Madhya Pradesh | ಹದಗೆಟ್ಟ ರಸ್ತೆಗಳು, ಕೆಸರಾದ ಯುವಕನ ಕಾಲು ತೊಳೆದು ಕ್ಷಮೆ ಕೋರಿದ ಮಧ್ಯ ಪ್ರದೇಶದ ಸಚಿವ! - Vistara News

ದೇಶ

Madhya Pradesh | ಹದಗೆಟ್ಟ ರಸ್ತೆಗಳು, ಕೆಸರಾದ ಯುವಕನ ಕಾಲು ತೊಳೆದು ಕ್ಷಮೆ ಕೋರಿದ ಮಧ್ಯ ಪ್ರದೇಶದ ಸಚಿವ!

ತಮ್ಮ ವಿಶಿಷ್ಟ ಕಾರ್ಯವೈಖರಿಯಿಂದ ಸದಾ ಸುದ್ದಿಯಲ್ಲಿರುವ ಮಧ್ಯ ಪ್ರದೇಶದ (Madhya Pradesh) ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರು, ಇದೀಗ ಯುವಕನ ಕಾಲು ತೊಳೆದು, ಕೆಟ್ಟ ರಸ್ತೆಗಳಿಗಾಗಿ ಕ್ಷಮೆ ಕೋರಿದ್ದಾರೆ.

VISTARANEWS.COM


on

Madhya Pradesh Minister
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗ್ವಾಲಿಯರ್: ಕೆಸರಾಗಿದ್ದ ಯುವಕನೊಬ್ಬನ ಪಾದಗಳನ್ನು ತೊಳೆದ ಮಧ್ಯಪ್ರದೇಶದ (Madhya Pradesh) ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರು, ಕೆಟ್ಟ ರಸ್ತೆಗಳಿಗಾಗಿ ಯುವಕನ ಕ್ಷಮೆ ಕೋರಿದ ಘಟನೆ ಗ್ವಾಲಿಯರ್‌ನಲ್ಲಿ ನಡೆದಿದೆ. ಇಲ್ಲಿನ ವಿನಯ್‌ನಗರ ಪ್ರದೇಶದ ರಸ್ತೆಯೊಂದರಲ್ಲಿ ಚರಂಡಿಗಾಗಿ ರಸ್ತೆ ಅಗೆಯಲಾಗಿದೆ. ಆದರೆ, ರಸ್ತೆ ರಿಪೇರಿಯನ್ನು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಚಿವರು ಪರಿಶೀಲನೆ ಕಾರ್ಯ ನಡೆಸಿದ್ದರು.

ಮಧ್ಯಪ್ರದೇಶದ ಇಂಧನ ಸಚಿವರಾಗಿರುವ ತೋಮರ್ ಅವರು, ”ಕೆಟ್ಟ ಪರಿಸ್ಥಿತಿಯಲ್ಲಿರುವ ರಸ್ತೆಗಳಿಗಾಗಿ ಜನರ ಕ್ಷಮೆ ಕೋರುತ್ತೇನೆ. ಚರಂಡಿಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಶೀಘ್ರವೇ ಈ ಎಲ್ಲ ರಸ್ತೆಗಳನ್ನುರಿಪೇರಿ ಮಾಡಲಾಗುವುದು” ಎಂದು ಅವರು ತಿಳಿಸಿದ್ದಾರೆ.

ತಮ್ಮ ಕಾರ್ಯವೈಖರಿಯಿಂದ ತೋಮರ್ ಅವರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡುವುದು, ರಸ್ತೆ ಗುಡಿಸುವುದರ ಮೂಲಕ ಸುದ್ದಿಯಲ್ಲಿರುತ್ತಾರೆ. ಗ್ವಾಲಿಯರ್ ರಸ್ತೆಗಳ ದುರಸ್ತಿಗಾಗಿ ಅವರು ವಿಶಿಷ್ಟ ಬೇಡಿಕೆ ಇಡುವ ಮೂಲಕ ಕಳೆದ ತಿಂಗಳು ಸದ್ದಿಯಾಗಿದ್ದರು. ಕೇಂದ್ರ ಸಚಿವ ಜ್ಯೋತಿರಾದಿತ್ಯ ಅವರಿಗೆ ಒಂದು ಜೊತೆ ಚಪ್ಪಲಿ ನೀಡುವ ಮೂಲಕ ಗಮನ ಸೆಳೆದಿದ್ದರು. ಅಲ್ಲದೇ, ರಸ್ತೆ ರಿಪೇರಿ ಆಗೋವರೆಗೂ ಚಪ್ಪಲಿ ಹಾಕುವುದಿಲ್ಲ ಎಂದು ಶಪಥ ಮಾಡಿದ್ದರು. ಮೂರು ತಿಂಗಳವರೆಗೂ ಚಪ್ಪಲಿ ಧರಿಸಿರಲಿಲ್ಲ.

ಇದನ್ನೂ ಓದಿ | Pathan Controversy | ಪುತ್ರಿ ಜತೆ ಶಾರುಖ್‌ ಪಠಾಣ್‌ ಸಿನಿಮಾ ವೀಕ್ಷಿಸಲಿ, ನಟನಿಗೆ ಸವಾಲೆಸೆದ ಮಧ್ಯಪ್ರದೇಶ ಸ್ಪೀಕರ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

Lok Sabha Election 2024: ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

VISTARANEWS.COM


on

voting
Koo

ಹೊಸದಿಲ್ಲಿ: ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ (Democracy) ದೇಶವಾದ ಭಾರತದಲ್ಲಿ ಇಂದು ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (voting) ಆರಂಭವಾಗಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ. ಮುಂಜಾನೆ 7 ಗಂಟೆಗೇ ಆರಂಭವಾದ ವೋಟಿಂಗ್‌ಗೆ ಎಲ್ಲೆಡೆ ಉತ್ಸಾಹದ ಪ್ರತಿಕ್ರಿಯೆ ಕಂಡುಬಂತು.

ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಇಂದು ಮತದಾನ ಮಾಡಲಿರುವ ರಾಜ್ಯಗಳು

ತಮಿಳುನಾಡಿನ 39 ಕ್ಷೇತ್ರಗಳು
ರಾಜಸ್ಥಾನದ 12 ಕ್ಷೇತ್ರಗಳು
ಉತ್ತರ ಪ್ರದೇಶದ 8 ಕ್ಷೇತ್ರಗಳು
ಮಧ್ಯ ಪ್ರದೇಶದ 6 ಕ್ಷೇತ್ರಗಳು
ಉತ್ತರಾಖಂಡದ 5 ಕ್ಷೇತ್ರಗಳು
ಮಹಾರಾಷ್ಟ್ರದ 5 ಕ್ಷೇತ್ರಗಳು
ಅಸ್ಸಾಂನ 5 ಕ್ಷೇತ್ರಗಳು
ಬಿಹಾರದ 4 ಕ್ಷೇತ್ರಗಳು
ಪಶ್ಚಿಮ ಬಂಗಾಳದ 3 ಕ್ಷೇತ್ರಗಳು
ಮಣಿಪುರದ 2 ಕ್ಷೇತ್ರಗಳು
ಅರುಣಾಚಲ ಪ್ರದೇಶದ 2 ಕ್ಷೇತ್ರಗಳು
ಮೇಘಾಲಯ 2 ಕ್ಷೇತ್ರಗಳು
ಪುದುಚೆರಿ, ಅರುಣಾಚಲ ಪ್ರದೇಶ, ಛತ್ತೀಸ್‌ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

21 ರಾಜ್ಯಗಳ 102 ಕ್ಷೇತ್ರಗಳಲ್ಲಿ 11 ಎಸ್ಟಿ, 18 ಎಸ್ಸಿ, 73 ಸಾಮಾನ್ಯ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ. 1.87 ಲಕ್ಷ ಮತಗಟ್ಟೆಗಳ ನಿರ್ಮಾಣವಾಗಿದ್ದು, 16.63 ಕೋಟಿ ಮತದಾರರಿಂದ ಮತದಾನ ನಡೆಯಲಿದೆ. ಇವರಲ್ಲಿ 8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿ ಮತದಾರರು ಇದ್ದಾರೆ. 35.67 ಲಕ್ಷ ಯುವ ಸಮೂಹದಿಂದ ಮೊದಲ ಸಲ ಓಟಿಂಗ್ ನಡೆಯುತ್ತಿದೆ. 3.51 ಕೋಟಿ ಯುವ ಮತದಾರರು ಹಾಗೂ 14.14 ಲಕ್ಷ 85+ ವಯಸ್ಸಿನ ಮತದಾರರು ಇದ್ದಾರೆ.

ಕಣದಲ್ಲಿ 1625 ಅಭ್ಯರ್ಥಿಗಳು, 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳು ಚುನಾವಣಾ ಕಾರ್ಯಕ್ಕೆ ಬಳಕೆಯಾಗುತ್ತಿದೆ. 127 ಸಾಮಾನ್ಯ, 67 ಪೊಲೀಸ್, 167 ಇತರೆ ಸೇರಿ ಒಟ್ಟು 361 ಮಂದಿ ಚುನಾವಣಾ ಮೇಲ್ವಿಚಾರಕರ ನೇಮಕವಾಗಿದೆ.

ಇದನ್ನೂ ಓದಿ: Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

ಮೊದಲ ಹಂತದ ಚುನಾವಣೆಯಲ್ಲಿನ ಹೈ ವೋಲ್ಟೇಜ್ ಕ್ಷೇತ್ರಗಳು

ಬಿಕಾನೆರ್: (ರಾಜಸ್ಥಾನ )
ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)
ಗೋವಿಂದ್ ರಾಮ್ ಮೇಘವಾಲ್ (ಕಾಂಗ್ರೆಸ್)

ಅಲ್ವಾರ್ : (ರಾಜಸ್ಥಾನ )
ಭೂಪೇಂದರ್ ಯಾದವ್ (ಬಿಜೆಪಿ)
ಲಲಿತ್ ಯಾದವ್ (ಕಾಂಗ್ರೆಸ್)

ಛಿಂದ್ವಾರಾ : (ಮಧ್ಯ ಪ್ರದೇಶ )
ವಿವೇಕ್ ಬಂಟಿ ಸಾಹು (ಬಿಜೆಪಿ)
ನಕುಲ್ ಕಮಲ್ ನಾಥ್ (ಕಾಂಗ್ರೆಸ್)

ನಾಗ್ಪುರ :
ನಿತಿನ್ ಜೈರಾಮ್ ಗಡ್ಕರಿ (ಬಿಜೆಪಿ)
ವಿಕಾಸ್ ಪಾಂಡುರಂಗ ಠಾಕ್ರೆ (ಕಾಂಗ್ರೆಸ್)

ಅರುಣಾಚಲ ಪಶ್ಚಿಮ
ಕಿರಣ್ ರಿಜಿಜು (ಬಿಜೆಪಿ)
ನಬಮ್ ತುಕಿ (ಕಾಂಗ್ರೆಸ್)

ಕೊಯಮತ್ತೂರು:
ಗಣಪತಿ ರಾಜ್ ಕುಮಾರ್ (ಡಿಎಂಕೆ)
ಸಿಂಗೈ ಜಿ ರಾಮಚಂದ್ರನ್ (ಎಐಎಡಿಎಂಕೆ)
ಕೆ ಅಣ್ಣಾಮಲೈ (ಬಿಜೆಪಿ)
ಪಿ.ಆರ್ ನಟರಾಜನ್ (ಸಿಪಿಎಂ)

ಚೆನ್ನೈ ದಕ್ಷಿಣ :
ತಮಿಳಚ್ಚಿ ತಂಗಪಾಂಡಿಯನ್ (ಡಿಎಂಕೆ)
ಜೆ ಜಯವರ್ಧನ್ (ಎಐಎಡಿಎಂಕೆ)
ತಮಿಳಿಸಾಯಿ ಸೌಂದರ್ಯರಾಜನ್ (ಬಿಜೆಪಿ)

ನೀಲಗಿರಿ :
ಎ ರಾಜಾ (ಡಿಎಂಕೆ)
ಡಿ ಲೋಕೇಶ್ ತಮಿಳ್ಸೆಲ್ವನ್ (ಎಐಎಡಿಎಂಕೆ)
ಎಲ್ ಮುರುಗನ್ (ಬಿಜೆಪಿ)

ಶಿವಗಂಗಾ:
ಕಾರ್ತಿ ಪಿ ಚಿದಂಬರಂ (ಕಾಂಗ್ರೆಸ್)
ಕ್ಸೇವಿಯರ್‌ದಾಸ್ (ಎಐಎಡಿಎಂಕೆ)
ಡಿ ದೇವನಾಥನ್ ಯಾದವ್ (ಬಿಜೆಪಿ)

ಚೆನ್ನೈ ಸೆಂಟ್ರಲ್:
ದಯಾನಿಧಿ ಮಾರನ್ (ಡಿಎಂಕೆ)
ಬಿ ಪಾರ್ಥಸಾರಥಿ (ಡಿಎಂಡಿಕೆ)
ವಿನೋಜ್ ಪಿ ಸೆಲ್ವಂ (ಬಿಜೆಪಿ)

ತಿರುವಳ್ಳೂರ್:
ಸಸಿಕಾಂತ್ ಸೆಂಥಿಲ್ (ಕಾಂಗ್ರೆಸ್)
ಕೆ ನಲ್ಲ ತಂಬಿ (DMDK)
ಪೊನ್ ವಿ ಬಾಲಗಣಪತಿ (ಬಿಜೆಪಿ)

ಪಿಲಿಭಿತ್ : (ಉತ್ತರ ಪ್ರದೇಶ )
ಜಿತಿನ್ ಪ್ರಸಾದ (ಬಿಜೆಪಿ)
ಭಗವತ್ ಶರಣ್ ಗಂಗ್ವಾರ್ (ಎಸ್‌ಪಿ)
ಅನಿಸ್ ಅಹ್ಮದ್ ಖಾನ್ (ಬಿಎಸ್ಪಿ)

ಗಯಾ: (ಬಿಹಾರ್ )
ಜಿತನ್ ರಾಮ್ ಮಾಂಝಿ (HAM-S) (ಹಿಂದುಸ್ಥಾನಿ ಅವಾಮ್ ಮೋರ್ಚಾ )
ಕುಮಾರ್ ಸರ್ವಜೀತ್ (ಆರ್ಜೆಡಿ)
ವಿಜಯ್ ಮಾಂಝಿ (ಜೆಡಿಯು)

ಜೋರ್ಹತ್ : (ಅಸ್ಸಾಂ )
ತೊಪೋನ್ ಕುಮಾರ್ ಗೊಗೊಯ್ (ಬಿಜೆಪಿ)
ಗೌರವ್ ಗೊಗೊಯ್ (ಕಾಂಗ್ರೆಸ್)

ಉತ್ತರಾಖಂಡ

ಹರಿದ್ವಾರ:
ವೀರೇಂದ್ರ ರಾವತ್ (ಕಾಂಗ್ರೆಸ್)
ತ್ರಿವೇಂದ್ರ ಸಿಂಗ್ ರಾವತ್ (ಬಿಜೆಪಿ )
[7:00 am, 19/04/2024] harish kera: ಲೋಕಸಭಾ ಚುನಾವಣೆಯ ಮೊದಲ ಹಂತದ ರಾಜ್ಯ ಹಾಗೂ ಕ್ಷೇತ್ರಗಳು

ತಮಿಳುನಾಡು

  1. ಕಾಂಚೀಪುರಂ:
    ಜಿ ಸೆಲ್ವಂ (ಡಿಎಂಕೆ)
    ರಾಜಶೇಖರ್ (ಎಐಎಡಿಎಂಕೆ)
    ವೆಂಕಟೇಶನ್ (ಪಿಎಂಕೆ)
  2. ಅರಕ್ಕೋಣಂ:
    ಎಸ್ ಜಗತ್ರಕ್ಷಕನ್ (ಡಿಎಂಕೆ)
    ಎಎಲ್ ವಿಜಯನ್ (ಎಐಎಡಿಎಂಕೆ)
    ಕೆ ಬಾಲು (ಪಿಎಂಕೆ)
  3. ತಿರುವಳ್ಳೂರ್:
    ಸಸಿಕಾಂತ್ ಸೆಂಥಿಲ್ (ಕಾಂಗ್ರೆಸ್)
    ಕೆ ನಲ್ಲ ತಂಬಿ (DMDK)
    ಪೊನ್ ವಿ ಬಾಲಗಣಪತಿ (ಬಿಜೆಪಿ)
  4. ಚೆನ್ನೈ ಉತ್ತರ :
    ಕಲಾನಿಧಿ ವೀರಸ್ವಾಮಿ (ಡಿಎಂಕೆ)
    ರಾಯಪುರಂ ಆರ್ ಮನೋ (ಎಐಎಡಿಎಂಕೆ)
    ಆರ್ ಸಿ ಪಾಲ್ ಕನಕರಾಜ್ (ಬಿಜೆಪಿ)
  5. ಚೆನ್ನೈ ದಕ್ಷಿಣ :
    ತಮಿಳಚ್ಚಿ ತಂಗಪಾಂಡಿಯನ್ (ಡಿಎಂಕೆ)
    ಜೆ ಜಯವರ್ಧನ್ (ಎಐಎಡಿಎಂಕೆ)
    ತಮಿಳಿಸಾಯಿ ಸೌಂದರ್ಯರಾಜನ್ (ಬಿಜೆಪಿ)
  6. ಚೆನ್ನೈ ಸೆಂಟ್ರಲ್:
    ದಯಾನಿಧಿ ಮಾರನ್ (ಡಿಎಂಕೆ)
    ಬಿ ಪಾರ್ಥಸಾರಥಿ (ಡಿಎಂಡಿಕೆ)
    ವಿನೋಜ್ ಪಿ ಸೆಲ್ವಂ (ಬಿಜೆಪಿ)
  7. ವೆಲ್ಲೂರು:
    ಡಿಎಂ ಕತೀರ್ ಆನಂದ್ (ಡಿಎಂಕೆ)
    ಎಸ್ ಪಶುಪತಿ (ಎಐಎಡಿಎಂಕೆ)
    ಎಸಿ ಷಣ್ಮುಗಂ (ಬಿಜೆಪಿ)
  8. ತಿರುವಣ್ಣಾಮಲೈ:
    ಸಿಎನ್ ಅಣ್ಣಾದೊರೈ (ಡಿಎಂಕೆ)
    ಎಂ ಕಲಿಯಪೆರುಮಾಳ್ (ಎಐಎಡಿಎಂಕೆ)
    ಬಿ ಅಶ್ವಥಾಮನ್ (ಬಿಜೆಪಿ)
  9. ಧರ್ಮಪುರಿ:
    ಎ ಮಣಿ (ಡಿಎಂಕೆ)
    ಆರ್ ಅಶೋಕನ್ (ಎಐಎಡಿಎಂಕೆ)
    ಸೌಮ್ಯಾ ಅಂಬುಮಣಿ (ಪಿಎಂಕೆ)
  10. ಕೃಷ್ಣಗಿರಿ :
    ಕೆ ಗೋಪಿನಾಥ್ (ಕಾಂಗ್ರೆಸ್)
    ವಿ ಜಯಪ್ರಕಾಶ್ (ಎಐಎಡಿಎಂಕೆ)
    ಸಿ ನರಸಿಂಹನ್ (ಬಿಜೆಪಿ)
  11. ಶ್ರೀಪೆರಂಬದೂರ್ :
    ಟಿ ಆರ್ ಬಾಲು (ಡಿಎಂಕೆ)
    ಜಿ ಪ್ರೇಮಕುಮಾರ್ (ಎಐಎಡಿಎಂಕೆ)
  12. ವಿಲುಪ್ಪುರಂ:
    ಡಿ ರವಿಕುಮಾರ್ (ಡಿಎಂಕೆ)
    ಜೆ ಬಕ್ಕಿಯರಾಜ್ (ಎಐಎಡಿಎಂಕೆ)
    ಮುರಳಿ ಶಂಕರ್ (ಪಿಎಂಕೆ)
  13. ಕೊಯಮತ್ತೂರು:
    ಗಣಪತಿ ರಾಜ್ ಕುಮಾರ್ (ಡಿಎಂಕೆ)
    ಸಿಂಗೈ ಜಿ ರಾಮಚಂದ್ರನ್ (ಎಐಎಡಿಎಂಕೆ)
    ಕೆ ಅಣ್ಣಾಮಲೈ (ಬಿಜೆಪಿ)
    ಪಿ.ಆರ್ ನಟರಾಜನ್ (ಸಿಪಿಎಂ)
  14. ನೀಲಗಿರಿ :
    ಎ ರಾಜಾ (ಡಿಎಂಕೆ)
    ಡಿ ಲೋಕೇಶ್ ತಮಿಳ್ಸೆಲ್ವನ್ (ಎಐಎಡಿಎಂಕೆ)
    ಎಲ್ ಮುರುಗನ್ (ಬಿಜೆಪಿ)
  15. ಈರೋಡ್:
    ಕೆ.ಇ.ಪ್ರಕಾಶ್ (ಡಿಎಂಕೆ)
    ಆತ್ರಾಳ್ ಅಶೋಕ್ ಕುಮಾರ್ (ಎಐಎಡಿಎಂಕೆ)
    ಪಿ ವಿಜಯಕುಮಾರ್ (ಟಿಎಂಸಿ-ಎಂ)
  16. ತಿರುಪ್ಪೂರ್:
    ಕೆ ಸುಬ್ಬರಾಯ (ಸಿಪಿಐ)
    ಪಿ ಅರುಣಾಚಲಂ (ಎಐಎಡಿಎಂಕೆ)
    ಎಪಿ ಮುರುಗಾನಂದಂ (ಬಿಜೆಪಿ)
  17. ನಾಮಕ್ಕಲ್:
    ವಿ ಎಸ್ ಮಾಥೇಶ್ವರನ್ (ಡಿಎಂಕೆ)
    ಎಸ್ ತಮಿಳು ಮಣಿ (ಎಐಎಡಿಎಂಕೆ)
    ಕೆಪಿ ರಾಮಲಿಂಗಂ (ಬಿಜೆಪಿ)
  18. ಸೇಲಂ :
    ಟಿಎಂ ಸೆಲ್ವಗಣಪತಿ (ಡಿಎಂಕೆ)
    ಪಿ ವಿಘ್ನೇಶ್ (ಎಐಎಡಿಎಂಕೆ)
    ಎನ್ ಅಣ್ಣಾದೊರೈ (ಪಿಎಂಕೆ)
  19. ಅರಣಿ:
    ಎಂಎಸ್ ತರಣಿವೇಂದನ್ (ಡಿಎಂಕೆ)
    ಜಿವಿ ಗಜೇಂದ್ರನ್ (ಎಐಎಡಿಎಂಕೆ)
    ಎ ಗಣೇಶಕುಮಾರ್ (ಪಿಎಂಕೆ)
  20. ಕಲ್ಲಕುರಿಚಿ:
    ಡಿ ಮಲೈಯರಸನ್ (ಡಿಎಂಕೆ)
    ಆರ್ ಕುಮಾರಗುರು (ಎಐಎಡಿಎಂಕೆ)
    ದೇವದಾಸ್ ಒಡೆಯರ್ (ಪಿಎಂಕೆ)
  21. ಕನ್ಯಾಕುಮಾರಿ:
    ವಿಜಯ ವಸಂತ್ (ಕಾಂಗ್ರೆಸ್)
    ನಜೆರತ್ ಪಸಿಲಿಯನ್ (AIADMK)
    ಪೊನ್ ರಾಧಾಕೃಷ್ಣನ್ (ಬಿಜೆಪಿ)
  22. ತೂತುಕ್ಕುಡಿ:
    ಕನಿಮೊಳಿ ಕರುಣಾನಿಧಿ (ಡಿಎಂಕೆ)
    ಆರ್ ಶಿವಸಾಮಿ ವೇಲುಮಣಿ (ಎಐಎಡಿಎಂಕೆ)
    ವಿಜಯಶೀಲನ್ (TMC-M)
  23. ವಿರುದುನಗರ:
    ಮಾಣಿಕಂ ಟ್ಯಾಗೋರ್ (ಕಾಂಗ್ರೆಸ್)
    ವಿ ವಿಜಯ ಪ್ರಭಾಕರನ್ (DMDK)
    ರಾಧಿಕಾ ಶರತ್‌ಕುಮಾರ್ (ಬಿಜೆಪಿ)
  24. ತೆಂಕಶಿ :
    ಡಾ ರಾಣಿ ಶ್ರೀಕುಮಾರ್ (ಡಿಎಂಕೆ)
    ಕೆ ಕೃಷ್ಣಸಾಮಿ (ಎಐಎಡಿಎಂಕೆ)
    ಜಾನ್ ಪಾಂಡಿಯನ್ (ಬಿಜೆಪಿ)
  25. ರಾಮನಾಥಪುರ:
    ಕಣಿ ಕೆ ನವಾಸ್: IUML
    ಪಿ ಜಯಪೆರುಮಾಳ್: ಎಐಎಡಿಎಂಕೆ
    ಓ ಪನ್ನೀರಸೆಲ್ವಂ: ಪಕ್ಷೇತರ

26.ಥೇನಿ:
ತಂಗ ತಮಿಳ್ ಸೆಲ್ವನ್ (ಡಿಎಂಕೆ)
ವಿಟಿ ನಾರಾಯಣಸ್ವಾಮಿ (ಎಐಎಡಿಎಂಕೆ)
ಟಿಟಿವಿ ದಿನಕರನ್ (ಎಎಂಎಂಕೆ)

  1. ತಂಜಾವೂರು :
    ಎಸ್ ಮುರಸೊಲಿ (ಡಿಎಂಕೆ)
    ಪಿ ಶಿವನೇಶನ್ (DMDK)
    ಎಂ ಮುರುಗಾನಂದಂ (ಬಿಜೆಪಿ)
  2. ಶಿವಗಂಗಾ:
    ಕಾರ್ತಿ ಪಿ ಚಿದಂಬರಂ (ಕಾಂಗ್ರೆಸ್)
    ಕ್ಸೇವಿಯರ್‌ದಾಸ್ (ಎಐಎಡಿಎಂಕೆ)
    ಡಿ ದೇವನಾಥನ್ ಯಾದವ್ (ಬಿಜೆಪಿ)
  3. ಮಧುರೈ :
    ಎಸ್ ವೆಂಕಟೇಶನ್ (ಸಿಪಿಎಂ)
    ಪಿ ಸರವಣನ್ (ಎಐಎಡಿಎಂಕೆ)
    ರಾಮ ಶ್ರೀನಿವಾಸನ್ (ಬಿಜೆಪಿ)
  4. ತಿರುನೆಲ್ವೇಲಿ:
    ಸಿ ರಾಬರ್ಟ್ ಬ್ರೂಸ್ (ಕಾಂಗ್ರೆಸ್)
    ಎಂ ಜಾನ್ಸಿ ರಾಣಿ (ಎಐಎಡಿಎಂಕೆ)
    ನೈನಾರ್ ನಾಗೇಂದ್ರನ್ (ಬಿಜೆಪಿ)
  5. ಪೊಲ್ಲಾಚಿ:
    ಕೆ ಈಶ್ವರಸ್ವಾಮಿ (ಡಿಎಂಕೆ)
    ಕಾರ್ತಿಕೇಯನ್ (ಎಐಎಡಿಎಂಕೆ)
    ಕೆ ವಸಂತರಾಜನ್ (ಬಿಜೆಪಿ)
  6. ಕರೂರ್ :
    ಜೋತಿಮಣಿ ಸೆನ್ನಿಮಲೈ (ಕಾಂಗ್ರೆಸ್)
    ಕೆಆರ್‌ಎಲ್ ತಂಗವೇಲ್ (ಎಐಎಡಿಎಂಕೆ)
    ವಿವಿ ಸೆಂಥಿಲನಾಥನ್ (ಬಿಜೆಪಿ)
  7. ದಿಂಡಿಗಲ್:
    ಆರ್ ಸಚ್ಚಿದಾನಂದಂ (ಸಿಪಿಎಂ)
    ವಿಎಂಎಸ್ ಮೊಹಮ್ಮದ್ ಮುಬಾರಕ್ (ಎಐಎಡಿಎಂಕೆ)
    ಎಂ ತಿಲಗಬಾಮ (ಪಿಎಂಕೆ)
  8. ಪೆರಂಬಲೂರು :
    ಅರುಣ್ ನೆಹರು (ಡಿಎಂಕೆ)
    ಎನ್‌ಡಿ ಚಂದ್ರಮೋಹನ್ (ಎಐಎಡಿಎಂಕೆ)
    ಟಿಆರ್ ಪಾರಿವೇಂದರ್ (ಬಿಜೆಪಿ)
  9. ಕುಡಲೋರು:
    ಎಂಕೆ ವಿಷ್ಣು ಪ್ರಸಾದ್ (ಕಾಂಗ್ರೆಸ್)
    ಪಿ ಶಿವಕೊಜಂದು (ಡಿಎಂಡಿಕೆ)
    ತಂಗರ್ ಬಚನ್ (ಪಿಎಂಕೆ)
  10. ತಿರುಚಿರಾಪಳ್ಳಿ:
    ದುರೈ ವೈಕೋ (MDMK)
    ಪಿ ಕರುಪ್ಪಯ್ಯ (ಎಐಎಡಿಎಂಕೆ)
    ಪಿ ಸೆಂಥಿಲ್ನಾಥನ್ (AMMK)
  11. ಚಿದಂಬರಂ:
    ತೊಲ್ ತಿರುಮಾವಳವನ್ (ವಿಸಿಕೆ)
    ಎಂ ಚಂದ್ರಹಾಸನ್ (ಎಐಎಡಿಎಂಕೆ)
    ಪಿ ಕಾರ್ತಿಯಾಯಿನಿ (ಬಿಜೆಪಿ)
  12. ನಾಗಪಟ್ಟಿಣಂ:
    ವಿ ಸೆಲ್ವರಾಜ್ (ಸಿಪಿಐ)
    ಡಾ ಜಿ ಸುರ್ಜಿತ್ ಶಂಕರ್ (ಎಐಎಡಿಎಂಕೆ)
    ಎಸ್‌ಜಿಎಂ ರಮೇಶ್ (ಬಿಜೆಪಿ)
  13. ಮೈಲಾಡುತುರೈ:
    ಆರ್ ಸುಧಾ (ಕಾಂಗ್ರೆಸ್)
    ಪಿ ಬಾಬು (ಎಐಎಡಿಎಂಕೆ)
    ಮಾ ಕಾ ಸ್ಟಾಲಿನ್ (ಪಿಎಂಕೆ)

ರಾಜಸ್ಥಾನ

  1. ಸಿಕರ್:
    ಸುಮೇಧಾನಂದ ಸರಸ್ವತಿ (ಬಿಜೆಪಿ)
    ಅಮ್ರ ರಾಮ್ ಪರಸ್ವಾಲ್ (ಸಿಪಿಎಂ)
  2. ಚುರು :
    ದೇವೇಂದ್ರ ಜಜಾರಿಯಾ (ಬಿಜೆಪಿ)
    ರಾಹುಲ್ ಕಸ್ವಾನ್ (ಕಾಂಗ್ರೆಸ್)
  3. ಜುಂಜುನು :
    ಸುಭಕರನ್ ಚೌಧರಿ (ಬಿಜೆಪಿ)
    ಬ್ರಿಜೇಂದ್ರ ಸಿಂಗ್ ಓಲಾ (ಕಾಂಗ್ರೆಸ್)
  4. ಬಿಕಾನೆರ್:
    ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)
    ಗೋವಿಂದ್ ರಾಮ್ ಮೇಘವಾಲ್ (ಕಾಂಗ್ರೆಸ್)
  5. ಗಂಗಾನಗರ :
    ಪ್ರಿಯಾಂಕಾ ಬಾಲನ್ ಮೇಘವಾಲ್ (ಬಿಜೆಪಿ)
    ಕುಲದೀಪ್ ಇಂದೋರಾ (ಕಾಂಗ್ರೆಸ್
  6. ಜೈಪುರ :
    ಮಂಜು ಶರ್ಮಾ (ಬಿಜೆಪಿ)
    ಪ್ರತಾಪ್ ಸಿಂಗ್ ಖಚರಿಯಾವಾಸ್ (ಕಾಂಗ್ರೆಸ್)
  7. ಜೈಪುರ ಗ್ರಾಮಾಂತರ:
    ರಾವ್ ರಾಜೇಂದ್ರ ಸಿಂಗ್ (ಬಿಜೆಪಿ)
    ಅನಿಲ್ ಚೋಪ್ರಾ (ಕಾಂಗ್ರೆಸ್)

47.ಅಲ್ವಾರ್ :
ಭೂಪೇಂದರ್ ಯಾದವ್ (ಬಿಜೆಪಿ)
ಲಲಿತ್ ಯಾದವ್ (ಕಾಂಗ್ರೆಸ್)

  1. ದೌಸಾ :
    ಕನ್ಹಯ್ಯಾ ಲಾಲ್ ಮೀನಾ (ಬಿಜೆಪಿ)
    ಮುರಾರಿ ಲಾಲ್ ಮೀನಾ (ಕಾಂಗ್ರೆಸ್)
  2. ನಾಗೌರ್:
    ಜ್ಯೋತಿ ಮಿರ್ಧಾ (ಬಿಜೆಪಿ)
    ಹನುಮಾನ್ ಬೇನಿವಾಲ್ (RLP) ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ
  3. ಕರೌಲಿ-ಧೋಲ್ಪುರ್:
    ಇಂದು ದೇವಿ ಜಾತವ್ (ಬಿಜೆಪಿ)
    ಭಜನ್ ಲಾಲ್ ಜಾತವ್ (ಕಾಂಗ್ರೆಸ್)
  4. ಭರತಪುರ:
    ರಾಮಸ್ವರೂಪ್ ಕೋಲಿ (ಬಿಜೆಪಿ)
    ಸಂಜನಾ ಜಾತವ್ (ಕಾಂಗ್ರೆಸ್)

ಉತ್ತರಪ್ರದೇಶ

  1. ಸಹರಾನ್ಪುರ್:
    ರಾಘವ್ ಲಖನ್‌ಪಾಲ್ (ಬಿಜೆಪಿ)
    ಇಮ್ರಾನ್ ಮಸೂದ್ (ಕಾಂಗ್ರೆಸ್)
    ಮಜೀದ್ ಅಲಿ (BSP)
  2. ಕೈರಾನಾ:
    ಪ್ರದೀಪ್ ಕುಮಾರ್ ಚೌಧರಿ (ಬಿಜೆಪಿ)
    ಇಕ್ರಾ ಹಸನ್ ಚೌಧರಿ (ಎಸ್‌ಪಿ)
    ಶ್ರೀಪಾಲ್ (ಬಿಎಸ್ಪಿ)
  3. ಮುಜಾಫರ್‌ನಗರ
    ಸಂಜೀವ್ ಕುಮಾರ್ ಬಲ್ಯಾನ್ (ಬಿಜೆಪಿ)
    ಹರೇಂದ್ರ ಸಿಂಗ್ ಮಲಿಕ್ (ಎಸ್‌ಪಿ)
    ದಾರಾ ಸಿಂಗ್ ಪ್ರಜಾಪತಿ (BSP)
  4. ಬಿಜ್ನೋರ್
    ಚಂದನ್ ಚೌಹಾಣ್ (RLD)
    ದೀಪಕ್ ಸೈನಿ (SP)
    ಚೌಧರಿ ವಿಜೇಂದರ್ ಸಿಂಗ್ (ಬಿಎಸ್ಪಿ)
  5. ನಾಗಿನಾ :
    ಓಂ ಕುಮಾರ್ (ಬಿಜೆಪಿ)
    ಮನೋಜ್ ಕುಮಾರ್ (ಎಸ್ಪಿ)
    ಸುರೇಂದ್ರ ಪಾಲ್ ಸಿಂಗ್ (ಬಿಎಸ್ಪಿ)
  6. ಮೊರಾದಾಬಾದ್ :
    ಕುನ್ವರ್ ಸರ್ವೇಶ್ ಕುಮಾರ್ ಸಿಂಗ್ (ಬಿಜೆಪಿ)
    ರುಚಿ ವೀರ್ (ಎಸ್‌ಪಿ)
    ಮೊಹಮ್ಮದ್ ಇರ್ಫಾನ್ ಸೈಫಿ (ಬಿಎಸ್ಪಿ)
  7. ರಾಂಪುರ:
    ಘನಶ್ಯಾಮ್ ಸಿಂಗ್ ಲೋಧಿ (ಬಿಜೆಪಿ)
    ಮೊಹಿಬುಲ್ಲಾ ನದ್ವಿ (ಎಸ್‌ಪಿ)
    ಜೀಶನ್ ಖಾನ್ (BSP)
  8. ಪಿಲಿಭಿತ್ :
    ಜಿತಿನ್ ಪ್ರಸಾದ (ಬಿಜೆಪಿ)
    ಭಗವತ್ ಶರಣ್ ಗಂಗ್ವಾರ್ (ಎಸ್‌ಪಿ)
    ಅನಿಸ್ ಅಹ್ಮದ್ ಖಾನ್ (ಬಿಎಸ್ಪಿ)

ಮಧ್ಯಪ್ರದೇಶ

  1. ಸಿದ್ಧಿ :
    ಡಾ ರಾಜೇಶ್ ಮಿಶ್ರಾ (ಬಿಜೆಪಿ)
    ಕಮಲೇಶ್ವರ್ ಕುಮಾರ್ ಪಟೇಲ್ (ಕಾಂಗ್ರೆಸ್)
  2. ಶಹದೋಲ್:
    ಹಿಮಾದ್ರಿ ಸಿಂಗ್ (ಬಿಜೆಪಿ)
    ಫುಂಡೇಲಾಲ್ ಸಿಂಗ್ ಮಾರ್ಕೊ (ಕಾಂಗ್ರೆಸ್)
  3. ಜಬಲ್ಪುರ್ :
    ಆಶಿಶ್ ದುಬೆ (ಬಿಜೆಪಿ)
    ದಿನೇಶ್ ಯಾದವ್ (ಕಾಂಗ್ರೆಸ್)
  4. ಮಂಡಲ :
    ಫಗ್ಗನ್ ಸಿಂಗ್ ಕುಲಸ್ತೆ (ಬಿಜೆಪಿ)
    ಓಂಕಾರ್ ಸಿಂಗ್ ಮಾರ್ಕಮ್ (ಕಾಂಗ್ರೆಸ್)
  5. ಬಾಲಘಾಟ್ :
    ಭಾರತಿ ಪಾರ್ಧಿ (ಬಿಜೆಪಿ)
    ಸಾಮ್ರಾಟ್ ಸಾರಸ್ವತ್ (ಕಾಂಗ್ರೆಸ್)
  6. ಛಿಂದ್ವಾರಾ :
    ವಿವೇಕ್ ಬಂಟಿ ಸಾಹು (ಬಿಜೆಪಿ)
    ನಕುಲ್ ಕಮಲ್ ನಾಥ್ (ಕಾಂಗ್ರೆಸ್)

ಉತ್ತರಾಖಂಡ

  1. ತೆಹ್ರಿ ಗರ್ವಾಲ್:
    ಮಾಲಾ ರಾಜ ಲಕ್ಷ್ಮಿ ಶಾ (ಬಿಜೆಪಿ)
    ಜೋತ್ ಸಿಂಗ್ ಗುನ್ಸೋಲಾ (ಕಾಂಗ್ರೆಸ್)
  2. ಅಲ್ಮೋರಾ:
    ಅಜಯ್ ತಮ್ತಾ (ಬಿಜೆಪಿ)
    ಪ್ರದೀಪ್ ತಮ್ತಾ (ಕಾಂಗ್ರೆಸ್)
  3. ಗರ್ವಾಲ್ :
    ಅನಿಲ್ ಬಲುನಿ (ಬಿಜೆಪಿ)
    ಗಣೇಶ್ ಗೋಡಿಯಾಲ್ (ಕಾಂಗ್ರೆಸ್)
  4. ನೈನಿತಾಲ್-ಉದಮ್ಸಿಂಗ್ ನಗರ:
    ಅಜಯ್ ತಮ್ಮಟಾ (ಬಿಜೆಪಿ)
    ಪ್ರಕಾಶ್ ಜೋಶಿ (ಕಾಂಗ್ರೆಸ್)
  5. ಹರಿದ್ವಾರ:
    ತ್ರಿವೇಂದ್ರ ಸಿಂಗ್ ರಾವತ್ (ಬಿಜೆಪಿ)
    ವೀರೇಂದ್ರ ರಾವತ್ (ಕಾಂಗ್ರೆಸ್)

ಮಹಾರಾಷ್ಟ್ರ

  1. ರಾಮ್ಟೆಕ್:
    ರಾಜು ದೇವನಾಥ ಪರ್ವೆ (ಶಿವಸೇನೆ)
    ಶ್ಯಾಮಕುಮಾರ್ ದೌಲತ್ ಬರ್ವೆ (ಕಾಂಗ್ರೆಸ್)
  2. ನಾಗ್ಪುರ :
    ನಿತಿನ್ ಜೈರಾಮ್ ಗಡ್ಕರಿ (ಬಿಜೆಪಿ)
    ವಿಕಾಸ್ ಪಾಂಡುರಂಗ ಠಾಕ್ರೆ (ಕಾಂಗ್ರೆಸ್)
  3. ಭಂಡಾರ-ಗೊಂಡಿಯಾ
    ಸುನಿಲ್ ಬಾಬುರಾವ್ ಮೆಂಡೆ (ಬಿಜೆಪಿ)
    ಡಾ ಪ್ರಶಾಂತ್ ಯಾದವರಾವ್ ಪಡೋಲೆ (ಕಾಂಗ್ರೆಸ್)
  4. ಗಡ್ಚಿರೋಲಿ-ಚಿಮೂರ್:
    ಅಶೋಕ್ ಮಹದೇವರಾವ್ ನೇತೆ (ಬಿಜೆಪಿ)
    ಡಾ ನಾಮದೇವ ದಾಸರಾಂ ಕಿರ್ಸನ್ (ಕಾಂಗ್ರೆಸ್)
  5. ಚಂದ್ರಾಪುರ:
    ಸುಧೀರ್ ಮುಂಗಂತಿವಾರ್ (ಬಿಜೆಪಿ)
    ಪ್ರತಿಭಾ ಸುರೇಶ್ ಧನೋರ್ಕರ್ (ಕಾಂಗ್ರೆಸ್)

ಅಸ್ಸಾಂ

  1. ಸೋನಿತ್ಪುರ್ :
    ರಂಜಿತ್ ದತ್ತಾ (ಬಿಜೆಪಿ)
    ಪ್ರೇಮಲಾಲ್ ಗಂಜು (ಕಾಂಗ್ರೆಸ್)
    ರಾಜು ದೇರಿ (BPF)
  2. ಕಾಜಿರಂಗ :
    ಕಾಮಾಖ್ಯ ಪ್ರಸಾದ್ ತಾಸಾ (ಬಿಜೆಪಿ)
    ರೋಸೆಲಿನಾ ಟಿರ್ಕಿ (ಕಾಂಗ್ರೆಸ್)
  3. ದಿಬ್ರುಗಢ :
    ಸರ್ಬಾನಂದ ಸೋನೋವಾಲ್ (ಬಿಜೆಪಿ)
    ಲುರಿಂಜ್ಯೋತಿ ಗೊಗೋಯ್ (ಎಜೆಪಿ)
  4. ಲಖಿಂಪುರ:
    ಪ್ರದಾನ್ ಬರುವಾ (ಬಿಜೆಪಿ)
    ಉದಯಶಂಕರ್ ಹಜಾರಿಕಾ (ಕಾಂಗ್ರೆಸ್)
  5. ಜೋರ್ಹತ್ :
    ತೊಪೋನ್ ಕುಮಾರ್ ಗೊಗೊಯ್ (ಬಿಜೆಪಿ)
    ಗೌರವ್ ಗೊಗೊಯ್ (ಕಾಂಗ್ರೆಸ್)

ಬಿಹಾರ್

  1. ಔರಂಗಾಬಾದ್:
    ಬಿಹಾರ ಸುಶೀಲ್ ಕುಮಾರ್ ಸಿಂಗ್ (ಬಿಜೆಪಿ)
    ಅಭಯ್ ಕುಮಾರ್ ಸಿನ್ಹಾ (ಆರ್‌ಜೆಡಿ)
  2. ಗಯಾ:
    ಜಿತನ್ ರಾಮ್ ಮಾಂಝಿ (HAM-S) (ಹಿಂದುಸ್ಥಾನಿ ಅವಾಮ್ ಮೋರ್ಚಾ )
    ಕುಮಾರ್ ಸರ್ವಜೀತ್ (ಆರ್ಜೆಡಿ)
    ವಿಜಯ್ ಮಾಂಝಿ (ಜೆಡಿಯು)
  3. ನಾವಡ:
    ವಿವೇಕ್ ಠಾಕೂರ್ (ಬಿಜೆಪಿ)
    ಶ್ರವಣ್ ಕುಮಾರ್ ಕುಶ್ವಾಹ (ಆರ್‌ಜೆಡಿ)
    ಚಂದನ್ ಸಿಂಗ್ (ಎಲ್‌ಜೆಪಿ)
  4. ಜಮುಯಿ:
    ಅರುಣ್ ಭಾರತಿ (LJP-RV)
    ಅರ್ಚನಾ ಕುಮಾರಿ (ಆರ್‌ಜೆಡಿ)
    ಚಿರಾಗ್ ಪಾಸ್ವಾನ್ (LJP)

ಪಶ್ಚಿಮ ಬಂಗಾಳ

  1. ಕೂಚ್ ಬೆಹಾರ್ :
    ನಿಸಿತ್ ಪ್ರಮಾಣಿಕ್ (ಬಿಜೆಪಿ)
    ಜಗದೀಶ್ ಚಂದ್ರ ಬರ್ಮಾ ಬಸುನಿಯಾ (ಟಿಎಂಸಿ)
    ನಿತೀಶ್ ಚಂದ್ರ ರಾಯ್ (AIFB)
    ಪಿಯಾ ರಾಯ್ ಚೌಧರಿ (ಕಾಂಗ್ರೆಸ್)
  2. ಜಲ್ಪೈಗುರಿ:
    ಜಯಂತ ಕುಮಾರ್ ರಾಯ್ (ಬಿಜೆಪಿ)
    ನಿರ್ಮಲ್ ಚಂದ್ರ ರಾಯ್ (ಟಿಎಂಸಿ)
    ದೇಬ್ರಾಜ್ ಬರ್ಮನ್ (ಸಿಪಿಎಂ)
  3. ಅಲಿಪುರ್ದುವಾಸ್:
    ಮನೋಜ್ ತಿಗ್ಗಾ (ಬಿಜೆಪಿ)
    ಪ್ರಕಾಶ್ ಚಿಕ್ ಬರೈಕ್ (ಟಿಎಂಸಿ)
    ಮಿಲಿ ಓರಾನ್ (RSP)

ಅರುಣಾಚಾಲ ಪ್ರದೇಶ

  1. ಅರುಣಾಚಲ ಪಶ್ಚಿಮ
    ಕಿರಣ್ ರಿಜಿಜು (ಬಿಜೆಪಿ)
    ನಬಮ್ ತುಕಿ (ಕಾಂಗ್ರೆಸ್)
  2. ಅರುಣಾಚಲ ಪೂರ್ವ
    ತಾಪಿರ್ ಗಾವೊ (ಬಿಜೆಪಿ)
    ಬೋಸಿರಾಮ್ ಸಿರಾಮ್ (ಕಾಂಗ್ರೆಸ್)

ಮೇಘಾಲಯ

  1. ತುರಾ:
    ಅಗಾಥಾ ಕೆ ಸಂಗ್ಮಾ (NPP)
    ಸಲೇಂಗ್ ಎ ಸಂಗ್ಮಾ (ಕಾಂಗ್ರೆಸ್)
    ಜೆನಿತ್ ಎಂ ಸಂಗ್ಮಾ (ಟಿಎಂಸಿ)
  2. ಶಿಲ್ಲಾಂಗ್:
    ಡಾ ಮಜೆಲ್ ಅಂಪಾರೀನ್ ಲಿಂಗ್ಡೋಹ್ (NPP)
    ವಿನ್ಸೆಂಟ್ ಎಚ್ ಪಾಲಾ (ಕಾಂಗ್ರೆಸ್)
    ರಾಬರ್ಟ್ ಜೂನ್ ಖರ್ಜಹ್ರಿನ್ (ಯುಡಿಪಿ)

ಮಣಿಪುರ

  1. ಔಟರ್ ಮಣಿಪುರ :
    ಕಚುಯಿ ತಿಮೋತಿ ಝಿಮಿಕ್ (NPF)
    ಆಲ್ಫ್ರೆಡ್ ಕಂಗಮ್ ಎಸ್ ಆರ್ಥರ್ (ಕಾಂಗ್ರೆಸ್)
  2. ಇನ್ನರ್ ಮಣಿಪುರ:
    ತೌನೊಜಂ ಬಸಂತ ಕುಮಾರ್ ಸಿಂಗ್ (ಬಿಜೆಪಿ)
    ಅಂಗೋಮ್ಚಾ ಬಿಮೋಲ್ ಅಕೋಯಿಜಮ್ (ಕಾಂಗ್ರೆಸ್)

94.ಪಶ್ಚಿಮ ತ್ರಿಪುರಾ
ಬಿಪ್ಲಬ್ ಕುಮಾರ್ ದೇಬ್ (ಬಿಜೆಪಿ)
ಆಶಿಶ್ ಕುಮಾರ್ ಸಹಾ (ಕಾಂಗ್ರೆಸ್)

ಛತ್ತೀಸ್‌ಗಢ

  1. ಬಸ್ತಾರ್:
    ಮಹೇಶ್ ಕಶ್ಯಪ್ (ಬಿಜೆಪಿ)
    ಕವಾಸಿ ಲಖ್ಮಾ (ಕಾಂಗ್ರೆಸ್)
  2. ಪುದುಚೇರಿ
    ನಮಸ್ಶಿವಾಯಂ (ಬಿಜೆಪಿ)
    ವಿ ವೈತಿಲಿಂಗಂ (ಕಾಂಗ್ರೆಸ್)
  3. ಅಂಡಮಾನ್ ಮತ್ತು ನಿಕೋಬಾರ್
    ಬಿಷ್ಣು ಪದಾ ರೇ (ಬಿಜೆಪಿ)
    ಕುಲದೀಪ್ ರಾಯ್ ಶರ್ಮಾ (ಕಾಂಗ್ರೆಸ್)
  4. ಲಕ್ಷದ್ವೀಪ:
    ಮೊಹಮ್ಮದ್ ಫೈಜಲ್ ಪಡಿಪ್ಪುರ (ಎನ್‌ಸಿಪಿ-ಶರದ್ ಪವಾರ್)
    ಮುಹಮ್ಮದ್ ಹಮ್ದುಲ್ಲಾ ಸಯೀದ್ (ಕಾಂಗ್ರೆಸ್)
    ಟಿಪಿ ಯೂಸುಫ್ (ಎನ್‌ಸಿಪಿ)
  5. ಮಿಜೋರಾಂ
    ರಿಚರ್ಡ್ ವನ್ಲಾಲ್ಮಂಗೈಹ (ZPM)
    ಕೆ ವನಲಲ್ವೆನಾ (MNF)
    ಲಾಲ್ಬಿಯಾಕ್ಜಮಾ (ಕಾಂಗ್ರೆಸ್)
    ವನ್‌ಲಾಲ್‌ಮುವಾಕಾ (ಬಿಜೆಪಿ)
  6. ನಾಗಾಲ್ಯಾಂಡ್
    ಡಾ ಚುಂಬೆನ್ ಮರ್ರಿ (NDPP)
    ಎಸ್ ಸುಪೊಂಗ್ಮೆರೆನ್ ಜಮೀರ್ (ಕಾಂಗ್ರೆಸ್)

ಜಮ್ಮು & ಕಾಶ್ಮೀರ

  1. ಉಧಂಪುರ :
    ಡಾ ಜಿತೇಂದ್ರ ಸಿಂಗ್ (ಬಿಜೆಪಿ)
    ಚೌಧರಿ ಲಾಲ್ ಸಿಂಗ್ (ಕಾಂಗ್ರೆಸ್)
  2. ಸಿಕ್ಕಿಂ :
    ಇಂದ್ರ ಹ್ಯಾಂಗ್ ಸುಬ್ಬ (SKM)
    ಪ್ರೇಮ್ ದಾಸ್ ರೈ (SDF)
    ದಿನೇಶ್ ಚಂದ್ರ ನೇಪಾಳ (ಬಿಜೆಪಿ)
    ಗೋಪಾಲ್ ಚೆಟ್ರಿ (ಕಾಂಗ್ರೆಸ್)
Continue Reading

ಅಂಕಣ

ರಾಜಮಾರ್ಗ ಅಂಕಣ: ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತು ಪಡಿಸಿದ ಕಲ್ಪನಾ ಚಾವ್ಲಾ!

ರಾಜಮಾರ್ಗ ಅಂಕಣ: ಭಾರತೀಯ ಮೂಲದ ಓರ್ವ ಹೆಣ್ಣು ಮಗಳು ಸಂಶೋಧನೆ ಮಾಡಲು ಬಹಳ ದೊಡ್ಡ ಕನಸು ಕಟ್ಟಿಕೊಂಡು ನಾಸಾಕ್ಕೆ ಹೋದದ್ದು, ಭಾರತದ ಮೊತ್ತ ಮೊದಲ ವ್ಯೋಮಯಾನಿ ಆದದ್ದು, ಮುಂದೆ ಅದೇ ರೀತಿಯ ಎರಡನೇ ಯಾನಕ್ಕೆ ಪ್ರಯತ್ನವನ್ನು ಮಾಡಿ ಆಕಾಶದ ಹೊಳೆಯುವ ನಕ್ಷತ್ರಗಳ ನಡುವೆ ಒಂದು ಮಿನುಗು ನಕ್ಷತ್ರವಾದದ್ದು ನಮಗೆಲ್ಲರಿಗೂ ಒಂದು ಸ್ಫೂರ್ತಿದಾಯಕ ಹಾಗೂ ಒಂದು ದುಃಖದಾಯಕ ಘಟನೆ

VISTARANEWS.COM


on

kalpana chawla rajamarga column
Koo

ಕನಸುಗಳಿಗೆ ರೆಕ್ಕೆ ಕಟ್ಟಿದ ಆ ಹುಡುಗಿಯ ಸಾಧನೆ ನಿಜಕ್ಕೂ ಪ್ರೇರಣಾದಾಯಿ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 1962ರ ಮಾರ್ಚ್ 17ರಂದು ಹರಿಯಾಣಾದ ಕರ್ನಾಲನಲ್ಲಿ ಬನಾರಸಿ ಲಾಲ್ ಚಾವ್ಲಾ ಮತ್ತು ಸಂಜ್ಯೋತಿಯವರ ಹಿರಿಯ ಮಗಳಾಗಿ ಜನಿಸಿದ ಆಕೆಗೆ (Kalpana Chawla) ಬಾಲ್ಯದಿಂದಲೂ ಆಕಾಶದಲ್ಲಿ ಹಾರಾಡುವ ಕನಸು. ಎತ್ತರದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡುತ್ತಾ ತಾನೂ ರೆಕ್ಕೆಗಳನ್ನು ಕಟ್ಟಿ ಹಾರಬೇಕು ಎಂದು ತನ್ನ ಅಪ್ಪನ ಜೊತೆ ಹೇಳುತ್ತಾ ಬೆಳೆದವರು ಆಕೆ!

ಬಾಲ್ಯದಿಂದಲೂ ಕಲ್ಪನಾಗೆ ಅಪ್ಪನೇ ಐಕಾನ್, ಲೆಜೆಂಡ್ ಎಲ್ಲವೂ! ಮೂರನೇ ವಯಸ್ಸಿಗೇ ಅಪ್ಪನಿಗೆ ಆಕಾಶದಲ್ಲಿ ವಿಮಾನ ತೋರಿಸಿ ತಾನೂ ಹಾರಬೇಕು ಎಂದು ದುಂಬಾಲು ಬಿದ್ದವಳು ಕಲ್ಪನಾ! ಅಪ್ಪನೂ ಆಕೆಯ ಪ್ರತೀಯೊಂದು ಕನಸಿನ ಈಡೇರಿಕೆಗೆ ಊರುಗೋಲಾಗಿ ನಿಂತಿದ್ದರು.

ತನ್ನ ಕನಸಿನ ಭಾಗವಾಗಿ ನಾಸಾ ಸೇರಿದರು ಕಲ್ಪನಾ

ಹರ್ಯಾಣದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರ್ತಿ ಮಾಡಿದ ಕಲ್ಪನಾ ತನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾಕ್ಕೆ ತೆರಳಿದರು. ಅಲ್ಲಿ ಶ್ರೇಷ್ಟವಾದ ಕೊಲರೆಡೋ ವಿವಿಯಿಂದ ಬಾಹ್ಯಾಕಾಶ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಆಕೆ ಪಡೆದರು.

ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA) ಸೇರಬೇಕು ಎಂದು ಆಕೆಯದು ಭಾರೀ ದೊಡ್ಡ ಕನಸು. ಅದಕ್ಕಾಗಿ ಹತ್ತಾರು ಪರೀಕ್ಷೆ, ಸಂದರ್ಶನಗಳನ್ನು ಎದುರಿಸಿ 1988ರಲ್ಲಿ ಆಕೆ ತನ್ನ ಡೆಸ್ಟಿನಿಯಾದ ನಾಸಾಕ್ಕೆ ಆಯ್ಕೆ ಆಗುತ್ತಾರೆ. ಮುಂದೆ ಅತ್ಯಂತ ಕಠಿಣವಾದ ತರಬೇತು ಆಕೆ ಪಡೆಯುತ್ತಾರೆ.

ದೇಹ ಮತ್ತು ಮನಸ್ಸನ್ನು ಹುರಿಗೊಳಿಸಲು ಯೋಗ ಮತ್ತು ಪ್ರಾಣಾಯಾಮಗಳ ಮೊರೆ ಹೊಕ್ಕವರು ಅವರು. ಮುಂದೆ ಯಾವ ಸವಾಲು ಕೂಡ ಎದುರಿಸಲು ಮಾನಸಿಕವಾಗಿ ಆಕೆ ಸಿದ್ಧರಾಗಲು ಕನಿಷ್ಠ ಎಂಟು ವರ್ಷ ಬೇಕಾಯಿತು. ಪ್ರತೀ ನಿತ್ಯವೂ ಅಪ್ಪನ ಜೊತೆ ಮಾತಾಡುತ್ತ ತನ್ನ ಕನಸುಗಳನ್ನು ಜೀವಂತವಾಗಿ ಇರಿಸಿದವರು ಕಲ್ಪನಾ.

1997 ನವೆಂಬರ್ 19, ಆ ದಿನ ಬಂದೇ ಬಿಟ್ಟಿತು!

ಪ್ರತಿಯೊಬ್ಬ ಸಾಧಕರು ಒಂದು ದೊಡ್ಡ ಅವಕಾಶಕ್ಕಾಗಿ ಕಾಯುತ್ತಾ ಇರುತ್ತಾರೆ. ಹಾಗೆ ಕಲ್ಪನಾ ಬದುಕಿನಲ್ಲಿ ಆ ಒಂದು ದೊಡ್ಡ ಅವಕಾಶವು ಬಂದೇ ಬಿಟ್ಟಿತು.

ನಾಸಾದ STS 87 ಕೊಲಂಬಿಯಾ ವ್ಯೋಮ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರುವ ಅವಕಾಶವು ಆಕೆಗೆ ದೊರೆಯಿತು. ಓರ್ವ ಭಾರತೀಯ ಮೂಲದವರಾಗಿ ಅದೊಂದು ನಿಜವಾಗಿ ಐತಿಹಾಸಿಕ ಸಾಧನೆ! ಕಲ್ಪನಾ ಆ ಕೊಲಂಬಿಯಾ ನೌಕೆಯಲ್ಲಿ ಕುಳಿತು ಬಾಹ್ಯಾಕಾಶಕ್ಕೆ ಹಾರಿದರು. ಎರಡು ವಾರಗಳ ಕಾಲ ಬಾಹ್ಯಾಕಾಶದಲ್ಲಿಯೇ ಕಳೆದರು! ಹತ್ತಾರು ಸಂಶೋಧನೆ ಮಾಡಿದರು. ಅವರನ್ನು ಹೊತ್ತ ಕೊಲಂಬಿಯಾ ನೌಕೆಯು 65 ಲಕ್ಷ ಕಿಲೋಮೀಟರ್ ಹಾರಿತು! 252 ಬಾರಿ ತನಗೆ ನಿಗದಿ ಪಡಿಸಿದ ಕಕ್ಷೆಯನ್ನು ಸುತ್ತಿ ಮುಗಿಸಿ ಮತ್ತೆ ಭೂಮಿಗೆ ಮರಳಿ ಬಂದಾಗ ಕಲ್ಪನಾ ಚಾವ್ಲಾ ಭಾರತೀಯರ ಪಾಲಿಕೆ ದೇವಕನ್ಯೆಯೇ ಆಗಿ ಬಿಟ್ಟಿದ್ದರು!

ಜಗತ್ತಿನ ಕಣ್ಮಣಿ ಆದರು ಕಲ್ಪನಾ ಚಾವ್ಲಾ

ಜಗತ್ತಿನ ಎಲ್ಲ ಪತ್ರಿಕೆಗಳೂ ಆಕೆಯ ಬಗ್ಗೆ ಕಾಲಂ ಬರೆದವು. ಜಾಗತಿಕ ಮಟ್ಟದ ಟಿವಿ ಚಾನೆಲಗಳು ಆಕೆಯ ಸಂದರ್ಶನಕ್ಕೆ ತುದಿಗಾಲಲ್ಲಿ ನಿಂತವು. ಭಾರತದಿಂದ ನಾಸಾ ಸೇರಿದ ಓರ್ವ ಮಧ್ಯಮವರ್ಗದ ಹೆಣ್ಣು ಮಗಳು ಭಾರತದ ಮಹತ್ವಾಕಾಂಕ್ಷಿ ಮಹಿಳೆಯರಿಗೆ ಆಕಾಶದ ಎತ್ತರವೂ ಕಡಿಮೆಯೇ ಎಂದು ಸಾಬೀತು ಮಾಡಿ ತೋರಿಸಿದ್ದರು!

ಎರಡನೇ ಬಾರಿ ಬಾಹ್ಯಾಕಾಶ ಯಾನಕ್ಕೆ ಕಲ್ಪನಾ ಆಯ್ಕೆ ಆದರು!

ಮೊದಲ ಬಾಹ್ಯಾಕಾಶ ಯಾನವು (Space tour) ಯಶಸ್ವಿಯಾದ ನಂತರ ಆಕೆ ನಾಸಾದಲ್ಲಿ ಎಲ್ಲರ ಕಣ್ಮಣಿ ಆಗಿದ್ದರು. ಆಕೆಯು ತನ್ನ 21ನೆಯ ವರ್ಷದಲ್ಲಿ ತನ್ನ ಸಹಪಾಠಿ ಜೀನ್ ಹ್ಯಾರಿಸನ್ ಅವರನ್ನು ಪ್ರೀತಿ ಮಾಡಿ ಮದುವೆಯಾದರು. ಆತನು ಕಲ್ಪನಾ ಅವರ ಪ್ರತಿಯೊಂದು ಕನಸುಗಳಿಗೆ ಬೆಂಬಲವಾಗಿ ನಿಂತದ್ದು ಕೂಡ ಉಲ್ಲೇಖನೀಯ.

ಸುಮಾರು ಐದು ವರ್ಷಗಳ ದೊಡ್ಡ ಗ್ಯಾಪ್ ನಂತರ ನಾಸಾ ತನ್ನ ಮುಂದಿನ ವ್ಯೋಮ ಯಾತ್ರೆಯನ್ನು ಯೋಜನೆಯನ್ನು ರೂಪಿಸಿತು. ಅದು STS -107 ಕೊಲಂಬಿಯಾ ಹೆಸರಿನ ಮಿಷನ್! ಈ ಬಾರಿ ಒಟ್ಟು ಏಳು ಮಂದಿ ಆಕಾಶಯಾನಿಗಳು ಆಯ್ಕೆ ಆಗಿದ್ದು ಆ ತಂಡದಲ್ಲಿ ಕಲ್ಪನಾ ಚಾವ್ಲಾ ಸೀನಿಯರ್ ಆಗಿದ್ದರು. 2003ರ ಜನವರಿ ತಿಂಗಳಲ್ಲಿ ಈ ಯಾತ್ರೆಯು ಆರಂಭವಾಯಿತು. ಎಲ್ಲ ಭಾರತೀಯರು ಕಣ್ಣು ತೆರೆದು ಈ ಯಾತ್ರೆಯನ್ನು ಗಮನಿಸುತ್ತಿದ್ದರು.

ಆ ದುರಂತ ಸಂಭವಿಸಿಯೇ ಬಿಟ್ಟಿತು!

ಸಾಕಷ್ಟು ಸಂಶೋಧನೆಯನ್ನು ಮಾಡಿದ ಈ ತಂಡವು ಹಿಂದೆ ಬರುತ್ತಿರುವ ಸಂದರ್ಭದಲ್ಲಿ 2003 ಫೆಬ್ರುವರಿ 1ರಂದು ಭಾರೀ ದುರಂತವು ನಡೆದೇ ಹೋಯಿತು! ಬಾಹ್ಯಾಕಾಶದ ಕ್ಷೇತ್ರದಲ್ಲಿ ಅದೊಂದು ಅತ್ಯಂತ ದೊಡ್ಡ ದುರಂತವಾಗಿತ್ತು! ಏಳು ಜನ ಆಕಾಶಯಾತ್ರಿಗಳನ್ನು ಹೊತ್ತು ಹಾರುತ್ತಿದ್ದ STS 107 ಆಕಾಶನೌಕೆಯು ಭೂಮಿಯ ವಾಯುಮಂಡಲವನ್ನು ಪ್ರವೇಶಿಸುವ ಸಂದರ್ಭ ಆಕಾಶದಲ್ಲಿಯೇ ಸ್ಫೋಟವಾಗಿ ಎಲ್ಲ ಏಳು ಮಂದಿ ಬೂದಿಯಾಗಿ ಹೋದರು. ಅದರಲ್ಲಿ ಕಲ್ಪನಾ ಚಾವ್ಲಾ ಕೂಡ ಒಬ್ಬರು. ಆಗ ಆಕೆಗೆ ಕೇವಲ 41 ವರ್ಷ ವಯಸ್ಸು ಆಗಿತ್ತು!

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆಕೆಗಾಗಿ ಮಿಡಿಯಿತು ಇಡೀ ಜಗತ್ತು!

ಏಳು ಜನ ಸಂಶೋಧಕ ಆಕಾಶಯಾನಿಗಳನ್ನು ಆಪೋಶನ ತೆಗೆದುಕೊಂಡ ಆ ದುರಂತದ ಬಗ್ಗೆ ಇಡೀ ಜಗತ್ತು ಕಂಬನಿ ಮಿಡಿಯಿತು. ಕಲ್ಪನಾ ಬಗ್ಗೆ ಭಾರತದ ಮೂಲೆ ಮೂಲೆಗಳಲ್ಲಿ ಶ್ರದ್ಧಾಂಜಲಿ ಸಭೆಗಳು ನಡೆದವು. ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಆಕೆಯನ್ನು ಭಾರತದ ಪುತ್ರಿ ಎಂದು ಕರೆದು ಶೃದ್ಧಾಂಜಲಿ ನೀಡಿದರು. ಮುಂದೆ ಭಾರತವು ಹಾರಿಸಿದ ಒಂದು ಕೃತಕ ಉಪಗ್ರಹಕ್ಕೆ ಕಲ್ಪನಾ ಹೆಸರು ಇಡಲಾಯಿತು. ನಾಸಾ ಆಕೆಯನ್ನು ಭಾವಪೂರ್ಣವಾಗಿ ಸ್ಮರಿಸಿತು. ಕರ್ನಾಟಕ ಸರಕಾರವು ಆಕೆಯ ಹೆಸರಿನಲ್ಲಿ ಓರ್ವ ಯುವ ವಿಜ್ಞಾನಿಯನ್ನು ಪ್ರತೀ ವರ್ಷ ಗೌರವಿಸುವ ಒಂದು ಪ್ರಶಸ್ತಿಯನ್ನು ಸ್ಥಾಪನೆ ಮಾಡಿತು. ತಮಿಳುನಾಡಿನ ಒಂದು ಪ್ರಮುಖವಾದ ರಸ್ತೆಗೆ ಕಲ್ಪನಾ ಚಾವ್ಲಾ ಹೆಸರನ್ನು ಇಡಲಾಯಿತು.

ಭರತ ವಾಕ್ಯ

ಭಾರತೀಯ ಮೂಲದ ಓರ್ವ ಹೆಣ್ಣು ಮಗಳು ಸಂಶೋಧನೆ ಮಾಡಲು ಬಹಳ ದೊಡ್ಡ ಕನಸು ಕಟ್ಟಿಕೊಂಡು ನಾಸಾಕ್ಕೆ ಹೋದದ್ದು, ಭಾರತದ ಮೊತ್ತ ಮೊದಲ ವ್ಯೋಮಯಾನಿ ಆದದ್ದು, ಮುಂದೆ ಅದೇ ರೀತಿಯ ಎರಡನೇ ಯಾನಕ್ಕೆ ಪ್ರಯತ್ನವನ್ನು ಮಾಡಿ ಆಕಾಶದ ಹೊಳೆಯುವ ನಕ್ಷತ್ರಗಳ ನಡುವೆ ಒಂದು ಮಿನುಗು ನಕ್ಷತ್ರವಾದದ್ದು ನಮಗೆಲ್ಲರಿಗೂ ಒಂದು ಸ್ಫೂರ್ತಿದಾಯಕ ಹಾಗೂ ಒಂದು ದುಃಖದಾಯಕ ಘಟನೆ!

ಭಾರತದ ಮಹಾನ್ ಪುತ್ರಿಗೆ ನಮ್ಮ ಶ್ರದ್ಧಾಂಜಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಬೇಂದ್ರೆ ಎಂಬ ಶಬ್ದ ಗಾರುಡಿಗ

Continue Reading

ಆಹಾರ/ಅಡುಗೆ

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

ಬೀದಿ ಬದಿಯ ಆಹಾರ ತಿಂಡಿಗಳ ಸೇವನೆ ಯಾವಾಗಲೂ ರಿಸ್ಕ್‌ ಅಂಶದಿಂದ ಕೂಡಿರುವಂಥದು. ಇಲ್ಲಿ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರಿಗೆ ಯಾವ ಅವಕಾಶವೂ ಇಲ್ಲ. ಸ್ಥಳೀಯಾಡಳಿತಗಳ ಬಳಿಯೂ ಯಾವುದೇ ಮಾನದಂಡ ಇರುವಂತಿಲ್ಲ. ರುಚಿಯಾಗಿದೆ ಎಂದು ಕಾಣಿಸುವ ಆಹಾರವೆಲ್ಲವೂ ಶುಚಿಯಾಗಿರಬೇಕಿಲ್ಲ. ಈ ಬಗ್ಗೆ ಜನ ಜಾಗೃತರಾಗುವುದು ಮುಖ್ಯ.

VISTARANEWS.COM


on

Steet Food
Koo

ಬೇಸಿಗೆಯ ಬಿಸಿಲಿನ ತೀವ್ರತೆ ಹಾಗೂ ನೀರಿನ ಲಭ್ಯತೆಯ ಕೊರತೆ ಹೆಚ್ಚಾಗುತ್ತಿರುವಂತೆ, ಬೀದಿ ಬದಿಯ ಆಹಾರ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವಿತರಣೆಯಾಗುವ ಆಹಾರವನ್ನು ಸೇವಿಸಿ ಅಸ್ವಸ್ಥರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಂಡ್ಯದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ಐಸ್ ಕ್ರೀಂ ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು (Twin Children death) ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿದ್ದಾರೆ. ದಾವಣಗೆರೆಯಲ್ಲಿ ನಡೆಯುತ್ತಿದ್ದ ಎಕ್ಸಿಬಿಷನ್‌ನಲ್ಲಿ ಬಾಲಕನೊಬ್ಬ ಸ್ಮೋಕ್‌ ಬಿಸ್ಕೆಟ್‌ ತಿಂದು ಅಸ್ವಸ್ಥನಾಗಿದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊಡವತ್ತಿ ಕ್ರಾಸ್‌ನ ಗೊಲ್ಲರಹಟ್ಟಿಯಲ್ಲಿ ರಾಮನವಮಿಯಂದು ಪಾನಕ, ಮಜ್ಜಿಗೆ ಸೇವಿಸಿ ಒಂದೇ ಗ್ರಾಮದ 45 ಮಂದಿ ಅಸ್ವಸ್ಥರಾಗಿದ್ದಾರೆ. ಬುಧವಾರ ರಾಮನವಮಿ ಹಿನ್ನೆಲೆಯಲ್ಲಿ ಭಕ್ತರು ಮಜ್ಜಿಗೆ, ಪಾನಕವನ್ನು ಸೇವನೆ ಮಾಡಿದ್ದರು. ಇವರಿಗೆ ಮಧ್ಯರಾತ್ರಿಯಿಂದ ಹೊಟ್ಟೆನೋವು, ವಾಂತಿ- ಭೇದಿ ಶುರುವಾಗಿದೆ.

ಇಂಥ ಪ್ರಕರಣಗಳು ಹೆಚ್ಚುತ್ತಿವೆ; ಹೀಗಾಗಿಯೇ ಸ್ಥಳೀಯಾಡಳಿತಗಳು, ಸರ್ಕಾರದ ಜೊತೆಗೆ ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕಿದೆ. ಬೇಸಿಗೆಯಲ್ಲಿ ಸಹಜವಾಗಿಯೇ ಹೊರಗೆ ಓಡಾಡುವವರಿಗೆ ದಾಹ ಹೆಚ್ಚು. ಈ ಸಲವಂತೂ ಧಗೆ ಇನ್ನಷ್ಟು ಹೆಚ್ಚಿದೆ. ತಣ್ಣಗೆ ಏನಾದರೂ ಸಿಕ್ಕರೆ ಕುಡಿದುಬಿಡೋಣ ಎನಿಸುತ್ತದೆ. ರಾಮನವಮಿ ಕೂಡ ಕಡುಬೇಸಿಗೆಯಲ್ಲಿ ಬರುತ್ತದೆ. ಸಾರ್ವಜನಿಕವಾಗಿ ಪಾನಕ- ಪನಿವಾರ ವಿತರಣೆ ನಡೆಯುತ್ತದೆ. ಹೆಚ್ಚಿನ ಭಕ್ತರು ಸ್ವಚ್ಛತೆಯ ಕಾಳಜಿ ವಹಿಸುತ್ತಾರಾದರೂ, ಕೆಲವೆಡೆ ಪ್ರಮಾದವಶಾತ್‌ ಅವಘಡಗಳು ಸಂಭವಿಸುತ್ತವೆ. ಇದಕ್ಕಾಗಿಯೇ ಸಾರ್ವಜನಿಕವಾಗಿ ಆಹಾರ ಸೇವಿಸುವಾಗ, ಪಾನೀಯ ಸೇವಿಸುವಾಗ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ವಿತರಕರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇನ್ನು ಖಾಸಗಿ, ಬೀದಿ ಬದಿಯ ಆಹಾರ ತಿಂಡಿಗಳ ಸೇವನೆ ಯಾವಾಗಲೂ ರಿಸ್ಕ್‌ ಅಂಶದಿಂದ ಕೂಡಿರುವಂಥದು. ಇಲ್ಲಿ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರಿಗೆ ಯಾವ ಅವಕಾಶವೂ ಇಲ್ಲ. ಸ್ಥಳೀಯಾಡಳಿತಗಳ ಬಳಿಯೂ ಯಾವುದೇ ಮಾನದಂಡ ಇರುವಂತಿಲ್ಲ. ರುಚಿಯಾಗಿದೆ ಎಂದು ಕಾಣಿಸುವ ಆಹಾರವೆಲ್ಲವೂ ಶುಚಿಯಾಗಿರಬೇಕಿಲ್ಲ. ಐಸ್‌ಕ್ರೀಮ್‌ನಂಥ ತಿಂಡಿತಿನಿಸುಗಳು ಸೇವಿಸುವಾಗ ಆಹಾ ಎನಿಸಿದರೂ, ಅದರ ಪರಿಣಾಮ ಆಮೇಲೆ ತಿಳಿಯುತ್ತದೆ. ತಣ್ಣಗೆ ಕೊರೆಯುವ ಐಸ್‌ಕ್ರೀಮ್‌ ಗಂಟಲಿನಲ್ಲಿ ಸೋಂಕು ಉಂಟುಮಾಡಬಲ್ಲದು. ಇದು ಎಲ್ಲ ಐಸ್‌ಕ್ರೀಮ್‌ಗಳಿಗೆ ಹೇಳಿದ ಮಾತಲ್ಲ. ಶುಚಿತ್ವ, ಶುದ್ಧತೆ, ಗ್ರಾಹಕರ ಆರೋಗ್ಯದ ಕಡೆಗೆ ಗಮನ ಕೊಡದ ಈಟರಿಗಳ ಬಗ್ಗೆ ಮಾತ್ರ ಈ ಮಾತನ್ನು ಹೇಳಬಹುದು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಇರಾನ್ -‌ ಇಸ್ರೇಲ್ ಯುದ್ಧ ತಪ್ಪಿಸಲೇಬೇಕಿದೆ

ಹಾಗಾದರೆ ಸ್ಥಳೀಯಾಡಳಿತಗಳು ಸಾರ್ವಜನಿಕರ ಆರೋಗ್ಯ ಖಾತರಿಪಡಿಸಿಕೊಳ್ಳಲು ಏನು ಮಾಡಬಹುದು? ಬೀದಿ ಬದಿಯ ಈಟರಿಗಳಿಗೆ ದಿಡೀರ್‌ ದಾಳಿ ನಡೆಸಿ ಅಲ್ಲಿನ ಹೈಜೀನ್‌ ಅನ್ನು ಪರೀಕ್ಷಿಸುವುದು ಒಂದು ದಾರಿ. ಹೋಟೆಲ್‌ಗಳೂ ಈ ಹೈಜೀನ್‌ ಮಾನದಂಡಗಳನ್ನು ಅನುಸರಿಸಬೇಕು. ಸಾರ್ವಜನಿಕರೂ, ಸ್ವಚ್ಛತೆ ಕಾಪಾಡಿಕೊಳ್ಳದ ಸ್ಥಳಗಳಲ್ಲಿ ಆಹಾರ ಸೇವಿಸುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಕುಡಿಯುವ ನೀರಿನಿಂದ ಹಾಗೂ ಆಹಾರದಿಂದ ಬಂದ ಕಾಲರಾ ಕೂಡ ಕೆಲವರಲ್ಲಿ ಕಂಡುಬಂದಿದೆ. ಸೋಂಕುಗಳು ವ್ಯಾಪಕವಾಗಿರುವ ಕಾಲದಲ್ಲಿ, ಮನೆಯಲ್ಲಿ ಮಾಡಿಕೊಳ್ಳುವ ಆರೋಗ್ಯಕರ ಆಹಾರವೇ ಅತ್ಯುತ್ತಮ.

Continue Reading

ದೇಶ

Physical Abuse : ಸ್ಪೇನ್​ನ ಮಹಿಳೆ ಮೇಲೆ ಜಾರ್ಖಂಡ್​ನಲ್ಲಿ ಗ್ಯಾಂಗ್​ ರೇಪ್​; ತಿಂಗಳ ಬಳಿಕ ಪ್ರಕರಣ ಬಯಲು

Physical Abuse : ಅವರು ತಂಗಿದ್ದ ಕ್ಯಾಂಪ್​ನಲ್ಲಿ ನಡೆದ ಘಟನೆಯ ಭೀಕರತೆಯನ್ನು ವಿವರಿಸಲಾಗಿದೆ. ಸ್ಥಳವನ್ನು ವೀಡಿಯೊ ಬಹಿರಂಗಪಡಿಸಿದೆ. ದಂಪತಿ ಹಗಲು ಹೊತ್ತಿನಲ್ಲಿ ತಾವು ಭೇಟಿಯಾದ ವ್ಯಕ್ತಿಗಳೊಂದಿಗಿನ ನಡೆಸಿದ ಸಂಭಾಷಣೆಯನ್ನೂ ಬಹಿರಂಗ ಮಾಡಿದ್ದಾರೆ. ಅವರಲ್ಲಿ ಇಬ್ಬರು ಮಹಿಳೆಯನ್ನು ಅತ್ಯಾಚಾರ ಮಾಡಿದವರಾಗಿದ್ದಾರೆ.

VISTARANEWS.COM


on

Physical Abuse
Koo

ರಾಂಚಿ: ಜಾರ್ಖಂಡ್​ನ ದುಮ್ಕಾ ಜಿಲ್ಲೆಯಲ್ಲಿ ಸ್ಪೇನ್​ನಿಂದ ಬಂದಿದ್ದ ಪ್ರವಾಸಿ ಮಹಿಳೆಯೊಬ್ಬಳ ಮೇಲೆ ಏಳು ಜನರು ಸಾಮೂಹಿಕ ಅತ್ಯಾಚಾರ (Physical Abuse) ಎಸಗಿದ ಭಯಾನಕ ಘಟನೆ ನಡೆದಿದೆ. ಈ ಘಟನೆ ಮಾರ್ಚ್​ನಲ್ಲಿ ನಡೆದಿದೆ. ಮಹಿಳೆ ಹಾಗೂ ಆಕೆಯ ಪತಿ ಆಘಾತಕಾರಿ ಘಟನೆಗ ಮತ್ತು ನಂತರದ ವಿವರಗಳನ್ನು ದಾಖಲಿಸುವ ವೀಡಿಯೊವೊಂದನ್ನು ತಮ್ಮ ದೇಶಕ್ಕೆ ಮರಳಿದ ಬಳಿಕ ಬಿಡುಗಡೆ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ವಿವರ ನೀಡಿದ್ದು, ಭಾರತದಲ್ಲಿ ಆಗಿರುವ ಕಹಿಘಟನೆಯನ್ನು ವಿವರಿಸಿದ್ದಾರೆ.

ವಿಡಿಯೊದ ಆರಂಭದಲ್ಲಿ ದಂಪತಿ “ಈ ಸುದೀರ್ಘ ಅಧ್ಯಾಯದ ನಂತರ ನಾವು ಈ ಅಹಿತಕರ ಹಂತವನ್ನು ದಾಟಿದ್ದೇವೆ. ಮತ್ತೆ ನಮ್ಮ ಪ್ರವಾಸ ಆರಂಭಿಸುತ್ತೇವೆ. ಆದರೆ ನಮಗಿದು ಮರುಹುಟ್ಟು. ನಾವು ಇದುವರೆಗೆ ಪಡೆದ ಈ ವಿರಾಮಕ್ಕೆ ಕಾರಣವಿದೆ ಎಂದು ಹೇಳಿ ಭಾರತದಲ್ಲಿ ಆದ ಘಟನೆಗಳನ್ನು ವಿವರಿಸಿದ್ದಾರೆ. ಅಲ್ಲದೆ, ಇಂದಿನಿಂದ ನಾವು ವಾರಕ್ಕೊಮ್ಮೆ ನಮ್ಮ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ಮುಂದುವರಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಅವರಿಬ್ಬರೂ ಯೂಟ್ಯೂಬರ್​ಗಳಾಗಿದ್ದು ಬೈಕ್​ ಮೂಲಕ ಹಲವು ದೇಶಗಳನ್ನು ಸುತ್ತುತ್ತಿರುತ್ತಾರೆ.

ಅವರು ತಂಗಿದ್ದ ಕ್ಯಾಂಪ್​ನಲ್ಲಿ ನಡೆದ ಘಟನೆಯ ಭೀಕರತೆಯನ್ನು ವಿವರಿಸಲಾಗಿದೆ. ಸ್ಥಳದಲ್ಲಿದ್ದ ವೇಳೆ ಚಿತ್ರೀಕರಿಸಿದ ವೀಡಿಯೊ ಬಹಿರಂಗಪಡಿಸಿದ್ದಾರೆ. ದಂಪತಿ ಹಗಲು ಹೊತ್ತಿನಲ್ಲಿ ತಾವು ಭೇಟಿಯಾದ ವ್ಯಕ್ತಿಗಳೊಂದಿಗಿನ ನಡೆಸಿದ ಸಂಭಾಷಣೆಯನ್ನೂ ಬಹಿರಂಗ ಮಾಡಿದ್ದಾರೆ. ಅವರಲ್ಲಿ ಇಬ್ಬರು ಮಹಿಳೆಯನ್ನು ಅತ್ಯಾಚಾರ ಮಾಡಿದವರಾಗಿದ್ದಾರೆ.

ದಂಪತಿ ಅತ್ಯಾಚಾರ ಮಾಡಿದವರಲ್ಲಿ ಒಬ್ಬನ ಗುರುತನ್ನು ಬಹಿರಂಗಪಡಿಸಿದ್ದಾರೆ. ಮಹಿಳೆ ಕಡಲೆಕಾಯಿ ತಿನ್ನುತ್ತಿದ್ದಾಗ ಆ ವ್ಯಕ್ತಿ ಮಾತನಾಡಿಸಿದ್ದ. ಅಲ್ಲದೆ ಅವರ ಜತೆ ಅನುಚಿತವಾಗಿ ವರ್ತಿಸಿದ್ದ. ಬಳಿಕ ದಂಪತಿ ಆ ಪ್ರದೇಶವನ್ನು ತೊರೆದು ಕೆಲವು ಗಂಟೆಗಳ ನಂತರ ತಮ್ಮ ಕ್ಯಾಂಪ್​ಗೆ ಮರಳಿದ್ದರು. ಅವರು ತಂಗಿದ್ದ ಜಾಗ ನಿರ್ಜನವಾಗಿತ್ತು. ಆ ಬಳಿಕ ಅವರು ‘ತಮ್ಮ ಜೀವನದ ಭಯಾನಕ 3 ಗಂಟೆಗಳನ್ನು’ ನೆನಪಿಸಿಕೊಂಡಿದ್ದಾರೆ. “ರಾತ್ರಿ 8 ಗಂಟೆಗೆ ಪ್ರಾರಂಭವಾದ ತೊಂದರೆ ರಾತ್ರಿ 11 ಗಂಟೆಗೆ ಕೊನೆಗೊಂಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

“ನಾನು ಏನು ಮಾಡಬೇಕೆಂದು ಆ ವೇಳೆ ನನಗೆ ತಿಳಿಯಲಿಲ್ಲ. ಪತ್ನಿ ಪೊದೆಯ ಮಧ್ಯೆ ಬಿದ್ದಿದ್ದಳು. ನಾನು ಎದ್ದು ಅವಳ ಬಳಿ ಓಡಿದೆ ಎಂದು ಪತಿ ವಿಡಿಯೊದಲ್ಲಿ ಹೇಳಿದ್ದಾರೆ. ನಂತರ ಇಬ್ಬರೂ ಆಸ್ಪತ್ರೆಗೆ ತೆರಳಿದೆವು ಏಳು ಜನರು ಅವಳ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದ್ದರು. ಅವರು ಅವಳನ್ನು ಹೊಡೆದಿದ್ದರು.. ಅವರು ನನಗೂ ಹೆಲ್ಮೆಟ್​ನಿಂದ ಹಲವು ಬಾರಿ ಹೊಡಿದಿದ್ದಾರೆ. ಕಲ್ಲುಗಳಿಂದ ಹಲ್ಲೆ ನಡೆಸಿದರು” ಎಂದು ಸಂತ್ರಸ್ತೆಯ ಪತಿ ಹೇಳಿದ್ದಾರೆ.

ನಂತರ ಅವರು ಪೊಲೀಸ್ ರಕ್ಷಣೆ ಪಡೆದು ಮೂರು ದಿನಗಳ ಕಾಲ ಇದ್ದರು. ನಾವು ಮುಂದುವರಿಯಲಿದ್ದೇವೆ, ವಿಧಿ ನಮಗೆ ಎರಡನೇ ಅವಕಾಶವನ್ನು ನೀಡಿದೆ. ನಾವು ಸಾವನ್ನು ಹತ್ತಿರದಿಂದ ನೋಡಿದ್ದೇವೆ ಎಂದು ಅವರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ. ಇದಲ್ಲದೆ, ಸಂತ್ರಸ್ತೆಯ ಪತಿಗೆ ಪೊಲೀಸರು 10 ಲಕ್ಷ ರೂ.ಗಳ ಪರಿಹಾರವನ್ನು ಸಹ ನೀಡಿದ್ದಾರೆ.

Continue Reading
Advertisement
voting
ಪ್ರಮುಖ ಸುದ್ದಿ6 mins ago

Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

kalpana chawla rajamarga column
ಅಂಕಣ23 mins ago

ರಾಜಮಾರ್ಗ ಅಂಕಣ: ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತು ಪಡಿಸಿದ ಕಲ್ಪನಾ ಚಾವ್ಲಾ!

Karnataka Weather Forecast
ಮಳೆ55 mins ago

Karnataka Weather : 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ; ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Dina bhavishya
ಭವಿಷ್ಯ2 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Steet Food
ಆಹಾರ/ಅಡುಗೆ7 hours ago

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

IPL 2024
ಪ್ರಮುಖ ಸುದ್ದಿ7 hours ago

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

Physical Abuse
ದೇಶ8 hours ago

Physical Abuse : ಸ್ಪೇನ್​ನ ಮಹಿಳೆ ಮೇಲೆ ಜಾರ್ಖಂಡ್​ನಲ್ಲಿ ಗ್ಯಾಂಗ್​ ರೇಪ್​; ತಿಂಗಳ ಬಳಿಕ ಪ್ರಕರಣ ಬಯಲು

Amanatullah Khan
ದೇಶ8 hours ago

Amanatullah Khan: ಆಪ್‌ಗೆ ಮತ್ತಷ್ಟು ಸಂಕಷ್ಟ; ಶಾಸಕ ಅಮಾನತುಲ್ಲಾ ಖಾನ್ ಅರೆಸ್ಟ್‌

Moral policing
ಪ್ರಮುಖ ಸುದ್ದಿ8 hours ago

Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

Rishab Shetty
ಸಿನಿಮಾ9 hours ago

Rishab Shetty: ರಿಷಬ್‌ ಮೀಟ್ಸ್‌ ಮೋಹನ್‌ಲಾಲ್‌; ʼಕಾಂತಾರʼ ಪ್ರೀಕ್ವೆಲ್​ನಲ್ಲಿ ಅಭಿನಯಿಸುತ್ತಾರಾ ಮಾಲಿವುಡ್‌ ಸೂಪರ್‌ ಸ್ಟಾರ್‌?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ2 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌