Lifestyle Tips: ಆರೋಗ್ಯಕರ ಒತ್ತಡರಹಿತ ಜೀವನಕ್ಕೆ ಸರಳ ಸಪ್ತಸೂತ್ರಗಳು! Vistara News
Connect with us

ಲೈಫ್‌ಸ್ಟೈಲ್

Lifestyle Tips: ಆರೋಗ್ಯಕರ ಒತ್ತಡರಹಿತ ಜೀವನಕ್ಕೆ ಸರಳ ಸಪ್ತಸೂತ್ರಗಳು!

ಉದ್ಯೋಗದ ಒತ್ತಡ, ಆಧುನಿಕ ಮನಸ್ಥಿತಿ ಸೇರಿದಂತೆ ಹಲವು ಸವಾಲುಗಳು ನಮ್ಮ ಎಷ್ಟೋ ದಿನಚರಿಯನ್ನು ಬದಲಾಯಿಸಿಬಿಟ್ಟಿದೆ. ಇದರಿಂದ ನಮಗೇ ಅರಿವಿಲ್ಲದಂತೆ ನಾವು ಹಲವಾರು ಸಮಸ್ಯೆಗಳಿಗೆ ಆಹ್ವಾನ ನೀಡುತ್ತಿದ್ದೇವೆ. ನಮ್ಮ ಬದುಕನ್ನೇ ಬದಲಾಯಿಸಬಲ್ಲ, ಆರೋಗ್ಯಕರ ಜೀವನದತ್ತ ಮತ್ತೆ ನಮ್ಮನ್ನು ಕೊಂಡೊಯ್ಯಬಲ್ಲ ಅಭ್ಯಾಸಗಳು ಯಾವುವು (Lifestyle Tips) ಎಂಬುದನ್ನು ನೋಡೋಣ.

VISTARANEWS.COM


on

happy life
Koo

ನಮ್ಮ ಕೆಲವು ಆರೋಗ್ಯಕರ ಶಿಸ್ತಿನ ನಿತ್ಯಾಭ್ಯಾಸಗಳೇ ನಮ್ಮ ಆರೋಗ್ಯದ ಕೀಲಿ ಕೈ. ಆದರೆ ಬದಲಾದ ಪ್ರಪಂಚ, ಬದಲಾದ ವ್ಯವಸ್ಥೆ, ಉದ್ಯೋಗದ ಒತ್ತಡ, ಆಧುನಿಕ ಮನಸ್ಥಿತಿ ಸೇರಿದಂತೆ ಹಲವು ಸವಾಲುಗಳು ನಮ್ಮ ಎಷ್ಟೋ ದಿನಚರಿಯನ್ನು ಬದಲಾಯಿಸಿಬಿಟ್ಟಿದೆ. ಇದರಿಂದ ನಮಗೇ ಅರಿವಿಲ್ಲದಂತೆ ನಾವು ಹಲವಾರು ಸಮಸ್ಯೆಗಳಿಗೆ ಆಹ್ವಾನ ನೀಡುತ್ತಿದ್ದೇವೆ. ಆದರೆ ಉತ್ತರ ನಮ್ಮ ಜೀವನಶೈಲಿಯಲ್ಲಿದೆ ಎಂಬ ಸತ್ಯ ಮಾತ್ರ ನಮಗೆ ಅರಿವಾಗುವುದಿಲ್ಲ. ಹಾಗೆ ನೋಡಿದರೆ, ನಮ್ಮ ಆರೋಗ್ಯದ ಗುಟ್ಟು ಇದರಲ್ಲೇ ಇದೆ. ನಾವು ಮಾತ್ರ ಬೇರೆಯದರ ಹುಡುಕಾಟದಲ್ಲಿ ಇವನ್ನು ಮರೆಯುತ್ತಿದ್ದೇವೆ. ಹಾಗಾದರೆ ಬನ್ನಿ, ನಮ್ಮ ಬದುಕನ್ನೇ ಬದಲಾಯಿಸಬಲ್ಲ, ಆರೋಗ್ಯಕರ ಜೀವನದತ್ತ ಮತ್ತೆ ನಮ್ಮನ್ನು ಕೊಂಡೊಯ್ಯಬಲ್ಲ ಅಭ್ಯಾಸಗಳು ಯಾವುವು (Lifestyle Tips) ಎಂಬುದನ್ನು ನೋಡೋಣ.

1. ಚೆನ್ನಾಗಿ ನಿದ್ದೆ ಮಾಡಿ: ಹೌದು. ಇಂದು ದೇಹಕ್ಕೆ ನಿಜವಾಗಿ ಅಗತ್ಯವಾಗಿ ಬೇಕಾಗಿರುವ ಗುಣಮಟ್ಟ್ದ ನಿದ್ದೆಯನ್ನು ನಾವು ನಮ್ಮ ದೇಹಕ್ಕೆ ನ್ಯಾಯವಾಗಿ ಕೊಡುತ್ತಿಲ್ಲ. ನಿತ್ಯವೂ ಏಳರಿಂದ ಎಂಟು ಗಂಟೆಗಳ ನಿದ್ದೆ ಸಾಮಾನ್ಯ ಆರೋಗ್ಯವಂತ ವಯಸ್ಕನಿಗೆ ಅಗತ್ಯವಿದೆ. ಕೆಲಸದ ಒತ್ತಡ, ಗ್ಯಾಜೆಟ್‌ಗಳ ಅಭ್ಯಾಸದಿಂದಾಗಿ ಇಂದು ಆ ನಿದ್ದೆ ಕಡಿಮೆಯಾಗಿದೆ. ಹಾಗಾಗಿ ಸರಿಯಾದ ಸಮಯದಲ್ಲಿ ಪ್ರತಿನಿತ್ಯ ಬೇಗ ನಿದ್ದೆ ಮಾಡಿ ಬೆಳಗ್ಗೆ ಬೇಗನೆ ಏಳುವ ಶಿಸ್ತುಬದ್ಧ ಅಭ್ಯಾಸ ರೂಢಿಸಿಕೊಳ್ಳಿ.

sleep day

2. ಸ್ಮಾರ್ಟ್‌ ಉಪವಾಸ: ಉಪವಾಸದ ಅಭ್ಯಾಸ ಇಂದು ಬಹಳಷ್ಟು ಕಡಿಮೆಯಾಗಿದೆ. ಪುಟ್ಟ ಅವಧಿಗೆ ಹಸಿವಿನಿಂದಿರುವುದು, ಲಘುವಾಗಿ ಉಣ್ಣುವುದು ನಮ್ಮ ಎರಡು ಮುಖ್ಯ ವಂಶವಾಹಿನಿಗಳಿಗೆ ಒಳ್ಳೆಯದು. ಈ ವಂಶವಾಹಿನಿಯಲ್ಲಿ ನಮ್ಮ ಒತ್ತಡ, ಕ್ಯಾನ್ಸರ್‌, ವಯಸ್ಸಾದಂತೆ ಬರುವ ರೋಗಗಳು ಇವೆಲ್ಲವುಗಳ ವಿರುದ್ಧ ಹೋರಾಡುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಹೊಟ್ಟೆ ತುಂಬ ಅತಿಯಾಗಿ ಉಣ್ಣುವುದನ್ನು ಕಡಿಮೆ ಮಾಡಿ. ಹೊಟ್ಟೆಯಲ್ಲಿ ಕೊಂಚ ಜಾಗ ಉಳಿಸಿಕೊಂಡು ಲಘುವಾಗಿ ಉಣ್ಣಿ.

3. ಮಾಂಸಖಂಡಗಳ ಬಲವರ್ಧನೆ ಮಾಡಿ: ಉತ್ತಮ ಮಾಂಸಖಂಡಗಳನ್ನು ವೃದ್ಧಿಸಿಕೊಳ್ಳುವುದು ಒಳ್ಳೆಯದು. ವ್ಯಾಯಾಮ, ವೈಟ್‌ ಟ್ರೈನಿಂಗ್‌, ಪುಶ್‌ ಅಪ್‌, ಯೋಗ ಇತ್ಯಾದಿಗಳು ಒಳ್ಳೆಯದು. ಸೂರ್ಯ ನಮಸ್ಕಾರದಂತಹ ಸಾಮಾನ್ಯ ಯೋಗಾಭ್ಯಾಸವಾದರೂ ಮಾಡುವುದು ಒಳ್ಳೆಯದು.

4. ಸ್ನ್ಯಾಕ್‌ ತಿನ್ನುವುದು ಕಡಿಮೆ ಮಾಡಿ: ಏನಾದರೊಂದು ಬಾಯಲ್ಲಿ ಹಾಕಿ ಮೆಲ್ಲುತ್ತಲೇ ಇರುವುದು ಹಲವರಿಗೆ ಅಭ್ಯಾಸ. ಇದು ಅತಿಯಾಗಿ ತಿನ್ನುವುದರ ಲಕ್ಷಣ. ಆದಷ್ಟೂ ಈ ಅಭ್ಯಾಸವನ್ನು ಕಡಿಮೆ ಮಾಡಿ.

ಇದನ್ನೂ ಓದಿ: Chia Seeds Day: ಇಂದು ಚಿಯಾ ಸೀಡ್ಸ್‌ ದಿನ! ಇದರ ಬಳಕೆ ಹೇಗೆ? ಏನು ಪ್ರಯೋಜನ?

5. ಧ್ಯಾನ: ಸಾಕಷ್ಟು ಸಂಶೋಧನೆಗಳು ಇಂದು ಧ್ಯಾನವು ಮಾನಸಿಕ ಆರೋಗ್ಯವನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುವುದನ್ನು ಒಪ್ಪಿಕೊಂಡಿವೆ. ಮಾನಸಿಕ ಒತ್ತಡದಂತಹ ಹಲವು ಸಮಸ್ಯೆಗಳನ್ನು ಧ್ಯಾನವು ದೂರವಿರಿಸುತ್ತದೆ.

Happy Hormone

6 ಒಳ್ಳೆಯ ಆಹಾರ ಸೇವನೆ: ಉತ್ತಮ ಆರೋಗ್ಯಕರ ಜೀವನಕ್ಕೆ ನಾವು ಏನು ತಿನ್ನುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಸತ್ವಾಹಾರ ಸೇವನೆ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಹಾಗೂ ಜಂಕ್‌ನಿಂದ ದೂರವಿರುವುದರ ಅಭ್ಯಾಸ ಮಾಡಿಕೊಂಡರೆ, ಎಷ್ಟೋ ಸಮಸ್ಯೆಗಳಿಂದ ನಾವು ದೂರವಿರಬಹುದು.

7. ಇತರ ಆರೋಗ್ಯಕರ ಚಟುವಟಿಕೆಗಳು: ಓದುವುದು, ಬರವಣಿಗೆ, ಇನ್‌ಡೋರ್‌ ಗೇಮ್‌ಗಳು, ಮಕ್ಕಳೊಂದಿಗೆ ಆಡುವುದು, ಹೊಸ ಕಲಿಕೆಗಳು, ಹೊಸ ಭಾಷಾ ಕಲಿಕೆ, ಸಂಗೀತ, ನೃತ್ಯ, ಚಿತ್ರಕಲೆ, ಸಾಹಿತ್ಯದಂತಹ ಕ್ರಿಯಾಶೀಲ ಚಟುವಟಿಕೆಗಳು ಇತ್ಯಾದಿ ಮನೋಲ್ಲಾಸ ನೀಡುವ ಚಟುವಟಿಕೆಗಳೂ ಕೂಡಾ ನಮ್ಮನ್ನು ಆರೋಗ್ಯವಾಗಿರಿಸುತ್ತದೆ. ಮಾನಸಿಕವಾಗಿ, ದೈಹಿಕವಾಗಿ ಒತ್ತಡರಹಿತರನ್ನಾಗಿ ಮಾಡುತ್ತದೆ.

ಇದನ್ನೂ ಓದಿ: ವಿಸ್ತಾರ Explainer | killer stress | ಒತ್ತಡ ಏರುತ್ತಿದೆ, ಹೃದಯ ಕುಸಿಯುತ್ತಿದೆ!

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ

ಆರೋಗ್ಯ

Ripponpet News: ಗ್ರಾಮೀಣ ಜನರ ಆರೋಗ್ಯದ ತಪಾಸಣೆ ಮುಖ್ಯ: ಉಜ್ಜಯನಿ ಪೀಠದ ಜಗದ್ಗುರು

Ripponpet News: ರಿಪ್ಪನ್‌ಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸಿರುವುದು ಪ್ರಶಂಸನೀಯ ಎಂದು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.

VISTARANEWS.COM


on

Edited by

Nandi Hospital ripponpet
ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.
Koo

ರಿಪ್ಪನ್‌ಪೇಟೆ: “ಹಳ್ಳಿಯಲ್ಲಿನ ಸಾಮಾನ್ಯ ಜನರು ಇಂದಿನ ದುಬಾರಿ ಖರ್ಚು ಮಾಡಿಕೊಂಡು ದೂರದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಮನೆಯ ಬಾಗಿಲಿನಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯುವಂತಾಗಲು ನಂದಿ ಆಸ್ಪತ್ರೆ ಸಹಕಾರಿಯಾಗಲಿ” ಎಂದು ಉಜ್ಜಯನಿ ಪೀಠದ ಜಗದ್ಗುರುಗಳು ಹೇಳಿದರು.

ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿನಂದಿ ಆಸ್ಪತ್ರೆ ‘’ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಉಜ್ಜಯನಿ ಪೀಠದ ಜಗದ್ಗುರುಗಳು, ಆಸ್ಪತ್ರೆಯ ಸದುಪಯೋಗವನ್ನು ಸ್ಥಳೀಯ ಜನತೆ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದ ಜನರ ಆರೋಗ್ಯ ತಪಾಸಣೆ ಬಹಳ ಮುಖ್ಯವಾಗುತ್ತದೆ ಎಂದು ಕರೆ ನೀಡಿದರು.

ಆನಂದಪುರದ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿ, “ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾರಕ ರೋಗಗಳಿಂದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ದೂರದ ಆಸ್ಪತ್ರೆಗಳಿಗೆ ಹೋಗಿ ಬರುವುದೇ ಕಷ್ಟವಾಗಿರುವಾಗ ರಿಪ್ಪನ್‌ಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವುದರೊಂದಿಗೆ ಸಾಕಷ್ಟು ವೈದ್ಯರಿಗೆ ಮತ್ತು ಆರೋಗ್ಯ ಶೂಶ್ರೂಷಿಕಿಯರಿಗೆ, ಔಷಧ ಅಂಗಡಿಯವರಿಗೆ ಸ್ವಾವಲಂಬಿ ಬದುಕಿಗೆ ಮಾರ್ಗದರ್ಶಿಯಾಗಿರುವುದು ಪ್ರಶಂಸನೀಯ” ಎಂದರು.

ಇದನ್ನೂ ಓದಿ: Kannada New Movie: ʻದಿಲ್ ದಾರ್’ ಎಂದ ಕೆ.ಮಂಜು ಪುತ್ರ: ಶ್ರೇಯಸ್ ಹೊಸ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್!

ಇದೇ ಕಟ್ಟಡದಲ್ಲಿರುವ ಐಶ್ವರ್ಯ ಕೃಷಿ ಉಪಕರಣಗಳ ಅಂಗಡಿಗೂ ಭೇಟಿ ನೀಡಿ ಗುರು ವಿರಕ್ತ ಪೂಜ್ಯರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮೀಜಿ, ನಾರಾಯಣ ಗುರು ಪೀಠದ ರೇಣುಕಾನಂದ ಮಹಾಸ್ವಾಮೀಜಿ, ಶಾಸಕ ಹರತಾಳು ಹಾಲಪ್ಪ ಮಾಲೀಕರಾದ ಸಚ್ಚಿನ ಗೌಡ, ಜೆ.ಎ.ಶಾಂತ ಕುಮಾರ್, ಹುಗುಡಿ ರಾಜು, ಬೆಳಕೋಡು ಹಾಲಸ್ವಾಮಿಗೌಡ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: Kasapa: ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ವಿರುದ್ಧ ಪ್ರಕಾಶಮೂರ್ತಿ ಗರಂ; ನಡೆ-ನುಡಿ ಬದಲಿಸಿಕೊಳ್ಳಲು ಬಹಿರಂಗ ಪತ್ರ

Continue Reading

ಫ್ಯಾಷನ್

Wedding Fashion: ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ವೇರ್‌ಗೆ ಡಿಸೈನರ್‌ ಕ್ಲಚ್‌ ಸಾಥ್‌

ವೆಡ್ಡಿಂಗ್‌ ಸೀಸನ್‌ನಲ್ಲಿ ಗ್ರ್ಯಾಂಡ್‌ಲುಕ್‌ ನೀಡುವ ಡಿಸೈನರ್‌ ಕ್ಲಚ್‌ಗಳು ಕಾಲಿಟ್ಟಿವೆ. ಮದುವೆಯ ಸಂಭ್ರಮಕ್ಕೆ (Wedding Fashion) ಧರಿಸುವ ಎಥ್ನಿಕ್‌ವೇರ್‌ಗೆ ಈ ಕ್ಲಚ್‌ಗಳು ಸಾಥ್‌ ನೀಡುತ್ತಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್‌.

VISTARANEWS.COM


on

Edited by

Wedding Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವೆಡ್ಡಿಂಗ್‌ ಸೀಸನ್‌ನಲ್ಲಿ ಧರಿಸುವ ಗ್ರ್ಯಾಂಡ್‌ ಎಥ್ನಿಕ್‌ವೇರ್‌ಗಳಿಗೆ ಮ್ಯಾಚ್‌ ಆಗುವಂತಹ ಬಗೆಬಗೆಯ ಡಿಸೈನರ್‌ ಕ್ಲಚ್‌ಗಳು ಮಾರುಕಟ್ಟೆಗೆ (Wedding Fashion) ಕಾಲಿಟ್ಟಿವೆ. ನೋಡಿದರೇ ಕೊಳ್ಳಬೇಕೆನಿಸುವ ಡಿಸೈನ್‌ಗಳಲ್ಲಿ ಲಭ್ಯವಿರುವ ಈ ಕ್ಲಚ್‌ಗಳು ಇಂದು ಎಥ್ನಿಕ್‌ ಪ್ರಿಯರನ್ನು ಸೆಳೆದಿವೆ.

Wedding Fashion

ವೆಡ್ಡಿಂಗ್‌ವೇರ್‌ಗೆ ಕ್ಲಚ್‌ ಸಾಥ್‌

ಗ್ರ್ಯಾಂಡ್‌ ಉಡುಪು ಧರಿಸಿ ಮದುವೆಯಲ್ಲಿ ಭಾಗವಹಿಸುವವರಿಗೆ ಈ ಕ್ಲಚ್‌ ಸಾಥ್‌ ನೀಡುತ್ತಿವೆ. ರೇಷ್ಮೆ ಸೀರೆ ಮಾತ್ರವಲ್ಲ, ಡಿಸೈನರ್‌ ಲೆಹೆಂಗಾ, ದಾವಣಿ-ಲಂಗ, ಗಾಗ್ರ, ಸಲ್ವಾರ್‌, ಕಮೀಝ್‌ ಹೀಗೆ ನಾನಾ ಬಗೆಯ ಡಿಸೈನರ್‌ ಉಡುಪುಗಳಿಗೆ ಮ್ಯಾಚ್‌ ಆಗುವ ವಿನ್ಯಾಸದಲ್ಲಿ ದೊರೆಯುತ್ತಿವೆ.

ಯಾವ್ಯಾವ ಬಗೆಯ ಕ್ಲಚ್‌ಗಳು ಲಭ್ಯ

ಕುಂದನ್‌ ಡಿಸೈನ್‌ನವು, ನಾನಾ ವರ್ಣಗಳ ಅಮೆರಿಕನ್‌ ಡೈಮಂಡ್‌ ಇಮಿಟೇಟ್‌ ಮಾಡುವಂತಹ ಕ್ರಿಸ್ಟಲ್‌ ಕ್ಲಚ್‌ಗಳು, ಬೀಡ್ಸ್‌ ಕ್ಲಚ್‌, ಪರ್ಲ್ ಕ್ಲಚ್‌, ವೆಲ್ವೆಟ್‌ ಕ್ಲಚ್‌, ಪರ್ಸ್ ಶೈಲಿಯವು, ಸ್ವಿಂಗ್‌ ಶೈಲಿಯ ಚೈನ್‌ ಇರುವಂತಹ ಕ್ಲಚ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಡಿಸೈನರ್‌ ವೇರ್‌ಗಳೊಂದಿಗೆ ಹಾಕಿಕೊಂಡಾಗ ಆಕರ್ಷಕವಾಗಿ ಕಾಣುತ್ತವೆ. ಈ ಸೀಸನ್‌ನಲ್ಲಿ ಬೇಸಿಕ್‌ ಮೇಕಪ್‌ ಆಕ್ಸೆಸರೀಸ್‌ ಹಾಗೂ ಮೊಬೈಲ್‌ ಇರಿಸಿಕೊಳ್ಳುವಂತಹ ಕ್ಲಚ್‌ಗಳಿಗೆ ಇಂದು ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಡಿಸೈನರ್ಸ್. ಇನ್ನು ಕ್ಲಚ್‌ಗಳಲ್ಲಿಕುಂದನ್‌ ವರ್ಕ್‌, ಮಿರರ್‌ ವರ್ಕ್‌, ಪ್ಯಾಚ್‌ ವರ್ಕ್‌, ಮಿಕ್ಸ್‌ ಮ್ಯಾಚ್‌ ಕ್ಲಚ್‌ಗಳು ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ.

ಕ್ಲಚ್‌ಗಳ ಬಗ್ಗೆ ತಿಳಿದಿರಿ

ಕ್ಲಚ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಷ್ಟು ಕಂಪಾರ್ಟ್‌ಮೆಂಟ್‌ಗಳು ಇವೆ ಎಂದು ಪರೀಕ್ಷಿಸಿ. ಶಾಪಿಂಗ್‌ಗೆ ಹೋಗುವಾಗ ಕ್ಲಚ್‌ ಬೇಡ. ವ್ಯಾನಿಟಿ ಬ್ಯಾಗ್‌ ಸೂಕ್ತ. ಕ್ಲಚ್‌ಗಳನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಎಂಬುದು ನೆನಪಿರಲಿ. ಯಾಕೆಂದರೆ, ಅದರಲ್ಲಿಹೆಚ್ಚಿನ ವಸ್ತುಗಳನ್ನು ಇಡಲಾಗದು.

ನಿರ್ವಹಣೆ ಹೀಗೆ ಮಾಡಿ

ಕುಂದನ್‌ ವರ್ಕ್‌ ಅಥವಾ ಇನ್ಯಾವುದೇ ಡಿಸೈನರ್‌ ವರ್ಕ್‌ ಇರುವ ಕ್ಲಚ್‌ಗಳನ್ನು ವೈಟ್‌ ಕಾಟನ್‌ ಬಟ್ಟೆಯಲ್ಲಿಸುತ್ತಿ ಇಟ್ಟರೆ ತುಂಬ ದಿನ ಬಾಳಿಕೆ ಬರುತ್ತದೆ. ಮದುವೆ ಸಮಾರಂಭದಿಂದ ಬಂದ ತಕ್ಷ ಣ ಕ್ಲಚ್‌ನಲ್ಲಿ ಏನಾದರೂ ಇದ್ದರೆ ಖಾಲಿ ಮಾಡಿ ಇಡಿ. ಕ್ಲಚ್‌ಗಳನ್ನು ತೊಳೆಯಬೇಡಿ. ಚಿಕ್ಕ ಟಿಶ್ಯೂ ಪೇಪರ್‌ನಿಂದ ನಿಧಾನವಾಗಿ ಕ್ಲೀನ್‌ ಮಾಡಿ ಪ್ಯಾಕ್‌ ಮಾಡಿ ಇಡಿ.

Wedding Fashion

ಆಕರ್ಷಕವಾಗಿ ಕಾಣಿಸಲು ಕ್ಲಚ್‌

  • ಗ್ರ್ಯಾಂಡ್‌ ಸೀರೆಗಳಿಗೆ ಹಾಗೂ ಡಿಸೈನರ್‌ ವೇರ್‌ಗೆ ಅಂದವಾದ ಕ್ಲಚ್‌ ಕೈಯಲ್ಲಿಹಿಡಿಯುವುದು ಇಂದಿನ ಟ್ರೆಂಡ್‌.
  • ಕ್ಲಚ್‌ ಆದಷ್ಟೂ ಕಾಂಪಾಕ್ಟ್‌ ಆಗಿದ್ದಷ್ಟೂ ಚೆನ್ನಾಗಿ ಕಾಣುತ್ತದೆ.
  • ಗೋಲ್ಡ್‌, ಸಿಲ್ವರ್‌ ಕ್ಲಚ್‌ಗಳು ಎಲ್ಲಾ ಡಿಸೈನರ್‌ವೇರ್‌ಗೂ ಸೂಟ್‌ ಆಗುತ್ತವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್‌ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?

Continue Reading

ಫ್ಯಾಷನ್

Dior Pre Fall Fashion Show: ಭಾರತದಲ್ಲಿ ಮೊಟ್ಟ ಮೊದಲ ಬಾರಿ ನಡೆದ ಡಿಯೊರ್‌ ಪ್ರಿ ಫಾಲ್‌ ಫ್ಯಾಷನ್‌ ಶೋ

ಮೊದಲ ಬಾರಿ ಭಾರತದಲ್ಲಿ ನಡೆದ ಡಿಯೋರ್‌ ಪ್ರಿ ಫಾಲ್‌ ಫ್ಯಾಷನ್‌ ಶೋನಲ್ಲಿ (Dior Pre Fall Fashion Show), ವೈಬ್ರೆಂಟ್‌ ಶೇಡ್‌ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ರ‍್ಯಾಂಪ್‌ ವಾಕ್‌ ಮಾಡಿದರು. ಈ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

Edited by

Dior pre fall fashion show
ಚಿತ್ರಗಳು: ಡಿಯೊರ್‌ ಪ್ರಿ ಫಾಲ್‌ ಫ್ಯಾಷನ್‌ ಶೋ 2023
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಣ್ಣಿಗೆ ಎದ್ದು ಕಾಣಿಸುವಂತಹ ಬಣ್ಣಬಣ್ಣದ ಡಿಸೈನರ್‌ ವೇರ್‌ಗಳು, ಬ್ರೈಟ್‌ ಡ್ರೆಸ್‌ಗಳು, ಈ ಕಲರ್‌ಗಳಲ್ಲೂ ಉಡುಗೆಗಳೂ ಇದ್ದವಾ! ಎಂದುಕೊಳ್ಳುವಷ್ಟರ ಮಟ್ಟಿಗೆ ಡಿಸೈನರ್‌ ವೇರ್‌ಗಳು ರ್ಯಾಂಪ್‌ ಮೇಲೆ ಅನಾವರಣಗೊಂಡವು. ನೋಡಲು (Dior Pre Fall Fashion Show) ಕಣ್ಮನ ಸೆಳೆಯುವಂತಹ ಡ್ರೆಸ್‌ಗಳು ನೆರೆದಿದ್ದ ಗಣ್ಯರನ್ನು ಸೆಳೆದವು.

Dior pre fall fashion show

ಭಾರತದಲ್ಲಿ ಡಿಯೋರ್‌ನ ಮೊದಲ ಫ್ಯಾಷನ್‌ ಶೋ

ಮುಂಬಯಿಯ ಗೇಟ್‌ ವೇ ಆಫ್‌ ಇಂಡಿಯಾ ಬಳಿ ನಡೆದ ಡಿಯೋರ್‌ನ ಮೊಟ್ಟ ಮೊದಲ ಫ್ಯಾಷನ್‌ ಶೋ ಕಲ್ಚರ್‌ ಹಾಗೂ ವಿನ್ಯಾಸದ ಸಮಾಗಮವಾಗಿತ್ತು. ಡಿಯೋರ್‌ ನಿರ್ದೇಶಕಿ ಮಾರಿಯಾ ಗ್ರಾಝಿಯಾ ಅವರ ಐಡಿಯಾದಂತೆ ಈ ಫ್ಯಾಷನ್‌ ಶೋವನ್ನು ಆಯೋಜಿಸಲಾಗಿತ್ತು.

Dior pre fall fashion show

ರ್ಯಾಂಪ್‌ನಲ್ಲಿ ಕ್ಲಾಸಿಕಲ್‌ ಮ್ಯೂಸಿಕ್‌

ಎಲ್ಲಾ ಫ್ಯಾಷನ್‌ ಶೋಗಳಲ್ಲಿ ಹಿಟ್‌ ರ್ಯಾಪ್‌ ಅಥವಾ ಶೋಗೆ ಸೂಟ್‌ ಆಗುವಂತಹ ಮ್ಯೂಸಿಕ್‌ ಹಾಕುವುದು ಕಾಮನ್‌. ಆದರೆ ಈ ಡಿಯೋರ್‌ ಶೋನಲ್ಲಿ ಮಾತ್ರ ಡೈರೆಕ್ಟರ್‌ ಮಾರಿಯಾ ಅವರ ಅಭಿಲಾಷೆಯಂತೆ ಇಂಡಿಯನ್‌ ಕ್ಲಾಸಿಕಲ್‌ ಮ್ಯೂಸಿಕ್‌ ರ್ಯಾಂಪ್‌ ವಾಕ್‌ನ ಹಿನ್ನೆಲೆ ಸಂಗೀತವಾಗಿ ಬಳಸಲಾಯಿತು. ಎಲ್ಲರಿಗೂ ಆಶ್ಚರ್ಯ ಮೂಡಿಸಿದ ವಿಷಯವೆಂದರೇ, ರ್ಯಾಂಪ್‌ನಲ್ಲಿ ಮೊದಲ ಮಹಿಳಾ ತಬಲಾ ವಾದಕಿ ಅನುರಾಧ ಪಾಲ್‌ ಅವರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Dior pre fall fashion show

ಇಂಡಿಯನ್‌ ಮಾಡೆಲ್‌ಗಳಿಗಿಂತ ಹೊರಗಡೆಯವರೇ ಹೆಚ್ಚು

ಡಿಯೋರ್‌ ಫ್ಯಾನ್‌ ಶೋನಲ್ಲಿ ಕೇವಲ ಬೆರಳೆಣಿಕೆಯಷ್ಟರ ಮಟ್ಟಿಗೆ ಮಾತ್ರ ಭಾರತೀಯ ಮಾಡೆರಲ್‌ಗಳು ಕಣ್ಣಿಗೆ ಬಿದ್ದರು. ಇನ್ನುಳಿದಂತೆ ಎಲ್ಲರೂ ಹೊರಗಡೆಯವರಾಗಿದ್ದರು. ಈ ವಿಷಯ ಅಸಮಾಧಾನ ತರಿಸಿತು ಎನ್ನುತ್ತಾರೆ ಹೆಸರನ್ನು ಹೇಳಲು ಇಚ್ಛಿಸದ ಸ್ಟೈಲಿಸ್ಟ್. ಭಾರತೀಯ ಸಂಸ್ಕೃತಿಯನ್ನು ಪ್ರತಿಯೊಂದರಲ್ಲೂ ಎತ್ತಿ ಹಿಡಿದು ಕೊನೆಗೆ ರ್ಯಾಂಪ್‌ ಶೋನಲ್ಲಿ ಮಾತ್ರ ವಿದೇಶಿಯರಿಗೆ ಮಣೆ ಹಾಕಿದ್ದು ಸ್ಥಳಿಯರಲ್ಲಿ ಕೊಂಚ ಅಸಮಾಧಾನ ವ್ಯಕ್ತಪಡಿಸಿತು.

ಬಾಲಿವುಡ್‌ ಸೆಲೆಬ್ರೆಟಿಗಳ ದಂಡು

ಕ್ರಿಕೆಟಿಗ ವಿರಾಟ್‌ ಕೋಹ್ಲಿ, ನಟಿ ಅನುಷ್ಕಾ ಶರ್ಮಾ ಜೋಡಿ, ಅನನ್ಯಾ ಪಾಂಡೇ, ಸೋನಂ ಕಪೂರ್‌, ಅಭಿಷೇಕ್‌ ಬಚ್ಚನ್‌. ಅಥಿಯಾ ಶೆಟ್ಟಿ ಸೇರಿದಂತೆ ನಾನಾ ತಾರೆಯರು ಈ ಫ್ಯಾಷನ್‌ ಶೋನಲ್ಲಿ ಗೆಸ್ಟ್‌ ಲಿಸ್ಟ್‌ನಲ್ಲಿದ್ದರು. ಟ್ರೆಂಡಿ ವೈಬ್ರೆಂಟ್‌ ಶೇಡ್‌ಗಳಲ್ಲಿ ಕಾಣಿಸಿಕೊಂಡರು. ಬೇಸಿಗೆ ಬಂದರೂ ಇನ್ನೂ ಸಾಟೀನ್‌ ಫ್ಯಾಬ್ರಿಕ್‌ನ ಲೆಯರ್‌ ಔಟ್‌ಫಿಟ್‌ನಲ್ಲೆ ಕಾಣಿಸಿಕೊಂಡದ್ದು ಬಹುತೇಕರಲ್ಲಿ ಅಚ್ಚರಿ ಮೂಡಿಸಿತು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Photoshoot: ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಕಪಲ್‌ ಎಂಗೇಜ್‌ಮೆಂಟ್‌ ಫ್ಯಾಷನ್‌ ಫೋಟೊಶೂಟ್‌

Continue Reading

ಆರೋಗ್ಯ

Grapes Benefits: ದ್ರಾಕ್ಷಿ ಸೇವಿಸಿದ್ರೆ ಸನಿಹಕ್ಕೂ ಬರಲ್ಲ ಕ್ಯಾನ್ಸರ್! ಅಬ್ಬಾ ಎಷ್ಟೊಂದು ಲಾಭಗಳು?

ದ್ರಾಕ್ಷಿ (Grapes benefits) ತಿನ್ನುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Edited by

Grapes Benefits
Koo

ನರಿಯೊಂದು ದ್ರಾಕ್ಷಿ (Grapes benefits) ಹಣ್ಣಿಗೆ ಆಸೆಪಟ್ಟು, ಎಷ್ಟು ಪ್ರಯತ್ನಿಸಿದರೂ ದೊರೆಯದೆ, ʻಸಾಯಲತ್ಲಾಗೆ, ಹುಳಿ ದ್ರಾಕ್ಷಿಯಿದುʼ ಎಂದು ಹೊರಟುಹೋದ ಕಥೆಯನ್ನು ಸಾಮಾನ್ಯವಾಗಿ ಎಲ್ಲರೂ ಬಾಲ್ಯದಲ್ಲಿ ಕೇಳಿಯೇ ಇರುತ್ತೇವೆ. ಅದು ನರಿಯ ಕಥೆಯಾಯಿತು, ಈಗ ನಮಗೆ ದ್ರಾಕ್ಷಿ ಹಣ್ಣು ಬೇಕೆಂದರೆ ದ್ರಾಕ್ಷಿಯ ತೋಟಕ್ಕೆ ಹೋಗಿ ಹಾರಾಡಬೇಕೆಂದಿಲ್ಲ, ಅಂಗಡಿಗೆ ಹೋಗಿ ಬೇಕಾದಷ್ಟನ್ನು ಖರೀದಿಸಿ ತಂದರಾಯಿತು. ಗೊಂಚಲಲ್ಲಿ ತೂಗುವ ಈ ರಸಭರಿತ ಹಣ್ಣುಗಳು ಕಣ್ಣಿಗೆ ಮಾತ್ರ ತಂಪಲ್ಲ, ಬಾಯಿ, ಹೊಟ್ಟೆಗೂ ಹಿತ. ಒಂದಿಷ್ಟು ಹುಳಿ, ಕೆಲವೊಮ್ಮೆ ಚಿಟಿಕೆಯಷ್ಟು ಒಗರು, ಬಹಳಷ್ಟು ಸಿಹಿ ರುಚಿಯ ಮಿಶ್ರಣದ ಹಣ್ಣುಗಳಿವು.

Grapes Benefits

ಇದರ ಬಣ್ಣಗಳೇ ಕೆಲವೊಮ್ಮೆ ಬಾಯಲ್ಲಿ ನೀರೂರಿಸಿಬಿಡುತ್ತವೆ. ತಿಳಿ ಹಸಿರು, ಅಚ್ಚ ಹಸಿರು, ನಸುಗೆಂಪು, ತುಸು ಹೆಚ್ಚೇ ಕೆಂಪು, ಕಪ್ಪು, ನಸು ನೀಲಿ, ನೇರಳೆ- ಹೀಗೆ ಹಲವಾರು ಬಣ್ಣಗಳಲ್ಲಿ ದ್ರಾಕ್ಷಿಯನ್ನು ಕಾಣಬಹುದು. ಹೊರಮೈ ಮಾಟಗಳೂ ಅಷ್ಟೇ, ಸಣ್ಣದು, ದೊಡ್ಡದು, ಉರುಟಾದ್ದು, ಮೊಟ್ಟೆಯಾಕಾರದ್ದು, ಉದ್ದ ಮಾಟದ್ದು- ಎಷ್ಟೊಂದು ಬಗೆಗಳಿವೆ. ಹಾಗೆಂದು ಈ ಯಾವ ಬಣ್ಣ, ಮಾಟಗಳ ದ್ರಾಕ್ಷಿ ತಿಂದರೂ, ರುಚಿ ಮತ್ತು ಪೋಷಕತತ್ವಗಳಿಗೆ ಏನೂ ಮೋಸವಿಲ್ಲ. ಹಾಗಾದರೆ ಏನೆಲ್ಲ ಲಾಭಗಳಿವೆ ದ್ರಾಕ್ಷಿ ತಿನ್ನುವುದರಲ್ಲಿ?

Grapes Benefits

ಕ್ಯಾನ್ಸರ್‌ ದೂರ

ಪಾಲಿಫೆನಾಲ್ ಮತ್ತು ರೆಸ್ವೆರಾಟ್ರೋಲ್‌ನಂಥ ಪ್ರಮುಖ ಆಂಟಿ ಆಕ್ಸಿಡೆಂಟ್‌ಗಳು ದ್ರಾಕ್ಷಿಯಲ್ಲಿವೆ. ಕ್ಯಾನ್ಸರ್‌ ಅಥವಾ ಯಾವುದೇ ರೀತಿಯ ಗಡ್ಡೆಗಳು ಬೆಳೆಯದಂತೆ ತಡೆಯುವ ಸಾಮರ್ಥ್ಯ ಇವುಗಳಿಗಿರುವುದಾಗಿ ಅಧ್ಯಯನಗಳು ಹೇಳುತ್ತವೆ. ಯಕೃತ್‌, ಕರುಳು, ಸ್ತನ, ಜಠರ, ಚರ್ಮ ಮುಂತಾದ ಕಡೆಗಳಲ್ಲಿ ಕ್ಯಾನ್ಸರ್‌ ಗಡ್ಡೆಗಳು ಬಾರದಂತೆ ಕಾಪಾಡುತ್ತದೆ, ಇದರಲ್ಲಿನ ಕ್ವಾರ್ಸೆಂಟೀನ್‌ ಎಂಬ ಫ್ಲವನಾಯ್ಡ್‌ನಿಂದ ಕ್ಯಾನ್ಸರ್‌ ಕೋಶಗಳ ಬೆಳವಣಿಗೆ ಕುಂಠಿತಗೊಳ್ಳುವುದು ಪತ್ತೆಯಾಗಿದೆ.

Grapes Benefits

ಹೃದಯಾರೋಗ್ಯ ವೃದ್ಧಿ

ಇದರ ಪಾಲಿಫೆನಾಲ್‌ಗಳು ದೇಹದಲ್ಲಿನ ಉರಿಯೂತ ತಗ್ಗಿಸಿ, ಹೃದಯದ ಆಯಸ್ಸು ಹೆಚ್ಚಿಸುತ್ತವೆ. ರಕ್ತದ ಪರಿಚಲನೆಯನ್ನು ವೃದ್ಧಿಸಿ, ಹೃದಯಕ್ಕೆ ಬಾಧೆಯಾಗದಂತೆ ನೋಡಿಕೊಳ್ಳುತ್ತವೆ. ಕೊಲೆಸ್ಟ್ರಾಲ್‌ ಮಟ್ಟ ಕಡಿಮೆಯಾಗುವಂತೆ ಮಾಡುವ ಬಗ್ಗೆಯೂ ಅಧ್ಯಯನಗಳು ಹೇಳುತ್ತವೆ.

Grapes Benefits

ದೃಷ್ಟಿ ಚುರುಕು

ನಿಯಮಿತವಾಗಿ ದ್ರಾಕ್ಷಿ ಹಣ್ಣು ತಿನ್ನುವುದರಿಂದ ಕಣ್ಣಿನ ದೃಷ್ಟಿ ಮಂದವಾಗುವ ಸಾಧ್ಯತೆಯನ್ನು ಶೇ. ೩೬ರಷ್ಟು ತಗ್ಗಿಸಬಹುದು ಎನ್ನುತ್ತವೆ ಅಧ್ಯಯನಗಳು. ಅದರಲ್ಲೂ ಕೆಂಪು ದ್ರಾಕ್ಷಿಯನ್ನು ಪ್ರತಿದಿನ ಸೇವಿಸುವುದರಿಂದ ವೃದ್ಧಾಪ್ಯದಲ್ಲಿ ಕಾಡುವ ದೃಷ್ಟಿದೋಷದ ಸಾಧ್ಯತೆ ಕ್ಷೀಣವಾಗುತ್ತದೆ.

ಪ್ರತಿರೋಧಕ ಶಕ್ತಿ ವೃದ್ಧಿ

ಹಲವು ಫ್ಲವನಾಯ್ಡ್‌ಗಳು, ವಿಟಮಿನ್‌ ಎ, ಸಿ ಮತ್ತು ಕೆ ಜೀವಸತ್ವಗಳು, ಕಬ್ಬಿಣ ಮತ್ತು ಮೆಗ್ನೀಶಿಯಂನಂಥ ಖನಿಜಗಳಿಂದ ಸಮೃದ್ಧವಾಗಿರುವ ದ್ರಾಕ್ಷಿ ಹಣ್ಣುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಅದರಲ್ಲೂ ದೈನಂದಿನ ಆಹಾರದಲ್ಲಿ ಬೊಗಸೆ ದ್ರಾಕ್ಷಿಗೆ ಸ್ಥಾನ ನೀಡಿದರೆ ಋತು ಬದಲಾವಣೆಯ ಹೊತ್ತಿಗೆ ಬರುವಂಥ ನೆಗಡಿ, ಜ್ವರದಂಥ ಕಿರಕಿರಿಗಳನ್ನು ತಡೆಯಬಹುದು

Grapes Benefits

ಮೂಳೆಗಳ ಬಲವರ್ಧನೆ

ತಾಮ್ರ, ಕಬ್ಬಿಣ, ಮ್ಯಾಂಗನೀಸ್‌ನಂಥ ಅಗತ್ಯ ಖನಿಜಗಳನ್ನು ಹೊಂದಿರುವ ದ್ರಾಕ್ಷಿಯ ಸೇವನೆಯಿಂದ ಮೂಳೆಗಳ ಶಕ್ತಿಯನ್ನು ಹೆಚ್ಚಿಸಬಹುದು. ಆಸ್ಟಿಯೊ ಆರ್ಥರೈಟಿಸ್‌ನಿಂದ ಉಂಟಾಗುವ ಮಂಡಿ ನೋವಿನ ಉಪಟಳವನ್ನು ದ್ರಾಕ್ಷಿಗಳು ಶಮನ ಮಾಡಬಲ್ಲವು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕೀಲುಗಳಲ್ಲಿ ಶಕ್ತಿ ಸಂಚಯಿಸಿ, ಅವುಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ.

Grapes Benefits

ಮಧುಮೇಹಿಗಳಿಗೂ ಕ್ಷೇಮ

ಹೌದು, ಸಿಹಿ ರುಚಿಯ ಹಣ್ಣುಗಳನ್ನು ತಿನ್ನುವಾಗ ಇದು ಮಧುಮೇಹಿಗಳಿಗೆ ಸುರಕ್ಷಿತವೇ ಎಂಬ ಸಂಶಯ ಕಾಡುವುದು ಸಹಜ. ಇದರ ಗ್ಲೈಸೆಮಿಕ್‌ ಇಂಡೆಕ್ಸ್‌ ಮಧ್ಯಮ ಪ್ರಮಾಣದಲ್ಲಿದ್ದು, ಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಮಧುಮೇಹಿಗಳಿಗೂ ಅಪಥ್ಯವಾಗುವುದಿಲ್ಲ.

ಇದನ್ನೂ ಓದಿ: Bone Health: ಮೂಳೆಗಳ ಬಲವರ್ಧನೆಗೆ ಏನು ಮಾಡಬೇಕು?

Continue Reading
Advertisement
Elephant trap
ಕರ್ನಾಟಕ3 hours ago

Elephant trapped : ಮೂರು ತಿಂಗಳಿನಿಂದ ಸತಾಯಿಸುತ್ತಿರುವ 10 ವರ್ಷದ ಗಂಡಾನೆ ಕೊನೆಗೂ ಹನಿ ಟ್ರ್ಯಾಪ್‌ಗೆ ಬಿತ್ತು!

Unaccounted 6.4 Crore rupees seized in Chikmagalur
ಕರ್ನಾಟಕ3 hours ago

Karnataka Election 2023: ಚುನಾವಣೆ ಹಿನ್ನೆಲೆ ಹಣದ ಹೊಳೆ, ದಾಖಲೆ ಇಲ್ಲದ 6 ಕೋಟಿ ರೂ., 17 ಕೆಜಿ ಚಿನ್ನ, ಬೆಳ್ಳಿ ವಶ

Champion Gujarat won by 5 wickets in the first match, CSK was disappointed
ಕ್ರಿಕೆಟ್3 hours ago

IPL 2023 : ಚಾಂಪಿಯನ್​ ಗುಜರಾತ್​​ಗೆ ಮೊದಲ ಪಂದ್ಯದಲ್ಲಿ 5 ವಿಕೆಟ್ ಜಯ, ಸಿಎಸ್​ಕೆ ನಿರಾಸೆ

holalu urus
ಕರ್ನಾಟಕ3 hours ago

Communal Harmony : ಉರೂಸ್‌ ಸಂಭ್ರಮದಲ್ಲಿ ಹಿಂದೂ ಶ್ರೀಗಳನ್ನು ಗೌರವಿಸಿ ಭಾವೈಕ್ಯತೆ ಮೆರೆದ ಮುಸ್ಲಿಮರು

Nelyadi suicide
ಕರ್ನಾಟಕ4 hours ago

Suicide case : ಮೊಬೈಲ್‌ನಲ್ಲಿ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ, ಆ ಮನೆಯಲ್ಲಿ ಇದು ಮೂರನೇ ಸುಸೈಡ್‌!

Bangalore mysore highway
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ಟೋಲ್ ದರ ಜನರಿಗೆ ದುಃಸ್ವಪ್ನವಾಗದಿರಲಿ

IT Raid on the bank owned by Belgaum Congress leader VS Sadhunavar
ಕರ್ನಾಟಕ4 hours ago

IT Raid: ಕಾಂಗ್ರೆಸ್‌ ಮುಖಂಡ ವಿ.ಎಸ್.‌ ಸಾಧುನವರ ಒಡೆತನದ ಬ್ಯಾಂಕ್‌ ಮೇಲೆ ಐಟಿ ದಾಳಿ

IPL 2023
ಕ್ರಿಕೆಟ್4 hours ago

IPL 2023 : ಐಪಿಎಲ್​ನ ಮೊದಲ ಇಂಪ್ಯಾಕ್ಟ್​​ ಪ್ಲೇಯರ್​ ಯಾರು? ಅನುಕೂಲ ಬಳಸಿಕೊಂಡಿದ್ದು ಯಾವ ತಂಡ?

People In Pakistan Unhappy, Believe Partition Was A Mistake: Says Mohan Bhagwat
ದೇಶ4 hours ago

Mohan Bhagwat: ಪಾಕ್ ಜನಕ್ಕೆ ನೆಮ್ಮದಿ ಇಲ್ಲ, ದೇಶ ವಿಭಜನೆ ಪ್ರಮಾದ ಎಂಬ ಭಾವನೆ ಇದೆ: ಮೋಹನ್‌ ಭಾಗವತ್‌

Mohammad Shami who scored a century in bowling, what is the achievement?
ಕ್ರಿಕೆಟ್5 hours ago

IPL 2023 : ಬೌಲಿಂಗ್​ನಲ್ಲಿ ಶತಕ ಬಾರಿಸಿದ ಮೊಹಮ್ಮದ್​ ಶಮಿ, ಏನಿದು ಸಾಧನೆ?

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್6 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಕರ್ನಾಟಕ15 hours ago

SSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು

ಕರ್ನಾಟಕ1 day ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ2 days ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ5 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ5 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ2 weeks ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ2 weeks ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ಟ್ರೆಂಡಿಂಗ್‌

error: Content is protected !!