ICC Chairman | ಐಸಿಸಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೆ - Vistara News

Latest

ICC Chairman | ಐಸಿಸಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೆ

ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೆ (Greg Barclay) ಅವರು ಅಂತಾರಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC ) ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.

VISTARANEWS.COM


on

Greg Barclay
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೆಲ್ಬೋರ್ನ್​: ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೆ (Greg Barclay) ಅವರು ಅಂತಾರಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) (ICC Chairman) ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಅದರಂತೆ ಮುಂದಿನ ಎರಡು ವರ್ಷಗಳ ಕಾಲ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಜಿಂಬಾಬ್ವೆಯ ತವೆಂಗ್ವಾ ಮುಕುಲಾನಿ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಗ್ರೆಗ್ ಬಾರ್ಕ್ಲೆ ಅವಿರೋಧವಾಗಿ ಆಯ್ಕೆಯಾದರು.

ಶನಿವಾರ ಮೊಲ್ಬೋರ್ನ್​ನಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಅಧ್ಯಕ್ಷರಾದ ಬಳಿಕ ಮಾತನಾಡಿದ ಗ್ರೆಗ್ ಬಾರ್ಕ್ಲೆ ಅವರು “ಐಸಿಸಿ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದು ತಮಗೆ ಸಂದ ಗೌರವವಾಗಿದ್ದು, ಇದಕ್ಕಾಗಿ ನಿರ್ದೇಶಕ ಮಂಡಳಿಯ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದು ಬಾರ್ಕ್ಲೆ ಪ್ರತಿಕ್ರಿಯಿಸಿದ್ದಾರೆ.

2ನೇ ಬಾರಿಗೆ ಆಯ್ಕೆ

ಬಾರ್ಕ್ಲೆ ಅವರು ಮೊದಲ ಬಾರಿಗೆ ನವೆಂಬರ್ 2020 ರಲ್ಲಿ ಐಸಿಸಿ ಅಧ್ಯಕ್ಷ ಕುರ್ಚಿ ಏರಿದ್ದರು. ನ್ಯೂಜಿಲೆಂಡ್ ಕ್ರಿಕೆಟ್‌ನ ಅಧ್ಯಕ್ಷರಾಗಿದ್ದ ಬಾರ್ಕ್ಲೆ ಆಗಿನ ಐಸಿಸಿ ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್ ಸ್ಥಾನಕ್ಕೆ ಎಂಟ್ರಿಕೊಟ್ಟಿದ್ದರು. ಅದಕ್ಕೂ ಮುನ್ನ 2015 ರಲ್ಲಿ ಬಾರ್ಕ್ಲೆ ಐಸಿಸಿ ಪುರುಷರ ಕ್ರಿಕೆಟ್ ವಿಶ್ವ ಕಪ್‌ನ ನಿರ್ದೇಶಕರಾಗಿದ್ದರು. ಬಾರ್ಕ್ಲೆ ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ 17 ಸದಸ್ಯರ ಮಂಡಳಿಯಲ್ಲಿ ಬಿಸಿಸಿಐ ಕೂಡ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡಿದೆ.

ಗಂಗೂಲಿಯ ಹೆಸರು ಕೇಳಿಬಂದಿತ್ತು

ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೌರವ್​ ಗಂಗೂಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಮಾಧ್ಯಮ ವರದಿಗಳ ಪ್ರಕಾರ, ಗಂಗೂಲಿಗೆ ಐಪಿಎಲ್ ಅಧ್ಯಕ್ಷ ಸ್ಥಾನವನ್ನು ನೀಡಲು ಬಿಸಿಸಿಐ ಮುಂದಾಗಿತ್ತು. ಆದರೆ ಗಂಗೂಲಿಗೆ ಐಸಿಸಿ ಅಧ್ಯಕ್ಷ ಹುದ್ದೆ ಅಥವಾ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯುವ ಬಯಕೆ ಇತ್ತು. ಆದರೆ ಗಂಗೂಲಿಗೆ ಬಿಸಿಸಿಐ ಬೆಂಬಲ ಸಿಗಲಿಲ್ಲ. ಇದರಿಂದ ಗಂಗೂಲಿ ಈ ರೇಸ್​ನಿಂದ ಹೊರಬಿದ್ದಿದ್ದರು.

ಇದನ್ನೂ ಓದಿ | Team India | ಯುವ ಆಟಗಾರರಿಗೆ ಆದ್ಯತೆ, ಹಿರಿಯರಿಗೆ ಕೊಕ್‌; ಬಿಸಿಸಿಐ ಯೋಜನೆ ರೆಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಈ ವಾಸ್ತು ನಿಯಮ ಪಾಲಿಸಿದರೆ ವ್ಯವಹಾರದಲ್ಲಿ ವೃದ್ಧಿ

ಮನೆ ನಿರ್ಮಾಣದಂತೆ ವಾಣಿಜ್ಯ ಮಳಿಗೆಯನ್ನೂ ವಾಸ್ತು ಶಾಸ್ತ್ರದ ಪ್ರಕಾರ ಸ್ಥಾಪನೆ ಮಾಡುವುದು ಬಹು ಮುಖ್ಯವಾಗಿದೆ. ಇದು ಯಶಸ್ಸು ಮತ್ತು ವ್ಯವಹಾರದಲ್ಲಿ ಸಂಪತ್ತು ವೃದ್ಧಿಗೆ ಕಾರಣವಾಗುತ್ತದೆ. ವಾಣಿಜ್ಯ ಮಳಿಗೆಯನ್ನು ಹೊಂದಿರುವ ಪ್ರತಿಯೊಬ್ಬರೂ ಕೆಲವೊಂದು ವಾಸ್ತು ವಿಚಾರದ (Vastu Tips) ಬಗ್ಗೆ ತಿಳಿದಿರಬೇಕು.

VISTARANEWS.COM


on

By

Vastu Tips
Koo

ವ್ಯವಹಾರ (business) ವಿಚಾರದಲ್ಲಿ ವಾಸ್ತು ಶಾಸ್ತ್ರ (Vastu Tips) ಪಾಲಿಸುವುದು ಬಹು ಮುಖ್ಯವಾಗಿದೆ. ಇಲ್ಲವಾದರೆ ಆರ್ಥಿಕ ನಷ್ಟ (Financial loss), ಮಾನಸಿಕ ಅಶಾಂತಿ (stress), ಆರೋಗ್ಯ ಸಮಸ್ಯೆಗಳು (health problems) ಒಂದರ ಮೇಲೊಂದರಂತೆ ಕಾಣಿಸಿಕೊಳ್ಳಬಹುದು ಎನ್ನುತ್ತದೆ ವಾಸ್ತು ನಿಯಮ. ಸ್ವಂತ ಹೊಸ ಬಿಸಿನೆಸ್ ಬಗ್ಗೆ ಯೋಚನೆ ಮಾಡುವ ವೇಳೆ ಅಥವಾ ಇರುವ ಬಿಸಿನೆಸ್ ಅನ್ನು ನವೀಕರಿಸುವ ವೇಳೆ ಪಾಲಿಸಬೇಕಾದ ವಾಸ್ತು ನಿಯಮಗಳು ಏನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

Business handshake

ಮನೆ ನಿರ್ಮಾಣದಂತೆ ವಾಣಿಜ್ಯ ಮಳಿಗೆಯನ್ನೂ ವಾಸ್ತು ಶಾಸ್ತ್ರದ ಪ್ರಕಾರ ಸ್ಥಾಪನೆ ಮಾಡುವುದು ಬಹು ಮುಖ್ಯವಾಗಿದೆ. ಇದು ಯಶಸ್ಸು ಮತ್ತು ವ್ಯವಹಾರದಲ್ಲಿ ಸಂಪತ್ತು ವೃದ್ಧಿಗೆ ಕಾರಣವಾಗುತ್ತದೆ. ವಾಣಿಜ್ಯ ಮಳಿಗೆಯನ್ನು ಹೊಂದಿರುವ ಪ್ರತಿಯೊಬ್ಬರೂ ಕೆಲವೊಂದು ವಾಸ್ತು ವಿಚಾರದ ಬಗ್ಗೆ ತಿಳಿದಿರಬೇಕು. ವಾಸ್ತು ನಿಯಮ ಇಲ್ಲದೇ ಇದ್ದರೆ ಸಾಕಷ್ಟು ಹಣದ ಕೊರತೆ, ದುರಾದೃಷ್ಟ, ವೈಫಲ್ಯ ಮತ್ತು ವ್ಯವಹಾರದಲ್ಲಿ ನಷ್ಟ ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ಥಳಾವಕಾಶದ ಕೊರತೆ ಮತ್ತು ವಾಸ್ತು ತತ್ತ್ವಗಳ ಅಜ್ಞಾನದ ಪರಿಣಾಮವಾಗಿ ಜನರು ಆಗಾಗ್ಗೆ ವಾಸ್ತು ದೋಷಗಳಿಗೆ ಪರಿಹಾರವನ್ನು ಹುಡುಕಬೇಕಾಗುತ್ತದೆ. ವಾಸ್ತು ಅಂಗಡಿಯಲ್ಲಿರುವ ಸಮಸ್ಯೆಯನ್ನು ಪರಿಹರಿಸಲು ಮತ್ತು ವ್ಯಾಪಾರವನ್ನು ಸುಧಾರಿಸಲು ಹಲವಾರು ಪರಿಹಾರಗಳನ್ನು ನೀಡುತ್ತದೆ.

Opening office door

ಪ್ರವೇಶದ್ವಾರ ಹೇಗಿರಬೇಕು?

ವಾಸ್ತು ಶಾಸ್ತ್ರದಲ್ಲಿ ಅಂಗಡಿಯ ಮುಖ್ಯ ಪ್ರವೇಶದ್ವಾರವು ಹೆಚ್ಚು ಮಹತ್ವವನ್ನು ಹೊಂದಿದೆ. ಇಲ್ಲಿಂದ ಗ್ರಾಹಕರು ಅಂಗಡಿಗೆ ಬರುತ್ತಾರೆ. ಈ ಪ್ರವೇಶದ್ವಾರದ ಮೂಲಕ ಲಕ್ಷ್ಮಿಯೂ ಬರುತ್ತಾಳೆ. ಪರಿಣಾಮವಾಗಿ ಅಂಗಡಿಯ ಮುಖ್ಯ ಬಾಗಿಲು ಸರಿಯಾದ ಮಾರ್ಗದಲ್ಲಿ ಇರಬೇಕು. ಅಂಗಡಿಯ ಮುಖ್ಯ ಬಾಗಿಲು ಪೂರ್ವ ಅಥವಾ ಈಶಾನ್ಯಕ್ಕೆ ಮುಖ ಮಾಡಿರಬೇಕು. ಅಂಗಡಿಯು ದಕ್ಷಿಣಕ್ಕೆ ಮುಖ ಮಾಡಿದರೆ ಮುಖ್ಯ ಬಾಗಿಲು ದಕ್ಷಿಣಕ್ಕೆ ಅಥವಾ ಆಗ್ನೇಯ ಮೂಲೆಯಲ್ಲಿರಬೇಕು. ಅಂಗಡಿಯ ಮುಖ್ಯ ದ್ವಾರವು ಪಶ್ಚಿಮದಲ್ಲಿ ನೆಲೆಗೊಂಡಿದ್ದರೆ ಅದು ಪಶ್ಚಿಮ ಅಥವಾ ವಾಯವ್ಯಕ್ಕೆ ಎದುರಾಗಿರಬೇಕು.

ಇದನ್ನೂ ಓದಿ: Vastu Tips: ನವ ದಂಪತಿಯ ಕೋಣೆ ಹೀಗಿದ್ದರೆ ದಾಂಪತ್ಯ ಸುಖಕರವಾಗಿರುತ್ತದೆ!

ಅಂಗಡಿಯ ಮುಖ್ಯ ಗೇಟ್ ಯಾವಾಗಲೂ ಅಚ್ಚುಕಟ್ಟಾಗಿ ಮತ್ತು ಆಕರ್ಷಕವಾಗಿರಬೇಕು. ಸಾಂದರ್ಭಿಕವಾಗಿ ಅದನ್ನು ಸ್ವಚ್ಛಗೊಳಿಸುತ್ತಿರಬೇಕು. ಅಂಗಡಿಯ ಪ್ರವೇಶ ದ್ವಾರದ ಹತ್ತಿರ ಮಣ್ಣು ಅಥವಾ ಅಶುಚಿಯಾದ ಚರಂಡಿ ಇರಬಾರದು. ಅಂಗಡಿಯ ಮುಖ್ಯ ದ್ವಾರವು ಎಂದಿಗೂ ಕಂಬ, ಜಾಹೀರಾತು ಫಲಕ ಅಥವಾ ಉದ್ದವಾದ ತೂಗಾಡುವ ವಿದ್ಯುತ್ ತಂತಿಗಳನ್ನು ಹೊಂದಿರಬಾರದು. ಅಂಗಡಿಯ ಮುಂದೆ ಮೌನ ಮತ್ತು ಶಾಂತಿ ಇರುವಂತೆ ಕಾಪಾಡಿಕೊಳ್ಳಬೇಕು.

Continue Reading

ವಿದೇಶ

Indian Origin Crow: ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ನಿರ್ಧರಿಸಿದ್ದೇಕೆ?

2024ರ ಅಂತ್ಯದ ವೇಳೆಗೆ ಅಂದರೆ ಮುಂಬರುವ ಆರು ತಿಂಗಳಲ್ಲಿ ಭಾರತೀಯ ಮೂಲದ ಕಾಗೆಗಳನ್ನು(Indian Origin Crow) ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವುದಾಗಿ ಕೀನ್ಯಾ ಸರ್ಕಾರ ಘೋಷಿಸಿದೆ. 10 ಲಕ್ಷ ಕಾಗೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ ಯಾಕೆ ಗೊತ್ತೇ? ಇಲ್ಲಿದೆ ಮಾಹಿತಿ.

VISTARANEWS.COM


on

By

Indian Origin Crow
Koo

ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು (Indian Origin Crow) ಈ ವರ್ಷಾಂತ್ಯದ ವೇಳೆಗೆ ಕೊಲ್ಲಲು ಕೀನ್ಯಾ (Kenya) ಯೋಜನೆ ಹಾಕಿಕೊಂಡಿದೆ. ಕಾಗೆಯು ಪ್ರಾಥಮಿಕ ಪರಿಸರ ವ್ಯವಸ್ಥೆಯ ಭಾಗವಲ್ಲ. ಈ ಕಾಗೆಗಳು ದಶಕಗಳಿಂದ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು, ಸ್ಥಳೀಯ ಪಕ್ಷಿಗಳನ್ನು ಸಾಯಿಸುತ್ತಿವೆ ಎಂದು ಕೀನ್ಯಾದ ವನ್ಯಜೀವಿ ಇಲಾಖೆ (Wildlife Department) ಹೇಳಿದೆ.

2024ರ ಅಂತ್ಯದ ವೇಳೆಗೆ ಅಂದರೆ ಮುಂಬರುವ ಆರು ತಿಂಗಳಲ್ಲಿ ಭಾರತೀಯ ಮೂಲದ ಕಾಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವುದಾಗಿ ಕೀನ್ಯಾ ಸರ್ಕಾರ ಘೋಷಿಸಿದೆ. 10 ಲಕ್ಷ ಕಾಗೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಭಾರತೀಯ ಮೂಲದ ಕಾಗೆಗಳನ್ನು ‘ಆಕ್ರಮಣಕಾರಿ ವಿದೇಶಿ ಪಕ್ಷಿಗಳು’ ಎಂದು ಕರೆದಿರುವ ಕೀನ್ಯಾದ ವನ್ಯಜೀವಿ ಪ್ರಾಧಿಕಾರವು ಈ ಕಾಗೆಗಳು ಪೂರ್ವ ಆಫ್ರಿಕಾಕ್ಕೆ ಸ್ಥಳೀಯವಾಗಿಲ್ಲ ಎಂದಿದೆ.

ಕಳೆದ ಕೆಲವು ವರ್ಷಗಳಲ್ಲಿ ಕರಾವಳಿ ನಗರಗಳಾದ ಮೊಂಬಾಸಾ, ಮಲಿಂಡಿ, ಕಿಲಿಫಿ ಮತ್ತು ವಟಮುಗಳಲ್ಲಿ ಅವುಗಳ ಸಂಖ್ಯೆಯು ವೇಗವಾಗಿ ಹೆಚ್ಚಾಗಿದೆ. ಇದರಿಂದ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು 1 ಮಿಲಿಯನ್ ಕಾಗೆಗಳನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಹೊಟೇಲ್ ಉದ್ಯಮದ ಪ್ರತಿನಿಧಿಗಳು ಮತ್ತು ಕಾಗೆ ನಿಯಂತ್ರಣದಲ್ಲಿ ಪರಿಣತಿ ಹೊಂದಿರುವ ವೈದ್ಯರನ್ನು ಒಳಗೊಂಡ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಹೊಟೇಲ್ ಉದ್ಯಮಕ್ಕೆ ತೊಂದರೆ

ವನ್ಯಜೀವಿ ಪ್ರಾಧಿಕಾರವು ನೀಡಿರುವ ಹೇಳಿಕೆಯಲ್ಲಿ ಕರಾವಳಿ ನಗರಗಳ ಹೊಟೇಲ್ ಉದ್ಯಮಕ್ಕೆ ಈ ಕಾಗೆಗಳು ದೊಡ್ಡ ಸಮಸ್ಯೆಯಾಗುತ್ತಿವೆ. ಕಾಗೆಗಳಿಂದ ಪ್ರವಾಸಿಗರು ತೆರೆದ ಜಾಗದಲ್ಲಿ ಕುಳಿತು ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೊಟೇಲ್ ಉದ್ಯಮಕ್ಕೆ ಸಂಬಂಧಿಸಿದವರು ಸಹ ಕಾಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಅವುಗಳ ಮೇಲೆ ನಿಯಂತ್ರಣಕ್ಕೆ ಒತ್ತಾಯಿಸುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ಕಾಗೆಗಳನ್ನು ನಿರ್ಮೂಲನೆ ಮಾಡಲು ನಿರ್ಧರಿಸಲಾಗಿದೆ ಎಂದು ಕೀನ್ಯಾ ವನ್ಯಜೀವಿ ಪ್ರಾಧಿಕಾರ ತಿಳಿಸಿದೆ.

ಯಾರಿಗೆ ಅಪಾಯ?

ಕೀನ್ಯಾದಲ್ಲಿ ಕಾಗೆಗಳಿಂದಾಗಿ ಅನೇಕ ಪಕ್ಷಿಗಳು ಅಳಿವಿನಂಚಿನಲ್ಲಿವೆ. ಅಂತಹ ಪಕ್ಷಿಗಳನ್ನು ಕಾಗೆಗಳು ನಿರಂತರವಾಗಿ ಬೇಟೆಯಾಡುತ್ತಿವೆ ಎಂದು ವನ್ಯಜೀವಿ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ: Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!

ಈ ಕಾಗೆಗಳು ಸಣ್ಣ ಸ್ಥಳೀಯ ಪಕ್ಷಿಗಳ ಗೂಡುಗಳನ್ನು ನಾಶಪಡಿಸುತ್ತವೆ ಮತ್ತು ಅವುಗಳ ಮೊಟ್ಟೆಗಳು ಮತ್ತು ಮರಿಗಳನ್ನು ತಿನ್ನುತ್ತವೆ, ಇದರಿಂದಾಗಿ ಅನೇಕ ಪಕ್ಷಿ ಪ್ರಭೇದಗಳು ಕಡಿಮೆಯಾಗುತ್ತಿವೆ ಎಂದು ಕೀನ್ಯಾದ ಪಕ್ಷಿವಿಜ್ಞಾನಿ ಕಾಲಿನ್ ಜಾಕ್ಸನ್ ತಿಳಿಸಿದ್ದಾರೆ.

ಸ್ಥಳೀಯ ಪಕ್ಷಿಗಳ ಕೊರತೆಯಿಂದ ಪರಿಸರ ಸಂರಕ್ಷಣೆಗೆ ತೊಂದರೆಯಾಗಿದೆ. ಕಾಗೆಗಳ ಹೆಚ್ಚುತ್ತಿರುವ ಸಂಖ್ಯೆಯ ಪರಿಣಾಮವು ಅಂತಹ ಪಕ್ಷಿಗಳ ಮೇಲೆ ಮಾತ್ರವಲ್ಲ ಇಡೀ ಪರಿಸರ ವ್ಯವಸ್ಥೆಯು ಪರಿಣಾಮ ಬೀರುತ್ತಿದೆ ಎಂದು ಕೀನ್ಯಾ ಹೇಳಿದೆ.

Continue Reading

ವಿದೇಶ

World’s Newest Countries: ಇವು ವಿಶ್ವದ 10 ಹೊಸ ರಾಷ್ಟ್ರಗಳು! ಏನು ಈ ರಾಷ್ಟ್ರಗಳ ವಿಶೇಷ?

ಸಮಯದೊಂದಿಗೆ ಜಾಗತಿಕವಾಗಿಯೂ ಹಲವಾರು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಪ್ರಸ್ತುತ ಜಗತ್ತಿನಲ್ಲಿ 195 ದೇಶಗಳಿವೆ. ಇವುಗಳಲ್ಲಿ ಕೆಲವು ಸಾಕಷ್ಟು ಹಳೆಯವು ಮತ್ತು ಕೆಲವು ಸಾಕಷ್ಟು ಹೊಸದು. ಇದರಲ್ಲಿ ಹತ್ತು ರಾಷ್ಟ್ರಗಳು ಕಳೆದ ಎರಡು ದಶಕಗಳಲ್ಲಿ (World’s Newest Countries) ಸ್ಥಾಪನೆಯಾಗಿರುವುದು. ಈ ಹತ್ತು ದೇಶಗಳ ಸಂಕ್ಪಿಪ್ತ ಪರಿಚಯ ಇಲ್ಲಿದೆ.

VISTARANEWS.COM


on

By

World's Newest Countries
Koo

ಕಳೆದ ಎರಡು ದಶಕಗಳಲ್ಲಿ ವಿಶ್ವದಲ್ಲಿ ಹತ್ತು ಹೊಸ ರಾಷ್ಟ್ರಗಳು (World’s Newest Countries) ರೂಪುಗೊಂಡಿದ್ದು, ಇದರಲ್ಲಿ ದಕ್ಷಿಣ ಸುಡಾನ್ (South Sudan) ಇತ್ತೀಚೆಗೆಷ್ಟೇ ಹುಟ್ಟಿಕೊಂಡಿದೆ. ಸಾಕಷ್ಟು ಸವಾಲುಗಳನ್ನು ಎದುರಿಸಿ ರೂಪುಗೊಂಡಿರುವ ಈ ಹೊಸ ರಾಷ್ಟ್ರಗಳು ಅನೇಕ ಅವಕಾಶಗಳನ್ನೂ ಸೃಷ್ಟಿಸಿದೆ.

ದಕ್ಷಿಣ ಸೂಡಾನ್ ಇದೀಗ ವಿಶ್ವದ ಹೊಸ ದೇಶಗಳ ಪಟ್ಟಿಯಲ್ಲಿದೆ. 2011ರ ಜುಲೈ 9ರಂದು ಸ್ವತಂತ್ರಗೊಂಡ (gained independence) ದಕ್ಷಿಣ ಸುಡಾನ್ ಈಗ ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಹೊಸ ದೇಶವಾಗಿದೆ. ಇದರೊಂದಿಗೆ ಹೊಸ ದೇಶಗಳ ಪಟ್ಟಿಯಲ್ಲಿ ಕೊಸೊವೊ (Kosovo), ಮಾಂಟೆನೆಗ್ರೊ (Montenegro), ಸೆರ್ಬಿಯಾ (Serbia), ಪೂರ್ವ ಟಿಮೋರ್ (East Timor) , ಪಲಾವ್ (Palau), ಎರಿಟ್ರಿಯಾ (Eritrea), ಜೆಕ್ ರಿಪಬ್ಲಿಕ್ (Czech Republic), ಸ್ಲೋವಾಕಿಯಾ (Slovakia) ಮತ್ತು ಕ್ರೊಯೇಷಿಯಾ (Croatia) ಕೂಡ ಸೇರ್ಪಡೆಯಾಗಿದೆ.

ಸಮಯದೊಂದಿಗೆ ಜಾಗತಿಕವಾಗಿಯೂ ಹಲವಾರು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಪ್ರಸ್ತುತ ಜಗತ್ತಿನಲ್ಲಿ 195 ದೇಶಗಳಿವೆ. ಇವುಗಳಲ್ಲಿ ಕೆಲವು ಸಾಕಷ್ಟು ಹಳೆಯವು ಮತ್ತು ಕೆಲವು ಸಾಕಷ್ಟು ಹೊಸದು. ಇದರಲ್ಲಿ ಹತ್ತು ರಾಷ್ಟ್ರಗಳು ಕಳೆದ ಎರಡು ದಶಕಗಳಲ್ಲಿ ಸ್ಥಾಪನೆಯಾಗಿರುವುದು.

ಇತ್ತೀಚಿಗೆ ಸ್ಥಾಪನೆಯಾಗಿರುವ ಪ್ರಪಂಚದ ಹೊಸ ಅಥವಾ ಕಿರಿಯ ರಾಷ್ಟ್ರಗಳು ಅನನ್ಯ ಸವಾಲುಗಳನ್ನು ಎದುರಿಸುತ್ತಿರುವ ನಡುವೆ ಇಲ್ಲಿ ಸಾಕಷ್ಟು ಅವಕಾಶಗಳೂ ಎದ್ದು ಕಾಣುತ್ತಿವೆ. ದಶಕಗಳ ಸಂಘರ್ಷದಿಂದ ಹುಟ್ಟಿದ ದಕ್ಷಿಣ ಸುಡಾನ್‌ನಿಂದ ಹಿಡಿದು ಕೊಸೊವೊ ಅಂತಾರಾಷ್ಟ್ರೀಯ ಮನ್ನಣೆಯ ಹಾದಿಯನ್ನು ಪಡೆಯುವವರೆಗೆ ಪ್ರತಿಯೊಂದು ದೇಶಗಳು ವಿಶಿಷ್ಟವಾದ ಇತಿಹಾಸವನ್ನು ಹೊಂದಿವೆ.

ದಕ್ಷಿಣ ಸುಡಾನ್

2011ರ ಜುಲೈ 9ರಂದು ಸ್ವಾತಂತ್ರ್ಯ ಪಡೆದ ದಕ್ಷಿಣ ಸುಡಾನ್ ಈ ಮೂಲಕ ದಶಕಗಳ ಅಂತರ್ಯುದ್ಧದಕ್ಕೆ ಅಂತ್ಯವನ್ನು ಹಾಡಿತ್ತು. ವೈವಿಧ್ಯಮಯ ಜನಾಂಗೀಯ ಗುಂಪುಗಳಿಗೆ ಮತ್ತು ರಾಜಕೀಯ ಸ್ಥಿರತೆಯ ಹೋರಾಟಗಳಿಗೆ ಈ ರಾಷ್ಟ್ರ ಹೆಸರುವಾಸಿಯಾಗಿದೆ.


ಕೊಸೊವೊ

2008ರ ಫೆಬ್ರವರಿ 17ರಂದು ಸೆರ್ಬಿಯಾದಿಂದ ಕೊಸೊವೊ ಸ್ವಾತಂತ್ರ್ಯವನ್ನು ಘೋಷಿಸಿತು. ಅನೇಕ ದೇಶಗಳಿಂದ ಗುರುತಿಸಲ್ಪಟ್ಟಿದ್ದರೂ ಅಂತಾರಾಷ್ಟ್ರೀಯ ಮನ್ನಣೆ ಪಡೆಯುವಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.


ಮಾಂಟೆನೆಗ್ರೊ

2006ರ ಜೂನ್ 3ರಂದು ಜನಾಭಿಪ್ರಾಯ ಸಂಗ್ರಹಣೆಯ ಅನಂತರ ಮಾಂಟೆನೆಗ್ರೊ ಸ್ಟೇಟ್ ಯೂನಿಯನ್ ಆಫ್ ಸರ್ಬಿಯಾ ಮತ್ತು ಮಾಂಟೆನೆಗ್ರೊದಿಂದ ಸ್ವಾತಂತ್ರ್ಯವನ್ನು ಘೋಷಿಸಿತು. ಇದು ಆಡ್ರಿಯಾಟಿಕ್ ಕರಾವಳಿಗಳಿಗೆ ಹೆಸರುವಾಸಿಯಾಗಿದೆ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯತ್ವಕ್ಕಾಗಿ ಅಭ್ಯರ್ಥಿಯಾಗಿದೆ.


ಸೆರ್ಬಿಯಾ

ಸೆರ್ಬಿಯಾ ಮತ್ತು ಮಾಂಟೆನೆಗ್ರೊ ರಾಜ್ಯ ಒಕ್ಕೂಟದ ವಿಸರ್ಜನೆಯ ಅನಂತರ ಸೆರ್ಬಿಯಾ 2006ರ ಜೂನ್ 5ರಂದು ಸ್ವಾತಂತ್ರ್ಯವನ್ನು ಘೋಷಿಸಿತು. ಇದು ಆರ್ಥಿಕ ಸುಧಾರಣೆಗಳು ಮತ್ತು ಯುರೋಪಿಯನ್ ಏಕೀಕರಣದ ಮೇಲೆ ಕೇಂದ್ರೀಕರಿಸಿದೆ.


ಪೂರ್ವ ಟಿಮೋರ್

2002ರ ಮೇ 20ರಂದು ರೂಪುಗೊಂಡ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಟಿಮೋರ್- ಲೆಸ್ಟೆ, ಆಗ್ನೇಯ ಏಷ್ಯಾದ ಒಂದು ಸುಂದರವಾದ ದ್ವೀಪ ರಾಷ್ಟ್ರವಾಗಿದೆ.


ಪಲಾವ್

1994ರ ಅಕ್ಟೋಬರ್ 1ರಂದು ಪಲಾವ್ ರಾಷ್ಟ್ರ ಕಾಂಪ್ಯಾಕ್ಟ್ ಆಫ್ ಫ್ರೀ ಅಸೋಸಿಯೇಷನ್ ​​ಅಡಿಯಲ್ಲಿ ಯುನೈಟೆಡ್ ಸ್ಟೇಟ್ಸ್ ನಿಂದ ಸ್ವತಂತ್ರವಾಯಿತು. ಇದು ಸಮುದ್ರದ ಜೀವವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆಯಲ್ಲಿನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದೆ.


ಎರಿಟ್ರಿಯಾ

ಸುದೀರ್ಘ ಸ್ವಾತಂತ್ರ್ಯ ಹೋರಾಟದ ಅನಂತರ 1993ರ ಮೇ 24ರಂದು ಎರಿಟ್ರಿಯಾ ಇಥಿಯೋಪಿಯಾದಿಂದ ಸ್ವಾತಂತ್ರ್ಯ ಪಡೆಯಿತು. ಇದು ಆಡಳಿತ, ಮಾನವ ಹಕ್ಕುಗಳು ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.


ಜೆಕ್ ಗಣರಾಜ್ಯ

ಜೆಕೊಸ್ಲೊವಾಕಿಯಾದ ಶಾಂತಿಯುತ ವಿಸರ್ಜನೆಯ ಅನಂತರ 1993ರ ಜನವರಿ 1ರಂದು ಜೆಕ್ ರಿಪಬ್ಲಿಕ್ ಅಥವಾ ಜೆಕಿಯಾ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಪ್ರಾಗ್ ಅದರ ರಾಜಧಾನಿ. ಇದು ವಾಸ್ತುಶಿಲ್ಪದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ: Sam Pitroda: ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷರಾಗಿ ಸ್ಯಾಮ್‌ ಪಿತ್ರೋಡಾ ಮತ್ತೆ ನೇಮಕ; ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ ಹೋಲಿಸಿದ್ದ ನಾಯಕ


ಸ್ಲೋವಾಕಿಯಾ

ಜೆಕೊಸ್ಲೊವಾಕಿಯಾದ ಇತರ ಅರ್ಧಭಾಗವಾದ ಸ್ಲೋವಾಕಿಯಾ ಕೂಡ 1993ರ ಜನವರಿ 1ರಂದು ಸ್ವಾತಂತ್ರ್ಯವನ್ನು ಗಳಿಸಿತು. ಜೆಕ್ ಗಣರಾಜ್ಯದೊಂದಿಗೆ ಪ್ರತ್ಯೇಕ ರಾಷ್ಟ್ರವಾಯಿತು.


ಕ್ರೊಯೇಷಿಯಾ

ಕ್ರೊಯೇಷಿಯಾ ಗಣರಾಜ್ಯವು 1991ರ ಜೂನ್ 25ರಂದು ಸ್ವಾತಂತ್ರ್ಯವನ್ನು ಘೋಷಿಸಿತು. ಕ್ರೊಯೇಷಿಯಾ ಯುರೋಪ್‌ನಲ್ಲಿ ರೋಮಾಂಚಕ ಪ್ರವಾಸಿ ತಾಣವಾಗಿ ಹೆಚ್ಚು ಜನಪ್ರಿಯವಾಗುತ್ತಿದೆ.

Continue Reading

ಸಿನಿಮಾ

Kalki 2898AD: ಕಲಿಯುಗದಲ್ಲಿ ʼಕಲ್ಕಿʼಯ ಆಗಮನದ ಚರ್ಚೆ ಹುಟ್ಟು ಹಾಕಿದ ‘ಕಲ್ಕಿ 2898ಎಡಿ’ ಸಿನಿಮಾ!

ಭಗವಾನ್ ವಿಷ್ಣುವಿನ 10ನೇ ಅವತಾರವಾದ ಕಲ್ಕಿಯು ಕಲಿಯುಗವನ್ನು ಕೊನೆಗೊಳಿಸಿ ಸತ್ಯಯುಗವನ್ನು ಪ್ರಾರಂಭಿಸಲು ಕಲಿಯುಗದ ಕೊನೆಯಲ್ಲಿ ಅವತಾರವೆತ್ತುತ್ತಾನೆ ಎಂದೇ ನಂಬಲಾಗಿದೆ. ಈಗ ಬಿಡುಗಡೆಯಾಗಿರುವ ಕಲ್ಕಿ 2898ಎಡಿ (Kalki 2898AD) ಚಿತ್ರ ಹಿಂದುಗಳಲ್ಲಿ ಕಲ್ಕಿಯ ಆಗಮನದ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ. ಈ ಕುರಿತ ಕುತೂಹಲಕರ ಮಾಹಿತಿಯ ವರದಿ ಇಲ್ಲಿದೆ.

VISTARANEWS.COM


on

By

Kalki 2898AD
Koo

ವಿಶ್ವದಾದ್ಯಂತ (world) ತೆರೆಗೆ ಬಂದ ಅತ್ಯಂತ ದುಬಾರಿ ಚಿತ್ರ (film) ʼಕಲ್ಕಿ 2898 ಎಡಿʼ (Kalki 2898AD) ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಹಿಂದೂ ಧರ್ಮದ (hindu dharma) ವಿಷಯದ ಮೇಲೆ ಕೇಂದ್ರೀಕೃತವಾಗಿರುವುದು. ಭಗವಾನ್ ವಿಷ್ಣುವಿನ (baghavan vishnu) 10ನೇ ಅವತಾರ ಕಲ್ಕಿ (kalki). ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಕಲ್ಕಿ, ಕಲಿಯುಗವನ್ನು ಕೊನೆಗೊಳಿಸಿ ಮತ್ತೆ ಸತ್ಯಯುಗದ ಸುವರ್ಣ ಯುಗವನ್ನು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.

Kalki 2898AD

ಕಲ್ಕಿಯ ಆಗಮನವು ಹಿಂದೂಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಈತ ಕಲಿಯುಗದ ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದೇ ಭಾವಿಸಲಾಗಿದೆ. ಕಲಿಯುಗ ವಂಚನೆ, ಪಾಪ ಮತ್ತು ಅನೈತಿಕತೆಯಿಂದ ತುಂಬಿರುವ ಯುಗವಾಗಿದೆ. ಇದೀಗ ತೆರೆಗೆ ಬಂದಿರುವ ‘ಕಲ್ಕಿ 2898 ಎಡಿ’ ಈ ಕುರಿತು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ತೆಲುಗು ಸೂಪರ್‌ಸ್ಟಾರ್ ಪ್ರಭಾಸ್, ಬಾಲಿವುಡ್ ತಾರೆಗಳಾದ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ತಮಿಳಿನ ಹಿರಿಯ ನಟ ಕಮಲ್ ಹಾಸನ್ ಒಳಗೊಂಡ ಈ ಚಿತ್ರದಲ್ಲಿ ಪೌರಾಣಿಕ ಕಥೆ ಮತ್ತು ವಿಜ್ಞಾನವನ್ನು ಹದವಾಗಿ ಬೆರೆಸಿ ಅದ್ಭುತವಾಗಿ ನಿರ್ಮಿಸಲಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಬಹುತೇಕ ಎಲ್ಲಾ ಪ್ರಮುಖ ಪಾತ್ರಗಳನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಗುರುತಿಸಬಹುದು. ಟ್ರೇಲರ್‌ನಲ್ಲಿ ಭವಿಷ್ಯ ನುಡಿದ ಕಲ್ಕಿಯ ಗುರುತಿನ ಬಗ್ಗೆ ಅಶ್ವಿನ್ ಯಾವುದೇ ಸುಳಿವು ನೀಡಲಿಲ್ಲ.

ಕಲ್ಕಿಯ ಆಗಮನವು ಹಿಂದೂಗಳಲ್ಲಿ ಹೆಚ್ಚು ಚರ್ಚಾಸ್ಪದ ವಿಷಯಗಳಲ್ಲಿ ಒಂದಾಗಿದೆ. ಕಲ್ಕಿಯ ಆಗಮನ ಮತ್ತು ಪ್ರಸ್ತುತ ಕಲಿಯುಗ ಹೌದೋ ಅಲ್ಲವೋ ಎಂಬುದು ಇನ್ನೂ ಚರ್ಚೆಯಲ್ಲೇ ಇದೆ. ಈ ಘಟನೆಗಳ ನಿಖರವಾದ ಕಾಲಮಿತಿಯನ್ನು ಕೆಲವು ವಿದ್ವಾಂಸರು ಒಪ್ಪುವುದಿಲ್ಲ. ಕಲ್ಕಿಯ ಆಗಮನಕ್ಕೆ ಹಿಂದೂಗಳಲ್ಲಿ ಸಾಕಷ್ಟು ಮಂದಿ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ. ಈ ನಿಗೂಢ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.

ಯಾವುದರಲ್ಲಿದೆ ಕಲ್ಕಿಯ ಮಾಹಿತಿ?

ಕಲ್ಕಿಯನ್ನು ಮೊದಲು ಉಲ್ಲೇಖಿಸಿದ್ದು ಮಹಾಕಾವ್ಯ ‘ಮಹಾಭಾರತ’. ಮಹಾಭಾರತದಲ್ಲಿ ಕಲ್ಕಿಯ ಉಲ್ಲೇಖವು 3.188.85-3.189.6 ಪದ್ಯಗಳಲ್ಲಿ ಒಮ್ಮೆ ಮಾತ್ರ ಕಾಣ ಸಿಗುತ್ತದೆ. ಗರುಡ ಪುರಾಣದಂತಹ ಹಲವಾರು ಪವಿತ್ರ ಹಿಂದೂ ಗ್ರಂಥಗಳಲ್ಲಿ ಆತನನ್ನು ಉಲ್ಲೇಖಿಸಲಾಗಿದೆ. ಗರುಡ ಪುರಾಣವು ಕಲ್ಕಿಯನ್ನು ವಿಷ್ಣುವಿನ ಹತ್ತನೇ ಅವತಾರ ಎಂದು ವಿವರಿಸುತ್ತದೆ. ಅವನು ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾನೆ ಮತ್ತು ಕಲಿಯುಗವನ್ನು ಕೊನೆಗೊಳಿಸುತ್ತಾನೆ. ಸತ್ಯ ಯುಗ ಅಥವಾ ಸದ್ಗುಣ ಮತ್ತು ಸದಾಚಾರದ ಯುಗವನ್ನು ಪ್ರಾರಂಭಿಸುತ್ತಾನೆ.

Kalki

ಕಲ್ಕಿಯು ದೇವದತ್ತ ಎಂಬ ಬಿಳಿ ಕುದುರೆಯ ಮೇಲೆ ಸವಾರಿ ಮಾಡುತ್ತಾ ಮತ್ತು ಖಡ್ಗವನ್ನು ಹಿಡಿದುಕೊಂಡು ಬರುವ ಅದ್ಭುತ ವ್ಯಕ್ತಿ ಎಂದು ವಿವರಿಸಲಾಗಿದೆ. ಶ್ರೀಮದ್ ಭಾಗವತ ಪುರಾಣದ ಪ್ರಕಾರ ಕಲ್ಕಿಯು ಶಂಬಲಾ ಗ್ರಾಮದಲ್ಲಿ ಕಲಿತ ಬ್ರಾಹ್ಮಣ ವಿಷ್ಣುಯಾಶ ಮತ್ತು ಅವನ ಹೆಂಡತಿ ಸುಮತಿಯ ಕುಟುಂಬದಲ್ಲಿ ಹದಿಮೂರನೇ ದಿನದಂದು ಬೆಳೆಯುತ್ತಿರುವ ಚಂದ್ರನ ಹದಿನೈದನೇ ದಿನದಂದು ಜನಿಸುತ್ತಾನೆ. ಪರಾಕ್ರಮಿ ಯೋಧನ ಹೊರತಾಗಿ ಕಲ್ಕಿ ಹೆಸರಾಂತ ವಿದ್ವಾಂಸನೂ ಆಗಿರುತ್ತಾನೆ. ಅವನು ಪವಿತ್ರ ಗ್ರಂಥಗಳ ಬಗ್ಗೆ ಜ್ಞಾನವನ್ನು ಪಡೆಯುತ್ತಾನೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಆಶ್ರಯದಲ್ಲಿ ತರಬೇತಿಯನ್ನು ಪಡೆಯುತ್ತಾನೆ. ಕಲ್ಕಿ ಕೂಡ ಭಕ್ತ ಶೈವನಾಗಿರುತ್ತಾನೆ. ಅವನಿಗೆ ಶಿವನು ಎರಡು ಉಡುಗೊರೆಗಳನ್ನು ನೀಡುತ್ತಾನೆ. ದೇವದತ್ತ ಎಂಬ ಬಿಳಿ ಕುದುರೆ, ಶುಕ ಎಂಬ ಗಿಳಿ. ಇದು ಭೂತ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಜ್ಞಾನವನ್ನು ಹೊಂದಿರುತ್ತದೆ ಮತ್ತು ಹೊಳೆಯುವ, ರತ್ನಖಚಿತ ಖಡ್ಗವನ್ನು ನೀಡುತ್ತದೆ ಎಂಬ ಉಲ್ಲೇಖವಿದೆ.

ಇದನ್ನೂ ಓದಿ: Kalki 2898 AD: ಕ್ಯೂ ನಿಂತು ಟಿಕೆಟ್‌ ಖರೀದಿಸಿ ʼಕಲ್ಕಿʼ ವೀಕ್ಷಿಸಿದ ಸ್ಟಾರ್‌ ನಿರ್ದೇಶಕ! ವೈರಲ್‌ ಫೋಟೊ ಇಲ್ಲಿದೆ

ಕಲ್ಕಿಯು ತಪ್ಪು ಮಾಡುವವರ ವಿರುದ್ಧ ಹೋರಾಡುತ್ತಾನೆ. ಶಂಬಲಕ್ಕೆ ಹಿಂದಿರುಗಿ ಅಲ್ಲಿ ಅವನು ಸತ್ಯ ಯುಗವನ್ನು ಸ್ಥಾಪಿಸುತ್ತಾನೆ. ಅದು ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುತ್ತದೆ. ಅಂತಿಮವಾಗಿ ವಿಷ್ಣುವಿನ ವಾಸಸ್ಥಾನವೆಂದು ಪರಿಗಣಿಸಲಾದ ವೈಕುಂಠಕ್ಕೆ ತೆರಳುತ್ತಾನೆ ಎಂದು ಉಲ್ಲೇಖಿಸಲಾಗಿದೆ.

ಕಲ್ಕಿ ಯಾವಾಗ ಬರುತ್ತಾನೆ?

ಕಲ್ಕಿಯ ಆಗಮನದ ಸಂಭವನೀಯ ಸಮಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಶ್ರೀಕೃಷ್ಣನ ಮರಣದ ಅನಂತರ 5,125 ವರ್ಷಗಳ ಹಿಂದೆ ಕಲಿಯುಗ ಪ್ರಾರಂಭವಾಯಿತು ಎಂದು ಅನೇಕ ಹಿಂದೂಗಳು ನಂಬುತ್ತಾರೆ. ಇದು 4,32,000 ವರ್ಷಗಳವರೆಗೆ ಇರುತ್ತದೆ. ಆದ್ದರಿಂದ ಕಲ್ಕಿಯು ಜನನದ ಮೊದಲು 4,26,875 ವರ್ಷಗಳು ಪೂರ್ಣವಾಗಬೇಕು ಎಂದೂ ಹೇಳಲಾಗುತ್ತದೆ. ಅಂತೂ Kalki 2898AD ಚಿತ್ರ ಕಲ್ಕಿ ಮತ್ತು ಆತನ ಆಗಮನದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

Continue Reading
Advertisement
Vastu Tips
ಧಾರ್ಮಿಕ2 mins ago

Vastu Tips: ಈ ವಾಸ್ತು ನಿಯಮ ಪಾಲಿಸಿದರೆ ವ್ಯವಹಾರದಲ್ಲಿ ವೃದ್ಧಿ

haveri Accident
ಕರ್ನಾಟಕ23 mins ago

Haveri Accident: ಹಾವೇರಿಯಲ್ಲಿ ಭಯಾನಕ ಅಪಘಾತ: ಲಾರಿಗೆ ಟಿಟಿ ಡಿಕ್ಕಿ, 13 ಜನರ ಸಾವು

Weight Loss Tips
ಆರೋಗ್ಯ32 mins ago

Weight Loss Tips: ದಕ್ಷಿಣ ಭಾರತೀಯ ಶೈಲಿಯ ಬೆಳಗಿನ ತಿಂಡಿಯಲ್ಲೂ ನೀವು ತೂಕ ಇಳಿಸಬಹುದು!

Indian Origin Crow
ವಿದೇಶ1 hour ago

Indian Origin Crow: ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ನಿರ್ಧರಿಸಿದ್ದೇಕೆ?

karnataka weather Forecast
ಮಳೆ1 hour ago

Karnataka Weather : ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌; ತಿಂಗಳಾಂತ್ಯದವರೆಗೆ ಮೀನುಗಾರರಿಗೆ ನಿರ್ಬಂಧ

World's Newest Countries
ವಿದೇಶ2 hours ago

World’s Newest Countries: ಇವು ವಿಶ್ವದ 10 ಹೊಸ ರಾಷ್ಟ್ರಗಳು! ಏನು ಈ ರಾಷ್ಟ್ರಗಳ ವಿಶೇಷ?

Dina Bhavishya
ಭವಿಷ್ಯ3 hours ago

Dina Bhavishya : ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರ ವಹಿಸಿ

IND vs ENG Semi Final
ಕ್ರೀಡೆ6 hours ago

IND vs ENG Semi Final: ಇಂಗ್ಲೆಂಡ್​ ಮಣಿಸಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

Abhyas Trial
ದೇಶ8 hours ago

Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Congress Protest
ಕರ್ನಾಟಕ8 hours ago

ಹಾಲು, ಪೆಟ್ರೋಲ್‌ ಬೆಲೆ ಏರಿಸಿ, ಎಸಿ ಬಸ್‌ನಲ್ಲಿ ಪ್ರತಿಭಟನೆಗೆ ಹೊರಟ ಕಾಂಗ್ರೆಸ್‌ ಹಣದ ಮೂಲ ಏನು? ಬಿಜೆಪಿ ಪ್ರಶ್ನೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ12 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ14 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು16 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ19 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌