ವಿಸ್ತಾರ Explainer | killer stress | ಒತ್ತಡ ಏರುತ್ತಿದೆ, ಹೃದಯ ಕುಸಿಯುತ್ತಿದೆ! - Vistara News

EXPLAINER

ವಿಸ್ತಾರ Explainer | killer stress | ಒತ್ತಡ ಏರುತ್ತಿದೆ, ಹೃದಯ ಕುಸಿಯುತ್ತಿದೆ!

ಇದು ಈಗ ಬರೀ ಊಹೆಯಲ್ಲ. ಕೊರೊನಾ ಸಾಂಕ್ರಾಮಿಕದ ಬಳಿಕ ಎಲ್ಲರಲ್ಲೂ ಒತ್ತಡದ ಅಂಶಗಳು ಹೆಚ್ಚಿವೆ. ಏರುತ್ತಿರುವ ಹೃದಯಾಘಾತ, ಸಣ್ಣ ವಯಸ್ಸಿನವರಲ್ಲೂ ಹೃದಯಸ್ತಂಭನ- ಇತ್ಯಾದಿಗಳಿಗೆ ಇದೇ ಕಾರಣವೆಂದು ತಜ್ಞರು ದೃಢೀಕರಿಸುತ್ತಿದ್ದಾರೆ. ಒತ್ತಡ ಈಗ ವಿಲನ್‌ ನಂಬರ್‌ ವನ್‌.

VISTARANEWS.COM


on

killer stress
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊರೊನಾ ನಂತರ ಹೆಚ್ಚಾಯ್ತು ಸ್ರ್ಟೆಸ್ಸು, ಕಡಿಮೆಯಾಯ್ತು ದೇಹದ ಹುಮ್ಮಸ್ಸು

ʼʼಒತ್ತಡವೆಂದರೆ ಇಂದು ಬರಿಯ ಮಾನಸಿಕ ಸಮಸ್ಯೆಯಲ್ಲ. ಅದು ದೇಹಕ್ಕೂ ನಾನಾ ಸ್ವರೂಪದಲ್ಲಿ ಹಬ್ಬಿಕೊಂಡಿದ್ದು, ದೈಹಿಕ ಸಮಸ್ಯೆಗಳಲ್ಲಿ ವ್ಯಕ್ತವಾಗುತ್ತಿದೆʼʼ ಎನ್ನುತ್ತಾರೆ ಬೆಂಗಳೂರಿನ ನಿಮ್ಹಾನ್ಸ್‌ನ ಮಾಜಿ ನಿರ್ದೇಶಕ ಡಾ.ಬಿ.ಎನ್‌ ಗಂಗಾಧರ. ಕಳೆದ ಎರಡು ವರ್ಷಗಳಲ್ಲಿ ನಡೆದ ನಾನಾ ಅಧ್ಯಯನಗಳೂ ಇದನ್ನು ಖಚಿತಪಡಿಸಿವೆ. ಹೃದಯ ಕಾಯಿಲೆಗಳು, ಮೆದುಳಿನ ಲಕ್ವ, ಡಯಾಬಿಟಿಸ್‌, ಕ್ಯಾನ್ಸರ್‌, ಶ್ವಾಸಕೋಶದ ಸಮಸ್ಯೆಗಳು, ಯಕೃತ್ತಿನ ಊತ, ಫಲವತ್ತತೆಯ ಕೊರತೆ ಇತ್ಯಾದಿಗಳಿಗಿರುವ ಸಂಬಂಧ ಪತ್ತೆಯಾಗಿದೆ. ಇದರ ಜತೆಗೆ ಬೊಜ್ಜು, ನಾನಾ ವ್ಯಸನಗಳು, ಖಿನ್ನತೆಗಳಂತೂ ಹೇಗೂ ಇದ್ದೇ ಇವೆ. ಖಿನ್ನತೆಯು ಆತ್ಮಹತ್ಯೆಯ ಪ್ರಮುಖ ಕಾರಣಗಳಲ್ಲಿ ಅಗ್ರಸ್ಥಾನದಲ್ಲಿದೆ. ಆದರೂ ಒತ್ತಡವು ಇಂಥದಕ್ಕೆಲ್ಲ ಕಾರಣ ಎಂದು ಜನ ಗುರುತಿಸುತ್ತಿಲ್ಲ.

ಅದೇಕೆ? ಯಾಕೆಂದರೆ ಒತ್ತಡವನ್ನು ಅಳೆಯಲು ಸರಿಯಾದ ಮಾಪಕ ಆವಿಷ್ಕಾರ ಎಲ್ಲೂ ಆಗಿಲ್ಲ. ಹೀಗಾಗಿ, ಹೆಚ್ಚು ತೀವ್ರವಾದ ಒಂದು ಪರಿಣಾಮ ಕಾಣಿಸದೇ ಹೋಗುವವರೆಗೂ ಒತ್ತಡದ ಇರುವಿಕೆ ಗೊತ್ತೇ ಆಗುವುದಿಲ್ಲ.

ನಮ್ಮ ಆಧುನಿಕ ಜೀವನವೇ ಒತ್ತಡಯುಕ್ತವಾಗಿದೆ. ಆದರೆ ಕಳೆದ ಎರಡು ವರ್ಷಗಳ ಕಾಲದ ಕೊರೊನಾ ಜತೆಗಿನ ಸಹಜೀವನ ಇದನ್ನು ಇನ್ನೂ ದುರ್ಭರಗೊಳಿಸಿದೆ. ಇದು ನಮ್ಮ ದೇಹಗಳ ಮೇಲೆ ಹೆಚ್ಚಿನ ಕಂದಾಯ ಪಡೆಯುತ್ತಿದೆ. ʼʼಉದಾಹರಣೆಗೆ, ದಿಡೀರ್‌ ಹೃದಯಾಘಾತಗಳ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಿದೆ. ಇದಕ್ಕೆ ಗಣನೀಯ ಕಾರಣ ಒತ್ತಡʼʼ ಎನ್ನುತ್ತಾರೆ ಫೋರ್ಟಿಸ್‌ ಎಸ್ಕಾರ್ಟ್ಸ್‌ ಹಾರ್ಟ್‌ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಡಾ. ಅಶೋಕ್‌ ಸೇಠ್.‌ ಕೋವಿಡ್‌ ಪ್ರಹಸನದ ತೆರೆ ಇನ್ನೂ ಇಳಿಯುವ ಮೊದಲೇ ಇನ್ನೊಂದು ʼಒತ್ತಡದʼ ಪ್ರಹಸನಕ್ಕೆ ನಾವು ಸಜ್ಜಾಗಬೇಕಿದೆ.

ದೆಹಲಿಯಲ್ಲಿರುವ ಆರೋಗ್ಯ ಸೇವಾ ಸಂಸ್ಥೆ ದಿ ಸೆಂಟರ್‌ ಆಫ್‌ ಹೀಲಿಂಗ್‌ (TCOH) 2020ರ ಡಿಸೆಂಬರ್‌ನಲ್ಲಿ 10,000 ಭಾರತೀಯರ ಮೇಲೆ ಒಂದು ಸಮೀಕ್ಷೆ ನಡೆಸಿತು. ಇದರಕಲ್ಲಿ 74% ಮಂದಿ ತಮ್ಮಲ್ಲಿ ಒತ್ತಡವಿರುವುದನ್ನು ಗುರುತಿಸಿದರು. 88% ಮಂದಿ ತಮ್ಮಲ್ಲಿ ಆತಂಕದ ಪರಿಣಾಮವನ್ನು ಗಮನಿಸಿದರು. ಥೆರಪಿಸ್ಟ್‌ಗಳಲ್ಲಿ 70% ಮಂದಿ ಪೇಷೆಂಟ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ಗುರುತಿಸಿದರು. 55% ಥೆರಪಿಸ್ಟ್‌ಗಳು ಹೇಳುವಂತೆ, ಸಾಂಕ್ರಾಮಿಕದ ಬಳಿಕ ಚೊಚ್ಚಲ ಪೇಷೆಂಟ್‌ಗಳ ಸಂಖ್ಯೆಯೂ ಅಧಿಕಗೊಂಡಿದೆ.

ಒತ್ತಡ ಯಾಕೆ ಬೇಕು?

ಹಾಗಾದರೆ ಒತ್ತಡ ಎಂಬುದು ಹೊಸ ಸಂಗತಿಯಾ? ಹಾಗೇನಿಲ್ಲ. ಮೊದಲಿನಿಂದಲೂ ಇದು ಇದೆ. ಇದು ಮನುಷ್ಯನ ಅಸ್ತಿತ್ವದಷ್ಟೇ ಹಳತು. ʼಹೋರಾಡು ಇಲ್ಲವೇ ಓಡುʼ ಎಂಬ ಮನುಷ್ಯನ ಅತಿ ಹಳೆಯ ದೈಹಿಕ ಸುರಕ್ಷತಾ ತಂತ್ರದಷ್ಟೆ ಇದು ಹಳತು. ಆತಂಕವೊಂದು ಎದುರಾದಾಗ ಸಾಕಷ್ಟು ಒತ್ತಡಕ್ಕೆ ಒಳಗಾಗದೇ ದೇಹ ಅದನ್ನು ಎದುರಿಸಲಾರದು. ಆದರೆ ಇಂದು ಕಷ್ಟ ತಂದಿಟ್ಟಿರುವುದು ಒತ್ತಡಕ್ಕೆ ನಾವು ನೀಡುತ್ತಿರುವ ಅತಿ ಪ್ರತಿಕ್ರಿಯೆ. ಇದನ್ನು ಮನುಷ್ಯನ ಒಟ್ಟಾರೆ ದೈಹಿಕ- ಮಾನಸಿಕ ಆರೋಗ್ಯಕ್ಕಾಗಿ ನಿಭಾಯಿಸಲೇಬೇಕಿದೆ. ಸುದೀರ್ಘಕಾಲದ ಒತ್ತಡದಿಂದ ನಮ್ಮ ದೇಹಕ್ಕೆ ಏನಾಗುತ್ತದೆ? ಇದನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ, ಒತ್ತಡದ ಹಾರ್ಮೋನುಗಳ ಹಿಂದಿರುವ ವಿಜ್ಞಾನವನ್ನೂ ಅರ್ಥ ಮಾಡಿಕೊಳ್ಳಬೇಕು.

killer stress

ಒತ್ತಡದ ಹಿಂದಿನ ವಿಜ್ಞಾನ

ಒತ್ತಡಕ್ಕೇ ದೇಹ ನೀಡುವ ಪ್ರತಿಕ್ರಿಯೆ ಸೃಷ್ಟಿಯಾಗುವುದು ಅದರ ಎಂಡೋಕ್ರೈನ್‌ ವ್ಯವಸ್ಥೆಯಲ್ಲಿ. ಇದು ಹೈಪೋಥಲಾಮೈನ್-‌ ಪಿಟ್ಯುಟರಿ- ಅಡ್ರಿನಲ್‌ ಗ್ರಂಥಿಗಳ ವ್ಯವಸ್ಥೆಯಲ್ಲಿದೆ. ಹೈಪೋಥಲಾಮೈನ್‌ ಮೆದುಳಿನ ಸೂಚನಾ ಕೇಂದ್ರ. ಇದು ಮೂಡ್‌, ದೇಹದ ತಾಪಮಾನ, ಹೃದಯ ಬಡಿತ, ಆಹಾರ ಸೇವನೆ, ಲೈಂಗಿಕ ಅಭೀಪ್ಸೆ, ಶಕ್ತಿ, ದಾಹ, ನಿದ್ರಾ ಚಕ್ರಗಳನ್ನು ನಿಯಂತ್ರಿಸುತ್ತದೆ. ಹಾರ್ಮೋನುಗಳ ಸ್ರಾವವನ್ನೂ ನಿಯಂತ್ರಿಸುತ್ತದೆ. ಈ ಹಾರ್ಮೋನುಗಳು ನಮ್ಮ ದೇಹದ ಹಲವು ರಾಸಾಯನಿಕ ಕ್ರಿಯೆಗಳನ್ನು ಪ್ರಚೋದಿಸುತ್ತವೆ.

ಒತ್ತಡ ಉಂಟುಮಾಡುವ ಯಾವುದೇ ಸಂಗತಿ ನಿಮಗೆ ಎದುರಾದಾಗ (ಅದು ದೈಹಿಕ ಅಪಾಯ, ಇನ್ನೊಬ್ಬರ ಕೋಪತಾಪ, ಕೆಟ್ಟ ಸುದ್ದಿ ಹೀಗೆ ಯಾವುದೂ ಇರಬಹುದು) ಅದು ದೇಹದಲ್ಲಿ ಕೆಲವು ಚಟುವಟಿಕೆಗಳನ್ನು ಉಂಟುಮಾಡುತ್ತದೆ. ಕಾರ್ಟಿಕೋಟ್ರೋಫಿನ್‌ ಹಾರ್ಮೋನ್‌ ವ್ಯವಸ್ಥೆಯನ್ನು ಹೈಪೋಥಲಾಮಸ್‌ ಉತ್ಪತ್ತಿ ಮಾಡುತ್ತದೆ. ಇದು ಎಂಡೋಕ್ರೈನ್‌ ವ್ಯವಸ್ಥೆಯ ಕೇಂದ್ರವಾದ ಕಡಲೆಕಾಳಿನಂಥ ಸಣ್ಣ ಗಾತ್ರದ ಪಿಟ್ಯುಟರಿ ಗ್ರಂಥಿಗೆ ಈ ಸಂದೇಶ ತಲುಪಿಸುತ್ತದೆ. ಅದು ಅಡ್ರಿನೋಕಾರ್ಟಿಕೋಟ್ರೋಪಿಕ್‌ ಹಾರ್ಮೋನನ್ನು ಕಿಡ್ನಿಯ ಬಳಿಯಿರುವ ಅಡ್ರಿನಲ್‌ ಗ್ರಂಥಿಗಳಿಗೆ ಕಳಿಸುತ್ತದೆ. ಇದು ಒತ್ತಡ ನಿಭಾಯಿಸುವ ನೈಜ ಕೇಂದ್ರ. ಇವು ಕಾರ್ಟಿಸೋಲ್‌ ಎಂಬ ಸ್ಟಿರಾಯ್ಡಲ್‌ ಹಾರ್ಮೋನನ್ನು ಸ್ರವಿಸಿ, ಒತ್ತಡದ ನಿಭಾವಣೆಗೆ ಮುಂದುಬಿಡುತ್ತದೆ. ಇದು ದೇಹದ ನರವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದರಿಂದ ಹೃದಯದ ಬಡಿತ ಹೆಚ್ಚಾಗುತ್ತದೆ, ನಾಡಿಮಿಡಿತ ಹಾಗೂ ರಕ್ತದೊತ್ತಡ ಹೆಚ್ಚಾಗುತ್ತವೆ. ಉಸಿರಾಟ ವೇಗವಾಗುತ್ತದೆ. ಮೆದುಳು ಹಾಗೂ ರಕ್ತನಾಳಗಳಲ್ಲಿ ಹೆಚ್ಚಿನ ಆಕ್ಸಿಜನ್‌ ಮತ್ತು ಗ್ಲುಕೋಸ್‌ ಉತ್ಪತ್ತಿಯಾಗುತ್ತದೆ. ಒತ್ತಡವನ್ನು ನಿಭಾಯಿಸಲು ಬೇಕಾದ ಶಕ್ತಿಯಿಂದ ದೇಹ ಕುದಿಯುತೊಡಗುತ್ತದೆ. ಅಪಾಯ ದೂರವಾದಾಗ, ಕಾರ್ಟಿಸೋಲ್‌ ಮಟ್ಟ ಕಡಿಮೆಯಾಗುತ್ತದೆ ಹಾಗೂ ದೇಹ ಮೊದಲಿನ ಸ್ಥಿತಿಗೆ ಬರುತ್ತದೆ.

ಹಾಗಾದರೆ ಅಪಾಯ ಎಲ್ಲಿ? ನೈಜವಾದ ಅಪಾಯ ಉಂಟಾದಾಗ ದೇಹದಲ್ಲಿ ಈ ಪ್ರಕ್ರಿಯೆಗಳು ನಡೆಯಲೇಬೇಕು. ಇಲ್ಲವಾದರೆ ಅದನ್ನು ಎದುರಿಸುವ ಚೈತನ್ಯ ಉಂಟಾಗುವುದಿಲ್ಲ. ಆದರೆ ಇದು ನಿತ್ಯವೂ ಸಂಭವಿಸಿದರೆ, ಅತಿ ಸಣ್ಣ ಒತ್ತಡಕ್ಕೂ (ಉದಾಹರಣೆಗೆ ಟ್ರಾಫಿಕ್‌ ಜಾಮ್)‌ ದೇಹದಲ್ಲಿ ಈ ಪ್ರಕ್ರಿಯೆಗಳು ಉಂಟಾಗಲು ತೊಡಗಿದರೆ, ಆಗ ನಿಯಂತ್ರಣ ತಪ್ಪುತ್ತದೆ. ʼʼಕಾರ್ಟಿಸೋಲ್‌ ಎಂಬುದು ನಮ್ಮನ್ನು ಉಳಿಸುವ ಹಾರ್ಮೋನ್‌. ಇದು ನಮ್ಮ ಆಲೋಚನೆಗಳಿಂದ ನಿಯಂತ್ರಿಸಲ್ಪಡುತ್ತದೆ. ನಮ್ಮ ಯೋಚನೆಗಳು ಒತ್ತಡಯುಕ್ತವಾದಾಗ ದೇಹವನ್ನು ಕಾಪಾಡಿಕೊಳ್ಳಲು ಕಾರ್ಟಿಸೋಲ್ ಸ್ರವಿಸುತ್ತದೆ. ಆದರೆ ದೀರ್ಘಾವಧಿ ಮತ್ತು ಪದೇ ಪದೇ ನಾವು ಒತ್ತಡಯುಕ್ತರಾಗಿದ್ದರೆ, ಯಾವಾಗಲೂ ದೇಹದಲ್ಲಿ ಕಾರ್ಟಿಸೋಲ್‌ ತುಂಬಿರುತ್ತದೆ ಮತ್ತು ಅದು ನಮ್ಮ ದೈಹಿಕ- ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲವೇ ಅಲ್ಲ.

ಕಾರ್ಟಿಸೋಲ್‌ ಎಂಬ ಎರಡಲಗಿನ ಕತ್ತಿ

ಕಾರ್ಟಿಸೋಲ್‌ ಎಂಬ ಚೋದಕದ ಪತ್ತೆಯಾದಾಗ ಅದು ವಿಜ್ಞಾನದಲ್ಲಿ ಒಂದು ಮಹತ್ವದ ಸಂಗತಿಯಾಗಿತ್ತು. ಆದರೆ, ಸ್ಟಿರಾಯ್ಡ್‌ಗಳು ಯಾವಾಗಲೂ ಎರಡಲಗಿನ ಕತ್ತಿ ಎಂಬುದು ನಂತರ ಗೊತ್ತಾಯಿತು. ಇವು ಅತಿಯಾದಾಗ, ತಮ್ಮ ನಿಜವಾದ ಉದ್ದೇಶಕ್ಕಿಂತ ವ್ಯತಿರಕ್ತವಾದುದನ್ನೇ ಮಾಡುತ್ತವೆ. ದೇಹವನ್ನು ಉಳಿಸುವ ಭರದಲ್ಲಿ ಉರಿಯೂತ ಸೃಷ್ಟಿ ಮಾಡುತ್ತವೆ. ಅತಿಯಾದ ಕಾರ್ಟಿಸೋಲ್‌ ಮೆದುಳಿನಲ್ಲಿ ಕಾಯಂ ಬದಲಾವಣೆಗಳನ್ನು ಮಾಡುತ್ತದೆ ಹಾಗೂ ನರವ್ಯೂಹ ಕಾಯಿಲೆಗಳನ್ನು ಸೃಷ್ಟಿಮಾಡುತ್ತದೆ ಎನ್ನುತ್ತಾರೆ ದೆಹಲಿಯ ನ್ಯೂರಾಲಜಿಸ್ಟ್‌ ಡಾ.ಪಿ.ಎನ್‌ ರಂಜನ್‌. 2018ರಲ್ಲಿ ವಾಷಿಂಗ್ಟನ್‌ ಮೂಲದ ಸೊಸೈಟಿ ಫಾರ್‌ ರಿಸರ್ಚ್‌ ಇನ್‌ ಚೈಲ್ಡ್‌ ಡೆವಲಪ್‌ಮೆಂಟ್‌ ನಡೆಸಿದ ಅಧ್ಯಯನದಲ್ಲಿ, ಹೈಸ್ಕೂಲ್‌ ಅಂಕಗಳಲ್ಲಿ ಇಳಿಕೆ ಉಂಟಾದಾಗ ಮಕ್ಕಳಲ್ಲಿ ಕಾರ್ಟಿಸೋಲ್‌ ಹೆಚ್ಚಾದುದನ್ನು ದಾಖಲಿಸಿದೆ. 2021ರಲ್ಲಿ ಒರ್ಯಾಕಲ್‌ ಹಾಗೂ ಅಮೆರಿಕದ ವರ್ಕ್‌ಪ್ಲೇಸ್‌ ಇಂಟಲಿಜೆನ್ಸ್‌ ಎಂಬ ಸಂಸ್ಥೆಗಳು ಜಂಟಿಯಾಗಿ ಒಂದು ಅಧ್ಯಯನ ನಡೆಸಿದ್ದು, ಇದರಲ್ಲಿ 13 ದೇಶಗಳ 41,600 ಉದ್ಯೋಗಿಗಳನ್ನು ಮಾತಾಡಿಸಿದವು. ಇದರಲ್ಲಿ, ಭಾರತದ ಉದ್ಯೋಗಿಗಳಲ್ಲಿ ಅತಿ ಹೆಚ್ಚು ಒತ್ತಡವಿರುವುದನ್ನು ಗುರುತಿಸಿತು. ಇತರೆಡೆಯ ಉದ್ಯೋಗಿಗಳಲ್ಲಿ 80% ಒತ್ತಡವಿದ್ದರೆ, ಭಾರತದವರಲ್ಲಿ 91% ಇತ್ತು. ಈ ಒತ್ತಡಗಳು ಕೌಟುಂಬಿಕದಿಂದ ಹಿಡಿದು ವೃತ್ತಿಸಂಬಂಧಿ, ಆರ್ಥಿಕದಿಂದ ರಾಜಕೀಯದವರೆಎಗ ವ್ಯಾಪಿಸಿವೆಯಂತೆ.

killer stress

ʼʼನಮ್ಮ ದೇಹದ ಒತ್ತಡ ವ್ಯವಸ್ಥೆ ಯಾಕೆ ಇರುವುದು ಗೊತ್ತೇ? ಅದು ಇರುವುದು ʼಮಾಡು ಇಲ್ಲವೇ ಮಡಿʼ ಸನ್ನಿವೇಶಕ್ಕಾಗಿ. ಆದರೆ ಇಂದು ಅದು ಅತ್ಯಂತ ಸಣ್ಣ ಸಂಗತಿಗಳಲ್ಲೂ ಕ್ರಿಯಾಶೀಲವಾಗುವಂತೆ ನಾವು ಮಾಡಿಕೊಂಡಿದ್ದೇವೆ. ಆಫೀಸಿಗೆ ತಡವಾಯ್ತು, ಆನ್‌ಲೈನ್‌ನಲ್ಲಿ ಏನೋ ಅಹಿತಕರವಾದದ್ದನ್ನು ಓದಿದೆವು- ಎಂಬುದಕ್ಕೂ ಒತ್ತಡ ಸೃಷ್ಟಿಯಾಗುತ್ತದೆ. ಮಿತಿ ಮೀರಿ ಯೋಚಿಸುವುದು, ಮಿತಿ ಮೀರಿ ವಿಶ್ಲೇಷಿಸುವುದು ನಮ್ಮ ಅಸ್ತಿತ್ವದ ಭಾಗವಾಗಿಬಿಟ್ಟಿದೆ. ನಮ್ಮ ಯೋಚನೆಗಳೇ ಒತ್ತಡದ ಕುರಿತು ನಮ್ಮ ಮೆದುಳಿನ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ನಾವು ಕೆಟ್ಟದನ್ನೇ ಸದಾ ಯೋಚಿಸುತ್ತಿದ್ದರೆ, ಅಪ್ರಜ್ಞಾಪೂರ್ವಕವಾಗಿ ಹೈಪೋಥಲಾಮಸ್‌ಗೆ ತಪ್ಪು ಸಂದೇಶಗಳು ಹೋಗುತ್ತಿರುತ್ತವೆʼʼ ಎಂದು ಫೋರ್ಟಿಸ್‌ನ ನಿರ್ದೇಶಕ ಡಾ.ಸಮೀರ್‌ ಪಾರಿಖ್‌ ಎಂಬವರು ಹೇಳುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯು 2016ರಲ್ಲಿ ಒತ್ತಡವನ್ನು ʼ21ನೇ ಶತಮಾನದ ವಿಶ್ವ ಆರೋಗ್ಯ ಸಾಂಕ್ರಾಮಿಕʼ ಎಂದು ಗುರುತಿಸಿತು. ಒತ್ತಡವೊಂದು ಲಕ್ಷಣಸಹಿತ ಗುರುತಿಸಬಹುದಾದ ಕಾಯಿಲೆಯಲ್ಲ. ಆದರೆ ಅದು ಜೀವಾಪಾಯಕ್ಕೆ ಕಾರಣವಾಗಬಲ್ಲ ಕಾಯಿಲೆಗಳನ್ನು ಪ್ರಚೋದಿಸಬಲ್ಲುದು. ವೈದ್ಯಕೀಯ ತಜ್ಞರು ಒತ್ತಡವನ್ನು ದೇಹದ ದೀರ್ಘಕಾಲಿಕ ಉರಿಯೂತ ಎಂದೇ ಗುರುತಿಸುತ್ತಾರೆ.

ಕಿಡ್ನಿಯ ಮೇಲೆ ಪರಿಣಾಮ

ಒತ್ತಡವು ಕಿಡ್ನಿಯನ್ನು ಹಾಳುಗೆಡವುತ್ತದೆ ಎಂದರೆ ನೇರವಾಗಿ ಹಾಗೆ ಮಾಡುತ್ತದೆಂದಲ್ಲ. ಬದಲು, ಸದಾ ಒತ್ತಡಯುಕ್ತರಾದವರು ಕಡಿಮೆ ನೀರು ಸೇವಿಸುತ್ತಾರೆ. ಲೈಫ್‌ಸ್ಟೈಲ್‌ನಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಪೌಷ್ಟಿಕ ಆಹಾರಕ್ಕೆ ಗಮನ ಕೊಡುವುದಿಲ್ಲ. ಇದು ಡಯಾಬಿಟಿಸ್‌, ಅಧಿಕ ರಕ್ತದೊತ್ತಡಗಳಿಗೆ ಕಾರಣವಾಗುತ್ತದೆ. ಇದರಿಂದ ಕಿಡ್ನಿಯ ಮೇಲೆ ದುಷ್ಪರಿಣಾಮ ಖಚಿತ.

ಡಯಾಬಿಟಿಸ್‌ನ ಕಾರಣ

2017ರಲ್ಲಿ PLOS one ಎಂಬ ಜರ್ನಲ್‌ ನಡೆಸಿದ ಅಧ್ಯಯನದ ಪ್ರಕಾರ ಟೈಪ್‌ 2 ಡಯಾಬಿಟಿಸ್‌ನ ಕಾರಣಗಳಲ್ಲಿ ಸ್ಟ್ರೆಸ್‌ ಕೂಡ ಒಂದು. 2018ರ BMC ಜರ್ನಲ್‌ ಅಧ್ಯಯನದ ಪ್ರಕಾರ ಟೈಪ್‌ 2 ಡಯಾಬಿಟಿಸ್‌ ಹೊಂದಿರುವವರಲ್ಲಿ 20-40%ರಷ್ಟು ಮಂದಿ ಜೀವನದಲ್ಲಿ ಹೆಚ್ಚಿನ ಒತ್ತಡಯುಕ್ತ ಸನ್ನಿವೇಶದಲ್ಲಿ ಕೆಲಸ ಮಾಡಿದವರು. 2020ರಲ್ಲಿ ಸೈಕೋಎಂಡೋಕ್ರೈನಾಲಜಿ ನಡೆಸಿದ ಅಧ್ಯಯನದಲ್ಲಿ ಟೈಪ್‌ 2 ಡಯಾಬಿಟಿಸ್‌ ಹೊಂದಿದ ಪೇಷೆಂಟ್‌ಗಳಲ್ಲಿ ಕಾರ್ಟಿಸೋಲ್‌ ರಕ್ತದ ಸಕ್ಕರೆಯ ಅಂಶವನ್ನು ಹೆಚ್ಚು ಮಾಡಿದುದು ಕಂಡುಬಂತು.

ಮೆದುಳು ಕುಗ್ಗುತ್ತದೆ

ಅಧಿಕ ಪ್ರಮಾಣದ ಕಾರ್ಟಿಸೋಲ್‌ ಸ್ರಾವದಿಂದಾಗಿ, ಮೆದುಳಿನ ನರವ್ಯೂಹ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದಾಗಿ, ನಮ್ಮ ಸಾಮಾಜೀಕರಣವೇ ಏರುಪೇರಾದೀತು. ಅಂದರೆ ಇತರರೊಂದಿಗೆ ನಮ್ಮ ಬೆರೆಯುವಿಕೆಯಲ್ಲಿ ತೊಡಕು ಸೃಷ್ಟಿಯಾದೀತು. ಒತ್ತಡವು ಮೆದುಳಿನ ಜೀವಕೋಶಗಳನ್ನು ಸಾಯಿಸಬಲ್ಲುದು ಹಾಗೂ ಮೆದುಳಿನ ಗಾತ್ರವನ್ನೂ ಕುಗ್ಗಿಸಬಲ್ಲುದು ಎಂಬುದು ಕೆಲವು ಪ್ರಕರಣಗಳಲ್ಲಿ ಗೊತ್ತಾಗಿದೆ. ಮೆದುಳಿನ ಮುಂಭಾಗದಲ್ಲಿರುವ ಪ್ರಿಫ್ರಂಟಲ್‌ ಕಾರ್ಟೆಕ್ಸ್‌ ಅನ್ನು ಕುಗ್ಗಿಸುವ ಪರಿಣಾಮವನ್ನು ಕಾರ್ಟಿಸೋಲ್‌ ಮಾಡುವುದರಿಂದ, ಜ್ಞಾಪಕಶಕ್ತಿಯಲ್ಲೂ ತೊಂದರೆ ಉಂಟಾಗುತ್ತದೆ.

ಹೃದಯದಲ್ಲಿ ಇದೇನಿದು?

heart attack

ಅಧಿಕ ಪ್ರಮಾಣದ ಕಾರ್ಟಿಸೋಲ್‌ನಿಂದಾಗಿ ಹೃದಯಕ್ಕೆ ರಕ್ತವನ್ನು ಒಯ್ಯುವ ರಕ್ತನಾಳಗಳಲ್ಲಿ ಸಂಕುಚನ ಉಂಟಾಗುತ್ತದೆ. ದೀರ್ಘಾವಧಿ ಕಾರ್ಟಿಸೋಲ್‌ಗೆ ಒಡ್ಡಿಕೊಳ್ಳುವುದರಿಂದ ರಕ್ತದೊತ್ತಡ, ಟ್ರೈಗ್ಲಿಸರೈಡ್ಸ್‌ಗಳು ಮತ್ತು ಕೊಲೆಸ್ಟರಾಲ್‌ ಹೆಚ್ಚುತ್ತದೆ. 2019ರಲ್ಲಿ BMJ ಜರ್ನಲ್‌ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಅಂಶವೆಂದರೆ, ಕಡಿಮೆ ವಯಸ್ಸಿನಲ್ಲಿ ಹೃದಯದ ಸಮಸ್ಯೆಗಳು ಕಂಡುಬರುವುದರ ಹಿನ್ನೆಲೆಯಲ್ಲಿ ಒತ್ತಡದ ಕೈವಾಡವೂ ಇದೆ.

ಅರ್ಬುದ ಎಂದೆಂಬ ವ್ಯಾಘ್ರನು

2021ರಲ್ಲಿ Pubmed ಒಂದು ಅಧ್ಯಯನ ನಡೆಸಿತು. ಅದರಂತೆ, ಪ್ರಯೋಗಾಲಯದ ಇಲಿಗಳಲ್ಲಿ ಒತ್ತಡದ ಹಾರ್ಮೋನುಗಳು ಕೆಲವು ಬಗೆಯ ಕ್ಯಾನ್ಸರ್‌ಕಾರಕ ಕೋಶಗಳ ಜನ್ಮಕ್ಕೆ ಕಾರಣವಾದುದನ್ನು ಗುರುತಿಸಿತು. ಇದು ಮನುಷ್ಯರಲ್ಲೂ ನಿಜವಾಗಬಹುದು. ಅಂದರೆ ಅತೀವ ಒತ್ತಡದ ಪರಿಣಾಮ ಕ್ಯಾನ್ಸರ್‌ ಕೋಶಗಳು ಹುಟ್ಟಿಕೊಂಡರೂ ಅಚ್ಚರಿಯಿಲ್ಲ.

ಮೂಳೆ ಮುರಿಯುವ ಒತ್ತಡ

ಕಾರ್ಟಿಸೋಲ್‌ಗೂ ಮೂಳೆಗಳ ಸಾಂದ್ರತೆಗೂ ನೇರ ಸಂಬಂಧವಿದೆ. ಕಾರ್ಟಿಸೋಲ್‌ ಹೆಚ್ಚಾದಷ್ಟೂ ಮೂಳೆಗಳ ಸಾಂದ್ರತೆ ಕುಸಿಯುತ್ತದೆ. ಮೂಳೆಗಳು ಪೊಳ್ಳಾಗುವಿಕೆ ಹೆಚ್ಚಾಗುತ್ತದೆ. ಇದು ಬೆನ್ನೆಲುಬು, ಮೊಣಕಾಲು ಮುಂತಾದವುಗಳ ಮೇಲೆ ಒತ್ತಡ ಹಾಕಿ ಸಂಧಿವಾತಕ್ಕೆ ಕಾರಣವಾಗಬಹುದು. ಮೂಳೆಸಂದುಗಳಲ್ಲಿ ನೋವು, ಉರಿಯೂತ ಸಾಮಾನ್ಯವಾದೀತು.

ಇದನ್ನೂ ಓದಿ | ವಿಸ್ತಾರ Explainer | ಲೂಸ್ ಸಿಗರೇಟ್‌ ಮಾರಾಟ ನಿಷೇಧಕ್ಕೆ ಚಿಂತನೆ ಏಕೆ? ಇದರ ಹಿಂದಿನ ಉದ್ದೇಶ ಏನು?

ಪೌಷ್ಟಿಕತೆ ಕುಸಿತ

ಒತ್ತಡದ ಹಾರ್ಮೋನುಗಳಿಗೂ ಒತ್ತಡ ಆಹಾರ ಸೇವನೆ (stress eating)ಗೂ ಸಂಬಂಧವಿದೆ. ಕಾರ್ಟಿಸೋಲ್‌ ಹೆಚ್ಚಾದಷ್ಟೂ ಅತಿಯಾದ ಆಹಾರ ಸೇವನೆ, ಅತೀ ಕಡಿಮೆ ಸೇವನೆ, ಜಂಕ್‌ ಫುಡ್‌ ಹೆಚ್ಚಳ, ಕಳಪೆ ಆಹಾರ ಇತ್ಯಾದಿಗಳು ಹೆಚ್ಚುತ್ತವೆ. ಇದರಿಂದ ಅಪೌಷ್ಟಿಕತೆ ಸಾಮಾನ್ಯ.

ನಿದ್ರೆಯಿಲ್ಲದ ರಾತ್ರಿಗಳು (ಇನ್‌ಸೋಮ್ನಿಯಾ)

sleep

ಪ್ರತಿದಿನ ಅನುಭವಿಸುವ ಒತ್ತಡದ ಪ್ರಥಮ ನೇರ ಪರಿಣಾಮ ಗೊತ್ತಾಗುವುದು ನಿದ್ರೆಯ ಅಭ್ಯಾಸದಲ್ಲಿ. ಈ ಸಂದರ್ಭದಲ್ಲಿ REM ನಿದ್ರೆ ಹೆಚ್ಚಳವಾಗುತ್ತದೆ. ಹೀಗೆಂದರೆ ತೀವ್ರ ಕಣ್ಣುಗುಡ್ಡೆ ಚಲನೆಯ ನಿದ್ರೆ. ಇದು ಗಾಢವಾದ ನಿದ್ರೆಯಲ್ಲ. ಇದು ಮೆದುಳಿನಲ್ಲಿ ಅತಿಯಾದ ಚಟುವಟಿಕೆ ಸೃಷ್ಟಿಸುತ್ತದೆ. ಮೆದುಳನ್ನು ಶಾಂತವಾಗಿಸುವ ಗಾಢವಾದ ನಿದ್ರೆ ಕಡಿಮೆಯಾಗುತ್ತದೆ. ಮೆದುಳಿಗೆ ವಿಶ್ರಾಂತಿ ಪಡೆಯುವ ಸಮಯವೇ ಇಲ್ಲವಾಗುತ್ತದೆ. ಮೆದುಲು ರಿಲ್ಯಾಕ್ಸ್‌ ಆಗುವುದಿಲ್ಲವಾದ್ದರಿಂದ ದೇಹಕ್ಕೂ ನಿದ್ರೆ ಹಾಗೂ ವಿಶ್ರಾಂತಿ ಸಿಗುವುದಿಲ್ಲ.

ಶೃಂಗಾರವಿಲ್ಲದ ಜೀವನ

ಕಾರ್ಟಿಸೋಲ್‌ ಉಂಟುಮಾಡುವ ಕಿತಾಪತಿಯಿಂದಾಗಿ ಲೈಂಗಿಕ ಹಾರ್ಮೋನ್‌ಗಳ ಸ್ರಾವ ಕೂಡ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹದಲ್ಲಿ ಲೈಂಗಿಕ ಚೈತನ್ಯ ಸೃಷ್ಟಿಯಾಗುವುದಿಲ್ಲ. ಫಲವತ್ತತೆ ದೂರವಾದೀತು. ಮಹಿಳೆಯರಲ್ಲಿ ಋತುಸ್ರಾವಕ್ಕೆ ಕಾರಣವಾಗುವ ಹಾರ್ಮೋನ್‌ಗಳ ಸ್ರಾವದಲ್ಲೂ ಕಾರ್ಟಿಸೋಲ್‌ ಏರುಪೇರು ಉಂಟುಮಾಡುತ್ತದೆ.

ಇದನ್ನೂ ಓದಿ | Health Tips | ಈ ಕಾಂಬಿನೇಷನ್‌ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!

ನಿಮಗೆ ಒತ್ತಡ ಇದೆಯೆಂಬುದು ಹೇಗೆ ಗೊತ್ತಾಗುತ್ತದೆ?

  • ನಿದ್ರೆ ಮತ್ತು ಆಹಾರದ ಅಭ್ಯಾಸದಲ್ಲಿ ಬದಲಾವಣೆಯಾಗುತ್ತದೆ.
  • ತಲೆನೋವು ಅಥವಾ ಮೂಳೆ ನೋವು ಹೆಚ್ಚಾಗುತ್ತದೆ.
  • ದೇಹದಲ್ಲಿ ಸುಸ್ತು, ಉದಾಸೀನ ಕಾಣಿಸಿಕೊಳ್ಳುತ್ತದೆ.
  • ರಕ್ತದ ಒತ್ತಡ, ಹೃದಯ ಬಡಿತದ ಪ್ರಮಾಣ ಹೆಚ್ಚಾಗಬಹುದು.
  • ಗಾಬರಿಯಾಗುವಿಕೆ, ಬೆದರಿಕೊಳ್ಳುವಿಕೆ ಹೆಚ್ಚಾಗಬಹುದು.
  • ಏಕಾಗ್ರತೆಯಲ್ಲಿ ಕೊರತೆ ಕಾಣಿಸಿಕೊಳ್ಳುತ್ತದೆ.
  • ಸಾಮಾಜಿಕ ಸಂಬಂಧಗಳನ್ನು ನಿರ್ವಹಿಸುವುದರಲ್ಲಿ ಕಷ್ಟ.

ಒತ್ತಡವನ್ನು ನಿಭಾಯಿಸುವುದು ಹೇಗೆ?

  • ಸಕಾರಾತ್ಮಕವಾಗಿ ಯೋಚಿಸಿ: ಇದಕ್ಕೆ ಮೆದುಳನ್ನು ಸಿದ್ಧಪಡಿಸಬೇಕು. ಅರ್ಧ ಖಾಲಿ ಕಪ್ಪನ್ನು ಅರ್ಧ ತುಂಬಿದ ಕಪ್‌ ಎಂದು ನೋಡುವ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಇದಕ್ಕೆ ಮೆದುಳನ್ನು ತಯಾರುಮಾಡಬೇಕು. ಮೆದುಳು ಧನಾತ್ಮಕವಾಗಿ ಯೋಚಿಸತೊಡಗಿದಾಗ, ಕಾರ್ಟಿಸೋಲ್‌ ಮಟ್ಟ ಕಡಿಮೆಯಾಗುತ್ತದೆ.
  • ಸಂಭ್ರಮಿಸಿ: ನೀವು ಪ್ರೀತಿಸುವ ಕೆಲಸಗಳನ್ನು ಹೆಚ್ಚಾಗಿ ಮಾಡುವುದು, ನಿಮ್ಮನ್ನು ಪೋಷಿಸಿಕೊಳ್ಳುವುದರತ್ತ ಹೆಚ್ಚು ಗಮನ ನೀಡುವುದು ಅಗತ್ಯ. ನಿಮ್ಮನ್ನು ಸಂತೋಷಪಡಿಸುವ ಯಾವುದೇ ಸಂಗತಿಯು ನಿಮ್ಮ ಒತ್ತಡದ ಹಾರ್ಮೋನ್‌ ಮಟ್ಟವನ್ನು ಕಡಿಮೆ ಮಾಡುತ್ತದೆ.
  • ಧ್ಯಾನ, ಪ್ರಾಣಾಯಾಮ ಮಾಡಿ: ಉಸಿರಿನ ಮೇಲೆ ಹತೋಟಿ ಸಾಧಿಸುವುದು, ಧ್ಯಾನ ಮುಂತಾದವುಗಳು ನಿಮ್ಮ ಬೆದರಿದ ಯೋಚನೆಗಳನ್ನು ಕಡಿಮೆ ಮಾಡುವುದು ಕಂಡುಬಂದಿದೆ. ನಿಧಾನವಾದ ಹಾಗೂ ನಿಯಂತ್ರಿತ ಉಸಿರಾಟದಿಂದ ರಕ್ತದ ಒತ್ತಡವೂ ಕಡಿಮೆಯಾಗುತ್ತದೆ.
  • ನಗುವಿರಲಿ ಬದುಕಿನಲಿ: ನಗುನಗುತ್ತಿದ್ದರೆ, ಹಾಸ್ಯಪ್ರಜ್ಞೆಯಿದ್ದರೆ ಒತ್ತಡದ ಹಾರ್ಮೋನ್‌ ಸ್ರಾವ ಕಡಿಮೆಯಾಗುವುದು ಕಂಡುಬಂದಿದೆ.
  • ಪರ್ಯಾಯ ಥೆರಪಿ: ದೇಹದಲ್ಲಿನ ನೆಗೆಟಿವ್‌ ಚಿಂತನೆ, ಶಕ್ತಿಗಳನ್ನು ಕಡಿಮೆ ಮಾಡುವಲ್ಲಿ ರೇಕಿ, ಫ್ಲವರ್‌ ಥೆರಪಿಯಂಥ ಪರ್ಯಾಯ ಚಿಕಿತ್ಸಾ ವ್ಯವಸ್ಥೆಗಳು ಕೆಲಸ ಮಾಡುವುದು ಕಂಡುಬಂದಿದೆ.
  • ಸಹಭಾಗಿಗಳಿರಲಿ: ನಿಮ್ಮ ಆತಂಕ, ಚಿಂತೆಗಳನ್ನು ಹಂಚಿಕೊಳ್ಳುವ ಆಪ್ತರು ಇದ್ದಾಗ, ನಿಮ್ಮನ್ನು ಈ ಸಂದರ್ಭದಲ್ಲಿ ಕಾಪಾಡುವ ಗೆಳೆಯ/ತಿಯರಿದ್ದಾಗ ಒತ್ತಡ ಕಡಿಮೆಯಾಗುತ್ತದೆ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Lok sabha Election‌ 2024: ಲೋಕಸಭೆ ಚುನಾವಣೆಯಲ್ಲಿ ಈ 10 ವಿಷಯಗಳೇ ನಿರ್ಣಾಯಕ

Lok sabha Election 2024: ಕಳೆದ ಒಂದು ದಶಕದಿಂದ ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೆ ಈ ಸಂದರ್ಭದಲ್ಲಿ ಅದು ಹಲವು ಬಾರಿ ಎಡವಿದ್ದರೂ ಮತ್ತೆ ಹಲವು ಬಾರಿ ಪುಟಿದು ಎದ್ದೇಳುವ ಪ್ರಯತ್ನದಲ್ಲಿ ಯುಶಸ್ವಿಯಾಗಿದೆ. ಇದರಲ್ಲಿ ಈ ಬಾರಿ ಚುನಾವಣೆ ಮೇಲೆ ಪ್ರಭಾವ ಬೀರಬಹುದಾದ ಹಲವಾರು ಅಂಶಗಳಿವೆ ಅವು ಯಾವುದು ಗೊತ್ತೇ? ಇಲ್ಲಿದೆ ವಿಸ್ತೃತ ವಿಶ್ಲೇಷಣೆ.

VISTARANEWS.COM


on

By

Lok sabha election-2024
Koo

ದೇಶಾದ್ಯಂತ ಏಳು ಹಂತದಲ್ಲಿ ನಡೆಯಲಿರುವ 2024ರ ಲೋಕಸಭಾ ಚುನಾವಣೆಯ (Lok sabha election-2024) ಮೊದಲ ಹಂತದ ಮತದಾನ (voting) ಪ್ರಕ್ರಿಯೆ ಶುಕ್ರವಾರ ಆರಂಭಗೊಂಡಿದೆ. ವಿಶ್ವದ ಅತಿ ದೊಡ್ಡ ಚುನಾವಣೆಯಲ್ಲಿ ಸುಮಾರು 100 ಕೋಟಿ ಭಾರತೀಯರು (indians) ಮತ ಚಲಾಯಿಸಲಿದ್ದಾರೆ.

ಚುನಾವಣೆ ಪೂರ್ವದಲ್ಲೇ ಸಾಕಷ್ಟು ಸಮೀಕ್ಷೆಗಳನ್ನು ನಡೆಸಲಾಗಿದ್ದು, ಈ ಬಾರಿಯೂ ಪ್ರಧಾನಿ (PM) ನರೇಂದ್ರ ಮೋದಿ (narendra modi) ನೇತೃತ್ವದ ಭಾರತೀಯ ಜನತಾ ಪಕ್ಷ (BJP) ಸುಲಭವಾಗಿ ಗೆಲುವು ಸಾಧಿಸುತ್ತದೆ ಎಂಬುದು ತಿಳಿದು ಬಂದಿದೆ. ಒಂದು ವೇಳೆ ಈ ಬಾರಿಯೂ ಬಿಜೆಪಿ ಗೆಲುವು ದಾಖಲಿಸಿದರೆ ಸತತ ಮೂರನೇ ಅವಧಿಗೆ ಅಧಿಕಾರ ಬಿಜೆಪಿ ಪಾಲಾದಂತಾಗುತ್ತದೆ.

ಏಪ್ರಿಲ್ 19ರಿಂದ ಜೂನ್ 1ರವರೆಗೆ ನಡೆಯಲಿರುವ ಏಳು ಹಂತಗಳಲ್ಲಿಮತದಾನದ ಎಣಿಕೆ ಪ್ರಕ್ರಿಯೆ ಜೂನ್ 4ರಂದು ನಡೆಯಲಿದೆ. ಸಂಸತ್ತಿನ ಕೆಳಮನೆಯಾದ ಲೋಕಸಭೆಯ 543 ಸ್ಥಾನಗಳಿಗೆ ನಡೆಯುವ ಚುನಾವಣೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳಿವೆ.

ಇದನ್ನೂ ಓದಿ: Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

1. ಆರ್ಥಿಕತೆಯ ಪ್ರಗತಿ

ಮಾರ್ಚ್ 31ರಂದು ಆರ್ಥಿಕ ವರ್ಷ ಕೊನೆಯಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಸುಮಾರು ಶೇ. 8ರಷ್ಟು ಬೆಳವಣಿಗೆಯಾಗಿದೆ. ಇದು ಅತ್ಯಂತ ವೇಗವಾದ ಬೆಳವಣಿಗೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಕಳೆದ ಒಂದು ದಶಕದಲ್ಲಿ ಭಾರತದ ಆರ್ಥಿಕತೆಯು ಮೊದಲಿಗಿಂತ ಐದು ಸ್ಥಾನಗಳನ್ನು ಜಿಗಿದು ವಿಶ್ವದಲ್ಲಿ ಐದನೇ ಸ್ಥಾನಕ್ಕೆ ತಲುಪಿದೆ. ಈ ಬಾರಿ ಚುನಾವಣೆಯಲ್ಲಿ ತಾವು ಗೆದ್ದರೆ ಅದನ್ನು ಮೂರನೇ ಸ್ಥಾನಕ್ಕೆ ಏರಿಸುವ ಭರವಸೆ ನೀಡಿದ್ದಾರೆ.

2. ಅಭಿವೃದ್ಧಿಯ ತೀವ್ರಗತಿ

ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಪ್ರಮುಖ ನಗರಗಳಾದ ನವದೆಹಲಿ ಮತ್ತು ಮುಂಬಯಿ ಸೇರಿದಂತೆ ದೇಶದಾದ್ಯಂತ ಇರುವ ರಸ್ತೆಗಳು ಮತ್ತು ಸೇತುವೆಗಳು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೂ ಅಭಿವೃದ್ಧಿ ಕಾರ್ಯಗಳು ಗ್ರಾಮಾಂತರಕ್ಕಿಂತ ನಗರಗಳಲ್ಲೇ ಹೆಚ್ಚು ಕೇಂದ್ರಿತವಾಗಿವೆ ಎಂಬ ಆರೋಪವೂ ಇದೆ.


3. ಹಣದುಬ್ಬರ, ಬೆಲೆ ಏರಿಕೆ

2021-22 ರಲ್ಲಿ ಶೇ.5.5ರಷ್ಟು ಇದ್ದ ಹಣದುಬ್ಬರ 2022- 23ರಲ್ಲಿ ಶೇ. 6.7ಕ್ಕೆ ಏರಿದೆ. ಕೇವಲ ಫೆಬ್ರವರಿಯಲ್ಲಿ ಹಣದುಬ್ಬರ ಶೇ. 5.09 ರಷ್ಟು ಆಗಿತ್ತು. ಬೆಲೆ ಏರಿಕೆ ವಿಷಯ ಕೂಡ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದೆ.

4. ಮೋದಿ ಕಲ್ಯಾಣ ನೀತಿಗಳು

ಕೋವಿಡ್ ಸಾಂಕ್ರಾಮಿಕದ ಬಳಿಕ ಸರ್ಕಾರವು ಭಾರತದ 1.42 ಶತಕೋಟಿ ಜನರಲ್ಲಿ 814 ಮಿಲಿಯನ್ ಜನರಿಗೆ ಉಚಿತ ಆಹಾರ ಪಡಿತರವನ್ನು ನೀಡುತ್ತಿದೆ. ಭಾರತದ ಜನಸಂಖ್ಯೆಯ ಸುಮಾರು ಶೇ.60ರಷ್ಟು ಜನರಿಗೆ ಉಚಿತ ಸಿರಿಧಾನ್ಯಗಳನ್ನು ಸರ್ಕಾರ ಒದಗಿಸುತ್ತಿರುವುದು ದೇಶದ ಅಸಮ ಆರ್ಥಿಕ ಬೆಳವಣಿಗೆಯ ಸಂಕೇತ ಎನ್ನಲಾಗುತ್ತದೆ.
ಕಳೆದ ವರ್ಷದ ಅಂತ್ಯದ ವೇಳೆಗೆ ಭಾರತದ ಶ್ರೀಮಂತ ನಾಗರಿಕರು ಶೇ.40.1ರಷ್ಟು ಸಂಪತ್ತು ಹೊಂದಿದ್ದರು. ಇದು 1961ರ ಬಳಿಕ ಅತ್ಯಧಿಕವಾಗಿದೆ.

5. ಮಹಿಳೆಯರ ಪ್ರಭಾವ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಮಹಿಳಾ ಮತದಾರರನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಹಣ ಹಂಚಿಕೆ, ಪೈಪ್‌ಲೈನ್ ಮೂಲಕ ಮನೆಮನೆಗೆ ನೀರು, 24/7 ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕಗಳಂತಹ ಗೃಹೋಪಯೋಗಿ ಸೌಲಭ್ಯಗಳ ಮೂಲಕ ಅವರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಇವು ದೇಶದ ಮಹಿಳೆಯರು ಮೋದಿ ಆಡಳಿತ ಕುರಿತು ಸಕಾರಾತ್ಮಕ ಅಭಿಪ್ರಾಯ ಹೊಂದಲು ಕಾರಣವಾಗಿದೆ.


6. ಧಾರ್ಮಿಕ ಪ್ರಭಾವ

ಬಿಜೆಪಿ ಸುಮಾರು 35 ವರ್ಷಗಳ ಹಿಂದೆ ನೀಡಿದ ಭರವಸೆಯನ್ನು ಈಗ ಈಡೇರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ರಾಮನ ಜನ್ಮ ಸ್ಥಳ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಮೊಘಲ್ ದೊರೆ ಬಾಬರ್ ನಿಂದ ಕೆಡವಲ್ಪಟ್ಟ ದೇವಾಲಯ ಈಗ ಪುನರ್ ನಿರ್ಮಾಣಗೊಂಡಿದೆ.

ಅಲ್ಲದೇ ಪ್ರಧಾನಿಯವರು ದೇಶಾದ್ಯಂತ ಇರುವ ಹಿಂದೂ ದೇವಾಲಯಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಇದು ಬಿಜೆಪಿಗೆ ಹೆಚ್ಚು ಜನ ಬೆಂಬಲವನ್ನು ನೀಡಬಲ್ಲದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಮೋದಿಯವರ ಸರ್ಕಾರವು ಮುಸ್ಲಿಂ ಶಾಲೆಗಳು ಅಥವಾ ಮದರಸಾಗಳಿಗೆ ಬೆಂಬಲವನ್ನು ಕೊನೆಗೊಳಿಸಿದೆ ಮತ್ತು ಕೆಲವು ಬಿಜೆಪಿ ರಾಜ್ಯಗಳು ಅವುಗಳಲ್ಲಿ ಹಲವನ್ನು ಮುಚ್ಚಿವೆ. ಆದರೆ ಮೋದಿ ಅವರು ಪೌರತ್ವ ಕಾನೂನನ್ನು ಜಾರಿಗೆ ತಂದು ಹೊರದೇಶಗಳಿಂದ ವಲಸೆ ಬಂದಿರುವ ಅನೇಕರಿಗೆ ಸಹಾಯ ಮಾಡಿದೆ.

7. ಭ್ರಷ್ಟಾಚಾರ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಕಳೆದ ಒಂದು ದಶಕದಲ್ಲಿ ವಿರೋಧ ಪಕ್ಷದ ಸುಮಾರು 150 ರಾಜಕಾರಣಿಗಳನ್ನು ಕರೆಸಿ, ಪ್ರಶ್ನಿಸಿದೆ. ಹಲವಾರು ಅಧಿಕಾರಿಗಳು, ರಾಜಕಾರಣಿಗಳ ಆಸ್ತಿ ಮೇಲೆ ದಾಳಿ ನಡೆಸಿ ಬಂಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ರಾಜಕೀಯ ಲಾಭಕ್ಕಾಗಿ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವೂ ವಿರೋಧ ಪಕ್ಷಗಳಿಂದ ಕೇಳಿ ಬರುತ್ತಿದೆ. ಆದರೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಳೆದ 10 ವರ್ಷಗಳ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಹೀಗಾಗಿ ಈ ಅಂಶವೂ ಈ ಬಾರಿಯ ಚುನಾವಣೆ ಮೇಲೆ ಮಹತ್ವದ ಪ್ರಭಾವ ಬೀರಬಲ್ಲದು.

8. ನಿರುದ್ಯೋಗ

2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಜನರಿಗೆ ಹತ್ತಾರು ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದ್ದು, ಇದರಲ್ಲಿ ಅರ್ಧದಷ್ಟು ಪೂರೈಕೆ ಮಾಡಲೂ ಸಾಧ್ಯವಾಗಿಲ್ಲ ಎಂಬ ಆರೋಪ ಇದೆ. ನಿರುದ್ಯೋಗ ದರವು ಫೆಬ್ರವರಿಯಲ್ಲಿ ಶೇ. 8ಕ್ಕೆ ಏರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ತಿಳಿಸಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ 2023ರ ಮಾರ್ಚ್ ನಿಂದ ನಿರುದ್ಯೋಗ ದರವು ಶೇ.5.4ಕ್ಕೆ ಏರಿದೆ. ಮೋದಿ ಅಧಿಕಾರ ವಹಿಸಿಕೊಳ್ಳುವ ಮೊದಲು 2013-14 ರಲ್ಲಿ ಇದು ಶೇ. 4.9ರಷ್ಟಿತ್ತು.

15- 29 ವರ್ಷದ ಸುಮಾರು ಶೇ. 16ರಷ್ಟು ನಗರ ಯುವಕರು 2022-23 ರಲ್ಲಿ ಕಳಪೆ ಕೌಶಲ್ಯ ಮತ್ತು ಗುಣಮಟ್ಟದ ಉದ್ಯೋಗಗಳ ಕೊರತೆಯಿಂದಾಗಿ ನಿರುದ್ಯೋಗಿಗಳಾಗಿದ್ದಾರೆ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸಿದೆ. ಈ ವಿಷಯ ಮೋದಿ ಆಡಳಿತಕ್ಕೆ ನಕಾರಾತ್ಮಕವಾಗಿದೆ. ಪ್ರತಿಪಕ್ಷಗಳ ಪ್ರಬಲ ಅಸ್ತ್ರವಾಗಿದೆ.


9. ರೈತರ ಪ್ರತಿಭಟನೆ

ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ 2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಅದರ ಲಕ್ಷಣ ಕಾಣುತ್ತಿಲ್ಲ. ವಿಶೇಷವಾಗಿ ರೈತರು ಪ್ರತಿಭಟನೆ ಇದಕ್ಕೆ ಸಾಕ್ಷಿಯಾಗಿದೆ. ದೇಶದ ರೈತರ ವಿಶ್ವಾಸವನ್ನು ಸಂಪೂರ್ಣವಾಗಿ ಗಳಿಸಲು ಮೋದಿಗಿನ್ನೂ ಸಾಧ್ಯವಾಗಿಲ್ಲ.

10. ಜಾಗತಿಕ ಸ್ಥಾನಮಾನ

ಕಳೆದ ವರ್ಷ ಜಿ 20 ಶೃಂಗಸಭೆಯನ್ನು ಆಯೋಜಿಸಿರುವುದು, ರಷ್ಯಾದ ದಾಳಿಯ ವೇಳೆ ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಿರುವುದು ಪ್ರಧಾನಿ ನರೇಂದ್ರ ಮೋದಿಯ ಪ್ರಮುಖ ಸಾಧನೆಯಾಗಿದೆ. ಇದರಿಂದ ದೇಶಕ್ಕೆ ಸಿಗುತ್ತಿರುವ ಆರ್ಥಿಕತೆ ಬೆಂಬಲದೊಂದಿಗೆ ಭಾರತದ ಏರುತ್ತಿರುವ ಜಾಗತಿಕ ಸ್ಥಾನಮಾನ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ.

Continue Reading

ಚಿನ್ನದ ದರ

Gold Price Explainer: ಚಿನ್ನದ ದರ ಇಷ್ಟೊಂದು ಏರಲು ಏನು ಕಾರಣ? ಬಂಗಾರದ ಮೇಲೆ ಹೂಡಿಕೆಗಿದು ಸಕಾಲವೇ?

Gold Price Explainer: ಚಿನ್ನದ ಬೆಲೆ ಇತ್ತೀಚಿನ ದಿನಗಳಲ್ಲಿ ಗಗನಕ್ಕೇರುತ್ತಿದೆ. ಆದರೂ ಶುಭ ಸಮಾರಂಭಗಳ ಸೀಸನ್ ಗಳಲ್ಲಿ ಎಲ್ಲರೂ ಚಿನ್ನ ಖರೀದಿಗೆ ಮುಗಿ ಬೀಳುತ್ತಾರೆ. ಚಿನ್ನದ ದರ ನಿರಂತರ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಈ ಕುರಿತ ವಿಸ್ತೃತ ವಿಶ್ಲೇಷಣೆ ಇಲ್ಲಿದೆ.

VISTARANEWS.COM


on

By

Gold price
Koo

ನವದೆಹಲಿ: ಚಿನ್ನ (gold) ಯಾರಿಗೆ ಪ್ರಿಯವಿಲ್ಲ ಹೇಳಿ? ಆದರೆ ಇತ್ತೀಚೆಗೆ ವಿಪರೀತ ಏರುತ್ತಿರುವ ಚಿನ್ನದ ದರ ಶೀಘ್ರದಲ್ಲೇ ಲಕ್ಷದ ಗಡಿ ದಾಟುವ ಹಾಗೆ ತೋರುತ್ತಿದೆ. ಚಿನ್ನ ಎಷ್ಟೇ ದುಬಾರಿಯಾದರೂ ಮದುವೆ ಇತ್ಯಾದಿ ಶುಭ ಸಂದರ್ಭಗಳಲ್ಲಿ ಇದರ ಖರೀದಿಗೆ (shopping) ಜನ ಮುಗಿಬೀಳುತ್ತಾರೆ. ಜಾಗತಿಕ ಅನಿಶ್ಚಿತತೆ ಪರಿಣಾಮವಾಗಿ ಶೀಘ್ರದಲ್ಲೇ ಫೆಡರಲ್ ರಿಸರ್ವ್ (Federal Reserve) ದರ ಇಳಿಸುವ ನಿರೀಕ್ಷೆ, ಮದುವೆ ಸೀಸನ್ (Wedding season) ಪ್ರಾರಂಭ ಇತ್ಯಾದಿ ಕಾರಣಗಳಿಂದ ಈ ಬಾರಿ ಚಿನ್ನದ ದರ (Gold Price Explainer) ಮಾತ್ರ ಸಾರ್ವಕಾಲಿಕ ದಾಖಲೆ ಬರೆದಿದೆ. 24 ಕ್ಯಾರೆಟ್‌ನ ಪ್ರತಿ ಹತ್ತು ಗ್ರಾಮ್‌ ಚಿನ್ನದ ದರ 71,652 ರೂ. ಗರಿಷ್ಠ ಮಟ್ಟವನ್ನು ತಲುಪಿದೆ.

ಚಿನ್ನ ಎಷ್ಟೇ ದುಬಾರಿಯಾದರೂ ಖರೀದಿ ಮಾಡುವವರು ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿಯೇ ಇದು ಹೂಡಿಕೆ ದಾರರನ್ನು ಸದಾ ಆಕರ್ಷಿಸುತ್ತಿದೆ.

ಚಿನ್ನ ಯಾಕೆ ದುಬಾರಿಯಾಗುತ್ತಿದೆ?

ಚಿನ್ನದಲ್ಲಿ ಹೂಡಿಕೆ ಸುರಕ್ಷಿತವಾಗಿರುವುದರಿಂದಲೇ ಚಿನ್ನ ಹೆಚ್ಚು ದುಬಾರಿಯಾಗುತ್ತಿದೆ. ಆರ್ಥಿಕ ಅನಿಶ್ಚಿತತೆ, ಭೌಗೋಳಿಕ, ರಾಜಕೀಯ ಪ್ರಕ್ಷುಬ್ಧತೆಯ ಅವಧಿಯಲ್ಲಿ ಸ್ಥಿರತೆಯನ್ನು ಬಯಸುವ ಹೂಡಿಕೆದಾರರಿಗೆ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿ ಕಾಣುತ್ತಿದೆ. ಹೀಗಾಗಿಯೇ ಚಿನ್ನದ ದರ ಗಗನಕ್ಕೇರುತ್ತಿದೆ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ಮತ್ತೆ ದಾಖಲೆ ಏರಿಕೆ; 10 ಗ್ರಾಂಗೆ 73,000 ಮೀರಿಸಿದ ಬೆಲೆ

1. ಹಣದುಬ್ಬರ

ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೆಡ್ಜ್ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ ತೆಗೆದಿರುಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ. ಈ ಮೂಲಕ ದೇಶದಲ್ಲಿ ಕರೆನ್ಸಿಗಳ ಮೌಲ್ಯ ಕಾಪಾಡಿಕೊಳ್ಳಬಹುದು.


2. ಜಾಗತಿಕ ಉದ್ವಿಗ್ನತೆಗಳು

ಇತ್ತೀಚಿನ ದಿನಗಳಲ್ಲಿ ಭೌಗೋಳಿಕ, ರಾಜಕೀಯ ಘರ್ಷಣೆಗಳು ಮಾರುಕಟ್ಟೆಯ ಅಸ್ಥಿರತೆಯನ್ನು ಉಂಟು ಮಾಡುತ್ತಿದೆ. ಇದು ಹೂಡಿಕೆದಾರರಿಗೆ ಚಿನ್ನದಂತಹ ಸುರಕ್ಷಿತ ಸ್ವತ್ತುಗಳನ್ನು ಖರೀದಿಸಲು ಪ್ರೇರೇಪಿಸುತ್ತದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಸಮಯದಲ್ಲಿ ಅದು ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಉಕ್ರೇನ್‌ ಯುದ್ಧ ಮುಂದುವರಿಯುತ್ತಿರುವಾಗಲೇ ಈಗ ಇರಾನ್‌-ಇಸ್ರೇಲ್‌ ಯುದ್ಧದ ಛಾಯೆ ಆವರಿಸಿದೆ. ಇಂಥ ಸನ್ನಿವೇಶದಲ್ಲಿ ಸಹಜವಾಗಿಯೇ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತದೆ. ಆಗ ದರ ಏರಿಕೆಯಾಗುತ್ತದೆ.

3. ಚೀನಾದ ಪ್ರಭಾವ

ಇತ್ತೀಚೆಗೆ ಚೀನಾದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ತನ್ನ ಸಂಗ್ರಹಕ್ಕೆ ಗಣನೀಯ ಪ್ರಮಾಣದ ಚಿನ್ನವನ್ನು ಸೇರಿಸುತ್ತಿದೆ. ಇದು ಅಮೆರಿಕ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

4. ಕಡಿಮೆ ಬಡ್ಡಿ ದರಗಳು

ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.


5. ಹೂಡಿಕೆ ಮಾಡಬಹುದೆ?

ಚಿನ್ನದ ಬೆಲೆಗಳು ಹೆಚ್ಚಾದಾಗ ಸಾಮಾನ್ಯವಾಗಿ ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮೊದಲೇ ಚಿನ್ನದ ಮೇಲೆ ಹೂಡಿಕೆ ಮಾಡಬೇಕು. ಇದರಿಂದ ಮಾರುಕಟ್ಟೆಯಲ್ಲಿ ಏರಿಳಿತದ ಅಪಾಯ ಕೊಂಚ ಕಡಿಮೆಯಾಗುತ್ತದೆ. ಹೂಡಿಕೆಯ ಉದ್ದೇಶವನ್ನು ಮೊದಲೇ ನಿರ್ಣಯಿಸುವುದು ಮತ್ತು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವುದು ಕೂಡ ಬಹಳ ಮುಖ್ಯ. ಉದಾಹರಣೆಗೆ ಮದುವೆ ಅಥವಾ ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಚಿನ್ನವನ್ನು ಖರೀದಿಸುವ ಉದ್ದೇಶ ಮೊದಲೇ ಇರುತ್ತದೆ. ಇದಕ್ಕೆ ಮುಂಚಿತವಾಗಿ ಹೂಡಿಕೆ ಮಾಡಬಹುದು. ಇದರಿಂದ ಬೆಲೆಗಳು ಸ್ಥಿರವಾಗಿದ್ದಾಗ ತಕ್ಷಣ ಖರೀದಿ ಮಾಡಬಹುದು.

6. ದರ ಹೆಚ್ಚಳದ ಪರಿಣಾಮ ಏನು?

ಈ ವರ್ಷದ ಆರಂಭದಿಂದಲೂ ಮಾರುಕಟ್ಟೆ ಹೆಚ್ಚು ಸಕ್ರಿಯವಾಗಿದೆ. ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಮಾರುಕಟ್ಟೆ ಮೇಲೆ ಪರಿಣಾಮ ಬಿರುತ್ತಿದೆ. ಇದೇ ಬೆಳವಣಿಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಎರಡಕ್ಕೂ ಹೆಚ್ಚಿನ ಲಾಭವಿದೆ. ದರ ಕಡಿತದ ನಿರೀಕ್ಷೆಗಳು ಡಾಲರ್ ಸೂಚ್ಯಂಕ ಮತ್ತು ಯುಎಸ್ ಉತ್ಪಾದನೆಯ ಮೇಲೆ ಚಂಚಲತೆಯನ್ನು ಹೆಚ್ಚಿಸಿದೆ. ಚಿನ್ನದ ಟ್ರೆಂಡ್ ಇನ್ನೂ ಸಕಾರಾತ್ಮಕವಾಗಿದೆ. ಇದು ಮುಂದಿನ ಅವಧಿಯಲ್ಲಿ 72,800 ತಲುಪುವ ನಿರೀಕ್ಷೆ ಇದ್ದು, 70,000 ರೂ. ಗಿಂತ ಕಡಿಮೆ ಕುಸಿಯುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಹಾಗಾಗಿ ಚಿನ್ನದ ಮೇಲೆ ಹಣ ಹೂಡಿದರೆ ನಷ್ಟವಿಲ್ಲ ಎಂಬುದು ಆರ್ಥಿಕ ಪರಿಣತರ ಅಭಿಮತವಾಗಿದೆ.

Continue Reading

ವಿದೇಶ

Iran-Israel War Explainer: ಇಸ್ರೇಲ್ ಮೇಲೆ ಇರಾನ್ ದಾಳಿಗೆ ಕ್ಷಣಗಣನೆ; ಮುಂದೇನಾಗಬಹುದು?

Iran-israel War Explainer: ಇಸ್ರೇಲ್ ವಿರುದ್ಧ ಯುದ್ಧ ಸನ್ನದ್ಧವಾಗಿ ನಿಂತಿರುವ ಇರಾನ್ ಅದರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಈ ನಡುವೆ ದೇಶಾದ್ಯಂತ ಯುದ್ಧದ ಸನ್ನಿವೇಶ ಉದ್ಭವವಾಗಿದ್ದು, ಇರಾನ್ ಗೆ ಯುದ್ಧ ನಡೆಸದಂತೆ ತಡೆಯುವ ಪ್ರಯತ್ನವನ್ನು ಯುಎಸ್ ಮಾಡುತ್ತಿದೆ.

VISTARANEWS.COM


on

By

Iran-israel War fear
Koo

ಇರಾನ್: ಇಸ್ರೇಲ್ (israel) ಮೇಲೆ ದಾಳಿ ನಡೆಸಲು ಇರಾನ್ (iran) ಸಜ್ಜಾಗಿದ್ದು, ಯಹೂದಿ ಬಹುಸಂಖ್ಯಾತರಿರುವ ರಾಷ್ಟ್ರವು ಇದಕ್ಕೆ ಪ್ರತಿ ದಾಳಿ ನಡೆಸಲು ಸಿದ್ಧವಾಗಿದೆ. ಇಸ್ರೇಲ್ ಈಗಾಗಲೇ ತನ್ನ ರಾಜಧಾನಿ ಟೆಲ್ ಅವಿವ್‌ನಲ್ಲಿ (tel aviv) ಮಿಲಿಟರಿ ನೆಲೆಗಳನ್ನು ಸ್ಥಾಪನೆ ಮಾಡಿರುವ ಹಿನ್ನೆಲೆಯಲ್ಲಿ ಮತ್ತೊಂದು ಯುದ್ಧದ ಭೀತಿ (Iran-israel War Explainer) ವಿಶ್ವದಲ್ಲಿ ಉದ್ವಿಗ್ನತೆ ಹೆಚ್ಚಾಗುವಂತೆ ಮಾಡಿದೆ.

ಇರಾನ್ ದಾಳಿ ಭೀತಿಯ ಹಿನ್ನೆಲೆಯಲ್ಲಿ ಅಮೆರಿಕ (US) ತನ್ನ ರಾಷ್ಟ್ರದ ಪ್ರಜೆಗಳಿಗೆ ಪ್ರಯಾಣವನ್ನು ನಿರ್ಬಂಧಿಸಿದ್ದು, ಜೆರುಸಲೆಮ್‌ನಿಂದ (jerusalem) ಹೊರಗೆ ಹೋಗದಂತೆ ಸೂಚಿಸಿದೆ.

ಯಾಕೆ ಯುದ್ಧ ಪ್ರಾರಂಭ?

11 ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್‌ನ ದೂತಾವಾಸ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್ ಕ್ರಮವನ್ನು ಖಂಡಿಸಿ ಇರಾನ್ ಯುದ್ಧ ಪ್ರಾರಂಭಿಸಲು ಮುಂದಾಗಿದೆ. ಈಗಾಗಲೇ ಇರಾನ್‌ ಪ್ರೇರಿತ ಹೆಜ್ಬೊಲ್ಲಾ ಉಗ್ರರು ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ಶುರು ಮಾಡಿದ್ದಾರೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ 13 ಮಂದಿ ಮೃತಪಟ್ಟಿದ್ದರು.
ಇಸ್ರೇಲ್ ನ ಕ್ರಮಕ್ಕೆ ಪ್ರತೀಕಾರವಾಗಿ ಶೀಘ್ರದಲ್ಲೇ ಇರಾನ್ ಇಸ್ರೇಲ್ ನ ಟೆಹ್ರಾನ್ ಮೇಲೆ ದಾಳಿ ಇರಾನ್‌ ಅಧಿಕೃತವಾಗಿ ನಡೆಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: Iran- Israel War : ಮುಂದಿನ 48 ಗಂಟೆಗಳೊಳಗೆ ಇರಾನ್-ಇಸ್ರೇಲ್ ಭೀಕರ ಯುದ್ಧ ಶುರು!

ಯುದ್ಧ ತಡೆಗೆ ಅಮೆರಿಕ ಪ್ರಯತ್ನ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ತಡೆಯಲು ಅಮೆರಿಕ ಪ್ರಯತ್ನಿಸುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಚೀನಾ, ಟರ್ಕಿ, ಸೌದಿ ಅರೇಬಿಯಾ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿರುವ ತಮ್ಮ ಸಹವರ್ತಿಗಳೊಂದಿಗೆ ಇರಾನ್ ಗೆ ಇಸ್ರೇಲ್ ಮೇಲೆ ದಾಳಿ ನಡೆಸದಂತೆ ಪ್ರಯತ್ನಿಸಲು ಹೇಳಿದ್ದಾರೆ. ಯುದ್ಧ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಯಾವ ದೇಶದ ಹಿತಾಸಕ್ತಿಗೂ ಇದು ಸರಿಯಲ್ಲ. ಹೀಗಾಗಿ ಇರಾನ್‌ನ ಮಿತ್ರ ರಾಷ್ಟ್ರಗಳು ಯುದ್ಧದ ಸನ್ನಿವೇಶವನ್ನು ತಡೆಯಲು ಒತ್ತಾಯಿಸಬೇಕು ಎಂದು ಹೇಳಿದರು.

Iran-israel War fear


ಅಮೆರಿಕವೇ ಹೊಣೆ ಎಂದ ಇರಾನ್

ಏಪ್ರಿಲ್ 1ರಂದು ಇರಾನ್ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಸಿರಿಯಾದ ಡಮಾಸ್ಕಸ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್‌ನ ಕುಡ್ಸ್ ಫೋರ್ಸ್‌ನಲ್ಲಿ ಇಬ್ಬರು ಜನರಲ್‌ಗಳು ಮತ್ತು ಐದು ಇತರ ಅಧಿಕಾರಿಗಳನ್ನು ಕೊಲ್ಲಲಾಗಿತ್ತು.
ಈ ದಾಳಿಯ ಬಳಿಕ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮಿರಬ್ದೊಲ್ಲಾಹಿಯಾನ್ ಅವರು, ಇಸ್ರೇಲ್ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇರಾನ್ ರಾಯಭಾರ ಕಚೇರಿಯ ಮೇಲಿನ ಇಸ್ರೇಲ್ ದಾಳಿಗೆ ಅಮೆರಿಕ ಹೊಣೆಯಾಗಿದೆ ಮತ್ತು ಜವಾಬ್ದಾರರಾಗಿರಬೇಕು ಎಂದು ಹೇಳಿದ್ದರು.

ಇರಾನ್‌ನ ರಾಯಭಾರ ಕಚೇರಿ ಮೇಲಿನ ಇಸ್ರೇಲ್ ದಾಳಿಯನ್ನು ಯುಎನ್ ಭದ್ರತಾ ಮಂಡಳಿಯು ಖಂಡಿಸಿದ್ದರೆ ಈ ಯುದ್ಧವನ್ನು ತಪ್ಪಿಸಬಹುದಿತ್ತು ಎಂದು ಅವರು ಹೇಳಿದ್ದರು.

ದಾಳಿ ಎಲ್ಲಿ ನಡೆಯಬಹುದು?

ಇಸ್ರೇಲ್‌ನ ವೈಮಾನಿಕ ದಾಳಿಯ ಅನಂತರ ಇರಾನ್ ಇಸ್ರೇಲ್‌ನೊಳಗಿನ ಕೆಲವು ನಿರ್ದಿಷ್ಟ ಸ್ಥಳಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಅಥವಾ ಡ್ರೋನ್‌ಗಳನ್ನು ಬಳಸಿಕೊಂಡು ದಾಳಿಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಯುಎಸ್ ಗುಪ್ತಚರ ವಿಭಾಗ ಬಹಿರಂಗಪಡಿಸಿದೆ.

ಟೆಲ್ ಅವೀವ್‌ನಲ್ಲಿರುವ ಇಸ್ರೇಲ್ ಸೇನಾ ಪ್ರಧಾನ ಕಚೇರಿ ಕಿರಿಯಾವನ್ನು ಗುರಿಯಾಗಿಸಲು ಇರಾನ್ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಯುಎಸ್ ಗುಪ್ತಚರ ಮಾಹಿತಿ ತಿಳಿಸಿದೆ. ಇದಲ್ಲದೇ ಮಧ್ಯ ಇಸ್ರೇಲ್‌ನ ಪಾಲ್ಮಾಚಿಮ್ ಅಥವಾ ಉತ್ತರದ ಮೆರಾನ್‌ನಲ್ಲಿರುವ ವಾಯು ನೆಲೆಗಳು, ನೆಸೆಟ್ (ಸಂಸತ್ತು೦ ಮತ್ತು ಜೆರುಸಲೆಮ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿ ಮೇಲೆ ದಾಳಿಯಾಗುವ ಸಾಧ್ಯತೆ ಇದೆ.

ದಕ್ಷಿಣ ಅಥವಾ ಉತ್ತರ ಇಸ್ರೇಲ್ ಮೇಲೆ ಇರಾನ್‌ನಿಂದ ನೇರ ದಾಳಿ ನಡೆಸಬಹುದು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಸಿರಿಯಾದಿಂದ ಇಸ್ರೇಲ್ ಸ್ವಾಧೀನಪಡಿಸಿಕೊಂಡ ವಿವಾದಿತ ಪ್ರದೇಶವಾದ ಗೋಲಾನ್‌ನಲ್ಲಿ ಅಥವಾ ಗಾಜಾದಲ್ಲಿ ಇರಾನ್ ದಾಳಿಯನ್ನು ಸಿದ್ಧಪಡಿಸುತ್ತಿದೆ ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.

ಇರಾನ್ ಯುದ್ಧ ತಯಾರಿ ನಡೆಸುತ್ತಿರುವ ಬಗ್ಗೆ ಇಸ್ರೇಲ್ ಪ್ರತಿಕ್ರಿಯೆಯನ್ನು ಆಧರಿಸಿ ದಾಳಿ ಆರಂಭಿಸುವ ಸಾಧ್ಯತೆ ಹೆಚ್ಚಾಗಿದೆ ಇದೆ ಎಂದು ಗುಪ್ತಚರ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಹಮಾಸ್, ಹೆಜ್ಬುಲ್ಲಾ, ಕತೀಬ್ ಹೆಜ್ಬುಲ್ಲಾ, ಹೌತಿಗಳು ಅಥವಾ ಬದ್ರ್ ಸಂಘಟನೆಗಳು ಗಡಿಯಲ್ಲಿ ದಾಳಿ ನಡೆಸಬಹುದು. ದಕ್ಷಿಣ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ಇಸ್ರೇಲ್ ಅನ್ನು ಗುರಿಯಾಗಿಸಲು ಬಳಸಬಹುದಾದ ಕ್ಷಿಪಣಿಗಳ ದೊಡ್ಡ ಸಂಗ್ರಹವನ್ನು ಹೊಂದಿದೆ. ಆದರೂ ಇಸ್ರೇಲ್‌ನೊಂದಿಗೆ ಪೂರ್ಣ ಪ್ರಮಾಣದ ಯುದ್ಧವನ್ನು ಮಾಡಲು ಹಿಜ್ಬುಲ್ಲಾ ಹಿಂಜರಿಯುತ್ತಿದೆ ಎನ್ನಲಾಗಿದೆ.


ಇಸ್ರೇಲ್‌ಗೆ ಅಮೆರಿಕ ಬೆಂಬಲ

ಇಸ್ರೇಲ್ ವಿರುದ್ಧ ಇರಾನ್ ದಾಳಿಯ ಸಾಧ್ಯತೆಯು ಬಗ್ಗೆ ವಿಶ್ವವೇ ಎಚ್ಚೆತ್ತುಕೊಂಡಿದೆ. ಯುನೈಟೆಡ್ ಸ್ಟೇಟ್ಸ್ ಯುದ್ಧ ತಡೆಯಲು ಇತರ ದೇಶಗಳಿಂದ ಸಹಾಯವನ್ನು ಕೋರುತ್ತಿದೆ ಮತ್ತು ಇಸ್ರೇಲ್ ಗೆ ಬೆಂಬಲ ನೀಡುವ ಪ್ರತಿಜ್ಞೆಯನ್ನೂ ಮಾಡಿದೆ.

ಈ ಕುರಿತು ಮಾತನಾಡಿರುವ ಯುಎಸ್ ಅಧ್ಯಕ್ಷ ಜೋ ಬಿಡೆನ್, ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕುತ್ತಿದೆ. ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ಹೇಳಿದಂತೆ, ಇರಾನ್ ಮತ್ತು ಅದರ ಪ್ರಾಕ್ಸಿಗಳಿಂದ ಈ ಬೆದರಿಕೆಗಳ ವಿರುದ್ಧ ಇಸ್ರೇಲ್‌ನ ಭದ್ರತೆಗೆ ನಮ್ಮ ಬದ್ಧತೆ ಇದೆ. ಇಸ್ರೇಲ್‌ ಅನ್ನು ರಕ್ಷಿಸಲು ನಾವು ನಮ್ಮ ಕೈಲಾದಷ್ಟು ಸಹಾಯ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಯುದ್ಧ ಸನ್ನಿವೇಶದ ಕುರಿತು ಪ್ರತಿಕ್ರಿಯಿಸಿ, ಇರಾನ್ ತನ್ನ ಪ್ರದೇಶದಿಂದ ದಾಳಿ ಮಾಡಿದರೆ, ಇಸ್ರೇಲ್ ಪ್ರತಿಕ್ರಿಯಿಸುತ್ತದೆ ಮತ್ತು ಇರಾನ್‌ ಮೇಲೆ ದಾಳಿ ನಡೆಸುತ್ತದೆ ಎಂದು ಹೇಳಿದ್ದಾರೆ.

ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಚೀನಾದ ವಾಂಗ್ ಯಿ ಅವರೊಂದಿಗೆ ಮಾತನಾಡಿದ್ದು, ಇರಾನ್‌ ಗೆ ಯುದ್ಧ ಮಾಡದಂತೆ ಸೂಚಿಸಲು ಒತ್ತಾಯಿಸಿದ್ದಾರೆ. ರಷ್ಯಾ, ಜರ್ಮನಿ ಮತ್ತು ಬ್ರಿಟನ್ ಕೂಡ ಇರಾನ್ ಮತ್ತು ಇಸ್ರೇಲ್ ಸಂಯಮ ತೋರಿಸುವಂತೆ ಒತ್ತಾಯಿಸಿದೆ.

ಪ್ರಜೆಗಳಿಗೆ ನಾನಾ ದೇಶಗಳ ಎಚ್ಚರಿಕೆ

ಇಸ್ರೇಲ್‌ನಲ್ಲಿನ ತನ್ನ ಉದ್ಯೋಗಿಗಳಿಗೆ ಅಮೆರಿಕ ಪ್ರಯಾಣವನ್ನು ನಿರ್ಬಂಧಿಸಿದೆ. ಜೆರುಸಲೆಮ್, ಟೆಲ್ ಅವಿವ್ ಅಥವಾ ಬೀರ್ ಶೆವಾ ಪ್ರದೇಶಗಳ ಹೊರಗೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದೆ.
ಯುಕೆ ವಿದೇಶಾಂಗ ಕಚೇರಿಯು ಇಸ್ರೇಲ್‌ಗೆ ಪ್ರಯಾಣ ನಡೆಸದಂತೆ ನಾಗರಿಕರಿಗೆ ಸೂಚಿಸಿದೆ. ಇಸ್ರೇಲ್ ಮೇಲಿನ ದಾಳಿ ಸಾಧ್ಯತೆಯನ್ನು ಇರಾನ್‌ ಹೆಚ್ಚಿಸಿದೆ ಎಂದು ಹೇಳಿದೆ.

ಯುದ್ಧದ ತಯಾರಿಯಲ್ಲಿ ಇದ್ದರೂ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವುದಿಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಸ್ರೇಲ್‌ ಗೆ ಎಚ್ಚರಿಕೆ ನೀಡಲು ಯುದ್ಧದ ತಯಾರಿ ನಡೆಸುತ್ತಿದೆ. ಇಸ್ರೇಲ್‌ನ ಮಿಲಿಟರಿಯನ್ನು ನಿರಂತರ ಎಚ್ಚರಿಕೆಯ ಸ್ಥಿತಿಯಲ್ಲಿ ಇರಿಸುವ ಗುರಿಯನ್ನು ಹೊಂದಿದ್ದು, ಈ ಮೂಲಕ ಅದರ ದೌರ್ಬಲ್ಯಗಳನ್ನು ಪರಿಶೀಲಿಸುತ್ತಿದೆ ಎಂಬ ವಿಶ್ಲೇಷಣೆಯೂ ಕೇಳಿ ಬಂದಿದೆ.

ಭಾರತದ ಪಾತ್ರ ಏನು?

ಭಾರತದ ಬೆಂಬಲ ಯಾವಾಗಲೂ ಇಸ್ರೇಲ್‌ ಕಡೆಗೇ ಇರುತ್ತದೆ. ಹಾಗಂತ ಇರಾನ್‌ ಕೂಡ ಭಾರತದ ವೈರಿ ದೇಶ ಏನಲ್ಲ. ಹಾಗಾಗಿ ಭಾರತ ಎಚ್ಚರಿಕೆಯ ಹೆಜ್ಜೆ ಇಡಲಿದೆ. ಇಸ್ರೇಲ್‌-ಇರಾನ್‌ ಯುದ್ಧ ತಡೆಯಲು ಭಾರತ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಿದೆ. ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಈಗಾಗಲೇ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ತೈಲ ದರದ ಮೇಲ ಪರಿಣಾಮ ಏನು?

ಒಂದೊಮ್ಮೆ ಇಸ್ರೇಲ್‌-ಇರಾನ್‌ ನಡುವೆ ಯುದ್ಧ ಸ್ಫೋಟಗೊಂಡರೆ ಇದರ ಮೊದಲ ಪರಿಣಾಮ ಬೀರುವುದು ತೈಲ ದರದ ಮೇಲೆ. ವಿಶ್ವದಲ್ಲಿ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ತೈಲ ಪೂರೈಕೆ ಜಾಲ ಏರುಪೇರಾಗುತ್ತದೆ. ಅದರಲ್ಲೂ ಇರಾನ್‌ ತೈಲ ಪೂರೈಸುವ ಪ್ರಮುಖ ರಾಷ್ಟ್ರ ಆಗಿರುವುದರಿಂದ, ಯುದ್ಧ ಸಂಭವಿಸಿದರೆ ತೈಲ ದರ ಏರಿಕೆ ಆಗುವ ಅಪಾಯವಿದೆ.

Continue Reading

EXPLAINER

ವಿಸ್ತಾರ Explainer: ಕಚ್ಚಲು ಶುರು ಮಾಡಿದ ಕಚ್ಚತೀವು ವಿಚಾರ; ಏನಿದು ತಗಾದೆ? ಶ್ರೀಲಂಕೆಗೆ ಇಂದಿರಾ ಗಾಂಧಿ ಬಿಟ್ಟುಕೊಟ್ಟದ್ದೇಕೆ?

ವಿಸ್ತಾರ Explainer: ಭಾರತದ ತೀರದಿಂದ ಕೇವಲ 20 ಕಿಮೀ ದೂರದಲ್ಲಿರುವ, ಜನವಸತಿ ಇಲ್ಲದ, 1.9 ಚದರ ಕಿಮೀ ವಿಸ್ತೀರ್ಣದ ಕಚ್ಚತೀವು ದ್ವೀಪ (Katchatheevu Island) ಈಗ ರಾಜಕೀಯ ವಿವಾದದ ಕೇಂದ್ರಬಿಂದು.

VISTARANEWS.COM


on

Katchatheevu island 2
Koo

ಭಾರತ ಹಾಗೂ ಶ್ರೀಲಂಕೆಯ ನಡುವೆ ಇರುವ ಕಚ್ಚತೀವು ಎಂಬ ದ್ವೀಪ (Katchatheevu Island) ಈಗ ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಇದು ಪ್ರಾರಂಭವಾದದ್ದು ತಮಿಳುನಾಡಿನಲ್ಲಿ ಮೊನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಭಾಷಣದಲ್ಲಿ ಮಾಡಿದ ಒಂದು ಉಲ್ಲೇಖದಿಂದ. ಈ ವಿವಾದ ಹಾಗೂ ಕಚ್ಚತೀವು ದ್ವೀಪದ ಪೂರ್ವೇತಿಹಾಸಗಳ ಬಗ್ಗೆ ಒಂದು ಸಮಗ್ರ ನೋಟ ಇಲ್ಲಿದೆ.

1974ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ಶ್ರೀಲಂಕಾಕ್ಕೆ ಹಸ್ತಾಂತರಿಸಿದ ವಿವಾದಿತ ಕಚ್ಚತೀವು ದ್ವೀಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೀಗ ಕಚ್ಚತೀವು ದ್ವೀಪದ ಸುತ್ತಲಿನ ಚರ್ಚೆ ಪ್ರಸ್ತುತ ತಮಿಳುನಾಡು ರಾಜಕೀಯದಲ್ಲಿಯೂ ಅದರಾಚೆಗೂ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ.

ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕಾಂಗ್ರೆಸ್ ಹೇಗೆ “ಉದಾರವಾಗಿ” ಬಿಟ್ಟುಕೊಟ್ಟಿತು ಎಂಬುದರ ಕುರಿತು ಪಿಎಂ ಮೋದಿ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಇದು ಪ್ರತಿಯೊಬ್ಬ ಭಾರತೀಯನನ್ನೂ ಕೋಪಗೊಳಿಸಿತು. ಇದರಿಂದ, ನಾವು ಎಂದಿಗೂ ಕಾಂಗ್ರೆಸ್ ಅನ್ನು ನಂಬಲು ಸಾಧ್ಯವಿಲ್ಲ ಎಂಬ ವಿಚಾರ ಜನರ ಮನದಲ್ಲಿ ಉಳಿದುಬಿಟ್ಟಿದೆ” ಎಂದು ಅವರು ಹೇಳಿದ್ದಾರೆ. ಇದಕ್ಕೆ ಪೂರಕವಾದ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ಹಳೆಯ ವರದಿಯ ಸಾಕ್ಷಿಯನ್ನು ಮುಂದಿಟ್ಟಿದ್ದಾರೆ.

ಇದೇ ವೇಗದಲ್ಲಿ ಅವರು ಡಿಎಂಕೆಯನ್ನೂ ಟೀಕಿಸಿದ್ದಾರೆ. “ತಮಿಳುನಾಡಿನ ಹಿತಾಸಕ್ತಿಗಳನ್ನು ಕಾಪಾಡಲು ಡಿಎಂಕೆ ಮಾತು ಹೊರತುಪಡಿಸಿ ಬೇರೆ ಏನನ್ನೂ ಮಾಡಿಲ್ಲ. ಕಚ್ಚತೀವಿನಲ್ಲಿ ಹೊರಹೊಮ್ಮುತ್ತಿರುವ ಹೊಸ ವಿವರಗಳು ಡಿಎಂಕೆಯ ದ್ವಂದ್ವ ನೀತಿಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿವೆ. ಕಾಂಗ್ರೆಸ್ ಮತ್ತು ಡಿಎಂಕೆ ಕುಟುಂಬ ಘಟಕಗಳು. ಅವರು ತಮ್ಮ ಸ್ವಂತ ಪುತ್ರರು ಮತ್ತು ಹೆಣ್ಣುಮಕ್ಕಳು ಬೆಳೆಯಲು ಮಾತ್ರ ಕಾಳಜಿ ವಹಿಸುತ್ತಾರೆ. ಬೇರೆಯವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಚ್ಚತೀವು ಮೇಲಿನ ಅವರ ನಿರ್ದಯತೆ ನಮ್ಮ ಬಡ ಮೀನುಗಾರರು ಮತ್ತು ಮೀನುಗಾರ ಮಹಿಳೆಯರ ಹಿತಾಸಕ್ತಿಗಳಿಗೆ ಹಾನಿ ಮಾಡಿದೆ” ಎಂದು ಅವರು ಹೇಳಿದ್ದಾರೆ.

ಅಣ್ಣಾಮಲೈ ಹೊರತೆಗೆದ ಸತ್ಯ

ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಆರ್‌ಟಿಐ ಅರ್ಜಿಯ ಮೂಲಕ ಶ್ರೀಲಂಕಾ ಕಚ್ಚತೀವು ದ್ವೀಪವನ್ನು ಹೇಗೆ ತನ್ನದಾಗಿಸಿಕೊಂಡಿತು ಎಂದು ವಿವರಿಸುವ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಭಾರತದ ತೀರದಿಂದ ಕೇವಲ 20 ಕಿಮೀ ದೂರದಲ್ಲಿರುವ, 1.9 ಚದರ ಕಿಮೀ ವಿಸ್ತೀರ್ಣದ ಈ ದ್ವೀಪದ ಮೇಲೆ ಲಂಕೆ ಮೊದಲಿಂದಲೂ ಹಕ್ಕು ಸಾಧಿಸುತ್ತಿತ್ತು. ಭಾರತ ಅದನ್ನು ನಿರಾಕರಿಸುತ್ತಿತ್ತು.

ಸ್ವಾತಂತ್ರ್ಯದ ನಂತರ ಶ್ರೀಲಂಕಾ ತನ್ನ ಹಕ್ಕುಗಳನ್ನು ಒತ್ತಿಹೇಳಿತು ಮತ್ತು ತನ್ನ ಅನುಮತಿಯಿಲ್ಲದೆ ಭಾರತೀಯ ನೌಕಾಪಡೆಯು ದ್ವೀಪದಲ್ಲಿ ಕಾಲಿಡಲು ಅನುಮತಿಸಲಿಲ್ಲ. ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಈ ವಿಷಯವನ್ನು ಅಷ್ಟು ಮಹತ್ವದ್ದಲ್ಲ ಎಂದು ತಳ್ಳಿಹಾಕಿದರು. “ನಾನು ಈ ಚಿಕ್ಕ ದ್ವೀಪಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಮತ್ತು ಅದರ ಮೇಲಿನ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ” ಎಂದು ನೆಹರು ಮೇ 10, 1961 ರಂದು ಹೇಳಿದರು.

ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಿದಂತೆ, 1968ರಲ್ಲಿ ನೆಹರೂ ಅವರ ನಿರ್ಣಯವನ್ನು ಕಾಮನ್‌ವೆಲ್ತ್ ಕಾರ್ಯದರ್ಶಿ ವೈ.ಡಿ ಗುಂಡೆವಿಯಾ ಅವರು ಸಿದ್ಧಪಡಿಸಿದ್ದು, ಸಂಸತ್ತಿನ ಅನೌಪಚಾರಿಕ ಸಲಹಾ ಸಮಿತಿಯೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಇದನ್ನು “ಹಿನ್ನೆಲೆಯವರು” ಎಂದು ಹಂಚಿಕೊಂಡಿವೆ.

ʼಹಿನ್ನೆಲೆಯವರುʼ ದ್ವೀಪದ ಬಗ್ಗೆ ಭಾರತಕ್ಕೆ ಆಸಕ್ತಿ ಇಲ್ಲದಿರುವ “ನಿರ್ಧಾರ”ವನ್ನು ಬಹಿರಂಗಪಡಿಸಿದರು. 1974ರಲ್ಲಿ ಭಾರತ ತನ್ನ ಹಕ್ಕನ್ನು ಬಿಟ್ಟೇಕೊಟ್ಟಿತು. “ಭಾರತದ ಅಥವಾ ಶ್ರೀಲಂಕಾದ ಸಾರ್ವಭೌಮತ್ವದ ಹಕ್ಕುಗಳ ಬಲದ ಬಗ್ಗೆ ಯಾವುದೇ ಸ್ಪಷ್ಟವಾದ ತೀರ್ಮಾನವನ್ನು ತೆಗೆದುಕೊಳ್ಳಲಾಗಿಲ್ಲ” ಎಂದು MEA ಹೇಳಿದೆ.

ಈಸ್ಟ್ ಇಂಡಿಯಾ ಕಂಪನಿಯು ರಾಮನಾಡಿನ ರಾಜನಿಗೆ ಇಲ್ಲಿ ನೀಡಿದ ಜಮೀನ್ದಾರಿ ಹಕ್ಕುಗಳ ಸ್ಪಷ್ಟ ಉಲ್ಲೇಖವಿದೆ. ಭಾರತ ಇದರ ಮೇಲೆ ಭಾರತವು ಬಲವಾದ ಹಕ್ಕನ್ನು ಹೊಂದಿತ್ತು ಎಂದು 1960ರಲ್ಲಿ ಭಾರತದ ಅಟಾರ್ನಿ ಜನರಲ್ ಎಂ.ಸಿ ಸೆಟಲ್ವಾಡ್ ಹೇಳಿದ್ದರು. ಇದರ ಹೊರತಾಗಿಯೂ ಭಾರತ ಈ ನಿರ್ಧಾರಕ್ಕೆ ಬಂದಿತ್ತು.

ದ್ವೀಪ, ಇಲ್ಲಿನ ಮೀನುಗಾರಿಕೆ ಮತ್ತು ಅದರ ಸುತ್ತಲಿನ ಇತರ ಸಂಪನ್ಮೂಲಗಳು ಸೇರಿದಂತೆ ರಾಜನು 875ರಿಂದ 1948ರವರೆಗೆ ಕಚ್ಚತೀವಿನಲ್ಲಿ ಈ ಹಕ್ಕುಗಳನ್ನು ಅನುಭವಿಸಿದರು. ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಗೊಳಿಸಿದ ನಂತರ ಮದ್ರಾಸ್ ರಾಜ್ಯ ಇದನ್ನು ನೋಡಿಕೊಳ್ಳುತ್ತಿತ್ತು.

ದ್ವೀಪದ ಸ್ವಾಮ್ಯದ ಬಗ್ಗೆ ಹೇಗೆ ಭಾರತ ಖಚಿತವಾಗಿರಲಿಲ್ಲ ಎಂಬುದನ್ನು ದಾಖಲೆಗಳು ತೋರಿಸಿವೆ. ಎಂಇಎ ಜಂಟಿ ಕಾರ್ಯದರ್ಶಿ ಕೆ. ಕೃಷ್ಣ ರಾವ್ ಅವರು, “ಭಾರತವು ಮೀನುಗಾರಿಕೆ ಹಕ್ಕುಗಳನ್ನು ಇಲ್ಲಿ ಪಡೆದುಕೊಳ್ಳಲು ಕಾನೂನು ಬೆಂಬಲ ಹೊಂದಿರುವ ಪ್ರಕರಣವಿದು” ಎಂದು ತೀರ್ಮಾನಿಸಿದರು.

ಈ ವಿಚಾರ ಹೇಗೆ ರಾಜಕೀಯವಾಯಿತು?

1968ರಲ್ಲಿ ತಮ್ಮ ದ್ವೀಪವನ್ನು ಶ್ರೀಲಂಕಾ ತನ್ನದೆಂದು ನಕ್ಷೆಯಲ್ಲಿ ತೋರಿಸಿತು. ಆ ಸಂದರ್ಭದಲ್ಲಿ ಶ್ರೀಲಂಕಾದ ಪ್ರಧಾನಿ ದುದ್ಲೆ ಸೇನಾನಾಯಕೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಕ್ಕಾಗಿ ಪ್ರತಿಪಕ್ಷಗಳು ಇಂದಿರಾ ಗಾಂಧಿ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದವು. ಇಂದಿರಾ ಗಾಂಧಿ ಮತ್ತು ಸೇನಾನಾಯಕೆ ನಡುವೆ ಒಪ್ಪಂದದ ಮಾತುಕತೆ ನಡೆಯುತ್ತಿದೆ ಎಂಬ ಅನುಮಾನವನ್ನು ಪ್ರತಿಪಕ್ಷಗಳು ಸಂಸತ್ತಿನಲ್ಲಿ ಎತ್ತಿದವು.

ಒಪ್ಪಂದದ ಕುರಿತಾದ ಆರೋಪಗಳನ್ನು ಕಾಂಗ್ರೆಸ್ ತಳ್ಳಿಹಾಕಿತು. “ದ್ವೀಪವು ವಿವಾದಿತ ಸ್ಥಳ”ವಾಗಿರುವುದರಿಂದ ಮತ್ತು “ಉತ್ತಮ ದ್ವಿಪಕ್ಷೀಯ ಸಂಬಂಧಗಳ ಅಗತ್ಯವಿರುವುದರಿಂದ” “ಭಾರತ ಬಾಂಧವ್ಯವನ್ನು ಸಮತೋಲನ ಮಾಡಬೇಕಿ”ರುವುದರಿಂದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿತು.

1973ರಲ್ಲಿ ವಿವಾದಿತ ದ್ವೀಪದ ಬಗ್ಗೆ ಕೊಲಂಬೊದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗಳು ನಡೆದವು. ಒಂದು ವರ್ಷದ ನಂತರ, ಭಾರತದ ಹಕ್ಕು ತ್ಯಜಿಸುವ ನಿರ್ಧಾರವನ್ನು ವಿದೇಶಾಂಗ ಕಾರ್ಯದರ್ಶಿ ಕೇವಲ್ ಸಿಂಗ್ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೆ ತಿಳಿಸಿದರು. ದ್ವೀಪವು ಜಾಫ್ನಾಪಟ್ಟಣಂ, ಡಚ್ ಮತ್ತು ಬ್ರಿಟಿಷ್ ನಕ್ಷೆಗಳ ಸಾಮ್ರಾಜ್ಯದ ಭಾಗವಾಗಿದೆ ಎಂದು ತೋರಿಸುವ “ದಾಖಲೆಗಳ” ಆಧಾರದ ಮೇಲೆ ಶ್ರೀಲಂಕಾ “ಅತ್ಯಂತ ಬಲವಾದ ಹಕ್ಕುಸ್ವಾಮ್ಯ” ಹೊಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಒತ್ತಿ ಹೇಳಿದರು.

1925ರಿಂದ ಶ್ರೀಲಂಕಾವು ಭಾರತದ ಪ್ರತಿಭಟನೆಯಿಲ್ಲದೆ ತನ್ನ ಸಾರ್ವಭೌಮತ್ವವನ್ನು ಅಲ್ಲಿ ಪ್ರತಿಪಾದಿಸಿದೆ ಎಂದು ಅವರು ಹೇಳಿದರು. 1970ರಲ್ಲಿ ಆಗಿನ ಅಟಾರ್ನಿ ಜನರಲ್ ಅವರು “ಕಚ್ಚತೀವು ಮೇಲಿನ ಸಾರ್ವಭೌಮತ್ವವು ಸಿಲೋನ್‌ಗೆ ಇದೆ, ಭಾರತದೊಂದಿಗೆ ಇಲ್ಲ” ಎಂದು ಉಲ್ಲೇಖಿಸಿದರು. 1974ರಲ್ಲಿ ಭಾರತ ಸರ್ಕಾರವು ದ್ವೀಪವನ್ನು ಶ್ರೀಲಂಕಾಕ್ಕೆ ದ್ವಿಪಕ್ಷೀಯ ಒಪ್ಪಂದದಲ್ಲಿ ಹಸ್ತಾಂತರಿಸಿತು.

ದ್ವೀಪದ ಇತಿಹಾಸ

ಕಚ್ಚತೀವು ಪಾಕ್ ಜಲಸಂಧಿಯಲ್ಲಿ ಜನವಸತಿ ಇಲ್ಲದ ದ್ವೀಪವಾಗಿದೆ. ಇದು 14ನೇ ಶತಮಾನದಲ್ಲಿ ಜ್ವಾಲಾಮುಖಿ ಸ್ಫೋಟಗಳಿಂದ ರೂಪುಗೊಂಡಿತು. ಇಲ್ಲಿನ 285 ಎಕರೆ ಭೂಮಿಯಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಡಳಿತ ನಡೆಸಿದ್ದವು.

ಮಧ್ಯಕಾಲೀನ ಅವಧಿಯಲ್ಲಿ, ದ್ವೀಪವು ಶ್ರೀಲಂಕಾದ ಜಾಫ್ನಾ ಸಾಮ್ರಾಜ್ಯದಿಂದ ನಿಯಂತ್ರಿಸಲ್ಪಟ್ಟಿತು. 17ನೇ ಶತಮಾನದಲ್ಲಿ, ರಾಮೇಶ್ವರಂನಿಂದ ವಾಯುವ್ಯಕ್ಕೆ ಸುಮಾರು 55 ಕಿಮೀ ದೂರದಲ್ಲಿರುವ ರಾಮನಾಥಪುರಂ ಮೂಲದ ರಾಮನಾಡ್ ಜಮೀನ್ದಾರರಿಗೆ ನಿಯಂತ್ರಣವನ್ನು ನೀಡಲಾಯಿತು. 1921ರಲ್ಲಿ, ಶ್ರೀಲಂಕಾ ಮತ್ತು ಭಾರತ ಎರಡೂ ಮೀನುಗಾರಿಕೆಗಾಗಿ ಹಕ್ಕು ಸಾಧಿಸಿದವು. ವಿವಾದ ಇತ್ಯರ್ಥವಾಗಲಿಲ್ಲ.

20ನೇ ಶತಮಾನದ ಆರಂಭದಲ್ಲಿ ರಚಿಸಿದ ಕ್ಯಾಥೋಲಿಕ್ ದೇವಾಲಯ ಸೇಂಟ್ ಆಂಥೋನಿ ಚರ್ಚ್, ದ್ವೀಪದಲ್ಲಿನ ಏಕೈಕ ಕಟ್ಟಡವಾಗಿದೆ. ಭಾರತ ಮತ್ತು ಶ್ರೀಲಂಕಾ ಎರಡರಿಂದಲೂ ಇಲ್ಲಿ ಕ್ರಿಶ್ಚಿಯನ್ ಪಾದ್ರಿಗಳು ಸೇವೆಯನ್ನು ನಡೆಸುತ್ತಾರೆ. ಎರಡೂ ದೇಶಗಳ ಭಕ್ತರು ವಾರ್ಷಿಕ ಉತ್ಸವದ ಸಮಯದಲ್ಲಿ ಇಲ್ಲಿಗೆ ತೀರ್ಥಯಾತ್ರೆ ಮಾಡುತ್ತಾರೆ. ಕಳೆದ ವರ್ಷ 2,500 ಭಾರತೀಯರು ಉತ್ಸವಕ್ಕಾಗಿ ರಾಮೇಶ್ವರಂನಿಂದ ಕಚ್ಚತೀವಿಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Narendra Modi: ಲಂಕಾಗೆ ಕಚ್ಚತೀವು ದ್ವೀಪ ಬಿಟ್ಟ ಕಾಂಗ್ರೆಸ್‌ ನಂಬಿಕೆಗೆ ಅರ್ಹವಲ್ಲ; ಮೋದಿ ವಾಗ್ದಾಳಿ

Continue Reading
Advertisement
Murder case In Raichur
ರಾಯಚೂರು2 mins ago

Murder Case : ಕಲ್ಲಿನಿಂದ ಜಜ್ಜಿ ಪತ್ನಿಯ ಕೊಂದು ನೇಣಿಗೆ ಶರಣಾದ ಅನುಮಾನ ಪಿಶಾಚಿ

Lok sabha election-2024
Latest2 mins ago

Lok Sabha Election 2024: ಲೋಕಸಭೆ ಚುನಾವಣೆ ಮೊದಲ ಹಂತದಲ್ಲಿ ಪ್ರಬಲ ಪೈಪೋಟಿಯ ಟಾಪ್ 10 ಕ್ಷೇತ್ರಗಳಿವು

tamanna bhatia gold
ಚಿನ್ನದ ದರ5 mins ago

Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಬೆಂಗಳೂರಿನಲ್ಲಿ ಇಂದು ಹೀಗಿದೆ ದರ

CET 2024 exam Complaint against syllabus question of Mathematics and Biology KEA to set up committee on April 24
ಶಿಕ್ಷಣ10 mins ago

CET 2024 Exam: ಗಣಿತ, ಜೀವಶಾಸ್ತ್ರದ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ ವಿರುದ್ಧ ದೂರು; ಏಪ್ರಿಲ್‌ 24ಕ್ಕೆ ಸಮಿತಿ ರಚನೆಗೆ ಕೆಇಎ ನಿರ್ಧಾರ

Uttarakaanda Movie Yogaraj bhat entry
ಸ್ಯಾಂಡಲ್ ವುಡ್12 mins ago

Uttarakaanda Movie: ಪಾಟೀಲನಾಗಿ ‘ಉತ್ತರಕಾಂಡ’ ಸಿನಿಮಾಗೆ ಎಂಟ್ರಿ ಕೊಟ್ಟ ಯೋಗರಾಜ್ ಭಟ್

Suicide bomb Attack karachi
ವಿದೇಶ29 mins ago

Suicide bomb Attack: ಪಾಕ್‌ನಲ್ಲಿ ಜಪಾನೀಯರಿದ್ದ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ ದಾಳಿ: 2 ಬಲಿ

Dubai Rain
ಕ್ರೀಡೆ29 mins ago

Dubai Rain: ಭಾರತೀಯ ಕುಸ್ತಿಪಟುಗಳ ಪ್ಯಾರಿಸ್​ ಒಲಿಂಪಿಕ್ಸ್​ ಕನಸಿಗೆ ತಣ್ಣೀರೆರಚಿದ ದುಬೈ ಮಳೆ

Self Harming In Karwar
ಉತ್ತರ ಕನ್ನಡ33 mins ago

Self Harming : ಕಾಲೇಜಿನಿಂದ ಬಂದವಳೇ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

Neha Murder Case Neha stabbed in ISIS model murdered for not working Love jihad says Pramod Muthalik
ಕ್ರೈಂ44 mins ago

Neha Murder Case: ಐಸಿಸ್‌ ಮಾದರಿಯಲ್ಲಿ ನೇಹಾಗೆ ಚಾಕು ಇರಿತ; ಲವ್‌ ಜಿಹಾದ್‌ ಫಲಿಸದ್ದಕ್ಕೆ ಕೃತ್ಯ: ಪ್ರಮೋದ್‌ ಮುತಾಲಿಕ್

Lok sabha election-2024
Latest51 mins ago

Lok sabha Election‌ 2024: ಲೋಕಸಭೆ ಚುನಾವಣೆಯಲ್ಲಿ ಈ 10 ವಿಷಯಗಳೇ ನಿರ್ಣಾಯಕ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ8 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌