ವಿಸ್ತಾರ Explainer | population of India: ಭಾರತದಲ್ಲಿ ಮುಂದಿನ ನೂರು ಮಕ್ಕಳು ಹುಟ್ಟೋದೆಲ್ಲಿ? ಅದರಿಂದೇನು? - Vistara News

EXPLAINER

ವಿಸ್ತಾರ Explainer | population of India: ಭಾರತದಲ್ಲಿ ಮುಂದಿನ ನೂರು ಮಕ್ಕಳು ಹುಟ್ಟೋದೆಲ್ಲಿ? ಅದರಿಂದೇನು?

ಭಾರತದಲ್ಲಿ ಈ ಕ್ಷಣ ಹುಟ್ಟುವ ನೂರು ಮಕ್ಕಳಲ್ಲಿ ಎಷ್ಟೆಷ್ಟು ಯಾವ ಯಾವ ರಾಜ್ಯದಲ್ಲಿ ಜನಿಸುತ್ತವೆ, ಮತ್ತು ಅದರಿಂದ ಭವಿಷ್ಯದಲ್ಲಿ ಉಂಟಾಗುವ ಸಾಮಾಜಿಕ- ರಾಜಕೀಯ- ಭೌಗೋಳಿಕ ಪರಿಣಾಮ ಏನೇನು? ಒಂದು ವಿವರವಾದ ನೋಟ ಇಲ್ಲಿದೆ.

VISTARANEWS.COM


on

population
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಶ್ವಸಂಸ್ಥೆಯೇ ಲೆಕ್ಕಹಾಕಿ ಹೇಳಿರುವ ಪ್ರಕಾರ, 2023ರಲ್ಲಿ ಚೀನಾವನ್ನೂ ಹಿಂದಿಕ್ಕಿ ಭಾರತ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯ ದೇಶ ಎನಿಸಲಿದೆ. ಈ ವರ್ಷ ಭಾರತದ ಅಂದಾಜು ಜನಸಂಖ್ಯೆ 141.2 ಕೋಟಿ ಆಗಿದ್ದು, ಚೀನಾದಲ್ಲಿ ಅದು 142.6 ಕೋಟಿ ಇದೆ. ಅದಕ್ಕಿಂತ ಕುತೂಹಲಕಾರಿ ಸಂಗತಿ ಒಂದನ್ನು ನೋಡೋಣ. ಭಾರತದಲ್ಲಿ ಪ್ರಸ್ತುತ ವರ್ತಮಾನದಲ್ಲಿ ಹುಟ್ಟುತ್ತಿರುವ ಸರಾಸರಿ ನೂರು ಮಕ್ಕಳಲ್ಲಿ, ಯಾವ ರಾಜ್ಯದ ಮಕ್ಕಳ ಪಾಲು ಎಷ್ಟು ಎಂಬುದು ನಿಮಗೆ ಗೊತ್ತೆ?

india

ಪ್ರತಿ 2 ನಿಮಿಷಕ್ಕೆ 100 ಶಿಶುಗಳು!

ಗೊತ್ತಿಲ್ಲದಿದ್ದರೆ, ನಮ್ಮ ಆಧಾರ್‌ ಪ್ರಾಧಿಕಾರ ಒದಗಿಸಿರುವ ಅಂಕಿ ಅಂಶಗಳನ್ನು ನೋಡೋಣ. ಅದರ ಪ್ರಕಾರ, ದೇಶದಲ್ಲಿ ಇಂದು ಪ್ರತಿ 2 ನಿಮಿಷಕ್ಕೆ 100 ಮಕ್ಕಳು ಜನಿಸುತ್ತಿದ್ದಾರೆ. ಈ ನೂರು ಮಕ್ಕಳಲ್ಲಿ 34 ಮಕ್ಕಳು ಉತ್ತರಪ್ರದೇಶ ಹಾಗೂ ಬಿಹಾರ ಎರಡೇ ರಾಜ್ಯಗಳಲ್ಲಿ ಹುಟ್ಟುತ್ತಿವೆ! ಉತ್ತರದ ನಾಲ್ಕು ರಾಜ್ಯಗಳಲ್ಲಿ ಈ ನೂರ ಮಕ್ಕಳಲ್ಲಿ ಅರ್ಧ ಭಾಗ, ಅಂದರೆ 50 ಮಕ್ಕಳು ಜನಿಸುತ್ತಿವೆ!

ಪ್ರತೀ ರಾಜ್ಯಗಳ ವಿವರ ಹೀಗಿದೆ- ಉತ್ತರಪ್ರದೇಶ 22, ಬಿಹಾರ 12, ಮಧ್ಯಪ್ರದೇಶ 8, ರಾಜಸ್ಥಾನ 7, ಮಹಾರಾಷ್ಟ್ರ 7, ಪಶ್ಚಿಮ ಬಂಗಾಳ 5, ಗುಜರಾತ್‌ 5, ಕರ್ನಾಟಕ 4, ತಮಿಳುನಾಡು 4, ಆಂಧ್ರಪ್ರದೇಶ 3, ತೆಲಂಗಾಣ 3, ಒಡಿಶಾ 3, ಹರಿಯಾಣ ಪಂಜಾಬ್‌ ತಲಾ 2, ಇತರ ರಾಜ್ಯಗಳು ಒಂದು ಅಥವಾ ಒಂದಕ್ಕಿಂತಲೂ ಕಡಿಮೆ.

ಇದು ಏಕೆ ಹೀಗೆ ಎಂಬುದಕ್ಕೆ ಹೆಚ್ಚು ಕಾರಣಗಳನ್ನು ಹುಡುಕಬೇಕಿಲ್ಲ. ದಶಕಗಳಿಂದಲೂ ದಕ್ಷಿಣದ ರಾಜ್ಯಗಳು ಕುಟುಂಬ ಕಲ್ಯಾಣ ಯೋಜನೆಯನ್ನು ಭಕ್ತಿಯಿಂದ ಪಾಲಿಸುತ್ತ ಬಂದಿವೆ. ಇಲ್ಲಿ ಶೈಕ್ಷಣಿಕ ಅರಿವು ಕೂಡ ಹೆಚ್ಚು. ಉತ್ತರದ ರಾಜ್ಯಗಳು, ಮುಖ್ಯವಾಗಿ ʻಬಿಮಾರುʼ (ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ) ರಾಜ್ಯಗಳು ಕುಟುಂಬ ಕಲ್ಯಾಣವನ್ನೂ ಅಳವಡಿಸಿಕೊಂಡಿಲ್ಲ. ಇಲ್ಲಿ ಶಿಕ್ಷಣವೂ ಸಾಕಷ್ಟಿಲ್ಲ. ಸಾಕ್ಷರತೆ ಪ್ರಮಾಣ ಕಡಿಮೆ. ಹೀಗಾಗಿ ಸಂಸಾರ ದೊಡ್ಡದು, ಆದಾಯ ಕಡಿಮೆ, ಬಡತನ ಹೆಚ್ಚು. ಬಡತನ ಇನ್ನಷ್ಟು ಶೈಕ್ಷಣಿಕ ಹಿಂದುಳಿಯುವಿಕೆಗೂ ಮತ್ತಷ್ಟು ಮಕ್ಕಳಿಗೂ ಕಾರಣವಾಗುತ್ತದೆ.

ಹೀಗಾಗಿ ಇಂದು ಭಾರತ ಜನಸಂಖ್ಯೆಯ ವಿಷಯದಲ್ಲಿ ಅಸಮತೋಲಿತ ದೇಶ. ಪ್ರತಿ ಎರಡು ನಿಮಿಷದಲ್ಲಿ ಐವತ್ತು ಮಕ್ಕಳು ಉತ್ತರದ ನಾಲ್ಕು ರಾಜ್ಯಗಳಲ್ಲಿ, ಇನ್ನು ಐವತ್ತು ಮಕ್ಕಳು ಇತರ 24 ರಾಜ್ಯಗಳಲ್ಲಿ ಜನಿಸುತ್ತಾರೆ ಎಂದರೆ ಎಷ್ಟು ಅಸಮತೋಲಿತ ಬೆಳವಣಿಗೆ ಎಂಬುದನ್ನು ನೀವೇ ಊಹಿಸಿಕೊಳ್ಳಿ.

ಉದ್ಯೋಗಕ್ಕಾಗಿ ಭಾರಿ ವಲಸೆ

ಇದರಿಂದ ಏನಾಗುತ್ತದೆ ಎಂಬುದನ್ನು ತಿಳಿಯಲು ಭಾರತದಲ್ಲಿ ಬಡತನ ಹಾಗೂ ಉದ್ಯೋಗಕ್ಕಾಗಿ ವಲಸೆ ಹೇಗಿದೆ ಎಂಬುದನ್ನು ತಿಳಿಯಬೇಕು.

2016ರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದಕ್ಷಿಣದ ರಾಜ್ಯಗಳು, ವಿಶೇಷವಾಗಿ ತಮಿಳುನಾಡು ಮತ್ತು ಕೇರಳ, ವಲಸಿಗರ ಜನಸಂಖ್ಯೆಯಲ್ಲಿ ಹೆಚ್ಚಿನ ಹೆಚ್ಚಳ ಆಗಿದೆ. ಭಾರತದಲ್ಲಿ 45.36 ಕೋಟಿ ವಲಸಿಗರು ನಾನಾ ಕಾರಣಗಳಿಗಾಗಿ ವಲಸೆ ಹೋಗುತ್ತಾರೆ. ಭಾರತದ 121.03 ಕೋಟಿ ಜನಸಂಖ್ಯೆಯಲ್ಲಿ ವಲಸಿಗರು ಶೇ.37.8ರಷ್ಟಿದ್ದಾರೆ. 2006- 2016ರ ನಡುವೆ ಭಾರತದಲ್ಲಿ ಒಟ್ಟು ವಲಸಿಗರ ಸಂಖ್ಯೆ 44.35 ಪ್ರತಿಶತದಷ್ಟು ಹೆಚ್ಚಾಯಿತು. ತಮಿಳುನಾಡಿನ ವಲಸಿಗ ಜನಸಂಖ್ಯೆ 2011ರಲ್ಲಿ 3.13 ಕೋಟಿಗೆ (98 ಶೇಕಡಾ ಏರಿಕೆ) ಏರಿದೆ. ವಲಸಿಗರೇ ರಾಜ್ಯದ ಜನಸಂಖ್ಯೆಯ ಶೇಕಡಾ 43.4ರಷ್ಟಿದ್ದಾರೆ. ಕೇರಳದ ವಲಸೆ ಜನಸಂಖ್ಯೆ ಶೇಕಡಾ 77ರಷ್ಟು ಹೆಚ್ಚಾಗಿದೆ. ಜನಸಂಖ್ಯೆಯ ಸುಮಾರು 49 ಪ್ರತಿಶತ ಜನರು ಇಲ್ಲಿ ವಲಸಿಗರು.

ಕರ್ನಾಟಕವೂ ತನ್ನ ವಲಸೆ ಜನಸಂಖ್ಯೆಯಲ್ಲಿ 50 ಪ್ರತಿಶತ ಹೆಚ್ಚಳವನ್ನು ತೋರಿಸಿದೆ. 1.66 ಕೋಟಿಯಿಂದ 2.50 ಕೋಟಿಗೆ ಏರಿದೆ. ವಲಸಿಗ ಜನಸಂಖ್ಯೆಯಲ್ಲಿ ಶೇಕಡಾ 40ರಷ್ಟು ಏರಿಕೆಯಾಗಿದೆ. ಆಂಧ್ರಪ್ರದೇಶದ ಅಂಕಿಅಂಶವೂ ಹೀಗೇ ಇದೆ.

ಇದನ್ನೂ ಓದಿ | ವಿಸ್ತಾರ Explainer | ರಕ್ಕಮ್ಮ ಜಾಕ್ವೆಲಿನ್‌ ವಂಚಕ ಸುಕೇಶ್‌ ಕೈಯಲ್ಲಿ ರೊಕ್ಕಮ್ಮ ಆಗಿದ್ದು ಹೇಗೆ?

ಇವರು ಎಲ್ಲಿಂದ ಬಂದರು? ಎಲ್ಲರೂ ಬಂದುದು ಉತ್ತರದ ರಾಜ್ಯಗಳಿಂದ. ಇದರಲ್ಲಿ ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ಜನರ ಪಾಲೂ ಸಾಕಷ್ಟಿದೆ. ಇಲ್ಲಿನ ಹವಾಮಾನ, ಶಿಕ್ಷಣ ಮಟ್ಟ, ಉದ್ಯೋಗದ ಲಭ್ಯತೆ, ಜೀವನದ ಸುರಕ್ಷತೆ, ಅಪರಾಧ ಪ್ರಮಾಣ ಕಡಿಮೆಯಾಗಿರುವಿಕೆ ಇತ್ಯಾದಿ ಅಂಶಗಳು ಇವರನ್ನು ಆಕರ್ಷಿಸಿವೆ. ಮುಂದೆಯೂ ಆಕರ್ಷಿಸಲಿವೆ.

ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ ಹೆಚ್ಚಿನ ಮಂದಿ ಬಿಹಾರದವರಾಗಿರುವುದನ್ನು ಕಾಣಬಹುದು. ಕಾರ್ಪೊರೇಟ್‌ ವಲಯದಲ್ಲೂ ಉತ್ತರ ಭಾರತದ ಮಂದಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ಬಂದು ನೆಲೆಸಿದ್ದಾರೆ. ಅನೇಕ ಸಲ ಇವರು, ʻಕನ್ನಡ ಮಾತಾಡುವುದಿಲ್ಲ, ಏನೀಗ?ʼ ಎಂದು ಕೇಳಿ ಕನ್ನಡಿಗರ ಸಿಟ್ಟಿಗೆ ಗುರಿಯಾಗಿರುವುದನ್ನೂ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ರೈಲ್ವೇ ವಲಯ ಹಾಗೂ ಬ್ಯಾಂಕಿಂಗ್‌ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ತರದವರೇ ತುಂಬಿಕೊಳ್ಳಲಿದ್ದಾರೆ, ಈಗಾಗಲೇ ಅರ್ಧಕ್ಕೂ ಅಧಿಕ ಮಂದಿ ತುಂಬಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇರಲಿದ್ದಾರೆ. ಯಾಕೆಂದರೆ ಇವು ಕೇಂದ್ರ ಸರ್ಕಾರದ ಆಡಳಿತವಿರುವ ವಲಯಗಳು.

ಇದರಿಂದ ಆಗಲಿರುವ ಇನ್ನೂ ಒಂದು ಅಪಾಯ ಎಂದರೆ, ರಾಜಕೀಯ ಪ್ರಾತಿನಿಧ್ಯ ನಮಗೆ ಕಡಿಮೆಯಾಗಲಿದೆ. ಅದು ಹೇಗೆ?

ರಾಜಕೀಯದಲ್ಲೂ ಬಲಹೀನ ದಕ್ಷಿಣ

ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ ಗಮನಾರ್ಹವಾದ ಒಂದು ಅಭಿಪ್ರಾಯವನ್ನು ತಿಳಿಸಿತ್ತು. ದಕ್ಷಿಣ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಮಾಡಿದಂತೆ, ಲೋಕಸಭಾ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತಿದೆ. ಇದು ಅನ್ಯಾಯ ಎಂದಿತ್ತು. 1962ರಿಂದ ಲೋಕಸಭೆಯಲ್ಲಿ ಸಿಕ್ಕಿರುವ ಪ್ರಾತಿನಿಧ್ಯದಲ್ಲಿ ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಅನ್ಯಾಯವಾಗಿದೆ. ಯಾಕೆಂದರೆ ಕಾಲಕಾಲಕ್ಕೆ ತಕ್ಕಂತೆ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯಾಗುತ್ತದೆ. 1962ರ ಚುನಾವಣೆಯವರೆಗೂ ತಮಿಳುನಾಡಿನಲ್ಲಿ 41 ಲೋಕಸಭೆ ಕ್ಷೇತ್ರಗಳಿದ್ದವು. 1962ರಲ್ಲಿ ಅದನ್ನು 39ಕ್ಕೆ ಇಳಿಸಲಾಯಿತು. ಯಾಕೆಂದರೆ ಜನಸಂಖ್ಯೆಯಲ್ಲಿ ನಿಯಂತ್ರಣ ಸಾಧಿಸಲಾಗಿತ್ತು. ಇದು ಅನ್ಯಾಯ ಹಾಗೂ ನಿಷ್ಕಾರಣ. ಕೇಂದ್ರ ಸರಕಾರದ ಕುಟುಂಬ ಕಲ್ಯಾಣ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಕ್ಕಾಗಿ ರಾಜ್ಯಕ್ಕೆ ಬಹುಮಾನ ನೀಡಬೇಕಾಗಿತ್ತು. ಆದರೆ ಶಿಕ್ಷೆ ನೀಡಲಾಗಿದೆ. ಯಾವ ರಾಜ್ಯಗಳು ಕೇಂದ್ರದ ಯೋಜನೆ ಜಾರಿಗೆ ವಿಫಲವಾಗಿವೆಯೋ ಅವುಗಳಿಗೆ ಬಹುಮಾನ, ಅಂದರೆ ಹೆಚ್ಚು ಎಂಪಿ ಸೀಟ್ ಪ್ರಾತಿನಿಧ್ಯ ನೀಡಲಾಗಿದೆ.

ಇದನ್ನೂ ಓದಿ | ವಿಸ್ತಾರ Explainer | ಈಗ ಯಾರು ಬೇಕಿದ್ರೂ ಕಾಶ್ಮೀರದಲ್ಲಿ ವೋಟ್‌ ಮಾಡಬಹುದಾ?

81ನೇ ವಿಧಿ ಏನು ಹೇಳುತ್ತದೆ?

ಸಂವಿಧಾನದ 81ನೇ ವಿಧಿ ಹೇಳುವ ಪ್ರಕಾರ, ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವೂ ತನ್ನ ಜನಸಂಖ್ಯೆಗೆ ಅನುಗುಣವಾಗಿ, ಲೋಕಸಭೆಯಲ್ಲಿ ಸಮಾನ ರೀತಿಯ ಪ್ರಾತಿನಿಧ್ಯವನ್ನು ಹೊಂದಬೇಕು ಎಂದು ಸಾರುತ್ತದೆ. ಲೋಕಸಭಾ ಕ್ಷೇತ್ರಗಳ ಸರಾಸರಿ ಜನಸಂಖ್ಯಾ ಪ್ರಮಾಣವನ್ನು ಒಂದೇ ರೀತಿಯಲ್ಲಿ ಕಾಯ್ದುಕೊಳ್ಳಲು ಸರಕಾರ ಕ್ಷೇತ್ರ ಮರುವಿಂಗಡಣೆಯನ್ನು ನಡೆಸುತ್ತದೆ. ಇದನ್ನು ಸಂವಿಧಾನದಲ್ಲಿ ಹೇಳಿದಂತೆ ಯಥಾವತ್ ಮರುವಿಂಗಡಣೆ ನಡೆಸುವುದಾದರೆ, ಇಂದು ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ದಿಲ್ಲಿಗಳು ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿಕೊಳ್ಳಬೇಕು. ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಒಡಿಶಾ, ತೆಲಂಗಾಣಗಳು ಈಗಿರುವ ಸ್ಥಾನಗಳನ್ನೂ ಕಳೆದುಕೊಳ್ಳುತ್ತವೆ.

ಕ್ಷೇತ್ರ ಮರುವಿಂಗಡಣೆಗಳು

ಇದುವರೆಗೂ ನಾಲ್ಕು ಕ್ಷೇತ್ರ ಮರುವಿಂಗಡಣೆಗಳು ನಡೆದಿವೆ- 1952, 1963, 1973 ಹಾಗೂ 2002. ಹತ್ತು ವರ್ಷಕ್ಕೊಮ್ಮೆ ಮರುವಿಂಗಡಣೆ ನಡೆಯಬೇಕು. ಸದ್ಯ ಕ್ಷೇತ್ರ ಮರುವಿಂಗಡಣೆಯ ಸ್ವರೂಪಕ್ಕೆ ಕಡಿವಾಣ ಹಾಕಿರುವುದು 1976ರಲ್ಲಿ ತರಲಾದ ಸಂವಿಧಾನದ 42ನೇ ತಿದ್ದುಪಡಿ ಹಾಗೂ 2001ರಲ್ಲಿ ತರಲಾದ 84ನೇ ತಿದ್ದುಪಡಿಗಳು. 42ನೇ ತಿದ್ದುಪಡಿಯ ಪ್ರಕಾರ, ಮುಂದಿನ 25 ವರ್ಷಗಳಿಗೆ(2001) ಕ್ಷೇತ್ರ ಮರುವಿಂಗಡಣೆಗೆ 1971ರ ಜನಗಣತಿಯ ಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡಿರಬೇಕು. ಕುಟುಂಬ ಕಲ್ಯಾಣ ಯೋಜನೆಯಲ್ಲಿ ಹಿಂದುಳಿದ ರಾಜ್ಯಗಳಿಗೆ ಎಚ್ಚರಿಕೆಯಾಗಿ ಈ ನಿಯಮ ರೂಪಿಸಲಾಯಿತು. 2001ರಲ್ಲಿ ಸಂಸತ್ತು 84ನೇ ತಿದ್ದುಪಡಿಯನ್ನು ತಂದಿತು. ಅದರ ಪ್ರಕಾರ, ಜನಸಂಖ್ಯೆಗನುಗುಣವಾದ ಪ್ರಾತಿನಿಧ್ಯ 2026ರವರೆಗೂ 2001ರ ಜನಗಣತಿಯ ಆಧಾರದಲ್ಲೇ ಇರಲಿದೆ; ಅಂದರೆ ಸೀಟುಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಆದರೆ ಕ್ಷೇತ್ರಗಳ ಬೌಂಡರಿಗಳು ವ್ಯತ್ಯಾಸವಾಗಬಹುದು. ಹೀಗಿದ್ದರೂ ಎಂಪಿ ಸೀಟುಗಳ ಸಂಖ್ಯೆಯನ್ನು ಕಡಿಮೆ- ಹೆಚ್ಚು ಮಾಡಲು ಸರಕಾರ ಮುಂದಾಗಿಲ್ಲ. ಕಡಿಮೆ ಜನಸಂಖ್ಯೆಯ ರಾಜ್ಯಗಳು ಪ್ರಾತಿನಿಧ್ಯದಲ್ಲಿ ಅನ್ಯಾಯಕ್ಕೊಳಗಾಗಬಹುದು ಎಂಬುದು ಈ ನಡೆಯ ಹಿಂದಿನ ಆತಂಕ.

ಇದನ್ನೂ ಓದಿ: ವಿಸ್ತಾರ Explainer | ಹೂಡಿಕೆಗೆ ಈಗ ಸಾವರಿನ್‌ ಗೋಲ್ಡ್‌ ಬಾಂಡ್‌ ಎಂಬ ಸುವರ್ಣಾವಕಾಶ!

ಪ್ರಾತಿನಿಧ್ಯದಲ್ಲಿ ಏರುಪೇರು

ಕ್ಷೇತ್ರ ಮರುವಿಂಗಡಣೆಯಲ್ಲಿ ಉಂಟಾಗಿರುವ ಈ ನನೆಗುದಿಯಿಂದ ಉಂಟಾಗಿರುವ ನೈಜ ಸಮಸ್ಯೆ ಎಂದರೆ, ಪ್ರಾತಿನಿಧ್ಯದಲ್ಲಿ ಆಗಿರುವ ಏರುಪೇರು. 1977ರಿಂದಲೂ ನಮ್ಮಲ್ಲಿ ಸಂಸತ್ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಎಂಪಿಗಳ ಸಂಖ್ಯೆಯಿಲ್ಲ. 1951-52ರಲ್ಲಿ ಒಬ್ಬ ಎಂಪಿ ಎಷ್ಟು ಜನರನ್ನು ಪ್ರತಿನಿಧಿಸುತ್ತಿದ್ದನೋ, ಇಂದು ಅದಕ್ಕಿಂತ ನಾಲ್ಕು ಪಟ್ಟು ಜನರನ್ನು ಪ್ರತಿನಿಧಿಸುತ್ತಿದ್ದಾನೆ. ಭಾರತದಲ್ಲೇ ಹೀಗೆ ಒಬ್ಬ ಎಂಪಿ ಅತ್ಯಧಿಕ ಜನರನ್ನು ಪ್ರತಿನಿಧಿಸುತ್ತಿರುವುದು. ಜಾಗತಿಕ ಸರಾಸರಿ ಒಬ್ಬ ಎಂಪಿಗೆ 1.45 ಲಕ್ಷ ಜನ. ಆದರೆ ಭಾರತದಲ್ಲಿ ಇದು ಸರಾಸರಿ 15 ಲಕ್ಷದಷ್ಟಿದೆ. ಆದರೆ ಇದನ್ನು ಸರಿ ಮಾಡಲೆಂದು ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಮರುವಿಂಗಡಣೆಗೆ ಮುಂದಾದರೆ, ಕುಟುಂಬ ಕಲ್ಯಾಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸಿ, ದೇಶಕ್ಕೆ ಹೆಚ್ಚಿನ ತಲಾ ಜಿಡಿಪಿ ಕೊಡಮಾಡುತ್ತಿರುವ ದಕ್ಷಿಣ ಭಾರತದ ನಾಲ್ಕಾರು ರಾಜ್ಯಗಳಿಗೆ ತುಂಬಾ ಅನ್ಯಾಯವಾಗುತ್ತದೆ; ಪ್ರತಿಯೊಂದು ರಾಜ್ಯವೂ ಏಳೆಂಟು ಸಂಸದರನ್ನು ಕಳೆದುಕೊಳ್ಳುತ್ತದೆ. ರಾಜಕೀಯ ಪ್ರಾತಿನಿಧ್ಯ ಕುಸಿಯುತ್ತದೆ. ಇದೇ ವೇಳೆಗೆ, ಜನಸಂಖ್ಯೆಯನ್ನು ತಹಬಂದಿಗೆ ತರದೆ, ಜನಸಂಖ್ಯೆಯ ಜೊತೆಗೆ ಬಡತನ ಹೆಚ್ಚಿಸಿ ತಲಾದಾಯ ಕುಸಿದ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಸಂಸದರು, ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಗುತ್ತದೆ.

ಸಂಸತ್ ಸದಸ್ಯರ ಪ್ರಮಾಣ

ರಾಜ್ಯ ಪ್ರಮಾಣ (ಶೇ.)
ಉತ್ತರಪ್ರದೇಶ 15.2
ಮಹಾರಾಷ್ಟ್ರ 9.1
ಪಶ್ಚಿಮ ಬಂಗಾಳ 8.0
ಬಿಹಾರ 7.6
ತಮಿಳುನಾಡು7.4
ಕರ್ನಾಟಕ5.3
ಮಧ್ಯಪ್ರದೇಶ 5.3
ಗುಜರಾತ್ 4.9

ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳು

ರಾಜ್ಯ   ಎಷ್ಟಿದೆ?ಎಷ್ಟಿರಬೇಕು?
ಉತ್ತರಪ್ರದೇಶ 80     93
ಬಿಹಾರ 40    44
ರಾಜಸ್ಥಾನ25  31
ಮಧ್ಯಪ್ರದೇಶ 29       33
ಹರಿಯಾಣ10 12
ಜಾರ್ಖಂಡ್ 14      14
ಮಹಾರಾಷ್ಟ್ರ 48 51
ಗುಜರಾತ್ 26  27
ಕರ್ನಾಟಕ 28  26
ಪಶ್ಚಿಮ ಬಂಗಾಳ 42    40
ಕೇರಳ 20     15
ಆಂಧ್ರಪ್ರದೇಶ, ತೆಲಂಗಾಣ 42   37
ತಮಿಳುನಾಡು 39     29
ದಿಲ್ಲಿ7 9

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Petrodollar Explainer: ಅಮೆರಿಕ ಜೊತೆಗಿನ 50 ವರ್ಷಗಳ ಪೆಟ್ರೊಡಾಲರ್‌ ಒಪ್ಪಂದ ಕೊನೆಗೊಳಿಸಿದ ಸೌದಿ ಅರೇಬಿಯಾ; ಡಾಲರ್‌ ಗರ್ವ ಭಂಗ?

Petrodollar Explainer: ಸೌದಿ ಅರೇಬಿಯಾವು ಅಮೆರಿಕ ಜೊತೆಗಿನ 50 ವರ್ಷಗಳ ಹಿಂದಿನ ಪೆಟ್ರೋಡಾಲರ್ ಒಪ್ಪಂದವನ್ನು (Petrodollar Deal) ಕೊನೆಗೊಳಿಸಿದೆ. 1974ರಲ್ಲಿ ಸಹಿ ಮಾಡಲಾದ ಈ ಒಪ್ಪಂದ ಮುರಿದಿರುವುದರಿಂದ ಇದು ಜಾಗತಿಕ ವಹಿವಾಟಿನಲ್ಲಿ ಬಹುದೊಡ್ಡ ಬದಲಾವಣೆ ಬಿರುವುದು ಮಾತ್ರವಲ್ಲ ವಿಶ್ವದ ಆರ್ಥಿಕತೆಯ ಮೇಲೂ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕುರಿತ ವಿಸ್ತೃತ ಚಿತ್ರಣ ಇಲ್ಲಿದೆ.

VISTARANEWS.COM


on

By

Petrodollar Deal
Koo

ಸೌದಿ ಅರೇಬಿಯಾವು (Saudi Arabia) ಅಮೆರಿಕದೊಂದಿಗಿನ (United States) 50 ವರ್ಷಗಳ ಹಳೆಯ ಪೆಟ್ರೋಡಾಲರ್ ಒಪ್ಪಂದವನ್ನು (Petrodollar Explainer) ಕೊನೆಗೊಳಿಸಲು ನಿರ್ಧರಿಸಿದೆ. 1974ರ ಜೂನ್ 8ರಂದು ಸಹಿ ಹಾಕಲಾದ ಈ ಒಪ್ಪಂದವು ಜೂನ್ 9ರಂದು ಮುಕ್ತಾಯಗೊಂಡಿದೆ. ಮಧ್ಯಪ್ರಾಚ್ಯ ದೇಶವು (Middle East country) ಈಗ ಅದನ್ನು ನವೀಕರಿಸದಿರಲು ನಿರ್ಧರಿಸಿದೆ. ಇದು ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳಲ್ಲಿ ಐತಿಹಾಸಿಕ ತಿರುವು ಎಂದರೆ ತಪ್ಪಾಗಲಾರದು. ಇದರಿಂದ ಸೌದಿ ಅರೇಬಿಯಾ ಮತ್ತು ಅಮೆರಿಕ ನಡುವಿನ ದೀರ್ಘಕಾಲದ ತೈಲ ಡಾಲರ್ ಒಪ್ಪಂದ ಕೊನೆಯಾದಂತಾಗಿದೆ.

ಏನಿದು ಪೆಟ್ರೋಡಾಲರ್?

ಪೆಟ್ರೋಡಾಲರ್ ಎಂಬ ಪದವು ಜಾಗತಿಕ ಕಚ್ಚಾ ತೈಲ ವಹಿವಾಟುಗಳಿಗೆ ಕರೆನ್ಸಿಯಾಗಿ ಯುಎಸ್ ಡಾಲರ್ ಬಳಕೆಯನ್ನು ಸೂಚಿಸುತ್ತದೆ. ಯುಎಸ್ ಚಿನ್ನ ವಹಿವಾಟುಗಳಿಗೆ ಕರೆನ್ಸಿಯಾಗಿ ಡಾಲರ್ ಬಳಕೆಯನ್ನು ಕಡಿಮೆಗೊಳಿಸಿದ ಬಳಿಕ ಪೆಟ್ರೋಡಾಲರ್ ವ್ಯವಸ್ಥೆಯು ಜಾರಿಗೆ ಬಂದಿತು.

ಏನು ಸಮಸ್ಯೆ?

ಸೌದಿ ಅರೇಬಿಯಾವು ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ತನ್ನ ದೀರ್ಘಕಾಲದ ಒಪ್ಪಂದವನ್ನು ನವೀಕರಿಸದಿರಲು ನಿರ್ಧರಿಸಿದೆ. ಇದಕ್ಕೆ ಮುಖ್ಯ ಕಾರಣ ಯುನೈಟೆಡ್ ಸ್ಟೇಟ್ಸ್ ತೈಲವನ್ನು ಯುಎಸ್ ಡಾಲರ್‌ಗಳಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡುತ್ತದೆ. ಪೆಟ್ರೋಡಾಲರ್ ವ್ಯವಸ್ಥೆಯು ಜಾಗತಿಕ ತೈಲ ಮಾರುಕಟ್ಟೆಯ ಮೂಲಾಧಾರವಾಗಿದೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಯುಎಸ್ ಡಾಲರ್ ಅನ್ನು ಹೆಚ್ಚು ಪ್ರಭಾವಶಾಲಿಗೊಳಿಸಿದೆ. ಪೆಟ್ರೋಡಾಲರ್ ಒಪ್ಪಂದವು ಆರ್ಥಿಕ ಸಹಕಾರ ಮತ್ತು ಸೌದಿ ಅರೇಬಿಯಾದ ಮಿಲಿಟರಿ ಅಗತ್ಯಗಳಿಗಾಗಿ ಜಂಟಿ ಆಯೋಗಗಳನ್ನು ಸ್ಥಾಪಿಸಿತ್ತು.

ಯಾವಾಗ ಸಹಿ ಹಾಕಲಾಯಿತು?

ಯುಎಸ್ ಸರ್ಕಾರದ ಪರವಾಗಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಮತ್ತು ಸೌದಿ ರಾಜಮನೆತನದ ನೇತೃತ್ವದಲ್ಲಿ ನಡೆದ ಮಾತುಕತೆ ವೇಳೆ 1974ರ ಜೂನ್ 8ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅನಂತರ ಪೆಟ್ರೋಡಾಲರ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.

ಈ ಒಪ್ಪಂದದ ಪ್ರಕಾರ ಸೌದಿ ಆಡಳಿತದ ಭದ್ರತೆಯನ್ನು ಖಾತರಿಪಡಿಸಲು ಯುಎಸ್ ಮಿಲಿಟರಿ ಸಹಾಯವನ್ನು ಒದಗಿಸುವ ಬದಲಾಗಿ ಸೌದಿ ಅರೇಬಿಯಾ ತನ್ನ ತೈಲ ರಫ್ತುಗಳಿಗೆ ಯುಎಸ್ ಡಾಲರ್‌ಗಳಲ್ಲಿ ಪ್ರತ್ಯೇಕವಾಗಿ ಬೆಲೆ ನೀಡಲು ಒಪ್ಪಿಕೊಂಡಿತು. ಈ ಒಪ್ಪಂದವು ಯುಎಸ್ ಡಾಲರ್‌ಗೆ ಸ್ಥಿರವಾದ ಬೇಡಿಕೆಯನ್ನು ಖಾತ್ರಿಪಡಿಸಿತು. ಏಕೆಂದರೆ ಇತರ ದೇಶಗಳಿಗೆ ತೈಲವನ್ನು ಖರೀದಿಸಲು ಡಾಲರ್‌ಗಳ ಅಗತ್ಯವಿತ್ತು. ವಿಶ್ವದ ಪ್ರಾಥಮಿಕ ಮೀಸಲು ಕರೆನ್ಸಿಯಾಗಿ ಡಾಲರ್‌ನ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಲಪಡಿಸಿತು.

ಪೆಟ್ರೋಡಾಲರ್ ಒಪ್ಪಂದದ ಮಹತ್ವವೇನು?

ಪೆಟ್ರೋಡಾಲರ್ ವ್ಯವಸ್ಥೆಯು ಹಲವಾರು ಕಾರಣಗಳಿಗಾಗಿ ಗಮನಾರ್ಹವಾಗಿದೆ.

ಯುಎಸ್ ಡಾಲರ್ ಪ್ರಾಬಲ್ಯ

ಈ ಒಪ್ಪಂದವು ಯುಎಸ್ ಡಾಲರ್‌ನ ಸ್ಥಾನವನ್ನು ವಿಶ್ವದ ಪ್ರಬಲ ಕರೆನ್ಸಿಯಾಗಿ ಭದ್ರಪಡಿಸಿತು. ಅಂತಾರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸಿತು ಮತ್ತು ಜಾಗತಿಕ ಹಣಕಾಸು ವ್ಯವಸ್ಥೆಯ ಮೇಲೆ ಯುಎಸ್ ಗಮನಾರ್ಹ ಪ್ರಭಾವವನ್ನು ಬೀರಲು ಅನುವು ಮಾಡಿಕೊಟ್ಟಿತ್ತು.

ಆರ್ಥಿಕ ಸ್ಥಿರತೆ

ಯುಎಸ್ ಡಾಲರ್‌ಗೆ ಸ್ಥಿರವಾದ ಬೇಡಿಕೆಯು ಅದರ ಮೌಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿತು ಮತ್ತು ತಕ್ಷಣದ ಆರ್ಥಿಕ ಪರಿಣಾಮಗಳನ್ನು ಎದುರಿಸದೆ ದೊಡ್ಡ ವ್ಯಾಪಾರ ಕೊರತೆಗಳನ್ನು ಚಲಾಯಿಸುವ ಅನನ್ಯ ಸಾಮರ್ಥ್ಯವನ್ನು ಯುಎಸ್ ಗೆ ಒದಗಿಸಿತು.


ಭೌಗೋಳಿಕ ರಾಜಕೀಯ ಪ್ರಭಾವ

ಯುಎಸ್ ಮತ್ತು ಸೌದಿ ಅರೇಬಿಯಾ ನಡುವಿನ ಕಾರ್ಯತಂತ್ರದ ಮೈತ್ರಿಯನ್ನು ಪಡೆದುಕೊಂಡಿತು. ಮಧ್ಯಪ್ರಾಚ್ಯದಲ್ಲಿ ಅದರ ತೈಲ ಸಂಪನ್ಮೂಲಗಳಿಗೆ ನಿರ್ಣಾಯಕ ಪ್ರದೇಶವಾದ ಅಮೆರಿಕದ ಪ್ರಭಾವವನ್ನು ಖಾತ್ರಿಪಡಿಸಿತು.

ಹಣಕಾಸು ಮಾರುಕಟ್ಟೆಗಳು

ಪೆಟ್ರೋಡಾಲರ್ ಮರುಬಳಕೆಯ ಕಾರ್ಯವಿಧಾನವು ತೈಲ- ರಫ್ತು ಮಾಡುವ ದೇಶಗಳಿಗೆ ತಮ್ಮ ಹೆಚ್ಚುವರಿ ಡಾಲರ್‌ಗಳನ್ನು ಯುಎಸ್ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿತು. ಇದರಿಂದಾಗಿ ಅಮೆರಿಕಾದ ಹಣಕಾಸು ಮಾರುಕಟ್ಟೆಗಳು ಮತ್ತು ಸರ್ಕಾರದ ಸಾಲಕ್ಕೆ ಬೆಂಬಲವಾಯಿತು.

ಒಪ್ಪಂದ ನವೀಕರಿಸದಿರುವ ಪರಿಣಾಮ ಏನು?

ಪೆಟ್ರೋಡಾಲರ್ ಒಪ್ಪಂದವನ್ನು ಅಂತ್ಯಗೊಳಿಸಲು ಸೌದಿ ಅರೇಬಿಯಾದ ನಿರ್ಧಾರವು ದೂರಾಲೋಚನೆಯನ್ನು ಹೊಂದಿದೆ. ಇದು ಬಹಳ ಪರಿಣಾಮಗಳನ್ನು ಉಂಟುಮಾಡುತ್ತದೆ. ಪೆಟ್ರೋಡಾಲರ್ ವ್ಯವಸ್ಥೆಯ ಅಂತ್ಯದಿಂದ ಯುಎಸ್ ಡಾಲರ್‌ಗೆ ಜಾಗತಿಕ ಬೇಡಿಕೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಯುರೋ, ಚೈನೀಸ್ ಯುವಾನ್ ಅಥವಾ ಕ್ರಿಪ್ಟೋಕರೆನ್ಸಿಗಳಂತಹ ಇತರ ಕರೆನ್ಸಿಗಳು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳಬಹುದು. ಇದು ಡಾಲರ್‌ನ ಪ್ರಾಬಲ್ಯವನ್ನು ಕಡಿಮೆ ಮಾಡುತ್ತದೆ. ಸೌದಿ ಅರೇಬಿಯಾ ಪ್ರಾಜೆಕ್ಟ್ ಎಂಬ್ರಿಡ್ಜ್‌ನಲ್ಲಿ ಭಾಗವಹಿಸಿದೆ. ಇದು ಕೇಂದ್ರೀಯ ಬ್ಯಾಂಕುಗಳು ಮತ್ತು ವಾಣಿಜ್ಯ ಬ್ಯಾಂಕುಗಳ ಬಳಕೆಗಾಗಿ ಡಿಜಿಟಲ್ ಕರೆನ್ಸಿ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Aliens: ಏಲಿಯನ್‌ಗಳು ಅನ್ಯಗ್ರಹ ಜೀವಿಗಳಲ್ಲ; ಈ ಭೂಮಿಯ ರಹಸ್ಯ ನಿವಾಸಿಗಳು! ಹಾರ್ವರ್ಡ್ ವಿಜ್ಞಾನಿಗಳ ಸಂಶೋಧನೆ

ವಿನಿಮಯ ದರಗಳಲ್ಲಿ ಚಂಚಲತೆ

ಡಾಲರ್‌ಗೆ ಬೇಡಿಕೆಯಲ್ಲಿನ ಕಡಿತವು ವಿನಿಮಯ ದರ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಹೆಚ್ಚಿನ ಚಂಚಲತೆಗೆ ಕಾರಣವಾಗಬಹುದು. ಇದು ಡಾಲರ್ ನಾಮಕರಣದ ವ್ಯಾಪಾರ ಮತ್ತು ಸಾಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ದೇಶಗಳ ಮೇಲೆ ಪರಿಣಾಮ ಬೀರಬಹುದು.

ಅಮೆರಿಕಕ್ಕೆ ಆರ್ಥಿಕ ಸವಾಲು

ಯುಎಸ್ ತನ್ನ ಕೊರತೆಗಳಿಗೆ ಹಣಕಾಸು ಒದಗಿಸಲು ಮತ್ತು ಪೆಟ್ರೋಡಾಲರ್‌ಗಳ ನಿರಂತರ ಒಳಹರಿವು ಇಲ್ಲದೆ ತನ್ನ ಆರ್ಥಿಕ ಪ್ರಾಬಲ್ಯವನ್ನು ಉಳಿಸಿಕೊಳ್ಳುವಲ್ಲಿ ಸವಾಲುಗಳನ್ನು ಎದುರಿಸಬಹುದು. ಇದು ಹೆಚ್ಚಿನ ಬಡ್ಡಿ ದರ ಮತ್ತು ಹಣಕಾಸಿನ ನೀತಿಗಳ ಮರುಮೌಲ್ಯಮಾಪನಕ್ಕೆ ಕಾರಣವಾಗಬಹುದು.

ಭೌಗೋಳಿಕ ರಾಜಕೀಯ ಮರುಜೋಡಣೆ

ಈ ಒಪ್ಪಂದದ ಮುಕ್ತಾಯವು ಜಾಗತಿಕ ಮೈತ್ರಿಗಳ ಮರುಜೋಡಣೆಗೆ ಕಾರಣವಾಗಬಹುದು. ಸೌದಿ ಅರೇಬಿಯಾವು ಚೀನಾ ಅಥವಾ ರಷ್ಯಾದಂತಹ ಇತರ ಪ್ರಮುಖ ಶಕ್ತಿಗಳೊಂದಿಗೆ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಬಹುದು. ಆ ಮೂಲಕ ಮಧ್ಯಪ್ರಾಚ್ಯ ಮತ್ತು ಅದರಾಚೆಗಿನ ಭೌಗೋಳಿಕ ರಾಜಕೀಯ ಚಿತ್ರಣ ಬದಲಾಗಬಹುದು.

ತೈಲ ಮಾರುಕಟ್ಟೆ

ತೈಲ ರಫ್ತು ಮಾಡುವ ದೇಶಗಳು ತಮ್ಮ ತೈಲಕ್ಕಾಗಿ ಬಹು ಕರೆನ್ಸಿಗಳನ್ನು ಸ್ವೀಕರಿಸಲು ಪ್ರಾರಂಭಿಸಬಹುದು. ಇದು ಹೆಚ್ಚು ವೈವಿಧ್ಯಮಯ ಮತ್ತು ಹೆಚ್ಚು ಸಂಕೀರ್ಣವಾದ ತೈಲ ಮಾರುಕಟ್ಟೆಗೆ ಕಾರಣವಾಗುತ್ತದೆ. ಇದು ಜಾಗತಿಕ ತೈಲ ಬೆಲೆಗಳು ಮತ್ತು ವ್ಯಾಪಾರ ಅಭ್ಯಾಸಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಭಾರತ ಕೆಲವು ತೈಲ ರಾಷ್ಟ್ರಗಳ ಜತೆ ಡಾಲರ್‌ ಬದಲು ರೂಪಾಯಿಯಲ್ಲೇ ವ್ಯವಹಾರ ನಡೆಸಲು ಆರಂಭಿಸಿದೆ.

Continue Reading

ಶಿಕ್ಷಣ

NEET UG Result 2024: ಏನಿದು ನೀಟ್‌ ವಿವಾದ? ಗ್ರೇಸ್‌ ಅಂಕ ಕೊಟ್ಟಿದ್ಯಾಕೆ? ಮರು ಪರೀಕ್ಷೆ ಮಾಡೋದ್ಯಾಕೆ?

ಅಕ್ರಮ ಆರೋಪದ ನಡುವೆಯೇ ಕೇಂದ್ರ ಸರ್ಕಾರ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಮರು ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದೆ. ಗ್ರೇಸ್ ಅಂಕ ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರು ಪರೀಕ್ಷೆ ನಡೆಸಿ ಜೂನ್ 30ರಂದು ಫಲಿತಾಂಶ (NEET UG Result 2024) ಪ್ರಕಟಿಸುವುದಾಗಿ ಘೋಷಿಸಿದೆ. ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈ 6ರಂದು ಕೌನ್ಸೆಲಿಂಗ್ ಪ್ರಾರಂಭವಾಗಲಿದೆ. ನೀಟ್‌ ವಿವಾದದ ಸಂಪೂರ್ಣ ಚಿತ್ರಣ ಇಲ್ಲಿದೆ.

VISTARANEWS.COM


on

By

NEET UG Result 2024
Koo

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG Result 2024) ಅಕ್ರಮ ನಡೆದಿದೆ ಎಂದು ನೀಟ್ ಆಕಾಂಕ್ಷಿಗಳು ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ನೀಟ್ ಯುಜಿ (NEET UG) ಪರೀಕ್ಷೆಯಲ್ಲಿ (exam) ಗ್ರೇಸ್ ಅಂಕಗಳನ್ನು (grace marks) ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರುಪರೀಕ್ಷೆ (retest) ನಡೆಸಲು ಕೇಂದ್ರ ಸರ್ಕಾರ (central govt) ಗುರುವಾರ ಪ್ರಸ್ತಾವನೆ ಸಲ್ಲಿಸಿದೆ. ನೀಟ್ ಫಲಿತಾಂಶ ಘೋಷಣೆಯಾದ ಬಳಿಕ ಆಕಾಂಕ್ಷಿಗಳು ಮತ್ತು ಪೋಷಕರು ಕೆಲವು ಕೇಂದ್ರಗಳಲ್ಲಿ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ತನಿಖೆ ಮತ್ತು ಮರು ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ.

ನೀಟ್- ಯುಜಿ ಅನ್ನು ಮೊದಲು ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (AIPMT) ಎಂದು ಕರೆಯಲಾಗುತ್ತಿತ್ತು. ಇದು ದೇಶದಾದ್ಯಂತ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಡೆಯುವ ಏಕೈಕ ಪ್ರವೇಶ ಪರೀಕ್ಷೆಯಾಗಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಹದಿಮೂರು ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸುವ ಉಸ್ತುವಾರಿ ವಹಿಸಿಕೊಂಡಿದೆ. ಈ ಹಿಂದೆ ಸೆಂಟ್ರಲ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ (CBSE) ಇದನ್ನು ನಡೆಸುತ್ತಿತ್ತು.

ನೀಟ್ ಯುಜಿ ಫಲಿತಾಂಶಗಳ ಸುತ್ತ ವಿವಾದ

2024ರ ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರಿ ಸುದ್ದಿ ಆಯಿತು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಸಾಧಿಸಲು ಪ್ರಶ್ನೆ ಪತ್ರಿಕೆ ಸೋರಿಕೆಯೇ ಕಾರಣ ಎಂಬ ಆರೋಪಗಳೂ ಕೇಳಿ ಬಂದಿದೆ.

ನೀಟ್ ಯುಜಿ ಪರೀಕ್ಷೆ ಬರೆದ 67 ವಿದ್ಯಾರ್ಥಿಗಳು ಒಟ್ಟು 720 ಅಂಕಗಳನ್ನು ಗಳಿಸಿದ್ದಾರೆ ಎಂಬುದು ಫಲಿತಾಂಶ ತೋರಿಸಿವೆ. ಇದು ಹಿಂದಿನ ವರ್ಷಗಳ ಫಲಿತಾಂಶಗಳಿಗೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಪೂರ್ಣ ಅಂಕ ಗಳಿಸಿದ್ದರೆ, 2022ರಲ್ಲಿ ಮೂವರು, 2021ರಲ್ಲಿ ಇಬ್ಬರು, 2020ರಲ್ಲಿ ಒಬ್ಬರು ಮಾತ್ರ ಪೂರ್ಣ ಅಂಕ ಗಳಿಸಿದ್ದರು. ಈ ಬಾರಿ ಹರ್ಯಾಣದ ಒಂದೇ ಕೇಂದ್ರದಲ್ಲಿ ಆರು ಮಂದಿ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇದು ಸಂಶಯಕ್ಕೆ ಆಸ್ಪದ ಮಾಡಿ ಕೊಟ್ಟಿದೆ.


ಸುಪ್ರೀಂ ಕೋರ್ಟ್ ಹೇಳಿದ್ದೇನು?

ನೀಟ್ ಯುಜಿ 2024ರಲ್ಲಿ ಗ್ರೇಸ್ ಅಂಕಗಳನ್ನು ಪಡೆದ 1,563 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಮರು ಪರೀಕ್ಷೆಯು ಜೂನ್ 23ರಂದು ನಡೆಯಲಿದೆ. ಆದರೆ ಪ್ರವೇಶ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನಿಲ್ಲಿಸದಿರಲು ಸುಪ್ರೀಂ ಕೋರ್ಟ್ ಆದೇಶಿಸಿದೆ. 1,563 ಅಭ್ಯರ್ಥಿಗಳಲ್ಲಿ ಯಾರಾದರೂ ಮರುಪರೀಕ್ಷೆಯಿಂದ ಹೊರಗುಳಿದಿದ್ದರೆ ಗ್ರೇಸ್ ಅಂಕಗಳಿಲ್ಲದ ಅವರ ಹಿಂದಿನ ಅಂಕಗಳನ್ನು ಫಲಿತಾಂಶಗಳಿಗಾಗಿ ಬಳಸಲಾಗುತ್ತದೆ.

ಜುಲೈ 6ರಂದು ಕೌನ್ಸೆಲಿಂಗ್ ಪ್ರಾರಂಭ

ಮರು ಪರೀಕ್ಷೆಯ ಫಲಿತಾಂಶವನ್ನು ಜೂನ್ 30ರಂದು ಪ್ರಕಟಿಸಲಾಗುವುದು ಮತ್ತು ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈ 6 ರಂದು ಕೌನ್ಸೆಲಿಂಗ್ ಪ್ರಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಸುಪ್ರೀಂ ಕೋರ್ಟ್‌ಗೆ ಮೊರೆ

ನೀಟ್ ಯುಜಿ 2024 ಪರೀಕ್ಷೆಯನ್ನು ರದ್ದುಗೊಳಿಸುವಂತೆ ಮತ್ತು ಗ್ರೇಸ್ ಮಾರ್ಕ್‌ ಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಮರುಪರೀಕ್ಷೆಯನ್ನು ನಡೆಸುವಂತೆ ಕೋರಿ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿತ್ತು. ನ್ಯಾಯಾಧೀಶರಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಅರ್ಜಿಗಳನ್ನು ಆಲಿಸಿತು.

ಫಿಸಿಕ್ಸ್ ವಾಲಾ ಸಿಇಒ ಅಲಖ್ ಪಾಂಡೆ, ಅರ್ಜಿದಾರರಲ್ಲಿ ಒಬ್ಬರು ಗ್ರೇಸ್ ಅಂಕಗಳನ್ನು ನೀಡುವ ಎನ್‌ಟಿಎ ನಿರ್ಧಾರವು ನಿರಂಕುಶ ಎಂದು ವಾದಿಸಿದರು. ಅವರು ಸುಮಾರು 20,000 ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಸಂಗ್ರಹಿಸಿದ್ದಾರೆ. ಸುಮಾರು 70-80 ಅಂಕಗಳನ್ನು ಕನಿಷ್ಠ 1,500 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳಾಗಿ ನೀಡಿರುವುದು ಆಕ್ಷೇಪಕಾರಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Teachers Recruitment: ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರ ನೇಮಕಾತಿ: ಕೌನ್ಸೆಲಿಂಗ್‌ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಎರಡನೇ ಅರ್ಜಿಯನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಸದಸ್ಯರಾದ ಅಬ್ದುಲ್ಲಾ ಮೊಹಮ್ಮದ್ ಫೈಜ್ ಮತ್ತು ಡಾ. ಶೇಕ್ ರೋಷನ್ ಮೊಹಿದ್ದೀನ್ ಅವರು ಎನ್‌ಇಇಟಿ ಮರುಪರೀಕ್ಷೆಗೆ ವಿನಂತಿಸಿದ್ದರು. ಹಲವಾರು ವಿದ್ಯಾರ್ಥಿಗಳು ಗ್ರೇಸ್ ಅಂಕಗಳನ್ನು ಪಡೆದಿರುವುದು ಇಡೀ ನೀಟ್‌ ಪರೀಕ್ಷಾ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ ಎಂದು ಅವರು ವಾದಿಸಿದ್ದರು.

ಮೂರನೇ ಅರ್ಜಿಯನ್ನು ನೀಟ್ ಅಭ್ಯರ್ಥಿ ಜಾರಿಪಿಟಿ ಕಾರ್ತೀಕ್ ಅವರು ಸಲ್ಲಿಸಿದ್ದು, ಪರೀಕ್ಷೆಯ ಸಮಯದಲ್ಲಿ ಕಳೆದುಹೋದ ಸಮಯಕ್ಕೆ ಪರಿಹಾರವಾಗಿ ಗ್ರೇಸ್ ಅಂಕಗಳನ್ನು ನೀಡುವುದನ್ನು ಪ್ರಶ್ನಿಸಿದ್ದರು.

Continue Reading

EXPLAINER

Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!

Jagannath Temple: ಕಳೆದ ನಾಲ್ಕು ವರ್ಷಗಳಿಂದ ಮುಚ್ಚಲಾಗಿದ್ದ ಒಡಿಶಾದ ಪುರಿ ಜಗನ್ನಾಥ ದೇವಾಲಯದ ಎಲ್ಲ ನಾಲ್ಕೂ ಬಾಗಿಲುಗಳನ್ನು ಗುರುವಾರ ತೆರೆಯಲಾಗಿದೆ. ಅದರಂತೆ, ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಬಿಜೆಪಿಯು ಅಧಿಕಾರಕ್ಕೆ ಬರುತ್ತಲೇ ಈಡೇರಿಸಿದಂತಾಗಿದೆ. ದೇವಾಲಯದ ಬಾಗಿಲುಗಳನ್ನು ಮುಚ್ಚಿದ್ದೇಕೆ? ಇದು ಏಕೆ ಪ್ರಮುಖ ಎಂಬುದು ಸೇರಿ ವಿವಿಧ ಮಾಹಿತಿ ಇಲ್ಲಿದೆ.

VISTARANEWS.COM


on

Jagannath Temple
Koo

ಭುವನೇಶ್ವರ: ಒಡಿಶಾದ ಪುರಿಯಲ್ಲಿರುವ ವಿಶ್ವಪ್ರಸಿದ್ಧ ಜಗನ್ನಾಥ ದೇವಾಲಯದ (Jagannath Temple) ಎಲ್ಲ ನಾಲ್ಕೂ ಬಾಗಿಲುಗಳನ್ನು ಗುರುವಾರ (ಜೂನ್‌ 13) ತೆರೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಒಂದೇ ಬಾಗಿಲಿನ ಮೂಲಕ ತೆರಳಿ, ದೇವರ ದರ್ಶನ ಪಡೆಯುತ್ತಿದ್ದ ಭಕ್ತರು ಗುರುವಾರದಿಂದ ನಾಲ್ಕೂ ಬಾಗಿಲುಗಳ ಮೂಲಕ ಜಗನ್ನಾಥನ ದರ್ಶನ ಪಡೆಯಬಹುದಾಗಿದೆ. ಒಡಿಶಾದ ನೂತನ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ (Mohan Charan Majhi) ಅವರ ಸಮ್ಮುಖದಲ್ಲಿ ಎಲ್ಲ ಬಾಗಿಲುಗಳನ್ನು ತೆರೆಯಲಾಗಿದೆ.

ಬಾಗಿಲುಗಳಿಗೆ ಬೀಗ ಹಾಕಿದ್ದೇಕೆ?

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಹಿಂದೆ ಪುರಿ ಜಗನ್ನಾಥ ದೇವಾಲಯಗಳಿಗೆ ಬೀಗ ಹಾಕಲಾಗಿತ್ತು. ಕೊರೊನಾ ಲಾಕ್‌ಡೌನ್‌, ಕೊರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಇದೇ ಸಂದರ್ಭದಲ್ಲಿ ದೇವಾಲಯದ ನಾಲ್ಕು ಬಾಗಿಲುಗಳನ್ನು ಮುಚ್ಚಲಾಗಿತ್ತು. ಆದರೆ, ಕೋವಿಡ್‌ 19 ಬಿಕ್ಕಟ್ಟಿನ ಬಳಿಕವೂ, ನಿರ್ಬಂಧಗಳನ್ನು ತೆರವುಗೊಳಿಸಿದ ಬಳಿಕವೂ ನಾಲ್ಕೂ ಬಾಗಿಲುಗಳನ್ನು ತೆರೆದಿರಲಿಲ್ಲ. ಸಿಂಹದ್ವಾರದ ಮೂಲಕ ಮಾತ್ರ ಭಕ್ತರು ದೇವರು ದರ್ಶನ ಪಡೆಯುವಂತಾಗಿತ್ತು.

ಬಿಜೆಪಿ ಪ್ರಣಾಳಿಕೆಗೂ, ಇದಕ್ಕೂ ಏನು ಸಂಬಂಧ?

ಪುರಿ ಜಗನ್ನಾಥ ದೇವಾಲಯಕ್ಕೆ 12ನೇ ಶತಮಾನದ ಇತಿಹಾಸವಿದೆ. ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಭಾರತ ಸೇರಿ ದೇಶ-ವಿದೇಶಗಳಿಂದ ವರ್ಷಕ್ಕೆ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಪ್ರತಿ ವರ್ಷವು ಪುರಿ ಜಗನ್ನಾಥ ರಥಯಾತ್ರೆ ನಡೆಯುತ್ತದೆ. ಇದು ವಿಶ್ವದಲ್ಲೇ ಬೃಹತ್‌ ಹಿಂದು ಹಬ್ಬ ಅಥವಾ ಜಾತ್ರೆ ಎಂದೇ ಖ್ಯಾತಿಯಾಗಿದೆ. ಆದರೆ, ಈ ದೇವಾಲಯದ ನಾಲ್ಕೂ ದ್ವಾರಗಳನ್ನು ತೆರೆಯದೆ ಇರುವುದು ರಾಜಕೀಯ ವಿಷಯವಾಗಿ ಬದಲಾಗಿತ್ತು.

ಒಡಿಶಾ ಮುಖ್ಯಮಂತ್ರಿಯಾಗಿದ್ದ ನವೀನ್‌ ಪಟ್ನಾಯಕ್‌ ಅವರ ಆಡಳಿತದಲ್ಲಿ ನಾಲ್ಕೂ ದ್ವಾರಗಳನ್ನು ತೆಗೆಯದಿರುವ ಕುರಿತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ, ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಾಲಯದ ನಾಲ್ಕೂ ಬಾಗಿಲುಗಳನ್ನು ತೆರೆಯಲಾಗುವುದು, ಕಳೆದು ಹೋಗಿರುವ ಭಂಡಾರದ ಬೀಗದ ಕೈ ಕುರಿತು ತನಿಖೆ ನಡೆಸಲಾಗುವುದು ಎಂಬುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು. ಅದರಂತೆ, ಬಿಜೆಪಿಯ ಮೋಹನ್‌ ಚರಣ್‌ ಮಾಝಿ ಅವರು ದೇವಾಲಯದ ಬಾಗಿಲುಗಳನ್ನು ತೆರೆಸುವ ಮೂಲಕ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ.

ದೇಗುಲದ ಬಾಗಿಲುಗಳು ಏಕೆ ಪ್ರಮುಖ?

ದೇವಾಲಯದ ನಾಲ್ಕು ದ್ವಾರಗಳು ಭಕ್ತರಿಗೆ ಪ್ರಮುಖವಾಗಿವೆ. ನಾಲ್ಕೂ ದ್ವಾರಗಳು ಒಂದೊಂದು ಪ್ರಾಣಿಯನ್ನು ಪ್ರತಿನಿಧಿಸುತ್ತವೆ. ಪೂರ್ವದಲ್ಲಿರುವ ದ್ವಾರವು ಸಿಂಹವನ್ನು ಪ್ರತಿನಿಧಿಸುವ ಕಾರಣ ಇದಕ್ಕೆ ಸಿಂಹದ್ವಾರ ಎನ್ನುತ್ತಾರೆ. ಇನ್ನು ಪಶ್ಚಿಮದಲ್ಲಿರುವ ದ್ವಾರವು ಹುಲಿಯನ್ನು ಪ್ರತಿನಿಧಿಸುವ ಕಾರಣ ಇದಕ್ಕೆ ವ್ಯಾಘ್ರದ್ವಾರ ಎಂದು ಕರೆಯುತ್ತಾರೆ. ಅದರಂತೆ, ಉತ್ತರಕ್ಕೆ ಇರುವ ದ್ವಾರವು ಆನೆಯನ್ನು ಪ್ರತಿನಿಧಿಸುವ ಕಾರಣ ಅದನ್ನು ಹಸ್ತಿದ್ವಾರ ಎಂದೂ, ದಕ್ಷಿಣಕ್ಕೆ ಇರುವ ದ್ವಾರವು ಕುದುರೆಯನ್ನು ಪ್ರತಿನಿಧಿಸುವ ಕಾರಣ ಅದನ್ನು ಅಶ್ವದ್ವಾರ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

Continue Reading

ಪ್ರಮುಖ ಸುದ್ದಿ

Mandya Election Result 2024 : ಮಂಡ್ಯದಲ್ಲಿ ಕುಮಾರ ಸ್ವಾಮಿಗೆ ಭರ್ಜರಿ ಗೆಲುವು

Mandya Election Result 2024 : 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು 7,03,660 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಅವರು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದಿದ್ದರು.

VISTARANEWS.COM


on

Mandya Election Result 2024
Koo

ಬೆಂಗಳೂರು: ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಪಕ್ಷದ ವರಿಷ್ಠ ಎಚ್​ ಡಿ ಕುಮಾರಸ್ವಾಮಿ (8,51,881 ಮತಗಳು) ಗೆಲುವು ಸಾಧಿಸಿದ್ದಾರೆ. ಈ ಮೂಲಕ ತೀವ್ರ ಜಿದ್ದಾಜಿದ್ದಿಯಲ್ಲಿ ಅವರು ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು (5,67.261 ಮತಗಳು) ವಿರುದ್ಧ 2,84,620 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೆಡಿಎಸ್​ ತನ್ನ ಕ್ಷೇತ್ರವನ್ನು ಮರುವಶಪಡಿಸಿಕೊಂಡಿದೆ. ಹಿಂದಿನ ಚುನಾವಣೆಯಲ್ಲಿ ಇದನ್ನು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ನಾನಾ ರಾಜಕೀಯ ಚಟುವಟಿಕೆ ಬಳಿಕ ಗೆಲುವು ಕಂಡಿದ್ದರು.

ಎಚ್​. ಡಿ. ಕುಮಾರಸ್ವಾಮಿ (ಜೆಡಿಎಸ್​)- 8,51,881 ಮತಗಳು
ಸ್ಟಾರ್​ ಚಂದ್ರು (ಕಾಂಗ್ರೆಸ್​)- 5,67.261 ಮತಗಳು
ಗೆಲುವಿನ ಅಂತರ-2,84,620

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು 7,03,660 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಅವರು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದಿದ್ದರು.

2018ರ ಉಪಚುನಾವಣೆಯಲ್ಲಿ ಜೆಡಿಎಸ್ ನ ಎಲ್.ಆರ್.ಶಿವರಾಮಗೌಡ 5,69,347 ಮತಗಳನ್ನು ಪಡೆದು ಗೆದ್ದಿದ್ದರು. ಬಿಜೆಪಿಯ ಡಿ.ಆರ್.ಸಿದ್ದರಾಮಯ್ಯ 2,44,404 ಹಾಗೂ ಪಕ್ಷೇತರ ಅಭ್ಯರ್ಥಿ ಎಂ.ಹೊನ್ನೇಗೌಡ 17,842 ಮತಗಳನ್ನು ಪಡೆದಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನ ರಮ್ಯಾ 4,84,085 ಮತಗಳನ್ನು ಪಡೆದು ಜಯಗಳಿಸಿದ್ದರು.

ಈ ಕ್ಷೇತ್ರವು 2009 ಮತ್ತು 2019 ರ ನಡುವೆ ಎರಡು ಉಪಚುನಾವಣೆಗಳಿಗೆ ಸಾಕ್ಷಿಯಾಗಿದೆ. 2009 ರವರೆಗೆ ಸತತ ಮೂರು ಅವಧಿಗೆ ಕನ್ನಡ ಚಲನಚಿತ್ರ ತಾರೆ ಅಂಬರೀಶ್ ಇಲ್ಲಿ ಗೆದ್ದಿದ್ದರು. ಅವರ ಪತ್ನಿ ಸುಮಲತಾ 2019 ರಲ್ಲಿ ಸ್ಪರ್ಧಿಸಿ ಗೆದ್ದರು. 2013ರಲ್ಲಿ ಜೆಡಿಎಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಚೆಲುವರಾಯಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ನಟಿ ರಮ್ಯಾ ಗೆಲುವು ಸಾಧಿಸಿದರು. 2018 ರ ಉಪಚುನಾವಣೆಯಲ್ಲಿ ಸಿ.ಎಸ್.ಪುಟ್ಟರಾಜು ರಾಜ್ಯ ವಿಧಾನಸಭೆಗೆ ಆಯ್ಕೆಯಾದ ನಂತರ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡಿತು.

ಹೇಗಿದೆ ಕ್ಷೇತ್ರ

ಮಂಡ್ಯ ಲೋಕಸಭಾ ಕ್ಷೇತ್ರವು (mandya lok sabha constituency) ಇಡೀ ಮಂಡ್ಯ ಜಿಲ್ಲೆ ಮತ್ತು ಮೈಸೂರು ಜಿಲ್ಲೆಯ ಒಂದು ಭಾಗವನ್ನು ಒಳಗೊಂಡಿದೆ. ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಂಡ್ಯ ಕ್ಷೇತ್ರವು ಆರಂಭಗೊಂಡ ಬಳಿಕದಿಂದ ಶ್ರೀಮಂತ ರಾಜಕೀಯ ಇತಿಹಾಸ ಹೊಂದಿದೆ. ಮಂಡ್ಯದಲ್ಲಿ 3 ಬಾರಿ ಜೆಡಿಎಸ್ , 2 ಬಾರಿ ಜತನಾ ದಳ ಹಾಗೂ ಒಂದು ಬಾರಿ ಜನತಾ ಪಕ್ಷ ಗೆಲುವು ಸಾಧಿಸಿದೆ. ಹಿಂದಿನ ಬಾರಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿಜಯ ಕಂಡಿದ್ದರು. ಮೂಲತಃ ಮೈಸೂರು ರಾಜ್ಯದ ಭಾಗವಾಗಿದ್ದ ಮಂಡ್ಯ 1977 ರ ನಂತರ ಕರ್ನಾಟಕಕ್ಕೆ ಸೇರಿತು.

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೃಷ್ಣರಾಜಪೇಟೆ ಮತ್ತು ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 5, ಜೆಡಿಎಸ್ ಮತ್ತು ಸರ್ವೋದಯ ಕರ್ನಾಟಕ ಪಕ್ಷ ತಲಾ 1 ಸ್ಥಾನಗಳನ್ನು ಹೊಂದಿವೆ.

2011ರ ಜನಗಣತಿ ಪ್ರಕಾರ ಮಂಡ್ಯದಲ್ಲಿ 1805769 ಜನಸಂಖ್ಯೆ ಇತ್ತು. ಸರಾಸರಿ ಸಾಕ್ಷರತಾ ಪ್ರಮಾಣವು 70.40% – ಮಹಿಳೆಯರಲ್ಲಿ 62.54% ಮತ್ತು ಪುರುಷರಲ್ಲಿ 78.27% ಆಗಿತ್ತು. ಗ್ರಾಮೀಣ ಮತದಾರರು ಇಎಲ್ ನ 83.4% ರಷ್ಟಿದ್ದಾರೆ.

Continue Reading
Advertisement
Petrol Diesel Price
ಪ್ರಮುಖ ಸುದ್ದಿ2 mins ago

Petrol Diesel Price: ನೆರೆ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ: ಸಿಎಂ ಸಮರ್ಥನೆ

Child Marriage
ವಿದೇಶ11 mins ago

12ರ ಹರೆಯದ ಮಗಳನ್ನು 5 ಲಕ್ಷ ರೂ.ಗೆ ಮಾರಿ 72 ವರ್ಷದ ವೃದ್ಧನೊಂದಿಗೆ ಮದುವೆ ಮಾಡಿಸಲು ಮುಂದಾದ ಪಾಪಿ ತಂದೆ!

EVM Row
ದೇಶ17 mins ago

EVM Row: ಮೊಬೈಲ್‌ ಬಳಸಿ ಇವಿಎಂ ಅನ್‌ಲಾಕ್‌ ಮಾಡಿದ ಸಂಸದನ ಸಂಬಂಧಿ; ಎಲ್ಲಿ ನಡೆಯಿತು ಮೋಸ?

Vijayalakshmi Darshan Reactivated Instagram Account
ಸ್ಯಾಂಡಲ್ ವುಡ್32 mins ago

Actor Darshan:  ಇನ್​ಸ್ಟಾಗ್ರಾಮ್‌ ಖಾತೆಯನ್ನು ಸಕ್ರಿಯಗೊಳಿಸಿದ ದರ್ಶನ್‌ ಪತ್ನಿ; ಮಾಧ್ಯಮದ ಮುಂದೆ ಬರ್ತಾರಾ?

Rishabh Pant
ಕ್ರೀಡೆ35 mins ago

Rishabh Pant: ಯೂಟ್ಯೂಬ್ ಸಿಲ್ವರ್ ಪ್ಲೇ ಬಟನ್ ಪಡೆದ ರಿಷಭ್​ ಪಂತ್​; ಗಳಿಕೆಯ ಹಣ ದಾನಕ್ಕೆ ಮೀಸಲು

Electric Shock
ಕರ್ನಾಟಕ40 mins ago

Electric Shock: ಕುಷ್ಟಗಿಯಲ್ಲಿ ವಿದ್ಯುತ್ ತಂತಿ ತಗುಲಿ ರೈತ, 2 ಎತ್ತುಗಳ ಸಾವು

Renuka swamy murder case
ಕ್ರೈಂ43 mins ago

Renuka swamy Murder : ಟೀಕೆಗೆಲ್ಲ ಕೊಲೆ ಮಾಡುವುದಾದರೆ ಗಂಟೆಗೊಂದು ಹೆಣ ಬೀಳುತ್ತಿತ್ತು- ಸಿಟಿ ರವಿ

Goat With Plastic Teeth
ವಿದೇಶ1 hour ago

Goat With Plastic Teeth: ಬಕ್ರೀದ್‌ಗೆ ಬಲಿ ಕೊಡಲು ಪ್ಲಾಸ್ಟಿಕ್‌ ಹಲ್ಲಿರುವ ಮೇಕೆ ಮಾರಾಟ ಮಾಡಿ ಸಿಕ್ಕಿಬಿದ್ದ ಭೂಪ

Double iSmart to release on August 15
ಟಾಲಿವುಡ್1 hour ago

Ram Pothineni: ರಾಮ್ ಪೋತಿನೇನಿ ಅಭಿನಯದ ʻಡಬಲ್ ಇಸ್ಮಾರ್ಟ್ʼ ಬಿಡುಗಡೆಗೆ‌ ಮುಹೂರ್ತ ಫಿಕ್ಸ್!

Rahul Gandhi
ದೇಶ1 hour ago

Rahul Gandhi: ಕಾಂಗ್ರೆಸ್‌ ಹೆಚ್ಚು ಕ್ಷೇತ್ರ ಗೆದ್ದರೂ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ !

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Vijayanagara News
ವಿಜಯನಗರ4 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 day ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

ಟ್ರೆಂಡಿಂಗ್‌