IPL 2023: ಅರ್ಧಶತಕ ಬಾರಿಸಿದ ತಿಲಕ್​ ವರ್ಮ; ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಮುಂಬೈ ಇಂಡಿಯನ್ಸ್​ - Vistara News

ಕ್ರಿಕೆಟ್

IPL 2023: ಅರ್ಧಶತಕ ಬಾರಿಸಿದ ತಿಲಕ್​ ವರ್ಮ; ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಮುಂಬೈ ಇಂಡಿಯನ್ಸ್​

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಭಾನುವಾರದ ದ್ವಿತೀಯ ಐಪಿಎಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 171 ರನ್​ ಗಳಿಸಿದೆ.

VISTARANEWS.COM


on

IPL 2023: Tilak Verma hits half-century; Mumbai Indians have accumulated a competitive total
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಯಲ್​​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ತಂಡದ ಘಾತಕ ಬೌಲಿಂಗ್​ ದಾಳಿಯ ಮಧ್ಯೆಯೂ ಏಕಾಂಗಿಯಾಗಿ ಹೋರಾಟ ನಡೆಸಿದ ತಿಲಕ್​ ವರ್ಮ(ಅಜೇಯ 84) ಮುಂಬೈ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಅರ್ಧಶತಕದ ಬ್ಯಾಟಿಂಗ್​ ಸಾಹಸದಿಂದಾಗಿ ಮುಂಬೈ ಇಂಡಿಯನ್ಸ್​(Mumbai Indians) ತಂಡ 171 ರನ್​ ಗಳಿಸಿದೆ. ಫಾಪ್​ ಡು ಪ್ಲೆಸಿಸ್​ ಪಡೆ ಗೆಲುವಿಗೆ 172 ರನ್​ ಬಾರಿಸಬೇಕಿದೆ. ಆರ್​ಸಿಬಿ ಪರ ಕರಣ್​ ಶರ್ಮ 2 ವಿಕೆಟ್​ ಕಿತ್ತು ಮಿಂಚಿದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸಿದೆ. ಕೊರೊನಾದ ಮೂರು ವರ್ಷಗಳ ಬಳಿಕ ತವರಿನಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಆರ್​ಸಿಬಿ ಆರಂಭಿಕ ಹಂತದಲ್ಲಿ ಉತ್ತಮ ಆಟವಾಡಿ ಗಮನ ಸೆಳೆದಿತು.

ಬ್ಯಾಟಿಂಗ್​ ಆಹ್ವಾನ ಪಡೆದ ಮುಂಬೈ ಆರಂಭದಲ್ಲೇ ಸತತ ವಿಕೆಟ್​ ಕಳೆದುಕೊಂಡಿತು. ಮೊಹಮ್ಮದ್​ ಸಿರಾಜ್​ ಅವರು ಇಶಾನ್​ ಕಿಶನ್​ ವಿಕೆಟ್​ ಕಿತ್ತು ಆರ್​ಸಿಬಿಗೆ ಮೊದಲ ಮುನ್ನಡೆ ತಂದುಕೊಟ್ಟರು. ಮುಂದಿನ ಓವರ್​ನಲ್ಲಿ ರೇಸ್ ಟಾಪ್ಲಿ ಕ್ಯಾಮರೂನ್​ ಗ್ರೀನ್​ ವಿಕೆಟ್​ ಉರುಳಿಸಿದರು. ಗ್ರೀನ್​ 5 ರನ್​ ಗಳಿಸಿದರೆ ಇಶಾನ್​ ಕಿಶನ್​ 11 ರನ್​ ಬಾರಿಸಿದರು. ಸಿರಾಜ್​ ಓವರ್​ನಲ್ಲಿ ಜೀವದಾನ ಪಡೆದ ರೋಹಿತ್​ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಆಕಾಶ್​ ದೀಪ್​ ಅವರ ಮುಂದಿನ ಓವರ್​ನಲ್ಲಿ ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್​ ಅವರಿಗೆ ಕ್ಯಾಚ್​ ನೀಡಿ ಒಂದು ರನ್​ಗೆ ಸೀಮಿತರಾದರು. ತಂಡದ ಮೊತ್ತ 50 ಆಗುವ ಮುನ್ನವೇ ನಾಲ್ಕು ವಿಕೆಟ್​ ಕಳೆದುಕೊಂಡು ಮುಂಬೈ ಶೋಚನೀಯ ಸ್ಥಿತಿ ಕಂಡಿತು. ಟಿ20 ನಂ.1 ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಅವರ ಬ್ಯಾಟ್​ ಈ ಪಂದ್ಯದಲ್ಲಿ ಸದ್ದು ಮಾಡಲಿಲ್ಲ. ರನ್​ ಗಳಿಸಲು ಪರದಾಡಿದ ಅವರು 16 ಎಸೆತ ಎದುರಿಸಿ 15 ರನ್​ ಬಾರಿಸಲಷ್ಟೇ ಶಕ್ತರಾದರು.

ಉತ್ತಮ ಬೌಲಿಂಗ್​ ನಡೆಸುತ್ತಿದ್ದ ಟಾಪ್ಲಿ ಅವರು ಫೀಲ್ಡಿಂಗ್​ ನಡೆಸುತ್ತಿದ್ದ ವೇಳೆ ಭುಜದ ಗಾಯಕ್ಕೆ ತುತ್ತಾಗಿ ಮೈದಾನ ತೊರೆದರು. ಸದ್ಯ ಅವರ ಗಾಯವನ್ನು ಗಮನಿಸುವಾಗ ಅವರು ಮುಂದಿನ ಕೆಲ ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಮೊದಲೇ ಗಾಯದ ಚಿಂತೆಯಲ್ಲಿದ್ದ ಆರ್​ಸಿಬಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಟಾಪ್ಲಿ 2 ಓವರ್​ ನಡೆಸಿ 1 ವಿಕೆಟ್​ ಕಿತ್ತು ಪಂದ್ಯದಿಂದ ಹೊರಗುಳಿದರು.

ಇದನ್ನೂ ಓದಿ IPL 2023: ರಾಯಲ್ಸ್ ವಿರುದ್ಧ ಶೈನ್​ ಆಗದ ಸನ್​ರೈಸರ್ಸ್; 72 ರನ್​ ಸೋಲು

ಅಜೇಯ ಅರ್ಧಶತಕ ಬಾರಿಸಿ ಮಿಂಚಿದ ತಿಲಕ್​ ವರ್ಮ

ನಂಬುಗೆಯ ಬ್ಯಾಟರ್​ಗಳೆಲ್ಲ ಔಟಾದಾಗ ಟೊಂಕ ಕಟ್ಟಿ ನಿಂತ ತಿಲಕ್​ ವರ್ಮ ಮುಂಬೈ ತಂಡಕ್ಕೆ ಆಸರೆಯಾದರು. ಇವರಿಗೆ ಯುವ ಆಟಗಾರ ನಿಹಾಲ್​ ವಧೀರಾ ಕೆಳ ಕ್ರಮಾಂಕದಲ್ಲಿ ಉತ್ತಮ ಸಾಥ್​ ನೀಡಿದರು. ಬಿರುಸಿನ ಬ್ಯಾಟಿಂಗ್​ ನಡೆಸಿದ ವಧೀರಾ ಅವರು ಕರಣ್​ ಶರ್ಮ ಅವರಿಗೆ ಸತತ ಸಿಕ್ಸರ್​ ಸಿಡಿಸಿ ಮಿಂಚಿದರು. ಇದರಲ್ಲೊಂದು ಸಿಕ್ಸ್​ ಸ್ಟೇಡಿಯಂನಿಂದ ಹೊರಕ್ಕೆ ಚಿಮ್ಮಿತು. ಈ ವೇಳೆ ಅವರು ಅಪಾಯಕಾರಿಯಾಗುವ ಸೂಚನೆಯೊಂದು ಲಭಿಸಿತು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಕರಣ್​ ಶರ್ಮ ಮುಂದಿನ ಎಸೆತದಲ್ಲಿ ವಿಕೆಟ್​ ಉಡಾಯಿಸುವಲ್ಲಿ ಯಶಸ್ವಿಯಾದರು. ವಧೀರಾ 21 ರನ್​ ಗಳಿಸಿದರು.

ಇದನ್ನೂ ಓದಿ IPL 2023: ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಕೆ.ಎಲ್​. ರಾಹುಲ್​ ಬಳಗ

ವಧೀರಾ ವಿಕೆಟ್​ ಪತನದ ಬಳಿಕ ಆಡಲಿಳಿದ ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಆಸ್ಟ್ರೇಲಿಯಾ ತಂಡದ ಟಿಮ್​ ಡೇವಿಡ್​ಗೆ ಕರಣ್​ ಶರ್ಮ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲು ಬಿಡಲಿಲ್ಲ. 4 ರನ್​ ಗಳಿಸಿದ್ದ ವೇಳೆ ವಿಕೆಟ್​ ಪಡೆದು ಅವರಿಗೆ ಪೆವಿಲಿಯನ್​ ದಾರಿ ತೋರಿಸಿದರು. ಆದರೆ ತಿಲಕ್​ ವರ್ಮ ಮತ್ತೊಂದು ಬದಿಯಲ್ಲಿ ಆರ್​ಸಿಬಿ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಬಾರಿಸಿ ತಂಡದ ಪಾಲಿಗೆ ಆಪದ್ಬಾಂಧವರಾದರು. ಇವರ ಈ ಏಕಾಂಗಿ ಹೋರಾಟದಿಂದ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಯಶಸ್ಸು ಕಂಡಿತು. 46 ಎಸೆತ ಎದುರಿಸಿದ ಅವರು ಬರೋಬ್ಬರಿ ನಾಲ್ಕು ಸಿಕ್ಸರ್​ ಮತ್ತು 9 ಬೌಂಡರಿ ನೆರವಿನಿಂದ ಅಜೇಯ 84 ರನ್​ ಬಾರಿಸಿದರು. ಸ್ಟಾರ್​ ಬ್ಯಾಟರ್​ಗಳನ್ನು ಆರಂಭದಲ್ಲೇ ಪೆವಿಲಿಯನ್​ಗೆ ಕಳುಹಿಸಿದ್ದ ಆರ್​ಸಿಬಿಗೆ ತಿಲಕ್​ ವರ್ಮಾ ವಿಕೆಟ್​ ಕೀಳಲು ಸಾಧ್ಯವಾಗಲ್ಲೇ ಇಲ್ಲ.

ಸಲೀಂ ದುರಾನಿಗೆ ಗೌರವ

ಭಾರತದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಅವರ ನಿಧನದ ಹಿನ್ನೆಲೆ ಆರ್​ಸಿಬಿ ಮತ್ತು ಮುಂಬೈ ಆಟಗಾರರು ದಿವಂಗತ ಭಾರತೀಯ ಕ್ರಿಕೆಟಿಗನಿಗೆ ಗೌರವ ಸೂಚಕವಾಗಿ ತೋಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ಕಣಕ್ಕಿಳಿದರು.

ಸಂಕ್ಷಿಪ್ತ ಸ್ಕೋರ್​: ಮುಂಬೈ ಇಂಡಿಯನ್ಸ್​ 20 ಓವರ್​ಗಳಲ್ಲಿ 7 ವಿಕೆಟ್ ​ನಷ್ಟಕ್ಕೆ 171 (ತಿಲಕ್​ ವರ್ಮ ಅಜೇಯ 84, ನಿಹಾಲ್​ ವಧೀರಾ 21, ಕರಣ್​ ಶರ್ಮ 32ಕ್ಕೆ 2).

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

IPL 2024: ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಮುಂಬೈ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್​ಗೆ 145 ರನ್ ಬಾರಿಸಿ ಗೆಲುವು ಸಾಧಿಸಿತು.

VISTARANEWS.COM


on

IPL 2024
Koo

ಲಖನೌ: ಮಾರ್ಕ್​ ಸ್ಟೊಯ್ನಿಸ್ (62) ಬಾರಿಸಿದ ಅರ್ಧ ಶತಕದ ನೆರವು ಪಡೆದ ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್​ನ (IPL 2024) 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಲಕ್ನೊ ತಂಡಕ್ಕೆ 10 ಪಂದ್ಯಗಳಲ್ಲಿ 6ನೇ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೇರ್ಗಡೆ ಪಡೆದುಕೊಂಡಿದೆ. ಇದೇ ವೇಳೆ ಮುಂಬೈ ತಂಡ ಹ್ಯಾಟ್ರಿಕ್​ ಸೋಲಿಗೆ ಒಳಗಾಗಿದ್ದು 9ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಮುಂಬೈ ತಂಡ 10ರಲ್ಲಿ ಏಳು ಪಂದ್ಯಗಳನ್ನು ಸೋತು ಕೇವಲ 6 ಅಂಕಗಳನ್ನು ಹೊಂದಿದೆ.

ಇಲ್ಲಿನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆ. ಎಲ್​ ರಾಹುಲ್ ಬಳಗ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಮುಂಬೈ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್​ಗೆ 145 ರನ್ ಬಾರಿಸಿ ಗೆಲುವು ಸಾಧಿಸಿತು.

ಮೊದಲು ಬ್ಯಾಟ್​ ಮಾಡಿದ ಮುಂಬೈ ತಂಡ ಆರಂಭದಿಂದಲೇ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಇಶಾನ್ ಕಿಶನ್​ 32 ರನ್ ಬಾರಿಸಿದೂ ಅವರ ಪಾಲುದಾರ ರೋಹಿತ್ ಶರ್ಮಾ 4 ರನ್​ಗಳಿಗೆ ಔಟಾದರು. ಸೂರ್ಯಕುಮಾರ್ ಯಾದವ್​ ಕೂಡ 10 ರನ್​ಗೆ ಸೀಮಿತಗೊಂಡರು. ತಿಲಕ್​ ವರ್ಮಾ 7 ರನ್ ಬಾರಿಸಿ ರನ್​ಔಟ್​ಗೆ ಬಲಿಯಾದರು. ಆಲ್​ರೌಂಡರ್​ ಎಂದೇ ಖ್ಯಾತಿ ಪಡೆದ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ನೇಹಲ್ ವದೇರಾ (46) ರನ್ ಬಾರಿಸಿದರೆ ಟಿಮ್​ ಡೇವಿಡ್​ ಅಮೂಲ್ಯ 35 ರನ್ ಕೊಡುಗೆ ಕೊಟ್ಟರು. ಹೀಗಾಗಿ ಸ್ಪರ್ಧಾತ್ಮಕ ಮೊತ್ತ ಬಾರಿಸಿತು ಮುಂಬಯಿ.

ಇದನ್ನೂ ಓದಿ: T20 World Cup : ಈ ದಿನದಂದು ವಿಶ್ವ ಕಪ್​ಗಾಗಿ ಯುಎಸ್​ಎಗೆ ಹೊರಡಲಿದೆ ಟೀಮ್ ಇಂಡಿಯಾ

ಲಕ್ನೊ ಗೂ ಆಘಾತ

ಗುರಿ ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡವೂ ಆರಂಭಿಕ ಆಘಾತ ಎದುರಿಸಿತು. ಪದಾರ್ಪಣೆ ಬ್ಯಾಟರ್ ಅರ್ಶಿನ್ ಕುಲಕರ್ಣಿ ಶೂನ್ಯಕ್ಕೆ ಔಟಾದರು. ಆದರೆ ರಾಹುಲ್​ 28 ರನ್ ಬಾರಿಸಿ ತಂಡಕ್ಕೆ ಚೈತನ್ಯ ತಂದರು. ಬಳಿಕ ಆಡಲು ಇಳಿದ ಸ್ಟೊಯ್ನಿಸ್​ ಅಗತ್ಯ ಅರ್ಧ ಶತಕ ಗಳಿಸಿದರು. ದೀಪಕ್​ ಹೂಡ 18 ರನ್ ಬಾರಿಸಿದರೆ ನಿಕೋಲಸ್ ಪೂರನ್​ 14 ರನ್ ಕೊಡುಗೆ ಕೊಟ್ಟರು. ಟರ್ನರ್​ ಹಾಗೂ ಅಯುಷ್ ಬದೋನಿ ಅನುಕ್ರಮವಾಗಿ 5 ಹಾಗೂ 6 ರನ್ ಬಾರಿಸಿದರು.

Continue Reading

ಪ್ರಮುಖ ಸುದ್ದಿ

T20 World Cup : ಈ ದಿನದಂದು ವಿಶ್ವ ಕಪ್​ಗಾಗಿ ಯುಎಸ್​ಎಗೆ ಹೊರಡಲಿದೆ ಟೀಮ್ ಇಂಡಿಯಾ

T20 World Cup: ವಿಶ್ವ ಕಪ್​ಗಾಗಿ 15 ಸದಸ್ಯರ ತಂಡವನ್ನು ಮಂಗಳವಾರ (ಏಪ್ರಿಲ್ 30) ಘೋಷಿಸಲಾಗಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ ಅವರ ಆರಂಭಿಕ ಜತೆಗಾರರಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿ

VISTARANEWS.COM


on

T20 World Cup
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ನ ಲೀಗ್ ಹಂತ ಮುಗಿದ ಒಂದು ದಿನದ ನಂತರ, ಐಸಿಸಿ ಟಿ 20 ವಿಶ್ವಕಪ್ 2024 (T20 World Cup) ಗಾಗಿ ಟೀಮ್ ಇಂಡಿಯಾ ಅಮೆರಿಕಕ್ಕೆ ತೆರಳಲಿದೆ. ಮೇ 21ರಂದು ಟೀಮ್ ಇಂಡಿಯಾ ಆಟಗಾರರು ಅಮೆರಿಕ್ಕೆಕ ಹೋಗುವ ವಿಮಾನ ಏರಲಿದ್ದಾರೆ ಎಂಬುದಾಗಿ ವರದಿಯಾಗಿದೆ.

ವಿಶ್ವ ಕಪ್​ಗಾಗಿ 15 ಸದಸ್ಯರ ತಂಡವನ್ನು ಮಂಗಳವಾರ (ಏಪ್ರಿಲ್ 30) ಘೋಷಿಸಲಾಗಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ ಅವರ ಆರಂಭಿಕ ಜತೆಗಾರರಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿದೆ., ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಶಿವಂ ದುಬೆ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಕೆಟ್ ಕೀಪರ್ ಹುದ್ದೆಗೆ ಆಯ್ಕೆದಾರರು ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿದರೆ, ಪಾಂಡ್ಯ ಅವರೊಂದಿಗೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಆಲ್​​ರೌಂಡರ್​ಗಳಾಗಿರುತ್ತಾರೆ. ಯಜುವೇಂದ್ರ ಚಾಹಲ್ ಮತ್ತು ಕುಲ್ದೀಪ್ ಯಾದವ್ ತಂಡದಲ್ಲಿ ಮುಂಚೂಣಿ ಸ್ಪಿನ್ನರ್​ಗಳಾಗಿದ್ದಾರೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಶ್​ದೀಪ್​ ಸಿಂಗ್ ವೇಗದ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.

ಮೇ 21ರಂದು ಅಮೆರಿಕಕ್ಕೆ ಭಾರತೀಯ ಆಟಗಾರರು

ಕ್ರಿಕ್​ಬಜ್​​ ವರದಿಯ ಪ್ರಕಾರ, ಮೊದಲ ಬ್ಯಾಚ್ ಭಾರತೀಯ ಆಟಗಾರರು ಮೇ 21 ರಂದು ಯುಎಸ್​​ಗೆ ತೆರಳಲಿದೆ. ಐಪಿಎಲ್ 2024 ರ ಲೀಗ್ ಹಂತವು ಮೇ 19 ರಂದು ಕೊನೆಗೊಳ್ಳಲಿದೆ. ಪ್ಲೇಆಫ್​ಗೆ ಅರ್ಹತೆ ಪಡೆಯುವ ತಂಡಗಳ ಭಾಗವಾಗದ ಎಲ್ಲಾ ಆಟಗಾರರು ಮೇ 21 ರಂದು ಯುಎಸ್​ಗೆ ಪ್ರಯಾಣಿಸಲಿದ್ದಾರೆ. ಆಟಗಾರರ ಜೊತೆಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿ ಕೂಡ ಅಮೆರಿಕಕ್ಕೆ ತೆರಳಲಿದ್ದಾರೆ.

ಮೇ 26ರಂದು ಐಪಿಎಲ್ ಫೈನಲ್ ಪಂದ್ಯ ಮುಗಿದ ಬಳಿಕ ಎರಡನೇ ಬ್ಯಾಚ್ ಆಟಗಾರರು ಅಮೆರಿಕಕ್ಕೆ ತೆರಳಲಿದ್ದಾರೆ. ಭಾರತ ತಂಡವು ನ್ಯೂಯಾರ್ಕ್​​ಗೆ ಹಾರಲಿದ್ದು, ಅಲ್ಲಿ ಅವರು ತಮ್ಮ ನಾಲ್ಕು ಲೀಗ್ ಪಂದ್ಯಗಳಲ್ಲಿ ಮೂರನ್ನು ಆಡಲಿದೆ. ಟೂರ್ನಿಯು ಜೂನ್ 1ರಂದು ಆರಂಭವಾಗಲಿದ್ದು, ಭಾರತ ತಂಡ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ: IPL 2024 : ಅತಿ ವೇಗದ ಬೌಲರ್​ ಮಾಯಾಂಕ್​ ಯಾದವ್​ಗೆ ಮತ್ತೆ ಗಾಯ?

‘ಎ’ ಗುಂಪಿನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ, ಐರ್ಲೆಂಡ್, ಸಹ ಆತಿಥೇಯ ಅಮೆರಿಕ ಮತ್ತು ಕೆನಡಾ ತಂಡಗಳಿವೆ. ಜೂನ್ 5ರಂದು ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿರುವ ಭಾರತ, ಜೂನ್ 9ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಭಾರತ ತನ್ನ ಮೂರನೇ ಲೀಗ್ ಪಂದ್ಯವನ್ನು ಜೂನ್ 12 ರಂದು ನ್ಯೂಯಾರ್ಕ್ನಲ್ಲಿ ಯುಎಸ್ಎ ವಿರುದ್ಧ ಆಡಲಿದ್ದು, ಜೂನ್ 15 ರಂದು ಲಾಡರ್​ಹಿಲ್​ನಲ್ಲಿ ಕೆನಡಾವನ್ನು ಎದುರಿಸಲಿದೆ.

2007ರಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದ ನಂತರ ಟೀಮ್ ಇಂಡಿಯಾ ಟಿ 20 ವಿಶ್ವಕಪ್ ಗೆದ್ದಿಲ್ಲ ಮತ್ತು ಈ ವರ್ಷ ಎಲ್ಲಾ ಹಾದಿಯಲ್ಲಿ ಸಾಗಲು ಹತಾಶವಾಗಿದೆ. ಕಳೆದ ಆವೃತ್ತಿಯಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲನುಭವಿಸಿ ಸೆಮಿಫೈನಲ್ ಹಂತದಲ್ಲೇ ಸೋತಿತ್ತು.

Continue Reading

ಪ್ರಮುಖ ಸುದ್ದಿ

IPL 2024 : ಅತಿ ವೇಗದ ಬೌಲರ್​ ಮಾಯಾಂಕ್​ ಯಾದವ್​ಗೆ ಮತ್ತೆ ಗಾಯ?

IPL 2024 : ಮಯಾಂಕ್ ಓವರ್ ಮಧ್ಯದಲ್ಲಿ ಮೈದಾನದಿಂದ ಹೊರಗುಳಿಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಏಪ್ರಿಲ್​​ನಲ್ಲಿ ಗುಜರಾತ್​ ಜೈಂಟ್ಸ್​​ ವಿರುದ್ಧದ ಪಂದ್ಯದ ವೇಳೆ ವೇಗದ ಬೌಲರ್ ತನ್ನ ಮೊದಲ ಓವರ್ ನಂತರ ಮೈದಾನದಿಂದ ಹೊರಕ್ಕೆ ಹೋಗಿದ್ದರು. ಅಲ್ಲಿಂದ ನಂತರ , ಅವರು 5 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

VISTARANEWS.COM


on

IPL 2024
Koo

ಬೆಂಗಳೂರು: ಲಕ್ನೊ ಸೂಪರ್ ಜೈಂಟ್ಸ್​ ತಂಡದ ವೇಗದ ಬೌಲರ್​ ಮಯಾಂಕ್ ಯಾದವ್​​ (Mayank Yadav) ಮತ್ತೆ ಗಾಯಗೊಂಡರೇ? ಏಪ್ರಿಲ್ 30 ರ ಮಂಗಳವಾರ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಪಂದ್ಯದ ವೇಳೆ ಮತ್ತೆ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಗಾಯದ ಸಮಸ್ಯೆ ಅನುಭವಿಸಿದ್ದ ಅವರು ಈ ಪಂದ್ಯಕ್ಕೆ ಮರಳಿದ್ದರು. ಅವರು 10 ಡಾಟ್ ಬಾಲ್ ಗಳನ್ನು ಎಸೆದಿದ್ದರೂ ತಮ್ಮ ಮೊದಲ 3 ಓವರ್ ಗಳಲ್ಲಿ 31 ರನ್ ಗಳನ್ನು ಸೋರಿಕೆ ಮಾಡಿದ್ದರು.

18ನೇ ಓವರ್​ನ ಮೊದಲ ಎಸೆತದಲ್ಲಿ ಮಯಾಂಕ್ ಅನುಭವಿ ಮೊಹಮ್ಮದ್ ನಬಿ ಅವರನ್ನು ಔಟ್ ಮಾಡಿದರು. ಆದಾಗ್ಯೂ, ಅವರು ಒಂದು ರೀತಿಯ ಅನನುಕೂಲತೆ ಅನುಭವಿಸಿದರು. ಅಲ್ಲದೆ, ಸ್ಟೇಡಿಯಮ್ ಬಿಟ್ಟು ಹೊರಗೆ ನಡೆದಿದ್ದಾರೆ. ಅವರು ಮೆಟ್ಟಿಲುಗಳ ಮೇಲೆ ಓಡುತ್ತಿರುವ ವಿಡಿಯೊ ಕಂಡು ಬಂದಿದೆ. ಆದರೆ, ಅದು ಯಾಕೆ ಎಂದು ಗೊತ್ತಾಗಿಲ್ಲ. ಆದರೆ, ಗಾಯಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಎನ್ನಲಾಗಿದೆ.

ಮಯಾಂಕ್ ಓವರ್ ಮಧ್ಯದಲ್ಲಿ ಮೈದಾನದಿಂದ ಹೊರಗುಳಿಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಏಪ್ರಿಲ್​​ನಲ್ಲಿ ಗುಜರಾತ್​ ಜೈಂಟ್ಸ್​​ ವಿರುದ್ಧದ ಪಂದ್ಯದ ವೇಳೆ ವೇಗದ ಬೌಲರ್ ತನ್ನ ಮೊದಲ ಓವರ್ ನಂತರ ಮೈದಾನದಿಂದ ಹೊರಕ್ಕೆ ಹೋಗಿದ್ದರು. ಅಲ್ಲಿಂದ ನಂತರ , ಅವರು 5 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಎಲ್ಎಸ್ಜಿ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಎಲ್ಲಾ ಫಿಟ್ನೆಸ್ಪ ರೀಕ್ಷೆಗಳಲ್ಲಿ ತೇರ್ಗಡೆಯಾದ ನಂತರ ಮಯಾಂಕ್ ಆಡುತ್ತಿದ್ದಾರೆ ಎಂದು ಹೇಳಿದ್ದರು. ತಂಡದ ಸಹಾಯಕ ಕೋಚ್ ಎಸ್ ಶ್ರೀರಾಮ್ ಕೂಡ ವೇಗದ ಬೌಲರ್ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದರು. ಅವರು ನೆಟ್ಸ್​ನಲ್ಲಿ ಪೂರ್ಣ ತೀವ್ರತೆಯಿಂದ ಬೌಲಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: IPL 2024 : ಗುಜರಾತ್​ ಟೀಮ್​ನಲ್ಲಿ ಬುಮ್ರಾ 2.0; ಕನ್ನಡಿಗನ ಬೌಲಿಂಗ್​ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​

ಮುಂಬೈ ಇಂಡಿಯನ್ಸ್ ವಿರುದ್ಧ ಮಯಾಂಕ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು,.ಆದರೆ ಪಂಜಾಬ್​ ಮತ್ತು ಆರ್​ಸಿಬಿ ವಿರುದ್ಧದ ಎಲ್ಎಸ್​ಜಿ ಪರ ಹಿಂದಿನ ಮುಖಾಮುಖಿಗಳಲ್ಲಿ ಅವರು ಬೌಲಿಂಗ್ ಮಾಡಿದಷ್ಟು ವೇಗದಲ್ಲಿ ಬೌಲಿಂಗ್ ಮಾಡಲಿಲ್ಲ.

ಮಯಾಂಕ್ ಯಾದವ್: ಸೂಪರ್ ಜೈಂಟ್ಸ್​ಗೆ ನಿರ್ಣಾಯಕ

ಐಪಿಎಲ್ 2024 ರಲ್ಲಿ ಗಂಟೆಗೆ 156.7 ಕಿ.ಮೀ ವೇಗದಲ್ಲಿ ವೇಗದ ಚೆಂಡನ್ನು ಎಸೆಯುವ ಮೂಲಕ ಯುವ ಆಟಗಾರ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು. ಅವರು ಬ್ಯಾಕ್ ಟು ಬ್ಯಾಕ್ 3 ವಿಕೆಟ್ ಸಾಧನೆಗಳನ್ನು ಮಾಡಿದ್ದರು . ಅವರ ಆರಾಧ್ಯ ದೈವ ಡೇಲ್ ಸ್ಟೇನ್ ಸೇರಿದಂತೆ ಕ್ರಿಕೆಟ್ ಕ್ಷೇತ್ರದಿಂದ ಗೌರವ ಪಡೆದುಕೊಂಡಿದ್ದರು.

ಪ್ಲೇಆಫ್ಗೆ ಅರ್ಹತೆ ಪಡೆಯಲು ಎಲ್ಎಸ್​ಜಿ ಇನ್ನೂ ಸ್ವಲ್ಪ ದೂರದಲ್ಲಿದೆ. ಮೊಹ್ಸಿನ್ ಖಾನ್ ಮತ್ತು ಯಶ್ ಠಾಕೂರ್ ಅವರಂತಹ ಭಾರತೀಯ ವೇಗಿಗಳನ್ನು ಹೊಂದಿದ್ದರೂ, ಮಯಾಂಕ್ ಫಿಟ್ ಆಗಿ ಉಳಿಯುವುದು ಆ ತಂಡಕ್ಕೆ ಸಾಕಷ್ಟು ಪ್ರಾಮುಖ್ಯವಾಗಿದೆ.

Continue Reading

ಪ್ರಮುಖ ಸುದ್ದಿ

IPL 2024 : ಗುಜರಾತ್​ ಟೀಮ್​ನಲ್ಲಿ ಬುಮ್ರಾ 2.0; ಕನ್ನಡಿಗನ ಬೌಲಿಂಗ್​ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​

ಮಹೇಶ್ ಕುಮಾರ್ ಬೆಂಗಳೂರು ಮೂಲದ ಕ್ರಿಕೆಟಿಗ. ಅವರು ಬಲಗೈ ವೇಗದ ಬೌಲರ್. ಬೆಂಗಳೂರಿನಿಂದ 45 ಕಿಲೋಮೀಟರ್ ದೂರದಲ್ಲಿರುವ ದೊಡ್ಡಬಳ್ಳಾಪುರದಲ್ಲಿ ಜನಿಸಿದ ಮಹೇಶ್ 2 ಐಪಿಎಲ್ ತಂಡಗಳಿಗೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ಅವರು ಭಾರತೀಯ ಕ್ರಿಕೆಟ್ ಸರ್ಕೀಟ್​ನಲ್ಲಿ ಹೆಚ್ಚು ಪರಿಚಿತ ಆಟಗಾರ ಅಲ್ಲದಿದ್ದರೂ ಎಕ್ಸ್​ನಲ್ಲಿ ವೈರಲ್ ಆಗಿರುವ ವೀಡಿಯೊ ಅವರ ಬಗ್ಗೆ ಮಾತನಾಡುವಂತೆ ಮಾಡಿದೆ.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್​ 2024ನೇ (IPL 2024) ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನೆಟ್​​ಬೌಲರ್​ ಆಗಿರುವ ಕರ್ನಾಟಕ ಮುಲಕ ಮಹೇಶ್ ಕುಮಾರ್ ಅವರ ಬೌಲಿಂಗ್ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಮಹೇಶ್ ಕುಮಾರ್ ಅವರು ಜಸ್ಪ್ರೀತ್ ಬುಮ್ರಾ ಅವರ ಅಸಾಂಪ್ರದಾಯಿಕ ಬೌಲಿಂಗ್ ಕ್ರಮವನ್ನು ಅನುಸರಿಸುತ್ತಿರುವುದು ಕಾಣಬಹುದು. ಹೀಗಾಗಿ ಬುಮ್ರಾ 2.0 ಎಂದು ಕರೆಯಲಾಗಿದೆ.

ಮಹೇಶ್ ಕುಮಾರ್ ಬೆಂಗಳೂರು ಮೂಲದ ಕ್ರಿಕೆಟಿಗ. ಅವರು ಬಲಗೈ ವೇಗದ ಬೌಲರ್. ಬೆಂಗಳೂರಿನಿಂದ 45 ಕಿಲೋಮೀಟರ್ ದೂರದಲ್ಲಿರುವ ದೊಡ್ಡಬಳ್ಳಾಪುರದಲ್ಲಿ ಜನಿಸಿದ ಮಹೇಶ್ 2 ಐಪಿಎಲ್ ತಂಡಗಳಿಗೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ಅವರು ಭಾರತೀಯ ಕ್ರಿಕೆಟ್ ಸರ್ಕೀಟ್​ನಲ್ಲಿ ಹೆಚ್ಚು ಪರಿಚಿತ ಆಟಗಾರ ಅಲ್ಲದಿದ್ದರೂ ಎಕ್ಸ್​ನಲ್ಲಿ ವೈರಲ್ ಆಗಿರುವ ವೀಡಿಯೊ ಅವರ ಬಗ್ಗೆ ಮಾತನಾಡುವಂತೆ ಮಾಡಿದೆ.

2017ರಲ್ಲಿ ಇಂಗ್ಲೆಂಡ್​​ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಾಗ ಮಹೇಶ್ ಕುಮಾರ್ ಮೊದಲ ಬಾರಿಗೆ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಿದ್ದರು. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ವಿರುದ್ಧ ಮಹೇಶ್ ಬೌಲಿಂಗ್ ಮಾಡಿದ್ದರು. ಈ ವೇಳೆ ಭಾರತದ ನೆಟ್ ಸೆಷನ್​ನಲ್ಲಿ ಅವರು ತಮ್ಮ ಆರಾಧ್ಯ ದೈವ ಜಸ್ಪ್ರೀತ್ ಬುಮ್ರಾ ಅವರನ್ನು ಭೇಟಿ ಮಾಡುವ ಅವಕಾಶ ಕೂಡ ಪಡೆದಿದ್ದರು.

ಇದನ್ನೂ ಓದಿ: IPL 2024 : ಬುದ್ಧಿ ಹೇಳಿದರೂ ಕೇಳದ ಕೆಕೆಆರ್​ ಬೌಲರ್​ ರಾಣಾಗೆ ಮತ್ತೆ ದಂಡ ; ಒಂದು ಪಂದ್ಯದಿಂದ ಸಸ್ಪೆಂಡ್​​

ಮಹೇಶ್ ಕುಮಾರ್ ನೆಟ್ ಬೌಲರ್ ಆಗಿ ಸಾಕಷ್ಟು ಅನುಭವ ಗಳಿಸಿದ್ದಾರೆ. 2018 ರ ಋತುವಿನಲ್ಲಿ ಐಪಿಎಲ್ ನೆಟ್​ ಬೌಲರ್​​ ಆಗಿ ಮೊದಲ ಬಾರಿ ಕಾಣಿಸಿಕೊಂಡಿದ್ದರು. ಅವರ ತವರು ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಕೆಲಸ ಮಾಡಿದ್ದರು.

ಅಂದು ಆಶಿಶ್ ನೆಹ್ರಾ ಅವರು ಮಹೇಶ್ ಕುಮಾರ್ ಅವರಿಗೆ ಒಂದು ಜೋಡಿ ಶೂಗಳನ್ನು ಉಡುಗೊರೆಯಾಗಿ ನೀಡಿದ್ದರು. ಕೊಹ್ಲಿ ಆಟೋಗ್ರಾಫ್ ನೀಡಿದ್ದರು. ಡಿವಿಲಿಯರ್ಸ್ ಕೂಡ ಅಭಿನಂದಿಸಿದರು. 2018 ರಲ್ಲಿ ಫ್ರಾಂಚೈಸಿಯ ಮುಂದಿನ ಎಲ್ಲಾ ತವರು ಪಂದ್ಯಗಳಲ್ಲಿ ಅವರನ್ನು ಆರ್​​ಸಿಬಿ ಅವರನ್ನು ಕರೆಸಿಕೊಂಡಿತ್ತು.

ಎಂಜಿನಿಯರಿಂಗ್ ಪದವಿಧರ

ಟೀಮ್ ಇಂಡಿಯಾ ಮತ್ತು ಆರ್​ಸಿಬಿಯ ನೆಟ್ಸ್​ನಲ್ಲಿ ಕಾಣಿಸಿಕೊಳ್ಳುವ ಮೊದಲೇ, ಮಹೇಶ್ ಕುಮಾರ್ ಕ್ರಿಕೆಟ್ ಮೇಲಿನ ಪ್ರೀತಿ ಅರಿತುಕೊಳ್ಳುವ ಮೊದಲು ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು. 27ರ ಹರೆಯದ ಮಹೇಶ್​​ ದೇಶೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ಇನ್ನೂ ಪಾದಾರ್ಪಣೆ ಮಾಡಿಲ್ಲ.

2022 ರ ಋತುವಿನಲ್ಲಿ, ಮಹೇಶ್ ಗುಜರಾತ್ ಟೈಟಾನ್ಸ್ ಪರ ನೆಟ್ ಬೌಲರ್ ಆಗಿ ಹೋಗಿದ್ದರು. ಅವರು ವೃತ್ತಿಪರ ಕ್ರಿಕೆಟಿಗರಾಗಿ ಹೊರಹೊಮ್ಮುವುದನ್ನು ನೋಡುವುದು ಅವರ ತಾಯಿಯ ಕನಸು.

Continue Reading
Advertisement
Kaladarpana-Art Reflects
ಬೆಂಗಳೂರು4 hours ago

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Covishield Vaccine
ಪ್ರಮುಖ ಸುದ್ದಿ4 hours ago

ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Narendra modi
ಪ್ರಮುಖ ಸುದ್ದಿ4 hours ago

Narendra Modi : ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ಇಲ್ಲ ಎಂದ ಮೋದಿ

DK Shivakumar
ಪ್ರಮುಖ ಸುದ್ದಿ4 hours ago

DK Shivakumar: ಅಶ್ಲೀಲ ಚಿತ್ರಕ್ಕೆ ಡಿಕೆಶಿ ಫೋಟೊ ಮಾರ್ಫಿಂಗ್ ಆರೋಪ; ಮೂವರ ವಿರುದ್ಧ ಎಫ್‌ಐಆರ್‌

IPL 2024
Latest4 hours ago

IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

Union Minister Pralhad Joshi election campaign in Shiggavi
ಧಾರವಾಡ5 hours ago

Lok Sabha Election 2024: ಈ ಲೋಕಸಭಾ ಚುನಾವಣೆ ಭಾರತದ ಸುವರ್ಣ ಯುಗಕ್ಕೆ ನಾಂದಿ: ಪ್ರಲ್ಹಾದ್‌ ಜೋಶಿ

Lok Sabha Election 2024 Bike rally for voting awareness in Hosapete
ವಿಜಯನಗರ5 hours ago

Lok Sabha Election 2024: ಹೊಸಪೇಟೆಯಲ್ಲಿ ಮತದಾನ ಜಾಗೃತಿಗಾಗಿ ಬೈಕ್ ರ‍್ಯಾಲಿ

BJP National President JP Nadda Election Campaign for Haveri Gadag Lok Sabha Constituency BJP Candidate Basavaraj Bommai
ಕರ್ನಾಟಕ5 hours ago

Lok Sabha Election 2024: ಮೋದಿಯವರ ವಿಕಸಿತ ಭಾರತ ಸಾಕಾರಗೊಳಿಸಲು ಬೊಮ್ಮಾಯಿಯವರನ್ನು ಗೆಲ್ಲಿಸಿ: ಜೆಪಿ ನಡ್ಡಾ

2nd PUC Paper Leak
ಕರ್ನಾಟಕ5 hours ago

2nd PUC Paper Leak: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ವಜಾಗೊಂಡಿದ್ದ ಎಸ್‌ಡಿಎ ಮರು ನೇಮಕ!

Lok Sabha Election
Lok Sabha Election 20245 hours ago

Lok Sabha Election: ಕಳೆದ ಬಾರಿಗೆ ಹೋಲಿಸಿದರೆ ಮೊದಲೆರಡು ಹಂತಗಳ ಮತದಾನದ ಪ್ರಮಾಣದಲ್ಲಿ ಕುಸಿತ; ಇಲ್ಲಿದೆ ಅಂಕಿ-ಅಂಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ23 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌