Modern Locks | ನಿಮ್ಮ ಮನೆಯ ಭದ್ರತೆಗೆ ಬಂದಿವೆ ಸ್ಮಾರ್ಟ್‌ ಬೀಗಗಳು! - Vistara News

ರಿಯಲ್ ಎಸ್ಟೇಟ್

Modern Locks | ನಿಮ್ಮ ಮನೆಯ ಭದ್ರತೆಗೆ ಬಂದಿವೆ ಸ್ಮಾರ್ಟ್‌ ಬೀಗಗಳು!

ಪ್ರತಿಯೊಬ್ಬರಿಗೂ ತಮ್ಮ ಮನೆಯ ರಕ್ಷಣೆ ಬಹಳ ಮುಖ್ಯ. ಹೀಗಾಗಿ ಭದ್ರ ಬಾಗಿಲಿರಲಿ, ಬಲಿಷ್ಠ ಬೀಗವಿರಲಿ ಎಂದು ಬಯಸುತ್ತಾರೆ. ಕಾಲಕ್ಕೆ ತಕ್ಕಂತೆ ಆಧುನಿಕ ಬೀಗಗಳೂ (Modern Locks) ಈಗ ಮಾರುಕಟ್ಟೆಗೆ ಬಂದಿವೆ.

VISTARANEWS.COM


on

Modern Locks
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮನೆಯನ್ನು ಭದ್ರ ಪಡಿಸುವುದಕ್ಕೆ ಬಾಗಿಲು ಬೇಕು. ಬಾಗಿಲು ಭದ್ರ ಪಡಿಸುವುದಕ್ಕೆ ಚಿಲಕ ಮತ್ತು ಬೀಗ ಬೇಕೇ ಬೇಕು! ಮನೆಯ ಮತ್ತು ಮನೆಯೊಳಗಿನವರ ರಕ್ಷಣೆಗೆ ಭದ್ರತೆಯಂತೂ ಬೇಕೇಬೇಕಲ್ಲ, ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಹಲವಾರು ಆವಿಷ್ಕಾರ, ಸುಧಾರಣೆಗಳು ನಡೆದಿವೆ. ಹಳೆಯ ಕಾಲದ ಕೋಟೆ ಬಾಗಿಲುಗಳಿಂದ ಹಿಡಿದು ಇಂದಿನ ಕಾಲದ ಸ್ಮಾರ್ಟ್‌ ಬಾಗಿಲುಗಳವರೆಗೆ ನಾನಾ ಮಜಲುಗಳನ್ನು ಬಾಗಿಲ ಬೀಗಗಳು ದಾಟಿ ಬಂದಿವೆ. ಇಂದಿನ ಕಾಲಕ್ಕೆ ತಕ್ಕಂತೆ ಹೈಟೆಕ್‌ ಬೀಗಗಳು (Modern Locks) ಬಂದಿದ್ದು, ಈಗ ಎಲ್ಲರ ಗಮನ ಸೆಳೆಯುತ್ತಿವೆ. ಅವುಗಳ ಕಿರು ಪರಿಚಯ ಇಲ್ಲಿದೆ.

ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌
ಚಾವಿಯಿಲ್ಲದೆಯೇ ಕೆಲಸ ಮಾಡುವ ಬೀಗಗಳ ಪೈಕಿ ಇದೊಂದು ಉತ್ತಮ ಆಯ್ಕೆ. ನೋಡುವುದಕ್ಕೆ ಆಡಂಬರವಿಲ್ಲದೆ, ಸರಳ ಮತ್ತು ಸಪೂರವಾಗಿ ಕಾಣುವ ಈ ಬೀಗಗಳು ಒಂದಕ್ಕಿಂತ ಹೆಚ್ಚು ಬೆರಳಚ್ಚುಗಳನ್ನು ನೆನಪಿಟ್ಟುಕೊಳ್ಳಬಲ್ಲವು. ಹಾಗಾಗಿ ಮನೆಮಂದಿಯೆಲ್ಲಾ ಬಳಸಬಹುದಾದ ಆಯ್ಕೆಯಿದು. ಈ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಫೋನಿನ ಮೂಲಕವೂ ಕಾರ್ಯನಿರ್ವಹಿಸುವುದರಿಂದ ದೂರದಿಂದಲೂ ಬಾಗಿಲು ತೆಗೆದು-ಹಾಕಿ ಮಾಡುವ ಅವಕಾಶವಿದೆ.

Modern Locks
Modern Locks

ಪಾಸ್ವರ್ಡ್‌ ಹೊಂದಿರುವ ಬೀಗ
ಇದೊಂಥರಾ ಹೊಸ ಚಿಗುರು- ಹಳೆಬೇರಿನ ಮಾದರಿಯ ಆಯ್ಕೆ. ಹಳೆಯ ಪದ್ಧತಿಯ ಚಾವಿ ಮತ್ತು ಈಗಿನಂತೆ ಗುಪ್ತ ಸಂಖ್ಯೆ- ಎರಡನ್ನೂ ಹೊಂದಿರುವ ಬೀಗವಿದು. ಪಾಸ್ವರ್ಡ್‌ ಮರೆತಿರೇ? ಬೀಗ ಒಡೆಯಬೇಕಿಲ್ಲ, ಚಾವಿ ಇದೆಯಲ್ಲ. ನೋಡುವುದಕ್ಕೆ ಹಳತು-ಹೊಸತರ ಸಂಯೋಗದಂತೆಯೇ ಕಾಣುತ್ತದೆ. ಇರುವ ಬೀಗವೇ ಪಾಸ್‌ವರ್ಡ್‌ ಮೂಲಕ ಕಾರ್ಯನಿರ್ವಹಿಸುವಂತೆ ಇದರಲ್ಲಿ ಮಾಡಲಾಗಿರುತ್ತದೆ.

ಫೋನ್‌ ನಿಂದ ನಿರ್ವಹಿಸುವ ಸ್ಮಾರ್ಟ್‌ ಬೀಗ
ಬ್ಲೂಟೂತ್‌ ಮೂಲಕ ಮೊಬೈಲ್‌ ಫೋನ್‌ ಜೊತೆ ಸಂಪರ್ಕ ಸಾಧಿಸುವ ಈ ಭದ್ರತಾ ಸಾಧನ, ನೋಡುವುದಕ್ಕೆ ಬಹಳ ಸರಳ. ಆದರೆ ಮುರಿಯುವುದಕ್ಕೆ ಅಷ್ಟೇ ಕ್ಲಿಷ್ಟ. ನಾವು ಒಳಗೆ-ಹೊರಗೆ ಹೋಗುತ್ತಿದ್ದಂತೆ ತನ್ನಷ್ಟಕ್ಕೆ ಮುಚ್ಚಿ-ತೆರೆದು ಮಾಡಿಕೊಳ್ಳುವ ಸವಲತ್ತೂ ಇದರಲ್ಲಿದೆ. ಬಾಗಿಲು ಮುಚ್ಚಿ-ಬೀಗ ಹಾಕುವುದನ್ನೂ ಮರೆಯುವ ಮರೆಗುಳಿಗಳಿಗೆ ಹೇಳಿ ಮಾಡಿಸಿದಂತಿದೆ.

Modern Locks

ವೀಡಿಯೊ ಇಂಟರ್‌ಕಾಂ
ಯಾವುದೇ ತುರ್ತು ಕೆಲಸದಲ್ಲಿ ಇರುವಾಗಲೇ ಬಾಗಿಲ ಕರೆಗಂಟೆ ಸದ್ದು ಮಾಡುತ್ತದೆ. ಮಾಡುತ್ತಿರುವ ಕೆಲಸ ಬಿಟ್ಟು ಬಂದು ನೋಡಿದರೆ, ಯಾರೋ ಬೇಡದ ಅತಿಥಿ. ಇಂಥದ್ದಕ್ಕೆಲ್ಲ ಕಡಿವಾಣ ಹಾಕಬೇಕೆಂದರೆ ವೀಡಿಯೊ ಇಂಟರ್‌ಕಾಂ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಹೊಂದಿಕೊಂಡಂತೆ ಇರುವ ಬೀಗಗಳು ಉತ್ತಮ ಸುರಕ್ಷತೆಯನ್ನೂ ನೀಡಬಲ್ಲವು. ಅವುಗಳನ್ನು ವೈರ್‌ಲೆಸ್‌ ಸಾಧನಗಳಿಗೆ ಜೋಡಿಸಿದಲ್ಲಿ, ಬಂದವರಾರು ಎಂಬುದನ್ನು ಇರುವಲ್ಲಿಂದಲೇ ವೀಡಿಯೊ ಮೂಲಕ ನೋಡಿ, ಬೇಕಾದವರಾದರೆ ಬಾಗಿಲು ತೆರೆಯುವಂತೆ ಅಲ್ಲಿಂದಲೇ ಸೂಚಿಸಬಹುದು.

ಪುಷ್-ಪುಲ್‌ ವಿನ್ಯಾಸ
ಇದನ್ನು ಹಲವಾರು ರೀತಿಗಳಲ್ಲಿ ಬಳಸಬಹುದು. ಕಾರ್ಡ್‌ ಹಾಕಿ, ಬೆರಳಚ್ಚು ನೀಡಿ ಅಥವಾ ಪಾಸ್‌ಕೋಡ್‌ ಮೂಲಕವೂ ಇದನ್ನು ಉಪಯೋಗಿಸಬಹುದು. ಒಳಗೆ ತಳ್ಳಿದರೆ, ಹೊರಗೆ ಎಳೆದರೆ- ಎರಡೂ ರೀತಿಯಲ್ಲಿ ಈ ಬಾಗಿಲು ತೆರೆದುಕೊಳ್ಳುತ್ತದೆ.

ಚೈನ್‌ ಹಾಕುವ ಪದ್ಧತಿ
ಇದು ಸಾಕಷ್ಟು ಹಳೆಯದಾದರು, ಇನ್ನೂ ಚಾಲ್ತಿಯಲ್ಲಿದೆ. ಸಣ್ಣದಾದರೂ ಭದ್ರವಾದ ಸರಪಳಿಯನ್ನು ಬಾಗಿಲು ಮತ್ತು ಚೌಕಟ್ಟಿನ ನಡುವೆ ಅಳವಡಿಸಲಾಗುತ್ತದೆ. ಸರಪಳಿಯ ಕೊಂಡಿಯನ್ನು ಹಾಕಿಯೇ ಇದ್ದರೆ, ಬಾಗಿಲು ತೆರೆಯುವ ಮುನ್ನ ಬಂದವರಾರು ಎಂಬುದನ್ನು ನೋಡಿಕೊಳ್ಳಬಹುದು. ಚಿಕ್ಕ ಮಕ್ಕಳಿರುವ ಹಲವಾರು ಮನೆಗಳಲ್ಲಿ ಇದರ ಬಳಕೆ ಮುಂದುವರಿದಿದೆ.

ಹಲವು ಚಿಲಕಗಳ ಬೀಗ
ಇದೇನು ಚಾವಿ ರಹಿತ ಮಾದರಿಯಲ್ಲ. ಆದರೆ ನಾಲ್ಕಾರು ಚಿಲಕಗಳು ಒಟ್ಟಿಗೆ ಹಾಕಿ-ತೆಗೆದು ಮಾಡುವ ಮೂಲಕ ಹೆಚ್ಚಿನ ಭದ್ರತೆಯನ್ನು ನೀಡುತ್ತದೆ. ಬೀಗ ಒಡೆಯುವವರಿಗೆ ಸುಲಭಕ್ಕಂತೂ ಖಂಡಿತ ಇಲ್ಲ. ನೋಡುವುದಕ್ಕೂ ಅಂದಗಾಣಿಸಿ ಕೊಡುವ ಈ ಬೀಗಗಳು ಮಾರುಕಟ್ಟೆಯಲ್ಲಿ ಎಲ್ಲೆಡೆ ಲಭ್ಯವಿವೆ.

Modern Locks

ತಿರುಗಿಸುವ ಹಿಡಿಕೆಯ ಬೀಗಗಳು
ಇವುಗಳೂ ಸಹ ನವೀನ ವಿನ್ಯಾಸದವಲ್ಲ, ಸ್ಮಾರ್ಟ್‌ ಅಂತೂ ಅಲ್ಲವೇ ಅಲ್ಲ. ಹಿಡಿಕೆಗೊಂದು ತಿರುಗಿಸುವ ಸಾಧನವನ್ನು ನೀಡುವ ಇವು, ಚಾವಿಯಿಂದ ಮಾತ್ರವೇ ತೆರೆದುಕೊಳ್ಳುತ್ತವೆ. ಹಳತೂ ಅಲ್ಲದ, ಹೊಸತೂ ಅಲ್ಲದ, ಒಂದು ಕಾಲದಲ್ಲಿ ಆಧುನಿಕ ಎನಿಸಿದ್ದ ಮನೆಗಳಲ್ಲಿ ಇಂಥ ಬೀಗಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.

ಸರಿಸುವ ಬಾಗಿಲುಗಳು: ಒಳಗೆ-ಹೊರಗೆ ತೆರೆದುಕೊಳ್ಳುವ ಬಾಗಿಲುಗಳ ಬದಲಿಗೆ, ಒಂದು ಚಾನೆಲ್‌ ಮೇಲೆ ಸರಿದಾಡುತ್ತ ಮುಚ್ಚಿ-ತೆರೆದು ಮಾಡುವ ಬಾಗಿಲುಗಳಿಗೆ ಬೇರೆಯದೇ ರೀತಿಯ ಬೀಗಗಳ ಅಗತ್ಯವಿದೆ. ಬಾಲ್ಕನಿ, ಶಯನಾಗೃಹ ಅಥವಾ ಸ್ನಾನದ ಕೋಣೆಗಳಿಗೆ ಇಂಥ ಬಾಗಿಲುಗಳ ಬಳಕೆ ಮಾಡುವುದಿದೆ. ತೋರು ಬೆರಳಲ್ಲಿ ಒತ್ತಿ-ಬಿಟ್ಟು ಮಾಡುವ ಸರಳ ತಂತ್ರಜ್ಞಾನದಿಂದ ಈ ಬಾಗಿಲು ಕೆಲಸ ಮಾಡುತ್ತದೆ.

ಡೆಡ್‌ಬೋಲ್ಟ್:‌ ಹಳೆಯ ಕಾಲದಿಂದಲೂ ಅತ್ಯಂತ ಜಿಗುಟು ಚಿಲಕ ಎಂದೇ ಇದು ಪ್ರಸಿದ್ಧ. ಮೊದಲಿನಿಂದಲೂ ಇದನ್ನು ಘನವಾದ ಮರ, ಸ್ಟೀಲ್ ಅಥವಾ ಕಬ್ಬಿಣದ‌ ಬಾಗಿಲುಗಳಿಗೆ ಅಳವಡಿಸಲಾಗುತ್ತಿತ್ತು. ಹಾಗಾಗಿಯೇ ಚಾವಿ ಇಲ್ಲದಿದ್ದರೆ ಇದನ್ನು ಒಡೆಯುವುದೂ ದುಸ್ತರ ಎನ್ನುವಷ್ಟು ಗಟ್ಟಿ ಬೀಗವಿದು. ಅಂದಿನಿಂದ ಇಂದಿನವರೆಗೂ ಅತಿ ಹೆಚ್ಚಿನ ಸುರಕ್ಷತೆ ನೀಡುವ ಚಿಲಕಗಳ ಪೈಕಿ ಇದೂ ಒಂದು. ಆದರೆ ಚಾವಿ ಕಳೆದರೆ ಮಾತ್ರ ಹರೋಹರ!

Modern Locks

ಬಿಗಗಳ ಆಯ್ಕೆ ಹೇಗೆ?
ಇಷ್ಟೆಲ್ಲಾ ರೀತಿಯ ಬಾಗಿಲ ಬೀಗಗಳನ್ನು ನೋಡಿದ್ದಾಯಿತು. ಆದರೆ ನಮಗೆ ಬೇಕಾದ್ದು ಯಾವುದು ಎಂಬುದನ್ನು ನಿರ್ಧರಿಸುವುದು ಹೇಗೆ ಎಂಬುದು ಮುಂದಿನ ಪ್ರಶ್ನೆ. ನಿಜ, ಆಯ್ಕೆ ಹೆಚ್ಚಾದಷ್ಟೂ ಗೊಂದಲವೂ ಹೆಚ್ಚು. ಸಾಮಾನ್ಯವಾಗಿ ಸರಳ ಬೀಗದ ಆಯ್ಕೆ ಅತ್ಯಂತ ಜನಪ್ರಿಯ. ಅದರಲ್ಲೂ ಒಂದೇ ಬೀಗಕ್ಕೆ ಹೆಚ್ಚಿನ ಚಾವಿಗಳನ್ನು ಹೊಂದುವಂಥ ಆಯ್ಕೆ ಇವತ್ತಿಗೂ ಅವಶ್ಯಕ ಎನಿಸಿದೆ. ಮನೆಯಲ್ಲಿ ಹೆಚ್ಚಿನ ಜನರಿದ್ದರೆ ಅಥವಾ ಶೇರ್‌ ಮಾಡುವ ರೂಂಮೇಟ್‌ಗಳಿದ್ದರೆ ಇವೆಲ್ಲ ಸುಲಭ ಆಯ್ಕೆಗಳು.

ಈಗಿನ ಕಾಲದ ಬೀಗಗಳಿಗೆ ಅದರದ್ದೇ ಆದ ಆಯಸ್ಸಿರುತ್ತದೆ. ಸಾಮಾನ್ಯವಾಗಿ ʻಲಾಕ್‌ ಸೈಕಲ್ಸ್‌ʼ ಎಂದು ಇದನ್ನು ಹೇಳಲಾಗುತ್ತದೆ. ಹೆಚ್ಚಿನ ಲಾಕ್‌ ಸೈಕಲ್ಸ್‌ ಹೊಂದಿದ ಬೀಗಗಳ ಆಯಸ್ಸು ಹೆಚ್ಚಾಗಿರುತ್ತದೆ, ಮಾತ್ರವಲ್ಲ ಬೆಲೆಯೂ ಹೆಚ್ಚಾಗಿರುತ್ತದೆ. ಇಂತಿಷ್ಟು ಸಾವಿರ ಬಾರಿ, ಉದಾಹರಣೆಗೆ ಹತ್ತೊ ಅಥವಾ ಇಪ್ಪತ್ತೋ ಸಾವಿರ ಬಾರಿ ಬೀಗವನ್ನು ಬಳಸಬಹುದು ಎಂಬುದು ತಯಾರಕರ ಅಂದಾಜು. ಇದನ್ನು ಪರಿಶೀಲಿಸಿ ಖರೀದಿಸಬೇಕಾಗುತ್ತದೆ. ಹಳೆಯ ಕಾಲದವು ಇಷ್ಟೊಂದು ನಾಜೂಕಲ್ಲದೆ ಇದ್ದಿದ್ದರಿಂದ ಇಂಥ ಸಮಸ್ಯೆಗಳು ಇರಲಿಲ್ಲ ಬಿಡಿ. ಓಲ್ಡ್‌ ಈಸ್‌ ಗೋಲ್ಡ್‌ ಎನ್ನುವಿರೇ? ಆದರೆ ಮನೆಯಲ್ಲಿ ಗೋಲ್ಡ್‌ ಹೆಚ್ಚಿದ್ದರೆ ಓಲ್ಡ್‌ ಸಾಕಾಗುವುದಿಲ್ಲ!

ಇದನ್ನೂ ಓದಿ| Home Decor Ideas| ನಿಮ್ಮ ಮನೆಯ ಅಂದ ಹೆಚ್ಚಿಸಲು ಸಿಂಪಲ್ಲಾದ 5 ಟಿಪ್ಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಿಯಲ್ ಎಸ್ಟೇಟ್

Vastu Tips : ಮನೆಯಲ್ಲಿ ಅಟ್ಯಾಚ್ ಬಾತ್‌ರೂಮ್ ಇದ್ದರೆ ಆರ್ಥಿಕ ನಷ್ಟ ತಪ್ಪಿಸಲು ಹೀಗೆ ಮಾಡಿ!

ಮನೆಯಲ್ಲಿನ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳೂ ವಾಸ್ತು ಪ್ರಕಾರ ಇರುವುದು ಅತ್ಯವಶ್ಯಕ. ಇದಕ್ಕೆ ಸಂಬಂಧಿಸಿದಂತೆ ವಾಸ್ತು ನಿಯಮಗಳು ಏನೇನಿವೆ (Vastu Tips) ಎಂಬುದನ್ನು ತಿಳಿಯೋಣ.

VISTARANEWS.COM


on

Vastu Tips vastu shastra rules for Attached Bathroom and Toilet in kannada
Koo

ಎಲ್ಲರಿಗೂ ತಿಳಿದಿರುವಂತೆ ಹಿಂದಿನ ಕಾಲದಲ್ಲಿ ಮನೆಯ ಹೊರಭಾಗದಲ್ಲಿ , ಅದೂ ಮನೆಯಿಂದ ದೂರದಲ್ಲಿ ಸ್ನಾನದ ಮನೆಗಳನ್ನು ನಿರ್ಮಿಸಲಾಗುತ್ತಿತ್ತು. ಈಗ ಹೀಗೆ ಮಾಡಲು ಸ್ಥಳಾವಕಾಶದ ಕೊರತೆ ಇರುವುದರಿಂದ ಮನೆಯ ಒಳಗೇ ಬಚ್ಚಲು ಮನೆಯನ್ನು (ಬಾತ್‌ರೂಮ್) (Vastu Tips) ನಿರ್ಮಿಸಲಾಗುತ್ತದೆ.

ನಮ್ಮ ಪೂರ್ವಜರು ಈ ರೀತಿ ಬಾತ್‌ರೂಮ್ ಮತ್ತು ಟಾಯ್ಲೆಟ್‌ ಅನ್ನು ಮನೆಯಿಂದ ಹೊರಗೆ ಕಟ್ಟಲು ಕಾರಣವಿತ್ತು. ಏಕೆಂದರೆ ಇವುಗಳಿಂದ ನಕಾರಾತ್ಮಕತೆ ಹೆಚ್ಚುತ್ತದೆ. ಆದರೆ ಈಗ ಮನೆಯಲ್ಲಿ ಎಷ್ಟು ಕೋಣೆಗಳಿರುತ್ತವೆಯೋ ಅದಕ್ಕಿಂತ ಹೆಚ್ಚು ಬಾತ್‌ರೂಮ್‌ಗಳನ್ನು ನಿರ್ಮಿಸಲಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಬಾತ್‌ರೂಮ್‌ಗಳಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗಿರುತ್ತದೆ. ಇದರಿಂದ ವಾಸ್ತು ದೋಷ ಉಂಟಾಗುತ್ತದೆ. ಹಾಗಾಗಿ ಬಾತ್‌ರೂಮ್ ವಾಸ್ತುವಿನ ಬಗ್ಗೆ ಸಹ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ಮನೆಯ ಸದಸ್ಯರ ಆರೋಗ್ಯ ಮತ್ತು ಆರ್ಥಿಕತೆ ಮೇಲೆ ಪರಿಣಾಮಗಳಾಗಬಹುದು.

ಬಾತ್‌ರೂಮ್ ವಾಸ್ತು ಸರಿ ಇಲ್ಲದೇ ಇದ್ದಲ್ಲಿ ನಕರಾತ್ಮಕ ಶಕ್ತಿಯ ಹರಿವಿನಿಂದ ಮನೆಯಲ್ಲಿ ಕೆಡುಕು ಉಂಟಾಗುತ್ತದೆ. ಹಾಗಾಗಿ ಮನೆಯಲ್ಲಿ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳನ್ನು ನಿರ್ಮಿಸಲು ಕೆಲವು ವಿಶೇಷವಾದ ನಿಯಮಗಳಿವೆ (vastu tips for bathroom). ಅವುಗಳನ್ನು ಪಾಲಿಸುವುದು ಉತ್ತಮ ಎನ್ನುತ್ತಾರೆ ವಾಸ್ತು ತಜ್ಞರು.

ಮನೆಯೊಳಗೆ ಹಾಗೂ ಮನೆಗೇ ಹೊಂದಿಕೊಂಡಿರುವ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳ ವಾಸ್ತುವಿನ ಬಗ್ಗೆ ಗಮನ ಕೊಡುವುದು ಅತ್ಯಂತ ಅವಶ್ಯಕ. ಹಾಗಾದರೆ ವಾಸ್ತು ಪ್ರಕಾರ ಮನೆಯ ಒಳಗೆ ಕೋಣೆಗೆ ಹೊಂದಿಕೊಂಡಿರುವ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳ ವಾಸ್ತು ಹೇಗಿರಬೇಕು? ಒಂದೊಮ್ಮೆ ವಾಸ್ತು ಪ್ರಕಾರ ಇಲ್ಲದೇ ಇದ್ದರೆ ಉಂಟಾಗುವ ವಾಸ್ತು ದೋಷವನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು? ಎಂಬುದನ್ನು ತಿಳಿಯೋಣ.

ಬಾತ್‌ರೂಮ್ ಈ ದಿಕ್ಕಿನಲ್ಲಿರಲಿ

ಬಾತ್‌ರೂಮ್ ಅನ್ನು ಮನೆಯ ಉತ್ತರ ಅಥವಾ ವಾಯವ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡುವುದು ಒಳ್ಳೆಯದು. ದಕ್ಷಿಣ, ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡುವುದು ವಾಸ್ತು ಪ್ರಕಾರ ಸರಿಯಲ್ಲವೆಂದು ಹೇಳಲಾಗುತ್ತದೆ. ಸ್ನಾನಗೃಹವನ್ನು ಅಡುಗೆ ಮನೆಯ ಎದುರಿಗೆ ಅಥವಾ ಅದಕ್ಕೆ ಹೊಂದಿಕೊಂಡಂತೆ ನಿರ್ಮಿಸುವುದು ಒಳ್ಳೆಯದಲ್ಲ.

ಮನೆಯಲ್ಲಿ ಕೋಣೆಗೇ ಅಟ್ಯಾಚ್ ಆಗಿರುವ ಬಾತ್‌ರೂಮ್‌ನಿಂದ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಇದು ಪತಿ ಮತ್ತು ಪತ್ನಿಯ ಸಂಬಂಧದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ವಾಸ್ತು ಪ್ರಕಾರ ಮಲಗುವ ಸಂದರ್ಭದಲ್ಲಿ ಕಾಲನ್ನು ಬಾತ್‌ರೂಮ್ ಕಡೇ ಮಾಡಿ ಮಲಗಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ಪತಿ ಪತ್ನಿಯರ ನಡುವಿನ ಜಗಳ ಮತ್ತಷ್ಟು ಹೆಚ್ಚುತ್ತದೆ.

ಬಾತ್‌ರೂಮ್ ಬಾಗಿಲು ಹಾಕಿಡಬೇಕು

ಮಲಗುವ ಕೋಣೆಗೆ (ಬೆಡ್‌ರೂಮ್‌) ಹೊಂದಿಕೊಂಡಿರುವ ಬಾತ್‌ರೂಮ್‌ಗಳಿದ್ದಾಗ ಯಾವಾಗಲೂ ಅದರ ಬಾಗಿಲು ಹಾಕಿಯೇ ಇರಬೇಕು. ಬಾತ್‌ರೂಮ್ ಬಳಸಿದ ನಂತರ ಬಾಗಿಲು ಹಾಗೆಯೇ ತೆರೆದಿಟ್ಟುಕೊಂಡಿರಬಾರದು. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಅದರಲ್ಲೂ ಮುಖ್ಯವಾಗಿ ಮಲಗುವ ಸಂದರ್ಭದಲ್ಲಿ ಬಾತ್‌ರೂಮ್ ಬಾಗಿಲು ಹಾಕಿಡಬೇಕು. ಇಲ್ಲದೇ ಇದ್ದರೆ ದಾಂಪತ್ಯ ಜೀವನದಲ್ಲಿ ಮನಸ್ತಾಪಗಳು ಉಂಟಾಗುತ್ತವೆ. ಇದೇ ಮುಂದುವರಿದು ವಿಚ್ಛೇದನದ ವರೆಗೂ ಹೋಗುವ ಸಾಧ್ಯತೆ ಇರುತ್ತದೆ. ಜೊತೆ ಜೊತೆಗೆ ಮನೆಯಲ್ಲಿ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುತ್ತಾ ಬರುತ್ತದೆ.

ಯಾವುದೇ ಬಾತ್‌ರೂಮ್ ಆಗಿರಲಿ ಅದರ ಟಾಯ್ಲೆಟ್ ಸೀಟ್ ಅನ್ನು ಮುಚ್ಚಿಡಬೇಕು. ಇಲ್ಲದಿದ್ದರೆ ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ.

ದೋಷಕ್ಕೆ ಇಲ್ಲಿದೆ ಪರಿಹಾರ!

ಮನೆಯ ಮಲಗುವ ಕೋಣೆಗೆ (ಬೆಡ್‌ರೂಮ್‌) ಹೊಂದಿಕೊಂಡೇ ಇರುವ ಅಂದರೆ ಅಟ್ಯಾಚ್ ಬಾತ್‌ರೂಮ್ ಮುಖ್ಯವಾಗಿ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಸರಳ ಪರಿಹಾರವೆಂದರೆ ಗ್ಲಾಸ್ ಬಾಟಲಿಯಲ್ಲಿ ಸೈಂದಾ ಲವಣವನ್ನು ತುಂಬಬೇಕು. ಇದನ್ನು ಬಾತ್‌ರೂಮ್ ಒಳಗಡೆ ಇಡಬೇಕು. ಒಂದು ವಾರದವರೆಗೂ ಆ ಉಪ್ಪು ಹಾಗೇ ಇರುವಂತೆ ನೋಡಿಕೊಳ್ಳಬೇಕು. ಒಂದು ವಾರದ ನಂತರ ಆ ಬಾಟಲಿಯಲ್ಲಿರುವ ಉಪ್ಪನ್ನು ಚೆಲ್ಲಬೇಕು. ಮತ್ತೆ ಅದೇ ರೀತಿ ಬಾಟಲಿಯಲ್ಲಿ ಸೈಂದಾ ಉಪ್ಪನ್ನು ತುಂಬಿಡಬೇಕು. ಇದರಿಂದ ಬಾತ್‌ರೂಮ್‌ನಿಂದ ಉಂಟಾಗುವ ವಾಸ್ತು ದೋಷ ನಿವಾರಣೆಯಾಗುತ್ತದೆ.

ಇದನ್ನೂ ಓದಿ : Vastu Tips: ಈ ಅಭ್ಯಾಸಗಳು ದಾರಿದ್ರ್ಯಕ್ಕೆ ದಾರಿ, ಇವುಗಳಿಂದ ದೂರವಿರಿ!

Continue Reading

ಧಾರ್ಮಿಕ

Vastu Tips : ಹೊಸ ಮನೆ ಪ್ರವೇಶಿಸುವ ಮೊದಲು ಈ ವಿಷಯಗಳ ಬಗ್ಗೆ ಗಮನ ನೀಡಿ

ನೀವು ಕಟ್ಟಿಸಿದ, ಕೊಂಡ ಮನೆಯಿರಲಿ ಅಥವಾ ಬಾಡಿಗೆಯ ಮನೆಯಿರಲಿ ಒಟ್ಟಾರೆ ಹೊಸ ಮನೆಯ ಗೃಹ ಪ್ರವೇಶ ಮಾಡುವಾಗ ಗಮನಿಸಬೇಕಾದ ವಿಷಯಗಳನ್ನು (Vastu Tips) ಇಲ್ಲಿ ನೀಡಲಾಗಿದೆ.

VISTARANEWS.COM


on

Before entering into new house follow these vastu tips
Koo

ಮನೆಯ ವಾಸ್ತು (Vastu Tips) ಸರಿಯಾಗಿ ಇದ್ದಾಗ ಮಾತ್ರ ಮನೆಯ ಸದಸ್ಯರು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಹೊಸ ಮನೆಗೆ ಹೋಗುವಾಗ ವಾಸ್ತುವಿಗೆ ಸಂಬಂಧಿಸ ವಿಚಾರಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗುತ್ತದೆ.

ಸ್ವಂತ ಮನೆಯೇ ಆಗಲಿ ಅಥವಾ ಬಾಡಿಗೆ ಮನೆಯೇ ಆಗಲಿ ಹೋಗುವ ಮುನ್ನ ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಮನೆಯ ದಿಕ್ಕು, ಅಡುಗೆ ಕೋಣೆ, ನೀರು, ದೇವರ ಮನೆ ಹೀಗೆ ವಾಸ್ತು ಪ್ರಕಾರ ಎಲ್ಲವೂ ಸರಿಯಾಗಿದೆಯೇ ಅಥವಾ ಸರಿ ಇಲ್ಲದಿದ್ದರೆ ಅದಕ್ಕೆ ಪರಿಹಾರ ಇದೆಯೇ ಎಂಬ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.

ಮನೆಯ ಯಜಮಾನರ ರಾಶಿ, ನಕ್ಷತ್ರದ ಮೇಲೂ ಮನೆ ಆಗಿ ಬರುತ್ತದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗಾಗಿ ಹೊಸ ಮನೆಯ ಗೃಹ ಪ್ರವೇಶಕ್ಕೂ ಮೊದಲು ಅಥವಾ ಬಾಡಿಗೆ ಮನೆಗೆ ಹೋಗುವ ಮೊದಲು ತಿಳಿದುಕೊಳ್ಳ ಬೇಕಾದ ಕೆಲವು ಅಂಶಗಳು ಹೀಗಿವೆ;

ಶುಭ ಮುಹೂರ್ತ ನೋಡಿ

ಮನೆಯಲ್ಲಿ ನೆಮ್ಮದಿ, ಸದಸ್ಯರಲ್ಲಿ ಸಾಮರಸ್ಯ, ಸುಖ ಶಾಂತಿ ನೆಲೆಸಿರಬೇಕೆಂದರೆ ಮನೆಯ ವಾಸ್ತು ಸರಿಯಾಗಿರಬೇಕು. ಹಾಗಾಗಿ ಹೊಸ ಮನೆಗೆ ಹೋಗುವ ಮೊದಲು ವಾರ, ತಿಥಿ, ನಕ್ಷತ್ರ ಮತ್ತು ದಿನ ಚೆನ್ನಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಒಳ್ಳೆ ಮುಹೂರ್ತವನ್ನು ನೋಡಿಯೇ ಮನೆಗೆ ಪ್ರವೇಶಿಸಬೇಕು. ಮನೆಗೆ ಮೊದಲು ಕಾಲಿಡುವ ಘಳಿಗೆ ಉತ್ತಮವಾಗಿರಬೇಕು.

ಈ ಮಾಸಗಳು ಗೃಹ ಪ್ರವೇಶಕ್ಕೆ ಶುಭ

ಶಾಸ್ತ್ರದ ಪ್ರಕಾರ ಹೊಸ ಮನೆಗೆ ಹೋಗಲು ಕೆಲವು ಮಾಸಗಳು ಶುಭ ಮತ್ತು ಕೆಲವು ಮಾಸಗಳು ಅಶುಭವೆಂದು ಪರಿಗಣಿಸಲಾಗಿದೆ. ಹಾಗಾಗಿ ಆದಷ್ಟು ಗೃಹ ಪ್ರವೇಶಕ್ಕೆ ಯಾವ ಮಾಸಗಳು ಶುಭವೋ ಆ ಮಾಸಗಳಲ್ಲಿಯೇ ಹೊಸ ಮನೆ ಪ್ರವೇಶಿಸುವುದು ಒಳಿತು.

ಮಾಘ, ಫಾಲ್ಗುಣ, ವೈಶಾಖ ಮತ್ತು ಜ್ಯೇಷ್ಠ ಮಾಸಗಳು ಹೊಸ ಮನೆಯನ್ನು ಪ್ರವೇಶಿಸಲು ಉತ್ತಮ ಮಾಸಗಳೆಂದು ಹೇಳಲಾಗುತ್ತದೆ. ಅದೇ ಆಷಾಢ, ಶ್ರಾವಣ, ಭಾದ್ರಪದ, ಅಶ್ವಿನಿ ಮತ್ತು ಪುಷ್ಯ ಮಾಸಗಳು ಗೃಹ ಪ್ರವೇಶಕ್ಕೆ ಶುಭವಾದ ಮಾಸಗಳಲ್ಲ ಎಂದು ಹೇಳಲಾಗುತ್ತದೆ.

ಶುಭ ದಿನವನ್ನೇ ಆಯ್ಕೆ ಮಾಡಿಕೊಳ್ಳಿ

ಗೃಹ ಪ್ರವೇಶಕ್ಕೆ ಶುಭ ಮುಹೂರ್ತಗಳನ್ನು ನೋಡುವುದು ವಾಡಿಕೆ. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಬೇಗ ಹೊಸ ಮನೆ ಪ್ರವೇಶ ಮಾಡಬೇಕೆಂದಿದ್ದಾಗ ಶುಭವಾದ ವಾರ ಯಾವುದೆಂದು ತಿಳಿದು ಆ ದಿನಗಳಂದು ಹೊಸ ಮನೆಗೆ ಪ್ರವೇಶಿಸಬಹುದು.

ವಾರದ ಏಳು ದಿನಗಳಲ್ಲಿ ಮಂಗಳವಾರ ಗೃಹ ಪ್ರವೇಶಕ್ಕೆ ಯೋಗ್ಯವಲ್ಲವೆಂದು ಹೇಳುತ್ತಾರೆ. ವಿಶೇಷ ಪರಿಸ್ಥಿತಿಗಳಲ್ಲಿ ಭಾನುವಾರ ಮತ್ತು ಶನಿವಾರವನ್ನು ಸಹ ಗೃಹ ಪ್ರವೇಶಕ್ಕೆ ಉತ್ತಮವೆಂದು ಪರಿಗಣಿಸುತ್ತಾರೆ. ಇದನ್ನು ಹೊರತು ಪಡಿಸಿದರೆ ವಾರದ ಉಳಿದ ಎಲ್ಲ ದಿನಗಳು ಹೊಸ ಮನೆಯನ್ನು ಪ್ರವೇಶಿಸಲು ಯೋಗ್ಯವಾದ ದಿನಗಳಾಗಿವೆ.
ಅಮಾವಾಸ್ಯೆ ಮತ್ತು ಹುಣ್ಣಿಮೆಯನ್ನು ಹೊರತು ಪಡಿಸಿ, ಉಳಿದ 2, 3, 5 7, 10, 11, 12 ಮತ್ತು 13 ಈ ತಿಥಿಗಳು ಪ್ರವೇಶಕ್ಕೆ ಉತ್ತಮವೆಂದು ಹೇಳಲಾಗುತ್ತದೆ.

ಹೊಸ ಮನೆಗೆ ಹೋಗುವಾಗ ಈ ಐದು ವಸ್ತುಗಳಿರಲಿ

ಹೊಸ ಮನೆಗೆ ಅದು ನೀವು ಕಟ್ಟಿಸಿದ ಹೊಸ ಮನೆಯಾಗಿರಲಿ ಅಥವಾ ಬಾಡಿಗೆ ಮನೆಯಾಗಿರಲಿ, ಮಂಗಳ ಕಲಶದ ಜೊತೆಗೇ ಹೊಸ ಮನೆಯನ್ನು ಪ್ರವೇಶಿಸಬೇಕು. ಜೊತೆಗೆ ಐದು ಬಗೆಯ ಮಂಗಳ ವಸ್ತುಗಳಾದ ತೆಂಗಿನಕಾಯಿ, ಅರಿಶಿಣ, ಬೆಲ್ಲ, ಅಕ್ಕಿ ಮತ್ತು ಹಾಲನ್ನು ತೆಗೆದುಕೊಳ್ಳಬೇಕು. ಮನೆಯನ್ನು ತೋರಣ ಮತ್ತು ರಂಗವಲ್ಲಿಯಿಂದ ಅಲಂಕರಿಸಬೇಕು.

ಜತೆಯಲ್ಲಿ ದೇವರ ಫೋಟೊ ಕೂಡ ಇರಲಿ. ವಿಘ್ನ ನಿವಾರಕ ಗಣೇಶನ ಮೂರ್ತಿಯನ್ನು ಹೊಸ ಮನೆಗೆ ತೆಗೆದುಕೊಂಡು ಹೋಗಬೇಕು. ಜೊತೆಗೆ ದಕ್ಷಿಣಾವರ್ತಿ ಶಂಖ ಮತ್ತು ಶ್ರೀ ಯಂತ್ರವನ್ನು ಸಹ ತೆಗೆದುಕೊಂಡು ಹೋಗಬಹುದಾಗಿದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಮನೆಯ ಯಜಮಾನ ಮೊದಲು ಬಲಗಾಲಿಟ್ಟು ಪ್ರವೇಶಿಸಿದ ನಂತರ ಆತನ ಪತ್ನಿಯು ಮನೆಯನ್ನು ಪ್ರವೇಶಿಸಬೇಕು. ತೆಗೆದುಕೊಂಡು ಬಂದ ಗಣೇಶನ ಮೂರ್ತಿಯನ್ನು ಈಶಾನ್ಯ ಮೂಲೆಯಲ್ಲಿ ಅಥವಾ ದೇವರ ಮನೆಯಲ್ಲಿ ಇಡಬೇಕು. ಅದರ ಜೊತೆಗೇ ಕಲಶವನ್ನು ಸಹ ಇಡಬೇಕು. ದೇವರ ಪೂಜೆಯಾದ ಬಳಿಕ ಅಡುಗೆ ಮಾಡುವ ಸ್ಟಾವ್‌ಗೆ ಪೂಜೆ ಸಲ್ಲಿಸಿ ಹಾಲು ಉಕ್ಕಿಸಬೇಕು.

ಇದನ್ನೂ ಓದಿ : Vastu Tips : ಮನೆಯ ಈ ದಿಕ್ಕಿಗೆ ಕಿಟಕಿ ಇದ್ದರೆ ಆರ್ಥಿಕ ಲಾಭ, ಸಮೃದ್ಧಿ!

Continue Reading

ಧಾರ್ಮಿಕ

Vastu Tips : ಕಚೇರಿಯ ವಾಸ್ತು ಹೀಗಿದ್ದರೆ ಯಶಸ್ಸು ಖಚಿತವಂತೆ!

ವ್ಯವಹಾರದಲ್ಲಿ, ವೃತ್ತಿ ಜೀವನದಲ್ಲಿ ಯಶಸ್ಸಿಗೆ ಕಚೇರಿಯ ವಾಸ್ತು ಬಹಳ ಮುಖ್ಯ. ಹಾಗಾಗಿ ಕಚೇರಿ ನಿರ್ಮಾಣದ ವೇಳೆ ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿರುವುದು ಅಗತ್ಯ. ಈ ಕುರಿತು ತಜ್ಞರು ನೀಡಿದ ಕೆಲವು ಸಲಹೆಗಳು (Vastu Tips) ಇಲ್ಲಿವೆ.

VISTARANEWS.COM


on

Vastu Tips Office Vastu Directions and useful tips to bring prosperity at work
Koo

ವಾಸ್ತು ಶಾಸ್ತ್ರ ಕೇವಲ ಮನೆಗಷ್ಟೇ ಸೀಮಿತವಲ್ಲ. ನೀವು ಕೆಲಸ ಮಾಡುವ ಕಚೇರಿ, ಓದುವ ಶಾಲೆ- ಕಾಲೇಜು, ವ್ಯಾಪಾರದ ಸ್ಥಳ ಹೀಗೆ ಎಲ್ಲ ಕಡೆಗಳಲ್ಲೂ ಈ ಶಾಸ್ತ್ರಕ್ಕೆ ಮಹತ್ವವಿದೆ. ನೀವಿರುವ ಕಡೆ ವಾಸ್ತು ಸರಿಯಾಗಿದ್ದರಷ್ಟೇ, ನಿಮ್ಮ ಕೆಲಸಗಳಲ್ಲಿ ಯಶಸ್ಸು ಸಾಧಿಸಬಹುದು (Vastu Tips), ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಮನೆಯಲ್ಲಿ ತೊಂದರೆ ತಾಪತ್ರಯಗಳಾದಾಗ ತಕ್ಷಣವೇ ಜ್ಯೋತಿಷ್ಯ ಅಥವಾ ವಾಸ್ತು ತಜ್ಞರನ್ನು ಸಂಪರ್ಕಿಸುತ್ತೇವೆ. ಹಾಗೆಯೇ ವ್ಯವಹಾರಗಳಲ್ಲಿ, ವ್ಯಾಪಾರದಲ್ಲಿ ತೊಂದರೆಗಳಾದರೆ, ಕಚೇರಿಯಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರೆ ಅದಕ್ಕೆ ವಾಸ್ತು ದೋಷವು ಕಾರಣವಾಗಿರಬಹುದು. ಹಾಗಾಗಿ ಕಚೇರಿ ನಿರ್ಮಾಣದ ವೇಳೆ ವಾಸ್ತು ಪ್ರಕಾರ ನಿರ್ಮಾಣ ಮಾಡಿದರೆ ಉತ್ತಮ.

ಕಚೇರಿಯ ವಾಸ್ತು ಬಗ್ಗೆ ತಿಳಿದುಕೊಂಡಲ್ಲಿ ನಿಮ್ಮ ಕಚೇರಿಯನ್ನು ಅದಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು ಅಥವಾ ಮರು ನಿರ್ಮಿಸಬಹುದು. ಕಚೇರಿಗೆ ಸಂಬಂಧಿಸಿದ ವಾಸ್ತುವಿನ ಕುರಿತು ವಾಸ್ತು ತಜ್ಞರು ಏನು ಹೇಳುತ್ತಾರೆ ನೋಡೋಣ;

ಕಚೇರಿ ಮುಖ್ಯದ್ವಾರ ಯಾವ ದಿಕ್ಕಿನಲ್ಲಿರಬೇಕು?

ವಾಸ್ತು ಶಾಸ್ತ್ರದ ಅನುಸಾರ ಕಚೇರಿಯ ಮುಖ್ಯ ದ್ವಾರ ಪೂರ್ವ ಅಥವಾ ಉತ್ತರ ದಿಕ್ಕಿಗಿದ್ದರೆ ಉತ್ತಮ. ಜೊತೆಗೆ ಕಚೇರಿಯಲ್ಲಿ ಹಣಕಾಸಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವವರು ಆದಷ್ಟು ಉತ್ತರ ದಿಕ್ಕಿಗೆ ಕುಳಿತುಕೊಂಡರೆ ಉತ್ತಮ. ಉತ್ತರ ದಿಕ್ಕಿಗೆ ಸಂಪತ್ತಿನ ಒಡೆಯ ಕುಬೇರ ದೇವರ ಕೃಪೆ ಇರುತ್ತದೆ.

ಕಚೇರಿಯಲ್ಲಿ ಮುಖ್ಯಸ್ಥರು ಕುಳಿತುಕೊಳ್ಳುವ ಸ್ಥಳದ ಹಿಂದೆ ಕಿಟಕಿ ಇರುವುದು ಒಳ್ಳೆಯದಲ್ಲ. ಗೋಡೆಯಷ್ಟೆ ಇದ್ದು ಎದುರಿಗೆ ಕಿಟಕಿ ಇದ್ದರೆ ಉತ್ತಮ. ಗೋಡೆಗೆ ಹಸಿರಿನಿಂದ ಕಂಗೊಳಿಸುವ ಪೇಂಟಿಂಗ್‌ಗಳನ್ನು ಹಾಕಿಕೊಳ್ಳಬಹುದಾಗಿದೆ.
ಕಂಪ್ಯೂಟರ್ ಈ ದಿಕ್ಕಿನಲ್ಲಿರಲಿ.

ಕಚೇರಿಯಲ್ಲಿ ಕಂಪ್ಯೂಟರ್ ಮತ್ತು ಇತರೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು. ಇದು ಅಗ್ನಿದೇವನ ದಿಕ್ಕಾಗಿರುವುದರಿಂದ ಈ ವಸ್ತುಗಳಿಗೆ ಅಗ್ನಿ ಮೂಲೆ ಸೂಕ್ತವಾಗಿರುತ್ತದೆ.

ವೇಯಿಂಟ್ ಅಥವಾ ಮೀಟಿಂಗ್ ರೂಮ್ ಇದ್ದಲ್ಲಿ ಅದನ್ನು ವಾಯುವ್ಯ ದಿಕ್ಕಿಗೆ ಮಾಡಿದರೆ ಉತ್ತಮ. ವಾಸ್ತು ಪ್ರಕಾರ ವಾಯುವ್ಯ ದಿಕ್ಕು ಶುಭವೆಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಒಂದು ಟೇಬಲ್‌ನಲ್ಲಿ ಒಬ್ಬ ಅಧಿಕಾರಿ ಮಾತ್ರ ಕುಳಿತುಕೊಳ್ಳಬೇಕು. ಒಂದಕ್ಕಿಂತ ಹೆಚ್ಚು ಜನರು ಕುಳಿತುಕೊಂಡಲ್ಲಿ ಕೆಲಸದ ಒತ್ತಡ ಹೆಚ್ಚುತ್ತದೆ.

Office Vastu Directions and useful tips to bring prosperity at work

ಕಚೇರಿಯಲ್ಲಿ ಕುಳಿತುಕೊಳ್ಳುವವರು ಮುಖ್ಯ ದ್ವಾರಕ್ಕೆ ಬೆನ್ನು ಹಾಕಿ ಕುಳಿತುಕೊಳ್ಳುವುದು ಅಶುಭ.

ಕಚೇರಿಯ ಅಡುಗೆ ಮನೆ ಅಥವಾ ಕ್ಯಾಂಟೀನ್ ಆಗ್ನೇಯ ದಿಕ್ಕಿಗಿದ್ದರೆ ಶುಭ.

ಕಚೇರಿಯ ಬಾತ್‌ರೂಮ್ ಈಶಾನ್ಯ ಮೂಲೆಯಲ್ಲಿ ಇರುವುದು ಒಳ್ಳೆಯದಲ್ಲ. ವಾಸ್ತುವಿನಲ್ಲಿ ಈ ದಿಕ್ಕನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.

ಕಚೇರಿಯ ಗೋಡೆ, ಕರ್ಟನ್, ಟೇಬಲ್‌ಗಳು ತಿಳಿ ಬಣ್ಣದ್ದಾಗಿದ್ದರೆ ಉತ್ತಮ.

ಕಚೇರಿಯಲ್ಲಿ ಹಿಂಸೆಯನ್ನು ಬಿಂಬಿಸುವ ಪಶು-ಪಕ್ಷಿಗಳು, ಅಳುತ್ತಿರುವ ದೃಶ್ಯ, ಮುಳುಗುತ್ತಿರುವ ಹಡಗು ಇತ್ಯಾದಿ ಪೇಂಟಿಂಗ್‌ಗಳನ್ನು ಇಟ್ಟುಕೊಳ್ಳಬಾರದು. ಇದರಿಂದ ಕಚೇರಿಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ.

ನಗುತ್ತಿರುವ ಮಗು, ಮಹಾ ಪುರುಷರ ಚಿತ್ರಗಳು, ಹರಿಯುತ್ತಿರುವ ನೀರು ಇತ್ಯಾದಿ ಪೇಂಟಿಂಗ್‌ಗಳನ್ನು ಇಟ್ಟುಕೊಳ್ಳುವುದು ಶುಭ. ಇದರಿಂದ ಕಚೇರಿಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ.

ಕಚೇರಿಯಲ್ಲಿ ಕೆಲಸಕ್ಕೆ ಉಪಯೋಗವಾಗುವ ಫ್ಯಾಕ್ಸ್, ಕಂಪ್ಯೂಟರ್, ಗಡಿಯಾರ, ಸ್ಕ್ಯಾನರ್, ಪ್ರಿಂಟರ್ ಇತ್ಯಾದಿ ಉಪಕರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಕಚೇರಿಯ ಸ್ವಚ್ಛತೆಯು ಮುಖ್ಯ

ಕಚೇರಿಯು ಸ್ವಚ್ಛವಾಗಿದ್ದರೆ ಪಾಸಿಟಿವ್ ಎನರ್ಜಿ ಇರುತ್ತದೆ. ಇದರಿಂದ ಕೆಲಸದಲ್ಲಿ ಆಸಕ್ತಿ ಹೆಚ್ಚುತ್ತದೆ. ಕಚೇರಿಯ ಟೇಬಲ್ ಅಥವಾ ಕಬೋರ್ಡ್‌ಗಳಲ್ಲಿ ಅಗತ್ಯವಿರುವ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ಅದನ್ನು ಕೂಡಾ ಸ್ವಚ್ಛವಾಗಿಟ್ಟುಕೊಳ್ಳಬೇಕು.

ಕಚೇರಿಯ ಗಡಿಯಾರ ಸದಾ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು. ಇದು ಸಕಾರಾತ್ಮಕತೆಯ ಸ್ಥಾನವಾದ್ದರಿಂದ ಸಮಯವನ್ನು ತೋರಿಸುವ ಗಡಿಯಾರ ಇದೇ ದಿಕ್ಕಿನಲ್ಲಿರಬೇಕು. ಕಚೇರಿಯ ಈಶಾನ್ಯ ಕೋಣೆಯಲ್ಲಿ ದೇವರ ಮೂರ್ತಿಗಳನ್ನು ಇಟ್ಟುಕೊಳ್ಳಬಹುದು.

ಇದನ್ನೂ ಓದಿ : Vastu Tips : ಆರ್ಥಿಕ ಲಾಭ ಪಡೆಯಲು ಮನೆಯ ಉತ್ತರ ದಿಕ್ಕಿನಲ್ಲಿ ಹೀಗೆ ಮಾಡಿ!

Continue Reading

ಧಾರ್ಮಿಕ

Vastu Tips | ಹಣಕಾಸಿನ ತೊಂದರೆಯೇ?; ಇವುಗಳಿಂದ ಪಾರಾಗಲು ಮನೆಯಲ್ಲಿ ಈ ವಾಸ್ತು ನಿಯಮ ಪಾಲಿಸಿ

ಸಂಪಾದನೆ ಮಾಡಿದ ಹಣ ಕೈಗೆ ಬರುತ್ತಿದ್ದಂತೆಯೇ ಖರ್ಚಾಗುತ್ತಿದೆಯೇ, ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲವೇ? ಇದಕ್ಕೆ ವಾಸ್ತು ಶಾಸ್ತ್ರದಲ್ಲಿ (Vastu Tips ) ಪರಿಹಾರವಿದೆ. ಹಾಗಾದರೆ ಆ ವಾಸ್ತು ಉಪಾಯಗಳು ಯಾವುವು ತಿಳಿಯೋಣ.

VISTARANEWS.COM


on

Vastu Tips
Koo

ನಾವು ಪಡುವ ಶ್ರಮಕ್ಕೆ ತಕ್ಕ ಫಲ ಸಿಗಬೇಕೆಂದು ಎಲ್ಲರೂ ಬಯಸುತ್ತಾರೆ. ಎಷ್ಟೇ ದುಡಿದರೂ ಕೆಲವೊಮ್ಮೆ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ. ಸಂಪಾದನೆ ಚೆನ್ನಾಗಿಯೇ ಇದ್ದರೂ, ಗಳಿಸಿದ ಹಣ ಯಾವುದೋ ಕಾರಣಕ್ಕೆ ಖರ್ಚಾಗಿ ಹೋಗಿರುತ್ತದೆ. ಈ ರೀತಿಯ ಆರ್ಥಿಕ ತೊಂದರೆಗೆ ವಾಸ್ತು ದೋಷ ಸಹ ಕಾರಣವಾಗಿರಬಹುದು.

ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ವಾಸ್ತುವಿಗೆ ಸಂಬಂಧಿಸಿದ ಕೆಲವು ದೋಷಗಳು ಅಥವಾ ವಸ್ತುಗಳಿಂದ ಹಣದ ತೊಂದರೆ ಉಂಟಾಗುತ್ತದೆ. ಈ ರೀತಿಯ ವಾಸ್ತು ಸಮಸ್ಯೆ ಇದ್ದಾಗ ಹಣ ಉಳಿಸುವುದು ಕನಸಿನ ಮಾತಾಗುತ್ತದೆ. ಹಾಗಾಗಿ ಮನೆಯಲ್ಲಿ ಧನಲಕ್ಷ್ಮೀಯು ಸದಾ ನೆಲೆಸಿರುವಂತೆ ಮಾಡಲು ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಕೆಲ ಸರಳ ಪರಿಹಾರದ (Vastu Tips) ಬಗ್ಗೆ ತಿಳಿಯೋಣ.

ನೈಋತ್ಯ ದಿಕ್ಕು ಕುಬೇರ ಸ್ಥಾನ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನೈಋತ್ಯ ಭಾಗವನ್ನು ಕುಬೇರನ ಸ್ಥಾನವೆಂದು ಹೇಳಲಾಗುತ್ತದೆ. ಈ ಭಾಗದಲ್ಲಿ ಹಣ ಇರಿಸುವ ಲಾಕರ್‌ಗಳನ್ನು ಇಡಬಹುದು. ಇದು ಸಾಧ್ಯವಾಗದೇ ಇದ್ದರೆ ದಕ್ಷಿಣದ ಗೋಡೆಯಲ್ಲಿ ಉತ್ತರಕ್ಕೆ ಎದುರಾಗಿ ಲಾಕರ್ ಅನ್ನು ಇರಿಸುವುದು ಸಹ ಅದೃಷ್ಟವನ್ನು ತರುತ್ತದೆ. ಲಾಕರ್‌ನ ಬಾಗಿಲು ಉತ್ತರಕ್ಕೆ ತೆರೆಯಬೇಕು, ಇದು ವಾಸ್ತು ಪ್ರಕಾರ ಕುಬೇರನ (ಸಂಪತ್ತಿನ ದೇವರು) ದಿಕ್ಕು. ಹಣವನ್ನು ತಿಜೋರಿಯ ಮಧ್ಯ ಭಾಗದಲ್ಲಿ ಅಥವಾ ಮೇಲಿನ ಭಾಗದಲ್ಲಿ ಇಡಬೇಕೆಂದು ಮತ್ತು ತಿಜೋರಿಯ ಕೆಳಭಾಗದಲ್ಲಿ ಹಣ ಇಡಬಾರದೆಂದು ಶಾಸ್ತ್ರ ಹೇಳುತ್ತದೆ.

ಈ ವಸ್ತುಗಳನ್ನು ತಿಜೋರಿಯಲ್ಲಿಡಿ
ವಾಸ್ತು ಶಾಸ್ತ್ರದ ಪ್ರಕಾರ ತಿಜೋರಿಯಲ್ಲಿ ಶುಭವನ್ನು ನೀಡುವಂತಹ ಯಂತ್ರಗಳಾದ ವೃದ್ಧಿ ಯಂತ್ರ, ಮಹಾಲಕ್ಷ್ಮೀ ಯಂತ್ರ ಇತ್ಯಾದಿ ಲಕ್ಷ್ಮೀಗೆ ಸಂಬಂಧಿಸಿದ ಯಂತ್ರಗಳನ್ನು ಇಡಬೇಕೆಂದು, ಇದರಿಂದ ಖಜಾನೆ ಬರಿದಾಗುವುದಿಲ್ಲ ವೆಂದು ಶಾಸ್ತ್ರ ಹೇಳುತ್ತದೆ.

ಮಹಾಲಕ್ಷ್ಮೀ ಮತ್ತು ಕುಬೇರ ಮೂರ್ತಿ
ಹಣ ಮನೆಗೆ ಬರುತ್ತಿದ್ದಂತೆಯೇ ಖಾಲಿಯಾಗುತ್ತಿದೆ ಎಂದಾದರೆ, ಇಲ್ಲವೇ ಎಷ್ಟೇ ಪ್ರಯತ್ನಿಸಿದರೂ ಹಣ ಉಳಿತಾಯ ಮಾಡಲು ಆಗುತ್ತಿಲ್ಲವೆಂದಾದರೆ, ಮನೆಯ ದೇವರ ಕೋಣೆಯಲ್ಲಿ ಸಂಪತ್ತಿನ ಅಧಿ ದೇವತೆಯಾಗಿರುವ ಲಕ್ಷ್ಮೀಯನ್ನು ಮತ್ತು ಸಂಪತ್ತಿಗೆ ಒಡೆಯನಾಗಿರುವ ಕುಬೇರ ದೇವರ ಪ್ರತಿಮೆಯನ್ನು ಇಡಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಜೊತೆಗೆ ಅದಕ್ಕೆ ಪ್ರತಿನಿತ್ಯ ಪೂಜೆ ಮಾಡಬೇಕು. ಇದರಿಂದ ಆರ್ಥಿಕ ಲಾಭ ಉಂಟಾಗುತ್ತದೆ.

ಪಾತ್ರೆ ತೊಳೆಯದೇ ಇಡುವುದು ಅಶುಭ
ಮನೆಯಲ್ಲಿ ರಾತ್ರಿ ಸಮಯದಲ್ಲಿ ಊಟ ಮಾಡಿದ ತಟ್ಟೆ, ಅಡುಗೆ ಮಾಡಿದ ಪಾತ್ರೆಗಳನ್ನು ತೊಳೆಯದೇ ಹಾಗೇಯೇ ಬಿಟ್ಟು ಮಲಗುವುದು ಅಶುಭವೆಂದು ಶಾಸ್ತ್ರ ಹೇಳುತ್ತದೆ. ಎಂಜಲು ಪಾತ್ರೆಗಳನ್ನು ತಕ್ಷಣಕ್ಕೆ ತೊಳೆದಿಡುವುದು ಶುಭ ಮತ್ತು ಇದರಿಂದ ವಾಸ್ತು ದೋಷ ಉಂಟಾಗುವುದಿಲ್ಲ. ಎಂಜಲು ಪಾತ್ರೆಗಳನ್ನು ಹಾಗೇಯೇ ಬಿಟ್ಟು ಮಲಗಿದರೆ ಅಂಥ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ, ಹಾಗಾಗಿ ಪಾತ್ರೆಗಳನ್ನು ಶುಚಿಗೊಳಿಸಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ನೆಮ್ಮದಿ ಮತ್ತು ಸಂಪತ್ತು ನೆಲೆಸುತ್ತದೆ.

ಮನೆ ಸ್ವಚ್ಛವಾಗಿರಲಿ
ಸ್ವಚ್ಛತೆ ಇದ್ದರೆ ಮಾತ್ರ ಲಕ್ಷ್ಮೀ ವಾಸ ಮಾಡುತ್ತಾಳೆ. ಎಲ್ಲಿ ಕೊಳಕು, ಕೆಟ್ಟದ್ದು ಇರುತ್ತದೆಯೋ ಅಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಹಾಗಾಗಿ ಮನೆಯನ್ನು ಯಾವಾಗಲೂ ಶುಚಿಯಾಗಿಟ್ಟುಕೊಂಡಿರಬೇಕು. ಮನೆಯ ಈಶಾನ್ಯ ಭಾಗದಲ್ಲಿ ಯಾವುದೇ ಕಸ ಮತ್ತು ಬೇಡದ ವಸ್ತುಗಳನ್ನು ಇಡಬಾರದು. ಇದು ದೇವರ ಕೋಣೆಯ ಸ್ಥಾನವೆಂದು ಹೇಳಲಾಗುತ್ತದೆ.

ದಕ್ಷಿಣಾವರ್ತಿ ಶಂಖ ಮನೆಯಲ್ಲಿರಲಿ
ಹಣಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತಿದ್ದರೆ, ದೇವರ ಕೋಣೆಯಲ್ಲಿ ದಕ್ಷಿಣಾವರ್ತಿ ಶಂಖವನ್ನು ಇಟ್ಟುಕೊಳ್ಳಬೇಕು. ಅಷ್ಟೇ ಅಲ್ಲದೆ ಅದಕ್ಕೆ ಪೂಜೆಯನ್ನು ಮಾಡಿ ಅದನ್ನು ಊದಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಹಾಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.

ಒಣಗಿದ ಹೂವು ತೆಗೆಯಿರಿ
ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆಯಲ್ಲಿ ಒಣಗಿದ ಹೂವು ಅಥವಾ ಹೂವಿನ ಮಾಲೆಯನ್ನು ಇಡಬಾರದು. ಒಣಗಿದ ಅಥವಾ ಕೊಳೆತ ಹೂಗಳನ್ನು ಆ ಕೂಡಲೇ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಅವುಗಳನ್ನು ಹಾಗೆಯೇ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ದಾರಿದ್ರ್ಯ ಬರುತ್ತದೆ.

ಚಪ್ಪಲಿಯನ್ನು ಸರಿಯಾಗಿಡಿ
ಮನೆಯ ಮುಂಬಾಗಿಲಿನಲ್ಲಿ ಚಪ್ಪಲಿಗಳನ್ನು ಅಡ್ಡಾದಿಡ್ಡಿಯಾಗಿ ಬಿಡುವುದು, ಮನೆಯವರ ಚಪ್ಪಲಿಗಳ ರಾಶಿ ಹಾಕುವುದು ಕೂಡ ದಾರಿದ್ರ್ಯಕ್ಕೆ ಕಾರಣವಾಗಬಹುದು. ಹೀಗಾಗಿನ ಮನೆಯ ಮುಂಭಾಗದಲ್ಲಿ ಚಪ್ಪಲಿಗಳನ್ನು ಸರಿಯಾ ದ ರೀತಿಯಲ್ಲಿ ಜೋಡಿಸಿಡುವುದು ಕೂಡ ಅವಶ್ಯಕ.

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Continue Reading
Advertisement
Tumkur Lok Sabha constituency BJP candidate Somanna election campaign in various places of Koratagare
ತುಮಕೂರು3 mins ago

Lok Sabha Election 2024: ಕೇಂದ್ರಿಯ ವಿದ್ಯಾಲಯ ಸ್ಥಾಪನೆಗೆ ನನ್ನನ್ನು ಬೆಂಬಲಿಸಿ: ವಿ. ಸೋಮಣ್ಣ

Lok Sabha Election 2024
Lok Sabha Election 20246 mins ago

Lok Sabha Election 2024: ಹಕ್ಕು ಚಲಾಯಿಸಿ ಮಾದರಿಯಾದ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಆಮ್ಗೆ

Yuva Movie streaming ott yuva rajkumar
ಸ್ಯಾಂಡಲ್ ವುಡ್7 mins ago

Yuva Movie: ಒಟಿಟಿಗೆ ಬಂದಾಯ್ತು ʻಯುವʼ: ಸಿನಿಮಾ ನೋಡಬಹುದು, ಆದರೆ….

IPL 2024
ಕ್ರೀಡೆ22 mins ago

MS Dhoni: ಧೋನಿ ಅಭಿಮಾನಿಗಳಿಗೆ ನಿರಾಸೆ; ಇಂದಿನ ಪಂದ್ಯಕ್ಕೆ ಅನುಮಾನ

evm vvpat verification lok sbha election 2024
Lok Sabha Election 202428 mins ago

ವಿಸ್ತಾರ explainer: VVPAT Verification: ಇವಿಎಂನಲ್ಲಿ ನಿಮ್ಮ ಮತ ದಾಖಲಾಗುವುದು ಹೇಗೆ? ವಿವಿಪ್ಯಾಟ್‌ ಕೆಲಸ ಏನು? ಇಲ್ಲಿದೆ ಸಮಗ್ರ ವಿವರ

Neha Murder case JDS slams hands for defending love jihad to protect accused
ಕರ್ನಾಟಕ29 mins ago

Neha Murder Case: ಲವ್ ಜಿಹಾದ್ ಸಮರ್ಥಿಸಿಕೊಂಡಿದ್ದ ಕೈಗಳಿಂದಲೇ ಆರೋಪಿ ರಕ್ಷಣೆಗೆ ಹೊಂಚು: ಜೆಡಿಎಸ್‌ ಕಿಡಿ

Pro Pak Slogan
ಕರ್ನಾಟಕ31 mins ago

Pro Pak Slogan: ಮೋದಿ ಹಾಡು ಬರೆದಿದ್ದಕ್ಕೆ ಯುವಕನಿಗೆ ಥಳಿತ; ಪಾಕ್‌ ಪರ ಘೋಷಣೆ ಕೂಗಲು ಒತ್ತಾಯ

lok sabha Election
ದೇಶ33 mins ago

Lok Sabha Election : ಮಣಿಪುರದ ಮತಗಟ್ಟೆಯಲ್ಲಿ ಗುಂಡಿನ ಚಕಮಕಿ; ಇಲ್ಲಿದೆ ವಿಡಿಯೊ

Neha Murder Case
ಹುಬ್ಬಳ್ಳಿ1 hour ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Neha Murder case Niranjan urges Joshi to guarantee the lives of Hindu girls
ಕ್ರೈಂ1 hour ago

Neha Murder Case: ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ ಸರ್: ಜೋಶಿಗೆ ನೇಹಾ ತಂದೆ ನಿರಂಜನ್ ಮನವಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ1 hour ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ12 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌