ವಿಸ್ತಾರ Explainer | killer stress | ಒತ್ತಡ ಏರುತ್ತಿದೆ, ಹೃದಯ ಕುಸಿಯುತ್ತಿದೆ! - Vistara News

EXPLAINER

ವಿಸ್ತಾರ Explainer | killer stress | ಒತ್ತಡ ಏರುತ್ತಿದೆ, ಹೃದಯ ಕುಸಿಯುತ್ತಿದೆ!

ಇದು ಈಗ ಬರೀ ಊಹೆಯಲ್ಲ. ಕೊರೊನಾ ಸಾಂಕ್ರಾಮಿಕದ ಬಳಿಕ ಎಲ್ಲರಲ್ಲೂ ಒತ್ತಡದ ಅಂಶಗಳು ಹೆಚ್ಚಿವೆ. ಏರುತ್ತಿರುವ ಹೃದಯಾಘಾತ, ಸಣ್ಣ ವಯಸ್ಸಿನವರಲ್ಲೂ ಹೃದಯಸ್ತಂಭನ- ಇತ್ಯಾದಿಗಳಿಗೆ ಇದೇ ಕಾರಣವೆಂದು ತಜ್ಞರು ದೃಢೀಕರಿಸುತ್ತಿದ್ದಾರೆ. ಒತ್ತಡ ಈಗ ವಿಲನ್‌ ನಂಬರ್‌ ವನ್‌.

VISTARANEWS.COM


on

killer stress
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊರೊನಾ ನಂತರ ಹೆಚ್ಚಾಯ್ತು ಸ್ರ್ಟೆಸ್ಸು, ಕಡಿಮೆಯಾಯ್ತು ದೇಹದ ಹುಮ್ಮಸ್ಸು

ʼʼಒತ್ತಡವೆಂದರೆ ಇಂದು ಬರಿಯ ಮಾನಸಿಕ ಸಮಸ್ಯೆಯಲ್ಲ. ಅದು ದೇಹಕ್ಕೂ ನಾನಾ ಸ್ವರೂಪದಲ್ಲಿ ಹಬ್ಬಿಕೊಂಡಿದ್ದು, ದೈಹಿಕ ಸಮಸ್ಯೆಗಳಲ್ಲಿ ವ್ಯಕ್ತವಾಗುತ್ತಿದೆʼʼ ಎನ್ನುತ್ತಾರೆ ಬೆಂಗಳೂರಿನ ನಿಮ್ಹಾನ್ಸ್‌ನ ಮಾಜಿ ನಿರ್ದೇಶಕ ಡಾ.ಬಿ.ಎನ್‌ ಗಂಗಾಧರ. ಕಳೆದ ಎರಡು ವರ್ಷಗಳಲ್ಲಿ ನಡೆದ ನಾನಾ ಅಧ್ಯಯನಗಳೂ ಇದನ್ನು ಖಚಿತಪಡಿಸಿವೆ. ಹೃದಯ ಕಾಯಿಲೆಗಳು, ಮೆದುಳಿನ ಲಕ್ವ, ಡಯಾಬಿಟಿಸ್‌, ಕ್ಯಾನ್ಸರ್‌, ಶ್ವಾಸಕೋಶದ ಸಮಸ್ಯೆಗಳು, ಯಕೃತ್ತಿನ ಊತ, ಫಲವತ್ತತೆಯ ಕೊರತೆ ಇತ್ಯಾದಿಗಳಿಗಿರುವ ಸಂಬಂಧ ಪತ್ತೆಯಾಗಿದೆ. ಇದರ ಜತೆಗೆ ಬೊಜ್ಜು, ನಾನಾ ವ್ಯಸನಗಳು, ಖಿನ್ನತೆಗಳಂತೂ ಹೇಗೂ ಇದ್ದೇ ಇವೆ. ಖಿನ್ನತೆಯು ಆತ್ಮಹತ್ಯೆಯ ಪ್ರಮುಖ ಕಾರಣಗಳಲ್ಲಿ ಅಗ್ರಸ್ಥಾನದಲ್ಲಿದೆ. ಆದರೂ ಒತ್ತಡವು ಇಂಥದಕ್ಕೆಲ್ಲ ಕಾರಣ ಎಂದು ಜನ ಗುರುತಿಸುತ್ತಿಲ್ಲ.

ಅದೇಕೆ? ಯಾಕೆಂದರೆ ಒತ್ತಡವನ್ನು ಅಳೆಯಲು ಸರಿಯಾದ ಮಾಪಕ ಆವಿಷ್ಕಾರ ಎಲ್ಲೂ ಆಗಿಲ್ಲ. ಹೀಗಾಗಿ, ಹೆಚ್ಚು ತೀವ್ರವಾದ ಒಂದು ಪರಿಣಾಮ ಕಾಣಿಸದೇ ಹೋಗುವವರೆಗೂ ಒತ್ತಡದ ಇರುವಿಕೆ ಗೊತ್ತೇ ಆಗುವುದಿಲ್ಲ.

ನಮ್ಮ ಆಧುನಿಕ ಜೀವನವೇ ಒತ್ತಡಯುಕ್ತವಾಗಿದೆ. ಆದರೆ ಕಳೆದ ಎರಡು ವರ್ಷಗಳ ಕಾಲದ ಕೊರೊನಾ ಜತೆಗಿನ ಸಹಜೀವನ ಇದನ್ನು ಇನ್ನೂ ದುರ್ಭರಗೊಳಿಸಿದೆ. ಇದು ನಮ್ಮ ದೇಹಗಳ ಮೇಲೆ ಹೆಚ್ಚಿನ ಕಂದಾಯ ಪಡೆಯುತ್ತಿದೆ. ʼʼಉದಾಹರಣೆಗೆ, ದಿಡೀರ್‌ ಹೃದಯಾಘಾತಗಳ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಿದೆ. ಇದಕ್ಕೆ ಗಣನೀಯ ಕಾರಣ ಒತ್ತಡʼʼ ಎನ್ನುತ್ತಾರೆ ಫೋರ್ಟಿಸ್‌ ಎಸ್ಕಾರ್ಟ್ಸ್‌ ಹಾರ್ಟ್‌ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಡಾ. ಅಶೋಕ್‌ ಸೇಠ್.‌ ಕೋವಿಡ್‌ ಪ್ರಹಸನದ ತೆರೆ ಇನ್ನೂ ಇಳಿಯುವ ಮೊದಲೇ ಇನ್ನೊಂದು ʼಒತ್ತಡದʼ ಪ್ರಹಸನಕ್ಕೆ ನಾವು ಸಜ್ಜಾಗಬೇಕಿದೆ.

ದೆಹಲಿಯಲ್ಲಿರುವ ಆರೋಗ್ಯ ಸೇವಾ ಸಂಸ್ಥೆ ದಿ ಸೆಂಟರ್‌ ಆಫ್‌ ಹೀಲಿಂಗ್‌ (TCOH) 2020ರ ಡಿಸೆಂಬರ್‌ನಲ್ಲಿ 10,000 ಭಾರತೀಯರ ಮೇಲೆ ಒಂದು ಸಮೀಕ್ಷೆ ನಡೆಸಿತು. ಇದರಕಲ್ಲಿ 74% ಮಂದಿ ತಮ್ಮಲ್ಲಿ ಒತ್ತಡವಿರುವುದನ್ನು ಗುರುತಿಸಿದರು. 88% ಮಂದಿ ತಮ್ಮಲ್ಲಿ ಆತಂಕದ ಪರಿಣಾಮವನ್ನು ಗಮನಿಸಿದರು. ಥೆರಪಿಸ್ಟ್‌ಗಳಲ್ಲಿ 70% ಮಂದಿ ಪೇಷೆಂಟ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ಗುರುತಿಸಿದರು. 55% ಥೆರಪಿಸ್ಟ್‌ಗಳು ಹೇಳುವಂತೆ, ಸಾಂಕ್ರಾಮಿಕದ ಬಳಿಕ ಚೊಚ್ಚಲ ಪೇಷೆಂಟ್‌ಗಳ ಸಂಖ್ಯೆಯೂ ಅಧಿಕಗೊಂಡಿದೆ.

ಒತ್ತಡ ಯಾಕೆ ಬೇಕು?

ಹಾಗಾದರೆ ಒತ್ತಡ ಎಂಬುದು ಹೊಸ ಸಂಗತಿಯಾ? ಹಾಗೇನಿಲ್ಲ. ಮೊದಲಿನಿಂದಲೂ ಇದು ಇದೆ. ಇದು ಮನುಷ್ಯನ ಅಸ್ತಿತ್ವದಷ್ಟೇ ಹಳತು. ʼಹೋರಾಡು ಇಲ್ಲವೇ ಓಡುʼ ಎಂಬ ಮನುಷ್ಯನ ಅತಿ ಹಳೆಯ ದೈಹಿಕ ಸುರಕ್ಷತಾ ತಂತ್ರದಷ್ಟೆ ಇದು ಹಳತು. ಆತಂಕವೊಂದು ಎದುರಾದಾಗ ಸಾಕಷ್ಟು ಒತ್ತಡಕ್ಕೆ ಒಳಗಾಗದೇ ದೇಹ ಅದನ್ನು ಎದುರಿಸಲಾರದು. ಆದರೆ ಇಂದು ಕಷ್ಟ ತಂದಿಟ್ಟಿರುವುದು ಒತ್ತಡಕ್ಕೆ ನಾವು ನೀಡುತ್ತಿರುವ ಅತಿ ಪ್ರತಿಕ್ರಿಯೆ. ಇದನ್ನು ಮನುಷ್ಯನ ಒಟ್ಟಾರೆ ದೈಹಿಕ- ಮಾನಸಿಕ ಆರೋಗ್ಯಕ್ಕಾಗಿ ನಿಭಾಯಿಸಲೇಬೇಕಿದೆ. ಸುದೀರ್ಘಕಾಲದ ಒತ್ತಡದಿಂದ ನಮ್ಮ ದೇಹಕ್ಕೆ ಏನಾಗುತ್ತದೆ? ಇದನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ, ಒತ್ತಡದ ಹಾರ್ಮೋನುಗಳ ಹಿಂದಿರುವ ವಿಜ್ಞಾನವನ್ನೂ ಅರ್ಥ ಮಾಡಿಕೊಳ್ಳಬೇಕು.

killer stress

ಒತ್ತಡದ ಹಿಂದಿನ ವಿಜ್ಞಾನ

ಒತ್ತಡಕ್ಕೇ ದೇಹ ನೀಡುವ ಪ್ರತಿಕ್ರಿಯೆ ಸೃಷ್ಟಿಯಾಗುವುದು ಅದರ ಎಂಡೋಕ್ರೈನ್‌ ವ್ಯವಸ್ಥೆಯಲ್ಲಿ. ಇದು ಹೈಪೋಥಲಾಮೈನ್-‌ ಪಿಟ್ಯುಟರಿ- ಅಡ್ರಿನಲ್‌ ಗ್ರಂಥಿಗಳ ವ್ಯವಸ್ಥೆಯಲ್ಲಿದೆ. ಹೈಪೋಥಲಾಮೈನ್‌ ಮೆದುಳಿನ ಸೂಚನಾ ಕೇಂದ್ರ. ಇದು ಮೂಡ್‌, ದೇಹದ ತಾಪಮಾನ, ಹೃದಯ ಬಡಿತ, ಆಹಾರ ಸೇವನೆ, ಲೈಂಗಿಕ ಅಭೀಪ್ಸೆ, ಶಕ್ತಿ, ದಾಹ, ನಿದ್ರಾ ಚಕ್ರಗಳನ್ನು ನಿಯಂತ್ರಿಸುತ್ತದೆ. ಹಾರ್ಮೋನುಗಳ ಸ್ರಾವವನ್ನೂ ನಿಯಂತ್ರಿಸುತ್ತದೆ. ಈ ಹಾರ್ಮೋನುಗಳು ನಮ್ಮ ದೇಹದ ಹಲವು ರಾಸಾಯನಿಕ ಕ್ರಿಯೆಗಳನ್ನು ಪ್ರಚೋದಿಸುತ್ತವೆ.

ಒತ್ತಡ ಉಂಟುಮಾಡುವ ಯಾವುದೇ ಸಂಗತಿ ನಿಮಗೆ ಎದುರಾದಾಗ (ಅದು ದೈಹಿಕ ಅಪಾಯ, ಇನ್ನೊಬ್ಬರ ಕೋಪತಾಪ, ಕೆಟ್ಟ ಸುದ್ದಿ ಹೀಗೆ ಯಾವುದೂ ಇರಬಹುದು) ಅದು ದೇಹದಲ್ಲಿ ಕೆಲವು ಚಟುವಟಿಕೆಗಳನ್ನು ಉಂಟುಮಾಡುತ್ತದೆ. ಕಾರ್ಟಿಕೋಟ್ರೋಫಿನ್‌ ಹಾರ್ಮೋನ್‌ ವ್ಯವಸ್ಥೆಯನ್ನು ಹೈಪೋಥಲಾಮಸ್‌ ಉತ್ಪತ್ತಿ ಮಾಡುತ್ತದೆ. ಇದು ಎಂಡೋಕ್ರೈನ್‌ ವ್ಯವಸ್ಥೆಯ ಕೇಂದ್ರವಾದ ಕಡಲೆಕಾಳಿನಂಥ ಸಣ್ಣ ಗಾತ್ರದ ಪಿಟ್ಯುಟರಿ ಗ್ರಂಥಿಗೆ ಈ ಸಂದೇಶ ತಲುಪಿಸುತ್ತದೆ. ಅದು ಅಡ್ರಿನೋಕಾರ್ಟಿಕೋಟ್ರೋಪಿಕ್‌ ಹಾರ್ಮೋನನ್ನು ಕಿಡ್ನಿಯ ಬಳಿಯಿರುವ ಅಡ್ರಿನಲ್‌ ಗ್ರಂಥಿಗಳಿಗೆ ಕಳಿಸುತ್ತದೆ. ಇದು ಒತ್ತಡ ನಿಭಾಯಿಸುವ ನೈಜ ಕೇಂದ್ರ. ಇವು ಕಾರ್ಟಿಸೋಲ್‌ ಎಂಬ ಸ್ಟಿರಾಯ್ಡಲ್‌ ಹಾರ್ಮೋನನ್ನು ಸ್ರವಿಸಿ, ಒತ್ತಡದ ನಿಭಾವಣೆಗೆ ಮುಂದುಬಿಡುತ್ತದೆ. ಇದು ದೇಹದ ನರವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದರಿಂದ ಹೃದಯದ ಬಡಿತ ಹೆಚ್ಚಾಗುತ್ತದೆ, ನಾಡಿಮಿಡಿತ ಹಾಗೂ ರಕ್ತದೊತ್ತಡ ಹೆಚ್ಚಾಗುತ್ತವೆ. ಉಸಿರಾಟ ವೇಗವಾಗುತ್ತದೆ. ಮೆದುಳು ಹಾಗೂ ರಕ್ತನಾಳಗಳಲ್ಲಿ ಹೆಚ್ಚಿನ ಆಕ್ಸಿಜನ್‌ ಮತ್ತು ಗ್ಲುಕೋಸ್‌ ಉತ್ಪತ್ತಿಯಾಗುತ್ತದೆ. ಒತ್ತಡವನ್ನು ನಿಭಾಯಿಸಲು ಬೇಕಾದ ಶಕ್ತಿಯಿಂದ ದೇಹ ಕುದಿಯುತೊಡಗುತ್ತದೆ. ಅಪಾಯ ದೂರವಾದಾಗ, ಕಾರ್ಟಿಸೋಲ್‌ ಮಟ್ಟ ಕಡಿಮೆಯಾಗುತ್ತದೆ ಹಾಗೂ ದೇಹ ಮೊದಲಿನ ಸ್ಥಿತಿಗೆ ಬರುತ್ತದೆ.

ಹಾಗಾದರೆ ಅಪಾಯ ಎಲ್ಲಿ? ನೈಜವಾದ ಅಪಾಯ ಉಂಟಾದಾಗ ದೇಹದಲ್ಲಿ ಈ ಪ್ರಕ್ರಿಯೆಗಳು ನಡೆಯಲೇಬೇಕು. ಇಲ್ಲವಾದರೆ ಅದನ್ನು ಎದುರಿಸುವ ಚೈತನ್ಯ ಉಂಟಾಗುವುದಿಲ್ಲ. ಆದರೆ ಇದು ನಿತ್ಯವೂ ಸಂಭವಿಸಿದರೆ, ಅತಿ ಸಣ್ಣ ಒತ್ತಡಕ್ಕೂ (ಉದಾಹರಣೆಗೆ ಟ್ರಾಫಿಕ್‌ ಜಾಮ್)‌ ದೇಹದಲ್ಲಿ ಈ ಪ್ರಕ್ರಿಯೆಗಳು ಉಂಟಾಗಲು ತೊಡಗಿದರೆ, ಆಗ ನಿಯಂತ್ರಣ ತಪ್ಪುತ್ತದೆ. ʼʼಕಾರ್ಟಿಸೋಲ್‌ ಎಂಬುದು ನಮ್ಮನ್ನು ಉಳಿಸುವ ಹಾರ್ಮೋನ್‌. ಇದು ನಮ್ಮ ಆಲೋಚನೆಗಳಿಂದ ನಿಯಂತ್ರಿಸಲ್ಪಡುತ್ತದೆ. ನಮ್ಮ ಯೋಚನೆಗಳು ಒತ್ತಡಯುಕ್ತವಾದಾಗ ದೇಹವನ್ನು ಕಾಪಾಡಿಕೊಳ್ಳಲು ಕಾರ್ಟಿಸೋಲ್ ಸ್ರವಿಸುತ್ತದೆ. ಆದರೆ ದೀರ್ಘಾವಧಿ ಮತ್ತು ಪದೇ ಪದೇ ನಾವು ಒತ್ತಡಯುಕ್ತರಾಗಿದ್ದರೆ, ಯಾವಾಗಲೂ ದೇಹದಲ್ಲಿ ಕಾರ್ಟಿಸೋಲ್‌ ತುಂಬಿರುತ್ತದೆ ಮತ್ತು ಅದು ನಮ್ಮ ದೈಹಿಕ- ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲವೇ ಅಲ್ಲ.

ಕಾರ್ಟಿಸೋಲ್‌ ಎಂಬ ಎರಡಲಗಿನ ಕತ್ತಿ

ಕಾರ್ಟಿಸೋಲ್‌ ಎಂಬ ಚೋದಕದ ಪತ್ತೆಯಾದಾಗ ಅದು ವಿಜ್ಞಾನದಲ್ಲಿ ಒಂದು ಮಹತ್ವದ ಸಂಗತಿಯಾಗಿತ್ತು. ಆದರೆ, ಸ್ಟಿರಾಯ್ಡ್‌ಗಳು ಯಾವಾಗಲೂ ಎರಡಲಗಿನ ಕತ್ತಿ ಎಂಬುದು ನಂತರ ಗೊತ್ತಾಯಿತು. ಇವು ಅತಿಯಾದಾಗ, ತಮ್ಮ ನಿಜವಾದ ಉದ್ದೇಶಕ್ಕಿಂತ ವ್ಯತಿರಕ್ತವಾದುದನ್ನೇ ಮಾಡುತ್ತವೆ. ದೇಹವನ್ನು ಉಳಿಸುವ ಭರದಲ್ಲಿ ಉರಿಯೂತ ಸೃಷ್ಟಿ ಮಾಡುತ್ತವೆ. ಅತಿಯಾದ ಕಾರ್ಟಿಸೋಲ್‌ ಮೆದುಳಿನಲ್ಲಿ ಕಾಯಂ ಬದಲಾವಣೆಗಳನ್ನು ಮಾಡುತ್ತದೆ ಹಾಗೂ ನರವ್ಯೂಹ ಕಾಯಿಲೆಗಳನ್ನು ಸೃಷ್ಟಿಮಾಡುತ್ತದೆ ಎನ್ನುತ್ತಾರೆ ದೆಹಲಿಯ ನ್ಯೂರಾಲಜಿಸ್ಟ್‌ ಡಾ.ಪಿ.ಎನ್‌ ರಂಜನ್‌. 2018ರಲ್ಲಿ ವಾಷಿಂಗ್ಟನ್‌ ಮೂಲದ ಸೊಸೈಟಿ ಫಾರ್‌ ರಿಸರ್ಚ್‌ ಇನ್‌ ಚೈಲ್ಡ್‌ ಡೆವಲಪ್‌ಮೆಂಟ್‌ ನಡೆಸಿದ ಅಧ್ಯಯನದಲ್ಲಿ, ಹೈಸ್ಕೂಲ್‌ ಅಂಕಗಳಲ್ಲಿ ಇಳಿಕೆ ಉಂಟಾದಾಗ ಮಕ್ಕಳಲ್ಲಿ ಕಾರ್ಟಿಸೋಲ್‌ ಹೆಚ್ಚಾದುದನ್ನು ದಾಖಲಿಸಿದೆ. 2021ರಲ್ಲಿ ಒರ್ಯಾಕಲ್‌ ಹಾಗೂ ಅಮೆರಿಕದ ವರ್ಕ್‌ಪ್ಲೇಸ್‌ ಇಂಟಲಿಜೆನ್ಸ್‌ ಎಂಬ ಸಂಸ್ಥೆಗಳು ಜಂಟಿಯಾಗಿ ಒಂದು ಅಧ್ಯಯನ ನಡೆಸಿದ್ದು, ಇದರಲ್ಲಿ 13 ದೇಶಗಳ 41,600 ಉದ್ಯೋಗಿಗಳನ್ನು ಮಾತಾಡಿಸಿದವು. ಇದರಲ್ಲಿ, ಭಾರತದ ಉದ್ಯೋಗಿಗಳಲ್ಲಿ ಅತಿ ಹೆಚ್ಚು ಒತ್ತಡವಿರುವುದನ್ನು ಗುರುತಿಸಿತು. ಇತರೆಡೆಯ ಉದ್ಯೋಗಿಗಳಲ್ಲಿ 80% ಒತ್ತಡವಿದ್ದರೆ, ಭಾರತದವರಲ್ಲಿ 91% ಇತ್ತು. ಈ ಒತ್ತಡಗಳು ಕೌಟುಂಬಿಕದಿಂದ ಹಿಡಿದು ವೃತ್ತಿಸಂಬಂಧಿ, ಆರ್ಥಿಕದಿಂದ ರಾಜಕೀಯದವರೆಎಗ ವ್ಯಾಪಿಸಿವೆಯಂತೆ.

killer stress

ʼʼನಮ್ಮ ದೇಹದ ಒತ್ತಡ ವ್ಯವಸ್ಥೆ ಯಾಕೆ ಇರುವುದು ಗೊತ್ತೇ? ಅದು ಇರುವುದು ʼಮಾಡು ಇಲ್ಲವೇ ಮಡಿʼ ಸನ್ನಿವೇಶಕ್ಕಾಗಿ. ಆದರೆ ಇಂದು ಅದು ಅತ್ಯಂತ ಸಣ್ಣ ಸಂಗತಿಗಳಲ್ಲೂ ಕ್ರಿಯಾಶೀಲವಾಗುವಂತೆ ನಾವು ಮಾಡಿಕೊಂಡಿದ್ದೇವೆ. ಆಫೀಸಿಗೆ ತಡವಾಯ್ತು, ಆನ್‌ಲೈನ್‌ನಲ್ಲಿ ಏನೋ ಅಹಿತಕರವಾದದ್ದನ್ನು ಓದಿದೆವು- ಎಂಬುದಕ್ಕೂ ಒತ್ತಡ ಸೃಷ್ಟಿಯಾಗುತ್ತದೆ. ಮಿತಿ ಮೀರಿ ಯೋಚಿಸುವುದು, ಮಿತಿ ಮೀರಿ ವಿಶ್ಲೇಷಿಸುವುದು ನಮ್ಮ ಅಸ್ತಿತ್ವದ ಭಾಗವಾಗಿಬಿಟ್ಟಿದೆ. ನಮ್ಮ ಯೋಚನೆಗಳೇ ಒತ್ತಡದ ಕುರಿತು ನಮ್ಮ ಮೆದುಳಿನ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ನಾವು ಕೆಟ್ಟದನ್ನೇ ಸದಾ ಯೋಚಿಸುತ್ತಿದ್ದರೆ, ಅಪ್ರಜ್ಞಾಪೂರ್ವಕವಾಗಿ ಹೈಪೋಥಲಾಮಸ್‌ಗೆ ತಪ್ಪು ಸಂದೇಶಗಳು ಹೋಗುತ್ತಿರುತ್ತವೆʼʼ ಎಂದು ಫೋರ್ಟಿಸ್‌ನ ನಿರ್ದೇಶಕ ಡಾ.ಸಮೀರ್‌ ಪಾರಿಖ್‌ ಎಂಬವರು ಹೇಳುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯು 2016ರಲ್ಲಿ ಒತ್ತಡವನ್ನು ʼ21ನೇ ಶತಮಾನದ ವಿಶ್ವ ಆರೋಗ್ಯ ಸಾಂಕ್ರಾಮಿಕʼ ಎಂದು ಗುರುತಿಸಿತು. ಒತ್ತಡವೊಂದು ಲಕ್ಷಣಸಹಿತ ಗುರುತಿಸಬಹುದಾದ ಕಾಯಿಲೆಯಲ್ಲ. ಆದರೆ ಅದು ಜೀವಾಪಾಯಕ್ಕೆ ಕಾರಣವಾಗಬಲ್ಲ ಕಾಯಿಲೆಗಳನ್ನು ಪ್ರಚೋದಿಸಬಲ್ಲುದು. ವೈದ್ಯಕೀಯ ತಜ್ಞರು ಒತ್ತಡವನ್ನು ದೇಹದ ದೀರ್ಘಕಾಲಿಕ ಉರಿಯೂತ ಎಂದೇ ಗುರುತಿಸುತ್ತಾರೆ.

ಕಿಡ್ನಿಯ ಮೇಲೆ ಪರಿಣಾಮ

ಒತ್ತಡವು ಕಿಡ್ನಿಯನ್ನು ಹಾಳುಗೆಡವುತ್ತದೆ ಎಂದರೆ ನೇರವಾಗಿ ಹಾಗೆ ಮಾಡುತ್ತದೆಂದಲ್ಲ. ಬದಲು, ಸದಾ ಒತ್ತಡಯುಕ್ತರಾದವರು ಕಡಿಮೆ ನೀರು ಸೇವಿಸುತ್ತಾರೆ. ಲೈಫ್‌ಸ್ಟೈಲ್‌ನಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಪೌಷ್ಟಿಕ ಆಹಾರಕ್ಕೆ ಗಮನ ಕೊಡುವುದಿಲ್ಲ. ಇದು ಡಯಾಬಿಟಿಸ್‌, ಅಧಿಕ ರಕ್ತದೊತ್ತಡಗಳಿಗೆ ಕಾರಣವಾಗುತ್ತದೆ. ಇದರಿಂದ ಕಿಡ್ನಿಯ ಮೇಲೆ ದುಷ್ಪರಿಣಾಮ ಖಚಿತ.

ಡಯಾಬಿಟಿಸ್‌ನ ಕಾರಣ

2017ರಲ್ಲಿ PLOS one ಎಂಬ ಜರ್ನಲ್‌ ನಡೆಸಿದ ಅಧ್ಯಯನದ ಪ್ರಕಾರ ಟೈಪ್‌ 2 ಡಯಾಬಿಟಿಸ್‌ನ ಕಾರಣಗಳಲ್ಲಿ ಸ್ಟ್ರೆಸ್‌ ಕೂಡ ಒಂದು. 2018ರ BMC ಜರ್ನಲ್‌ ಅಧ್ಯಯನದ ಪ್ರಕಾರ ಟೈಪ್‌ 2 ಡಯಾಬಿಟಿಸ್‌ ಹೊಂದಿರುವವರಲ್ಲಿ 20-40%ರಷ್ಟು ಮಂದಿ ಜೀವನದಲ್ಲಿ ಹೆಚ್ಚಿನ ಒತ್ತಡಯುಕ್ತ ಸನ್ನಿವೇಶದಲ್ಲಿ ಕೆಲಸ ಮಾಡಿದವರು. 2020ರಲ್ಲಿ ಸೈಕೋಎಂಡೋಕ್ರೈನಾಲಜಿ ನಡೆಸಿದ ಅಧ್ಯಯನದಲ್ಲಿ ಟೈಪ್‌ 2 ಡಯಾಬಿಟಿಸ್‌ ಹೊಂದಿದ ಪೇಷೆಂಟ್‌ಗಳಲ್ಲಿ ಕಾರ್ಟಿಸೋಲ್‌ ರಕ್ತದ ಸಕ್ಕರೆಯ ಅಂಶವನ್ನು ಹೆಚ್ಚು ಮಾಡಿದುದು ಕಂಡುಬಂತು.

ಮೆದುಳು ಕುಗ್ಗುತ್ತದೆ

ಅಧಿಕ ಪ್ರಮಾಣದ ಕಾರ್ಟಿಸೋಲ್‌ ಸ್ರಾವದಿಂದಾಗಿ, ಮೆದುಳಿನ ನರವ್ಯೂಹ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದಾಗಿ, ನಮ್ಮ ಸಾಮಾಜೀಕರಣವೇ ಏರುಪೇರಾದೀತು. ಅಂದರೆ ಇತರರೊಂದಿಗೆ ನಮ್ಮ ಬೆರೆಯುವಿಕೆಯಲ್ಲಿ ತೊಡಕು ಸೃಷ್ಟಿಯಾದೀತು. ಒತ್ತಡವು ಮೆದುಳಿನ ಜೀವಕೋಶಗಳನ್ನು ಸಾಯಿಸಬಲ್ಲುದು ಹಾಗೂ ಮೆದುಳಿನ ಗಾತ್ರವನ್ನೂ ಕುಗ್ಗಿಸಬಲ್ಲುದು ಎಂಬುದು ಕೆಲವು ಪ್ರಕರಣಗಳಲ್ಲಿ ಗೊತ್ತಾಗಿದೆ. ಮೆದುಳಿನ ಮುಂಭಾಗದಲ್ಲಿರುವ ಪ್ರಿಫ್ರಂಟಲ್‌ ಕಾರ್ಟೆಕ್ಸ್‌ ಅನ್ನು ಕುಗ್ಗಿಸುವ ಪರಿಣಾಮವನ್ನು ಕಾರ್ಟಿಸೋಲ್‌ ಮಾಡುವುದರಿಂದ, ಜ್ಞಾಪಕಶಕ್ತಿಯಲ್ಲೂ ತೊಂದರೆ ಉಂಟಾಗುತ್ತದೆ.

ಹೃದಯದಲ್ಲಿ ಇದೇನಿದು?

heart attack

ಅಧಿಕ ಪ್ರಮಾಣದ ಕಾರ್ಟಿಸೋಲ್‌ನಿಂದಾಗಿ ಹೃದಯಕ್ಕೆ ರಕ್ತವನ್ನು ಒಯ್ಯುವ ರಕ್ತನಾಳಗಳಲ್ಲಿ ಸಂಕುಚನ ಉಂಟಾಗುತ್ತದೆ. ದೀರ್ಘಾವಧಿ ಕಾರ್ಟಿಸೋಲ್‌ಗೆ ಒಡ್ಡಿಕೊಳ್ಳುವುದರಿಂದ ರಕ್ತದೊತ್ತಡ, ಟ್ರೈಗ್ಲಿಸರೈಡ್ಸ್‌ಗಳು ಮತ್ತು ಕೊಲೆಸ್ಟರಾಲ್‌ ಹೆಚ್ಚುತ್ತದೆ. 2019ರಲ್ಲಿ BMJ ಜರ್ನಲ್‌ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಅಂಶವೆಂದರೆ, ಕಡಿಮೆ ವಯಸ್ಸಿನಲ್ಲಿ ಹೃದಯದ ಸಮಸ್ಯೆಗಳು ಕಂಡುಬರುವುದರ ಹಿನ್ನೆಲೆಯಲ್ಲಿ ಒತ್ತಡದ ಕೈವಾಡವೂ ಇದೆ.

ಅರ್ಬುದ ಎಂದೆಂಬ ವ್ಯಾಘ್ರನು

2021ರಲ್ಲಿ Pubmed ಒಂದು ಅಧ್ಯಯನ ನಡೆಸಿತು. ಅದರಂತೆ, ಪ್ರಯೋಗಾಲಯದ ಇಲಿಗಳಲ್ಲಿ ಒತ್ತಡದ ಹಾರ್ಮೋನುಗಳು ಕೆಲವು ಬಗೆಯ ಕ್ಯಾನ್ಸರ್‌ಕಾರಕ ಕೋಶಗಳ ಜನ್ಮಕ್ಕೆ ಕಾರಣವಾದುದನ್ನು ಗುರುತಿಸಿತು. ಇದು ಮನುಷ್ಯರಲ್ಲೂ ನಿಜವಾಗಬಹುದು. ಅಂದರೆ ಅತೀವ ಒತ್ತಡದ ಪರಿಣಾಮ ಕ್ಯಾನ್ಸರ್‌ ಕೋಶಗಳು ಹುಟ್ಟಿಕೊಂಡರೂ ಅಚ್ಚರಿಯಿಲ್ಲ.

ಮೂಳೆ ಮುರಿಯುವ ಒತ್ತಡ

ಕಾರ್ಟಿಸೋಲ್‌ಗೂ ಮೂಳೆಗಳ ಸಾಂದ್ರತೆಗೂ ನೇರ ಸಂಬಂಧವಿದೆ. ಕಾರ್ಟಿಸೋಲ್‌ ಹೆಚ್ಚಾದಷ್ಟೂ ಮೂಳೆಗಳ ಸಾಂದ್ರತೆ ಕುಸಿಯುತ್ತದೆ. ಮೂಳೆಗಳು ಪೊಳ್ಳಾಗುವಿಕೆ ಹೆಚ್ಚಾಗುತ್ತದೆ. ಇದು ಬೆನ್ನೆಲುಬು, ಮೊಣಕಾಲು ಮುಂತಾದವುಗಳ ಮೇಲೆ ಒತ್ತಡ ಹಾಕಿ ಸಂಧಿವಾತಕ್ಕೆ ಕಾರಣವಾಗಬಹುದು. ಮೂಳೆಸಂದುಗಳಲ್ಲಿ ನೋವು, ಉರಿಯೂತ ಸಾಮಾನ್ಯವಾದೀತು.

ಇದನ್ನೂ ಓದಿ | ವಿಸ್ತಾರ Explainer | ಲೂಸ್ ಸಿಗರೇಟ್‌ ಮಾರಾಟ ನಿಷೇಧಕ್ಕೆ ಚಿಂತನೆ ಏಕೆ? ಇದರ ಹಿಂದಿನ ಉದ್ದೇಶ ಏನು?

ಪೌಷ್ಟಿಕತೆ ಕುಸಿತ

ಒತ್ತಡದ ಹಾರ್ಮೋನುಗಳಿಗೂ ಒತ್ತಡ ಆಹಾರ ಸೇವನೆ (stress eating)ಗೂ ಸಂಬಂಧವಿದೆ. ಕಾರ್ಟಿಸೋಲ್‌ ಹೆಚ್ಚಾದಷ್ಟೂ ಅತಿಯಾದ ಆಹಾರ ಸೇವನೆ, ಅತೀ ಕಡಿಮೆ ಸೇವನೆ, ಜಂಕ್‌ ಫುಡ್‌ ಹೆಚ್ಚಳ, ಕಳಪೆ ಆಹಾರ ಇತ್ಯಾದಿಗಳು ಹೆಚ್ಚುತ್ತವೆ. ಇದರಿಂದ ಅಪೌಷ್ಟಿಕತೆ ಸಾಮಾನ್ಯ.

ನಿದ್ರೆಯಿಲ್ಲದ ರಾತ್ರಿಗಳು (ಇನ್‌ಸೋಮ್ನಿಯಾ)

sleep

ಪ್ರತಿದಿನ ಅನುಭವಿಸುವ ಒತ್ತಡದ ಪ್ರಥಮ ನೇರ ಪರಿಣಾಮ ಗೊತ್ತಾಗುವುದು ನಿದ್ರೆಯ ಅಭ್ಯಾಸದಲ್ಲಿ. ಈ ಸಂದರ್ಭದಲ್ಲಿ REM ನಿದ್ರೆ ಹೆಚ್ಚಳವಾಗುತ್ತದೆ. ಹೀಗೆಂದರೆ ತೀವ್ರ ಕಣ್ಣುಗುಡ್ಡೆ ಚಲನೆಯ ನಿದ್ರೆ. ಇದು ಗಾಢವಾದ ನಿದ್ರೆಯಲ್ಲ. ಇದು ಮೆದುಳಿನಲ್ಲಿ ಅತಿಯಾದ ಚಟುವಟಿಕೆ ಸೃಷ್ಟಿಸುತ್ತದೆ. ಮೆದುಳನ್ನು ಶಾಂತವಾಗಿಸುವ ಗಾಢವಾದ ನಿದ್ರೆ ಕಡಿಮೆಯಾಗುತ್ತದೆ. ಮೆದುಳಿಗೆ ವಿಶ್ರಾಂತಿ ಪಡೆಯುವ ಸಮಯವೇ ಇಲ್ಲವಾಗುತ್ತದೆ. ಮೆದುಲು ರಿಲ್ಯಾಕ್ಸ್‌ ಆಗುವುದಿಲ್ಲವಾದ್ದರಿಂದ ದೇಹಕ್ಕೂ ನಿದ್ರೆ ಹಾಗೂ ವಿಶ್ರಾಂತಿ ಸಿಗುವುದಿಲ್ಲ.

ಶೃಂಗಾರವಿಲ್ಲದ ಜೀವನ

ಕಾರ್ಟಿಸೋಲ್‌ ಉಂಟುಮಾಡುವ ಕಿತಾಪತಿಯಿಂದಾಗಿ ಲೈಂಗಿಕ ಹಾರ್ಮೋನ್‌ಗಳ ಸ್ರಾವ ಕೂಡ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹದಲ್ಲಿ ಲೈಂಗಿಕ ಚೈತನ್ಯ ಸೃಷ್ಟಿಯಾಗುವುದಿಲ್ಲ. ಫಲವತ್ತತೆ ದೂರವಾದೀತು. ಮಹಿಳೆಯರಲ್ಲಿ ಋತುಸ್ರಾವಕ್ಕೆ ಕಾರಣವಾಗುವ ಹಾರ್ಮೋನ್‌ಗಳ ಸ್ರಾವದಲ್ಲೂ ಕಾರ್ಟಿಸೋಲ್‌ ಏರುಪೇರು ಉಂಟುಮಾಡುತ್ತದೆ.

ಇದನ್ನೂ ಓದಿ | Health Tips | ಈ ಕಾಂಬಿನೇಷನ್‌ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!

ನಿಮಗೆ ಒತ್ತಡ ಇದೆಯೆಂಬುದು ಹೇಗೆ ಗೊತ್ತಾಗುತ್ತದೆ?

  • ನಿದ್ರೆ ಮತ್ತು ಆಹಾರದ ಅಭ್ಯಾಸದಲ್ಲಿ ಬದಲಾವಣೆಯಾಗುತ್ತದೆ.
  • ತಲೆನೋವು ಅಥವಾ ಮೂಳೆ ನೋವು ಹೆಚ್ಚಾಗುತ್ತದೆ.
  • ದೇಹದಲ್ಲಿ ಸುಸ್ತು, ಉದಾಸೀನ ಕಾಣಿಸಿಕೊಳ್ಳುತ್ತದೆ.
  • ರಕ್ತದ ಒತ್ತಡ, ಹೃದಯ ಬಡಿತದ ಪ್ರಮಾಣ ಹೆಚ್ಚಾಗಬಹುದು.
  • ಗಾಬರಿಯಾಗುವಿಕೆ, ಬೆದರಿಕೊಳ್ಳುವಿಕೆ ಹೆಚ್ಚಾಗಬಹುದು.
  • ಏಕಾಗ್ರತೆಯಲ್ಲಿ ಕೊರತೆ ಕಾಣಿಸಿಕೊಳ್ಳುತ್ತದೆ.
  • ಸಾಮಾಜಿಕ ಸಂಬಂಧಗಳನ್ನು ನಿರ್ವಹಿಸುವುದರಲ್ಲಿ ಕಷ್ಟ.

ಒತ್ತಡವನ್ನು ನಿಭಾಯಿಸುವುದು ಹೇಗೆ?

  • ಸಕಾರಾತ್ಮಕವಾಗಿ ಯೋಚಿಸಿ: ಇದಕ್ಕೆ ಮೆದುಳನ್ನು ಸಿದ್ಧಪಡಿಸಬೇಕು. ಅರ್ಧ ಖಾಲಿ ಕಪ್ಪನ್ನು ಅರ್ಧ ತುಂಬಿದ ಕಪ್‌ ಎಂದು ನೋಡುವ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಇದಕ್ಕೆ ಮೆದುಳನ್ನು ತಯಾರುಮಾಡಬೇಕು. ಮೆದುಳು ಧನಾತ್ಮಕವಾಗಿ ಯೋಚಿಸತೊಡಗಿದಾಗ, ಕಾರ್ಟಿಸೋಲ್‌ ಮಟ್ಟ ಕಡಿಮೆಯಾಗುತ್ತದೆ.
  • ಸಂಭ್ರಮಿಸಿ: ನೀವು ಪ್ರೀತಿಸುವ ಕೆಲಸಗಳನ್ನು ಹೆಚ್ಚಾಗಿ ಮಾಡುವುದು, ನಿಮ್ಮನ್ನು ಪೋಷಿಸಿಕೊಳ್ಳುವುದರತ್ತ ಹೆಚ್ಚು ಗಮನ ನೀಡುವುದು ಅಗತ್ಯ. ನಿಮ್ಮನ್ನು ಸಂತೋಷಪಡಿಸುವ ಯಾವುದೇ ಸಂಗತಿಯು ನಿಮ್ಮ ಒತ್ತಡದ ಹಾರ್ಮೋನ್‌ ಮಟ್ಟವನ್ನು ಕಡಿಮೆ ಮಾಡುತ್ತದೆ.
  • ಧ್ಯಾನ, ಪ್ರಾಣಾಯಾಮ ಮಾಡಿ: ಉಸಿರಿನ ಮೇಲೆ ಹತೋಟಿ ಸಾಧಿಸುವುದು, ಧ್ಯಾನ ಮುಂತಾದವುಗಳು ನಿಮ್ಮ ಬೆದರಿದ ಯೋಚನೆಗಳನ್ನು ಕಡಿಮೆ ಮಾಡುವುದು ಕಂಡುಬಂದಿದೆ. ನಿಧಾನವಾದ ಹಾಗೂ ನಿಯಂತ್ರಿತ ಉಸಿರಾಟದಿಂದ ರಕ್ತದ ಒತ್ತಡವೂ ಕಡಿಮೆಯಾಗುತ್ತದೆ.
  • ನಗುವಿರಲಿ ಬದುಕಿನಲಿ: ನಗುನಗುತ್ತಿದ್ದರೆ, ಹಾಸ್ಯಪ್ರಜ್ಞೆಯಿದ್ದರೆ ಒತ್ತಡದ ಹಾರ್ಮೋನ್‌ ಸ್ರಾವ ಕಡಿಮೆಯಾಗುವುದು ಕಂಡುಬಂದಿದೆ.
  • ಪರ್ಯಾಯ ಥೆರಪಿ: ದೇಹದಲ್ಲಿನ ನೆಗೆಟಿವ್‌ ಚಿಂತನೆ, ಶಕ್ತಿಗಳನ್ನು ಕಡಿಮೆ ಮಾಡುವಲ್ಲಿ ರೇಕಿ, ಫ್ಲವರ್‌ ಥೆರಪಿಯಂಥ ಪರ್ಯಾಯ ಚಿಕಿತ್ಸಾ ವ್ಯವಸ್ಥೆಗಳು ಕೆಲಸ ಮಾಡುವುದು ಕಂಡುಬಂದಿದೆ.
  • ಸಹಭಾಗಿಗಳಿರಲಿ: ನಿಮ್ಮ ಆತಂಕ, ಚಿಂತೆಗಳನ್ನು ಹಂಚಿಕೊಳ್ಳುವ ಆಪ್ತರು ಇದ್ದಾಗ, ನಿಮ್ಮನ್ನು ಈ ಸಂದರ್ಭದಲ್ಲಿ ಕಾಪಾಡುವ ಗೆಳೆಯ/ತಿಯರಿದ್ದಾಗ ಒತ್ತಡ ಕಡಿಮೆಯಾಗುತ್ತದೆ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

EXPLAINER

CAA: ಸಿಎಎ ಕಾಯ್ದೆಯಡಿ 14 ವಲಸಿಗರಿಗೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

CAA: ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರು ಭಾರತದ ಪೌರತ್ವ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಿಎಎ ಅನ್ವಯ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಜನರಿಗೆ ಕೇಂದ್ರ ಸರ್ಕಾರವು ಭಾರತದ ಪೌರತ್ವ ನೀಡಲಿದೆ. ಅಷ್ಟಕ್ಕೂ ಸಿಎಎ ಎಂದರೇನು? ಕೇಂದ್ರದ ಪ್ರಮಾಣಪತ್ರಗಳಲ್ಲಿ ಏನಿರುತ್ತದೆ? ಇಲ್ಲಿದೆ ಮಾಹಿತಿ.

VISTARANEWS.COM


on

CAA
Koo

ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಕಾಯ್ದೆ, 2019 (Citizenship Amendment Act) ಕಾಯ್ದೆ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರವು 14 ಜನರಿಗೆ ಭಾರತದ ಪೌರತ್ವ (Indian Citizenship) ನೀಡಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರು ಭಾರತದ ಪೌರತ್ವ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಿಎಎ ಅನ್ವಯ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಜನರಿಗೆ ಕೇಂದ್ರ ಸರ್ಕಾರವು ಭಾರತದ ಪೌರತ್ವ ನೀಡಲಿದೆ ಎಂದು ತಿಳಿದುಬಂದಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಡಿಸೆಂಬರ್ 31, 2014 ರಂದು ಮತ್ತು ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಈ ಕಾನೂನು ಅನ್ವಯಿಸುತ್ತದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.

ಯಾವ ದಾಖಲೆ ಕೊಡುವುದು ಕಡ್ಡಾಯ?

ಸಿಎಎ ಅಡಿಯಲ್ಲಿ ಭಾರತದ ಪೌರತ್ವ ಪಡೆಯಲು ವಲಸಿಗರು ಕೇಂದ್ರ ಸರ್ಕಾರಕ್ಕೆ ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಜನನ ಪ್ರಮಾಣಪತ್ರ, ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಅದರ ದಾಖಲೆ, ಗುರುತಿನ ಚೀಟಿ ಅಥವಾ ದಾಖಲೆ, ವಾಹನ ಚಾಲನಾ ಪರವಾನಗಿ ಸೇರಿ ಯಾವುದೇ ಪರವಾನಗಿ, ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡುವುದು ಕಡ್ಡಾಯವಾಗಿದೆ. ಇವುಗಳನ್ನು ಪರಿಶೀಲಿಸಿ ಕೇಂದ್ರ ಸರ್ಕಾರವು ಭಾರತದ ಪೌರತ್ವ ಪಡೆಯಲಿದ್ದಾರೆ.

ಭಾರತದ ಮುಸ್ಲಿಮರಿಗೆ ತೊಂದರೆ ಇಲ್ಲ

ಸಿಎಎ ಜಾರಿಯು ಭಾರತದ ಮುಸ್ಲಿಮರ ಪೌರತ್ವದ ಮೇಲೆ ಪರಿಣಾಮ ಬೀರಲು ಯಾವುದೇ ನಿಬಂಧನೆಗಳನ್ನು ಮಾಡಿಲ್ಲ. ಕಾನೂನಿಗೆ ಭಾರತದಲ್ಲಿರುವ 18 ಕೋಟಿ ಭಾರತೀಯ ಮುಸ್ಲಿಮರೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ತಮ್ಮ ಹಿಂದೂ ಸಹವರ್ತಿಗಳಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕೂ ಮೊದಲು, ಸಿಎಎ ಎಂದರೆ, ಭಾರತದಲ್ಲಿರುವ ಮುಸ್ಲಿಮರ ಪೌರತ್ವವನ್ನು ರದ್ದುಗೊಳಿಸುವುದು ಎಂಬ ವದಂತಿ ಹಬ್ಬಿಸಲಾಗಿತ್ತು.

ಗೃಹ ಸಚಿವಾಲಯದ 2021-22ರ ವಾರ್ಷಿಕ ವರದಿಯ ಪ್ರಕಾರ ಏಪ್ರಿಲ್ 1, 2021ರಿಂದ ಡಿಸೆಂಬರ್ 31, 2021 ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಈ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಒಟ್ಟು 1,414 ವಿದೇಶಿಯರಿಗೆ ಪೌರತ್ವ ಕಾಯ್ದೆ, 1955 ರ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗಿದೆ.

ಇದನ್ನೂ ಓದಿ: CAA: ಸಿಎಎ ಅಡಿಯಲ್ಲಿ 14 ಜನರಿಗೆ ಭಾರತದ ಪೌರತ್ವ ನೀಡಿದ ಮೋದಿ ಸರ್ಕಾರ; ಸರ್ಟಿಫಿಕೇಟ್‌ ಕೂಡ ಹಸ್ತಾಂತರ!

Continue Reading

ಕರ್ನಾಟಕ

Climate Plan: ರಾಜ್ಯ ಸರ್ಕಾರದ ಹವಾಮಾನ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಒಪ್ಪಿಗೆ; ಏನಿದು ಯೋಜನೆ?

ಹವಾಮಾನ ಬದಲಾವಣೆ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ 2 (Climate Plan) ಅನ್ನು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MOEF & CC) ಏಪ್ರಿಲ್ 2021 ರಲ್ಲಿ ಕಳುಹಿಸಲಾಗಿತ್ತು. ಮೂರು ವರ್ಷಗಳ ಅನಂತರ ಅದನ್ನು ಕಾರ್ಯಗತಗೊಳಿಸಲು ರಾಜ್ಯಕ್ಕೆ ಅನುಮೋದನೆ ನೀಡಲಾಗಿದೆ.

VISTARANEWS.COM


on

By

Climate Plan
Koo

ಬೆಂಗಳೂರು: ಕರ್ನಾಟಕ (karnataka) ಸರ್ಕಾರ (government) 2021ರಲ್ಲಿ ಸಿದ್ಧಪಡಿಸಲಾದ ಹವಾಮಾನ ಕ್ರಿಯಾ ಯೋಜನೆ (Climate Plan) ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿದೆ. ಈ ಬಾರಿ ಕರ್ನಾಟಕದಲ್ಲಿ ಅತ್ಯಂತ ಭೀಕರ ಬರಗಾಲ (worst droughts) ಎದುರಾಗಿದೆ. ಆದರೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ನಿರೀಕ್ಷೆ ಇದೆ. ಈ ನಡುವೆ ಇದೀಗ ಹವಾಮಾನ ಕ್ರಿಯಾ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಹವಾಮಾನ ಬದಲಾವಣೆ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ 2 ಅನ್ನು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MOEF & CC) ಏಪ್ರಿಲ್ 2021ರಲ್ಲಿ ಕಳುಹಿಸಲಾಗಿತ್ತು. ಮೂರು ವರ್ಷಗಳ ಅನಂತರ ಅದನ್ನು ಕಾರ್ಯಗತಗೊಳಿಸಲು ರಾಜ್ಯಕ್ಕೆ ಅನುಮೋದನೆ ನೀಡಲಾಗಿದೆ.

42 ವಿವಿಧ ಇಲಾಖೆಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ ಅಭಿವೃದ್ಧಿ ಆಯುಕ್ತರು, ಜೂನ್‌ನಲ್ಲಿ ಮಾದರಿ ನೀತಿ ಸಂಹಿತೆ ಹಿಂಪಡೆದ ಅನಂತರ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದರೊಂದಿಗೆ ಹವಾಮಾನ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಲಿದೆ ಎಂದು ತಿಳಿಸಿದ್ದರು. ಹವಾಮಾನ ಕ್ರಿಯಾ ಯೋಜನೆ ಕಾರ್ಯಕ್ರಮಕ್ಕೆ ನಿರ್ದಿಷ್ಟ ಯೋಜನೆಗಳು, ಕಾರ್ಯಕ್ಷಮತೆ ಸೂಚಕಗಳು ಮತ್ತು ಗುರಿಗಳನ್ನು ಸಿದ್ಧಪಡಿಸಲು ನಾವು ಎಲ್ಲಾ ಇಲಾಖೆಗಳಿಗೆ ತಿಳಿಸಿದ್ದೇವೆ. ಮಾದರಿ ನೀತಿ ಸಂಹಿತೆ ಹಿಂತೆಗೆದುಕೊಂಡ ತಕ್ಷಣ ನಾವು ಸಚಿವ ಸಂಪುಟದ ಮುಂದೆ ಸಲ್ಲಿಕೆ ಮಾಡಲು ಯೋಜಿಸಿದ್ದೇವೆ ಎಂದು ಅಭಿವೃದ್ಧಿ ಆಯುಕ್ತ ಡಾ. ಶಾಲಿನಿ ರಜನೀಶ್ ಹೇಳಿದ್ದಾರೆ.

ಶೀಘ್ರ ಜಾರಿಯಾಗಬೇಕು

ಹವಾಮಾನ ವೈಪರೀತ್ಯದ ಪರಿಣಾಮ ರಾಜ್ಯದ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಕ್ರಿಯಾ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎನ್ನುತ್ತಾರೆ ತಜ್ಞರು. ಪರಿಸರ ಇಲಾಖೆಯ ಅಧಿಕಾರಿಯ ಪ್ರಕಾರ, ಕ್ರಿಯಾ ಯೋಜನೆಯಲ್ಲಿ ಸೂಚಿಸಲಾದ ಕ್ರಮಗಳನ್ನು ಸಂಯೋಜಿಸಲು ಮತ್ತು ತಮ್ಮ ಗುರಿಗಳನ್ನು ಸಲ್ಲಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ ಕಾರ್ಯನಿರ್ವಹಣೆಯೊಂದಿಗೆ ಬೇಸ್‌ಲೈನ್‌ನಂತೆ ಕಾರ್ಯನಿರ್ವಹಿಸುವ ಪಟ್ಟಿಯನ್ನು ಸಿದ್ಧಪಡಿಸಬೇಕು. ಉದಾಹರಣೆಗೆ, ಅರಣ್ಯ ಇಲಾಖೆಯು ತಾನು ಯೋಜಿಸಿರುವ ಅರಣ್ಯೀಕರಣದ ಪ್ರಮಾಣ ಮತ್ತು ಐದು ವರ್ಷಗಳಲ್ಲಿ ಗುರಿಯನ್ನು ಸಲ್ಲಿಸಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಏನೆಲ್ಲಾ ಒಳಗೊಂಡಿರುತ್ತದೆ?

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಸಿದ್ಧಪಡಿಸಿದ ಕ್ರಿಯಾ ಯೋಜನೆಯು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಹಲವಾರು ಮಧ್ಯಸ್ಥಿಕೆಗಳು ಮತ್ತು ಮೌಲ್ಯಮಾಪನ ತಂತ್ರಗಳನ್ನು ಸೂಚಿಸುತ್ತದೆ. ಕೃಷಿ, ತೋಟಗಾರಿಕೆ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು 10 ಇತರ ಕ್ಷೇತ್ರಗಳಲ್ಲಿ ಕ್ರಮಗಳನ್ನು ಜಾರಿಗೆ ತರಲು 2025 ಮತ್ತು 2030 ರ ನಡುವೆ ರಾಜ್ಯಕ್ಕೆ 52,827 ಕೋಟಿ ರೂಪಾಯಿ ಅಗತ್ಯವಿದೆ ಎಂದು ಯೋಜನೆ ಸೂಚಿಸುತ್ತದೆ.

ಹಣಕಾಸು ಅಂದಾಜು ಹೆಚ್ಚಳ ಸಾಧ್ಯತೆ

ಅರಣ್ಯೀಕರಣದಿಂದ ನವೀಕರಿಸಬಹುದಾದ ಶಕ್ತಿಯ ಬಳಕೆಯವರೆಗೆ, ಯೋಜನೆಯು ಪ್ರತಿಯೊಂದು ಇಲಾಖೆಗೆ ಕ್ರಮಗಳನ್ನು ಸೂಚಿಸುತ್ತದೆ.

ಹಣಕಾಸಿನ ಅಂದಾಜುಗಳನ್ನು 2021ರಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಈಗ ಹೆಚ್ಚಾಗಿರಬಹುದು. ಕ್ರಿಯಾ ಯೋಜನೆಯು ಹಣವನ್ನು ಸಂಗ್ರಹಿಸಲು ಹಲವಾರು ಹಣಕಾಸು ವಿಧಾನಗಳನ್ನು ರೂಪಿಸುತ್ತದೆ. ನಾವು ಇಲಾಖೆ-ನಿರ್ದಿಷ್ಟ ಯೋಜನೆಗಳನ್ನು ಹೊಂದಬಹುದು ಎಂದು ಕ್ರಿಯಾ ಯೋಜನೆ ತಯಾರಿಕೆಯ ಭಾಗವಾಗಿದ್ದ ಪ್ರೊ. ಕೃಷ್ಣ ರಾಜ್ ಹೇಳಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.


ಖಾಸಗಿ ಹೂಡಿಕೆಗಳನ್ನು ಆಕರ್ಷಿಸುವುದರಿಂದ ಹಿಡಿದು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಗಳ ಉತ್ತಮ ಬಳಕೆಗೆ, ಯೋಜನೆಯು ವಿವಿಧ ಹಣಕಾಸು ವಿಧಾನಗಳನ್ನು ವಿವರಿಸುತ್ತದೆ.ಬರ ಮತ್ತು ಪ್ರವಾಹಗಳ ಆವರ್ತನ ಹೆಚ್ಚಾಗಿದೆ. ತಾಪಮಾನ ಮತ್ತು ಮಳೆಯ ಮಾದರಿಗಳು ಅನಿರೀಕ್ಷಿತವಾಗಿವೆ. ಇವುಗಳು ಅನೇಕ ಕ್ಷೇತ್ರಗಳ ಮೇಲೆ, ವಿಶೇಷವಾಗಿ ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಕೃಷಿಯ ಮೇಲೆ ಪರಿಣಾಮ ಬೀರಿದರೆ, ಅದು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಕ್ರಮವನ್ನು ಕಾರ್ಯಗತಗೊಳಿಸುವುದು ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಬರ ಪರಿಸ್ಥಿತಿ ಮತ್ತು ನೀರಿನ ಕೊರತೆಯಿಂದಾಗಿ ಅಧಿಕಾರಿಗಳು ಮತ್ತು ನಾಗರಿಕರಲ್ಲಿ ಜಾಗೃತಿ ಹೆಚ್ಚಾಗಿದೆ ಮತ್ತು ಆದ್ದರಿಂದ ಈ ಕ್ರಮಕ್ಕೆ ಇದು ಸರಿಯಾದ ಸಮಯ ಎಂದು ಪರಿಸರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Politics: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ? ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಹತ್ವದ ಸುಳಿವು!

ಏನು ಕ್ರಮ ?

ಕೃಷಿಗೆ ಶುಷ್ಕ- ಋತುವಿಗೆ ಸಂಬಂಧಿಸಿದ ವಿವಿಧ ಬೆಳೆ ಯೋಜನೆ, ನಿಖರವಾದ ನೀರಾವರಿ ತಂತ್ರಜ್ಞಾನ ಅಳವಡಿಕೆ. ಅರಣ್ಯಕ್ಕೆ ಹವಾಮಾನಕ್ಕೆ ಪೂರಕವಾದ ಅರಣ್ಯೀಕರಣ ಕಾರ್ಯಕ್ರಮಗಳು, ಜಾನುವಾರುಗಳ ಸಮಗ್ರ ರೋಗಗಾಲ ಮೇಲೆ ಕಣ್ಗಾವಲು ಮತ್ತು ತಕ್ಷಣ ಪ್ರತಿಕ್ರಿಯೆ ನೀಡಲು ಕ್ರಮ. ಅಂತರ್ಜಲ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು. ಶಕ್ತಿ ಮೂಲಗಳಲ್ಲಿ ನವೀಕರಿಸಬಹುದಾದ ವಸ್ತುಗಳ ಮೇಲೆ ಹೆಚ್ಚಿನ ಗಮನ ಹರಿಸುವುದು ಮೊದಲಾದವುಗಳನ್ನು ಹವಾಮಾನ ಕ್ರಿಯಾ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.

Continue Reading

ರಾಜಕೀಯ

POK Explainer in Kannada: ಪಾಕ್ ಆಕ್ರಮಿತ ಕಾಶ್ಮೀರ ಕುರಿತ 15 ಕುತೂಹಲಕಾರಿ ಸಂಗತಿಗಳು

POK Explainer in Kannada: ಕಾಶ್ಮೀರದ ಭಾಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರ (Pakistan Occupied Kashmir) ನಿರಂತರ ಚರ್ಚೆಯಲ್ಲಿರುವ ಪ್ರದೇಶ. ಸುಮಾರು 52 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪಿಒಕೆ ಅಭಿವೃದ್ಧಿ ವಿಚಾರದಲ್ಲಿ ಇನ್ನೂ ಹಿಂದುಳಿದಿದೆ. ಇದಕ್ಕೆ ಮುಖ್ಯ ಕಾರಣ ಈ ಪ್ರದೇಶದ ಆಡಳಿತವನ್ನು ಪಾಕಿಸ್ತಾನ ಸರ್ಕಾರ ನಿಯಂತ್ರಿಸುತ್ತಿರುವುದು. ಆದರೂ ಇಲ್ಲಿನ ಕುರಿತು ತಿಳಿದುಕೊಳ್ಳಬೇಕಾದ ಹಲವಾರು ಪ್ರಮುಖ ಅಂಶಗಳಿವೆ. ಪಿಒಕೆ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.

VISTARANEWS.COM


on

By

POK Explainer in Kannada
Koo

ಪಾಕಿಸ್ತಾನವು (pakistan) 1947ರಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ (POK Explainer in Kannada) ಕಾಶ್ಮೀರದ (kashmir) ಭಾಗಗಳನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (Pakistan Occupied Kashmir) ಎಂದು ಕರೆಯಲಾಗುತ್ತದೆ. ಪಾಕಿಸ್ತಾನವು ಪಿಒಕೆಯನ್ನು (POK) ಎರಡು ಭಾಗಗಳಾಗಿ ವಿಂಗಡಿಸಿದೆ. ಒಂದು ಆಜಾದ್ ಕಾಶ್ಮೀರ (Azad Kashmir) ಹಾಗೂ ಮತ್ತೊಂದು ಗಿಲ್ಗಿಟ್-ಬಾಲ್ಟಿಸ್ತಾನ್ (Gilgit-Baltistan). ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನಸಂಖ್ಯೆ 2020ರಲ್ಲಿ ಸುಮಾರು 52 ಲಕ್ಷ ಇತ್ತು. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಈಗ ದಂಗೆ ಭುಗಿಲೆದ್ದಿದೆ. ಅಲ್ಲಿಯ ಜನ, ಭಾರತದ ಜತೆ ವೀಲೀನವಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಅನಂತರ ಈಗ ಭಾರತೀಯ ಜನರು ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾರಣಗಳೂ ಇವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.


ಪಿಒಕೆ ಎಂದರೇನು?

ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದ್ದು, 1947ರಲ್ಲಿ ಪಾಕಿಸ್ತಾನದಿಂದ ಆಕ್ರಮಣಕ್ಕೊಳಗಾದ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿದೆ.

1. ಪಿಒಕೆಯನ್ನು ಆಡಳಿತಾತ್ಮಕವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇದನ್ನು ಅಧಿಕೃತವಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ಗಿಲ್ಗಿಟ್- ಬಾಲ್ಟಿಸ್ತಾನ್ ಎಂದು ಕರೆಯಲಾಗುತ್ತದೆ. ಪಾಕಿಸ್ತಾನದಲ್ಲಿ ‘ಆಜಾದ್ ಜಮ್ಮು ಮತ್ತು ಕಾಶ್ಮೀರ’ವನ್ನು ಆಜಾದ್ ಕಾಶ್ಮೀರ ಎಂದೂ ಕರೆಯುತ್ತಾರೆ.

2. ಪಾಕ್ ಆಕ್ರಮಿತ ಕಾಶ್ಮೀರದ ಮುಖ್ಯಸ್ಥರು ಅಧ್ಯಕ್ಷರಾಗಿದ್ದರೆ, ಪ್ರಧಾನಮಂತ್ರಿಗಳು ಮಂತ್ರಿಗಳ ಮಂಡಳಿಯಿಂದ ಬೆಂಬಲಿತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

3. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ತನ್ನ ಸ್ವ-ಆಡಳಿತ ಅಸೆಂಬ್ಲಿ ಎಂದು ಹೇಳಿಕೊಂಡಿದೆ. ಆದರೆ ವಾಸ್ತವವೆಂದರೆ ಅದು ಪಾಕಿಸ್ತಾನದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.

4. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೂಲ ಕಾಶ್ಮೀರದ ಒಂದು ಭಾಗವಾಗಿದೆ. ಇದರ ಗಡಿಗಳು ಪಾಕಿಸ್ತಾನದ ಪಂಜಾಬ್ ಪ್ರದೇಶ, ವಾಯವ್ಯ, ಅಫ್ಘಾನಿಸ್ತಾನದ ವಖಾನ್ ಕಾರಿಡಾರ್, ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶ ಮತ್ತು ಭಾರತದ ಕಾಶ್ಮೀರದ ಪೂರ್ವಕ್ಕೆ ಸ್ಪರ್ಶಿಸುತ್ತವೆ.

5. ಗಿಲ್ಗಿಟ್- ಬಾಲ್ಟಿಸ್ತಾನ್‌ವನ್ನು ತೆಗೆದುಹಾಕಿದರೆ, ಆಜಾದ್ ಕಾಶ್ಮೀರದ ಪ್ರದೇಶವು 13,300 ಚದರ ಕಿಲೋಮೀಟರ್‌ಗಳಷ್ಟು ಅಂದರೆ ಸರಿಸುಮಾರು ಭಾರತದ ಕಾಶ್ಮೀರದ ಸುಮಾರು 3 ಪಟ್ಟು ವಿಶಾಲವಾಗಿದೆ ಮತ್ತು ಅದರ ಜನಸಂಖ್ಯೆಯು ಸುಮಾರು 52 ಲಕ್ಷ.

6. ಆಜಾದ್ ಕಾಶ್ಮೀರದ ರಾಜಧಾನಿ ಮುಜಫರಾಬಾದ್. ಇದು 10 ಜಿಲ್ಲೆಗಳು, 33 ತೆಹಸಿಲ್‌ಗಳು ಮತ್ತು 182 ಫೆಡರಲ್ ಕೌನ್ಸಿಲ್‌ಗಳನ್ನು ಹೊಂದಿದೆ.

7. ಪಾಕ್ ಆಕ್ರಮಿತ ಕಾಶ್ಮೀರದ ದಕ್ಷಿಣ ಭಾಗದಲ್ಲಿ 8 ಜಿಲ್ಲೆಗಳಿವೆ. ಮಿರ್ ಪುರ್, ಭಿಂಬರ್, ಕೋಟ್ಲಿ, ಮುಜಫರಾಬಾದ್, ಬಾಗ್, ನೀಲಂ, ರಾವಲಕೋಟ್ ಮತ್ತು ಸುಧಾನೋತಿ.

8. ಪಾಕ್ ಆಕ್ರಮಿತ ಕಾಶ್ಮೀರದ ಹುಂಜಾ-ಗಿಲ್ಗಿಟ್, ಶಕ್ಸ್‌ಗಾಮ್ ಕಣಿವೆ, ರಕ್ಸಾಮ್ ಮತ್ತು ಬಾಲ್ಟಿಸ್ತಾನ್ ಪ್ರದೇಶವನ್ನು 1963ರಲ್ಲಿ ಪಾಕಿಸ್ತಾನವು ಚೀನಾಕ್ಕೆ ಹಸ್ತಾಂತರಿಸಿತು. ಈ ಪ್ರದೇಶವನ್ನು ಸೆಡೆಡ್ ಪ್ರದೇಶ ಅಥವಾ ಟ್ರಾನ್ಸ್-ಕಾರಕೋರಂ ಟ್ರ್ಯಾಕ್ಟ್ ಎಂದು ಕರೆಯಲಾಗುತ್ತದೆ.

9. ಪಿಒಕೆಯ ಜನರು ಮುಖ್ಯವಾಗಿ ಕೃಷಿ ಮಾಡುತ್ತಾರೆ. ಅವರ ಮುಖ್ಯ ಆದಾಯದ ಮೂಲಗಳು ಜೋಳ, ಗೋಧಿ, ಅರಣ್ಯ ಮತ್ತು ಜಾನುವಾರುಗಳು.

10. ಈ ಪ್ರದೇಶದಲ್ಲಿ ಕಡಿಮೆ ದರ್ಜೆಯ ಕಲ್ಲಿದ್ದಲು ನಿಕ್ಷೇಪಗಳಿವೆ, ಸೀಮೆಸುಣ್ಣದ ನಿಕ್ಷೇಪಗಳು, ಬಾಕ್ಸೈಟ್ ನಿಕ್ಷೇಪಗಳು ಕಂಡುಬರುತ್ತವೆ. ಕೆತ್ತಿದ ಮರದ ವಸ್ತುಗಳು, ಜವಳಿ ಮತ್ತು ಕಾರ್ಪೆಟ್‌ಗಳ ತಯಾರಿಕೆಯು ಈ ಪ್ರದೇಶಗಳಲ್ಲಿ ನೆಲೆಗೊಂಡಿರುವ ಕೈಗಾರಿಕೆಗಳ ಮುಖ್ಯ ಉತ್ಪನ್ನಗಳಾಗಿವೆ.

11. ಈ ಪ್ರದೇಶದಲ್ಲಿನ ಕೃಷಿ ಉತ್ಪನ್ನಗಳಲ್ಲಿ ಅಣಬೆ, ಜೇನು, ವಾಲ್ನಟ್, ಸೇಬು, ಚೆರ್ರಿ, ಔಷಧೀಯ ಗಿಡಮೂಲಿಕೆ ಮತ್ತು ಸಸ್ಯಗಳು, ರಾಳ, ಮೇಪಲ್ ಮರಗಳು ಸೇರಿವೆ.

12. ಈ ಪ್ರದೇಶದಲ್ಲಿ ಶಾಲೆಗಳು ಮತ್ತು ಕಾಲೇಜುಗಳ ಕೊರತೆಯಿದೆ. ಆದರೆ ಈ ಪ್ರದೇಶವು ಶೇ. 72ರಷ್ಟು ಸಾಕ್ಷರತೆಯನ್ನು ಹೊಂದಿದೆ.

13. ಪಾಷ್ಟೋ, ಉರ್ದು, ಕಾಶ್ಮೀರಿ ಮತ್ತು ಪಂಜಾಬಿಯಂತಹ ಭಾಷೆಗಳನ್ನು ಇಲ್ಲಿನ ಜನರು ಪ್ರಮುಖವಾಗಿ ಮಾತನಾಡುತ್ತಾರೆ.

14. ಪಾಕ್ ಆಕ್ರಮಿತ ಕಾಶ್ಮೀರ ತನ್ನದೇ ಆದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಅನ್ನು ಸಹ ಹೊಂದಿದೆ.


ವಿವಾದದ ಮೂಲ ಏನು?

1947ರಲ್ಲಿ ಪಾಕಿಸ್ತಾನದ ಪಷ್ಟೂನ್ ಬುಡಕಟ್ಟು ಜನಾಂಗದವರು ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ಮಾಡಿದರು. ಇವರಿಗೆ ಪಾಕ್‌ ಸೇನೆಯ ಕುಮ್ಮಕ್ಕು ಇತ್ತು. ಆಗ ಈ ನಿರ್ಣಾಯಕ ಪರಿಸ್ಥಿತಿಯನ್ನು ನಿಭಾಯಿಸಲು ಆ ಕಾಲದ ಆಡಳಿತಗಾರ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಭಾರತ ಸರ್ಕಾರದಿಂದ ಮಿಲಿಟರಿ ಸಹಾಯವನ್ನು ಕೋರಿದರು ಮತ್ತು ಅಂದಿನ ಭಾರತದ ಗವರ್ನರ್ ಜನರಲ್ ಮೌಂಟ್ ಬ್ಯಾಟನ್ ಅವರು 26 ಅಕ್ಟೋಬರ್ 1947ರಂದು ಒಪ್ಪಂದಕ್ಕೆ ಸಹಿ ಹಾಕಿದರು. ಇದರಲ್ಲಿ ಮೂರು ವಿಷಯಗಳು ರಕ್ಷಣೆ, ವಿದೇಶಾಂಗ ವ್ಯವಹಾರಗಳು ಮತ್ತು ಸಂವಹನಗಳು ಭಾರತಕ್ಕೆ ಹಸ್ತಾಂತರಿಸಲಾಯಿತು. ಈ ವಿಷಯಗಳನ್ನು ಹೊರತುಪಡಿಸಿ, ಜಮ್ಮು ಮತ್ತು ಕಾಶ್ಮೀರವು ತನ್ನ ಎಲ್ಲಾ ನಿರ್ಧಾರಗಳಿಗೆ ಮುಕ್ತವಾಗಿತ್ತು.

ಒಪ್ಪಂದದ ಈ ಸೇರ್ಪಡೆಯ ಆಧಾರದ ಮೇಲೆ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಧ್ಯಪ್ರವೇಶಿಸುವ ಸಂಪೂರ್ಣ ಹಕ್ಕನ್ನು ಹೊಂದಿದೆ ಎಂದು ಹೇಳುತ್ತದೆ. ಮತ್ತೊಂದೆಡೆ ಪಾಕಿಸ್ತಾನ ಇದನ್ನು ಒಪ್ಪುವುದಿಲ್ಲ.

ಪಾಕಿಸ್ತಾನದ ವಾದ ಏನು?

ಕಾಶ್ಮೀರದ ಮೇಲಿನ ಪಾಕಿಸ್ತಾನದ ಹಕ್ಕು 1993ರ ಘೋಷಣೆಯನ್ನು ಆಧರಿಸಿದೆ. ಈ ಘೋಷಣೆಯ ಪ್ರಕಾರ ಪಾಕಿಸ್ತಾನ ಸರ್ಕಾರದ ಆಡಳಿತವನ್ನು ಸ್ಥಾಪಿಸಬೇಕಾದ 5 ರಾಜ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರವೂ ಸೇರಿದೆ. ಆದರೆ ಪಾಕಿಸ್ತಾನದ ಈ ಹೇಳಿಕೆಯನ್ನು ಭಾರತ ಎಂದಿಗೂ ಒಪ್ಪಲಿಲ್ಲ.

ಎರಡು ಭಾಗಗಳಾಗಿ ವಿಂಗಡಣೆ

ಭಾರತ ಮತ್ತು ಪಾಕಿಸ್ತಾನದ ನಡುವಿನ 1947ರ ಯುದ್ಧದ ಅನಂತರ ಕಾಶ್ಮೀರ ಆಡಳಿತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಭಾರತದಿಂದ ಬೇರ್ಪಟ್ಟ ಕಾಶ್ಮೀರದ ಭಾಗವು ಜಮ್ಮು ಮತ್ತು ಕಾಶ್ಮೀರದ ಉಪಖಂಡವಾಯಿತು ಮತ್ತು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಿಂದ ಸಮೀಪದಲ್ಲಿದ್ದ ಕಾಶ್ಮೀರದ ಭಾಗವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಯಿತು.

ಆಜಾದ್ ಕಾಶ್ಮೀರ

ಭಾರತದ ಕಾಶ್ಮೀರದ ಪಶ್ಚಿಮ ಭಾಗಕ್ಕೆ ಹೊಂದಿಕೊಂಡಿದೆ. 2011ರ ಹೊತ್ತಿಗೆ, ಆಜಾದ್ ಕಾಶ್ಮೀರದ ಜಿಡಿಪಿ 3.2 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಐತಿಹಾಸಿಕವಾಗಿ ಆಜಾದ್ ಕಾಶ್ಮೀರದ ಆರ್ಥಿಕತೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ಕಡಿಮೆ ಎತ್ತರದ ಪ್ರದೇಶಗಳಲ್ಲಿ ಹೆಚ್ಚಿನ ಜನಸಂಖ್ಯೆಯು ಗೋಧಿ, ಬಾರ್ಲಿ, ಕಾರ್ನ್ (ಮೆಕ್ಕೆಜೋಳ) ಮಾವು, ರಾಗಿ ಮುಂತಾದ ಬೆಳೆಗಳನ್ನು ಬೆಳೆಯುತ್ತದೆ.

ದಕ್ಷಿಣ ಜಿಲ್ಲೆಗಳಲ್ಲಿ, ಪಾಕಿಸ್ತಾನಿ ಸಶಸ್ತ್ರ ಪಡೆಗಳಿಗೆ ಅನೇಕ ಪುರುಷರನ್ನು ನೇಮಿಸಿಕೊಳ್ಳಲಾಗಿದೆ. ಇತರ ಸ್ಥಳೀಯರು ಯುರೋಪ್ ಅಥವಾ ಮಧ್ಯಪ್ರಾಚ್ಯದ ದೇಶಗಳಿಗೆ ಪ್ರಯಾಣಿಸುತ್ತಾರೆ. ಅಲ್ಲಿ ಅವರು ಕಾರ್ಮಿಕ-ಆಧಾರಿತ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಾರೆ.

ಇದನ್ನೂ ಓದಿ: PoK Crisis: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಂಗೆಯೆದ್ದ ಜನ, ಗಲಾಟೆ; ಭಾರತದ ಜತೆ ವಿಲೀನಕ್ಕೆ ಆಗ್ರಹ!

ಉತ್ತರ ಪ್ರದೇಶ

ಗಿಲ್ಗಿಟ್ ಪ್ರದೇಶವನ್ನು ಕಾಶ್ಮೀರದ ಮಹಾರಾಜರು ಬ್ರಿಟಿಷ್ ಸರ್ಕಾರಕ್ಕೆ ಗುತ್ತಿಗೆ ನೀಡಿದರು. ಬಾಲ್ಟಿಸ್ತಾನ್ 1947ರಲ್ಲಿ ಪಾಕಿಸ್ತಾನದಿಂದ ಆಕ್ರಮಿಸಲ್ಪಟ್ಟ ಪಶ್ಚಿಮ ಲಡಾಖ್ ಪ್ರಾಂತ್ಯದ ಪ್ರದೇಶವಾಗಿತ್ತು. ಈ ಪ್ರದೇಶವು ವಿವಾದಿತ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಭಾಗವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಅತ್ಯಂತ ಕಳಪೆ ಸ್ಥಿತಿಯಲ್ಲಿದೆ. ಪಾಕಿಸ್ತಾನವು ಈ ಪ್ರದೇಶದ ಮೇಲೆ ಹಿಡಿತ ಹೊಂದಿದೆ. ಆದರೆ ಈ ಪ್ರದೇಶವನ್ನು ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಅಭಿವೃದ್ಧಿಪಡಿಸಿಲ್ಲ. ಆದ್ದರಿಂದ ಈ ಪ್ರದೇಶದ ಬಡ ಜನರನ್ನು ಭಯೋತ್ಪಾದಕರಂತೆ ತರಬೇತಿ ನೀಡಲು ಮತ್ತು ಭಾರತವನ್ನು ಅಸ್ಥಿರಗೊಳಿಸಲು ಬಳಸಿಕೊಳ್ಳುತ್ತಿದೆ.

Continue Reading

ದೇಶ

Narendra Modi : 2019ರಲ್ಲಿ ಬಿಹಾರದ ಒಂದು ಕ್ಷೇತ್ರದಲ್ಲಿ ಸೋತಿದ್ದೆವು; ಈ ಬಾರಿ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದ ಮೋದಿ

Narendra Modi: ಭಾನುವಾರ ರೋಡ್ ಶೋ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ, ಬಿಹಾರದಲ್ಲಿ ಮೈತ್ರಿಕೂಟವು ಕ್ಲೀನ್ ಸ್ವೀಪ್ ಸಾಧನೆ ಮಾಡುವುದು ನಿಶ್ಚಿತ ಎಂದು ಭವಿಷ್ಯ ನುಡಿದರು. ನಾನು ಬಿಹಾರದ ನಮ್ಮ ಮಿತ್ರಪಕ್ಷಗಳೊಂದಿಗೆ ಮಾತನಾಡಿದ್ದೇನೆ. ನಾವು (2019 ರಲ್ಲಿ) ಒಂದು ಸ್ಥಾನವನ್ನು ಕಳೆದುಕೊಂಡಿದ್ದೇವೆ ಮತ್ತು ಈ ಬಾರಿ ನಾವು ಒಂದು ಸ್ಥಾನವನ್ನು ಸಹ ಕಳೆದುಕೊಳ್ಳುವುದಿಲ್ಲ ಎಂದು ಅವರೆಲ್ಲರೂ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಮೋದಿ ಹೇಳಿಕೊಂಡರು.

VISTARANEWS.COM


on

Narendra modi
Koo

ಬೆಂಗಳೂರು: ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ 2019ರ ಲೋಕ ಸಭಾ ಚುನಾವಣೆಯಲ್ಲಿ (Lok Sabha Election) ಬಿಹಾರದಲ್ಲಿ ಒಂದು ಸ್ಥಾನ ಕಳೆದುಕೊಂಡಿತ್ತು. ಈ ಬಾರಿ ಈ ಬಾರಿ ನಾವು ಒಂದನ್ನೂ ಕಳೆದುಕೊಳ್ಳುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi ) ಹೇಳಿದ್ದಾರೆ. ಎನ್​ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಎಲ್ಲ ಸೀಟ್​ಗಳನ್ನು ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಮಿತ್ರಪಕ್ಷ ಜೆಡಿಯು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಪಾಟ್ನಾದಲ್ಲಿ ರೋಡ್ ಶೋ (Modi Patna Road Show) ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಆಡಳಿತಾರೂಢ ಮೈತ್ರಿಕೂಟವು 2019 ರ ಲೋಕಸಭಾ ಚುನಾವಣೆಗಿಂತ ರಾಜ್ಯದಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಳೆದ ಬಾರಿ ಕಳೆದುಕೊಂಡ ಏಕೈಕ ಕ್ಷೇತ್ರವನ್ನು ಸಹ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಭಾನುವಾರ ರೋಡ್ ಶೋ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ, ಬಿಹಾರದಲ್ಲಿ ಮೈತ್ರಿಕೂಟವು ಕ್ಲೀನ್ ಸ್ವೀಪ್ ಸಾಧನೆ ಮಾಡುವುದು ನಿಶ್ಚಿತ ಎಂದು ಭವಿಷ್ಯ ನುಡಿದರು. ನಾನು ಬಿಹಾರದ ನಮ್ಮ ಮಿತ್ರಪಕ್ಷಗಳೊಂದಿಗೆ ಮಾತನಾಡಿದ್ದೇನೆ. ನಾವು (2019 ರಲ್ಲಿ) ಒಂದು ಸ್ಥಾನವನ್ನು ಕಳೆದುಕೊಂಡಿದ್ದೇವೆ ಮತ್ತು ಈ ಬಾರಿ ನಾವು ಒಂದು ಸ್ಥಾನವನ್ನು ಸಹ ಕಳೆದುಕೊಳ್ಳುವುದಿಲ್ಲ ಎಂದು ಅವರೆಲ್ಲರೂ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಮೋದಿ ಹೇಳಿಕೊಂಡರು.

ರಾಜ್ಯ ಮತ್ತು ಅದರ ಜನರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇನೆ. ನಾನು ಹಲವಾರು ಕೆಲಸಕ್ಕಾಗಿ ಆಗಾಗ್ಗೆ ಇಲ್ಲಿಗೆ ಬಂದಿದ್ದೇನೆ. ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದೇನೆ. ನನಗೆ ಇಲ್ಲಿ ಬಹಳ ಹಳೆಯ ಸಂಪರ್ಕಗಳಿವೆ ಎಂಬುದಾಗಿ ಅವರು ಹೇಳಿಕೊಂಡರು.

ಮುಂದುವರಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಪೂರ್ವ ಭಾರತದಲ್ಲಿ ಬಿಜೆಪಿ ತನ್ನ ಹೆಜ್ಜೆಗುರುತನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಲಿದೆ. ಇದು ಎನ್​ಡಿಎಯ 400 ಸ್ಥಾನಗಳ ಗಡಿ ಸುಲಭವಾಗಿ ತಲುಪಲು ನೆರವಾಗುತ್ತದೆ ಎಂದು ಹೇಳಿದರು. ಪೂರ್ವ ಭಾರತದಲ್ಲಿ ಬಿಜೆಪಿಯ ಏಳಿಗೆಯ ಬಗ್ಗೆ ಕೇಳಿದಾಗ, ವಲಯವನ್ನು ಬೆಳವಣಿಗೆಯ ಎಂಜಿನ್ ಆಗಿ ಅಭಿವೃದ್ಧಿಪಡಿಸಲು ವಿಶೇಷ ಗಮನ ಹರಿಸುವ ಬಗ್ಗೆ ಪ್ರಧಾನಿ ಮಾತನಾಡಿದರು.

ಇದನ್ನೂ ಓದಿ: Prajwal Revanna Case: ದಿಕ್ಕು ತಪ್ಪಿದೆ ಪ್ರಜ್ವಲ್ ರೇವಣ್ಣ ಕೇಸ್‌; ಡಿಕೆಶಿ ವಿಚಾರಣೆಯೂ ಆಗಲಿ ಎಂದ ಬಸವರಾಜ ಬೊಮ್ಮಾಯಿ

ನೀವು ನನ್ನ 2013 ರ ಭಾಷಣವನ್ನು ಆಲಿಸಿದ್ದರೆ ನೆನಪಿರಬಹುದು. ನಾನು ಪ್ರಧಾನಿ ಆಗಿದ್ದ ವೇಳೆ ಭಾರತವನ್ನು ಅಭಿವೃದ್ಧಿಪಡಿಸಲು ಬಯಸಿದ ವೇಳೆ ಪೂರ್ವ ಭಾರತವನ್ನು ಬೆಳವಣಿಗೆಯ ಎಂಜಿನ್ ಆಗಿ ಪರಿವರ್ತಿಸಿದ್ದೆನೆ ಎಂದು ನಾನು ಹೇಳಿದ್ದೆ” ಎಂದು ಅವರು ಪಾಟ್ನಾದಲ್ಲಿ ರೋಡ್ ಶೋ ನಡೆಸುವಾಗ ಹೇಳಿದರು.

ನಾವು ಮೂಲಸೌಕರ್ಯ, ಆರೋಗ್ಯ ಇತ್ಯಾದಿಗಳ ಮೇಲೆ ಗಮನ ಹರಿಸಿದ್ದೇವೆ. ಈ ಸಮೀಕ್ಷೆಯನ್ನು ಪರಿಗಣಿಸಿದರೆ, ಪೂರ್ವ ಭಾರತದ ಚುನಾವಣಾ ಫಲಿತಾಂಶಗಳು ಅದನ್ನು ಪ್ರತಿಬಿಂಬಿಸಲಿವೆ. ಜನರು ಆಶ್ಚರ್ಯಚಕಿತರಾಗಲಿದ್ದಾರೆ. ತೆಲಂಗಾಣ, ಒಡಿಶಾ, ಬಂಗಾಳ, ಬಿಹಾರ, ಜಾರ್ಖಂಡ್, ಅಸ್ಸಾಂನಲ್ಲಿ ಬಿಜೆಪಿ ಹೊಸ ಹುಟ್ಟುಪಡೆಯಲಿಎ ಎಂದು ಹೇಳಿದರು.

Continue Reading
Advertisement
Mamata Banerjee
ಪ್ರಮುಖ ಸುದ್ದಿ22 mins ago

ಚುನಾವಣೆ ಫಲಿತಾಂಶಕ್ಕೆ ಮೊದಲೇ ಇಂಡಿಯಾ ಒಕ್ಕೂಟಕ್ಕೆ ದೀದಿ ಶಾಕ್; ಬಾಹ್ಯ ಬೆಂಬಲವಷ್ಟೇ ಎಂದು ಘೋಷಣೆ!

Bengaluru News
ಕರ್ನಾಟಕ23 mins ago

Bengaluru News: ಹಸುಗೂಸನ್ನು ರಸ್ತೆ ಬದಿ ಎಸೆದು ಹೋದ ಅನಾಮಿಕರು!

CAA
ಸಂಪಾದಕೀಯ32 mins ago

ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Amit Shah
ದೇಶ52 mins ago

Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

PBKS vs RR
ಕ್ರೀಡೆ58 mins ago

PBKS vs RR: ಸ್ಯಾಮ್‌ ಕರನ್‌ ಏಕಾಂಗಿ ಬ್ಯಾಟಿಂಗ್​ ಹೋರಾಟಕ್ಕೆ ತಲೆ ಬಾಗಿದ ರಾಜಸ್ಥಾನ್​

Anjali Murder Case
ಕ್ರೈಂ1 hour ago

Anjali Murder Case: ಅಂಜಲಿ‌ ಕೊಲೆ‌ ಪ್ರಕರಣದಲ್ಲಿ ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

Isha Ambani
ದೇಶ1 hour ago

Isha Ambani: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಶ್ಲಾಘಿಸಿದ ಇಶಾ ಅಂಬಾನಿ

Retired Teacher G T Bhatt Bommanahalli 80th celebration programme on May 19
ಉತ್ತರ ಕನ್ನಡ2 hours ago

Uttara Kannada News: ಮೇ 19ರಂದು ನಿವೃತ್ತ ಶಿಕ್ಷಕ ಜಿ. ಟಿ. ಭಟ್ ಬೊಮ್ಮನಹಳ್ಳಿ 80ರ ಸಂಭ್ರಮ

Dalita Sangharsha samiti demands that Minister HK Patil should be dismissed from the Cabinet
ರಾಯಚೂರು2 hours ago

Raichur News: 371 ಜೆ ಮೀಸಲಾತಿ ಮುಂದುವರಿಸದಂತೆ ಸಿಎಂಗೆ ಪತ್ರ ಬರೆದ ಎಚ್.ಕೆ. ಪಾಟೀಲ್ ವಜಾಗೆ ದಸಂಸ ಆಗ್ರಹ

Sandeep Lamichhane
ಕ್ರೀಡೆ2 hours ago

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ17 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ19 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ1 day ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌