Mera Yuva Bharat: ಮೈ ಭಾರತ್‌ಗೆ ಮೋದಿ ಚಾಲನೆ; ಯುವಕರ ಏಳಿಗೆಗೆ ನಾಂದಿ ಎಂದ ಪ್ರಧಾನಿ - Vistara News

ದೇಶ

Mera Yuva Bharat: ಮೈ ಭಾರತ್‌ಗೆ ಮೋದಿ ಚಾಲನೆ; ಯುವಕರ ಏಳಿಗೆಗೆ ನಾಂದಿ ಎಂದ ಪ್ರಧಾನಿ

Mera Yuva Bharat: ರಾಷ್ಟ್ರೀಯ ಏಕತಾ ದಿವಸವಾದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಮೇರಾ ಯುವ ಭಾರತ್‌ ಪ್ಲಾಟ್‌ಫಾರ್ಮ್‌ಗೆ ಚಾಲನೆ ನೀಡಿದರು. ಈ ಸ್ವಾಯತ್ತ ಸಂಸ್ಥೆಯ ಗುರಿ, ಹಿನ್ನೆಲೆ ಸೇರಿ ಹಲವು ಮಾಹಿತಿ ಇಲ್ಲಿದೆ.

VISTARANEWS.COM


on

Mera Yuva Bharat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಶದ ಯುವಕರಲ್ಲಿ ನಾಯಕತ್ವ ಗುಣ, ಯುವಕರ ಏಳಿಗೆ, ಕೌಶಲ ಅಭಿವೃದ್ಧಿ ಸೇರಿ ಯುವಕರನ್ನೇ ಗುರಿಯಾಗಿಸಿ ಕೇಂದ್ರ ಸರ್ಕಾರ ಸ್ಥಾಪಿಸಿರುವ ಮೇರಾ ಯುವ ಭಾರತ್‌ (My Bharat) ಸ್ವಾಯತ್ತ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ (ಅಕ್ಟೋಬರ್‌ 31) ಚಾಲನೆ ನೀಡಿದರು. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇರಾ ಯುವ ಭಾರತ್‌ (Mera Yuva Bharat) ವೆಬ್‌ಪೋರ್ಟಲ್‌ಗೂ ಪ್ರಧಾನಿ ಚಾಲನೆ ನೀಡಿದರು.

ಪೋರ್ಟಲ್‌ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, “ಭಾರತವು ಹೆಚ್ವಿನ ಪ್ರಮಾಣದಲ್ಲಿ ಯುವಕರಿಂದ ಕೂಡಿದ ದೇಶವಾಗಿದೆ. ಹಾಗಾಗಿ, ಕೇಂದ್ರ ಸರ್ಕಾರವು ಯುವಕರ ಏಳಿಗೆ, ಸಂಘಟನಾ ಶಕ್ತಿ, ನಾಯಕತ್ವ ಗುಣ, ಕೌಶಲ ಅಭಿವೃದ್ಧಿ, ತರಬೇತಿ ಸೇರಿ ಹಲವು ರೀತಿಯಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಮೇರಾ ಯುವ ಭಾರತ್‌ಗೆ ಚಾಲನೆ ನೀಡಲಾಗುತ್ತಿದೆ. 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಗೆ ಯುವಕರ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಮೈ ಭಾರತ್‌ಗೆ ಚಾಲನೆ ನೀಡಲಾಗಿದೆ. ಇದರಿಂದ ಯುವಕರು ಹಾಗೂ ದೇಶವು ಮತ್ತಷ್ಟು ಏಳಿಗೆ ಹೊಂದಲಿದೆ” ಎಂದು ಹೇಳಿದರು.

ಇದರ ದೃಷ್ಟಿಕೋನ ಏನು?

‘ಮೇರಾ ಯುವ ಭಾರತ (MY Bharat)’ ಅನ್ನು ಯುವಜನರ ಅಭಿವೃದ್ಧಿ ಮತ್ತು ಯುವ-ನೇತೃತ್ವದ ಅಭಿವೃದ್ಧಿಗೆ ಪ್ರಮುಖವಾದ, ತಂತ್ರಜ್ಞಾನ-ಚಾಲಿತ ಸಹಾಯಕ ವ್ಯವಸ್ಥೆಯಾಗಿ ರೂಪಿಸಲಾಗಿದೆ. ಯುವಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ಸರ್ಕಾರದ ಸಂಪೂರ್ಣ ವ್ಯಾಪ್ತಿಯಾದ್ಯಂತ “ವಿಕಸಿತ ಭಾರತ” (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಾಣಕ್ಕೆ ಕೊಡುಗೆ ನೀಡುವ ಪ್ರಮುಖ ಗುರಿಯೊಂದಿಗೆ ಇದನ್ನು ರಚಿಸಲಾಗಿದೆ. ನಮ್ಮ ದೇಶದ ಯುವಜನರು ಕಾರ್ಯಕ್ರಮಗಳು, ಮಾರ್ಗದರ್ಶಕರು ಮತ್ತು ಅವರ ಸ್ಥಳೀಯ ಸಮುದಾಯಗಳೊಂದಿಗೆ ಯಾವುದೇ ಅಡೆತಡೆಯಿಲ್ಲದೆ ಸಂಪರ್ಕಿಸಬಹುದಾದ ಚೌಕಟ್ಟನ್ನು ಇದು ರೂಪಿಸುತ್ತದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಯುವಜನರ ತಿಳಿವಳಿಕೆಯನ್ನು ಗಾಢವಾಗಿಸಲು ಮತ್ತು ರಚನಾತ್ಮಕ ಪರಿಹಾರಗಳಿಗೆ ಕೊಡುಗೆ ನೀಡಲು ಅವರನ್ನು ಸಶಕ್ತಗೊಳಿಸಲು ಈ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ.

ಮೈ ಭಾರತ್‌ ಕುರಿತು ಇನ್ನಷ್ಟು ತಿಳಿಯಿರಿ

ಮೇರಾ ಯುವ ಭಾರತ (MY Bharat), ಸ್ವಾಯತ್ತ ಸಂಸ್ಥೆಯಾಗಿದ್ದು, 15-29 ವರ್ಷ ವಯಸ್ಸಿನ ಯುವಜನರಿಗೆ ರಾಷ್ಟ್ರೀಯ ಯುವ ನೀತಿಯಲ್ಲಿನ ‘ಯುವ’ ವ್ಯಾಖ್ಯಾನಕ್ಕೆ ಅನುಗುಣವಾಗಿ ಪ್ರಯೋಜನವನ್ನು ನೀಡುತ್ತದೆ. ಫಲಾನುಭವಿಗಳು 10-19 ವರ್ಷಗಳ ವಯೋಮಾನದವರಾಗಿರುತ್ತಾರೆ.
ಮೇರಾ ಯುವ ಭಾರತ (MY Bharat) ‘ಫಿಜಿಟಲ್ ಪ್ಲಾಟ್‌ ಫಾರ್ಮ್’ (ಭೌತಿಕ + ಡಿಜಿಟಲ್) ಆಗಿದ್ದು, ಇದು ಡಿಜಿಟಲ್ ಸಂಪರ್ಕಕ್ಕೆ ಅವಕಾಶದ ಜೊತೆಗೆ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುತ್ತದೆ.

ಇಂತಹ ಸಂಸ್ಥೆಯ ಅಗತ್ಯವೇನು?

  • ಅಮೃತ ಕಾಲದಲ್ಲಿ ಯುವಕರ ಪಾತ್ರ: ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ಯುವಜನರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ – ವಿಶೇಷವಾಗಿ ಭಾರತ ಸ್ವಾತಂತ್ರ್ಯದ 75 ವರ್ಷಗಳ ಪ್ರಮುಖ ಘಟ್ಟದಲ್ಲಿ, 2047ರ ವೇಳೆಗೆ ಅಮೃತ ಭಾರತ ನಿರ್ಮಿಸಲು ಮುಂದಿನ 25 ವರ್ಷಗಳಲ್ಲಿ ದೇಶವು ಮಾದರಿ-ಬದಲಾವಣೆಗಾಗಿ ಅಭಿವೃದ್ಧಿ ಪ್ರಯಾಣವನ್ನು ಪ್ರಾರಂಭಿಸಿದೆ.
  • ವಿವಿಧ ಪ್ರದೇಶಗಳ ಯುವಜನರನ್ನು ಒಂದೇ ವೇದಿಕೆಯಡಿಗೆ ತರಲು ಚೌಕಟ್ಟನ್ನು ಸ್ಥಾಪಿಸುವುದು: ವಿಷನ್ 2047 ಕ್ಕೆ ಗ್ರಾಮೀಣ ಯುವಜನರು, ನಗರ ಯುವಜನರು ಮತ್ತು ಪಟ್ಟಣ ಯುವಜನರನ್ನು ಒಂದೇ ವೇದಿಕೆಯಲ್ಲಿ ತರಬಲ್ಲ ಚೌಕಟ್ಟು ಅಗತ್ಯವಿದೆ. ಸರ್ಕಾರದ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ನಮ್ಮ ಸಮಾಜದ ಗ್ರಾಮೀಣ ಯುವಜನರ ಅಗತ್ಯತೆಗಳ ಬಗ್ಗೆ ಆಗ ಚಾಲ್ತಿಯಲ್ಲಿದ್ದ ತಿಳುವಳಿಕೆಯೊಂದಿಗೆ ಕಳೆದ 50 ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಆರಂಭಿಸಲಾಗಿದೆ. ನಗರ-ಗ್ರಾಮೀಣ ಚಿತ್ರಣದಲ್ಲಿನ ಪಲ್ಲಟಗಳು ಈ ವಿಧಾನಗಳ ಮರು-ಮೌಲ್ಯಮಾಪನದ ಅಗತ್ಯವನ್ನು ಒತ್ತಿ ಹೇಳಿವೆ. ಗ್ರಾಮೀಣ, ನಗರ ಮತ್ತು ಪಟ್ಟಣದ ಯುವಜನರನ್ನು ಸಾಮಾನ್ಯ ವೇದಿಕೆಯಲ್ಲಿ ಒಂದುಗೂಡಿಸುವ ಚೌಕಟ್ಟನ್ನು ರಚಿಸುವುದು ಅನಿವಾರ್ಯವಾಗಿದೆ. ಅಂತಹ ಚೌಕಟ್ಟನ್ನು ರಚಿಸಲು ಮೇರಾ ಯುವ ಭಾರತ್ ಸಹಾಯ ಮಾಡುತ್ತದೆ.
  • ಇಂದಿನ ಯುವಜನತೆಯನ್ನು ತೊಡಗಿಸಿಕೊಳ್ಳಲು ಹೊಸ ಸಮಕಾಲೀನ ತಂತ್ರಜ್ಞಾನ-ನೇತೃತ್ವದ ವೇದಿಕೆಯನ್ನು ಸ್ಥಾಪಿಸುವುದು: ಇಂದಿನ ವೇಗದ ಜಗತ್ತು ಕ್ಷಿಪ್ರ ಸಂವಹನ, ಸಾಮಾಜಿಕ ಮಾಧ್ಯಮದ ವ್ಯಾಪಕತೆ ಮತ್ತು ಹೊಸ ಡಿಜಿಟಲ್ ಉಪಕರಣಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಹೊರಹೊಮ್ಮುವಿಕೆಯಿಂದ ನಿರೂಪಿಸಲ್ಪಟ್ಟಿದೆ, ತಂತ್ರಜ್ಞಾನ-ಚಾಲಿತ ವೇದಿಕೆಯು ಯುವಜನರನ್ನು ಅವರ ಸಾಮರ್ಥ್ಯಗಳನ್ನು ಸುಧಾರಿಸಲು ಸಹಾಯ ಮಾಡುವ ಕಾರ್ಯಕ್ರಮಗಳೊಂದಿಗೆ ಮತ್ತು ಸಮುದಾಯ ಚಟುವಟಿಕೆಗಳೊಂದಿಗೆ ಸಂಪರ್ಕಿಸುತ್ತದೆ.

ಮೈ ಭಾರತ್ ಉದ್ದೇಶಗಳು‌

ಮೇರಾ ಯುವ ಭಾರತ (MY Bharat) ದ ಪ್ರಾಥಮಿಕ ಉದ್ದೇಶವು ಯುವಜನರ ಪ್ರಗತಿಗೆ ಮೀಸಲಾದ ಸಂಪೂರ್ಣ ಸರ್ಕಾರಿ ವೇದಿಕೆಯಾಗಿದೆ. ಇದರ ಉದ್ದೇಶಗಳು ಹೀಗಿವೆ…

  • ಪ್ರತ್ಯೇಕವಾದ ದೈಹಿಕ ಸಂವಹನದಿಂದ ಪ್ರೋಗ್ರಾಮ್ಯಾಟಿಕ್ ಕೌಶಲಗಳಿಗೆ ಬದಲಾಯಿಸುವ ಮೂಲಕ ಅನುಭವದ ಕಲಿಕೆಯ ಮೂಲಕ ನಾಯಕತ್ವ ಕೌಶಲಗಳನ್ನು ಸುಧಾರಿಸುವುದು.
  • ಯುವಜನರನ್ನು ಸಾಮಾಜಿಕ ನವೋದ್ಯಮಿಗಳು ಮತ್ತು ಸಮುದಾಯಗಳ ನಾಯಕರನ್ನಾಗಿಸಲು ಹೂಡಿಕೆ ಮಾಡುವುದು.
  • ಯುವಕರ ಆಕಾಂಕ್ಷೆಗಳು ಮತ್ತು ಸಮುದಾಯದ ಅಗತ್ಯಗಳ ನಡುವೆ ಉತ್ತಮ ಹೊಂದಾಣಿಕೆ.
  • ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳ ಸಮನ್ವಯದ ಮೂಲಕ ಹೆಚ್ಚಿನ ದಕ್ಷತೆ.
  • ಯುವಜನರಿಗೆ ಮತ್ತು ಸಚಿವಾಲಯಗಳಿಗೆ ಒಂದು-ನಿಲುಗಡೆ ಕೇಂದ್ರವಾಗಿ ಕಾರ್ಯನಿರ್ವಹಿಸುವುದು.
  • ಕೇಂದ್ರೀಕೃತ ಯುವ ಡೇಟಾಬೇಸ್ ರಚಿಸುವುದು.
  • ಸರ್ಕಾರದ ಯುವಜನ ಉಪಕ್ರಮಗಳು ಮತ್ತು ಯುವಕರೊಂದಿಗೆ ತೊಡಗಿಸಿಕೊಳ್ಳುವ ಇತರ ಪಾಲುದಾರರ ಚಟುವಟಿಕೆಗಳನ್ನು ಸಂಪರ್ಕಿಸಲು ಸುಧಾರಿತ ದ್ವಿಮುಖ ಸಂವಹನ.
  • ಫಿಜಿಟಲ್‌ – ಭೌತಿಕ ಮತ್ತು ಡಿಜಿಟಲ್ ಅನುಭವಗಳ ಸಂಯೋಜನೆ- ಪೂರಕ ವ್ಯವಸ್ಥೆಯನ್ನು ರಚಿಸುವ ಮೂಲಕ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು.

ನನ್ನ ಮಣ್ಣು, ನನ್ನ ದೇಶ ಅಭಿಯಾನ ಅಂತ್ಯ

ಬೃಹತ್ ಸಾಂಸ್ಕೃತಿಕ ಸಂಭ್ರಮದ ನಡುವೆ ಅಮೃತ ಕಲಶಕ್ಕೆ ಭಾರತಾದ್ಯಂತ ಎಲ್ಲಡೆಯಿಂದ ಸ್ವಯಂಸೇವಕರಾಗಿ ಹೊತ್ತು ತಂದ ಮಣ್ಣನ್ನು (‘ಮಾಟಿ’) ಧಾರೆ ಎರೆಯುವುದರೊಂದಿಗೆ ನವ ದೆಹಲಿಯ ಕರ್ತವ್ಯ ಪಥದಲ್ಲಿ ‘ನನ್ನ ಮಣ್ಣು ನನ್ನ ದೇಶ(ಮೇರಿ ಮಾಟಿ ಮೇರಾ ದೇಶ)’ ಅಭಿಯಾನವು ಸಮಾಪನಗೊಂಡಿತು. ಈ ಕಾರ್ಯಕ್ರಮವು ಜೊತೆಗೆ, ಆಜಾದಿ ಕಾ ಅಮೃತ್ ಮಹೋತ್ಸವದ ಸಮಾರೋಪವನ್ನು ಕೂಡ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಸಮಾರೋಪದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: Israel Palestine War: ಇಸ್ರೇಲ್‌-ಪ್ಯಾಲೆಸ್ತೀನ್‌ ಬಿಕ್ಕಟ್ಟು; ಈಜಿಪ್ಟ್‌ ಅಧ್ಯಕ್ಷರ ಜತೆ ಮೋದಿ ಚರ್ಚೆ

ಅಕ್ಟೋಬರ್ 30 ಮತ್ತು 31ರಂದು ನವದೆಹಲಿಯಲ್ಲಿ ನಡೆದ ಎರಡು ದಿನಗಳ ವಿಜೃಂಭಣೆಯ ಸಮಾರೋಪ (ಗ್ರ್ಯಾಂಡ್ ಫಿನಾಲೆ) ಸಮಾರಂಭದಲ್ಲಿ ಒಟ್ಟು 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳಿಂದ ಸಂಗ್ರಹಿಸಿದ ಮಣ್ಣು ಮತ್ತು ಅಕ್ಕಿಯನ್ನು ಹೊತ್ತು ತಂದ 7,000 ಬ್ಲಾಕ್ ಗಳ 20,000 ಕ್ಕೂ ಹೆಚ್ಚು ಸ್ವಯಂಸೇವಕರಿಂದ ಒಂದು ಭಾರತ ಶ್ರೇಷ್ಠ ಭಾರತ (ಏಕ್ ಭಾರತ್ ಶ್ರೇಷ್ಠ್ ಭಾರತ್) ಪರಿಕಲ್ಪನೆಯ ಉತ್ಸಾಹವು ಪ್ರತಿಧ್ವನಿಸಿತು. ಭಾಗವಹಿಸಿದ ಸ್ವಯಂಸೇವಕರಲ್ಲಿ ಅನೇಕರು ತಮ್ಮ ತಮ್ಮ ರಾಜ್ಯಗಳ ಸಾಂಪ್ರದಾಯಿಕ ನಿಲುವಂಗಿಯನ್ನು ಧರಿಸಿ, ಕೈಯಲ್ಲಿ ಕಲಶದೊಂದಿಗೆ ಮೆರವಣಿಗೆ ನಡೆಸಿದರು.

‘ನನ್ನ ಮಣ್ಣು ನನ್ನ ದೇಶ’ ಅಭಿಯಾನ

‘ನನ್ನ ಮಣ್ಣು ನನ್ನ ದೇಶ (ಮೇರಿ ಮಾಟಿ, ಮೇರಾ ದೇಶ)’ ಅಭಿಯಾನವು ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಧೈರ್ಯಶಾಲಿ ವೀರರು ಮತ್ತು ವೀರಾಂಗನೆಯರಿಗೆ ಸಲ್ಲುವ ಗೌರವವಾಗಿದೆ. ಆಗಸ್ಟ್ 9, 2023 ರಂದು ಆಗಸ್ಟ್ ಕ್ರಾಂತಿ ದಿವಸದಂದು ಪ್ರಾರಂಭಿಸಲಾದ ಈ ಅಭಿಯಾನವು ವೀರರುಗಳ ಹೆಸರನ್ನು ಕೆತ್ತಿರುವ ಶಿಲಾಫಲಕಗಳ ಸಮರ್ಪಣೆಯಂತಹ ವಿವಿಧ ಚಟುವಟಿಕೆಗಳನ್ನು ಕೂಡಾ ಒಳಗೊಂಡಿದೆ. ಈ ವೀರರಲ್ಲಿ, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ಮತ್ತು ಕರ್ತವ್ಯದ ಅವಧಿಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ರಾಜ್ಯ ಪೊಲೀಸರು ಸೇರಿದ್ದಾರೆ. ಈ ಕಾರ್ಯಕ್ರಮದ ಇತರ ಚಟುವಟಿಕೆಗಳಲ್ಲಿ ಪಂಚಪ್ರಾಣ ಪ್ರತಿಜ್ಞೆ ತೆಗೆದುಕೊಳ್ಳುವುದು, ಸ್ಥಳೀಯ ಜಾತಿಯ ಸಸಿಗಳನ್ನು ನೆಡುವ ಮೂಲಕ ಅಮೃತವಾಟಿಕಗಳನ್ನು ನಿರ್ಮಿಸುವುದು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮರಣ ಹೊಂದಿದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ವೀರರ ವಂದನೆ(ವೀರೋಂಕವಂದನ), ಸನ್ಮಾನ ಮತ್ತು ಗೌರವ ಸಲ್ಲಿಸುವುದು ಮುಂತಾದ ಚಟುವಟಿಕೆಗಳು ಸೇರಿದೆ.

ದೇಶದಾದ್ಯಂತ, 36 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 2.3 ಲಕ್ಷಕ್ಕೂ ಹೆಚ್ಚು ಶಿಲಾಫಲಕಗಳನ್ನು ನಿರ್ಮಿಸುವುದರೊಂದಿಗೆ ಅಭಿಯಾನವು ದೇಶವ್ಯಾಪ್ತಿ ಸಾಮೂಹಿಕ ಆಂದೋಲನವಾಯಿತು. ಸುಮಾರು 4 ಕೋಟಿ ಪಂಚಪ್ರಾಣ್ ಪ್ರತಿಜ್ಞೆ ಸೆಲ್ಫಿಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ; ಜತೆಗೆ ರಾಷ್ಟ್ರವ್ಯಾಪಿ 2 ಲಕ್ಷ ‘ವೀರರವಂದನೆ (ವೀರೋಂಕವಂದನ)’ ಕಾರ್ಯಕ್ರಮಗಳು; 2.36 ಕೋಟಿಗೂ ಹೆಚ್ಚು ಸ್ಥಳೀಯ ಸಸಿಗಳನ್ನು ನೆಡಲಾಗಿದೆ; ಮತ್ತು ವಸುಧಾ ವಂದನ್ ಪರಿಕಲ್ಪನೆಯಡಿಯಲ್ಲಿ ದೇಶಾದ್ಯಂತ 2.63 ಲಕ್ಷ ಅಮೃತವಾಟಿಕಾಗಳನ್ನು ರಚಿಸಲಾಯಿತು.

ಜನ ಭಾಗಿದಾರಿಯ ಉತ್ಸಾಹದಲ್ಲಿ, ದೇಶದಾದ್ಯಂತ ಪಂಚಾಯತ್/ ಗ್ರಾಮ, ಬ್ಲಾಕ್, ನಗರ ಸ್ಥಳೀಯ ಸಂಸ್ಥೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಚಟುವಟಿಕೆಗಳು ಮತ್ತು ಸಮಾರಂಭಗಳನ್ನು ನಡೆಸಲಾಯಿತು.

ಇದನ್ನೂ ಓದಿ: Narendra Modi: 6G ತಂತ್ರಜ್ಞಾನದಲ್ಲಿ ಭಾರತ ಜಗತ್ತನ್ನೇ ಆಳಲಿದೆ; ಮೋದಿ ವಿಶ್ವಾಸ

‘ನನ್ನ ಮಣ್ಣು ನನ್ನ ದೇಶ(ಮೇರಿ ಮಾಟಿ ಮೇರಾ ದೇಶ)’ ಅಭಿಯಾನವು ವಿಶೇಷವಾದ ಅಮೃತ್ ಕಲಶ ಯಾತ್ರೆಯನ್ನೂ ಒಳಗೊಂಡಿತ್ತು, ಇದು ಭಾರತದಾದ್ಯಂತ ಮಣ್ಣನ್ನು ರಾಷ್ಟ್ರ ರಾಜಧಾನಿಗೆ ಹೊತ್ತು ತಂದಿರುವ ವಿಶೇಷ ಕಲಶವಾಗಿದೆ. ದೇಶದ ಪ್ರತಿಯೊಂದು ಭಾಗದಿಂದ ಸಂಗ್ರಹಿಸಿದ ಮಣ್ಣಿನಿಂದ ನವದೆಹಲಿಯ ಅಮೃತವಾಟಿಕವನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ನಿರ್ಮಿಸಲಾಗುವುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

ಭಾರತದಿಂದ ಅಮೆರಿಕಕ್ಕೆ ತೆರಳಿ, 29 ವರ್ಷದ ಯುವತಿಯನ್ನು ಕೊಂದ ಪಂಜಾಬ್‌ ವ್ಯಕ್ತಿ; ಇಷ್ಟೇಕೆ ಸೇಡು?

ಅಮೆರಿಕದ ನ್ಯೂಜೆರ್ಸಿಯಲ್ಲಿ ಪಂಜಾಬ್‌ ಮೂಲದ, 19 ವರ್ಷದ ಗೌರವ್‌ ಗಿಲ್ಲ ಎಂಬಾತನು 29 ವರ್ಷದ ಜಸ್ವೀರ್‌ ಕೌರ್‌ ಎಂಬ ಮಹಿಳೆಯನ್ನು ಕೊಂದಿದ್ದಾನೆ. ಗುಂಡಿನ ದಾಳಿಯಲ್ಲಿ 20 ವರ್ಷದ ಗಗನ್‌ದೀಪ್‌ ಕೌರ್‌ ಎಂಬ ಯುವತಿಯು ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಮಾಡಲೆಂದೇ ಆತನು ಅಮೆರಿಕಕ್ಕೆ ತೆರಳಿದ್ದ ಎಂದು ತಿಳಿದುಬಂದಿದೆ.

VISTARANEWS.COM


on

Indian Women
ಜಸ್ವೀನ್‌ ಕೌರ್‌ ಹಾಗೂ ಗಗನ್‌ದೀಪ್‌ ಕೌರ್.‌
Koo

ವಾಷಿಂಗ್ಟನ್‌: ಇತ್ತೀಚಿನ ಯುವಕ-ಯುವತಿಯರಲ್ಲಿ ಸೇಡಿನ ಕೃತ್ಯಗಳು, ಲವ್‌ ಬ್ರೇಕಪ್‌ (Love Breakup) ಆದ ಕೂಡಲೇ ಪ್ರೇಯಸಿಯನ್ನು ಕೊಲ್ಲುವುದು, ಆಸಿಡ್‌ ದಾಳಿ ಮಾಡುವುದು ಸೇರಿ ಹಲವು ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಇನ್ನು ಪಂಜಾಬ್‌ ಯುವಕನೊಬ್ಬ ಭಾರತದಿಂದ ಅಮೆರಿಕಕ್ಕೆ (America) ತೆರಳಿ, ಅಲ್ಲಿ 29 ವರ್ಷದ ಮಹಿಳೆಯ ಮೇಲೆ 7 ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಈ ಭೀಕರ ಹತ್ಯೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಅಮೆರಿಕದ ನ್ಯೂಜೆರ್ಸಿಯಲ್ಲಿ ಪಂಜಾಬ್‌ ಮೂಲದ, 19 ವರ್ಷದ ಗೌರವ್‌ ಗಿಲ್ಲ ಎಂಬಾತನು 29 ವರ್ಷದ ಜಸ್ವೀರ್‌ ಕೌರ್‌ ಎಂಬ ಮಹಿಳೆಯನ್ನು ಕೊಂದಿದ್ದಾನೆ. ಗುಂಡಿನ ದಾಳಿಯಲ್ಲಿ 20 ವರ್ಷದ ಗಗನ್‌ದೀಪ್‌ ಕೌರ್‌ ಎಂಬ ಯುವತಿಯು ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತದಿಂದ ಅಮೆರಿಕಕ್ಕೆ ತೆರಳಿ, ಅಲ್ಲಿ ಯುವತಿಯನ್ನು ಹುಡುಕಿ, ಅವರ ಮನೆಗೇ ತೆರಳಿ ಗುಂಡಿನ ದಾಳಿ ಮಾಡಲು ನಿಖರ ಕಾರಣ ತಿಳಿದುಬಂದಿಲ್ಲ. ಕೃತ್ಯದ ಬಳಿಕ ಪೊಲೀಸರು ಗೌರವ್‌ ಗಿಲ್‌ನನ್ನು ಬಂಧಿಸಿದ್ದಾರೆ.

ಪಂಜಾಬ್‌ನ ಗೌರವ್‌ ಗಿಲ್‌ ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದು, ವಾಷಿಂಗ್ಟನ್‌ ಜಿಲ್ಲೆಯ ಕೆಂಟ್‌ ಪಟ್ಟಣದಲ್ಲಿ ವಾಸಿಸುತ್ತಿದ್ದ. ನ್ಯೂಜೆರ್ಸಿಯ ಕಾರ್ಟರೆಟ್‌ನಲ್ಲಿ ಘಟನೆ ನಡೆದಿದೆ. ಗೌರವ್‌ ಗಿಲ್‌ ಹಾಗೂ ಗಗನ್‌ದೀಪ್‌ ಕೌರ್‌ ಅವರು ಪಂಜಾಬ್‌ನ ನಾಕೋದರ್‌ನಲ್ಲಿ ಕೋಚಿಂಗ್‌ ಸೆಂಟರ್‌ನಲ್ಲಿ ಅಧ್ಯಯನ ಮಾಡುವಾಗ ಪರಸ್ಪರ ಪರಿಚಯವಾಗಿದ್ದರು ಎಂದು ತಿಳಿದುಬಂದಿದೆ. ಜಸ್ವೀರ್‌ ಅವರು ಗಗನ್‌ದೀಪ್‌ ಕಸಿನ್‌ ಆಗಿದ್ದು, ಗಗನ್‌ದೀಪ್‌ ಅವರು ಜಸ್ವೀರ್‌ ಮನೆಗೆ ಹೋಗಿದ್ದರು. ಆಗ ಗೌರವ್‌ ಗಿಲ್‌ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಜಸ್ವೀರ್‌ ಕೌರ್‌ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಅಮೆಜಾನ್‌ ಫೆಸಿಲಿಟಿಯಲ್ಲಿ ಇದಕ್ಕೂ ಮೊದಲು ಕೆಲಸ ಮಾಡುತ್ತಿದ್ದರು. ಜಸ್ವೀರ್‌ ಕೌರ್‌ ಅವರ ಪತಿಯು ವಾಹನ ಚಾಲಕರಾಗಿದ್ದು, ಘಟನೆ ನಡೆದಾಗ ಅವರು ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ಜಸ್ವೀರ್‌ ಅವರು ಐದು ವರ್ಷದ ಹಿಂದೆಯೇ ಅಮೆರಿಕಕ್ಕೆ ತೆರಳಿದ್ದಾರೆ. ಇನ್ನು ಗಗನ್‌ದೀಪ್‌ ಅವರು ಅಧ್ಯಯನ ವೀಸಾ ಪಡೆದು ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದರು ಎನ್ನಲಾಗಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ಗೌರವ್‌ ಗಿಲ್‌ ಹಾಗೂ ಗಗನ್‌ದೀಪ್‌ ಕೌರ್‌ ಪ್ರೀತಿಸುತ್ತಿದ್ದರು. ಇಬ್ಬರ ಮಧ್ಯೆ ಬ್ರೇಕಪ್‌ ಆಗಿತ್ತು. ಇದರಿಂದ ಕುಪಿತಗೊಂಡ ಗೌರವ್‌ ಗಿಲ್‌, ಗಗನ್‌ದೀಪ್‌ ಕೌರ್‌ ಅವರನ್ನು ಕೊಲೆ ಮಾಡಲು ಗುಂಡು ಹಾರಿಸಿದ್ದಾನೆ. ಆಗ ಜಸ್ವೀರ್‌ ಕೌರ್‌ಗೆ ಗುಂಡು ತಗುಲಿ, ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಜಸ್ವೀರ್‌ ತಂದೆ ಹೇಳುವುದೇನು?

“ನನ್ನ ಪುತ್ರಿ ಜಸ್ವೀರ್‌ ಕೌರ್‌ ಮನೆಯಲ್ಲಿ ಗಗನ್‌ದೀಪ್‌ ಕೌರ್‌ ಇದ್ದಳು. ಘಟನೆ ನಡೆಯುವಾಗ ಜಸ್ವೀರ್‌ ಕೌರ್‌ ಮಲಗಿದ್ದಳು. ಮನೆಯ ಹೊರಗೆ ಗಗನ್‌ದೀಪ್‌ ಕೌರ್‌ ಹಾಗೂ ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಮಧ್ಯೆ ವಾಗ್ವಾದ ನಡೆದಿದೆ. ಆಗ ಸಹಾಯಕ್ಕಾಗಿ ಗಗನ್‌ದೀಪ್‌ ಕೌರ್‌ ನನ್ನ ಮಗಳನ್ನು ಕರೆದಿದ್ದಾಳೆ. ಆಗ ಜಸ್ವೀರ್‌ ಕೌರ್‌ ಜಗಳ ಬಿಡಿಸಲು ಹೋಗಿದ್ದು, ಆರೋಪಿಯು ನನ್ನ ಮಗಳ ಮುಖಕ್ಕೆ ಏಳು ಗುಂಡು ಹಾರಿಸಿ ಕೊಂದಿದ್ದಾನೆ” ಎಂದು ಜಸ್ವೀರ್‌ ಕೌರ್‌ ತಂದೆ ಕೇವಾಲ್‌ ಸಿಂಗ್‌ ಹೇಳಿದ್ದಾರೆ.

ಇದನ್ನೂ ಓದಿ: Actor Darshan: ಹಾಸ್ಯನಟ ಚಿಕ್ಕಣ್ಣಗೆ ಮೂರು ಗಂಟೆ ಪೊಲೀಸರ ಡ್ರಿಲ್‌, ರೇಣುಕಾಸ್ವಾಮಿ ಕೊಲೆ ವಿಷಯ ಬಂತಾ ಪಾರ್ಟಿಯಲ್ಲಿ?

Continue Reading

ದೇಶ

Train Accident: ಸಿಬ್ಬಂದಿ ನಿರ್ಲಕ್ಷ್ಯ, ಸಿಗ್ನಲ್‌ ದೋಷ; ಬಂಗಾಳ ರೈಲು ಅಪಘಾತಕ್ಕೇನು ಕಾರಣ?

Train Accident: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್​ಪ್ರೆಸ್​ ರೈಲಿಗೆ ಗೂಡ್ಸ್​ ರೈಲು ಡಿಕ್ಕಿಯಾಗಿ ಸುಮಾರು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೀಗ ರೈಲು ಅಪಘಾತಕ್ಕೆ ಕಾರಣವೇನು ಎನ್ನುವ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಸಿಗ್ನಲ್‌ನಲ್ಲಿ ಕಂಡು ಬಂದ ದೋಷವೇ ದುರಂತಕ್ಕೆ ಕಾರಣ ಎನ್ನಲಾಗಿದೆ.

VISTARANEWS.COM


on

Train Accident
Koo

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸೋಮವಾರ ಕಾಂಚನಜುಂಗಾ ಎಕ್ಸ್​ಪ್ರೆಸ್​ (Kanchanjunga Express) ರೈಲಿಗೆ ಗೂಡ್ಸ್​ ರೈಲು ಡಿಕ್ಕಿಯಾಗಿ (Train Accident) ಸುಮಾರು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೀಗ ರೈಲು ಅಪಘಾತಕ್ಕೆ ಕಾರಣವೇನು ಎನ್ನುವ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಸಿಗ್ನಲ್‌ನಲ್ಲಿ ಕಂಡು ಬಂದ ದೋಷವೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ದೋಷದಿಂದ ಕೂಡಿದ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಗೂಡ್ಸ್‌ ರೈಲು ವೇಗದ ಮಿತಿಯನ್ನು ಮೀರಿ ಸಂಚರಿಸಿ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಮಂಡಳಿಯ ಆರಂಭಿಕ ವರದಿ ತಿಳಿಸಿದೆ.

ನಿಯಮ ಏನು ಹೇಳುತ್ತದೆ?

ಟಿಎ 912 (TA 912) (ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಸಿಗ್ನಲ್ ವೈಫಲ್ಯ ಸಂಭವಿಸಿದಾಗ, ಕೆಂಪು ಸಿಗ್ನಲ್‌ಗಳನ್ನು ದಾಟಲು ಸ್ಟೇಷನ್ ಮಾಸ್ಟರ್ ಚಾಲಕನಿಗೆ ಲಿಖಿತ ಪಾಸ್ ಅನ್ನು ಟಿಎ 912 ಎಂದು ಕರೆಯಲಾಗುತ್ತದೆ) ನಿಯಮದ ಪ್ರಕಾರ ಒಂದುವೇಳೆ ದೋಷಪೂರಿತ ಸಿಗ್ನಲ್‌ಗಳನ್ನು ದಾಟಲು ಅನುಮತಿ ಪಡೆದಿದ್ದರೆ, ಚಾಲಕ ಪ್ರತಿ ಸಿಗ್ನಲ್‌ನಲ್ಲಿ ಕೆಲವು ಹೊತ್ತು ನಿಂತು ಗಂಟೆಗೆ 10 ಕಿ.ಮೀ. ವೇಗದಲ್ಲಿ ಮಾತ್ರ ರೈಲು ಓಡಿಸಬೇಕು. ಮಾತ್ರವಲ್ಲ ಇನ್ನೊಂದು ರೈಲಿನಿಂದ 150 ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು. ಆದಾಗ್ಯೂ ಈ ಘಟನೆಯಲ್ಲಿ ಗೂಡ್ಸ್‌ ರೈಲು ಚಾಲಕ ಈ ಷರತ್ತುಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಕಾಂಚನಜುಂಗಾ ಎಕ್ಸ್‌ಪ್ರೆಸ್‌ ಟಿಎ 912ರೊಂದಿಗೆ 9 ಸ್ವಯಂಚಾಲಿತ ಸಿಗ್ನಲ್‌ಗಳನ್ನು ದಾಟಿ ಮುಂದೆ ಸಾಗಲು ಅನುಮತಿಗಾಗಿ ಕಾಯುತ್ತಿತ್ತು ಎನ್ನಲಾಗಿದೆ.

ದೋಷಯುಕ್ತ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆಯಿಂದಾಗಿ ಗೂಡ್ಸ್‌ ರೈಲು ಚಾಲಕನಿಗೆ ರಂಗಪಾಣಿ ಮತ್ತು ಚಟ್ಟರ್ ಹ್ಯಾಟ್ ರೈಲ್ವೆ ನಿಲ್ದಾಣಗಳ ನಡುವಿನ ಎಲ್ಲ ಸಿಗ್ನಲ್‌ಗಳನ್ನು ದಾಟಲು ಅನುಮತಿ ನೀಡಲಾಗಿತ್ತು. ಆದರೆ ರೈಲು ಅಂತಹ ಸಂದರ್ಭಗಳಿಗೆ ನಿಗದಿಪಡಿಸಿದ ಮಿತಿಯನ್ನು ಮೀರಿ ಸಂಚರಿಸಿದೆ. ʼʼರಾಣಿಪಾತ್ರ ರೈಲ್ವೆ ನಿಲ್ದಾಣ ಮತ್ತು ಚಟ್ಟರ್ ಹ್ಯಾಟ್ ಜಂಕ್ಷನ್ ನಡುವಿನ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯು ಸೋಮವಾರ ಬೆಳಿಗ್ಗೆ 5.50ರಿಂದ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಗೂಡ್ಸ್ ರೈಲು ಚಾಲಕನಿಗೆ ರಂಗಪಾಣಿಯ ಸ್ಟೇಷನ್ ಮಾಸ್ಟರ್ ಟಿಎ 912 ಅನ್ನು ನೀಡಿ, ಒಂಬತ್ತು ಸಿಗ್ನಲ್‌ ಅನ್ನು ಹಾದುಹೋಗಲು ಅನುಮತಿ ನೀಡಿದ್ದರು. ಆದರೆ ಚಾಲಕ ನಿಗದಿ ಪಡಿಸಿದ ಮಿತಿಗಿಂತ ವೇಗವಾಗಿ ಚಲಿಸಿದ್ದರಿಂದ ದುರಂತ ಸಂಭವಿಸಿದೆʼʼ ಎಂದು ಮೂಲಗಳು ತಿಳಿಸಿವೆ.

ಬೆಳಿಗ್ಗೆ 8:42ಕ್ಕೆ ರಂಗಪಾಣಿಯಿಂದ ಹೊರಟ ಗೂಡ್ಸ್ ರೈಲು ಬೆಳಿಗ್ಗೆ 8:55ಕ್ಕೆ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಗಾರ್ಡ್ ಕೋಚ್, ಎರಡು ಪಾರ್ಸೆಲ್ ಬೋಗಿಗಳು ಮತ್ತು ಪ್ಯಾಸೆಂಜರ್ ರೈಲಿನ ಸಾಮಾನ್ಯ ಆಸನದ ಬೋಗಿ ಹಳಿ ತಪ್ಪಿದೆ. ಮೃತರಲ್ಲಿ ಗೂಡ್ಸ್ ರೈಲಿನ ಚಾಲಕ ಕೂಡ ಸೇರಿದ್ದಾರೆ. ಇತ್ತ ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಚಾಲಕ ಸಿಗ್ನಲಿಂಗ್ ದೋಷದ ಸಮಯದಲ್ಲಿ ಅಗತ್ಯವಿರುವ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿದ್ದಾರೆ. ಎಲ್ಲ ಕೆಂಪು ಸಿಗ್ನಲ್‌ಗಳಲ್ಲಿ ಒಂದು ನಿಮಿಷ ನಿಲ್ಲಿಸಿ 10 ಕಿ.ಮೀ. ವೇಗದಲ್ಲಿ ಸಂಚರಿಸಿದ್ದರು ಎಂದು ವರದಿ ತಿಳಿಸಿದೆ.

ಸದ್ಯ ರೈಲ್ವೆ ಸುರಕ್ಷತಾ ಆಯುಕ್ತರು (Commissioner of Railway Safety) ಅಪಘಾತದ ಕಾರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ., ಸಣ್ಣಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂ. ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Andhra train accident: 13 ಜನರ ಬಲಿ ಪಡೆದ ಆಂಧ್ರ ರೈಲು ಅಪಘಾತದ‌ ಮೂಲ ಕಾರಣ ಬಹಿರಂಗ

Continue Reading

ದೇಶ

‘ಯಾಕ್‌ ಹೀಗ್‌ ಮೋಸ ಮಾಡ್ದೆ’ ಎನ್ನುತ್ತಲೇ ಪ್ರೇಯಸಿಯನ್ನು ನಡು ರಸ್ತೆಯಲ್ಲಿ ಬಡಿದು ಕೊಂದ ಪ್ರೇಮಿ; Video ಇದೆ

ಆರತಿ ಯಾದವ್‌ ಹಾಗೂ ರೋಹಿತ್‌ ಯಾದವ್‌ ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಆತನ ನೋವಿಗೆ ಈಕೆ ಮುಲಾಮು ಆಗುತ್ತಿದ್ದಳು. ಈಕೆಯ ಮುನಿಸನ್ನು ಆತ ಪಿಸುಮಾತಿನಿಂದಲೇ ಸಮಾಧಾನ ಮಾಡುತ್ತಿದ್ದ. ಆದರೆ, ಕೆಲ ದಿನಗಳ ಹಿಂದಷ್ಟೇ ಆರತಿ ಯಾದವ್‌, ಬ್ರೇಕಪ್‌ ಮಾಡಿಕೊಳ್ಳೋಣ ಎಂದಿದ್ದಳು. ಈಕೆಯು ಇನ್ನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ಶಂಕೆಯೂ ರೋಹಿತ್‌ ಯಾದವ್‌ ಮನಸ್ಸಲ್ಲಿ ಮೂಡಿತ್ತು. ಹಾಗಾಗಿಯೇ, ನಡು ರಸ್ತೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

VISTARANEWS.COM


on

Mumbai News
Koo

ಮುಂಬೈ: ಬದಲಾದ ಕಾಲಘಟ್ಟದಲ್ಲಿ ಲವ್‌ ಬ್ರೇಕಪ್‌ (Love Breakup) ಎನ್ನುವುದು ತುಂಬ ಸಾಮಾನ್ಯ ಎನಿಸಿದೆ. ಆಕರ್ಷಣೆಗೆ ಒಳಗಾಗಿ ಪ್ರೀತಿಸುವುದು, ಒಂದು ವರ್ಷ ಜತೆಗೆ ತಿರುಗಾಡಿ, ಸಣ್ಣ ಭಿನ್ನಾಭಿಪ್ರಾಯ ಬಂದರೂ ಪ್ರೀತಿಗೆ ತಿಲಾಂಜಲಿ ಇಡುವುದು ಯುವಕ-ಯುವತಿಯರಿಗೆ ರೂಢಿಯಾಗಿದೆ. ಆದರೆ, ಕೆಲವೊಂದು ಪ್ರಕರಣಗಳಲ್ಲಿ ಬ್ರೇಕಪ್‌ಗಳು ಹಿಂಸೆ, ಕೊಲೆಗೂ ಕಾರಣವಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ (Maharashtra) ಮುಂಬೈನಲ್ಲಿ (Mumbai) ವ್ಯಕ್ತಿಯೊಬ್ಬ ಲವ್‌ ಬ್ರೇಕಪ್‌ ಎಂದಿದ್ದಕ್ಕೆ ಪ್ರೇಯಸಿಯನ್ನು ನಡು ರಸ್ತೆಯಲ್ಲಿಯೇ ಸ್ಪ್ಯಾನರ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ ಕೃತ್ಯದ ಭೀಕರ ವಿಡಿಯೊ ಈಗ ವೈರಲ್‌ ಆಗಿದೆ.

ಮುಂಬೈ ಬಳಿಯ ವಸಾಯ್‌ ಪ್ರದೇಶದ ರಸ್ತೆಯೊಂದರಲ್ಲಿ 20 ವರ್ಷದ ಆರತಿ ಯಾದವ್ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ 29 ವರ್ಷದ ರೋಹಿತ್‌ ಯಾದವ್‌ ಎಂಬಾತ ಸ್ಪ್ಯಾನರ್‌ ಹಿಡಿದುಕೊಂಡೇ ಓಡಿ ಬಂದು ಯುವತಿ ಮೇಲೆ ದಾಳಿ ಮಾಡಿದ್ದಾನೆ. ಯುವತಿ ತಲೆಗೆ, ಎದೆಗೆ ಸ್ಪ್ಯಾನರ್‌ನಿಂದ ಹೊಡೆದು, ಆಕೆ ನೆಲಕ್ಕೆ ಬಿದ್ದ ಮೇಲೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ಒಂದಿಬ್ಬರು ವ್ಯಕ್ತಿಯನ್ನು ತಡೆಯಲು ಪ್ರಯತ್ನಿಸಿದರೂ ಅಷ್ಟೊತ್ತಿಗಾಗಲೇ ಗಂಭೀರವಾಗಿ ಗಾಯಗೊಂಡಿದ್ದ ಆರತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಲವ್‌ ಬ್ರೇಕಪ್‌ ಆಗಿದ್ದೇ ಕಾರಣ?

ಆರತಿ ಯಾದವ್‌ ಹಾಗೂ ರೋಹಿತ್‌ ಯಾದವ್‌ ಅವರು ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ನಡುವೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕೆಲ ದಿನಗಳ ಹಿಂದೆ ಆರತಿ ಯಾದವ್‌ ಈತನಿಗೆ ಬ್ರೇಕಪ್‌ ಎಂದಿದ್ದಳು. ಇನ್ಯಾವತ್ತೂ ನನ್ನನ್ನು ನೋಡಲು ಬರಬೇಡ, ಮಾತನಾಡಿಸಬೇಡ, ಕಾಲ್‌ ಮಾಡಿ ತೊಂದರೆ ಕೊಡಬೇಡ ಎಂದಿದ್ದಳು. ಇದರಿಂದ ರೋಹಿತ್‌ ಯಾದವ್‌ ನೊಂದಿದ್ದ. ಅಲ್ಲದೆ, ಆರತಿ ಯಾದವ್‌ ಬೇರೊಬ್ಬನ ಜತೆ ಪ್ರೀತಿಯ ಬಲೆಗೆ ಸಿಲುಕಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿತ್ತು.

ಬೇರೆಯವನನ್ನು ಪ್ರೀತಿಸುತ್ತಿದ್ದಾಳೆ ಎಂದು ಭಾವಿಸಿದ ರೋಹಿತ್‌ ಯಾದವ್‌, ನನಗೆ ಸಿಗದವಳು ಯಾರಿಗೂ ಸಿಗಬಾರದು ಎಂದು ಭಾವಿಸಿದ್ದಾನೆ. ಇದೇ ಕಾರಣಕ್ಕಾಗಿ ತುಂಬಿದ ರಸ್ತೆಯಲ್ಲಿಯೇ ಸ್ಪ್ಯಾನರ್‌ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಬಳಿಕ, “ನನಗೇಕೆ ಹೀಗೆ ಮಾಡಿದೆ” ಎಂದು ಹತಾಶಯ ಧ್ವನಿಯಲ್ಲಿ ಕಿರುಚಿದ್ದಾನೆ. ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Continue Reading

ದೇಶ

Reliance Jio Down: ದೇಶಾದ್ಯಂತ ಜಿಯೋ ನೆಟ್‌ವರ್ಕ್‌ ಡೌನ್;‌ ಇಂಟರ್‌ನೆಟ್‌ ಇಲ್ಲದೆ ಅಲ್ಲೋಲಕಲ್ಲೋಲ!

Reliance Jio Down: ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಜಿಯೋ ಸಮಸ್ಯೆಯಾಗಿದೆ. ಇನ್ನೂ ಕೆಲವರು, ಇಂಟರ್‌ನೆಟ್‌ ಕನೆಕ್ಷನ್‌ ಇದೆ. ಆದರೆ, ದಿನ ನಿತ್ಯ ಬಳಸುವ ಫೇಸ್‌ಬುಕ್‌, ವಾಟ್ಸ್ಯಾಪ್‌, ಜಿಯೋ ಟಿವಿ ಸೇರಿ ಹಲವು ಅಪ್ಲಿಕೇಶನ್‌ಗಳನ್ನು ಓಪನ್‌ ಮಾಡಲು ಆಗುತ್ತಿಲ್ಲ ಎಂಬುದಾಗಿ ತಿಳಿದುಬಂದಿದೆ. ಆದರೆ, ನೆಟ್‌ವರ್ಕ್‌, ಇಂಟರ್‌ನೆಟ್‌ ಡೌನ್‌ ಆಗಿರುವ ಕುರಿತು ಇದುವರೆಗೆ ರಿಲಯನ್ಸ್‌ ಜಿಯೋ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

VISTARANEWS.COM


on

Reliance Jio Down
Koo

ನವದೆಹಲಿ: ಕರ್ನಾಟಕ ಸೇರಿ ದೇಶಾದ್ಯಂತ ರಿಲಯನ್ಸ್‌ ಜಿಯೋ ನೆಟ್‌ವರ್ಕ್‌ ಡೌನ್‌ (Reliance Jio Down) ಆಗಿದ್ದು, ನೆಟ್‌ವರ್ಕ್‌ ಇಲ್ಲದೆ, ಇಂಟರ್‌ನೆಟ್‌ ಇಲ್ಲದೆ ಜನರ ಪರದಾಡುತ್ತಿದ್ದಾರೆ. ಮೊಬೈಲ್‌ ಇಂಟರ್‌ನೆಟ್‌ (Mobile Internet), ಜಿಯೋ ಫೈಬರ್‌, ಮೊಬೈಲ್‌ ನೆಟ್‌ವರ್ಕ್‌ (Mobile Network) ಸೇರಿ ಗ್ರಾಹಕರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ಎಕ್ಸ್‌ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾವಿರಾರು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಇಂಟರ್‌ನೆಟ್‌, ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ಇದುವರೆಗೆ ರಿಲಯನ್ಸ್‌ ಜಿಯೋ (Reliance Jio) ಪ್ರತಿಕ್ರಿಯೆ ನೀಡಿಲ್ಲ.

ಸರ್ವರ್‌ಗಳ ಮೇಲೆ ನಿಗಾ ಇಡುವ ಡೌನ್‌ಡಿಟೆಕ್ಟರ್‌ ಸಂಸ್ಥೆ ವರದಿ ಪ್ರಕಾರ ಶೇ.54ರಷ್ಟು ಗ್ರಾಹಕರು ಮೊಬೈಲ್‌ ಇಂಟರ್‌ನೆಟ್‌ ಸಮಸ್ಯೆ ಬಗ್ಗೆ ದೂರಿದರೆ, ಶೇ.38ರಷ್ಟು ಜಿಯೋ ಬಳಕೆದಾರರು ಜಿಯೋ ಫೈಬರ್‌ ಹಾಗೂ ಶೇ.7ರಷ್ಟು ಗ್ರಾಹಕರು ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ದೂರಿದ್ದಾರೆ ಎಂದು ತಿಳಿಸಿದೆ. ಬೆಂಗಳೂರು, ಹೈದರಾಬಾದ್‌, ಚೆನ್ನೈ ಸೇರಿ ದೇಶದ ಮೂಲೆ ಮೂಲೆಗಳ ಗ್ರಾಹಕರು ಎಕ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ಇಂಟರ್‌ನೆಟ್‌, ನೆಟ್‌ವರ್ಕ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಜಿಯೋ ಸಮಸ್ಯೆಯಾಗಿದೆ. ಇನ್ನೂ ಕೆಲವರು, ಇಂಟರ್‌ನೆಟ್‌ ಕನೆಕ್ಷನ್‌ ಇದೆ. ಆದರೆ, ದಿನ ನಿತ್ಯ ಬಳಸುವ ಫೇಸ್‌ಬುಕ್‌, ವಾಟ್ಸ್ಯಾಪ್‌, ಜಿಯೋ ಟಿವಿ ಸೇರಿ ಹಲವು ಅಪ್ಲಿಕೇಶನ್‌ಗಳನ್ನು ಓಪನ್‌ ಮಾಡಲು ಆಗುತ್ತಿಲ್ಲ ಎಂಬುದಾಗಿ ತಿಳಿದುಬಂದಿದೆ. ದೇಶಾದ್ಯಂತ ಕೋಟ್ಯಂತರ ಜನ ಜಿಯೋ ಸಿಮ್‌, ಜಿಯೋ ಫೈಬರ್‌ಅನ್ನು ಬಳಸುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಜನ ದೂರಿದ್ದಾರೆ.

ಕೆಲ ತಿಂಗಲ ಹಿಂದೆ ಎಕ್ಸ್‌ ಸಾಮಾಜಿಕ ಜಾಲತಾಣದ ಸರ್ವರ್‌ ಡೌನ್‌ ಆಗಿತ್ತು, ಶೇ.53ರಷ್ಟು ಜನ ವೆಬ್‌ನಲ್ಲಿ ಸಮಸ್ಯೆ ಎದುರಿಸಿದರೆ, ಶೇ.29ರಷ್ಟು ಮಂದಿಗೆ ಸರ್ವರ್‌ನಲ್ಲಿ ಸಮಸ್ಯೆ ಎದುರಾಗಿದೆ ಹಾಗೂ ಶೇ.18ರಷ್ಟು ಬಳಕೆದಾರರು ಅಪ್ಲಿಕೇಶನ್‌ನಲ್ಲಿ (App) ಸಮಸ್ಯೆ ಎದುರಿಸಿದ್ದಾರೆ. ಒಂದಷ್ಟು ಜನರಿಗೆ ಪೋಸ್ಟ್‌ಗಳು, ಅಪ್‌ಡೇಟ್‌ಗಳು ಕಾಣಿಸಿಲ್ಲ. ಇನ್ನೂ ಒಂದಷ್ಟು ಜನರ ಖಾತೆಗಳು ಲಾಗೌಟ್‌ ಆಗಿವೆ. ಕೆಲವೊಂದಿಷ್ಟು ಮಂದಿಗೆ ತಮ್ಮ ಪೋಸ್ಟ್‌ಗಳು ಅಪ್‌ಲೋಡ್‌ ಆಗಿಲ್ಲ ಎಂಬುದಾಗಿ ಡೌನ್‌ಡಿಟೆಕ್ಟರ್‌ ಮಾಹಿತಿ ನೀಡಿತ್ತು.

ಇದನ್ನೂ ಓದಿ: Facebook, Instagram Down: ಫೇಸ್‌ಬುಕ್‌, ಇನ್​ಸ್ಟಾಗ್ರಾಮ್​ ಸರ್ವರ್​ ಡೌನ್​; ಬಳಕೆದಾರರ ಪರದಾಟ

Continue Reading
Advertisement
Electric Shock
ವಿಜಯಪುರ13 mins ago

Electric shock : ಮೀನು ಹಿಡಿಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಬಾಲಕರಿಬ್ಬರು ಮೃತ್ಯು; ಕುಟುಂಬಸ್ಥರ ಆಕ್ರಂದನ

Woman having headache. stressed, Migraine, World Brain Tumor day
ಆರೋಗ್ಯ19 mins ago

Migraine Problem: ಮೈಗ್ರೇನ್‌ ಉಪಶಮನಕ್ಕೆ ರೋಸ್‌ಮೆರಿ ಸುಗಂಧ ತೈಲ ಮದ್ದು!

Indian Women
ವಿದೇಶ33 mins ago

ಭಾರತದಿಂದ ಅಮೆರಿಕಕ್ಕೆ ತೆರಳಿ, 29 ವರ್ಷದ ಯುವತಿಯನ್ನು ಕೊಂದ ಪಂಜಾಬ್‌ ವ್ಯಕ್ತಿ; ಇಷ್ಟೇಕೆ ಸೇಡು?

Pavithra Gowda
ಪ್ರಮುಖ ಸುದ್ದಿ35 mins ago

Pavithra Gowda: ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಅಸ್ವಸ್ಥ; ಆಸ್ಪತ್ರೆಗೆ ಶಿಫ್ಟ್‌

International Yoga Day 2024
ಫ್ಯಾಷನ್50 mins ago

International Yoga Day 2024: ಯುವತಿಯರ ಯೋಗಾಭ್ಯಾಸಕ್ಕೆ ಸಾಥ್‌ ನೀಡುವ 3 ಶೈಲಿಯ ಫ್ಯಾಷನ್‌ವೇರ್ಸ್

wild animals Attack
ಕೊಡಗು55 mins ago

Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

Viral Video
ಕ್ರಿಕೆಟ್1 hour ago

Viral Video: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ಪಾಕ್​ ವೇಗಿ; ತಡೆದು ನಿಲ್ಲಿಸಿದ ಪತ್ನಿ

Kempegowda Jayanti
ಕರ್ನಾಟಕ1 hour ago

Kempegowda Jayanti: ಬೆಂಗಳೂರಲ್ಲಿ ಜೂನ್ 27ಕ್ಕೆ ಕೆಂಪೇಗೌಡ ಜಯಂತಿ: ಡಿಸಿಎಂ ಡಿ.ಕೆ.ಶಿವಕುಮಾರ್‌

Train Accident
ದೇಶ1 hour ago

Train Accident: ಸಿಬ್ಬಂದಿ ನಿರ್ಲಕ್ಷ್ಯ, ಸಿಗ್ನಲ್‌ ದೋಷ; ಬಂಗಾಳ ರೈಲು ಅಪಘಾತಕ್ಕೇನು ಕಾರಣ?

Mumbai News
ದೇಶ2 hours ago

‘ಯಾಕ್‌ ಹೀಗ್‌ ಮೋಸ ಮಾಡ್ದೆ’ ಎನ್ನುತ್ತಲೇ ಪ್ರೇಯಸಿಯನ್ನು ನಡು ರಸ್ತೆಯಲ್ಲಿ ಬಡಿದು ಕೊಂದ ಪ್ರೇಮಿ; Video ಇದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌