First Days @ office: ಹೊಸ ಆಫೀಸಲ್ಲಿ ಎಲ್ಲರ ಜತೆ ಬೆರೆಯೋದು ಹೇಗೆ? - Vistara News

ಸ್ಫೂರ್ತಿ ಕತೆ

First Days @ office: ಹೊಸ ಆಫೀಸಲ್ಲಿ ಎಲ್ಲರ ಜತೆ ಬೆರೆಯೋದು ಹೇಗೆ?

first days @ office: ಯಾವುದಾದರೂ ಅಪರಿಚಿತ ಕಚೇರಿಯಲ್ಲಿ ಉದ್ಯೋಗಕ್ಕೆ ಸೇರಿದ ಮೊದಲ ದಿನ ನಾವು ಹೇಗಿರುತ್ತೇವೆ ಎನ್ನುವುದು ತುಂಬ ಮುಖ್ಯ. ಹೇಗಿದ್ದರೆ ಚೆಂದ ಎನ್ನುವುದಕ್ಕೆ ಇಲ್ಲಿವೆ ಕೆಲವು ಟಿಪ್ಸ್‌

VISTARANEWS.COM


on

first days @ work
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೀವು ಒಂದು ಹೊಸ ಆಫೀಸಿಗೆ ಸೇರಿದ್ದೀರಿ ಎಂದಿಟ್ಟುಕೊಳ್ಳಿ. ಪ್ರತಿಯೊಬ್ಬರೂ ಅಪರಿಚಿತರೆ. ಯಾರಿಗೂ ನಿಮ್ಮ ಬಗ್ಗೆ ಗೊತ್ತಿಲ್ಲ, ನಿಮ್ಮ ಹಿನ್ನೆಲೆ  ತಿಳಿದಿಲ್ಲ. ನಿಮಗೂ ಅಷ್ಟೆ, ಯಾರೊಬ್ಬರ ಹಿನ್ನೆಲೆ, ಅವರು ಹೇಗೆ, ಏನು? ಏನು ಕೆಲಸ ಮಾಡ್ತಾರೆ ಅಂತ ಗೊತ್ತಿರುವುದಿಲ್ಲ. ನಿಮಗೆ ಗೊತ್ತಿರುವುದು ನಿಮ್ಮನ್ನು ಅಪಾಯಿಂಟ್ ಮಾಡಿಕೊಂಡ ಎಚ್‍ಆರ್ ಟೀಮ್, ಇಂಟರ್ ವ್ಯೂ ಮಾಡಿದ ವಿಭಾಗ ಮುಖ್ಯಸ್ಥರು ಅಷ್ಟೆ. ನಿಮ್ಮ ಬಗ್ಗೆ ಗೊತ್ತಿರುವುದು ಅವರಿಗೆ ಮಾತ್ರ.
ಏನೋ ದೊಡ್ಡ ಹುದ್ದೆಗೆ ನೇಮಕ ಆಗಿದ್ದರೆ ಆಫೀಸಿನಲ್ಲಿ ಎಲ್ಲರನ್ನೂ ಕರೆದು ನಿಮ್ಮ ಪರಿಚಯ ಮಾಡಬಹುದು. ಅಥವಾ ಎಲ್ಲರೂ ಬಂದು ನಿಮ್ಮಲ್ಲಿ ತಮ್ಮ ಪರಿಚಯ ಹೇಳಿಕೊಳ್ಳಬಹುದು. ಆದರೆ, ಒಂದು ಸಾಮಾನ್ಯ ಹುದ್ದೆಗೆ ಜಾಯಿನ್ ಆಗಿದ್ದರೆ ಅಂಥ ಪ್ರಕ್ರಿಯೆಗಳು ಕಡಿಮೆ. ಹೆಚ್ಚೆಂದರೆ ನಿಮ್ಮನ್ನು ಸೇರಿಸಿಕೊಂಡಿರುವ ವಿಭಾಗದ ಒಬ್ಬ ಸೀನಿಯರ್ ಗೆ ಇಂಟ್ರೊಡ್ಯೂಸ್ ಮಾಡಬಹುದು ಅಷ್ಟೆ.
ಇಂಥ ಸಂದರ್ಭದಲ್ಲಿ ಕಚೇರಿಯ ಉಳಿದ ಸಿಬ್ಬಂದಿ ಜತೆಗೆ ಒಮ್ಮಿಂದೊಮ್ಮೆಗೇ ಬೆರೆಯೋದು ತುಂಬ ಕಷ್ಟಾನೆ. ಹೇಗಪ್ಪಾ ಮಾತಾಡೋದು? ಯಾರು ಹೇಗೋ ಏನೋ? ಮಾತಾಡಿದ್ರೆ ಮಾತಾಡಿಸ್ತಾರೋ ಇಲ್ಲವೋ? ಈ ಆಫೀಸಲ್ಲಿ ಹಾಗೆಲ್ಲ ಮಾತನಾಡಿದ್ರೆ ತಪ್ಪಾದೀತಾ ಅನ್ನೋ ಪ್ರಶ್ನೆಗಳೆಲ್ಲ ಮೂಡುತ್ತವೆ. ಕಚೇರಿಗಳಲ್ಲಿ ಕೆಲವು ವ್ಯಕ್ತಿಗಳು ಈ ತರ ಹೊಸದಾಗಿ ಬಂದವರನ್ನು ತಾವೇ ಮಾತನಾಡಿಸಿ ಧೈರ್ಯ ತುಂಬುವವರು ಇರುತ್ತಾರೆ. ಆದರೆ, ಅವರ ಸಂಖ್ಯೆ ಕಡಿಮೆ. ತಾವೇ ಬಂದು ಮಾತನಾಡಿಸಲಿ ಎನ್ನುವವರ ಪ್ರಮಾಣವೇ ಜಾಸ್ತಿ.
ನಾವು ಗಮನಿಸಿದ್ದೇವೆ, ಕೆಲವರು ಕಚೇರಿ ಸೇರಿ ಒಂದು ವಾರ ಆಗುವಷ್ಟರಲ್ಲಿ ಎಲ್ಲರ ಜತೆ ಬೆರೆತು ಹೋಗಿರುತ್ತಾರೆ. ಇನ್ನು ಕೆಲವರು ವರ್ಷಗಳ ಕಾಲ ಕೆಲಸ ಮಾಡಿದರೂ ಪಕ್ಕದ ಟೇಬಲ್‍ನವರ ಜತೆಗೂ ಮಾತನಾಡಿರುವುದಿಲ್ಲ.
ಹಾಗಿದ್ದರೆ, ಒಂದು ಕಚೇರಿಯಲ್ಲಿ ಹೊಸದಾಗಿ ಸೇರಿದಾಗ ಅಲ್ಲಿನ ಜನರ ಜತೆ ಕಮ್ಯುನಿಕೇಟ್ ಮಾಡುವುದು ಹೇಗೆ? ಇದಕ್ಕೆ ಸಿದ್ಧ ಸೂತ್ರ ಎನ್ನುವುದು ಯಾವುದೂ ಇಲ್ಲ. ಆದರೂ ಕೆಲವೊಂದು ಕಾಮನ್ ಪಾಯಿಂಟ್‍ಗಳಿವೆ. ಇವುಗಳನ್ನು ಸಕಾಲಿಕವಾಗಿ ಬಳಸಿದರೆ ಎಲ್ಲರ ಜತೆಗೆ ಬೆರೆಯುವುದಕ್ಕೆ ಒಂದು ಹಾದಿ ತೆರೆದುಕೊಳ್ಳಬಹುದು.

1. ಮುಗುಳ್ನಗುವೊಂದು ದಿವ್ಯ ಮಂತ್ರ
-ಪರಿಚಯ ಇದೆಯೋ ಇಲ್ಲವೋ ಗೊತ್ತಿಲ್ಲ, ಭಾಷೆ ಬರುತ್ತದೋ ಗೊತ್ತಿಲ್ಲ. ಯಾವ ಹುದ್ದೆಯೋ ಗೊತ್ತಿಲ್ಲ, ಯಾವ ಊರೋ ಗೊತ್ತಿಲ್ಲ.. ಹೀಗೆ ಏನೇನೂ ಗೊತ್ತಿಲ್ಲದಿದ್ದರೂ ಸುಮ್ಮನೆ ಏನೂ ಇಲ್ಲದೆ ಕಮ್ಯುನಿಕೇಟ್ ಮಾಡಬಲ್ಲ ದಿವ್ಯಾಸ್ತ್ರವೊಂದಿದೆ. ಅದುವೇ ಮುಗುಳುನಗು. ಒಂದು ಶಬ್ದ ಕೂಡಾ ಮಾತನಾಡದೆ ಹತ್ತಿರವಾಗಿಸಬಲ್ಲ ಶಕ್ತಿ ಇದಕ್ಕಿದೆ. ಎಲ್ಲರಿಗೂ ಒಂದು ಸಣ್ಣ ನಗು ಹಂಚಿಬಿಟ್ಟರೆ ಅದು ನಾವು ಕಮ್ಯುನಿಕೇಟ್ ಮಾಡಲು ಉತ್ಸಾಹ ಹೊಂದಿದ್ದೇವೆ ಎನ್ನುವುದನ್ನು ತೋರಿಸುತ್ತದೆ. ಕನಿಷ್ಠ ನಾಲ್ಕನೇ ಮುಗುಳ್ನಗೆಗಾದರೂ ಒಂದು ಮಾತಿನ ಹಾದಿ ತೆರೆದುಕೊಳ್ಳುತ್ತದೆ.

2. ಹಾಯ್ ಎನ್ನುವ ಎರಡಕ್ಷರ
ಕಚೇರಿಯಲ್ಲಿ ಯಾರೇ ಕಂಡರೂ ಹಾಯ್ ಅಂತಲೋ, ಸಮಯಕ್ಕೆ ತಕ್ಕಂತೆ ಗುಡ್ ಮಾರ್ನಿಂಗ್, ಗುಡ್ ಆಫ್ಟರ್ ನೂನ್ ಅಂತಲೋ ಹೇಳಿದರೆ ಒಂದೆರಡು ದಿನ ಬಿಟ್ಟು ಅದು ಮತ್ತೊಂದು ಕಡೆಯಿಂದ ರೆಸಿಪ್ರೊಕೇಟ್ ಆಗುತ್ತದೆ. ಯಾವುದೇ ವ್ಯಕ್ತಿಗೆ ನೀವು ಬಿಟ್ಟೂ ಬಿಡದೆ ನಾಲ್ಕು ದಿನ ಗುಡ್ ಮಾರ್ನಿಂಗ್ ಹೇಳಿದರೆ ಐದನೇ ದಿನ ಅವರು ಅದಕ್ಕಾಗಿ ಕಾಯುತ್ತಾರೆ ಅಥವಾ ನಮಗಿಂತ ಮೊದಲು ಅವರೇ ಗುಡ್ ಮಾರ್ನಿಂಗ್ ಅಂತಾರೆ.

3. ಪರಿಚಯಿಸಿಕೊಳ್ಳಲು ಹಿಂಜರಿಕೆ ಬೇಡ
ತುಂಬ ಕಡೆಗಳಲ್ಲಿ ಯಾರು ಯಾರನ್ನೂ ಪರಿಚಯಿಸುವುದಿಲ್ಲ. ನಾವು ಯಾರು ಅಂತ ನಾವೇ ಹೇಳಿಕೊಳ್ಳಬೇಕು. ಹಾಗಂತ ಅದನ್ನು ಅವರ ವರ್ಕ್ ಪ್ಲೇಸ್‍ಗೆ ಹೋಗಿ ಹೇಳಬೇಕಾಗಿಲ್ಲ. ಯಾರೋ ವಾಷ್ ರೂಂ ಹತ್ರ ಸಿಕ್ತಾರೆ, ಇನ್ಯಾರೋ ನೀರು ಕುಡಿಯುವಾಗ, ಊಟಕ್ಕೆ ಹೋಗುವಾಗ, ಮೀಟಿಂಗ್‍ನಲ್ಲಿ ಸಿಕ್ತಾರೆ.. ಆಗ ನಾನು ಹೊಸಬ ಎಂದು ಹೇಳುತ್ತಲೇ ಅವರ ಬಗ್ಗೆ ತಿಳಿದುಕೊಳ್ಳಬಹುದು. ನಮ್ಮ ಬಗ್ಗೆ ಹೇಳಿಕೊಳ್ಳುವಾಗ ಅತ್ಯಂತ ಕಡಿಮೆ ಪದ ಬಳಸಿದರೆ ಉತ್ತಮ.

4.ಹೆಸರು ನೆನಪಲ್ಲಿಟ್ಟುಕೊಂಡರೆ ಉತ್ತಮ
ನಾವು ಯಾರಲ್ಲಾದರೂ ಮಾತನಾಡಿದರೆ ಅವರ ಹೆಸರು ಮತ್ತು ಊರು ಎರಡನ್ನೂ ಕೇಳಿದರೆ ಉತ್ತಮ. ಮತ್ತು ಹೆಸರನ್ನು ಯಾವತ್ತೂ ಮರೆಯದೆ ಇನ್ನೊಮ್ಮೆ ಎದುರಾಗುವಾಗಲೆಲ್ಲ ಬಳಸಿದರೆ ಹೆಚ್ಚು ಇಷ್ಟಪಡುತ್ತಾರೆ. ಊರಿನ ಬಗ್ಗೆ ಪ್ರೀತಿಯಿಂದ ಮಾತನಾಡಿದರೆ ಖುಷಿಪಡುತ್ತಾರೆ.

5. ಮೇಜು ಬಿಟ್ಟು ಸ್ವಲ್ಪ ಓಡಾಡಿ
ಸಾಮಾನ್ಯವಾಗಿ ಕೆಲವರು ಕೆಲಸಕ್ಕೆ ಸೇರಿದಾಗ ಸೀನಿಯರ್ಸ್ ಬಂದು ಯಾವ ಕುರ್ಚಿಯಲ್ಲಿ ಕೂರಿಸಿರುತ್ತಾರೋ ಆ ಕುರ್ಚಿ ಬಿಟ್ಟು ಏಳುವುದಿಲ್ಲ. ದಿನಕ್ಕೆ ಒಂದೆರಡು ಸಲವಾದರೂ ಆಚೀಚೆ ಓಡಾಡುವ ಅಭ್ಯಾಸವಿದ್ದರೆ ಇತರರೊಂದಿಗೆ ಕನೆಕ್ಟ್ ಆಗುತ್ತದೆ. ಕೆಲವರು ಊಟವನ್ನು ಕೂಡಾ ಕುಳಿತ ಜಾಗದಲ್ಲೇ ಮಾಡುತ್ತಾರೆ. ಇದು ಪ್ರೊಡಕ್ಟಿವಿಟಿಗೆ ಒಳ್ಳೆಯದೇನೋ.. ಆದರೆ, ನಮ್ಮ ಕನೆಕ್ಟಿವಿಟಿಗೆ ಅಷ್ಟೇನೂ ಒಳ್ಳೆಯದಲ್ಲ.

6. ಒಬ್ಬರಿಗೇ ಅಂಟಿಕೊಂಡಿರಬೇಡಿ..
ಕೆಲವರು ಕಚೇರಿಯಲ್ಲಿ ಮೊದಲ ಬಾರಿ ಪರಿಚಯ ಆದವರನ್ನೇ ಜೀವಮಾನದ ಗೆಳೆಯ/ ಗೆಳತಿ ಏನೋ ಎಂಬಂತೆ ಅಂದುಕೊಂಡುಬಿಡುತ್ತಾರೆ. ಅವರ ಜತೆ ಮಾತ್ರ ಮಾತನಾಡುವುದು, ಅವರ ಜತೆಗೇ ಊಟ, ತಿಂಡಿಗೆ ಹೋಗುವುದು. ಈ ರೀತಿ ಮಾಡುವುದರಿಂದ ಬೇರೆಯವರ ಜತೆಗೆ ಬೆರೆಯುವ ಅವಕಾಶವೇ ತಪ್ಪಿಹೋಗುತ್ತವೆ. ಅಥವಾ ಅದಕ್ಕಿಂತಲೂ ಡೇಂಜರ್ ಆದ ಸಂಗತಿ ಎಂದರೆ ನಾವು ಸ್ನೇಹ ಮಾಡಿಕೊಂಡಿರುವ ವ್ಯಕ್ತಿ ಬಗ್ಗೆ ಕಚೇರಿಯಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲದೆ ಇರಬಹುದು. ಇದು ನಮ್ಮ ಮೇಲೂ ಪರಿಣಾಮ ಬೀರುತ್ತದೆ.

7. ಒಳ್ಳೆಯ ಡ್ರೆಸ್ ಸೆನ್ಸ್ ಇರಲಿ
ಯಾವುದೇ ಹೊಸ ಕಚೇರಿಗೆ ಹೋದಾಗ ಮೊದಲಿಗೆ ಗಮನಿಸುವುದು ನಮ್ಮ ಡ್ರೆಸ್ಸನ್ನು. ನಮ್ಮ ಕೆಲಸದ ಕ್ವಾಲಿಟಿಯೆಲ್ಲ ಆಮೇಲೆ. ಹೀಗಾಗಿ ಒಳ್ಳೆಯ ರೀತಿಯಲ್ಲಿ ಡ್ರೆಸ್ ಮಾಡಿಕೊಳ್ಳುವುದು, ಕುಳಿತುಕೊಳ್ಳುವ ಜಾಗವನ್ನು ಅಚ್ಚುಕಟ್ಟಾಗಿಡುವುದು ಆಕರ್ಷಣೆಯ ಸರಳ ಸೂತ್ರಗಳು.


 8. ಸಹಾಯ ಕೇಳಿ
ಕಚೇರಿಯಲ್ಲಿ ಬೇರೆಯವರ ಜತೆ ಬೆರೆಯುವುದಕ್ಕೆ ಅತ್ಯಂತ ಸುಲಭದ ದಾರಿ ಎಂದರೆ ಸಹಾಯ ಕೇಳುವುದು. ಹೊಸ ಜಾಗದಲ್ಲಿ ನಮಗೆ ಹಲವಾರು ವಿಷಯ ಗೊತ್ತಿರುವುದಿಲ್ಲ. ನೀರು ಎಲ್ಲಿದೆ, ವಾಷ್ ರೂಂ ಎಲ್ಲಿದೆ, ಮಧ್ಯಾಹ್ನದ ಊಟ ಎಲ್ಲಿ ಮಾಡಬಹುದು, ಎಷ್ಟು ಹೊತ್ತಿಗೆ ಟೀ ಬರ್ತದೆ ಮೊದಲಾದ ಸಣ್ಣ ಸಣ್ಣ ಸಂಗತಿಗಳ ಮೂಲಕ ಮಾತನ್ನು ಬೆಳೆಸಬಹುದು. ಕೆಲಸದ ವಿಚಾರದಲ್ಲೂ ಸಹಾಯ ಯಾಚಿಸಿದಾಗ ಕೆಲವರಿಗೆ ತುಂಬ ಇಷ್ಟವಾಗುತ್ತದೆ. ಹಾಗಂತ, ಹೋದ ಕೂಡಲೇ ಯಾರಲ್ಲೋ ದುಡ್ಡು ಕೇಳುವುದು ಮೊದಲಾದವು ಕೆಟ್ಟ ಚಾಳಿ ಆಗುತ್ತದೆ!


9. ಇನ್ನೊಬ್ಬರಿಗೆ ಸಹಾಯ ಮಾಡಿ
ಯಾವುದಾದರೂ ಸಮಸ್ಯೆ ಎದುರಾದರೆ ಅದಕ್ಕೆ ನಿಮ್ಮಲ್ಲಿ ಪರಿಹಾರವಿದೆ ಅನಿಸಿದರೆ ಯಾವುದೇ ಮುಜುಗರ ಇಲ್ಲದೆಸಹಾಯ ಮಾಡಿ. ಇದನ್ನು ದೀರ್ಘಕಾಲ ಜನರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಸಹಾಯ ಅಂದರೆ ದೊಡ್ಡದೇ ಆಗಿರಬೇಕಾಗಿಲ್ಲ. ಬಿದ್ದಿರುವ ಪೆನ್ನನ್ನೋ, ತುಂಡು ಕಾಗದವನ್ನು ಎತ್ತಿಕೊಡುವುದೂ ಸಹಾಯವೆ. ಯಾರೋ ಬ್ಯುಸಿ ಇದ್ದರೆ ಏನಾದರೂ ಸಹಾಯ ಮಾಡ್ಲಾ ಎಂದು ಕೇಳಿದರೆ ನಮ್ಮ ಬಗ್ಗೆ ಒಳಿತಿನ ಭಾವ ಮೂಡುತ್ತದೆ.


10. ಬೇರೆಯವರ ಬಗ್ಗೆ ಗೌರವದ ಮಾತಿರಲಿ
ಕಚೇರಿಯಲ್ಲಿ ಇನ್ನೊಬ್ಬರ ಬಗ್ಗೆ, ಅವರ ಅಭಿರುಚಿಗಳ ಬಗ್ಗೆ, ಡ್ರೆಸ್ ಬಗ್ಗೆ ಗೌರವದ ಮಾತು ಆಡಿದಾಗ ಎಲ್ಲರಿಗೂ ಹಿತವಾಗುತ್ತದೆ. ಯಾವುದೋ ಒಂದು ಸಹಾಯ ಮಾಡಿದಾಗ ಅದನ್ನು ಮುಕ್ತವಾಗಿ ಹೇಳುವುದರಿಂದ ಅವರಿಗೂ ಸಾರ್ಥಕ ಭಾವ ಬರುತ್ತದೆ. ಇನ್ನಷ್ಟು ಸಹಾಯ ಮಾಡಲು ಮನಸು ಬರುತ್ತದೆ.


11. ತುಂಬ ಸೌಂಡ್ ಮಾಡಬೇಕಾಗಿಲ್ಲ
ಕೆಲವರು ತಾವು ಕಚೇರಿಗೆ ಸೇರಿದ್ದೇವೆ ಎಂಬುದನ್ನು ಸಾರಲೋ ಎಂಬಂತೆ ದೊಡ್ಡದಾಗಿ ಮಾತನಾಡುವ‌ ಮೂಲಕ, ಎಲ್ಲದರಲ್ಲಿ ಮೂಗು ತೂರಿಸುವ ಮೂಲಕ ಪ್ರಯತ್ನ ಮಾಡುತ್ತಾರೆ. ಇದು attention seeking ಪ್ರವೃತ್ತಿ ಅನಿಸುತ್ತದೆ. ಇದರಿಂದ ಲಾಭವೇನೂ ಆಗುವುದಿಲ್ಲ.

NEERAJ CHOPRA ಎಂಬ ಏಕಲವ್ಯನಿಗೆ ಗುರುವಾದ ದ್ರೋಣಾಚಾರ್ಯ ಯಾರು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

ರಾಜಮಾರ್ಗ ಅಂಕಣ: ಕುರುಡರಾಗಿ ಹುಟ್ಟಿದ ಕಾರಣಕ್ಕೆ ನೋವು, ತಿರಸ್ಕಾರ ಅನುಭವಿಸುತ್ತಿದ್ದ ಶ್ರೀಕಾಂತ್‌ ಬೊಳ್ಳಾ ಹಿಡಿದ ಛಲದ ಹಾದಿ ಇಂದು ಅವರನ್ನು ದೊಡ್ಡ ಕಂಪನಿಗಳ ಮಾಲಿಕರಾಗುವತ್ತ, ನೂರಾರು ದಿವ್ಯಾಂಗರಿಗೆ ಕೆಲಸ ನೀಡುವವರೆಗೆ ಮುನ್ನಡೆಸಿದೆ. ನಾವೆಲ್ಲರೂ ಓದಿ ರೋಮಾಂಚಿತರಾಗಬಹುದಾದ ಸ್ಫೂರ್ತಿ ಕಥೆಯಿದು.

VISTARANEWS.COM


on

rajamarga column srikant bolla
Koo

ಕಣ್ಣಿಲ್ಲ ಎಂಬ ಕಾರಣಕ್ಕೆ ಐಐಟಿ ರಿಜೆಕ್ಟ್ ಆಗಿದ್ದ ಯುವಕನು ಕೋಟಿ ಕೋಟಿ ಸಂಪಾದನೆ ಮಾಡಿದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮೂರು ವರ್ಷಗಳ ಹಿಂದೆ ಇವರನ್ನು ಬೆಂಗಳೂರಿನ ಒಂದು ಬಿಸಿನೆಸ್ ಸಮ್ಮೇಳನದ ವೇದಿಕೆಯಲ್ಲಿ ಭೇಟಿಯಾಗಿದ್ದೆ. ಅವರ ಹೋರಾಟದ ಕಥೆಯನ್ನು ಅವರ ಮಾತಲ್ಲೇ ಕೇಳಿ ರೋಮಾಂಚನವಾಗಿತ್ತು.

ಶ್ರೀಕಾಂತ್ ಬೊಳ್ಳ ಅವರ ಹೋರಾಟದ ಅದ್ಭುತವಾದ ಕಥೆಯನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

ನಾನು ಹುಟ್ಟಿದ್ದು ಆಂಧ್ರಪ್ರದೇಶದ ಮಚಲಿ ಪಟ್ಟಣದ ಒಂದು ಪುಟ್ಟ ಗ್ರಾಮದಲ್ಲಿ (1992). ನನ್ನ ಹುಟ್ಟು ಕುರುಡುತನ ನನ್ನ ಕೃಷಿಕ ಕುಟುಂಬಕ್ಕೆ ದೊಡ್ಡ ಸವಾಲು ಆಗಿತ್ತು. ನಮ್ಮ ಕುಟುಂಬದ ವಾರ್ಷಿಕ ಆದಾಯ 20,000 ರೂಪಾಯಿಗಿಂತ ಕಡಮೆ ಇದ್ದ ಕಾಲ ಅದು!

ಅಪಮಾನ, ತಿರಸ್ಕಾರ ಮತ್ತು ತಾರತಮ್ಯ

ನಾನು ಕುರುಡ ಎಂಬ ಕಾರಣಕ್ಕೆ ತಿರಸ್ಕಾರ, ಅಪಮಾನ ತುಂಬಾ ನೋವು ಕೊಡುತ್ತಿತ್ತು. ತರಗತಿಯಲ್ಲಿ ಕೊನೆಯ ಬೆಂಚು ಖಾಯಂ. ಆಟಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ. ಇದರಿಂದ ಅಪ್ಪ ನೊಂದುಕೊಂಡು ನನ್ನನ್ನು ಹೈದರಾಬಾದ್ ನಗರದ ವಿಶೇಷ ಮಕ್ಕಳ ಶಾಲೆಗೆ ಸೇರಿಸಿದರು. ಅಲ್ಲಿ ನನ್ನ ಜೀವನದ ಹಲವು ಟರ್ನಿಂಗ್ ಪಾಯಿಂಟಗಳು ಆರಂಭ! ಕಲಿಕೆಯಲ್ಲಿ ನಾನು ನನ್ನ ತರಗತಿಗೆ ಪ್ರಥಮ ಬರಲು ಆರಂಭಿಸಿದೆ. ಕುರುಡು ಮಕ್ಕಳ ಕ್ರಿಕೆಟ್ ತಂಡದಲ್ಲಿ ನಾನು ರಾಷ್ಟ್ರೀಯ ತಂಡದಲ್ಲಿ ಆಡಿದೆ.

ಅಬ್ದುಲ್ ಕಲಾಂ ಭೇಟಿ ಮಿಂಚು ಹರಿಸಿತು

ನಾನು ಪ್ರೌಢಶಾಲೆಯಲ್ಲಿ ಓದುವಾಗ ನಮ್ಮ ಶಾಲೆಗೊಮ್ಮೆ ಅಬ್ದುಲ್ ಕಲಾಂ ಭೇಟಿ ನೀಡಿದರು. ಅವರ ಮಾತುಗಳಿಂದ ನಾನು ಪ್ರಭಾವಿತನಾದೆ. ಅವರ ‘ಲೀಡ್ ಇಂಡಿಯಾ 2020’ ಎಂಬ ವಿದ್ಯಾರ್ಥಿ ಅಭಿಯಾನಕ್ಕೆ ನಾನು ಸದಸ್ಯತನ ಪಡೆದೆ. ನನಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 90% ಅಂಕಗಳು ಬಂದವು. ವಿಜ್ಞಾನದಲ್ಲಿ ಪಿಯುಸಿ ಮಾಡಬೇಕೆಂದು ನನ್ನ ಆಸೆ. ಆದರೆ ನಾನು ಕುರುಡ ಎಂಬ ಕಾರಣಕ್ಕೆ ನನಗೆ ಯಾವುದೇ ಕಾಲೇಜಿನಲ್ಲಿ ವಿಜ್ಞಾನದ ಸೀಟ್ ಸಿಗಲಿಲ್ಲ.

ನನಗೆ ಅಬ್ದುಲ್ ಕಲಾಂ ಅವರ ಮಾತುಗಳು ನೆನಪಾದವು – ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದಲ್ಲ. ಅದು ಹಾರುವುದು ಭರವಸೆಗಳ ಬಲದಿಂದ!

ಸರಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ.

ನಾನು ಹೈದರಾಬಾದ್ ಸರಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆಯನ್ನು ಮಾಡಿದೆ. ಆರು ತಿಂಗಳ ನಂತರ ನನಗೆ ವಿಜ್ಞಾನದ ಸೀಟ್ ದೊರೆಯಿತು. ಸತತವಾಗಿ ಕಷ್ಟ ಪಟ್ಟೆ. ಬ್ರೈಲ್ ಲಿಪಿಯಲ್ಲಿ ಪರೀಕ್ಷೆಯನ್ನು ಬರೆದು ದ್ವಿತೀಯ ಪಿಯುಸಿಯಲ್ಲಿ ನನಗೆ 98% ಅಂಕಗಳು ಬಂದವು!

ಐಐಟಿ ಸಂಸ್ಥೆಗಳು ಬಾಗಿಲು ತೆರೆಯಲಿಲ್ಲ

ನನಗೆ ಐಐಟಿಯಲ್ಲಿ BE ಮಾಡುವ ಆಸೆ. ಆದರೆ ಭಾರತದ ಯಾವುದೇ ಐಐಟಿ ಕಾಲೇಜುಗಳು ನನಗೆ ಕುರುಡ ಎಂಬ ಕಾರಣಕ್ಕೆ ಎಂಟ್ರೆನ್ಸ್ ಪರೀಕ್ಷೆಗೂ ಅವಕಾಶ ನೀಡಲಿಲ್ಲ. ನಾನು ಕೈಚೆಲ್ಲಲಿಲ್ಲ. ಅಮೆರಿಕಾದ ನಾಲ್ಕು ಪ್ರಸಿದ್ಧವಾದ ಯೂನಿವರ್ಸಿಟಿಗಳ ಬಾಗಿಲು ಬಡಿದೆ. ಎಲ್ಲವೂ ಆಹ್ವಾನ ನೀಡಿದವು.

ನಾನು ಮಸ್ಸಾಚುಸೆಟ್ಸ್ ವಿವಿ ಆರಿಸಿಕೊಂಡೆ. ಅಮೆರಿಕಾದ ವಿವಿಯಲ್ಲಿ BE ಪ್ರವೇಶ ಪಡೆದ ಜಗತ್ತಿನ ಮೊದಲ ಕುರುಡ ವಿದ್ಯಾರ್ಥಿ ನಾನಾಗಿದ್ದೆ! ನನಗೆ ಇಷ್ಟವಾದ BE ಕೋರ್ಸನ್ನು ಮುಗಿಸಿದೆ. ಅಲ್ಲಿ ಈಜು ಮತ್ತು ಡೈವಿಂಗಲ್ಲಿ ವಿವಿ ದಾಖಲೆ ಕೂಡ ಮಾಡಿದ್ದೆ. ಅಮೆರಿಕಾದ ಕೆಲವು ಕಾರ್ಪೊರೇಟ್ ಕಂಪೆನಿಗಳು ನನಗೆ ಉದ್ಯೋಗ ನೀಡಲು ಮುಂದೆ ಬಂದವು.

ಆದರೆ ನನ್ನ ಕನಸುಗಳು ಭಾರತದಲ್ಲಿ ಇದ್ದವು!

2011ರಲ್ಲಿ ಭಾರತಕ್ಕೆ ಬಂದು ಮತ್ತೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದೆ. ಅವರ ಸಲಹೆಯಂತೆ ಬಹು ವಿಕಲತೆಯ ಮಕ್ಕಳಿಗಾಗಿ “ಸಮನ್ವೈ ಸೆಂಟರ್” ಎಂಬ ಸೇವಾ ಸಂಸ್ಥೆ ಆರಂಭಿಸಿದೆ. ಬ್ರೈಲ್ ಪ್ರಿಂಟಿಂಗ್ ಪ್ರೆಸ್ ತೆರೆದೆ. 3000 ಅಶಕ್ತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ನಿಂತೆ. ಅಷ್ಟಕ್ಕೇ ಸುಮ್ಮನಾಗಲಿಲ್ಲ.

ಆರಂಭ ಆಯಿತು ಅವರದ್ದೇ ಕಂಪೆನಿ

2011ರಲ್ಲಿ ‘ BOLLANT INDUSTRY’ ಎಂಬ ಸಣ್ಣ ಉದ್ಯಮವನ್ನು ಆರಂಭಿಸಿದೆ. ನಗರಪಾಲಿಕೆಯ ತ್ಯಾಜ್ಯ ವಸ್ತುಗಳಿಂದ ಮತ್ತು ಆಡಕೆಯಿಂದ ಕ್ರಾಫ್ಟ್ ಪೇಪರ್ ತಯಾರಿಸುವ ಕಂಪೆನಿ ಅದು. ಹಣ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ನನ್ನ ಕಂಪೆನಿಯಲ್ಲಿ ಕುರುಡರಿಗೆ ಮತ್ತು ವಿಕಲಚೇತನರಿಗೆ ಉದ್ಯೋಗ ನೀಡಿದೆ. ರತನ್ ಟಾಟಾ ಅವರು ನನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದರು. ನನ್ನ ಐಕಾನ್ ಎಪಿಜೆ ಅಬ್ದುಲ್ ಕಲಾಂ ಅವರು ಬಂದು ದೀಪ ಹಚ್ಚಿದರು. ಮುಂದೆ ಆ ಕಂಪೆನಿಯು ಪ್ರತೀ ತಿಂಗಳು 20% ಪ್ರಗತಿ ದಾಖಲಿಸುತ್ತಾ ಬಂದಿತು.

ದಿವ್ಯಾಂಗರಿಗೆ ಉದ್ಯೋಗ ನೀಡಿದರು

ಇಂದು ನನ್ನ ಕಂಪೆನಿಗೆ ನಾಲ್ಕು ರಾಜ್ಯಗಳಲ್ಲಿ 20 ಶಾಖೆಗಳು ಇವೆ. 100 ಕೋಟಿ ರೂಪಾಯಿ ವಾರ್ಷಿಕ ಟರ್ನ್ ಓವರ್ ಇದೆ! ನೂರಕ್ಕೆ ನೂರು ಸೌರಶಕ್ತಿ ಆಧಾರಿತವಾಗಿದೆ ಮತ್ತು ಪರಿಸರಸ್ನೇಹಿ ಆಗಿದೆ. ಅಶಕ್ತ ದಿವ್ಯಾಂಗರಿಗೆ ಸ್ವಾವಲಂಬಿ ಬದುಕಿನ ಅವಕಾಶವನ್ನು ನೀಡಿದ ಖುಷಿ ಇದೆ. ಭಾರತದ ಸಮಸ್ಯೆಗಳಾದ ಬಡತನ, ನಿರಕ್ಷರತೆ, ನಿರುದ್ಯೋಗಗಳ ನಿವಾರಣೆಗೆ ನಮ್ಮಿಂದಾದಷ್ಟು ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕು. ‘ಪಂಚೀ ಉಡತೀ ಹೈ ಪಂಖೋ ಕೀ ತಾಕತ್ ಸೆ ನಹೀಂ. ಹೌಸಲೆ ಸೇ!’ ಎಂಬ ಅಬ್ದುಲ್ ಕಲಾಂ ಅವರ ಮಾತಿನೊಂದಿಗೆ ಅವರು ತನ್ನ ಮಾತು ನಿಲ್ಲಿಸಿದರು. ಅವರ ಆಳವಾದ ಕಣ್ಣುಗಳಲ್ಲಿ ಗೆದ್ದ ಖುಷಿ ಇತ್ತು.

ಭರತ ವಾಕ್ಯ

ಅಂದ ಹಾಗೆ ಶ್ರೀಕಾಂತ್ ಅವರಿಗೆ ಫೋರ್ಬ್ಸ್ ಮಾಗಜ್ಹಿನ್ 2017ರಲ್ಲಿ ನಡೆಸಿದ ಏಷಿಯಾದ 30 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವನ್ನು ದೊರೆತಿದೆ. ‘NDTV ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ, ‘ಪ್ರೈಡ್ ಆಫ್ ತೆಲಂಗಾಣ’ ಪ್ರಶಸ್ತಿ, ‘ಟಿವಿ 9 ನವನಕ್ಷತ್ರ’ ಪ್ರಶಸ್ತಿ……. ಮೊದಲಾದ ನೂರಾರು ಪ್ರಶಸ್ತಿಗಳು ಅವರಿಗೆ ದೊರೆತಿವೆ. ಶ್ರೀಕಾಂತ್ ಬೊಳ್ಳ ಅವರ ಬದುಕು ಸಾವಿರಾರು ಯುವಕ ಯುವತಿಯರಿಗೆ ಸ್ಫೂರ್ತಿ ನೀಡಿದೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

Continue Reading

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಮೊಂಡು ಕೈಗಳಿಂದ ಜಗತ್ತನ್ನು ಗೆಲ್ಲಲು ಹೊರಟ ಹೋರಾಟಗಾರನ ಕಥೆ

ರಾಜಮಾರ್ಗ ಅಂಕಣ: ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ ನೀರಿಗೆ ಧುಮುಕಿದಾಗ ತನಗೆ ಕೈಗಳು ಇಲ್ಲ ಎಂಬುದನ್ನು ಮರೆಯುವ ಅವರು ಈಗಾಗಲೇ ಅಂತಾರಾಷ್ಟ್ರೀಯ ಪಾರಾ ಈಜು ಸ್ಪರ್ಧೆಯಲ್ಲಿ ಎಂಟು ಪದಕಗಳನ್ನು ಗೆದ್ದಿದ್ದಾರೆ. ಏಳು ಸಾಗರಗಳನ್ನು ಈಜಿ ಬಂದಿದ್ದಾರೆ ವಿಶ್ವಾಸ್.

VISTARANEWS.COM


on

vishwas ks rajamarga
Koo

ಪಾರಾ ಸ್ವಿಮ್ಮರ್ ವಿಶ್ವಾಸ್ ಕೆ.ಎಸ್ ಅವರ ಹೃದಯ ಗೆಲ್ಲುವ ಕಥನ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಯು ಟ್ಯೂಬ್ (Youtube) ವೇದಿಕೆಗಳಲ್ಲಿ ಈ ವಿಶ್ವಾಸ್ ಕೆ.ಎಸ್ (Vishwas KS) ಅವರ ಟೆಡ್ ಟಾಕ್ (Ted Talk) ಕೇಳುತ್ತಾ ಹೋದಂತೆ ಕಣ್ಣು ತುಂಬಿ ಬಂದು ಗಲ್ಲ ಒದ್ದೆಯಾದ ಅನುಭವ ನನಗಾಗಿದೆ. ಅವರ ಬದುಕೇ ಒಂದು ರೋಚಕವಾದ ಯಶೋಗಾಥೆ.

ಈ ವಿಶ್ವಾಸ್ ಬಿಕಾಂ ಪದವೀಧರ. ಎರಡೂ ಕೈಗಳು ಇಲ್ಲದ ಅನೇಕ ವ್ಯಕ್ತಿಗಳು ಭಿಕ್ಷೆಯನ್ನು ಬೇಡಿ ಬದುಕುತ್ತಿರುವ ಇಂದಿನ ದಿನಗಳಲ್ಲಿ ಕೋಲಾರದ ಕಾಳಹಸ್ತಿಪುರದ ಯುವಕ ವಿಶ್ವಾಸ್ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ಕ್ಷೇತ್ರ ಅಂದರೆ ಈಜು. ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ ನೀರಿಗೆ ಧುಮುಕಿದಾಗ ತನಗೆ ಕೈಗಳು ಇಲ್ಲ ಎಂಬುದನ್ನು ಮರೆಯುವ ಅವರು ಈಗಾಗಲೇ ಅಂತಾರಾಷ್ಟ್ರೀಯ ಪಾರಾ ಈಜು ಸ್ಪರ್ಧೆಯಲ್ಲಿ ಎಂಟು ಪದಕಗಳನ್ನು ಗೆದ್ದಿದ್ದಾರೆ. ಏಳು ಸಾಗರಗಳನ್ನು ಈಜಿ ಬಂದಿದ್ದಾರೆ.

ಅದೇ ರೀತಿ ಮಾರ್ಷಿಯಲ್ ಆರ್ಟಿನಲ್ಲಿ ರೆಡ್ ಬೆಲ್ಟ್ ಪಡೆದಿದ್ದಾರೆ. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋʼದಲ್ಲಿ ನೃತ್ಯ ಮಾಡಿದ್ದಾರೆ. ಕಾಲಿನಲ್ಲಿಯೇ ಅಡುಗೆ ಮಾಡುತ್ತಾರೆ. ಕಾಲಿನ ಬೆರಳುಗಳ ನಡುವೆ ಪೆನ್ನು ಹಿಡಿದು ಬರೆಯುತ್ತಾರೆ. ಮೊಬೈಲ್ ಆಪರೇಟ್ ಮಾಡುತ್ತಾರೆ. ಬಟ್ಟೆ ಒಗೆಯುತ್ತಾರೆ. ತನ್ನ ಕೆಲಸವನ್ನು ತಾನೇ ಮಾಡುತ್ತಾರೆ. ವೇದಿಕೆಯಲ್ಲಿ ನಿಂತು ಮೋಟಿವೇಶನ್ ಮಾತು ಆಡುತ್ತಾರೆ. ಅವರಿಗೆ ತನಗೆ ಕೈಗಳು ಇಲ್ಲ ಅನ್ನುವುದು ಮರೆತೇ ಹೋಗಿದೆ ಎಂದು ನನ್ನ ಭಾವನೆ.

ಸಣ್ಣ ಪ್ರಾಯದಲ್ಲಿ ದುರಂತ

ನಾಲ್ಕನೇ ತರಗತಿಯಲ್ಲಿ ಆದ ದುರಂತ ಅದು. ವಿಶ್ವಾಸ್ ನಾಲ್ಕನೇ ತರಗತಿಯಲ್ಲಿ ಇರುವಾಗ ಕಾಂಕ್ರೀಟ್ ಆಗ್ತಾ ಇದ್ದ ಒಂದು ಕಟ್ಟಡವನ್ನು ಹತ್ತುತ್ತಿದ್ದಾಗ ಕಾಲು ಜಾರಿ ಬೀಳುತ್ತಾರೆ. ಆಗ ಹೈ ಟೆನ್ಶನ್ ಕೇಬಲ್ ಹಿಡಿದು ನೇತಾಡುವ ಪ್ರಸಂಗ ಬರುತ್ತದೆ. ಆಗ ಅವರನ್ನು ಬಿಡಿಸುವ ಪ್ರಯತ್ನ ಮಾಡಿದ ಅವರ ಅಪ್ಪ ವಿದ್ಯುತ್ ಆಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಹುಡುಗನು ಎರಡೂ ಕೈ ಸುಟ್ಟು ಹೋಗಿ ಈ ಸ್ಥಿತಿಗೆ ಬರುತ್ತಾರೆ.

ಆಸ್ಪತ್ರೆಯಲ್ಲಿ ಹಲವಾರು ತಿಂಗಳು ನೋವು ಪಟ್ಟು ಮಲಗಿ ಹೊರಬರುವಾಗ ಆತನ ಕೈಗೆ ಪ್ಲಾಸ್ಟಿಕ್ ಕೈ ಜೋಡಿಸಿರುತ್ತಾರೆ. ಅದು ಕೈಗಳ ಫೀಲ್ ಕೊಡದೆ ಹೋದಾಗ ಮತ್ತು ಯಾವ ಕೆಲಸಕ್ಕೂ ಬೇರೆಯವರನ್ನು ಅವಲಂಬನೆ ಮಾಡುವ ಪ್ರಸಂಗ ಬಂದಾಗ ಅದನ್ನು ಕಿತ್ತು ಬಿಸಾಡಿ ಮೊಂಡು ಕೈ ಹಿಡಿದೇ ಇಲ್ಲಿಯವರೆಗೆ ಬಂದಿದ್ದಾರೆ.

ಹಲವು ಕಡೆಯಲ್ಲಿ ಉದ್ಯೋಗ ಪ್ರಯತ್ನ ಪಟ್ಟು ಸೋತಾಗ ಡಿಪ್ರೆಸ್ ಆದದ್ದೂ ಇದೆ. ಹೊಟ್ಟೆಪಾಡಿಗಾಗಿ ಹಲವು ವೃತ್ತಿಗಳನ್ನು ಮಾಡಲು ಪ್ರಯತ್ನ ಪಟ್ಟು ಸೋತದ್ದು ಇದೆ. ಆದರೆ ಅವರ ಅದ್ಭುತವಾದ ಇಚ್ಛಾಶಕ್ತಿ ಅವರನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಈ ಹೋರಾಟದ ಪ್ರತೀ ಹಂತದಲ್ಲೂ ಅವರ ಅಮ್ಮ ಅವರ ಜೊತೆಗೆ ನಿಂತಿದ್ದಾರೆ. ಇತ್ತೀಚೆಗೆ ಒಬ್ಬರು ಶಿಕ್ಷಕಿ, ಲಕ್ಷ್ಮಿ ಎಂದು ಅವರ ಹೆಸರು, ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಆ ದಂಪತಿಗೆ ಒಬ್ಬ ಮಗನೂ ಇದ್ದಾನೆ. ಪತ್ನಿ ಲಕ್ಷ್ಮಿ ಈಗ ವಿಶ್ವಾಸ್ ಅವರ ಸಾಧನೆಗಳಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.

ಬದುಕಿನ ಕಥೆ ಸಿನೆಮಾ ಆಯಿತು.

ವಿಶ್ವಾಸ್ ಅವರ ಬದುಕಿನ ಕಥೆಯು ʻಅರಬ್ಬೀ’ ಎಂಬ ಸಿನೆಮಾ ಆಗಿ ಜನಪ್ರಿಯ ಆಗಿದೆ. ಮುಂದಿನ ಪಾರಾ ಒಲಿಂಪಿಕ್ಸನಲ್ಲಿ ಭಾಗವಹಿಸಬೇಕು ಎನ್ನುವ ಹಠದಲ್ಲಿ ವಿಶ್ವಾಸ್ ಬೆಂಗಳೂರಿನ ಬಸವನಗುಡಿಯ ಈಜುಕೊಳದಲ್ಲಿ ದಿನಕ್ಕೆ ಹಲವಾರು ಗಂಟೆ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಒಬ್ಬ ಒಳ್ಳೆಯ ಕೋಚ್ ಅವರ ನೆರವಿಗೆ ನಿಂತಿದ್ದಾರೆ.

ವಿಶ್ವಾಸದ ಕಡಲಲ್ಲಿ ಈಜುತ್ತಿರುವ ಈ ವಿಶ್ವಾಸ್ ಅವರಿಗೆ ನಿಮ್ಮ ಒಂದು ಶಾಭಾಷ್ ಹೇಳಿ ಮುಂದೆ ಹೋಗೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತೀಯ ಸೇನೆಯ ಬಗ್ಗೆ ಎದೆ ಉಬ್ಬಿಸಿ ನಡೆಯಲು ಇನ್ನೊಂದು ಕಾರಣ

Continue Reading

ಸ್ಫೂರ್ತಿ ಕತೆ

Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

Raja marga Column : ಆ ಹೆಣ್ಮಗಳಿಗೆ ಕಣ್ಣೇ ಕಾಣಿಸುವುದಿಲ್ಲ. ಆದರೆ, ಛಲದಿಂದ ಆಕೆ ಒಳಗಿನ ಕಣ್ಣಿಂದ ಓದಿಗಳು. ಒಂದಲ್ಲ ಎರಡು ಬಾರಿ ಯುಪಿಎಸ್ಸಿ ಪಾಸ್‌ ಮಾಡಿದಳು. ಈಗ ಆಕೆ ಜಿಲ್ಲಾಧಿಕಾರಿ.

VISTARANEWS.COM


on

Raja Marga Column Pranjal pateel
Koo
RAJAMARGA

Raja Marga Column : ಭಾರತದ ಅತ್ಯಂತ ಕ್ಲಿಷ್ಟವಾದ ಪರೀಕ್ಷೆ ಅಂದರೆ ಐಎಎಸ್. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ UPSC ನಡೆಸುವ ಈ ಪರೀಕ್ಷೆಯಲ್ಲಿ‌ (UPSC Exam) ಪ್ರತೀ ವರ್ಷ 7ರಿಂದ 8 ಲಕ್ಷ ಯುವಕ – ಯುವತಿಯರು ತಮ್ಮ ಪ್ರತಿಭೆಯನ್ನು ನಿಕಷಕ್ಕೆ ಒಡ್ಡುತ್ತಿದ್ದು ತೇರ್ಗಡೆ ಆಗುವವರ ಪ್ರಮಾಣ 2-3% ಮಾತ್ರ! ಅಂತಹ ಪರೀಕ್ಷೆಯಲ್ಲಿ ಪೂರ್ಣ ಕುರುಡುತನ ಇರುವ ಪ್ರಾಂಜಲ್‌ ಪಾಟೀಲ್‌ (Pranjal Patil) ಎಂಬ ಹುಡುಗಿಯೊಬ್ಬಳು ಎರಡು ಬಾರಿ ತೇರ್ಗಡೆಯಾದರು (IAS officer) ಅಂದರೆ ನಂಬೋದು ಹೇಗೆ? ಇಲ್ಲಿದೆ ಅವರ ಕತೆ,

Raja Marga Column: ಆಕೆ ಮಹಾರಾಷ್ಟ್ರದವರು

ಪ್ರಾಂಜಲ್‌ ಪಾಟೀಲ್ ಮಹಾರಾಷ್ಟ್ರದ ಉಲ್ಲಾಸ ನಗರದವರು. ಹುಟ್ಟುವಾಗ ಆಕೆಗೆ ಮಸುಕು ಮಸುಕಾಗಿ ಕಾಣುತ್ತಿತ್ತು. ಆರು ವರ್ಷ ಪ್ರಾಯ ಆದಾಗ ಪೂರ್ತಿಯಾಗಿ ಕುರುಡುತನ ಆವರಿಸಿತ್ತು. ಸಣ್ಣ ಪ್ರಾಯದಲ್ಲಿಯೇ ಆಕೆಯ ದೊಡ್ಡ ಕನಸುಗಳಿಗೆ ಕೊಳ್ಳಿ ಇಟ್ಟ ಅನುಭವ ಆಗಿತ್ತು. ಆದರೆ ಮನೆಯವರು ಮತ್ತು ಹೆತ್ತವರು ಆಕೆಯ ಮನೋಸ್ಥೈರ್ಯವನ್ನು ಕುಸಿಯಲು ಬಿಡಲಿಲ್ಲ.

ಆಕೆ ಮಹಾ ಪ್ರತಿಭಾವಂತೆ. ದಾದರ್ ನಗರದ ಕಮಲ ಮೆಹ್ತಾ ಕುರುಡು ಮಕ್ಕಳ ಶಾಲೆಗೆ ಸೇರಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಾರೆ. ಬ್ರೈಲ್ ಲಿಪಿಯಲ್ಲಿ ಓದಲು ಮತ್ತು ಬರೆಯಲು ಕಲಿಯುತ್ತಾರೆ. ಮುಂದೆ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ರಾಜನೀತಿ ಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ.

Raja Marga Column Pranjal Pateel
ತಂದೆ ಮತ್ತು ತಾಯಿ ಜತೆ ಪ್ರಾಂಜಲ್‌ ಪಾಟೀಲ್‌

ಆಗ ಏನೂ ಕಾಣದಿದ್ದರೂ ಉಲ್ಲಾಸ ನಗರದ ಮನೆಯಿಂದ ಹೊರಟು ಒಬ್ಬಳೇ ಛತ್ರಪತಿ ಶಿವಾಜಿ ಟರ್ಮಿನಲ್ ನವರೆಗೆ ಹೋಗಿ ಹಿಂದೆ ಬರುತ್ತಿದ್ದರು. ಮುಂಬೈ ನಗರದ ಜನರು ತನ್ನ ಬಗ್ಗೆ ತುಂಬಾನೇ ಅನುಕಂಪವನ್ನು ಹೊಂದಿದ್ದರು ಅನ್ನುತ್ತಾರೆ ಆಕೆ.

Raja Marga Column: ಆಕೆಯ ಕನಸುಗಳಿಗೆ ಆಕಾಶವೂ ಮಿತಿ ಅಲ್ಲ!

ಮುಂದೆ ಪ್ರಾಂಜಲ್ ಹೊರಟದ್ದು ದೆಹಲಿಗೆ. ಜವಾಹರಲಾಲ್ ನೆಹರು ವಿವಿಯ ಮೂಲಕ ಆಕೆ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ಪಡೆಯುತ್ತಾರೆ. ಅದೇ ಹೊತ್ತಿಗೆ ವಿದುಷಿ ಎಂಬ ಗೆಳತಿಯ ಮಾತಿನಿಂದ ಆಕೆ ಪ್ರಭಾವಿತರಾಗುತ್ತಾರೆ. ಐಎಎಸ್ ಪರೀಕ್ಷೆಗೆ ಗಂಭೀರವಾದ ಸಿದ್ಧತೆ ನಡೆಸುವಂತೆ ವಿದುಷಿ ಆಕೆಗೆ ಸಲಹೆ ಕೊಡುತ್ತಾರೆ.

Raja Marga Column Pranjal Pateel

ಆಗ ಆಕೆಗೆ JAWS (Job Access With Speech) ಎಂಬ ಸಾಫ್ಟವೇರ್ ನೆರವಿಗೆ ಬರುತ್ತದೆ. ಅದು ಯಾವುದೇ ಪುಸ್ತಕವನ್ನು ಗಟ್ಟಿಯಾಗಿ ಓದಿ ಹೇಳುವ ಸಾಫ್ಟ್‌ವೇರ್. ತನ್ನ ಆಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಕೆ ದಿನಕ್ಕೆ 10-12 ಗಂಟೆ ಪುಸ್ತಕಗಳನ್ನು ಓದುತ್ತಾರೆ. ವಿಡಿಯೋ ಪಾಠಗಳನ್ನು ಕೇಳುತ್ತಾರೆ. ತನ್ನ ಗೆಳತಿಯ ನೆರವನ್ನು ಪಡೆಯುತ್ತಾರೆ.

ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಿಸುತ್ತದೆ

2016ರಲ್ಲೀ ಅವರು ಭಾರತೀಯ ರೈಲ್ವೇ ಸೇವೆಗೆ ಅರ್ಜಿ ಹಾಕುತ್ತಾರೆ. ಆದರೆ ಆಕೆ ಕುರುಡಿ ಎಂಬ ಕಾರಣಕ್ಕೆ ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಣೆ ಮಾಡುತ್ತದೆ. ಆಗ ಸಿಟ್ಟಿಗೆದ್ದ ಆಕೆ ಪ್ರಧಾನಿ ನರೇಂದ್ರ ಮೋದಿಗೆ ಮತ್ತು ರೈಲ್ವೇ ಮಂತ್ರಿ ಸುರೇಶ್ ಪ್ರಭು ಅವರಿಗೆ ನೇರವಾಗಿ ಪತ್ರ ಬರೆಯುತ್ತಾರೆ. ಆಗ ಸುರೇಶ್ ಪ್ರಭು ಅವರು ಆಕೆಯನ್ನು ಸಂಪರ್ಕ ಮಾಡಿ ನಿಮ್ಮ ವಿದ್ಯೆಗೆ ತಕ್ಕದಾದ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ ಆಗಲೇ ಐಎಎಸ್ ಪರೀಕ್ಷೆಯ ತಯಾರಿಯಲ್ಲಿ ಮುಳುಗಿದ್ದ ಪ್ರಾಂಜಲ್ ಆ ಪ್ರಸ್ತಾಪವನ್ನು ಸ್ವೀಕಾರ ಮಾಡುವುದಿಲ್ಲ.

Raja Marga Column Pranjal Pateel
ಸೀರೆ ಉಟ್ಟಾಗ ಹೀಗಿದ್ದಾರೆ ನೋಡಿ ಪ್ರಾಂಜಲ್‌ ಪಾಟೀಲ್

ಆಕೆ ಎರಡು ಬಾರಿ ಐಎಎಸ್ ಪರೀಕ್ಷೆ ತೇರ್ಗಡೆ ಆದರು!

ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾದರು! ಅದೂ ಯಾವ ಕೋಚಿಂಗ್ ಇಲ್ಲದೆ! ಆದರೆ ಆಲ್ ಇಂಡಿಯಾ ರ‍್ಯಾಂಕಿಂಗ್ 744 ಬಂದಿತ್ತು. ಅದು ಅವರಿಗೆ ತೃಪ್ತಿ ತರಲಿಲ್ಲ. ಯಾವುದೋ ಒಂದು ಅಜ್ಞಾತ ಇಲಾಖೆಯಲ್ಲಿ ಸಾಮಾನ್ಯ ಅಧಿಕಾರಿಯಾಗಿ ಕೆಲಸ ಮಾಡಲು ಆಕೆ ರೆಡಿ ಇರಲಿಲ್ಲ. ಅದಕ್ಕೋಸ್ಕರ ಎರಡನೇ ಬಾರಿಗೆ ಅಷ್ಟೇ ಪ್ರಯತ್ನ ಮಾಡಿ 2017ರಲ್ಲಿ ಮತ್ತೆ ಐಎಎಸ್ ಪರೀಕ್ಷೆ ಬರೆದರು. ಈ ಬಾರಿ ಕೂಡ ತೇರ್ಗಡೆ ಆದರು. ಈ ಬಾರಿ ರ‍್ಯಾಂಕಿಂಗ್ 124 ಬಂದಿತ್ತು!

Visually impaired IAS officer Pranjal pateel

ಅವರ ಕನಸಿನ ರೆಕ್ಕೆಗೆ ಸಾವಿರ ಗರಿಗಳು!

ಭಾರತದ ಮೊಟ್ಟ ಮೊದಲ ದೃಷ್ಟಿ ವಿಕಲತೆಯ ಸಾಧಕಿಯಾಗಿ ಆಕೆ ಐಎಎಸ್ ಪರೀಕ್ಷೆ ತೇರ್ಗಡೆ ಆಗಿದ್ದರು! ಲಿಖಿತ ಪರೀಕ್ಷೆಯಲ್ಲಿ ಆಕೆ ಪಡೆದ ಅಂಕಗಳು 854! ಹಾಗೂ ಸಂದರ್ಶನದಲ್ಲಿ ಆಕೆ ಪಡೆದ ಅಂಕಗಳು 179! ಒಟ್ಟು 1033 ಅನ್ನುವುದು ಕೂಡ ನಿಜವಾದ ಕ್ರೆಡಿಟ್. ತರಬೇತಿಯನ್ನು ಮುಗಿಸಿ ಮೇ 28, 2018ರಂದು ಅವರು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಸಿಸ್ಟಂಟ್ ಕಲೆಕ್ಟರ್ ಆಗಿ ನೇಮಕ ಪಡೆಯುತ್ತಾರೆ. ಮುಂದೆ ಅಕ್ಟೋಬರ್ 14, 2019ರಂದು ಸಬ್ ಕಲೆಕ್ಟರ್ ಆಗಿ ತಿರುವನಂತಪುರಂ ಜಿಲ್ಲೆಗೆ ನೇಮಕ ಪಡೆಯುತ್ತಾರೆ!

Pranjal pateel with Komal sing pateel
ಕೋಮಲ್‌ ಸಿಂಗ್‌ ಪಾಟೀಲ್‌ ಜತೆ ಮದುವೆಯಾದ ಕ್ಷಣ

ಯಾರ ಸಹಾಯ ಇಲ್ಲದೆ ತನ್ನ ಕೆಲಸಗಳನ್ನು ತಾನೇ ಮಾಡುವ, ಅದ್ಭುತವಾದ ಮೆಮೊರಿ ಪವರ್ ಹೊಂದಿರುವ, ಸಮಾಜ ಸೇವೆಯ ತೀವ್ರವಾದ ತುಡಿತ ಹೊಂದಿರುವ, ಬೆಟ್ಟವನ್ನು ಕರಗಿಸುವ ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಹೊಂದಿರುವ ಪ್ರಾಂಜಲ್ ಪಾಟೀಲ್ ಮತ್ತು ಆಕೆಯ ಗಂಡ ಕೋಮಲ್ ಸಿಂಗ್ ಪಾಟೀಲ್ ಅವರು ಇತ್ತೀಚೆಗೆ ತಮ್ಮ ಅಂಗದಾನಕ್ಕೆ ಜೊತೆಯಾಗಿ ಸಹಿ ಹಾಕಿ ಸುದ್ದಿ ಆಗಿದ್ದಾರೆ.

ಆಕೆಯ ಒಂದು ಮಾತು ನನಗೆ ಭಾರೀ ಕನೆಕ್ಟ್ ಆಗಿದ್ದು ಅದನ್ನು ಇಲ್ಲಿ ಉಲ್ಲೇಖ ಮಾಡುತ್ತೇನೆ.

SUCCESS doesn’t give us INSPIRATION. But the STRUGGLE behind the SUCCESS gives us the INSPIRATION. ಹೌದು ತಾನೇ?

ಇದನ್ನೂ ಓದಿ : Raja Marga Column : ಈ ಶಾರ್ಪ್‌ ಶೂಟರ್‌ ಅಜ್ಜಿ ಮೊದಲ ಬಾರಿ ಗನ್‌ ಹಿಡಿದದ್ದು 67ನೇ ವಯಸ್ಸಲ್ಲಿ!

Continue Reading

ಅಂಕಣ

Raja Marga Column : ಈ ಶಾರ್ಪ್‌ ಶೂಟರ್‌ ಅಜ್ಜಿ ಮೊದಲ ಬಾರಿ ಗನ್‌ ಹಿಡಿದದ್ದು 67ನೇ ವಯಸ್ಸಲ್ಲಿ!

Raja Marga Column : ಅವರೊಬ್ಬರು ಶೂಟರ್‌ ಅಜ್ಜಿ. ವಿಶ್ವದ ಮಟ್ಟದ ಸ್ಪರ್ಧೆಯಲ್ಲಿ ಮಿಂಚಿದವರು. ಅವರು ಶಾರ್ಪ್‌ ಶೂಟಿಂಗ್‌ಗಾಗಿ ಗನ್‌ ಕೈಯಲ್ಲಿ ಹಿಡಿದಾಗ ವಯಸ್ಸು 67.

VISTARANEWS.COM


on

Raja Marga Column Chandro Tomar Sharp Shooter
Koo
RAJAMARGA

Raja Marga Column : ಉತ್ತರ ಪ್ರದೇಶದ ಭಾಗಪಥ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯು ಜೋಹ್ಹರಿ. ಅಲ್ಲಿಯ ಒಬ್ಬರು ಅಜ್ಜಿ ಶೂಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಹೆಸರು ಮಾಡಿದ್ದರು. ಆಕೆ ಬದುಕಿದ್ದಾಗ ಜಗತ್ತಿನ ಅತ್ಯಂತ ಹಿರಿಯ ಶಾರ್ಪ್‌ ಶೂಟರ್ (Worlds oldest Sharp Shooter) ತಪ್ಪಿದ್ದೆ ಇಲ್ಲ ಅನ್ನೋದು ಅವರ ಹಿರಿಮೆ! ವಯಸ್ಸು ಆಕೆಯ ಮಟ್ಟಿಗೆ ಬರೇ ಒಂದು ನಂಬರ್ ಆಗಿ ಬಿಟ್ಟಿದೆ! ಅವರ ಹೆಸರು ಚಂದ್ರಾ ತೋಮರ್‌ (Chandro tomar) ಜನ ಅವರನ್ನು ಪ್ರೀತಿಯಿಂದ ‘ಶೂಟರ್ ಅಜ್ಜಿ’ (Shooter Ajji) ಎಂದು ಕರೆಯುತ್ತಾರೆ! ಏಕೆಂದರೆ ಎಂಬತ್ತರ ಹರೆಯದಲ್ಲಿ ಕೂಡ ಅವರು ಚಾಂಪಿಯನ್‌ಷಿಪ್ ಸೋತವರಲ್ಲ!

ಆಕೆ ತುಂಬಿದ ಮನೆಯ ಅಜ್ಜಿ!

ಆಕೆ ಹಳ್ಳಿಯ ಹೆಂಗಸು. ಶಾಲೆಗೆ ಹೋದವರಲ್ಲ. ತುಂಬಿದ ಮನೆಗೆ ಸೊಸೆಯಾಗಿ ಬಂದವರು. ಪ್ರೀತಿಸುವ ಗಂಡ, 5 ಮಕ್ಕಳು, 12 ಮೊಮ್ಮಕ್ಕಳು ಇರುವ ಸಂಸಾರದಲ್ಲಿ ಅವರು ಮುಳುಗಿ ಬಿಟ್ಟಿದ್ದರು. ಮನೆ ವಾರ್ತೆ, ಮನೆಯವರ ಕ್ಷೇಮ, ಅಡುಗೆ ಮಾಡುವುದು, ದನಗಳ ಚಾಕರಿ ಇಷ್ಟೆ ಗೊತ್ತು ಅವರಿಗೆ. ಶೂಟಿಂಗ್ ಬಗ್ಗೆ ಯೋಚನೆಯನ್ನು ಕೂಡ ಮಾಡಿದವರಲ್ಲ.

Raja Marga Column Chandro Tomar Sharp Shooter1

ಅವರ ಬದುಕಿನಲ್ಲಿ ತಿರುವು ಬಂದಾಗ ವಯಸ್ಸು 67!

ಅವರ ಹಳ್ಳಿಯಲ್ಲಿ ಒಂದು ಶಾರ್ಪ್ ಶೂಟರ್ ಕ್ಲಬ್ ಇತ್ತು. ಅದಕ್ಕೆ ಅವರ ಮೊಮ್ಮಗಳು ಶಿಫಾಲಿ ಆಸಕ್ತಿಯಿಂದ ಹೋಗಿ ಸೇರಿದ್ದರು. ಅಲ್ಲಿ ಹುಡುಗರೇ ಹೆಚ್ಚು ಬರುತ್ತಿದ್ದ ಕಾರಣ ಮೊಮ್ಮಗಳಿಗೆ ಜೊತೆಯಾಗಿ ಅಜ್ಜಿ ಹೋಗುತ್ತಿದ್ದರು. ದೂರದಲ್ಲಿ ನಿಂತು ಶೂಟಿಂಗ್ ನೋಡುವುದು ಮಾತ್ರ ಅಜ್ಜಿಯ ಕೆಲಸ. ಒಂದು ದಿನ ಮೊಮ್ಮಗಳು ಗನ್ ಲೋಡ್ ಆಗದೆ ಕಷ್ಟ ಪಡುತ್ತಿದ್ದಳು. ಹತ್ತಿರ ಬಂದ ಅಜ್ಜಿ ಯಾವುದೋ ಒಂದು ಮಾಯೆಯಿಂದ ಗನ್ ಲೋಡ್ ಮಾಡಿದ್ದು ಮಾತ್ರವಲ್ಲ ಬುಲ್ ಐಗೆ ಗುರಿಯಿಟ್ಟು ಶೂಟ್ ಮಾಡಿಬಿಟ್ಟರು. ಅದು ಪರ್ಫೆಕ್ಟ್ ಶೂಟ್ ಆಗಿತ್ತು! ಆ ಕ್ಲಬ್ಬಿನ ಕೋಚ್ ಫಾರೂಕ್ ಪಠಾಣ್ ಮತ್ತು ಎಲ್ಲಾ ಹುಡುಗರು ಬಿಟ್ಟ ಕಣ್ಣು ಬಿಟ್ಟು ಬೆರಗಾಗಿ ನಿಂತರು! ಅದು ಅಜ್ಜಿಯ ಜೀವನದ ಮೊದಲ ಶೂಟ್ ಆಗಿತ್ತು ಮತ್ತು ಆಗ ಅವರ ವಯಸ್ಸು ಕೇವಲ 67 ಆಗಿತ್ತು!

ಶೂಟ್ ಮಾಡಲು ಸ್ಪಷ್ಟವಾದ ದೃಷ್ಟಿ ಮತ್ತು ಕೈಗಳ ನಿಯಂತ್ರಣಗಳು ಇರಬೇಕು. ಅದು ಆ ವಯಸ್ಸಲ್ಲಿ ಅಜ್ಜಿಗೆ ಹೇಗೆ ಸಾಧ್ಯವಾಯಿತು? ನನಗಂತೂ ಅರ್ಥವಾಗದ ಪ್ರಶ್ನೆ!

Raja Marga Column : ಅಜ್ಜಿ ಮತ್ತು ಮೊಮ್ಮಗಳ ಶೂಟಿಂಗ್ ತರಬೇತಿ!

ಮುಂದೆ ಅಜ್ಜಿ ಮೊಮ್ಮಗಳ ಜೊತೆಗೆ ಶೂಟರ್ ಕ್ಲಬ್ಬಿಗೆ ಸೇರಿದರು. 1200 ಡಾಲರ್ ಬೆಲೆಯ ಪಿಸ್ತೂಲನ್ನು ಹಠ ಹಿಡಿದು ತರಿಸಿಕೊಂಡರು. ಮನೆಯ ಅಂಗಳದಲ್ಲಿ ಪ್ರೈವೇಟ್ ಶೂಟರ್ ರೇಂಜ್ ಸಿದ್ಧವಾಯಿತು. ಅಜ್ಜಿಯ ಉತ್ಸಾಹ ದಿನದಿಂದ ದಿನಕ್ಕೆ ಅಧಿಕವಾಯಿತು. ಮನೆಕೆಲಸ ಮುಗಿಸಿಕೊಂಡು ಮಧ್ಯಾಹ್ನ ಅಜ್ಜಿ ಗನ್ ಹಿಡಿದು ತರಬೇತಿಗೆ ಇಳಿದರೆ ಜಗತ್ತನ್ನೇ ಮರೆತು ಬಿಡುತ್ತಿದ್ದರು. ಮನೆಯ ಎಲ್ಲರ ಪೂರ್ಣ ಬೆಂಬಲವು ಅವರಿಗೆ ದೊರೆಯಿತು ಮತ್ತು ಸಾಧನೆಗಳ ಮೆರವಣಿಗೆಯು ಆಗಲೇ ಶುರುವಾಗಿ ಬಿಟ್ಟಿತು!
1999ರಿಂದ ನಿರಂತರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದಿರುವ ಅಜ್ಜಿಗೆ ಈವರೆಗೆ 30 ರಾಷ್ಟ್ರಮಟ್ಟದ ಸ್ವರ್ಣ ಪದಕಗಳು ದೊರೆತಿವೆ!

Raja Marga Column Chandro Tomar Sharp Shooter1Raja Marga Column Chandro Tomar Sharp Shooter1

ಅಜ್ಜಿ ಜಗತ್ತಿನ ಅತ್ಯಂತ ಹಿರಿಯ ಶೂಟರ್ ಆದರು!

2010ರಲ್ಲಿ ವಿಶ್ವ ಹಿರಿಯರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ರೈಫಲ್ ಮತ್ತು ಪಿಸ್ತೂಲ್ ಎರಡೂ ವಿಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದಿರುವ ಅಜ್ಜಿ ಮುಂದೆ ಜಗತ್ತಿನ ಅತ್ಯಂತ ಹಿರಿಯ ಶೂಟರ್ ಆದರು. ಅವರು ಗೆದ್ದಿರುವ ಒಟ್ಟು 146 ಶೂಟಿಂಗ್ ಪದಕಗಳು ಅವರ ಶೋಕೇಸಲ್ಲಿ ಇವೆ! ಅದರಲ್ಲಿ ರಾಷ್ಟ್ರಮಟ್ಟದ ಪದಕಗಳು ಮೂವತ್ತಕ್ಕೂ ಹೆಚ್ಚು! 88ರ ಹರೆಯದಲ್ಲಿ ಕೂಡ ರಾಷ್ಟ್ರ ಮತ್ತು ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದಿರುವ ಆಕೆ ಪದಕದ ಮೇಲೆ ಪದಕಗಳನ್ನು ಗೆದ್ದಿದ್ದಾರೆ. ಮುಂದೆ ಅದೇ ಜೋಹರಿ ಶೂಟಿಂಗ್ ಕ್ಲಬ್ಬಿನ ಮುಖ್ಯ ಕೋಚ್ ಆಗಿ ಅಜ್ಜಿ ದೀರ್ಘಕಾಲ ದುಡಿದರು.

Raja Marga Column Chanra tomar with Tapsi Pannu
ತಾಪ್ಸಿ ಪನ್ನು ಜತೆ ಚಂದ್ರಾ ತೋಮರ್‌

ಇಡೀ ಕುಟುಂಬವೇ ಶೂಟರ್ ಕುಟುಂಬ ಆಯಿತು!

ಅವರಿಂದ ಸ್ಫೂರ್ತಿ ಪಡೆದು ಅವರ ಸೊಸೆ ಸೀಮಾ ತೋಮರ್, ಮೊಮ್ಮಗಳು ಶಿಫಾಲಿ ಇಬ್ಬರು ಕೂಡ ವಿಶ್ವ ಮಟ್ಟದ ಶೂಟರ್ ಆಗಿ ಬೆಳೆದಿದ್ದಾರೆ. ಅವರ ತಂಗಿ ಪ್ರಕಾಶಿ ತೋಮರ್ ಕೂಡ ಇಂದು ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆಲ್ಲುತ್ತಿದ್ದಾರೆ. ಅಜ್ಜಿಯ ಸ್ಫೂರ್ತಿಯಿಂದ ಮುಂದೆ ಇಡೀ ತೋಮರ್ ಕುಟುಂಬ ಶೂಟರ್ ಕುಟುಂಬವೇ ಆಗಿಬಿಟ್ಟಿದೆ! ನಾನು ಸಾಯುವ ತನಕ ಶೂಟಿಂಗ್ ಬಿಡುವುದಿಲ್ಲ ಎಂದು ಅಜ್ಜಿ ಗನ್ನು ಹಿಡಿದು ನುಡಿದರೆ ಅವರ ಕಂಗಳಲ್ಲಿ ಗೆದ್ದ ನಗು ಕಾಣುತ್ತಿತ್ತು!

ಇದನ್ನೂ ಓದಿ : Raja Marga Column : ಲಸಿಕೆ ಪ್ರಯೋಗಕ್ಕಾಗಿ ಮಗನ ಪ್ರಾಣವನ್ನೇ ಒತ್ತೆ ಇಟ್ಟ ಎಡ್ವರ್ಡ್‌ ಜೆನ್ನರ್‌!

ಅಜ್ಜಿಯ ಸಾಧನೆ ಜನಪ್ರಿಯ ಸಿನೆಮಾ ಆಯಿತು!

ಅಂದ ಹಾಗೆ ಅಜ್ಜಿಯ ಬದುಕು ಮತ್ತು ಸಾಧನೆಯಿಂದ ಸ್ಫೂರ್ತಿ ಪಡೆದು ಹಿಂದಿಯಲ್ಲಿ ‘ಸಾಂಡ ಕಿ ಆಂಖ್ ‘ಎಂಬ ಸಿನಿಮಾ(2019) ಕೂಡ ಬಂದಿದ್ದು ಅದರಲ್ಲಿ ಪ್ರಖ್ಯಾತ ನಟಿಯರಾದ ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ಅವರು ಪ್ರಮುಖವಾದ ಪಾತ್ರಗಳನ್ನು ಮಾಡಿದ್ದರು.

ಅಂತಹ ಅಜ್ಜಿ ಚಂದ್ರೋ ತೋಮರ್ 2021ನೆಯ ಇಸವಿಯಲ್ಲಿ ತನ್ನ 89ನೇ ವಯಸ್ಸಿಗೆ ನಿಧನರಾದರು. ಅತ್ಯಂತ ಬಡ ಕುಟುಂಬದಿಂದ ಬಂದ, ಶಾಲೆಗೆ ಹೋಗದೆ ಈ ಸಾಧನೆ ಮಾಡಿದ ಶೂಟರ್ ದಾದಿ ನಿಜಕ್ಕೂ ಗ್ರೇಟ್ ಅಲ್ವಾ?

Raja Marga Column Chandra tomar
#image_title
Continue Reading
Advertisement
Shane Watson Apologize
ಕ್ರಿಕೆಟ್3 mins ago

Shane Watson Apologize: ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಶೇನ್​ ವಾಟ್ಸನ್

Viral Video
ವೈರಲ್ ನ್ಯೂಸ್4 mins ago

Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

DK Shivakumar speaks about KPCC president post
ಬೆಂಗಳೂರು7 mins ago

‌DK Shivakumar: ಕೆಪಿಸಿಸಿ ಅಧ್ಯಕ್ಷನಾಗಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ; ಡಿಕೆಶಿ ಹೀಗೆ ಹೇಳಿದ್ಯಾಕೆ?

Chitta Ranjan Dash
ದೇಶ35 mins ago

Chitta Ranjan Dash: ಆರ್‌ಎಸ್‌ಎಸ್‌ನ ಸ್ವಯಂಸೇವಕನಾಗಿದ್ದೆ; ಈಗಲೂ ಮರಳಲು ಸಿದ್ಧ ಎಂದ ಹೈಕೋರ್ಟ್‌ ನಿವೃತ್ತ ಜಡ್ಜ್‌ ಚಿತ್ತರಂಜನ್‌ ದಾಸ್‌

Road Accident
ಕ್ರೈಂ38 mins ago

Road Accident : ತಾಯಿ-ಮಗನ ಬಲಿ ಪಡೆದ ಕಂಟೇನರ್‌; ಆಟೋ ಪ್ರಯಾಣಿಕ ಸೇರಿ ಸವಾರರಿಬ್ಬರ ಪ್ರಾಣ ಕಸಿದ ಬೈಕ್‌

DK Shivakumar statement in KPCC. no leadership if the booth lead is not given DK Shivakumar warns leaders
ರಾಜಕೀಯ46 mins ago

‌DK Shivakumar: ಬೂತ್ ಲೀಡ್ ಕೊಡಿಸದಿದ್ದರೆ ನಾಯಕತ್ವ ಇಲ್ಲ; ಜಾಗ ಖಾಲಿ ಮಾಡಿ: ಮುಖಂಡರಿಗೆ ಡಿಕೆಶಿ ವಾರ್ನಿಂಗ್

Mysuru News actress Vidhya Nandish congress leader killed by her husband
ಕ್ರೈಂ1 hour ago

Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

Anant Ambani Radhika 2nd pre wedding bash
ಬಾಲಿವುಡ್1 hour ago

Anant Ambani Radhika: ಐಷಾರಾಮಿ ಹಡಗಿನಲ್ಲಿ ನಡೆಯಲಿದೆ ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌ ಶೋ!

NIA raid rameshwaram cafe blast
ಪ್ರಮುಖ ಸುದ್ದಿ1 hour ago

Rameshwaram Cafe Blast: ಬೆಂಗಳೂರಿನ 4 ಕಡೆ ಸೇರಿ ದೇಶಾದ್ಯಂತ ಎನ್‌ಐಎ ದಾಳಿ

Viral Video
ವೈರಲ್ ನ್ಯೂಸ್2 hours ago

Viral Video: ಮದುವೆಗೆ ಬಂದ ಮಾಜಿ ಪ್ರಿಯಕರ; ಆಮೇಲೆ ನಡೆದಿದ್ದೇ ಬೇರೆ- ಸಿನಿಮಾ ಸ್ಟೈಲ್‌ನಲ್ಲಿ ಟ್ವಿಸ್ಟ್‌ ಎಂದ ನೆಟ್ಟಿಗರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌