Home Remedies For Winter Sickness: ಚಳಿಗಾಲದ ಸೋಂಕಿಗೆ ಉಪಯುಕ್ತ ಮನೆಮದ್ದು ಇಲ್ಲಿದೆ - Vistara News

ಆರೋಗ್ಯ

Home Remedies For Winter Sickness: ಚಳಿಗಾಲದ ಸೋಂಕಿಗೆ ಉಪಯುಕ್ತ ಮನೆಮದ್ದು ಇಲ್ಲಿದೆ

ಚಳಿಗಾಲದ ವಿಶೇಷ ಅತಿಥಿಗಳೆಂದರೆ ನೆಗಡಿ, ಕೆಮ್ಮು, ಕಫ, ಗಂಟಲುನೋವು ಇತ್ಯಾದಿಗಳು. ಒಮ್ಮೆ ಸೋಂಕು, ಇನ್ನೊಮ್ಮೆ ಅಲರ್ಜಿ ಎನ್ನುತ್ತಾ ನಮ್ಮ ಜನ್ಮಾಂತರದ ಬಂಧುಗಳಂತೆ ಜೊತೆಗೇ ಉಳಿದುಬಿಡುತ್ತದೆ. ಬಿಟ್ಟು ಹೋಗದ ಇವುಗಳನ್ನು ಓಡಿಸುವುದಕ್ಕೆ ಒಂದಿಷ್ಟು ಮನೆಮದ್ದುಗಳು (Home remedies for winter sickness) ಇಲ್ಲಿವೆ.

VISTARANEWS.COM


on

Home Remedies For Winter Sickness
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಳಿಗಾಲವೆಂದರೆ ಮೂಗು ಸೋರುವ, ಗಂಟಲು ಕೆರೆಯುವ, ಕೆಮ್ಮುತ್ತಲೇ ಕಳೆಯುವ ಕಾಲ ಆಗಬೇಕಿಲ್ಲ. ಈ ದಿನಗಳಲ್ಲಿ ವೈರಸ್‌ ಬಾಧೆ ಹೆಚ್ಚೆಂಬುದು ನಿಜ. ಮೂಗು, ಗಂಟಲು, ಶ್ವಾಸನಾಳಗಳು, ಸೈನಸ್‌ಗಳಿಗೆ ಸೋಂಕು ಥಟ್ಟನೆ ತಗುಲುತ್ತದೆ. ಪರಿಣಾಮವೇ ನಿಲ್ಲದ ನೆಗಡಿ, ಕಾಡುವ ಕೆಮ್ಮು, ಕಿರಿಕಿರಯ ಗಂಟಲು, ಬಿಗಿಯುವ ಕಫ, ಊದಿಕೊಳ್ಳುವ ಸೈನಸ್‌, ಸುಸ್ತು, ಜಡತೆ… ಪಟ್ಟಿ ದೊಡ್ಡದು. ಚಳಿ ಹೋದರೂ ಇವೆಲ್ಲ ಹೋಗುವುದಿಲ್ಲ, ಅದರಲ್ಲೂ ಕೆಮ್ಮು. ಒಮ್ಮೆ ಸೋಂಕು, ಇನ್ನೊಮ್ಮೆ ಅಲರ್ಜಿ ಎನ್ನುತ್ತಾ ಶತಮಾನಗಳಿಂದ ನಮಗೇ ಅಂಟಿದಂತೆ ಗೋಳಾಡಿಸಿಬಿಡುತ್ತದೆ ಈ ಕೆಮ್ಮು. ಚಳಿಗಾಲಕ್ಕೆಂದೇ ವಿಶೇಷವಾಗಿ ಅತಿಥಿ ಕಲಾವಿದನಾಗಿ ಆಗಮಿಸುವ ಈ ನೆಗಡಿ-ಕೆಮ್ಮನ್ನು ನಿಯಂತ್ರಿಸಲು ಒಂದಿಷ್ಟು ಮನೆಮದ್ದುಗಳನ್ನು (Home remedies for winter sickness) ಇಲ್ಲಿ ವಿವರಿಸಲಾಗಿದೆ.

Garlic Sore Throat

ಬೆಳ್ಳುಳ್ಳಿ

ಅಲ್ಲಿಸಿನ್‌ನಂಥ ಪ್ರಬಲ ಉತ್ಕರ್ಷಣ ನಿರೋಧಕವನ್ನು ಹೊಂದಿರುವ ಬೆಳ್ಳುಳ್ಳಿ ಚಳಿಗಾಲಕ್ಕೆ ಅಗತ್ಯವಾಗಿ ಬೇಕಾದ್ದು. ಗಂಟಲು ನೋವು, ಕೆಮ್ಮಿನ ಕಿರಿಕಿರಿಗೆ ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ನಾಲ್ಕಾರು ಹರಳು ಉಪ್ಪಿನೊಂದಿಗೆ ಬಾಯಲ್ಲಿಟ್ಟುಕೊಂಡು, ಬರುವ ರಸವನ್ನು ನುಂಗುತ್ತಿದ್ದರೆ ಉಪಯುಕ್ತ. ಹಸಿ ಬೆಳ್ಳುಳ್ಳಿಯ ವಾಸನೆ ಸಹಿಸಲು ಕಷ್ಟ ಎಂದಿದ್ದರೆ, ಮಾಡುವ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಧಾರಾಳವಾಗಿ ಬಳಸಿ.

Ginger Foods For Fight Against Dengue Fever

ಶುಂಠಿ

ಉರಿಯೂತ ನಿವಾರಣೆ, ಸೋಂಕು ನಿಯಂತ್ರಣ ಮತ್ತು ಕಫ ಕರಗುವುದಕ್ಕೆ ಶುಂಠಿ ಪರಿಣಾಮಕಾರಿ ಮದ್ದು. ಇದರಲ್ಲಿರುವ ಜಿಂಜರಾಲ್‌ ಅಂಶಗಳು ಉತ್ತಮ ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ಊದಿಕೊಂಡ ಶ್ವಾಸನಾಳಗಳನ್ನು ಹಿಗ್ಗಿಸಿ, ಕಫ ಹೊರಹೋಗುವಂತೆ ಮಾಡುವ ಒಳ್ಳೆಯ ಬ್ರಾಂಕೊ-ಡಯಲೇಟರ್‌ ಇದು. ಕೊಂಚ ಶುಂಠಿಯ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಬಹುದು. ಒಣಶುಂಠಿಯನ್ನು ಬಾಯಲ್ಲಿಟ್ಟು ರಸ ನುಂಗಬಹುದು ಅಥವಾ ಶುಂಠಿಯ ಚಹಾ ಇಲ್ಲವೇ ಕಷಾಯ ಮಾಡಿ ಸೇವಿಸಬಹುದು.

Tulsi Holy Basil Leaves Medicinal Leaves

ತುಳಸಿ

ಕೆಮ್ಮು ಮತ್ತು ಕಫ ನಿವಾರಣೆಯ ಗುಣ ಹೊಂದಿರುವ ತುಳಸಿಯಲ್ಲಿ ಸೋಂಕು ನಿರೋಧಕ ಸಾಮರ್ಥ್ಯವೂ ಇದೆ. ನೆಗಡಿ, ಜ್ವರದಂಥ ಸೂಕ್ಷ್ಮಾಣುಗಳ ಸೋಂಕಿಗೂ ಇದು ಔಷಧಿಯಾಗಬಲ್ಲದು. ಶ್ವಾಸನಾಳಗಳನ್ನು ಹಿಗ್ಗಿಸಿ ಬಿಗಿದ ಕಫವನ್ನು ಸಡಿಲ ಮಾಡುತ್ತದೆ. ಒಣ ಕೆಮ್ಮಿಗೆ ತುಳಸಿಯ ಕಷಾಯ ಪರಿಣಾಮಕಾರಿ ಮದ್ದು. ತುಳಸಿಯ ರಸವನ್ನು ತೆಗೆದು ಕೊಂಚ ಜೇನುತುಪ್ಪ ಸೇರಿಸಿ ಸೇವಿಸಿದರೂ ಫಲಿತಾಂಶ ಉತ್ತಮವಾಗಿರುತ್ತದೆ.

ವಿಟಮಿನ್‌ ಸಿ

ದೇಹದ ಪ್ರತಿರೋಧಕತೆಯನ್ನು ಹೆಚ್ಚಿಸುವ ಸಿ ಜೀವಸತ್ವಭರಿತ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದಲೂ ಸೋಂಕುಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು. ಕಿತ್ತಳೆ ಹಣ್ಣು, ದ್ರಾಕ್ಷಿ, ನಿಂಬೆರಸ, ಕಿವಿ ಹಣ್ಣು, ನೆಲ್ಲಿಕಾಯಿ, ಪರ್ಸಿಮನ್‌, ಬೆರ್ರಿಗಳು, ಬ್ರೊಕೊಲಿ, ಕ್ಯಾಪ್ಸಿಕಂ, ಮೊಳಕೆ ಕಾಳುಗಳು, ಹೂ ಕೋಸು ಮುಂತಾದವುಗಳಿಂದ ಹೆಚ್ಚಿನ ವಿಟಮಿನ್‌ ಸಿ ಪಡೆಯಬಹುದು.

Red Onions on the Soil

ಈರುಳ್ಳಿ

ಇದರಲ್ಲಿರುವ ಸಲ್ಫರ್‌ ಅಂಶಗಳು ಕಫ ಕರಗುವುದಕ್ಕೆ ನೆರವಾಗುತ್ತವೆ. ನೆಗಡಿಯನ್ನು ಕಡಿಮೆ ಮಾಡುವುದಕ್ಕೆ ಮತ್ತು ಬಿಗಿದ ಕಫವನ್ನು ಕರಗಿಸುವುದಕ್ಕೆ ಇದನ್ನು ಪರಂಪರಾಗತ ಔಷಧಿಯಲ್ಲಿ ಬಳಸಲಾಗುತ್ತದೆ. ಈರುಳ್ಳಿಯನ್ನು ಜಜ್ಜಿ ರಸ ತೆಗೆದು. ಅಷ್ಟೇ ಪ್ರಮಾಣದ ಜೇನುತುಪ್ಪದೊಂದಿಗೆ ಸೇವಿಸುವುದು ಕ್ರಮ. ಅದಿಲ್ಲದಿದ್ದರೆ, ಈರುಳ್ಳಿಯನ್ನು ಕೆಂಪು ಕಲ್ಲುಸಕ್ಕರೆಯೊಂದಿಗೆ ಕುದಿಸಿ ಕಷಾಯ ಮಾಡಿ. ಶೋಧಿಸಿದ ಕಷಾಯಕ್ಕೆ ನಾಲ್ಕಾರು ಹನಿ ನಿಂಬೆ ರಸ ಹಾಕಿ ಕುಡಿಯುವುದು ಪರಿಣಾಮಕಾರಿ.

Anti-Inflammatory Properties Health Benefits Of Raw Turmeric

ಅರಿಶಿನ

ನೆಗಡಿ-ಕೆಮ್ಮಿಗೆ ಅರಿಶಿನ ಹಾಲು ಅಥವಾ ಕಷಾಯದ ಸೇವಿಸುವುದು ಅಜ್ಜಿಯರ ಕಾಲದಿಂದ ಬಳಕೆಯಲ್ಲಿದೆ. ಇದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರಿಗೂ ಹಿತವಾಗುವಂಥ ಮದ್ದು. ಸೋಂಕು ನಿವಾರಿಸುವ, ಉರಿಯೂತ ಶಮನ ಮಾಡುವಂಥ ಉತ್ಕರ್ಷಣ ನಿರೋಧಕ ಕರ್ಕುಮಿನ್‌ ಅರಿಶಿನದಲ್ಲಿದೆ. ಗಂಟಲು ನೋವು, ಕಿರಿಕಿರಿಗಳಿಗೆ ಬಿಸಿ ನೀರಿಗೆ ಉಪ್ಪಿನೊಂದಿಗೆ ಅರಿಶಿನವನ್ನೂ ಹಾಕಿ ಗಾರ್ಗಲ್‌ ಮಾಡುವುದು ಉತ್ತಮ.

Pumpkin seeds Pumpkin Seeds Benefits

ಕುಂಬಳಕಾಯಿ ಬೀಜ

ವಿಟಮಿನ್‌ ಸಿ ಜೊತೆಗೆ ಸತು ಅಥವಾ ಜಿಂಕ್‌ ಇರುವಂಥ ಆಹಾರಗಳು ಸಹ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಬಲ್ಲವು. ದೇಹದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಪ್ರಚೋದಿಸುವ ಶಕ್ತಿ ಜಿಂಕ್‌ಗೆ ಇದೆ. ಯಾವುದೋ ಸೋಂಕುಗಳ ವಿರುದ್ಧ ಹೋರಾಡಲು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ರಕ್ತಕಣಗಳು ಬೇಕು. ಹಾಗಾಗಿ ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಗೋಡಂಬಿ, ಹೆಂಪ್‌ ಬೀಜ, ಮೊಟ್ಟೆ, ಅಣಬೆ ಮುಂತಾದ ಜಿಂಕ್‌ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಪ್ರಯೋಜನಕಾರಿ.

ಇದನ್ನೂ ಓದಿ: Different Types of Seeds with Health Benefits: ಆರೋಗ್ಯ ವೃದ್ಧಿಗೆ ಬೇಕಾದ ಪೌಷ್ಟಿಕ ಬೀಜಗಳಿವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Menopause: ಮಹಿಳೆಯರೇ, ಈ ಸಮಸ್ಯೆಗಳು ಕಾಣಿಸುತ್ತಿವೆಯೇ?; ಹಾಗಿದ್ದರೆ ನಿಮ್ಮ ಮೆನೋಪಾಸ್‌ ಸಮೀಪದಲ್ಲಿದೆ ಎಂದರ್ಥ!

ಹಲವು ಮಹಿಳೆಯರಲ್ಲಿ 40 ವರ್ಷ ತಲುಪುವ ಮೊದಲೇ ಮೆನೋಪಾಸ್‌ ಪೂರ್ವ ಲಕ್ಷಣಗಳು ಗೋಚರಿಸುತ್ತಿವೆ. ಮೆನೋಪಾಸ್‌ ಮಹಿಳೆಯ ಆರೋಗ್ಯದ ಸಾಮಾನ್ಯ ಘಟ್ಟವೇ ಆಗಿದ್ದರೂ ಈ ಸಂದರ್ಭ ಬಹಳಷ್ಟು ಸಾರಿ ವೈದ್ಯರ ನೆರವು, ಸುತ್ತಲಿನವರ ಕಾಳಜಿ ಪ್ರೀತಿಯೂ ಬೇಕಾಗುತ್ತದೆ. ಯಾವೆಲ್ಲ ಲಕ್ಷಣಗಳ ಮೂಲಕ, ಪ್ರತಿ ಮಹಿಳೆ ತನ್ನ ಮೆನೋಪಾಸ್‌ ಸಮೀಪಿಸುತ್ತಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು? ಈ ಕುರಿತ ಉಪಯುಕ್ತ (Menopause) ಮಾಹಿತಿ ಇಲ್ಲಿದೆ.

VISTARANEWS.COM


on

Menopause
Koo

ಬದಲಾದ ಜೀವನಕ್ರಮ, ಬದಲಾದ ವಾತಾವರಣ, ನಗರ ಜೀವನ, ಒತ್ತಡ ಇವೆಲ್ಲವೂ ಇಂದು ಮನುಷ್ಯನ ದೇಹ ಪ್ರಕೃತಿಯ ಮೇಲೂ ಪರಿಣಾಮ ಬೀರುತ್ತಿವೆ. ಮಹಿಳೆಯ ಮೆನೋಪಾಸ್‌ ಅಥವಾ ಋತುಬಂಧವೂ ಕೂಡಾ ಇಂದು ಇಂತಹ ಅನೇಕ ಕಾರಣಗಳಿಂದಾಗಿ ಬಹುಬೇಗನೆ ಆಗುತ್ತಿದೆ. ಹಲವರಲ್ಲಿ ನಲವತ್ತನ್ನು ತಲುಪುವ ಮೊದಲೇ ಮೆನೋಪಾಸ್‌ ಪೂರ್ವ ಲಕ್ಷಣಗಳು ಗೋಚರಿಸುತ್ತಿವೆ. ಮೆನೋಪಾಸ್‌ ಮಹಿಳೆಯ ಆರೋಗ್ಯದ ಸಾಮಾನ್ಯ ಘಟ್ಟವೇ ಆಗಿದ್ದರೂ ಈ ಸಂದರ್ಭ ಬಹಳಷ್ಟು ಸಾರಿ ವೈದ್ಯರ ನೆರವು, ಸುತ್ತಲಿನವರ ಕಾಳಜಿ ಪ್ರೀತಿಯೂ ಬೇಕಾಗುತ್ತದೆ. ಯಾವೆಲ್ಲ ಲಕ್ಷಣಗಳ ಮೂಲಕ, ಪ್ರತಿ ಮಹಿಳೆ ತನ್ನ ಮೆನೋಪಾಸ್‌ ಸಮೀಪಿಸುತ್ತಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು (Menopause) ಎಂಬುದನ್ನು ನೋಡೋಣ.

Female Menstrual Cycle Concept

ಸಮತೋಲನ ತಪ್ಪಿದ ಋತುಚಕ್ರ

ಪೀರಿಯಡ್ಸ್‌ ಅಥವಾ ಮಾಸಿಕ ಋತುಚಕ್ರದ ಕ್ರಮ ಬದಲಾಗಬಹುದು. ಪೀರಿಯಡ್‌ ನಡುವಿನ ಅಂತರ ಕಡಿಮೆಯಾಗಬಹುದು. ರಕ್ತಸ್ರಾವದಲ್ಲಿ ಏರಿಳಿತವಾಗಬಹುದು ಅಥವಾ, ಕಡಿಮೆ ರಕ್ತಸ್ರಾವವಾಗಬಹುದು, ಹೆಚ್ಚಾಗಬಹುದು. ಅಥವಾ ಮಾಸಿಕ ಋತುಸ್ರಾವ ತಪ್ಪಬಹುದು. ಹಾಗಾಗಿ, ಇಂತಹ ಸಮಸ್ಯೆ ನಿಮ್ಮ ಗಮನಕ್ಕೆ ಬರುತ್ತಿದೆ ಎಂದಾದಲ್ಲಿ, ಇವೆಲ್ಲವನ್ನೂ ಒಂದು ಡೈರಿಯಲ್ಲಿ ಬರೆದಿಟ್ಟುಕೊಂಡು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಸೆಖೆಯೋ ಸೆಖೆ

ವಾತಾವರಣ ತಂಪಾಗಿದ್ದರೂ, ನಿಮಗೆ ಮಾತ್ರ ಇದ್ದಕ್ಕಿದ್ದಂತೆ ಸೆಖೆಯಾಗಬಹುದು. ಬೆವರಿಳಿಯಬಹುದು. ರಾತ್ರಿ ಮಲಗಿದ ಸಂದರ್ಭ ಇದ್ದಕ್ಕಿಂದ್ದಂತೆ ವಿಪರೀತ ಸೆಖೆಯಾಗಿ ನಿದ್ದೆಗೆಡಬಹುದು. ಇದಕ್ಕಾಗಿ, ನಿಮ್ಮ ಮಲಗುವ ಕೋಣೆಯನ್ನು ತಂಪಾಗಿಡಿ. ಜೊತೆಗೆ ಮಸಾಲೆ ಪದಾರ್ಥಗಳು ಹಾಗೂ ಕೆಫಿನ್‌ಯುಕ್ತ ಆಹಾರದಿಂದ ದೂರವಿರಿ.

stay awake till late night what is the problem For health

ನಿದ್ದೆಯ ಸಮಸ್ಯೆ

ಮಲಗಿದ ಮೇಲೆ ನಿದ್ದೆಗೆ ಜಾರಲು ಬಹಳ ಸಮಯ ಬೇಕಾಗಬಹುದು. ನಿದ್ದೆ ಬರುತ್ತಿದೆ ಎನಿಸಿದರೂ ಬಹಳ ಹೊತ್ತಿನವರೆಗೆ ನಿದ್ದೆ ಹತ್ತಿರ ಸುಳಿಯದು. ಹೀಗಾಗುತ್ತಿದ್ದರೆ, ಒಂದು ನಿಗದಿತ ಸಮಯಕ್ಕೆ ನಿದ್ದೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಕೆಫಿನ್‌ ಹಾಗೂ ಗ್ಯಾಜೆಟ್‌ಗಳಿಂದ ದೂರವಿರಿ.

Foods are also responsible for relieving stress and increasing cheerfulness Foods That Lift Your Mood

ಮೂಡ್‌ ಬದಲಾವಣೆ

ಇದ್ದಕ್ಕಿದ್ದಂತೆ ಅನಗತ್ಯವಾಗಿ ಉದ್ವೇಗ, ಸಿಟ್ಟು, ಹತಾಶೆ, ಬೇಸರ ಇತ್ಯಾದಿ ಭಾವನೆಗಳು ಕೆಲವೊಮ್ಮೆ ಒತ್ತಾಗಿ ಬರಬಹುದು. ಕಾರಣವಿಲ್ಲದೆ ಬೇಸರದ ಛಾಯೆ ಕವಿದಿರಬಹುದು. ಅನಗತ್ಯವಾಗಿ ನಿಮ್ಮ ಪ್ರೀತಿಪಾತ್ರರ ಸಣ್ಣ ನಡೆಯೂ ಸಿಟ್ಟು ತರಿಸಬಹುದು. ಇದ್ದಕ್ಕಿದ್ದಂತೆ ಬೇರೊಬ್ಬರ ಮೇಲೆ ರೇಗುವುದು ಇತ್ಯಾದಿ ಮೂಡ್‌ ಬದಲಾವಣೆಯೂ ಮೆನೋಪಾಸ್‌ ಹತ್ತಿರ ಬರುತ್ತಿರುವುದರ ಕಾರಣಗಳೇ ಆಗಿವೆ. ನಿಮ್ಮ ಪ್ರೀತಿಪಾತ್ರರ ಬಳಿಯಲ್ಲಿ ಈ ಬಗ್ಗೆ ಚರ್ಚಿಸಿ, ವೈದ್ಯರಿಂದ ಸರಿಯಾದ ಸಲಹೆ ಮಾರ್ಗದರ್ಶನ ಪಡೆಯಿರಿ.

ಲೈಂಗಿಕ ನಿರಾಸಕ್ತಿ

ಸಂಗಾತಿಯ ಜೊತೆಗೆ ಸರಸ ಸಲ್ಲಾಪದಲ್ಲಿ ಆಸಕ್ತಿ ಇಲ್ಲದಿರುವುದು, ಅವರ ಕೋರಿಕೆ ಕಿರಿಕಿರಿಯಾಗುವುದು, ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಸಂಪೂರ್ಣವಾಗಿ ಕಡಿಮೆಯಾಗುವುದು ಇತ್ಯಾದಿಗಳೂ ಕೂಡಾ ಮೆನೋಪಾಸ್‌ ಪೂರ್ವ ಲಕ್ಷಣಗಳೇ ಆಗಿವೆ.

vagina

ಯೋನಿಯಲ್ಲಿ ತುರಿಕೆ

ಯೋನಿ ಒಣಗಿದಂತಾಗುವುದು, ಆ ಭಾಗದಲ್ಲಿ ತುರಿಕೆ ಇತ್ಯಾದಿ ಸಮಸ್ಯೆಗಳೂ ಮೆನೋಪಾಸ್‌ ಸಂದರ್ಭದಲ್ಲಿ ಆಗುವ ಸಂಭವ ಹೆಚ್ಚು. ಯೋನಿಗೆ ಹಚ್ಚಬಹುದಾದ ಲುಬ್ರಿಕೆಂಟ್‌ಗಳು, ಮುಲಾಮುಗಳು, ಮಾಯ್‌ಶ್ಚರೈಸರ್‌ಗಳನ್ನು ವೈದ್ಯರಿಂದ ಕೇಳಿ ಪಡೆಯುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು. ರಾಸಾಯನಿಕಯುಕ್ತ ಸಾಬೂನುಗಳಿಂದ ಆ ಭಾಗವನ್ನು ಅತಿಯಾಗಿ ತೊಳೆಯುವುದು ಇತ್ಯಾದಿ ಮಾಡಬೇಡಿ. ಹೆಚ್ಚು ನೀರು ಕುಡಿಯುವುದು ಬಹಳ ಮುಖ್ಯ.

ಸ್ಮರಣ ಶಕ್ತಿ ಕುಂಠಿತ

ಸ್ಮರಣ ಶಕ್ತಿ ಕಡಿಮೆಯಾಘುವುದು, ತಾನು ಮಾಡಬೇಕಾದ ಕೆಸ ಕೆಲವೊಮ್ಮೆ ಮರೆತು ಹೋಗುವುದು ಇತ್ಯಾದಿಗಳೂ ಕೂಡಾ ಮೆನೋಪಾಸ್‌ ಪೂರ್ವ ಲಕ್ಷಣಗಳೇ. ಹೀಗಾಗಿ, ಮಾಡಬೇಕಾದ ಕೆಲಸಗಳು ಹಾಗೂ ಮರೆತು ಹೋಗಬಹುದು ಎಂಬುದನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು ಕ್ರಮಬದ್ಧವಾಗಿ ಕೆಲಸ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

Belly Fat Reduction

ತೂಕ ಹೆಚ್ಚಾಗುವುದು

ಮೆನೋಪಾಸ್‌ ಹತ್ತಿರ ಬರುತ್ತಿದ್ದಂತೆ ಬಹಳಷ್ಟು ಮಹಿಳೆಯಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಎಂದರೆ ತೂಕ ಹೆಚ್ಚಾಗುವುದು. ಹೊಟ್ಟೆಯ ಹಾಗೂ ಸೊಂಟದ ಭಾಗದಲ್ಲಿ ತೂಕ ಏರುವುದು ಸಮಸ್ಯೆಯ ಭಾಗ. ಆರೋಗ್ಯಕರ ಆಹಾರ ಶೈಲಿ, ಹಣ್ಣು ತರಕಾರಿ ಸೊಪ್ಪು ಮೊಳಕೆ ಕಾಳುಗಳೂ ಸೇರಿದಂತೆ ಕ್ಯಾಲ್ಶಿಯಂಯುಕ್ತ ಆಹಾರವನ್ನು ಸೇವಿಸಿ. ವ್ಯಾಯಾಮವೂ ಬಹಳ ಮುಖ್ಯ.

ದೇಹದಲ್ಲಿ ಬಿಗು, ಮಾಂಸಖಂಡಗಳ ನೋವು

ಮಾಂಸಖಂಡಗಳ ಸೆಳೆತ, ನೋವು, ಗಂಟುಗಳಲ್ಲಿ ಬಿಗುತನ, ಸುಸ್ತಾಗುವಿಕೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಯಮಿತ ವ್ಯಾಯಾಮ, ಚುರುಕಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಸರಿಯಾದ ಆಹಾರ ಕ್ರಮ ಇತ್ಯಾದಿಗಳ ಅಭ್ಯಾಸ ಬಿಡಬೇಡಿ. ವಿಟಮಿನ್‌ ಡಿ, ಕ್ಯಾಲ್ಶಿಯಂ, ಹಾಗೂ ಇತರ ಪೋಷಕಾಂಶಗಳ ಕೊರತೆಯಿದೆಯೇ ಎಂಬ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸೂಕ್ತ ನೆರವಿನೊಂದಿಗೆ ಮುಂದುವರಿಯಿರಿ.

ಇದನ್ನೂ ಓದಿ: Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ!

ಕೂದಲು, ಚರ್ಮದ ಸಮಸ್ಯೆ

ಕೂದಲು ಉದುರುವಿಕೆ, ಸರ್ಮ ಒಣಕಲಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಹಾಗೂ ಕೂದಲಲ್ಲಿ ನಿಮಗೆ ಗಣನೀಯ ಬದಲಾವಣೆ ಗೋಚರಿಸಬಹುದು. ಚೆನ್ನಾಗಿ ನೀರು ಕುಡಿಯಿರಿ. ಸೂರ್ಯನ ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಿ. ವ್ಯಾಯಾಮ, ನಿದ್ದೆ ಇವು ಸರಿಯಾಗಿ ಮಾಡಿ. ಕೂದಲು ಹಾಗೂ ಚರ್ಮದ ಪೋಷಣೆಯ ಕಾಳಜಿ ಮಾಡಿಕೊಳ್ಳಿ.

Continue Reading

ಆರೋಗ್ಯ

Cervical Cancer: ಮಹಿಳೆಯರ ಗರ್ಭಕಂಠದ ಕ್ಯಾನ್ಸರ್‌; ಪುರುಷರಿಗೂ ಇದೆ ಅಪಾಯ!

ಲೈಂಗಿಕ ಸಂರ್ಪಕದ ವೇಳೆ ಸುರಕ್ಷತೆ ಪಾಲಿಸದಿದ್ದರೆ ಅಥವಾ ಲೈಂಗಿಕ ಕ್ರಿಯೆಯ ಬಳಿಕ ಸ್ವಚ್ಛತೆ ಕಾಪಾಡಿಕೊಳ್ಳದೇ ಹೋದರೇ ಕ್ರಮೇಣ ಈ ಸೋಂಕು ಗರ್ಭಕಂಠದಲ್ಲಿ ಕಾಣಿಸಿಕೊಳ್ಳಲಿದೆ. ಇದಕ್ಕೆ ಚಿಕಿತ್ಸೆ ನೀಡದೇ ಹೋದಲ್ಲಿ ಇದು ಕ್ಯಾನ್ಸರ್‌ ಆಗಿ ಪರಿವರ್ತನೆಗೊಳ್ಳಲಿದೆ. ಪುರುಷರಲ್ಲಿಯೂ ಕೂಡ ಎಚ್‌ಪಿವಿ ಸೋಂಕು ಅಭಿವೃದ್ಧಿ ಆಗುವ ಸಾಧ್ಯತೆ ಇದೆ. ಈ ಸೋಂಕು ಪುರುಷರಿಗೆ ಗುದ ಮತ್ತು ಶಿಶ್ನ ಕ್ಯಾನ್ಸರ್‌ಗೂ (Cervical cancer) ಕಾರಣವಾಗಬಹುದು.

VISTARANEWS.COM


on

Cervical Cancer
Koo

-ಡಾ ನಿತಿ ರೈಜಾಡಾ, ಹಿರಿಯ ನಿರ್ದೇಶಕರು – ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ ಆಂಕೊಲಾಜಿ, ಫೋರ್ಟಿಸ್ ಆಸ್ಪತ್ರೆ
ಇತ್ತೀಚೆಗೆ ಮಹಿಳೆಯರನ್ನು ಅಗಾಧವಾಗಿ ಕಾಡುತ್ತಿರುವ ಕಾಯಿಲೆಗಳ ಪೈಕಿ ಗರ್ಭಕಂಠದ ಕ್ಯಾನ್ಸರ್‌ (Cervical cancer) ಅಥವಾ ಮಾನವ ಪ್ಯಾಪಿಲೋಮ ವೈರಸ್ (HPV) ಕೂಡ ಒಂದು. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ಸೋಂಕು ಕಾಣಿಸಿಕೊಳ್ಳಲಿದೆ. ಮೊದಲೆಲ್ಲಾ ಕೇವಲ ಮಹಿಳೆಯರು ಮಾತ್ರ ಈ ಸೋಂಕಿಗೆ ತುತ್ತಾಗುತ್ತಾರೆ ಎನ್ನಲಾಗುತ್ತಿತ್ತು. ಆದರೆ, ಪುರುಷರೂ ಕೂಡ ಪ್ಯಾಪಿಲೋಮ ವೈರಸ್‌ಗೆ ಒಳಗಾಗುತ್ತಿರುವುದು ಗಮನಾರ್ಹ ವಿಷಯ. ಹೀಗಾಗಿ ಪುರುಷರು ಸಹ ಈ ಕ್ಯಾನ್ಸರ್‌ನಿಂದ ಸಾಕಷ್ಟು ಜಾಗೃತರಾಗಿರಬೇಕು.

Cervical Cancer

ಏನಿದು ಗರ್ಭಕಂಠದ ಕ್ಯಾನ್ಸರ್‌ ಕ್ಯಾನ್ಸರ್‌

ಗರ್ಭಕಂಠದ ಕ್ಯಾನ್ಸರ್‌ ಮಾನವ ಪ್ಯಾಪಿಲೋಮ ವೈರಸ್ (HPV)ನಿಂದ ಹರಡಲಿದೆ. ಪ್ರಾಥಮಿಕವಾಗಿ HPV 16 ಮತ್ತು HPV 18 ಸೋಂಕಿನಿಂದ ಮಾರ್ಪಟ್ಟು ಎಚ್‌ಪಿವಿ ಸೋಂಕಾಗಿ ಗರ್ಭಕಂಠದಲ್ಲಿ ಬೆಳವಣಿಗೆ ಕಾಣಲಿದೆ. ಲೈಂಗಿಕ ಸಂರ್ಪಕದ ವೇಳೆ ಸುರಕ್ಷತೆ ಪಾಲಿಸದಿದ್ದರೆ ಅಥವಾ ಲೈಂಗಿಕ ಕ್ರಿಯೆಯ ಬಳಿಕ ಸ್ವಚ್ಛತೆ ಕಾಪಾಡಿಕೊಳ್ಳದೇ ಹೋದರೇ ಕ್ರಮೇಣ ಈ ಸೋಂಕು ಗರ್ಭಕಂಠದಲ್ಲಿ ಕಾಣಿಸಿಕೊಳ್ಳಲಿದೆ. ಇದಕ್ಕೆ ಚಿಕಿತ್ಸೆ ನೀಡದೇ ಹೋದಲ್ಲಿ ಇದು ಕ್ಯಾನ್ಸರ್‌ ಆಗಿ ಪರಿವರ್ತನೆಗೊಳ್ಳಲಿದೆ. ಪುರುಷರಲ್ಲಿಯೂ ಕೂಡ ಎಚ್‌ಪಿವಿ ಸೋಂಕು ಅಭಿವೃದ್ಧಿ ಆಗುವ ಸಾಧ್ಯತೆ ಇದೆ. ಈ ಸೋಂಕು ಪುರುಷರಿಗೆ ಗುದ ಮತ್ತು ಶಿಶ್ನ ಕ್ಯಾನ್ಸರ್‌ಗೂ ಕಾರಣವಾಗಬಹುದು.

ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣಗಳು

ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾದವರಲ್ಲಿ ಯೋನಿಯಲ್ಲಿ ರಕ್ತಸ್ತ್ರಾವ, ಮೂತ್ರವಿಸರ್ಜನೆ ವೇಳೆ ನೋವು ಅಥವಾ ಉರಿಯೂತ, ಲೈಂಗಿಕ ಸಂಭೋಗ ವೇಳೆ ನೋವು ಇಂತಹ ಲಕ್ಷಣಗಳು ಕಂಡು ಬಂದರೆ, ಇದು ಗರ್ಭಕಂಠದ ಕ್ಯಾನ್ಸರ್‌ ಬೆಳವಣಿಗೆಯಾಗುತ್ತಿರುವ ಮುನ್ಸೂಚನೆಯಾಗಿರಲಿದೆ. ಇದನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದು ಹೆಚ್ಚು ಸೂಕ್ತ. ಇದಕ್ಕಾಗಿ ಪ್ಯಾಪ್ ಸ್ಮೀಯರ್‌ಗಳು ಅಥವಾ HPV ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆರಂಭದಲ್ಲಿಯೇ ಪತ್ತೆ ಹಚ್ಚುವುದರಿಂದ ಎಚ್‌ಪಿವಿ ಸೋಂಕು ಕ್ಯಾನ್ಸರ್‌ ಆಗಿ ಪರಿವರ್ತಿಸುವುದನ್ನು ತಡೆಯಬಹುದು.

ಇದನ್ನೂ ಓದಿ: Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು

ಎಚ್‌ಪಿವಿ ಲಸಿಕೆ ಅಗತ್ಯತೆ

ಗರ್ಭಕಂಠದ ಕ್ಯಾನ್ಸರ್‌ ಅಥವಾ ಎಚ್‌ಪಿವಿ ಸೋಂಕಿನಿಂದ ತಪ್ಪಿಸಿಕೊಳ್ಳಲು ಇದೀಗ ಲಸಿಕೆ ಲಭ್ಯವಿದೆ. ಇತ್ತೀಚೆಗೆ ಭಾರತ ಸರ್ಕಾರ ಕೂಡ ಗರ್ಭಕಂಠದ ಕ್ಯಾನ್ಸರ್‌ಗಾಗಿ ಲಸಿಕೆ ಹಾಕುವುದನ್ನು ಮಾನ್ಯ ಮಾಡಿದೆ.
ಈ ಲಸಿಕೆಯು ಹದಿಹರೆಯದಲ್ಲಿಯೇ ಮಹಿಳೆಯರಿಗೆ ಈ ಲಸಿಕೆ ಹಾಕುವುದರಿಂದ ಈ ಕ್ಯಾನ್ಸರ್ ಬರದಂತೆ ತಡೆಯಬಹುದು. 9 ರಿಂದ 26 ವರ್ಷ ವಯಸ್ಸಿನ ಎಲ್ಲಾ ಸ್ತ್ರೀ ಮತ್ತು ಪುರುಷರು ಲಸಿಕೆಯನ್ನು ಪಡೆದರೆ ಗರ್ಭಕಂಠದ ಕ್ಯಾನ್ಸರ್‌ನ ಭವಿಷ್ಯದ ಅಪಾಯ ಗಮನಾರ್ಹವಾಗಿ ಕಡಿಮೆಯಾಗುತ್ತವೆ. 11-13 ವರ್ಷ ವಯಸ್ಸಿನಲ್ಲಿ ಈ ಲಸಿಕೆ ಪಡೆಯಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಲೈಂಗಿಕ ಜೀವನ ಆರಂಭಿಸಿದ ಬಳಿಕ ಈ ಲಸಿಕೆ ಅಷ್ಟಾಗಿ ಪ್ರಯೋಜನ ಬರುವುದಿಲ್ಲ. ಹೀಗಾಗಿ ಮದುವೆಗೂ ಮುನ್ನವೇ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಈ ಲಸಿಕೆ ಹಾಕಲಾಗುವುದು.

Continue Reading

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್‌ಗೆ ಚಾಲನೆ

Bengaluru News: ಬೆಂಗಳೂರಿನ ಜೆಪಿ ನಗರದಲ್ಲಿ ನೂತನ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್‌ನ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ಆಯುರಾಶ್ರಮದ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಹಾಗೂ ಮಾಜಿ ಕಾರ್ಪೊರೇಟರ್ ನಾಗರತ್ನ ರಾಮಮೂರ್ತಿ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

VISTARANEWS.COM


on

Inauguration of Pushpam Ayurveda Wellness Center in Bengaluru
Koo

ಬೆಂಗಳೂರು: ನಗರದ ಜೆಪಿ ನಗರದಲ್ಲಿ ನೂತನ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್‌ನ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಬೆಂಗಳೂರಿನ ಆಯುರಾಶ್ರಮದ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಹಾಗೂ ಮಾಜಿ ಕಾರ್ಪೊರೇಟರ್ ನಾಗರತ್ನ ರಾಮಮೂರ್ತಿ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ (Bengaluru News) ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿ ಡಾ. ಮೊಹಮ್ಮದ್ ರಫಿ ಹಕೀಂ, ಬೆಂಗಳೂರು ಡಿಎಒ ಡಾ. ಶಹಾಬುದ್ದಿನ್, ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ. ಬಲ್ಲಾಳ ಕೆ.ಸಿ., ಡಾ. ಗಿರಿಧರ್ ಕಜೆ ಮತ್ತು ಇತರ ವೈದ್ಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Samsung: ಕ್ಯೂಎಲ್ಇಡಿ 4ಕೆ ಪ್ರೀಮಿಯಂ ಟಿವಿ ಸರಣಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಸ್ವಾಮಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಪ್ರೈವೇಟ್ ಲಿಮಿಟೆಡ್‌ನ ಘಟಕ ಇದಾಗಿದ್ದು, ಜೆಪಿ ನಗರದ 9ನೇ ಕ್ರಾಸ್ ರಸ್ತೆಯ ತಿರುಮಲಗಿರಿ ದೇವಸ್ಥಾನದ ಮುಂಭಾಗದಲ್ಲಿ ಪುಷ್ಪಮ್ ಆಯುರ್ವೇದ ವೆಲ್‌ನೆಸ್ ಸೆಂಟರ್ ಅನ್ನು ಆರಂಭಿಸಲಾಗಿದೆ.

ಭಾರತೀಯ ಪಾರಂಪರಿಕ ವಿಧಾನಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಡಾ. ರಾಜಶೇಖರ ಭೂಸನೂರಮಠ ಮತ್ತು ಡಾ. ಮಹತಿ ಸಾಹುಕರ್ ಅವರು, ಈ ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: Shira News: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಸಕ ಟಿ.ಬಿ.ಜಯಚಂದ್ರ

ಈ ಆಯುರ್ವೇದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕರ್ನಾಟಕದಲ್ಲಿ ವಿಶೇಷವಾದ ಆಸ್ಪತ್ರೆಯಿದಾಗಿದ್ದು, ತ್ವಚೆ ಆರೈಕೆ, ಗಾಯದ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಸ್ತ್ರೀರೋಗ, ಡಿಟಾಕ್ಸ್, ಮಾನಸಿಕ, ವಿಶೇಷ ಚಿಕಿತ್ಸೆಗಳು ಮತ್ತು ಸಾಮಾನ್ಯ ಚಿಕಿತ್ಸೆಗಳನ್ನು ನಡೆಸುವ ವಿವಿಧ ವಿಭಾಗಗಳನ್ನು ಹೊಂದಿದೆ. ಜನರು ಆರೋಗ್ಯದ ಉತ್ತಮ ಲಾಭಗಳನ್ನು ಪಡೆಯಲು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಡಾ. ಭೂಸನೂರಮಠ ತಿಳಿಸಿದ್ದಾರೆ.

Continue Reading

ಆರೋಗ್ಯ

Health Benefits of Mango Leaves: ಮಾವಿನೆಲೆಗಳು ತೋರಣ ಕಟ್ಟಲಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು!

ಮಾವಿನೆಲೆ ಎನ್ನುತ್ತಿದ್ದಂತೆ ತೋರಣಗಳೇ ನೆನಪಾಗುತ್ತವೆ ನಮಗೆ. ಮನೆಯಲ್ಲಿ ಯಾವುದೇ ಶುಭಕಾರ್ಯವಿದ್ದರೆ ಹಬ್ಬವಾಗಲೀ ಹರಿದಿನವಾಗಲಿ, ಮಾವಿನ ತೋರಣವಿದ್ದರೆ ಶೋಭೆ. ಕಳಶಗಳಿಗೆ ಮಾವಿನೆಲೆ ಬೇಕು. ಒಳ್ಳೆಯ ಕೆಲಸಗಳು ಏನೇ ಇದ್ದರೂ ಅದಕ್ಕೆ ಮಾವಿನೆಲೆ ಇಲ್ಲದಿದ್ದರಾಗದು. ಇದಕ್ಕಿಂತ ಹೆಚ್ಚಿನ ಉಪಯೋಗಗಳು (Health Benefits of Mango Leaves) ಮಾವಿನೆಲೆಗಳಿಗೆ ಏನಿವೆ?

VISTARANEWS.COM


on

Health Benefits of Mango Leaves
Koo

ಇದು ಮಾವಿನ ಕಾಲ. ಹಾಗೆನ್ನುತ್ತಿದ್ದಂತೆ ಮಾವಿನ ಹಣ್ಣಿನ ಘಮ್ಮೆನ್ನುವ ಪರಿಮಳ, ರುಚಿಯೆಲ್ಲ ನೆನಪಾಗಿ ಬಾಯಲ್ಲಿ ನೀರೂರುತ್ತದೆ. ಮಾವಿನ ಹಣ್ಣಿಗಾದರೆ ಇದೊಂದೇ ಋತುವಿಗೆ ಕಾಯಬೇಕು. ಆದರೆ ಮಾವಿನ ಎಲೆಗಳ ಉಪಯೋಗಕ್ಕೆ ವರ್ಷವಿಡೀ ಒಳ್ಳೆಯ ಕಾಲ. ಆದರೆ ಹಣ್ಣಿಗಿರುವ ಉಪಯೋಗ ಮಾವಿನ ಎಲೆಗಳಿಗೆ ಇಲ್ಲವಲ್ಲ. ಹಾಗಿರುವಾಗ ವರ್ಷವಿಡೀ ಎಲೆ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಯೋಚಿಸಬೇಡಿ. ಮಾವಿನ ಎಲೆಗಳಲ್ಲಿ ಉಪ್ಪಿನಕಾಯಿ ಹಾಕುವುದೋ ಸೀಕರಣೆ ಮಾಡುವುದೋ ಆಗದಿದ್ದರೂ, ಅದಕ್ಕೂ ತನ್ನದೇ ಆದ ಉಪಯೋಗಗಳಿವೆ. ಏನವು Health (Benefits of Mango Leaves) ಎಂಬುದನ್ನು ಗಮನಿಸೋಣ. ಮಾವಿನೆಲೆ ಎನ್ನುತ್ತಿದ್ದಂತೆ ತೋರಣಗಳೇ ನೆನಪಾಗುತ್ತವೆ ನಮಗೆ. ಮನೆಯಲ್ಲಿ ಯಾವುದೇ ಶುಭಕಾರ್ಯವಿದ್ದರೂ ಒಂದು ಮಾವಿನ ತೋರಣ, ಹಸಿರು ಚಪ್ಪರ ಆಗಲೇ ಬೇಕು. ಹಬ್ಬವಾಗಲೀ ಹರಿದಿನವಾಗಲಿ, ಮಾವಿನ ತೋರಣವಿದ್ದರೆ ಶೋಭೆ. ಕಳಶಗಳಿಗೆ ಮಾವಿನೆಲೆ ಬೇಕು. ಯಾವುದೋ ದೇವರ ಪ್ರತಿಷ್ಠಾಪನೆ, ಪೂಜೆ ಇದ್ದರೆ ಅದಕ್ಕೂ ಮಾವಿನೆಲೆ ಅಗತ್ಯ. ಒಳ್ಳೆಯ ಕೆಲಸಗಳು ಏನೇ ಇದ್ದರೂ ಅದಕ್ಕೆ ಮಾವಿನೆಲೆ ಇಲ್ಲದಿದ್ದರಾಗದು. ಹೀಗೆ ಧರ್ಮ, ಸಂಪ್ರದಾಯ, ಸಂಸ್ಕೃತಿಯ ಉತ್ಸವಗಳಿಗೆ ಮಾವಿನೆಲೆ ಅಲಂಕಾರಕ್ಕೂ ಬೇಕು, ಅಗತ್ಯಕ್ಕೂ ಸೈ. ಇದಕ್ಕಿಂತ ಹೆಚ್ಚು ಇನ್ನೇನು?
ಕೆಲವು ಬಗೆಯ ಸಾಂಪ್ರದಾಯಿಕ ಔಷಧಿಗಳಿಗೆ ಮಾವಿನೆಲೆ ಅಗತ್ಯ. ಬೆಳಗ್ಗೆ ಏಳುತ್ತಿದ್ದಂತೆ, ಮಾವಿನೆಲೆಯನ್ನು ಹಲ್ಲುಜ್ಜುವುದಕ್ಕೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದರು. ಚಿಗುರೆಲೆಗಳನ್ನು ಕಷಾಯ ಮಾಡಿ, ಅದನ್ನು ಹಲವು ಸಮಸ್ಯೆಗಳಿಗೆ ಮದ್ದಾಗಿ ಉಪಯೋಗಿಸುತ್ತಿದ್ದರು. ಜೀರ್ಣಾಂಗಗಳ ಸಮಸ್ಯೆ ಇದ್ದರೆ, ಮಧುಮೇಹ ನಿಯಂತ್ರಣಕ್ಕೆ, ಕೆಲವು ಬಗೆಯ ಶ್ವಾಸಕೋಶದ ತೊಂದರೆಗಳಿಗೆಲ್ಲ ಮಾವಿನೆಲೆ ಕಷಾಯವನ್ನು ಔಷಧಿಯಾಗಿ ಬಳಸುತ್ತಿದ್ದರು. ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಈ ಎಲೆಗಳು ಒಟ್ಟಾರೆ ದೇಹಸ್ವಾಸ್ಥ್ಯಕ್ಕೆ ಅನುಕೂಲ ಒದಗಿಸುತ್ತವೆ.

Obese male suffering from chest pain high blood pressure cholesterol level Sesame Benefits

ಕೊಲೆಸ್ಟ್ರಾಲ್‌ ಕಡಿತ

ಮಾವಿನೆಲೆಯನ್ನು ಗ್ರೀನ್‌ ಟೀ ರೀತಿಯಲ್ಲಿ ಅಥವಾ ಕಷಾಯದ ರೀತಿಯಲ್ಲಿ ಔಷಧಿಗಾಗಿ ಉಪಯೋಗಿಸುವ ವಾಡಿಕೆಯಿದೆ. ಇದನ್ನು ಕೊಲೆಸ್ಟ್ರಾಲ್‌ ಕಡಿಮೆ ಮಾಡುವುದಕ್ಕೆ ಬಳಸಲಾಗುತ್ತದೆ. ಇದರಲ್ಲಿರುವ ಮ್ಯಾಗ್ನಿಫೆರಿನ್‌ ಮತ್ತು ಕ್ವೆರ್ಸೆಟಿನ್‌ ಎಂಬ ಸಂಯುಕ್ತಗಳು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವನ್ನು ಹೊಂದಿವೆ. ಜೀರ್ಣಾಂಗಗಳಲ್ಲಿ ಕೊಲೆಸ್ಟ್ರಾಲ್‌ ಹೀರಲ್ಪಡದೆ ಇರುವಂತೆ, ಈ ಕೊಬ್ಬು ದೇಹದಿಂದ ಹೊರ ಹೋಗುವಂತೆ ಮಾಡುತ್ತವೆ. ಈ ಮೂಲಕ ಹೃದಯದ ಆರೋಗ್ಯ ಚೆನ್ನಾಗಿರುವಂತೆ ಮಾಡುತ್ತವೆ.

Diabetes management Daruharidra Benefits

ಮಧುಮೇಹ ನಿಯಂತ್ರಣ

ಮಾವಿನೆಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವು ರೋಗ ನಿಯಂತ್ರಣದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದರಲ್ಲಿರುವ ಮ್ಯಾಗ್ನಿಫೆರಿನ್‌ ಅಂಶವು ಮಧುಮೇಹ ನಿಯಂತ್ರಣಕ್ಕೆ ನೆರವಾಗಬಲ್ಲವು. ಇದು ದೇಹದಲ್ಲಿ ನೈಸರ್ಗಿಕವಾಗಿ ಇನ್‌ಸುಲಿನ್‌ ಉತ್ಪಾದನೆಯನ್ನು ಹೆಚ್ಚಿಸಲು ಯತ್ನಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗುತ್ತದೆ.

healthy internal organs of human digestive system

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ಪಚನಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧ್ಯತೆ ಈ ಎಲೆಗಳಿಗಿದೆ. ಡಯರಿಯಾದಂಥ ತೊಂದರೆಗಳಿದ್ದಾಗ ಇದನ್ನು ಮದ್ದಾಗಿ ಬಳಸುವ ಅಭ್ಯಾಸ ಕೆಲವೆಡೆಗಳಲ್ಲಿದೆ. ಜೊತೆಗೆ ದೇಹದ ಚಯಾಪಚಯ ಹೆಚ್ಚು ಮಾಡುವ ಗುಣವಿದೆ ಇದಕ್ಕೆ. ಹಾಗಾಗಿ ಅಜೀರ್ಣದಂಥ ತೊಂದರೆಗಳು ಬಗೆಹರಿಯಬಹುದು. ಜೊತೆಗೆ, ತೂಕ ಇಳಿಕೆಗೆ ಸ್ವಲ್ಪ ನೆರವೂ ನೀಡಬಹುದು.

Doctor listens to the human lungs

ಶ್ವಾಸಕೋಶ ಸಬಲ

ಕಫ, ಕೆಮ್ಮು, ದಮ್ಮಿನಂಥ ತೊಂದರೆಗಳ ನಿವಾರಣೆಗೆ ಮಾವಿನೆಲೆ ಉಪಯುಕ್ತ. ಶ್ವಾಸನಾಳದಲ್ಲಿ ಬಿಗಿದಿರುವ ಕಫವನ್ನು ಸಡಿಲಿಸಿ, ಕೆಮ್ಮು ಕಡಿಮೆ ಮಾಡುವ ಗುಣಗಳು ಇದಕ್ಕಿವೆ. ಕಫ ಹೆಚ್ಚಾಗಿದ್ದರಿಂದ ಕಾಡುವ ದಮ್ಮು ಮತ್ತು ಉಸಿರಾಟದ ತೊಂದರೆಗಳನ್ನು ಈ ಮೂಲಕ ಮಾವಿನೆಲೆಗಳು ಕಡಿಮೆ ಮಾಡುತ್ತವೆ.

ಇದನ್ನೂ ಓದಿ: Shikakai For Hair: ತಲೆ ಕೂದಲಿಗೆ ಶ್ಯಾಂಪೂ ಒಳ್ಳೆಯದೋ ಸೀಗೆಕಾಯಿ ಸೂಕ್ತವೋ?

ಉತ್ಕರ್ಷಣ ನಿರೋಧಕಗಳು

ಇದರಲ್ಲಿ ಫ್ಲೆವನಾಯ್ಡ್‌ಗಳು, ಫೆನಾಲ್‌ಗಳು ಮತ್ತು ಆಸ್ಕಾರ್ಬಿಕ್‌ ಆಮ್ಲ (ವಿಟಮಿನ್‌ ಸಿ)ಯಂಥ ಉರಿಯೂತ ಶಾಮಕಗಳು ಹೇರಳವಾಗಿವೆ. ಇದರಿಂದ ಶರೀರದಲ್ಲಿ ಅಂಡಲೆಯುವ ಮುಕ್ತ ಕಣಗಳನ್ನು ಹಿಡಿತಕ್ಕೆ ತರಬಹುದು. ಜೊತೆಗೆ ಹೃದಯ ತೊಂದರೆಗಳು, ಮಧುಮೇಹ ಮತ್ತು ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ದೂರ ಇರಿಸಬಹುದು.

Continue Reading
Advertisement
Shakti Scheme
ಕರ್ನಾಟಕ1 min ago

Shakti Scheme: ಉಚಿತ ಪ್ರಯಾಣದ ಶಕ್ತಿ ಯೋಜನೆಗೆ 1 ವರ್ಷ; ಖರ್ಚಾಗಿದ್ದೆಷ್ಟು? ಉಪಯೋಗ ಪಡೆದವರೆಷ್ಟು?

Somnath Bharti
Lok Sabha Election 202431 mins ago

Somnath Bharti: ಮೋದಿ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಆಪ್‌ ನಾಯಕ ಯೂ ಟರ್ನ್‌; ನೀಡಿದ ಸಮರ್ಥನೆ ಏನು?

Tax Devolution
ಕರ್ನಾಟಕ33 mins ago

Tax Devolution: ರಾಜ್ಯಗಳಿಗೆ 1.39 ಲಕ್ಷ ಕೋಟಿ ರೂ. ಹಂಚಿದ ಮೋದಿ ಸರ್ಕಾರ; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

Modi 3.0 Cabinet
ದೇಶ1 hour ago

Modi 3.0 Cabinet: ಮೈತ್ರಿ ಸರ್ಕಾರದಲ್ಲೂ ಮೋದಿಯದ್ದೇ ಪ್ರಾಬಲ್ಯ; 4 ಪ್ರಮುಖ ಖಾತೆಗಳು ಬಿಜೆಪಿ ಪಾಲು!

Karnataka Weather Forecast
ಮಳೆ2 hours ago

Karnataka Weather : ಬೆಂಗಳೂರಲ್ಲಿ ಭಾರಿ ಮಳೆ ಎಚ್ಚರಿಕೆ; ಮುಕ್ಕಾಲು ಕರ್ನಾಟಕಕ್ಕೆ ರೆಡ್‌ ಅಲರ್ಟ್‌

Menopause
ಆರೋಗ್ಯ2 hours ago

Menopause: ಮಹಿಳೆಯರೇ, ಈ ಸಮಸ್ಯೆಗಳು ಕಾಣಿಸುತ್ತಿವೆಯೇ?; ಹಾಗಿದ್ದರೆ ನಿಮ್ಮ ಮೆನೋಪಾಸ್‌ ಸಮೀಪದಲ್ಲಿದೆ ಎಂದರ್ಥ!

Yuva Rajkumar
ಕರ್ನಾಟಕ2 hours ago

Yuva Rajkumar: ಕಾಂತಾರ ಕ್ವೀನ್‌ ಸಪ್ತಮಿ ಗೌಡ ಜತೆ ಯುವ ರಾಜ್‌ಕುಮಾರ್‌ ಸಂಬಂಧ; ಪತ್ನಿ ಶ್ರೀದೇವಿ ಆರೋಪ

Cervical Cancer
ಆರೋಗ್ಯ3 hours ago

Cervical Cancer: ಮಹಿಳೆಯರ ಗರ್ಭಕಂಠದ ಕ್ಯಾನ್ಸರ್‌; ಪುರುಷರಿಗೂ ಇದೆ ಅಪಾಯ!

Dina Bhavishya
ಭವಿಷ್ಯ3 hours ago

Dina Bhavishya : ಹೇಳಿಕೆಯ ಮಾತುಗಳು ಕುಟುಂಬದ ವಾತಾವರಣ ಕೆಡಿಸುವುದು ಎಚ್ಚರಿಕೆ ಇರಲಿ!

Yuva Rajkumar
ಕರ್ನಾಟಕ8 hours ago

Yuva Rajkumar: ‘ಅನೈತಿಕ ಸಂಬಂಧ’ ಎಂದು ಯುವ ಪರ ವಕೀಲ ಆರೋಪ; ತಿರುಗೇಟು ಕೊಟ್ಟ ಶ್ರೀದೇವಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ16 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

ಟ್ರೆಂಡಿಂಗ್‌