Millets For Health: ಸಿರಿಧಾನ್ಯಗಳನ್ನು ನಾವು ಏಕೆ ತಿನ್ನಬೇಕೆಂದರೆ… - Vistara News

ಆರೋಗ್ಯ

Millets For Health: ಸಿರಿಧಾನ್ಯಗಳನ್ನು ನಾವು ಏಕೆ ತಿನ್ನಬೇಕೆಂದರೆ…

ಪ್ರೊಟೀನ್‌, ಸಂಕೀರ್ಣ ಪಿಷ್ಟಗಳು, ನಾರು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವ ಈ ಧಾನ್ಯಗಳ ಸೇವನೆಯು ಆರೋಗ್ಯ ರಕ್ಷಣೆಗೆ, ತೂಕ ಇಳಿಕೆಗೆ, ಪ್ರತಿರೋಧಕತೆ ಹೆಚ್ಚಳಕ್ಕೆ ಅತ್ತ್ಯುತ್ತಮ ಮಾರ್ಗ. ಹಾಗಾದರೆ ಇನ್ನೂ (Millets For Health) ಏನೇನಿವೆ ಇದರಲ್ಲಿ?

VISTARANEWS.COM


on

Millets For Health
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಊಟ ಅವರವರ ಇಷ್ಟಕ್ಕೆ ಸಂಬಂಧಿಸಿದ್ದು. ಅದನ್ನು ಬೇರೆಯವರು ಪ್ರಶ್ನಿಸುವಂತಿಲ್ಲ. ಕೆಲವೊಮ್ಮೆ ನೀಡುವ ಸಲಹೆಗಳೂ ಅನಗತ್ಯ ಎನಿಸಬಹುದು. ಆದರೂ ಸಿರಿ ಧಾನ್ಯಗಳ ಬಗ್ಗೆ ಲೋಕದಲ್ಲಿ ಇಷ್ಟೊಂದು ಚರ್ಚೆ ನಡೆಯುತ್ತಿರುವಾಗ, ʻಅವುಗಳನ್ನು ತಿನ್ನುವುದು ಒಳ್ಳೆಯದುʼ ಎನ್ನುವುದಕ್ಕಿಂತ ಬೇರೆ ಕಾರಣಗಳು ಇವೆಯೇ? ಏನು ಪ್ರಯೋಜನ ನಮಗದನ್ನು ತಿನ್ನುವುದರಿಂದ? ಏನಿದೆ ಅದರಲ್ಲಿ? ಅವುಗಳನ್ನು ತಿಂದರೆ ಮಾತ್ರ ಆರೋಗ್ಯದ ಬಗ್ಗೆ ಕಾಳಜಿ ಇದೆಯೆಂದು (Millets For Health) ಅರ್ಥವೇ?

millets

ಹಿಂದಿನಿಂದಲೂ ಇದೆ

ಭಾರತದಲ್ಲಿ ಹಿಂದಿನಿಂದಲೂ ಪ್ರಮುಖ ಬೆಳೆಯಾಗಿ ಇದ್ದಿದ್ದು ಸಿರಿಧಾನ್ಯಗಳೇ. ಸಜ್ಜೆ, ರಾಗಿ, ನವಣೆ, ಜೋಳ, ಹಾರಕ, ಊದಲು, ಬರಗು, ಸಾಮೆ, ಕೊರ್ಲೆಯಂಥ ಕಿರುಧಾನ್ಯಗಳು ಜನಗಳ ಮುಖ್ಯ ಆಹಾರವಾಗಿದ್ದವು. ಮಳೆಯಾಧಾರಿತ ಕೃಷಿಯೇ ಪ್ರಮುಖವಾಗಿದ್ದ ನಾಡಿನಲ್ಲಿ, ಇವು ಎಂಥಾ ಬರಗಾಲವನ್ನೂ ಸಹಿಸಿ ಬೆಳೆಯುವಂಥ ಗಟ್ಟಿ ಗುಣವುಳ್ಳವು. ಹಾಗಾಗಿಯೇ ಇವುಗಳನ್ನು ತಿಂದವರೂ ನಿರೋಗಿಗಳಾಗಿ ಇರುತ್ತಿದ್ದರು. ನಂತರ ನೀರಾವರಿ ಎಲ್ಲೆಡೆ ಹರಡಿದ ಮೇಲೆ ಅಕ್ಕಿ, ಗೋದಿಯಂಥ ಧಾನ್ಯಗಳ ಕೃಷಿ ಪ್ರಾರಂಭವಾಯಿತು. ಅಲ್ಲಿಂದ ಮುಂದೆ ಈ ಸಿರಿಧಾನ್ಯಗಳು ಮೂಲೆಗುಂಪಾದವು. ಆದರೀಗ ಅವುಗಳ ಮಹತ್ವ ಮತ್ತೆ ಜನರ ಅರಿವಿಗೆ ಬರತೊಡಗಿದೆ. ಹಾಗಾಗಿ ಹೆಚ್ಚೆಚ್ಚು ಜನ ಸಿರಿಧಾನ್ಯಗಳ ಕಡೆಗೆ ವಾಲುತ್ತಿದ್ದಾರೆ. ಪ್ರೊಟೀನ್‌, ಸಂಕೀರ್ಣ ಪಿಷ್ಟಗಳು, ನಾರು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವ ಈ ಧಾನ್ಯಗಳ ಸೇವನೆಯು ಆರೋಗ್ಯ ರಕ್ಷಣೆಗೆ, ತೂಕ ಇಳಿಕೆಗೆ, ಪ್ರತಿರೋಧಕತೆ ಹೆಚ್ಚಳಕ್ಕೆ ಅತ್ತ್ಯುತ್ತಮ ಮಾರ್ಗ. ಹಾಗಾದರೆ ಇನ್ನೂ ಏನೇನಿವೆ ಇದರಲ್ಲಿ?

ಸತ್ವಗಳು

ಸಂಕೀರ್ಣ ಪಿಷ್ಟ, ನಾರು, ಖನಿಜಗಳು, ಪ್ರೊಟೀನ್‌ ಮತ್ತು ಉತ್ಕರ್ಷಣ ನಿರೋಧಕಗಳು ಇವುಗಳಲ್ಲಿ ಮುಖ್ಯವಾಗಿವೆ. ಅಂದರೆ ಅಮೈನೊ ಆಮ್ಲಗಳು, ಕ್ಯಾಲ್ಶಿಯಂ, ಕಬ್ಬಿಣ, ಮೆಗ್ನೀಶಿಯಂನಂಥ ಖನಿಜಗಳು, ನಾನಾ ರೀತಿಯ ವಿಟಮಿನ್‌ಗಳು ಇವುಗಳಲ್ಲಿ ಸಾಂದ್ರವಾಗಿರುತ್ತವೆ. ಜೊತೆಗೆ ಯಾವುದೇ ಸಿರಿಧಾನ್ಯದಲ್ಲೂ ನಾರು ಹೇರಳವಾಗಿದೆ. ಈ ಎಲ್ಲ ಸತ್ವಗಳು ನಮ್ಮ ಸ್ವಾಸ್ಥ್ಯ ಸುಧಾರಣೆಗೆ ಬೇಕಾದಂಥವು.

Millets

ರುಚಿಕರ

ಒಂದೊಂದು ಧಾನ್ಯಕ್ಕೂ ಅದರದ್ದೇ ಆದ ಅನನ್ಯ ರುಚಿಯಿದೆ. ಹಾಗಾಗಿ ರೊಟ್ಟಿ, ಮುದ್ದೆ, ದೋಸೆ, ಇಡ್ಲಿ, ಉಪ್ಪಿಟ್ಟು, ಖಿಚಡಿ, ಭಾತ್‌ಗಳು, ಹಲ್ವಾ, ಪಾಯಸ, ಕುಕಿ, ಕೇಕ್‌ ಮುಂತಾದ ಯಾವುದನ್ನೇ ಮಾಡಿದರೂ ರುಚಿಗೆ ಮೋಸವಿಲ್ಲ. ಇದಾವುದಕ್ಕೂ ಸಮಯವಿಲ್ಲ ಎಂದರೆ, ಅನ್ನದ ಬದಲು ಇವುಗಳನ್ನು ಉಪಯೋಗಿಸಿದರೂ ಸಾಕು, ಸತ್ವಗಳು ದೇಹ ಸೇರುತ್ತವೆ.

ಗ್ಲೂಟೆನ್‌ ಮುಕ್ತ

ಗೋದಿಯಂಥ ಗ್ಲೂಟೆನ್‌ ಅಂಶವಿರುವ ತಿನಿಸುಗಳಿಗೆ ಹಲವಾರು ಜನರಿಗೆ ತೊಂದರೆ ಕೊಡುತ್ತವೆ. ಜೀರ್ಣಾಂಗಗಳ ಸಮಸ್ಯೆ, ಸತ್ವಗಳನ್ನು ಹೀರಿಕೊಳ್ಳುವಲ್ಲಿನ ತೊಂದರೆ… ಇವೆಲ್ಲ ಗ್ಲೂಟೆನ್‌ ಅಲರ್ಜಿ ಇದ್ದವರಲ್ಲಿ ಕಾಣಬಹುದು. ಆದರೆ ಸಿರಿಧಾನ್ಯಗಳಲ್ಲಿ ಗ್ಲೂಟೆನ್‌ ಇಲ್ಲ. ಹಾಗಾಗಿ ರುಚಿಕರ, ಆರೋಗ್ಯಕರ ಆಹಾರದ ಸೇವನೆಯಿಂದ ಅವರೂ ಸುಖವಾಗಿ ಇರಬಹುದು.

Millets

ರೋಗ ದೂರ

ಮಧುಮೇಹಿಗಳಿಗೆ ಇದು ಅತ್ತ್ಯುತ್ತಮ ಆಹಾರ. ಇದರ ಸಂಕೀರ್ಣ ಪಿಷ್ಟ ಮತ್ತು ನಾರಿನಂಶ ರಕ್ತದಲ್ಲಿ ಸಕ್ಕರೆಯ ಮಟ್ಟ ತ್ವರಿತವಾಗಿ ಏರಿಕೆ ಆಗದಂತೆ ತಡೆಯುತ್ತವೆ. ಇದೇ ಅಂಶಗಳಿಂದಾಗಿ ದೀರ್ಘ ಕಾಲದವರೆಗೆ ಹಸಿವಾಗದೆ, ಶಕ್ತಿಯೂ ನಿರಂತರ ಪೂರೈಕೆಯಾಗುತ್ತಲೇ ಇರುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಸೂಕ್ತವಾದ ಆಹಾರವಿದು. ಜೊತೆಗೆ ಇದರ ಉತ್ಕರ್ಷಣ ನಿರೋಧಕಗಳು ರಕ್ತದೊತ್ತಡದಂಥ ಜೀವನಶೈಲಿಯ ಕಾಯಿಲೆಗಳನ್ನು ದೂರ ಮಾಡುತ್ತವೆ; ಹೃದಯ, ಮೆದುಳುಗಳನ್ನು ಕ್ಷೇಮವಾಗಿ ಇರಿಸುತ್ತವೆ.

ಪರಿಸರಸ್ನೇಹಿ

ಬರಗಾಲಕ್ಕೂ ಬಗ್ಗುವಂಥ ಧಾನ್ಯಗಳಲ್ಲ ಇವು. ಜೊತೆಗೆ ಕೀಟದ ಕಾಟ, ರೋಗಬಾಧೆಗಳೂ ಕಡಿಮೆ ಇವುಗಳಿಗೆ. ಹಾಗಾಗಿ ಅಕ್ಕಿ, ಗೋದಿಯಂಥ ಧಾನ್ಯಗಳಿಗೆ ಉಪಯೋಗಿಸಿದಂತೆ ರಾಸಾಯನಿಕಗಳು, ಕೀಟನಾಶಕಗಳ ಬಳಕೆಯ ಅಗತ್ಯವೇ ಇಲ್ಲ ಈ ಧಾನ್ಯಗಳಿಗೆ. ಹಾಗಾಗಿ ನಮ್ಮ ಆರೋಗ್ಯಕ್ಕೆ ಇವು ಎಷ್ಟು ಹಿತವೋ ಪರಿಸರಕ್ಕೂ ಅಷ್ಟೇ ಹಿತ. ಜಲ, ಮಣ್ಣು ಮತ್ತು ಗಾಳಿಯ ಮಾಲಿನ್ಯವನ್ನು ಇದರಿಂದ ತಪ್ಪಿಸಬಹುದು.

ಇದನ್ನೂ ಓದಿ: Benefits Of Ginger: ಶುಂಠಿ ಅಡುಗೆಗೆ ಮಾತ್ರವಲ್ಲ, ಆರೋಗ್ಯಕರ ಜೀವನಕ್ಕೂ ಸಿದ್ಧೌಷಧ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bengaluru News: ನಕಲಿ ವೈದ್ಯರ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ: ಶರಣಪ್ರಕಾಶ್‌ ಪಾಟೀಲ್‌

Bengaluru News: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಬಿಗಿಯಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Minister Dr.Sharanaprakash patil spoke in World Homeopathy Day Celebration and Seminar Programme in Bengaluru
Koo

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಬಿಗಿಯಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಎಚ್ಚರಿಕೆ (Bengaluru News) ನೀಡಿದ್ದಾರೆ.

ಕರ್ನಾಟಕ ಖಾಸಗಿ ಹೋಮಿಯೋಪಥಿಕ್‌ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಸಂಘದ ವತಿಯಿಂದ ಡಾ.ಬಿಆರ್‌.ಅಂಬೇಡ್ಕರ್‌ ಭವನದಲ್ಲಿ ಬುಧವಾರ ಹಮಿಕೊಂಡಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ನಕಲಿ ವೈದ್ಯರ ಹಾವಳಿ ವ್ಯಾಪಕವಾಗಿ ಕೇಳಿಬರುತ್ತಿದೆ. ಯಾವುದೇ ವೈದ್ಯಕೀಯ ಕೋರ್ಸ್‌ ಮುಗಿಸದೆ ಇರುವವರು ಎಲ್ಲೆಂದರಲ್ಲಿ ಕ್ಲಿನಿಕ್‌ಗಳನ್ನು ತೆರೆದು ಚಿಕಿತ್ಸೆ ನೀಡುತ್ತಾರೆ. ಇದರ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ ಎಂದು ಹೇಳಿದರು.

ಇದನ್ನೂ ಓದಿ: Money Guide: ಪಿಎಫ್‌ ಅಕೌಂಟ್‌ಗೆ ಹೊಸ ಮೊಬೈಲ್‌ ನಂಬರ್‌ ಸೇರಿಸಿಬೇಕೆ? ಜಸ್ಟ್‌ ಹೀಗೆ ಮಾಡಿ ಸಾಕು

ಗ್ರಾಮೀಣ ಭಾಗದ ಜನರ ಅಮಾಯಕತೆಯನ್ನು ಕೆಲವರು ದುರುಪಯೋಗಪಡಿಸಿಕೊಂಡು ನಕಲಿ ಚಿಕಿತ್ಸೆ ನೀಡುತ್ತಾರೆ. ಇದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಕೆಲವರು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಮುಂದೆ ಇದಕ್ಕೆ ಶಾಶ್ವತವಾದ ಕಡಿವಾಣ ಬೀಳಲಿದೆ ಎಂದರು.

ಇದನ್ನೂ ಓದಿ: Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

ಕೇವಲ ಸರ್ಕಾರದಿಂದ ಮಾತ್ರ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಇದಕ್ಕೆ ಹೋಮಿಯೋಪಥಿಕ್‌ ವೈದ್ಯಕೀಯ ಮಹಾವಿದ್ಯಾಲಯಗಳ ಸಂಘದ ಸಹಭಾಗಿತ್ವವೂ ಅಷ್ಟೇ ಮುಖ್ಯ ಎಂದು ತಿಳಿಸಿದ ಸಚಿವರು, ಹೋಮಿಯೋಪತಿ ವೈದ್ಯರು ನಮ್ಮ ಜತೆ ಕೈ ಜೋಡಿಸಿದರೆ ಇಂಥ ದಂಧೆಯನ್ನು ತಡೆಗಟ್ಟಬಹುದು. ಕೆಲವು ಸಂದರ್ಭಗಳಲ್ಲಿ ನಕಲಿ ವೈದ್ಯರುಗಳಿಂದ ಅಮಾಯಕರ ಪ್ರಾಣಕ್ಕೂ ಕುತ್ತು ಬಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.‌

ಹೋಮಿಯೋಪತಿ ಹಾಗೂ ಅಲೋಪತಿ ಬ್ರಿಜ್ ಕೋರ್ಸ್ (bridge course) ಮಾಡಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಇದೇ ಸಂದರ್ಭದಲ್ಲಿ ಸಚಿವರಿಗೆ ಸಂಘದ ವತಿಯಿಂದ ಮನವಿ ಮಾಡಲಾಯಿತು. ಇದಕ್ಕೆ ಸಚಿವರು, ಈ ಸಮಸ್ಯೆ ಇತ್ಯರ್ಥವಾಗಬೇಕಾದರೆ ಹೋಮಿಯೋಪತಿ ವೈದ್ಯರ ಸಂಘದವರು ರಾಷ್ಟ್ರೀಯ ವೈದ್ಯಕೀಯ ಆಯೋಗ ಹಾಗು ಕೇಂದ್ರ ಸರ್ಕಾರಕ್ಕೆ ಮನವಿ ಕೊಡಬೇಕು ಎಂದು ಸಲಹೆ ಮಾಡಿದರು. ಅಂತಿಮವಾಗಿ ಇದನ್ನು ಕೇಂದ್ರವೇ ನಿರ್ಧರಿಸಬೇಕಾಗಿರುವುದರಿಂದ ರಾಜ್ಯ ಸರ್ಕಾರದ ಪಾತ್ರ ಇದರಲ್ಲಿ ಏನೂ ಇಲ್ಲ ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಹೋಮಿಯೋಪತಿಯ ಪ್ರತಿನಿಧಿಯೊಬ್ಬರನ್ನು ಸಿಂಡಿಕೇಟ್ ಸದಸ್ಯನಾಗಿ ನೇಮಿಸಬೇಕೆಂದು ಸಂಘದ ಪ್ರತಿನಿಧಿಗಳು ಮನವಿ ಮಾಡಿದರು. ಇದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಶರಣಪ್ರಕಾಶ್‌ ಪಾಟೀಲ್‌, ಈ ಕುರಿತು ವಿಶ್ವವಿದ್ಯಾನಿಲಯದ ಕುಲಪತಿಗಳ ಜತೆ ಮಾತುಕತೆ ನಡೆಸುವ ಆಶ್ವಾಸನೆಯನ್ನು ನೀಡಿದರು.

ಇದನ್ನೂ ಓದಿ: Kalaburagi News: ಜೂ.14ರಂದು ಸಿಎಂ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ

ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌, ಹೋಮಿಯೋಪಥಿಕ್‌ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಸಂಘದ ಪ್ರಮುಖರಾದ ವಿನೋದ್‌ ದೊಡ್ಡಣ್ಣನವರ್‌, ಕೆ.ಚಂದ್ರಶೇಖರ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Continue Reading

ಆರೋಗ್ಯ

Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

ಪ್ರತಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ ಸಿ ಅಂಶದಿಂದ ತುಂಬಿ ತುಳುಕಾಡುವ ಸೀಬೆ ಹಣ್ಣು ಬಹಳ ಮಂದಿಗೆ ಪ್ರಿಯವಾದದ್ದು. ಇದು ಬಾಯಿ ರುಚಿಗೆ ಮಾತ್ರವೇ ಅಲ್ಲ, ಆರೋಗ್ಯಕಾರಿ ಗುಣಗಳಿಗಾಗಿಯೂ ಪ್ರಸಿದ್ಧವಾಗಿದೆ. ಇದರಲ್ಲಿ ವಿಟಮಿನ್‌ ಎ, ಸಿ, ನಾರು ಮತ್ತು ಪೊಟಾಶಿಯಂನಂಥ ಖನಿಜಗಳು ಸಾಕಷ್ಟಿವೆ. ಜೊತೆಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು (Benefits Of Eating Guava) ಒದಗಿಸಬಲ್ಲದು.

VISTARANEWS.COM


on

Benefits Of Eating Guava
Koo

ಸೀಬೆಕಾಯಿಗೆ ಸಾಮಾನ್ಯವಾಗಿ ಎರಡು ಋತುಗಳಿವೆ. ಅಂದರೆ ವರ್ಷಕ್ಕೆರಡು ಬಾರಿ ಇದು ದೊರೆಯುತ್ತದೆ. ಮಕ್ಕಳಿಂದ ವೃದ್ಧರಾದಿಯಾಗಿ ಕರೆದು ಕೊಟ್ಟರೂ, ಸೀಬೆಯನ್ನು ಕದ್ದು ತಿನ್ನುವುದೇ ಪ್ರಿಯವಾದ್ದರಿಂದ ಹೀಗೆ ಒಂದಕ್ಕಿಂತ ಹೆಚ್ಚಿನ ಬೆಳೆಗಳನ್ನು ಸೃಷ್ಟಿಯೇ ನೀಡಿರಬಹುದು ಇದಕ್ಕೆ. ಎಳೆ ಮಿಡಿ, ಕಾಯಿ, ಹಣ್ಣು ಮುಂತಾದ ಯಾವುದೇ ಭೇದವಿಲ್ಲದೆ ಇದನ್ನು ಖಾಲಿ ಮಾಡುವವರಿದ್ದಾರೆ. ಬಾಯಿ ರುಚಿಗಷ್ಟೇ ಇದನ್ನು ತಿನ್ನುವುದಲ್ಲ, ಸೀಬೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ (Benefits Of Eating Guava) ಪ್ರಯೋಜನಗಳಿವೆ.

Crop woman with halves of guava

ಸತ್ವಗಳು

ಇದರಲ್ಲಿ ವಿಟಮಿನ್‌ ಎ, ಸಿ, ನಾರು ಮತ್ತು ಪೊಟಾಶಿಯಂನಂಥ ಖನಿಜಗಳು ಸಾಕಷ್ಟಿವೆ. ಜೊತೆಗೆ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುವುದರಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ಒದಗಿಸಬಲ್ಲದು ಈ ಹಣ್ಣು. ಬಿಳಿ ಪೇರಲೆ, ಹಳದಿ ಬಣ್ಣದ್ದು, ಕೆಂಪು ಬಣ್ಣದ್ದು- ಹೀಗೆ ಯಾವುದೇ ಆದರೂ ಅವೆಲ್ಲವೂ ಆರೋಗ್ಯಕ್ಕೆ ಒಳ್ಳೆಯವೇ.

guava fruits

ವಿಟಮಿನ್‌ ಸಿ

ಒಂದು ದೊಡ್ಡ ಸೀಬೆ ಹಣ್ಣಿನಲ್ಲಿ ಎರಡು ಕಿತ್ತಳೆ ಹಣ್ಣುಗಳಲ್ಲಿ ಇರುವಷ್ಟು ಸಿ ಜೀವಸತ್ವ ಇದೆಯೆಂಬುದು ಗೊತ್ತೇ? ಇದರಿಂದ ರೋಗ ನಿರೋಧಕ ಶಕ್ತಿ ಬಲವಾಗುವುದಲ್ಲದೆ, ಕಬ್ಬಿಣದ ಅಂಶ ದೇಹದೊಳಗೆ ಚೆನ್ನಾಗಿ ಹೀರಲ್ಪಡುತ್ತದೆ. ಮಾತ್ರವಲ್ಲ, ಕೊಲಾಜಿನ್‌ ಉತ್ಪಾದನೆ ಹೆಚ್ಚಾಗಿ, ಕೂದಲು ಮತ್ತು ಚರ್ಮದ ಆರೋಗ್ಯವೂ ಸುಧಾರಿಸುತ್ತದೆ.

heart attack and Diabetes control

ಮಧುಮೇಹಿಗಳಿಗೆ ಸೂಕ್ತ

ಇದು ಹಣ್ಣಾದಾಗ ರುಚಿ ಸಿಹಿಯೇ ಇದ್ದರೂ, ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ. ಪೇರಲೆಯ ಎಲೆಯ ಕಷಾಯಗಳನ್ನು ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆ ಬಳಸುವ ಪದ್ಧತಿ ಪರಂಪರಾಗತ ಔಷಧಕ್ರಮದಲ್ಲಿ ಇದೆ. ನಾರಿನಂಶ ಹೇರಳವಾಗಿ ಇರುವುದರಿಂದ, ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತದೆ. ಜೊತೆಗೆ, ಗ್ಲೂಕೋಸ್‌ ಅಂಶ ದಿಢೀರನೆ ರಕ್ತ ಸೇರದಂತೆ ತಡೆಯುವ ಗುಣವಿದೆ ಇದಕ್ಕೆ.

fresh guava fruit

ಕ್ಯಾಲರಿ ಕಡಿಮೆ

ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆ, ಕೊಬ್ಬು ಬಹುತೇಕ ಇಲ್ಲವೇ ಇಲ್ಲ. ಇದರಲ್ಲಿ ಅಗತ್ಯ ಪ್ರಮಾಣದ ನಾರು ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಿ, ಕಳ್ಳ ಹಸಿವೆಯನ್ನು ನೀಗಿಸುತ್ತದೆ. ಹೆಚ್ಚು ಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಬಾಯಾಡುವುದಕ್ಕೆ ಇನ್ನೇನಿದೆ ಎಂದು ತಡಕುವುದನ್ನು ತಡೆಯುತ್ತದೆ. ಜೊತೆಗೆ, ದೇಹಕ್ಕೆ ಅಗತ್ಯವಾದ ಖನಿಜಗಳು, ವಿಟಮಿನ್‌ ಸಿ ಮತ್ತಿತರ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಹಾಗಾಗಿ ತೂಕ ಇಳಿಸುವ ಯೋಜನೆಯಿದ್ದರೆ ಪೇರಲೆ ಹಣ್ಣನ್ನು ಸಂತೋಷದಿಂದ ನಿಮ್ಮ ಆಹಾರಯೋಜನೆಯಲ್ಲಿ ಸೇರಿಸಿಕೊಳ್ಳಿ. ಆದರೆ ಇದನ್ನು ಆಹಾರದ ಭಾಗವಾಗಿ ಬಳಸಿಕೊಳ್ಳುವುದು ಹೇಗೆ? ಪೇರಲೆಯನ್ನು ಕಚ್ಚಿ ತಿನ್ನುವುದು ಮಾತ್ರವೇ ಎಲ್ಲರಿಗೂ ಪರಿಚಿತವಾದದ್ದು. ಹೀಗೆ ಎಷ್ಟು ತಿನ್ನಲು ಸಾಧ್ಯ? ದಿನವೂ ಅದನ್ನೇ ಮಾಡಿದರೆ ಬೋರಾಗುವುದಿಲ್ಲವೇ? ಇಲ್ಲಿದೆ ಪರಿಹಾರ.

Guava smoothie

ಸೀಬೆ ಸ್ಮೂದಿ

ತೂಕ ಇಳಿಸುವವರಿಗೆ ಸ್ಮೂದಿ ಉತ್ತಮ ಆಹಾರ. ಯಾವುದೇ ಹಣ್ಣುಗಳನ್ನು ಇಡಿಯಾಗಿ ಅಥವಾ ಉಳಿದೆಲ್ಲ ಹಣ್ಣುಗಳ ಜೊತೆಯಾಗಿ ಹಾಕಿ ಸ್ಮೂದಿ ಮಾಡಿಕೊಳ್ಳಬಹುದು. ಇದಕ್ಕೆ ಪೇರಲೆಯನ್ನೂ ಸೇರಿಸಿದರೆ ಉತ್ತಮ. ಇದು ಸ್ಮೂದಿಯ ರುಚಿ ಮತ್ತು ಘಮವನ್ನು ಇಮ್ಮಡಿಗೊಳಿಸುತ್ತದೆ. ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತದೆ. ಬಾಳೆಹಣ್ಣು, ಬೆರ್ರಿಗಳು ಮುಂತಾದ ನಿಮ್ಮ ಆಯ್ಕೆಯ ಹಣ್ಣುಗಳ ಜೊತೆಗೆ ಸೀಬೆಯನ್ನೂ ಸೇರಿಸಿ. ಜೊತೆಗೆ ಹಾಲು ಅಥವಾ ಮೊಸರು- ಯಾವುದು ಸರಿ ಹೊಂದುತ್ತದೆ ಎಂಬುದೂ ನಿಮ್ಮದೇ ಆಯ್ಕೆ. ಇದರ ಮೇಲೆ ಚಿಯಾ, ಅಗಸೆ ಮುಂತಾದ ಬೀಜಗಳನ್ನು ಉದುರಿಸಿದರೆ ಸತ್ವಯುತ ಸ್ಮೂದಿ ಸಿದ್ಧ.

ಇದನ್ನೂ ಓದಿ: Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

ಸೀಬೆ ಸಲಾಡ್

ತೂಕ ಇಳಿಸುವವರಿಗೆ ಸಲಾಡ್‌ ಇಲ್ಲದೆ ಮುಂದೆ ಹೋಗುವುದೇ ಇಲ್ಲ. ಕಡಿಮೆ ಕೊಬ್ಬಿರುವ ಅಗತ್ಯ ಸತ್ವಗಳನ್ನು ಹೊಂದಿರುವ ಸಲಾಡ್‌ಗಳು ದೇಹಕ್ಕೆ ಚೈತನ್ಯ ನೀಡುವುದರ ಜೊತೆಗೆ ಕೊಬ್ಬು ಕರಗಿಸಲು ನೆರವಾಗುತ್ತವೆ. ಇಂಥ ಯಾವುದೇ ಸಲಾಡ್‌ಗೂ ಪೇರಲೆಯನ್ನು ಸೇರಿಸಬಹುದು. ತರಕಾರಿ ಸಲಾಡ್‌, ಹಣ್ಣುಗಳ ಸಲಾಡ್‌ ಎರಡಕ್ಕೂ ಪೇರಲೆಯ ರುಚಿ ಮತ್ತು ಪರಿಮಳ ಹೊಂದಿಕೊಳ್ಳುತ್ತದೆ.

Continue Reading

ಆರೋಗ್ಯ

Bird Flu: ದೇಶದಲ್ಲಿ ಎರಡನೇ ಹಕ್ಕಿ ಜ್ವರದ ಪ್ರಕರಣ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ

Bird Flu: ದೇಶದಲ್ಲಿ H9N2 ವೈರಸ್‌ ಸೋಂಕಿನಿಂದ ಹರಡುವ ಹಕ್ಕಿ ಜ್ವರ (Bird Flu)ದ ಎರಡನೇ ಪ್ರಕರಣ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization – WHO) ಮಂಗಳವಾರ ಮಾಹಿತಿ ನೀಡಿದೆ. ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಮಗುವಿಗೆ H9N2 ವೈರಸ್‌ ಸೋಂಕಿನಿಂದ ಹಕ್ಕಿಜ್ವರ ಕಾಣಿಸಿಕೊಂಡಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

VISTARANEWS.COM


on

Bird Flu
Koo

ನವದೆಹಲಿ: ದೇಶದಲ್ಲಿ H9N2 ವೈರಸ್‌ ಸೋಂಕಿನಿಂದ ಹರಡುವ ಹಕ್ಕಿ ಜ್ವರ (Bird Flu)ದ ಎರಡನೇ ಪ್ರಕರಣ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization – WHO) ಮಂಗಳವಾರ ಮಾಹಿತಿ ನೀಡಿದೆ. ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಮಗುವಿಗೆ H9N2 ವೈರಸ್‌ ಸೋಂಕಿನಿಂದ ಹಕ್ಕಿಜ್ವರ ಕಾಣಿಸಿಕೊಂಡಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

ತೀವ್ರ ಉಸಿರಾಟದ ತೊಂದರೆಗಳು, ಹೆಚ್ಚಿನ ಜ್ವರ ಮತ್ತು ಕಿಬ್ಬೊಟ್ಟೆಯ ಸೆಳೆತದಿಂದಾಗಿ ಮಗುವನ್ನು ಫೆಬ್ರವರಿಯಲ್ಲಿ ಸ್ಥಳೀಯ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿತ್ತು. ಇದೀಗ ಮೂರು ತಿಂಗಳ ನಂತರ ಮಗುವನ್ನು ಡಿಸ್‌ಚಾರ್ಜ್‌ ಮಾಡಲಾಗಿದೆ ಎಂದು ಹೇಳಿದೆ.

ಮಗು ತನ್ನ ಮನೆಯಲ್ಲಿದ್ದ ಕೋಳಿಗಳೊಂದಿಗೆ ಒಡನಾಟ ಹೊಂದಿತ್ತು. ಅದಾಗ್ಯೂ ಹಕ್ಕಿಜ್ವರ ಲಕ್ಷಣಗಳಿರುವ ಬೇರೆ ಪ್ರಕರಣ ಯಾವುದೂ ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇದು ಭಾರತದಿಂದ ವರದಿಯಾದ ಎರಡನೇ H9N2 ವೈರಸ್‌ ಸೋಂಕಿನ ಪ್ರಕರಣವಾಗಿದ್ದು, 2019ರಲ್ಲಿ ಮೊದಲನೆಯ ಪ್ರಕರಣ ಕಂಡು ಬಂದಿತ್ತು. H9N2 ವೈರಸ್ ಸಾಮಾನ್ಯವಾಗಿ ಕಡಿಮೆ ಪ್ರಮಾಣದ ಅನಾರೋಗ್ಯವನ್ನು ಉಂಟು ಮಾಡುತ್ತದೆ. ಆದರೆ ನಿರ್ಲಕ್ಷ್ಯ ಮಾಡುವುದು ಸಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.

ಆತಂಕ ಸೃಷ್ಟಿಸಿದ ಚೀನಾ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಎಚ್‌9ಎನ್‌2 (ಏವಿಯನ್ ಇನ್ಫ್ಲುಯೆನ್ಸ ವೈರಸ್-ಹಕ್ಕಿ ಜ್ವರದ ವೈರಾಣು) ಪ್ರಕರಣಗಳಲ್ಲಿ ದಿಢೀರ್‌ ಏರಿಕೆ ಕಂಡುಬಂದು ಆತಂಕ ಸೃಷ್ಟಿಯಾಗಿತ್ತು. ಚೀನಾದಲ್ಲಿ ಮಾನವರಲ್ಲಿ ಎಚ್‌9ಎನ್‌2 ಪತ್ತೆಯಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಹಕ್ಕಿ ಜ್ವರದ ವಿರುದ್ಧ ಸನ್ನದ್ಧತಾ ಕ್ರಮಗಳ ಬಗ್ಗೆ ಚರ್ಚಿಸಲು ʻಡಿಜಿಎಚ್ಎಸ್ʼ ಅಧ್ಯಕ್ಷತೆಯಲ್ಲಿ ಸಭೆ ನಡೆಸಿತ್ತು. ಭಾರತದಲ್ಲಿಯೂ ಸೋಂಕು ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: Health Update: ಮಕ್ಕಳಲ್ಲಿ ಹೆಚ್ಚುತ್ತಿದೆ ಜ್ವರ ಬಾಧೆ; ಮುನ್ನೆಚ್ಚರಿಕೆ ಇರಲಿ, ಆತಂಕ ಬೇಡ

ಅಪಾಯಕಾರಿ ಎಚ್5ಎನ್1 ಹಕ್ಕಿ ಜ್ವರ

ಇನ್ನು ಕೆಲವು ದಿನಗಳ ಹಿಂದೆ ಕೋವಿಡ್ ಸಾಂಕ್ರಾಮಿಕಕ್ಕಿಂತ ಅಪಾಯಕಾರಿಯಾಗಿರುವ ಎಚ್5ಎನ್1 ಹಕ್ಕಿ ಜ್ವರದ (H5N1 bird flu) ಕುರಿತು ಪಿಟ್ಸ್‌ಬರ್ಗ್‌ನ ಸಂಶೋಧಕರು ಎಚ್ಚರಿಕೆ ನೀಡಿದ್ದರು. ಆರೋಗ್ಯ ತಜ್ಞರು ಕೋವಿಡ್ ಸಾಂಕ್ರಾಮಿಕ ರೋಗಕ್ಕಿಂತ 100 ಪಟ್ಟು ವೇಗವಾಗಿ ಎಚ್5ಎನ್1 ಹಕ್ಕಿ ಜ್ವರದ ಹರಡುವ ಅಪಾಯವಿದೆ ಎಂದು ಹೇಳಿದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಹಕ್ಕಿಜ್ವರ ಸಾಂಕ್ರಾಮಿಕ ರೋಗವು ವೇಗವಾಗಿ ಹರಡಲಿದ್ದು, ಹೆಚ್ಚಿನ ಸಾವು, ನೋವಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಇದು ಜಾಗತಿಕವಾಗಿ ಮತ್ತೊಂದು ಸಾಂಕ್ರಾಮಿಕದ ಅಪಾಯವನ್ನು ಉಂಟು ಮಾಡುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಪಿಟ್ಸ್‌ಬರ್ಗ್‌ನ ಪ್ರಮುಖ ಪಕ್ಷಿ ಜ್ವರ ಸಂಶೋಧಕ ಡಾ. ಸುರೇಶ್ ಕೂಚಿಪುಡಿ, ʼʼಬ್ರೀಫಿಂಗ್‌ನಲ್ಲಿ ಎಚ್5ಎನ್1 ಪಕ್ಷಿ ಜ್ವರವು ಮಾನವ ಸೇರಿದಂತೆ ವಿವಿಧ ಜಾತಿಯ ಪ್ರಾಣಿಗಳಿಗೂ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ವೇಗವಾಗಿ ಈ ಸೋಂಕು ಸಾಂಕ್ರಾಮಿಕ ರೋಗವಾಗುವ ಅಪಾಯವಿದೆ. ಹೀಗಾಗಿ ಶೀಘ್ರದಲ್ಲೇ ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕ ರೋಗವನ್ನು ಹರಡಲು ಈ ವೈರಸ್‌ ಕಾರಣವಾಗಬಹುದುʼʼ ಎಂದು ಹೇಳಿದ್ದರು.

Continue Reading

ಆರೋಗ್ಯ

Rock Salt Or Powder Salt: ಬೆಳ್ಳನೆಯ ಪುಡಿ ಉಪ್ಪು ಆರೋಗ್ಯಕರವೇ ಅಥವಾ ಕಲ್ಲುಪ್ಪೇ?

ಉಪ್ಪನ್ನು ಹಾಗೆಯೇ ತಿನ್ನಲು ಸಾಧ್ಯವಿಲ್ಲವಾದರೂ, ಉಪ್ಪು ಹಾಕದ ಅಡುಗೆಗೆ ರುಚಿಯೇ ಇಲ್ಲ ಎಂಬುದು ಸತ್ಯವೇ. ನಮ್ಮ ನಿತ್ಯ ಜೀವನದಲ್ಲಿ ಉಪ್ಪು ನಿತ್ಯವೂ ಯಾವುದಾದರೊಂದು ಬಗೆಯಲ್ಲಿ ನಾವು ಬಳಸುತ್ತಲೇ ಇರುತ್ತೇವೆ. ಅಡುಗೆಯ ಹೊರತಾಗಿಯೂ ಉಪ್ಪಿನ ಉಪಯೋಗ ಬಹಳ. ಆದರೆ, ಉಪ್ಪಿನ ಬಳಕೆಯ ವಿಚಾರದಲ್ಲೂ ನಮಗೆ ಗೊಂದಲಗಳಾಗುವುದುಂಟು. ಮುಖ್ಯವಾಗಿ ಬಿಳಿಯಾದ ಸಂಸ್ಕರಿಸಿದ ಪುಡಿ ಉಪ್ಪನ್ನು ಸುಲಭವಾಗಿ ಕಡಿಮೆ ದರದಲ್ಲಿ ಸಿಗುವ ಕಾರಣ ತಂದು ಬಳಸುತ್ತೇವೆ ನಿಜವಾದರೂ, ಈ ಸಂಸ್ಕರಿಸಿದ ಪುಡಿ ಉಪ್ಪು ನಿಜವಾಗಿಯೂ ಒಳ್ಳೆಯದೇ ಎಂಬ ಬಗ್ಗೆ ಹಲವು ಸಮಯಗಳಿಂದ ಗೊಂದಲಗಳು (Rock Salt Or Powder Salt) ಇದ್ದೇ ಇವೆ.

VISTARANEWS.COM


on

Rock Salt Or Powder Salt
Koo

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ಹಳೆಯ ಗಾದೆಯಿದೆ. ಉಪ್ಪನ್ನು ಹಾಗೆಯೇ ತಿನ್ನಲು ಸಾಧ್ಯವಿಲ್ಲವಾದರೂ, ಉಪ್ಪು ಹಾಕದ ಅಡುಗೆಗೆ ರುಚಿಯೇ ಇಲ್ಲ ಎಂಬುದು ಸತ್ಯವೇ. ನಮ್ಮ ನಿತ್ಯ ಜೀವನದಲ್ಲಿ ಉಪ್ಪು ನಿತ್ಯವೂ ಯಾವುದಾದರೊಂದು ಬಗೆಯಲ್ಲಿ ನಾವು ಬಳಸುತ್ತಲೇ ಇರುತ್ತೇವೆ. ಅಡುಗೆಯ ಹೊರತಾಗಿಯೂ ಉಪ್ಪಿನ ಉಪಯೋಗ ಬಹಳ. ಆದರೆ, ಉಪ್ಪಿನ ಬಳಕೆಯ ವಿಚಾರದಲ್ಲೂ ನಮಗೆ ಗೊಂದಲಗಳಾಗುವುದುಂಟು. ಮುಖ್ಯವಾಗಿ ಬಿಳಿಯಾದ ಸಂಸ್ಕರಿಸಿದ ಪುಡಿ ಉಪ್ಪನ್ನು ಸುಲಭವಾಗಿ ಕಡಿಮೆ ದರದಲ್ಲಿ ಸಿಗುವ ಕಾರಣ ತಂದು ಬಳಸುತ್ತೇವೆ ನಿಜವಾದರೂ, ಈ ಸಂಸ್ಕರಿಸಿದ ಪುಡಿ ಉಪ್ಪು ನಿಜವಾಗಿಯೂ ಒಳ್ಳೆಯದೇ ಎಂಬ ಬಗ್ಗೆ ಹಲವು ಸಮಯಗಳಿಂದ ಗೊಂದಲಗಳು ಇದ್ದೇ ಇವೆ. ಸೈಂದವ ಲವಣ ಅಥವಾ ಕಲ್ಲುಪ್ಪಿಗೆ ಹೋಲಿಸಿದರೆ ಪುಡಿ ಉಪ್ಪು ಆರೋಗ್ಯಕರವಲ್ಲ ಎಂಬ ವಾದಗಳೂ ಇವೆ. ಬನ್ನಿ, ಈ ಮಾತಿನ ಸತ್ಯಾಸತ್ಯತೆಯ (Rock Salt Or Powder Salt) ಪರಾಮರ್ಶೆ ನಡೆಸೋಣ. ಇಲ್ಲಿ ಎಲ್ಲಕ್ಕಿಂತ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ರಿಪೈನ್ಡ್‌ ಅಥವಾ ಸಂಸ್ಕರಿಸಿ ಬಿಳಿಯಾದ ಪುಡಿ ಉಪ್ಪು ಕೂಡಾ ನೈಸರ್ಗಿಕ ಮೂಲಗಳಿಂದಲೇ ತಯಾರಿಸುವ ಉಪ್ಪು. ಬೇರೆ ಉಪ್ಪುಗಳಿಗೆ ಹೋಲಿಸಿದರೆ, ಇದನ್ನು ಸಮುದ್ರದ ನೀರಿನಿಂದಲೇ ತಯಾರಿಸಿದ್ದರೂ ಇದನ್ನು ಸಂಸ್ಕರಿಸಿ, ಅದರಲ್ಲಿರಲ್ಲಿರುವ ಕೊಳೆಯನ್ನು ಬೇರ್ಪಡಿಸಿ ಅದಕ್ಕೆ ಅಯೋಡಿನ್‌ ಅನ್ನು ಸೇರಿಸಿದ ಮೇಲೆ ಪ್ಯಾಕೆಟ್ಟುಗಳಲ್ಲಿ ಪುಡಿಯಾದ ರೂಪದಲ್ಲಿ ಬಿಡಲಾಗುತ್ತದೆ. ಗಾಯಟೆರ್‌ ಹಾಗೂ ಹೈಪೋಥೈರಾಯ್ಡಿಸಮ್‌ಗಳು ಬರದಂತೆ ಉಪ್ಪಿಗೆ ಅಯೋಡಿನ್‌ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಹಾಗಾಗಿ ನೈಸರ್ಗಿಕ ಮೂಲದಿಂದಲೇ ತಯಾರಾಗುವ ಪುಡಿ ಉಪ್ಪು ಆರೋಗ್ಯಕರವಲ್ಲ ಎಂಬುದು ನಿಜವಲ್ಲ ಎಂಬುದನ್ನು ಮೊದಲು ತಿಳಿಯಬೇಕು. ಕಾರ್ಖಾನೆಗಳಲ್ಲಿ ಉಪ್ಪನ್ನು ಪ್ಯಾಕೆಟ್ಟುಗಳಲ್ಲಿ ತುಂಬಿಸಬೇಕಾದರೆ ಅದಕ್ಕೆ ಕೆಲವು ಆಂಟಿ ಕೇಕಿಂಗ್‌ ಏಜೆಂಟುಗಳನ್ನು ಸೇರಿಸಲಾಗುತ್ತದೆ. ಈ ಆಂಟಿ ಕೇಕಿಂಗ್‌ ಏಜೆಂಟುಗಳು ಉಪ್ಪು ಗಂಟಾಗುವುದನ್ನು ತಡೆದು ಉದುರುದುರಾಗಿ ಇರುವಂತೆ ಮಾಡುತ್ತದೆ.

salt

ಸೋಡಿಯಂ ಇದೆಯೆ?

ಸಂಸ್ಕರಿಸಿದ ಉಪ್ಪಿನಲ್ಲಿಯೂ ಸೋಡಿಯಂ ಇದೆ. ಸೈಂದವ ಲವಣ ಅಥವಾ ಕಲ್ಲುಪ್ಪಿನಲ್ಲೂ ಸೋಡಿಯಂ ಇದೆ. ಹಾಗಾಗಿ ಸೋಡಿಯಂ ಬಗ್ಗೆ ಚಿಂತೆ ಮಾಡುವವರಿಗೆ ಚಿಂತೆಗೆ ಇಲ್ಲಿ ಅವಕಾಶವಿಲ್ಲ. ಎರಡರಲ್ಲೂ ಸೋಡಿಯಂ ಇರುವುದರಿಂದ ಇವೆರಡೂ ಅತಿಯಾದಲ್ಲಿ ಹೈಪರ್‌ಟೆನ್ಶನ್‌ನ ಅಪಾಯ ಇದ್ದೇ ಇದೆ. ಹಾಗಾಗಿ, ಉಪ್ಪು ಯಾವುದೇ ಆದರೂ ಅತಿಯಾಗಬಾರದು. ಕಡಿಮೆಯೇ ತಿನ್ನುವುದು ಒಳ್ಳೆಯದು.
ಹಾಗೆ ನೋಡಿದರೆ, ಪುಡಿ ಉಪ್ಪಿನಲ್ಲಿ ಸಂಸ್ಕರಿಸುವ ಸಂದರ್ಭದಲ್ಲಿ ಬೆರಕೆಯಾದ ಬೇರೆ ಅಂಶಗಳು ಹಾಗೂ ಅದನ್ನು ಪುಡಿಪುಡಿಯಾಗಿ ಯಾವಾಗಲೂ ಇರಿಸಬಲ್ಲ ಆಂಟಿ ಕೇಕಿಂಗ್‌ ಏಜೆಂಟ್‌ಗಳು ಇತ್ಯಾದಿಗಳಿಂದಾಗಿ ಅದರಲ್ಲಿರುವ ಖನಿಜಾಂಶಗಳು ನಷ್ಟವಾಗಿರುತ್ತವೆ. ಕಲ್ಲುಪ್ಪಿನಲ್ಲಿ, ನೈಸರ್ಗಿಕವಾಗಿ ಉಪ್ಪಿನಲ್ಲಿ ಇರಬಹುದಾದ ಎಲ್ಲ ಬಗೆಯ ಖನಿಜಾಂಶಗಳು ಅದರ ನೈಸರ್ಗಿಕ ರೂಪದಲ್ಲಿಯೇ ಇರುವುದರಿಂದ ಆರೋಗ್ಯದ ವಿಚಾರದಲ್ಲಿ ಹೆಚ್ಚು ಒಳ್ಳೆಯದು ಎಂದು ಹೇಳಬಹುದು.

Rock Salt

ಕಲ್ಲುಪ್ಪು ಪರಿಣಾಮಕಾರಿ

ಸಾಮಾನ್ಯ ಉಪ್ಪಿನಲ್ಲಿ ಶೇ.97ರಷ್ಟು ಸೋಡಿಯಂ ಕ್ಲೋರೈಡ್‌ ಇದ್ದು, ಉಳಿದ ಶೇ.3ರಷ್ಟು ವಸ್ತುಗಳು ಸಂಸ್ಕರಣದ ಸಂದರ್ಭದಲ್ಲಿ ಸೇರಿಸಲ್ಪಡುತ್ತದೆ. ಮುಖ್ಯವಾಗಿ ಅಯೋಡಿನ್‌ ಈ ಸಂದರ್ಭ ಸೇರಿಸಲಾಗುತ್ತದೆ. ಆದರೆ ಕಲ್ಲುಪ್ಪಿನಲ್ಲಿ ಅಂದರೆ, ಭೂಮಿಯಡಿಯಿಂದ ದೊರೆಯುವ ಉಪ್ಪಿನಲ್ಲಿ ಶೇ.85ರಷ್ಟು ಸೋಡಿಯಂ ಕ್ಲೋರೈಡ್‌ ಇದ್ದು ಉಳಿದ ಶೇ.15ರಷ್ಟು ಅಂಶ ಕಬ್ಬಿಣಾಂಶ, ತಾಮ್ರ, ಝಿಂಕ್‌, ಅಯೋಡಿನ್‌, ಮ್ಯಾಂಗನೀಸ್‌, ಮೆಗ್ನೀಶಿಯಂ, ಸೆಲೆನಿಯಂ, ಅಯೋಡಿನ್‌ ಇತ್ಯಾದಿಗಳೂ ಇರುತ್ತವೆ. ಇದಕ್ಕೆ ಪ್ರತ್ಯೇಕವಾಗಿ ಅಯೋಡಿನ್‌ ಸೇರಿಸಲಾಗಿರುವುದಿಲ್ಲ. ಆದರೂ, ನೀರನ್ನು ಶುದ್ಧಿಕರಿಸಿ ಕುಡಿಯುವ ಅಭ್ಯಾಸ ಇತ್ತೀಚೆಗೆ ಹೆಚ್ಚಿರುವುದರಿಂದ, ನೀರಿನ ಮೂಲಕ ಖನಿಜಾಂಶಗಳು ಮನುಷ್ಯನ ದೇಹಕ್ಕೆ ಹೋಗುವುದಿಲ್ಲ. ಹೀಗಾಗಿ ಕಲ್ಲುಪ್ಪನ್ನು ಸೇವಿಸುವ ಪ್ರಮಾಣವೂ ಇತ್ತೀಚೆಗೆ ಹೆಚ್ಚಾಗುತ್ತಿದೆ. ಆ ಮೂಲಕ ಖನಿಜಾಂಶಗಳು ದೇಹಕ್ಕೆ ಸೇರುವ ಬಗೆ ಇದು. ಹಾಗಾಗಿ, ಸಾಮಾನ್ಯ ಪುಡಿ ಉಪ್ಪಿನಿಂದ ಕಲ್ಲುಪ್ಪು ಅನೇಕ ಬಗೆಯಲ್ಲಿ ಪರಿಣಾಮಕಾರಿ ಹಾಗೂ ಅರೋಗ್ಯಕರ ಎಂಬುದು ನಿಜ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Continue Reading
Advertisement
Hassan Ali
ದೇಶ2 hours ago

Hassan Ali: ರಿಯಾಸಿ ಉಗ್ರರ ದಾಳಿ ಖಂಡಿಸಿದ ಪಾಕ್‌ ಕ್ರಿಕೆಟಿಗ ಹಸನ್‌ ಅಲಿ; ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದಿದ್ದೇಕೆ?

IND vs USA
ಪ್ರಮುಖ ಸುದ್ದಿ3 hours ago

IND vs USA: ಅರ್ಶದೀಪ್​ ಮಾರಕ ದಾಳಿಗೆ ಪತರುಗುಟ್ಟಿದ ಅಮೆರಿಕ; ಟೀಮ್​ ಇಂಡಿಯಾ ಸೂಪರ್​-8 ಪ್ರವೇಶ

disqualification for hanawala Gram Panchayat Vice President and Cancellation of membership ordered
ಕರ್ನಾಟಕ3 hours ago

Koppala News: ಹಣವಾಳ ಗ್ರಾ.ಪಂ ಉಪಾಧ್ಯಕ್ಷೆಗೆ ಅನರ್ಹತೆಯ ಶಿಕ್ಷೆ; ಸದಸ್ಯತ್ವ ರದ್ದುಗೊಳಿಸಿ ಆದೇಶ

Court Order
ದೇಶ3 hours ago

ಬಾಲಕಿಯ ಒಳ ವಸ್ತ್ರ ಕಳಚಿ ಬೆತ್ತಲೆಗೊಳಿಸುವುದು ಅತ್ಯಾಚಾರ ಯತ್ನವಲ್ಲ ಎಂದ ಹೈಕೋರ್ಟ್! ನಿಮ್ಮ ಅಭಿಪ್ರಾಯವೇನು?

Virat Kohli
ಕ್ರೀಡೆ4 hours ago

Virat Kohli: ಟಿ20 ವಿಶ್ವಕಪ್​ನಲ್ಲಿ ಮೊದಲ ಗೋಲ್ಡನ್​ ಡಕ್ ಸಂಕಟಕ್ಕೆ ಸಿಲುಕಿದ ವಿರಾಟ್​ ಕೊಹ್ಲಿ

Mumbai
ಪ್ರಮುಖ ಸುದ್ದಿ4 hours ago

300 ಕೋಟಿ ರೂ. ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ಕೊಟ್ಟು ಮಾವನನ್ನೇ ಕೊಲ್ಲಿಸಿದ ದುಷ್ಟ ಸೊಸೆ!

ICC T20 Rankings
ಕ್ರೀಡೆ5 hours ago

ICC T20 Rankings: ಅಗ್ರಸ್ಥಾನದಲ್ಲೇ ಮುಂದುವರಿದ ಟೀಮ್​ ಇಂಡಿಯಾ; ಕುಸಿತ ಕಂಡ ಪಾಕ್

Rain News
ಪ್ರಮುಖ ಸುದ್ದಿ5 hours ago

Rain News: ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರ್ಭಟ; ಕೆರೆಯಂತಾದ ರಸ್ತೆಗಳು!

Chellagurki Shri Yerrithathanavara Maharathotsava in Ballari
ಧಾರ್ಮಿಕ5 hours ago

Ballari News: ಭಕ್ತಿ ಭಾವದಿಂದ ನಡೆದ ಚೇಳ್ಳಗುರ್ಕಿ ಶ್ರೀ ಎರ‍್ರಿತಾತ ಮಹಾರಥೋತ್ಸವ

Narendra Modi
ದೇಶ5 hours ago

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌