Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಲ್ಲಿದೆ 10 ಸೂತ್ರ - Vistara News

ಸ್ಫೂರ್ತಿ ಕತೆ

Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಲ್ಲಿದೆ 10 ಸೂತ್ರ

Raja Marga Column : ಫೆ. 28 ರಾಷ್ಟ್ರೀಯ ವಿಜ್ಞಾನ ದಿನ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎನ್ನುವ ಸಂಕಲ್ಪ ಮಾಡುವ ದಿನ. ಹಾಗಿದ್ದರೆ ಅದನ್ನು ಬೆಳೆಸುವ ಆಯಾಮಗಳೇನು?

VISTARANEWS.COM


on

Raja Marga Column National science day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA Rajendra Bhat

Raja Marga Column : ಇಂದು (ಫೆಬ್ರುವರಿ 28) ರಾಷ್ಟ್ರೀಯ ವಿಜ್ಞಾನ ದಿನ. ಭಾರತೀಯರು ಹೆಮ್ಮೆ ಪಡಬೇಕಾದ ದಿನ. ಭಾರತರತ್ನ ಡಾ. ಸಿ.ವಿ ರಾಮನ್ ಅವರು ತಮ್ಮ ಶ್ರೇಷ್ಠವಾದ ಸಂಶೋಧನೆಯಾದ ರಾಮನ್ ಪರಿಣಾಮವನ್ನು (Raman Effect) ಜಗತ್ತಿಗೆ ತೋರಿಸಿಕೊಟ್ಟ ದಿನ. ಮುಂದೆ ಅದೇ ಸಂಶೋಧನೆಯು ನೊಬೆಲ್ ಪುರಸ್ಕಾರವನ್ನು ಪಡೆಯಿತು ಅನ್ನುವುದು ಭಾರತದ ಹೆಮ್ಮೆ.

Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಹೇಗೆ?

ವೈಜ್ಞಾನಿಕ ಮನೋಭಾವವನ್ನು (Scientific Attitude) ಮಕ್ಕಳಲ್ಲಿ ಬೆಳೆಸಬೇಕು ಅನ್ನುವುದು ಈ ದಿನದ ಸಂಕಲ್ಪ. ಅದು ನಮ್ಮೆಲ್ಲರ ಯೋಚನಾ ವಿಧಾನವನ್ನು ಅವಲಂಬಿಸಿಕೊಂಡಿದೆ. ಅದರ ಕೆಲವು ಆಯಾಮಗಳು ಇಲ್ಲಿವೆ.

Raja Marga Column National science day

1. ಪ್ರಶ್ನಿಸುವುದು ಮತ್ತು ಉತ್ತರ ಕಂಡುಕೊಳ್ಳುವುದು (Questioning and finding Answer)

ಮಕ್ಕಳಲ್ಲಿ ವೈಜ್ಞಾನಿಕವಾಗಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸುವುದು ಅತ್ಯಂತ ಮುಖ್ಯ. ಅದರಲ್ಲಿಯೂ ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆಗಳು ಹೆಚ್ಚು ಜ್ಞಾನವನ್ನು ಕೊಡುತ್ತವೆ. ಪ್ರಶ್ನೆ ಮಾಡಿ ಅಲ್ಲಿಗೆ ಬಿಟ್ಟರೆ ಜ್ಞಾನ ದೊರೆಯುವುದಿಲ್ಲ. ಉತ್ತರವನ್ನು ಪಡೆಯುವ ತನಕ ವಿರಮಿಸಬಾರದು ಎನ್ನುವುದು ಮುಖ್ಯ. ಪ್ರಶ್ನೆಗಳನ್ನು ಕೇಳುವುದರಿಂದ ಮಕ್ಕಳ ಬಲ ಮೆದುಳು ಚುರುಕಾಗುತ್ತದೆ ಮತ್ತು ಮಕ್ಕಳು ಹೆಚ್ಚು ಕ್ರಿಯೇಟಿವ್ ಆಗುತ್ತಾರೆ.

Raja Marga Column National science day2

2. ತಾರ್ಕಿಕ ಮತ್ತು ಕ್ರಮಬದ್ಧವಾದ ಯೋಚನೆ (Logical thinking and Reasoning)

ಮಕ್ಕಳ ಮೆದುಳು ಲಾಜಿಕಲ್ ಯೋಚನೆ ಮಾಡುವುದು ತುಂಬಾ ಮುಖ್ಯ. ಅನ್ವೇಷಣೆಯ ಪ್ರತೀ ಹಂತವನ್ನು ಬರೆದಿಟ್ಟು, ಅದಕ್ಕೆ ಕಾರಣವನ್ನು ಕೊಟ್ಟು ಮುನ್ನಡೆಯುವುದು ತುಂಬಾ ಮುಖ್ಯ. ಹಂತ ಹಂತವಾಗಿ ಮತ್ತು ತರ್ಕಬದ್ಧವಾಗಿ ಯೋಚನೆ ಮಾಡುವಂತೆ ಮಕ್ಕಳ ಮೆದುಳಿಗೆ ತರಬೇತು ಕೊಟ್ಟರೆ ಮಕ್ಕಳು ಅಸಾಧ್ಯವಾದದ್ದನ್ನು ಸಾಧಿಸುತ್ತಾರೆ. ಪ್ರಯೋಗಾತ್ಮಕ ಫಲಿತಾಂಶಗಳನ್ನು ದಾಖಲಿಸಲು ಮಕ್ಕಳು ಕಲಿಯುವುದು ಅಗತ್ಯ.

Raja Marga Column National science day Logical Reasoning

3. ವೀಕ್ಷಣಾ ಪ್ರವೃತ್ತಿ (Observation)

ಪ್ರಕೃತಿಯು ಅನೂಹ್ಯ ರಹಸ್ಯಗಳ ಮೂಟೆ. ನಮ್ಮ ಸುತ್ತಲೂ ಇರುವ ಹಲವು ಜೀವಿಗಳು, ಹಕ್ಕಿಗಳು, ಸಸ್ಯಗಳು, ಕೀಟಗಳು, ಸರೀಸೃಪಗಳು, ಇರುವೆಗಳು, ಚಿಟ್ಟೆಗಳು…… ಹೀಗೆ ಎಲ್ಲವನ್ನೂ ಗಮನಿಸುತ್ತಾ ಹೋದ ಹಾಗೆ ಮಗುವಿನ ಜ್ಞಾನವು ವಿಕಸಿತ ಆಗುತ್ತದೆ. ಆ ವೀಕ್ಷಣೆಗಳು ಮುಂದಿನ ಮಹಾ ಸಂಶೋಧನೆಗಳಿಗೆ ನಾಂದಿ ಹಾಡಿದ ನೂರಾರು ನಿದರ್ಶನಗಳು ಇವೆ.

Raja Marga Column National science day observations

4 ಸಂಶೋಧನಾ ಪ್ರವೃತ್ತಿ(Inventions)

ಆರಂಭದಿಂದಲೂ ಮನುಷ್ಯನ ಸಹಜ ಪ್ರವೃತ್ತಿ ಅಂದರೆ ಸಂಶೋಧನೆ. ಪ್ರಕೃತಿಯ ಒಂದೊಂದೇ ರಹಸ್ಯಗಳನ್ನು ಮಾನವನು ಬೇಧಿಸುತ್ತ ಮುಂದುವರಿದಂತೆ ಹೊಸ ಆವಿಷ್ಕಾರಗಳು ಹುಟ್ಟು ಪಡೆದವು. ಕಾಡಿನ ಗುಹೆಗಳಲ್ಲಿ ಬದುಕುತ್ತಿದ್ದ ಮನುಷ್ಯನು ಇಂದು ನಾಗರೀಕತೆಯ ಕಡೆಗೆ ಮುಖ ಮಾಡಲು ಕಾರಣ ಆದದ್ದು ಅದೇ ಅನ್ವೇಷಣಾ ಪ್ರವೃತ್ತಿಯಿಂದ.

Raja Marga Column National science day inventions

5. ಸಮಸ್ಯೆ ಬಿಡಿಸುವ ವಿಧಾನ (Problem Solving Method)

ನಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಗಳು ಬಂದಾಗ ಅವುಗಳಿಗೆ ಬೆನ್ನು ಹಾಕದೆ ಸಮಸ್ಯೆಗೆ ಪರಿಹಾರ ಹುಡುಕಲು ಹೊರಟದ್ದು ನಿಜಕ್ಕೂ ಅದ್ಭುತ. ತನ್ನ ದ್ವೀಪವಾಸಿಗಳು ಸಮುದ್ರದ ಬದಿಯಲ್ಲಿ ದೀಪದ ಬೆಳಕಿನಲ್ಲಿ ಕಷ್ಟ ಪಡುವುದನ್ನು ಕಂಡು ಥಾಮಸ್ ಆಲ್ವಾ ಎಡಿಸನನ ನಿದ್ರೆ ಹಾರಿಹೋಗಿತ್ತು. ಆ ಸಮಸ್ಯೆಗೆ ಪರಿಹಾರ ಹುಡುಕಲು ಆತ ಮಾಡಿದ ಹೋರಾಟವೇ ಬಲ್ಬಿನ ಅನ್ವೇಷಣೆ. ವಿಜ್ಞಾನದ ಹೆಚ್ಚಿನ ಸಂಶೋಧನೆಗಳು ಆಗಿರುವುದು ಈ ಸಮಸ್ಯಾಪೂರಣ ವಿಧಾನದಿಂದ. ಹೌದಲ್ಲ. ಯೋಚನೆ ಮಾಡಿ.

Raja Marga Column National science day problem Solving

6. ಸೃಜನಶೀಲ ಯೋಚನೆ (Creative Thinking)

ತಾನು ಬೇರೆಯವರಿಗಿಂತ ಭಿನ್ನವಾಗಿ ಮತ್ತು ಅನನ್ಯವಾಗಿ ಯೋಚನೆ ಮಾಡಲು ಹೊರಡುವುದೇ ಸೃಜನಶೀಲ ಮನೋಭಾವ. ಇದು ಕೂಡ ಬಲ ಮೆದುಳಿನ ಚಮತ್ಕಾರ. If NECCESSITY is the mother of inventions then CREATIVITY is the father.

Raja Marga Column National science day Creative Thinking

7. ಉನ್ನತೀಕರಣ (Improvisation)

ಮಾನವ ಮೆದುಳಿನ ಅದ್ಭುತ ಸಾಮರ್ಥ್ಯ ಎಂದರೆ ಪರಿಪೂರ್ಣತೆಯ ಕಡೆಗೆ ಹೋಗುವುದು. ಅದರ ಫಲಿತಾಂಶಗಳು ಪ್ರತೀ ಹಂತದಲ್ಲಿ ಉನ್ನತೀಕರಣವನ್ನು ಪಡೆಯುತ್ತಾ ಮುಂದೆ ಹೋಗುತ್ತವೆ. ಉದಾಹರಣೆಗೆ ಚಾರ್ಲ್ಸ್ ಬ್ಯಾಬೇಜ್ ಜಗತ್ತಿನ ಮೊದಲ ಕಂಪ್ಯೂಟರ್ ಕಂಡುಹಿಡಿದಾಗ ಅದು ದೊಡ್ಡ ಕಟ್ಟಡದಷ್ಟು ದೊಡ್ಡದಿತ್ತು. ಮುಂದೆ ಟೇಬಲ್ ಟಾಪ್, ಲಾಪ್ ಟಾಪ್, ಪಾಮ್ ಟಾಪ್, ಫಿಂಗರ್ ಟಾಪ್….. ಹೀಗೆ ಉನ್ನತೀಕರಣ ಆಗುತ್ತಾ ಹೋಯಿತು. ಎಡಿಸನ್ ಮೊದಲ ಬಲ್ಬ್ ಕಂಡುಹಿಡಿದಾಗ ಕಾರ್ಬನ್ ಫಿಲಮೆಂಟ್ ಇತ್ತು. ಮುಂದೆ ಟಂಗ್‌ಸ್ಟನ್‌ ಫಿಲಮೆಂಟ್‌ ಬಂತು. ಮುಂದೆ CFL ಇತ್ಯಾದಿ ಬಂದವು.

Raja Marga Column National science day Improvisations

8. ಜ್ಞಾನದ ವಿಕಾಸ (Knowledge Explode)

ನೂರು ವರ್ಷಗಳ ಹಿಂದೆ ಜ್ಞಾನ ವಿಕಾಸವಾಗಲು ದಶಕಗಳೇ ಬೇಕಾದವು. ನಂತರ ಪ್ರತೀ ವರ್ಷಕ್ಕೊಮ್ಮೆ ಜ್ಞಾನವು ಡಬಲ್ ಆಯಿತು. ಈಗ ಪ್ರತೀ ದಿನವೂ ಜಗತ್ತಿನ ಜ್ಞಾನವು ಡಬ್ಬಲ್ ಆಗ್ತಾ ಇದೆ ಎಂದರೆ ನೀವು, ನಾವು ನಂಬಲೇಬೇಕು. ಇದಕ್ಕೆ ಕಾರಣ ಮಾನವನ ಜ್ಞಾನತೃಷೆ ಮತ್ತು ಮೆದುಳಿನ ಅದ್ಭುತವಾದ ವಿಕಾಸ.

9. ಮೌಢ್ಯ ಮತ್ತು ಅಂಧಶೃದ್ಧೆಗಳ ವಿರುದ್ಧ ಹೋರಾಟ

ಶತಮಾನಗಳಿಂದ ಜಗತ್ತನ್ನು ಆವರಿಸಿದ್ದ ಮೌಢ್ಯಗಳ ವಿರುದ್ಧ ವಿಜ್ಞಾನವು ಭಾರಿ ಹೋರಾಟವನ್ನು ಆರಂಭ ಮಾಡಿತು. ಅದುವರೆಗಿನ ನಂಬಿಕೆಗಳಿಗೆ ಸಾಕ್ಷಿ ಹುಡುಕುತ್ತ ಮುಂದೆ ಹೋದಂತೆ ಎಷ್ಟೋ ನಂಬಿಕೆಗಳಿಗೆ ಆಧಾರ ಸಿಗದೆ ಅವುಗಳು ಮೌಢ್ಯಗಳಾಗಿ ಬದಲಾದವು. ಉದಾಹರಣೆಗೆ ಸಹಸ್ರಮಾನಗಳಿಂದ ಜಗತ್ತನ್ನು ಆಳುತ್ತಿದ್ದ ಭೂಮಿಯೇ ಸೌರವ್ಯೂಹದ ಕೇಂದ್ರ ಎಂಬ ನಂಬಿಕೆ ಸುಳ್ಳು ಎಂದು ಸಾಬೀತಾದಾಗ ಸೂರ್ಯನೇ ಸೌರವ್ಯೂಹದ ಕೇಂದ್ರ ಎಂಬ ಸಿದ್ಧಾಂತವು ಮುನ್ನೆಲೆಗೆ ಬಂದಿತು. ಮುಂದೆ ಗೊತ್ತಿಲ್ಲ!

ಇದನ್ನೂ ಓದಿ : Raja Marga Column : ಗಝಲ್ ಕೀ ಮಿಟಾಸ್ ಪಂಕಜ್ ಉಧಾಸ್ ; ಹಾಡು ನಿಲ್ಲಿಸಿದ ಗಝಲ್‌ ಸಾಮ್ರಾಟ

Raja Marga Column National science day Blis

10. ಆತ್ಮಾನಂದದ ಅನ್ವೇಷಣೆ (Invention of BLISS)

ವೈಜ್ಞಾನಿಕ ಸಂಶೋಧನೆಗಳು ಮಾನವನ ಬದುಕನ್ನು ಹೆಚ್ಚು ಸಂಭ್ರಮ ಮತ್ತು ಸಂತಸದಾಯಕವಾಗಿ ಮಾಡಿವೆ ಎನ್ನುವುದು ನಮ್ಮ ಕಣ್ಣ ಮುಂದಿದೆ. ಮಹಾಮಾರಿ ರೋಗಗಳಿಗೆ ಲಸಿಕೆ ಕಂಡು ಹಿಡಿದದ್ದು, ಮಾನವನ
ತ್ರಾಸದಾಯಕವಾದ ಕೆಲಸಗಳನ್ನು ನೂರಾರು ಯಂತ್ರಗಳ ಮೂಲಕ ಆರಾಮದಾಯಕ ಮಾಡಿದ್ದು ವಿಜ್ಞಾನದ ಕೊಡುಗೆ ಹೌದಲ್ಲ. ಆದ್ದರಿಂದ ನಮ್ಮೊಳಗಿನ ಸಂತೋಷವನ್ನು ಹುಡುಕುವುದೇ ವೈಜ್ಞಾನಿಕ ಸಂಶೋಧನೆಯ ಉದ್ದೇಶ.

ನಮ್ಮ ಮುಂದಿನ ಜನಾಂಗವಾದ ಮಕ್ಕಳು ಈ ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಲಿ ಅನ್ನುವುದೇ ಇಂದಿನ ವಿಜ್ಞಾನ ದಿನದ ಸಂಕಲ್ಪ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಮೊಂಡು ಕೈಗಳಿಂದ ಜಗತ್ತನ್ನು ಗೆಲ್ಲಲು ಹೊರಟ ಹೋರಾಟಗಾರನ ಕಥೆ

ರಾಜಮಾರ್ಗ ಅಂಕಣ: ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ ನೀರಿಗೆ ಧುಮುಕಿದಾಗ ತನಗೆ ಕೈಗಳು ಇಲ್ಲ ಎಂಬುದನ್ನು ಮರೆಯುವ ಅವರು ಈಗಾಗಲೇ ಅಂತಾರಾಷ್ಟ್ರೀಯ ಪಾರಾ ಈಜು ಸ್ಪರ್ಧೆಯಲ್ಲಿ ಎಂಟು ಪದಕಗಳನ್ನು ಗೆದ್ದಿದ್ದಾರೆ. ಏಳು ಸಾಗರಗಳನ್ನು ಈಜಿ ಬಂದಿದ್ದಾರೆ ವಿಶ್ವಾಸ್.

VISTARANEWS.COM


on

vishwas ks rajamarga
Koo

ಪಾರಾ ಸ್ವಿಮ್ಮರ್ ವಿಶ್ವಾಸ್ ಕೆ.ಎಸ್ ಅವರ ಹೃದಯ ಗೆಲ್ಲುವ ಕಥನ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಯು ಟ್ಯೂಬ್ (Youtube) ವೇದಿಕೆಗಳಲ್ಲಿ ಈ ವಿಶ್ವಾಸ್ ಕೆ.ಎಸ್ (Vishwas KS) ಅವರ ಟೆಡ್ ಟಾಕ್ (Ted Talk) ಕೇಳುತ್ತಾ ಹೋದಂತೆ ಕಣ್ಣು ತುಂಬಿ ಬಂದು ಗಲ್ಲ ಒದ್ದೆಯಾದ ಅನುಭವ ನನಗಾಗಿದೆ. ಅವರ ಬದುಕೇ ಒಂದು ರೋಚಕವಾದ ಯಶೋಗಾಥೆ.

ಈ ವಿಶ್ವಾಸ್ ಬಿಕಾಂ ಪದವೀಧರ. ಎರಡೂ ಕೈಗಳು ಇಲ್ಲದ ಅನೇಕ ವ್ಯಕ್ತಿಗಳು ಭಿಕ್ಷೆಯನ್ನು ಬೇಡಿ ಬದುಕುತ್ತಿರುವ ಇಂದಿನ ದಿನಗಳಲ್ಲಿ ಕೋಲಾರದ ಕಾಳಹಸ್ತಿಪುರದ ಯುವಕ ವಿಶ್ವಾಸ್ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ಕ್ಷೇತ್ರ ಅಂದರೆ ಈಜು. ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ ನೀರಿಗೆ ಧುಮುಕಿದಾಗ ತನಗೆ ಕೈಗಳು ಇಲ್ಲ ಎಂಬುದನ್ನು ಮರೆಯುವ ಅವರು ಈಗಾಗಲೇ ಅಂತಾರಾಷ್ಟ್ರೀಯ ಪಾರಾ ಈಜು ಸ್ಪರ್ಧೆಯಲ್ಲಿ ಎಂಟು ಪದಕಗಳನ್ನು ಗೆದ್ದಿದ್ದಾರೆ. ಏಳು ಸಾಗರಗಳನ್ನು ಈಜಿ ಬಂದಿದ್ದಾರೆ.

ಅದೇ ರೀತಿ ಮಾರ್ಷಿಯಲ್ ಆರ್ಟಿನಲ್ಲಿ ರೆಡ್ ಬೆಲ್ಟ್ ಪಡೆದಿದ್ದಾರೆ. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋʼದಲ್ಲಿ ನೃತ್ಯ ಮಾಡಿದ್ದಾರೆ. ಕಾಲಿನಲ್ಲಿಯೇ ಅಡುಗೆ ಮಾಡುತ್ತಾರೆ. ಕಾಲಿನ ಬೆರಳುಗಳ ನಡುವೆ ಪೆನ್ನು ಹಿಡಿದು ಬರೆಯುತ್ತಾರೆ. ಮೊಬೈಲ್ ಆಪರೇಟ್ ಮಾಡುತ್ತಾರೆ. ಬಟ್ಟೆ ಒಗೆಯುತ್ತಾರೆ. ತನ್ನ ಕೆಲಸವನ್ನು ತಾನೇ ಮಾಡುತ್ತಾರೆ. ವೇದಿಕೆಯಲ್ಲಿ ನಿಂತು ಮೋಟಿವೇಶನ್ ಮಾತು ಆಡುತ್ತಾರೆ. ಅವರಿಗೆ ತನಗೆ ಕೈಗಳು ಇಲ್ಲ ಅನ್ನುವುದು ಮರೆತೇ ಹೋಗಿದೆ ಎಂದು ನನ್ನ ಭಾವನೆ.

ಸಣ್ಣ ಪ್ರಾಯದಲ್ಲಿ ದುರಂತ

ನಾಲ್ಕನೇ ತರಗತಿಯಲ್ಲಿ ಆದ ದುರಂತ ಅದು. ವಿಶ್ವಾಸ್ ನಾಲ್ಕನೇ ತರಗತಿಯಲ್ಲಿ ಇರುವಾಗ ಕಾಂಕ್ರೀಟ್ ಆಗ್ತಾ ಇದ್ದ ಒಂದು ಕಟ್ಟಡವನ್ನು ಹತ್ತುತ್ತಿದ್ದಾಗ ಕಾಲು ಜಾರಿ ಬೀಳುತ್ತಾರೆ. ಆಗ ಹೈ ಟೆನ್ಶನ್ ಕೇಬಲ್ ಹಿಡಿದು ನೇತಾಡುವ ಪ್ರಸಂಗ ಬರುತ್ತದೆ. ಆಗ ಅವರನ್ನು ಬಿಡಿಸುವ ಪ್ರಯತ್ನ ಮಾಡಿದ ಅವರ ಅಪ್ಪ ವಿದ್ಯುತ್ ಆಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಹುಡುಗನು ಎರಡೂ ಕೈ ಸುಟ್ಟು ಹೋಗಿ ಈ ಸ್ಥಿತಿಗೆ ಬರುತ್ತಾರೆ.

ಆಸ್ಪತ್ರೆಯಲ್ಲಿ ಹಲವಾರು ತಿಂಗಳು ನೋವು ಪಟ್ಟು ಮಲಗಿ ಹೊರಬರುವಾಗ ಆತನ ಕೈಗೆ ಪ್ಲಾಸ್ಟಿಕ್ ಕೈ ಜೋಡಿಸಿರುತ್ತಾರೆ. ಅದು ಕೈಗಳ ಫೀಲ್ ಕೊಡದೆ ಹೋದಾಗ ಮತ್ತು ಯಾವ ಕೆಲಸಕ್ಕೂ ಬೇರೆಯವರನ್ನು ಅವಲಂಬನೆ ಮಾಡುವ ಪ್ರಸಂಗ ಬಂದಾಗ ಅದನ್ನು ಕಿತ್ತು ಬಿಸಾಡಿ ಮೊಂಡು ಕೈ ಹಿಡಿದೇ ಇಲ್ಲಿಯವರೆಗೆ ಬಂದಿದ್ದಾರೆ.

ಹಲವು ಕಡೆಯಲ್ಲಿ ಉದ್ಯೋಗ ಪ್ರಯತ್ನ ಪಟ್ಟು ಸೋತಾಗ ಡಿಪ್ರೆಸ್ ಆದದ್ದೂ ಇದೆ. ಹೊಟ್ಟೆಪಾಡಿಗಾಗಿ ಹಲವು ವೃತ್ತಿಗಳನ್ನು ಮಾಡಲು ಪ್ರಯತ್ನ ಪಟ್ಟು ಸೋತದ್ದು ಇದೆ. ಆದರೆ ಅವರ ಅದ್ಭುತವಾದ ಇಚ್ಛಾಶಕ್ತಿ ಅವರನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಈ ಹೋರಾಟದ ಪ್ರತೀ ಹಂತದಲ್ಲೂ ಅವರ ಅಮ್ಮ ಅವರ ಜೊತೆಗೆ ನಿಂತಿದ್ದಾರೆ. ಇತ್ತೀಚೆಗೆ ಒಬ್ಬರು ಶಿಕ್ಷಕಿ, ಲಕ್ಷ್ಮಿ ಎಂದು ಅವರ ಹೆಸರು, ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಆ ದಂಪತಿಗೆ ಒಬ್ಬ ಮಗನೂ ಇದ್ದಾನೆ. ಪತ್ನಿ ಲಕ್ಷ್ಮಿ ಈಗ ವಿಶ್ವಾಸ್ ಅವರ ಸಾಧನೆಗಳಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.

ಬದುಕಿನ ಕಥೆ ಸಿನೆಮಾ ಆಯಿತು.

ವಿಶ್ವಾಸ್ ಅವರ ಬದುಕಿನ ಕಥೆಯು ʻಅರಬ್ಬೀ’ ಎಂಬ ಸಿನೆಮಾ ಆಗಿ ಜನಪ್ರಿಯ ಆಗಿದೆ. ಮುಂದಿನ ಪಾರಾ ಒಲಿಂಪಿಕ್ಸನಲ್ಲಿ ಭಾಗವಹಿಸಬೇಕು ಎನ್ನುವ ಹಠದಲ್ಲಿ ವಿಶ್ವಾಸ್ ಬೆಂಗಳೂರಿನ ಬಸವನಗುಡಿಯ ಈಜುಕೊಳದಲ್ಲಿ ದಿನಕ್ಕೆ ಹಲವಾರು ಗಂಟೆ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಒಬ್ಬ ಒಳ್ಳೆಯ ಕೋಚ್ ಅವರ ನೆರವಿಗೆ ನಿಂತಿದ್ದಾರೆ.

ವಿಶ್ವಾಸದ ಕಡಲಲ್ಲಿ ಈಜುತ್ತಿರುವ ಈ ವಿಶ್ವಾಸ್ ಅವರಿಗೆ ನಿಮ್ಮ ಒಂದು ಶಾಭಾಷ್ ಹೇಳಿ ಮುಂದೆ ಹೋಗೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತೀಯ ಸೇನೆಯ ಬಗ್ಗೆ ಎದೆ ಉಬ್ಬಿಸಿ ನಡೆಯಲು ಇನ್ನೊಂದು ಕಾರಣ

Continue Reading

ಸ್ಫೂರ್ತಿ ಕತೆ

Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

Raja marga Column : ಆ ಹೆಣ್ಮಗಳಿಗೆ ಕಣ್ಣೇ ಕಾಣಿಸುವುದಿಲ್ಲ. ಆದರೆ, ಛಲದಿಂದ ಆಕೆ ಒಳಗಿನ ಕಣ್ಣಿಂದ ಓದಿಗಳು. ಒಂದಲ್ಲ ಎರಡು ಬಾರಿ ಯುಪಿಎಸ್ಸಿ ಪಾಸ್‌ ಮಾಡಿದಳು. ಈಗ ಆಕೆ ಜಿಲ್ಲಾಧಿಕಾರಿ.

VISTARANEWS.COM


on

Raja Marga Column Pranjal pateel
Koo
RAJAMARGA

Raja Marga Column : ಭಾರತದ ಅತ್ಯಂತ ಕ್ಲಿಷ್ಟವಾದ ಪರೀಕ್ಷೆ ಅಂದರೆ ಐಎಎಸ್. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ UPSC ನಡೆಸುವ ಈ ಪರೀಕ್ಷೆಯಲ್ಲಿ‌ (UPSC Exam) ಪ್ರತೀ ವರ್ಷ 7ರಿಂದ 8 ಲಕ್ಷ ಯುವಕ – ಯುವತಿಯರು ತಮ್ಮ ಪ್ರತಿಭೆಯನ್ನು ನಿಕಷಕ್ಕೆ ಒಡ್ಡುತ್ತಿದ್ದು ತೇರ್ಗಡೆ ಆಗುವವರ ಪ್ರಮಾಣ 2-3% ಮಾತ್ರ! ಅಂತಹ ಪರೀಕ್ಷೆಯಲ್ಲಿ ಪೂರ್ಣ ಕುರುಡುತನ ಇರುವ ಪ್ರಾಂಜಲ್‌ ಪಾಟೀಲ್‌ (Pranjal Patil) ಎಂಬ ಹುಡುಗಿಯೊಬ್ಬಳು ಎರಡು ಬಾರಿ ತೇರ್ಗಡೆಯಾದರು (IAS officer) ಅಂದರೆ ನಂಬೋದು ಹೇಗೆ? ಇಲ್ಲಿದೆ ಅವರ ಕತೆ,

Raja Marga Column: ಆಕೆ ಮಹಾರಾಷ್ಟ್ರದವರು

ಪ್ರಾಂಜಲ್‌ ಪಾಟೀಲ್ ಮಹಾರಾಷ್ಟ್ರದ ಉಲ್ಲಾಸ ನಗರದವರು. ಹುಟ್ಟುವಾಗ ಆಕೆಗೆ ಮಸುಕು ಮಸುಕಾಗಿ ಕಾಣುತ್ತಿತ್ತು. ಆರು ವರ್ಷ ಪ್ರಾಯ ಆದಾಗ ಪೂರ್ತಿಯಾಗಿ ಕುರುಡುತನ ಆವರಿಸಿತ್ತು. ಸಣ್ಣ ಪ್ರಾಯದಲ್ಲಿಯೇ ಆಕೆಯ ದೊಡ್ಡ ಕನಸುಗಳಿಗೆ ಕೊಳ್ಳಿ ಇಟ್ಟ ಅನುಭವ ಆಗಿತ್ತು. ಆದರೆ ಮನೆಯವರು ಮತ್ತು ಹೆತ್ತವರು ಆಕೆಯ ಮನೋಸ್ಥೈರ್ಯವನ್ನು ಕುಸಿಯಲು ಬಿಡಲಿಲ್ಲ.

ಆಕೆ ಮಹಾ ಪ್ರತಿಭಾವಂತೆ. ದಾದರ್ ನಗರದ ಕಮಲ ಮೆಹ್ತಾ ಕುರುಡು ಮಕ್ಕಳ ಶಾಲೆಗೆ ಸೇರಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಾರೆ. ಬ್ರೈಲ್ ಲಿಪಿಯಲ್ಲಿ ಓದಲು ಮತ್ತು ಬರೆಯಲು ಕಲಿಯುತ್ತಾರೆ. ಮುಂದೆ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ರಾಜನೀತಿ ಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ.

Raja Marga Column Pranjal Pateel
ತಂದೆ ಮತ್ತು ತಾಯಿ ಜತೆ ಪ್ರಾಂಜಲ್‌ ಪಾಟೀಲ್‌

ಆಗ ಏನೂ ಕಾಣದಿದ್ದರೂ ಉಲ್ಲಾಸ ನಗರದ ಮನೆಯಿಂದ ಹೊರಟು ಒಬ್ಬಳೇ ಛತ್ರಪತಿ ಶಿವಾಜಿ ಟರ್ಮಿನಲ್ ನವರೆಗೆ ಹೋಗಿ ಹಿಂದೆ ಬರುತ್ತಿದ್ದರು. ಮುಂಬೈ ನಗರದ ಜನರು ತನ್ನ ಬಗ್ಗೆ ತುಂಬಾನೇ ಅನುಕಂಪವನ್ನು ಹೊಂದಿದ್ದರು ಅನ್ನುತ್ತಾರೆ ಆಕೆ.

Raja Marga Column: ಆಕೆಯ ಕನಸುಗಳಿಗೆ ಆಕಾಶವೂ ಮಿತಿ ಅಲ್ಲ!

ಮುಂದೆ ಪ್ರಾಂಜಲ್ ಹೊರಟದ್ದು ದೆಹಲಿಗೆ. ಜವಾಹರಲಾಲ್ ನೆಹರು ವಿವಿಯ ಮೂಲಕ ಆಕೆ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ಪಡೆಯುತ್ತಾರೆ. ಅದೇ ಹೊತ್ತಿಗೆ ವಿದುಷಿ ಎಂಬ ಗೆಳತಿಯ ಮಾತಿನಿಂದ ಆಕೆ ಪ್ರಭಾವಿತರಾಗುತ್ತಾರೆ. ಐಎಎಸ್ ಪರೀಕ್ಷೆಗೆ ಗಂಭೀರವಾದ ಸಿದ್ಧತೆ ನಡೆಸುವಂತೆ ವಿದುಷಿ ಆಕೆಗೆ ಸಲಹೆ ಕೊಡುತ್ತಾರೆ.

Raja Marga Column Pranjal Pateel

ಆಗ ಆಕೆಗೆ JAWS (Job Access With Speech) ಎಂಬ ಸಾಫ್ಟವೇರ್ ನೆರವಿಗೆ ಬರುತ್ತದೆ. ಅದು ಯಾವುದೇ ಪುಸ್ತಕವನ್ನು ಗಟ್ಟಿಯಾಗಿ ಓದಿ ಹೇಳುವ ಸಾಫ್ಟ್‌ವೇರ್. ತನ್ನ ಆಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಕೆ ದಿನಕ್ಕೆ 10-12 ಗಂಟೆ ಪುಸ್ತಕಗಳನ್ನು ಓದುತ್ತಾರೆ. ವಿಡಿಯೋ ಪಾಠಗಳನ್ನು ಕೇಳುತ್ತಾರೆ. ತನ್ನ ಗೆಳತಿಯ ನೆರವನ್ನು ಪಡೆಯುತ್ತಾರೆ.

ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಿಸುತ್ತದೆ

2016ರಲ್ಲೀ ಅವರು ಭಾರತೀಯ ರೈಲ್ವೇ ಸೇವೆಗೆ ಅರ್ಜಿ ಹಾಕುತ್ತಾರೆ. ಆದರೆ ಆಕೆ ಕುರುಡಿ ಎಂಬ ಕಾರಣಕ್ಕೆ ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಣೆ ಮಾಡುತ್ತದೆ. ಆಗ ಸಿಟ್ಟಿಗೆದ್ದ ಆಕೆ ಪ್ರಧಾನಿ ನರೇಂದ್ರ ಮೋದಿಗೆ ಮತ್ತು ರೈಲ್ವೇ ಮಂತ್ರಿ ಸುರೇಶ್ ಪ್ರಭು ಅವರಿಗೆ ನೇರವಾಗಿ ಪತ್ರ ಬರೆಯುತ್ತಾರೆ. ಆಗ ಸುರೇಶ್ ಪ್ರಭು ಅವರು ಆಕೆಯನ್ನು ಸಂಪರ್ಕ ಮಾಡಿ ನಿಮ್ಮ ವಿದ್ಯೆಗೆ ತಕ್ಕದಾದ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ ಆಗಲೇ ಐಎಎಸ್ ಪರೀಕ್ಷೆಯ ತಯಾರಿಯಲ್ಲಿ ಮುಳುಗಿದ್ದ ಪ್ರಾಂಜಲ್ ಆ ಪ್ರಸ್ತಾಪವನ್ನು ಸ್ವೀಕಾರ ಮಾಡುವುದಿಲ್ಲ.

Raja Marga Column Pranjal Pateel
ಸೀರೆ ಉಟ್ಟಾಗ ಹೀಗಿದ್ದಾರೆ ನೋಡಿ ಪ್ರಾಂಜಲ್‌ ಪಾಟೀಲ್

ಆಕೆ ಎರಡು ಬಾರಿ ಐಎಎಸ್ ಪರೀಕ್ಷೆ ತೇರ್ಗಡೆ ಆದರು!

ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾದರು! ಅದೂ ಯಾವ ಕೋಚಿಂಗ್ ಇಲ್ಲದೆ! ಆದರೆ ಆಲ್ ಇಂಡಿಯಾ ರ‍್ಯಾಂಕಿಂಗ್ 744 ಬಂದಿತ್ತು. ಅದು ಅವರಿಗೆ ತೃಪ್ತಿ ತರಲಿಲ್ಲ. ಯಾವುದೋ ಒಂದು ಅಜ್ಞಾತ ಇಲಾಖೆಯಲ್ಲಿ ಸಾಮಾನ್ಯ ಅಧಿಕಾರಿಯಾಗಿ ಕೆಲಸ ಮಾಡಲು ಆಕೆ ರೆಡಿ ಇರಲಿಲ್ಲ. ಅದಕ್ಕೋಸ್ಕರ ಎರಡನೇ ಬಾರಿಗೆ ಅಷ್ಟೇ ಪ್ರಯತ್ನ ಮಾಡಿ 2017ರಲ್ಲಿ ಮತ್ತೆ ಐಎಎಸ್ ಪರೀಕ್ಷೆ ಬರೆದರು. ಈ ಬಾರಿ ಕೂಡ ತೇರ್ಗಡೆ ಆದರು. ಈ ಬಾರಿ ರ‍್ಯಾಂಕಿಂಗ್ 124 ಬಂದಿತ್ತು!

Visually impaired IAS officer Pranjal pateel

ಅವರ ಕನಸಿನ ರೆಕ್ಕೆಗೆ ಸಾವಿರ ಗರಿಗಳು!

ಭಾರತದ ಮೊಟ್ಟ ಮೊದಲ ದೃಷ್ಟಿ ವಿಕಲತೆಯ ಸಾಧಕಿಯಾಗಿ ಆಕೆ ಐಎಎಸ್ ಪರೀಕ್ಷೆ ತೇರ್ಗಡೆ ಆಗಿದ್ದರು! ಲಿಖಿತ ಪರೀಕ್ಷೆಯಲ್ಲಿ ಆಕೆ ಪಡೆದ ಅಂಕಗಳು 854! ಹಾಗೂ ಸಂದರ್ಶನದಲ್ಲಿ ಆಕೆ ಪಡೆದ ಅಂಕಗಳು 179! ಒಟ್ಟು 1033 ಅನ್ನುವುದು ಕೂಡ ನಿಜವಾದ ಕ್ರೆಡಿಟ್. ತರಬೇತಿಯನ್ನು ಮುಗಿಸಿ ಮೇ 28, 2018ರಂದು ಅವರು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಸಿಸ್ಟಂಟ್ ಕಲೆಕ್ಟರ್ ಆಗಿ ನೇಮಕ ಪಡೆಯುತ್ತಾರೆ. ಮುಂದೆ ಅಕ್ಟೋಬರ್ 14, 2019ರಂದು ಸಬ್ ಕಲೆಕ್ಟರ್ ಆಗಿ ತಿರುವನಂತಪುರಂ ಜಿಲ್ಲೆಗೆ ನೇಮಕ ಪಡೆಯುತ್ತಾರೆ!

Pranjal pateel with Komal sing pateel
ಕೋಮಲ್‌ ಸಿಂಗ್‌ ಪಾಟೀಲ್‌ ಜತೆ ಮದುವೆಯಾದ ಕ್ಷಣ

ಯಾರ ಸಹಾಯ ಇಲ್ಲದೆ ತನ್ನ ಕೆಲಸಗಳನ್ನು ತಾನೇ ಮಾಡುವ, ಅದ್ಭುತವಾದ ಮೆಮೊರಿ ಪವರ್ ಹೊಂದಿರುವ, ಸಮಾಜ ಸೇವೆಯ ತೀವ್ರವಾದ ತುಡಿತ ಹೊಂದಿರುವ, ಬೆಟ್ಟವನ್ನು ಕರಗಿಸುವ ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಹೊಂದಿರುವ ಪ್ರಾಂಜಲ್ ಪಾಟೀಲ್ ಮತ್ತು ಆಕೆಯ ಗಂಡ ಕೋಮಲ್ ಸಿಂಗ್ ಪಾಟೀಲ್ ಅವರು ಇತ್ತೀಚೆಗೆ ತಮ್ಮ ಅಂಗದಾನಕ್ಕೆ ಜೊತೆಯಾಗಿ ಸಹಿ ಹಾಕಿ ಸುದ್ದಿ ಆಗಿದ್ದಾರೆ.

ಆಕೆಯ ಒಂದು ಮಾತು ನನಗೆ ಭಾರೀ ಕನೆಕ್ಟ್ ಆಗಿದ್ದು ಅದನ್ನು ಇಲ್ಲಿ ಉಲ್ಲೇಖ ಮಾಡುತ್ತೇನೆ.

SUCCESS doesn’t give us INSPIRATION. But the STRUGGLE behind the SUCCESS gives us the INSPIRATION. ಹೌದು ತಾನೇ?

ಇದನ್ನೂ ಓದಿ : Raja Marga Column : ಈ ಶಾರ್ಪ್‌ ಶೂಟರ್‌ ಅಜ್ಜಿ ಮೊದಲ ಬಾರಿ ಗನ್‌ ಹಿಡಿದದ್ದು 67ನೇ ವಯಸ್ಸಲ್ಲಿ!

Continue Reading

ಅಂಕಣ

Raja Marga Column : ಈ ಶಾರ್ಪ್‌ ಶೂಟರ್‌ ಅಜ್ಜಿ ಮೊದಲ ಬಾರಿ ಗನ್‌ ಹಿಡಿದದ್ದು 67ನೇ ವಯಸ್ಸಲ್ಲಿ!

Raja Marga Column : ಅವರೊಬ್ಬರು ಶೂಟರ್‌ ಅಜ್ಜಿ. ವಿಶ್ವದ ಮಟ್ಟದ ಸ್ಪರ್ಧೆಯಲ್ಲಿ ಮಿಂಚಿದವರು. ಅವರು ಶಾರ್ಪ್‌ ಶೂಟಿಂಗ್‌ಗಾಗಿ ಗನ್‌ ಕೈಯಲ್ಲಿ ಹಿಡಿದಾಗ ವಯಸ್ಸು 67.

VISTARANEWS.COM


on

Raja Marga Column Chandro Tomar Sharp Shooter
Koo
RAJAMARGA

Raja Marga Column : ಉತ್ತರ ಪ್ರದೇಶದ ಭಾಗಪಥ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯು ಜೋಹ್ಹರಿ. ಅಲ್ಲಿಯ ಒಬ್ಬರು ಅಜ್ಜಿ ಶೂಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಹೆಸರು ಮಾಡಿದ್ದರು. ಆಕೆ ಬದುಕಿದ್ದಾಗ ಜಗತ್ತಿನ ಅತ್ಯಂತ ಹಿರಿಯ ಶಾರ್ಪ್‌ ಶೂಟರ್ (Worlds oldest Sharp Shooter) ತಪ್ಪಿದ್ದೆ ಇಲ್ಲ ಅನ್ನೋದು ಅವರ ಹಿರಿಮೆ! ವಯಸ್ಸು ಆಕೆಯ ಮಟ್ಟಿಗೆ ಬರೇ ಒಂದು ನಂಬರ್ ಆಗಿ ಬಿಟ್ಟಿದೆ! ಅವರ ಹೆಸರು ಚಂದ್ರಾ ತೋಮರ್‌ (Chandro tomar) ಜನ ಅವರನ್ನು ಪ್ರೀತಿಯಿಂದ ‘ಶೂಟರ್ ಅಜ್ಜಿ’ (Shooter Ajji) ಎಂದು ಕರೆಯುತ್ತಾರೆ! ಏಕೆಂದರೆ ಎಂಬತ್ತರ ಹರೆಯದಲ್ಲಿ ಕೂಡ ಅವರು ಚಾಂಪಿಯನ್‌ಷಿಪ್ ಸೋತವರಲ್ಲ!

ಆಕೆ ತುಂಬಿದ ಮನೆಯ ಅಜ್ಜಿ!

ಆಕೆ ಹಳ್ಳಿಯ ಹೆಂಗಸು. ಶಾಲೆಗೆ ಹೋದವರಲ್ಲ. ತುಂಬಿದ ಮನೆಗೆ ಸೊಸೆಯಾಗಿ ಬಂದವರು. ಪ್ರೀತಿಸುವ ಗಂಡ, 5 ಮಕ್ಕಳು, 12 ಮೊಮ್ಮಕ್ಕಳು ಇರುವ ಸಂಸಾರದಲ್ಲಿ ಅವರು ಮುಳುಗಿ ಬಿಟ್ಟಿದ್ದರು. ಮನೆ ವಾರ್ತೆ, ಮನೆಯವರ ಕ್ಷೇಮ, ಅಡುಗೆ ಮಾಡುವುದು, ದನಗಳ ಚಾಕರಿ ಇಷ್ಟೆ ಗೊತ್ತು ಅವರಿಗೆ. ಶೂಟಿಂಗ್ ಬಗ್ಗೆ ಯೋಚನೆಯನ್ನು ಕೂಡ ಮಾಡಿದವರಲ್ಲ.

Raja Marga Column Chandro Tomar Sharp Shooter1

ಅವರ ಬದುಕಿನಲ್ಲಿ ತಿರುವು ಬಂದಾಗ ವಯಸ್ಸು 67!

ಅವರ ಹಳ್ಳಿಯಲ್ಲಿ ಒಂದು ಶಾರ್ಪ್ ಶೂಟರ್ ಕ್ಲಬ್ ಇತ್ತು. ಅದಕ್ಕೆ ಅವರ ಮೊಮ್ಮಗಳು ಶಿಫಾಲಿ ಆಸಕ್ತಿಯಿಂದ ಹೋಗಿ ಸೇರಿದ್ದರು. ಅಲ್ಲಿ ಹುಡುಗರೇ ಹೆಚ್ಚು ಬರುತ್ತಿದ್ದ ಕಾರಣ ಮೊಮ್ಮಗಳಿಗೆ ಜೊತೆಯಾಗಿ ಅಜ್ಜಿ ಹೋಗುತ್ತಿದ್ದರು. ದೂರದಲ್ಲಿ ನಿಂತು ಶೂಟಿಂಗ್ ನೋಡುವುದು ಮಾತ್ರ ಅಜ್ಜಿಯ ಕೆಲಸ. ಒಂದು ದಿನ ಮೊಮ್ಮಗಳು ಗನ್ ಲೋಡ್ ಆಗದೆ ಕಷ್ಟ ಪಡುತ್ತಿದ್ದಳು. ಹತ್ತಿರ ಬಂದ ಅಜ್ಜಿ ಯಾವುದೋ ಒಂದು ಮಾಯೆಯಿಂದ ಗನ್ ಲೋಡ್ ಮಾಡಿದ್ದು ಮಾತ್ರವಲ್ಲ ಬುಲ್ ಐಗೆ ಗುರಿಯಿಟ್ಟು ಶೂಟ್ ಮಾಡಿಬಿಟ್ಟರು. ಅದು ಪರ್ಫೆಕ್ಟ್ ಶೂಟ್ ಆಗಿತ್ತು! ಆ ಕ್ಲಬ್ಬಿನ ಕೋಚ್ ಫಾರೂಕ್ ಪಠಾಣ್ ಮತ್ತು ಎಲ್ಲಾ ಹುಡುಗರು ಬಿಟ್ಟ ಕಣ್ಣು ಬಿಟ್ಟು ಬೆರಗಾಗಿ ನಿಂತರು! ಅದು ಅಜ್ಜಿಯ ಜೀವನದ ಮೊದಲ ಶೂಟ್ ಆಗಿತ್ತು ಮತ್ತು ಆಗ ಅವರ ವಯಸ್ಸು ಕೇವಲ 67 ಆಗಿತ್ತು!

ಶೂಟ್ ಮಾಡಲು ಸ್ಪಷ್ಟವಾದ ದೃಷ್ಟಿ ಮತ್ತು ಕೈಗಳ ನಿಯಂತ್ರಣಗಳು ಇರಬೇಕು. ಅದು ಆ ವಯಸ್ಸಲ್ಲಿ ಅಜ್ಜಿಗೆ ಹೇಗೆ ಸಾಧ್ಯವಾಯಿತು? ನನಗಂತೂ ಅರ್ಥವಾಗದ ಪ್ರಶ್ನೆ!

Raja Marga Column : ಅಜ್ಜಿ ಮತ್ತು ಮೊಮ್ಮಗಳ ಶೂಟಿಂಗ್ ತರಬೇತಿ!

ಮುಂದೆ ಅಜ್ಜಿ ಮೊಮ್ಮಗಳ ಜೊತೆಗೆ ಶೂಟರ್ ಕ್ಲಬ್ಬಿಗೆ ಸೇರಿದರು. 1200 ಡಾಲರ್ ಬೆಲೆಯ ಪಿಸ್ತೂಲನ್ನು ಹಠ ಹಿಡಿದು ತರಿಸಿಕೊಂಡರು. ಮನೆಯ ಅಂಗಳದಲ್ಲಿ ಪ್ರೈವೇಟ್ ಶೂಟರ್ ರೇಂಜ್ ಸಿದ್ಧವಾಯಿತು. ಅಜ್ಜಿಯ ಉತ್ಸಾಹ ದಿನದಿಂದ ದಿನಕ್ಕೆ ಅಧಿಕವಾಯಿತು. ಮನೆಕೆಲಸ ಮುಗಿಸಿಕೊಂಡು ಮಧ್ಯಾಹ್ನ ಅಜ್ಜಿ ಗನ್ ಹಿಡಿದು ತರಬೇತಿಗೆ ಇಳಿದರೆ ಜಗತ್ತನ್ನೇ ಮರೆತು ಬಿಡುತ್ತಿದ್ದರು. ಮನೆಯ ಎಲ್ಲರ ಪೂರ್ಣ ಬೆಂಬಲವು ಅವರಿಗೆ ದೊರೆಯಿತು ಮತ್ತು ಸಾಧನೆಗಳ ಮೆರವಣಿಗೆಯು ಆಗಲೇ ಶುರುವಾಗಿ ಬಿಟ್ಟಿತು!
1999ರಿಂದ ನಿರಂತರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದಿರುವ ಅಜ್ಜಿಗೆ ಈವರೆಗೆ 30 ರಾಷ್ಟ್ರಮಟ್ಟದ ಸ್ವರ್ಣ ಪದಕಗಳು ದೊರೆತಿವೆ!

Raja Marga Column Chandro Tomar Sharp Shooter1Raja Marga Column Chandro Tomar Sharp Shooter1

ಅಜ್ಜಿ ಜಗತ್ತಿನ ಅತ್ಯಂತ ಹಿರಿಯ ಶೂಟರ್ ಆದರು!

2010ರಲ್ಲಿ ವಿಶ್ವ ಹಿರಿಯರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ರೈಫಲ್ ಮತ್ತು ಪಿಸ್ತೂಲ್ ಎರಡೂ ವಿಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದಿರುವ ಅಜ್ಜಿ ಮುಂದೆ ಜಗತ್ತಿನ ಅತ್ಯಂತ ಹಿರಿಯ ಶೂಟರ್ ಆದರು. ಅವರು ಗೆದ್ದಿರುವ ಒಟ್ಟು 146 ಶೂಟಿಂಗ್ ಪದಕಗಳು ಅವರ ಶೋಕೇಸಲ್ಲಿ ಇವೆ! ಅದರಲ್ಲಿ ರಾಷ್ಟ್ರಮಟ್ಟದ ಪದಕಗಳು ಮೂವತ್ತಕ್ಕೂ ಹೆಚ್ಚು! 88ರ ಹರೆಯದಲ್ಲಿ ಕೂಡ ರಾಷ್ಟ್ರ ಮತ್ತು ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದಿರುವ ಆಕೆ ಪದಕದ ಮೇಲೆ ಪದಕಗಳನ್ನು ಗೆದ್ದಿದ್ದಾರೆ. ಮುಂದೆ ಅದೇ ಜೋಹರಿ ಶೂಟಿಂಗ್ ಕ್ಲಬ್ಬಿನ ಮುಖ್ಯ ಕೋಚ್ ಆಗಿ ಅಜ್ಜಿ ದೀರ್ಘಕಾಲ ದುಡಿದರು.

Raja Marga Column Chanra tomar with Tapsi Pannu
ತಾಪ್ಸಿ ಪನ್ನು ಜತೆ ಚಂದ್ರಾ ತೋಮರ್‌

ಇಡೀ ಕುಟುಂಬವೇ ಶೂಟರ್ ಕುಟುಂಬ ಆಯಿತು!

ಅವರಿಂದ ಸ್ಫೂರ್ತಿ ಪಡೆದು ಅವರ ಸೊಸೆ ಸೀಮಾ ತೋಮರ್, ಮೊಮ್ಮಗಳು ಶಿಫಾಲಿ ಇಬ್ಬರು ಕೂಡ ವಿಶ್ವ ಮಟ್ಟದ ಶೂಟರ್ ಆಗಿ ಬೆಳೆದಿದ್ದಾರೆ. ಅವರ ತಂಗಿ ಪ್ರಕಾಶಿ ತೋಮರ್ ಕೂಡ ಇಂದು ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆಲ್ಲುತ್ತಿದ್ದಾರೆ. ಅಜ್ಜಿಯ ಸ್ಫೂರ್ತಿಯಿಂದ ಮುಂದೆ ಇಡೀ ತೋಮರ್ ಕುಟುಂಬ ಶೂಟರ್ ಕುಟುಂಬವೇ ಆಗಿಬಿಟ್ಟಿದೆ! ನಾನು ಸಾಯುವ ತನಕ ಶೂಟಿಂಗ್ ಬಿಡುವುದಿಲ್ಲ ಎಂದು ಅಜ್ಜಿ ಗನ್ನು ಹಿಡಿದು ನುಡಿದರೆ ಅವರ ಕಂಗಳಲ್ಲಿ ಗೆದ್ದ ನಗು ಕಾಣುತ್ತಿತ್ತು!

ಇದನ್ನೂ ಓದಿ : Raja Marga Column : ಲಸಿಕೆ ಪ್ರಯೋಗಕ್ಕಾಗಿ ಮಗನ ಪ್ರಾಣವನ್ನೇ ಒತ್ತೆ ಇಟ್ಟ ಎಡ್ವರ್ಡ್‌ ಜೆನ್ನರ್‌!

ಅಜ್ಜಿಯ ಸಾಧನೆ ಜನಪ್ರಿಯ ಸಿನೆಮಾ ಆಯಿತು!

ಅಂದ ಹಾಗೆ ಅಜ್ಜಿಯ ಬದುಕು ಮತ್ತು ಸಾಧನೆಯಿಂದ ಸ್ಫೂರ್ತಿ ಪಡೆದು ಹಿಂದಿಯಲ್ಲಿ ‘ಸಾಂಡ ಕಿ ಆಂಖ್ ‘ಎಂಬ ಸಿನಿಮಾ(2019) ಕೂಡ ಬಂದಿದ್ದು ಅದರಲ್ಲಿ ಪ್ರಖ್ಯಾತ ನಟಿಯರಾದ ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ಅವರು ಪ್ರಮುಖವಾದ ಪಾತ್ರಗಳನ್ನು ಮಾಡಿದ್ದರು.

ಅಂತಹ ಅಜ್ಜಿ ಚಂದ್ರೋ ತೋಮರ್ 2021ನೆಯ ಇಸವಿಯಲ್ಲಿ ತನ್ನ 89ನೇ ವಯಸ್ಸಿಗೆ ನಿಧನರಾದರು. ಅತ್ಯಂತ ಬಡ ಕುಟುಂಬದಿಂದ ಬಂದ, ಶಾಲೆಗೆ ಹೋಗದೆ ಈ ಸಾಧನೆ ಮಾಡಿದ ಶೂಟರ್ ದಾದಿ ನಿಜಕ್ಕೂ ಗ್ರೇಟ್ ಅಲ್ವಾ?

Raja Marga Column Chandra tomar
#image_title
Continue Reading

ಸ್ಫೂರ್ತಿ ಕತೆ

Raja Marga Column : ಲಸಿಕೆ ಪ್ರಯೋಗಕ್ಕಾಗಿ ಮಗನ ಪ್ರಾಣವನ್ನೇ ಒತ್ತೆ ಇಟ್ಟ ಎಡ್ವರ್ಡ್‌ ಜೆನ್ನರ್‌!

Raja Marga Column : 1980ರ ನಂತರ ಜಗತ್ತಿನಲ್ಲಿ ಒಂದೇ ಒಂದು ಸಿಡುಬು ರೋಗಿ ಪತ್ತೆ ಆಗಲಿಲ್ಲ ಎಂದರೆ ಅದಕ್ಕೆ ಅವರು ಕಾರಣ. ಅವರು ಎಂದರೆ ಲಸಿಕೆ ವಿಜ್ಞಾನದ ಪಿತಾಮಹ ಡಾ. ಎಡ್ವರ್ಡ್‌ ಜೆನ್ನರ್‌. ಅವರು ತಮ್ಮ ಮೊದಲ ಲಸಿಕೆ ಪ್ರಯೋಗವನ್ನು ತನ್ನದೇ ಮಗನ ಮೇಲೆ ನಡೆಸಿದರು!

VISTARANEWS.COM


on

Raja Marga Column
Koo
RAJA MARGA COLUMN Rajendra Bhat

Raja Marga Column : ಇಡೀ ಜಗತ್ತು ಎರಡು ವರ್ಷಗಳ ಕಾಲ ಕೊರೋನಾ ಪೀಡಿತವಾಗಿ ತತ್ತರಿಸುವ ಸಂದರ್ಭದಲ್ಲಿ ಯಾರಾದರೂ ಅದಕ್ಕೆ ಲಸಿಕೆ ಕಂಡುಹಿಡಿಯಲಿ ದೇವರೇ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದದ್ದು ನಮಗೆ ಮರೆಯಲು ಸಾಧ್ಯವೇ ಇಲ್ಲ. ಇಡೀ ಜಗತ್ತಿನಲ್ಲಿ ಆ ಮಹಾಮಾರಿ ಉಂಟುಮಾಡಿದ ತಲ್ಲಣವನ್ನು ನಾವು ಮರೆಯೋದಾದರೂ ಹೇಗೆ?

ಅದೇ ರೀತಿ ಲಂಡನ್‌ನಲ್ಲಿ 1750ರ ಹೊತ್ತಿಗೆ ಸಿಡುಬು ರೋಗವು (smallpox disease) ಸ್ಫೋಟ ಆಗಿತ್ತು. ಆಗ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆಗ ತನ್ನ ಮತ್ತು ತನ್ನ ಮಗನ ಪ್ರಾಣ ಒತ್ತೆಯಿಟ್ಟು ಸಿಡುಬು ಎಂಬ ಮಹಾವೈರಸ್ ರೋಗಕ್ಕೆ ಲಸಿಕೆ (smallpox vaccine) ಕಂಡು ಹಿಡಿದ ಎಡ್ವರ್ಡ್ ಜೆನ್ನರ್- Edward Jenner (1749-1823) ಎಂಬ ಮಹಾ ವಿಜ್ಞಾನಿಯನ್ನು (English physician and scientist) ಜಗತ್ತು ಮರೆಯಲು ಸಾಧ್ಯವೇ?

Raja Marga Column Edward

Raja Marga Column : ಕಲಿಕೆಯಲ್ಲಿ ಸಾಮಾನ್ಯ ಬುದ್ಧಿಮತ್ತೆಯ ಹುಡುಗ

ಇಂಗ್ಲೆಂಡ್ ದೇಶದ ಗ್ಲಾಸೆಷ್ಟರ್‌ಶೈರ್‌ ಎಂಬ ಪುಟ್ಟ ಗ್ರಾಮದಲ್ಲಿ ಎಡ್ವರ್ಡ್ ಜನಿಸಿದರು. 5ನೆಯ ವಯಸ್ಸಿಗೆ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡರು. ಶಾಲೆಯಲ್ಲಿ ಕಲಿಯುವುದರಲ್ಲಿ ಸಾಧಾರಣ ಬುದ್ಧಿಮತ್ತೆ. ಆದರೆ ವೀಕ್ಷಣಾ ಸಾಮರ್ಥ್ಯವು ಅದ್ಭುತ.

ಬಾಲ್ಯದಲ್ಲಿ ಒಮ್ಮೆ ಅವರಿಗೂ ಸಿಡುಬು ರೋಗ ಬಂದಿತ್ತು. ಅದಕ್ಕೆ ಲಸಿಕೆಯನ್ನು ಹುಡುಕಬೇಕು ಎನ್ನುವ ತೀವ್ರವಾದ ಪ್ರಯತ್ನ ಅವರು ಆರಂಭ ಮಾಡಿದ್ದರು. ಆ ಕಾಯಿಲೆಯಲ್ಲಿ ಇಡೀ ಇಂಗ್ಲೆಂಡ್ ನರಳುತ್ತಿತ್ತು. ಸಿಡುಬು ರೋಗ ಬಂದವರು ಯಾರೂ ಬದುಕುವ ಸಾಧ್ಯತೆ ಇರಲಿಲ್ಲ.

Raja Marga Column Edward Jennar Smallpox Vaccine2

Raja Marga Column : ಎಡ್ವರ್ಡ್ ಜೆನ್ನರನ ಅದ್ಭುತ ವೀಕ್ಷಣೆ

ಆಗ ಮನುಷ್ಯರಿಗೆ ಸಿಡುಬು ಬಂದ ಹಾಗೆ ದನ, ಹಂದಿ, ಕುದುರೆಗಳಿಗೆ ಕೂಡ ಸಿಡುಬು ಬರುತ್ತಿತ್ತು. ಸಿಡುಬು ಬಂದ ದನಗಳ ಹಾಲು ಕರೆಯುವ ಹೆಂಗಸರಿಗೆ ದನದ ಸಿಡುಬಿನ ಗುಳ್ಳೆಗಳು ಕಾಣಿಸಿಕೊಂಡು ಮುಂದೆ ನಿಧಾನವಾಗಿ ಗುಣವಾಗಿ ಬಿಡುತ್ತಿದ್ದವು. ಆದರೆ ಅವರಿಗೆ ಮಾನವರ ಸಿಡುಬು ಬರುತ್ತಲೇ ಇರಲಿಲ್ಲ!

ಈ ಸೂಕ್ಷ್ಮ ವೀಕ್ಷಣೆಯು ಮುಂದೆ ಸಿಡುಬಿನ ಲಸಿಕೆ ಸಂಶೋಧನೆಗೆ ದಾರಿ ಆಯಿತು. ದನದ ಸಿಡುಬಿನ ಗುಳ್ಳೆಯ ಕೀವು ತೆಗೆದು ಮನುಷ್ಯರಿಗೆ ಚುಚ್ಚಿದಾಗ ದೇಹದಲ್ಲಿ ಮಾನವ ಸಿಡುಬಿನ ವಿರುದ್ಧ ರಕ್ಷಣೆ ದೊರೆಯುವುದು ಖಾತ್ರಿಯಾಯಿತು. ನಿರಂತರ ಪ್ರಯೋಗ ನಡೆದು ಫಲಿತಾಂಶ ದೊರೆಯಿತು. ಲಸಿಕೆ ಸಂಶೋಧನೆ ಆಯಿತು.

Raja Marga Column Edward Jennar Smallpox Vaccine2

ಆದರೆ ಲಸಿಕೆಯ ಪ್ರಯೋಗ ಮಾಡುವುದು ಯಾರ ಮೇಲೆ? ಇಬ್ಬರು ಹೆಂಗಸರು ಮುಂದೆ ಬಂದರಾದರೂ ಅಪನಂಬಿಕೆಯ ಮಾತಾಡಿದರು. ಆಗ ಮೊದಲು ಎಡ್ವರ್ಡ್ ಜೆನ್ನರ್ ತನ್ನ ಮುದ್ದಿನ ಮಗನ ಮೇಲೆ ಆ ಲಸಿಕೆ ಪ್ರಯೋಗ ಮಾಡಿದನು. ಲಸಿಕೆ ವರ್ಕ್ ಆಗದೆ ಇದ್ದರೆ ತನ್ನ ಮಗನ ಪ್ರಾಣಕ್ಕೆ ಅಪಾಯ ಇದೆ ಎಂದು ಜೆನ್ನರ್‌ಗೆ ಗೊತ್ತಿತ್ತು. ಆದರೆ ಲೋಕಕಲ್ಯಾಣದ ಸಂಕಲ್ಪದ ಮುಂದೆ ಸ್ವಾರ್ಥದ ಲವಲೇಶವೂ ಆತನಿಗೆ ಇರಲಿಲ್ಲ. ಯಶಸ್ಸು ದೊರೆತ ನಂತರ ಆ ಮಹಿಳೆಯರ ಮೇಲೆ ಲಸಿಕೆಯ ಪ್ರಯೋಗ ಮಾಡಿದನು. ಯಶಸ್ಸು ದೊರೆತಾಗ ಸ್ವರ್ಗಕ್ಕೆ ಮೂರೇ ಗೇಣು!

ಇದನ್ನೂ ಓದಿ : Raja Marga Column : ಅವರು ಕೇವಲ ಟಿ.ಎನ್‌ ಸೇಷನ್‌ ಅಲ್ಲ, ಪ್ರಜಾಪ್ರಭುತ್ವದ ಆಲ್ಸೇಷನ್‌!

ಮುಂದೆ ಜೇಮ್ಸ್ ಫೀಫ್ ಎಂಬ ಹುಡುಗನ ಮೇಲೆ ಈ ಲಸಿಕೆಯು 100% ಕೆಲಸ ಮಾಡಿದಾಗ( ಮೇ 14, 1796) ಇಡೀ ವೈದ್ಯ ಜಗತ್ತು ಆತನಿಗೆ ಜಯಕಾರ ಹಾಕಿತು. ಆತನ ದೂರದೃಷ್ಟಿ ಹಾಗೂ ಮುಂದೆ ವಿಶ್ವ ಆರೋಗ್ಯ ಸಂಸ್ಥೆಯ ಅವಿರತ ಪ್ರಯತ್ನಗಳ ಫಲವಾಗಿ ಜಗತ್ತಿನಾದ್ಯಂತ ಹುಟ್ಟಿದ ಪ್ರತೀ ಮಗುವಿಗೆ ಸಿಡುಬು ಲಸಿಕೆ ಕಡ್ಡಾಯವಾಗಿ ಹಾಕಲಾಯಿತು. ಜಗತ್ತಿನಲ್ಲಿ 1980ರ ನಂತರ ಸಿಡುಬಿನ ಯಾವ ಪ್ರಕರಣವೂ ದಾಖಲಾಗಿಲ್ಲ ಎನ್ನುವುದು ಎಡ್ವರ್ಡ್ ಜೆನ್ನರ್‌ಗೆ ದೊರೆತ ಮಹಾ ಪ್ರಶಸ್ತಿ ಅಲ್ವಾ?

ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದು ಜಗತ್ತಿಗೆ ಮಹದುಪಕಾರ ಮಾಡಿದ ಎಡ್ವರ್ಡ್ ಜೆನ್ನರ್ ಒಬ್ಬ ಲೆಜೆಂಡ್ ಅಲ್ವಾ?

ವ್ಯಾಕ್ಸಿನ್‌ಗಳ ಒಂದು ಪುಟ್ಟ ಇತಿಹಾಸ ಇಲ್ಲಿದೆ

Continue Reading
Advertisement
love jihad
ಕರ್ನಾಟಕ30 mins ago

Love Jihad Case: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್; ಬಾಲಕಿಯನ್ನು ಪುಸಲಾಯಿಸಿ ಕರೆತಂದ ಅನ್ಯಕೋಮಿನ ಯುವಕ!

BUS
ಕರ್ನಾಟಕ43 mins ago

ಚಿಕ್ಕಮಗಳೂರಿನ ದತ್ತಪೀಠದಲ್ಲಿ 100 ಅಡಿ ಆಳಕ್ಕೆ ಬಿದ್ದ ಪ್ರವಾಸಿ ಬಸ್;‌ ಬಾಲಕ ಸಾವು, 29 ಮಂದಿಗೆ ಗಾಯ

ತುಮಕೂರು1 hour ago

Sira News: ಬಿಸಿಲ ಬೇಗೆಗೆ ಮತ್ಸ್ಯಗಳ ಮಾರಣಹೋಮ; ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳ ಸಾವು

CSK vs SRH
ಕ್ರೀಡೆ1 hour ago

CSK vs SRH: ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ ಚೆನ್ನೈ; ಹೈದರಾಬಾದ್​ ವಿರುದ್ಧ 78 ರನ್​ ಅಮೋಘ ಜಯ

Notes
ಕರ್ನಾಟಕ1 hour ago

ಬೆಂಗಳೂರಿನಲ್ಲಿ ಆರ್‌ಬಿಐ ನಿಯಮ ಉಲ್ಲಂಘಿಸಿ ನೋಟು ನಗದೀಕರಣ; ಇಬ್ಬರಿಗೆ 4 ವರ್ಷ ಜೈಲು!

Narendra Modi
Lok Sabha Election 20241 hour ago

Narendra Modi: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಪ್ರಭಾವ ಸ್ಪಷ್ಟ; ಪುನರುಚ್ಚರಿಸಿದ ಮೋದಿ

cet exam karnataka exam authority
ಕರ್ನಾಟಕ2 hours ago

CET 2024: ಸಿಇಟಿ ಔಟ್ ಆಫ್ ಸಿಲಬಸ್ ಪ್ರಶ್ನೆ ಕೈ ಬಿಡಲು ನಿರ್ಧಾರ, ಮರು ಪರೀಕ್ಷೆ ಇಲ್ಲ; ಅಂಕ ಪರಿಗಣನೆ ಹೇಗೆ?

PM Narendra Modi
ಕರ್ನಾಟಕ2 hours ago

PM Narendra Modi: ನಾಳೆ ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಅಬ್ಬರದ ಪ್ರಚಾರಕ್ಕೆ ಸಿದ್ಧತೆ

Paris Olympics
ಕ್ರೀಡೆ2 hours ago

Paris Olympics: ಬೆಳ್ಳಿ ಗೆದ್ದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಶೂಟರ್​ ಮಹೇಶ್ವರಿ

Arecanut cultivation
ಚಿತ್ರದುರ್ಗ2 hours ago

Arecanut Cultivation: ಒಣಗುತ್ತಿರುವುದು ಅಡಿಕೆ ಮರಗಳಲ್ಲ, ರೈತರ ಬದುಕು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20248 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202410 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 202412 hours ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 202413 hours ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
ಪ್ರಮುಖ ಸುದ್ದಿ15 hours ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ20 hours ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20241 day ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ2 days ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ3 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

ಟ್ರೆಂಡಿಂಗ್‌