Health Tips: ಊಟದ ನಂತರದ ಸಿಹಿತಿಂಡಿ ಅಭ್ಯಾಸ ಬಿಡೋದು ಹೇಗೆ! - Vistara News

ಆರೋಗ್ಯ

Health Tips: ಊಟದ ನಂತರದ ಸಿಹಿತಿಂಡಿ ಅಭ್ಯಾಸ ಬಿಡೋದು ಹೇಗೆ!

ಊಟವಾದ ಬಳಿಕ ಸಿಹಿತಿಂಡಿ ತಿನ್ನುವುದು ಅಭ್ಯಾಸವಾಗಿಬಿಟ್ಟರೆ ದೇಹ ಮತ್ತೆ ಮತ್ತೆ ಅದನ್ನೇ ಬಯಸುತ್ತದೆ. ಊಟದಲ್ಲಿ ಸಾಕಷ್ಟು ಕ್ಯಾಲೊರಿ ಇದ್ದರೆ ಮತ್ತೆ ಸ್ವೀಟ್ಸ್‌ ಬೇಕಿಲ್ಲ.

VISTARANEWS.COM


on

sweets
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಹುತೇಕರಿಗೆ ಒಂದು ಅಭ್ಯಾಸವಿದೆ. ಮಧ್ಯಾಹ್ನದೂಟವಾದ ತಕ್ಷಣ ಏನಾದರೊಂದು ಸಿಹಿ ಬಾಯಿಗಿಡಬೇಕು! ಏನಾದರೊಂದು ಸಿಹಿತಿಂಡಿ ಕೊನೆಯಲ್ಲಿ ಬೇಕೆನ್ನುವುದು (sweets after lunch) ಬಹಳ ಮಂದಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ. ಇದು ಚಟದಂತೆ ಆದರೂ ಇದನ್ನು ಬಿಡಲು ಉಪಾಯವೇ ಇಲ್ಲ ಎಂಬಷ್ಟು ಸಿಹಿ ತಿನ್ನಬೇಕೆನಿಸುವ ಬಯಕೆ ಅಭ್ಯಾಸವಾಗಿಬಿಟ್ಟಿರುತ್ತದೆ. ತಿನ್ನದಿದ್ದರೆ ಏನೋ ಕಳೆದುಕೊಂಡ ಭಾವ. ಎಷ್ಟೋ ಮಂದಿ ಈ ಕೆಟ್ಟ ಅಭ್ಯಾಸದಿಂದ ಮುಕ್ತಿ ಬೇಕೆಂದು (Health tips) ಡಾಕ್ಟರ್‌ ಮೊರೆ ಹೋಗುವುದೂ ಇದೆ.

ಯಾವ ಕಾರಣಕ್ಕಾಗಿ ನಮಗೆ ಸಿಹಿ ಆಗಾಗ ತಿನ್ನಬೇಕೆನಿಸುತ್ತದೆ ಎಂದರೆ, ಮೊದಲನೆಯದಾಗಿ, ಇದು ಪೂರ್ಣವಾಗಿ ಮಾನಸಿಕ. ಪಚನಕ್ರಿಯೆ ಎಂಬುದೊಂದು ಹಾಡ್‌ ವರ್ಕ್‌. ಇಂತಹ ಹಾರ್ಡ್‌ ವರ್ಕ್‌ ಮಾಡಲು ಮತ್ತೆ ಮತ್ತೆ ಎನರ್ಜಿ ಬೇಕೆನಿಸುತ್ತದೆ. ಈ ಎನರ್ಜಿ ಕೊಡುವ ಸುಲಭ ಸಾಧನ ಈ ಸಕ್ಕರೆಯ ಅಂಶ. ಹಾಗಾಗಿ ಮಾನಸಿಕವಾಗಿ ಸಕ್ಕರೆಯ ಸಿಹಿ ತಿಂದಾದಾಗ ಸಿಗುವ ತೃಪ್ತಿಯೇ ಮುಖ್ಯವಾಗಿ ಸಿಹಿಯನ್ನು ಮತ್ತೆ ಮತ್ತೆ ಊಟವಾದ ಮೇಲೆ ತಿನ್ನುವಂತೆ ಪ್ರೇರೇಪಿಸುತ್ತಿರುತ್ತದೆ.

ಎರಡನೆಯದಾಗಿ, ಊಟವಾದ ನಂತರ ಒಂದುದಿನ ಸಿಹಿ ತಿಂದರೆ ಮತ್ತೊಂದು ದಿನವೂ ತಿನ್ನಬೇಕೆನಿಸುತ್ತದೆ. ಅದು ಹೀಗೆಯೇ ಮುಂದುವರಿದು ದಿನಗಳೆದಂತೆ ಚಟವಾಗಿ ಬಿಡುತ್ತದೆ. ಮಾದಕ ವಸ್ತುಗಳಿಗೆ ಅಂಟಿಕೊಂಡಂತೆ ಇರುವ ಚಟ. ದಿನವೂ ಊಟವಾದ ತಕ್ಷಣ ಮನಸ್ಸು ಸಿಹಿಯನ್ನು ಬಯಸುವಂತೆ ಮಾಡುತ್ತದೆ. ನಮ್ಮ ದೇಹ ಈ ಅಭ್ಯಾಸಕ್ಕೆ ಪ್ರೋಗ್ರಾಂ ಮಾಡಿಟ್ಟ ರೀತಿಯಲ್ಲಿ ವರ್ತಿಸುತ್ತದೆ. ಹಾಗಾಗಿ ಪ್ರತಿ ಊಟದ ನಂತರ ಮನಸ್ಸು ಸಿಹಿಯನ್ನೇ ಬಯಸುತ್ತದೆ. ಆದರೆ, ಇಲ್ಲಿ ಎಷ್ಟು ಸಿಹಿ ತಿನ್ನುತ್ತೇವೆ ಎನ್ನುವುದೂ ಕೂಡಾ ಮುಖ್ಯವೆನಿಸುತ್ತದೆ. ಒಂದು ಪುಟ್ಟ ಭಾಗ ದೇಹದೊಳಕ್ಕೆ ಹೋದರೆ ಚಿಂತೆಯಿಲ್ಲ. ಆದರೆ, ಒಂದು ದೊಡ್ಡ ಭಾಗವೆಂಬ ಸಿಹಿ ಪ್ರತಿದಿನ ಹೊಟ್ಟೆ ಸೇರುತ್ತಿದ್ದರೆ ಖಂಡಿತವಾಗಿಯೂ ಒಳ್ಳೆಯದಲ್ಲ, ಈ ಅಭ್ಯಾಸವನ್ನು ಕಡಿಮೆ ಮಾಡಲು ಶ್ರಮ ಪಡಬೇಕು. ಹಾಗಾದರೆ ಈ ಅಭ್ಯಾಸವನ್ನು ಕಡಿಮೆ ಮಾಡಲು ಅಥವಾ ಬಿಡಲು ಮೂರು ವಿಧಾನಗಳಿವೆ.

ನಿಮ್ಮ ಆಹಾರವನ್ನು ಗಮನಿಸಿ: ದಿನವೂ ತಟ್ಟೆಯಲ್ಲಿ ಏನೆಲ್ಲ ಪೌಷ್ಠಿಕಾಂಶಯುಕ್ತ ಆಹಾರವನ್ನು ಬಡಿಸಿಕೊಂಡಿರುತ್ತೀರಿ ಎಂಬುದರ ಬಗ್ಗೆ ಗಮನ ಇರಲಿ. ಒಂದಿಷ್ಟು ತರಕಾರಿ, ಪ್ರೋಟೀನು, ಆರೋಗ್ಯಕರ ಕೊಬ್ಬು, ಕಾರ್ಬೋಹೈಡ್ರೇಟ್‌ ಹಾಗೂ ನಾರಿನಂಶಯುಕ್ತ ಆಹಾರ ತಟ್ಟೆಯಲ್ಲಿರಲಿ. ಆಗ ಊಟವಾದ ನಂತರ ಕಡಿಮೆ ಮಟ್ಟದಲ್ಲಿ ಸಿಹಿ ತಿಂದಿರುತ್ತೀರಿ. ಅಥವಾ ಸಿಹಿ ತಿನ್ನಬೇಕೆಂಬ ಭಾವನೆ ನಿಧಾನವಾಗಿ ಕಡಿಮೆಯಾಗುತ್ತದೆ. ಉಳಿದ ಆಹಾರ ಪದಾರ್ಥಗಳು ನೀಡುವ ಶಕ್ತಿಯಿಂದಾಗಿ ಸಿಹಿ ತಿನ್ನುವ ಬಯಕೆ ತಾನೇ ತಾನಾಗಿ ಕಡಿಮೆಯಾಗುತ್ತದೆ. ಈ ವಿಧಾನ ಅತ್ಯಂತ ಸುಲಭ ಹಾಗೂ ಸರಳ.

ನೀವು ಸಿಹಿ ತಿನ್ನಬಾರದು ಎಂದು ನಿಮಗೆ ನೀವೇ ಬೇಲಿ ಹಾಕಿಕೊಂಡರೆ ಬಹಳಷ್ಟು ಸಾರಿ ಸಿಹಿ ಹೆಚ್ಚು ತಿನ್ನುವಂತೆ ಪ್ರೇರೇಪಣೆಯಾಗುತ್ತದೆ. ಅದಕ್ಕಾಗಿ, ಮನಸ್ಸನ್ನು ತಿನ್ನಲೇಬಾರದು ಇಂಬ ಕಟ್ಟುನಿಟ್ಟು ಮಾಡಿಕೊಳ್ಳಬೇಡಿ. ಆದರೆ ಕಡಿಮೆ ಮಾಡಿ ಅಷ್ಟೇ. ಆದಷ್ಟು ಸಿಹಿತಿಂಡಿ ತಿನ್ನುವ ಬದಲು ಸಿಹಿಯಾಗಿ ನೈಸರ್ಗಿಕವಾಗಿ ಸಿಗುವ ಆಯ್ಕೆಗಳನ್ನು ಮಾಡಿ. ಆಗ ನಿಧಾನವಾಗಿ ಆರೋಗ್ಯಕರ ಸಿಹಿ ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಆದರೆ, ಈ ಅಭ್ಯಾಸವೂ ಕೂಡಾ ಒಂದು ಮಿತಿಯನ್ನು ದಾಟದಂತೆ ನೋಡಿಕೊಳ್ಳಿ.

ಗಮನವನ್ನು ಬೇರೆಡೆಗೆ ತಿರುಗಿಸುವುದೂ ಕೂಡಾ ಇಂಥದ್ದಕ್ಕೆ ಇನ್ನೊಂದು ಮಾರ್ಗ. ಪ್ರತಿದಿನವೂ ಮಧ್ಯಾಹ್ನ ಊಟವಾದ ತಕ್ಷಣ ಫ್ರಿಡ್ಜ್‌ನಲ್ಲಿಟ್ಟ ಐಸ್‌ಕ್ರೀಮೋ, ಚಾಕೋಲೇಟೋ ನೆನಪಾಗಿ ಗುಳುಂ ಮಾಡಿಬಿಡಬೇಕೆಂದು ಅನಿಸಿದರೆ, ನಿಮ್ಮ ಮನಸ್ಸ್ನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನ ಪಡಿ. ಉದಾಹರಣೆಗೆ ತಿಂದರೆ ಒಂದು ವಾಕ್‌ ಮಾಡುವುದು ಅಥವಾ ಊಟವಾದ ತಕ್ಷಣ ಮತ್ತೊಂದು ಕೆಲಸದಲ್ಲಿ ಬ್ಯುಸಿಯಾಗಿಬಿಡುವುದು ಅಥವಾ ಫ್ರೆಂಡ್‌ ಜೊತೆ ಮಾತಿಗಿಳಿಯುವುದು ಇತ್ಯಾದಿ. ಇದ್ದಕ್ಕಿದ್ದಂತೆ ಈ ಅಭ್ಯಾಸ ಸರಿಯಾಗದಿದ್ದರೂ ಕ್ರಮೇಣ ಸುಧಾರಿಸುತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ನಮ್ಮ ಆಹಾರಕ್ರಮವನ್ನು ಬದಲಾಯಿಸಬೇಕೆಂಬ ಮನಸ್ಥಿತಿ ಬೇಕು. ಆಗಷ್ಟೇ ಇದಕ್ಕೊಂದು ಪರಿಹಾರ ಸಿಕ್ಕೀತು. ಇಲ್ಲವಾದಲ್ಲಿ ಇದು ಪುಸ್ತಕದ ಬದನೆಕಾಯಿ ಆಗಿ ಉಳಿದೀತು.      

ಇದನ್ನೂ ಓದಿ: Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

ಬೇಸಿಗೆಯಿನ್ನೂ ಮುಗಿದಿಲ್ಲ. ದೆಹೆಲಿಯಲ್ಲಿ ತಾಪಮಾನ 50 ಡಿ.ಸೆ. ದಾಟಿದೆ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಂತೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಉಷ್ಣತೆಗೂ ಕಣ್ಣಿಗೂ ಏನು ಸಂಬಂಧ? ಇದರಿಂದ ಕಣ್ಣುಗಳಿಗೆ ಆಗುವ ಹಾನಿಯೇನು? ಹಾಗಾಗದಂತೆ ಕಾಪಾಡಿಕೊಳ್ಳುವುದು ಹೇಗೆ- ಇತ್ಯಾದಿ ವಿವರಗಳು (Heatwave Effect) ಇಲ್ಲಿವೆ.

VISTARANEWS.COM


on

Heatwave Effect
Koo

ದೆಹೆಲಿಯಲ್ಲಿ ತಾಪಮಾನ (Heatwave Effect) 50 ಡಿಗ್ರಿ ಸೆಲ್ಶಿಯಸ್‌ ದಾಟಿಯಾಗಿದೆ. ದೇಶದ ಇನ್ನೂ ಕೆಲವೆಡೆಗಳಲ್ಲಿ ತಾಪಮಾನ ಗಗನಕ್ಕೇರಿದೆ. ದಕ್ಷಿಣದ ರಾಜ್ಯಗಳು ಮುಂಗಾರಿನ ಪ್ರವೇಶಕ್ಕೆ ಅಣಿಯಾಗುತ್ತಿದ್ದರೆ, ಉತ್ತರ ಭಾರತದಲ್ಲಿನ್ನೂ ಉಷ್ಣತೆಯ ಹೊಡೆತ ನಿಂತಿಲ್ಲ. ಬಿಸಿಲಿಗೆ ಎಚ್ಚರ ತಪ್ಪುವುದು, ನಿರ್ಜಲೀಕರಣದಿಂದ ಪ್ರಾಣಾಪಾಯಕ್ಕೆ ಒಳಗಾಗುವುದು ನಿಂತಿಲ್ಲ. ಮಾತ್ರವಲ್ಲ, ಕಣ್ಣಿನ ಪಾರ್ಶ್ವವಾಯುವಿಗೆ ತುತ್ತಾಗುವ ಪ್ರಕರಣಗಳೂ ವರದಿಯಾಗುತ್ತಿವೆ. ಏನು ಹಾಗೆಂದರೆ? ಬಿಸಿಲಿ ಹೆಚ್ಚಾದರೆ ಕಣ್ಣಿಗೆ ಏನಾಗುತ್ತದೆ?

Protection From Heatwave

ಏನು ನಂಟು?

ಅತಿಯಾದ ಬಿಸಿಲಿನ ಅಥವಾ ಉಷ್ಣತೆಯ ಹೊಡೆತವೇ ಈ ಸಮಸ್ಯೆಗೆ ನೇರವಾದ ಕಾರಣವಲ್ಲ. ಇದರಿಂದಾಗಿ ಉಂಟಾಗುವ ನಿರ್ಜಲೀಕರಣದಿಂದ ರಕ್ತ ಮಂದವಾಗುವುದು ಅಥವಾ ಹೆಪ್ಪುಗಟ್ಟುವಂತಾಗಬಹುದು. ಹೀಗೆ ಹೆಪ್ಪುಗಟ್ಟಿದ ರಕ್ತವು ಕಣ್ಣಿನ ಸಣ್ಣ ರಕ್ತನಾಳಗಳಲ್ಲಿ ಜಮೆಯಾಗಿ, ಕಣ್ಣಿಗೆ ಅಗತ್ಯವಾಗಿ ಬೇಕಾದ ರಕ್ತಸಂಚಾರವನ್ನು ತಡೆಯುತ್ತದೆ. ಇದರಿಂದ ಪಾರ್ಶ್ವವಾಯುವಿಗೆ ಕಾರಣವಾಗಿ, ಅಕ್ಯುಲರ್‌ ಸ್ಟ್ರೋಕ್‌ ಎಂದು ಕರೆಯಲಾಗುವ ಈ ಸಮಸ್ಯೆಯಿಂದ ದೃಷ್ಟಿಹೀನತೆಯೂ ಉಂಟಾಗಬಹುದು. ರಕ್ತ ಹೆಪ್ಪುಗಟ್ಟುವುದರಿಂದ ನಾಳಗಳು ಮುಚ್ಚಿಹೋಗಿ ಅಥವಾ ರಕ್ತಸಂಚಾರ ಸರಾಗ ಆಗದಿರುವಾಗ, ಮೆದುಳಿನಲ್ಲಿ ಸಂಭವಿಸುವ ಪಾರ್ಶ್ವವಾಯುವಿನ ಮಾದರಿಯಲ್ಲಿಯೇ ಇದು ಕಣ್ಣಿನಲ್ಲಿ ಸಂಭವಿಸುವಂಥದ್ದು. ಆಪ್ಟಿಕ್‌ ನರಗಳ ಮುಂಭಾಗಕ್ಕೆ ರಕ್ತಸಂಚಾರ ಇಲ್ಲದಿರುವಾಗ ಈ ತೊಂದರೆ ತಲೆದೋರುತ್ತದೆ. ಅಂದರೆ ಆಪ್ಟಿಕ್‌ ನರಗಳಿಗೆ ರಕ್ತ ಸಂಚಾರ ನಿಂತಾಗ ಹೀಗಾಗುತ್ತದೆ.

ಲಕ್ಷಣಗಳೇನು?

ಮೊದಲಿಗೆ ನಿರ್ಜಲೀಕರಣದ ಲಕ್ಷಣಗಳು ಕಂಡುಬರಬಹುದು. ಕೆಲವೊಮ್ಮೆ ಅದೂ ಕಾಣುವುದಿಲ್ಲ. ಬದಲಿಗೆ, ಯಾವುದೇ ನೋವಿಲ್ಲದೆ ಕಣ್ಣಿನ ಬೆಳಕು ಇದ್ದಕ್ಕಿದ್ದಂತೆ ಆರಬಹುದು. ಕಣ್ಣು ಪೂರ್ಣವಾಗಿ ಕಾಣದೆ ಹೋಗಬಹುದು ಅಥವಾ ಅರ್ಧ ಮಾತ್ರವೇ ಕಾಣಿಸಬಹುದು. ದೃಷ್ಟಿ ಮಸುಕಾಗಬಹುದು, ನೆರಳು ಬಿದ್ದಂತೆ ಕಾಣಬಹುದು, ಎದುರಿಗಿನ ವಸ್ತುವಿನ ನಡುವಿನ ಭಾಗ ಕಾಣದೆ ಕೇವಲ ಹೊರಗಿನ ಆವರಣವಷ್ಟೇ ಕಾಣಬಹುದು. ಕಪ್ಪಾಗಿ ಅಥವಾ ಅಸ್ಪಷ್ಟವಾಗಿ ಕಾಣಬಹುದು.

What is a heatwave?

ಏನು ಮಾಡಬೇಕು?

ಇಂಥ ಸಂದರ್ಭದಲ್ಲಿ ತ್ವರಿತವಾಗಿ ವೈದ್ಯರನ್ನು ಕಾಣಬೇಕು. ತಡಮಾಡಿದರೆ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಹೆಪ್ಪುಗಟ್ಟಿರುವ ರಕ್ತಕಣಗಳನ್ನು ಕರಗಿಸಲು ವೈದ್ಯರು ತುರ್ತಾಗಿ ಔಷಧಿ ನೀಡುತ್ತಾರೆ. ರೆಟಿನಾಗೆ ಶಾಶ್ವತ ಹಾನಿ ಆಗದಂತೆ, ದೇಹಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಪೂರೈಕೆ ಮಾಡುವ ಅಗತ್ಯ ಬರಬಹುದು. ಹೃದಯ ಸಮಸ್ಯೆಗಳಿದ್ದರೆ, ರಕ್ತ ನೀರಾಗಿಸುವ ಬಗ್ಗೆ ಮತ್ತು ರಕ್ತದೊತ್ತಡವನ್ನು ನಿರ್ವಹಿಸುವ ಬಗ್ಗೆ ಇನ್ನಷ್ಟು ಎಚ್ಚರಿಕೆಯನ್ನು ವೈದ್ಯರು ತೆಗೆದುಕೊಳ್ಳಬೇಕಾಗಬಹುದು.

ಇದನ್ನೂ ಓದಿ: Nosebleeds In Summer: ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

ತಡೆಯುವುದು ಹೇಗೆ?

ಉಷ್ಣತೆ ತೀವ್ರವಾಗಿರುವಾಗ, ತಾಪಮಾನ 42 ಡಿಗ್ರಿ ಸೆಲ್ಶಿಯಸ್‌ ದಾಟಿದರೆ, ಮನೆಯಿಂದ ಹೊರಗೆ ಹೋಗುವುದು ಅಪಾಯ ತರಬಹುದು. ಮನೆಯೊಳಗೇ ಇದ್ದರೂ ಚೆನ್ನಾಗಿ ನೀರು ಕುಡಿಯುವುದು ಕಡ್ಡಾಯ. ಬಿಸಿಲಿನಲ್ಲಿದ್ದರಂತೂ ನಿರ್ಜಲೀಕರಣದ ಅಪಾಯದಿಂದ ಪಾರಾಗಲು ಆ ಕುರಿತ ಮಾರ್ಗಸೂಚಿಯನ್ನು ಪಾಲಿಸದಿದ್ದರೆ ಪ್ರಾಣಾಪಾಯವೇ ಉಂಟಾಗಬಹುದು. ಜೀವನಶೈಲಿಯನ್ನು ಆರೋಗ್ಯವಾಗಿ ಇರಿಸಿಕೊಳ್ಳಿ. ಬೇಸಿಗೆಗೆ ಸೂಕ್ತವಾದ ಆಹಾರವನ್ನೇ ಸೇವಿಸಿ. ಎಣ್ಣೆ-ಜಿಡ್ಡಿನ ಆಹಾರಗಳು, ಕರಿದ ಪದಾರ್ಥಗಳು ಬೇಡ. ಋತುಮಾನದ ಹಣ್ಣು-ತರಕಾರಿ ಮತ್ತು ಡೇರಿ ಉತ್ಪನ್ನಗಳು ಆಹಾರದಲ್ಲಿ ಸೇರಿರಲಿ. ನೀರು ಕುಡಿಯುವುದಕ್ಕೆ ಬೋರು ಎನ್ನುವಂಥ ನೆವಗಳನ್ನು ಹೇಳಿ ಯದ್ವಾತದ್ವಾ ಫ್ರೂಟ್‌ಜ್ಯೂಸ್‌ ಗಳನ್ನು ಕುಡಿಯಬೇಡಿ. ಇದರಿಂದ ರಕ್ತದಲ್ಲಿನ ಸಕ್ಕರೆಯಂಶ ಹೆಚ್ಚಾಗಿ, ಮಧುಮೇಹವಿದ್ದರೆ ಕಣ್ಣಿನ ಸಮಸ್ಯೆ ಬರಬಹುದು. ಮಧುಮೇಹ, ಹೃದ್ರೋಗಗಳಿದ್ದರೆ ಕಾಲಕಾಲಕ್ಕೆ ಕಣ್ಣಿನ ತಪಾಸಣೆಯನ್ನೂ ಮಾಡಿಸಿಕೊಳ್ಳಿ. ಧೂಮಪಾನ ಬೇಡ, ಆಲ್ಕೋಹಾಲ್‌ ನಿರ್ಜಲೀಕರಣವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ನೆನಪಿಡಿ.

Continue Reading

ಆರೋಗ್ಯ

World Milk Day: ಹಾಲಿಗೊಂದು ದಿನವೇ ಬೇಕೆಂದಿಲ್ಲ, ವರ್ಷವಿಡೀ ಆಚರಿಸಬಹುದು!

ಹಾಲು ಸರ್ವರಿಗೂ ಸಲ್ಲುವಂಥ ಆಹಾರ. ವಿಶ್ವದ ಎಲ್ಲ ದೇಶಗಳಲ್ಲಿ ಇದನ್ನು ಒಂದಿಲ್ಲೊಂದು ರೀತಿಯಲ್ಲಿ ನಿಶ್ಚಿತವಾಗಿ ಬಳಸುತ್ತಾರೆ. ಹಾಗಾಗಿಯೇ ಜೂನ್‌ ತಿಂಗಳ ಮೊದಲ ದಿನವನ್ನು ವಿಶ್ವ ಕ್ಷೀರ ದಿನವೆಂದು ಗುರುತಿಸಿದ್ದಾರೆ. ಆದರೆ ಅದೇ ದಿನಕ್ಕೆ ಕಾಯಬೇಕಿಲ್ಲ, ವರ್ಷವಿಡೀ ಕ್ಷೀರ ದಿನವನ್ನು (World Milk Day) ಆಚರಿಸಬಹುದು.

VISTARANEWS.COM


on

World Milk Day
Koo

ಹಾಲನ್ನೇಕೆ ಕುಡಿಯಬೇಕು ಎಂದು ಕೇಳಿದರೆ ಯಾರಾದರೂ ನಕ್ಕಾರು. ಹಾಗಂತ ನಗುವವರಿಗೆಲ್ಲ ಹಾಲಿನ ಸದ್ಗುಣಗಳು ಗೊತ್ತಿರುತ್ತವೆ ಎಂದಲ್ಲ. ಆದರೆ ಹಾಲು ಪೌಷ್ಟಿಕವಾದ ಆಹಾರ ಎಂಬುದನ್ನಂತೂ ಎಲ್ಲರೂ ಕೇಳಿ ತಿಳಿದಿರುತ್ತಾರೆ. ಏನಿವೆ ಅಂಥ ಪೌಷ್ಟಿಕಾಂಶಗಳು ಹಾಲಿನಲ್ಲಿ? ಎಲ್ಲರೂ ಹಾಲನ್ನು ಕುಡಿಯುವುದಕ್ಕೆ ಮಾತ್ರ ಬಳಸುತ್ತಾರೆಂದಿಲ್ಲ. ಮೊಸರು, ಬೆಣ್ಣೆ, ತುಪ್ಪ, ಚೀಸ್‌, ಪನೀರ್‌ಗಳನ್ನು ಮಾಡಬಹುದು. ಹಾಲಿನಲ್ಲಿ ಸಿಹಿಗಳನ್ನು ತಯಾರಿಸಬಹುದು, ಶೇಖ್‌ ಮತ್ತು ಸ್ಮೂದಿಗಳಿಗೆ ಬಳಸಬಹುದು, ಸೀರಿಯಲ್‌ಗಳಿಗೆ ಹಾಕಿ ತಿನ್ನಬಹುದು. ಅಂತೂ ಹಾಲು ಎಲ್ಲರಿಗೂ ಎಲ್ಲ ಹೊತ್ತಿಗೂ ಸಲ್ಲುವಂಥದ್ದು. ಹಾಗಾಗಿ ಜೂನ್‌ ತಿಂಗಳ ಮೊದಲ ದಿನವನ್ನು ವಿಶ್ವ ಕ್ಷೀರ ದಿನವೆಂದು ಗುರುತಿಸಿದ್ದರೂ, ನಾವು ವರ್ಷವಿಡೀ ಕ್ಷೀರ ದಿನವನ್ನು (World Milk Day) ಆಚರಿಸಬಹುದು.

glass of milk

ಕ್ಯಾಲ್ಶಿಯಂ ಹೇರಳ

ನಮ್ಮ ಮೂಳೆಗಳು, ಹಲ್ಲುಗಳೆಲ್ಲ ಬಲಯುತವಾಗಿ ಇರಬೇಕೆಂದರೆ ಕ್ಯಾಲ್ಶಿಯಂ ಬೇಕು. ಕೇವಲ ಅದಕ್ಕಷ್ಟೇ ಅಲ್ಲ, ನಾವು ಮಾಡುವ ಪ್ರತಿಯೊಂದು ದೈಹಿಕ ಚಟುವಟಿಕೆಗೂ ಕ್ಯಾಲ್ಶಿಯಂ ಬಲದ ಅಗತ್ಯವಿದೆ. ಮೂಳೆಗಳು ಟೊಳ್ಳಾಗದಂತೆ, ಅವುಗಳ ಸಾಂದ್ರತೆ ಕಾಪಾಡಿಕೊಳ್ಳುವುದಕ್ಕೂ ಇದು ಬೇಕು. ಹಾಗಾಗಿ ದಿನಕ್ಕೆ 150 ಎಂ.ಎಲ್‌. ಗ್ಲಾಸ್‌ನಲ್ಲಿ ಮೂರು ಗ್ಲಾಸ್‌ ಹಾಲು ನಮ್ಮ ನಿತ್ಯದ ಕ್ಯಾಲ್ಶಿಯಂ ಅಗತ್ಯವನ್ನು ಪೂರೈಸುತ್ತದೆ.

ಉತ್ಕೃಷ್ಟ ಪ್ರೊಟೀನ್‌

ಹಾಲಿನಲ್ಲಿ ಉತ್ಕೃಷ್ಟ ಗುಣಮಟ್ಟದ ಪ್ರೊಟೀನ್‌ ದೊರೆಯುತ್ತದೆ. ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿಗೆ ಇಂಥ ಪರಿಪೂರ್ಣ ಪ್ರೊಟೀನ್‌ ಅಗತ್ಯ. ಅದರಲ್ಲೂ ಬೆಳೆಯುವ ಮಕ್ಕಳ ದೇಹಕ್ಕೆ ಆವಶ್ಯಕವಾದ ಪ್ರೊಟೀನ್‌ಗಳು ಹಾಲಿನಲ್ಲಿವೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ, ಋತುಬಂಧದ ಆಚೀಚೆ ಇರುವ ಮಹಿಳೆಯರಿಗೆ, ವೃದ್ಧರಿಗೆ- ಹೀಗೆ ಎಲ್ಲ ವಯಸ್ಸಿನವರಿಗೂ ಅವರವರ ಅಗತ್ಯಗಳನ್ನು ಪೂರೈಸುವಂಥ ಪೋಷಕಾಂಶಗಳು ಹಾಲಿನಲ್ಲಿವೆ.

Fresh Milk

ವಿಟಮಿನ್‌, ಖನಿಜಗಳು

ಬಹಳಷ್ಟು ರೀತಿಯ ಜೀವಸತ್ವಗಳು ಮತ್ತು ಖನಿಜಗಳು ಹಾಲಿನಲ್ಲಿವೆ. ವಿಟಮಿನ್‌ ಡಿ, ವಿಟಮಿನ್‌ ಬಿ12, ರೈಬೊಪ್ಲೇವಿನ್‌, ಫಾಸ್ಫರಸ್‌, ಪೊಟಾಶಿಯಂ, ಸೆಲೆನಿಯಂ, ಮೆಗ್ನೀಶಿಯಂ ಮುಂತಾದ ಸತ್ವಗಳು ಇದರಲ್ಲಿವೆ. ಇವೆಲ್ಲವೂ ನಮ್ಮ ಶರೀರದ ಶಕ್ತಿಯನ್ನು ಸುಸ್ಥಿರವಾಗಿ ಕಾಯ್ದುಕೊಳ್ಳುವುದಕ್ಕೆ ಬೇಕಾದಂಥವು. ಅದಲ್ಲದೆ, ನರಗಳ ಕ್ಷಮತೆ ಕಾಯ್ದುಕೊಳ್ಳುವುದಕ್ಕೆ ಮತ್ತು ಶರೀರದ ಚಯಾಪಚಯ ನಿರ್ವಹಣೆಯಲ್ಲೂ ಇವು ಪ್ರಮುಖವಾಗಿವೆ.

ಸತ್ವಗಳು ಇಷ್ಟೇ ಅಲ್ಲ

ಒಂದು ಲೋಟ ಹಸುವಿನ ಹಾಲಿನಿಂದ 145 ಕ್ಯಾಲರಿ ಶಕ್ತಿ ದೊರೆಯುತ್ತದೆ. ಅದರಲ್ಲಿ ಸುಮಾರು 8 ಗ್ರಾಂ ಪ್ರೊಟೀನ್‌, ಅಷ್ಟೇ ಪ್ರಮಾಣದ ಕೊಬ್ಬು, ಶೇ. 28ರಷ್ಟು ಕ್ಯಾಲ್ಶಿಯಂ, 24% ವಿಟಮಿನ್‌ ಡಿ, 26% ವಿಟಮಿನ್‌ ಬಿ2, 18% ವಿಟಮಿನ್‌ ಬಿ12, 22% ಫಾಸ್ಫರಸ್‌, 13% ಸೆಲೆನಿಯಂ ಇದರಲ್ಲಿ ಪ್ರಮುಖವಾಗಿ ದೊರೆಯುತ್ತದೆ. ಇದಲ್ಲದೆ, ವಿಟಮಿನ್‌ ಎ, ಸತು ಮತ್ತು ಥಿಯಮಿನ್‌ ಸಹ ಇವೆ.

Food Tips Kannada adulterated food effect health

ಎಲ್ಲದಕ್ಕೂ ಸಲ್ಲುತ್ತದೆ

ಕಾಫಿ, ಚಹಾ, ಮಿಲ್ಕ್‌ಶೇಖ್‌, ಸ್ಮೂದಿ, ಸೀರಿಯಲ್‌ಗಳು, ಪಾಯಸ, ಖೀರು, ಹಲ್ವಾಗಳು, ಕೇಕ್‌ಗಳು, ಗ್ರೇವಿಗಳು ಮುಂತಾದ ಬಹಳಷ್ಟು ರೀತಿಯ ಅಡುಗೆಗಳಿಗೆ ಹಾಲು ನೇರವಾಗಿ ಸಲ್ಲುತ್ತದೆ. ಅದಲ್ಲದೆ, ಮೊಸರು, ಚೀಸ್‌, ಪನೀರ್‌, ಬೆಣ್ಣೆ-ತುಪ್ಪಗಳನ್ನು ಇನ್ನೂ ಹೆಚ್ಚಿನ ಆಹಾರಗಳಿಗೆ ಪೂರಕವಾಗಿ ಬಳಸಬಹುದು. ಹಾಗೆಂದು ಹಾಲಿನ ಕೊಬ್ಬಿನಿಂದ ಮಾಡಿದ ಪದಾರ್ಥಗಳನ್ನು ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಬಹುದು.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಜಾಗ್ರತೆ ಮಾಡಿ

ಹಾಲು ಸರ್ವರಿಗೂ ಸಲ್ಲುವಂಥ ಆಹಾರ. ಅನಾರೋಗ್ಯದ ಸಂದರ್ಭಗಳಲ್ಲೂ ಕೆಲವೊಮ್ಮೆ ಹಾಲಿನ ಸೇವನೆ ಪ್ರಯೊಜನ ನೀಡಬಹುದು. ಆದರೆ ಅತಿ ಸ್ಥೂಲ ದೇಹಿಗಳು ಮತ್ತು ಕೆಲವು ಆರೋಗ್ಯ ಸಮಸ್ಯೆ ಇರುವವರು ಎಚ್ಚರ ವಹಿಸುವುದು ಅಗತ್ಯ. ಈಗಾಗಲೇ ಬೊಜ್ಜಿನ ಸಮಸ್ಯೆ ಇದ್ದವರು ಕಡಿಮೆ ಕೊಬ್ಬಿನ ಹಾಲನ್ನು ಸೇವಿಸುವುದು ಉತ್ತಮ. ಏರಿದ ಕೊಲೆಸ್ಟ್ರಾಲ್‌, ಹೃದಯ ರೋಗಗಳನ್ನು ಹೊಂದಿದವರು ಸಹ ಕೊಬ್ಬು ರಹಿತ ಹಾಲು ಕುಡಿಯುವುದು ಒಳ್ಳೆಯ ಆಯ್ಕೆ. ಲ್ಯಾಕ್ಟೋಸ್‌ ಅಲರ್ಜಿ ಇರುವವರಿಗೆ ಹಾಲು ಆಗಿ ಬರುವುದಿಲ್ಲ. ಒಂದೊಮ್ಮೆ ಹಾಲು ಸೇವಿಸಿದರೂ ಹೊಟ್ಟೆ ನೋವು, ಹೊಟ್ಟೆಯುಬ್ಬರ, ಡಯರಿಯಾದಂಥ ತೊಂದರೆಗಳು ಬಾಧಿಸಬಹುದು.

Continue Reading

ಆರೋಗ್ಯ

Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಯಾವುದೇ ಆಹಾರ ತಯಾರಿಸುವ ಸಂದರ್ಭ ಚಿಟಿಕೆ ಏಲಕ್ಕಿಯನ್ನು ಅದಕ್ಕೆ ಹಾಕಿದರೂ ಸಾಕು, ಅದು ಏಲಕ್ಕಿಯ ಘಮವನ್ನು ಪಡೆದುಕೊಂಡುಬಿಡುತ್ತದೆ. ಅದಕ್ಕಾಗಿಯೇ, ಇದು ಸಿಹಿತಿಂಡಿಗಳಿಗೆ ಹೇಳಿ ಮಾಡಿಸಿದ ಮಸಾಲೆ. ಒಂದು ಚಿಟಿಕೆ ಏಲಕ್ಕಿ ಹಾಕಿದ ಪಾಯಸದ ರುಚಿಯೇ ಬೇರೆ. ಆದರೆ, ಏಲಕ್ಕಿ, ಕೇವಲ ತನ್ನ ಘಮದಲ್ಲಷ್ಟೇ ಶ್ರೀಮಂತಿಕೆ ಮೆರೆದಿಲ್ಲ. ಗುಣದಲ್ಲೂ ಏಲಕ್ಕಿ ಶ್ರೀಮಂತಿಕೆಯಲ್ಲಿ ಯಾವುದಕ್ಕೂ (cardamom benefits) ಕಡಿಮೆಯಿಲ್ಲ.

VISTARANEWS.COM


on

Cardamom Benefits
Koo

ಮಸಾಲೆಗಳ ರಾಣಿ ಎಂದೇ ಹೆಸರಾದ ಏಲಕ್ಕಿಗೆ ಒಂದು ಅಪರೂಪದ ಘಮವಿದೆ. ತನ್ನ ಘಮದ ಮೂಲಕ ಯಾವುದೇ ಆಹಾರವನ್ನು ಕ್ಷಣ ಮಾತ್ರದಲ್ಲಿ ತನ್ನತನವನ್ನು ಅದಕ್ಕೆ ಕೊಡುವ ಶಕ್ತಿಯಿದೆ. ಯಾವುದೇ ಆಹಾರ ತಯಾರಿಸುವ ಸಂದರ್ಭ ಚಿಟಿಕೆ ಏಲಕ್ಕಿಯನ್ನು ಅದಕ್ಕೆ ಹಾಕಿದರೂ ಸಾಕು, ಅದು ಏಲಕ್ಕಿಯ ಘಮವನ್ನು ಪಡೆದುಕೊಂಡುಬಿಡುತ್ತದೆ. ಅದಕ್ಕಾಗಿಯೇ, ಇದು ಸಿಹಿತಿಂಡಿಗಳಿಗೆ ಹೇಳಿ ಮಾಡಿಸಿದ ಮಸಾಲೆ. ಒಂದು ಚಿಟಿಕೆ ಏಲಕ್ಕಿ ಹಾಕಿದ ಪಾಯಸದ ರುಚಿಯೇ ಬೇರೆ. ಆದರೆ, ಏಲಕ್ಕಿ, ಕೇವಲ ತನ್ನ ಘಮದಲ್ಲಷ್ಟೇ ಶ್ರೀಮಂತಿಕೆ ಮೆರೆದಿಲ್ಲ. ಗುಣದಲ್ಲೂ ಏಲಕ್ಕಿ ಶ್ರೀಮಂತಿಕೆಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಬನ್ನಿ, ಏಲಕ್ಕಿಯ ಆರೋಗ್ಯಕರ ಲಾಭಗಳನ್ನು (cardamom benefits) ತಿಳಿಯೋಣ.

Blood Pressure Regulation Cucumber Benefits

ರಕ್ತದೊತ್ತಡಕ್ಕೆ ಪರಿಹಾರ

ಅಧಿಕ ರಕ್ತದೊತ್ತಡ ಇರುವ ಮಂದಿಗೆ ಏಲಕ್ಕಿಯಿಂದ ಲಾಭಗಳಿವೆ. ಒಂದು ಸಂಶೋಧನೆಯ ಪ್ರಕಾರ, ಅಧಿಕ ರಕ್ತದೊತ್ತಡ ಸಮಸ್ಯೆ ಆರಂಭವಾದ 20 ಮಂದಿಗೆ ಪ್ರತಿದಿನ ಮೂರು ಗ್ರಾಂಗಳಷ್ಟು ಏಲಕ್ಕಿ ಪುಡಿ ಪ್ರತಿಯೊಬ್ಬರೂ ಸೇವಿಸದಾಗ 12 ವಾರಗಳಲ್ಲೇ ಅವರ ರಕ್ತದೊತ್ತಡ ಸಮತೋಲನಕ್ಕೆ ಬಂದಿರುವುದು ಸಾಬೀತಾಗಿದೆ. ಇದಕ್ಕೆ ಕಾರಣ, ಏಲಕ್ಕಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು.

ealthy internal organs of human digestive system / highlighted blue organs

ಜೀರ್ಣಕಾರಿ ಗುಣಗಳಿವೆ

ಏಲಕ್ಕಿಯಲ್ಲಿ ಜೀರ್ಣಕಾರಿ ಗುಣಗಳಿವೆ. ಏಲಕ್ಕಿಯಲ್ಲಿರುವ ಮೆಂಥೋನ್‌ ಎಂಬ ಎಣ್ಣೆಯಂಶಕ್ಕೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಗುಣವಿದೆ. ಇದು ಅಸಿಡಿಟಿ, ಅಜೀರ್ಣ ಹಾಗೂ ಹೊಟ್ಟೆ ನೋವಿನಂಥ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಇದಕ್ಕೆ ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಗುಣವಿದೆ.

ವಾಂತಿಗೆ ಪರಿಹಾರ

ಏಲಕ್ಕಿಯಲ್ಲಿ ವಾಂತಿ ಹಾಗೂ ತಲೆಸುತ್ತಿನಂಥ ಸಮಸ್ಯೆಗೆ ಪರಿಹಾರವಿದೆ. ವಾಂತಿಯಾದ ಮೇಲೆ ಆಗುವ ಗಂಟಲಿನ ಹುಳಿ ರುಚಿಯಂಥ ಕಿರಿಕಿರಿ ಗಂಟಲು ಕೆರೆತದ ಭಾವಕ್ಕೆ ಏಲಕ್ಕಿ ಒಳ್ಳೆಯ ಪರಿಹಾರ. ಅಷ್ಟೇ ಅಲ್ಲ, ಪ್ರಯಾಣದಲ್ಲಿ ಆಗುವ ವಾಂತಿಯಂಥ ಸಮಸ್ಯೆಗೂ ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

Woman Suffering from Toothache Benefits Of Drinking Green Tea

ಹಲ್ಲು ನೋವು ನಿವಾರಣೆ

ಏಲಕ್ಕಿಯಲ್ಲಿ ಆಂಟಿ ಸೆಪ್ಟಿಕ್‌ ಹಾಗೂ ಆಂಟಿ ಮೈಕ್ರೋಬಿಯಲ್‌ ಗುಣಗಳಿವೆ. ಇದರಿಂದಾಗಿ ಇದು ಹಲ್ಲಿನ ಸಮಸ್ಯೆಗಳಿಗೆ ಒಳ್ಳೆಯದು. ಏಲಕ್ಕಿಯಲ್ಲಿರುವ ಎಣ್ಣೆಯ ಅಂಶ ಹಲ್ಲು ನೋವಿಗೆ ಒಳ್ಳೆಯ ಔಷಧಿ. ಯಾಕೆಂದರೆ ಇದರಲ್ಲಿರುವ ಆಂಟಿ ಸೆಪ್ಟಿಕ್‌ ಗುಣವು ಕ್ಯಾವಿಟಿಗೆ ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಹಲ್ಲು ಹುಳುಕಾಗುವುದನ್ನೂ ಇದು ತಡೆಯುತ್ತದೆ.

ಶೀತ ಬಾಧೆ ನಿವಾರಣೆ

ಶೀತ ಹಾಗೂ ನೆಗಡಿಗೂ ಏಲಕ್ಕಿ ಒಳ್ಳೆಯದು ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು. ಏಲಕ್ಕಿಯಲ್ಲಿರುವ ವಿಶೇಷ ಗುಣವು ಕಫ ಕಟ್ಟುವುದನ್ನು ತಡೆಯುತ್ತದೆ. ಇದು ಶ್ವಾಸಕೋಶದಲ್ಲಿ ರಕ್ತ ಪರಿಚಲನೆಯನ್ನು ಚುರುಕಾಗಿಸುತ್ತದೆ. ಇದರಿಂದ ಉಸಿರಾಟದ ಗತಿಯೂ ಚುರುಕಾಗುತ್ತದೆ.

ಅತ್ಯುತ್ತಮ ಡಿಟಾಕ್ಸ್‌

ಏಲಕ್ಕಿ ಅತ್ಯುತ್ತಮ ಡಿಟಾಕ್ಸ್‌ ಕೂಡಾ ಹೌದು. ಇದು ರಕ್ತದಲ್ಲಿರುವ ವಿಷಕಾರಿ ಅಂಶವನ್ನು ದೇಹದಿಂದ ಹೊರಕ್ಕೆ ಕಳುಹಿಸುತ್ತದೆ. ಏಲಕ್ಕಿಯಲ್ಲಿರುವ ಏಸೆನ್ಶಿಯಲ್ ಆಯಿಲ್‌ ಹಾಗೂ ಫೈಟೋಕೆಮಿಕಲ್‌ಗಳಲ್ಲಿ ಡಿಟಾಕ್ಸ್‌ ಗುಣವಿದೆ.

ನಿಕೋಟಿನ್‌ನಿಂದ ಹೊರ ಬರಲು ಮದ್ದು

ನಿಕೋಟಿನ್‌ ಚಟಕ್ಕೆ ಬಿದ್ದ ಮಂದಿ, ಇದರಿಂದ ಹೊರಬರುವ ಇಚ್ಛೆಯಿದ್ದರೆ ನೈಸರ್ಗಿಕ ಉಪಾಯ ಎಂದರೆ ಅದು ಏಲಕ್ಕಿ. ಏಲಕ್ಕಿಯನ್ನು ದಿನಕ್ಕೆ ನಾಲ್ಕೈದು ಬಾರಿ ಜಗಿಯುವ ಮೂಲಕ ನಿಕೋಟಿನ್‌ ಬಯಕೆಯನ್ನು ನಿಧಾನವಾಗಿ ಹತ್ತಿಕ್ಕಬಹುದು. ಖಿನ್ನತೆಯಂತ ಸಮಸ್ಯೆ ಇರುವ ಮಂದಿಯ ನಿದ್ದೆಗೂ ಇದು ಒಳ್ಳೆಯದು.

Women with Breast Cancer Prevention Benefits Of Drinking Green Tea

ಕ್ಯಾನ್ಸರ್‌ ವಿರೋಧಿ ಗುಣ

ಏಲಕ್ಕಿಯಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳೂ ಇವೆ. ದೇಹದಲ್ಲಿರುವ ಕ್ಯಾನ್ಸರ್‌ ವಿರೋಧಿ ಕಿಣ್ವಗಳನ್ನು ಮತ್ತಷ್ಟು ಚುರುಕಾಗಿಸುವ ಮೂಲಕ ಏಲಕ್ಕಿ ಕ್ಯಾನ್ಸರ್‌ನಂತಹ ಕಾಯಿಲೆಯ ವಿರುದ್ಧವೂ ಹೋರಾಡುವ ಗುಣ ಹೊಂದಿದೆ. ಇತ್ತೀಚೆಗೆ ನಡೆದ ಅಧ್ಯಯನವೊಂದು ಇದನ್ನು ಪುಷ್ಠೀಕರಿಸುತ್ತದೆ. ಕ್ಯಾನ್ಸರ್‌ನ ಗಡ್ಡೆಯ ಅಂಗಾಂಶಗಳನ್ನು ಕೊಲ್ಲಲು ಏಲಕ್ಕಿಯಲ್ಲಿರುವ ವಿಶೇಷ ಗುಣವು ಸಹಾಯ ಮಾಡುತ್ತದೆ.

ಇದನ್ನೂ ಓದಿ: Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

ಏನು ಮಾಡಬಹುದು?

ಏಲಕ್ಕಿಯ ಈ ಆರೋಗ್ಯಕರ ಗುಣಗಳನ್ನು ಪಡೆಯಲು ನಾವು ಏನು ಮಾಡಬಹುದು, ಹೇಗೆ ಇದನ್ನು ಸೇವಿಸಬೇಕು ಎಂಬುದು ಈಗ ಬಹುತೇಕರಲ್ಲಿರುವ ಪ್ರಶ್ನೆ. ಏಲಕ್ಕಿಯ ಒಂದೆರಡು ಬೀಜಗಳನು ಬಾಯಲ್ಲಿ ಹಾಕಿ ಮೌತ್‌ ಫ್ರೆಶ್ನರ್‌ನ ಹಾಗೆ ಬಳಸಬಹುದು. ಅಥವಾ ಏಲಕ್ಕಿ, ಜಾಯಿಕಾಯಿ, ಅರಿಶಿನ, ಕರಿಮೆಣಸು ಇತ್ಯಾದಿಗಳ ಪುಡಿ ಮಾಡಿ ಇಟ್ಟುಕೊಂಡು ರಾತ್ರಿ ಮಲಗುವ ಮುನ್ನ ಕುಡಿಯುವ ಹಾಲಿಗೆ ಚಿಟಿಕೆ ಪುಡಿ ಸೇರಿಸಿ ಕುಡಿಯಬಹುದು. ಇದರಿಂದ ಸೊಂಪಾದ ನಿದ್ರೆಯೂ ಬರುತ್ತದೆ. ಅಥವಾ ನಿತ್ಯವೂ ಕುಡಿಯುವ ನೀರಿಗೆ ಏಲಕ್ಕಿಯ ಎಸಳೊಂದನ್ನು ಹಾಕಿಡಬಹುದು. ಇನ್ನುಳಿದಂತೆ, ಆಹಾರದ ಮೂಲಕ, ಸಿಹಿತಿಂಡಿಗಳ ಮೂಲಕ ಏಲಕ್ಕಿ ಆಗಾಗ ದೇಹ ಸೇರುತ್ತಲೇ ಇರುತ್ತದೆ. ಈ ಎಲ್ಲ ವಿಧಾನಗಳ ಮೂಲಕ ಏಲಕ್ಕಿಯ ಲಾಭವನ್ನು ನಾವು ಪಡೆಯಬಹುದು.

Continue Reading

ಆಹಾರ/ಅಡುಗೆ

Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ (healthy salad tips) ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ.

VISTARANEWS.COM


on

Healthy Salad Tips
Koo

ಪೋಷಕಾಂಶಯುಕ್ತ ಆಹಾರ ಎಂದಾಕ್ಷಣ ಸುಲಭವಾಗಿ ನೆನಪಿಗೆ ಬರುವುದು ಸಲಾಡ್‌ಗಳು. ಸುಲಭವಾಗಿ ಮಾಡಬಹುದಾದ, ಹೆಚ್ಚೂ ಶ್ರಮ ಬೇಡದ, ಬೇಗ ಹೊಟ್ಟೆ ತುಂಬಿಸುವ ಗುಣ ಉಳ್ಳ ಸಲಾಡ್‌ಗಳು ತೂಕ ಇಳಿಸುವ ಮಂದಿಯ ಪರಮಾಪ್ತ ಸ್ನೇಹಿತನಂತೆ. ಕಚೇರಿಗಳಿಗೆ ಬಿಡು ಹೊತ್ತಿನಲ್ಲಿ ತಿನ್ನಬಹುದಾದ ಸ್ನ್ಯಾಕ್‌ಗಳ ಬದಲಿಗೂ ಈ ಸಲಾಡ್‌ಗಳು ಅನೇಕರಿಗೆ ಸುಲಭವಾಗಿ ಮಾಡಬಹುದಾದ ಆಹಾರವೇ ಆಗಿದೆ. ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ. ಬನ್ನಿ, ನೀವು ಸಲಾಡ್‌ಗಳನ್ನು ಮಾಡುವ ಸಂದರ್ಭ ಈ ಕೆಳಗಿನ ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ, ಆರೋಗ್ಯಕ್ಕೆ ಒಳಿತಾಗುವ ರೀತಿಯಲ್ಲಿ ತಿದ್ದಿಕೊಳ್ಳಿ. ಬನ್ನಿ, ಸಲಾಡ್‌ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ (healthy salad tips) ಮಾಡುವ ತಪ್ಪುಗಳೇನು ಎಂಬುದನ್ನು ನೋಡೋಣ.

Greek Salad

ಡ್ರೆಸ್ಸಿಂಗ್‌ ಅತಿಯಾಗಿ ಮಾಡುವುದು

ಹೌದು, ಸಲಾಡ್‌ ಎಂದಾಕ್ಷಣ ಡ್ರೆಸ್ಸಿಂಗ್‌ ಸಹಜ. ಯಾಕೆಂದರೆ ಸಲಾಡ್‌ಗೆ ಒಂದು ರುಚಿಯನ್ನು ನೀಡುವುದೇ ಈ ಡ್ರೆಸ್ಸಿಂಗ್‌. ಆದರೆ, ಅತಿಯಾದ ಡ್ರೆಸ್ಸಿಂಗ್‌ ಮಾಡುವುದರಿಂದ ಸಲಾಡ್‌ನಲ್ಲಿ ಕೊಬ್ಬು ಜಾಸ್ತಿಯಾಗಬಹುದು. ಹೆಚ್ಚು ಕ್ಯಾಲರಿ ಸೇರಿಕೊಳ್ಳಬಹುದು. ಕೇವಲ ರುಚಿಗೆ ತಕ್ಕಷ್ಟೇ ಡ್ರೆಸ್ಸಿಂಗ್‌ ಮಾಡಿ.

ತರಕಾರಿಗಳನ್ನು ತೊಳೆಯದೆ ಇರುವುದು

ಹಸಿಯಾದ ತರಕಾರಿಗಳನ್ನು ಹಾಗೆಯೇ ಸಲಾಡ್‌ಗೆ ಬಳಸುವುದರಿಂದ ತರಕಾರಿಗಳನ್ನು ತೊಳೆಯುವುದು ಅತ್ಯಂತ ಮುಖ್ಯವಾದ ಘಟ್ಟ. ಹಾಗಾಗಿ ತರಕಾರಿಗಳನ್ನು ಒಮ್ಮೆ ಉಪ್ಪು ನೀರಿನಲ್ಲಿ ಹಾಕಿಟ್ಟು ತೊಳೆಯುವುದನ್ನು ರೂಢಿ ಮಾಡಿಕೊಳ್ಳಿ. ಯಾಕೆಂದರೆ ಇಲ್ಲಿ ತರಕಾರಿ ಬೇಯುವುದಿಲ್ಲವಾದ್ದರಿಂದ ಕೆಲವು ರಾಸಾಯನಿಕಗಳು ತರಕಾರಿಗೆ ಸಿಂಪಡಿಸಲ್ಪಟ್ಟದ್ದು ಹಾಗೆಯೇ ಉಳಿದಿರುವ ಸಾಧ್ಯತೆಯೂ ಇದೆ. ಹಾಗಾಗಿ, ತರಕಾರಿಯನ್ನು ಎರಡೆರಡು ಬಾರಿ ತೊಳೆದುಕೊಂಡು ಬಳಸಿ.

ಇದನ್ನೂ ಓದಿ: Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

ಅತಿಯಾಗಿ ತರಕಾರಿಗಳನ್ನು ಬಳಸುವುದು

ಸಲಾಡ್‌ ಎಂದಾಕ್ಷಣ ಬೇಕಾದ ಹಾಗೆ ತರಕಾರಿಗಳನ್ನು ಬಳಸಬಹುದು ಎಂಬ ನಿಮ್ಮ ಎಣಿಕೆಯಾಗಿದ್ದರೆ ಅದು ತಪ್ಪು. ತರಕಾರಿಗಳ ಸಂಖ್ಯೆಯೂ ಅತಿಯಾಗಬಾರದು. ಒಂದಕ್ಕೊಂದು ಹೊಂದಿಕೊಳ್ಳುವ ಮೂರ್ನಾಲ್ಕು ಬಗೆಯ ತರಕಾರಿಗಳಿಗಿಂತ ಹೆಚ್ಚು ಬಳಸಬೇಡಿ. ತರಕಾರಿಗಳು ಅತಿಯಾದರೆ, ಅವು ಹಸಿಯಾಗಿರುವುದರಿಂದ ಇವು ಗ್ಯಾಸ್‌ನಂತಹ ಸಮಸಯೆಯನ್ನು ತಂದೊಡ್ಡಬಹುದು. ಜೀರ್ಣದ ಸಮಸ್ಯೆಗಳೂ ತಲೆದೋರಬಹುದು. ಕೆಲವರಿಗೆ ಹಸಿ ತರಕಾರಿಗಳು ಕರಗುವುದಿಲ್ಲ. ಇಂಥ ಮಂದಿ ತರಕಾರಿಗಳನ್ನು ಸ್ವಲ್ಪ ಬೇಯಿಸಿಕೊಂಡು ತಿನ್ನಬಹುದು. ಹೀಗೆ ಮಾಡುವುದರಿಂದ ಜೀರ್ಣ ಸಮಸ್ಯೆಗಳು ಬರದು.

Continue Reading
Advertisement
Prajwal Revanna Case
ಕರ್ನಾಟಕ2 mins ago

Hassan MP Prajwal Revanna case: ಮೊಂಡಾಟ ಬಿಡದ ಪ್ರಜ್ವಲ್‌; ಇಂದೇ ಸ್ಥಳ ಮಹಜರಿಗೆ SIT ಪ್ಲ್ಯಾನ್‌

Actor Suriya visits temple ahead of Suriya 44
ಕಾಲಿವುಡ್11 mins ago

Actor Suriya: ಹೊಸ ಸಿನಿಮಾ ಶೂಟಿಂಗ್‌ ಶುರು ಮಾಡಿದ ನಟ ಸೂರ್ಯ!

IND vs BAN
ಕ್ರೀಡೆ15 mins ago

IND vs BAN: ಪಾಂಡ್ಯ ಬಲಿಷ್ಠ ಹೊಡೆತಕ್ಕೆ ನೆತ್ತರು ಚೆಲ್ಲಿದ ಬಾಂಗ್ಲಾ ಬೌಲರ್; ವಿಡಿಯೊ ವೈರಲ್​

Assembly Election Results 2024:
ದೇಶ31 mins ago

Assembly Election Results 2024: ಇಂದು ಅರುಣಾಚಲ ಪ್ರದೇಶ & ಸಿಕ್ಕಿಂ ರಿಸಲ್ಟ್‌; 10 ಅಭ್ಯರ್ಥಿಗಳು ಅವಿರೋಧ ಆಯ್ಕೆ

Weather Updates
ಮಳೆ1 hour ago

Weather Updates:ಇಡೀ ರಾತ್ರಿ ಭಾರೀ ಮಳೆ; ಮುಂಗಾರು ಆರಂಭದಲ್ಲೇ ಬೆಂಗಳೂರು ಅಸ್ತವ್ಯಸ್ತ

cyber attack ನನ್ನ ದೇಶ ನನ್ನ ದನಿ
ಅಂಕಣ2 hours ago

ಸೈಬರ್‌ ಸೇಫ್ಟಿ ಅಂಕಣ: 2024ರ ಸೈಬರ್‌ ಸೆಕ್ಯುರಿಟಿ ಟ್ರೆಂಡ್‌ಗಳು

ನನ್ನ ದೇಶ ನನ್ನ ದನಿ baman das basu
ಅಂಕಣ2 hours ago

ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರು ಬರುವ ಮೊದಲು ರಸ್ತೆಗಳೇ ಇರಲಿಲ್ಲವಾದರೆ, ಕೃಷ್ಣದೇವರಾಯನ ಭಾರಿ ಸೈನ್ಯ ಆಕಾಶದಲ್ಲಿ ಹಾರಾಡುತ್ತಿತ್ತೇ?

Karnataka weather Forecast
ಮಳೆ2 hours ago

Karnataka Weather : ಮೇಲ್ಮೈ ಸುಳಿಗಾಳಿ ಎಫೆಕ್ಟ್‌; ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

Heatwave Effect
ಆರೋಗ್ಯ3 hours ago

Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

Dina Bhavishya
ಭವಿಷ್ಯ4 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರಿಗೆ ಸಿಗಲಿದೆ ಗುಡ್‌ ನ್ಯೂಸ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು16 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌