Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ! - Vistara News

Relationship

Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ!

ಆನಂದಮಯ ದಾಂಪತ್ಯ ಜೀವನಕ್ಕೆ ಪರಸ್ಪರ ಗೌರವ ಮೊದಲ ಸೂತ್ರ. ಇಂಥ ಐದು ಸೂತ್ರಗಳು ನಿಮ್ಮಲ್ಲಿದ್ದರೆ ಬದುಕು ಚಂದ.

VISTARANEWS.COM


on

happy couple
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಂಡ ಹೆಂಡಿರ ಸಂಬಂಧದಲ್ಲಿ ಸ್ವಲ್ಪ ತಾಳ ತಪ್ಪಿದರೂ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಪ್ರೀತಿ ಇದ್ದರೂ, ಹಲವು ಬಾರಿ ಈ ಸೂಕ್ಷ್ಮಗಳನ್ನರಿತು ನಿಭಾಯಿಸುವುದು ಸರಿಯಾಗಿ ತಿಳಿಯದೆ, ಮಾಡುವ ಸಣ್ಣ ತಪ್ಪುಗಳು ಇಬ್ಬರ ನಡುವೆ ಕಂದಕವನ್ನೇ ಸೃಷ್ಟಿಸಬಹುದು. ಹಾಗಾದರೆ, ಈ ಸೂಕ್ಷ್ಮವನ್ನು ಚಂದಕ್ಕೆ ನಿಭಾಯಿಸುವುದಾದರೂ ಹೇಗೆ? ಮೆಚ್ಯೂರ್‌ ಆಗಿ ಸಂಬಂಧವೊಂದನ್ನು, ಅದರ ಮಧುರತೆಯನ್ನು ಸದಾಕಾಲ ಕಾಪಿಡುವುದು ಹೇಗೆ ಎಂಬುದು ನಿಜವಾಗಿಯೂ ಸರಳವಾಗಿ ವಿವರಿಸುವುದು ಕಷ್ಟ. ಹೇಳುವುದು ಸುಲಭವೆಂದು ಅನಿಸಿದರೂ ಪಾಲಿಸುವುದು ಕಷ್ಟ. ಆದರೂ, ಈ ಐದು ಗುಣಗಳು ಗಂಡ ಹೆಂಡಿರ ನಡುವಿದ್ದರೆ (Relationship Tips) ಖಂಡಿತವಾಗಿಯೂ ಸಂಬಂಧ ಮಧುರತೆಯನ್ನು ಕಳೆದುಕೊಳ್ಳಲಾರದು.

1. ಹೀಗೇ ಇರಬೇಕು ಎಂಬ ಹಠ ಬೇಡ: ಸ್ತ್ರೀ ಹಾಗೂ ಪುರುಷರಲ್ಲಿ ಇಬ್ಬರಲ್ಲೂ ಮಾನವ ಸಹಜ ಗುಣಗಳಿರುತ್ತದೆ. ಗಂಡಸು ಎಂದರೆ ಹೀಗೆ, ಮಹಿಳೆ ಎಂದರೆ ಹೀಗೆ ಎಂದು ಖಂಡತುಂಡವಾಗಿ ಹೇಳಲಾಗದು. ಮಹಿಳೆಯ ಗುಣಗಳು ಪುರುಷರಲ್ಲೂ, ಪುರುಷರ ಸಾಮಾನ್ಯ ಗುಣಗಳು ಮಹಿಳೆಯಲ್ಲೂ ಇರುವುದು ಸಹಜ. ಕೆಲವು ಮಹಿಳೆಯರಲ್ಲಿ ಪುರುಷರ ಗುಣಗಳು ಮೇಳೈಸಬಹುದು, ಕೆಲವು ಗಂಡಸರು, ಸ್ತ್ರೀ ಸಹಜ ಗುಣಗಳನ್ನು ತಮ್ಮಲ್ಲಿ ಹೆಚ್ಚು ಹೊಂದಿರಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಹಾಗಾಗಿ, ಹೆಂಡತಿ ಎಂದರೆ ಹೀಗೆಯೇ ಇರಬೇಕು, ಗಂಡನೆಂದರೆ ಹೀಗೆಯೇ ಎಂಬ ಮನಸ್ಥಿತಿಯನ್ನು ಮೊದಲು ಬಿಡಿ. ಇಬ್ಬರೂ ಸಮಾನವಾಗಿ ಒಬ್ಬರಿಗೊಬ್ಬರು ಹೆಗಲಾಗಿ.

2. ಭಾವನೆಗಳ ಸಾಮರಸ್ಯ: ಇಬ್ಬರ ನಡುವಿನ ಲೈಂಗಿಕ ಜೀವನ ಹೇಗಿದೆ ಅನ್ನುವುದರ ಮೇಲೆ ಸಂಬಂಧ ನಿಂತಿಲ್ಲ ಎನ್ನುವುದು ನೆನಪಿಡಿ. ಲೈಂಗಿಕ ಜೀವನವೂ ದಾಂಪತ್ಯದಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ನಿಜವೇ ಆದರೂ, ಇಬ್ಬರ ನಡುವಿನ ಭಾವನಾತ್ಮಕ ಸಾಮರಸ್ಯ ಹೆಚ್ಚು ಕೆಲಸ ಮಾಡುತ್ತದೆ.

3. ಒಟ್ಟಾಗಿ ಬೆಳೆಯುವುದು: ಒಬ್ಬರಿಗೆ ಇನ್ನೊಬ್ಬರು ಬೆಟರ್‌ಹಾಫ್‌ಎಂಬುದು ನಿಜವೇ. ಆದರೆ, ಇಲ್ಲಿ ಗಣಿತದ ಲೆಕ್ಕಾಚಾರ ಖಂಡಿತ ವರ್ಕ್‌ಔಟ್‌ ಆಗದು. ಆತನ ಅರ್ಧ, ಆಕೆಯ ಅರ್ಧಗಳು ಸೇರಿ ಒಂದು ವೃತ್ತವಾಗದು. ಎರಡು ವೃತ್ತಗಳು ಸೇರಿ ಇಲ್ಲಿ ಮತ್ತೊಂದು ವೃತ್ತವಾಗುತ್ತದೆ. ಅಂದರೆ, ಇಬ್ಬರು ಕಂಪ್ಲೀಟ್‌ ವ್ಯಕ್ತಿಗಳಷ್ಟೆ ಒಬ್ಬರಿಗೊಬ್ಬರು ಕಂಪ್ಲೀಟ್‌ ಫೀಲ್‌ ಕೊಡಬಲ್ಲರು. ಇದಕ್ಕಾಗಿ, ವ್ಯಕ್ತಿತ್ವದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ಸಂದರ್ಭ ಬಂದರೆ ಮನಸಾರೆ ಅದಕ್ಕಾಗಿ ಪ್ರಯತ್ನಿಸಬೇಕು. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಇಬ್ಬರೂ ಒಬ್ಬರಿಗೊಬ್ಬರು ಪ್ರಭಾವಿಸಬೇಕು. ಇಬ್ಬರೂ ಒಟ್ಟಾಗಿ ಬೆಳೆಯುವುದು ನಿಂತಾಗ ಸಂಬಂಧದ ಮಧುರತೆಯೂ ನಿಧಾನವಾಗಿ ಕಡಿಮೆಯಾಗುತ್ತದೆ. ಕಹಿಸತ್ಯವನ್ನು ಸಕ್ಕರೆಯಲ್ಲಿ ಅದ್ದಿ ತೆಗೆದರೂ ಒಳಗೆ ಕಹಿಯೇ ಎಂಬುದು ನೆನಪಿರಲಿ.

ಇದನ್ನೂ ಓದಿ: Relationship Tips: ಸಂಗಾತಿಯ ಜೊತೆಗೆ ಈ ಎಂಟು ತಪ್ಪುಗಳನ್ನು ಮಾಡಬೇಡಿ!

4. ಪರಸ್ಪರ ಗೌರವ: ಗೌರವ ಯಾವುದೇ ಸಂಬಂಧದಲ್ಲಿ ಬಹಳ ಮುಖ್ಯ. ಪ್ರತಿಯೊಬ್ಬನೂ/ಳೂ ಸಹಜವಾಗಿ ಗೌರವಕ್ಕೆ ಅರ್ಹರು. ಇಬ್ಬರಿಗೂ ಇಬ್ಬರ ಪಾತ್ರಕ್ಕೂ ನಡುವೆ ಗೌರವವಿರಲಿ. ಸಂಬಂಧವೊಂದು ಎಷ್ಟೇ ಹತ್ತಿರವಿದ್ದರೂ ಇಬ್ಬರ ನಡುವೆ ಒಂದು ತೆಳುವಾದ ಗೆರೆ ಇದೆ ಎಂಬುದು ನೆನಪಿರಲಿ. ಪ್ರತಿಯೊಂದರಲ್ಲೂ ವಿನಾಕಾರಣ ಗಂಡನಾದ ಕಾರಣಕ್ಕೋ, ಹೆಂಡತಿಯ ಹಕ್ಕೆಂದೋ ಮೂಗು ತೂರಿಸುವುದು ಸಂಬಂಧವನ್ನು ಹಾಳು ಮಾಡಬಹುದು. ಒಂದು ಆರೋಗ್ಯಕರ ಅಂತರ ಇಬ್ಬರ ನಡುವೆಯೂ ಇರಲಿ. ಆ ಅಂತರ ಬಹಳ ಅಗತ್ಯವಾದುದು ಎಂಬುದೂ ಗೊತ್ತಿರಲಿ. ಅದರ ಬಗ್ಗೆ ಮನಃಪೂರ್ವಕವಾಗಿ ಗೌರವವೂ ಇರಲಿ.

5. ಆನಂದಕ್ಕಾಗಿ ಹೊಂದಾಣಿಕೆ: ಹ್ಯಾಪಿ ಜೋಡಿ ಆಗುವುದು ಸುಲಭವಲ್ಲ. ಇಬ್ಬರೂ ತಮ್ಮ ವ್ಯಕ್ತಿತ್ವದಲ್ಲಿ, ಸಂಬಂಧದಲ್ಲಿ ಸಾಕಷ್ಟು ವರ್ಕ್‌ಔಟ್‌ ಮಾಡಬೇಕು. ಹೊಂದಾಣಿಕೆ ಸಹಜವಾಗಿ ಆದಾಗ ಸಂಸಾರದಲ್ಲಿ ನೆಮ್ಮದಿ ನೆಲೆಸುತ್ತದೆ. ಇಬ್ಬರ ವ್ಯಕ್ತಿತ್ವದಲ್ಲೂ ಸಂಪೂರ್ಣತೆ ಇದ್ದಲ್ಲಿ ನೀವು ಪವರ್‌ಜೋಡಿಯಾಗಿಯೇ ಲೋಕದೆದುರು ಕಾಣುತ್ತೀರಿ ಖಂಡಿತ.

ಇದನ್ನೂ ಓದಿ: Parenting Tips: ಮಕ್ಕಳನ್ನು ಸಮಾಧಾನಗೊಳಿಸುವ ವೇದ ವಾಕ್ಯಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Relationship

Parenting Tips: ಮಕ್ಕಳನ್ನು ಬೆಳಗ್ಗೆ ಬೇಗ ಏಳಿಸಿ ಶಾಲೆಗೆ ಹೊರಡಿಸುವುದೇ ಹೋರಾಟವೇ? ಇಲ್ಲಿವೆ ಟಿಪ್ಸ್!

ಹೆತ್ತ ಜೀವಗಳ ಬೆಳಗಿನ ಹೋರಾಟದ ದೃಶ್ಯ ಯಾವ ಯುದ್ಧಭೂಮಿಗೂ ಕಡಿಮೆ ಇರುವುದಿಲ್ಲ. ಮಕ್ಕಳನ್ನು ಬೆಳಗ್ಗೆ ಏಳಿಸುವ ಕಲೆ ನಿಮಗೆ ಕರತಲಾಮಲಕವಾಗಲು ಇಲ್ಲಿವೆ ಕೆಲವು (parenting tips) ಕಿವಿಮಾತುಗಳು.

VISTARANEWS.COM


on

kids morning
Koo

ಮಕ್ಕಳನ್ನು ಬೆಳೆಸುವುದು (good parenting) ಎಂದರೆ ಅದು ಸುಲಭದ ಕೆಲಸವಲ್ಲ. ಬಹಳ ಜವಾಬ್ದಾರಿಗಳನ್ನು ಬೇಡುವ ಕೆಲಸ. ಸಣ್ಣ ಮಗುವಿನ ತಾಯಿಗೆ, ನಿದ್ರೆಗೆಟ್ಟೂ ಕೆಟ್ಟೂ, ಎಷ್ಟೋ ಸಾರಿ ಮಕ್ಕಳು ಬೇಗನೆ ಶಾಲೆಗೆ ಹೋಗುವಷ್ಟು ದೊಡ್ಡದಾಗಿ ಬಿಟ್ಟರೆ ಸಾಕಪ್ಪಾ ಅನಿಸುತ್ತದೆ. ಆದರೆ ಶಾಲೆಗೆ ಹೋಗುವಷ್ಟು ಮಗು ದೊಡ್ಡದಾದ ಮೇಲೆಯೇ ಅದರ ಕಷ್ಟ ಅರಿವಾಗುವುದು. ಹೀಗೆ ಮಗುವೊಂದನ್ನು ಸಂಪೂರ್ಣ ದೊಡ್ಡವರನ್ನಾಗಿ ಮಾಡುವವರೆಗೆ ಹೆತ್ತವರು ಹಲವು ಹಾದಿಗಳನ್ನು ಸವೆಸಿರುತ್ತಾರೆ. ಪ್ರತಿಯೊಬ್ಬ ಹೆತ್ತವರಿಗೂ ಸವಾಲೆನಿಸುವುದು ಮಕ್ಕಳನ್ನು ಬೆಳಗ್ಗಿನ ಹೊತ್ತು ಶಾಲೆಗೆ ಹೊರಡಿಸುವ ಸಮಯ. ಬೆಳಗ್ಗೆ ಬೇಗ ಏಳಿಸಬೇಕು, ಸ್ನಾನ ಮಾಡಿಸಬೇಕು ಅಥವಾ ತಾನೇ ಸ್ನಾನ ಮಾಡುವಷ್ಟು ಮಗು ಬೆಳೆದಿದ್ದರೆ ಮಕ್ಕಳಿಗೆ ಬೇಗ ಬೇಗ ಸ್ನಾನ ಮುಗಿಸುವಂತೆ ಒತ್ತಡ ಹೇರಬೇಕು. ತಿಂಡಿ ರೆಡಿ ಮಾಡಬೇಕು, ಊಟದ ಡಬ್ಬಿಗೆ ನಿತ್ಯವೂ ಆಕರ್ಷಕ ತಿನಿಸುಗಳನ್ನು ರೆಡಿ ಮಾಡಬೇಕು, ಈ ನಡುವೆ ತಮಗೂ ತಿಂಡಿ ಮಾಡಬೇಕು, ಆಫೀಸಿಗೆ ಬುತ್ತಿ ಕಟ್ಟಿಕೊಳ್ಳಬೇಕು, ಅಬ್ಬಬ್ಬಾ, ಹೆತ್ತ ಜೀವಗಳ ಬೆಳಗಿನ ಹೋರಾಟದ ದೃಶ್ಯ ಯಾವ ಯುದ್ಧಭೂಮಿಗೂ ಕಡಿಮೆ ಇರುವುದಿಲ್ಲ. ಇಂಥ ಸಂದರ್ಭ ಈ ಎಲ್ಲ ತಯಾರಿಗಳ ನಡುವೆ ಮಕ್ಕಳನ್ನು ಹಾಸಿಗೆಯಿಂದ ಏಳಿಸುವುದೇ ದೊಡ್ಡ ಸವಾಲು. ಈ ಸವಾಲನ್ನು ಗೆದ್ದರೆ, ಯುದ್ಧದಲ್ಲಿ ಅರ್ಧ ಗೆದ್ದಂತೆ. ಹಾಗಾದರೆ ಬನ್ನಿ, ಮಕ್ಕಳನ್ನು ಬೆಳಗ್ಗೆ ಏಳಿಸುವ ಕಲೆ ನಿಮಗೆ ಕರತಲಾಮಲಕವಾಗಲು ಇಲ್ಲಿವೆ ಕೆಲವು (parenting tips) ಕಿವಿಮಾತುಗಳು.

1. ಮಕ್ಕಳಿಗೊಂದು ವೇಳಾಪಟ್ಟಿ ಇರಲಿ. ಮಕ್ಕಳು ಇಂಥ ಹೊತ್ತಿಗೆ ಏಳುವುದರಿಂದ ಹಿಡಿದು, ಹಲ್ಲುಜ್ಜುವುದು, ಸ್ನಾನ ಮಾಡುವುದು ಇತ್ಯಾದಿ ಪ್ರತಿಯೊಂದಕ್ಕೂ ನಿಗದಿತ ಸಮಯಾವಕಾಶವಿರಲಿ. ಆಗ ಮಕ್ಕಳು ತಮ್ಮ ಕೆಲಸಗಳನ್ನು ಒಂದೊಂದಾಗಿ ತಾವೇ ಮಾಡಿದ ಖುಷಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಇದನ್ನು ಮುಂದುವರಿಸಲು ಅವರಿಗೆ ಪ್ರೇರಣೆ ದೊರೆಯುತ್ತದೆ. ಒಂದನೇ ದಿನ ಮಕ್ಕಳು ಮಾಡಲಿಕ್ಕಿಲ್ಲ, ಎರಡನೇ ದಿನವೂ. ಆದರೆ, ನೀವು ಈ ಯೋಜನೆಯಿಂದ ಹಿಂಜರಿಯಬೇಡಿ. ಆಗ ಮಕ್ಕಳು ನಿಧಾನವಾಗಿ ತಮ್ಮ ಕೆಲಸವನ್ನು, ಪುಟ್ಟಪುಟ್ಟ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ಕಲಿಯುತ್ತಾರೆ.

2. ಸೂರ್ಯನ ಬೆಳಕು ಕೋಣೆಗೆ ಬರುವಂತಿರಲಿ. ಮುಖದ ಮೇಲೆ ಮುಂಜಾವಿನ ಬೆಳಕು ಬೀಳುವಾಗ ಅನುಭವವಾಗುವ ಆನಂದ ಮಕ್ಕಳು ಅನುಭವಿಸಲಿ.

3. ಬೆಳಗ್ಗೆ ಎದ್ದ ಕೂಡಲೇ ಮಕ್ಕಳ ಮನಸ್ಸನ್ನು ಖಷಿಯಾಗಿಸುವ ಒಂದು ಪುಟ್ಟ ಕೆಲಸಕ್ಕೆ ಜಾಗವಿರಲಿ. ಏನಾದರೊಂದು ಪುಟ ಓದುವುದಿರಬಹುದು, ಅಥವಾ ಒಂದು ಫ್ಯಾಮಿಲಿ ಹಗ್‌ ಕ್ಷಣವಿರಬಹುದು, ಅಥವಾ ಮಕ್ಕಳ ಇಷ್ಟದ ಹಾಡು ಪ್ಲೇ ಮಾಡುವುದಿರಬಹುದು ಹೀಗೆ ಏನಾದರೊಂದು ಪುಟ್ಟ ಖಷಿ ಪ್ರತಿ ದಿನ ಅವರಿಗಾಗಿ ಕಾದಿರಲಿ. ಎದ್ದ ಕೂಡಲೇ ಗಡಿಬಿಡಿ ಮಾಡುವುದು, ಲೇಟಾಗುತ್ತಿದೆ ಎಂದು ಕಿರುಚಾಡುವುದು ಇತ್ಯಾದಿಗಳನ್ನು ಬಿಟ್ಟು ಒಂದೈದು ನಿಮಿಷ ಶಾಂತವಾಗಿ ಪ್ರೀತಿಯಿಂದ ಮಾತನಾಡಿಸುವುದನ್ನು ಅಭ್ಯಾಸ ಮಾಡಿ. ಆಗ ಮಕ್ಕಳು ಬೆಳಗ್ಗೆದ್ದ ಕೂಡಲೇ, ಕಿರಿಕಿರಿ ಮಾಡುವುದಿಲ್ಲ.

4. ಮಕ್ಕಳಿಗೆ ಏಳಲು ಒಂದು ಅಲರಾಂ ಇಡುವುದನ್ನು ಅಭ್ಯಾಸ ಮಾಡಿ. ಆ ಅಲರಾಂ ಶಬ್ದ ತಮಾಷೆಯದ್ದೋ, ಅಥವಾ ಅವರಿಷ್ಟದ ಹಾಡೋ, ಮ್ಯೂಸಿಕ್ಕೋ ಇರಲಿ.

5. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಕೆಟ್ಟ ಅಭ್ಯಾಸಗಳಿಂದ ಮಕ್ಕಳ ನಿದ್ದೆಯನ್ನು ಹಾಳು ಮಾಡಬೇಡಿ. ನೀವು ಶಿಸ್ತುಬದ್ಧ ಜೀವನ ನಡೆಸುತ್ತಿದ್ದರೆ, ಮಕ್ಕಳ ಇಂತಹ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಮಕ್ಕಳನ್ನು ಬೇಗನೆ ಒಂದು ನಿಗದಿತ ಸಮಯಕ್ಕೆ ಮಲಗಿಸುವುದನ್ನು ಅಭ್ಯಾಸ ಮಾಡಿಸಿ. ಏನೇ ಕಾರಣಗಳಿದ್ದರೂ ಇದನ್ನು ಏರುಪೇರು ಮಾಡಬೇಡಿ.

Kids outfits faded in Monsoon

6. ಮಕ್ಕಳು ಅವರಷ್ಟಕ್ಕೆ ಬೇಗನೆ ಎದ್ದು ಹಲ್ಲುಜ್ಜಿ ಮುಖ ತೊಳೆದು ಶಾಲೆಗೆ ರೆಡಿಯಾಗುವ ಕೆಲಸವನ್ನು ಯಾವ ಕಿರಿಕಿರಿಯೂ ಇಲ್ಲದೆ ಮಾಡಿದರೆ ಅವರಿಗೆ ರಿವಾರ್ಡ್‌ಗಳನ್ನು ಕೊಡಿ. ಸ್ಟಿಕ್ಕರ್‌, ಸ್ಮೈಲಿ, ಅವರಿಷ್ಟದ ಬ್ರೇಕ್‌ಫಾಸ್ಟ್‌ ಹೀಗೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

7. ರಜೆಯ ದಿನಗಳಲ್ಲಿ ಮಕ್ಕಳನ್ನು ಬೆಳಗ್ಗೆ ಎದ್ದ ಮೇಲೆ ಪಾರ್ಕಿಗೆ ಕರೆದೊಯ್ಯುವುದು, ವಾಕಿಂಗ್‌ ಇತ್ಯಾದಿ ಕೆಲಸಗಳನ್ನು ಜೊತೆಯಾಗಿ ಮಾಡಬಹುದು. ಆಗ ಮಕ್ಕಳೊಡನೆ ಸಾಕಷ್ಟು ಸಮಯವೂ ದೊರೆಯುತ್ತದೆ. ಆಗ ರಜೆಯಲ್ಲೂ ಮಕ್ಕಳು ಇದೇ ಸಮಯಪಾಲನೆ ಮಾಡುತ್ತಾರೆ.

8. ಮಕ್ಕಳಿಗೆ ಬೆಳಗಿನ ಹೊತ್ತು ಅವರೇ ಮಾಡುವಂಥ, ಮಾಡಬಲ್ಲ ಏನಾದರೊಂದು ಸಣ್ಣ ಜವಾಬ್ದಾರಿ ಕೊಡಿ.

9. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಏನೇ ಮಾಡಿದರೂ, ಏನೇ ಹೇಳಿದಿರೂ, ಅವರು ಕಲಿಯುವುದು ನೋಡಿದ್ದನ್ನು! ಹೀಗಾಗಿ ಮಕ್ಕಳಿಗೆ ನೀವೇ ರೋಲ್‌ ಮಾಡೆಲ್‌ ಆಗಿ. ಮಕ್ಕಳು ನಿಮ್ಮನ್ನು ನೋಡಿ ಕಲಿಯಲಿ. ಅವರು ನಿಮ್ಮನ್ನು ನೋಡಿ ಕಲಿಯುವಂಥದ್ದು ನಿಮ್ಮಲ್ಲೂ ಇರಲಿ. ಅವರಿಗೆ ನೀವೇ ಮೊದಲ ಪ್ರೇರಣೆ ಎಂಬುದು ಪ್ರತಿಯೊಂದು ಕೆಲಸದ ಸಂದರ್ಭವೂ ನಿಮಗೆ ನೆನಪಿರಲಿ.

ಇದನ್ನೂ ಓದಿ: Parenting Tips: ಹತ್ತು ವಯಸ್ಸಿನೊಳಗೆ ನಿಮ್ಮ ಮಕ್ಕಳಿಗೆ ಈ ಎಲ್ಲ ಜೀವನ ಕೌಶಲ್ಯಗಳು ತಿಳಿದಿರಲಿ!

Continue Reading

Relationship

Parenting Tips: ಹತ್ತು ವಯಸ್ಸಿನೊಳಗೆ ನಿಮ್ಮ ಮಕ್ಕಳಿಗೆ ಈ ಎಲ್ಲ ಜೀವನ ಕೌಶಲ್ಯಗಳು ತಿಳಿದಿರಲಿ!

ಮಕ್ಕಳು ಈ ವಯಸ್ಸಿನೊಳಗೆ ತಿಳಿಯಲೇಬೇಕಾದ ಕೌಶಲ್ಯಗಳಾವುವು, ಅವುಗಳನ್ನು ಹೆತ್ತವರು ಸೂಕ್ತ ಪೋಷಣೆಯಿಂದ ಹೇಗೆ ತಿಳಿಸಿಕೊಡಬಹುದು (parenting tips, parenting guide) ಎಂಬುದನ್ನು ನೋಡೋಣ.

VISTARANEWS.COM


on

parenting skills
Koo

ಇಂದು ಸಣ್ಣ ಕುಟುಂಬ ಪದ್ಧತಿಯಿಂದಾಗಿ (nuclear family) ಮಕ್ಕಳ ಮೇಲೆ ಹೆತ್ತವರಿಗೆ ಮುದ್ದು ಜಾಸ್ತಿ. ಹೀಗಾಗಿ ಮಕ್ಕಳು ತಮ್ಮ ವಯಸ್ಸಿಗೆ ಸರಿಯಾಗಿ ಕಲಿತುಕೊಳ್ಳಬೇಕಾದ ಎಷ್ಟೋ ವಿಚಾರಗಳಿಂದ, ಜೀವನ ಕೌಶಲ್ಯಗಳಿಂದ (Life skills) ವಂಚಿತರಾಗುತ್ತಾರೆ. ಹೆತ್ತವರಿಗೂ ಈ ಸಮಸ್ಯೆ ಅರ್ಥವಾಗುವುದಿಲ್ಲ. ಜೀವನದಲ್ಲಿ ಏರಬೇಕಾದ ಒಂದೊಂದೇ ಮೆಟ್ಟಿಲನ್ನು ಏರಲು ಕೆಲವು ಸಾಮಾನ್ಯ ಕೌಶಲ್ಯಗಳನ್ನು ಮಕ್ಕಳು 10 ವಯಸ್ಸಿನೊಳಗೇ ಕಲಿಯಬೇಕು. ಬನ್ನಿ, ಮಕ್ಕಳು ಈ ವಯಸ್ಸಿನೊಳಗೆ ತಿಳಿಯಲೇಬೇಕಾದ ಕೌಶಲ್ಯಗಳಾವುವು, ಅವುಗಳನ್ನು ಹೆತ್ತವರು ಸೂಕ್ತ ಪೋಷಣೆಯಿಂದ ಹೇಗೆ ತಿಳಿಸಿಕೊಡಬಹುದು (parenting tips, parenting guide) ಎಂಬುದನ್ನು ನೋಡೋಣ.

1. ಮಕ್ಕಳಿಗೆ ಸರಿಯಾಗಿ ಸಂವಹನ (clear communication) ಮಾಡುವ ಕಲೆ ಸಾಮಾನ್ಯವಾಗಿ ಈ ವಯಸ್ಸಿನೊಳಗೆ ಬರಬೇಕು. ಅಂದರೆ, ಯಾರ ಜೊತೆ ಹೇಗೆ ಮಾತನಾಡಬೇಕು ಎಂಬಿತ್ಯಾದಿ ವಿಚಾರಗಳ ಜೊತೆಗೆ ಭಾವನೆಗಳನ್ನು ಸ್ಪಷ್ಠವಾಗಿ, ಸರಳವಾಗಿ ಮತ್ತೊಬ್ಬರಿಗೆ ದಾಟಿಸುವುದು ಹೇಗೆ ಎಂಬುದು ಹತ್ತು ವಯಸ್ಸಿನೊಳಗೆ ಸಾಮಾನ್ಯವಾಗಿ ಮಕ್ಕಳಿಗೆ ಅರ್ಥವಾಗಬೇಕು. ಹೆತ್ತವರು ಇದನ್ನು ಮಕ್ಕಳಿಗೆ ತಿಳಿಸಿಕೊಡಬೇಕು.

2. ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ (problem solving) ಕಲೆ, ಅವರ ಸಮಸ್ಯೆಗಳನ್ನು ಆದಷ್ಟೂ ಅವರೇ ಪರಿಹಾರ ಮಾಡಿಕೊಳ್ಳುವ ಚಾಕಚಕ್ಯತೆ ಇತ್ಯಾದಿಗಳು ಮಕ್ಕಳಿಗೆ ಈ ವಯಸ್ಸಿನೊಳಗೆ ಬಂದುಬಿಡುತ್ತದೆ. ಅವುಗಳು ಸಾಧ್ಯವಾಗುತ್ತಿಲ್ಲ ಎಂದಾದರೆ ಅವರನ್ನು ಸರಿಯಾದ ರೀತಿಯಲ್ಲಿ ಗೈಡ್‌ ಮಾಡುವುದು ಹೆತ್ತವರ ಕರ್ತವ್ಯ.

3. ಮಕ್ಕಳು ಸೋಲನ್ನು ಸಹಜವಾಗಿ ತೆಗೆದುಕೊಳ್ಳುವುದನ್ನು, ಹಾಗೂ ಸೋಲು ಬದುಕಿನಲ್ಲಿ ಸಾಮಾನ್ಯ ಎಂಬುದನ್ನು ಈ ವಯಸ್ಸಿನೊಳಗೆ ಅರ್ಥ ಮಾಡಿಕೊಳ್ಳಬೇಕು. ಅಂದರೆ, ಎಲ್ಲದರಲ್ಲೂ ತಾನೇ ಗೆಲ್ಲಬೇಕು ಎಂಬಿತ್ಯಾದಿ ಭಾವನೆಗಳಿದ್ದರೆ, ನಿಧಾನವಾಗಿ ಅದರಿಂದ ಹೊರಗೆ ಬಂದು ಸೋಲಿನ ಸಂದರ್ಭ ಅದನ್ನು ನಿಭಾಯಿಸುವುದು ಹೇಗೆ ಹಾಗೂ ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಹೇಗೆ ಸ್ವೀಕರಿಸುವುದು ಎಂಬಿತ್ಯಾದಿ ಜೀವನ ಪಾಠಗಳನ್ನು ಕಲಿಯುವ ಕಾಲ.

4. ಮಕ್ಕಳಿಗೆ ಸಣ್ಣ ಸಣ್ಣ ತಮ್ಮ ಜವಾಬ್ದಾರಿಗಳನ್ನು ಹೊರುವ ಕಾಲಘಟ್ಟವಿದು. ಮಕ್ಕಳು ತಮ್ಮ ಶಾಲೆ ವಸ್ತುಗಳನ್ನು, ಆಟಿಕೆಗಳನ್ನು ಸರಿಯಾದ ಜಾಗದಲ್ಲಿಡುವುದು, ತನ್ನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಟೀಚರು ಕೊಟ್ಟ ಕೆಲಸಗಳನ್ನು ತಾನೇ ತಾನಾಗಿ ಪೂರ್ತಿ ಮಾಡುವ, ಹಾಗೂ ತಾನು ಮಾಡಬೇಕಾದ ಕೆಲಸ ಹಾಗೂ ಜವಾಬುದಾರಿಗಳ್ನು ಪಟ್ಟಾಗಿ ಕೂತು ಸಮಯದೊಳಗೆ ಮಾಡಿ ಮುಗಿಸುವುದು ಇತ್ಯಾದಿಗಳನ್ನು ಕಲಿಯುವ ವಯಸ್ಸಿದು. ಹತ್ತರೊಳಗೆ ಮಕ್ಕಳು ಇಷ್ಟಾದರೂ ಕಲಿಯಬೇಕು.

5. ಸಮಯ ಪಾಲನೆ (time management) ಕೂಡಾ ಮಕ್ಕಳು ಕಲಿಯಬೇಕು. ಸಮಯಕ್ಕೆ ಸರಿಯಾಗಿ ಎದ್ದು, ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದು, ನಿಗದಿತ ಸಮಯದೊಳಗೆ ಕೆಲಸಗಳನ್ನು ಮುಗಿಸುವುದು, ಒಂದು ನಿರ್ದಿಷ್ಟ ಸಮಯದಲ್ಲಿ ಆಟವಾಡಲು ಹೋಗಿ ಬರುವುದು ಇತ್ಯಾದಿ ಮಕ್ಕಳು ಸಮಯ ಪಾಲನೆಯನ್ನು ಎಳವೆಯಲ್ಲಿಯೇ ರೂಢಿಸಿಕೊಳ್ಳಬಹುದು.

6. ತಮ್ಮ ಅಣ್ಣ ತಮ್ಮ ಅಕ್ಕ ತಂಗಿ ಜೊತೆ, ಬಂಧು ಬಳಗದ ಜೊತೆ ಪ್ರೀತಿಯಿಂದ ಇರುವುದು, ಕಾಳಜಿ ಮಾಡುವುದು (care taking) ಕೂಡಾ ಮಕ್ಕಳು ಈ ವಯಸ್ಸಿನಲ್ಲಿ ಕಲಿಯಬೇಕು.

7. ಅಡುಗೆ ಎಂಬುದು ಜೀವನಕ್ಕೆ ಅತ್ಯಂತ ಅಗತ್ಯವಾದ ಸ್ಕಿಲ್ (cooking skill).‌ ಮನೆಯಲ್ಲಿ ಅಮ್ಮನೋ, ಅಪ್ಪನೋ, ಅಡುಗೆಯವಳೋ ಮಾಡಿ ಕೊಡುವ ಊಟವನ್ನೇ ಜೀವನಪರ್ಯಂತ ತಿನ್ನುತ್ತಿದ್ದರೆ, ಅಡುಗೆ ಮಾಡಿ ಕೊಡುವವರಲ್ಲಿರುವ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಬಹಳ ಸರಳವಾದ ಅಡುಗೆಗಳಾದ ಸ್ಯಾಂಡ್‌ವಿಚ್‌, ಮೊಟ್ಟೆ ಬೇಯಿಸುವುದು, ಜ್ಯೂಸ್‌, ಚೋಕೋಲೇಟ್‌ ಶೇಕ್‌ ಮಾಡಿಕೊಳ್ಳುವುದು ಇತ್ಯಾದಿ ಸರಳ ಪಟಾಪಟ್‌ ಅಡುಗೆಗಳನ್ನಾದರೂ ಮಕ್ಕಳು ಈ ವಯಸ್ಸಿನಲ್ಲಿ ಸ್ವಲ್ಪ ಕಲಿಯಬಹುದು.

8. ಮಕ್ಕಳಿಗೆ ಹಣದ ಮಹತ್ವವನ್ನು ತಿಳಿಸಿಕೊಡುವುದು (money management) ಬಹಳ ಅಗತ್ಯ. ಈ ವಯಸ್ಸಿನಲ್ಲಿ ಮಕ್ಕಳಿಗೆ ಹಣದ ಮೌಲ್ಯದ ಬಗೆಗೆ ತಿಳುವಳಿಕೆ ಮೂಡಬೇಕು. ತಮ್ಮದೇ ಪಿಗ್ಗಿ ಬ್ಯಾಕಿನಲ್ಲಿ ಹಣ ಶೇಖರಣೆ ಮಾಡುವುದು, ಹಣ ಉಳಿಕೆ ಮಾಡುವುದು ಇತ್ಯಾದಿ ಮಕ್ಕಳು ಈ ವಯಸ್ಸಿನಲ್ಲಿ ಕಲಿಯಬಹುದು.

9. ಆರೋಗ್ಯದ ಕಾಳಜಿಯನ್ನೂ ಮಕ್ಕಳು ತಮ್ಮ ಹತ್ತು ವಯಸ್ಸಿನೊಳಗೆ ಕಲಿತುಕೊಳ್ಳಬೇಕು. ಗಾಯವಾದರೆ ಏನು ಮಾಡಬೇಕು, ಫಸ್ಟ್‌ ಏಯ್ಡ್‌ ಬಳಸುವುದು ಹೇಗೆ, ತುರ್ತು ಘಟಕವನ್ನು ಸಂಪರ್ಕಿಸುವುದು ಹೇಗೆ ಇತ್ಯಾದಿ ಸಾಮಾನ್ಯ ಜ್ಞಾನ ಮಕ್ಕಳಿಗೆ ಈ ವಯಸ್ಸಿನೊಳಗೆ ಹೇಳಿ ಕೊಡಬೇಕು.

ಇದನ್ನೂ ಓದಿ: Parenting Guide: ಮಕ್ಕಳ ಮೇಲೆ ಎಲ್ಲದಕ್ಕೂ ಹರಿಹಾಯುವ ಮುನ್ನ ಈ ಸೂತ್ರಗಳತ್ತ ಒಮ್ಮೆ ಕಣ್ಣಾಡಿಸಿ!

Continue Reading

Relationship

Parenting Guide: ಮಕ್ಕಳ ಮೇಲೆ ಎಲ್ಲದಕ್ಕೂ ಹರಿಹಾಯುವ ಮುನ್ನ ಈ ಸೂತ್ರಗಳತ್ತ ಒಮ್ಮೆ ಕಣ್ಣಾಡಿಸಿ!

ಮಕ್ಕಳ ಮೇಲೆ (relationship tips) ಮಾತು ಮಾತಿಗೂ ಅವರು ತಪ್ಪಿದಲ್ಲಿ ಹರಿಹಾಯುವುದರಿಂದ ಆಗುವ ತೊಂದರೆಗಳೇನು ಹಾಗೂ ಇಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಹೇಗೆ ನಿಭಾಯಿಸಬಹುದು (parenting guide) ಎಂಬುದನ್ನು ನೋಡೋಣ ಬನ್ನಿ.

VISTARANEWS.COM


on

positive parenting
Koo

ಪಾಸಿಟಿವ್‌ ಪೇರೆಂಟಿಂಗ್‌ (positive parenting) ಎಂದರೆ ಮಕ್ಕಳನ್ನು ಎಲ್ಲಿಯೂ ಬೈಯದೆ, ಸದಾ ಅವರನ್ನು ರಮಿಸುತ್ತಾ ದಯೆಯಿಂದ ನೋಡಿಕೊಳ್ಳುವುದು ಎಂಬರ್ಥವಂತೂ ಖಂಡಿತಾ ಅಲ್ಲ. ಪಾಸಿಟಿವ್‌ ಪೇರೆಂಟಿಂಗ್‌ನಲ್ಲಿ ಮಕ್ಕಳನ್ನು ಶಿಸ್ತಿನಿಂದ (parenting discipline) ನೋಡಿಕೊಳ್ಳುವುದಷ್ಟೇ ಅಲ್ಲ, ಮಕ್ಕಳು ತಮ್ಮ ಕಾಲ ಮೇಲೆ ತಾವು ಆತ್ಮವಿಶ್ವಾಸದಿಂದ ನಿಂತುಕೊಳ್ಳುವುದು, ಇತರರ ಜೊತೆಗೆ ಚಂದಕ್ಕೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದೂ (Parenting tips) ಕೂಡಾ ಇದೆ. ಆದರೆ, ಮಕ್ಕಳ ಮೇಲೆ (relationship tips) ಮಾತು ಮಾತಿಗೂ ಅವರು ತಪ್ಪಿದಲ್ಲಿ ಹರಿಹಾಯುವುದರಿಂದ ಆಗುವ ತೊಂದರೆಗಳೇನು ಹಾಗೂ ಇಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಹೇಗೆ ನಿಭಾಯಿಸಬಹುದು (parenting guide) ಎಂಬುದನ್ನು ನೋಡೋಣ ಬನ್ನಿ.

1. ಮಕ್ಕಳಿಗೆ ಮೊದಲು ನೀವು ಪಾಸಿಟಿವ್‌ ಉದಾಹರಣೆಗಳನ್ನು ಸೆಟ್‌ ಮಾಡಬೇಕು. ಮಕ್ಕಳು ತಮ್ಮ ಹೆತ್ತವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ನೋಡಿಕೊಂಡು ಬೆಳೆಯುತ್ತಾರೆ. ಹಾಗಾಗಿ ನೀವು ಹೇಗೆ ವರ್ತಿಸುತ್ತಿದ್ದೀರಿ ಎಂಬುದನ್ನು ನೀವೇ ಮೊದಲು ಗಮನಿಸಿ.

2. ಮಕ್ಕಳು ಯಾವಾಗಲೂ ತಾವು ಹೆತ್ತವರ ಮಡಿಲಲ್ಲಿ ಬೆಚ್ಚಗಿರುತ್ತೇವೆ ಎಂಬ ಸೇಫ್‌ ಭಾವವನ್ನು ಹೊಂದುವುದು ಹೆತ್ತವರು ಅವರನ್ನು ಆಗಾಗ ಅದನ್ನು ಅವರ ಮುಂದೆ ವ್ಯಕ್ತಪಡಿಸುವುದರ ಮೂಲಕ. ಅಂದರೆ, ಹೆತ್ತವರು ಆಗಾಗ ಮಕ್ಕಳನ್ನು ಅಪ್ಪಿಕೊಳ್ಳುವುದು, ಮುದ್ದು ಮಾಡುವುದರ ಮೂಲಕ ಮಕ್ಕಳಿಗೆ ಈ ಭಾವ ಮೊಳೆಯುತ್ತದೆ. ಹಾಗಾಗಿ ಹೆತ್ತವರ ದೈಹಿಕ ಸಾಂಗತ್ಯವೂ ಮಕ್ಕಳಿಗೆ ಅಗತ್ಯವೇ. ಇಲ್ಲದಿದ್ದರೆ ಮಕ್ಕಳು ಇದನ್ನು ಮನೆಯಿಂದ ಹೊರಗೆ ಪಡೆಯಲು ನೋಡುತ್ತಾರೆ.

3. ನಂಬಿಕೆ ಎಂಬುದು ಹೆತ್ತವರ ಮಕ್ಕಳ ನಡುವಿನ ಸಂದರ್ಭವೂ ಬಹಳ ಮುಖ್ಯ. ಮಕ್ಕಳ ಜೊತೆಗೆ ವಿಚಾರಗಳನ್ನು ಮುಚ್ಚಿಡುವುದು, ʻಏಯ್‌, ಬಾಯ್ಮಚ್ಚು. ಇದು ನಿನಗೆ ಸಂಬಂಧಿಸಿದ್ದಲ್ಲ, ದೊಡ್ಡವರ ವಿಷಯʼ ಇತ್ಯಾದಿ ಮಾತುಗಳು ಮಕ್ಕಳಲ್ಲಿ ಹೆತ್ತವರ ಬಳಿ ನಂಬಿಕೆಯನ್ನು ಬೆಳೆಸುವುದಿಲ್ಲ. ಹಾಗಾಗಿ ಮಕ್ಕಳ ಎದುರು, ಪ್ರಾಮಾಣಿಕವಾಗಿರಿ, ಪಾರದರ್ಶಕವಾಗಿರಿ. ನಂಬಿಕೆ ಬೆಳೆಸಿ.

4. ಹೆತ್ತವರ ಸತತ ಪ್ರೋತ್ಸಾಹದಿಂದ ಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾರೆ. ಮಕ್ಕಳು ಒಳ್ಳೆಯ ಕೆಲಸ ಮಾಡಿದಾಗ, ಆತ್ಮವಿಶ್ವಾಸ ಪ್ರದರ್ಶಿಸಿದಾಗ ಅವರ ಬೆನ್ನು ತಟ್ಟಿ. ಹಾಗಂತ ಅತಿಯಾದ ಹೊಗಳಿಕೆಯೂ ಒಳ್ಳೆಯದಲ್ಲ.

5. ಒತ್ತಡದಲ್ಲಿದ್ದಾಗ ಆದಷ್ಟೂ ನಿಮ್ಮನ್ನು ನೀವು ಕಂಟ್ರೋಲ್‌ ಮಾಡಿಕೊಳ್ಳುವುದನ್ನು ಕಲಿಯಿರಿ. ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ ಎಂಬುದನ್ನು ನೆನಪಿಡಿ.

6. ಮಕ್ಕಳ ಜೊತೆ ಸಂಬಂಧವನ್ನು (parent children relation) ಗಟ್ಟಿಗೊಳಿಸಿ. ಇದಾಗಬೇಕೆಂದರೆ ಪಾಸಿಟಿವ್‌ ಪೇರೆಂಟಿಂಗ್‌ ನಿಮ್ಮ ಕೀಲಿಕೈಯಾಗಬೇಕು. ಅಂದರೆ ಮಕ್ಕಳ ಜೊತೆಗೆ ನೀವು ಬೆಚ್ಚಗಿನ ಭಾವ ಕಟ್ಟಿಕೊಳ್ಳಬೇಕು.

7. ಮನೆಯಲ್ಲಿ ಮಕ್ಕಳಿಗೆ ಸ್ವಾತಂತ್ರ್ಯವಿರಬೇಕು. ಅಂದರೆ, ಆ ಸ್ವಾತಂತ್ರ್ಯ ಅತಿಯಾಗಬಾರದು. ಮಕ್ಕಳಿಗೆ ಮನೆಯಲ್ಲಿ ಮನಬಿಚ್ಚಿ ತಮ್ಮ ಹೆತ್ತವರ ಜೊತೆಗೆ ಏನನ್ನು ಬೇಕಾದರೂ ಹೇಳುವ ವಾತಾವರಣ ಕಟ್ಟಿಕೊಡುವುದು ಹೆತ್ತವರಾಗಿ ನಿಮ್ಮ ಕರ್ತವ್ಯ. ಮಕ್ಕಳ ಮನಸ್ಸಿನಲ್ಲಿ ಇದು ಬೇರೂರುದರೆ, ಹೆತ್ತವರು ಗೆದ್ದಂತೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಶಾಲೆಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಬೇಕೇ? ಇಲ್ಲಿವೆ ನವಸೂತ್ರಗಳು!

8. ಸಂವಹನ ತುಂಬ ಮುಖ್ಯ. ಮಕ್ಕಳು ತಮ್ಮ ಭಾವನೆಗಳನ್ನು ನಿಮ್ಮ ಜೊತೆ ನೇರವಾಗಿ ಹಂಚಿಕೊಳ್ಳಬಹುದಾದ ವಾತಾವರಣ ಇರಬೇಕು. ನೀವು ಮಕ್ಕಳ ಮೇಲೆ ಹರಿಹಾಯುತ್ತಿದ್ದರೆ, ಸರಿಯಾಗಿ ಕೂತು ಮಕ್ಕಳ ಜೊತೆಗೆ ಭಾವನೆಗಳನ್ನು ಹಂಚಿಕೊಳ್ಳದಿದ್ದರೆ, ಮಕ್ಕಳನ್ನು ಮಕ್ಕಳಾಗಿ ಇರಲು ಬಿಡದಿದ್ದರೆ, ಮಕ್ಕಳ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ಇರದಿದ್ದರೆ ಮಕ್ಕಳ ಹಾಗೂ ಪೋಷಕರ ನಡುವೆ ಪಾರದರ್ಶಕ ಸಂವಹನ ಸಾಧ್ಯವಾಗದು.

9. ಮಕ್ಕಳ ಮೇಲೆ ರೇಗಲೇಬಾರದು ಎಂದೇನಿಲ್ಲ. ಎಲ್ಲಿ ಹೇಗೆ ರೇಗಬೇಕು ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಆಗ ಮಕ್ಕಳು ತಮ್ಮ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಗುಣ ಬೆಳೆಸಿಕೊಳ್ಳುತ್ತಾರೆ. ಆತ್ಮವಿಶ್ವಾಸದಿಂದ ಬೆಳೆಯುತ್ತಾರೆ. ಅತಿಯಾದ ಹೊಗಳಿಕೆ ಹಾಗೂ ಮುದ್ದು, ಜೊತೆಗೆ ಅತಿಯಾದ ಬೈಗುಳ, ಶಿಸ್ತು ಎರಡೂ ಒಳ್ಳೆಯದಲ್ಲ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

Continue Reading

Relationship

Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

ಮಕ್ಕಳು ಉದ್ದ ಬೆಳೆಯುವಂತೆ ಮಾಡುವುದೇನೂ ಬ್ರಹ್ಮವಿದ್ಯೆ ಅಂದುಕೊಳ್ಳಬೇಡಿ. ಮಕ್ಕಳ ದೇಹಕ್ಕೆ ಈ ಕೆಳಗಿನ ಆಹಾರಗಳನ್ನು ನಿಯಮಿತವಾಗಿ ಕೊಡುತ್ತಿದ್ದೇವಾ ಎಂದು ಒಮ್ಮೆ ಯೋಚಿಸಿದರೆ (Parenting tips) ಸಾಕು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲೇ ಸಿದ್ಧ!

VISTARANEWS.COM


on

healthy children food
Koo

ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಚೆನ್ನಾಗಿ ತಿನ್ನಬೇಕು ಎಂಬ ಹಿರಿಯರ ಮಾತನ್ನು ನೀವು ಕೇಳಿರಬಹುದು. ಹೆಚ್ಚಾಗಿ, ಮನೆಯಲ್ಲಿರುವ ಹಿರಿಯರು, ಮಕ್ಕಳಿಗೆ ಆರೋಗ್ಯಪೂರ್ಣವಾದ ಆಹಾರವನ್ನು (Healthy food) ನೀಡುವುದನ್ನು ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಕೆಲವು ಪರಂಪರಾಗತ ತಿಂಡಿಗಳು, ಹಳೆಯ ತಿನಿಸುಗಳು, ಧಾನ್ಯ ಬೇಳೆಕಾಳುಗಳು ಹಾಗೂ ತರಕಾರಿಗಳಿಂದ ಸಮೃದ್ಧವಾದ ಆಹಾರ ಇತ್ಯಾದಿಗಳು ಮಕ್ಕಳ ನಿತ್ಯಾಹಾರವಾಗಿರಲಿ (children food) ಎಂದು ಮನೆಯಲ್ಲಿರುವ ಹಿರಿಯರು ಹೆಚ್ಚು ದೇಸೀ ತಿನಿಸುಗಳು, ಪೋಷಕಾಂಶಯುಕ್ತ ಬೆಳಗಿನ ಉಪಹಾರಗಳು ಇತ್ಯಾದಿಗಳತ್ತ ಗಮನ ನೀಡುತ್ತಾರೆ. ಆದರೆ ಇತ್ತೀಚೆಗಿನ ಧಾವಂತದ ಬದುಕಿನಲ್ಲಿ ಮಕ್ಕಳ ಕಣ್ಣಿಗೆ ಮಾರುಕಟ್ಟೆಯಲ್ಲೂ ಥರಹೇವಾರಿ, ಬಣ್ಣಬಣ್ಣದ ಆಕರ್ಷಕ, ರುಚಿಕಟ್ಟಾದ ಆಹಾರಗಳು ಸಿಗುವುದರಿಂದ ಮಕ್ಕಳೂ ಕೂಡಾ ಅವುಗಳ ದಾಸರಾಗುತ್ತಿದ್ದಾರೆ. ಇದರಿಂದ ಮಕ್ಕಳು ಎಳವೆಯಲ್ಲಿಯೇ ಹಲವಾರು ಆರೋಗ್ಯ ಸಮಸ್ಯೆಗಳನ್ನೂ (Health problems) ಎದುರಿಸುತ್ತಿದ್ದಾರೆ. ಬೊಜ್ಜು (Cholesterol) ಹೆಚ್ಚಾಗುತ್ತಿದೆ. ಮಧುಮೇಹ (Diabetes) ಸಾಮಾನ್ಯವಾಗುತ್ತಿದೆ. ನಮ್ಮ ಮಕ್ಕಳು ಉದ್ದ ಬೆಳೆಯದೆ ಅಡ್ಡ ಬೆಳೆಯುತ್ತಿದ್ದಾರಲ್ಲಾ ಎಂಬ ಕೊರಗೂ ಕೂಡಾ ಪೋಷಕರದು. ಹಾಗಾದರೆ ಮಕ್ಕಳು ಉದ್ದ ಬೆಳೆಯುವಂತೆ ಮಾಡುವುದೇನೂ ಬ್ರಹ್ಮವಿದ್ಯೆ ಅಂದುಕೊಳ್ಳಬೇಡಿ. ಮಕ್ಕಳ ದೇಹಕ್ಕೆ ಈ ಕೆಳಗಿನ ಆಹಾರಗಳನ್ನು ನಿಯಮಿತವಾಗಿ ಕೊಡುತ್ತಿದ್ದೇವಾ ಎಂದು ಒಮ್ಮೆ ಯೋಚಿಸಿದರೆ (Parenting tips) ಸಾಕು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲೇ ಸಿದ್ಧ!

1. ಡೈರಿ ಉತ್ಪನ್ನಗಳು: ಹಾಲು, ಮೊಸರು, ಚೀಸ್‌ ಮತ್ತಿತರ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಶಿಯಂ ಹೇರಳವಾಗಿರುವುದರಿಂದ ಮಕ್ಕಳಿಗೆ ಅತ್ಯಂತ ಅಗತ್ಯ. ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಕ್ಯಾಲ್ಶಿಯಂನ ಅಗತ್ಯ ಅತ್ಯಂತ ಹೆಚ್ಚಿರುವುದರಿಂದ ಅವರ ಎಲುಬು ಗಟ್ಟಿಯಾಗಿ, ಶಕ್ತಿಶಾಲಿಯಾಗಿ ಬೆಳವಣಿಗೆ ಹೊಂದಲು ಪೋಷಕಾಂಶಗಳು ಬೇಕೇಬೇಕು. ಹುಟ್ಟಿದ ಮಕ್ಕಳಿಂದ ಹಿಡಿದು ಹದಿಹರೆಯ ಮುಗಿಯುವವರೆಗೂ ಮೂಳೆಗಳ ಬೆಳವಣಿಗೆ ಬಹಳ ಪ್ರಮುಖವಾಗಿ ಆಗುವುದರಿಂದ ಇಂತಹ ಸಂದರ್ಭ ಕ್ಯಾಲ್ಶಿಯಂ ಮಕ್ಕಳಿಗೆ ಸಿಗುವುದು ಅತ್ಯಂತ ಅಗತ್ಯ ಕೂಡಾ.

2. ಮೊಟ್ಟೆ: ಮೊಟ್ಟೆಯಲ್ಲಿ ಅತ್ಯಂತ ಸಮೃದ್ಧವಾಗಿ ಪ್ರೊಟೀನ್‌, ಅಮೈನೋ ಆಸಿಡ್‌ ಇರುವುದರಿಂದ ಇವು ಮಕ್ಕಳ ಪ್ರತಿಯೊಂದು ಅಂಗಾಂಶದ ಬೆಳವಣಿಗೆಯಲ್ಲೂ ಮಹತ್ವದ ಪಾತ್ರ ವಹಿಸುತ್ತವೆ. ಅಂಗಾಂಶದ ಬೆಳವಣಿಗೆ, ರಿಪೇರಿ ಇತ್ಯಾದಿಗಳ ಕೆಲಸವೂ ಪ್ರೊಟೀನ್‌ನಿಂದಲೇ ಆಗುತ್ತದೆ. ಮಕ್ಕಳಿಗೆ ಪ್ರೊಟೀನ್‌ ಮೊಟ್ಟೆಯಿಂದ ಅತ್ಯಂತ ಹೆಚ್ಚು ಸಿಗುತ್ತದೆ. ಮೊಟ್ಟೆ ತಿನ್ನದ ಮಂದಿ ಮೊಟ್ಟೆಗೆ ಪರ್ಯಾಯ ಮೂಲಗಳನ್ನು ಹುಡುಕಿಕೊಳ್ಳಬೇಕು.

3. ಮಾಂಸ: ಚಿಕನ್‌, ಟರ್ಕಿ ಮತ್ತಿತರ ಮಾಂಸಗಳಿಂದಲೂ ಪ್ರೊಟೀನ್‌, ಝಿಂಕ್‌ ಮತ್ತಿತರ ಪೋಷಕಾಂಶಗಳು ಲಭ್ಯವಾಗುವುದರಿಂದ ಇದು ಎಲುಬಿನ ಬೆಳವಣಿಗೆಯಲ್ಲಿಯೂ ಸಹಾಯ ಮಾಡುತ್ತವೆ.

4. ಮೀನು: ಸಾಲ್ಮನ್‌, ಮಕೆರೆಲ್‌ ಮತ್ತಿತರ ಮೀನುಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ಗಳು ಹೇರಳವಾಗಿರುವುದರಿಂದ ಬೆಳವಣಿಗೆಗೆ ಪೂರಕವಾಗಿದೆ.

5. ದ್ವಿದಳ ಧಾನ್ಯಗಳು ಹಾಗೂ ಬೇಳೆಕಾಳುಗಳು: ದ್ವಿದಳ ಧಾನ್ಯಗಳಲ್ಲಿಯೂ, ಬೇಳೆ ಕಾಳುಗಳಲ್ಲಿಯೂ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿರುವ ಪ್ರೊಟೀನ್‌, ಕಬ್ಬಿಣಾಂಶ, ಝಿಂಕ್‌ ಕೂಡಾ ಇದೆ. ಇವು ಸಂಪೂರ್ಣ ಆರೋಗ್ಯಕ್ಕೆ ಅತ್ಯಂತ ಅವಶ್ಯಕ ಕೂಡಾ.

6. ಹಸಿರು ಸೊಪ್ಪು ತರಕಾರಿಗಳು: ಬಸಳೆ, ಪಾಲಕ್‌ ಸೇರಿದಂತೆ ಹಸಿರು ಸೊಪ್ಪು ತರಕಾರಿಗಳಲ್ಲಿ ಸಾಕಷ್ಟು ವಿಟಮಿನ್‌, ಖನಿಜಾಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳೂ ಇರುವುದರಿಂದ ಮಕ್ಕಳ ಒಟ್ಟು ಆರೋಗ್ಯಕ್ಕೆ ಇದು ಪೂರಕವಾಗಿದೆ.

7. ಬೀಜಗಳು: ಬಾದಾಮಿ, ವಾಲ್‌ನಟ್‌, ಪಿಸ್ತಾ, ಕುಂಬಳಕಾಯಿ ಬೀಜ, ಸೌತೇಕಾಯಿ ಬೀಜ, ಚಿಯಾ ಬೀಜ, ಅಗಸೆ ಬೀಜ ಸೇರಿದಂತೆ ಎಲ್ಲ ಬಗೆಯ ಬೀಜಗಳಲ್ಲೂ ಮೆಗ್ನೀಶಿಯಂ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳೂ ಇರುವುದರಿಂದ ಬೆಳವಣಿಗೆಗೆ ಇವು ಸಹಾಯ ಮಾಡುತ್ತವೆ.

8. ಹಣ್ಣುಗಳು: ಕಿತ್ತಳೆ, ಸ್ಟ್ರಾಬೆರ್ರಿ, ಕಿವಿ ಮತ್ತಿತರ ಹಣ್ಣುಗಳಲ್ಲಿ ವಿಟಮಿನ್‌ ಸಿ ಹೇರಳವಾಗಿದ್ದು, ಮಕ್ಕಳಲ್ಲಿ ರೋಗನಿರೋಧಕತೆ ಹೆಚ್ಚಿಸಿ, ಆರೋಗ್ಯವಂತರನ್ನಾಗಿ ಮಾಡುವ ಮೂಲಕ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಶಾಲೆಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಬೇಕೇ? ಇಲ್ಲಿವೆ ನವಸೂತ್ರಗಳು!

Continue Reading
Advertisement
Lok Sabha Election
ಪ್ರಮುಖ ಸುದ್ದಿ17 mins ago

Lok Sabha Election : ಕುರುಬರಿಗೆ ಟಿಕೆಟ್ ಕೊಡದ ಮೋದಿ ಕಂಬಳಿ ತೊಟ್ಟು ಡ್ರಾಮಾ ಆಡ್ತಾರೆ: ಸಿದ್ದರಾಮಯ್ಯ

Tsering Namgyal
ದೇಶ21 mins ago

Tsering Namgyal: ಸಂಸತ್ತಲ್ಲಿ ಕಾಂಗ್ರೆಸ್‌ ವಿರುದ್ಧ ಗುಡುಗಿದ್ದ ತ್ಸೆರಿಂಗ್‌ ಈಗ ಅದೇ ಪಕ್ಷದ ಲಡಾಕ್‌ ಅಭ್ಯರ್ಥಿ!

IPL 2024
ಪ್ರಮುಖ ಸುದ್ದಿ28 mins ago

IPL 2024 : ರಾಜಸ್ಥಾನ್ ವಿರುದ್ಧ ಎಸ್​​ಆರ್​ಎಚ್​​ ತಂಡಕ್ಕೆ ರೋಚಕ 1 ರನ್ ಗೆಲುವು

Ragini Khanna
ಸಿನಿಮಾ50 mins ago

Ragini Khanna: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಕ್ಷಮೆ ಕೇಳಿದ ನಟ ಗೋವಿಂದ ಸೋದರ ಸೊಸೆ!

Rain News
ಪ್ರಮುಖ ಸುದ್ದಿ51 mins ago

Rain News : ಬೆಂಗಳೂರಿನಲ್ಲಿ ಸಂಜೆ ಸುರಿದ ಸಣ್ಣ ಮಳೆಗೆ ಕೆಲವೆಡೆ ಅನಾಹುತ

Election campaign for Congress candidate Samyukta Patil in Prajadhwani convention at Bagalkot
ರಾಜಕೀಯ1 hour ago

Lok Sabha Election 2024: ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್‌ ಪರ ಭರ್ಜರಿ ಪ್ರಚಾರ

Lok Sabha Election
ದೇಶ1 hour ago

Lok Sabha Election : ಮೋದಿ ಗ್ಯಾರಂಟಿ ಪಡೆಯಲು ಜೋಶಿ ಗೆಲ್ಲಿಸಿ; ಏಕನಾಥ ಶಿಂಧೆ

Amit Shah
ದೇಶ1 hour ago

Amit Shah: ಮತದಾನ ಕುಸಿತದಿಂದ ಬಿಜೆಪಿಗೆ ನಷ್ಟ? ಅಮಿತ್ ಶಾ ಹೇಳೋದೇನು?

K. Annamalai
ಪ್ರಮುಖ ಸುದ್ದಿ2 hours ago

K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

Mumbai
ದೇಶ2 hours ago

ಆಸ್ಪತ್ರೆಯಲ್ಲಿ ಟಾರ್ಚ್‌ ಬಳಸಿ ಹೆರಿಗೆ; ತಾಯಿ, ಮಗು ಸಾವು; 3 ಈಡಿಯಟ್ಸ್‌ ಸಿನಿಮಾ ದೃಶ್ಯ ಇಲ್ಲಿ ದುರಂತ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ5 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ19 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20245 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌