Vikram Batra | 24 ವರ್ಷಕ್ಕೇ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವಿಕ್ರಮ್‌ ಬಾತ್ರಾ ನೆನಪಿಂದು ಕಾಡುತ್ತಿದೆ! - Vistara News

ದೇಶ

Vikram Batra | 24 ವರ್ಷಕ್ಕೇ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವಿಕ್ರಮ್‌ ಬಾತ್ರಾ ನೆನಪಿಂದು ಕಾಡುತ್ತಿದೆ!

Vikram Batra | ಅನುಪಮ ಸಾಹಸಕ್ಕೆ, ಕೆಚ್ಚೆದೆಯ ದೇಶಭಕ್ತಿಗೆ, ಪ್ರಾಂಜಲ ಪ್ರೇಮಕ್ಕೆ ಮತ್ತೊಂದು ಹೆಸರು ವಿಕ್ರಂ ಬಾತ್ರಾ. ಆವತ್ತು ನಾವು ಕಾರ್ಗಿಲ್‌ ಕದನ ಗೆದ್ದೆವು ಎಂದು ನಾವಿಂದು ಎದೆಯುಬ್ಬಿಸಿ ಹೇಳಲು ಕಾರಣರಾದ ವೀರಯೋಧರಲ್ಲಿ ಅಗ್ರಗಣಿ ಬಾತ್ರಾ. ಇದ್ದಿದ್ದರೆ ಇವತ್ತಿಗೆ 48 ವರ್ಷ ತುಂಬುತ್ತಿತ್ತು.

VISTARANEWS.COM


on

vikram batra captain
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಿ ಸೋಮಶೇಖರ್‌, ಬೆಂಗಳೂರು

“ಒಂದೋ ತಿರಂಗಾವನ್ನು ಹಾರಿಸಿ ಬರುತ್ತೇನೆ. ಇಲ್ಲವೇ ಅದೇ ತಿರಂಗಾ ಹೊದ್ದುಕೊಂಡು ಬರುತ್ತೇನೆ. ಏನಾದರೂ ಆಗಲಿ, ನಾನು ವಾಪಸ್‌ ಬಂದೇ ಬರುತ್ತೇನೆ”…

ಅದು ೧೯೯೯ರ ಬೇಸಿಗೆಯ ಸಮಯ. ಸೇನೆಯ ಕರ್ತವ್ಯದಿಂದ ಬಿಡುವು ಪಡೆದುಕೊಂಡು ಹೋಳಿ ಆಚರಿಸಲು, ತಂದೆ- ತಾಯಿ, ಮುದ್ದಿನ ಸಹೋದರನನ್ನು ನೋಡಲು, ನಲುಮೆಯ ಗೆಳತಿಯ ಜತೆಗೊಂದಿಷ್ಟು ಕಾಲ ಕಳೆಯಲು ವಿಕ್ರಮ್ ಬಾತ್ರಾ ತನ್ನೂರಾದ ಹಿಮಾಚಲ ಪ್ರದೇಶದ ಪಾಲಂಪುರಕ್ಕೆ ಆಗಮಿಸಿದ್ದರು. ಆಗ ಗೆಳೆಯರು, “ಪಾಕಿಸ್ತಾನದ ವಿರುದ್ಧ ಯುದ್ಧ ಆರಂಭವಾಗಿದೆ. ನಿನ್ನನ್ನು ಯಾವಾಗ ಬೇಕಾದರೂ ಸೇನೆ ವಾಪಸ್‌ ಕರೆಸಿಕೊಳ್ಳಬಹುದು” ಎಂದಾಗ ವಿಕ್ರಮ್ ಬಾತ್ರಾ ಈ ಮೇಲಿನಂತೆ ಹೇಳಿದ್ದರು.

ಅದು ಜುಲೈ ೨೬ರ “ವಿಜಯ ದಿವಸ”ವೇ ಬರಲಿ, ಜುಲೈ ೭ ಇರಲಿ ಅಥವಾ ಸೆಪ್ಟೆಂಬರ್‌ 9 ಇರಲಿ. ಆಗೆಲ್ಲ ಕ್ಯಾಪ್ಟನ್‌ ವಿಕ್ರಂ ಬಾತ್ರಾ ಎಂಬ ವೀರನ ನೆನಪಾಗುತ್ತದೆ. ಜುಲೈ ೨೬ ಬಂತೆಂದರೆ, ಕಾರ್ಗಿಲ್‌ ವಿಜಯ ದಿವಸವನ್ನು ನೆನೆಯುತ್ತ, ವಿಜಯಕ್ಕೆ ವಿಕ್ರಂ ಬಾತ್ರಾ ನೀಡಿದ ಕೊಡುಗೆ, ಮಾಡಿದ ತ್ಯಾಗವನ್ನು ನೆನೆಯುತ್ತೇವೆ. ಜುಲೈ ೭ ಬಂದರೆ, ಮತ್ತೂ ವಿಕ್ರಂ ಬಾತ್ರಾ ನೆನಪಾಗುತ್ತಾರೆ. ದೇಶಕ್ಕಾಗಿ ಹೋರಾಡುತ್ತಲೇ ಪ್ರಾಣ ತ್ಯಾಗ ಮಾಡಿದರಲ್ಲ, ಬದುಕಿದ್ದಿದ್ದರೆ ಅವರಿಗೆ ಇಂದು ಇಷ್ಟು ವರ್ಷ ತುಂಬುತಿತ್ತಲ್ಲ ಎಂದು ಮನಸ್ಸು ಹೊಯ್ದಾಡುತ್ತದೆ. ಅದೇ, ಇಂದು ಸೆಪ್ಟೆಂಬರ್‌ ೯ನೇ ತಾರೀಖು ಎಂಬುದು ಅರಿವಾದರೆ, ಮಗದೊಮ್ಮೆಯೂ ವಿಕ್ರಮ್‌ ಬಾತ್ರಾ ಅವರೇ ಸ್ಮೃತಿಪಟಲದಲ್ಲಿ ಬಂದು ಕೂತುಬಿಡುತ್ತಾರೆ. ಪಾಕಿಸ್ತಾನಿಯರ ಎದೆಯನ್ನೇ ನಡುಗಿಸಿ, ದೇಶವೇ ಎದೆಯುಬ್ಬಿಸುವಂತೆ ಮಾಡಿದ ಕಲಿಯ ಜನ್ಮದಿನ ಇಂದು ಎಂಬ ಹೆಮ್ಮೆ ಒಡಮೂಡುತ್ತದೆ. ಅಷ್ಟರಮಟ್ಟಿಗೆ, ಹುತಾತ್ಮರಾಗಿ ೨೩ ವರ್ಷವಾದರೂ ೨೪ ವರ್ಷಕ್ಕೇ ದೇಶಕ್ಕಾಗಿ ಮಡಿದ ಯೋಧನ ನೆನಪು ಪ್ರತಿ ಭಾರತೀಯರನ್ನೂ ಕಾಡುತ್ತಿದೆ.

ಯೋಧರು ಹಾಗೂ ಶಸ್ತ್ರಾಸ್ತ್ರಗಳ ಜತೆ ಬಾತ್ರಾ.

ಆಪರೇಷನ್‌ ಪಾಯಿಂಟ್‌ ೫೧೪೦

ಗೆಳೆಯರು ಹೇಳಿದ್ದು ನಿಜವಾಯಿತು. ೧೯೯೯ರ ಜೂನ್‌ ೧ರಂದು ಸೇನೆಗೆ ವಾಪಸಾಗಬೇಕು ಎಂದು ವಿಕ್ರಮ್‌ ಬಾತ್ರಾ ಅವರಿಗೆ ಕರೆ ಬಂತು. ಪಾಕಿಸ್ತಾನದ ಸೈನಿಕರು ಲಡಾಕ್‌ನ ದ್ರಾಸ್‌ನಲ್ಲಿರುವ ೫೧೪೦ ಶಿಖರವನ್ನು (ಈಗ ಇದಕ್ಕೆ ಗನ್‌ ಹಿಲ್‌ ಎಂದು ಹೆಸರಿಡಲಾಗಿದೆ) ವಶಪಡಿಸಿಕೊಂಡಿದ್ದರು. ಪಾಯಿಂಟ್‌ ೫೧೪೦ಅನ್ನು ನಾವು ವಾಪಸ್‌ ಪಡೆಯದಿದ್ದರೆ ವೈರಿಪಡೆಗಳು ಬಲಿಷ್ಠರಾಗುತ್ತಾರೆ. ಹಾಗಾಗಿ, ಇದನ್ನು ಮತ್ತೆ ವಶಪಡಿಸಿಕೊಳ್ಳುವ ಉಸ್ತುವಾರಿಯನ್ನು ೨೪ ವರ್ಷದ ವಿಕ್ರಮ್‌ ಬಾತ್ರಾ ಅವರಿಗೆ ನೀಡಲಾಯಿತು. ವೈರಿಗಳು ಶಿಖರದ ಮೇಲಿರುವುದರಿಂದ ಭಾರತೀಯ ಸೈನಿಕರು ಶಿಖರ ಹತ್ತಿ ವೈರಿಗಳ ವಿರುದ್ಧ ಕಾದಾಡಬೇಕಿತ್ತು. ಆದರೇನಂತೆ, ವಿಕ್ರಮ್‌ ಬಾತ್ರಾ ಅವರು ೧೩ ಜಮ್ಮು-ಕಾಶ್ಮೀರ ರೈಫಲ್ಸ್‌ ತಂಡವನ್ನು ಕರೆದುಕೊಂಡು ಶಿಖರ ಹತ್ತಲು ಆರಂಭಿಸಿದರು. ಶಿಖರದ ಮೇಲೆ ಭಾರತ ಹಾಗೂ ಪಾಕಿಸ್ತಾನದ ಯೋಧರ ಮಧ್ಯೆ ದೊಡ್ಡ ಕಾಳಗವೇ ನಡೆಯಿತು. ಮುಂದೆ ನಿಂತು ವಿಕ್ರಮ್‌ ಬಾತ್ರಾ ಯೋಧರನ್ನು ಮುನ್ನಡೆಸಿದರು. ಈ ಗುದ್ದಾಟದಲ್ಲಿ ಬಾತ್ರಾ ಒಬ್ಬರೇ ಪಾಕಿಸ್ತಾನದ ನಾಲ್ವರು ಸೈನಿಕರನ್ನು ಹೊಡೆದು ಸಾಯಿಸಿದರು. ಬಾತ್ರಾ ನೇತೃತ್ವದಲ್ಲಿ ಅಪ್ರತಿಮ ಶೌರ್ಯ ಮೆರೆದ ಯೋಧರು ಜೂನ್‌ ೨೦ರಂದು ಪಾಯಿಂಟ್‌ ೫೧೪೦ಅನ್ನು ವಶಪಡಿಸಿಕೊಂಡರು. ಆಗ ವಿಕ್ರಮ್‌ ಬಾತ್ರಾ ನ್ಯಾಷನಲ್‌ ಹೀರೊ ಆಗಿ ಹೊರಹೊಮ್ಮಿದರು. ಇವರ ಶೌರ್ಯದ ಬಗ್ಗೆ ಪತ್ರಿಕೆಗಳು ಪುಟಗಟ್ಟಲೆ ಬರೆದವು. ಸೇನಾ ನೆಲೆಗೇ ಹೋಗಿ ದೃಶ್ಯ ಮಾಧ್ಯಮಗಳು ಸಂದರ್ಶನ ಮಾಡಿದವು.

ಯೇ ದಿಲ್‌ ಮಾಂಗೆ ಮೋರ್‌

ಪಾಯಿಂಟ್‌ ೫೧೪೦ಅನ್ನು ವಶಪಡಿಸಿಕೊಂಡ ಬಳಿಕ ವಿಕ್ರಮ್‌ ಬಾತ್ರಾ ಅವರು ತಮ್ಮ ತಂದೆ ಜಿ.ಎಲ್.ಬಾತ್ರಾ ಅವರಿಗೆ ಕರೆ ಮಾಡಿ ನಾವು ಪಾಯಿಂಟ್‌ ೫೧೪೦ ನಮ್ಮ ವಶವಾಗಿದೆ ಎಂದು ಖುಷಿಯಿಂದ ಹೇಳಿದರು. ಅಷ್ಟೇ ಅಲ್ಲ, ಸೇನಾ ನೆಲೆಯಲ್ಲಿ ನಿಂತು, ತಮ್ಮ ಕಮಾಂಡರ್‌ಗೆ “ಯೇ ದಿಲ್‌ ಮಾಂಗೆ ಮೋರ್”‌ ಎಂದು ಹೇಳಿದ್ದರು. ಅಂದರೆ ಇದೊಂದೇ ಸಾಕಾಗುವುದಿಲ್ಲ. ಇನ್ನಷ್ಟು ಶಿಖರಗಳನ್ನು ಗೆಲ್ಲಬೇಕು ನಾವು ಎಂಬ ಕಾತರ ತೋರಿದ್ದರು. ʻಯೇ ದಿಲ್‌ ಮಾಂಗೆ ಮೋರ್‌ʼ ಎಂಬ ಘೋಷಣೆಯೂ ದೇಶದ ಮನೆಮಾತಾಯಿತು. ವಿಕ್ರಮ್‌ ಬಾತ್ರಾ ಶೇರ್‌ ಷಾ ಎಂದೇ ಖ್ಯಾತರಾದರು. ಪಾಕಿಸ್ತಾನದ ಸೈನಿಕರಿಗೂ ಶೇರ್‌ ಷಾ ಎಂದರೆ ಯಾರು ಎಂಬುದು ಗೊತ್ತಾಗಿತ್ತು. ಬಾತ್ರಾ ಮನದಾಸೆಯಂತೆಯೇ ಮುಂದೆ ಅವರಿಗೆ ದೊಡ್ಡ ಜವಾಬ್ದಾರಿಯೇ ಕಾದಿತ್ತು. ಹಾಗೆಯೇ, ವಿಧಿಯ ಆಟವೂ!

ಪಾಯಿಂಟ್‌ 4875 ಸಾಹಸಗಾಥೆ

ಭಾರತದ ಯೋಧರು ೫೧೪೦ ಪಾಯಿಂಟ್‌ ವಶಪಡಿಸಿಕೊಂಡ ಮಾತ್ರಕ್ಕೆ ಶತ್ರುಪಡೆಯು ಸಂಪೂರ್ಣವಾಗಿ ನಿರ್ನಾಮವಾಗಿರಲಿಲ್ಲ. ಪಾಯಿಂಟ್‌ ೫೧೪೦ ನಮ್ಮ ವಶವಾಯಿತು ಎಂದು ಸಂಭ್ರಮಿಸುವಷ್ಟರಲ್ಲಿಯೇ ಪಾಕ್‌ ಯೋಧರು ಪಾಯಿಂಟ್‌ ೪೮೭೫ ಎಂಬ ೧೮ ಸಾವಿರ ಅಡಿ ಎತ್ತರದ ಶಿಖರದ ೧೬ ಸಾವಿರ ಅಡಿ ಹತ್ತಿ ಕುಳಿತಿದಿದ್ದರು. ಒಂದು ಚಾರ್ಲಿ ಕಂಪನಿಗೆ ಕ್ಯಾಪ್ಟನ್‌ ಅನೂಜ್‌ ನಯ್ಯರ್‌ ಹಾಗೂ ಮತ್ತೊಂದು ಕಂಪನಿಗೆ ವಿಕ್ರಮ್‌ ಬಾತ್ರಾ ಅವರನ್ನು ನಾಯಕನನ್ನಾಗಿ ಮಾಡಿ, ಪಾಯಿಂಟ್‌ ೪೮೭೫ ವಶಪಡಿಸಿಕೊಳ್ಳಲು ಕಳುಹಿಸಲಾಯಿತು. ಆದರೆ, ಈ ಬಾರಿ ಪಾಕಿಸ್ತಾನದ ಯೋಧರು ಮುನ್ನಡೆ ಸಾಧಿಸಿದರು. ಕ್ಯಾಪ್ಟನ್‌ ನಯ್ಯರ್‌ ಅವರೂ ಸೇರಿ ಇಡೀ ತಂಡದ ಯೋಧರು ಹುತಾತ್ಮರಾದರು. ಉಳಿದಿದ್ದು, ವಿಕ್ರಮ್‌ ಬಾತ್ರಾ ಯೋಧರ ತಂಡವೊಂದೇ. ಇದರಿಂದ ಕಿಂಚಿತ್ತೂ ಎದೆಗುಂದದ ಬಾತ್ರಾ, ವೈರಿಗಳ ಜತೆ ಇನ್ನಿಲ್ಲದಂತೆ ಕಾದಾಡಿದರು. ಬಡಿದಾಟದಲ್ಲಿ ಒಬ್ಬರೇ ಪಾಕಿಸ್ತಾನದ ಐವರನ್ನು ಹತ್ಯೆಗೈದರು. ಆದರೆ, ಗಾಯಗೊಂಡ ತಮ್ಮ ತಂಡದ ಯೋಧರನ್ನು ಉಳಿಸಲು ಹೋದಾಗ ಶತ್ರುವಿನ ಗುಂಡು ಬಾತ್ರಾ ದೇಹ ಹೊಕ್ಕಿತು. ವಿಕ್ರಮ್‌ ಬಾತ್ರಾ ಎಂಬ ಯೋಧ ರಣರಂಗ ಭೂಮಿಯಲ್ಲಿ ೧೯೯೯ರ ಜುಲೈ ೭ರಂದು ಹುತಾತ್ಮನಾಗುವ ಮೊದಲು ವೈರಿಗಳ ಮೇಲೆ ಭಾರಿ ಪ್ರಭಾವ ಬೀರಿದ್ದರು. ಅವರನ್ನು ಹಿಮ್ಮೆಟ್ಟಿಸಿದರು. ಹಾಗಾಗಿ, ವ್ಯೂಹಾತ್ಮಕವಾಗಿ ಪ್ರಮುಖವಾಗಿದ್ದ ಪಾಯಿಂಟ್‌ ೪೮೭೫ ನಮ್ಮ ವಶವಾಯಿತು. ೧೮ ಸಾವಿರ ಅಡಿ ಎತ್ತರದಲ್ಲಿ ನಡೆದ ಒಂದಿಡೀ ಕಾಳಗದಲ್ಲಿ ಪಾಕಿಸ್ತಾನದ ೪೭ ಯೋಧರು ಹತರಾಗಿದ್ದರೆ, ಬಾತ್ರಾ, ನಯ್ಯರ್‌ ಸೇರಿ ಭಾರತದ ೧೧ ಯೋಧರು ಹುತಾತ್ಮರಾದರು. ಇದು ಭಾರತವು ಕಾರ್ಗಿಲ್‌ ಯುದ್ಧ ಗೆಲ್ಲಲು ನೆರವಾಯಿತು. ತನ್ನೂರಿನಲ್ಲಿ ಕೊಟ್ಟ ಮಾತಿನಂತೆ ವಿಕ್ರಮ್‌ ಬಾತ್ರಾ ತಿರಂಗಾದೊಂದಿಗೆ ವಾಪಸಾಗಿದ್ದರು. ಆದರೆ, ಅವರನ್ನು ತಿರಂಗಾದಲ್ಲಿ ಸುತ್ತಲಾಗಿತ್ತು ಎಂಬುದೇ ದುರ್ದೈವವಾಗಿತ್ತು. ಅಪ್ರತಿಮ ಶೌರ್ಯ ಮೆರೆದ ವಿಕ್ರಮ್‌ ಬಾತ್ರಾ ಅವರಿಗೆ ಸೇನೆಯ ಅತ್ಯುನ್ನತ “ಪರಮ ವೀರ ಚಕ್ರ” ಹಾಗೂ ಅನೂಜ್‌ ನಯ್ಯರ್‌ ಅವರಿಗೆ “ಮಹಾ ವೀರ ಚಕ್ರ” ನೀಡಿ ಗೌರವಿಸಲಾಯಿತು.

ಬಾತ್ರಾ ಅಮರ ಪ್ರೇಮಕತೆ

ಡಿಂಪಲ್‌ ಚೀಮಾ.

ವಿಕ್ರಮ್‌ ಬಾತ್ರಾ ಅವರು ದೇಶಕ್ಕೆ ನೀಡಿದ ಕೊಡುಗೆ, ಮಾಡಿದ ಮಹೋನ್ನತ ತ್ಯಾಗ ಎಷ್ಟು ಅಮರವಾಗಿದೆಯೋ, ಅವರ ಪ್ರೇಮಕತೆಯೂ ಅಷ್ಟೇ ಪ್ರಾಂಜಲವಾಗಿದೆ. ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ಬಾತ್ರಾ ಪದವಿ ಅಧ್ಯಯನ ಮಾಡುವಾಗ ಡಿಂಪಲ್‌ ಚೀಮಾ ಎಂಬ ಯುವತಿಯ ಪರಿಚಯವಾಗುತ್ತದೆ. ಓದು, ಬರಹ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ನಿಸ್ಸೀಮರಾಗಿದ್ದ ಬಾತ್ರಾ ಹಾಗೂ ಡಿಂಪಲ್‌ ಪರಿಚಯವು ಪ್ರೇಮವಾಗಿ ಪರಿವರ್ತನೆಯಾಗುತ್ತದೆ. ಅದೊಂದು ದಿನ, ಮಾನ್ಸಾ ದೇವಿ ದೇವಾಲಯದಲ್ಲಿ ಡಿಂಪಲ್‌ ದುಪಟ್ಟಾ ಹಿಡಿದ ಬಾತ್ರಾ, ಇದೇ ನಮ್ಮ ಮದುವೆ ಎಂದು ಹೇಳಿದ್ದರು. ವಿಕ್ರಮ್‌ ಬಾತ್ರಾ ಹುತಾತ್ಮರಾಗುವ ಆರು ದಿನಗಳ ಮೊದಲು “ನಮ್ಮ ಮದುವೆಯಲ್ಲಿ ವಿಕ್ರಮ್‌ ಬಾತ್ರಾ ಕುಣಿಯಬೇಕು” ಎಂದು ಡಿಂಪಲ್‌ ಹೇಳಿದ್ದರು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಹಾಗಂತ, ವಿಕ್ರಮ್‌ ಬಾತ್ರಾ ಅಗಲಿದರು ಎಂದು ಡಿಂಪಲ್‌ ಚೀಮಾ ಬೇರೊಬ್ಬರನ್ನು ಮದುವೆಯಾಗಲಿಲ್ಲ. ಈಗಲೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿಂಪಲ್‌ ಚೀಮಾ, ಬಾತ್ರಾ ಜತೆ ಕಳೆದ ನೆನಪುಗಳಲ್ಲೇ ಜೀವಿಸುತ್ತಿದ್ದಾರೆ. ದೇಶಕ್ಕಾಗಿ ಬಾತ್ರ ಜೀವವನ್ನೇ ತ್ಯಾಗ ಮಾಡಿದರೆ, ಆತನ ಮೇಲಿನ ಪ್ರೀತಿಗಾಗಿ ಡಿಂಪಲ್‌ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.

ಹಾಂಕಾಂಗ್‌ ಮೂಲದ ಮರ್ಚಂಟ್‌ ನೇವಿ ಮೆಚ್ಚುಗೆ

ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ೧೯೭೪, ಸೆಪ್ಟೆಂಬರ್‌ ೯ರಂದು ಜನಿಸಿದ ವಿಕ್ರಮ್‌ ಬಾತ್ರಾ ಎನ್‌ಸಿಸಿ ಸೇರಿ, ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದರು. ಇದೇ ಕಾರಣಕ್ಕಾಗಿ ವಿಕ್ರಮ್‌ ಬಾತ್ರಾ ಹಾಂಕಾಂಗ್ ಮೂಲದ ಕಂಪನಿ ಮರ್ಚಂಟ್‌ ನೇವಿಗೆ 1995ರಲ್ಲಿ ಆಯ್ಕೆಯಾಗಿದ್ದರು. ಕೈತುಂಬ ಸಂಬಳ, ಒಳ್ಳೆಯ ಕೆಲಸ ಅವರನ್ನು ಕೈಬೀಸಿ ಕರೆಯುತ್ತಿದೆ. ಅದಕ್ಕಾಗಿ ಸಮವಸ್ತ್ರವನ್ನೂ ಹೊಲಿಸಿಕೊಂಡು ಹೊರಡಲು ಸಿದ್ಧನಾಗಿದ್ದರು. ಆದರೆ, ಆತನ ಮನಸ್ಸು ಕೊನೇ ಕ್ಷಣದಲ್ಲಿ ಬದಲಾಯಿತು. ನಾನು ಭಾರತೀಯ ಸೇನೆ ಸೇರುತ್ತೇನೆ ಎಂದು ತೀರ್ಮಾನಿಸಿದ ವಿಕ್ರಮ್‌ ಬಾತ್ರಾ 1996ರಲ್ಲಿ ಸೇನೆ ಸೇರಿದರು. ಯಾವ ಹಾಂಕಾಂಗ್‌ ಮೂಲದ ಕಂಪನಿಯ ಉದ್ಯೋಗವನ್ನು ನಿರಾಕರಿಸಿದ್ದರಲ್ಲ, ಅದೇ ಕಂಪನಿಯು ಒಂದು ದಶಕದ ಬಳಿಕ ವಿಕ್ರಮ್‌ ಬಾತ್ರಾ ಅವರಿಗೆ ಗೌರವ ಸಲ್ಲಿಸಿದೆ. “ಸಾಮಾನ್ಯ ವ್ಯಕ್ತಿಯೊಬ್ಬ ಇಡೀ ಭಾರತೀಯ ಸೈನ್ಯವನ್ನೇ ಮೆಚ್ಚುವಂತೆ ಮಾಡುತ್ತಾರೆ ಎಂದರೆ ಹೆಮ್ಮೆ ಎನಿಸುತ್ತದೆ. ನಾವು ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದರೂ ಆಗ ಭಾರತೀಯರೊಬ್ಬರು ಸ್ಫೂರ್ತಿಯಾಗುತ್ತಾರೆ” ಎಂದು ಕಂಪನಿ ಶ್ಲಾಘಿಸಿದೆ.

ಸಹೋದರನ ಜತೆ ವಿಕ್ರಮ್.

“ನನ್ನ ಒಬ್ಬ ಮಗ ಅಗಲುತ್ತಾನೆ ಎಂದೇ ದೇವರು ಅವಳಿ ಗಂಡು ಮಕ್ಕಳನ್ನು ನೀಡಿದನೇನೋ” ಎಂದು ವಿಕ್ರಮ್‌ ಬಾತ್ರಾ ತಾಯಿ ಹೇಳುತ್ತಾರೆ. “ನನ್ನ ಮಗ ಮಡಿದ ೪೮೭೫ ಶಿಖರಕ್ಕೆ ಹೋದರೆ ತೀರ್ಥಕ್ಷೇತ್ರಕ್ಕೆ ಹೋದ ಅನುಭವವಾಗುತ್ತದೆ” ಎಂದು ಅವರ ತಂದೆ ಹೆಮ್ಮೆಯಿಂದ ಹೇಳಿದ್ದಾರೆ. ವಿಕ್ರಮ್‌ ಬಾತ್ರಾ ಸೈನ್ಯದಲ್ಲಿದ್ದ ಕಾರಣ ನಾಲ್ಕು ವರ್ಷದ ಪ್ರೇಮ ಪಯಣದಲ್ಲಿ ಆತನ ಜತೆ ಕಳೆದಿದ್ದು ೪೦ ದಿನವಾದರೂ ಡಿಂಪಲ್‌ ಚೀಮಾ ಇಂದಿಗೂ ಅವರ ನೆನಪಿನಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಅವರ ಕುಟುಂಬಸ್ಥರಷ್ಟೇ ಅಲ್ಲ, ನಮ್ಮ‌ ಮನದಲ್ಲೂ ಬಾತ್ರಾ ಜಾಗ ಪಡೆದಿದ್ದಾರೆ. ಅಷ್ಟಕ್ಕೂ, ವಿಕ್ರಮ್‌ ಬಾತ್ರಾ ಅವರ ಜೀವನ ಹಾಗೂ ಸಾಧನೆಯನ್ನು ಕಣ್ತುಂಬಿಕೊಳ್ಳಬೇಕು ಎಂದರೆ ಸಿದ್ಧಾರ್ಥ್‌ ಮಲ್ಹೋತ್ರಾ ಅಭಿನಯದ “ಶೇರ್‌ ಷಾ” ಸಿನಿಮಾ ನೋಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Sam Pitroda: “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ…” ಸ್ಯಾಮ್‌ ಪಿತ್ರೋಡಾ ಮತ್ತೊಂದು ಆತ್ಮಹತ್ಯಾ ಬಾಂಬ್!

Sam Pitroda: ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಇದು ಕೂಡ ರಾಜಕೀಯ ಬಿರುಗಾಳಿಗೆ ಕಾರಣವಾಗಿತ್ತು.

VISTARANEWS.COM


on

Sam Pitroda
Koo

ಹೊಸದಿಲ್ಲಿ: `ಪಿತ್ರಾರ್ಜಿತ ತೆರಿಗೆʼ (inheritance tax) ವಿಚಾರ ತೆಗೆದು ಪಕ್ಷಕ್ಕೆ ಮುಜುಗರ ಸೃಷ್ಟಿಸಿ ನಂತರ ನಾಲಿಗೆ ಕಚ್ಚಿಕೊಂಡಿದ್ದ ಕಾಂಗ್ರೆಸ್‌ ನಾಯಕ (congress leader) ಸ್ಯಾಮ್‌ ಪಿತ್ರೋಡಾ (Sam Pitroda), ಇನ್ನೊಂದು ಅಂಥದೇ ಎಡವಟ್ಟು ಮಾಡಿಕೊಂಡಿದ್ದಾರೆ. ಇದೀಗ ಅವರು ಭಾರತೀಯರನ್ನು ಅವರ ಹೊರನೋಟದಿಂದ ವಿಂಗಡಿಸಿ, ಜನತೆಯ ಸಿಟ್ಟಿಗೆ ಕಾರಣರಾಗಿದ್ದಾರೆ.

ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ರಾಷ್ಟ್ರದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿ ಅವರು ವಿವಾದ ಹುಟ್ಟುಹಾಕಿದರು. “ನಾವು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಉಜ್ವಲ ಉದಾಹರಣೆಯಾಗಿದ್ದೇವೆ. ನಾವು ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ ದೇಶವಾಗಿದ್ದೇವೆ. ಇಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಹಾಗೆ ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪಿತ್ರೋಡಾ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam CM Himanta Biswa Sharma) , “ನಾವು ವಿಭಿನ್ನವಾಗಿ ಕಾಣಿಸಬಹುದು, ಆದರೆ ನಾವೆಲ್ಲರೂ ಒಂದೇ” ಎಂದಿದ್ದಾರೆ. “ಸ್ಯಾಮ್ ಭಾಯ್, ನಾನು ಈಶಾನ್ಯದಿಂದ ಬಂದವನು ಮತ್ತು ನಾನು ಭಾರತೀಯನಂತೆ ಕಾಣುತ್ತೇನೆ. ನಮ್ಮದು ವೈವಿಧ್ಯಮಯ ದೇಶ. ನಾವು ವಿಭಿನ್ನವಾಗಿ ಕಾಣಿಸಬಹುದು ಆದರೆ ನಾವೆಲ್ಲರೂ ಒಂದೇ. ಹಮಾರೆ ದೇಶ್ ಕೆ ಬಾರೆ ಮೇ ಥೋಡಾ ತೊ ಸಮಜ್ ಲೋ! (ನಮ್ಮ ದೇಶದ ಬಗ್ಗೆ ಸ್ವಲ್ಪ ತಿಳುವಳಿಕೆ ಇರಲಿ)” ಎಂದಿದ್ದಾರೆ ಶರ್ಮಾ.

ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಲೋಕಸಭೆ ಅಭ್ಯರ್ಥಿ ಕಂಗನಾ ರಣಾವತ್ (Kangana Ranaut) , ಪಿತ್ರೋಡಾ ಮಾತಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ, “ಸ್ಯಾಮ್ ಪಿತ್ರೋಡಾ ಅವರು ರಾಹುಲ್ ಗಾಂಧಿ (Rahul Gandhi) ಅವರ ಮಾರ್ಗದರ್ಶಕರು. ಅವರ ಜನಾಂಗೀಯವಾದಿಗಳ ಮಾತುಗಳನ್ನು ಕೇಳಿ. ಇವರು ಭಾರತೀಯರನ್ನು ವಿಭಜಿಸುವವರು. ಅವರ ಸಂಪೂರ್ಣ ಸಿದ್ಧಾಂತವೇ ವಿಭಜಿಸು ಮತ್ತು ಆಳು. ಸಹ ಭಾರತೀಯರನ್ನು ಚೈನೀಸ್, ಆಫ್ರಿಕನ್ ಎಂದು ಕರೆಯುವುದು ಬೇಸರದ ಸಂಗತಿ‌; ಇದು ಕಾಂಗ್ರೆಸ್‌ಗೂ ಅವಮಾನಕಾರಿ!” ಎಂದು ಕಂಗನಾ ಎಕ್ಸ್‌ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು.

ಈ ಹೇಳಿಕೆ ಹಾಗೂ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿರುವ “ಸಾಮಾಜಿಕ- ಆರ್ಥಿಕ ಸಮೀಕ್ಷೆ”ಯನ್ನು ಜೊತೆ ಸೇರಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟೀಕೆಗೊಡ್ಡಿದ್ದರು. “ಕಾಂಗ್ರೆಸ್‌ ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡಲಿದೆ” ಎಂದಿದ್ದರು. ಇದು ಕೋಲಾಹಲವನ್ನೇ ಸೃಷ್ಟಿಸಿತ್ತು. ಕಾಂಗ್ರೆಸ್‌ ಪಕ್ಷ ಈ ಹೇಳಿಕೆಯಿಂದ ಉಂಟಾದ ಕೋಲಾಹಲದಿಂದ ಬೆಚ್ಚಿಬಿದ್ದು, ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು. “ಪ್ರಧಾನಿ ನರೇಂದ್ರ ಮೋದಿಯವರು ದುರುದ್ದೇಶಪೂರ್ವಕ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ” ಎಂದು ಆರೋಪಿಸಿತ್ತು.

ಪಿತ್ರೋಡಾ ಅವರು ನಂತರ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. “ಟಿವಿಯಲ್ಲಿ ನಡೆದ ಸಂದರ್ಶನವೊಂದರಲ್ಲಿ, ಅಮೆರಿಕದ ಪಿತ್ರಾರ್ಜಿತ ತೆರಿಗೆಯನ್ನು ಉದಾಹರಣೆಯಾಗಿ ಮಾತ್ರ ಉಲ್ಲೇಖಿಸಲಾಗಿದೆ. ತನ್ನ ಕಾಮೆಂಟ್‌ಗಳಿಗೂ ಪಕ್ಷದ ನೀತಿಗಳಿಗೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಒತ್ತಿ ಹೇಳಿದ್ದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ಪಿತ್ರಾರ್ಜಿತ ಆಸ್ತಿಯಲ್ಲಿ ಸರ್ಕಾರಕ್ಕೆ ಪಾಲು; ‘ಕೈ’ಗೆ ಇಕ್ಕಟ್ಟು, ಬಿಜೆಪಿಗೆ ಅಸ್ತ್ರ

Continue Reading

Latest

World Red Cross Day: ದಾನ ಮತ್ತು ಸೇವೆಯಿಂದ ಸಂತೋಷ; ಇದು ರೆಡ್ ಕ್ರಾಸ್ ದಿನದ ಸಂದೇಶ

ಇಂದು ವಿಶ್ವದಾದ್ಯಂತ ವಿಶ್ವ ರೆಡ್ ಕ್ರಾಸ್ ದಿನವನ್ನು (World Red Cross Day) ಆಚರಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ತುರ್ತು ಮತ್ತು ಸಂಘರ್ಷದ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುವುದಾಗಿದೆ. ಈ ದಿನದ ವಿಶೇಷ ಏನು? ಈ ದಿನದ ಸಂದೇಶ ಏನು? ಈ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

By

World Red Cross Day
Koo

ರೆಡ್ ಕ್ರೆಸೆಂಟ್ ಡೇ ಅಥವಾ ವಿಶ್ವ ರೆಡ್ ಕ್ರಾಸ್ ದಿನವನ್ನು (World Red Cross Day) ವಿಶ್ವದಾದ್ಯಂತ ಮೇ 8ರಂದು ಆಚರಿಸಲಾಗುತ್ತದೆ. ಸ್ವಿಸ್ ಉದ್ಯಮಿ ಮತ್ತು ವಿಶ್ವದ ಅತಿದೊಡ್ಡ ಮಾನವೀಯ ನೆರವು ಸಂಸ್ಥೆಯಾದ ರೆಡ್ ಕ್ರಾಸ್ ನ ಸಂಸ್ಥಾಪಕ ಹೆನ್ರಿ ಡ್ಯುನಾಂಟ್ (Henry Dunant) ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತದೆ. 1901ರಲ್ಲಿ ಮೊದಲ ನೊಬೆಲ್ ಶಾಂತಿ ಪ್ರಶಸ್ತಿಯನ್ನು (Nobel Peace Prize) ಪಡೆದ ಅವರು, ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯ ಸ್ಥಾಪಕರಾಗಿದ್ದಾರೆ.

ತುರ್ತು ಮತ್ತು ಸಂಘರ್ಷದ ಸಮಯದಲ್ಲಿ ಅಗತ್ಯವಿರುವವರಿಗೆ ಬೆಂಬಲ ನೀಡುವ ಸಲುವಾಗಿ ರೆಡ್ ಕ್ರಾಸ್ ಅನ್ನು ಸ್ಥಾಪಿಸಲಾಗಿದೆ. ವಿಶ್ವ ರೆಡ್ ಕ್ರಾಸ್ ದಿನದಂದು ಸ್ವಯಂ ಸೇವಕರು 192 ದೇಶಗಳಲ್ಲಿ ರಾಷ್ಟ್ರೀಯ ಅಧ್ಯಾಯಗಳನ್ನು ಹೊಂದಿರುವ 161 ವರ್ಷ ಹಳೆಯ ಅಂತಾರಾಷ್ಟ್ರೀಯ ನೆರವು ಸಂಸ್ಥೆಯ ಧ್ಯೇಯ ಮತ್ತು ತತ್ತ್ವಗಳನ್ನು ಪ್ರಚಾರ ಮಾಡುತ್ತಾರೆ.

ವಿಶ್ವ ರೆಡ್ ಕ್ರಾಸ್ ದಿನದ ಇತಿಹಾಸ ಏನು?

ಇಟಲಿಯಲ್ಲಿನ ಸೋಲ್ಫೆರಿನೊ ಕದನದ ವೇಳೆ ಗಾಯಗೊಂಡ ಸೈನಿಕರು ಮತ್ತು ನಾಗರಿಕರಿಗೆ ಚಿಕಿತ್ಸೆ ನೀಡಲು ಕೊರತೆ ಉಂಟಾದ ಪರಿಣಾಮ ತೀವ್ರವಾಗಿ ಮನನೊಂದ ಸ್ವಿಸ್ ಉದ್ಯಮಿ ಹೆನ್ರಿ ಡ್ಯೂನಾಂಟ್ ಅವರು ಕೆಲವು ವರ್ಷಗಳ ಅನಂತರ 1863 ರಲ್ಲಿ ಡ್ಯುನಾಂಟ್ ಸ್ವಯಂಸೇವಕ-ಬೆಂಬಲಿತ ಪರಿಹಾರ ಸಂಘಗಳನ್ನು ಸಂಘಟಿಸಿದರು. ಅದು ಯುದ್ಧಕಾಲ ಅಥವಾ ಸಂಘರ್ಷದ ಸಮಯದಲ್ಲಿ ಗಾಯಗೊಂಡವರಿಗೆ ಪಕ್ಷಾತೀತ ಸಹಾಯವನ್ನು ಒದಗಿಸಲು ಬದ್ಧವಾಗಿದೆ.

ಅದೇ ವರ್ಷ ಡ್ಯೂನಾಂಟ್ ಮತ್ತು ಐದು ಸಹೋದ್ಯೋಗಿಗಳು ಗಾಯಗೊಂಡವರಿಗೆ ಪರಿಹಾರಕ್ಕಾಗಿ ಅಂತಾರಾಷ್ಟ್ರೀಯ ಸಮಿತಿಯನ್ನು ಸ್ಥಾಪಿಸಿದರು. ಇದು ರೆಡ್ ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯಾಗಿ ವಿಕಸನಗೊಂಡಿತು.

ಸ್ವಿಸ್ ರಾಷ್ಟ್ರೀಯ ಧ್ವಜದಿಂದ ಪ್ರೇರಿತವಾದ ಲಾಂಛನ ಪಡೆದ ಸಂಸ್ಥೆಯು ಶೀಘ್ರದಲ್ಲೇ ರೆಡ್ ಕ್ರಾಸ್ ಎಂದು ಜನಪ್ರಿಯವಾಯಿತು. ಮೊದಲನೇ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧದಲ್ಲಿ ಗಾಯಗೊಂಡ ನಾಗರಿಕರು ಮತ್ತು ಯುದ್ಧ ಕೈದಿಗಳಿಗೆ ಸಹಾಯ ಮಾಡುವಲ್ಲಿ ರೆಡ್ ಕ್ರಾಸ್ ಪ್ರಮುಖ ಪಾತ್ರ ವಹಿಸಿತು. ಇಂದು ಇದು ಪ್ರಪಂಚದಾದ್ಯಂತ ಅನೇಕ ಸ್ಥಳೀಯ ಮತ್ತು ರಾಷ್ಟ್ರೀಯ ಸಂಘಟನೆಗಳನ್ನು ಒಳಗೊಂಡಿದೆ.


ಪ್ರಾಮುಖ್ಯತೆ

ಮಾನವ ಹಕ್ಕುಗಳ ಸಂರಕ್ಷಣೆಗೆ ರೆಡ್‌ಕ್ರಾಸ್‌ನ ಪ್ರಾಮುಖ್ಯತೆ ಅಗಾಧವಾಗಿದೆ. ಲಾಭರಹಿತ ಸಂಸ್ಥೆಯ ಮುಖ್ಯ ಧ್ಯೇಯ “ಪರ್ ಹ್ಯುಮಾನಿಟೇಟಮ್ ಆಡ್ ಪೇಸೆಮ್” ಅಂದರೆ “ಮಾನವೀಯತೆಯೊಂದಿಗೆ, ಶಾಂತಿಯ ಕಡೆಗೆ” ಎಂಬುದಾಗಿದೆ. ಇದು ವಿಶ್ವ ಶಾಂತಿಯ ಸಂದೇಶವನ್ನು ಪ್ರತಿಪಾದಿಸುತ್ತದೆ. ಸಂಘಟನೆಯು ಸಂಘರ್ಷ ವಲಯಗಳು ಅಥವಾ ನೈಸರ್ಗಿಕ ವಿಕೋಪಗಳ ಸ್ಥಳಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ.

196 ದೇಶಗಳಲ್ಲಿ ಸಕ್ರಿಯ

ಯುದ್ಧದ ಸಮಯದಲ್ಲಿ ಸೈನಿಕರು ಮತ್ತು ನಾಗರಿಕರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಕುರಿತು ನಾಲ್ಕು ಅಂಶಗಳ ಒಪ್ಪಂದವಾದ ಜಿನೀವಾ ಒಪ್ಪಂದಗಳನ್ನು ಕ್ರೋಡೀಕರಿಸಿದ ಕೀರ್ತಿ ವಿಶ್ವ ಸಂಸ್ಥೆಗೆ ಸಲ್ಲುತ್ತದೆ. ಪ್ರಪಂಚದ ಎಲ್ಲಾ 196 ದೇಶಗಳು ನಾಲ್ಕು ಜಿನೀವಾ ಒಪ್ಪಂದಗಳನ್ನು ಅಂಗೀಕರಿಸಿವೆ.

ಇದನ್ನೂ ಓದಿ: Flights cancelled: 300 ಸಿಬ್ಬಂದಿ ಸಾಮೂಹಿಕ ರಜೆ; 86 ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಕ್ಯಾನ್ಸಲ್‌

ಜಿನೀವಾ ಒಪ್ಪಂದದ ಪ್ರಕಾರ ಎಲ್ಲಾ ನಾಗರಿಕರು ಮತ್ತು ಆಕ್ರಮಿತ ಪ್ರದೇಶದಲ್ಲಿರುವವರನ್ನು ರಕ್ಷಿಸಬೇಕು. ಯುದ್ಧ ಕೈದಿಗಳನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕು, ಸಂಘರ್ಷದ ಸಮಯದಲ್ಲಿ ಅನಾರೋಗ್ಯ, ಗಾಯಗೊಂಡ, ವೈದ್ಯಕೀಯ ಮತ್ತು ಧಾರ್ಮಿಕ ಸಿಬ್ಬಂದಿ ಮೇಲೆ ದಾಳಿ ಮಾಡಬಾರದು, ಸಮುದ್ರದಲ್ಲಿ ಯುದ್ಧದ ಸಮಯದಲ್ಲಿ ಗಾಯಗೊಂಡವರು, ರೋಗಿಗಳು ಮತ್ತು ಹಡಗು ನಾಶವಾದವರು ರಕ್ಷಿಸಬೇಕು.

ವಿಶ್ವ ರೆಡ್ ಕ್ರಾಸ್ ದಿನದ ಥೀಮ್ ಏನು?

2024ರ ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನದ ಥೀಮ್ “ನಾನು ಸಂತೋಷದಿಂದ ನೀಡುತ್ತೇನೆ ಮತ್ತು ನಾನು ನೀಡುವ ಸಂತೋಷವು ಬಹುಮಾನವಾಗಿದೆ”. ಇದು ದಾನ ಮತ್ತು ಸೇವೆಯ ಸಂತೋಷವನ್ನು ಪ್ರೋತ್ಸಾಹಿಸುತ್ತದೆ.

Continue Reading

ದೇಶ

Flights cancelled: 300 ಸಿಬ್ಬಂದಿ ಸಾಮೂಹಿಕ ರಜೆ; 86 ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಕ್ಯಾನ್ಸಲ್‌

Flights cancelled: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಿಬ್ಬಂದಿ ಸಾಮೂಹಿಕ ಅನಾರೋಗ್ಯದ ರಜೆ ಹಾಕಿರುವ ಹಿನ್ನೆಲೆ ಸುಮಾರು 86 ಎಕ್ಸ್‌ಪ್ರೆಸ್‌ ವಿಮಾನಗಳು ರದ್ದಾಗಿವೆ. ಸುಮಾರು 300ಸಿಬ್ಬಂದಿ ರಜೆ ಹಾಕಿರುವ ಹಿನ್ನೆಲೆ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳು ಕ್ಯಾನ್ಸಲ್‌ ಆಗಿದೆ. ಇನ್ನು ಸಾಮೂಹಿಕ ರಜೆ ಮೇಲೆ ಹೋಗಿರುವ ಸಿಬ್ಬಂದಿ ತಮ್ಮ ತಮ್ಮ ಮೊಬೈಲ್‌ ಫೋನ್‌ಗಳನ್ನು ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

VISTARANEWS.COM


on

Flights cancelled
Koo

ನವದೆಹಲಿ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ಸಿಬ್ಬಂದಿ ಸಾಮೂಹಿಕ ಅನಾರೋಗ್ಯದ ರಜೆ(Sick Leave) ಹಾಕಿರುವ ಹಿನ್ನೆಲೆ ಸುಮಾರು 86 ಎಕ್ಸ್‌ಪ್ರೆಸ್‌ ವಿಮಾನಗಳು ರದ್ದಾಗಿವೆ. ಸುಮಾರು 300ಸಿಬ್ಬಂದಿ ರಜೆ ಹಾಕಿರುವ ಹಿನ್ನೆಲೆ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳು ಕ್ಯಾನ್ಸಲ್‌(Flights cancelled) ಆಗಿದೆ. ಇನ್ನು ಸಾಮೂಹಿಕ ರಜೆ ಮೇಲೆ ಹೋಗಿರುವ ಸಿಬ್ಬಂದಿ ತಮ್ಮ ತಮ್ಮ ಮೊಬೈಲ್‌ ಫೋನ್‌ಗಳನ್ನು ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಮಾನ ರದ್ದತಿಗೆ ಪ್ರತಿಕ್ರಿಯೆಯಾಗಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಕ್ತಾರರು ಈ ವಿಷಯವನ್ನು ಪ್ರಸ್ತಾಪಿಸಿ, “ನಮ್ಮ ಕ್ಯಾಬಿನ್ ಸಿಬ್ಬಂದಿಯ ಒಂದು ವಿಭಾಗವು ಕೊನೆಯ ಕ್ಷಣದಲ್ಲಿ ಅನಾರೋಗ್ಯಕ್ಕೆ ಒಳಗಾಗಿದೆ ಎಂದು ವರದಿ ಮಾಡಿದೆ, ಇದು ಕಳೆದ ರಾತ್ರಿಯಿಂದ ಪ್ರಾರಂಭವಾಯಿತು, ಇದರ ಪರಿಣಾಮವಾಗಿ ವಿಮಾನ ವಿಳಂಬ ಮತ್ತು ರದ್ದತಿ ಸಂಭವಿಸಿದೆ” ಎಂದು ಹೇಳಿದರು. ಹಠಾತ್ ಗೈರುಹಾಜರಿಯ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ವಿಮಾನಯಾನವು ಆ ಸಿಬ್ಬಂದಿಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ವಕ್ತಾರರು ಭರವಸೆ ನೀಡಿದರು

ನಾವು ನಮ್ಮ ಪ್ರಯಾಣಿಕರಲ್ಲಿ ಅಡಚಣೆಗಾಗಿ ಕ್ಷಮೆಯಾಚಿಸುತ್ತಿದ್ದೇವೆ. ಸೇವೆ ಮೇಲ ಇದು ಪರಿಣಾಮ ಬೀರದಂತೆ ತಡೆಯಲು ನಾವು ಸಾಕಷ್ಟು ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ವಿಮಾನ ಕ್ಯಾನ್ಸಲ್‌ ಆಗಿರುವುದರಿಂದ ಟಿಕೆಟ್‌ ದರವನ್ನು ಪ್ರಯಾಣಿಕರಗೆ ಹಿಂದಿರುಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅನೇಕ ಪ್ರಯಾಣಿಕರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ಸೂಚನೆ, ಮಾಹಿತಿ ನೀಡದೇಯೇ ಏರ್‌ ಇಂಡಿಯಾ ವಿಮಾನಗಳ ಹಾರಾಟ ಕ್ಯಾನ್ಸಲ್‌ ಮಾಡಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರತಿಭಟನೆಗೆ ಕಾರಣವೇನು?

ಟಾಟಾ ಗ್ರೂಪ್‌ ಜೊತೆಗೆ ಏರ್‌ ಇಂಡಿಯಾ ವಿಲೀನಗೊಂಡ ಬಳಿಕ ಸಿಬ್ಬಂದಿ ನಡುವೆ ತಾರತಮ್ಯ ಸಮಸ್ಯೆ ಉಂಟಾಗಿತ್ತು. ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೆಲವೊಂದು ಸಿಬ್ಬಂದಿಗೆ ಕೆಲದರ್ಜೆಯ ನೌಕರಿಯನ್ನು ನೀಡಲಾಗುತ್ತಿದೆ. ಪರಿಹಾರ ಪ್ಯಾಕೇಜ್‌ನ ಪ್ರಮುಖ ಭಾಗಗಳನ್ನು ಮಾರ್ಪಡಿಸಲಾಗಿದೆ ಅಥವಾ ತೆಗೆದುಹಾಕಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಬಲವಂತವಾಗಿ ಬಾಯಿಮುಚ್ಚಿಸಲಾಗುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

ಇದನ್ನೂ ಓದಿ:Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್‌ ಸಲಹೆ

ವಿಮಾನಯಾನ ಸಂಸ್ಥೆಯು ಪ್ರಸ್ತುತ ಎಐಎಕ್ಸ್ ಕನೆಕ್ಟ್ (ಹಿಂದಿನ ಏರ್ ಏಷ್ಯಾ ಇಂಡಿಯಾ) ಅನ್ನು ತನ್ನೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿದೆ. ಪೈಲಟ್ ಸಮಸ್ಯೆಗಳಿಂದಾಗಿ ಟಾಟಾ ಗ್ರೂಪ್ ಪೂರ್ಣ-ಸೇವಾ ವಾಹಕ ವಿಸ್ತಾರಾ ರದ್ದಾಗಿರುವ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಈ ಬಿಕ್ಕಟ್ಟು ಶುರುವಾಗಿದೆ. ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆ ಬಗ್ಗೆ ವಿಸ್ತಾರಾದಲ್ಲಿದ್ದ ಪೈಲಟ್‌ಗಳಲ್ಲೂ ಅಸಮಾಧಾನವು ಭುಗಿಲೆದ್ದಿತ್ತು. ಹೊಸ ಒಪ್ಪಂದಗಳನ್ನು ಅನುಸರಿಸಿ, ಪೈಲಟ್‌ಗಳು ವಿಮಾನಗಳನ್ನು ನಿರ್ವಹಿಸುವ ರೋಸ್ಟರ್‌ಗಳು ಮತ್ತು ಅವರ ವೇತನ ಪ್ಯಾಕೇಜ್‌ಗಳ ಅಂಶಗಳ ಬಗ್ಗೆ ಕಳವಳಗಳಿವೆ. ಈ ಎಲ್ಲಾ ಕಾರಣಗಳಿಂದ ಇದೀಗ ಏರ್‌ ಇಂಡಿಯಾ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ.

Continue Reading

ಕರ್ನಾಟಕ

Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್‌ ಸಲಹೆ

Sindhuri Vs Roopa:ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪಗಳ ಮಾಡುವುದನ್ನು ಮುಂದುವರಿಸುವುದರ ಬದಲಾಗಿ ಸಂಧಾನ ಸಾಧ್ಯತೆಯತ್ತ ಗಮನಹರಿಸುವಂತೆ ಸಲಹೆ ನೀಡಿದೆ. ಇಬ್ಬರು ಒಮ್ಮತದ ನಿರ್ಧಾರಕ್ಕೆ ಬಂದು ಆರೋಪಗಳನ್ನು ಹಿಂಪಡೆಯಲು ಒಪ್ಪಿದರೆ ಬಾಕಿ ಇರುವ ಪ್ರಕರಣಗಳು ಸೇರಿ ಇಬ್ಬರ ನಡುವೆ ಬಾಕಿ ಇರುವ ಎಲ್ಲಾ ದಾವೆಗಳು ರದ್ದಾಗಲಿವೆ ಎಂದು ನ್ಯಾಯಾಲಯ ಹೇಳಿದೆ.

VISTARANEWS.COM


on

Sindhuri Vs Roopa
Koo

ನವದೆಹಲಿ: ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Sindhuri Vs Roopa) ನಡುವಿನ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌(Supreme Court), ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪಗಳ ಮಾಡುವುದನ್ನು ಮುಂದುವರಿಸುವುದರ ಬದಲಾಗಿ ಸಂಧಾನ ಸಾಧ್ಯತೆಯತ್ತ ಗಮನಹರಿಸುವಂತೆ ಸಲಹೆ ನೀಡಿದೆ. ಸಿಂಧೂರಿ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಮಾನಹಾನಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌(Karnataka High court) ನಿರಾಕರಿಸಿರುವುದನ್ನು ಪ್ರಶ್ನಿಸಿ ರೂಪಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಅಭಯ್‌ ಶ್ರೀನಿವಾಸ್‌ ಓಕ್‌ ಮತ್ತು ಪಂಕಜ್‌ ಮಿತ್ತಲ್‌ ಅವರ ನೇತೃತ್ವದ ವಿಭಾಗೀಯ ಪೀಠ, ಇಬ್ಬರೂ ಅಧಿಕಾರಿಗಳು ಸಾರ್ವಜನಿಕ ಸೇವೆಯಲ್ಲಿದ್ದು, ಈ ನಡತೆ ಮುಂದುವರಿಯಬಾರದು. ಇಬ್ಬರೂ ಯುವ ಅಧಿಕಾರಿಗಳಾಗಿದ್ದು, ಈ ಹಣಾಹಣಿ ಮುಂದುವರಿದರೆ ಅವರ ವೃತ್ತಿಗೆ ಹಾನಿಯಾಗುತ್ತದೆ” ಎಂದು ಹೇಳಿದೆ.

ಇಬ್ಬರು ಒಮ್ಮತದ ನಿರ್ಧಾರಕ್ಕೆ ಬಂದು ಆರೋಪಗಳನ್ನು ಹಿಂಪಡೆಯಲು ಒಪ್ಪಿದರೆ ಬಾಕಿ ಇರುವ ಪ್ರಕರಣಗಳು ಸೇರಿ ಇಬ್ಬರ ನಡುವೆ ಬಾಕಿ ಇರುವ ಎಲ್ಲಾ ದಾವೆಗಳು ರದ್ದಾಗಲಿವೆ ಎಂದು ನ್ಯಾಯಾಲಯ ಹೇಳಿದೆ. ಕಳೆದ ಡಿಸೆಂಬರ್‌ 15ರಂದು ಪ್ರಕರಣಕ್ಕೆ ತಡೆ ನೀಡಿದ್ದ ಸುಪ್ರೀಂಕೋರ್ಟ್‌ ಮಾಧ್ಯಮಗಳಲ್ಲಿ ಮಾತನಾಡದಂತೆ ಇಬ್ಬರು ಅಧಿಕಾರಿಗಳಿಗೆ ಆದೇಶಿಸಿತ್ತು. ಅಲ್ಲದೇ, ವಿವಾದ ಬಗೆಹರಿಸಿಕೊಳ್ಳಲು ಸಂಧಾನಕ್ಕೆ ಮುಂದಾಗುವಂತೆಯೂ ಸಲಹೆ ನೀಡಿತ್ತು.

ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ
ಅಧಿಕಾರಿಗಳಿಬ್ಬರ ಕಚ್ಚಾಟಕ್ಕೆ ಸಂಬಂಧಿಸಿದಂತೆ ಸರ್ಕಾರವು ಇಲಾಖಾ ತನಿಖೆ ನಡೆಸುತ್ತಿದ್ದರೆ, ಈ ವಿಚಾರದಲ್ಲಿ ಮುಂದುವರಿಯದಂತೆ ಸರ್ಕಾರಕ್ಕೂ ಸೂಚಿಸಲಾಗುವುದು ಎಂದು ಹೇಳಿತು. ಸಿಂಧೂರಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು ಸಿಂಧೂರಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಬಯಸಿಲ್ಲ. ಪರಿಹಾರ ಸಾಧ್ಯತೆಯ ಬಗ್ಗೆ ಸಿಂಧೂರಿ ಜೊತೆ ಚರ್ಚಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ. ಡಿ ರೂಪಾ ಪರವಾಗಿ ಹಿರಿಯ ವಕೀಲ ಆದಿತ್ಯ ಸೋಂಧಿ ವಾದಿಸಿದರು.

ಏನಿದು ಪ್ರಕರಣ?

ಐಪಿಎಸ್‌ ಅಧಿಕಾರಿಯಾಗಿರುವ ರೂಪಾ ಅವರು 2023ರ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ರೋಹಿಣಿ ಸಿಂಧೂರಿ ಅವರು ಮನೆ ಹಾಳು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಸಾವನ್ನೂ ತಳುಕು ಹಾಕಿದ ರೂಪಾ ಅವರು ಇತರ ಐಎಎಸ್‌ ಅಧಿಕಾರಿಗಳಿಗೆ ಅಸಭ್ಯ ಚಿತ್ರಗಳನ್ನು ರಾತ್ತಿ ಹೊತ್ತು ಕಳುಹಿಸುತ್ತಿದ್ದಾರೆ. ಬೇರೆ ಐಎಎಸ್‌ ಅಧಿಕಾರಿಗಳ ಮನೆ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ:Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್‌

ಇದು ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಇದರ ವಿರುದ್ಧ ರೋಹಿಣಿ ಸಿಂಧೂರಿ ಅವರು ಕೋರ್ಟ್‌ ಮೆಟ್ಟಿಲು ಹತ್ತಿದ್ದರು. ಈ ನಡುವೆ, ರಾಜ್ಯ ಸರ್ಕಾರ ಇಬ್ಬರೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಅವರನ್ನು ಸೇವೆಯಿಂದ ಮುಕ್ತಿಗೊಳಿಸಿ ರಜೆ ಮೇಲೆ ಕಳುಹಿಸಿತ್ತು. ಇದೀಗ ವಾದ-ವಿವಾದಗಳ ಹಂತ ಮುಗಿದು ಇನ್ನು ರೂಪಾ ಮೌದ್ಗಿಲ್‌ ವಿಚಾರಣೆ ಎದುರಿಸಬೇಕಾಗುವ ಹಂತ ಬಂದಿದೆ. ಕೆಲವು ದಿನಗಳ ಹಿಂದಷ್ಟೇ ಹೈಕೋರ್ಟ್‌ ಮಾನನಷ್ಟ ಮೊಕದ್ದಮೆ ರದ್ದು ಕೋರಿದ್ದ ರೂಪಾ ಅವರ ಮನವಿಯನ್ನು ತಿರಸ್ಕರಿಸಿತ್ತು.

Continue Reading
Advertisement
ವೈರಲ್ ನ್ಯೂಸ್11 mins ago

Viral Video: ಅಬ್ಬಾ.. ಎಂಥಾ ಭೀಕರ ದೃಶ್ಯ! ಕರೆಂಟ್‌ ಶಾಕ್‌ ಹೊಡೆದು ವ್ಯಕ್ತಿ ಒದ್ದಾಡಿ ಸಾವು

Double Murder Fakirappa stabs brothers to death for falling behind daughter
ಕ್ರೈಂ14 mins ago

Double Murder: ಮಗಳ ಹಿಂದೆ ಬಿದ್ದಿದ್ದಕ್ಕೆ ಸಹೋದರರನ್ನೇ ಚಾಕುವಿನಿಂದ ಇರಿದು ಕೊಂದ ಫಕೀರಪ್ಪ!

SSLC Exam Result 2024 to be declared tomorrow Here are the details
ಶಿಕ್ಷಣ31 mins ago

SSLC Exam Result 2024: ನಾಳೆ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಪ್ರಕಟ; ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು? ಇಲ್ಲಿದೆ ಡಿಟೇಲ್ಸ್‌

Srinidhi Shetty Attends Daiva Kola Festivities in Mangalore
ಸ್ಯಾಂಡಲ್ ವುಡ್38 mins ago

Srinidhi Shetty: ಕೋಲ ಸೇವೆ ಸಲ್ಲಿಸಿದ ಕೆಜಿಎಫ್‌ ಬೆಡಗಿ; ಶ್ರೀನಿಧಿ ಶೆಟ್ಟಿಗೆ ದೈವ ಅಭಯ ನೀಡಿದ್ದೇನು?

Pepper spray
ಕರ್ನಾಟಕ45 mins ago

Pepper Spray: ಪೆಪ್ಪರ್‌ ಸ್ಪ್ರೇ ಬಹಳ ಡೇಂಜರ್‌..ಅದನ್ನು ರಕ್ಷಣೆಗೆ ಬಳಸುವಂತಿಲ್ಲ- ಹೈಕೋರ್ಟ್‌

Prajwal Revanna Case Will resign says DK Shivakumar and slams HD Kumaraswamy
ರಾಜಕೀಯ48 mins ago

Prajwal Revanna Case: ಒಕ್ಕಲಿಗ ನಾಯಕರ ಪೈಪೋಟಿಯಂತೆ, ರಾಜೀನಾಮೆ ಬೇಕಂತೆ; ಕೊಡ್ತೇನೆ ಅಂದ್ರ ಡಿಕೆಶಿ!

Sam Pitroda
ದೇಶ1 hour ago

Sam Pitroda: “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ…” ಸ್ಯಾಮ್‌ ಪಿತ್ರೋಡಾ ಮತ್ತೊಂದು ಆತ್ಮಹತ್ಯಾ ಬಾಂಬ್!

World Red Cross Day
Latest1 hour ago

World Red Cross Day: ದಾನ ಮತ್ತು ಸೇವೆಯಿಂದ ಸಂತೋಷ; ಇದು ರೆಡ್ ಕ್ರಾಸ್ ದಿನದ ಸಂದೇಶ

Palthady Rama krishna achar
ಕರ್ನಾಟಕ1 hour ago

Palthady Ramakrishna Achar: ತುಳು ಸಾಹಿತಿ, ವಿದ್ವಾಂಸ ಡಾ|ಪಾಲ್ತಾಡಿ ರಾಮಕೃಷ್ಣ ಆಚಾರ್ ವಿಧಿವಶ

Actor Darshan devil starring making video release on may 10
ಸಿನಿಮಾ2 hours ago

Actor Darshan: ಮೇ 10ಕ್ಕೆ ಗುಡ್‌ನ್ಯೂಸ್‌ ಕೊಡ್ತಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌! ಏನದು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ17 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ20 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ22 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌