No Confidence Motion: I.N.D.I.Aದಲ್ಲೂ N.D.A ಇದೆ, ಯುಪಿಎಗೆ ಶ್ರಾದ್ಧ ಮಾಡಲಾಗಿದೆ; ಸಂಸತ್ತಲ್ಲಿ ಮೋದಿ ಮಾತಿನೇಟು Vistara News

ದೇಶ

No Confidence Motion: I.N.D.I.Aದಲ್ಲೂ N.D.A ಇದೆ, ಯುಪಿಎಗೆ ಶ್ರಾದ್ಧ ಮಾಡಲಾಗಿದೆ; ಸಂಸತ್ತಲ್ಲಿ ಮೋದಿ ಮಾತಿನೇಟು

No Confidence Motion: ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಕುರಿತು ಮಾತನಾಡಿದ ಮೋದಿ, ಪ್ರತಿಪಕ್ಷಗಳಿಗೆ ಚಾಟಿ ಬೀಸಿದರು. ಪ್ರತಿಪಕ್ಷಗಳು ಯಾರಿಗಾದರೂ ಕೇಡು ಬಯಸಿದರೆ, ಕೇಡು ಬಯಸಿದವರಿಗೆ ತುಂಬ ಒಳ್ಳೆಯದಾಗುತ್ತದೆ. ಇದಕ್ಕೆ ನಾನೇ ಉದಾಹರಣೆ ಎಂದು ಚಾಟಿ ಬೀಸಿದರು.

VISTARANEWS.COM


on

Narendra Modi In Lok Sabha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಕುರಿತು (No Confidence Motion) ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತ, ಪ್ರತಿಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ಗೆ ಚಾಟಿಯೇಟು ನೀಡಿದರು. “ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ 26 ಪಕ್ಷಗಳು ಸೇರಿ ಇಂಡಿಯಾ ಎಂಬ ಒಕ್ಕೂಟ ರಚಿಸಿದವು. ಆದರೆ, ಆ ಸಭೆಯಲ್ಲಿ ಯುಪಿಎಗೆ ಶ್ರಾದ್ಧ ಮಾಡಿದವು. ಅಷ್ಟಕ್ಕೂ, N.D.A ಎಂಬ ಪದಕ್ಕೆ ಎರಡು ಐ (I) ರಚಿಸಿದವು. ಒಂದು ಐ 26 ಪಕ್ಷಗಳ ಅಹಂಕಾರ (ಘಮಂಡ್) ಹಾಗೂ ಮತ್ತೊಂದು ಐ ಕುಟುಂಬದ ಅಹಂಕಾರ” ಎಂದು ನರೇಂದ್ರ ಮೋದಿ (Narendra Modi) ಹೇಳಿದರು.

ಮೋದಿ ಭಾಷಣದ ಲೈವ್‌

ಪ್ರತಿಪಕ್ಷಗಳ ಸೀಕ್ರೆಟ್‌ ಬಿಚ್ಚಿಟ್ಟ ಮೋದಿ

“ನನಗೆ ಪ್ರತಿಪಕ್ಷಗಳ ಸೀಕ್ರೆಟ್‌ ನನಗೆ ಗೊತ್ತಾಗಿದೆ. ಅವರು ಯಾರಿಗೇ ಎಷ್ಟು ಕೇಡು ಬಯಸಲಿ, ಕೇಡು ಬಯಸಿದವರಿಗೆ ಒಳ್ಳೆಯದೇ ಆಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ನಾನೇ. ನನಗೆ 20 ವರ್ಷದಿಂದ ಕೇಡು ಬಯಸಿದರು. ಆದರೆ, ನಾನು 20 ವರ್ಷದಿಂದಲೂ ಚೆನ್ನಾಗಿದ್ದೇನೆ ಹಾಗೂ ಜನರ ಬೆಂಬಲ ಪಡೆದು ಪ್ರಧಾನಿಯಾಗಿದ್ದೇನೆ. ಮೂರು ಉದಾಹರಣೆಗಳೊಂದಿಗೆ ಪ್ರತಿಪಕ್ಷಗಳ ಸೀಕ್ರೆಟ್‌ ನಿಮಗೆ ಹೇಳುತ್ತೇನೆ. ಮೊದಲನೆಯದಾಗಿ, ಬ್ಯಾಂಕಿಂಗ್‌ ಸೆಕ್ಟರ್‌ ಕುಸಿಯುತ್ತದೆ ಎಂದು ಹೇಳಿದರು. ವಿದೇಶದಿಂದ ತಜ್ಞರನ್ನು ಕರೆಸಿ ಹೇಳಿದರು. ಆದರೆ ದೇಶದ ಬ್ಯಾಂಕಿಂಗ್‌ ಸೆಕ್ಟರ್‌ ಬಲಿಷ್ಠವಾಗಿದೆ. ಅನುತ್ಪಾದಕ ಆಸ್ತಿಯೂ (Non Performing Asset) ಕುಸಿದಿದೆ” ಎಂದು ಹೇಳಿದರು.

ಇದನ್ನೂ ಓದಿ: No Confidence Motion: ಪ್ರತಿಪಕ್ಷಗಳಿಂದ ನೋ ಬಾಲ್‌, ನಮ್ಮಿಂದ ಸೆಂಚುರಿ ಮೇಲೆ ಸೆಂಚುರಿ; ಕುಟುಕಿದ ಮೋದಿ

ಮೋದಿ ಅವರು ಎರಡನೇ ಉದಾಹರಣೆಯನ್ನೂ ನೀಡಿದರು. “ಎಚ್‌ಎಎಲ್‌ ಬಗ್ಗೆಯೂ ಪ್ರತಿಪಕ್ಷಗಳು ಆರೋಪ ಮಾಡಿದರು. ಎಚ್‌ಎಎಲ್‌ ಮುಚ್ಚುತ್ತದೆ ಎಂದು ಹುಯಿಲೆಬ್ಬಿಸಿದರು. ಆದರೆ, ಎಚ್‌ಎಎಲ್‌ ಈಗ ಹೆಮ್ಮೆಯ ಸಂಸ್ಥೆಯಾಗಿದೆ. ದೇಶದ ರಕ್ಷಣಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ” ಎಂದರು. “ಮೂರನೆಯದಾಗಿ ಹೇಳುವುದಾದರೆ, ಎಲ್‌ಐಸಿ ಬಗ್ಗೆ ಅಪಪ್ರಚಾರ ಮಾಡಿದರು. ಅದು ಮುಚ್ಚುತ್ತದೆ ಎಂದರು. ಆದರೆ, ಎಲ್‌ಐಸಿಯೂ ಏಳಿಗೆ ಹೊಂದುತ್ತದೆ. ಪ್ರತಿಪಕ್ಷಗಳಿಗೆ ಭಾರತದ ಏಳಿಗೆ, ದೇಶ ಬಗ್ಗೆ ಹೆಮ್ಮೆ, ವಿಶ್ವಾಸ ಇಲ್ಲ. ಒಂದು ಗಮನದಲ್ಲಿರಲಿ, ದೇಶವು ಮೂರನೇ ಬಲಿಷ್ಠ ಆರ್ಥಿಕತೆ ಹೊಂದಿದ ದೇಶ ಎನಿಸಲಿದೆ” ಎಂದು ತಿಳಿಸಿದರು.

ಕಾಂಗ್ರೆಸ್‌ಗೆ ನೇತಾ ಇಲ್ಲ, ನಿಯತ್ತೂ ಇಲ್ಲ

ಲೋಕಸಭೆಯಲ್ಲಿ ಮೋದಿ ಅವರು ಕಾಂಗ್ರೆಸ್‌ಗೆ ಮಾತಲ್ಲೇ ಚಾಟಿ ಬೀಸಿದರು. “ಕಾಂಗ್ರೆಸ್‌ಗೆ ದೇಶದ ಬಗ್ಗೆ ಗೌರವ ಇಲ್ಲ. ಆ ಪಕ್ಷದಲ್ಲಿ ನಾಯಕ ಇಲ್ಲ, ನಿಯತ್ತಂತೂ ಇಲ್ಲವೇ ಇಲ್ಲ. ಇನ್ನು, ದೂರದೃಷ್ಟಿಯ ಬಗ್ಗೆ ಕೇಳುವುದೇ ಬೇಡ” ಎಂದರು. “1991ರಲ್ಲಿ ಕಾಂಗ್ರೆಸ್‌ ಅವಧಿಯಲ್ಲಿ ದೇಶದ ಆರ್ಥಿಕತೆ ಬುಡಮೇಲಾಗಿತ್ತು. ಆದರೆ, 2014ರಿಂದ ಇದುವರೆಗೆ ಭಾರತವು ವಿಶ್ವ ಐದನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿದೆ” ಎಂದು ಹೇಳಿದರು.

2028ರಲ್ಲಿ ಮತ್ತೆ ಅವಿಶ್ವಾಸ ಗೊತ್ತುವಳಿ ಮಂಡಿಸಿ

“2028ರಲ್ಲೂ ಕಾಂಗ್ರೆಸ್‌ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲಿ. ಏಕೆಂದರೆ, ಪ್ರತಿಪಕ್ಷಗಳಿಗೆ ತಮ್ಮ ಮೇಲೆಯೇ ತಮಗೆ ವಿಶ್ವಾಸ ಇಲ್ಲ. ನಾವು ಜನಧನ್‌ ಖಾತೆ ತೆರೆಯಲು ಮುಂದಾದಾಗ, ಇವರು ಆಗಲೂ ನಕಾರಾತ್ಮಕವಾಗಿ ಮಾತನಾಡಿದರು. ನಾವು ಯೋಗ, ಆಯುರ್ವೇದ, ಸ್ಟಾರ್ಟಪ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ ಎಂದೆವು. ಆಗೆಲ್ಲ, ಪ್ರತಿಪಕ್ಷಗಳು ನಕಾರಾತ್ಮಕವಾಗಿ ಮಾತನಾಡಿದರು. ಆದರೆ, ಇಂದು ಡಿಜಿಟಲ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಸೇರಿ ಎಲ್ಲ ಯೋಜನೆಗಳು ಯಶಸ್ವಿಯಾದವು” ಎಂದು ಕುಟುಕಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Assembly Elections 2023 : ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿಕೆಯ ಸಂಕೇತ: ಡಿಕೆಶಿ

Assembly Elections 2023 : ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನೆರೆ ರಾಜ್ಯಗಳ ನಮ್ಮ ನಾಯಕರು ಇಲ್ಲಿ ಪ್ರತಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಚುನಾವಣೆ ಫಲಿತಾಂಶದ ನಂತರ ಮುಂದಿನ ಕ್ರಮಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇದ್ದೇವೆ. ಪ್ರತಿ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಗಳನ್ನು ಕರೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

VISTARANEWS.COM


on

DK shivakumar
Koo

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆ (Assembly Elections 2023) ಫಲಿತಾಂಶವು ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿದಿರುವುದರ ಸಂಕೇತ (Congress dominance in South India) ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ತಿಳಿಸಿದ್ದಾರೆ.

ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆ (Telangana Election) ಫಲಿತಾಂಶ ಪ್ರಕಟವಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಮ್ಮ ಕಾರ್ಯಕರ್ತರು ಹಾಗೂ ಮತದಾರರು ಬದಲಾವಣೆ ತರಲು ತೀರ್ಮಾನ ಮಾಡಿದ್ದರು. ಹೀಗಾಗಿ ತೆಲಂಗಾಣದಲ್ಲಿ ನಿಚ್ಚಳ ಬಹುಮತ ಸಿಕ್ಕಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನೆರೆ ರಾಜ್ಯಗಳ ನಮ್ಮ ನಾಯಕರು ಇಲ್ಲಿ ಪ್ರತಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಚುನಾವಣೆ ಫಲಿತಾಂಶದ ನಂತರ ಮುಂದಿನ ಕ್ರಮಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇದ್ದೇವೆ. ಪ್ರತಿ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಗಳನ್ನು ಕರೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ತೆಲಂಗಾಣ ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಹಾಗೂ ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದು ನನ್ನ ವೈಯಕ್ತಿಕ ಗೆಲುವಲ್ಲ

ಈ ಗೆಲುವನ್ನು ನಿಮ್ಮ ವೈಯಕ್ತಿಕ ಗೆಲುವು ಎಂದು ಭಾವಿಸುತ್ತೀರಾ ಎಂದು ಮಾಧ್ಯಮಗಳು ಕೇಳಿದಾಗ, “ಖಂಡಿತ ಇಲ್ಲ. ಇದು ನನ್ನ ವೈಯಕ್ತಿಕ ಗೆಲುವಲ್ಲ. ಇದು ತೆಲಂಗಾಣ ರಾಜ್ಯದ ಜನರ ಗೆಲುವು. ತೆಲಂಗಾಣ ರಾಜ್ಯ ರಚನೆ ಮಾಡಿದ ಸೋನಿಯಾ ಗಾಂಧಿ ಅವರಿಗೆ ಈ ರಾಜ್ಯದ ಜನರು ಈ ರೀತಿ ಧನ್ಯವಾದ ಅರ್ಪಿಸಿದ್ದಾರೆ. ಕಳೆದ ಹತ್ತು ವರ್ಷಗಳ ಆಡಳಿತ ನೋಡಿ ಇಲ್ಲಿನ ಜನ ಬೇಸತ್ತಿದ್ದರು. ಹೀಗಾಗಿ ಜನ ಅಭಿವೃದ್ಧಿ ಹಾಗೂ ಪ್ರಗತಿಯ ಬದಲಾವಣೆ ಬಯಸಿದ್ದಾರೆ. ನಮ್ಮ ಮೇಲೆ ನಂಬಿಕೆ ಇಟ್ಟ ಜನರಿಗೆ ಧನ್ಯವಾದಗಳು. ನಾವು ಅವರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಸಾಮೂಹಿಕ ನಾಯಕತ್ವದ ಮೇಲೆ ಚುನಾವಣೆ

ರೇವಂತ್ ರೆಡ್ಡಿ ಅವರನ್ನು ಈ ಗೆಲುವಿನ ರೂವಾರಿ ಎಂದು ಕರೆಯುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ರೇವಂತ್ ರೆಡ್ಡಿ ಅವರು ಟಿಪಿಸಿಸಿ ಅಧ್ಯಕ್ಷರು. ಅವರು ಈ ತಂಡದ ನಾಯಕರಾಗಿದ್ದರು. ನಮ್ಮ ಪಕ್ಷ ಸಾಮೂಹಿಕ ನಾಯಕತ್ವದ ಮೇಲೆ ಚುನಾವಣೆ ಮಾಡಿದ್ದು, ಪಕ್ಷ ಈ ಬಗ್ಗೆ ಸೂಕ್ತ ತೀರ್ಮಾನ ಮಾಡಲಿದೆ. ಇಂತಹ ವಿಚಾರವಾಗಿ ನಾನು ಹೆಚ್ಚು ಚರ್ಚೆ ಮಾಡುವುದಿಲ್ಲ. ನಾವು ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡಿದ್ದೇವೆ. ಉಳಿದಂತೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನ ಗೌರವಿಸಿ ಪಾಲಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Assembly Session: ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೊ; ಪಿಡಬ್ಲ್ಯುಡಿ ಎಂಜಿನಿಯರ್‌ಗೆ ಸ್ಪೀಕರ್ ಕ್ಲಾಸ್

ತೆಲಂಗಾಣದ ಜನ ಉತ್ತರ ಕೊಟ್ಟಿದ್ದಾರೆ

ಈ ಗೆಲುವಿನ ನಂತರ ಕೆಸಿಆರ್ ಹಾಗೂ ಕೆಟಿಆರ್ ಅವರಿಗೆ ಯಾವ ಸಂದೇಶ ನೀಡುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಅವರು ನಮ್ಮ ಬಗ್ಗೆ ಏನೆಲ್ಲ ಟ್ವೀಟ್ ಮಾಡಿದ್ದರೋ ಅದಕ್ಕೆ ತೆಲಂಗಾಣ ರಾಜ್ಯದ ಜನ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.

Continue Reading

ದೇಶ

Rajasthan Election Result: ರಾಜಸ್ಥಾನದಲ್ಲಿ ನೆಕ್ಸ್ಟ್ ಸಿಎಂ ‘ರಾಜಕುಮಾರಿ’; ಆದರೆ, ವಸುಂಧರಾ ರಾಜೆ ಅಲ್ಲ!

Rajasthan Election Result: ಮಹಾರಾಜ ಮಾನ್ ಸಿಂಗ್ ಅವರ ಮೊಮ್ಮಗಳಾದ ದಿಯಾ ಕುಮಾರಿ ಅವರು ರಾಜಸ್ಥಾನದ ಸಿಎಂ ಅಭ್ಯರ್ಥಿಗಳ ಪೈಕಿ ಒಬ್ಬರಾಗಿದ್ದಾರೆ.

VISTARANEWS.COM


on

Rajasthan Election Result, Diya Kumari is next CM post favorite
Koo

ನವದೆಹಲಿ: ರಾಜಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿ (Bhartiya Janata Party) ಕಂ ಬ್ಯಾಕ್ ಮಾಡಿದ್ದು, ಕಾಂಗ್ರೆಸ್ ಪಕ್ಷವು (Congress Party) ಸೋಲೋಪ್ಪಿಕೊಂಡಿದೆ. ಆದರೆ, ಭಾರತೀಯ ಜನತಾ ಪಾರ್ಟಿಯಲ್ಲೀಗ, ಮುಂದಿನ ಮುಖ್ಯಮಂತ್ರಿ(Rajasthan Chief minister) ಯಾರು ಎಂಬ ಚರ್ಚೆಗಳು ಜೋರಾಗಿವೆ. ಚುನಾವಣೆ ಪೂರ್ವದಲ್ಲಿ ಬಿಜೆಪಿಯು ಯಾವ ನಾಯಕರನ್ನೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರಲಿಲ್ಲ. ಹಾಗಾಗಿ, ಸಿಎಂ ರೇಸ್‌ನಲ್ಲಿ ಹಲುವಾರು ನಾಯಕ, ನಾಯಕಿಯರ ಹೆಸರು ಕೇಳಿ ಬರುತ್ತಿವೆ. ಆ ಪೈಕಿ ದಿಯಾ ಕುಮಾರಿ (Princess Diya Kumari) ಹೆಸರು ತುಸು ಜೋರಾಗಿಯೇ ಓಡುತ್ತಿದೆ. ರಾಜಸ್ಥಾನದ 199ರ ಸ್ಥಾನಗಳ ಪೈಕಿ ಬಿಜೆಪಿ 112 ಕ್ಷೇತ್ರಗಳಲ್ಲಿ ಜಯ ಕಂಡಿದ್ದು, ಕಾಂಗ್ರೆಸ್ 70 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಅಧಿಕಾರವಂಚಿತವಾಗಿದೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಜೈಪುರ ರಾಜ ಕುಟುಂಬದ ರಾಜಕುಮಾರಿ ದಿಯಾ ಕುಮಾರಿ ಹಾಲಿ ಸಂಸದೆಯೂ ಹೌದು. ದಿಯಾ ಕುಮಾರಿ ಅವರು ಜೈಪುರದ ರಾಜವಂಶದ ಕೊನೆಯ ಆಡಳಿತದ ಮಹಾರಾಜ ಮಾನ್ ಸಿಂಗ್ II ಅವರ ಮೊಮ್ಮಗಳು. ಪ್ರಚಾರದ ವೇಳೆ ದಿಯಾ ಕುಮಾರಿಯನ್ನು ಜೈಪುರದ ಮಗಳು, ಬೀದಿಗಳಲ್ಲಿ ನಡೆಯುವ ರಾಜಕುಮಾರಿ ಎಂದೇ ಪ್ರಚಾರ ಮಾಡಲಾಯಿತು. ರಾಜಸ್ಥಾನದ ಪರಂಪರೆ ಮತ್ತು ಸರಳತೆಯ ಮಿಶ್ರಣವಾಗಿರುವ ದಿಯಾ ಕುಮಾರಿ ಅವರು ರಾಜಸ್ಥಾನದಲ್ಲಿ ಸದ್ಯ ಅತ್ಯಂತ ಜನಪ್ರಿಯ ನಾಯಕಿ. ಹಾಗಾಗಿ, ಅವರು ಈಗ ಮುಖ್ಯಮಂತ್ರಿಯೇ ದಾವೆದಾರ ಆಗುತ್ತಿದ್ದಾರೆ.

2013ರಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಯಾದ ದಿಯಾ ಕುಮಾರಿ ಅವರು ಈವರೆಗೆ ಎರಡು ಚುನಾವಣೆಗಳನ್ನು ಗೆದ್ದಿದ್ದಾರೆ. 2013ರಲ್ಲಿ ಅವರು ಸವಾಯಿ ಮಾಧೋಪುರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು. 2019ರಲ್ಲಿ ರಾಜಸಮಂದ್ ಕ್ಷೇತ್ರದಿಂದ ಸ್ಪರ್ಧಿಸಿ 5.51 ಲಕ್ಷ ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆಯಾದರು. ಪರಿಸರ, ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಸಬಲೀಕರಣ ವಿಷಯಗಳ ಮೂಲಕವೇ ಹೆಚ್ಚು ಪ್ರಸಿದ್ಧಿಗೆ ಬಂದಿರುವ 52 ವರ್ಷದ ದಿಯಾ ಕುಮಾರಿ ಅವರು, 2019 ರಲ್ಲಿ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಸದಸ್ಯರಾಗಿ ಸೇವೆ ಸಲ್ಲಿಸಲು ಆಯ್ಕೆಯಾದರು.

2023ರ ಚುನಾವಣೆಯಲ್ಲಿ ದಿಯಾ ಕುಮಾರಿ ಅವರು ಜೈಪುರದ ವಿದ್ಯಾನಗರದ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಮತ್ತೊಬ್ಬ ರಾಜಕುಮಾರಿ ವಸುಂದಾರಾಜೆ ಅರಸ್ ಅವರ ಜತೆಗೆ ದಿಯಾ ಅವರ ಕೂಡ ಸಿಎಂ ಹುದ್ದೆಗೆ ಕೇಳಿ ಬರುತ್ತಿರುವ ಪ್ರಮುಖ ಹೆಸರಾಗಿದೆ. ಸಾರ್ವಜನಿಕರು “ಭ್ರಷ್ಟ” ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುತ್ತಾರೆ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ ಎಂದು ಕುಮಾರಿ ಹಲವು ಬಾರಿ ಹೇಳಿದ್ದರು.

ಹಾಗಂತ ಮುಂದಿನ ಮುಖ್ಯಮಂತ್ರಿ ನೀವೇನಾ ಅಂತ ದಿಯಾ ಕುಮಾರಿ ಅವರಿ ಕೇಳಿದ್ರೆ ಅಷ್ಟೇ ನಯವಾಗಿ ನಿರಾಕರಿಸುತ್ತಾರೆ. ಇದು ಅರ್ಥವಿಲ್ಲದ ಪ್ರಶ್ನೆ. ಮುಂದಿನ ಸಿಎಂ ಯಾರಾಗಬೇಕು ಎಂಬುದನ್ನು ಭಾರತೀಯ ಜನತಾ ಪಾರ್ಟಿಯ ಹೈ ಕಮಾಂಡ್ ನಿರ್ಧರಿಸುತ್ತದೆ ಎನ್ನುತ್ತಾರೆ. ಆದರೆ, ರಾಜಸ್ಥಾನದಲ್ಲಿ ಬಿಜೆಪಿ ಬಹುಮತದ ಗೆರೆಯನ್ನು ದಾಟುತ್ತಿದ್ದಂತೆ ದಿಯಾ ಕುಮಾರಿ ಅವರೇ ಮುಂದಿನ ಸಿಎಂ ಎಂಬ ಸುದ್ದಿ ಬಲವಾಗಿ ಹರಡಿದೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Continue Reading

ದೇಶ

Assembly Election Result 2023: ರಾಜಸ್ಥಾನದಲ್ಲಿ ಇನ್ನೊಬ್ಬ ʼಯೋಗಿʼಯ ಉದಯ! ಇವರೇನಾ ಮುಖ್ಯಮಂತ್ರಿ?

ʼರಾಜಸ್ಥಾನದ ಯೋಗಿʼ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಧಾರ್ಮಿಕ ನಾಯಕ, ಅಲ್ವಾರ್ ಸಂಸದ ಬಾಬಾ ಬಾಲಕನಾಥ್ (Baba Balakanath) ಅವರು ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯ ಒಬ್ಬ ಸ್ಪರ್ಧಿಯಾಗಿದ್ದಾರೆ.

VISTARANEWS.COM


on

baba balakanath
Koo

ಹೊಸದಿಲ್ಲಿ: ರಾಜಸ್ಥಾನದ ವಿಧಾನಸಭೆ ಚುನಾವಣೆ ಫಲಿತಾಂಶ (Assembly Election Result 2023) ಬಿಜೆಪಿ ಪರವಾಗಿ ಬಂದಿದೆ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯಲ್ಲಿ ʼಯೋಗಿʼ ಇದ್ದಂತೆ, ರಾಜಸ್ಥಾನದಲ್ಲೂ ಒಬ್ಬ ʼಯೋಗಿʼ ಇದ್ದಾರೆ. ಈ ಸಲದ ಭರ್ಜರಿ ಫಲಿತಾಂಶ, ಬಿಜೆಪಿಯಲ್ಲಿ ಈ ಇನ್ನೊಬ್ಬ ಯೋಗಿಯನ್ನು ಗಟ್ಟಿಯಾಗಿ ಪ್ರತಿಷ್ಠಾಪಿಸಲಿದೆ ಎಂದು ಹೇಳಲಾಗುತ್ತಿದೆ.

ಹೌದು, ರಾಜಸ್ಥಾನದ ಗೆಲುವು ಬಿಜೆಪಿಯಲ್ಲಿ ಮತ್ತೊಬ್ಬ ʼಯೋಗಿ’ಯ ಉದಯಕ್ಕೆ ಕಾರಣವಾಗಲಿದೆ. ʼರಾಜಸ್ಥಾನದ ಯೋಗಿʼ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಧಾರ್ಮಿಕ ನಾಯಕ, ಅಲ್ವಾರ್ ಸಂಸದ ಬಾಬಾ ಬಾಲಕನಾಥ್ (Baba Balakanath) ಅವರು ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯ ಒಬ್ಬ ಸ್ಪರ್ಧಿಯಾಗಿದ್ದಾರೆ. ಬಾಲಕನಾಥ್, ತಿಜಾರಾ ಕ್ಷೇತ್ರದಿಂದ ಕಾಂಗ್ರೆಸ್‌ನ ಇಮ್ರಾನ್ ಖಾನ್ ವಿರುದ್ಧ ಭಾರಿ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

“ನಮ್ಮ ಪ್ರಧಾನಿ ಬಿಜೆಪಿಯ ಮುಖ. ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಮುಖ್ಯಮಂತ್ರಿ ಯಾರಾಗಬೇಕೆಂಬುದರ ಬಗ್ಗೆಯೂ ಪಕ್ಷವು ನಿರ್ಧಾರ ತೆಗೆದುಕೊಳ್ಳುತ್ತದೆ. ಸಂಸದನಾಗಿ ನಾನು ಸಂತೋಷವಾಗಿದ್ದೇನೆ. ಸಮಾಜ ಸೇವೆ ಮಾಡಲು ಬಯಸುತ್ತೇನೆ. ಇದರಿಂದ ನನಗೆ ತೃಪ್ತಿ ಇದೆ” ಎಂದು ರಾಜಸ್ಥಾನದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಬಾರಿ ಅಧಿಕಾರ ಕಳೆದುಕೊಂಡಿದ್ದು, ರಾಜ್ಯಕ್ಕೆ ಬಿಜೆಪಿ ಇನ್ನೂ ಮುಖ್ಯಮಂತ್ರಿ ಮುಖವನ್ನು ಬಿಂಬಿಸಿಲ್ಲ. ಬಾಲಕನಾಥ್ ಮುಖ್ಯಮಂತ್ರಿಯಾದರೆ, ಯೋಗಿ ಆದಿತ್ಯನಾಥ್ ನಂತರ ಉನ್ನತ ಹುದ್ದೆಯನ್ನು ಅಲಂಕರಿಸುವ ಮತ್ತೊಬ್ಬ ʼಯೋಗಿ’ ಆಗಲಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜಸ್ಥಾನ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಾಲಕನಾಥ್ ಪರ ಪ್ರಚಾರ ಮಾಡಿದ್ದರು. ಬಾಬಾ ಬಾಲಕನಾಥ್ ಅವರ “ತಿಜಾರʼವನ್ನು ʼಸಿತಾರಾ” ಮಾಡುವ ಮತ್ತು ಅದರ ಭವಿಷ್ಯವನ್ನು ಉಜ್ವಲಗೊಳಿಸುವ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಯೋಗಿ ಆದಿತ್ಯನಾಥ್ ಅವರಂತೆ ನಾಥ ಪಂಥದವರಾಗಿರುವ ಬಾಲಕನಾಥ್‌, 40 ವರ್ಷ ವಯಸ್ಸಿನವರು. ಮತ ಎಣಿಕೆ ಪ್ರಾರಂಭವಾಗುವ ಮೊದಲು ಶಿವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಇದಕ್ಕೂ ಮೊದಲು, ಬಾಬಾ ಬಾಲಕನಾಥ್ ಅವರು ಇಮ್ರಾನ್ ಖಾನ್ ವಿರುದ್ಧದ ಸ್ಪರ್ಧೆಯನ್ನು “ಭಾರತ-ಪಾಕಿಸ್ತಾನ” ಪಂದ್ಯಕ್ಕೆ ಹೋಲಿಸಿದ್ದರು. “ಇದು ಈ ಬಾರಿಯ ಭಾರತ-ಪಾಕಿಸ್ತಾನ ಪಂದ್ಯದಂತಿದೆ. ಇದು ಕೇವಲ ಗೆಲುವಿಗಾಗಿನ ಹೋರಾಟವಲ್ಲ, ಇದು ಶೇಕಡಾವಾರು ಮತದಾನದ ಹೋರಾಟವಾಗಿದೆ” ಎಂದು ಹೇಳಿದ್ದು ವೈರಲ್ ಆಗಿದೆ.

ರಾಜಸ್ಥಾನದಲ್ಲಿ ಬಿಜೆಪಿ ಗೆಲುವಿನ ಗಡಿಯನ್ನು ದಾಟಿದೆ. ಅದರ ಅಭ್ಯರ್ಥಿಗಳು 112 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ 72ರಲ್ಲಿ ಮುಂದಿದೆ.

Continue Reading

ದೇಶ

Assembly Elections 2023 : ಮೋದಿ ಎಂಬ ಗ್ಯಾರಂಟಿ ಎದುರು ಹೀನಾಯವಾಗಿ ಸೋತ ಕಾಂಗ್ರೆಸ್‌ ಗ್ಯಾರಂಟಿ

Assembly Elections 2023 : ಕಾಂಗ್ರೆಸ್‌ನ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಮೀರಿ ಬಿಜೆಪಿ ಗೆಲುವು ಸಾಧಿಸಲು ಕಾರಣವಾಗಿದ್ದು, ಮೋದಿ ಕಿ ಗ್ಯಾರಂಟಿ. ಹಾಗಿದ್ದರೆ ಏನಿದು?

VISTARANEWS.COM


on

PM Narendra Modi Modi ki guarantee
Koo

ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ (Assembly Elections 2023) ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮೂರೂ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ (BJP wins three states) ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಈ ಪೈಕಿ ರಾಜಸ್ಥಾನ ಮತ್ತು ಛತ್ತೀಸ್‌ ಗಢದಲ್ಲಿ ಬಿಜೆಪಿ ಕಾಂಗ್ರೆಸ್‌ ಕೈಯಿಂದ ಅಧಿಕಾರವನ್ನು ಕಿತ್ತುಕೊಂಡಿದೆ. ಕಾಂಗ್ರೆಸ್‌ ಕರ್ನಾಟಕದಲ್ಲಿ ಮಾಡಿದ್ದ ಗ್ಯಾರಂಟಿ ಪ್ರಯೋಗವನ್ನು ಈ ರಾಜ್ಯಗಳಲ್ಲಿ ನಡೆಸುವ ಮೂಲಕ ದೊಡ್ಡ ಸದ್ದು ಮಾಡಿತ್ತು. ಆದರೆ, ಈ ಎಲ್ಲ ಗ್ಯಾರಂಟಿಗಳ ಆಮಿಷಗಳನ್ನು ಮೀರಿ ಹಿಂದಿ ಪ್ರಾಬಲ್ಯದ ಮೂರು ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯವನ್ನು ಸಾಧಿಸಿದ್ದು ಹೇಗೆ ಎಂಬ ಪ್ರಶ್ನೆಗೆ ಅಲ್ಲಿನ ನಾಯಕರು ನೀಡುವುದು ಒಂದೇ ಉತ್ತರ: ಮೋದಿ ಕಿ ಗ್ಯಾರಂಟಿ (Modi ki guarantee). ಅಂದರೆ ಕಾಂಗ್ರೆಸ್‌ನ ಎಲ್ಲ ಗ್ಯಾರಂಟಿಗಳನ್ನು ಮೀರಿದ್ದು ನರೇಂದ್ರ ಮೋದಿ (PM Narendra Modi) ಎಂಬ ಗ್ಯಾರಂಟಿ ಎನ್ನುವುದು ಅವರ ನಿಲುವು.

ಚುನಾವಣೆಯ ಫಲಿತಾಂಶಗಳನ್ನು ನೋಡಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಜನರು ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನಂಬಲಿಲ್ಲ. ಬದಲಾಗಿ ನರೇಂದ್ರ ಮೋದಿ ಅವರನ್ನೇ ಗ್ಯಾರಂಟಿಯಾಗಿ ಸ್ವೀಕರಿಸಿದರು. ಮೋದಿ ಗ್ಯಾರಂಟಿಯ ಅಂತರ್ಮುಖಿ ಪ್ರವಾಹ ಈ ಮಟ್ಟದಲ್ಲಿ ಇರುತ್ತದೆ ಎಂದು ನಾವು ಕಲ್ಪಿಸಿಕೊಂಡಿರಲೇ ಇಲ್ಲʼʼ ಎಂದು ಛತ್ತೀಸ್‌ ಗಢದ ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್‌ ಹೇಳಿದ್ದಾರೆ.

ಛತ್ತೀಸ್‌ ಗಢದ ಜನರು ಮುಖ್ಯಮಂತ್ರಿಭೂಪೇಶ್‌ ಬಘೇಲ್‌ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅವರ ಭ್ರಷ್ಟಾಚಾರ, ಲಿಕ್ಕರ್‌ ಹಗರಣ, ಮಹದೇವ್‌ ಆಪ್‌ ಹಗರಣಗಳು ಕೂಡಾ ಈ ಫಲಿತಾಂಶದಲ್ಲಿ ತಮ್ಮ ಪಾತ್ರವನ್ನು ವಹಿಸಿದೆ ಎಂದು ರಮಣ್‌ ಸಿಂಗ್‌ ಹೇಳಿದರು.

PM Narendra Modi Modi ki guarantee

ಮಧ್ಯಪ್ರದೇಶದಲ್ಲಿ ಬಿಜೆಪಿ ವಿಜಯದ ಮುಂಚೂಣಿ ನಾಯಕರಾಗಿ ಹೊರ ಹೊಮ್ಮಿರುವ ಮತ್ತು ನಾಲ್ಕನೇ ಬಾರಿಗೆ ಸಿಎಂ ಆಗಲಿದ್ದಾರೆ ಎಂಬ ನಿರೀಕ್ಷೆ ಹೊಂದಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕೂಡಾ ಗೆಲುವಿನ ಕ್ರೆಡಿಟನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿಯವರ ರ‍್ಯಾಲಿಗಳು ಜನರ ಹೃದಯವನ್ನು ತಟ್ಟಿದವು ಎಂದಿದ್ದಾರೆ. ಪ್ರಧಾನ ಮಂತ್ರಿಗಳ ಸಾರ್ವಜನಿಕ ರ‍್ಯಾಲಿಗಳು, ಜನರಿಗೆ ಅವರು ಮಾಡಿರುವ ಮನವಿಗಳು, ಎಲ್ಲ ಹೃದಯ ಗೆದ್ದಿವೆ. ಇದು ಫಲಿತಾಂಶದಲ್ಲಿ ಪ್ರತಿಫಲನಗೊಂಡಿವೆ ಎಂದು ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

ಮಧ್ಯ ಪ್ರದೇಶದ ಡಬಲ್‌ ಎಂಜಿನ್‌ ಸರ್ಕಾರವು ಕೇಂದ್ರ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದೆ. ಅದರ ಜತೆಗೆ ಮಧ್ಯ ಪ್ರದೇಶ ರಾಜ್ಯ ಸರ್ಕಾರದ ಯೋಜನೆಗಳು ಕೂಡಾ ಜನರ ಮನಸು ಗೆದ್ದಿವೆ. ಇದರ ಫಲವಾಗಿ ಮಧ್ಯ ಪ್ರದೇಶ ಒಂದು ಕುಟುಂಬದಂತೆ ವರ್ತನೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ನಾನು ಮೊದಲೇ ಹೇಳಿದ್ದೆ ಎಂದು ಹೇಳಿದ್ದಾರೆ ಶಿವರಾಜ್‌ ಸಿಂಗ್‌ ಚೌಹಾಣ್‌.

ಇತ್ತ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಅಶ್ವಿನಿ ವೈಷ್ಣವ್‌ ಅವರು, ಭಾರತ ದೇಶಕ್ಕೆ ಮೋದಿ ಅವರ ಗ್ಯಾರಂಟಿಗಳ ಮೇಲೆ ನಂಬಿಕೆ ಇದೆ ಎಂದು ಟ್ವೀಟ್‌ ಮಾಡಿದ್ದಾರೆ.

PM Narendra Modi Modi ki guarantee

ಮೋದಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದರು. ಅದೇನೆಂದರೆ, 2024ರ ಚುನಾವಣೆಯಲ್ಲಿ ಸ್ಪರ್ಧೆ ನಡೆಯುವುದು ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳು ನೀಡಿರುವ ಗ್ಯಾರಂಟಿಗಳ ನಡುವೆ ಎಂದು ಹೇಳಿದ್ದರು ಮೋದಿ.

ಇದನ್ನೂ ಓದಿ: Rajasthan Election Result: ರಾಜಸ್ಥಾನದಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ? ಇಲ್ಲಿವೆ ಪ್ರಮುಖ ಕಾರಣಗಳು

ಮೋದಿ ಗ್ಯಾರಂಟಿಯ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕೊಟ್ಟಿರುವ ವಿವರಣೆ ಹೀಗಿದೆ: ಜಹಾಂ ಪರ್‌ ದೂಸ್ರೋಂಕಿ ಉಮ್ಮೀದ್‌ ಕಮ್‌ ಹೋ ಜಾತೀ ಹೈ, ವಹೀ ಸೇ ಮೋದಿ ಕಿ ಗ್ಯಾರಂಟಿ ಶುರು ಹೋ ಜಾತೀ ಹೈ, ಔರ್‌ ಇಸ್‌ ಲಿಯೇ ಮೋದಿ ಕಿ ಗ್ಯಾರಂಟಿ ವಾಲಿ ಗಾಡಿ ಕಿ ಧಮ್‌ ಮಚೀ ಹುಯೀ ಹೈ (ಯಾವಾಗ ಉಳಿದವರ ತಾಕತ್ತು ಕಡಿಮೆ ಆಗುತ್ತದೆಯೋ ಆಗ ಮೋದಿಯವರ ಗ್ಯಾರಂಟಿ ಶುರುವಾಗುತ್ತದೆ. ಹೀಗಾಗಿ ಮೋದಿಯ ಗ್ಯಾರಂಟಿಯ ಗಾಡಿ ಇನ್ನಷ್ಟು ಶಕ್ತಿಶಾಲಿಯಾಗಿ ಚಲಿಸುತ್ತಲೇ ಇರುತ್ತದೆ.)

ಈ ನಡುವೆ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಕೂಡಾ ಮೋದಿಯವರೇ ಗ್ಯಾರಂಟಿಯೇ ಗೆಲುವಿನ ಮೂಲ ಎಂದಿದ್ದಾರೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023

Continue Reading
Advertisement
ಕರ್ನಾಟಕ21 mins ago

ವಿಶೇಷಚೇತನರ ಬೇಡಿಕೆ ಶೀಘ್ರ ಈಡೇರಿಕೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

DK shivakumar
ಕರ್ನಾಟಕ24 mins ago

Assembly Elections 2023 : ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿಕೆಯ ಸಂಕೇತ: ಡಿಕೆಶಿ

Salman Butt
ಕ್ರಿಕೆಟ್24 mins ago

ಪಾಕಿಸ್ತಾನ ಕ್ರಿಕೆಟ್​ ತಂಡದ ದುರ್ಗತಿ; ನೇಮಕವಾದ ಒಂದೇ ದಿನದಲ್ಲಿ ತಂಡದ ಸಲಹೆಗಾರ ಔಟ್​

Rajasthan Election Result, Diya Kumari is next CM post favorite
ದೇಶ29 mins ago

Rajasthan Election Result: ರಾಜಸ್ಥಾನದಲ್ಲಿ ನೆಕ್ಸ್ಟ್ ಸಿಎಂ ‘ರಾಜಕುಮಾರಿ’; ಆದರೆ, ವಸುಂಧರಾ ರಾಜೆ ಅಲ್ಲ!

Rain alert
ಉಡುಪಿ30 mins ago

Karnataka weather : ಸೈಕ್ಲೋನ್‌ ಎಫೆಕ್ಟ್‌; ನಾಳೆ ಮಳೆ ಜತೆಗೆ ಥಂಡಿ ಗಾಳಿ

Kiccha canceled the elimination to save Michael ajay
ಬಿಗ್ ಬಾಸ್31 mins ago

BBK SEASON 10: ಮೈಕಲ್‌ ಉಳಿಸಲು ಎಲಿಮಿನೇಶನ್‌ ಕ್ಯಾನ್ಸಲ್‌ ಮಾಡಿದ್ರಾ ಕಿಚ್ಚ?

A country made bomb exploded in Ramanagara injuring a person and 7 live bombs found in Haveri
ಕರ್ನಾಟಕ32 mins ago

Bomb Blast : ನಾಡಬಾಂಬ್ ಸಿಡಿದು ವ್ಯಕ್ತಿ ಕೈ ಛಿದ್ರ; ಹಾವೇರಿಯಲ್ಲಿ 7 ಜೀವಂತ ಬಾಂಬ್ ಪತ್ತೆ

baba balakanath
ದೇಶ32 mins ago

Assembly Election Result 2023: ರಾಜಸ್ಥಾನದಲ್ಲಿ ಇನ್ನೊಬ್ಬ ʼಯೋಗಿʼಯ ಉದಯ! ಇವರೇನಾ ಮುಖ್ಯಮಂತ್ರಿ?

Chief Minister Siddaramaiah inquired about actress Leelavati health
South Cinema45 mins ago

Actress Leelavathi: ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

PM Narendra Modi Modi ki guarantee
ದೇಶ46 mins ago

Assembly Elections 2023 : ಮೋದಿ ಎಂಬ ಗ್ಯಾರಂಟಿ ಎದುರು ಹೀನಾಯವಾಗಿ ಸೋತ ಕಾಂಗ್ರೆಸ್‌ ಗ್ಯಾರಂಟಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ5 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ12 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ1 day ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌