R Ashwin | ಕ್ರಿಕೆಟ್ ಕ್ಷೇತ್ರದಲ್ಲಿ ಸ್ಟಾರ್ ಗಿರಿ ದೊರಕದಿದ್ದರೂ ಸ್ಟಾರ್​ಗಳ ಸ್ಟಾರ್ ಈ ಅಶ್Win - Vistara News

ಕ್ರಿಕೆಟ್

R Ashwin | ಕ್ರಿಕೆಟ್ ಕ್ಷೇತ್ರದಲ್ಲಿ ಸ್ಟಾರ್ ಗಿರಿ ದೊರಕದಿದ್ದರೂ ಸ್ಟಾರ್​ಗಳ ಸ್ಟಾರ್ ಈ ಅಶ್Win

VISTARANEWS.COM


on

R ashwin
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಿತ್ಯಾನಂದ ವಿವೇಕವಂಶಿ

ಬಾಂಗ್ಲಾದೇಶದ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಭಾರತದ ಗೆಲುವಿಗೆ ಕಾರಣಕರ್ತರಾದ ಆರ್ ಅಶ್ವಿನ್ ಎಲೆ ಮರೆ ಕಾಯಿಯಂತೆ ಇದ್ದುಕೊಂಡು ಮಾಡಿರುವ ಸಾಧನೆ ಅಮೋಘ. ಆದರೆ ಕೊಹ್ಲಿ, ಧೋನಿ ಇವರಿಗೆ ಸಿಕ್ಕ ಸ್ಟಾರ್ ವ್ಯಾಲ್ಯೂ ಅಶ್ವಿನ್ ಗೆ ಸಿಗದಿದ್ದುದು ಆಶ್ಚರ್ಯ. ಬನ್ನಿ ಅಶ್ವಿನ್ ಮಾಡಿರುವ ಸಾಧನೆಯನ್ನು ಗಮನಿಸೋಣ.

ಟೆಸ್ಟ್ ನಲ್ಲಿ 3,000 ರನ್ ಗಳು ಮತ್ತು 400 ವಿಕೆಟ್ ಗಳಿಸಿರುವ ಭಾರತದ ಇಬ್ಬರೇ ಆಲ್ ರೌಂಡರ್​ಗಳಲ್ಲಿ ಆಶ್ವಿನ್ ಒಬ್ಬರು. ಇನ್ನೊಬ್ಬರು ಕಪಿಲ್ ದೇವ್ (131 ಟೆಸ್ಟ್). ಪ್ರಪಂಚದಲ್ಲಿ ಈ ಸಾಧನೆ ಮಾಡಿರುವವ ಇನ್ನೂ ಮೂವರೆಂದರೆ ಶಾನ್ ಪೊಲಾಕ್(108 ಟೆಸ್ಟ್), ಸ್ಟುವರ್ಟ್ ಬ್ರಾಡ್ (159 ಟೆಸ್ಟ್), ಶೇನ್ ವಾರ್ನ್(145 ಟೆಸ್ಟ್), ರಿಚರ್ಡ್ ಹ್ಯಾಡ್ಲಿ (86 ಟೆಸ್ಟ್). ಆದರೆ ಇಷ್ಟು ಸಾಧನೆ ಮಾಡಲು ಅಶ್ವಿನ್ ತೆಗೆದುಕೊಂಡಿರುವುದು ಕೇವಲ 88 ಟೆಸ್ಟ್. ಅಂದರೆ ಆಶ್ವಿನ್ ಎಂತಹ ಪ್ರತಿಭಾನ್ವಿತ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಟೆಸ್ಟ್​​ನಲ್ಲಿ 449 ವಿಕೆಟ್​ ಗಳಿಸಿರುವ ಅಶ್ವಿನ್ ಇನ್ನೊಂದು ವಿಕೆಟ್ ತೆಗೆದ ತಕ್ಷಣ ಟೆಸ್ಟ್ ಕ್ರಿಕೆಟ್​ನಲ್ಲಿ 450 ವಿಕೆಟ್​ಗಳ ಸರದಾರನಾಗುತ್ತಾರೆ. ಆಗ ಟೆಸ್ಟ್ ಕ್ರಿಕೆಟ್​ನಲ್ಲಿ 450 ವಿಕೆಟ್ ಮತ್ತು 3,000 ರನ್ ಗಳಿಸಿದ ವಿಶ್ವದ ಮೂರೇ ಆಟಗಾರರಲ್ಲಿ ಒಬ್ಬರಾಗುತ್ತಾರೆ. ಈ ಸಾಧನೆ ಮಾಡಿದ ಏಕೈಕ ಭಾರತೀಯನಾಗುತ್ತಾರೆ. ಅಶ್ವಿನ್ ಬಿಟ್ಟರೆ ಈ ಸಾಧನೆ ಮಾಡಿರುವ ಇನ್ನಿಬ್ಬರು ಶೇನ್ ವಾರ್ನ್ ಮತ್ತು ಸ್ಟುವರ್ಟ್ ಬ್ರಾಡ್ ಮಾತ್ರ.

ಅತಿ ಹೆಚ್ಚು ಬಾರಿ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಸೆಂಚುರಿ ಮತ್ತು ಐದು ವಿಕೆಟ್ ಪಡೆದಿರುವವರಲ್ಲಿ ಎರಡನೇ ಸ್ಥಾನದಲ್ಲಿರುವವರು ಆಲ್ ರೌಂಡರ್ ಅಶ್ವಿನ್‌ (ಒಟ್ಟು 3 ಬಾರಿ). ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್​ನ ಇಯಾನ್ ಬಾಥಮ್ 5 ಬಾರಿ ಈ ಸಾಧನೆ ಮಾಡಿದ್ದಾರೆ. ಭಾರತದ ಪರವಾಗಿ ಈ ಸಾಧನೆ ಮಾಡಿರುವ ಇತರರೆಂದರೆ ಎಮ್​ ಎಚ್​ ಮಂಕಂಡ್ (1 ಬಾರಿ), ಉಮ್ರಿಗರ್ (1 ಬಾರಿ) ರವೀಂದ್ರ ಜಡೇಜಾ (1ಬಾರಿ).

ಪ್ರಪಂಚದ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಎರಡನೇ ಆಟಗಾರ ಆರ್ ಅಶ್ವಿನ್. (ಒಟ್ಟು 9 ಬಾರಿ) ಇದಕ್ಕಾಗಿ ಅವರು ಕೇವಲ 88 ಟೆಸ್ಟ್ ಮತ್ತು 36 ಸರಣಿಗಳಲ್ಲಿ ಆಡಿದ್ದಾರೆ. ಮೊದಲ ಸ್ಥಾನದಲ್ಲಿ 133 ಟೆಸ್ಟ್ ಆಡಿ 61 ಸರಣಿಗಳಲ್ಲಿ ಭಾಗವಹಿಸಿರುವ ಮುತ್ತಯ್ಯ ಮುರಳೀಧರನ್(11 ಬಾರಿ ಸರಣಿ ಶ್ರೇಷ್ಠ) ಇದ್ದರೆ, ಅಶ್ವಿನ್ ರ ಜೊತೆ ಜಂಟಿ ಎರಡನೇ ಸ್ಥಾನವನ್ನು ಹಂಚಿಕೊಂಡಿರುವ ದಕ್ಷಿಣ ಆಫ್ರಿಕಾದ ಜಾಕ್​ ಕಾಲೀಸ್ 9 ಬಾರಿ ಸರಣಿ ಶ್ರೇಷ್ಠರಾಗಲು 166 ಟೆಸ್ಟ್ ಮತ್ತು 61 ಸರಣಿಗಳಲ್ಲಿ ಭಾಗವಹಿಸಿದ್ದರು. ಇನ್ನು ಭಾರತೀಯ ಸಾಧಕರಿಗೆ ಹೋಲಿಸಿದರೆ ಅಶ್ವಿನ್​ಗಿಂತ ಹಿಂದೆ ಇರುವವರು ವೀರೇಂದ್ರ ಸೆಹ್ವಾಗ್( 104 ಟೆಸ್ಟ್ 39 ಸರಣಿ) ಮತ್ತು ಸಚಿನ್ ತೆಂಡೂಲ್ಕರ್ (200 ಟೆಸ್ಟ್ 74 ಸರಣಿ). ಇವರಿಬ್ಬರು ಕೇವಲ 5 ಬಾರಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನು ಗಮನಿಸಿದರೆ ತಂಡದ ಗೆಲುವಿನಲ್ಲಿ ಅಶ್ವಿನ್ ಪಾತ್ರ ಮತ್ತು ಅವರ ನಿರಂತರ ಮತ್ತು ಯಶಸ್ಸನ್ನು ಗುರುತಿಸಬಹುದು.

ಟೆಸ್ಟ್ ಮ್ಯಾಚ್ ಒಂದರಲ್ಲಿ ಅತಿ ಹೆಚ್ಚು ಬಾರಿ ಹತ್ತು ವಿಕೆಟ್ ಗೊಂಚಲು (ಒಟ್ಟು 7 ಬಾರಿ) ಗಳಿಸಿದ ಭಾರತದ ಎರಡನೇ ಮತ್ತು ಪ್ರಪಂಚದ ಒಂಭತ್ತನೇ ಬೌಲರ್. ಈ ಸಾಧನೆ ಮಾಡಿರುವ ಇನ್ನೊಬ್ಬ ಭಾರತೀಯ ಬೌಲರ್ ಎಂದರೆ ಅನಿಲ್ ಕುಂಬ್ಳೆ(8 ಬಾರಿ). ಅಶ್ವಿನ್ ತಾವು ನಿವೃತ್ತರಾಗುವುದರೊಳಗೆ ಇನ್ನೊಂದು ಬಾರಿ ಈ ಸಾಧನೆ ಮಾಡಿದರೆ ಕುಂಬ್ಳೆ(8ಬಾರಿ) ಯವರನ್ನು ಸರಿಗಟ್ಟುವುದಲ್ಲದೇ ಭಾರತದ ಪಟ್ಟಿಯಲ್ಲಿ ಕುಂಬ್ಳೆಯವರೊಂದಿಗೆ ಜಂಟಿ ಮೊದಲ ಸ್ಥಾನ ಮತ್ತು ಪ್ರಪಂಚದ ಪಟ್ಟಿಯಲ್ಲಿ ಕುಂಬ್ಳೆಯವರೊಂದಿಗೆ ಜಂಟಿ ನಾಲ್ಕನೇ ಸ್ಥಾನ ಗಳಿಸಲಿದ್ದಾರೆ. ನಿವೃತ್ತರಾಗುವುದರೊಳಗೆ ಎರಡು ಬಾರಿ ಏನಾದರೂ ಈ ಸಾಧನೆ ಮಾಡಿದರೆ ಅನಿಲ್ ಕುಂಬ್ಳೆಯವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ ಭಾರತದ ಏಕೈಕ ಬೌಲರ್ ಎನಿಸುವುದಲ್ಲದೇ ಪ್ರಪಂಚದ ಪಟ್ಟಿಯಲ್ಲಿ ನ್ಯೂಜಿಲೆಂಡ್ ನ ರಿಚರ್ಡ್ ಹ್ಯಾಡ್ಲಿ(9 ಬಾರಿ) ಮತ್ತು ಶ್ರೀಲಂಕಾದ ಹೇರತ್(9 ಬಾರಿ) ಜೊತಗೆ ಜಂಟಿ ಮೂರನೇ ಸ್ಥಾನ ಪಡೆಯಲಿದ್ದಾರೆ. ಇನ್ನೂ ಮೂರು ಬಾರಿ ಏನಾದರೂ ಈ ಸಾಧನೆ ಮಾಡಿಬಿಟ್ಟರೆ ಶೇನ್ ವಾರ್ನ್ (10 ಬಾರಿ) ರವರ ಜೊತೆ ಜಂಟಿ ಎರಡನೇ ಸ್ಥಾನ ಪಡೆಯಲಿದ್ದಾರೆ. ಮೊದಲ ಸ್ಥಾನದಲ್ಲಿ 22 ಬಾರಿ ಈ ಸಾಧನೆ ಮಾಡಿರುವ ಶ್ರೀಲಂಕಾ ದ ಮುತ್ತಯ್ಯ ಮುರಳೀಧರನ್ ಹೆಸರಿದ್ದು, ಭಾರತದ ಅಶ್ವಿನ್ ಸೇರಿದಂತೆ ಪ್ರಪಂಚದ ಇನ್ಯಾವ ಬೌಲರ್ ಕೈಲೂ ಮುರಿಯುವುದು ಅಸಾಧ್ಯವಾದ ದಾಖಲೆಯಾಗಿದೆ.

ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಬಾರಿ ಐದು ವಿಕೆಟ್ ಗಳಿಸಿದ ಬೌಲರ್​ಗಳ ಪೈಕಿಯೂ ಟಾಪ್ 10 ರ ಪಟ್ಟಿಯಲ್ಲಿ ಇದ್ದಾರೆ ಅಶ್ವಿನ್. (ಒಟ್ಟು 30 ಬಾರಿ, 10ನೇ ಸ್ಥಾನ). ಪ್ರಪಂಚದ ಟಾಪ್ 10 ಪಟ್ಟಿಯಲ್ಲಿ ಇರುವ ಇನ್ನೊಬ್ಬ ಭಾರತೀಯ ಅನಿಲ್ ಕುಂಬ್ಳೆ ಮಾತ್ರ. (4 ನೇ ಸ್ಥಾನ 35 ಬಾರಿ). ಹೀಗಾಗಿ ನಿವೃತ್ತರಾಗುವುದರೊಳಗೆ ಅಶ್ವಿನ್​ಗೆ ಕುಂಬ್ಳೆ ಯವರ ದಾಖಲೆ ಮುರಿಯುವ ಸಾಮರ್ಥ್ಯವಿದೆ. ಕುಂಬ್ಳೆಯವರಿಗಿಂಥ ಮೇಲಿರುವವರೆಂದರೆ ಶೇನ್​ ವಾರ್ನ್ (37 ಬಾರಿ) ಹ್ಯಾಡ್ಲಿ ( 36 ಬಾರಿ) ಮುರಳೀಧರನ್(67 ಬಾರಿ) ಮಾತ್ರ. ಪ್ರಯತ್ನ ಪಟ್ಟರೆ ಅಶ್ವಿನ್ ನಿವೃತ್ತರಾಗುವುದರೊಳಗೆ ನಂ 2 ಸ್ಥಾನಕ್ಕೇರಬಹುದು.

ಬ್ಯಾಟ್ಸ್​ಮನ್​ಗಳನ್ನು ಅತಿ ಹೆಚ್ಚು ಬಾರಿ ಎಲ್​ಬಿಡಬ್ಲ್ಯು ಬಲೆಗೆ ಕೆಡವಿದ ಪ್ರಪಂಚದ ಹತ್ತು ಬೌಲರ್​ಗಳಲ್ಲಿ ಅಶ್ವಿನ್ ಕೂಡಾ ಒಬ್ಬರು (96 ಬಾರಿ). ಇನ್ನೂ ಆರು ವಿಕೆಟ್​​ಗಳನ್ನು ಎಲ್​ಬಿಡಬ್ಲ್ಯು ರೂಪದಲ್ಲಿ ಅಶ್ವಿನ್ ಪಡೆದರೆ 100 ಬಾರಿ ಈ ಸಾಧನೆ ಮಾಡಿದವರಾಗಿ 100 ಎಲ್​ಬಿಡಬ್ಲ್ಯು ವಿಕೆಟ್ ಕ್ಲಬ್​ಗೆ ಸೇರುತ್ತಾರೆ. ಪ್ರಪಂಚದಲ್ಲಿ ಇದುವರೆಗೂ ಈ ಸಾಧನೆ ಮಾಡಿರುವವರು ಕೇವಲ 9 ಬೌಲರ್ ಗಳು ಮಾತ್ರ. ಅಂದ ಹಾಗೆ ಪ್ರಪಂಚದ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಭಾರತದ ಅನಿಲ್ ಕುಂಬ್ಳೆ ಎಂಬುದು ಹೆಮ್ಮೆಯ ಸಂಗತಿ. (ಒಟ್ಟು 150 ಸಲ) ಈ ಪಟ್ಟಿಯಲ್ಲಿ ಇರುವ ಇನ್ನೊಬ್ಬ ಭಾರತೀಯ ಕಪಿಲ್ ದೇವ್ (111 ಸಲ) ಮಾತ್ರ.

ಟೆಸ್ಟ್​​ನಲ್ಲಿ ಅತಿ ಹೆಚ್ಚು ಬಾರಿ ಎಡಗೈ ಬ್ಯಾಟ್ಸ್​ಮನ್​ ಗಳನ್ನು ಔಟ್ ಮಾಡಿದ ಬೌಲರ್​ಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಅಶ್ವಿನ್ ಅವರದ್ದು. ಇನ್ನೂರು ಎಡಗೈ ಆಟಗಾರರನ್ನು ಪೆವಿಲಿಯನ್​ಗೆ ಕಳುಹಿಸಿದ ಪ್ರಪಂಚದ ಏಕೈಕ ಬೌಲರ್ ಅಶ್ವಿನ್ ಅನ್ನುವುದು ವಿಶೇಷ.

ಪ್ರಪಂಚದಲ್ಲಿ ಅತಿವೇಗದ 250, 300, 350 ವಿಕೆಟ್ ಗಳಿಸಿದವರ ಪೈಕಿ ಅಶ್ವಿನ್ ಮೊದಲ ಸ್ಥಾನದಲ್ಲಿದ್ದಾರೆ. ಕ್ರಮವಾಗಿ ಕೇವಲ 45, 54, 66 ಟೆಸ್ಟ್​​ಗಳಲ್ಲಿ ಅವರು ಈ ಸಾಧನೆ ಮಾಡಿದ್ದರು.

ಅಶ್ವಿನ್ ರೊಂದಿಗೆ ಅತಿ ವೇಗದ 350 ವಿಕೆಟ್ ಸಾಧನೆಯಲ್ಲಿ ಜಂಟಿ ಮೊದಲ ಸ್ಥಾನ ಪಡೆದಿರುವ ಮುತ್ತಯ್ಯ ಮುರಳಿಧರನ್ ಈ ಸಾಧನೆ ಮಾಡಲು ವೃತ್ತಿ ಜೀವನದ 9 ವರ್ಷ 9 ದಿನಗಳನ್ನು ತೆಗೆದುಕೊಂಡಿದ್ದರೆ ಅಶ್ವಿನ್ ಕೇವಲ 7 ವರ್ಷ 330 ದಿನಗಳಲ್ಲಿ ಈ ಸಾಧನೆ ಮಾಡಿದ್ದರು ಎಂಬುದು ಗಮನಾರ್ಹ. ಇನ್ನುಳಿದಂತೆ ವೇಗದ 350 ವಿಕೆಟ್ ಪಟ್ಟಿಯಲ್ಲಿರುವ ಇತರ ಭಾರತೀಯರೆಂದರೆ ಅನಿಲ್ ಕುಂಬ್ಳೆ (77 ಟೆಸ್ಟ್ 6 ನೇ ಸ್ಥಾನ), ಹರ್ಭಜನ್ ಸಿಂಗ್(83 ಟೆಸ್ಟ್ 11 ನೇ ಸ್ಥಾನ) ಮತ್ತು ಕಪಿಲ್ ದೇವ್ (100 ಟೆಸ್ಟ್ 19 ನೇ ಸ್ಥಾನ) ಮಾತ್ರ.

ಇನ್ನು ಅತಿ ವೇಗದ 400 ವಿಕೆಟ್ ಸಾಧನೆಯಲ್ಲಿ ಅಶ್ವಿನ್ ಎರಡನೇ ಸ್ಥಾನ ಪಡೆದಿದ್ದಾರೆ (77 ಟೆಸ್ಟ್). ಮೊದಲ ಸ್ಥಾನದಲ್ಲಿರುವ ಮುತ್ತಯ್ಯ ಮುರಳೀಧರನ್ 72 ಟೆಸ್ಟ್​​ಗಳಲ್ಲಿ ಈ ಸಾಧನೆ ಮಾಡಿದ್ದರು. ಮೂರನೇ ಸ್ಥಾನದಲ್ಲಿ ರಿಚರ್ಡ್ ಹ್ಯಾಡ್ಲಿ 80 ಟೆಸ್ಟ್​​ಗಳಲ್ಲಿ ಈ ಸಾಧನೆ ಮಾಡಿದ್ದರು. ಕುಂಬ್ಳೆ (85 ಟೆಸ್ಟ್), ಹರ್ಭಜನ್ (96 ಟೆಸ್ಟ್) ಮತ್ತು ಕಪಿಲ್ ದೇವ್(115 ಟೆಸ್ಟ್) ಈ ರೇಸ್ ನಲ್ಲಿರುವ ಭಾರತೀಯರು.

ಮುಂದಿನ ಟೆಸ್ಟ್​​ನಲ್ಲಿ ಇನ್ನೊಂದು ವಿಕೆಟ್ ಕಿತ್ತರೆ ಅತಿ ವೇಗದ 450 ವಿಕೆಟ್ ರೇಸ್​​ನಲ್ಲೂ ಅಶ್ವಿನ್ (89 ಟೆಸ್ಟ್) ಮತ್ತೆ 2ನೇ ಸ್ಥಾನ ಪಡೆಯಲಿದ್ದಾರೆ. ಮೊದಲ ಸ್ಥಾನ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್(80 ಟೆಸ್ಟ್) ಮತ್ತು ಮೂರನೇ ಸ್ಥಾನ ನಮ್ಮ ಅನಿಲ್ ಕುಂಬ್ಳೆ (93 ಟೆಸ್ಟ್) ಅವರದ್ದಾಗಿದೆ. ಪ್ರಪಂಚದಲ್ಲಿ ಕೇವಲ 10 ಜನ ಮಾತ್ರ ಮಾಡಿರುವ ಈ ಸಾಧನೆಯ ರೇಸ್​​ನಲ್ಲಿ ಅಶ್ವಿನ್ ಮತ್ತು ಕುಂಬ್ಳೆ ಬಿಟ್ಟರೆ ಇನ್ಯಾವ ಭಾರತೀಯನೂ ಇಲ್ಲ.

ಒಂದು ವೇಳೆ ಅಶ್ವಿನ್ 500 ವಿಕೆಟ್​ನ ಗುರಿ ಮುಟ್ಟಿದರೆ ಬಹುಶಃ ಈ ಸಾಧನೆ ಮಾಡಿದ ವಿಶ್ವದ 8 ನೇ ಆಟಗಾರರಾಗಲಿದ್ದಾರೆ. ವೇಗದ 500 ವಿಕೆಟ್ ಗಳಿಸುವಲ್ಲಿ ಎರಡನೇ ಸ್ಥಾನ ಗಳಿಸುವ ಸಾಧ್ಯತೆ ಇದೆ. ಅಶ್ವಿನ್ ಆ ಸ್ಥಾನ ಪಡೆಯಬೇಕಿದ್ದರೆ ಕುಂಬ್ಳೆ(105 ಟೆಸ್ಟ್) ಯವರಿಗಿಂತ ಮೊದಲು ಅಂದರೆ ಇನ್ನು 17 ಟೆಸ್ಟ್​ ಪಂದ್ಯದ ಒಳಗೆ 51 ವಿಕೆಟ್ ಗಳಿಸಬೇಕು. ಅಷ್ಟು ಟೆಸ್ಟ್​​ಗಳಲ್ಲಿ ಆಡುವ ಅವಕಾಶ ಅಶ್ವಿನ್​ಗೆ ದೊರೆತರೆ ನೀರು ಕುಡಿದಷ್ಟೇ ಸುಲಭವಾಗಿ ಈ ರೆಕಾರ್ಡ್ ಅನ್ನು ಮುರಿದುಹಾಕುವುದು ಖಚಿತ. ಇನ್ನು ಮೊದಲ ಸ್ಥಾನದಲ್ಲಿರುವ ಮುತ್ತಯ್ಯ ಮುರಳೀಧರನ್ (87 ಟೆಸ್ಟ್) ರವರ ದಾಖಲೆ ಮುರಿಯಲು ಸಾಧ್ಯವೇ ಇಲ್ಲ. ಯಾಕೆಂದರೆ ಅದಾಗಲೇ ಅಶ್ವಿನ್ 88 ಟೆಸ್ಟ್ ಮ್ಯಾಚ್ ಆಡಿಯಾಗಿದೆ. ಆದರೆ ಭವಿಷ್ಯದಲ್ಲಿ ಅಶ್ವಿನ್​ ಅವರ ಎರಡನೇ ಅತಿ ವೇಗದ 500 ವಿಕೆಟ್ ಗಳ ದಾಖಲೆಯನ್ನೂ ಮುರಿಯುವುದು ಕಷ್ಟಸಾಧ್ಯ. ಏಕೆಂದರೆ ಈಗ ಆಡುತ್ತಿರುವವರಲ್ಲಿ ಅಶ್ವಿನ್ ಅವರ ಸನಿಹದಲ್ಲೂ ಯಾರೂ ಇಲ್ಲ.

ಭಾರತ ಟೆಸ್ಟ್ ಬೌಲರ್ ಗಳಲ್ಲಿ ವೇಗದ 50, 100, 150, 200, 250, 300, 350, 400, 450 ವಿಕೆಟ್ ಗಳ ದಾಖಲೆಯೂ ಅಶ್ವಿನ್ ಹೆಸರಿನಲ್ಲಿಯೇ ಇದೆ. ವೇಗದ 500 ಕೂಡಾ ಕೆಲವೇ ದಿನಗಳಲ್ಲಿ ಅವರದ್ದೇ ಆಗಲಿದೆ.

ಅಶ್ವಿನ್ ಐಸಿಸಿಯ ಪ್ರಪಂಚದ ಸರ್ವಕಾಲಿಕ ಶ್ರೇಷ್ಠ ಆಲ್ ರೌಂಡರ್ ಗಳ ಪೈಕಿ 12 ನೇ ಸ್ಥಾನ ಗಳಿಸಿದ್ದಾರೆ. 20 ಆಟಗಾರರ ಈ ಪಟ್ಟಿಯಲ್ಲಿ ಅಶ್ವಿನ್ ಬಿಟ್ಟರೆ ಇನ್ನೊಬ್ಬ ಭಾರತೀಯ ಆಟಗಾರನಿಲ್ಲ . ಹಾಗೆಯೇ ಬೌಲರ್ ಗಳ ಪಟ್ಟಿಯಲ್ಲಿ ಅಶ್ವಿನ್ 19ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲೂ ಸಹಾ ಅಶ್ವಿನ್ ಹೊರತುಪಡಿಸಿ ಇನ್ನೊಬ್ಬ ಭಾರತೀಯ ಆಟಗಾರನಿಲ್ಲ ಅನ್ನುವುದು ಅಶ್ವಿನ್ ಶ್ರೇಷ್ಠ ನಿರ್ವಹಣೆಯನ್ನು ಎತ್ತಿ ತೋರಿಸುತ್ತದೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ 11 ನೇ ಸ್ಥಾನದಲ್ಲಿದ್ದು ಕೊಹ್ಲಿಯನ್ನು ಹೊರತುಪಡಿಸಿ ಇನ್ನೊಬ್ಬ ಈ ಪಟ್ಟಿಯಲ್ಲಿ ಭಾರತೀಯ ಇಲ್ಲ. ಅಂದರೆ ಪ್ರಪಂಚದ ಸಾರ್ವಕಾಲಿಕ ಟೆಸ್ಟ್ ಆಟಗಾರರಲ್ಲಿ ಇರುವ ಇಬ್ಬರೇ ಇಬ್ಬರು ಭಾರತೀಯರಲ್ಲಿ ಅಶ್ವಿನ್ ಒಬ್ಬರು. ಕೊಹ್ಲಿ ಬ್ಯಾಟಿಂಗ್ ನಲ್ಲಿ ಸ್ಥಾನ ಪಡೆದಿದ್ದರೆ ಅಶ್ವಿನ್ ಬೌಲಿಂಗ್ ಮತ್ತು ಆಲ್ ರೌಂಡರ್ ಎರಡೂ ವಿಭಾಗಗಳಲ್ಲಿ ಸ್ಥಾನ ಪಡೆದಿದ್ದಾರೆ. ಇಷ್ಟಾದರೂ ಭಾರತೀಯ ಕ್ರಿಕೆಟ್ ಲೋಕ ಈ ಆಟಗಾರನನ್ನು ಸ್ಟಾರ್ ಎಂದು ನೋಡುವುದೇ ಇಲ್ಲ ಎನ್ನುವುದೇ ಅಚ್ಚರಿಯ ಸಂಗತಿ.

ಪ್ರಪಂಚದ ಸರ್ವ ಶ್ರೇಷ್ಠ ಟೆಸ್ಟ್ ಆಲ್ ರೌಂಡರ್ ಆಗಿರುವ ಈ ಅಶ್ವಿನ್ ಟೆಸ್ಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಪ್ರಪಂಚದ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಸಾಮಾನ್ಯದ ಮಾತಲ್ಲ. ಇನ್ನು ಕೆಲವೇ ಕೆಲವು ಟೆಸ್ಟ್ ಮ್ಯಾಚ್ ಗಳಲ್ಲಿ ಆಡುವ ಅವಕಾಶ ಸಿಕ್ಕರೆ ಟೆಸ್ಟ್ ವಿಕೆಟ್ ಗಳಿಕೆಯ ದೃಷ್ಟಿಯಲ್ಲಿ ಪ್ರಪಂಚದ ಟಾಪ್ 7 ಸ್ಥಾನ ಪಡೆಯುವುದು ಗ್ಯಾರಂಟಿ. ಇನ್ನು 12 ಟೆಸ್ಟ್ ಗಳಲ್ಲಿ ಆಡಿದರೆ ಸಾಕು ಅಶ್ವಿನ್ ಒಟ್ಟು100 ಟೆಸ್ಟ್ ಆಡಿದಂತಾಗುತ್ತದೆ. ಉತ್ತಮ ಫಾರ್ಮ್ ನಲ್ಲಿರುವ ಅಶ್ವಿನ್ ಇನ್ನಿಂಗ್ಸ್ ಒಂದರಲ್ಲಿ 3 ವಿಕೆಟ್​ ತೆಗೆದರೂ ತನ್ನ ಖಾತೆಗೆ 72 ವಿಕೆಟ್ ಸೇರಿಸಿಕೊಳ್ಳುತ್ತಾರೆ. ಆ ಮೂಲಕ ಕರ್ಟ್ನಿ ವಾಲ್ಷ್ ರ 519 ವಿಕೆಟ್​ಗಳ ದಾಖಲೆ ಪುಡಿಯಾಗಿ 521 ವಿಕೆಟ್ ಗಳಿಸುವ ಅಶ್ವಿನ್ ಪ್ರಪಂಚದ ಅತಿ ಹೆಚ್ಚು ಟೆಸ್ಟ್ ವಿಕೆಟ್ ಗಳಿಸಿದವರ ಪೈಕಿ 7 ನೇ ಸ್ಥಾನಕ್ಕೇರುತ್ತಾರೆ.

ಅಶ್ವಿನ್ ಅವರು ಭಾರತದ ಪರ ನೂರು ಟೆಸ್ಟ್ ಆಡಿದ ಕೇವಲ 15 ಜನರ ಪೈಕಿಯೂ ಸ್ಥಾನ ಪಡೆಯುತ್ತಾರೆ. ಈಗಾಗಲೇ ಹನ್ನೆರಡು ಜನರಿರುವ ಈ ಕ್ಲಬ್ ಸೇರುವ ಅರ್ಹತೆ ಇರುವ ಇನ್ನೂ ಮೂವರೆಂದರೆ 88 ಟೆಸ್ಟ್ ಆಡಿರುವ ಅಶ್ವಿನ್, 98 ಟೆಸ್ಟ್ ಆಡಿರುವ ಚೇತೇಶ್ವರ ಪೂಜಾರ, 82 ಟೆಸ್ಟ್ ಆಡಿರುವ ಅಜಿಂಕ್ಯ ರಹಾನೆ. ಸದ್ಯಕ್ಕೆ ಆಡುತ್ತಿರುವವರಲ್ಲಿ ಈ ಮೂವರಿಗೆ ಹತ್ತಿರ ಇರುವ ಇನ್ನೊಬ್ಬ ಆಟಗಾರ ಅಂದರೆ 60 ಟೆಸ್ಟ್ ಆಡಿರುವ ಜಡೇಜಾ. ಅಂದರೆ 20-20 ಯುಗದಲ್ಲಿ ಜಡೇಜಾ ಸೇರಿದಂತೆ ಈ ದಾಖಲೆಯನ್ನು ಇನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ಆದರೆ ಆಯ್ಕೆ ಸಮಿತಿ ಅಶ್ವಿನ್ ಎಂಬ ಈ ಅನುಭವಿ ಆಟಗಾರನಿಗೆ ಇನ್ನೂ 12 ಟೆಸ್ಟ್ ಆಡುವ ಅವಕಾಶ ನೀಡುವುದೇ? ಟ್ವೆಂಟಿ ಟ್ವೆಂಟಿ ಯುಗದಲ್ಲಿ ಟೀಮ್ ಇಂಡಿಯಾ ಅಷ್ಟು ಮ್ಯಾಚ್ ಆಡಲು ಇನ್ನೂ ಎಷ್ಟು ವರ್ಷ ಬೇಕೋ? ಅಲ್ಲಿಯವರೆಗೂ ಅಶ್ವಿನ್ ಗೆ ಎಷ್ಟು ವರ್ಷಗಳಾಗುತ್ತವೆ? ಅಲ್ಲದೆ ಅವರು ಫಿಟ್ ಇರುತ್ತಾರೆಯೇ ಅನ್ನುವುದೇ ಪ್ರಶ್ನೆ.

ಟೆಸ್ಟ್ ಆಡುತ್ತಿರುವ ಪ್ರಪಂಚದ ಆಟಗಾರರಲ್ಲಿ ಹಿರಿತನದ ದೃಷ್ಟಿಯಿಂದ 9 ನೇ ಸ್ಥಾನ ಅಶ್ವಿನ್ ಅವರದ್ದು. ಭಾರತ ತಂಡದಲ್ಲೇ ಅತ್ಯಂತ ಹಿರಿಯನಾದ ಈ ಆಟಗಾರನಿಗೆ ಈಗ 36 ವರ್ಷ ವಯಸ್ಸು. ಇನ್ನೈದು ವರ್ಷ ಏನಾದರೂ ಅಶ್ವಿನ್ ಟೆಸ್ಟ್ ಕ್ರಿಕೆಟ್ ಆಡಿದರೆ ಒಟ್ಟು 42 ಟೆಸ್ಟ್ ಗಳು ಆಡಲು ಸಿಗುತ್ತವೆ. ಈಗಿರುವ ಸರಾಸರಿಯಲ್ಲೇ ಆಡಿದರೆ ಇನ್ನೂ 200 ವಿಕೆಟ್ ಗಳಿಸಲು ಶಕ್ತ ಅಶ್ವಿನ್. ಹಾಗಾದಲ್ಲಿ ನಿವೃತ್ತಿ ಆಗುವ ವೇಳೆಗೆ ಪ್ರಪಂಚದ ಬೌಲಿಂಗ್ ವಿಭಾಗದಲ್ಲಿ ಮುತ್ತಯ್ಯ ಮುರಳೀಧರನ್ ಶೇನ್ ವಾರ್ನ್ ಮತ್ತು ಕುಂಬ್ಳೆಯಂಥ ದಿಗ್ಗಜರ ಸಾಲಿನಲ್ಲಿ ಅಶ್ವಿನ್ ವಿರಾಜಮಾನರಾಗಲಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಅಶ್ವಿನ್ ಇನ್ನೂ ಅನೇಕ ದಾಖಲೆಗಳನ್ನು ಮುರಿದು ಹೊಸಾ ದಾಖಲೆಗಳನ್ನು ಸೃಷ್ಟಿಸಲಿ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣಗಳಂಥಾ ಗೌರವವನ್ನು ಪಡೆಯಲಿ.

ಇದನ್ನೂ ಓದಿ ’ R Ashwin | ಟೀಮ್​ ಇಂಡಿಯಾದ ಸ್ಪಿನ್​ ಬೌಲರ್​​ ಆರ್​ ಅಶ್ವಿನ್​ ಅವರ ಟೆಸ್ಟ್​ ಬೌಲಿಂಗ್​ ಸಾಧನೆ ಈ ರೀತಿ ಇದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

RCB vs CSK: ಚೆನ್ನೈ-ಆರ್​ಸಿಬಿ ಪಂದ್ಯಕ್ಕೆ ಹವಾಮಾನ ಇಲಾಖೆ ನೀಡಿದ ಎಚ್ಚರಿ ಏನು?

RCB vs CSK: ಶುಕ್ರವಾರ ಬೆಳಗ್ಗಿನಿಂದಲೇ ಬೆಂಗಳೂರಿನಲ್ಲಿ ಭಾರೀ ಮಳೆಯೂ ಆಗಿದೆ. ಹೀಗಾಗಿ ಶನಿವಾರವೂ ಮಳೆ ಇರುವುದು ಖಚಿತಗೊಂಡಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ ಪ್ಲೇ ಆಫ್​ನಿಂದ ಹೊರಬೀಳಲಿದೆ.

VISTARANEWS.COM


on

RCB vs CSK
Koo

ಬೆಂಗಳೂರು: ಸತತ ಸೋಲಿನಿಂದ ಕಂಗೆಟ್ಟು ಸ್ವತಃ ಅಭಿಮಾನಿಗಳಿಂದಲೇ ಟ್ರೋಲ್​ ಆಗಿದ್ದ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು(RCB vs CSK) ತಂಡ ಆ ಬಳಿಕದ ಪಂದ್ಯಗಳಲ್ಲಿ ಸತತವಾಗಿ ಗೆದ್ದು ಯಾರೂ ಕೂಡ ಊಹಿಸದಂತೆ ಪ್ಲೇ ಆಪ್​ ರೇಸ್​ಗೆ ಬಂದು ನಿಂತಿದೆ. ತನ್ನ ಅಂತಿಮ ಲೀಗ್​ ಪಂದ್ಯವನ್ನು ನಾಳೆ(ಶನಿವಾರ) ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಗೆದ್ದರೆ ಪ್ಲೇ ಆಫ್​(RCB’s playoff hopes) ಟಿಕೆಟ್​​ ಅಧಿಕೃತಗೊಳ್ಳಲಿದೆ. ಆದರೆ, ಆರ್​ಸಿಬಿ ಪಾಲಿಗೆ ಮಳೆ ವಿಲನ್ ಆಗುವ ಎಲ್ಲ ಸಾಧ್ಯತೆ ಅಧಿಕವಾಗಿ ಗೋಚರಿಸಿದೆ.

​ಭಾರೀ ಮಳೆ ಎಚ್ಚರಿಕೆ


ಹವಾಮಾನ ಇಲಾಖೆ ಶನಿವಾರ ಶೇ.89 ರಷ್ಟು ಮಳೆ(Rain forecast for Bengaluru) ಇದೆ ಎಂದು, ಒಂದು ವಾರಗಳ ಹಿಂದೆಯೇ ಎಚ್ಚರಿಕೆ ನೀಡಿತ್ತು. ಶುಕ್ರವಾರ ಬೆಳಗ್ಗಿನಿಂದಲೇ ಬೆಂಗಳೂರಿನಲ್ಲಿ ಭಾರೀ ಮಳೆಯೂ ಆಗಿದೆ. ಹೀಗಾಗಿ ಶನಿವಾರವೂ ಮಳೆ ಇರುವುದು ಖಚಿತಗೊಂಡಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ ಪ್ಲೇ ಆಫ್​ನಿಂದ ಹೊರಬೀಳಲಿದೆ. 15 ಅಂಕ ಪಡೆಯುವ ಚೆನ್ನೈ ಪ್ಲೇ ಆಫ್​ಗೆ ಎಂಟ್ರಿ ಕೊಡಲಿದೆ. ಈಗಾಗಲೇ ಮೂರು ತಂಡಗಳಾದ ಕೆಕೆಆರ್​, ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ್​ ಪ್ಲೇ ಆಫ್​ ತಲುಪಿದೆ. ಒಂದು ಸ್ಥಾನ ನಾಳೆ ನಿರ್ಧಾರವಾಗಲಿದೆ.

ಒಂದೊಮ್ಮೆ ಆರ್​ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದರೂ ಕೂಡ ಪ್ಲೇ ಆಫ್​ ಟಿಕೆಟ್​ ಖಚಿತವಾಗುವುದಿಲ್ಲ. ರನ್‌ರೇಟ್‌ ಲೆಕ್ಕಾಚಾರದಲ್ಲಿ ಚೆನ್ನೈಯನ್ನು ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಮಣಿಸಬೇಕಿದೆ. ಚೇಸಿಂಗ್‌ ಲೆಕ್ಕಾಚಾರ ಬೇರೆಯೇ ಇದೆ. ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು. ಸಣ್ಣ ಅಂತರದ ಗೆಲುವು ಕಂಡರೆ ಕಷ್ಟ.

ಇದನ್ನೂ ಓದಿ IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿರುವ ಕಾರಣ. ಮಳೆ ಬಂದರೂ ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮಳೆ ಬಂದರೂ ಸೀಮಿತ ಓವರ್​ಗಳ ಪಂದ್ಯವನ್ನು ನಿರೀಕ್ಷಿಸಬಹುದು.

ಚೆನ್ನೈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬಿಸಿ ಬಿಸಿ ಚಹಾ ಕುಡಿದು ಸಂಭ್ರಮಿಸುತ್ತಿದ್ದಾರೆ. ಇದು ನಡೆದಿರುವುದು ಗುರುವಾರ ಬೆಳಗ್ಗೆ ಅಭ್ಯಾಸದ ಅವಧಿಯಲ್ಲಿ. ಚಿನ್ನಸ್ವಾಮಿ ಸ್ಟೇಡಿಯಮ್​​ಲ್ಲಿದ್ದ ಆರ್​ಸಿಬಿ ಶಿಬಿರವು ಎಂ.ಎಸ್. ಧೋನಿಯನ್ನು ಬಿಸಿ ಕಪ್ ಚಹಾದೊಂದಿಗೆ ಸ್ವಾಗತಿಸಿತು. ಆರ್​ಸಿಬಿ ಡ್ರೆಸ್ಸಿಂಗ್ ರೂಮ್​ಗೆ ಭೇಟಿ ನೀಡಿದ ಧೋನಿಗೆ ತಂಡದ ಸಹಾಯಕ ಸಿಬ್ಬಂದಿ ಬಿಸಿ ಬಿಸಿ ಚಹಾವನ್ನು ನೀಡಿ ಸತ್ಕರಿಸಿದರು. ಬೆಂಗಳೂರಿನ ಮೋಡ ಮುಸುಕಿದ ಹವಾಮಾನದ ನಡುವೆ, ಧೋನಿ ತಮ್ಮ ತರಬೇತಿಯ ಸಮಯದಲ್ಲಿ ತಮ್ಮ ನೆಚ್ಚಿನ ಪಾನೀಯ ಸೇವಿಸಿದರು.

Continue Reading

ಕ್ರೀಡೆ

MS Dhoni : ಆರ್​​ಸಿಬಿ ವಿರುದ್ಧ ಬೌಲಿಂಗ್ ಮಾಡಲು ಅಭ್ಯಾಸ ನಡೆಸಿದ ಎಂ ಎಸ್​ ಧೋನಿ

MS Dhoni : ಧೋನಿ ಕಡಿಮೆ ವೇಗದ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ನೆಟ್ಸ್​ನಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಐಪಿಎಲ್ 2023 ರ ಸಮಯದಲ್ಲಿಯೂ ಧೋನಿ ಸಿಎಸ್​ಕೆ ಬ್ಯಾಟರ್​ಗಳಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಸಿಎಸ್​ಕೆ ಸ್ಟಾರ್ ಬೌಲಿಂಗ್​ನ ಇತ್ತೀಚಿನ ವೀಡಿಯೊ ಈಗಾಗಲೇ ವೈರಲ್ ಆಗಿದೆ.

VISTARANEWS.COM


on

MS Dhoni
Koo

ಬೆಂಗಳೂರು: ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ಮೇಲೆ ಎಂಎಸ್ ಧೋನಿ (MS Dhoni) ಸಂಪೂರ್ಣ ಗಮನ ಹರಿಸಿದ್ದಾರೆ. ಸ್ಟಾರ್ ವಿಕೆಟ್ ಕೀಪರ್ ನೆಟ್ ಸೆಷನ್ ಸಮಯದಲ್ಲಿ ತಮ್ಮ ವಿಕೆಟ್​ಕೀಪಿಂಗ್​ ಗ್ಲೌಸ್ ಗಳೊಂದಿಗೆ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಏತನ್ಮಧ್ಯೆ ಅವರು ಸ್ವಲ್ಪ ಬೌಲಿಂಗ್ ಕೂಡ ಮಾಡುತ್ತಿದ್ದಾರೆ. ಧೋನಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎಂದಿಗೂ ಬೌಲಿಂಗ್ ಮಾಡಿಲ್ಲ. ಆದರೆ ಆರ್​ಸಿಬಿ ವಿರುದ್ಧ ಬೌಲಿಂಗ್ ಮಾಡಬಲ್ಲರು ಎಂದು ಹೇಳಲಾಗುತ್ತಿದೆ!

ಧೋನಿ ಕಡಿಮೆ ವೇಗದ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ನೆಟ್ಸ್​ನಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಐಪಿಎಲ್ 2023 ರ ಸಮಯದಲ್ಲಿಯೂ ಧೋನಿ ಸಿಎಸ್​ಕೆ ಬ್ಯಾಟರ್​ಗಳಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಸಿಎಸ್​ಕೆ ಸ್ಟಾರ್ ಬೌಲಿಂಗ್​ನ ಇತ್ತೀಚಿನ ವೀಡಿಯೊ ಈಗಾಗಲೇ ವೈರಲ್ ಆಗಿದೆ.

ನೆಟ್ಸ್​ನಲ್ಲಿ ತಾವು ಎದುರಿಸಿದ ಕಠಿಣ ಬೌಲರ್ ಧೋನಿ ಎಂದು ರೈನಾ ಒಮ್ಮೆ ಹೇಳಿದ್ದರು. ಅಭ್ಯಾಸದ ವೇಲೆ ಧೋನಿ ಎಸೆತಕ್ಕೆ ಔಟಾದರೆ ಅವರು ನಿಮ್ಮನ್ನು ಪದೇ ಪದೇ ಕಾಡುತ್ತಾರೆ. ಹೇಗೆ ಔಟ್ ಮಾಡಿದೆ ಎಂಬುದನ್ನು ನೆನಪಿಸುತ್ತಾರೆ ಎಂದು ಸಿಎಸ್​ಕೆ ಮಾಜಿ ಬ್ಯಾಟ್ಸ್ಮನ್ ಹೇಳಿದ್ದರು.

“ನಾನು ಎದುರಿಸಿದ ಕಠಿಣ ಬೌಲರ್​​ ಮುರಳೀಧರನ್ ಮತ್ತು ಮಾಲಿಂಗ ಎಂದು ಭಾವಿಸುತ್ತೇನೆ. ಆದರೆ ನೆಟ್ಸ್​ನಲ್ಲಿ ಅದು ಎಂಎಸ್ ಧೋನಿ. ಅವರಯ ನಿಮ್ಮನ್ನು ಔಟ್ ಮಾಡಿದರೆ ನೀವು ಒಂದೂವರೆ ತಿಂಗಳವರೆಗೆ ಅವರ ಬಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ಔಟಾದ ರೀತಿಯನ್ನು ಸನ್ನೆ ಮಾಡುತ್ತಲೇ ಇರುತ್ತಾರೆ. ಅವರು ನಿಮ್ಮನ್ನು ಹೇಗೆ ಔಟ್ ಮಾಡಿದನೆಂದು ನೆನಪಿಸುತ್ತಾರೆ . ಅವರು ಆಫ್-ಸ್ಪಿನ್, ಮಧ್ಯಮ ವೇಗ, ಲೆಗ್ ಸ್ಪಿನ್, ಎಲ್ಲವನ್ನೂ ಬೌಲಿಂಗ್ ಮಾಡುತ್ತಿದ್ದರು. ನೆಟ್ಸ್​ಬಲ್ಲಿ ಅವರು ತಮ್ಮ ಮುಂಭಾಗದ ಪಾದದ ನೋ-ಬಾಲ್​ಗಳನ್ನು ಸಹ ಸಮರ್ಥಿಸುತ್ತಿದ್ದರು. ಟೆಸ್ಟ್ ನೆಟ್ಸ್​ನಲ್ಲಿ ಅವರು ಬೌಲಿಂಗ್ ಚೆನ್ನಾಗಿ ಮಾಡುತ್ತಿದ್ದರು. ಇಂಗ್ಲೆಂಡ್​​ನಲ್ಲಿ ಅವರು ಅದನ್ನು ವೇಗದಲ್ಲಿ ಸ್ವಿಂಗ್ ಮಾಡುತ್ತಿದ್ದರು, “ಎಂದು ರೈನಾ ಹೇಳಿದ್ದರು.

ಇದನ್ನೂ ಓದಿ: MS Dhoni : ಆರ್​ಸಿಬಿಯವರು ಕೊಟ್ಟ ಬೆಂಗಳೂರಿನ ಸ್ಪೆಷಲ್​ ಚಹಾ ಕುಡಿದ ಧೋನಿ; ಇಲ್ಲಿದೆ ವಿಡಿಯೊ

ಧೋನಿ ಗುರುವಾರ ನೆಟ್ಸ್​ನಲ್ಲಿ ಬೌಲಿಂಗ್ ಮಾಡಿದ್ದರೂ, ಶನಿವಾರದ ಪಂದ್ಯದ ಸಮಯದಲ್ಲಿ ಸಿಎಸ್ಕೆ ಸ್ಟಾರ್ ಅದೇ ರೀತಿ ಮಾಡುವುದಿಲ್ಲ ಎಂದು ಅಭಿಮಾನಿಗಳು ಸಂಪೂರ್ಣವಾಗಿ ನಿರೀಕ್ಷಿಸಬಹುದು. ಧೋನಿ ಈ ಋತುವಿನಲ್ಲಿ ಕೆಲವು ಗಾಯದ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಚೆನ್ನೈನ ಮಾಜಿ ನಾಯಕ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ತಡವಾಗಿ ಬರಲು ಇದು ಕಾರಣವಾಗಿದೆ.

ಧೋನಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದಾರೆ. 50 ಓವರ್​ಗಳ ಸ್ವರೂಪದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ. ಧೋನಿ ಆರ್​ಸಿಬಿ ಶಿಬಿರದೊಂದಿಗೆ ಸ್ವಲ್ಪ ಮೋಜಿನ ಸಮಯವನ್ನು ಕಳೆಯುತ್ತಿದ್ದರು. ಅವರೊಂದಿಗೆ ಚಹಾ ಕೂಡ ಸೇವಿಸಿದ್ದರು.

Continue Reading

ಪ್ರಮುಖ ಸುದ್ದಿ

MS Dhoni : ಆರ್​ಸಿಬಿಯವರು ಕೊಟ್ಟ ಬೆಂಗಳೂರಿನ ಸ್ಪೆಷಲ್​ ಚಹಾ ಕುಡಿದ ಧೋನಿ; ಇಲ್ಲಿದೆ ವಿಡಿಯೊ

MS Dhoni: ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿವೆ. ಆರ್​ಸಿಬಿ ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ವಿಷಯವನ್ನು ಹೇಳಲಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸದ ಸಮಯದಲ್ಲಿ 42 ವರ್ಷದ ಧೋನಿ ಆರ್​ಸಿಬಿಯ ಡ್ರೆಸ್ಸಿಂಗ್ ರೂಮ್​ನಲ್ಲಿ ಏಕಾಏಕಿ ಕಾಣಿಸಿಕೊಂಡರು.

VISTARANEWS.COM


on

MS Dhoni
Koo

ಬೆಂಗಳೂರು : ಆರ್​ಸಿಬಿ ಮತ್ತು ಚೆನ್ನೈ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗ ಆರ್​ಸಿಬಿ ಆಟಗಾರರು ಹಾಗೂ ಚೆನ್ನೈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬಿಸಿ ಬಿಸಿ ಚಹಾ ಕುಡಿದು ಸಂಭ್ರಮಿಸುತ್ತಿದ್ದಾರೆ. ಇದು ನಡೆದಿರುವುದು ಗುರುವಾರ ಬೆಳಗ್ಗೆ ಅಭ್ಯಾಸದ ಅವಧಿಯಲ್ಲಿ. ಚಿನ್ನಸ್ವಾಮಿ ಸ್ಟೇಡಿಯಮ್​​ಲ್ಲಿದ್ದ ಆರ್​ಸಿಬಿ ಶಿಬಿರವು ಎಂ.ಎಸ್. ಧೋನಿಯನ್ನು ಬಿಸಿ ಕಪ್ ಚಹಾದೊಂದಿಗೆ ಸ್ವಾಗತಿಸಿತು. ಆರ್​ಸಿಬಿ ಡ್ರೆಸ್ಸಿಂಗ್ ರೂಮ್​ಗೆ ಭೇಟಿ ನೀಡಿದ ಧೋನಿಗೆ ತಂಡದ ಸಹಾಯಕ ಸಿಬ್ಬಂದಿ ಬಿಸಿ ಬಿಸಿ ಚಹಾವನ್ನು ನೀಡಿ ಸತ್ಕರಿಸಿದರು. ಬೆಂಗಳೂರಿನ ಮೋಡ ಮುಸುಕಿದ ಹವಾಮಾನದ ನಡುವೆ, ಧೋನಿ ತಮ್ಮ ತರಬೇತಿಯ ಸಮಯದಲ್ಲಿ ತಮ್ಮ ನೆಚ್ಚಿನ ಪಾನೀಯ ಸೇವಿಸಿದರು.

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿವೆ. ಆರ್​ಸಿಬಿ ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ವಿಷಯವನ್ನು ಹೇಳಲಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸದ ಸಮಯದಲ್ಲಿ 42 ವರ್ಷದ ಧೋನಿ ಆರ್​ಸಿಬಿಯ ಡ್ರೆಸ್ಸಿಂಗ್ ರೂಮ್​ನಲ್ಲಿ ಏಕಾಏಕಿ ಕಾಣಿಸಿಕೊಂಡರು.

ಧೋನಿ ಸಿಎಸ್​ಕೆ ತರಬೇತಿ ಕಿಟ್ ಧರಿಸಿ ಡ್ರೆಸ್ಸಿಂಗ್ ರೂಮ್​ನಿಂದ ಹೊರನಡೆದಿರುವ ವಿಡಿಯೊ ಬಹಿರಂಗಗೊಂಡಿದೆ. ಫ್ರಾಂಚೈಸಿ ಈ ಪೋಸ್ಟ್​ಗೆ “ವೆಲ್ಕಮ್ ಟು ಬೆಂಗಳೂರು ಮಹಿ” ಎಂದು ಶೀರ್ಷಿಕೆ ನೀಡಲಾಗಿದೆ.

ಇದನ್ನೂ ಓದಿ: IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

ಕಳೆದ ವರ್ಷ ಸಂದರ್ಶನವೊಂದರಲ್ಲಿ ಎಂಎಸ್ ಧೋನಿ ತಮ್ಮನ್ನು ಅನುಭವಿ ಎಂದು ಕರೆದುಕೊಂಡಿದ್ದರು. ಚಹಾವು ಅದರ ಸರಳತೆಯ ಪ್ರತಿಕೆ ಎಂದರು. ಎಲ್ಲಾದರೂ ಅಭ್ಯಾಸಕ್ಕೆ ಹೋದಾಗ ಮತ್ತು ಯಾರಾದರೂ ಅವರಿಗೆ ಚಹಾ ನೀಡಿದರೆ ಅವರು ಯಾವಾಗಲೂ ಸಂತೋಷ ಪಡುತ್ತೇನೆ ಎಂದು ಹೇಳಿದ್ದರು. ಬೆಂಗಳೂರು ಫ್ರಾಂಚೈಸಿ ವಿರುದ್ಧ 35 ಪಂದ್ಯಗಳಲ್ಲಿ 140.77 ಸ್ಟ್ರೈಕ್​​​ರೇಟ್​​ನಲ್ಲಿ 839 ರನ್ ಗಳಿಸಿದ್ದಾರೆ.

ಆರ್ಸಿಬಿ-ಸಿಎಸ್ಕೆ ಪಂದ್ಯದ ವೇಳೆ ಮಳೆ ಭೀತಿ?

ಬೆಂಗಳೂರಿನಲ್ಲಿ ಶನಿವಾರ ಮಳೆಯ ಮುನ್ಸೂಚನೆ ನೀಡಲಾಗಿದೆ. ಹವಾಮಾನ ತಜ್ಞರ ಭವಿಷ್ಯವಾಣಿಗಳು ಬೆಂಗಳೂರು ಮೂಲದ ಫ್ರಾಂಚೈಸಿಯ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯಾಗಿದೆ. ಆದಾಗ್ಯೂ, ಎರಡೂ ತಂಡಗಳು, ವಿಶೇಷವಾಗಿ ಆರ್​​ಸಿಬಿ ಮುಖಾಮುಖಿಯ ದಿನದಂದು ಮಳೆಗಾಲದ ಹವಾಮಾನ ಊಹಿಸುವುದಿಲ್ಲ.

Continue Reading

ಪ್ರಮುಖ ಸುದ್ದಿ

IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

VISTARANEWS.COM


on

IPL 2024
Koo

ಹೈದರಾಬಾದ್​​: ಇಲ್ಲಿ ಗುರುವಾರ ನಿಗದಿಯಾಗಿದ್ದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​ (Sunrisers Hyderabad) ತಂಡ ಬೆವರು ಸುರಿಸದೇ 2024ನೇ ಆವೃತ್ತಿಯ (IPL 2024) ಐಪಿಎಲ್​ನ ಪ್ಲೇಆಫ್​​ಗೆ ಪ್ರವೇಶಿಸಿತು. ಕೋಲ್ಕತಾ ಮತ್ತು ರಾಜಸ್ಥಾನದ ನಂತರ ಐಪಿಎಲ್ 2024 ರ ಪ್ಲೇಆಫ್​​ಗೆ ಅರ್ಹತೆ ಪಡೆದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಎಸ್​ಆರ್​ಎಚ್​ ಪಾತ್ರವಾಯಿತು. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ (ಮೇ 16) ಗುಜರಾತ್ ವಿರುದ್ಧ ಸೆಣಸಬೇಕಾಗಿತ್ತು. ಆದರೆ ಪಂದ್ಯ ಟಾಸ್​ ಕೂಡ ಕಾಣದೆ ಮಳೆಯಿಂದಾಗಿ ರದ್ದಾಯಿತು. ಹೀಗಾಗಿ 2016ರ ಚಾಂಪಿಯನ್ಸ್ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವುದನ್ನು ಖಚಿತಪಡಿಸಿಕೊಂಡಿತು.

2020ರ ಬಳಿಕ ಇದೇ ಮೊದಲ ಬಾರಿಗೆ ಸನ್ರೈಸರ್ಸ್ ಪ್ಲೇ ಆಫ್ ಹಂತ ತಲುಪಿದೆ. ಮಾಜಿ ಚಾಂಪಿಯನ್​ಗಳು ​2021, 2022 ಮತ್ತು 2023 ರಲ್ಲಿ ಕ್ರಮವಾಗಿ 8, 8 ಮತ್ತು 10 ನೇ ಸ್ಥಾನಗಳನ್ನು ಪಡೆದುಕೊಂಡಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್​ ​ಷಿಪ್​​ ಮತ್ತು ಏಕದಿನ ವಿಶ್ವಕಪ್ ಗೆಲುವಿನ ನಂತರ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿರುವ ನಾಯಕ ಪ್ಯಾಟ್ ಕಮಿನ್ಸ್, ಐಪಿಎಲ್ 2024 ರಲ್ಲಿ ನಿರ್ಭೀತ ಬ್ರಾಂಡ್ ಕ್ರಿಕೆಟ್ ಆಡುತ್ತಿದ್ದಾರೆ.

ಪಂದ್ಯಕ್ಕೆ ಮುಂಚಿತವಾಗಿ ನಿರಂತರವಾಗಿ ಮಳೆ ಸುರಿಯಿತು. 10 ಗಂಟೆ ದಾಟಿದರೂ ಪಿಚ್​ನಿಂದ ಟಾರ್ಪಾಲ್​ ತೆಗೆಯಲು ಸಾಧ್ಯವಾಗಲಿಲ್ಲ. ನಾಯಕರಾದ ಪ್ಯಾಟ್ ಕಮಿನ್ಸ್ ಮತ್ತು ಶುಬ್ಮನ್ ಗಿಲ್ ಪಿಚ್ ಅನ್ನು ಅನೇಕ ಬಾರಿ ಪರಿಶೀಲನೆ ನಡೆಸಿದರು. ಆದರೆ ಅವರು ತಮ್ಮ ತರಬೇತಿ ಕಿಟ್​​ ಧರಿಸಿದರೇ ಹೊರತು ಮ್ಯಾಚ್​ ಕಿಟ್​ ಧರಿಸಲಿಲ್ಲ. . ಮಳೆಯ ಹೊರತಾಗಿಯೂ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ತವರು ತಂಡವನ್ನು ಹುರಿದುಂಬಿಸಲು ದೊಡ್ಡ ಪ್ರಮಾಣದ ಪ್ರೇಕ್ಷಕರು ಇದ್ದರು. ಎಸ್ಆರ್​ಎಚ್​ ಪ್ಲೇಆಫ್​ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳಿಗಾಗಿ ಲಘು ಪ್ರದರ್ಶನ ಮತ್ತು ಸಂಗೀತ ಆಯೋಜಿಸಲಾಗಿತ್ತು.

ಇದನ್ನೂ ಓದಿ: IPL 2024 : ವಾಂಖೆಡೆ ಸ್ಟೇಡಿಯಮ್​ನಲ್ಲಿ ಗುದ್ದಾಡಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರರು; ಇಲ್ಲಿದೆ ವಿಡಿಯೊ

ಹೈದರಾಬಾದ್​​ನ ನಡೆದ ಪಂದ್ಯದಲ್ಲಿ ಒಂದು ಅಂಕ ಗಳಿಸುವ ಮೂಲಕ ಸನ್​ರೈಸರ್ಸ್​ ಹೈದರಾಬಾದ್​​ 13 ಪಂದ್ಯಗಳಿಂದ 15 ಅಂಕಗಳನ್ನು ಗಳಿಸಿದೆ. ಮೇ 19ರಂದು ಪಂಜಾಬ್ ವಿರುದ್ಧ ತವರಿನಲ್ಲಿ ಸೆಣಸಲಿರುವ ಪ್ಯಾಟ್ ಕಮಿನ್ಸ್ ಪಡೆಗೆ ಅಗ್ರ ಎರಡು ಸ್ಥಾನಗಳನ್ನು ಗಳಿಸುವ ಅವಕಾಶವಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆಕೆಆರ್ ವಿರುದ್ಧ ಕ್ವಾಲಿಫೈಯರ್ 1ರಲ್ಲಿ ಆಡುವ ಅವಕಾಶ ಸಿಗಲಿದೆ. . ಎಸ್​ಆರ್​​ಎಚ್​​ ಅರ್ಹತೆಯು ದೆಹಲಿ ಮತ್ತು ಲಕ್ನೋದ ಪ್ಲೇಆಫ್ ಭರವಸೆಗಳನ್ನು ಕೊನೆಗೊಳಿಸಿತು. ಶನಿವಾರ ಬೆಂಗಳೂರಿನಲ್ಲಿ ಆರ್​​ಸಿಬಿ ಮತ್ತು ಸಿಎಸ್​ಕೆ ನಡುವಿನ ಬಹುನಿರೀಕ್ಷಿತ ಪಂದ್ಯದ ಕಿಚ್ಚನ್ನು ಹೆಚ್ಚಿಸಿತು.

ಗುಜರಾತ್ ಗೆ ನಿರಾಶಾದಾಯಕ ಅಭಿಯಾನ

ಮಳೆಯಿಂದಾಗಿ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಿದ ನಂತರ ಗುಜರಾತ್ ತನ್ನ ಋತುವನ್ನು ಕೊನೆಯ ನಾಲ್ಕರಲ್ಲಿ ಕೊನೆಗೊಳಿಸಬೇಕಾಯಿತು. ಅಹ್ಮದಾಬಾದ್​ನಲ್ಲಿ ಕೆಕೆಆರ್ ವಿರುದ್ಧ ಜಿಟಿಯ ಕೊನೆಯ ತವರು ಪಂದ್ಯವೂ ಕೆಟ್ಟ ಹವಾಮಾನದಿಂದಾಗಿ ರದ್ದಾಗಿತ್ತು. 2022 ರಲ್ಲಿ ಪ್ರಶಸ್ತಿ ಗೆದ್ದ ಮತ್ತು 2022 ರಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಗುಜರಾತ್​ಗೆ ಇದು ನಿರಾಶಾದಾಯಕ ಅಭಿಯಾನ. ಏಕೆಂದರೆ ಹೊಸ ನಾಯಕ ಶುಭ್ಮನ್ ಗಿಲ್ ಅವರ ಅಡಿಯಲ್ಲಿ ತಂಡವು ಪ್ರತಿಭೆಯ ಕಿಡಿಗಳನ್ನು ಹೊಂದಿದ್ದರೂ ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡಿತು.

ಸನ್ರೈಸರ್ಸ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಎರಡನೇ ಸ್ಥಾನಕ್ಕೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ. ನಾಲ್ಕು ಪಂದ್ಯಗಳ ಸೋಲಿನ ಹಾದಿಯಲ್ಲಿರುವ ರಾಜಸ್ಥಾನ್ ಭಾನುವಾರ ಗುವಾಹಟಿಯಲ್ಲಿ ಕೆಕೆಆರ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಕಳೆದುಕೊಳ್ಳಲಿ ಎಂದು ಅವರು ಪ್ರಾರ್ಥಿಸಬೇಕಾಗಿದೆ. ರಾಜಸ್ಥಾನ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದರೆ, ಆ ತಂಡ ಎರಡನೇ ಸ್ಥಾನ ಪಡೆಯುತ್ತದೆ.

Continue Reading
Advertisement
shoot out doddaballapur murder case
ಕ್ರೈಂ15 mins ago

Shoot Out: ದೊಡ್ಡಬಳ್ಳಾಪುರ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ

Narendra Modi
Lok Sabha Election 202418 mins ago

Narendra Modi: ಅಪ್ರಾಮಾಣಿಕನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ: ವಿಪಕ್ಷಕ್ಕೆ ಪ್ರಧಾನಿ ಮೋದಿ ತಿರುಗೇಟು

Pakistan
ವಿದೇಶ23 mins ago

Pakistan: ಟಾಪ್‌ ಕಂಪನಿಗಳಲ್ಲಿ ಭಾರತೀಯರೇ CEO; ಆದರೆ ನಮ್ಮ ಮಕ್ಕಳು? ಪಾಕ್‌ ಸಂಸದನ ವಿಡಿಯೊ ವೈರಲ್‌

Rashmika Madanna Appreciation Post PM Modi Reacts
ಟಾಲಿವುಡ್24 mins ago

Rashmika Mandanna: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಪೋಸ್ಟ್‌ಗೆ ಪ್ರಧಾನಿ ಮೋದಿ ಮೆಚ್ಚುಗೆ!

RCB vs CSK
ಕ್ರೀಡೆ29 mins ago

RCB vs CSK: ಚೆನ್ನೈ-ಆರ್​ಸಿಬಿ ಪಂದ್ಯಕ್ಕೆ ಹವಾಮಾನ ಇಲಾಖೆ ನೀಡಿದ ಎಚ್ಚರಿ ಏನು?

illegal hunting chikkamagaluru
ಕ್ರೈಂ40 mins ago

Illegal hunting: ಶಿಕಾರಿಗೆ ತೆರಳಿದ ಯುವಕನಿಗೆ ಗುಂಡು ತಗುಲಿ ಸಾವು, ಆಕಸ್ಮಿಕವೋ ಕೊಲೆಯೋ?

Cannes 2024 Aishwarya Rai turns lady in black in Falguni
ಸಿನಿಮಾ46 mins ago

Cannes 2024: ಬ್ಯಾಂಡೇಜ್​ ಸುತ್ತಿಕೊಂಡೇ ರೆಡ್​ ಕಾರ್ಪೆಟ್ ಮೇಲೆ ಪೋಸ್‌ ಕೊಟ್ಟ ​ಐಶ್ವರ್ಯಾ ರೈ!

These foods are really what our body needs in summer
ಆರೋಗ್ಯ1 hour ago

Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

Lok Sabha Election 2024
ದೇಶ1 hour ago

Lok Sabha Election 2024: ಬಿಜೆಪಿ 400+ ಸೀಟು ಗೆಲ್ಲುತ್ತಾ? ಸಟ್ಟಾ ಬಜಾರ್ ಲೇಟೆಸ್ಟ್ ಲೆಕ್ಕಾಚಾರ ಹೀಗಿದೆ

Medical Negligence
ದೇಶ1 hour ago

ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ17 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ19 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು22 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌