Health Benefits Of Strawberries: ಸ್ಟ್ರಾಬೆರಿ ತಿಂದರೆ ಲಾಭಗಳು ಒಂದೆರಡಲ್ಲ! - Vistara News

ಆರೋಗ್ಯ

Health Benefits Of Strawberries: ಸ್ಟ್ರಾಬೆರಿ ತಿಂದರೆ ಲಾಭಗಳು ಒಂದೆರಡಲ್ಲ!

ರಸಭರಿತ ಸ್ಟ್ರಾಬೆರಿಗಳು ತಿಂದಷ್ಟಕ್ಕೂ ದಾಹ ತಣಿಸುತ್ತವೆ. ವಿಟಮಿನ್‌ ಸಿ ವಿಫುಲವಾಗಿರುವ ಈ ಹಣ್ಣುಗಳಲ್ಲಿ ನಾನಾ ರೀತಿಯ ಸತ್ವಗಳು ತುಂಬಿಕೊಂಡಿವೆ. ಇದನ್ನು ತಿಂದರೆ ಆರೋಗ್ಯಕ್ಕಾಗುವ ಲಾಭಗಳೇನು (Health Benefits Of Strawberries) ಎಂಬ ಮಾಹಿತಿಯಿದು.

VISTARANEWS.COM


on

Strawberry
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆರ್ರಿಗಳ ರುಚಿಯನ್ನು ತಿಂದವನೇ ಬಲ್ಲ. ಕೊಂಚ ಹುಳಿ, ಒಂದಿಷ್ಟು ಸಿಹಿ, ಅದರಲ್ಲೇ ಘಮ… ಮಕ್ಕಳಿಗಂತೂ ಇವು ಮನಮೆಚ್ಚಿನವು. ಇವುಗಳಲ್ಲಿ ಹೆಚ್ಚಿನ ಬೆರ್ರಿಗಳು ಭಾರತೀಯ ಮೂಲದ್ದಲ್ಲ. ಹೊರ ದೇಶಗಳಿಂದ ಆಮದಾಗುವ ಅಥವಾ ಇಲ್ಲಿ ಹೊಸದಾಗಿ ಬೆಳೆಯಲ್ಪಡುವ ಅವು, ಇಲ್ಲಿನ ವಾತಾವರಣಕ್ಕೆ ಅಲ್ಲಿಯಂಥ ರುಚಿಯನ್ನು ಕೊಡದಿರುವ ಸಾಧ್ಯತೆಯಿದೆ. ಉದಾ, ಸ್ಟ್ರಾಬೆರಿಯನ್ನು ಹೇಳುವುದಾದರೆ, ಇಲ್ಲಿ ನಮಗೆ ದೊರೆಯುವ ಸ್ಟ್ರಾಬೆರಿಗಳು ಸಾಮಾನ್ಯವಾಗಿ ಹುಳಿ. ಆದರೆ ಪಶ್ಚಿಮ ದೇಶಗಳಲ್ಲಿ ಅವು ತಿನ್ನುವುದಕ್ಕೆ ರುಚಿಯಾಗಿಯೂ ಇರುತ್ತವೆ. ನಮ್ಮಲ್ಲಿ ಹುಳಿ ಮತ್ತು ಸಿಹಿ- ಈ ಎರಡೂ ರುಚಿಗಳ ಕಿತ್ತಳೆ ದೊರೆಯುವುದಿಲ್ಲವೇ… ಹಾಗೆ. ವಿಟಮಿನ್‌ ಸಿ ಹೇರಳವಾಗಿರುವ ಈ ಹಣ್ಣಿನಲ್ಲಿ ನಾರು ಸಹ ಭರಪೂರ ಇರುತ್ತದೆ. ರಸಭರಿತವಾಗಿದ್ದು, ತಿಂದಷ್ಟಕ್ಕೂ ದಾಹ ತಣಿಸುತ್ತದೆ. ತನ್ನದೇ ವಿಶಿಷ್ಟ ಪರಿಮಳ ಹೊಂದಿರುವ ಈ ಬೆರ್ರಿಯನ್ನು ಇಷ್ಟಪಟ್ಟು ತಿನ್ನುವವರು ಬಹಳಷ್ಟು ಜನರಿದ್ದಾರೆ. ತರಹೇವಾರಿ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣನ್ನು ತಿನ್ನುವುದರ ಲಾಭಗಳೇನು (Health Benefits Of Strawberries) ಎಂಬುದನ್ನು ತಿಳಿಯೋಣ.

Heart Health Fish Benefits

ಹೃದಯದ ಮಿತ್ರ

ಕೆಂಬಣ್ಣದ ರಸಭರಿತ ಸ್ಟ್ರಾಬೆರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಹಾಗಾಗಿ ಹೃದಯವನ್ನು ಕಾಪಿಡುವ ಕೆಲಸವನ್ನಿದು ಚೆನ್ನಾಗಿ ಮಾಡಬಲ್ಲದು. ದೇಹದಲ್ಲಿ ಒಳ್ಳೆಯ ಕೊಬ್ಬನ್ನು ಹೆಚ್ಚಿಸುವುದು, ರಕ್ತದಲ್ಲಿನ ಪ್ಲೇಟ್‌ಲೆಟ್‌ ಸಂಖ್ಯೆಯನ್ನು ವೃದ್ಧಿಸುವುದು, ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸುವುದು- ಇಂಥ ಉಪಕಾರಿ ಕೆಲಸಗಳನ್ನು ಸ್ಟ್ರಾಬೆರಿ ಮಾಡಬಲ್ಲದು

ಪ್ರತಿರೋಧಕ ಶಕ್ತಿ ಹೆಚ್ಚಳ

ವಿಟಮಿನ್‌ ಸಿ ವಿಫುಲವಾಗಿರುವ ಈ ಹಣ್ಣಿನ ಸೇವನೆಯಿಂದ ಪ್ರತಿರೋಧಕ ಶಕ್ತಿ ಪ್ರಬಲವಾಗುತ್ತದೆ. ಸೋಂಕುಗಳೊಂದಿಗೆ ಹೋರಾಡಲು ದೇಹಕ್ಕೆ ಅಗತ್ಯ ಶಕ್ತಿಯನ್ನಿದು ನೀಡುತ್ತದೆ. ಜೊತೆಗೆ, ಆಹಾರದಲ್ಲಿ ದೊರೆಯುವ ಕಬ್ಬಿಣದಂಶವನ್ನು ದೇಹ ಹೀರಿಕೊಳ್ಳುವುದಕ್ಕೆ, ಉರಿಯೂತ ನಿವಾರಣೆಗೆ, ಮೂಳೆಗಳು ಗಟ್ಟಿಯಾಗುವುದಕ್ಕೆ- ಹೀಗೆ ಹಲವಾರು ಕೆಲಸಗಳಿಗೆ ವಿಟಮಿನ್‌ ಸಿ ಅಗತ್ಯವಾಗಿ ಬೇಕು.

Diabetes management Daruharidra Benefits

ಮಧುಮೇಹದ ಭೀತಿ ದೂರ

ಸ್ಟ್ರಾಬೆರಿಯಲ್ಲಿ ನಾರಿನಂಶ ವಿಫುಲವಾಗಿದೆ. ಇದರಿಂದ ಇದನ್ನು ಸೇವಿಸಿದ ತಕ್ಷಣ ಗ್ಲೂಕೋಸ್‌ ಆಗಿ ಪರಿವರ್ತನೆಯಾಗಿ ರಕ್ತಕ್ಕೆ ಬಿಡುಗಡೆಯಾಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಹಾಗಾಗಿ ರಕ್ತದಲ್ಲಿ ಸಕ್ಕರೆಯಂಶದ ಏರಿಳಿತ ಆಗದಂತೆ ಕಾಪಾಡಿಕೊಳ್ಳಬಹುದು. ಮಾತ್ರವಲ್ಲ, ಇದರಲ್ಲಿರುವ ನೀರು ಮತ್ತು ನಾರು ಅತಿಯಾಗಿ ತಿನ್ನದಂತೆ ತಡೆಯುತ್ತವೆ.

Blood pressure Benefits Of Saffron

ರಕ್ತದೊತ್ತಡ ನಿರ್ವಹಣೆ

ಸ್ಟ್ರಾಬೆರಿಯಲ್ಲಿ ಆಂಥೋಸಯನಿನ್‌ಗಳು ಭರಪೂರ ಇವೆ. ಈ ಉತ್ಕರ್ಷಣ ನಿರೋಧಕಗಳು ರಕ್ತದೊತ್ತಡ ಏರದಂತೆ ತಡೆಯುವಲ್ಲಿ ಸಹಾಯ ಮಾಡುತ್ತವೆ. ರಕ್ತದ ಏರೊತ್ತಡದಿಂದ ನರಳುತ್ತಿರುವವರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ನಿಯಮಿತವಾದ ಸ್ಟ್ರಾಬೆರಿ ಸೇವನೆಯು ರಕ್ತದೊತ್ತಡವನ್ನು ನಿರ್ವಹಿಸಲು ನೆರವು ನೀಡುತ್ತದೆ.

ಪಾರ್ಶ್ವವಾಯು ದೂರ

ಮೆದುಳಿಗೆ ಶುದ್ಧ ರಕ್ತದ ಪೂರೈಕೆಯಲ್ಲಿ ತಡೆಯಾದರೆ ಪಾರ್ಶ್ವವಾಯು ಹೊಡೆಯುತ್ತದೆ. ಮೆಗ್ನೀಶಿಯಂ, ಫಾಸ್ಫರಸ್, ವಿಟಮಿನ್‌ ಸಿ ಮುಂತಾದ ಸತ್ವಗಳು ಇರುವಂಥ ಆಹಾರ ಪಾರ್ಶ್ವವಾಯುವಿನ ಭೀತಿಯನ್ನು ದೂರ ಮಾಡಬಲ್ಲದು. ಈ ಎಲ್ಲ ಸತ್ವಗಳು ಸ್ಟ್ರಾಬೆರಿಯಲ್ಲಿವೆ. ಈ ಹಣ್ಣಿನ ಸೇವನೆ ಹೀಗೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಲಾಭ ತರಬಲ್ಲದು.

Young Woman Suffering from Constipation on Toilet Bowl at Home Carrot Benefits

ಮಲಬದ್ಧತೆ ದೂರ

ಸೇವಿಸುವ ಆಹಾರದಲ್ಲಿ ಕರಗದಿರುವಂಥ ನಾರುಗಳು ಇರುವುದು ಅಗತ್ಯ. ಕಾರಣ, ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸಿ, ಕರುಳಿನ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಈ ನಾರು ಮಹತ್ವದ ಪಾತ್ರವನ್ನು ವಹಿಸುತ್ತದೆ. ಇಂಥ ನಾರು ಸ್ಟ್ರಾಬೆರಿಯಲ್ಲಿ ಸಾಕಷ್ಟಿದೆ. ಇವುಗಳ ಸೇವನೆಯಿಂದ ಜೀರ್ಣಾಂಗಗಳ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮಲಬದ್ಧತೆಯನ್ನು ದೂರ ಮಾಡಬಹುದು.

ಇದನ್ನೂ ಓದಿ: Inflammation: ದೇಹ ಉಬ್ಬರಿಸಿ ಉರಿಯೂತವೇ? ಈ ಆಹಾರಗಳೇ ನಿಮಗೆ ಆಪದ್ಭಾಂಧವ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಹಾರ/ಅಡುಗೆ

Cooking Oils: ಭಾರತೀಯ ಅಡುಗೆ ಶೈಲಿಗೆ ಯೋಗ್ಯವಾದ 7 ಅಡುಗೆ ಎಣ್ಣೆಗಳಿವು

ಎಲ್ಲ ಕೊಬ್ಬೂ ಕೂಡಾ ಸ್ಯಾಚುರೇಟೆಡ್‌ ಹಾಗೂ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಮಿಶ್ರಣವಾಗಿದ್ದು, ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆಗಿಂತ, ಅನ್‌ ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆ ಉತ್ತಮ. ಇದು ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಬ್ಬನ್ನು ದೇಹಕ್ಕೆ ಸೇರುವಂತೆ ಮಾಡುತ್ತದೆ. ಇದರಿಂದ ಇಂತಹ ಎಣ್ಣೆಗಳು ಹೃದಯಕ್ಕೆ ಹೆಚ್ಚು ಕೆಟ್ಟದನ್ನು ಮಾಡಲಾರವು. ಭಾರತೀಯ ಅಡುಗೆಗಳಲ್ಲಿ ಕರಿಯಲು ಯೋಗ್ಯವಾದ ಏಳು ಎಣ್ಣೆಗಳು ಯಾವುವು ಎಂಬುದರ ಬಗ್ಗೆ (Cooking Oils) ಇಲ್ಲಿದೆ ಮಾಹಿತಿ.

VISTARANEWS.COM


on

Cooking Oils
Koo

ಭಾರತೀಯ ಅಡುಗೆಗಳಲ್ಲಿ ಎಣ್ಣೆಗೆ ಮುಖ್ಯ ಸ್ಥಾನವಿದೆ. ನಿತ್ಯವೂ ಏನಾದರೊಂದು ಕರಿಯಲು ಎಣ್ಣೆ ಬೇಕೇ ಬೇಕಾಗುತ್ತದೆ. ಭಾರತೀಯ ಅಡುಗೆಯ ಜೀವಾಳವಾದ ಒಗ್ಗರಣೆಗೂ ಎಣ್ಣೆ ಬೇಕೇ ಬೇಕು. ಬಗೆಬಗೆಯ ಖಾದ್ಯಗಳು, ತರಹೇವಾರಿ ಅಡುಗೆಗಳು, ಕುರುಕಲು ತಿಂಡಿಗಳು ಸೇರಿದಂತೆ ಎಲ್ಲವುಗಳ ತಯಾರಿಯಲ್ಲೂ ಎಣ್ಣೆಗೆ ಪ್ರಮುಖ ಸ್ಥಾನವಿದೆ. ಮಾರುಕಟ್ಟೆಯಲ್ಲಿ ಬೇಕಾದಷ್ಟು ಬಗೆಯ ಅಡುಗೆ ಎಣ್ಣೆಗಳು ಲಭ್ಯವಿವೆ. ಪ್ರತಿ ಎಣ್ಣೆಯೂ ಉಳಿದ ಎಣ್ಣೆಗಳಿಗಿಂತ ತಾನೇ ಶ್ರೇಷ್ಠ, ನಿಮ್ಮ ಆರೋಗ್ಯಕ್ಕೆ ನನ್ನನ್ನೇ ಬಳಸಿ ಎನ್ನುವ ಜಾಹಿರಾತುಗಳು ಗ್ರಾಹಕನನ್ನು ಸಂದಿಗ್ಧಕ್ಕೆ ದೂಡುತ್ತದೆ. ಎಂತಹ ಎಣ್ಣೆಯನ್ನು ಖರೀದಿಸಬೇಕು, ನಿಜಕ್ಕೂ ಯಾವ ಎಣ್ಣೆ ಆರೋಗ್ಯಕ್ಕೆ ಯೋಗ್ಯ ಎಂಬ ಗೊಂದಲದಲ್ಲಿ ತಲೆಕೆಡಿಸಿಕೊಳ್ಳುತ್ತಾನೆ. ಬನ್ನಿ, ಭಾರತೀಯ ಅಡುಗೆಗಳಿಗೆ ಸೂಕ್ತವಾದ ಎಣ್ಣೆ ಯಾವುವು ಎಂಬುದನ್ನು ನೋಡೋಣ.
ಎಲ್ಲ ಕೊಬ್ಬೂ ಕೂಡಾ ಸ್ಯಾಚುರೇಟೆಡ್‌ ಹಾಗೂ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಮಿಶ್ರಣವಾಗಿದ್ದು, ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆಗಿಂತ, ಅನ್‌ ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆ ಉತ್ತಮ. ಇದು ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಬ್ಬನ್ನು ದೇಹಕ್ಕೆ ಸೇರುವಂತೆ ಮಾಡುತ್ತದೆ. ಇದರಿಂದ ಇಂತಹ ಎಣ್ಣೆಗಳು ಹೃದಯಕ್ಕೆ ಹೆಚ್ಚು ಕೆಟ್ಟದನ್ನು ಮಾಡಲಾರವು. ಆದರೆ, ದೇಹಕ್ಕೆ ಒಳ್ಳೆಯ ಕೊಬ್ಬಿನ ಅಗತ್ಯವಿರುವುದು ಹೌದಾದರೂ, ಯಾವುದೇ ಎಣ್ಣೆಯಿರಲಿ, ಅತಿಯಾದ ಸೇವನೆ ಒಳ್ಳೆಯದಲ್ಲ. ಬನ್ನಿ, ಭಾರತೀಯ ಅಡುಗೆಗಳಲ್ಲಿ ಕರಿಯಲು ಯೋಗ್ಯವಾದ ಐದು ಎಣ್ಣೆಗಳು ಯಾವುವು (Cooking Oils) ಎಂಬುದನ್ನು ನೋಡೋಣ.

Rice bran oil

ರೈಸ್‌ ಬ್ರಾನ್‌ ಎಣ್ಣೆ

ರೈಸ್‌ ಬ್ರಾನ್‌ ಅಥವಾ ಅಕ್ಕಿಯ ಹೊರಕವಚದಿಂದ ತಯಾರಿಸಲ್ಪಡುವ ಈ ಎಣ್ಣೆಯಲ್ಲಿ ಒಳ್ಳೆಯ ಕೊಬ್ಬು ಹೆಚ್ಚಿದೆ. ಆಲಿವ್‌ ಎಣ್ಣೆ, ಅವಕಾಡೋ ಎಣ್ಣೆಯಂತೆ ಇದು ಹೃದಯ ಸ್ನೇಹಿ. ಜಪಾನ್‌ನ ಸರ್ಕಾರ ಇದನ್ನು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಸೇರಿಸಿದ್ದು, ಇನ್ಸುಲಿನ್‌ ಮಟ್ಟದ ಮೇಲೆ ಪರಿಣಾಮ ಬೀರದೆ, ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಇಳಿಸಲೂ ಕೂಡಾ ಇದು ನೆರವಾಗುತ್ತದೆ. ಇದರಲ್ಲಿ ಕ್ಯಾನ್ಸರ್‌ ನಿರೋಧಕ ಗುಣಗಳೂ ಇದ್ದು, ಇದನ್ನು ಭಾರತೀಯ ಅಡುಗೆಗಳಲ್ಲಿ ಇತ್ತೀಚೆಗೆ ಹೇರಳವಾಗಿ ಬಳಸಲಾಗುತ್ತದೆ.

Mustard Oil

ಸಾಸಿವೆ ಎಣ್ಣೆ

ಎರುಸಿಕ್‌ ಆಸಿಡ್‌ ಎಂಬ ಫ್ಯಾಟಿ ಆಸಿಡ್‌ ಅನ್ನು ಹೊಂದಿರುವ ಸಾಸಿವೆ ಎಣ್ಣೆಯನ್ನು ಯುರೋಪ್‌ ಹಾಗೂ ಯುಸ್‌ಗಳಲ್ಲಿ ನಿಷೇಧಿಸಿದ್ದರೂ, ಭಾರತದಲ್ಲಿ ಹೇರಳವಾಗಿ ಬಳಕೆಯಾಗುವ ಎಣ್ಣೆ. ಮುಖ್ಯವಾಗಿ ಉತ್ತರ ಭಾರತದ ಮಂದಿ ಅಡುಗೆಗೆ ಬಳಸುವ ಈ ಸಾಸಿವೆ ಎಣ್ಣೆಯಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಫ್ಯಾಟಿ ಆಸಿಡ್‌ಗಳಿದ್ದು, ಕಡಿಮೆ ಸ್ಯಾಚುರೆಟೆಡ್‌ ಫ್ಯಾಟ್‌ ಹೊಂದಿದೆ. ಇದರಲ್ಲಿ ಆಂಟಿ ಮೈಕ್ರೋಬಿಯಲ್‌, ಆಂಟಿ ಬಯಾಟಿಕ್‌ ಗುಣಗಳೂ ಇದ್ದು, ಕೆಲವು ಬಗೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ.

Sunflower oil

ಸೂರ್ಯಕಾಂತಿ ಎಣ್ಣೆ

ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ಮನೆಗಳಲ್ಲಿ ಸ್ಥಾನ ಪಡೆದಿರುವ ಸೂರ್ಯಕಾಂತಿ ಎಣ್ಣೆಯಲ್ಲಿ ಹೃದಯ ಸ್ನೇಹಿ ಗುಣಗಳಿವೆ. ಇದರಲ್ಲಿ ಪಾಳಿ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಅಂಶಗಳು ಹೆಚ್ಚಿರುವುದರಿಂದ ಒಳ್ಳೆಯ ಕೊಬ್ಬನ್ನು ಪ್ರೋತ್ಸಾಹಿಸುತ್ತದೆ. ವಿಟಮಿನ್‌ ಇ ಇದರಲ್ಲಿ ಹೇರಳವಾಗಿದ್ದು, ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು. ಕರಿಯಲು ಈ ಎಣ್ಣೆ ಯೋಗ್ಯವಾಗಿದ್ದು ಬಹಳಷ್ಟು ಮಂದಿ ಇದನ್ನು ನಿತ್ಯವೂ ಬಳಸುತ್ತಾರೆ.

Ghee Testing Method

ತುಪ್ಪ

ಇದರಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಹೆಚ್ಚಿರುವುದು ಹೌದಾದರೂ, ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿರುವ ಹಾಗೂ ಭಾರತೀಯ ಮನೆಗಳ ಅವಿಭಾಜ್ಯ ಅಂಗ. ಇದರಲ್ಲಿ ವಿಟಮಿನ್‌ ಎ, ಡಿ, ಕೆ ಹಾಗೂ ಇ ಹೇರಳವಾಗಿದ್ದು, ಆಂಟಿ ಕ್ಯಾನ್ಸರ್‌ ಗುಣಗಳನ್ನೂ ಹೊಂದಿದೆ. ಆಂಟಿ ಆಕ್ಸಿಡೆಂಟ್‌ಗಳೂ ಹೇರಳವಾಗಿರುವ ಸಾಕಷ್ಟು ವೈದ್ಯಕೀಯ ಗುಣಗಳನ್ನು ಹೊಂದಿರುವ ಇದು ಭಾರತೀಯ ಆಯುರ್ವೇದ ಚಿಕಿತ್ಸೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಹೀಗಾಗಿ. ಇದರ ಬಳಕೆ ಭಾರತೀಯ ಅಡುಗೆಗಳಲ್ಲಿ ನಿರಾಕರಿಸುವುದು ಅಸಾಧ್ಯ. ಹಿತಮಿತವಾಗಿ ಬಳಕೆ ಮಾಡಿದಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

Coconut Oil

ತೆಂಗಿನೆಣ್ಣೆ

ಲಾರಿಕ್‌ ಆಸಿಡ್‌ ಎಂಬ ಅಪರೂಪದ ಸ್ಯಾಚುರೇಟೆಡ್‌ ಫ್ಯಾಟ್‌ ತೆಂಗಿನೆಣ್ಣೆಯಲ್ಲಿದ್ದರೂ ಸಾಕಷ್ಟು ಉತ್ತಮ ಆರೋಗ್ಯಕರ ಗುಣಗಳ ಮೂಲಕ ತೆಂಗಿನೆಣ್ನೆ ತಲೆತಲಾಂತರಗಳಿಂದ ಮುಖ್ಯವಾಗಿ ದಕ್ಷಿಣ ಭಾರತೀಯರ ಮನೆಗಳಲ್ಲಿ ಅಡುಗೆಯಲ್ಲಿ ಬಹುಮುಖ್ಯ ಸ್ಥಾಣವನ್ನು ಪಡೆದಿದೆ. ಆಂಟಿ ಆಕ್ಸಿಡೆಂಟ್‌ಗಳೂ ಇದರಲ್ಲಿ ಹೇರಳವಾಗಿದೆ. ಚರ್ಮ ಹಾಗೂ ಕೂದಲ ಆರೋಗ್ಯ ಸೇರಿದಂತೆ ಹಲವು ಲಾಭಗಳು ಇದರಲ್ಲಿವೆ.

Groundnut oil

ನೆಲಗಡಲೆ ಎಣ್ಣೆ

ವಿಟಮಿನ್‌ ಇ ಯಿಂದ ಸಮೃದ್ಧವಾಗಿರುವ ಈ ಎಣ್ಣೆ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳನ್ನೂ ಹೊಂದಿದೆ. ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಸ್ಯಾಚುರೇಟೆಡ್‌ ಕೊಬ್ಬಿದ್ದರೂ, ಇದರ ಇತರ ಆರೋಗ್ಯಕರ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಅಡುಗೆಗೆ, ಕರಿಯಲು ಬಳಸಬಹುದು.

Sesame Oil

ಎಳ್ಳೆಣ್ಣೆ

ಭಾರತೀಯ ಆಯುರ್ವೇದದಲ್ಲಿ ಎಳ್ಳೆಣ್ಣೆಗೆ ಮಹತ್ವದ ಸ್ಥಾನವಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಅಡಿಮೆ ಮಾಡಲು ಈ ಎಣ್ಣೆ ಒಳ್ಳೆಯದು ಎಂಬುದನ್ನು ಸಾಕಷ್ಟು ಸಂಶೋಧನೆಗಳು ಪುಷ್ಠೀಕರಿಸಿವೆ. ಹೃದಯಸ್ನೇಹಿ ಗುಣಗಳನ್ನು ಹೊಂದಿರುವ ಈ ಎಣ್ಣೆಯನ್ನು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ಅಡುಗೆಗೆ ಬಳಸಲಾಗುತ್ತದೆ. ಹಲವಾರಿ ಆರೋಗ್ಯದ ಲಾಭಗಳನ್ನೂ ಹೊಂದಿರುವ ಇದು ಚರ್ಮ ಹಾಗೂ ಕೂದಲ ಆರೋಗ್ಯಕ್ಕೂ ಒಳ್ಳೆಯದನ್ನೇ ಮಾಡುತ್ತದೆ.
ನೆನಪಿಡಿ: ಉತ್ತಮ ಆರೋಗ್ಯಕ್ಕೆ ಎಣ್ಣೆಗಳು ಬೇಕೇಬೇಕು. ಆದರೆ, ಅತಿಯಾಗಬಾರದು ಅಷ್ಟೇ.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Continue Reading

ದೇಶ

Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

Covishield: ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ಲಸಿಕೆ ವಿತರಿಸುವಾಗಲೇ ಮಾಹಿತಿ ನೀಡಲಾಗಿದೆ. ಈಗ ಯಾವುದೇ ಮಾಹಿತಿ ಹಂಚಿಕೊಳ್ಳಲು ಬಾಕಿ ಇಲ್ಲ ಎಂಬುದಾಗಿ ಕಂಪನಿ ತಿಳಿಸಿದೆ.

VISTARANEWS.COM


on

Covishield
Koo

ಪುಣೆ: ಲಸಿಕೆಯ ಅಡ್ಡಪರಿಣಾಮದ ಕುರಿತು ಭಾರತ ಸೇರಿ ಜಗತ್ತಿನಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬ್ರಿಟಿಷ್ ಔಷಧೀಯ ದೈತ್ಯ ಅಸ್ಟ್ರಾಜೆನಿಕಾ (AstraZeneca) ಕಂಪನಿಯು ಕೊರೊನಾ ನಿರೋಧಕ ಲಸಿಕೆ ಕೋವಿಶೀಲ್ಡ್ (Covishield Vaccine)‌ ಅನ್ನು ಜಾಗತಿಕ ಮಟ್ಟದಲ್ಲಿ ಹಿಂಪಡೆಯಲು ಮುಂದಾಗಿದೆ. ಇದರ ಬೆನ್ನಲ್ಲೇ, ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಉತ್ಪಾದಿಸಿದ್ದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (SII) ಕಂಪನಿಯು, “ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮದ ಕುರಿತು ಇದಕ್ಕೂ ಮೊದಲೇ ಬಹಿರಂಗಪಡಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಅಸ್ಟ್ರಾಜೆನಿಕಾ ಸಹಯೋಗದಲ್ಲಿಯೇ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕೋವಿಶೀಲ್ಡ್‌ಅನ್ನು ಭಾರತದಲ್ಲಿ ಉತ್ಪಾದನೆ ಮಾಡಿದೆ. ಜಾಗತಿಕವಾಗಿ ಅಡ್ಡ ಪರಿಣಾಮದ ಕುರಿತು ಚರ್ಚಿಸುತ್ತಿರುವ ಬೆನ್ನಲ್ಲೇ ಕಂಪನಿಯು ಸ್ಪಷ್ಟನೆ ನೀಡಿದೆ. “ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS ಸೇರಿ ಎಲ್ಲ ವಿರಳ ಅಡ್ಡ ಪರಿಣಾಮಗಳ ಕುರಿತು ಈಗಾಗಲೇ ಮಾಹಿತಿ ಬಹಿರಂಗಪಡಿಸಲಾಗಿದೆ” ಎಂದು ಸೀರಂ ಸಂಸ್ಥೆಯ ವಕ್ತಾರರೊಬ್ಬರು ಪ್ರಕಟಣೆ ತಿಳಿಸಿದ್ದಾರೆ.

2021ರಲ್ಲೇ ಉತ್ಪಾದನೆ ಸ್ಥಗಿತ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆಯನ್ನು ಕೋಟ್ಯಂತರ ಡೋಸ್‌ಗಳನ್ನು ಜನರಿಗೆ ನೀಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಬಳಿಕ ಅಂದರೆ, 2021ರ ಡಿಸೆಂಬರ್‌ನಿಂದಲೇ ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂಬುದಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮಾಹಿತಿ ನೀಡಿದೆ. ಅಷ್ಟೇ ಅಲ್ಲ, ಲಸಿಕೆಯ ಬಾಟಲಿ ಮೇಲೆಯೇ ಅಡ್ಡ ಪರಿಣಾಮದ ಕುರಿತು ಎಚ್ಚರಿಕೆ ನೀಡಿತ್ತು.

ಕೋವಿಶೀಲ್ಡ್‌ ಲಸಿಕೆ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂಬುದನ್ನು ಈ ಹಿಂದೆ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದ ಅಸ್ಟ್ರಾಜೆನಿಕಾ ಕಂಪನಿಯು ಈಗ ವ್ಯಾಪಾರ ಉದ್ದೇಶದಿಂದ ಎಲ್ಲ ಮಾರುಕಟ್ಟೆಗಳಿಂದ ತನ್ನ ಈ ಲಸಿಕೆಯನ್ನು ತೆಗೆದು ಹಾಕುವುದಾಗಿ ಘೋಷಿಸಿದೆ.

ತಜ್ಞರು ಹೇಳುವುದಿಷ್ಟು

ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದಾರೆ. ಕೋವಿಶೀಲ್ಡ್ ಅನ್ನು ಸ್ವೀಕರಿಸುವ 10 ಲಕ್ಷ ಜನರಲ್ಲಿ ಏಳರಿಂದ ಎಂಟು ವ್ಯಕ್ತಿಗಳು ಮಾತ್ರ ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮವನ್ನು ಅನುಭವಿಸುತ್ತಾರೆ. ಭಾರತದಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: Covishield vaccine: ಕೋವಿಶೀಲ್ಡ್‌ ಲಸಿಕೆಯಿಂದ ಸೈಡ್‌ ಎಫೆಕ್ಟ್‌ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Continue Reading

ಆರೋಗ್ಯ

Cancer Risk: ಕ್ಯಾನ್ಸರ್ ಅಪಾಯದಿಂದ ಪಾರಾಗಲು ಯಾವ ಆಹಾರ ಸೇವಿಸಬಾರದು? ಯಾವ ಆಹಾರ ಸೇವಿಸಬೇಕು?

ಜೀನ್‌ಗಳು ಮತ್ತು ಕುಟುಂಬದ ಇತಿಹಾಸವನ್ನು ಹೊರತುಪಡಿಸಿ ಆಹಾರ ಪದ್ಧತಿಯಂತಹ ಬಾಹ್ಯ ಅಂಶಗಳು ಕ್ಯಾನ್ಸರ್ ಹರಡುವಿಕೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಕ್ಯಾನ್ಸರ್ ಬಾರದಂತೆ (Cancer Risk) ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವೊಂದು ಆಹಾರವನ್ನು ತ್ಯಜಿಸಲೇಬೇಕು. ಕ್ಯಾನ್ಸರ್‌ ಅಪಾಯದಿಂದ ಪಾರಾಗುವ ಕುರಿತು ಉಪಯುಕ್ತ ಸಲಹೆ ಇಲ್ಲಿದೆ.

VISTARANEWS.COM


on

By

Cancer Risk
Koo

ನಮ್ಮ ಜೀವನ ಶೈಲಿ (life style), ಆಹಾರ (food) ಪದ್ಧತಿಯಿಂದ ಕೆಲವೊಂದು ರೋಗಗಳನ್ನು ಆಹ್ವಾನಿಸುತ್ತಿದ್ದೇವೆ. ಅದರಲ್ಲಿ ಕ್ಯಾನ್ಸರ್ ಕೂಡ ಒಂದು. ಕ್ಯಾನ್ಸರ್‌ಗೆ (Cancer Risk) ಮುಖ್ಯ ಕಾರಣ ನಮ್ಮ ದೈನಂದಿನ ಆಹಾರಗಳು ಎನ್ನುತ್ತಾರೆ ತಜ್ಞರು. ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುವ ಹಲವಾರು ಅಂಶಗಳಿವೆ. ವಿಶೇಷವಾಗಿ ಪ್ರಸ್ತುತ ಹೆಚ್ಚಿನ ಜನರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

ಜೀನ್‌ಗಳು ಮತ್ತು ಕುಟುಂಬದ ಇತಿಹಾಸವನ್ನು ಹೊರತುಪಡಿಸಿ ಆಹಾರ ಪದ್ಧತಿಯಂತಹ ಬಾಹ್ಯ ಅಂಶಗಳು ಕ್ಯಾನ್ಸರ್ ಹರಡುವಿಕೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಕ್ಯಾನ್ಸರ್ ಬಾರದಂತೆ ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವೊಂದು ಆಹಾರವನ್ನು ತ್ಯಜಿಸಲೇಬೇಕು. ಕ್ಯಾನ್ಸರ್ ಅನೇಕ ಅಪಾಯಕಾರಿ ಅಂಶಗಳನ್ನು ಹೊಂದಿರುವ ಭಯಾನಕ ಕಾಯಿಲೆಯಾಗಿದೆ. ತಜ್ಞರ ಪ್ರಕಾರ, ಈ ಭಯಾನಕ ಕಾಯಿಲೆಯು ನಾವು ಪ್ರತಿದಿನ ಸೇವಿಸುವ ಆಹಾರದಿಂದಲೇ ಬರುತ್ತವೆ. ಈ ಆಹಾರಗಳಲ್ಲಿ ಹೆಚ್ಚಿನವು ರುಚಿಕರ ಮತ್ತು ವ್ಯಸನಕಾರಿಯಾಗಿರುತ್ತದೆ.

ಈ ವರ್ಷದ ಆರಂಭದಲ್ಲಿ ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಮಾಡಿರುವ ವರದಿ ಪ್ರಕಾರ 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಒಂದು ದಶಕದ ಹಿಂದೆ ಹೋಲಿಸಿದರೆ ದ್ವಿಗುಣಗೊಂಡಿದೆ. ಹೀಗಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕೆಲವು ಆಹಾರಗಳನ್ನು ತ್ಯಜಿಸಬೇಕು.


1. ಕೆಂಪು ಮಾಂಸ

ಹಂದಿ, ಕುರಿ ಮತ್ತು ಗೋಮಾಂಸ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಹಾರ್ವರ್ಡ್ ಹೆಲ್ತ್ ಪ್ರಕಾರ, ಮಾಂಸದ ಹೆಚ್ಚಿನ ಸೇವನೆಯು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸೋಡಿಯಂನೊಂದಿಗೆ ಪ್ಯಾಕ್ ಮಾಡಲ್ಪಟ್ಟಿರುವುದರಿಂದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವಾರದಲ್ಲಿ 18 ಔನ್ಸ್ ಕೆಂಪು ಮಾಂಸವನ್ನು ತಿನ್ನಬಹುದು. ಅದನ್ನು ಬೇಯಿಸುವಾಗ ತಾಪಮಾನವನ್ನು ಗಮನಿಸಬೇಕು. ಯಾಕೆಂದರೆ ಅದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಬರ್ಗರ್‌ ಮತ್ತು ಸ್ಟೀಕ್ಸ್‌ಗಳಂತಹ ಸುಟ್ಟ ಮಾಂಸಗಳು ಬೇಕಿಂಗ್ ಅಥವಾ ಸೌಸ್ ವೈಡ್‌ನಂತಹ ವಿಧಾನಗಳನ್ನು ಬಳಸಿಕೊಂಡು ಕಡಿಮೆ ತಾಪಮಾನದಲ್ಲಿ ತಯಾರಿಸಲಾಗುತ್ತದೆ. ಇದರಿಂದ ಅಪಾಯ ಹೆಚ್ಚಾಗಿರುತ್ತದೆ.


2. ಮದ್ಯ

ಆಲ್ಕೋಹಾಲ್ ಸೇವನೆ ಈಗ ಎಲ್ಲರಲ್ಲೂ ಸಾಮಾನ್ಯವಾಗಿದೆ. ಇದು ವಿಶೇಷವಾಗಿ ಯುವಜನರಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವೈದ್ಯರ ಪ್ರಕಾರ, ಆಲ್ಕೋಹಾಲ್ ಸೇವನೆಯು ಹೊಟ್ಟೆ, ಕರುಳು, ಅನ್ನನಾಳ, ಯಕೃತ್ತು, ಪ್ಯಾಂಕ್ರಿಯಾಟಿಕ್ ಮತ್ತು ಸ್ತನ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ ಇದು ಅಂಗಾಂಶಗಳಿಗೆ ಹಾನಿಯನ್ನು ಉಂಟು ಮಾಡುತ್ತದೆ. ಜೀವಕೋಶದ ಡಿಎನ್ ಎ ಯಲ್ಲಿ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಆಲ್ಕೋಹಾಲ್ ಅನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದು.


3. ಸಕ್ಕರೆ ಪಾನೀಯಗಳು

ಬೇಸಿಗೆಯಲ್ಲಿ ಹೆಚ್ಚಿನ ಜನರು ಸಕ್ಕರೆ ತುಂಬಿದ ತಂಪಾದ ಪಾನೀಯಗಳನ್ನು ಕುಡಿಯುತ್ತಾರೆ. ಹಾರ್ವರ್ಡ್ ಟಿ ಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಪ್ರಕಾರ, ದಿನಕ್ಕೆ ಎರಡಕ್ಕಿಂತ ಹೆಚ್ಚು ಸಕ್ಕರೆ ಪಾನೀಯಗಳನ್ನು ಸೇವಿಸಿದವರು ಕೊಲೊರೆಕ್ಟಲ್ ಕ್ಯಾನ್ಸರ್‌ನ ಆರಂಭಿಕ ಹಂತಕ್ಕಿಂತ ಎರಡು ಪಟ್ಟು ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ಅಲ್ಲದೇ ಇದು ತೂಕ ಮತ್ತು ಬೊಜ್ಜಿಗೂ ಕಾರಣವಾಗುವುದು. ಇದರ ಬದಲು ನೀರು, ಹಾಲು ಅಥವಾ ಸಿಹಿಗೊಳಿಸದ ಚಹಾ ಅಥವಾ ಕಾಫಿ ಸೇವನೆ ಸೂಕ್ತ.


4. ಡೇರಿ ಉತ್ಪನ್ನ

ಹಾಲು, ಚೀಸ್ ಮತ್ತು ಮೊಸರುಗಳಂತಹ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಸಂಶೋಧನೆಯ ಪ್ರಕಾರ, ಡೈರಿ ಇನ್ಸುಲಿನ್ ತರಹದ ಬೆಳವಣಿಗೆಯ ಅಂಶ 1 (IGF-1) ಮಟ್ಟವನ್ನು ಹೆಚ್ಚಿಸುತ್ತದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್ ನ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ. IGF-1 ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳ ಪ್ರಸರಣ ಅಥವಾ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Fried Oil: ಒಮ್ಮೆ ಕರಿದ ಎಣ್ಣೆಯನ್ನು ಮತ್ತೊಮ್ಮೆ ಬಳಸಬಹುದೆ?

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವ ಆಹಾರಗಳು ಯಾವವು?

ವೈಜ್ಞಾನಿಕ ಸಂಶೋಧನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ಆಹಾರಗಳಿವೆ.


1. ಹಣ್ಣು ಮತ್ತು ತರಕಾರಿಗಳು

ಹೆಚ್ಚಿನ ಹಣ್ಣು ಮತ್ತು ತರಕಾರಿಗಳು ರೋಗ ನಿರೋಧಕ ಗುಣಗಳಿಂದ ತುಂಬಿರುತ್ತವೆ. ಆಕ್ಸಿಡೇಟಿವ್ ಒತ್ತಡ ಮತ್ತು ಡಿಎನ್ಎ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸುತ್ತವೆ.

2. ಬೀಜಗಳು

ಬೀಜಗಳ ನಿಯಮಿತ ಸೇವನೆಯು ಉರಿಯೂತ ಮತ್ತು ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ.

3. ಬೀನ್ಸ್ ಮತ್ತು ದ್ವಿದಳ ಧಾನ್ಯಗಳು

ಬೀನ್ಸ್, ದ್ವಿದಳ ಧಾನ್ಯಗಳು ಫೈಬರ್‌ನಿಂದ ಕೂಡಿದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.


4. ಮೀನು

ಬಿಳಿ ಮೀನು ಒಮೆಗಾ-3 ಕೊಬ್ಬಿನಾಮ್ಲಗಳಿಂದ ತುಂಬಿರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಕೆಲವು ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Continue Reading

ಆರೋಗ್ಯ

Fried Oil: ಒಮ್ಮೆ ಕರಿದ ಎಣ್ಣೆಯನ್ನು ಮತ್ತೊಮ್ಮೆ ಬಳಸಬಹುದೆ?

ಕರಿಯಲು ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೊಮ್ಮೆ ಬಳಸುವುದು ಭಾರತೀಯ ಮನೆಗಳಲ್ಲಿ ಸಾಮಾನ್ಯ ಸಂಪ್ರದಾಯ. ಒಮ್ಮೆ ಪೂರಿಯೋ, ಚಕ್ಕುಲಿಯನ್ನು ಕರಿದ ಎಣ್ಣೆಯನ್ನು ಮತ್ತೊಮ್ಮೆ ಹಪ್ಪಳ ಕರಿಯಲು ಅಥವಾ ಇನ್ನೇನನ್ನೋ ಕರಿಯಲು ಬಳಸಿಬಿಡುತ್ತೇವೆ. ಅದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಎಂದು ಯೋಚಿಸುವುದೂ ಇಲ್ಲ. ಬಹಳಷ್ಟು ಮಂದಿಗೆ ಹಾಗೆ ಒಮ್ಮೆ ಕರಿದ ಎಣ್ಣೆಯನ್ನು ಇನ್ನೊಮ್ಮೆ ಬಳಸಬಾರದು ಎಂದೂ ತಿಳಿದಿರುವುದಿಲ್ಲ. ಈ ಬಗ್ಗೆ ಅರಿವು (fried oil) ಮೂಡಿಸುವ ಮಾಹಿತಿ ಇಲ್ಲಿದೆ.

VISTARANEWS.COM


on

Fried Oil
Koo

ಎಣ್ಣೆಯಿಲ್ಲದೆ ಅಡುಗೆಯಿಲ್ಲ. ನಿತ್ಯವೂ ಅಡುಗೆ ಮನೆಯಲ್ಲಿ ಅವರರವರ ಆಯ್ಕೆಯ ಎಣ್ಣೆಯನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಕೆಲವರು ಬಳಸುವ ಪ್ರಮಾಣ ಕಡಿಮೆಯಿರಬಹುದು, ಕೆಲವರು ಹೆಚ್ಚು ಬಳಸಬಹುದು. ಆದರೆ, ಒಂದಲ್ಲ ಒಂದು ವಿಧದಲ್ಲಿ ಎಣ್ಣೆ ದೇಹ ಸೇರಿಯೇ ಸೇರುತ್ತದೆ. ಮಳೆ ಬಂದಾಗ ಬಿಸಿಬಿಸಿ ಪಕೋಡ ಕರಿಯಲು, ಸಿಂಪಲ್‌ ಮೊಸರನ್ನ ಮಾಡಿದಾಗ ಹಪ್ಪಳ ಸೆಂಡಿಗೆ ಕರಿದುಕೊಳ್ಳಲು, ಹಬ್ಬ ಬಂದಾಗ, ಚಕ್ಕುಲಿ ಕೋಡುಬಳೆ ಮಾಡಲು, ನಿತ್ಯವೂ ಮಾಡಿದ ಅಡುಗೆಗೆ ಒಗ್ಗರಣೆ ಹಾಕಲು ಎಣ್ಣೆ ಒಂದಿಲ್ಲೊಂದು ಬಗೆಯಲ್ಲಿ ಬಳಕೆಯಾಗುತ್ತಲೇ ಇರುತ್ತದೆ. ಆದರೆ, ಕರಿಯಲು ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೊಮ್ಮೆ ಬಳಸುವುದು ಭಾರತೀಯ ಮನೆಗಳಲ್ಲಿ ಸಾಮಾನ್ಯ ಸಂಪ್ರದಾಯ. ಒಮ್ಮೆ ಪೂರಿಯೋ, ಚಕ್ಕುಲಿಯನ್ನು ಕರಿದ ಎಣ್ಣೆಯನ್ನು ಮತ್ತೊಮ್ಮೆ ಹಪ್ಪಳ ಕರಿಯಲು ಅಥವಾ ಇನ್ನೇನನ್ನೋ ಕರಿಯಲು ಬಳಸಿಬಿಡುತ್ತೇವೆ. ಅದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಎಂದು ಯೋಚಿಸುವುದೂ ಇಲ್ಲ. ಬಹಳಷ್ಟು ಮಂದಿಗೆ ಹಾಗೆ ಒಮ್ಮೆ ಕರಿದ ಎಣ್ಣೆಯನ್ನು (fried oil) ಇನ್ನೊಮ್ಮೆ ಬಳಸಬಾರದು ಎಂದೂ ತಿಳಿದಿರುವುದಿಲ್ಲ.

Oil background

ಅಧ್ಯಯನಗಳ ಪ್ರಕಾರ, ಒಮ್ಮೆ ಕರಿದ ಎಣ್ಣೆಯಲ್ಲಿ ಟ್ರಾನ್ಸ್‌ ಫ್ಯಾಟ್‌ ಅಧಿಕವಾಗಿರುತ್ತದೆ. ಅದು ಆರೋಗ್ಯಕ್ಕೆ ಬಹಳ ಕೆಟ್ಟದ್ದು. ಕೋಲ್ಡ್‌ ಪ್ರೆಸ್‌ ಮಾಡಿದ ಎಣ್ಣೆಗಳಲ್ಲಿ ಬಹುಮುಖ್ಯವಾಗಿ ಕಡಿಮೆ ಸ್ಮೋಕಿಂಗ್‌ ಪಾಯಿಂಟ್‌ ಇರುವುದರಿಂದ ಬಿಸಿ ಮಾಡಿದ ತಕ್ಷಣ ಹಾನಿಕಾರಕ ಫ್ರೀ ರ್ಯಾಡಿಕಲ್ಸ್‌ಗಳನ್ನು ಉತ್ಪತ್ತಿ ಮಾಡುತ್ತವೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಟ್ಟ ಕೊಲೆಸ್ಟೆರಾಲ್‌ ಮಟ್ಟ ಏರುವ ಮೂಲಕ ಹೃದಯಕ್ಕೆ ಮತ್ತಷ್ಟು ಹಾನಿಕಾರಕವಾಗಿ ಪರಿಣಮಿಸುತ್ತದೆ. ತಜ್ಞರ ಪ್ರಕಾರ, ಒಮ್ಮೆ ಕರಿದ ಎಣ್ಣೆಯನ್ನು ಮತ್ತೆ ಬಳಸುವುದೇ ಆರೋಗ್ಯಕ್ಕೆ ಹಿತವಲ್ಲ. ಕೇವಲ ಒಗ್ಗರಣೆ ಹಾಕಲು ಇತ್ಯಾದಿ ಬೇರೆ ಬಳಕೆಗೂ ಅದು ಯೋಗ್ಯವಲ್ಲ. ಆದರೂ, ಒಮ್ಮೆ ಬಳಸಿದ ಎಣ್ಣೆಯನ್ನು ಎಸೆಯಲು ಬಹುತೇಕರು ಮನಸ್ಸು ಮಾಡದ ಕಾರಣ ಇನ್ನೊಮ್ಮೆ ಕರಿಯಲು ಬಳಸಬಹುದು ಎನ್ನಲಾಗುತ್ತದೆ. ಆದರೆ ಎರಡಕ್ಕಿಂತ ಹೆಚ್ಚು ಬಾರಿ ಬಳಕೆ ಸಲ್ಲದು.

ಎಸೆಯುವುದು ಒಳ್ಳೆಯದು

ಎಫ್‌ಎಸ್‌ಎಸ್‌ಎಐ ರೆಗ್ಯುಲೇಶನ್‌ ಪ್ರಕಾರ, ವೆಜಿಟೇಬಲ್‌ ಆಯಿಲ್‌ನ ಪೋಲಾರ್‌ ಕಾಂಪೌಂಡ್‌ ಶೇ.25 ದಾಟಿದ ತಕ್ಷಣ ಅದು ಅಡುಗೆಗೆ ಅನರ್ಹ. ಹಾಗಾಗಿ, ಎರಡಕ್ಕಿಂತ ಹೆಚ್ಚಿ ಬಾರಿ ಒಂದೇ ಎಣ್ಣೆಯಲ್ಲಿ ಕರಿಯುವುದು ಆರೋಗ್ಯದ ದೃಷ್ಟಿಯಿಂದ ಯೋಗ್ಯವಲ್ಲ. ಎರಡು ಬಾರಿ ಕರಿದ ಮೇಲೆ ಎಣ್ಣೆಯನ್ನು ಎಸೆಯುವುದು ಒಳ್ಳೆಯದು.

Fried Oil pic

ಹೊಗೆಯಾಡುವವರೆಗೆ ಕುದಿಸಬೇಡಿ

ಅಡುಗೆ ಎಣ್ಣೆ ಯಾವುದೇ ಇರಲಿ, ಅದು ಹೊಗೆಯಾಡುವವರೆಗೆ ಕುದಿಸಬೇಡಿ. ಯಾವಾಗಲೂ ಕಡಿಮೆ ಉಷ್ಣತೆಯಲ್ಲಿಟ್ಟು ಅದನ್ನು ಅಡುಗೆಗೆ, ಕರಿಯಲು ಬಳಸುವುದು ಯೋಗ್ಯ. ಸ್ಮೋಕಿಂಗ್‌ ಪಾಯಿಂಟ್‌ ಮೀರಿ ಹೋಗಲು ಬಿಡಬೇಡಿ.

ತಣಿಯಲು ಬಿಡಿ

ಕರಿದ ಮೇಲೆ ಎಣ್ಣೆಯನ್ನು ತಣಿಯಲು ಬಿಡಿ ಹಾಗೂ ಅದರಲ್ಲಿ ಕರಿದ ಪದಾರ್ಥಗಳ ತುಣುಕುಗಳಿದ್ದರೆ ಅದನು ಸೋಸಿ ತೆಗೆಯಿರಿ. ನಂತರ ಅದನ್ನು ಗಾಳಿಯಾಡದ ಬಾಟಲಿಯಲ್ಲಿ ಹಾಕಿಟ್ಟು ಮತ್ತೆ ಬಳಸಬಹುದು. ಎರಡಕ್ಕಿಂತ ಹೆಚ್ಚು ಬಾರಿ ಎಣ್ಣೆಯನ್ನು ಬಳಸಬೇಡಿ.

ಹೆಚ್ಚು ಕಾಲ ಇಡಬೇಡಿ

ಒಮ್ಮೆ ಬಳಸಿದ ಎಣ್ಣೆಯನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ಇಡಬೇಡಿ. ಒಂದು ತಿಂಗಳೊಳಗಾಗಿ ಮತ್ತೊಮ್ಮೆ ಕರಿಯಲು ಬಳಸಿ ಆಮೇಲೆ ಬಿಸಾಕಿ.

Frying Churros in OIl

ಆಗಾಗ ಪರಿಶೀಲಿಸಿ

ಒಮ್ಮೆ ಬಳಸಿದ ಮೇಲೆ ಶೇಖರಿಸಿಟ್ಟ ಎಣ್ಣೆಯನ್ನು ಆಗಾಗ ಚೆಕ್‌ ಮಾಡಿ. ಅದರ ಬಣ್ಣ ವಾಸನೆಯಲ್ಲಿ ಬದಲಾವಣೆಯಾದರೆ ಬಳಸಬೇಡಿ.

ಹೊಗೆ ಏಳುತ್ತಿದೆಯೇ ನೋಡಿ

ಎಣ್ಣೆ ಸರಿಯಾಗಿ ಬಿಸಿಯಾಗುವ ಮೊದಲೇ ಹೊಗೆಯೇಳಲು ಆರಂಭವಾದರೆ ಆ ಎಣ್ಣೆ ಕರಿಯಲು ಯೋಗ್ಯವಲ್ಲ. ಹೊಗೆಯಾಡುವ ಆದರೆ ಬಿಸಿ ಸರಿಯಾಗಿ ಆಗದ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಸರಿಯಾಗಿ ಫ್ರೈ ಆಗಲಾರದು.

ಇದನ್ನೂ ಓದಿ: Drinking Water Before Meals: ಊಟಕ್ಕಿಂತ ಎಷ್ಟು ಮೊದಲು ನೀರು ಕುಡಿದರೆ ಒಳ್ಳೆಯದು?

ಬೇಕಾದಷ್ಟೇ ತೆಗೆದುಕೊಳ್ಳಿ

ಬಾಣಲೆಯಲ್ಲಿ ಕರಿಯಲು ಎಣ್ಣೆ ತೆಗೆದುಕೊಳ್ಳುವಾಗಲೇ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಆಗ ಹೆಚ್ಚು ಎಣ್ಣೆ ಉಳಿಯುವುದು ತಪ್ಪಿಸಬಹುದು.

Continue Reading
Advertisement
SSLC Result 2024 SSLC 2nd and 3rd exam aspirants to have special classes
ಕರ್ನಾಟಕ5 mins ago

SSLC Result 2024: ಎಸ್‌ಎಸ್‌ಎಲ್‌ಸಿ 2, 3ನೇ ಪರೀಕ್ಷೆ ಬರೆಯುವವರಿಗೆ ಗುಡ್‌ ನ್ಯೂಸ್‌! ಇರಲಿದೆ ಸ್ಪೆಷಲ್‌ ಕ್ಲಾಸ್‌

SSLc Exam 2 time table
ಶಿಕ್ಷಣ11 mins ago

SSLC 2 Exam Time Table : ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ರ ಡೇಟ್‌ ಫಿಕ್ಸ್‌; ವೇಳಾಪಟ್ಟಿ ಹೀಗಿದೆ

Mahender Pratap Singh
ದೇಶ22 mins ago

Mahender Pratap Singh: ಪುಲ್ವಾಮಾ ದಾಳಿ ಪಾಕ್‌ ಕುಕೃತ್ಯ ಅಲ್ವಂತೆ; ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ಅಭ್ಯರ್ಥಿ

No one has failed in SSLC says Education Department
ಕರ್ನಾಟಕ25 mins ago

SSLC Result 2024: ಈ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾರೂ ಫೇಲ್‌ ಆಗಿಲ್ಲ! ಶಿಕ್ಷಣ ಇಲಾಖೆ ಹೀಗೆ ಹೇಳಿದ್ದು ಯಾಕೆ?

SSLC Result 2024 what is the reason for most of the students fail in SSLC
ಕರ್ನಾಟಕ47 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Aavesham Releases On OTT Fahadh Faasil Hit Malayalam Film
ಮಾಲಿವುಡ್56 mins ago

Aavesham Releases On OTT: ಸದ್ದಿಲ್ಲದೆ ಒಟಿಟಿಗೆ ಎಂಟ್ರಿ ಕೊಟ್ಟ ಫಹಾದ್ ಫಾಸಿಲ್ ಅಭಿನಯದ ʻಆವೇಶಂʼ!

Sslc exam Result 2024
ಶಿಕ್ಷಣ57 mins ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಪಪುವಾ ನ್ಯೂಗಿನಿಯಾ, ಐರ್ಲೆಂಡ್

Sunita Williams
ವಿದೇಶ1 hour ago

Sunita Williams: ಸುನೀತಾ ವಿಲಿಯಮ್ಸ್‌ ಗಗನಯಾತ್ರೆ ಮತ್ತೆ ಸ್ಥಗಿತ; ಮೇ 17ಕ್ಕೆ ಮುಂದೂಡಿಕೆ

Ananya Panday Aditya Roy Kapur parties with Sara Ali Khan
ಬಾಲಿವುಡ್1 hour ago

Ananya Panday: ಅನನ್ಯಾ ಪಾಂಡೆ ಜತೆ ಆದಿತ್ಯ ರಾಯ್ ಕಪೂರ್ ಬ್ರೇಕಪ್‌? ಸೈಫ್‌ ಪುತ್ರಿ ಜತೆ ಲವ್‌ ಸ್ಟಾರ್ಟ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Result 2024 what is the reason for most of the students fail in SSLC
ಕರ್ನಾಟಕ47 mins ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ58 mins ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 hour ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು2 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ2 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು3 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

ಟ್ರೆಂಡಿಂಗ್‌