ರಾಮಸೇತುವೆಗೆ ಪಾರಂಪರಿಕ ಸ್ಥಾನಮಾನ; ಜು.26ರಿಂದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ - Vistara News

ದೇಶ

ರಾಮಸೇತುವೆಗೆ ಪಾರಂಪರಿಕ ಸ್ಥಾನಮಾನ; ಜು.26ರಿಂದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಬೇಕೆಂದು ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿಯ ವಿಚಾರಣೆ ಜು.26ರಂದು ನಡೆಯಲಿದೆ.

VISTARANEWS.COM


on

ram setu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ‘ರಾಮಸೇತು’ವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಬೇಕೆಂದು ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಒಪ್ಪಿರುವ ಸುಪ್ರೀಂ ಕೋರ್ಟ್‌ ಜುಲೈ ೨೬ ರಂದು ವಿಚಾರಣೆ ನಡೆಸಲಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ, ವಿಚಾರಣೆಗೆ ಅಂಗೀಕರಿಸಿದೆ. ಈ ಮಹತ್ವದ ವಿಷಯವನ್ನು ತಕ್ಷಣ ವಿಚಾರಣೆಗೆ ಪಟ್ಟಿ ಮಾಡಬೇಕು ಎಂದು ಕೋರಿದ್ದ ಕಾರಣ ಜುಲೈ 26ರಂದೇ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

ಆಡಮ್ಸ್ ಬ್ರಿಡ್ಜ್ ಎಂದೂ ಕರೆಯಲ್ಪಡುವ ರಾಮಸೇತು ಶ್ರೀಲಂಕೆಯ ವಾಯವ್ಯ ಭಾಗದ ಸಮೀಪವಿರುವ ಮನ್ನಾರ್ ದ್ವೀಪಗಳು ಮತ್ತು ಭಾರತದ ದಕ್ಷಿಣ ಕರಾವಳಿಯಲ್ಲಿರುವ ರಾಮೇಶ್ವರಂ ಮಧ್ಯೆ ಇರುವ ಲೈಮ್ ಶೋಲ್‌ಗಳ ಜೋಡಣೆಯಿಂದಾಗಿದೆ. ಈ ಸೇತುವೆಯು ೩೦ ಮೈಲಿ (೪೮ ಕಿ.ಮೀ.) ಉದ್ದವಿದ್ದು, ವಾಯವ್ಯದ ಪಾಲ್ಕ್ ಸ್ಟ್ರೇಟ್ ನಿಂದ ನೈಋತ್ಯದಲ್ಲಿ ಮನ್ನಾರ್ ಕೊಲ್ಲಿಯನ್ನು ಇದು ಪ್ರತ್ಯೇಕಿಸುತ್ತದೆ.

ರಾಮಸೇತು ಇರುವುದನ್ನು ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಕೊಂಡಿದೆ. ಆದರೆ ಇದನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸಲಿಲ್ಲ. ಹೀಗಾಗಿ ನ್ಯಾಯಾಲಯದ ಮೆಟ್ಟಿಲೇರಿರುವುದಾಗಿ ಸುಬ್ರಮಣಿಯನ್‌ ಸ್ವಾಮಿ ತಿಳಿಸಿದ್ದಾರೆ.

ರಾಮಯಣದಲ್ಲಿ ಹೇಳಿದ ಹಾಗೇ ಇದೆ!
ರಾಮಾಯಣದಲ್ಲಿ ರಾಮಸೇತುವೆಯ ಒಟ್ಟು ಉದ್ದ ೧೦೦ ಯೋಜನಗಳು ಹಾಗೂ ಅಗಲ ೧೦ ಯೋಜನಗಳು ಎಂದು ಹೇಳಲಾಗಿದೆ. ಅದರ ಅನುಪಾತ ೧೦:೧ ಆಗುತ್ತದೆ. ಈಗ, ಭಾರತದ ಧನುಷ್ಕೋಟಿಯಿಂದ ಶ್ರೀಲಂಕೆಯ ತಲೈಮನ್ನಾರ್‌ವರೆಗೆ ಇರುವ ಆಡಮ್ ಸೇತು ಸುಮಾರು ೩೫ ಕಿ.ಮೀ. ಉದ್ದ ಹಾಗೂ ೩.೫ ಕಿ.ಮೀ. ಅಗಲವಾಗಿರುವುದು ಕಾಣುತ್ತದೆ. ಇಲ್ಲಿಯೂ ರಾಮಾಯಣದ ವರ್ಣನೆಯಂತೆಯೇ ೧೦:೧ರ ಅನುಪಾತ ಕಾಣುತ್ತದೆ. ಈ ಅದ್ಭುತವಾದ ಸಾಮ್ಯತೆಯು, ರಾಮಾಯಣದಲ್ಲಿ ವರ್ಣಿಸಿರುವುದು ಈ ಸೇತುವೆಯನ್ನೇ ಎನ್ನುವುದಕ್ಕೆ ಪ್ರಮುಖ ಅಂಶವಾಗಿದೆ.

ಇದನ್ನೂ ಓದಿ| ರಾಮ ಮಂದಿರವೇ ರಾಷ್ಟ್ರ ಮಂದಿರ ಎಂದ ಯೋಗಿ, ಅಯೋಧ್ಯೆಯಲ್ಲಿ ಗರ್ಭಗುಡಿಗೆ ಅಡಿಗಲ್ಲು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

Google Update: ಕೃತಕ ಬುದ್ಧಿಮತ್ತೆ, ವಂಚನೆ ತಡೆಯಲು ಅಲರ್ಟ್‌; ಗೂಗಲ್‌ ಹೊಸ ಘೋಷಣೆಗಳು ಏನೇನು?

ಕೃತಕ ಬುದ್ಧಿಮತ್ತೆಯಿಂದ ವೆಬ್ ಸೈಟ್ ಲಿಂಕ್ ಗಳಿಗಾಗಿ ರಚಿಸಲಾದ ಹುಡುಕಾಟ ಎಂಜಿನ್ ಅನ್ನು ಗೂಗಲ್ (Google Update) ಅನಾವರಣಗೊಳಿಸಿದೆ. ಈ ದಿಟ್ಟ ಮತ್ತು ಜವಾಬ್ದಾರಿಯುತ ವಿಧಾನವು ನಮ್ಮ ಧ್ಯೇಯವನ್ನು ಬಳಕೆದಾರರಿಗೆ ತಲುಪಿಸಲು ಮತ್ತು ಎಲ್ಲರಿಗೂ ಎಐ ಅನ್ನು ಹೆಚ್ಚು ಆಪ್ತ ಗೊಳಿಸಲು ಸಹಾಯಕವಾಗಿಸುವುದು ಎಂದು ಗೂಗಲ್ ಕಂಪೆನಿಯ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.

VISTARANEWS.COM


on

By

Google Update
Koo

ವೆಬ್ ಸೈಟ್ ಲಿಂಕ್‌ಗಳ (website link) ಮೂಲಕ ಕೃತಕ ಬುದ್ಧಿಮತ್ತೆಯಿಂದ (artificial intelligence) ರಚಿಸಲಾದ, ಆಗಾಗ ಒಲವು ತೋರುವ ಪ್ರತಿಕ್ರಿಯೆಗಳಿಗೆ ಹುಡುಕಾಟ ಎಂಜಿನ್ ಅನ್ನು ಗೂಗಲ್ (Google Update) ಅನಾವರಣಗೊಳಿಸಿರುವುದಾಗಿ ವಾರ್ಷಿಕ ಡೆವಲಪರ್‌ಗಳ ಸಮ್ಮೇಳನದಲ್ಲಿ ಕಂಪೆನಿಯ ಸಿಇಒ (CEO) ಸುಂದರ್ ಪಿಚೈ (Sundar Pichai) ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸುಂದರ್ ಪಿಚೈ, ಈ ದಿಟ್ಟ ಮತ್ತು ಜವಾಬ್ದಾರಿಯುತ ವಿಧಾನವು ನಮ್ಮ ಧ್ಯೇಯವನ್ನು ಬಳಕೆದಾರರಿಗೆ ತಲುಪಿಸಲು ಮತ್ತು ಎಲ್ಲರಿಗೂ ಎಐ ಅನ್ನು ಹೆಚ್ಚು ಸಹಾಯಕವಾಗಿಸಲು ಪ್ರಯತ್ನಿಸಲಾಗುವುದು ಎಂದರು.

ಪ್ರಮುಖ ಪ್ರಕಟಣೆಗಳು ಏನೇನು?:

ಫೈರ್‌ಬೇಸ್ ಜೆನ್‌ಕಿಟ್

ಫೈರ್‌ಬೇಸ್ ಪ್ಲಾಟ್‌ಫಾರ್ಮ್‌ಗೆ ಫೈರ್‌ಬೇಸ್ ಜೆನ್‌ಕಿಟ್ ಎಂಬ ಹೊಸ ಸೇರ್ಪಡೆ ಇದ್ದು, ಇದು ಗೋ ಬೆಂಬಲದೊಂದಿಗೆ ಜಾವಾ ಸ್ಕ್ರಿಪ್ಟ್/ಟೈಪ್‌ಸ್ಕ್ರಿಪ್ಟ್‌ನಲ್ಲಿ ಎಐ-ಚಾಲಿತ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಡೆವಲಪರ್‌ಗಳಿಗೆ ಸುಲಭವಾಗುತ್ತದೆ. ಫ್ರೇಮ್‌ವರ್ಕ್ ಮುಕ್ತ ಮೂಲವಾಗಿರುತ್ತದೆ ಮತ್ತು ವಿಷಯ ಉತ್ಪಾದನೆ, ಸಾರಾಂಶ, ಪಠ್ಯ ಅನುವಾದ ಮತ್ತು ಚಿತ್ರಗಳನ್ನು ಉತ್ಪಾದಿಸಲು ಬಳಸಬಹುದು ಎಂದು ಕಂಪನಿ ಹೇಳಿದೆ.

ಲರ್ನ್‌ ಎಲ್‌ಎಂ

ಕಂಪನಿಯು ಲರ್ನ್‌ಎಲ್‌ಎಂ ಅನ್ನು ಅನಾವರಣಗೊಳಿಸಿದ್ದು, ಇದು ಕಲಿಕೆಗಾಗಿ “ಫೈನ್-ಟ್ಯೂನ್ಡ್” ಉತ್ಪಾದಕ ಎಐ ಮಾದರಿಗಳ ಹೊಸ ಕುಟುಂಬವಾಗಿದೆ. ಗೂಗಲ್‌ನ ಡೀಪ್‌ಮೈಂಡ್ ಎಐ ಸಂಶೋಧನಾ ವಿಭಾಗ ಮತ್ತು ಗೂಗಲ್ ರಿಸರ್ಚ್ ನಡುವಿನ ಸಹಯೋಗ- ಮಾದರಿಗಳು ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ “ಸಂಭಾಷಣೆಯ” ಬೋಧನೆಯನ್ನು ನೀಡುತ್ತದೆ ಎಂದು ಗೂಗಲ್ ಹೇಳಿದೆ.

ಯೂಟ್ಯೂಬ್ ರಸಪ್ರಶ್ನೆಗಳು

ಯೂಟ್ಯೂಬ್ ಎಐ ರಚಿತವಾದ ರಸಪ್ರಶ್ನೆಗಳನ್ನು ಸಹ ಹೊಂದಿದೆ. ಇದು ಶೈಕ್ಷಣಿಕ ವಿಡಿಯೋಗಳನ್ನು ವೀಕ್ಷಿಸುತ್ತಿರುವಾಗ ಬಳಕೆದಾರರಿಗೆ ಸಾಂಕೇತಿಕವಾಗಿ “ತಮ್ಮ ಕೈಯನ್ನು ಮೇಲಕ್ಕೆತ್ತಲು” ಅನುಮತಿಸುತ್ತದೆ. ಉಪಕರಣವನ್ನು ಬಳಸಿಕೊಂಡು, ನೀವು ಪ್ರಶ್ನೆಗಳನ್ನು ಕೇಳಬಹುದು, ವಿವರಣೆಗಳನ್ನು ಪಡೆಯಬಹುದು ಅಥವಾ ವಿಷಯದ ಬಗ್ಗೆ ರಸಪ್ರಶ್ನೆ ತೆಗೆದುಕೊಳ್ಳಬಹುದು.

ಜೆಮ್ಮಾ 2 ನವೀಕರಣಗಳು

ಗೂಗಲ್ ಜೆಮ್ಮಾ 2ಗೆ ಹೊಸ 27 ಬಿಲಿಯನ್ ಪ್ಯಾರಾಮೀಟರ್ ಮಾದರಿಯನ್ನು ಸೇರಿಸಲಿದೆ ಮತ್ತು ಈ ಮಾದರಿಗಳ ಮುಂದಿನ ಪೀಳಿಗೆಯು ಈ ವರ್ಷದ ಜೂನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಗೂಗಲ್ ಪ್ಲೇಗೆ ಬದಲಾವಣೆಗಳು

ಗೂಗಲ್ ಪ್ಲೇ ಅಪ್ಲಿಕೇಶನ್‌ಗಳಿಗಾಗಿ ಹೊಸ ಅನ್ವೇಷಣೆ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಬಳಕೆದಾರರನ್ನು ಪಡೆದುಕೊಳ್ಳಲು ಹೊಸ ಮಾರ್ಗಗಳು, ಪ್ಲೇ ಪಾಯಿಂಟ್‌ಗಳಿಗೆ ನವೀಕರಣಗಳು ಮತ್ತು ಗೂಗಲ್ ಪ್ಲೇ ಎಸ್ ಡಿಕೆ ಕನ್ಸೋಲ್ ಮತ್ತು ಪ್ಲೇ ಇಂಟೆರ್ ಗ್ರಿಟಿ ಎಪಿಐ ನಂತಹ ವರ್ಧನೆಗಳನ್ನು ಒಳಗೊಂಡಿರುತ್ತದೆ.


ಇದನ್ನೂ ಓದಿ: Warning For Android Users: ಆಂಡ್ರಾಯ್ಡ್ ಬಳಕೆದಾರರಿಗೆ ಕಾದಿದೆ ಅಪಾಯ; ಸರ್ಕಾರದಿಂದ ಗಂಭೀರ ಎಚ್ಚರಿಕೆ

ಕರೆಗಳ ಸಮಯದಲ್ಲಿ ವಂಚನೆಯ ಅಲರ್ಟ್‌

ಕರೆಗಳ ಸಮಯದಲ್ಲಿ ಸಂಭಾವ್ಯ ವಂಚನೆಗಳ ಬಗ್ಗೆ ಬಳಕೆದಾರರನ್ನು ಎಚ್ಚರಿಸುವ ವೈಶಿಷ್ಟ್ಯವನ್ನು ಗೂಗಲ್ ಪೂರ್ವವೀಕ್ಷಣೆ ಮಾಡಿದೆ. ಇದನ್ನು ಆಂಡ್ರಾಯ್ಡ್‌ನ ಭವಿಷ್ಯದ ಆವೃತ್ತಿಯಲ್ಲಿ ನಿರ್ಮಿಸಲಾಗುವುದು ಮತ್ತು ನೈಜ ಸಮಯದಲ್ಲಿ ಸಾಮಾನ್ಯವಾಗಿ ಸ್ಕ್ಯಾಮ್‌ಗಳೊಂದಿಗೆ ಸಂಯೋಜಿತವಾಗಿರುವ ಸಂಭಾಷಣೆ ಮಾದರಿಗಳನ್ನು ಪರಿಣಾಮಕಾರಿಯಾಗಿ ಕೇಳಲು ಜೆಮಿನಿ ನ್ಯಾನೋವನ್ನು ಬಳಸುತ್ತದೆ ಎಂದು ಕಂಪೆನಿ ಹೇಳಿದೆ.

ಒಟ್ಟಿನಲ್ಲಿ ಪ್ರಾಜೆಕ್ಟ್ ಅಸ್ಟ್ರಾ, ಸುಧಾರಿತ ನೋಡುವ ಮತ್ತು ಮಾತನಾಡುವ ಎಐ ಏಜೆಂಟ್, ವೆಯೋ ಜನರೇಟಿವ್ ಎಐ ವಿಡಿಯೋ ಮಾದರಿ ಮತ್ತು 6 ನೇ ತಲೆಮಾರಿನ ಟ್ರಿಲಿಯಮ್ ಟೆನ್ಸರ್ ಪ್ರೊಸೆಸಿಂಗ್ ಯುನಿಟ್ ಅನ್ನು ಗೂಗಲ್ ನ ವಾರ್ಷಿಕ ಡೆವಲಪರ್ ಕಾನ್ಫರೆನ್ಸ್ I/O ನಲ್ಲಿ ಘೋಷಿಸಲಾಯಿತು. ಹುಡುಕಾಟದಲ್ಲಿ ಎಐ ಅವಲೋಕನ, ಜೆಮಿನಿ 1.5 ಪ್ರೊ ಸುಧಾರಣೆಗಳು ಮತ್ತು ಹೊಸ 1.5 ಫ್ಲ್ಯಾಶ್ ಮಾದರಿಯನ್ನು ಹೊರತರುವುದಾಗಿ ಗೂಗಲ್ ಘೋಷಿಸಿತು. ಜೆಮಿನಿಯೊಂದಿಗೆ ಫೋಟೋಗಳನ್ನು ಹುಡುಕಲು ಹೊಸ ಮಾರ್ಗವಾದ ‘ಫೋಟೋಗಳನ್ನು ಕೇಳಿ’ ಅನ್ನು ಕೂಡ ಘೋಷಿಸಲಾಗಿದೆ.

Continue Reading

ದೇಶ

Seema Haider: ಮತ್ತೆ ಸುದ್ದಿಯಾದ ಸೀಮಾ ಹೈದರ್‌; ಇದು ಗಡಿಯಾಚೆಗಿನ ಪ್ರೇಮ ಕಥೆಯೋ ಅಥವಾ ಪಾಕ್‌ ಗೂಢಾಚಾರಿಕೆಯೋ?

Seema Haider: ಸೀಮಾ ಪ್ರೀತಿ ಪ್ರೇಮಕ್ಕಾಗಿ ಭಾರತಕ್ಕೆ ಬಂದಿಲ್ಲ. ಆಕೆಯ ಉದ್ದೇಶ ಬೇರೆಯದ್ದೇ ಇದೆ. ಆಕೆ ಮತ್ತು ಆಕೆ ಕುಟುಂಬಸ್ಥರು ಆಗಾಗ ಪಾಕಿಸ್ತಾನಕ್ಕೆ ಭೇಟಿ ಕೊಡುತ್ತಿರುತ್ತಾರೆ. ಅಲ್ಲದೇ ಅವರು ಪಾಕ್‌ ಸೇನೆ ಜೊತೆ ನಂಟು ಹೊಂದಿದ್ದಾರೆ ಎಂದು ಗುಲಾಂ ಹೇಳಿಕೆಯೊಂದನ್ನು ಕೊಟ್ಟಿದ್ದಾನೆ. ಸೀಮಾ ಆಗಾಗ ಪಾಕಿಸ್ತಾನ ಸೇನಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡುತ್ತಿರುತ್ತಾಳೆ. ಆಕೆ ಚಿಕ್ಕಪ್ಪ ಗುಲಾಮ್‌ ಅಕ್ಬರ್‌ ಕೂಡ ಪಾಕ್‌ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆತನನ್ನು ಆಗಾಗ ಭೇಟಿ ಆಗುತ್ತಿರುತ್ತಾಳೆ. ಇದನ್ನೆಲ್ಲಾ ನೋಡಿದರೆ ಆಕೆ ಭಾರತಕ್ಕೆ ಹೋಗಿರುವುದು ಗೂಢಾಚಾರಿಣಿಯಾಗೋ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ ಎಂದು ಗುಲಾಮ್‌ ಹೇಳಿದ್ದಾನೆ.

VISTARANEWS.COM


on

Seema Haider
Koo

ನವದೆಹಲಿ:ಆನ್‌ಲೈನ್‌ ಪಬ್‌ ಜಿ ಗೇಮ್‌ ಆಡುವಾಗ ಪರಿಚಯವಾದ ಗ್ರೇಟರ್‌ ನೊಯ್ಡಾದ ಸಚಿನ್‌ ಮೀನಾ (Sachin Meena) ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು, ಸಚಿನ್‌ ಮೀನಾ ಜತೆ ಇರುವ ಸೀಮಾ ಹೈದರ್‌(Seema Haider) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸೀಮಾ ಹೈದರ್‌ ಮೊದಲ ಪತಿ ಗುಲಾಂ ಹೈದರ್‌ (Ghulam Haider) ಸೀಮಾ ಬಗ್ಗೆ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದು, ಇದೀಗ ಬಹಳ ಚರ್ಚೆ ಆಗುತ್ತಿದೆ.

ಸೀಮಾ ಪತಿ ಹೇಳಿದ್ದೇನು?

ಸೀಮಾ ಪ್ರೀತಿ ಪ್ರೇಮಕ್ಕಾಗಿ ಭಾರತಕ್ಕೆ ಬಂದಿಲ್ಲ. ಆಕೆಯ ಉದ್ದೇಶ ಬೇರೆಯದ್ದೇ ಇದೆ. ಆಕೆ ಮತ್ತು ಆಕೆ ಕುಟುಂಬಸ್ಥರು ಆಗಾಗ ಪಾಕಿಸ್ತಾನಕ್ಕೆ ಭೇಟಿ ಕೊಡುತ್ತಿರುತ್ತಾರೆ. ಅಲ್ಲದೇ ಅವರು ಪಾಕ್‌ ಸೇನೆ ಜೊತೆ ನಂಟು ಹೊಂದಿದ್ದಾರೆ ಎಂದು ಗುಲಾಂ ಹೇಳಿಕೆಯೊಂದನ್ನು ಕೊಟ್ಟಿದ್ದಾನೆ. ಸೀಮಾ ಆಗಾಗ ಪಾಕಿಸ್ತಾನ ಸೇನಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡುತ್ತಿರುತ್ತಾಳೆ. ಆಕೆ ಚಿಕ್ಕಪ್ಪ ಗುಲಾಮ್‌ ಅಕ್ಬರ್‌ ಕೂಡ ಪಾಕ್‌ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆತನನ್ನು ಆಗಾಗ ಭೇಟಿ ಆಗುತ್ತಿರುತ್ತಾಳೆ. ಇದನ್ನೆಲ್ಲಾ ನೋಡಿದರೆ ಆಕೆ ಭಾರತಕ್ಕೆ ಹೋಗಿರುವುದು ಗೂಢಾಚಾರಿಣಿಯಾಗೋ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ ಎಂದು ಗುಲಾಮ್‌ ಹೇಳಿದ್ದಾನೆ. ಗುಮಾಮ್‌ ಹೇಳಿಕೆಯನ್ನು ಆತನ ವಕೀಲ ಮೊಮಿನ್‌ ಮಾಲಿಕ್‌ ಎಂದು ಬಹಿರಂಗಪಡಿಸಿದ್ದಾರೆ.

ತಂತ್ರಜ್ಞಾನದ ಬಗ್ಗೆ ಸೀಮಾಗೆ ಅತೀವ ಜ್ಞಾನ

ಸೀಮಾಗೆ ತಂತ್ರಜ್ಞಾನದ ಬಳಕೆ ಬಗ್ಗೆ ಅತೀವ ಜ್ಞಾನ ಇದೆ. ಮೊಬೈಲ್‌ ಫೋನ್‌ ಅನ್ನು ಜೋಡಿಸುವುದು, ಟಿಕ್‌ ಟಾಕ್‌ ಬ್ಯಾನ್‌ ಆದ ಮೇಲೂ ಅದನ್ನು ಬಳಸುವುದು ಹೀಗೆ ತಂತ್ರಜ್ಞಾನದ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದಳು. ಆದರೆ ಆಕೆಗೆ ಪಬ್‌ಜಿ ಆಟ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ಪಬ್‌ ಜಿ ಮೂಲಕ ಸಚಿನ್‌ ಪರಿಚಯ ಆಗಿದೆ ಎಂಬ ಆಕೆಯ ಹೇಳಿಕೆ ಸುಳ್ಳು ಎಂದು ಗುಲಾಮ್‌ ಹೈದರ್‌ ಹೇಳಿದ್ದಾನೆ.

2020ರಲ್ಲಿ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಪಬ್ಜಿ ಆನ್‌ಲೈನ್‌ ಗೇಮ್‌ ಮೂಲಕ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಸೀಮಾ ಹೈದರ್‌ ಅವರು ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿದ್ದ ತಮ್ಮ ಮನೆ ಮಾರಿ, ಅಕ್ರಮವಾಗಿ 2023ರಲ್ಲಿ ಭಾರತವನ್ನು ಪ್ರವೇಶಿಸಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್‌ ಅವರಿಗೆ ಆಶ್ರಯ ನೀಡಿದ ಕಾರಣ ಸೀಮಾ ಹೈದರ್‌, ಆಕೆಯ ನಾಲ್ಕು ಮಕ್ಕಳು, ಸಚಿನ್‌ ಮೀನಾ ಹಾಗೂ ಆತನ ತಂದೆಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಸೀಮಾ ಹೈದರ್‌ ಪಾಕಿಸ್ತಾನದ ಗೂಢಚಾರಿ ಇರಬಹುದು ಎಂಬ ಶಂಕೆಯಿಂದ ಎಟಿಎಸ್‌ ವಿಚಾರಣೆ ಕೂಡ ನಡೆಸಿದೆ.

ಇದನ್ನೂ ಓದಿ: Mobile Phone Recharges: ಮೊಬೈಲ್‌ ಗ್ರಾಹಕರಿಗೆ ಬಿಗ್‌ ಶಾಕ್‌! ಮತ್ತೆ ರಿಚಾರ್ಜ್‌ ಮೊತ್ತ ಏರಿಕೆ

ತೀವ್ರ ವಿಚಾರಣೆ ಬಳಿಕ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಅವರು ಒಟ್ಟಿಗೆ ವಾಸಿಸಲು ಅನುಮತಿ ನೀಡಲಾಗಿದೆ. ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ ಮೂಲಕವೇ ದೇಶದ ಗಮನ ಸೆಳೆದಿದ್ದಾರೆ. ಇವರ ಪ್ರೇಮ ಪ್ರಕರಣವು ದೇಶಾದ್ಯಂತ ಸುದ್ದಿಯಾಗುವ ಜತೆಗೆ, ಇವರ ವಿಡಿಯೊಗಳು ಕೂಡ ವೈರಲ್‌ ಆಗುತ್ತಿವೆ.

Continue Reading

ದೇಶ

ಮೋದಿ ಬಲಿಷ್ಠ ನಾಯಕ, ಮತ್ತೆ ಪ್ರಧಾನಿಯಾಗೋದು ನಿಶ್ಚಿತ ಎಂದ ಪಾಕ್‌ ಮೂಲದ ಉದ್ಯಮಿ

ನರೇಂದ್ರ ಮೋದಿ ಅವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣಗಳಿವೆ. ಅವರು ರಾಜಕೀಯ ಹಿತಾಸಕ್ತಿ ನೋಡದೆ, ಅತಿ ಕೆಟ್ಟ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಮುಂದಿನ ದಿನಗಳಲ್ಲಿ, ಮೋದಿ ಅವರು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ, ಮತ್ತೆ ವ್ಯಾಪಾರ ಶುರು ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಸಾಜಿದ್‌ ತರಾರ್‌ ಹೇಳಿದ್ದಾರೆ.

VISTARANEWS.COM


on

Narendra Modi
Koo

ವಾಷಿಂಗ್ಟನ್:‌ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ, ಅವರ ನಾಯಕತ್ವವನ್ನು ಮುಕ್ತ ಕಂಠದಿಂದ ಹೊಗಳುವವರಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನ ಮೂಲದ, ಅಮೆರಿಕದಲ್ಲಿ ನೆಲೆಸಿರುವ ಉದ್ಯಮಿ ಸಾಜಿದ್‌ ತರಾರ್‌ (Sajid Tarar) ಅವರು ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. “ನರೇಂದ್ರ ಮೋದಿ ಬಲಿಷ್ಠ ನಾಯಕರಾಗಿದ್ದಾರೆ. ಅವರು ಹುಟ್ಟಿನಿಂದಲೇ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ” ಎಂದು ಉದ್ಯಮಿ ಹೇಳಿದ್ದಾರೆ.

“ನರೇಂದ್ರ ಮೋದಿ ಅದ್ಭುತ ನಾಯಕರಾಗಿರುವ ಕಾರಣದಿಂದಾಗಿಯೇ ಭಾರತ ಅಷ್ಟೊಂದು ಉತ್ತಮವಾಗಿ ಏಳಿಗೆ ಹೊಂದಿದೆ. ಅವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣಗಳಿವೆ. ಅವರು ರಾಜಕೀಯ ಹಿತಾಸಕ್ತಿ ನೋಡದೆ, ಅತಿ ಕೆಟ್ಟ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಮುಂದಿನ ದಿನಗಳಲ್ಲಿ, ಮೋದಿ ಅವರು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ, ಮತ್ತೆ ವ್ಯಾಪಾರ ಶುರು ಮಾಡಲಿದ್ದಾರೆ ಎಂಬ ನಂಬಿಕೆ ಇದೆ” ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಅವರು ಹೇಳಿದ್ದಾರೆ.

“ನರೇಂದ್ರ ಮೋದಿ ಅವರ ನಾಯಕತ್ವವು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಪ್ರಮುಖವಾಗಿದೆ. ಇದೇ ಕಾರಣಕ್ಕಾಗಿಯೇ ಅವರು ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತವಾಗಿದೆ. ಅವರು ಮತ್ತೆ ಪ್ರಧಾನಿಯಾಗುತ್ತಾರೆ ಎಂಬುದು ಜಗತ್ತಿಗೇ ಗೊತ್ತಿದೆ. ಪಾಕಿಸ್ತಾನದಿಂದ ಭಾರತಕ್ಕೂ ಅನುಕೂಲವಿದೆ. ಪಾಕಿಸ್ತಾನಕ್ಕೂ ಭಾರತದಿಂದ ಅನುಕೂಲವಿದೆ. ಮುಂದಿನ ದಿನಗಳಲ್ಲಿ ಎರಡೂ ದೇಶಗಳ ನಡುವಿ ಸಂಬಂಧ ಸುಧಾರಿಸುವ ವಿಶ್ವಾಸವಿದೆ” ಎಂದು ಹೇಳಿದರು. ಪಾಕಿಸ್ತಾನದವರಾದ ಸಾಜಿದ್‌ ತರಾರ್‌, 1990ರ ದಶಕದಲ್ಲಿ ಅಮೆರಿಕಕ್ಕೆ ತೆರಳಿ, ಅಲ್ಲಿಯೇ ನೆಲೆಸಿದ್ದಾರೆ.

ಅಂತಾರಾಷ್ಟ್ರಿಯ ಖ್ಯಾತಿಯ ಆಫ್ರಿಕನ್​-ಅಮೆರಿಕನ್​ ಗಾಯಕಿ ಮೇರಿ ಮಿಲ್​​ಬೆನ್ ಅವರು ಕೂಡ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದಾರೆ. ಆಗಾಗ ಅವರು ಮೋದಿ ಅವರನ್ನು ಹೊಗಳುತ್ತಲೇ ಇರುತ್ತಾರೆ. ಭಾರತ ತನ್ನ ದೇಶದ ನಾಯಕನ ಮೇಲೆ ಆತ್ಮವಿಶ್ವಾಸ ಹೊಂದಿದೆ. ಮಣಿಪುರದ ಮಾತೆಯರು, ಪುತ್ರಿಯರು ಹಾಗೂ ಮಹಿಳೆಯರಿಗೆ ನ್ಯಾಯ ಸಿಗುತ್ತದೆ. ನಿಮ್ಮ ಸ್ವಾತಂತ್ರ್ಯಕ್ಕಾಗಿ ನರೇಂದ್ರ ಮೋದಿ ಅವರು ಎಂದಿಗೂ ಹೋರಾಡುತ್ತಾರೆ. ನರೇಂದ್ರ ಮೋದಿ ಅವರೇ ನಿಮ್ಮ ಮೇಲೆ ವಿಶ್ವಾಸ ಇದೆ. ನಿಮಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಕೆಲ ತಿಂಗಳ ಹಿಂದಷ್ಟೇ ಮೇರಿ ಮಿಲ್​​ಬೆನ್ ಹೇಳಿದ್ದರು.

ಇದನ್ನೂ ಓದಿ: Narendra Modi: ಹತ್ತು ವರ್ಷ ಪ್ರಧಾನಿಯಾಗಿರುವ ನರೇಂದ್ರ ಮೋದಿ ಆಸ್ತಿ ಎಷ್ಟಿದೆ? ಪ್ರಮಾಣಪತ್ರದಲ್ಲಿದೆ ಮಾಹಿತಿ

Continue Reading

ವಾಣಿಜ್ಯ

LIC: ಎಲ್‌ಐಸಿಗೆ ಬಿಗ್‌ ರಿಲೀಫ್‌; ಸಾರ್ವಜನಿಕರ ಷೇರು ಪಾಲು ಶೇ. 10ಕ್ಕೆ ಹೆಚ್ಚಿಸಲು 3 ವರ್ಷ ಹೆಚ್ಚುವರಿ ಕಾಲಾವಕಾಶ

LIC: ಸಾರ್ವಜನಿಕರ ಷೇರು ಪಾಲನ್ನು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸೆಬಿ 3 ವರ್ಷ ಹೆಚ್ಚುವರಿ ಕಾಲಾವಕಾಶ ಕೊಟ್ಟಿದೆ. ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಎಲ್ಐಸಿ ಷೇರುಗಳ ದರ ಎನ್ಎಸ್ಇಯಲ್ಲಿ ಏರಿಕೆ ಕಂಡಿವೆ. ಮಂಗಳವಾರದ 931 ರೂ.ಗೆ ಹೋಲಿಸಿದರೆ ಶೇಕಡಾ 5ರಷ್ಟು ಏರಿಕೆಯಾಗಿ ಪ್ರತಿ ಷೇರಿಗೆ 962 ರೂ.ಗೆ ತಲುಪಿದೆ. ಸದ್ಯ ಎಲ್​ಐಸಿಯಲ್ಲಿ ಸರ್ಕಾರದ ಪಾಲು ಶೆ. 96.5ರಷ್ಟಿದ್ದರೆ, ಸಾರ್ವಜನಿಕರ ಷೇರುಪಾಲು ಶೇ. 3.5ರಷ್ಟಿದೆ. 1957ರ ಸೆಕ್ಯೂರಿಟೀಸ್ ಕಾಂಟ್ರಾಕ್ಟ್ಸ್ ನಿಯಮಗಳ ಪ್ರಕಾರ ಪಬ್ಲಿಕ್ ಷೇರ್‌ ​ಹೋಲ್ಡಿಂಗ್ ಅನ್ನು ಶೇ. 10ಕ್ಕೆ ಹೆಚ್ಚಿಸಬೇಕಿದೆ.

VISTARANEWS.COM


on

LIC
Koo

ಮುಂಬೈ: ದೇಶದ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆ ಭಾರತೀಯ ಜೀವ ವಿಮಾನ ನಿಗಮ (LIC)ಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ. ಸಾರ್ವಜನಿಕರ ಷೇರು ಪಾಲನ್ನು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸೆಬಿ (Securities and Exchange Board of India) 3 ವರ್ಷ ಹೆಚ್ಚುವರಿ ಕಾಲಾವಕಾಶ ಕೊಟ್ಟಿದೆ. ಈ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಎಲ್ಐಸಿ ಷೇರುಗಳ ದರ ಎನ್ಎಸ್ಇಯಲ್ಲಿ ಏರಿಕೆ ಕಂಡಿವೆ. ಮಂಗಳವಾರದ 931 ರೂ.ಗೆ ಹೋಲಿಸಿದರೆ ಶೇಕಡಾ 5ರಷ್ಟು ಏರಿಕೆಯಾಗಿ ಪ್ರತಿ ಷೇರಿಗೆ 962 ರೂ.ಗೆ ತಲುಪಿದೆ.

ಸದ್ಯ ಎಲ್​ಐಸಿಯಲ್ಲಿ ಸರ್ಕಾರದ ಪಾಲು ಶೆ. 96.5ರಷ್ಟಿದ್ದರೆ, ಸಾರ್ವಜನಿಕರ ಷೇರುಪಾಲು ಶೇ. 3.5ರಷ್ಟಿದೆ. 1957ರ ಸೆಕ್ಯೂರಿಟೀಸ್ ಕಾಂಟ್ರಾಕ್ಟ್ಸ್ ನಿಯಮಗಳ ಪ್ರಕಾರ ಪಬ್ಲಿಕ್ ಷೇರ್‌ ​ಹೋಲ್ಡಿಂಗ್ ಅನ್ನು ಶೇ. 10ಕ್ಕೆ ಹೆಚ್ಚಿಸಬೇಕಿದೆ. ಲಿಸ್ಟ್ ಆದ ಎರಡು ವರ್ಷದೊಳಗೆ ಈ ಕ್ರಮ ಕೈಗೊಳ್ಳಬೇಕು. ಎಲ್​ಐಸಿ 2022ರ ಮೇ 17ರಂದು ಬಿಎಸ್​ಇ ಮತ್ತು ಎನ್​ಎಸ್​ಇಇಲ್ಲಿ ಲಿಸ್ಟ್ ಆಗಿತ್ತು. ಅದರಂತೆ 2024ರ ಮೇ 16ರೊಳಗೆ ಪಬ್ಲಿಕ್ ಷೇರ್‌ ​ಹೋಲ್ಡಿಂಗ್ ಶೇ. 10 ಆಗಬೇಕಿತ್ತು. ಆದರೆ ಕಾಲಾವಧಿ ಸಮೀಪ ಬಂದಿದ್ದೂ ಈ ಕೆಲಸ ಆಗಿರಲಿಲ್ಲ. ಇದೀಗ 2027ರ ಮೇ 16ರವರೆಗೂ ಎಲ್​ಐಸಿಗೆ ಕಾಲಾವಕಾಶ ಕೊಡಲಾಗಿದೆ.

ಸೆಬಿ ತನ್ನ ಪತ್ರದ ಮೂಲಕ ಶೇ. 10ರಷ್ಟು ಸಾರ್ವಜನಿಕ ಷೇರುಗಳನ್ನು ಸಾಧಿಸಲು 3 ವರ್ಷಗಳ ಹೆಚ್ಚುವರಿ ಸಮಯವನ್ನು ನೀಡುವ ನಿರ್ಧಾರವನ್ನು ಪ್ರಕಟಿಸಿದೆ ಎಂದು ಎಲ್‌ಐಸಿ ತಿಳಿಸಿದೆ. ಅಂದರೆ ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿ ಲಿಸ್ಟ್ ಆದ ಬಳಿಕ 5 ವರ್ಷಗಳವರೆಗೆ ಕಾಲಾವಕಾಶ ಲಭಿಸಿದಂತಾಗಿದೆ. 2023ರ ನವೆಂಬರ್‌ನಿಂದ ಎಲ್‌ಐಸಿ ಷೇರಿಗೆ ಬೇಡಿಕೆ ಬಂದಿದೆ. 614 ರೂ. ಇದ್ದ ಅದರ ಬೆಲೆ ಇದೀಗ 977 ರೂ. ದಾಟಿದೆ. ಅಂದರೆ ಎರಡು ವರ್ಷದಲ್ಲಿ ಎಲ್​ಐಸಿ ಷೇರು ಬೆಲೆ ಶೇ 18ರಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಅದರ ಷೇರು ಬೆಲೆ ಗಣನೀಯವಾಗಿ ಹೆಚ್ಚಬಹುದು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಗರಿಷ್ಠ ಪ್ರೀಮಿಯಂ ಸಂಗ್ರಹ

ಈ ಮಧ್ಯೆ ಸರ್ಕಾರಿ ಸ್ವಾಮ್ಯದ ಎಲ್‌ಐಸಿ ಏಪ್ರಿಲ್‌ನಲ್ಲಿ ಒಟ್ಟು 12,384 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಎಲ್‌ಐಸಿ 5,810 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸಿತ್ತು. ಇದಕ್ಕೆ ಹೋಲಿಸಿದರೆ ಶೇ. 113ರಷ್ಟು ಏರಿಕೆ ದಾಖಲಿಸಿದೆ. ಈ ಪೈಕಿ ವೈಯಕ್ತಿಕ ವಿಭಾಗದಲ್ಲಿ 3,175 ಕೋಟಿ ರೂ. ಸಂಗ್ರಹವಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ. 25.17ರಷ್ಟು ಹೆಚ್ಚಳವಾಗಿದೆ. ಗ್ರೂಪ್‌ ಪ್ರೀಮಿಯಂ ವಿಭಾಗದಲ್ಲಿ ಶೇ. 182.16ರಷ್ಟು ಏರಿಕೆಯಾಗಿ ಒಟ್ಟು 9,141 ಕೋಟಿ ರೂ. ಸಂಗ್ರಹವಾಗಿದೆ. ವಾರ್ಷಿಕ ಗುಂಪು ಪ್ರೀಮಿಯಂ ವಿಭಾಗದಲ್ಲಿಯೂ ಶೇ. 100ರಷ್ಟು ವೃದ್ಧಿಸಿ 66 ಕೋಟಿ ರೂ. ಸಂಗ್ರಹವಾಗಿದೆ ಎಂದು ಕಂಪನಿಯ ಅಂಕಿ-ಅಂಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Oldest Billionaire: ಎಲ್‌ಐಸಿಯಲ್ಲಿ ಏಜೆಂಟ್ ಈಗ ಭಾರತದ ಹಿರಿಯ ಬಿಲಿಯನೇರ್

Continue Reading
Advertisement
House of the Dragon season 2 new trailer hints at a bloody
ಸಿನಿಮಾ2 seconds ago

House of the Dragon: ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2 ಟ್ರೈಲರ್‌ ಔಟ್‌!

Google Update
ತಂತ್ರಜ್ಞಾನ52 seconds ago

Google Update: ಕೃತಕ ಬುದ್ಧಿಮತ್ತೆ, ವಂಚನೆ ತಡೆಯಲು ಅಲರ್ಟ್‌; ಗೂಗಲ್‌ ಹೊಸ ಘೋಷಣೆಗಳು ಏನೇನು?

Seema Haider
ದೇಶ9 mins ago

Seema Haider: ಮತ್ತೆ ಸುದ್ದಿಯಾದ ಸೀಮಾ ಹೈದರ್‌; ಇದು ಗಡಿಯಾಚೆಗಿನ ಪ್ರೇಮ ಕಥೆಯೋ ಅಥವಾ ಪಾಕ್‌ ಗೂಢಾಚಾರಿಕೆಯೋ?

ICMR Dietary Guidelines
ಆರೋಗ್ಯ10 mins ago

ICMR Dietary Guidelines: ಊಟದ ಮೊದಲು, ಊಟದ ನಂತರ ಚಹಾ, ಕಾಫಿ ಕುಡಿದರೆ ಏನಾಗುತ್ತದೆ?

viral video shakti scheme women fight
ವೈರಲ್ ನ್ಯೂಸ್20 mins ago

Viral video: ಚಪ್ಪಲಿಯಲ್ಲಿ ಬಡಿದಾಡಿ ಬಟ್ಟೆ ಹರಿದುಕೊಂಡರು; ಪುಕ್ಕಟೆ ಬಸ್‌ನಲ್ಲಿ ಮಹಿಳೆಯರ ʼಶಕ್ತಿʼ ಪ್ರದರ್ಶನ!

Narendra Modi
ದೇಶ23 mins ago

ಮೋದಿ ಬಲಿಷ್ಠ ನಾಯಕ, ಮತ್ತೆ ಪ್ರಧಾನಿಯಾಗೋದು ನಿಶ್ಚಿತ ಎಂದ ಪಾಕ್‌ ಮೂಲದ ಉದ್ಯಮಿ

Rishabh Pant
ಕ್ರೀಡೆ37 mins ago

Rishabh Pant: ಬಿಸಿಸಿಐ ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ ರಿಷಭ್​ ಪಂತ್​

LIC
ವಾಣಿಜ್ಯ41 mins ago

LIC: ಎಲ್‌ಐಸಿಗೆ ಬಿಗ್‌ ರಿಲೀಫ್‌; ಸಾರ್ವಜನಿಕರ ಷೇರು ಪಾಲು ಶೇ. 10ಕ್ಕೆ ಹೆಚ್ಚಿಸಲು 3 ವರ್ಷ ಹೆಚ್ಚುವರಿ ಕಾಲಾವಕಾಶ

Mobile Phone Recharges:
ದೇಶ1 hour ago

Mobile Phone Recharges: ಮೊಬೈಲ್‌ ಗ್ರಾಹಕರಿಗೆ ಬಿಗ್‌ ಶಾಕ್‌! ಮತ್ತೆ ರಿಚಾರ್ಜ್‌ ಮೊತ್ತ ಏರಿಕೆ

IPL 2024
ಕ್ರೀಡೆ1 hour ago

IPL 2024: ಲಕ್ನೋಗೆ ಸೋಲು; ಪ್ಲೇ ಆಫ್​ ಪ್ರವೇಶಿಸಿದ ರಾಜಸ್ಥಾನ್​ ರಾಯಲ್ಸ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ8 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ11 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ21 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 202423 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ1 day ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌