧದ ಸಮೀಪದಲ್ಲಿರುವವರು, ಯಾವುದೇ ರೀತಿಯ ಕ್ಯಾಲ್ಶಿಯಂ ಕೊರತೆ ಇರುವವರಿಗೂ ಇದು ಸೂಕ್ತ. ಮಿತ ಪ್ರಮಾಣದಲ್ಲಿ ಎಲ್ಲರೂ ಇದನ್ನು ಸೇವಿಸುವುದು ಒಳ್ಳೆಯದೆ.

Continue Reading
Advertisement
Gosavi samaj lathicharged Sri Ram Sene calls for bandh in Lakshmeshwara town on October 19
ಗದಗ8 ಗಂಟೆಗಳು ago

Lakshmeshwara Town: ಗೋಸಾವಿ ಸಮಾಜದ ಮೇಲೆ ಲಾಠಿ ಚಾರ್ಜ್; ಅ.19ರಂದು ಲಕ್ಷ್ಮೇಶ್ವರ ಪಟ್ಟಣ ಬಂದ್‌ಗೆ ಶ್ರೀರಾಮಸೇನೆ ಕರೆ

A man killed his wife and her lover then committed suicide
ಬೆಂಗಳೂರು10 ಗಂಟೆಗಳು ago

Murder Case: ಪ್ರಿಯಕರ ಜತೆ ಏಕಾಂತದಲ್ಲಿ ಇರುವಾಗಲೆ ಪತ್ನಿ ಲಾಕ್‌; ಇಬ್ಬರನ್ನು ಕೊಂದು ಪತಿ ಸೂಸೈಡ್‌

Parvati Nair to play dual role in suspense thriller un Paravail Tamil film
ಸಿನಿಮಾ11 ಗಂಟೆಗಳು ago

Parvati Nair : ಸಸ್ಪೆನ್ಸ್ ಥ್ರಿಲ್ಲರ್‌ ʻಊಣ್‌ ಪರವೈಲ್‌ʼ ತಮಿಳು ಚಿತ್ರದಲ್ಲಿ ಪಾರ್ವತಿ ನಾಯರ್‌ ದ್ವಿಪಾತ್ರದಲ್ಲಿ ಮಿಂಚಿಂಗ್‌

ಬೆಂಗಳೂರು13 ಗಂಟೆಗಳು ago

Bengaluru Airport : ಬೆಂಗಳೂರು ಏರ್‌ಪೋರ್ಟ್‌ನ 17.7 ಎಕರೆಗಳಲ್ಲಿ ತಲೆ ಎತ್ತಲಿದೆ ಬಿಸಿನೆಸ್‌ ಪಾರ್ಕ್‌

Jio Cloud PC to turn home TV into computer
ಹೊಸ ಸುದ್ದಿ13 ಗಂಟೆಗಳು ago

Jio Cloud PC : ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲಿದೆ ‘ಜಿಯೋ ಕ್ಲೌಡ್ ಪಿಸಿ’

Dina Bhavishya
ಭವಿಷ್ಯ14 ಗಂಟೆಗಳು ago

Dina Bhavishya : ಕುಟುಂಬದ ಸದಸ್ಯರಿಂದ ರಹಸ್ಯ ಸುದ್ದಿಯೊಂದು ಈ ರಾಶಿಯವರಿಗೆ ಅಚ್ಚರಿ ತರಲಿದೆ

dina bhavishya
ಭವಿಷ್ಯ2 ದಿನಗಳು ago

Dina Bhavishya : ಬಹುದಿನಗಳ ಕನಸು ನನಸಾಗುವ ಸಮಯವಿದು; ಹೊಸ ಅವಕಾಶಗಳು ಗರಿಗೆದರಲಿವೆ

karnataka Rain
ಮಳೆ2 ದಿನಗಳು ago

Karnataka Rain : ನಿರಂತರ ಮಳೆಗೆ ಬೆಂಗಳೂರಿಗರು ಕಂಗಾಲು; ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Actor Darshan
ಬೆಂಗಳೂರು2 ದಿನಗಳು ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬೇಲ್‌ ಕನಸು ನಚ್ಚು ನೂರು; ನಟ ದರ್ಶನ್‌ ಜಾಮೀನು ನಿರಾಕರಣೆಗೆ ಕೋರ್ಟ್‌ ಕೊಟ್ಟ 9 ಕಾರಣಗಳು

Karnataka Rain
ಮಳೆ2 ದಿನಗಳು ago

Karnataka Rain : ಬೆಂಗಳೂರಿನಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ; ಧರೆಗುರುಳಿದ ಬೃಹತ್‌ ಮರ, ಕಾರು ಜಖಂ

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌