IPL 2023: ಮುಂಬೈ-ಗುಜರಾತ್​ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡಗಳ ಮಾಹಿತಿ - Vistara News

ಕ್ರಿಕೆಟ್

IPL 2023: ಮುಂಬೈ-ಗುಜರಾತ್​ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡಗಳ ಮಾಹಿತಿ

ಅಹಮದಾಬಾದ್‌​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ಗೆ ಸಮಾನವಾಗಿ ಸಹಕಾರಿಸಲಿದೆ. ಆರಂಭದಲ್ಲಿ ಬೌಲಿಂಗ್​ಗೆ ನೆರವಾದರೆ ಆ ಬಳಿಕ ನಿಧಾನವಾಗಿ ಬ್ಯಾಟಿಂಗ್​ ಸ್ನೇಹಿಯಾಗಲಿದೆ.

VISTARANEWS.COM


on

Gujarat Titans vs Mumbai Indians
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಹಾಲಿ ಚಾಂಪಿಯನ್​ ಗುಜರಾತ್​ ಮತ್ತು 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡಗಳು ಶುಕ್ರವಾರ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದ ಪಿಚ್​ ರಿಪೋರ್ಟ್​, ಉಭಯ ತಂಡಗಳ ಸಾಧನೆ, ಸಂಭಾವ್ಯ ತಂಡಗಳ ಸಂಪೂರ್ಣ ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್

ಅಹಮದಾಬಾದ್‌​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ಗೆ ಸಮಾನವಾಗಿ ಸಹಕಾರಿಸಲಿದೆ. ಆರಂಭದಲ್ಲಿ ಬೌಲಿಂಗ್​ಗೆ ನೆರವಾದರೆ ಆ ಬಳಿಕ ನಿಧಾನವಾಗಿ ಬ್ಯಾಟಿಂಗ್​ ಸ್ನೇಹಿಯಾಗಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಚೇಸಿಂಗ್​ ನಡೆಸುವ ಸಾಧ್ಯತೆ ಅಧಿಕವಾಗಿದೆ. ಉಭಯ ತಂಡಗಳು ಈ ವರೆಗೆ ಐಪಿಎಲ್​ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 2 ಪಂದ್ಯ ಗೆದ್ದು ಬೀಗಿದೆ.

ಅಂಕಿ ಅಂಶಗಳು

ಅಹಮದಾಬಾದ್​ನಲ್ಲಿ ಈ ವರೆಗೆ 25 ಐಪಿಎಲ್​ ಪಂದ್ಯಗಳು ನಡೆದಿವೆ. ಇದರಲ್ಲಿ 12 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದೆ. 13 ಬಾರಿ ಚೇಸಿಂಗ್​ ಮಾಡಿದ ತಂಡ ಮೇಲುಗೈ ಸಾಧಿಸಿದೆ. 227 ರನ್​ ಇಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದೆ. ಇದೇ ಆವೃತ್ತಿಯಲ್ಲಿ ಗುಜರಾತ್​ ತಂಡ ಲಕ್ನೋ ವಿರುದ್ಧ ಈ ಮೊತ್ತ ದಾಖಲಿಸಿತ್ತು. ಗುಜರಾತ್​ ತಂಡ ಇಲ್ಲಿ 8 ಐಪಿಎಲ್​ ಪಂದ್ಯಗಳನ್ನು ಆಡಿದ್ದು ಇದರಲ್ಲಿ 5 ಪಂದ್ಯಗಳನ್ನು ಗೆದ್ದಿದೆ. ಮುಂಬೈ ತಂಡ 3 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಜಯಿಸಿದೆ. ಈ ಲೆಕ್ಕಾಚಾರದಲ್ಲಿ ಗುಜರಾತ್​ ಮುಂದಿದೆ.

ಇದನ್ನೂ ಓದಿ IPL 2023: ಗಾಂಧಿಯ ಮೂರು ಕೋತಿಗಳಂತೆ ಟ್ರೋಲ್​ ಆದ ನವೀನ್​ ಉಲ್​-ಹಕ್​

ಸಂಭಾವ್ಯ ತಂಡಗಳು

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್​ ಗಿಲ್, ಸಾಯಿ ಸುದರ್ಶನ್/ವಿಜಯ್​ ಶಂಕರ್​, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಜೋಶುವಾ ಲಿಟಲ್, ಯಶ್ ದಯಾಳ್/ ಮೋಹಿತ್​ ಶರ್ಮ.

ಮಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಕ್ರಿಸ್​ ಜೋರ್ಡನ್​, ಆಕಾಶ್‌ ಮಧ್ವಾಲ್‌.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

IPL 2024 : ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 223 ರನ್ ಬಾರಿಸಿತು ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನಿಂಗ್ಸ್​ನ ಕೊನೇ ಎಸೆತಕ್ಕೆ 8 ವಿಕೆಟ್ ನಷ್ಟ ಮಾಡಿಕೊಂಡು 224 ರನ್​ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ಪ್ರೇಕ್ಷಕ ಮುಂದೆ ಕೆಕೆಆರ್ ತಂಡಕ್ಕೆ ಸೋಲುಣಿಸಿತು.

VISTARANEWS.COM


on

IPL 2024
Koo

ಕೋಲ್ಕೊತಾ: ಆರಂಭಿಕ ಬ್ಯಾಟರ್​ ಜೋಶ್ ಬಟ್ಲರ್​ ಅವರ (109 ರನ್​, 56 ಎಸೆತ, 13 ಫೋರ್​, 6 ಸಿಕ್ಸರ್​) ಅಜೇಯ ಶತಕದ ನೆರವು ಪಡೆದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ನೇ ಆವೃತ್ತಿಯ 31ನೇ ಪಂದ್ಯದಲ್ಲಿ 2 ವಿಕೆಟ್​ಗಳ ಗೆಲುವು ಸಾಧಿಸಿದೆ. ಪಂದ್ಯದ ಒಂದು ಹಂತದಲ್ಲಿ ಕೆಕೆಆರ್​ ತಂಡದ ಕೈ ಮೇಲಾದರೂ ಬಳಿಕ ಬಟ್ಲರ್​ ಅಬ್ಬರದ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಟ್ಟರು. ಬಟ್ಲರ್​​ಗೆ ಇದು ಹಾಲಿ ಆವೃತ್ತಿಯಲ್ಲಿ ಎರಡನೇ ಶತಕ. ಆರ್​ಸಿಬಿ ವಿರುದ್ಧ ಬಟ್ಲರ್​ ಮೊದಲ ಶತಕ ಬಾರಿಸಿದ್ದರು.

ಈ ವಿಜಯ ರಾಜಸ್ಥಾನ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆರನೇ ಗೆಲುವಾಗಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಪಾಡಿಕೊಂಡಿದೆ. ಈ ಸೋಲಿನೊಂದಿಗೆ ಕೆಕೆಆರ್​ ಪರ ಸುನೀಲ್​ ನರೈನ್​ (109 ರನ್​, 56 ಎಸೆತ, 13 ಫೋರ್​, 6 ಸಿಕ್ಸರ್​) ಸ್ಫೋಟಕ ಶತಕ ಹಾಗೂ ಬೌಲಿಂಗ್​ನಲ್ಲಿ 30 ರನ್​ ವೆಚ್ಚದಲ್ಲಿ 2 ವಿಕೆಟ್​ಗಳ ಆಲ್​ರೌಂಡರ್ ಆಟ ವ್ಯರ್ಥಗೊಂಡಿತು. ಇದು ಕೆಕೆಆರ್​ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಎರಡನೇ ಸೋಲು.

ಇಲ್ಲಿನ ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 223 ರನ್ ಬಾರಿಸಿತು ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನಿಂಗ್ಸ್​ನ ಕೊನೇ ಎಸೆತಕ್ಕೆ 8 ವಿಕೆಟ್ ನಷ್ಟ ಮಾಡಿಕೊಂಡು 224 ರನ್​ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ಪ್ರೇಕ್ಷಕ ಮುಂದೆ ಕೆಕೆಆರ್ ತಂಡಕ್ಕೆ ಸೋಲುಣಿಸಿತು.

ಈ ಪಂದ್ಯ ಅಂಕಪಟ್ಟಿಯ ಎರಡು ಅಗ್ರ ತಂಡಗಳ ನಡುವಿನ ಕದವಾಗಿತ್ತು. ರಾಜಸ್ಥಾನ ಗೆದ್ದು ಮೊದಲ ಸ್ಥಾನ ಕಾಪಾಡಿಕೊಂಡಿದೆ. ಕೆಕೆಆರ್ ಗೆದಿದ್ದರೆ ಆ ತಂಡಕ್ಕೆ ಮೊದಲ ಸ್ಥಾನ ಸಿಗುತ್ತಿತ್ತು.

ಇದನ್ನೂ ಓದಿ: Sanju Samson : ಸಂಜು ಸ್ಯಾಮ್ಸನ್​ಗೆ ರಾಯಲ್ಸ್​ ತಂಡದಲ್ಲಿ ದಶಕದ ಸಾಧನೆ; ಬೆಸ್ಟ್​ ಕ್ಯಾಪ್ಟನ್ ಎಂದ ಅಭಿಮಾನಿಗಳು

ಬಟ್ಲರ್ ಏಕಾಂಗಿ ಹೋರಾಟ

ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಲುಹೊರಟ ರಾಜಸ್ಥಾನ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಯಶಸ್ವಿ ಜೈಸ್ವಾಲ್ ಮತ್ತೆ ವೈಫಲ್ಯ ಎದುರಿಸಿ 19 ರನ್​ಗೆ ಔಟಾದರು. ಸಂಜು ಸ್ಯಾಮ್ಸನ್​ 12 ರನ್​ಗಳಿಗೆ ಸೀಮಿತಗೊಂಡರು. ಆದರೆ, ಬಟ್ಲರ್ ತಳವೂರಿ ಆಡಲು ಆರಂಭಿಸಿದರು. ಇವರಿಗೆ ಸ್ವಲ್ಪ ಹೊತ್ತು ರಿಯಾನ್ ಪರಾಗ್​ (14 ಎಸೆತಕ್ಕೆ 34 ರನ್​) ಸಾಥ್​ ಕೊಟ್ಟರು. ಆದರೆ ಆ ಬಳಿಕದಿಂದ ಸತತವಾಗಿ ವಿಕೆಟ್​ಗಳು ಉರುಳಿದವು. ಜುರೆಲ್​ 2 ರನ್​ಗೆ ಔಟಾದರೆ ಅಶ್ವಿನ್ 8 ರನ್​​ಗೆ ವಿಕೆಟ್ ಒಪ್ಪಿಸಿದರು. ಶಿಮ್ರೋನ್ ಹೆಟ್ಮಾಯರ್ ಶೂನ್ಯಕ್ಕೆ ಔಟಾದರು. ಬಳಿಕ ಬಂದ ರೊವ್ಮನ್ ಪೊವೆಲ್ 13 ಎಸೆತಕ್ಕೆ 26 ರನ್​ ಬಾರಿಸಿ ಗೆಲುವಿನ ಹಾದಿ ತೋರಿದರು. ಅಂತಿಮವಾಗಿ ಬುದ್ಧಿವಂತಿಕೆಯಿಂದ ಬ್ಯಾಟ್ ಮಾಡಿದ ಬಟ್ಲರ್ ಅಜೇಯವಾಗಿ ಉಳಿದು ತಂಡವನ್ನು ಗೆಲ್ಲಿಸಿದರು.

ನರೈನ್ ಚೊಚ್ಚಲ ಶತಕ

ಆರಂಭಿಕರಾಗಿ ಕಣಕ್ಕೆ ಇಳಿದ ಸುನೀಲ್​ ನರೈನ್​ ಆರಂಭದಿಂದಲೇ ಅಬ್ಬರಿಸಿದರು. ರಾಜಸ್ಥಾನ ತಂಡ ಬೌಲರ್​​ಗಳನ್ನು ಸತತವಾಗಿ ದಂಡಿಸಿ ರನ್ ಪೇರಿಸಲು ಆರಂಭಿಸಿದರು. ಆದರೆ, ಹಿಂದಿನ ಪಂದ್ಯಗಳಲ್ಲಿ ಅಬ್ಬರಿಸಿದ್ದ ಫಿಲ್ ಸಾಲ್ಟ್ ಇಲ್ಲಿ ಹೆಚ್ಚಿನ ಪರಿಣಾಮ ಬೀರಲಿಲ್ಲ. ಆದಾಗ್ಯೂ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರಿಸಿದ ನರೈನ್​ 49 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಐಪಿಎಲ್​ನಲ್ಲಿ ಅವರ ಚೊಚ್ಚಲ ಶತಕವಾಗಿದೆ. ಬಳಿಕ ಅದಕ್ಕೆ 9 ರನ್ ಸೇರಿಸಿದ ಅವರು ಔಟಾದರು. ರಸೆಲ್​ 13 ರನ್ ಬಾರಿಸಿದರೆ ರಿಂಕು ಸಿಂಗ್​ 20 ರನ್​ಗಳ ಕೊಡುಗೆ ಕೊಟ್ಟರು.

Continue Reading

ಪ್ರಮುಖ ಸುದ್ದಿ

Sanju Samson : ಸಂಜು ಸ್ಯಾಮ್ಸನ್​ಗೆ ರಾಯಲ್ಸ್​ ತಂಡದಲ್ಲಿ ದಶಕದ ಸಾಧನೆ; ಬೆಸ್ಟ್​ ಕ್ಯಾಪ್ಟನ್ ಎಂದ ಅಭಿಮಾನಿಗಳು

Sanju Samson: ರಾಹುಲ್ ದ್ರಾವಿಡ್, ಶೇನ್ ವ್ಯಾಟ್ಸನ್ ಮತ್ತು ಶೇನ್ ವಾರ್ನ್ ಅವರಂತೆ ಸಂಜು ಸ್ಯಾಮ್ಸನ್ ಅವರನ್ನು ಗುಲಾಬಿ ಬಣ್ಣ ಆವರಿಸಿದೆ ಎಂದು ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ಹೇಳಿದ್ದಾರೆ “ರಾಹುಲ್ ಭಾಯ್, ಶೇನ್ ವ್ಯಾಟ್ಸನ್ ಮತ್ತು ಶೇನ್ ವಾರ್ನ್ ಅವರಂತೆ ರಾಯಲ್ ಆಗಲು ಸಂಜು ಮನಸ್ಸು ಹೊಂದಿದ್ದರು. ಅವರು ಅದನ್ನು ಸಾಧಿಸಿದ್ದಾರೆ ಎಂದು ಹೇಳಿದರು.

VISTARANEWS.COM


on

Sanju Samson
Koo

ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವು ಮಂಗಳವಾರ ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ಎರಡನೇ ಅಗ್ರಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿದೆ. ಈ ವೇಳೆ ಯಜುವೇಂದ್ರ ಚಾಹಲ್ ಮತ್ತು ರಿಯಾನ್ ಪರಾಗ್, ಕ್ರಿಕೆಟ್ ನಿರ್ದೇಶಕ ಕುಮಾರ ಸಂಗಕ್ಕಾರ ಮತ್ತು ಇತರ ಫ್ರಾಂಚೈಸಿ ಸಿಬ್ಬಂದಿ ತಮ್ಮ ಆರ್ ಆರ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಶ್ಲಾಘಿಸಿದ್ದಾರೆ. ಯಾಕೆಂದರೆ ಸ್ಯಾಮ್ಸನ್ ಮಂಗಳವಾರ ರಾಯಲ್ಸ್ ತಂಡ ಸೇರಿದ ಬಳಿಕ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ.

ರಾಯಲ್ಸ್​ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ಸಂಜು ಅವರ 10 ವರ್ಷದ ಪಯಣಕ್ಕೆ ಶುಭ ಹಾರೈಸಿದ್ದಾರೆ. “ವಿಕೆಟ್ ಕೀಪರ್ ಆಗಿ ಫ್ರಾಂಚೈಸಿಯನ್ನು ಮುಂದುವರಿಸುವಂತೆ ನಾನು ಅವರಿಗೆ ಹೇಳಿದ್ದೆ. ಐಪಿಎಲ್​​ನಲ್ಲಿ ಆಡಿದ ನಂತರ, ಅವರು ಭಾರತಕ್ಕಾಗಿ 100 ಪ್ರತಿಶತ ಆಡುತ್ತಾರೆ ಎಂದು ನನಗೆ ತಿಳಿದಿತ್ತು, ಎಂದು ದಿಶಾಂತ್ ಹೇಳಿದ್ದಾರೆ.

ಇದನ್ನೂ ಓದಿ: MS Dhoni : ಮೊಣಕಾಲು ನೋವಿನಿಂದ ರೈನಾ ಕೈಹಿಡಿದು ಮೆಟ್ಟಿಲು ಇಳಿದ ಧೋನಿ…

ರಾಹುಲ್ ದ್ರಾವಿಡ್, ಶೇನ್ ವ್ಯಾಟ್ಸನ್ ಮತ್ತು ಶೇನ್ ವಾರ್ನ್ ಅವರಂತೆ ಸಂಜು ಸ್ಯಾಮ್ಸನ್ ಅವರನ್ನು ಗುಲಾಬಿ ಬಣ್ಣ ಆವರಿಸಿದೆ ಎಂದು ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ಹೇಳಿದ್ದಾರೆ “ರಾಹುಲ್ ಭಾಯ್, ಶೇನ್ ವ್ಯಾಟ್ಸನ್ ಮತ್ತು ಶೇನ್ ವಾರ್ನ್ ಅವರಂತೆ ರಾಯಲ್ ಆಗಲು ಸಂಜು ಮನಸ್ಸು ಹೊಂದಿದ್ದರು. ಅವರು ಅದನ್ನು ಸಾಧಿಸಿದ್ದಾರೆ ಎಂದು ಹೇಳಿದರು.

ಸ್ಯಾಮ್ಸನ್ ಐಪಿಎಲ್ ದಾಖಲೆಗಳು

ರಾಯಲ್ಸ್ ಪರ 130 ಪಂದ್ಯಗಳನ್ನಾಡಿರುವ ಸ್ಯಾಮ್ಸನ್ 31.02ರ ಸರಾಸರಿಯಲ್ಲಿ 3,475 ರನ್ ಗಳಿಸಿದ್ದಾರೆ. ಅವರು ಎರಡು ಶತಕಗಳು ಮತ್ತು 20 ಅರ್ಧಶತಕಗಳನ್ನು ಹೊಂದಿದ್ದಾರೆ, 119 ಅವರ ಗರಿಷ್ಠ ಸ್ಕೋರ್ ಆಗಿದೆ. ಪ್ರಸ್ತುತ ಐಪಿಎಲ್ 2024 ರಲ್ಲಿ, ಆರ್​ಆರ್​ ನಾಯಕ ಮೂರು ಅರ್ಧಶತಕಗಳೊಂದಿಗೆ 66.00 ಸರಾಸರಿಯಲ್ಲಿ 264 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 82 ರನ್.

ಐಪಿಎಲ್ 2024 ರಲ್ಲಿ ರಾಜಸ್ಥಾನ್ ಅಭಿಯಾನ

ರಾಯಲ್ಸ್ 10 ಅಂಕಗಳೊಂದಿಗೆ ಮತ್ತು 0.767 ನೆಟ್ ರನ್ ರೇಟ್​ನೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್​​ನಲ್ಲಿ ಅಗ್ರಸ್ಥಾನದಲ್ಲಿದೆ. ಅವರು ಐದು ಗೆಲುವುಗಳನ್ನು ಹೊಂದಿದ್ದಾರೆ ಮತ್ತು ಇನ್ನೊಂದರಲ್ಲಿ ಸೋತಿದ್ದಾರೆ.

Continue Reading

ಪ್ರಮುಖ ಸುದ್ದಿ

MS Dhoni : ಮೊಣಕಾಲು ನೋವಿನಿಂದ ರೈನಾ ಕೈಹಿಡಿದು ಮೆಟ್ಟಿಲು ಇಳಿದ ಧೋನಿ…

MS Dhoni: ಧೋನಿ ಕಳೆದ ವರ್ಷ ಮೊಣಕಾಲಿನಿಂದ ಬಳಲುತ್ತಿದ್ದರು. ಕುಂಟುತ್ತಾ ಆಡಿದ್ದರು. ಆ ಬಳಿಕ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಸಮಸ್ಯೆ ಇನ್ನೂ ಮುಂದುವರೆದಿದೆ. ಸಿಎಸ್​ಕೆ ಮಾಜಿ ನಾಯಕ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ಋತುವಿನಲ್ಲಿ ಕುಂಟುತ್ತಾ ನಡೆಯುತ್ತಿದ್ದಾರೆ. ಅಂತೆಯೇ ತಮ್ಮ ಕಾಮೆಂಟ್ ಕರ್ತವ್ಯಗಳನ್ನು ಮುಗಿಸಿದ ರೈನಾ ಜತೆ ನಡೆಯುತ್ತಾ ಹೋಗಿದ್ದರು. ಈ ವೇಳೆ ಮೆಟ್ಟಿಲುಗಳಿಂದ ಇಳಿಯುವಾಗ ಧೋನಿ ಕೈ ಹಿಡಿದು ನೆರವು ನೀಡಿದ ಪ್ರಸಂಗ ನಡೆಯಿತು.

VISTARANEWS.COM


on

MS Dhoni
Koo

ಬೆಂಗಳೂರು: ಸುರೇಶ್ ರೈನಾ ಐಪಿಎಲ್​ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ಆದರೆ, ಅವರು ಚೆನ್ನೈ ಸೂಪರ್​ ಕಿಂಗ್ಸ್​ ಜತೆಗಿನ ಸಂಬಂಧ ಕಡಿದುಕೊಂಡಿಲ್ಲ. ಧೋನಿ (MS Dhoni) ಹಾಗೂ ಅವರ ಬಳಗದ ಜತೆಯೇ ಸುತ್ತಾಡುತ್ತಿದ್ದಾರೆ. ರೈನಾ ಕ್ರಿಕೆಟ್​ ವೀಕ್ಷಕ ವಿವರಣೆಗಾರರಾಗಿದ್ದರೂ ಮಾಜಿ ನಾಯಕನ ನೆರವಿಗೆ ಸದಾ ನಿಲ್ಲುತ್ತದೆ. ಅಂತೆಯೇ ಅವರು ಐಪಿಎಲ್​ ನಲ್ಲಿ (IPL 2024) ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಧೋನಿಗೆ ನೆರವು ನೀಡಿದ ಪ್ರಸಂಗ ನಡೆಯಿತು.

ಧೋನಿ ಕಳೆದ ವರ್ಷ ಮೊಣಕಾಲಿನಿಂದ ಬಳಲುತ್ತಿದ್ದರು. ಕುಂಟುತ್ತಾ ಆಡಿದ್ದರು. ಆ ಬಳಿಕ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಸಮಸ್ಯೆ ಇನ್ನೂ ಮುಂದುವರೆದಿದೆ. ಸಿಎಸ್​ಕೆ ಮಾಜಿ ನಾಯಕ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ಋತುವಿನಲ್ಲಿ ಕುಂಟುತ್ತಾ ನಡೆಯುತ್ತಿದ್ದಾರೆ. ಅಂತೆಯೇ ತಮ್ಮ ಕಾಮೆಂಟ್ ಕರ್ತವ್ಯಗಳನ್ನು ಮುಗಿಸಿದ ರೈನಾ ಜತೆ ನಡೆಯುತ್ತಾ ಹೋಗಿದ್ದರು. ಈ ವೇಳೆ ಮೆಟ್ಟಿಲುಗಳಿಂದ ಇಳಿಯುವಾಗ ಧೋನಿ ಕೈ ಹಿಡಿದು ನೆರವು ನೀಡಿದ ಪ್ರಸಂಗ ನಡೆಯಿತು. ಮೊಣಕಾಲು ನೋವಿನಿಂದ ಮೆಟ್ಟಿಲು ಇಳಿಯಲು ಅವರು ಕಷ್ಟ ಪಡುತ್ತಿದ್ದದ್ದು ಈ ವೇಳೆ ಬೆಳಕಿಗೆ ಬಂತು.

ನೋವಿನಲ್ಲೂ ಸಿಕ್ಸರ್ ಬಾರಿಸುತ್ತಿದ್ದಾರೆ ಧೋನಿ; ದಿಗ್ಗಜನ ಬದ್ಧತೆಗೆ ಸಿಎಸ್​​ಕೆ ಕೋಚ್ ಮೆಚ್ಚುಗೆ

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಮೊಣಕಾಲು ಗಾಯದಿಂದ ಬಳಲುತ್ತಿದ್ದರೂ ಕ್ರಿಕೆಟ್​ ಕುರಿತ ಅಚಲ ಬದ್ಧತೆಗಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿಎಸ್​ಕೆ ಬೌಲಿಂಗ್ ಸಲಹೆಗಾರ ಎರಿಕ್ ಸಿಮನ್ಸ್ ಧೋನಿಯ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದ್ದು, ಅವರ ದೃಢನಿಶ್ಚಯದ ಬಲವನ್ನು ಬಹಿರಂಗಪಡಿಸಿದ್ದಾರೆ. ಮೊಣಕಾಲು ಗಾಯಕ್ಕೆ ಸಂಬಂಧಿಸಿದ ನೋವು ಮತ್ತು ಸಂಭಾವ್ಯ ಅಪಾಯಗಳ ಹೊರತಾಗಿಯೂ, ಧೋನಿ ಅದನ್ನು ಅವರ ಪ್ರದರ್ಶನ ಅಥವಾ ಉತ್ಸಾಹವನ್ನು ಕಡಿಮೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಆಟಗಾರರಿಗೆ ಇಂಗ್ಲಿಷ್ ಗೊತ್ತಿಲ್ಲದ್ದು ಆರ್​ಸಿಬಿ ಸೋಲಿಗೆ ಕಾರಣ; ಮಾಜಿ ಆಟಗಾರನ ವಿಭಿನ್ನ ವಿಶ್ಲೇಷಣೆ

ಮುಂಬೈ ಇಂಡಿಯನ್ಸ್ ವಿರುದ್ಧದ ಗಮನಾರ್ಹ ಪಂದ್ಯದಲ್ಲಿ ಧೋನಿ ಇನಿಂಗ್ಸ್​ನ ಕೊನೆಯ ನಾಲ್ಕು ಎಸೆತಗಳಲ್ಲಿ ಪರಾಕ್ರಮ ತೋರಿದ್ದರು. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಓವರ್​ನಲ್ಲಿ 26 ರನ್ ಗಳಿಸಿದ್ದರು. ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದರು. ಮಿಂಚಿನ ದಾಳಿಯು ಸಿಎಸ್​ಕೆ ತಂಡಕ್ಕೆ 20 ರನ್​ಗಳ ಗೆಲುವಿಗೆ ಕಾರಣವಾಯಿತು. ಅಲ್ಲದೆ ತಂಡವನ್ನು ಇದು ಐಪಿಎಲ್ ಪಾಯಿಂಟ್ಸ್ ಟೇಬಲ್​ನಲ್ಲಿ ಮೂರನೇ ಸ್ಥಾನಕ್ಕೆ ಏರಿತು.

“ಮುಂಬೈ ತಂಡ ನಮ್ಮನ್ನು 200 ಕ್ಕಿಂತ ಕಡಿಮೆ ರನ್​ಗೆ ಸೀಮಿತಗೊಳಿಸಲು ನೋಡುತ್ತಿದ್ದರು. ಆದರೆ, ಧೋನಿ ಚಿತ್ರಣ ಬದಲಿಸಿದರು. ಪ್ರತಿ ಬಾರಿಯೂ ನಾವು ಧೋನಿಯ ಹತ್ತಿರವಿರುತ್ತೇವೆ. ಅವರು ನಮ್ಮನ್ನು ಬೆರಗುಗೊಳಿಸುತ್ತಲೇ ಇರುತ್ತಾರೆ. ಕೊನೆಯಲ್ಲಿ ಬ್ಯಾಟಿಂಗ್​ಗೆ ಇಳಿದು ಚೆಂಡನ್ನು ಸಿಕ್ಸರ್​ಗೆ ಅಟ್ಟುವುದು ಹಾಗೂ ಅದನ್ನೇ ಮುಂದುವರಿಸಿದ್ದಾರೆ. ಅವರು ನೆಟ್ಸ್​ನಲ್ಲಿ ಅಸಾಧಾರಣವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. , “ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹೇಳಿದ್ದಾರೆ.

ಧೋನಿ ಮೊಣಕಾಲು ಸಮಸ್ಯೆಯೊಂದಿಗೆ ಆಡುತ್ತಿದ್ದಾರೆ ಎಂದು ಸಿಮನ್ಸ್ ಒಪ್ಪಿಕೊಂಡರು/ ಆದರೆ ಅವರು ಅದನ್ನು ಯಾವುದೇ ನೋವನ್ನು ಪ್ರದರ್ಶಿಸದೆ ಎದುರಿಸಿದ್ದಾರೆ. “ಪ್ರತಿಯೊಬ್ಬರೂ ಅವನಿಗಿಂತ ಅವರ ಗಾಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಧೋನಿ ಹಾಗಲ್ಲ. ನಾನು ಕಂಡ ಅತ್ಯಂತ ಕಠಿಣ ವ್ಯಕ್ತಿಗಳಲ್ಲಿ ಅವರು ಒಬ್ಬರು. ಅವನು ಎಷ್ಟರ ಮಟ್ಟಿಗೆ ನೋವಿನಲ್ಲಿರಬಹುದು ಎಂಬುದು ನಮಗೆ ತಿಳಿದಿದೆ. ಆದರೂ ಅವರು ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ “ಎಂದು ಸಿಮನ್ಸ್​ ಹೇಳಿದರು.

Continue Reading

ಪ್ರಮುಖ ಸುದ್ದಿ

IPL 2024 : ಆಟಗಾರರಿಗೆ ಇಂಗ್ಲಿಷ್ ಗೊತ್ತಿಲ್ಲದ್ದು ಆರ್​ಸಿಬಿ ಸೋಲಿಗೆ ಕಾರಣ; ಮಾಜಿ ಆಟಗಾರನ ವಿಭಿನ್ನ ವಿಶ್ಲೇಷಣೆ

IPL 2024: ಕೆಲವರು ಮಾತ್ರ ಅಂತರರಾಷ್ಟ್ರೀಯ ಆಟಗಾರರು. ಉಳಿದವರೆಲ್ಲರೂ ಭಾರತೀಯರು ಮತ್ತು ಅವರಲ್ಲಿ ಅರ್ಧದಷ್ಟು ಜನರಿಗೆ ಇಂಗ್ಲಿಷ್ ಸರಿಯಾಗಿ ಅರ್ಥವಾಗುವುದಿಲ್ಲ. ನೀವು ಅವರನ್ನು ಹೇಗೆ ಪ್ರೇರೇಪಿಸುವಿರಿ? ಅವರೊಂದಿಗೆ ಸಮಯ ಕಳೆಯುವವರು ಯಾರು? ಅವರೊಂದಿಗೆ ಯಾರು ಮಾತನಾಡುತ್ತಾರೆ? ಆ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಸಿಬ್ಬಂದಿ ಇಲ್ಲ. . ಕನಿಷ್ಠ ಆಟಗಾರರು ನಂಬಬಹುದಾದ ಯಾರಾದರೂ ಇರಬೇಕು,” ಎಂದು ಸೆಹ್ವಾಗ್ ಆರ್​ಸಿಬಿ ಮ್ಯಾನೇಜ್ಮೆಂಟ್ ಅನ್ನು ಪ್ರಶ್ನಿಸಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತೊಂದು ನಿರಾಶಾದಾಯಕ ಸೋಲಿಗೆ ಒಳಗಾಗಿದೆ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 17ನೇ ಆವೃತ್ತಿಯಲ್ಲಿ ಆಘಾತಕಾರಿ ಫಲಿತಾಂಶ ಎದುರಿಸಿದೆ. ಪ್ರತಿ ಋತುವಿನಲ್ಲಿ, ಫ್ರಾಂಚೈಸಿ ತಮ್ಮ ಅಭಿಮಾನಿಗಳ ಹೃದಯದಲ್ಲಿ ಭರವಸೆಗಳನ್ನು ಮೂಡಿಸುತ್ತದೆ/ ನಂತರ ಕಳಪೆ ಪ್ರದರ್ಶನದಿಂದ ಅವರಿಗೆ ಬೇಸರ ಮೂಡಿಸುತ್ತದೆ. 2024 ರ ಅಭಿಯಾನವು ಅದಕ್ಕಿಂತ ಭಿನ್ನವಾಗಿಲ್ಲ. ಆರ್​ಸಿಬಿ 7 ಪಂದ್ಯಗಳಲ್ಲಿ 6 ಸೋಲುಗಳನ್ನು ಅನುಭವಿಸಿ 10 ತಂಡಗಳ ಪಾಯಿಂಟ್ಸ್​​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಪಂಡಿತರು ಆರ್​​ಸಿಬಿಯ ಸೋಲಿಗೆ ಕಾರಣಗಳನ್ನು ಹುಡುಕುತ್ತಲೇ ಇದ್ದಾರೆ. ಅಂತೆಯೇ ಮಾಜಿ ಸ್ಫೋಟಕ ಬ್ಯಾಟರ್​​ ವಿರೇಂದ್ರ ಸೆಹ್ವಾಗ್ ಈ ತಮ್ಮದೇ ಅಭಿಪ್ರಾಯಗಳನ್ನು ನೀಡಿದ್ದಾರೆ. ಅವರ ಪ್ರಕಾರ ಆರ್​ಸಿಬಿಯ ದೊಡ್ಡ ಸಮಸ್ಯೆಯೆಂದರೆ ಭಾರತೀಯ ಸಹಾಯಕ ಸಿಬ್ಬಂದಿಯ ಕೊರತೆ.

ನಿಮ್ಮ ಬಳಿ 12ರಿಂದ 15 ಭಾರತೀಯ ಆಟಗಾರರು ಇದ್ದಾರೆ. ಕೇವಲ 10 ವಿದೇಶಿ ಆಟಗಾರರನ್ನು ಹೊಂದಿದ್ದೀರಿ. ನಿಮ್ಮ ಇಡೀ ಸಹಾಯಕ ಸಿಬ್ಬಂದಿ ವರ್ಗ ವಿದೇಶಿಯರಾಗಿದ್ದರೆ. ಅದುವೇ ಸಮಸ್ಯೆಯಾಗಿದೆ. ಅವರಲ್ಲಿ ಕೆಲವರು ಮಾತ್ರ ಅಂತರರಾಷ್ಟ್ರೀಯ ಆಟಗಾರರು. ಉಳಿದವರೆಲ್ಲರೂ ಭಾರತೀಯರು ಮತ್ತು ಅವರಲ್ಲಿ ಅರ್ಧದಷ್ಟು ಜನರಿಗೆ ಇಂಗ್ಲಿಷ್ ಸರಿಯಾಗಿ ಅರ್ಥವಾಗುವುದಿಲ್ಲ. ನೀವು ಅವರನ್ನು ಹೇಗೆ ಪ್ರೇರೇಪಿಸುವಿರಿ? ಅವರೊಂದಿಗೆ ಸಮಯ ಕಳೆಯುವವರು ಯಾರು? ಅವರೊಂದಿಗೆ ಯಾರು ಮಾತನಾಡುತ್ತಾರೆ? ಆ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಸಿಬ್ಬಂದಿ ಇಲ್ಲ. . ಕನಿಷ್ಠ ಆಟಗಾರರು ನಂಬಬಹುದಾದ ಯಾರಾದರೂ ಇರಬೇಕು,” ಎಂದು ಸೆಹ್ವಾಗ್ ಆರ್​ಸಿಬಿ ಮ್ಯಾನೇಜ್ಮೆಂಟ್ ಅನ್ನು ಪ್ರಶ್ನಿಸಿದ್ದಾರೆ.

ಆಟಗಾರರಿಗೆ ಆರಾಮದಾಯಕ ಪರಿಸ್ಥಿತಿ ಸಿಗಬೇಕು. ನಾಯಕ ಫಾಫ್ ಡು ಪ್ಲೆಸಿಸ್ ಅವರ ಮುಂದೆ ನಿಲ್ಲುವುದೇ ಇಲ್ಲ. ಯಾಕೆಂದರೆ ಅವರಿಗೆ ಭಾಷೆ ಬರುವುದಿಲ್ಲ. ಅವರು ಏನನ್ನಾದರೂ ಕೇಳಿದರೆ, ಅವರು ಉತ್ತರಿಸಬೇಕಾಗುತ್ತದೆ. ನಾಯಕ ಭಾರತೀಯನಾಗಿದ್ದರೆ, ಆಟಗಾರನ ಮನಸ್ಸಿನಲ್ಲಿ ಏನಾಗುತ್ತಿದೆ ಹಂಚಿಕೊಳ್ಳಬಹುದು. ವಿದೇಶಿ ಆಟಗಾರರಿಗೆ ಇದೇ ಪರಿಸ್ಥಿತಿ ಎದುರಾಗಿದ್ದರೆ ಏನು ಮಾಡಬೇಕಾಗಿತ್ತು. ಹೀಗಾಗಿ ಆರ್​ಸಿಬಿಗೆ ಕನಿಷ್ಠ 2-3 ಭಾರತೀಯ ಸಹಾಯಕ ಸಿಬ್ಬಂದಿಯ ಅಗತ್ಯವಿದೆ ಎಂದು ಸೆಹ್ವಾಗ್ ವಿಶ್ಲೇಷಣೆ ಮಾಡಿದ್ದಾರೆ.

ಆಯ್ಕೆಯೇ ಸರಿಲ್ಲಿ

ಭಾರತ ಮತ್ತು ಕೋಲ್ಕತಾ ನೈಟ್ ರೈಡರ್ಸ್​ ತಂಡ ಮಾಜಿ ಬ್ಯಾಟರ್​ ಮನೋಜ್ ತಿವಾರಿ, ಆರ್​ಸಿಬಿಯ ಸಮಸ್ಯೆಗಳು ಭೀಕರವಾಗಿದೆ ಎಂದಿದ್ದಾರೆ. ಹರಾಜು ಟೇಬಲ್​ನಲ್ಲಿಯೇ ಕಳಪೆ ನೇಮಕ ನಡೆಯುತ್ತಿದೆ. ಅದುವೇ ಅವರ ತೊಂದರೆಗಳ ಹಿಂದಿನ ದೊಡ್ಡ ಕಾರಣ ಎಂದ ಹೇಳಿದ್ದಾರೆ.

ಇದನ್ನೂ ಓದಿ: Hardik Pandya : ಹಾರ್ದಿಕ್ ಪಾಂಡ್ಯ ಸಹೋದರನ ಪೊಲೀಸ್​ ಕಸ್ಟಡಿ ವಿಸ್ತರಣೆ; ಏನಿದು ಕೇಸ್​?

“ಸಮಸ್ಯೆ ಎಲ್ಲಿದೆ ಎಂದು ನನಗೆ ತಿಳಿದಿದೆ. ಹರಾಜು ಟೇಬಲ್ ನಿಂದ ನಿರ್ವಹಣೆಯವರೆಗೆ ಎಲ್ಲ ಕಡೆಯೂ ಇದೆ. ಈ ಫ್ರಾಂಚೈಸಿಯ ಎಲ್ಲಾ ಉತ್ತಮ ಆಟಗಾರರು ಇತರ ತಂಡಗಳಿಗಾಗಿ ಹೋಗಿ ಅತ್ಯುತ್ತಮವಾಗಿ ಆಡುತ್ತಾರೆ. ಆ ತಂಡದಲ್ಲಿ ಪ್ರಮುಖ ವಿಕೆಟ್ ಟೇಕಿಂಗ್​ ಬೌಲರ್ (ಯಜುವೇಂದ್ರ ಚಾಹಲ್) ಅವರನ್ನು ಕೈಬಿಡಲಾಗಿದೆ. ಇದೇ ವೇಳೆ ವಿರಾಟ್ ಕೊಹ್ಲಿ ನಾಯಕತ್ವವನ್ನು ಮುಂದುವರಿಸುವುದಿಲ್ಲ. ಅವರು ಅವರನ್ನು 2016ರರ ಫೈನಲ್ ಗೆ ಮುನ್ನಡೆಸಿದವರು. 40 ಕೋಟಿ ರೂ.ಗಿಂತ ಹೆಚ್ಚಿನ ಒಟ್ಟು ಹಣ ಪಡೆದಿರುವ ಫ್ರಾಂಚೈಸಿಯ 4 ದುಬಾರಿ ಆಟಗಾರರು ಬೆಂಚ್ ಕಾಯುತ್ತಿದ್ದಾಋಎ. ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್. ಸಿರಾಜ್​​ಗೆ ವಿಶ್ರಾಂತಿ ನೀಡಲಾಗಿದೆ. ತುಂಬಾ ಹಣವನ್ನು ಖರ್ಚು ಮಾಡಿ ಅವರನ್ನು ಹೊರಗೆ ಕೂರಿಸಲಾಗುತ್ತದೆ. ಇವೆಲ್ಲವೂ ಸಮಸ್ಯೆಯೇ ಎಂದು “ಎಂದು ತಿವಾರಿ ಹೇಳಿದ್ದಾರೆ.

ಬ್ಯಾಟಿಂಗ್ ಅಲ್ಲಿ ಸಮಸ್ಯೆಯಲ್ಲ. ಆ ತಂಡದ ಸಮಸ್ಯೆ ಯಾವಾಗಲೂ ಬೌಲಿಂಗ್ ಆಗಿತ್ತು. ಅವರಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲ. ನೀವು ವಿಲ್ ಜಾಕ್ಸ್ ಅವರಿಗೆ ಮೊದಲ ಓವರ್​ ಕೊಡಲಾಗುತ್ತದೆ. ಕೆಲವೊಮ್ಮೆ ಮಹಿಪಾಲ್ ಲೊಮ್ರೊಗೂ ಬೌಲಿಂಗ್​. ಮೈದಾನದಲ್ಲಿನ ಕೆಲವು ನಾಯಕತ್ವದ ನಿರ್ಧಾರಗಳು ಭಯಾನಕವಾಗಿವೆ. ಪ್ರತಿಯೊಂದು ಮೂಲೆಯಿಂದಲೂ ತಪ್ಪಾಗಿದೆ. ಅವರು ಸಂಪೂರ್ಣವಾಗಿ ಮರುಸಂಘಟನೆಗೊಳ್ಳಬೇಕು ಮತ್ತು ದೀರ್ಘಕಾಲೀನ ಯೋಜನೆಯನ್ನು ರೂಪಿಸಬೇಕು ಎಂದು ಹೇಳಿದರು.

ಬೆಂಗಳೂರು ತಂಡಕ್ಕೆ ಇದು ಇನ್ನೂ ಮುಗಿದ ಅಧ್ಯಾಯವಲ್ಲ. ಫಾಫ್ ಡು ಪ್ಲೆಸಿಸ್ ಪಡೆ ಪ್ಲೇಆಫ್ಗೆ ಪ್ರವೇಶಿಸಲು ದೈತ್ಯ ಪ್ರಯತ್ನದ ಅಗತ್ಯವಿದೆ.

Continue Reading
Advertisement
UPSC Results 2023
ದೇಶ50 mins ago

ವಿಸ್ತಾರ ಸಂಪಾದಕೀಯ: ಯುಪಿಎಸ್‌ಸಿ ಸಾಧಕರ ಕತೆಗಳು ಇತರರಿಗೆ ಸ್ಫೂರ್ತಿಯಾಗಲಿ

Ram Navami
ಪ್ರಮುಖ ಸುದ್ದಿ59 mins ago

Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

State Administrative Reforms Commission Chairman R V Deshpande statement
ಉತ್ತರ ಕನ್ನಡ1 hour ago

Lok Sabha Election 2024: ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ: ಆರ್.ವಿ.ದೇಶಪಾಂಡೆ

IPL 2024
ಪ್ರಮುಖ ಸುದ್ದಿ1 hour ago

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

Murder Case
ಕರ್ನಾಟಕ2 hours ago

Chitradurga News: ಚಿತ್ರದುರ್ಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆ

amith shah
ದೇಶ2 hours ago

Amit Shah: ಶೀಘ್ರದಲ್ಲೇ ಭಾರತ ನಕ್ಸಲ್‌ ಮುಕ್ತವಾಗಲಿದೆ; ಅಮಿತ್ ಶಾ

Nitin Gadkari
ದೇಶ2 hours ago

Nitin Gadkari : ನಾಗ್ಪುರ ಕ್ಷೇತ್ರಕ್ಕೆ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ

UPSC Results 2023
ಕರ್ನಾಟಕ2 hours ago

UPSC Results 2023: ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದ ಶಾಂತಪ್ಪ ಕುರುಬರ; ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡ ಸಾಧಕ!

Dalip Singh Majithia
ಪ್ರಮುಖ ಸುದ್ದಿ2 hours ago

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Ayodhya Ram Mandir
ದೇಶ3 hours ago

Ayodhya Ram Mandir: ನಾಳೆ ಅಯೋಧ್ಯೆ ಶ್ರೀರಾಮನಿಗೆ ಸೂರ್ಯ ತಿಲಕ; ಮನೆಯಲ್ಲೇ ಕೂತು ಹೀಗೆ ಕಣ್ತುಂಬಿಕೊಳ್ಳಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ20 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20242 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ5 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20246 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌