David Johnson: ಮೃತ ಡೇವಿಡ್ ಜಾನ್ಸನ್ ಯಾರು? ಇವರ ಕ್ರಿಕೆಟ್​ ಸಾಧನೆ ಏನು? - Vistara News

ಕ್ರೀಡೆ

David Johnson: ಮೃತ ಡೇವಿಡ್ ಜಾನ್ಸನ್ ಯಾರು? ಇವರ ಕ್ರಿಕೆಟ್​ ಸಾಧನೆ ಏನು?

David Johnson: 90ರ ಕಾಲಘಟ್ಟದಲ್ಲಿ ಅತಿವೇಗದ ಬೌಲಿಂಗ್ ಮಾಡುತ್ತಿದ್ದ ಜಾನ್ಸನ್, 1995-96ರಲ್ಲಿ ಕೇರಳದ ವಿರುದ್ಧದ ಪಂದ್ಯದಲ್ಲಿ ಹತ್ತು ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು. ಮೊದಲ ಇನಿಂಗ್ಸ್​ನಲ್ಲಿ 63ಕ್ಕೆ 6 ವಿಕೆಟ್​ ಮತ್ತು ದ್ವಿತೀಯ ಇನಿಂಗ್ಸ್​ನಲ್ಲಿ 89ಕ್ಕೆ 4 ಕೆಡವಿದ್ದರು

VISTARANEWS.COM


on

David Johnson
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕ ಮೂಲದ, ಟೀಮ್​ ಇಂಡಿಯಾ ಮಾಜಿ ಆಟಗಾರ ಡೇವಿಡ್ ಜಾನ್ಸನ್(David Johnson) ಭಾರತ ಪರ ಕೇವಲ 2 ಟೆಸ್ಟ್​ ಪಂದ್ಯವನ್ನಾಡಿದ್ದರೂ ಕೂಡ ಅವರು ನಿರ್ಮಿಸಿದ ದಾಖಲೆಯೊಂದನ್ನು ಈಗಲೂ ಟೀಮ್​ ಇಂಡಿಯಾ ಬೌಲರ್​ಗಳಿಂದ ಮುರಿಯಲು ಸಾಧ್ಯವಾಗಿಲ್ಲ. ಈ ದಾಖಲೆ ಯಾವುದು?, ಅವರ ಕ್ರಿಕೆಟ್​ ಸಾಧನೆ ಏನು? ಎಂಬ ಮಾಹಿತಿ ಇಂತಿದೆ.

1971ರ ಅಕ್ಟೋಬರ್ 16ರಂದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಜನಿಸಿದ ಡೇವಿಡ್ ಜಾನ್ಸನ್, ಆರಂಭಿಕ ದಿನಗಳಲ್ಲಿ ಟೆನ್ನಿಸ್​ ಬಾಲ್​ ಕ್ರಿಕೆಟ್​ನಲ್ಲಿ ಸ್ಥಳೀಯ ಕ್ರಿಕೆಟ್​ ಟೂರ್ನಿಗಳಲ್ಲಿ ವೇಗದ ಬೌಲಿಂಗ್​ ನಡೆಸಿ ವಿಕೆಟ್​ ಕೀಳುತ್ತಿದ್ದರು. ಪಂದ್ಯವೊಂದರಲ್ಲಿ ಅವರು 8 ವಿಕೆಟ್​ ಕಿತ್ತು ಮಿಂಚಿದ್ದರು. ಇದೇ ವೇಳೆ ಈ ಪಂದ್ಯವನ್ನು ನೋಡುತ್ತಿದ್ದ ಅವರ ಗೆಳೆಯನೊಬ್ಬ ಜಾನ್ಸನ್ ಅವರನ್ನು ಸ್ವಸ್ತಿಕ್​ ಕ್ರಿಕೆಟ್​ ಕ್ಲಬ್​ಗೆ ಸೇರಿಸಿದ್ದರು. ಆಗ ಜಾನ್ಸನ್​ಗೆ ಕೇವಲ 17 ವರ್ಷವಾಗಿತ್ತು. ಈ ಕ್ರಿಕೆಟ್​ ಕ್ಲಬ್​ನಲ್ಲಿ ಸ್ಟಿಚ್​ ಬೌಲಿಂಗ್​ ಅಭ್ಯಾಸ ನಡೆಸಿ ಹಂತ ಹಂತವಾಗಿ ಬೆಳೆದ ಅವರು ಬಳಿಕ ಕರ್ನಾಟಕ ಪರ ಅಂಡರ್​-19 ಪಂದ್ಯವನ್ನಾಡಿ ಕೇವಲ ಎರಡು ಪಂದ್ಯಗಳಿಂದ 13 ವಿಕೆಟ್​ ಕಿತ್ತು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದರು.


10 ವಿಕೆಟ್​ ಸರದಾರ


90ರ ಕಾಲಘಟ್ಟದಲ್ಲಿ ಅತಿವೇಗದ ಬೌಲಿಂಗ್ ಮಾಡುತ್ತಿದ್ದ ಜಾನ್ಸನ್, 1995-96ರಲ್ಲಿ ಕೇರಳದ ವಿರುದ್ಧದ ಪಂದ್ಯದಲ್ಲಿ ಹತ್ತು ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು. ಮೊದಲ ಇನಿಂಗ್ಸ್​ನಲ್ಲಿ 63ಕ್ಕೆ 6 ವಿಕೆಟ್​ ಮತ್ತು ದ್ವಿತೀಯ ಇನಿಂಗ್ಸ್​ನಲ್ಲಿ 89ಕ್ಕೆ 4 ಕೆಡವಿದ್ದರು. ಇದಾದ ಬಳಿಕ ಬಂಗಾಳದ ವಿರುದ್ಧ 49 ಕ್ಕೆ 4 ಮತ್ತು ಬರೋಡಾ ವಿರುದ್ಧ 91 ಕ್ಕೆ 5 ವಿಕೆಟ್​ ಕಬಳಿಸಿದ್ದರು. ಅವರ ಈ ಬೌಲಿಂಗ್​ ಪ್ರದರ್ಶನ ಕಂಡು ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಗೆ ಟೀಮ್​ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿತ್ತು.

ಇದನ್ನು ಓದಿ David Johnson: ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಸಾವು; ಖಿನ್ನತೆಯಿಂದ ಆತ್ಮಹತ್ಯೆ?

ಗಂಟೆಗೆ 157.8 ಕಿ. ಮೀಟರ್ ವೇಗದಲ್ಲಿ ಬೌಲಿಂಗ್​…


1996ರಲ್ಲಿ ದೆಹಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಜಾವಗಲ್​ ಶ್ರೀನಾಥ್​ ಅವರು ಗಾಯಗೊಂಡ ಕಾರಣ ಅವರ ಸ್ಥಾನದಲ್ಲಿ ಜಾನ್ಸನ್ ಆಡುವ ಅವಕಾಶ ಪಡೆದರು. ಅದು ಅವರ ಚೊಚ್ಚಲ ಪಂದ್ಯವಾಗಿತ್ತು. ಮೊದಲ ಇನಿಂಗ್ಸ್​ನಲ್ಲಿ ಅವರಿಗೆ ವಿಕೆಟ್​ ಕೀಳಲು ಸಾಧ್ಯವಾಗಲಿಲ್ಲ. ಆದರೆ ದ್ವಿತೀಯ ಇನಿಂಗ್ಸ್​ನಲ್ಲಿ ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ಬೆಂಡೆಸೆದು ​ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಅವರ ವಿಕೆಟ್​ ಉರುಳಿಸಿದರು. ಇದೇ ವೇಳೆ ಭಾರತ ಪರ ಅತಿ ವೇಗದಲ್ಲಿ ಬೌಲಿಂಗ್​ ನಡೆಸಿದ ದಾಖಲೆಯನ್ನು ನಿರ್ಮಿಸಿದರು. ಸದ್ಯ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇದು ದಾಖಲೆಯಾಗಿಯೇ ಉಳಿದಿದೆ. ದೇಶೀಯ ಕ್ರಿಕೆಟ್​ನಲ್ಲಿ ಅತಿ ವೇಗದ ಬೌಲಿಂಗ್​ ನಡೆಸಿದ ದಾಖಲೆ ಮಯಾಂಕ್​ ಯಾದವ್ ಹೆಸರಿನಲ್ಲಿದೆ. ಇದೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಲಕ್ನೋ ತಂಡದ ಮಯಾಂಕ್​ ಯಾದವ್​ 156.7 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್​ ನಡೆಸಿದ್ದರು.


ಅವಕಾಶವೇ ನೀಡಲಿಲ್ಲ…


ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 39 ಪಂದ್ಯಗಳಿಂದ 437 ರನ್​, 125 ವಿಕೆಟ್​, ಲಿಸ್ಟ್​ 2 ಕ್ರಿಕೆಟ್​ನಲ್ಲಿ 33 ಪಂದ್ಯಗಳನ್ನಾಡಿ 118 ರನ್, 41 ವಿಕೆಟ್​​ ಕಲೆಹಾಕಿದ್ದಾರೆ. ಭಾರತ ಪರ 2 ಟೆಸ್ಟ್​ ಪಂದ್ಯಗಳನ್ನಾಡಿ 8 ರನ್​ ಸಹಿತ 3 ವಿಕೆಟ್​ ಕಿತ್ತಿದ್ದಾರೆ. ವಿಪರ್ಯಾಸವೆಂದರೆ ಉತ್ತಮ ಬೌಲಿಂಗ್​ ಸಾಧನೆ ತೋರಿದ್ದರೂ ಕೂಡ ಅವರನ್ನು ಕೇವಲ 2 ಪಂದ್ಯಗಳಿಗೆ ಸೀಮಿತರನ್ನಾಗಿ ಮಾಡಿ ಆ ಬಳಿಕ ತಂಡದಿಂದ ಕೈಬಿಡಲಾಗಿತ್ತು. ಕೊನೆಯ ಪಂದ್ಯವಾಡಿದ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್​ ಕಿತ್ತಿದ್ದರು.


ವಿಪರೀತ ಕುಡಿತದ ಚಟ ಹೊಂದಿದ್ದ ಡೇವಿಡ್ ಜಾನ್ಸನ್ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಖಿನ್ನತೆಗೆ ಜಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿ ಹಲವು ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Chris Silverwood : ಲಂಕಾ ಕೋಚ್​ ಕ್ರಿಸ್​ ಸಿಲ್ವರ್​ವುಡ್​​ ಏಕಾಏಕಿ ರಾಜೀನಾಮೆ

Chris Silverwood : ಅವರ ಮುಂದಾಳತ್ವದ ಶ್ರೀಲಂಕಾ ಏಕದಿನ ಸ್ವರೂಪದಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರು ಸರಣಿ ಗೆಲುವು ಮತ್ತು ಬಾಂಗ್ಲಾದೇಶದ ವಿರುದ್ಧ ಎರಡು ವಿದೇಶ ಟೆಸ್ಟ್ ಸರಣಿ ಗೆಲುವುಗಳು ಸೇರಿದಂತೆ ಗಮನಾರ್ಹ ದ್ವಿಪಕ್ಷೀಯ ಸರಣಿ ಗೆಲುವುಗಳನ್ನು ಗಳಿಸಿತು. ಏತನ್ಮಧ್ಯೆ, ಸಿಲ್ವರ್​ವುಡ್​ ತನ್ನ ನಿರ್ಗಮನಕ್ಕೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ.

VISTARANEWS.COM


on

Chris Silverwood
Koo

ಬೆಂಗಳೂರು: ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕ್ರಿಸ್ ಸಿಲ್ವರ್​ವುಡ್​ (Chris Silverwood ) ಏಕಾಏಕಿ ರಾಜೀನಾಮೆ ಪಡೆದಿದ್ದಾರೆ. ಭಾರತದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್ ಮತ್ತು ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆದ 2024 ರ ಟಿ 20 ವಿಶ್ವಕಪ್​​ನಲ್ಲಿ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ ಅವರು ರಾಜೀನಾಮೆ ಕೊಟ್ಟಿದ್ದಾರೆ. ಶ್ರೀಲಂಕಾದೊಂದಿಗಿನ ಸಿಲ್ವರ್​ವುಡ್​ ಅವರ ಅಧಿಕಾರಾವಧಿ ಉತ್ತಮವಾಗಿ ಪ್ರಾರಂಭಗೊಂಡಿದ್ದರು. ತಂಡವು 2022 ರ ಟಿ 20 ಏಷ್ಯಾ ಕಪ್​​ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿತ್ತು. 2023 ರಲ್ಲಿ 50 ಓವರ್​ಗಳ ಏಷ್ಯಾ ಕಪ್​ನಲ್ಲಿ ಫೈನಲ್​ಗೆ ಅರ್ಹತೆ ಪಡೆದಿತ್ತು.

ಅವರ ಮುಂದಾಳತ್ವದ ಶ್ರೀಲಂಕಾ ಏಕದಿನ ಸ್ವರೂಪದಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರು ಸರಣಿ ಗೆಲುವು ಮತ್ತು ಬಾಂಗ್ಲಾದೇಶದ ವಿರುದ್ಧ ಎರಡು ವಿದೇಶ ಟೆಸ್ಟ್ ಸರಣಿ ಗೆಲುವುಗಳು ಸೇರಿದಂತೆ ಗಮನಾರ್ಹ ದ್ವಿಪಕ್ಷೀಯ ಸರಣಿ ಗೆಲುವುಗಳನ್ನು ಗಳಿಸಿತು. ಏತನ್ಮಧ್ಯೆ, ಸಿಲ್ವರ್​ವುಡ್​ ತನ್ನ ನಿರ್ಗಮನಕ್ಕೆ ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ.

ಅಂತಾರಾಷ್ಟ್ರೀಯ ಕೋಚ್ ಆಗಿರುವುದು ಎಂದರೆ ಪ್ರೀತಿಪಾತ್ರರಿಂದ ದೂರವಿರುವುದು ಎಂದರ್ಥ. ನನ್ನ ಕುಟುಂಬದೊಂದಿಗೆ ಸುದೀರ್ಘ ಸಂಭಾಷಣೆಯ ನಂತರ ಮತ್ತು ಭಾರವಾದ ಹೃದಯದಿಂದ, ನಾನು ಮನೆಗೆ ಮರಳಲು ಮತ್ತು ಒಟ್ಟಿಗೆ ಕೆಲವು ಗುಣಮಟ್ಟದ ಸಮಯವನ್ನು ಕಳೆಯಲು ನಿರ್ಧಾರ ತೆಗೆದುಕೊಂಡಿದ್ದೇನೆ. ಉತ್ತಮ ನಿರ್ಧಾರಕ್ಕೆ ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ “ಎಂದು ಸಿಲ್ವರ್​ ವುಡ್​ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಶ್ರೀಲಂಕಾದಲ್ಲಿದ್ದಾಗ ಬೆಂಬಲ ನೀಡಿದ ಆಟಗಾರರು, ತರಬೇತುದಾರರು, ಬ್ಯಾಕ್ರೂಮ್ ಸಿಬ್ಬಂದಿ ಮತ್ತು ಎಸ್ಎಲ್ಸಿಯ ಆಡಳಿತ ಮಂಡಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಬೆಂಬಲವಿಲ್ಲದೆ, ಯಾವುದೇ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ. ಶ್ರೀಲಂಕಾ ಕ್ರಿಕೆಟ್​ ಭಾಗವಾಗಿರುವುದು ನನಗೆ ನಿಜವಾದ ಗೌರವವಾಗಿದೆ ಮತ್ತು ನಾನು ಅನೇಕ ಪ್ರೀತಿಯ ನೆನಪುಗಳನ್ನು ತೆಗೆದುಹಾಕುತ್ತೇನೆ, “ಎಂದು ಅವರು ಹೇಳಿದರು.

ಸಲಹೆಗಾರ ಹುದ್ದೆಯಿಂದ ಮಹೇಲಾ ಜಯವರ್ಧನೆ ರಾಜೀನಾಮೆ

ಸಿಲ್ವರ್ವುಡ್ ರಾಜೀನಾಮೆ ನೀಡುವ ಮೊದಲು, ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರು 2022 ರಿಂದ ತಾವು ಹೊಂದಿದ್ದ ಸಲಹೆಗಾರ ಹುದ್ದೆಯಿಂದ ಕೆಳಗಿಳಿದಿದ್ದರು.

ಇದನ್ನೂ ಓದಿ: Louis Kimber: 127 ಎಸೆತಗಳಲ್ಲಿ 243 ರನ್ ಚಚ್ಚಿ ಹಲವು ದಾಖಲೆಗಳನ್ನು ಬರೆದ ಕೌಂಟಿ ಆಟಗಾರ ಲೂಯಿಸ್ ಕಿಂಬರ್

ಟಿ 20 ವಿಶ್ವಕಪ್​​ನಲ್ಲಿ ವನಿಂದು ಹಸರಂಗ ನೇತೃತ್ವದ ತಂಡದ ಪ್ರದರ್ಶನವು ವಿಶೇಷವಾಗಿ ನಿರಾಶಾದಾಯಕವಾಗಿತ್ತು. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೇಪಾಳ ಮತ್ತು ನೆದರ್ಲ್ಯಾಂಡ್ಸ್ ಜೊತೆಗೆ ಮೊದಲ ಸುತ್ತಿನ ಗ್ರೂಪ್ ಡಿ ನಲ್ಲಿ ಸ್ಥಾನ ಪಡೆದ ಮಾಜಿ ಚಾಂಪಿಯನ್​​ಗಳು ಆರಂಭಿಕ ಹಂತವನ್ನು ಮೀರಿ ಮುನ್ನಡೆಯಲು ವಿಫಲಗೊಂಡಿದ್ದರು. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದ ವಿರುದ್ಧದ ಆರಂಭಿಕ ಸೋಲುಗಳು ಅವರ ಅವಕಾಶಗಳನ್ನು ತೀವ್ರವಾಗಿ ದುರ್ಬಲಗೊಳಿಸಿತ್ತು. ನೇಪಾಳ ವಿರುದ್ಧದ ಪಂದ್ಯವು ರದ್ದಾಗಿತ್ತು. ತಂಡದ ಏಕೈಕ ಗೆಲುವು ನೆದರ್ಲ್ಯಾಂಡ್ಸ್​ ವಿರುದ್ಧ ಬಂದಿತು. ಇದು ಯಾವುದೇ ಪರಿಣಾಮ ಬೀರಿರಲಿಲ್ಲ.

ಈ ಹಿನ್ನಡೆಯ ನಂತರ ಶ್ರೀಲಂಕಾ ಪುನರ್ನಿರ್ಮಾಣ ಮಾಡಲು ನೋಡುತ್ತಿರುವುದರಿಂದ, ಅವರ ಗಮನವು ಜುಲೈ ಮತ್ತು ಆಗಸ್ಸ್​ನಲ್ಲಿ ಭಾರತದ ವಿರುದ್ಧ ಮುಂಬರುವ ವೈಟ್-ಬಾಲ್ ಸರಣಿಯತ್ತ ತಿರುಗಲಿದೆ. ಮೂರು ಟಿ 20 ಮತ್ತು ಮೂರು ಏಕದಿನ ಪಂದ್ಯಗಳನ್ನು ಒಳಗೊಂಡಿರುವ ಈ ಸರಣಿಯು ತಂಡಕ್ಕೆ ಮರುಸಂಘಟನೆ ಮಾಡಲು ಮತ್ತು ಇತ್ತೀಚಿನ ನಿರಾಶೆಗಳನ್ನು ಬದಿಗಿಡಲು ಅನುವು ಮಾಡಿಕೊಡಲಿದೆ.

Continue Reading

ಪ್ರಮುಖ ಸುದ್ದಿ

Louis Kimber: 127 ಎಸೆತಗಳಲ್ಲಿ 243 ರನ್ ಚಚ್ಚಿ ಹಲವು ದಾಖಲೆಗಳನ್ನು ಬರೆದ ಕೌಂಟಿ ಆಟಗಾರ ಲೂಯಿಸ್ ಕಿಂಬರ್

Louis Kimber : ಕೇವಲ 100 ಎಸೆತಗಳಲ್ಲಿ ದ್ವಿಶತಕ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಕೌಂಟಿ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ ದ್ವಿಶತಕವನ್ನು ದಾಖಲಿಸಿದರು. ಒಟ್ಟಾರೆಯಾಗಿ, ಇದು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಎರಡನೇ ವೇಗದ ದ್ವಿಶತಕ ಅಫ್ಘಾನಿಸ್ತಾನದ ಶಫೀಕುಲ್ಲಾ ಪ್ರಥಮ ದರ್ಜೆ ಕ್ರಿಕೆಟ್​್ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.

VISTARANEWS.COM


on

Louis Kimber
Koo

ಬೆಂಗಳೂರು: ಕೌಂಟಿ ಚಾಂಪಿಯನ್ಶಿಪ್ ಡಿವಿಷನ್ 2ರಲ್ಲಿ ಬ್ಯಾಟರ್ ಲೂಯಿಸ್​ ಕಿಂಬರ್ (Louis Kimber)​ ಬೃಹತ್​ ದಾಖಲೆಯೊಂದನ್ನು ಮಾಡಿದ್ದಾರೆ. ಲೀಸೆಸ್ಟರ್ಶೈರ್ ತಂಡದ ಆಟಗಾರನಾಗಿರು ಅವರು ಸಸೆಕ್ಸ್ ವಿರುದ್ದದ ಪಂದ್ಯದಲ್ಲಿ ಕಿಂಬರ್ ) ಐತಿಹಾಸಿಕ ದ್ವಿಶತಕ ಬಾರಿಸಿದ್ದಾರೆ. ಬಲಗೈ ಬ್ಯಾಟ್ಸ್ಮನ್ ಕೇವಲ 127 ಎಸೆತಗಳಲ್ಲಿ 243 ರನ್ ಗಳಿಸಿದ್ದಾರೆ. ಅವರು ತಮ್ಮ ಸ್ಮರಣೀಯ ಇನ್ನಿಂಗ್ಸ್​​ನಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ ಇನ್ನಿಂಗ್ಸ್ 20 ಬೌಂಡರಿಗಳು ಮತ್ತು ದಾಖಲೆಯ 21 ಸಿಕ್ಸರ್ ಗಳಿಂದ ಕೂಡಿತ್ತು. ತಮ್ಮ ದ್ವಿಶತಕವನ್ನು ತಲುಪುವ ಮೊದಲು, ಅವರು ಇಂಗ್ಲೆಂಡ್ ಸ್ಟಾರ್ ಓಲಿ ರಾಬಿನ್ಸನ್ ಅವರ ಒಂದೇ ಓವರ್​ನಲ್ಲಿ ದಾಖಲೆಯ 43 ರನ್​ ಬಾರಿಸಿದ್ದರು. ಇದು ಕೂಡ ದಾಖಲೆಯೇ ಆಗಿದೆ.

ಲೂಯಿಸ್ ಕಿಂಬರ್ 56 ಎಸೆತಗಳಲ್ಲಿ 72 ರನ್ ಗಳಿಸಿದ್ದ ವೇಲೆ ರಾಬಿನ್ಸನ್ 59 ನೇ ಓವರ್ ಎಸೆಯಲು ಬಂದಿದ್ದರು. ಆ ಓವರ್ ಮುಗಿಯುವ ಹೊತ್ತಿಗೆ ಕಿಂಬರ್​ ಕೇವಲ 65 ಎಸೆತಗಳಲ್ಲಿ 109 ರನ್ ಗಳಿಸಿದ್ದರು. ಅವರು ರಾಬಿನ್ಸನ್ ಓವರ್​ಗೆ ಐದು ಸಿಕ್ಸರ್​ ಹೊಡೆದಿದ್ದರು. ಅವುಗಳಲ್ಲಿ ಮೂರು ನೋ-ಬಾಲ್​ಗಳಿಂದ ಬಂದಿದ್ದವು. ಅವರು ಮೂರು ಫೋರ್​ ಕೂಡ ಬಾರಿಸಿದ್ದರು. ಇದು ಕೌಂಟಿ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಎರಡನೇ ದುಬಾರಿ ಓವರ್.

ಇದನ್ನೂ ಓದಿ: Rashid Khan: ರಶೀದ್ ಖಾನ್​ಗೆ ದಂಡ ವಿಧಿಸಿದ ಐಸಿಸಿ, ಅವರು ಮಾಡಿದ ತಪ್ಪೇನು?

ಲೂಯಿಸ್ ಕಿಂಬರ್ ಶತಕದ ನಂತರವೂ ತಮ್ಮ ದಾಳಿ ಮುಂದುವರಿಸಿದ್ದರು. ಕೇವಲ 100 ಎಸೆತಗಳಲ್ಲಿ ದ್ವಿಶತಕ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಕೌಂಟಿ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ ದ್ವಿಶತಕವನ್ನು ದಾಖಲಿಸಿದರು. ಒಟ್ಟಾರೆಯಾಗಿ, ಇದು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಎರಡನೇ ವೇಗದ ದ್ವಿಶತಕ ಅಫ್ಘಾನಿಸ್ತಾನದ ಶಫೀಕುಲ್ಲಾ ಪ್ರಥಮ ದರ್ಜೆ ಕ್ರಿಕೆಟ್​್ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ಅತಿ ವೇಗದ ದ್ವಿಶತಕ

  • ಶಫಿಗುಲ್ಲಾ – 89 ಎಸೆತಗಳು, ಕಾಬೂಲ್ ಪ್ರದೇಶ (ತಂಡ), ಬೂಸ್ಟ್ ರೀಜನ್ (ವಿರುದ್ಧ) , 2018
  • ಲೂಯಿಸ್ ಕಿಂಬರ್ – 100 ಎಸೆತಗಳು, ಲೀಸೆಸ್ಟರ್ಶೈರ್ (ತಂಡ), ಸಸೆಕ್ಸ್(ವಿರುದ್ಧ) , 2024
  • ತನ್ಮಯ್ ಅಗರ್ವಾಲ್ – 119 ಎಸೆತಗಳು, ಹೈದರಾಬಾದ್ (ತಂಡ), ಅರುಣಾಚಲ ಪ್ರದೇಶ(ವಿರುದ್ಧ) , 2024
  • ರವಿ ಶಾಸ್ತ್ರಿ – 123 ಎಸೆತಗಳು, ಬಾಂಬೆ (ತಂಡ), ಬರೋಡಾ (ವಿರುದ್ಧ), 1985
  • ಅನೂರಿನ್ ಡೊನಾಲ್ಡ್ – 123 ಎಸೆತಗಳು, ಗ್ಲಾಮೋರ್ಗನ್((ತಂಡ)) ಡರ್ಬಿಶೈರ್ (ವಿರುದ್ಧ), 2016

ಅತಿ ಹೆಚ್ಚು ಸಿಕ್ಸರ್​ಗಳ ದಾಖಲೆ

ಲೂಯಿಸ್ ಕೌಂಟಿ ಕ್ರಿಕೆಟ್​​ನ ಇನ್ನಿಂಗ್​​ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದ ದಾಖಲೆ ಮುರಿದರು. ಈ ಹಿಂದೆ 2022ರಲ್ಲಿ ಬೆನ್ ಸ್ಟೋಕ್ಸ್ 17 ಸಿಕ್ಸರ್ ಬಾರಿಸಿದ್ದರು. ಅದೇ ಇನ್ನಿಂಗ್ಸ್​​ನಲ್ಲಿ 27 ವರ್ಷದ ಆಟಗಾರ 8 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಪ್ರಥಮ ದರ್ಜೆಯಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ದಾಖಲೆ ಮುರಿದರು.

ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಹೆಚ್ಚು ಸಿಕ್ಸರ್​ಗಳು

  • 21 – ಲೂಯಿಸ್ ಕಿಂಬರ್, ಸಸೆಕ್ಸ್ (ವಿರುದ್ಧ), 2024
  • 17- ಬೆನ್ ಸ್ಟೋಕ್ಸ್ ,ವೋರ್ಸೆಸ್ಟರ್ಶೈರ್ (ವಿರುದ್ಧ), 2022
    16 – ಆಂಡ್ರ್ಯೂ ಸೈಮಂಡ್ಸ್ , ಗ್ಲಾಮೋರ್ಗನ್ (ವಿರುದ್ಧ), 1995
    16 – ಗ್ರಹಾಂ ನೇಪಿಯರ್, ಸರ್ರೆ (ವಿರುದ್ಧ),, 2011

ಲೂಯಿಸ್ ಕಿಂಬರ್ ಅವರ ಶತಕ ವ್ಯರ್ಥ:

ಲೂಯಿಸ್ ಕಿಂಬರ್ ಅದ್ಭುತ ಆಟವನ್ನು ಆಡಿದರೂ, ಅಂತಿಮವಾಗಿ ಲೀಸೆಸ್ಟರ್ಶೈರ್ 18 ರನ್​ಗಳಿಂದ ಪಂದ್ಯವನ್ನು ಕಳೆದುಕೊಂಡಿರು. ಹೀಗಾಗಿ ಅವರ ಆಟ ಅದು ವ್ಯರ್ಥವಾಯಿತು. 464 ರನ್​ಗಳ ಗುರಿ ಬೆನ್ನಟ್ಟಿದ ಲೀಸೆಸ್ಟರ್ಶೈರ್ 446 ರನ್ಗಳಿಗೆ ಆಲೌಟ್ ಆಯಿತು.

7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದ್ದ ತಂಡದ ಗೆಲ್ಲುವ ಅವಕಾಶಗಳು ಮುಗಿದಿದ್ದವು. ಆದಾಗ್ಯೂ, ಕಿಂಬರ್ ಏಕಾಂಗಿಯಾಗಿ ಆಟದ ಗತಿ ಬದಲಾಯಿಸಿದ್ದರು.

Continue Reading

ಪ್ರಮುಖ ಸುದ್ದಿ

Rashid Khan: ರಶೀದ್ ಖಾನ್​ಗೆ ದಂಡ ವಿಧಿಸಿದ ಐಸಿಸಿ, ಅವರು ಮಾಡಿದ ತಪ್ಪೇನು?

Rashid Khan: ರಶೀದ್ ಖಾನ್ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರನ ಮೇಲೆ ಅಥವಾ ಹತ್ತಿರ ಚೆಂಡು ಅಥವಾ ಇತರ ಯಾವುದೇ ಕ್ರಿಕೆಟ್ ಉಪಕರಣಗಳನ್ನು ಅನುಚಿತ ಅಥವಾ ಅಪಾಯಕಾರಿ ರೀತಿಯಲ್ಲಿ ಎಸೆಯುವುದು ಆರ್ಟಿಕಲ್ 2.9 ರಲ್ಲಿ ಉಲ್ಲಂಘನೆಯಾಗಿದೆ.

VISTARANEWS.COM


on

Rashid Khan
Koo

ನವದೆಹಲಿ: ಅಫಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್​ಗೆ ಐಸಿಸಿ ದಂಡ ವಿಧಿಸಿದೆ. ಟಿ 20 ವಿಶ್ವಕಪ್ 2024ರಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ 8 ಪಂದ್ಯದ ಸಮಯದಲ್ಲಿ ಅವರು ತೋರಿದ ವರ್ತನೆಗೆ ಈ ದಂಡ ವಿಧಿಸಲಾಗಿದೆ. ತನ್ನ ತಂಡದ ಸಹ ಆಟಗಾರನ ವಿರುದ್ಧವೇ ಮೈದಾನದಲ್ಲೇ ಕೋಪಗೊಂಡಿದ್ದಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಬಾಂಗ್ಲಾದೇಶ ವಿರುದ್ಧದ ಅಫ್ಘಾನಿಸ್ತಾನ ಪಂದ್ಯದ ವೇಳೆ ಈ ತಪ್ಪು ಮಾಡಿದ್ದಾರೆ. ಇನ್ನಿಂಗ್ಸ್​ನ ಅಂತಿಮ ಓವರ್​ನಲ್ಲಿ ರಶೀದ್ ಖಾನ್ ಮತ್ತು ಕರೀಮ್ ಜನತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಓವರ್​ನ ಮೂರನೇ ಎಸೆತದಲ್ಲಿ, ರಶೀದ್ ಖಾನ್ ಕವರ್ ಕಡೆಗೆ ಒಂದು ಶಾಟ್ ಹೊಡೆದರು. ಅವರು ಅದಕ್ಕೆ ಎರಡು ರನ್ ಓಡಿ ಸ್ಟ್ರೈಕ್ ಪಡೆಯಲು ಯತ್ನಿಸಿದರು. ಆದರೆ ಕರೀಂ ಓಡಿರಲಿಲ್ಲ. ಇದಕ್ಕೆ ಕೋಪಗೊಂಡ ಅವರು ಬ್ಯಾಟ್ ಎಸೆದಿದ್ದರು.

ಮೊದಲ ಓಟವನ್ನು ತ್ವರಿತವಾಗಿ ಪೂರ್ಣಗೊಳಿಸಿದ ರಶೀದ್​ , ಅವರು ಎರಡನೇ ಓಟಕ್ಕೆ ಮುಂದಾರು. ಆಗಲೇ ಅರ್ಧದಷ್ಟು ಪಿಚ್ ದಾಟಿದ್ದರು. ಆದರೆ ಜನತ್ ಅವರನ್ನು ಹಿಂದಕ್ಕೆ ಕಳುಹಿಸಿದ್ದರು. ಅಫ್ಘಾನ್ ಸೂಪಸ್ಟಾರ್​ಗೆ ಇದು ಇಷ್ಟವಾಗಲಿಲ್ಲ. ಅವರು ತಾಳ್ಮೆ ಕಳೆದುಕೊಂಡರು. ಹತಾಶೆಗೊಂಡ ರಶೀದ್ ಖಾನ್ ಕ್ರೀಸ್​ಗೆ ಮರಳುವ ಮೊದಲು ತಮ್ಮ ಬ್ಯಾಟ್ ಅನ್ನು ನೆಲದ ಮೇಲೆ ಎಸೆಯುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದರು.

ಜನತ್​ ಬ್ಯಾಟ್ ತೆಗೆದುಕೊಂಡು ಅದನ್ನು ತನ್ನ ರಶೀದ್​ಗೆ ಕೊಟ್ಟರು. ಆದರೂ ಅವರ ಕೋಪ ತಣ್ಣಗಾಗಿರಲಿಲ್ಲ. ಇದು ಐಸಿಸಿ ನಿಯಮ ಉಲ್ಲಂಘನೆಯಾಗಿದೆ. ಅವರು ತಮ್ಮ ನಡವಳಿಕೆಗಾಗಿ ಅಧಿಕೃತ ಛೀಮಾರಿ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ. ಇದು 24 ತಿಂಗಳ ಅವಧಿಯಲ್ಲಿ ಅವರ ಮೊದಲ ಅಪರಾಧವಾಗಿದೆ.

ಇದನ್ನೂ ಓದಿ: Rohit Sharma : ನಿಮ್ಮತಲೆಯಲ್ಲಿರುವ ಮೆದುಳು ಉಪಯೋಗಿಸಿ, ಪಾಕ್​ ಮಾಜಿ ನಾಯಕನ ಚೆಂಡು ವಿರೂಪದ ಆರೋಪಕ್ಕೆ ರೋಹಿತ್ ಶರ್ಮಾ ತಿರುಗೇಟು

ರಶೀದ್ ಖಾನ್ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರನ ಮೇಲೆ ಅಥವಾ ಹತ್ತಿರ ಚೆಂಡು ಅಥವಾ ಇತರ ಯಾವುದೇ ಕ್ರಿಕೆಟ್ ಉಪಕರಣಗಳನ್ನು ಅನುಚಿತ ಅಥವಾ ಅಪಾಯಕಾರಿ ರೀತಿಯಲ್ಲಿ ಎಸೆಯುವುದು ಆರ್ಟಿಕಲ್ 2.9 ರಲ್ಲಿ ಉಲ್ಲಂಘನೆಯಾಗಿದೆ.

ಅಫಘಾನಿಸ್ತಾನವನ್ನು 9 ವಿಕೆಟ್​ಗಳಿಂದ ಸೋಲಿಸಿ ಫೈನಲ್​ಗೇರಿದ ದಕ್ಷಿಣ ಆಫ್ರಿಕಾ ತಂಡ


ಮಾರಕ ಬೌಲಿಂಗ್​ ಸಂಘಟಿಸಿದ ದಕ್ಷಿಣ ಆಫ್ರಿಕಾ ತಂಡದ ಇದೇ ಮೊದಲ ಬಾರಿಗೆ ಟಿ20 ವಿಶ್ವ ಕಪ್​​ನಲ್ಲಿ (T20 World Cup 2024: ) ಸೆಮಿಫೈನಲ್​ಗೇರಿದ್ದ ಅಫಘಾನಿಸ್ತಾನ ತಂಡವನ್ನು ಸುಲಭವಾಗಿ 9 ವಿಕೆಟ್​ಗಳಿಂದ ಸೋಲಿಸಿದ ಫೈನಲ್​ಗೇರಿದೆ. ಈ ಮೂಲಕ 2024ರ ಟಿ20 ವಿಶ್ವ ಕಪ್​ನ ಫೈನಲ್​ ಹಣಾಹಣಿಗೆ ಸ್ಥಾನ ಭದ್ರ ಮಾಡಿಕೊಂಡಿದೆ. ಸೆಮಿಫೈನಲ್​ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲಿ ಮಿಂಚಿದ ದಕ್ಷಿಣ ಆಫ್ರಿಕಾ ತಂಡ ಅರ್ಹವಾಗಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ. ಇದೇ ವೇಳೆ ಮೊದಲ ಬಾರಿಗೆ ಫೈನಲ್​ಗೆ ಪ್ರವೇಶ ಮಾಡಲು ತಮಗಿದ್ದ ಅವಕಾಶವನ್ನು ಅಫಘಾನಿಸ್ತಾನ ತಂಡ ಕಳೆದುಕೊಂಡಿದೆ. ಟೂರ್ನಿಯಲ್ಲಿ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬಂದಿದ್ದ ರಶೀದ್​ ಖಾನ್​ ಬಳಗ ಪ್ರಮುಖ ವೇದಿಕೆಯಲ್ಲಿ ಬ್ಯಾಟಿಂಗ್​ನಲ್ಲಿ ಕಳಾಹೀನ ಪ್ರದರ್ಶನ ನೀಡಿತು.

ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆಯೋಜನೆಗೊಂಡಿದ್ದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ 11.5 ಓವರ್​ಗಳಲ್ಲಿ ಕೇವಲ 56 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಹರಿಣಗಳ ಪಡೆ 8.5 ಓವರ್​ಗಳಲ್ಲಿ 1 ವಿಕೆಟ್​ ನಷ್ಟ ಮಾಡಿಕೊಂಡು 60 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಇಂದು ಸಂಜೆ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್​ ತಂಡದ ಪಂದ್ಯದ ಬಳಿಕ ಜೂನ್​ 29ರಂದು ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎದುರಾಳಿ ಯಾರು ಎಂಬುದು ನಿರ್ಧಾರವಾಗಲಿದೆ.

Continue Reading

ಪ್ರಮುಖ ಸುದ್ದಿ

Rohit Sharma : ನಿಮ್ಮತಲೆಯಲ್ಲಿರುವ ಮೆದುಳು ಉಪಯೋಗಿಸಿ, ಪಾಕ್​ ಮಾಜಿ ನಾಯಕನ ಚೆಂಡು ವಿರೂಪದ ಆರೋಪಕ್ಕೆ ರೋಹಿತ್ ಶರ್ಮಾ ತಿರುಗೇಟು

Rohit Sharma : ಪಂದ್ಯಾವಳಿಯಲ್ಲಿ ಭಾರತೀಯ ವೇಗಿಗಳು ನಿರಂತರವಾಗಿ ಚೆಂಡನ್ನು ವಿರೂಪ ಮಾಡುತ್ತಿದ್ದರು ಎಂದು ಇಂಜಮಾಮ್ ಆರೋಪಿಸಿದ್ದರು. ರಿವರ್ಸ್ ಸ್ವಿಂಗ್ ಪಡೆಯಲು ಭಾರತೀಯ ಬೌಲರ್​ಗಳು ಪಂದ್ಯದ ಚೆಂಡುಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಇಂಜಾಮಾಜ್​ ಉಲ್​ ಹಕ್​​ ಹೇಳಿದ್ದರು.

VISTARANEWS.COM


on

Rohit Sharma
Koo

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಕಪ್​ ಪಂದ್ಯದ ವೇಳೆ ಟೀಮ್ ಇಂಡಿಯಾ ವಿರುದ್ಧ ಚೆಂಡು ವಿರೂಪ ಮಾಡಿದೆ ಎಂಬ ಆರೋಪಕ್ಕೆ ನಾಯಕ ರೋಹಿತ್ ಶರ್ಮಾ (Rohit Sharma) ಪ್ರತಿಕ್ರಿಯಿಸಿದ್ದಾರೆ. ಐಸಿಸಿ ಟಿ 20 ವಿಶ್ವಕಪ್ 2024 ರ ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಪ್ರಭಾವಶಾಲಿ ಗೆಲುವಿನ ನಂತರ ಪಾಕಿಸ್ತಾನದ ಮಾಜಿ ನಾಯಕ ವಿಲಕ್ಷಣ ಹೇಳಿಕೆಗಳನ್ನು ನೀಡಿದ್ದರು. ಇದಕ್ಕೆ ಕೆಂಡಾಮಂಡಲವಾಗಿರುವ ರೋಹಿತ್​ ಶರ್ಮಾ ನಿಮ್ಮ ಮೆದುಳು ಬಳಸಿ ಎಂದು ಆರೋಪಿಸಿದ್ದಾರೆ.

ಪಂದ್ಯಾವಳಿಯಲ್ಲಿ ಭಾರತೀಯ ವೇಗಿಗಳು ನಿರಂತರವಾಗಿ ಚೆಂಡನ್ನು ವಿರೂಪ ಮಾಡುತ್ತಿದ್ದರು ಎಂದು ಇಂಜಮಾಮ್ ಆರೋಪಿಸಿದ್ದರು. ರಿವರ್ಸ್ ಸ್ವಿಂಗ್ ಪಡೆಯಲು ಭಾರತೀಯ ಬೌಲರ್​ಗಳು ಪಂದ್ಯದ ಚೆಂಡುಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಇಂಜಾಮಾಜ್​ ಉಲ್​ ಹಕ್​​ ಹೇಳಿದ್ದರು. ಪ್ರಸ್ತುತ ನಡೆಯುತ್ತಿರುವ ಸ್ಪರ್ಧೆಯಲ್ಲಿ ಭಾರತದ ವೇಗಿಗಳು ಪ್ರಭಾವಶಾಲಿಯಾಗಿದ್ದರು. ಇದು ಚೆಂಡು ವಿರೂಪದಿಂದ ಮಾತ್ರ ಸಾಧ್ಯ ಎಂದು ಇಂಜಮಾಮ್ ಉಲ್​ ಹಕ್ ಆರೋಪಿಸಿದ್ದರು.

ಇಂಜಮಾಮ್ ಜತೆಗೆ ಪಾಕಿಸ್ತಾನದ ಮತ್ತೊಬ್ಬ ಮಾಜಿ ನಾಯಕ ಸಲೀಮ್ ಮಲಿಕ್ ಆಸ್ಟ್ರೇಲಿಯಾ ವಿರುದ್ಧ ಅರ್ಶ್​ದೀಪ್​ ಸಿಂಗ್​ 15ನೇ ಓವರ್​ನಲ್ಲಿ ರಿವರ್ಸ್ ಸ್ವಿಂಗ್ ಮಾಡಿದ್ದಾರೆ. ಇದು ಚೆಂಡು ವಿರೂಪದಿಂದ ಕಾರಣ ಹೇಳಿದ್ದಾರೆ. ಇಲ್ಲದಿದ್ದರೆ ಪಂದ್ಯದ 14 ಅಥವಾ 15 ನೇ ಓವರ್​ನಲ್ಲಿ ರಿವರ್ಸ್ ಸ್ವಿಂಗ್ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇನ್ನಿಂಗ್ಸ್​​ನ ಆರಂಭದಲ್ಲಿ ರಿವರ್ಸ್ ಸ್ವಿಂಗ್ ಮಾಡುವುದು ಅಸಾಧ್ಯ ಎಂದು ಹೇಳುವ ಮೊದಲು ಅಂಪೈರ್​ಗಳು ಈ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಇಂಜಮಾಮ್ ಹೇಳಿದ್ದರು.

ರೋಹಿತ್ ಶರ್ಮಾ ನೀಡಿದ ಉತ್ತರ ಹೀಗಿದೆ


ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮ ಗೊಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ ಅವರಿಗೆ ಈ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರವಾಗಿ, ಭಾರತೀಯ ನಾಯಕ ಮೊದಲು ನಕ್ಕರು. ಕೆರಿಬಿಯನ್ ದ್ವೀಪಗಳ ಕ್ರಿಕೆಟ್ ಪಿಚ್​ನಲ್ಲಿ ಬೌಲರ್​ಗಳು ರಿವರ್ಸ್ ಸ್ವಿಂಗ್ ಪಡೆಯುವುದು ಸಾಧ್ಯ ಎಂದರು. ಬಳಿಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗರನ್ನು ತರಾಟೆಗೆ ತೆಗೆದುಕೊಂಡ ಅವರು ತಲೆಯಲ್ಲಿರುವ ಬುದ್ಧಿ ಬಳಸಿ ಮಾತನಾಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Indo- Pak Cricket : ಭಾರತ-ಪಾಕ್ ಪಂದ್ಯದಲ್ಲಿ ಐಸಿಸಿಯೇ ಫಿಕ್ಸಿಂಗ್ ಮಾಡುತ್ತದೆ ಎಂದ ಆರೋಪಿಸಿದ ಇಂಗ್ಲೆಂಡ್​ನ ಮಾಜಿ ಆಟಗಾರ

“ನಾನು ಇದಕ್ಕೆ ಏನು ಉತ್ತರ ಕೊಡಲಿ? ಬಿಸಿಲಿನಲ್ಲಿ ಆಡುತ್ತಿದ್ದರೆ ಮತ್ತು ಪಿಚ್​ ಒಣಗಿದ್ದರೆ ಚೆಂಡು ರಿವರ್ಸ್​ ಸ್ವಿಂಗ್ ಆಗುತ್ತಿದೆ. ಚೆಂಡು ಎಲ್ಲಾ ತಂಡಗಳಿಗೂ ಅದೇ ರೀತಿ ವರ್ತಿಸುತ್ತದೆ. ನಮಗೆ ಮಾತ್ರ ಅನುಕೂಲವಾಗಿಲ್ಲ. ಕೆಲವೊಮ್ಮೆ, ನಿಮ್ಮ ತಲೆಯನ್ನು ತೆರೆದು ಮೆದುಳನ್ನು ಬಳಸಿ ಮಾತನಾಡಬೇಕಾಗುತ್ತದೆ. ನಾವು ಎಲ್ಲಿ ಆಡುತ್ತಿದ್ದೇವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಾವು ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದಲ್ಲಿ ಆಡುತ್ತಿಲ್ಲ, “ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಫೈನಲ್​​ನ ಸ್ಥಾನಕ್ಕಾಗಿ ಭಾರತ ಗುರುವಾರ (ಜೂನ್ 27) ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಕಳೆದ ಟಿ 20 ವಿಶ್ವಕಪ್​ನ ಸೆಮಿಫೈನಲ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್​ಗಳ ಸೋಲು ಅನುಭವಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಮೊದಲ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಲಿವೆ.

Continue Reading
Advertisement
Share Market
ವಾಣಿಜ್ಯ6 mins ago

Share Market: ಮೊದಲ ಬಾರಿಗೆ 79,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಗರಿಷ್ಠ ಮಟ್ಟ ತಲುಪಿದ ನಿಫ್ಟಿ

pattanagere shed actor darshan renuka swamy murder
ಕ್ರೈಂ27 mins ago

Actor Darshan: ಪಟ್ಟಣಗೆರೆ ಶೆಡ್ಡಾ? ನಾವು ಅಲ್ಲಿಗೆ ಹೋಗೋಲ್ಲ ಅನ್ನುತ್ತಿರುವ ವಾಹನ ಮಾಲಿಕರು!

Chris Silverwood
ಪ್ರಮುಖ ಸುದ್ದಿ32 mins ago

Chris Silverwood : ಲಂಕಾ ಕೋಚ್​ ಕ್ರಿಸ್​ ಸಿಲ್ವರ್​ವುಡ್​​ ಏಕಾಏಕಿ ರಾಜೀನಾಮೆ

Viral Video
Latest35 mins ago

Viral Video : ನೋಯ್ಡಾದಲ್ಲಿ ನಿರ್ಮಾಣವಾಗುತ್ತಿದೆ ಲಕ್ಷುರಿ ಅಪಾರ್ಟ್‌ಮೆಂಟ್‌! ಇದರ ಬೆಲೆ ಅಬ್ಬಬ್ಬಾ!

Yelahanka railway Newborn baby found at Yelahanka railway station in Bengaluru
ಬೆಂಗಳೂರು38 mins ago

Yelahanka Railway : ರೈಲು ಬೋಗಿಯ ಕಸದ ಬುಟ್ಟಿಯಲ್ಲಿತ್ತು ನವಜಾತ ಶಿಶು; ನರಳಾಡಿ ಪ್ರಾಣಬಿಟ್ಟ ಕಂದ

Women Arrest
Latest40 mins ago

Women Arrest: ಅತ್ಯಾಚಾರಿಗೆ ಬೈದಿದ್ದಕ್ಕೆ ಜೈಲುಪಾಲಾದ ಮಹಿಳೆ! ಇದೆಂಥಾ ನ್ಯಾಯ?

Indian Origin Doctor
ಕ್ರೈಂ41 mins ago

Indian Origin Doctor: ಅಮೆರಿಕದಲ್ಲಿ ಪತ್ನಿ ಮಕ್ಕಳ ಕೊಲೆಗೆ ಯತ್ನ; ಭಾರತೀಯ ಮೂಲದ ವೈದ್ಯನಿಗೆ ಜೈಲು ಶಿಕ್ಷೆ ಬದಲು ಮಾನಸಿಕ ಚಿಕಿತ್ಸೆ

Amartya Sen
ದೇಶ44 mins ago

Amartya Sen: ಭಾರತ ಹಿಂದೂ ರಾಷ್ಟ್ರವಲ್ಲ ಎನ್ನುವುದಕ್ಕೆ ಲೋಕಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ: ಅಮರ್ತ್ಯ ಸೇನ್

Gold Rate Today
ಚಿನ್ನದ ದರ51 mins ago

Gold Rate Today: ಆಭರಣ ಖರೀದಿಗೆ ಇದು ಗೋಲ್ಡನ್‌ ಟೈಮ್‌; ಇಳಿದ ಚಿನ್ನದ ದರ

Louis Kimber
ಪ್ರಮುಖ ಸುದ್ದಿ1 hour ago

Louis Kimber: 127 ಎಸೆತಗಳಲ್ಲಿ 243 ರನ್ ಚಚ್ಚಿ ಹಲವು ದಾಖಲೆಗಳನ್ನು ಬರೆದ ಕೌಂಟಿ ಆಟಗಾರ ಲೂಯಿಸ್ ಕಿಂಬರ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ7 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 weeks ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 weeks ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 weeks ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌