Baby Care In Summer Baby Care In Summer: ಬೇಸಿಗೆಯಲ್ಲಿ ಎಳೆಗೂಸುಗಳ ಆರೈಕೆ ಹೇಗೆ? - Vistara News

ಆರೋಗ್ಯ

Baby Care In Summer: ಬೇಸಿಗೆಯಲ್ಲಿ ಎಳೆಗೂಸುಗಳ ಆರೈಕೆ ಹೇಗೆ?

ಬೇಸಿಗೆಯಲ್ಲಿ ನವಜಾತ ಶಿಶುಗಳ (Baby Care In Summer) ಆರೈಕೆ ಹೇಗಿರಬೇಕು ಎಂಬ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Baby Care In Summer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೆಯಲ್ಲೊಂದು ಮಗು (Baby Care In Summer) ಬರುವುದಿದೆ ಎಂದಾಕ್ಷಣ, ಮನೆಮಂದಿಯ ಸಂಭ್ರಮಗಳ ಜೊತೆಗೆ ಸಿದ್ಧತೆಗಳೂ ಮುಗಿಲು ಮುಟ್ಟುತ್ತವೆ. ಗರ್ಭಿಣಿಯರಿಗೆ ಯಾವುದು ಒಳ್ಳೆಯದು- ಕೆಟ್ಟದ್ದು, ಯಾವುದು ಬೇಕು- ಸಾಕು ಇತ್ಯಾದಿಗಳ ಚರ್ಚೆಯೂ ಜೋರಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ಹೇಳುವಾಗ ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬುದೇ ಬಗೆಹರಿಯುವುದಿಲ್ಲ. ಬಸುರಿನಲ್ಲೇ ಹೀಗಿರುವಾಗ ಮಗು ಬಂದ ಮೇಲಂತೂ ಸಲಹೆಗಳ ಪ್ರವಾಹವೇ ಹರಿದು ಬರುತ್ತದೆ. ಬೇಸಿಗೆಯಲ್ಲಿ ನವಜಾತ ಶಿಶುಗಳ ಆರೈಕೆ ಹೇಗಿರಬೇಕು ಎಂಬ ಬಗ್ಗೆ ಕೆಲವು ಮಾಹಿತಿಗಳಿವು.

Baby Care In Summer

ಎಳೆಗೂಸಿಗೆ ಸ್ನಾನ

ಹುಟ್ಟಿದಾಕ್ಷಣ ಶಿಶುವನ್ನು ತೊಳೆದು ಸ್ವಚ್ಛ ಮಾಡಲಾಗುತ್ತದೆ. ಹಾಗಾಗಿ ಮೊದಲ ದಿನದಿಂದಲೇ ಅದಕ್ಕೆ ಸ್ನಾನ ಮಾಡಿಸಬೇಕೆಂದಿಲ್ಲ. ಕತ್ತರಿಸಿದ ಹೊಕ್ಕುಳ ಬಳ್ಳಿ ಒಣಗುವವರೆಗೆ ಸ್ನಾನ ಮಾಡಿಸದೇ ಇರುವುದು ಕ್ಷೇಮ. ಹಾಗೂ ಮಾಡಿಸಲೇಬೇಕೆಂದಿದ್ದರೆ ಈ ಬೇಸಿಗೆಯ ಕಾಲದಲ್ಲಿ ಹಿತವಾದ ಉಗುರು ಬಿಸಿ ನೀರಿನಲ್ಲಿ, ಸ್ನಾನ ಮಾಡಿಸಿದರೆ ಸಾಕು.

Baby Care In Summer

ತಾಯಿಗೆ ನೆಗಡಿಯಿದ್ದರೆ ಶಿಶುವಿಗೆ ಹಾಲೂಡಿಸಬೇಕೆ?

ಹೌದು. ತಾಯಿ ತನ್ನ ಕೈಗಳನ್ನು ಸ್ವಚ್ಛ ಇರಿಸಿಕೊಂಡು ಕೂಸನ್ನು ಮುಟ್ಟಬೇಕಾಗುತ್ತದೆ. ತಾಯಿಯ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕ ಕಣಗಳು ಶಿಶುವಿಗೆ ದೊರೆಯುವುದು ಹಾಲಿನ ಮೂಲಕವೇ ಆದ್ದರಿಂದ, ಕಡ್ಡಾಯವಾಗಿ ಹಾಲುಣಿಸಬೇಕು. ಇದರಿಂದ ರೋಗನಿರೋಧಕತೆ ಶಿಶುವಿಗೂ ದೊರೆಯುತ್ತದೆ.

Baby Care In Summer

ಮಗುವಿನ ಕೋಣೆ

ಗಾಳಿ-ಬೆಳಕು ಸಾಕಷ್ಟಿದ್ದು, ತಾಯಿ-ಶಿಶುವಿಗೆ ಪ್ರಶಸ್ತವಾಗಿರಲಿ. ಕೋಣೆಗೆ ನೇರವಾಗಿ ಬಿಸಿಲು ಹೊಡೆಯುವಂತಿದ್ದರೆ, ಪರದೆಗಳನ್ನು ಹಾಕಿ ಕೋಣೆಯನ್ನು ತಂಪಾಗಿಡಿ. ಸಾಧಾರಣವಾಗಿ 25 ಡಿಗ್ರಿ ಸೆ.ನಷ್ಟು ಉಷ್ಣತೆ ಹಿತಕರವಾಗಿರುತ್ತದೆ. ಏರ್‌ ಕೂಲರ್‌ ಅಥವಾ ಕಂಡೀಶನರ್‌ ಬಳಸುತ್ತಿದ್ದರೆ, ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛ ಮಾಡುವುದು ಅಗತ್ಯ. ಮಗುವನ್ನು ಹೊರಗೆ ಕರೆದೊಯ್ಯುವಾಗ ಆದಷ್ಟು ಮಧ್ಯಾಹ್ನ 12ರಿಂದ 4 ಗಂಟೆಯ ಹೊತ್ತನ್ನು ತಪ್ಪಿಸಿ. ತೀಕ್ಷ್ಣ ಬಿಸಿಲಿಗೆ ಎಳೆ ಚರ್ಮ ಬೇಗನೆ ಸುಡುತ್ತದೆ.

Baby Care In Summer

ಬಟ್ಟೆಗಳು

ಸಡಿಲವಾಗ ಹತ್ತಿಯ ಬಟ್ಟೆಗಳನ್ನೇ ಬಳಸಿ. ದಿನವಿಡೀ ಡೈಪರ್‌ ಹಾಕುವವರು ನೀವಾದರೆ, ಅದನ್ನು ಕಾಲಕಾಲಕ್ಕೆ ಬದಲಿಸಿ, ಗುಳ್ಳೆಗಳಾಗದಂತೆ ಎಚ್ಚರ ವಹಿಸಿ. ಇಷ್ಟಾಗಿಯೂ ಶಿಶುಗಳಿಗೆ ಬೇಸಿಗೆಯಲ್ಲಿ ಬೆವರುಸಾಲೆಯಂಥ ಚರ್ಮದ ಕಿರಿಕಿರಿ ಬರಬಹುದು. ತಂಪಾಗಿ ಮೈ ಒರೆಸಿ, ಬೆವರು ಕಡಿಮೆಯಾಗುವಂತೆ ನೋಡಿಕೊಳ್ಳಿ.

Baby Care In Summer

ನೀರು ಕುಡಿಸಬೇಕೆ?

ಬೇಸಿಗೆಯ ದಿನಗಳಾದ್ದರಿಂದ ಕೂಸಿಗೆ ಕಾಯಿಸಿದ ನೀರು ಕುಡಿಸುವಂತೆ ಯಾರಾದರೂ ಸಲಹೆ ನೀಡುವುದು ಸಾಮಾನ್ಯ. ಇದು ಸಲ್ಲದು. ಆರು ತಿಂಗಳವರೆಗೆ ಮಗುವಿಗೆ ತಾಯಿಯ ಹಾಲಿನ ಹೊರತಾಗಿ ಏನನ್ನೂ ಕುಡಿಸುವ ಅಗತ್ಯವಿಲ್ಲ. ತಾಪಮಾನ ತೀವ್ರವಾಗಿದ್ದರೆ, ಪದೇಪದೆ ಹಾಲೂಡಿಸಿ. ಆದರೆ ತಾಯಿಯನ್ನು ನಿರ್ಜಲೀಕರಣಕ್ಕೆ ಒಡ್ಡದಂತೆ ಎಚ್ಚರಿಕೆ ವಹಿಸಿ. ಮಗುವಿಗೆ ಘನ ಆಹಾರ ಪ್ರಾರಂಭಿಸಿದ ನಂತರವೇ ನೀರು ಕುಡಿಸುವ ಅಗತ್ಯ ಇರುತ್ತದೆ.

Baby Care In Summer

ಕಾಡಿಗೆ- ಪೌಡರು- ಎಣ್ಣೆ

ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಸೋಂಕು ಉಂಟಾಗಿ, ಶಿಶುವಿಗೆ ಹಾನಿ ಹೆಚ್ಚುತ್ತದೆ. ಪೌಡರು ಹಚ್ಚುವುದರಿಂದ ಅಲರ್ಜಿ ಅಥವಾ ಒಣಚರ್ಮದ ಸಮಸ್ಯೆ ಕಾಡಬಹುದು. ಮಗುವಿಗೆ ನವಿರಾಗಿ ಎಣ್ಣೆ ಮಸಾಜ್‌ ಮಾಡಬಹುದು. ಆದರೆ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯಂಥ ತೈಲಗಳಿಂದ ನವಿರಾಗಿ ಮಸಾಜ್‌ ಸಾಕಾಗುತ್ತದೆ. ಸಿಕ್ಕಾಪಟ್ಟೆ ಎಣ್ಣೆ ಹಚ್ಚಿ, ಆ ಎಣ್ಣೆ ತೊಳೆಯುವುದಕ್ಕೆ ಕಠೋರ ಸೋಪು- ಬಿಸಿ ನೀರುಗಳನ್ನು ಹಾಕುವುದರಿಂದ ಎಳೆಯ ಚರ್ಮಕ್ಕೆ ಹಾನಿಯಾಗುತ್ತದೆ. ಕಿವಿಗೆ, ಮೂಗಿಗೆಲ್ಲಾ ಎಣ್ಣೆ ಹಾಕುವುದು ಬೇಡ. ಇದರಿಂದ ಸೋಂಕಿನ ಸಮಸ್ಯೆ ಉಂಟಾಗಬಹುದು.

Baby Care In Summer

ಮಗುವಿನ ತಲೆ ತಟ್ಟಿ ಉರುಟಾಗಿಸಬಹುದೆ?

ಕೆಲವೊಮ್ಮೆ ಹುಟ್ಟುವಾಗ ಮಗುವಿನ ತಲೆ ಆಕಾರಗೆಡುವುದು ನಿಜ. ಅದು ಸಾಮಾನ್ಯವಾಗಿ ತಾನಾಗೇ ಒಂದು ಆಕೃತಿಗೆ ಬರುತ್ತದೆ. ಅದಕ್ಕಾಗಿ ಮಗುವಿನ ತಲೆ ತಟ್ಟಬೇಕೆಂದಿಲ್ಲ. ನವಜಾತ ಮಕ್ಕಳ ತಲೆಯ ಮೂಳೆಯ ನಡುವೆ ಸೂಕ್ಷ್ಮ ಅಂತರವಿರುತ್ತದೆ. ಕ್ರಮೇಣ ಅದು ತಾನಾಗಿಯೇ ತುಂಬಿಕೊಳ್ಳುತ್ತದೆ. ಹಾಗಾಗಿ ಉರುಟಾಗಿಸುವ ಸಾಹಸಕ್ಕೆ ಶಿಶುಗಳ ತಲೆ ತಟ್ಟುವುದು ಬೇಕಿಲ್ಲ. ಇದು ಮಗುವಿಗೆ ಅಪಾಯಕಾರಿ. ಇದಕ್ಕಾಗಿ ರಾಗಿಯ ಸಣ್ಣ ದಿಂಬುಗಳನ್ನು ಕೂಸುಗಳಿಗೆ ಬಳಸಬಹುದು.

Baby Care In Summer

ಮಕ್ಕಳು ರಾತ್ರಿಯಿಡೀ ನಿದ್ರಿಸಬೇಕೆ?

ಹಾಗೇನಿಲ್ಲ. ಹಸುಗೂಸುಗಳ ಹೊಟ್ಟೆ ಸಣ್ಣದಾದ್ದರಿಂದ ಅವುಗಳಿಗೆ ಆಗಾಗ ಹೊಟ್ಟೆಗೆ ಹಾಕುವುದು ಅಗತ್ಯ. ಹಾಗಾಗಿ ರಾತ್ರಿಡೀ ನಿದ್ರಿಸಲಾಗದೆ ಪದೇಪದೆ ಎದ್ದು ಹೊಟ್ಟೆಗೆ ಹಾಕಿಕೊಳ್ಳುತ್ತವೆ. ಮೂರ್ನಾಲ್ಕು ತಿಂಗಳ ನಂತರ, ಅವುಗಳು ಹಾಲು ಕುಡಿಯುವ ಅಂತರ ಹೆಚ್ಚಿದ ಮೇಲೆ, ನಿದ್ದೆಯ ಸಮಯವೂ ದೀರ್ಘವಾಗುತ್ತಾ ಹೋಗುತ್ತದೆ. ಪುಟ್ಟ ಮಕ್ಕಳು ದಿನಕ್ಕೆ 16-17 ತಾಸು ನಿದ್ರಿಸುವುದು ಹೌದಾದರೂ, ಒಮ್ಮೆಲೆ ಇಷ್ಟು ದೀರ್ಘ ಸಮಯ ನಿದ್ದೆ ಮಾಡುವುದಿಲ್ಲ.

ಇದನ್ನೂ ಓದಿ: Health Tips: ಒಗ್ಗರಣೆಗೆ ಹಾಕುವ ಕರಿಬೇವನ್ನು ನಾವು ನಿತ್ಯವೂ ಏಕೆ ತಿನ್ನಬೇಕು ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

ಚಹಾ ಸಿದ್ಧಪಡಿಸಿದ ಮೇಲೆ ಅದನ್ನು ಮತ್ತೆ ಮತ್ತೆ ಬಿಸಿ ಮಾಡುವುದು, ಹಾಲು ಹಾಕಿದ ಮೇಲೆ ದೀರ್ಘಕಾಲ ಕುದಿಸುವುದು- ಇಂಥ ಅಭ್ಯಾಸಗಳು ಬಹಳಷ್ಟು ಜನರಿಗೆ ಇರುತ್ತವೆ. ಇಂಥ ಅಭ್ಯಾಸಗಳು ಅನಾರೋಗ್ಯಕರ ಪರಿಣಾಮಗಳನ್ನು ಆರೋಗ್ಯದ ಮೇಲೆ ಉಂಟು ಮಾಡಬಹುದು. ಈ ಬಗೆಗಿನ (Tips On Tea) ವಿವರಗಳು ಇಲ್ಲಿವೆ.

VISTARANEWS.COM


on

Tips On Tea
Koo

ಚಹಾ ಮಾಡುವುದೆಂದರೆ ರಾಕೆಟ್‌ ಹಾರಿಸಿದಂತೇನಲ್ಲ, ಸುಲಭದ ಕೆಲಸ. ಮಾಡುವ ರೀತಿಗಳಲ್ಲಿ ಒಬ್ಬರಿಂದೊಬ್ಬರಿಗೆ ಭಿನ್ನತೆ ಇರಬಹುದೇ ಹೊರತು, ಚಹಾವನ್ನು ಪಾಯಸ ಮಾಡಿದಂತೆ ಮಾಡುವುದಕ್ಕಂತೂ ಸಾಧ್ಯವಿಲ್ಲ. ಅಂದರೆ, ಚಹಾ ಡಿಕಾಕ್ಷನ್‌ಗೆ ಹಾಲು ಹಾಕಿದ ಮೇಲೆ ಪಾಯಸದಂತೆ ಕುದಿಸುವವರಿದ್ದಾರೆ; ಡಿಕಾಕ್ಷನ್‌ ಕುದಿಸಿ ಕೊನೆಗೆ ಹಾಲು ಹಾಕುವವರಿದ್ದಾರೆ- ಹೀಗೆ. ದಿನಕ್ಕೊಂದೆರಡು ಬಾರಿ ಚಹಾ ಕುಡಿಯುವುದರಲ್ಲಿ ಸಮಸ್ಯೆಗಳಿಲ್ಲ. ಅದರಲ್ಲೂ ಏಕ್ಕಿ, ಶುಂಠಿ ಮುಂತಾದ ಮಸಾಲೆಗಳನ್ನು ಹಾಕಿ ಚಹಾ ಮಾಡುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭಗಳಿವೆ. ಆದರೆ ಇದನ್ನು ಮಾಡುವ ಕ್ರಮ ತಪ್ಪಾಗಿದ್ದರೆ, ಆರೋಗ್ಯಕ್ಕೆ ಸಮಸ್ಯೆಗಳು (Tips On Tea) ಎದುರಾಗಬಹುದು.

Cup of Tea

ಏನು ಹಾಗೆಂದರೆ?

ಒಮ್ಮೆ ಚಹಾ ಸಿದ್ಧಪಡಿಸಿದ ಮೇಲೆ ಅದನ್ನು ಮತ್ತೆ ಮತ್ತೆ ಬಿಸಿ ಮಾಡುವುದು, ಹಾಲು ಹಾಕಿದ ಮೇಲೆ ದೀರ್ಘಕಾಲ ಕುದಿಸುವುದು- ಇಂಥ ಅಭ್ಯಾಸಗಳು ಬಹಳಷ್ಟು ಜನರಿಗೆ ಇರುತ್ತವೆ. ಇಂಥ ಯಾವುದೇ ಅಭ್ಯಾಸಗಳು ಅನಾರೋಗ್ಯಕರ ಪರಿಣಾಮಗಳನ್ನು ಆರೋಗ್ಯದ ಮೇಲೆ ಉಂಟು ಮಾಡಬಹುದು. ಈ ಬಗೆಗಿನ ವಿವರಗಳು ಇಲ್ಲಿವೆ.

ಏಕೆ ಕುದಿಸಬಾರದು?

ಚಹಾದಲ್ಲಿ ಟ್ಯಾನಿನ್‌ ಅಂಶಗಳಿವೆ. ಟ್ಯಾನಿನ್‌ಗಳೆಂದು ಪಾಲಿಫೆನಾಲ್‌ನಂಥ ಜೈವಿಕ ಕಣಗಳು. ಇವು ಹಣ್ಣುಗಳು, ತರಕಾರಿಗಳು, ಬೀಜಗಳು, ವೈನ್‌, ಚಹಾ ಇಂಥವುಗಳು ಕಂಡುಬರುತ್ತವೆ. ಪ್ರೊಟೀನ್‌, ಸೆಲ್ಯುಲೋಸ್‌, ಖನಿಜಗಳ ಜೊತೆಗೆಲ್ಲ ಟ್ಯಾನಿನ್‌ಗಳು ಅಂಟಿಕೊಂಡಿರುತ್ತವೆ. ಚಹಾದಲ್ಲೂ ಈ ಟ್ಯಾನಿನ್‌ಗಳು ಹೇರಳವಾಗಿರುವುದರಿಂದ, ದೀರ್ಘಕಾಲದವರೆಗೆ ಚಹಾ ಕುದಿಸಿದರೆ, ಕಬ್ಬಿಣದಂಶ ಹೀರಿಕೊಳ್ಳುವುದಕ್ಕೆ ದೇಹಕ್ಕೆ ಸಂಕಷ್ಟವನ್ನು ನೀಡುತ್ತವೆ. ಚಹಾವನ್ನು ಅತಿಯಾಗಿ ಕುದಿಸುವುದರಿಂದ ಸತ್ವಗಳು ನಾಶವಾಗಿ, ಹೊಟ್ಟೆಯಲ್ಲಿ ಆಸಿಡಿಟಿಯನ್ನು ಮಾತ್ರವೇ ಆಹ್ವಾನಿಸಿಕೊಂಡಂತಾಗುತ್ತದೆ. ಇದಲ್ಲದೆ, ಚಹಾವನ್ನು ಅತಿಯಾಗಿ ಕುದಿಸುವುದರ ಅಡ್ಡ ಪರಿಣಾಮಗಳು ಇನ್ನೂ ಏನೇನಿವೆ?

ICMR Dietary Guidelines

ಸತ್ವಗಳ ನಾಶ

ಇಲ್ಲೀಗ ಕೇವಲ ಚಹಾ ಡಿಕಾಕ್ಷನ್‌ ಕುದಿಸುತ್ತಿರುವುದರ ಬಗ್ಗೆಯಲ್ಲ ಹೇಳುತ್ತಿರುವುದು. ಡಿಕಾಕ್ಷನ್‌ಗೆ ಹಾಲು ಹಾಕಿ, ಚಹಾ ಸಿದ್ಧವಾದ ಮೇಲೆ ಕುದಿಸುವುದರ ಬಗೆಗಿನ ಮಾತಿದು. ಹಾಲಿನಲ್ಲಿರುವ ಕ್ಯಾಲ್ಶಿಯಂ, ವಿಟಮಿನ್‌ ಸಿ, ವಿಟಮಿನ್‌ ಬಿ12 ಮುಂತಾದ ಪೋಷಕಾಂಶಗಳು ನಾಶವಾಗಿ ಬಿಡುತ್ತವೆ. ಹಾಗಾಗಿ ಚಹಾ ಅತಿಯಾಗಿ ಕುದಿಸುವುದು ಸಲ್ಲದು.

ರುಚಿಗೆಡುತ್ತದೆ

ಚಹಾವನ್ನು ಅತಿಯಾಗಿ ಕುದಿಸುವುದರಿಂದ ರುಚಿಗೆಟ್ಟಂತಾಗುತ್ತದೆ. ಅದರಲ್ಲೂ ಚಹಾ ರುಚಿಯನ್ನು ಸೂಕ್ಷ್ಮವಾಗಿ ಆಸ್ವಾದಿಸುವವರಿಗಂತೂ ಅರೆಘಳಿಗೆ ಹೆಚ್ಚು ಕುದಿಸಿದರೂ ಇಷ್ಟವಾಗದು. ಹೆಚ್ಚು ಕುದಿಸುವುದರಿಂದ ಸಣ್ಣದೊಂದು ಒಗರು, ಕಹಿ ರುಚಿಗಳು ಚಹಾದಲ್ಲಿ ಸೇರಿಕೊಳ್ಳುತ್ತವೆ. ಮಸಾಲೆ ಚಹಾಗಳಾದರೆ ಅದರ ಘಮವನ್ನೂ ಕೆಡಿಸುವಂತೆ ಕಹಿವಾಸನೆ ಚಹಾದಲ್ಲಿ ಸೇರಿಕೊಳ್ಳುತ್ತದೆ.

ealthy internal organs of human digestive system / highlighted blue organs

ಜೀರ್ಣಾಂಗಗಳ ಸಮಸ್ಯೆ

ಚಹಾ ಅತಿಯಾಗಿ ಕುದಿಸುವುದರಿಂದ ಅದರ ಪಿಎಚ್‌ ಹೆಚ್ಚುತ್ತದೆ. ಇದರಿಂದ ಆಸಿಡಿಟಿಯ ತೊಂದರೆ ಅಂಟಿಕೊಳ್ಳಬಹುದು. ಜೊತೆಗೆ, ಹಾಲಿನಲ್ಲಿರುವ ಪ್ರೊಟೀನ್‌ಗಳ ಸ್ವರೂಪ ವ್ಯತ್ಯಾಸವಾಗುತ್ತದೆ. ಇದರಿಂದ ಜೀರ್ಣವಾಗುವುದು ಕಷ್ಟವಾಗಿ, ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆನೋವಿಗೆ ಕಾರಣವಾಗಬಹುದು.

ಹಾನಿಕಾರಕ ಅಂಶಗಳು

ಕೆಫೇನ್‌ ಅಂಶವನ್ನು ಅತಿಯಾಗಿ ಕುದಿಸುವುದರ ಅಡ್ಡ ಪರಿಣಾಮಗಳು ಇದ್ದೇಇವೆ. ಜೊತೆಗೆ, ಹೆಚ್ಚಿನ ಉಷ್ಣತೆಯಲ್ಲಿ ಹಾಲಿನಲ್ಲಿರುವ ಲ್ಯಾಕ್ಟೋಸ್‌ ಅಂಶವು ಚಹಾ ಅಂಶಗಳು ಮತ್ತು ಪ್ರೊಟೀನ್‌ಗಳ ಜೊತೆಗೂಡಿ ಇನ್ನಷ್ಟು ತೊಂದರೆ ನೀಡುತ್ತವೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಚಹಾ ಕುಡಿಯುವುದರಿಂದ ಆರೋಗ್ಯ ಹದಗೆಡಬಹುದು.

ಕಾರ್ಸಿನೋಜೆನ್‌ಗಳು

ಅತಿಯಾಗಿ ಕುದಿಸುವುದು ಅಕ್ರಿಲಮೈಡ್‌ನಂಥ ಕಾರ್ಸಿನೋಜೆನ್‌ಗಳನ್ನು ಸೃಷ್ಟಿ ಮಾಡಬಹುದು. ಆದರೆ ಇದು ಅತಿ ಕಡಿಮೆ ಪ್ರಮಾಣದಲ್ಲಿ ಸೃಷ್ಟಿಯಾಗುವುದರಿಂದ, ಈ ಮೂಲಕ ಕ್ಯಾನ್ಸರ್‌ನಂಥ ರೋಗಗಳು ಬರುವಂಥ ಸಾಧ್ಯತೆ ಅಸಾಧ್ಯ. ಆದರೂ ಹೀಗೊಂದು ಸಾಧ್ಯತೆ ಇರುವುದನ್ನು ತಳ್ಳಿ ಹಾಕುವಂತಿಲ್ಲ.

Masala tea or chai

ಎಷ್ಟು ಕುದಿಸಬೇಕು?

ಹಾಗಾದರೆ ಎಷ್ಟು ಕುದಿಸಬೇಕು? ಹಾಲು ಹಾಕುವ ಮುನ್ನ ಮತ್ತು ಹಾಕಿದ ಮೇಲೆ- ಎಲ್ಲವೂ ಸೇರಿ ಅತಿ ಹೆಚ್ಚೆಂದರೆ 4-5 ನಿಮಿಷಗಳವರೆಗೆ ಕುದಿಸಿದರೆ ಸಾಕು. ಆದರೆ ಎಷ್ಟು ಕಡಿಮೆ ಕುದಿಸಿದರೂ ಅಷ್ಟು ಒಳ್ಳೆಯದು. ತಜ್ಞರ ಪ್ರಕಾರ, ಚಹಾವನ್ನು ಕುದಿಸುವುದಕ್ಕಿಂತ ನಿಧಾನ ವಿಧಾನದಲ್ಲಿ ಬ್ರೂ ಮಾಡುವುದು ಒಳ್ಳೆಯ ವಿಧಾನ. ಏನು ಹಾಗೆಂದರೆ? ಹೇಗೆ ಮಾಡುವುದು ಅದನ್ನು?

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಟೀ ಬ್ರೂ ಮಾಡುವುದೆಂದರೆ

ಚಹಾ ಮಾಡುವಾಗ ಅದಕ್ಕೆ ಹಾಲು, ಸಕ್ಕರೆ ಹಾಕಿ ಪಾಯಸದಂತೆ ಕುದಿಸುವದಲ್ಲ. ಬದಲಿಗೆ, ಕುದಿಯುವ ನೀರಿಗೆ ಚಹಾ ಪುಡಿಯನ್ನು ಹಾಕಿ. ಉರಿ ಆರಿಸಿ, ಮುಚ್ಚಿಡಿ. ಐದು ನಿಮಿಷದ ನಂತರ ಅದು ಕುಡಿಯಲು ಸಿದ್ಧವಾಗಿರುತ್ತದೆ. ಒಂದೊಮ್ಮೆ ಹಾಲು ಮತ್ತು ಸಕ್ಕರೆ ಬೇಕೆಂದರೆ, ಅದನ್ನು ಪ್ರತ್ಯೇಕವಾಗಿ ಬಿಸಿ ಮಾಡಿ, ಕಡೆಯ ಹಂತದಲ್ಲಿ ಬೆರೆಸಿಕೊಳ್ಳಿ.

Continue Reading

ಆರೋಗ್ಯ

Dengue Fever: ಮಳೆಗಾಲ ಬರುತ್ತಿದೆ! ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!

ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಶುರುವಾಗಲಿದ್ದು, ಇದರ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚಲಿದೆ. ಹೌದು, ಡೆಂಗ್ಯೂ ಜ್ವರ ಹೆಚ್ಚಳವೂ ಇದೇ ಋತುವಿನಲ್ಲಿ ಆಗುವುದರಿಂದ ಈಗಿನಿಂದಲೇ ಎಚ್ಚರ ವಹಿಸುವುದು ಅತಿ ಅವಶ್ಯಕ. ಜಾಗತಿಕ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಡೆಂಗ್ಯೂಗೆ (Dengue Fever) ಗುರಿಯಾಗುತ್ತಾರೆ. ಈ ಕುರಿತ ವೈದ್ಯರ ಮಾಹಿತಿ ಇಲ್ಲಿದೆ.

VISTARANEWS.COM


on

Dengue Fever
Koo

ಡಾ. ಪದ್ಮಕುಮಾರ್ ಎವಿ, ಹಿರಿಯ ನಿರ್ದೇಶಕರು, ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗ, ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ

ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಶುರುವಾಗಲಿದ್ದು, ಇದರ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚಲಿದೆ. ಹೌದು, ಡೆಂಗ್ಯೂ ಜ್ವರ ಹೆಚ್ಚಳವೂ ಇದೇ ಋತುವಿನಲ್ಲಿ ಆಗುವುದರಿಂದ ಈಗಿನಿಂದಲೇ ಎಚ್ಚರ ವಹಿಸುವುದು ಅತಿ ಅವಶ್ಯಕ. ಜಾಗತಿಕ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಡೆಂಗ್ಯೂಗೆ (Dengue Fever) ಗುರಿಯಾಗುತ್ತಾರೆ. ಡೆಂಗ್ಯೂ ನಿರೋಧಕ ಲಸಿಕೆ ಇನ್ನಷ್ಟೇ ಪ್ರಯೋಗದ ಹಂತದಲ್ಲಿದೆ. ದೇಶದ ವಿವಿಧ ಭಾಗದಲ್ಲಿ ಸೊಳ್ಳೆಯಿಂದ ಉಂಟಾಗುವ ಡೆಂಗ್ಯೂ ಮಾರಣಾಂತಿಕ. ಕೆಲವರ ಜೀವವನ್ನು ಸಹ ಬಲಿಪಡೆದುಬಿಡುತ್ತದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಜಾಗೃತಿ ಇಲ್ಲದ ಕಾರಣ, ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿ ಡೆಂಗ್ಯೂಗೆ ಬಲಿಯಾಗುತ್ತಾರೆ. ಡೆಂಗ್ಯೂನಲ್ಲಿ ಪ್ರಮುಖವಾಗಿ ಸ್ಪೆಕ್ಟ್ರಮ್ ಡೆಂಗ್ಯೂನಿಂದ ಎಚ್ಚರಿಕೆ ವಹಿಸುವುದು ಅವಶ್ಯಕ. ಕಡಿಮೆ ತೀವ್ರತೆ, ಮಧ್ಯಮ ಹಾಗೂ ಅತಿ ಹೆಚ್ಚು ತೀವ್ರತೆಯ ಡೆಂಗ್ಯೂ ಹರಡುತ್ತದೆ. ಕಡಿಮೆ ಲಕ್ಷಣವಿರುವ ಡೆಂಗ್ಯೂ ಬಂದರೆ ಕೆಲವೇ ದಿನಗಳಲ್ಲಿ ಜ್ವರದ ಬಳಿಕ ಕಡಿಮೆಯಾಗಲಿದೆ. ಮಧ್ಯಮದ ತೀವ್ರತೆಯ ಡೆಂಗ್ಯೂ ಸಹ, ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಯಿಂದ ಗುಣವಾಗಲಿದೆ. ಆದರೆ, ಅತಿಹೆಚ್ಚು ತೀವ್ರತೆಯ ಲಕ್ಷಣ ಹೊಂದಿರುವ ಡೆಂಗ್ಯೂ ಮನುಷ್ಯನನ್ನೇ ಬಲಿ ತೆಗೆದುಕೊಳ್ಳಬಹುದು. ದೇಹದಲ್ಲಿನ ಬಿಳಿರಕ್ತಕಣವನ್ನು ಕಡಿಮೆಗೊಳಿಸಿ ಮನುಷ್ಯರನ್ನು ಅಸ್ವಸ್ಥಗೊಳಿಸುತ್ತದೆ, ಇದಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯದೇ ಹೋದರೆ (Dengue Fever) ಬದುಕುವುದು ಕಷ್ಟ.

Dengue Fever Vaccines

ಲಸಿಕೆಗಳು

ಡೆಂಗ್ಯೂ ನಿಯಂತ್ರಣಕ್ಕೆ ಲಸಿಕೆ ತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ, ಇದನ್ನು ಪಡೆದುಕೊಳ್ಳಲು ಪರ ವಿರೊಧ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಸನೋಫಿ ಗ್ಲೋಬಲ್‌ ಹೆಲ್ತ್‌ಕೇರ್‌ ಅಭಿವೃದ್ಧಿಪಡಿಸಿ, ಪರವಾನಗಿ ಪಡೆದ “ಡೆಂಗ್‌ವಾಕ್ಸಿಯಾ” ಎಂಬ ಲಸಿಕೆಯು ಸಹ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

ಆಶಾದಾಯಕ ಬೆಳವಣಿಗೆಗಳು

ಡೆಂಗ್‌ವಾಕ್ಸಿಯಾದ ಹಿನ್ನಡೆಯ ಹೊರತಾಗಿಯೂ, ಭಾರತದಲ್ಲಿ ಡೆಂಗ್ಯೂ ಲಸಿಕೆ ಅಭಿವೃದ್ಧಿಯ ದಿಗಂತದಲ್ಲಿ ಭರವಸೆಯ ಬೆಳವಣಿಗೆಗಳಿವೆ. ಕನಿಷ್ಠ ಎರಡು ಸ್ಥಳೀಯ ಡೆಂಗ್ಯೂ ಲಸಿಕೆ ಅಭಿವೃದ್ಧಿಪಡಿಸಲು ಸಂಶೋಧನಾ ಸಂಸ್ಥೆಗಳ ನೇತೃತ್ವದಲ್ಲಿ ಸ್ಥಳೀಯ ಪ್ರಯತ್ನಗಳು ಸಕ್ರಿಯವಾಗಿ ನಡೆಯುತ್ತಿವೆ. ಹೆಚ್ಚುವರಿಯಾಗಿ, ಡೆಂಗ್ಯೂ ವಿರುದ್ಧ ಹೋರಾಡಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರವನ್ನು ಕಂಡುಹಿಡಿಯುವ ಬದ್ಧತೆಯನ್ನು ಪ್ರದರ್ಶಿಸುವ ಲೈವ್-ಅಟೆನ್ಯೂಯೇಟೆಡ್ ಟೆಟ್ರಾವೆಲೆಂಟ್ ಲಸಿಕೆಯಂತಹ ಭರವಸೆಗೆ ಭಾರತವು ಅಂತರರಾಷ್ಟ್ರೀಯ ಪ್ರಯೋಗಗಳಲ್ಲಿ ಸಹಕರಿಸುತ್ತಿದೆ. ಹೀಗಾಗಿ ಭಾರತದಲ್ಲಿ ಡೆಂಗ್ಯೂ ಲಸಿಕೆ ಅಭಿವೃದ್ಧಿ ಪಡಿಸುವ ಕಾರ್ಯ ಭರದಿಂದ ಸಾಗಿದ್ದು, ಭವಿಷ್ಯದಲ್ಲಿ ಲಸಿಕೆ ಸಿಗಲಿದೆ ಎಂಬ ಭರವಸೆ ಇದೆ, ಒಂದು ವೇಳೆ ಡೆಂಗ್ಯೂ ಲಸಿಕೆ ಜನರಿಗೆ ಸಿಕ್ಕರೆ, ಸಾಕಷ್ಟು ಸಾವು ನೋವುಗಳನ್ನು ತಡೆಯಬಹುದು.

Continue Reading

ಆರೋಗ್ಯ

Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

ನೆಗಡಿಯಾದಾಗ, ಮೂಗು ಕಟ್ಟಿದಾಗ, (Mouth Sleeping) ಜೋರಾಗಿ ಓಡುವಾಗೆಲ್ಲ ಬಾಯಲ್ಲಿ ಉಸಿರಾಡುವುದು ಸಾಮಾನ್ಯ. ಆದರೆ ಅಂಥ ಯಾವುದೂ ಇಲ್ಲದಾಗಲೂ ನಿದ್ದೆ ಮಾಡುವಾಗ ಬಾಯಲ್ಲಿ ಉಸಿರಾಡುವುದು ಅನಾರೋಗ್ಯಕರ. ಈ ಬಗ್ಗೆ ಆರೋಗ್ಯ ಪರಿಣತರು ಏನೆನ್ನುತ್ತಾರೆ? ಈ ಸಮಸ್ಯೆಯ ಹಿಂದು-ಮುಂದಿನ ಮಾಹಿತಿಗಳು ಇಲ್ಲಿವೆ.

VISTARANEWS.COM


on

Mouth Sleeping
Koo

ಹೀಗೊಂದು ಸನ್ನಿವೇಶವನ್ನು (Mouth Sleeping) ಊಹಿಸಿಕೊಳ್ಳಿ- ನಿಮಗೆ ಸಖತ್‌ ನೆಗಡಿಯಾಗಿದೆ. ಮೂಗೆಲ್ಲ ಕಟ್ಟಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಮಲಗಿದಾಗ ಈ ಸಮಸ್ಯೆ ಇನ್ನೂ ಹೆಚ್ಚು ಬಾಧಿಸುತ್ತಿದೆ. ಇಂಥ ಹೊತ್ತಿನಲ್ಲಿ ಬಾಯಲ್ಲಿ ಉಸಿರಾಡುವುದೊಂದೇ ಮಾರ್ಗ. ಆದರೆ ನೆಗಡಿ ಕಡಿಮೆಯಾದ ನಂತರ ಮರಳಿ, ಮೂಗಲ್ಲೇ ಉಸಿರಾಟ ಆರಂಭಿಸುತ್ತೀರಿ. ಹಾಗಲ್ಲದೆ, ಮಲಗಿದಾಗೆಲ್ಲ ಮೂಗಿನಲ್ಲಲ್ಲದೆ, ಬಾಯಲ್ಲೇ ಉಸಿರಾಡುತ್ತೀರಾ? ನೆಗಡಿ ಇಲ್ಲದಿದ್ದರೂ ನಿಮ್ಮ ಉಸಿರಾಟ ಬಾಯಲ್ಲೇ ನಡೆಯುತ್ತದೆಯೇ? ಹಾಗಾದರೆ ಇದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಉಂಟಾಗಬಹುದು. ಅತಿಯಾಗಿ ವ್ಯಾಯಾಮ ಮಾಡುವಾಗ, ಜೋರಾಗಿ ಓಡುವಾಗ ಅಥವಾ ನಡೆಯುವಾಗಲೂ ನಾವು ಬಾಯಲ್ಲಿ ಉಸಿರಾಡುತ್ತೇವೆ. ಇದರಿಂದ ದೇಹಕ್ಕೆ ಬೇಕಾದ ಆಮ್ಲಜನಕವನ್ನು ಬೇಗನೇ ಒದಗಿಸುವುದಕ್ಕೆ ಸಾಧ್ಯ. ಆದರೆ ಮಲಗಿದಾಗ, ನಿದ್ದೆಯಲ್ಲಿ ಬಾಯಲ್ಲಿ ಉಸಿರಾಡುವುದು ಸಮಸ್ಯೆಗೆ ಕಾರಣವಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ನಿದ್ದೆ ಮಾಡುತ್ತಿರುವವರಿಗೆ ಅವರು ಹೇಗೆ ಉಸಿರಾಡುತ್ತಿದ್ದಾರೆ ಎಂಬುದು ತಿಳಿಯುವುದಾದರೂ ಹೇಗೆ?

Sleeping Tips

ತಿಳಿಯಬಹುದು

ನಿದ್ದೆ ಮಾಡುವಾಗ ತಿಳಿಯದಿದ್ದರೂ, ನಿದ್ದೆಯಿಂದ ಎದ್ದಾಗ ತಿಳಿಯುವುದಕ್ಕೆ ದಾರಿಗಳಿವೆ. ಬೆಳಗ್ಗೆ ಎದ್ದಾಗ ಬಾಯೆಲ್ಲ ಒಣಗಿದಂತಿದ್ದರೆ, ಬಾಯಲ್ಲಿ ದುರ್ಗಂಧ ಅತಿಯಾಗಿದ್ದರೆ, ಧ್ವನಿ ಒರಟಾಗಿದ್ದರೆ, ಏಳುವಾಗ ಅತಿಯಾದ ಸುಸ್ತು ಅಥವಾ ಕಿರಿಕಿರಿ ಎನಿಸುತ್ತಿದ್ದರೆ, ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಕಾಣುತ್ತಿದ್ದರೆ, ಎದ್ದಾಗ ಬುದ್ಧಿಯಲ್ಲಿ ಸ್ಪಷ್ಟತೆಯ ಬದಲು ಗೊಂದಲ ಇದ್ದರೆ- ಮಲಗಿದಾಗ ಬಾಯಲ್ಲಿ ಉಸಿರಾಡಿರುವ ಸಾಧ್ಯತೆಗಳು ಅಧಿಕ.

ಯಾಕೆ ಹೀಗೆ?

ಮೂಗಿನಲ್ಲಿ ಸರಾಗ ಉಸಿರಾಡುವುದಕ್ಕೆ ಯಾವುದೇ ಸಮಸ್ಯೆ ಎದುರಾದರೂ, ತಕ್ಷಣಕ್ಕೆ ಬಾಯಲ್ಲಿ ಉಸಿರಾಡುವುದು ದೇಹಧರ್ಮ. ಮೂಗು ಕಟ್ಟಿದ್ದರೆ, ಕಫ ಬಿಗಿದಿದ್ದರೆ, ಟಾನ್ಸಿಲ್‌ ಸಮಸ್ಯೆಯಿದ್ದರೆ, ಶ್ವಾಸನಾಳದಲ್ಲಿ ಎಲ್ಲಾದರೂ ಪಾಲಿಪ್‌ಗಳಿದ್ದರೆ, ಅತಿಯಾದ ಸುಸ್ತು, ಒತ್ತಡದಿಂದ ಬಳಲುತ್ತಿದ್ದರೆ- ಹೀಗೆ ಮೂಗಿನ ಬದಲು ಬಾಯಲ್ಲಿ ಉಸಿರಾಡುವುದಕ್ಕೆ ಹಲವಾರು ಕಾರಣಗಳು ಇರಬಹುದು.

ಏನಾಗುತ್ತದೆ?

ನಿದ್ದೆ ಮಾಡುವಾಗ ಹೀಗೆ ಬಾಯಲ್ಲಿ ಉಸಿರಾಡಿದರೆ ಆಗುವ ಸಮಸ್ಯೆಯೇನು? ಹೇಗೋ ಒಂದು- ಉಸಿರಾಡುವುದು ಮುಖ್ಯವಲ್ಲವೇ? ಉಸಿರಾಡುವುದು ಮುಖ್ಯ ಎಂಬುದು ಹೌದಾದರೂ, ಹೇಗೋ ಒಂದು ಎಂಬುದು ಸರಿಯಲ್ಲ. ಇದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಗಳ ಸಂಖ್ಯೆ ತ್ವರಿತವಾಗಿ ದ್ವಿಗುಣಗೊಳ್ಳುತ್ತದೆ. ಜೊತೆಗೆ ಇನ್ನಷ್ಟು ಸಮಸ್ಯೆಗಳು ಗಂಟಿಕ್ಕಿಕೊಳ್ಳುತ್ತವೆ.

Sleeping Tips
  • ಹ್ಯಾಲಿಟೋಸಿಸ್‌ ಅಥವಾ ಬಾಯಿಯ ದುರ್ಗಂಧದ ಸಮಸ್ಯೆ ಎದುರಾಗುತ್ತದೆ. ಕಾರಣ, ಬಾಯಿಯಲ್ಲಿರುವ ಬ್ಯಾಕ್ಟೀರಿಯಗಳು ಅಧಿಕವಾಗುತ್ತವೆ.
  • ಹಲ್ಲಿನ ಸಮಸ್ಯೆಗಳು ಸಹ ಹೆಚ್ಚುತ್ತವೆ. ಒಸಡುಗಳಿಗೆ ಸೋಂಕು ಉಂಟಾಗಬಹುದು. ಹಲ್ಲಿನ ಹುಳುಕು ಕಾಡಬಹುದು.
    ಗಂಟಲು ಮತ್ತು ಕಿವಿಯ ಸೋಂಕು ಪದೇಪದೆ ಕಾಡಬಹುದು. ಮಕ್ಕಳಲ್ಲಿ ಈ ಸಮಸ್ಯೆ ಇದ್ದರೆ, ಅದರ ಪ್ರಮಾಣ ಹೆಚ್ಚಬಹುದು.
  • ಬಾಯಲ್ಲಿ ಉಸಿರಾಡುವುದರಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟ ಕುಸಿಯುವ ಸಂಭವವಿದೆ. ಇದರಿಂದ ಶ್ವಾಸಕೋಶಗಳ ಕ್ಷಮತೆಯೂ ಕಡಿಮೆಯಾಗಬಹುದು. ಅಲರ್ಜಿ, ಅಸ್ತಮಾದಂಥ ತೊಂದರೆಗಳಲ್ಲಿ ಇದು ಹೆಚ್ಚಿನ ಉಪಟಳ ನೀಡುತ್ತದೆ.
  • ಮಕ್ಕಳಲ್ಲಿ ಮುಖದ ಆಕಾರ ಬದಲಾಗುವುದು, ಒಸಡುಗಳ ಆಕೃತಿ ಬದಲಾಗುವುದು, ಹಲ್ಲುಗಳು ಒತ್ತೊತ್ತಾಗಿ ಮೂಡುವುದು ಮುಂತಾದ ತೊಂದರೆಗಳು ಕಾಣಬಹುದು.

ಇದನ್ನೂ ಓದಿ: Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

ಪರಿಹಾರ ಏನು?

ತಲೆಯನ್ನು ಕೊಂಚ ಎತ್ತರಿಸಿ ಮಲಗುವುದರಿಂದ ಶ್ವಾಸನಾಳಗಳು ತೆರೆದುಕೊಂಡು, ಮೂಗಲ್ಲಿ ಉಸಿರಾಡುವುದು ಸುಲಭವಾಗುತ್ತದೆ. ಮೂಗು ಕಟ್ಟಿದಾಗ ಸಲೈನ್‌ ಸ್ಪ್ರೇಗಳನ್ನು ಉಪಯೋಗಿಸುವುದರಿಂದ ಉಸಿರಾಟ ಸುಲಭವಾಗಬಹುದು. ಮನೆಯ ವಾತಾವರಣವನ್ನು ಶುಚಿಯಾಗಿ ಇರಿಸಿಕೊಳ್ಳುವುದರಿಂದ ಅಲರ್ಜಿಯನ್ನು ಮಟ್ಟ ಹಾಕಲು ಸಾಧ್ಯ. ಯೋಗ, ಪ್ರಾಣಾಯಾಮಗಳು ಶ್ವಾಸಕೋಶದ ಬಲವರ್ಧನೆ ಮಾಡಿ, ಮೂಗಿನ ಉಸಿರಾಟವನ್ನು ಸುಲಭ ಮಾಡುತ್ತವೆ.

Continue Reading

ಆರೋಗ್ಯ

Brain Tumour In Kids: ಮಕ್ಕಳ ಜೀವ ಹಿಂಡುವ ಮೆದುಳಿನ ಟ್ಯೂಮರ್‌ನ ಲಕ್ಷಣಗಳಿವು

ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಮೆದುಳಿನ ಗಡ್ಡೆಯ ಪ್ರಕರಣಗಳು ವಿಶ್ವದೆಲ್ಲೆಡೆ ಹೆಚ್ಚುತ್ತಿದ್ದು, ಆತಂಕ ಮೂಡಿಸುತ್ತಿದೆ. ಮೆದುಳಿನ ಸುತ್ತಲಿನ ಕೋಶಗಳ ಅಸಹಜ ಬೆಳವಣಿಗೆಯನ್ನು ಟ್ಯೂಮರ್‌ ಎಂದು ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟ್ಯೂಮರ್‌ ಇರುವಾಗಿನ ಕೆಲವು ಲಕ್ಷಣಗಳನ್ನು ಗುರುತಿಸಿ ಜಾಗ್ರತೆ ಮಾಡುವುದರ ಕುರಿತಾಗಿ ಒಂದಿಷ್ಟು ವಿವರಗಳು (Brain Tumour In Kids) ಇಲ್ಲಿವೆ.

VISTARANEWS.COM


on

Brain Tumour In Kids
Koo

ಮೆದುಳಿನ ಸುತ್ತಲಿನ ಕೋಶಗಳ ಅಸಹಜ ಬೆಳವಣಿಗೆಯನ್ನು ಟ್ಯೂಮರ್‌ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯನ್ನು ಎದುರಿಸುವವರು ಬಹಳಷ್ಟು ಆರೋಗ್ಯದ ಸಮಸ್ಯೆಗಳಿಗೂ ತುತ್ತಾಗುವಂತಾಗುತ್ತದೆ. ಹಲವಾರು ಪ್ರಕರಣಗಳಲ್ಲಿ ಶರೀರದ ಅಂಗಾಂಗಗಳ ಕ್ಷಮತೆಯೂ ಕುಸಿಯುವಂತಾಗುತ್ತದೆ. ಮಕ್ಕಳಲ್ಲಿ ಇಂಥ ಪ್ರಕರಣಗಳು ಎದುರಾದಾಗ, ವಯಸ್ಕರಲ್ಲಿ ಕಾಣುವ ಲಕ್ಷಣಗಳು ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೀತಿ ಭಿನ್ನವಾಗಿಯೇ ಇರುತ್ತದೆ. ಮೆದುಳಿನ ಯಾವ ಭಾಗದಲ್ಲಿ ಟ್ಯೂಮರ್‌ ಕಾಣಿಸಿಕೊಂಡಿದೆ, ಗಡ್ಡೆ ಎಷ್ಟು ದೊಡ್ಡದಿದೆ ಮುಂತಾದವುಗಳ ಮೇಲೆ ಗೋಚರಿಸುವ ಲಕ್ಷಣಗಳು ವ್ಯತ್ಯಾಸವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಮೆದುಳಿನ ಗಡ್ಡೆಯ ಪ್ರಕರಣಗಳು ವಿಶ್ವದೆಲ್ಲೆಡೆ ಹೆಚ್ಚುತ್ತಿದ್ದು, ಆತಂಕ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಟ್ಯೂಮರ್‌ ಇರುವಾಗಿನ ಕೆಲವು ಲಕ್ಷಣಗಳನ್ನು ಗುರುತಿಸಿ ಜಾಗ್ರತೆ ಮಾಡುವುದಕ್ಕೆ ಬೇಕಾಗಿ, ಒಂದಿಷ್ಟು (Brain Tumour In Kids) ವಿವರಗಳು ಇಲ್ಲಿವೆ.

child headache

ತಲೆನೋವು

ಇದರರ್ಥ ತಲೆ ನೋವು ಬಂದಾಗಲೆಲ್ಲ ಮೆದುಳಿನಲ್ಲಿ ಗಡ್ಡೆಯಿದೆ ಎಂದಲ್ಲ. ತಲೆನೋವು ತರಹೇವಾರಿ ಕಾರಣಗಳಿಗೆ ಬರಬಹುದು. ಆದರೆ ಟ್ಯೂಮರ್‌ ಇರುವಂಥ ಸಂದರ್ಭದಲ್ಲಿ ತಲೆನೋವಿಗೊಂದು ಪ್ರತ್ಯೇಕ ಸ್ವರೂಪವಿರುತ್ತದೆ. ಮೈಗ್ರೇನ್‌, ಆಸಿಡಿಟಿ ಮುಂತಾದ ಸಂದರ್ಭಗಳಲ್ಲಿ ಬರುವ ತಲೆನೋವಿಗಿಂತ ಇದು ಬೇರೆಯಾಗಿರುತ್ತದೆ. ಅಂದರೆ, ಬೆಳಗ್ಗೆ ಏಳುತ್ತಿದ್ದಂತೆ ತಲೆನೋವು ಪ್ರಾರಂಭವಾಗುವುದು, ರಾತ್ರಿ ಮಲಗಿದಾಗ ತಲೆನೋವು ಹೆಚ್ಚುವುದು- ಇಂಥ ಲಕ್ಷಣಗಳು ಗೋಚರಿಸಿದರೆ, ವೈದ್ಯರಲ್ಲಿ ಹೋಗಲೇಬೇಕು.

Close-up human eye, lens, cornea and brown iris.

ದೃಷ್ಟಿ ಮಂದವಾಗುವುದು

ಹಲವು ರೀತಿಯ ಟ್ಯೂಮರ್‌ಗಳು ದೃಷ್ಟಿಯನ್ನು ಮಂದವಾಗಿಸುತ್ತವೆ. ಗೆಜೆಟ್‌ಗಳ ಭರಾಟೆಯಲ್ಲಿ ಮಕ್ಕಳ ದೃಷ್ಟಿ ಕ್ಷೀಣಿಸುವುದು ಅಸಹಜ ಅಲ್ಲ ಎನ್ನುವುದು ಹೌದಾದರೂ, ನೇತ್ರ ತಜ್ಞರಲ್ಲಿ ಸಮಾಲೋಚನೆ ಅಗತ್ಯವಿದೆ. ಬೆಳಕಿಗೆ ಕಣ್ಣು ಬಿಡಲಾಗದಿರುವುದು, ಯಾವುದನ್ನೂ ಕೇಂದ್ರೀಕರಿಸಲು ದೃಷ್ಟಿ ಸಹಕರಿಸದಿರುವುದು- ಇವೆಲ್ಲ ಟ್ಯೂಮರ್‌ನಿಂದಾಗಿ ದೃಷ್ಟಿ ನರದ ಮೇಲೆ ಬೀಳುತ್ತಿರುವ ಒತ್ತಡದ ಲಕ್ಷಣಗಳಾಗಿರಬಹುದು.

ವಾಂತಿ, ಹೊಟ್ಟೆ ತೊಳೆಸುವುದು

ಫ್ಲೂ ಮಾದರಿಯ ಲಕ್ಷಣಗಳ ಜೊತೆಗೆ ಅತೀವ ತಲೆನೋವಿದೆ ಎಂದರೆ- ಎಚ್ಚರ ಅಗತ್ಯ. ಸಿಕ್ಕಾಪಟ್ಟೆ ಹೊಟ್ಟೆ ತೊಳೆಸುವುದು, ವಾಂತಿ ಕಂಡುಬರಬಹುದು. ಮೆದುಳಿನ ಒಂದು ನಿಗದಿತ ಜಾಗದಲ್ಲಿ ಟ್ಯೂಮರ್‌ ಬೆಳೆದು ದೊಡ್ಡದಾಗುತ್ತಿದ್ದರೆ ಇಂಥ ಲಕ್ಷಣಗಳು ಕಾಣುವುದು ಸಾಮಾನ್ಯ.

Little Boy Suffering from Ear Pain on Color Green Background

ಕಿವಿ ಕೇಳದಿರುವುದು

ಅತಿಯಾಗಿ ಇಯರ್‌ಫೋನ್‌ ಬಳಕೆಯ ಪ್ರಭಾವ ಎಂದು ಭಾವಿಸಿ, ಕಿವಿ ಕೇಳದ ಸಮಸ್ಯೆಯನ್ನು ನಿರ್ಲಕ್ಷಿಸುವ ಸಾಧ್ಯತೆ ಇಲ್ಲದಿಲ್ಲ. ಆದರೆ ಶ್ರವಣ ನರಗಳ ಮೇಲಿನ ಅತೀವ ಒತ್ತಡದಿಂದ ತೀವ್ರ ಕಿವಿನೋವು, ಕಿವಿ ಕೇಳುವುದು ಕಡಿಮೆಯಾದಂತೆ ಅನಿಸುವುದು ಸಾಮಾನ್ಯ. ಒಳಗಿವಿಯಿಂದ ಮೆದುಳಿಗೆ ಸಂದೇಶ ರವಾನಿಸುವ ಈ ನರಗಳು ಶ್ರವಣ ಸಾಮರ್ಥ್ಯ ಸರಿಯಾಗಿರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂಥ ಸಂದರ್ಭದಲ್ಲೂ ಮೆದುಳಿನ ಟ್ಯೂಮರ್‌ ಇಲ್ಲ ಎಂಬುದನ್ನು ವೈದ್ಯರಿಂದ ಖಾತ್ರಿ ಪಡಿಸಿಕೊಳ್ಳಬೇಕು.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

ಅಪಸ್ಮಾರ

ಇದು ಸಹ ಅತ್ಯಂತ ಸಾಮಾನ್ಯವಾದ ಲಕ್ಷಣ. ಮೆದುಳಿನ ಟ್ಯೂಮರ್‌ ಇರುವವರಲ್ಲಿ ಶೇ. 40ರಷ್ಟು ಜನರಿಗೆ ಒಮ್ಮೆಯಾದರೂ ಅಪಸ್ಮಾರ ಕಾಣುವುದು ಸಹಜ ಎನ್ನುತ್ತಾರೆ ನರರೋಗ ತಜ್ಞರು. ಕೆಲವೊಮ್ಮೆ ಇದನ್ನು ಟ್ಯೂಮರ್‌ನ ಪ್ರಾಥಮಿಕ ಲಕ್ಷಣವೆಂದು ಗ್ರಹಿಸಲಾಗುತ್ತದೆ. ಹಾಗಾಗಿ ಈ ಬಗ್ಗೆ ನರರೋಗ ತಜ್ಞರಲ್ಲಿ ಸಮಾಲೋಚನೆ ಅಗತ್ಯ.
ಇಂಥ ಯಾವುದೇ ಸೂಚನೆಗಳು ಕಂಡುಬಂದಲ್ಲಿ ವೈದ್ಯರಲ್ಲಿ ತುರ್ತು ಸಮಾಲೋಚನೆ ಅಗತ್ಯ. ಇದಕ್ಕೆ ಹಲವಾರು ಸುತ್ತಿನ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಸ್ಕ್ಯಾನಿಂಗ್‌ನಿಂದ ಹಿಡಿದು ಬಯಾಪ್ಸಿಯವರೆಗೂ ಪರೀಕ್ಷೆಗಳ ಅಗತ್ಯ ಬರಬಹುದು. ಆದರೆ ಆರಂಭಿಕ ಹಂತದಲ್ಲಿ ಈ ರೋಗ ಪತ್ತೆಯಾದರೆ ಶರೀರಕ್ಕೆ ಹೆಚ್ಚಿನ ಹಾನಿಯಾಗದಂತೆ ಚಿಕಿತ್ಸೆ ನೀಡುವ ಸಾಧ್ಯತೆ ಹೆಚ್ಚುತ್ತದೆ.

Continue Reading
Advertisement
bomb threat
ಪ್ರಮುಖ ಸುದ್ದಿ1 min ago

Bomb Threat : ಶಾಲೆಗೆ ಬಾಂಬ್​ ಬೆದರಿಕೆ ಮೇಲ್ ಕಳುಹಿಸಿದ ವಿದ್ಯಾರ್ಥಿಗಳು!

belagavi violence
ಕ್ರೈಂ26 mins ago

Belagavi Violence: ಕ್ರಿಕೆಟ್‌ ವಿಚಾರಕ್ಕೆ ಗಲಾಟೆ, 8 ಮಂದಿಗೆ ಗಾಯ, ಪೊಲೀಸರ ಮುಂದೆಯೇ ತಲ್ವಾರ್‌ ಎಸೆದು ಅಟ್ಟಹಾಸ!

karnataka weather Forecast
ಮಳೆ1 hour ago

Karnataka Weather : ಕರಾವಳಿಯಲ್ಲಿ ಬಿರುಗಾಳಿ ಮಳೆ; ಕಡಲಿಗಿಳಿಯದಂತೆ ಮೀನುಗಾರರಿಗೆ ಅಲರ್ಟ್!‌

COMEDK UGET 2024
ಪ್ರಮುಖ ಸುದ್ದಿ2 hours ago

COMEDK UGET 2024 : ಇಂದು ಮಧ್ಯಾಹ್ನ ಕಾಮೆಡ್‌ – ಕೆ ಫಲಿತಾಂಶ; ರಿಸಲ್ಟ್​ ನೋಡೋದು, ಡೌನ್‌ಲೋಡ್‌ ಮಾಡಿಕೊಳ್ಳೋದು ಹೇಗೆ?

Tips On Tea
ಆರೋಗ್ಯ2 hours ago

Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

Dina Bhavishya
ಭವಿಷ್ಯ3 hours ago

Dina Bhavishya : ಆತುರದಲ್ಲಿ ಈ ರಾಶಿಯವರು ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿ

Narendra Modi
ದೇಶ8 hours ago

PM Modi: 400 ಸೀಟು, 400 ಸೀಟು ಎಂದು ಪ್ರತಿಪಕ್ಷಗಳನ್ನು ಮಂಗ್ಯಾ ಮಾಡಿದ ಮೋದಿ; ಅವರ ಮಾತಲ್ಲೇ ಕೇಳಿ!

Rajakaluve
ಸಂಪಾದಕೀಯ8 hours ago

ವಿಸ್ತಾರ ಸಂಪಾದಕೀಯ: ಮುಂಗಾರಿಗೆ ಮುನ್ನವೇ ರಾಜಕಾಲುವೆ ಒತ್ತುವರಿ ತೆರವಾಗಲಿ

IPL 2024
ಪ್ರಮುಖ ಸುದ್ದಿ8 hours ago

IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

DCM D K Shivakumar instructed to test drinking water everywhere including Bengaluru
ಕರ್ನಾಟಕ8 hours ago

Bengaluru News: ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ1 day ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌