RIP Pele | ಕಾಲ್ಚೆಂಡು ಕ್ರೀಡಾಂಗಣದ ಮಹಾರಾಜ ಪೀಲೆಯ ಬದುಕಿನ ಕೊನೇ ಕ್ಷಣಗಳು ಹೀಗಿದ್ದವು - Vistara News

ಕ್ರೀಡೆ

RIP Pele | ಕಾಲ್ಚೆಂಡು ಕ್ರೀಡಾಂಗಣದ ಮಹಾರಾಜ ಪೀಲೆಯ ಬದುಕಿನ ಕೊನೇ ಕ್ಷಣಗಳು ಹೀಗಿದ್ದವು

ಫುಟ್ಬಾಲ್ ಸಾಧನೆಯ ಮೂಲಕವೇ ಎಲ್ಲರ ಮನೆ ಮಾತಾಗಿದ್ದ ಬ್ರೆಜಿಲ್​ನ ದಿಗ್ಗಜ ಪೀಲೆಯ ಬದುಕಿನ ಕೊನೇ ಕ್ಷಣಗಳು (RIP Pele) ಹೀಗಿದ್ದವು.

VISTARANEWS.COM


on

pele
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕತಾರ್​ನಲ್ಲಿ ಫಿಫಾ ವಿಶ್ವ ಕಪ್​ ಕಳೆಗಟ್ಟುತ್ತಿದ್ದಾಗ ಫುಟ್ಬಾಲ್​ ಅಭಿಮಾನಿಗಳ ಮನದ ಮೂಲೆಯಲ್ಲಿ ಆತಂಕ ಸುಳಿದಾಡುತ್ತಿತ್ತು. ಸೂಕರ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪೀಲೆ (ಎಡ್ಸೆನ್​ ಅರೆಂಟೀಸ್​ ಡು ನಾಸಿಮೆಂಟೊ) ಕ್ಯಾನ್ಸರ್​ ಉಲ್ಬಣಗೊಂಡು ಅದಾಗಲೇ ಆಸ್ಪತ್ರೆ ಸೇರಿದ್ದರು. ಅವರ ಪುತ್ರಿ ಕೆಲಿ ನಾಸಿಮೆಂಟೊ ಈ ವಾರ್ತೆಯನ್ನು ಜಗತ್ತಿಗೆ ತಿಳಿಸಿದ್ದರು. ಅಲ್ಲದೆ, ಅಪ್ಪರನ ಆರೋಗ್ಯ ಸ್ಥಿತಿಯ ಕ್ಷಣಕ್ಷಣದ ಮಾಹಿತಿಯೂ ನೀಡುತ್ತಿದ್ದರು. ಎಲ್ಲರಿಗೂ ಸಮಾಧಾನ ಹೇಳುತ್ತಿದ್ದರು. ಕರುಳಿನ ಕ್ಯಾನ್ಸರ್​ ಬಂದಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ ಮೂತ್ರಪಿಂಡದ ಸಮಸ್ಯೆ ತಲೆದೋರಿತ್ತು. ಜತೆಗೆ ಕ್ಯಾನ್ಸರ್​ ಗಂಟಲಿಗೂ ಹರಡಿತ್ತು. ಹುಟ್ಟು ಹೋರಾಟಗಾರನಾದ ಪೀಲೆ(RIP Pele) ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ವಿಶ್ವ ಕಪ್​ ಫುಟ್ಬಾಲ್​ಗೆ ಶುಭ ಹಾರಿಸಿದ್ದರು. ವಿಶೇಷವಾಗಿ ತಮ್ಮ ತಂಡಕ್ಕೆ.

ಆಸ್ಪತ್ರೆಯ ಬೆಡ್​ನಲ್ಲಿಯೇ ಮಲಗಿ ವಿಶ್ವ ಕಪ್​ ಸಮಾಚಾರಗಳನ್ನು ಪುತ್ರಿಯ ಮೂಲಕ ತಿಳಿದುಕೊಳ್ಳುತ್ತಿದ್ದರು ಫುಟ್ಬಾಲ್​ ದೇವರು. ಬೇಗನೆ ಸುಧಾರಿಸಿಕೊಳ್ಳುವುದಾಗಿ ಆಶಾ ಭಾವನೆಯನ್ನೂ ವ್ಯಕ್ತಪಡಿಸಿದ್ದರು. ಫುಟ್ಬಾಲ್​ ಜಗತ್ತು ಕೂಡ ಅವರಿಗಾಗಿ ಪ್ರಾರ್ಥಿಸಿತ್ತು. ದುಬೈನ್​ ಬುರ್ಜ್​ ಖಲೀಫಾದಲ್ಲಿ ಅವರ ಹೆಸರನ್ನು ಲೇಸರ್​ ಲೈಟಿಂಗ್​ ಮೂಲಕ ಸ್ಮರಿಸಲಾಗಿತ್ತು. ಬ್ರೆಜಿಲ್​ ತಂಡದ ಸದಸ್ಯರೂ ದಿಗ್ಗಜನ ಚಿತ್ರ ಹಿಡಿದು ಗುಣಮುಖನಾಗಿ ಬಾ ಎಂದು ಹಾರೈಸಿದ್ದರು. ಇಷ್ಟೆಲ್ಲ ಗೌರವ ಸಂಪಾದಿಸಿದ ಪೀಲೆ ಗುರುವಾರ ರಾತ್ರಿ ಹಲವು ಸಾಧನೆಗಳನ್ನು ಕ್ರೀಡಾ ಜಗತ್ತಿಗೆ ಬಿಟ್ಟುಕೊಟ್ಟು ಇಹಲೋಕ ತ್ಯಜಿಸಿದರು. ಅಲ್ಲದೆ, ಆಸ್ಪತ್ರೆಯ ಹಾಸಿಗೆಯಲ್ಲೇ ಕೊನೇ ಕ್ರಿಸ್ಮಸ್​ ಆಚರಿಸಿದ್ದರು. ಕೆಲವು ದಿನಗಳ ಹಿಂದೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬ ಸುದ್ದಿ ಬಂದಿತ್ತು. ಅವರನ್ನು ಜೀವನ ಕೊನೇ ಗಳಿಗೆಯನ್ನು ಎದುರು ನೋಡುತ್ತಿದ್ದಾರೆ ಎನ್ನಲಾಗಿತ್ತು. ಡಿಸೆಂಬರ್​ 29ರಂದು ಆ ಸುದ್ದಿ ಸತ್ಯವಾಯಿತು.

ಪೀಲೆಯ ನಿಧನದಿಂದ ಫುಟ್ಬಾಲ್​ನ ದೊಡ್ಡ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ವಿಶ್ವ ಫುಟ್ಬಾಲ್​ ರಾಯಭಾರಿಯಾಗಿದ್ದ ಅವರು ಜೀವನದ ಕೊನೇ ಕ್ಷಣದ ತನಕವೂ ಕಾಲ್ಚೆಂಡಾಟದ ಶ್ರೇಷ್ಠತೆಯನ್ನು ಸಾರಿ ಹೇಳಿದ್ದರು. ಕ್ರೀಡೆಯ ರಾಯಭಾರಿಯಾಗಿದ್ದರು. ಶಾಂತಿಯ ಧೂತನಾಗಿದ್ದರು. ಹಲವಾರು ಯುವ ಫುಟ್ಬಾಲ್​ ಪ್ರತಿಭೆಗಳಿಗೆ ದಾರಿ ದೀಪವಾಗಿದ್ದರು. ಸಾಧಿಸುವುದಾದರೆ ಪೀಲೆಯಂತೆ ಸಾಧನೆ ಮಾಡಬೇಕು ಎಂದು ಹೇಳುವಂತೆ ಜೀವಿಸಿದ್ದರು.

82 ವರ್ಷದ ಪೀಲೆಗೆ ಹಲವು ವರ್ಷಗಳ ಕಾಲ ಅನಾರೋಗ್ಯ ಕಾಡಿತ್ತು. ಮೊದಲಿಗೆ ಮೂತ್ರನಾಳದ ಸಮಸ್ಯೆ ಎದುರಿಸಿದ್ದ ಅವರು ಬಳಿಕ ಮೂತ್ರಪಿಂಡದ ವೈಫಲ್ಯದ ಕಾರಣಕ್ಕೆ ಡಯಾಲಿಸಿಸ್​ಗೆ ಒಳಪಟ್ಟಿದ್ದರು. ಏತನ್ಮಧ್ಯೆ ಅವರಿಗೆ ಕರುಳಿನ ಕ್ಯಾನ್ಸರ್​ ಕಾಣಸಿಕೊಂಡಿತ್ತು. ಶಸ್ತ್ರ ಚಿಕಿತ್ಸೆ ಮೂಲಕ ಅದನ್ನು ತೆಗೆದು ಹಾಕಲಾದರೂ, ಬಳಿಕ ಅದು ಗಂಟಲಿಗೆ ಹರಡಿತ್ತು. ಈ ವೇಳೆ ಮೂತ್ರಪಿಂಡದ ಸಮಸ್ಯೆಯೂ ಹೆಚ್ಚಾಗಿತ್ತು. ಅಂತೆಯೇ 2022ರ ನವೆಂಬರ್​ 29ರಂದು ಮತ್ತೆ ಆಸ್ಪತ್ರೆ ಸೇರಿದ್ದರು. ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸಿದ್ದ ಅವರು ಆ ಬಳಿಕ ತೀವ್ರ ಅಸೌಖ್ಯಕ್ಕೆ ಒಳಗಾದರು. ಚಿಕಿತ್ಸೆಗೆ ಸ್ಪಂದಿಸುವುದನ್ನು ನಿಲ್ಲಿಸಿದರು. ಅಂತೆಯೇ ಒಂದು ತಿಂಗಳ ಕಾಲ ಆಸ್ಪತ್ತೆಯಲ್ಲಿದ್ದು ನಿಧನ ಹೊಂದಿದರು.

ಜಿರೋದಿಂದ ಹೀರೊ ತನಕ

ಬಡ ಫುಟ್ಬಾಲ್​ ಆಟಗಾರನೊಬ್ಬನ ಪುತ್ರನಾಗಿ ಅಕ್ಟೋಬರ್​ 23ರಂದು ಜನಿಸಿದ್ದ ಪೀಲೆ ಕಡುಬಡತನದಲ್ಲೇ ಬಾಲ್ಯ ಕಳೆದಿದ್ದರು. ಡ್ಸೆನ್​ ಅರೆಂಟೀಸ್​ ಡು ನಾಸಿಮೆಂಟೊ ಎಂಬ ಹೆಸರಿನ ಅವರು ಶೂ ಪಾಲೀಶ್​ ಮಾಡಿಕೊಂಡು ಕುಟುಂಬದವರ ಆದಾಯದ ಮೂಲವಾಗಿದ್ದರು. ಆದರೆ, 11ನೇ ವರ್ಷವಿದ್ದಾಗ ಅವರು ಬ್ರೆಜಿಲ್ ಮಾಜಿ ಆಟಗಾರ ವಾಲ್ಡೆಮರ್​ ಡಿ ಬ್ರಿಟೊ ಅವರ ಕಣ್ಣಿಗೆ ಬಿದ್ದಿದ್ದರು. ಪೀಲೆಯ ಕಾಲ್ಚಳಕವನ್ನು ಗಮನಿಸಿದ ಬ್ರಿಟೊ ಅವರ ಮನೆಯವರನ್ನು ಒಪ್ಪಿಸಿ ಫುಟ್ಬಾಲ್​ ಕ್ಷೇತ್ರಕ್ಕೆ ಪರಿಚಯಿಸಿದ್ದರು. ಪೀಲೆ ಎಂಬ ಹೆಸರನ್ನೂ ಅವರು ನಾಮಕರಣ ಮಾಡಿದರು. ಬ್ರೆಜಿಲ್​ನ ಸ್ಯಾಂಟೋಸ್ ಕ್ಲಬ್​ಗೆ ಸೇರಿದ ಪೀಲೆ ಅಲ್ಲಿಂದ ತಿರುಗಿ ನೋಡಲೇ ಇಲ್ಲ. ಮೊದಲ ಪಂದ್ಯದಲ್ಲೇ ಗೋಲ್​ ಬಾರಿಸಿದ ಅವರು ಕೊನೇವರೆಗೂ ಗೋಲ್​ಗಳ ಸುರಿಮಳೆಗೈದಿದ್ದಾರೆ.

16 ವರ್ಷವಿದ್ದಾಗ ಅಂದರೆ 1957ರಲ್ಲಿ ಬ್ರೆಜಿಲ್​ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಅವರು ಅರ್ಜೆಂಟೀನಾ ವಿರುದ್ದ ಮೊದಲ ಪಂದ್ಯವಾಡಿದ್ದರು. ಅದರಲ್ಲೇ ಗೋಲ್​ ಬಾರಿಸಿ ಜಗತ್ತಿನ ಗಮನ ಸೆಳೆದಿದ್ದರು. ಅಲ್ಲದೆ ಸಣ್ಣ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಗೋಲ್​ ಬಾರಿಸಿದ ಆಟಗಾರ ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದರು.

1958, 1966 ಹಾಗೂ 1970ರ ವಿಶ್ವ ಕಪ್​ ಗೆದ್ದ ಬ್ರೆಜಿಲ್​ ತಂಡದ ಸದಸ್ಯರಾಗಿದ್ದ ಅವರು ಮೂರು ವಿಶ್ವ ಕಿರೀಟ ಧರಿಸಿದ ಏಕೈಕ ಆಟಗಾರ. ಒಟ್ಟಾರೆಯಾಗಿ 14 ವಿಶ್ವ ಕಪ್ ಪಂದ್ಯಗಳನ್ನು ಆಡಿರುವ ಅವರು 12 ಗೋಲ್​ಗಳನ್ನು ಬಾರಿಸಿದ್ದಾರೆ. ಈ ಸಾಧನೆ ಮುರಿಯಲು ಇನ್ನೂ ಯಾರಿಗೂ ಆಗಿಲ್ಲ ಎಂಬುದು ಪೀಲೆಯ ಸಾಧನೆಯ ಶ್ರೇಷ್ಠತೆಯನ್ನು ತೋರಿಸುತ್ತದೆ.

ಸ್ಯಾಂಟೋಸ್​ ಕ್ಲಬ್​ಗೆ ಆಡಿರುವ ಅವರು 1975ರಲ್ಲಿ ಅಮೆರಿಕದ ನ್ಯೂಯಾರ್ಕ್​ ಕಾಸ್ಮೋಸ್​ ಕ್ಲಬ್​ ಜತೆಯೂ ಒಪ್ಪಂದ ಮಾಡಿಕೊಂಡಿದ್ದರು. ಆದರೆ, 70ರ ದಶಕದಲ್ಲಿ ಅವರು ಗಾಯದ ಸಮಸ್ಯೆಯ ಸುಳಿಗೆ ಸಿಲುಕಿದರು. ಹೀಗಾಗಿ 1974ರಲ್ಲಿ ಮೊದಲ ಬಾರಿ ವಿದಾಯ ಘೋಷಿಸಿದರು. 1975ರಲ್ಲಿ ಮತ್ತೆ ಮರಳಿದ ಅವರು ನ್ಯೂಯಾರ್ಕ್​ ಕಾಸ್ಮೋಸ್​ ಕ್ಲಬ್​ ಪರ ಆಡಿದ್ದರು. 1977ರಲ್ಲಿ ಅಂತಿಮ ಪಂದ್ಯ ಆಡಿದ್ದರು.

ವಿದಾಯದ ಬಳಿಕ ಅವರು 1995ರಿಂದ 98ರವರೆಗೆ ಬ್ರೆಜಿಲ್​ನ ಕ್ರೀಡಾ ಸಚಿವರಾಗಿ ಕೆಲಸ ಮಾಡಿದ್ದರು. ಜತೆಗೆ ಜಾಗತಿಕ ಫುಟ್ಬಾಲ್​ನ ಅಂಬಾಸಿಡರ್​ ಕೂಡ ಆಗಿದ್ದರು.

1978ರಲ್ಲಿ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ ಪಡೆದ ಪೀಲೆ, 1993ರಲ್ಲಿ ನ್ಯಾಷನಲ್​ ಸೂಕರ್​ ಹಾಲ್​ಆಫ್​ ಫೇಮ್​ ಗೌರವ ಗಿಟ್ಟಿಸಿದ್ದರು. 1999ರಲ್ಲಿ ನ್ಯಾಷನಲ್​ ಒಲಿಂಪಿಕ್​ ಕಮಿಟಿಯ ಶತಮಾನದ ಕ್ರೀಡಾಪಟು (ಅಥ್ಲೀಟ್ ಆಫ್​ ಸೆಂಚುರಿ), ಅದೇ ವರ್ಷ ವಿಶ್ವ ಕ್ರೀಡಾ ಪ್ರಶಸ್ತಿ ಪಡೆದುಕೊಂಡಿದ್ದರು.

ಇದನ್ನೂ ಓದಿ | Pele Passes Away | ಬ್ರೆಜಿಲ್‌ ಫುಟ್ಬಾಲ್‌ ದಂತಕತೆ ಪೀಲೆ ಇನ್ನಿಲ್ಲ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Oylmpics 2024 : ಹಳದಿ ಬಣ್ಣದ ಜೆರ್ಸಿಯವರನ್ನು ಸೋಲಿಸುವುದೆಂದರೆ ಖುಷಿ; ಹಾಕಿ ತಂಡದ ಗೆಲುವನ್ನು ಮುಂದಿಟ್ಟುಕೊಂಡು ಸಿಎಸ್​​ಕೆಯನ್ನು ಲೇವಡಿ ಮಾಡಿದ ಆರ್​ಸಿಬಿ

Paris Olympics 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯವನ್ನು ಸದರ್ನ್ ಡರ್ಬಿ ಎಂದು ಕರೆಯಲಾಗುತ್ತದೆ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ. ಆಟಗಾರರ ವಿಷಯ ಬಿಡಿ. ಈ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಕಚ್ಚಾಡುವುದರಲ್ಲಿ ಫೇಮಸ್​. ಆರ್​ಸಿಬಿಯನ್ನು ಸಿಎಸ್​ಕೆ ಅಭಿಮಾನಿಗಳು ಒಂದೇ ಒಂದು ಕಪ್ ಗೆಲ್ಲದ ಗೊಡ್ಡು ತಂಡ ಎಂದು ಕರೆದರೆ, ಸಿಎಸ್​ಕೆ ಬೆಟ್ಟಿಂಗ್​ನಲ್ಲಿ ನಿಷೇಧವಾಗಿರುವ ತಂಡ ಎಂದು ಆರ್​​ಸಿಬಿ ಅಭಿಮಾನಿಗಳು ಸದಾ ಕಿಚಾಯಿಸುತ್ತಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಭಾರತ ಹಾಕಿ ತಂಡ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Oylmpics 2024 ) ವಿಶೇಷವಾದ ಸಾಧನೆಯೊಂದನ್ನು ಮಾಡಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ 3-2 ಗೋಲ್​ಗಳ ಗೆಲುವು ದಾಖಲಿಸಿದೆ. ಇದು ಭಾರತಕ್ಕೆ ಒಲಿಂಪಿಕ್ಸ್​​ನಲ್ಲಿ ಆಸೀಸ್ ತಂಡದ ವಿರುದ್ಧ 52 ವರ್ಷಗಳ ಬಳಿಕ ದೊರೆತ ಜಯವಾಗಿದೆ. ಅಲ್ಲದೆ ಕಳೆದ ಒಂದು ವರ್ಷದ 8ನೇ ಮುಖಾಮುಖಿಯಲ್ಲಿ ಮೊದಲ ವಿಜಯವೂ ಹೌದು. ಆದರೆ, ಈ ಸಂದರ್ಭವನ್ನೇ ಮುಂದಿಟ್ಟುಕೊಂಡು ಐಪಿಎಲ್​ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೇವಡಿ ಮಾಡಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹಚ್ಚಲು ಕಾರಣವಾಗಿದೆ. ಎರಡೂ ತಂಡಗಳ ಅಭಿಮಾನಿಗಳು ಈ ವಿಚಾರವಾಗಿ ಪರಸ್ಪರ ದೂಷಣೆಗಳನ್ನು ಶುರು ಮಾಡಿದ್ದಾರೆ.

ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯವನ್ನು ಸದರ್ನ್ ಡರ್ಬಿ ಎಂದು ಕರೆಯಲಾಗುತ್ತದೆ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ. ಆಟಗಾರರ ವಿಷಯ ಬಿಡಿ. ಈ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಕಚ್ಚಾಡುವುದರಲ್ಲಿ ಫೇಮಸ್​. ಆರ್​ಸಿಬಿಯನ್ನು ಸಿಎಸ್​ಕೆ ಅಭಿಮಾನಿಗಳು ಒಂದೇ ಒಂದು ಕಪ್ ಗೆಲ್ಲದ ಗೊಡ್ಡು ತಂಡ ಎಂದು ಕರೆದರೆ, ಸಿಎಸ್​ಕೆ ಬೆಟ್ಟಿಂಗ್​ನಲ್ಲಿ ನಿಷೇಧವಾಗಿರುವ ತಂಡ ಎಂದು ಆರ್​​ಸಿಬಿ ಅಭಿಮಾನಿಗಳು ಸದಾ ಕಿಚಾಯಿಸುತ್ತಾರೆ. 2024ರ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ ತಂಡ ಸಿಎಸ್​ಕೆಯನ್ನು ಸೋಲಿಸಿದ ಬಳಿಕ ಎರಡೂ ತಂಡಗಳ ಅಭಿಮಾನಿಗಳ ನಡುವೆ ನಡೆದಿರುವ ಮಾತಿನ ಸಮರ ದೊಡ್ಡ ಮಟ್ಟದ್ದರು. ಇಂಥ ಸೂಕ್ಷ್ಮವನ್ನು ಮುಂದಿಟ್ಟುಕೊಂಡ ಆರ್​ಸಿಬಿ ಸೋಶಿಯಲ್ ಮೀಡಿಯಾದ ಅಡ್ಮಿನ್​ ಆ ತಂಡದ ಕಾಲೆಳೆದಿದೆ.

ಐಪಿಎಲ್​ನಲ್ಲಿ ಆರ್​ಸಿಬಿ ಕೆಂಪು ದಿರಸನ್ನು ಹಾಕಿಕೊಂಡರೆ, ಸಿಎಸ್​ಕೆ ಹಳದಿ ಬಣ್ಣವನ್ನು ಧರಿಸುತ್ತದೆ. ಆರ್​ಸಿಬಿ ಆರಂಭದಿಂದ ಇಲ್ಲಿಯವರೆಗೆ ಹಲವು ಭಾರಿ ತಮ್ಮ ಜೆರ್ಸಿಯನ್ನು ಬದಲಾಯಿಸಿದೆ. ಆದರೆ ಸಿಎಸ್​ಕೆ ಎಂದಿದೂ ತಮ್ಮ ಯೆಲ್ಲೋ ಬಣ್ಣವನ್ನು ಬದಲಾಯಿಸಿಲ್ಲ. ಅದೇ ಬಣ್ಣದಲ್ಲಿ ಆಡಿ ಐದು ಕಪ್​ಗಳನ್ನು ಗೆದ್ದಿದೆ.

ಆರ್​​ಸಿಬಿಯ ಸೋಶಿಯಲ್​ ಮೀಡಿಯಾ ಮೆಸೇಜ್ ನೋಡಿದ ಸಿಎಸ್​ಕೆ ಅಭಿಮಾನಿಗಳು ಕೆರಳಿದ್ದಾರೆ. ಟ್ವೀಟ್​ನ ಪ್ರತಿಕ್ರಿಯೆಯೂ ಆಸಕ್ತಿಕಾರವಾಗಿದೆ. ಯೆಲ್ಲೊ ಜೆರ್ಸಿಯಿಂದ ಹೊಡೆಸಿಕೊಳ್ಳುವುದು ಕೂಡ ಖುಷಿಯ ವಿಚಾರ ಅಲ್ವೇ ಎಂದು ಒಬ್ಬರು ಕೇಳಿದರೆ, ವಿಷಲ್​ಪೋಡು ಸಿಎಸ್​​ಕೆ ಫ್ಯಾನ್​ ಪೇಜ್​, ನಾವು ಹಳದಿ ಬಣ್ಣ ಧರಿಸುವುದಕ್ಕೆ ಖುಷಿಯಿದೆ. ಆ ಕೆಂಪು ಮತ್ತು ಬಂಗಾರದ ಬಣ್ಣ ಧರಿಸಿದ್ದರೆ ನಮ್ಮ ಕತೆ ಕೇಳುವುದೇ ಬೇಡ ಎಂದು ತಿರುಗೇಟು ಕೊಟ್ಟಿದೆ.

ಹಾಖಿ ಪಂದ್ಯದಲ್ಲಿ ಏನಾಯಿತು?

ಒಲಿಂಪಿಕ್ಸ್​ನ ಡಿ ಗುಂಪಿನ ಈ ಪಂದ್ಯದಲ್ಲಿ ಭಾರತವು ಆಕ್ರಮಣಕಾರಿ ಆಟವಾಡಿತು. ಭಾರತದ ದಾಳಿಯ ಬೆದರಿಕೆಯನ್ನು ಎದುರಿಸಲು ಆಸ್ಟ್ರೇಲಿಯಾದ ಆಟಗಾರ ನಿಧಾನವಾಗಿ ಆಟ ಪ್ರಾರಂಭಿಸಿತು.

ಮೊದಲ ಕ್ವಾರ್ಟರ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ತಂಡ ಎರಡು ಗೋಲುಗಳ ಮುನ್ನಡೆ ಸಾಧಿಸಿತು. ಫಾರ್ವರ್ಡ್ ಆಟಗಾರ ಅಭಿಷೇಕ್ 12ನೇ ನಿಮಿಷದಲ್ಲಿ ಭಾರತದ ಪರ ಮೊದಲ ಗೋಲು ಗಳಿಸಿದರು. ಒಂದು ನಿಮಿಷದ ನಂತರ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.

ಇದನ್ನೂ ಓದಿ: Lakshya Sen : ಒಲಿಂಪಿಕ್ಸ್​ನ ಸೆಮಿ ಫೈನಲ್​ಗೇರಿ ಇತಿಹಾಸ ನಿರ್ಮಿಸಿದ ಷಟ್ಲರ್ ಲಕ್ಷ್ಯ ಸೇನ್​

25ನೇ ನಿಮಿಷದಲ್ಲಿ ಕ್ರೇಗ್ ಥಾಮಸ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಅಂತರವನ್ನು ಒಂದು ಗೋಲಿಗೆ ಇಳಿಸಿದರು. 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 55ನೇ ನಿಮಿಷದಲ್ಲಿ ಬ್ಲೇಕ್ ಗ್ರೋವರ್ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಮೂಲಕ ಆಸ್ಟ್ರೇಲಿಯಾ ನಾಲ್ಕನೇ ಕ್ವಾರ್ಟರ್​ನಲ್ಲಿ ಭಾರತಕ್ಕೆ ಬೆದರಿಕೆ ಒಡ್ಡಿತು. ಕೊನೆಯ ನಿಮಿಷಗಳಲ್ಲಿ ಸಮಬಲದ ಹೋರಾಟ ತೋರಿದ ಆಸೀಸ್ ಕಠಿಣ ಪ್ರಯತ್ನ ನಡೆಸಿದರೂ ಗೋಲು ಗಳಿಸಲು ವಿಫಲವಾಯಿತು.

Continue Reading

ಪ್ರಮುಖ ಸುದ್ದಿ

Lakshya Sen : ಒಲಿಂಪಿಕ್ಸ್​ನ ಸೆಮಿ ಫೈನಲ್​ಗೇರಿ ಇತಿಹಾಸ ನಿರ್ಮಿಸಿದ ಷಟ್ಲರ್ ಲಕ್ಷ್ಯ ಸೇನ್​

Lakshya Sen:

VISTARANEWS.COM


on

Koo

ಬೆಂಗಳೂರು: ಭಾರತದ ಯುವ ಷಟ್ಲರ್​ ಲಕ್ಷ್ಯ ಸೇನ್ (Lakshya Sen ) ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಇತಿಹಾಸ ಬರೆದಿದ್ದಾರೆ. 22 ವರ್ಷದ ಆಟಗಾರ ಒಲಿಂಪಿಕ್ಸ್​​ನಲ್ಲಿ ಸೆಮಿಫೈನಲ್ ಹಂತವನ್ನು ತಲುಪಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. ಪ್ಯಾರಿಸ್ ಗೇಮ್ಸ್ ನಲ್ಲಿ ಲಕ್ಷ್ಯ ಅವರು ತೈವಾನ್ ನ 12ನೇ ಶ್ರೇಯಾಂಕದ ಚೌ ಟಿಯೆನ್ ಚೆನ್ ಅವರನ್ನು ಸೋಲಿಸಿ ಫ್ರೆಂಚ್ ರಾಜಧಾನಿಯಲ್ಲಿ ಕಿಕ್ಕಿರಿದ ಬ್ಯಾಡ್ಮಿಂಟನ್ ಅಖಾಡದಲ್ಲಿ ಭಾರತೀಯ ಪ್ರೇಕ್ಷಕರ ಅಭಿಮಾನಕ್ಕೆ ಪಾತ್ರರಾದರು.

ಲಕ್ಷ್ಯ ಸೇನ್ ಈಗ ತಮ್ಮ ಚೊಚ್ಚಲ ಒಲಿಂಪಿಕ್ಸ್ ನಲ್ಲಿ ಪದಕವನ್ನು ಖಚಿತಪಡಿಸಲು ಒಂದು ಗೆಲುವಿನ ದೂರದಲ್ಲಿದ್ದಾರೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ ಕಣದಲ್ಲಿ ಉಳಿದಿರುವ ಏಕೈಕ ಬ್ಯಾಡ್ಮಿಂಟ್ ಆಟಗಾ ಅವರು. ಹೀಗಾಗಿ ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರದ ಭರವಸೆಯನ್ನು ಹೊತ್ತಿದ್ದಾರೆ. ಚಿನ್ನದ ಪದಕದ ಸ್ಪರ್ಧಿಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗುರುವಾರ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್​​ನಲ್ಲಿ ಸೋತಿದ್ದು. ಎರಡು ಬಾರಿಯ ಪದಕ ವಿಜೇತೆ ಪಿ.ವಿ.ಸಿಂಧು ಮಹಿಳಾ ಸಿಂಗಲ್ಸ್ ರೌಂಡ್ ಆಫ್ 16 ರಲ್ಲಿ ನಿರ್ಗಮಿಸಿದ್ದಾರೆ.

ಲಕ್ಷ್ಯ ಸೇನ್ ತೈವಾನ್​​ನ ಚೌ ಟಿಯೆನ್ ಚೆನ್ ಅವರನ್ನು 19-21, 21-15, 21-12 ಗೇಮ್ ಗಳಿಂದ ಸೋಲಿಸಿದರು. ಒಂದು ಗಂಟೆ 15 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಲಕ್ಷ್ಯ ಗೆಲುವು ತಮ್ಮದಾಗಿಸಿಕೊಂಡರು.

ಅಸಹಜವಾಗಿ ಆಕ್ರಮಣಕಾರಿಯಾಗಿದ್ದ 12 ನೇ ಶ್ರೇಯಾಂಕದ ಚೌ ವಿರುದ್ಧ ಲಕ್ಷ್ಯ ಶ್ರೇಯಾಂಕರಹಿತ ಆಟಗಾರನಾಗಿ ಹೋರಾಡಿದರು. ರೌಂಡ್ ಆಫ್ 16 ರಲ್ಲಿ ತಮ್ಮ ಸಹ ಆಟಗಾರ ಎಚ್.ಎಸ್.ಪ್ರಣಯ್ ವಿರುದ್ಧ ನೇರ ಗೇಮ್ ಗೆಲುವು ಸಾಧಿಸಿದ್ದ ಅವರಿಗೆ ಈ ಪಂದ್ಯದಲ್ಲಿ ಹೆಚ್ಚು ಸವಾಲು ಎದುರಾಯಿತು. ಲಕ್ಷ್ಯ 75 ನಿಮಿಷಗಳ ಸ್ಪರ್ಧೆಯುದ್ದಕ್ಕೂ ಹೆಚ್ಚು ಉತ್ಸಾಹ ತೋರಿದರು. ಅಂದ ಹಾಗೆ ತೈವಾನ್ ಶಟ್ಲರ್ ವಿರುದ್ಧ ಲಕ್ಷ್ಯ ಇದುವರೆಗಿನ ಐದು ಪಂದ್ಯಗಳಲ್ಲಿ ಎರಡನೇ ಗೆಲುವು ಸಾಧಿಸಿದರು.

ಲಕ್ಷ್ಯ ಮತ್ತು ಚೌ ಇಬ್ಬರೂ ಒಲಿಂಪಿಕ್ಸ್​​ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದರು. ಶಾಟ್-ಮೇಕಿಂಗ್ ಮತ್ತು ರಿಸೀವಿಂಗ್ ಉತ್ತಮ ಮಟ್ಟದಲ್ಲಿತ್ತು. ಇಬ್ಬರೂ ಶಟ್ಲರ್ ಗಳು ತಮ್ಮ ವೇಗ ಮತ್ತು ಪ್ರತಿಕ್ರಿಯೆನ್ನು ಉತ್ತಮವಾಗಿ ಪ್ರದರ್ಶಿಸಿದರು. ವಾಯಿತು. ಆರಂಭಿಕ ಗೇಮ್ ನಲ್ಲಿ ಸರ್ವಿಸ್ ಎಕ್ಸ್ ಚೇಂಜ್ ಅಗಿದ್ದರಿಂದ ಲಕ್ಷ್ಯ ಮತ್ತು ಚೌ ಪರಸ್ಪರ ಒಂದಿಂಚೂ ಬಿಟ್ಟುಕೊಡಲಿಲ್ಲ. ಆರಂಭಿಕ ಗೇಮ್ ನಲ್ಲಿ ಚೌ 11-10ರ ಮುನ್ನಡೆ ಸಾಧಿಸುವ ಮೊದಲು 7-7ರ ವರೆಗೆ ಹೋರಾಟ ಮುಂದುವರಿದಿತ್ತು.

ಲಕ್ಷ್ಯಗಿಂತ 10 ವರ್ಷ ಹಿರಿಯರಾದ ಚೌ, ತಮ್ಮ ಆಕ್ರಮಣಕಾರಿ ಆಟದಿಂದ ಭಾರತೀಯ ಶಟ್ಲರ್ ಅನ್ನು ಅಚ್ಚರಿಗೊಳಿಸುತ್ತಿದ್ದರು. ತೈವಾನ್ ನ ಶಟರ್ ಆ ಶಕ್ತಿಯುತ ಸ್ಮ್ಯಾಶ್ ಗಳ ಜತೆಗೆ ನೆಟ್ ಸಮೀಪ ಧಾವಿಸಿ ಭಾರತೀಯನ ಮೇಲೆ ಒತ್ತಡ ಹೇರಿದರ. ದೀರ್ಘ ರ್ಯಾಲಿಗಳನ್ನು ಆಡಲು ಮತ್ತು ಎದುರಾಳಿ ಸುಸ್ತಾಗುವಂತೆ ಮಾಡಲು ಚೌ ಯತ್ನಿಸಿದರು.

ಇದನ್ನೂ ಓದಿ: IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈನಲ್ಲಿ ಮುಕ್ತಾಯ

ಆರಂಭಿಕ ಗೇಮ್ನಲ್ಲಿ ಚೌ 14-9 ರಿಂದ ಮುನ್ನಡೆ ಸಾಧಿಸಿದರು, ನಂತರ ಲಕ್ಷ್ಯ ತನ್ನ ಆಟಕ್ಕೆ ವೇಗ ಕೊಟ್ಟರು. ಹೀಗಾಗಿ ಲಕ್ಷ್ಯ 18-16ರಲ್ಲಿ ಮುನ್ನಡೆ ಸಾಧಿಸಿದರು. ಆದಾಗ್ಯೂ, ಚೌ ತಮ್ಮ ಆಟವನ್ನು ಹೆಚ್ಚಿಸಿದರು ಮತ್ತು ಮೊದಲ ಪಂದ್ಯವನ್ನು 21-19 ರಿಂದ ಗೆದ್ದರು.

ಲಕ್ಷ್ಯ ಏಕಾಗ್ರತೆಯ ಆಟ

ಎರಡನೇ ಗೇಮ್ ನಲ್ಲಿ ಲಕ್ಷ್ಯ ಒತ್ತಡದಲ್ಲಿದ್ದರು . ಆಟದ ಮಧ್ಯದ ವಿರಾಮದ ಸಮಯದಲ್ಲಿ ಚೇರ್ ಅಂಪೈರ್ ನೊಂದಿಗೆ ವಾದಿಸಿದರು. ಭಾರತದ ಕೋಚಿಂಗ್ ಬೆಂಚ್ ನಲ್ಲಿದ್ದ ಪ್ರಕಾಶ್ ಪಡುಕೋಣೆ ಮತ್ತು ವಿಮಲ್ ಕುಮಾರ್ ಅವರು ಲಕ್ಷ್ಯ ಅವರನ್ನು ಶಾಂತಗೊಳಿಸಿದರು. ಏಕಾಗ್ರತೆಯ ಸಣ್ಣ ಕುಸಿತವು ಅವರ ಆಟದ ಮೇಲೆ ಪರಿಣಾಮ ಬೀರಲು ಅವಕಾಶ ನೀಡಲಿಲ್ಲ, ಏಕೆಂದರೆ ಆ ಗೇಮ್ ಅನ್ನು ಅವರು 17 ನಿಮಿಷಗಳಲ್ಲಿ 21-15 ಅಂಕಗಳಿಂದ ಗೆದ್ದರು.

ನಿರ್ಣಾಯಕ ಗೇಮ್​ನಲ್ಲಿ ಲಕ್ಷ್ಯ ತನ್ನ ಸಂವೇದನಾಶೀಲರಾಗಿ ಆಡಿದರು. ಆಕ್ರಮಣಕಾರಿ ಮತ್ತು ಎಚ್ಚರಿಕೆಯ ಉತ್ತಮ ಮಿಶ್ರಣದೊಂದಿಗೆ 11-7 ಮುನ್ನಡೆ ಸಾಧಿಸಿದರು. ಕೊನೆಯಲ್ಲಿ ಆಟವನ್ನು 21-12 ರಲ್ಲಿ ಸುಲಭವಾಗಿ ಮುಗಿಸಿದರು. ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು ಮಾಜಿ ಆಲ್ ಇಂಗ್ಲೆಂಡ್ ಫೈನಲಿಸ್ಟ್ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Continue Reading

ಕ್ರಿಕೆಟ್

IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

IND vs SL ODI: ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿದ ಲಂಕಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 230 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 47.5 ಓವರ್​ಗಳಲ್ಲಿ 230 ರನ್​ಗಳಿಗೆ ಆಲ್​ಔಟ್ ಆಯಿತು. ಭಾರತ ತಂಡದ ಪರ ರೋಹಿತ್ ಶರ್ಮಾ (58 ರನ್​) ಬಾರಿಸಿದ ಅರ್ಧ ಶತಕ ವ್ಯರ್ಥಗೊಂಡಿತು. ಇದೇ ವೇಳೆ ಲಂಕಾ ಪರ ದುನಿತ್ ವೆಲ್ಲಾಲಗಿ ಬ್ಯಾಟಿಂಗ್​ನಲ್ಲಿ ಅಜೇಯ 67 ರನ್ ಹಾಗೂ ಬೌಲಿಂಗ್​ನಲ್ಲಿ ಕೊನೇ 2 ವಿಕೆಟ್ ಉರುಳಿಸುವ ಮೂಲಕ ಆ ತಂಡ ಮರ್ಯಾದೆ ಕಾಪಾಡಿದರು.

VISTARANEWS.COM


on

IND vs SL ODI
Koo

ಕೊಲೊಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಏಕ ದಿನ (IND vs SL ODI ) ಪಂದ್ಯ ಟೈನಲ್ಲಿ ಮುಕ್ತಾಯಗೊಂಡಿದೆ. ಕೊನೇ ಹಂತದಲ್ಲಿ ನಡೆದ ನಾಟಕೀಯ ತಿರುವು ಮೂಲಕ ಲಂಕಾ ತಂಡವವು ಭಾರತಕ್ಕೆ ಗೆಲುವು ನಿರಾಕರಿಸಿತು. ಅಂದ ಹಾಗೆ ಇದು ಲಂಕಾ ಪ್ರವಾಸದಲ್ಲಿ ಸತತವಾಗಿ ಎರಡನೇ ಪಂದ್ಯ ಟೈ ಆಗುತ್ತಿರುವುದು. ಟಿ20 ಸರಣಿಯ ಮೂರನೇ ಪಂದ್ಯ ಟೈ ಆಗಿತ್ತು. ಬಳಿಕ ಸೂಪರ್ ಓವರ್​ನಲ್ಲಿ ಭಾರತ ಗೆಲುವು ಕಂಡಿತ್ತು. ಅದು ಮುಗಿದು ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮೂಡಿ ಬಂದಿರುವುದು ಕಾಕತಾಳೀಯವಾಗಿದೆ. ಶಿವಂ ದುಬೆ ಫೋರ್ ಬಾರಿಸಿದಾಗ ಭಾರತದ ಗೆಲುವು ಬಹುತೇಕ ನಿಶ್ಚಿತವಾಗಿತ್ತು. ಆದರೆ, ನಂತರದ ಎರಡು ಎಸೆತಗಳಲ್ಲಿ ಎರಡು ವಿಕೆಟ್​ ಕಳೆದುಕೊಂಡಾಗ ಭಾರತದ ಡ್ರೆಸಿಂಗ್​ ರೂಮ್ ಆಘಾತಕ್ಕೆ ಒಳಗಾಯಿತು.

ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿದ ಲಂಕಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 230 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 47.5 ಓವರ್​ಗಳಲ್ಲಿ 230 ರನ್​ಗಳಿಗೆ ಆಲ್​ಔಟ್ ಆಯಿತು. ಭಾರತ ತಂಡದ ಪರ ರೋಹಿತ್ ಶರ್ಮಾ (58 ರನ್​) ಬಾರಿಸಿದ ಅರ್ಧ ಶತಕ ವ್ಯರ್ಥಗೊಂಡಿತು. ಇದೇ ವೇಳೆ ಲಂಕಾ ಪರ ದುನಿತ್ ವೆಲ್ಲಾಲಗಿ ಬ್ಯಾಟಿಂಗ್​ನಲ್ಲಿ ಅಜೇಯ 67 ರನ್ ಹಾಗೂ ಬೌಲಿಂಗ್​ನಲ್ಲಿ ಕೊನೇ 2 ವಿಕೆಟ್ ಉರುಳಿಸುವ ಮೂಲಕ ಆ ತಂಡ ಮರ್ಯಾದೆ ಕಾಪಾಡಿದರು.

ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 101ರನ್​ಗಳಿ 5 ವಿಕೆಟ್ ಕಳೆದುಕೊಂಡಿತ್ತು. ಅಲ್ಲಿಂದ ಚೇತರಿಸಿಕೊಂಡು 230 ರನ್​ಗಳ ಹೋರಾಟದ ಮೊತ್ತವನ್ನು ದಾಖಲಿಸಿತು. ದುನಿತ್ ವೆಲ್ಲಾಲಗೆ ಅವರ ಚೊಚ್ಚಲ ಅರ್ಧಶತಕ ಆ ತಂಡಕ್ಕೆ ನೆರವಾಯಿತು. ಇದಕ್ಕೆ ಉತ್ತರವಾಗಿ ರೋಹಿತ್ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಭಾರತವು ಮೊದಲ ಪವರ್ ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 71 ರನ್ ಗಳಿಸಿತ್ತು. ಆದರೆ ನಂತರದಲ್ಲಿ ಶ್ರೀಲಂಕಾದ ಸ್ಪಿನ್ನರ್ ಗಳು ಭಾರತದ ವೇಗಕ್ಕೆ ಬ್ರೇಕ್ ಹಾಕಿದರು. ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದ ವಾಷಿಂಗ್ಟನ್ ಸುಂದರ್ ಬೌಂಡರಿ ಬಾರಿಸಿದ ನಂತರ ಔಟಾದರು. ಅನುಭವಿ ಜೋಡಿ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಹೆಚ್ಚು ಹೊತ್ತು ಆಡಲಿಲ್ಲ. ಶ್ರೀಲಂಕಾ ಅವರನ್ನು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್​ಗೆ ಕಳುಹಿಸಿತು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ್ದ ಭಾರತ ತಂಡ ಉತ್ತಮ ಸ್ಥಿತಿಯಲ್ಲಿ ಇದ್ದಂತೆ ಕಂಡಿತು. ಕೆಎಲ್ ರಾಹುಲ್ (31) ಮತ್ತು ಅಕ್ಷರ್ (33) ಸ್ವಲ್ಪ ಹೊತ್ತು ತಂಡಕ್ಕೆ ಆಧಾರವಾದರು. ಆದರೆ, ಹಸರಂಗ ರಾಹುಲ್ ಔಟ್ ಮಾಡಿದರೆ, ಅಕ್ಷರ್​ ಪಟೇಲ್​ಗೆ ಅಸಲಂಕಾ ಪೆವಿಲಿಯನ್ ದಾರಿ ತೋರಿದರು. ಬಳಿಕ ಕುಲ್ದೀಪ್ ಯಾದವ್​ ಹಸರಂಗ ಎಸೆತಕ್ಕೆ ಔಟಾದಾಗ ಗೆಲುವು ಲಂಕಾ ಕಡೆಗೆ ತಿರುಗಿತ್ತು. ಆದರೆ, ಅದಕ್ಕಿಂತ ಮೊದಲು ಬ್ಯಾಟ್ ಮಾಡಲು ಬಂದ ಶಿವಂ ದುಬೆ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸುವುದರೊಂದಿಗೆ ಭಾರತದ ಪಾಳೆಯದಲ್ಲಿ ನಗು ಮೂಡಿಸಿದರು. ಆದರೆ ಗೆಲ್ಲಲು ಒಂದು ರನ್ ಬೇಕಾಗಿದ್ದಾಗ ಅವರು ಔಟಾದರು. ನಂತರದ ಎಸೆತದಲ್ಲಿ ಅರ್ಶ್​ದೀಪ್ ಸಿಂಗ್ ಔಟಾಗಿ ನಿರ್ಗಮಿಸಿದರು.

ಈ ಫಲಿತಾಂಶದೊಂದಿಗೆ ಲಂಕಾ ತಂಡ ನಿರಾಳವಾಗಲಿದೆ. ಟಿ 20 ಪಂದ್ಯಗಳಲ್ಲಿ ನಾಟಕೀಯ ಕುಸಿತದಿಂದ ತಂಡ ಟೀಕೆಗಳನ್ನು ಎದುರಿಸಿತ್ತು. ಆದರೆ, ಈಗ ಭಾರತವನ್ನೇ ನಾಟಕೀಯವಾಗಿ ಕುಸಿಯುಂತೆ ಮಾಡಿದೆ. ಅದರಲ್ಲೂ ಸ್ಪಿನ್ನರ್​ಗಳು ಆ ತಂಡಕ್ಕೆ ಆಧಾರವಾದರು. ಭಾನುವಾರ ಇತ್ತಂಡಗಳ ನಡುವೆ ಎರಡನೇ ಪಂದ್ಯ ನಡೆಯಲಿದೆ.

Continue Reading

ಕ್ರೀಡೆ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

Paris Olympics 2024:

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024 ) ಏಳನೇ ದಿನವಾದ ಶುಕ್ರವಾರ ಭಾರತಕ್ಕೆ ಯಾವುದೇ ಪದಕಗಳು ಲಭಿಸಿಲ್ಲ. ಆರ್ಚರಿಯ ಮಿಶ್ರ ತಂಡ ವಿಭಾಗದಲ್ಲಿ ಅಂಕಿತಾ ಹಾಗೂ ಧೀರಜ್ ಬೊಮ್ಮದೇವರ ಕಂಚಿನ ಪದಕ ಮಿಸ್​ ಮಾಡಿಕೊಳ್ಳುವ ಮೂಲಕ ಹಿನ್ನಡೆಯಾಯಿತು. ಇದೇ ವೇಳೆ ಪೂಲ್ ಹಂತದ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಆಸ್ಟ್ರೇಲಿಯಾವನ್ನು 3-2 ಅಂತರದಿಂದ ಸೋಲಿಸಿತು. 1972ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಪುರುಷರ ತಂಡ ಒಲಿಂಪಿಕ್ಸ್​ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದೆ.

ಎರಡು ಬಾರಿ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಮನು ಭಾಕರ್ ತಮ್ಮ ಮೂರನೇ ಸ್ಪರ್ಧೆಯಾದ 25 ಮೀಟರ್ ಪಿಸ್ತೂಲ್ ನ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಶೂಟಿಂಗ್​ನಲ್ಲಿ ಭಾರತಕ್ಕೆ ಎರಡು ಕಂಚಿನ ಪದಕ ಗೆದ್ದ ಅವರು ಮತ್ತೊಂದು ಪದಕಕ್ಕೆ ಗುರಿಯಿಟ್ಟಿದ್ದಾರೆ. ಆರ್ಚರಿಯಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರು ಇಂಡೋನೇಷ್ಯಾ ಮತ್ತು ಸ್ಪೇನ್ ಜೋಡಿಯನ್ನು ಸೋಲಿಸಿ ಮಿಶ್ರ ತಂಡ ಸ್ಪರ್ಧೆಯ ಸೆಮಿಫೈನಲ್ ಗೆ ಪ್ರವೇಶಿಸಿದ್ದರು. ಆದರೆ, ಚಾಂಪಿಯನ್ ಕೊರಿಯಾ ಹಾಗೂ ಕಂಚಿನ ಪದಕದ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತಿತು.

ಮೂರನೇ ದಿನ ಮನು ಭಾಕರ್ಗೆ ಚಿನ್ನ ಸೇರಿದಂತೆ ಯಾವುದೇ ಪದಕ ಗೆಲ್ಲುವ ಅವಕಾಶವಿದೆ. ಅದು ಅವರ ಮೂರನೇ ಪದಕವಾಗಲಿದೆ. ಬಾಕ್ಸರ್ ನಿಶಾಂತ್ ದೇವ್ ಕೂಡ ಶನಿವಾರ ಪದಕವನ್ನು ಖಚಿತಪಡಿಸುವ ಅವಕಾಶವಿದೆ. ಮೆಕ್ಸಿಕೊದ ಮಾರ್ಕೊ ವರ್ಡೆ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಯ ಗಳಿಸಿದರೆ ಸೆಮಿಫೈನಲ್ ಪ್ರವೇಶಿಸಲಿದ್ದು. ಪದಕ ಖಚಿತವಾಗಲಿದೆ. ಆರ್ಚರಿಯಲ್ಲಿ ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ತಮ್ಮ ಮಹಿಳಾ ಸಿಂಗಲ್ಸ್ ಸುತ್ತುಗಳಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: Paris Olympics 2024 : ಭಾರತಕ್ಕೆ ಒಂದು ಪದಕ ಜಸ್ಟ್​​ ಮಿಸ್​; ಆರ್ಚರಿ ಕಂಚಿನ ಪದಕದ ಪಂದ್ಯದಲ್ಲಿ ಸೋತ ಅಂಕಿತಾ, ಧೀರಜ್ ಜೋಡಿ​

ಆಗಸ್ಟ್ 3ರ ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ

ಮಧ್ಯಾಹ್ನ 12:30: ಶೂಟಿಂಗ್ – ಮಹಿಳಾ ಸ್ಕೀಟ್ ಅರ್ಹತಾ ಸುತ್ತಿನ ದಿನ ಮೊದಲ ದಿನ, ರೈಜಾ ಧಿಲ್ಲಾನ್ ಮತ್ತು ಮಹೇಶ್ವರಿ ಚೌಹಾಣ್.

ಮಧ್ಯಾಹ್ನ 1 ಗಂಟೆ: ಶೂಟಿಂಗ್; ಮಹಿಳೆಯರ 25 ಮೀಟರ್ ಪಿಸ್ತೂಲ್ ಫೈನಲ್​​ನಲ್ಲಿ ಮನು ಭಾಕರ್ (ಪದಕದ ಸ್ಪರ್ಧೆ)

ಮಧ್ಯಾಹ್ನ 1:52: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ದೀಪಿಕಾ ಕುಮಾರಿ ಮತ್ತು ಜರ್ಮನಿಯ ಮಿಚೆಲ್ ಕ್ರೊಪೆನ್ ನಡುವೆ ಹಣಾಹಣಿ

ಮಧ್ಯಾಹ್ನ 2:05: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ಭಜನ್ ಕೌರ್ ಮತ್ತು ಡಯಾನಂದಾ ಕೊಯಿರುನ್ನಿಸಾ.

ಮಧ್ಯಾಹ್ನ 3:45 ಸೇಯ್ಲಿಂಗ್​​- ಪುರುಷರ ಡಿಂಗ್ಲೇ ರೇಸ್ 5 ಮತ್ತು 6ರಲ್ಲಿ ವಿಷ್ಣು ಸರವಣನ್ ಸ್ಪರ್ಧಿಸಲಿದ್ದಾರೆ.

ಸಂಜೆ 5:55: ಸೇಯ್ಲಿಂಗ್; ಮಹಿಳೆಯರ ಡಿಂಗ್ಲೇ ರೇಸ್ 5 ಮತ್ತು 6 ರಲ್ಲಿ ನೇತ್ರಾ ಕುಮನನ್ ಭಾಗಿಯಾಗಲಿದ್ದಾರೆ.

ರಾತ್ರಿ 11:05: ಶಾಟ್ ಪುಟ್ ಫೈನಲ್ ; ತಜಿಂದರ್ಪಾಲ್ ಸಿಂಗ್ ತೂರ್ (ಅರ್ಹತೆ ಪಡೆದರೆ).

ರಾತ್ರಿ 12:02 : ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್​​ನಲ್ಲಿ ನಿಶಾಂತ್ ದೇವ್ ಮತ್ತು ಮೆಕ್ಸಿಕೊದ ಮಾರ್ಕೊ ವರ್ಡೆ.

Continue Reading
Advertisement
Bigg Boss OTT 3
ಪ್ರಮುಖ ಸುದ್ದಿ2 hours ago

Bigg Boss OTT 3 : ಸನಾ ಮಕ್ಬುಲ್​ ಬಿಗ್​ಬಾಸ್​ ಒಟಿಟಿ 3 ವಿನ್ನರ್​, ನೈಜಿ ರನ್ನರ್​​ಅಪ್​​

Paris Olympics 2024
ಪ್ರಮುಖ ಸುದ್ದಿ4 hours ago

Paris Oylmpics 2024 : ಹಳದಿ ಬಣ್ಣದ ಜೆರ್ಸಿಯವರನ್ನು ಸೋಲಿಸುವುದೆಂದರೆ ಖುಷಿ; ಹಾಕಿ ತಂಡದ ಗೆಲುವನ್ನು ಮುಂದಿಟ್ಟುಕೊಂಡು ಸಿಎಸ್​​ಕೆಯನ್ನು ಲೇವಡಿ ಮಾಡಿದ ಆರ್​ಸಿಬಿ

ಪ್ರಮುಖ ಸುದ್ದಿ4 hours ago

Lakshya Sen : ಒಲಿಂಪಿಕ್ಸ್​ನ ಸೆಮಿ ಫೈನಲ್​ಗೇರಿ ಇತಿಹಾಸ ನಿರ್ಮಿಸಿದ ಷಟ್ಲರ್ ಲಕ್ಷ್ಯ ಸೇನ್​

IND vs SL ODI
ಕ್ರಿಕೆಟ್5 hours ago

IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

Border Security Force
ಪ್ರಮುಖ ಸುದ್ದಿ5 hours ago

Border Security Force : ಗಡಿಯಲ್ಲಿ ಭಯೋತ್ಪಾದನೆ ಹೆಚ್ಚಳ; ಬಿಎಸ್​ಎಫ್​ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದು ಹಾಕಿದ ಕೇಂದ್ರ ಸರ್ಕಾರ

African Culture
ವಿದೇಶ6 hours ago

Breast Ironing: ಆಫ್ರಿಕಾದಲ್ಲಿದೆ ಬಿಸಿ ವಸ್ತುಗಳಿಂದ ಯುವತಿಯರ ಸ್ತನ ಚಪ್ಪಟೆಗೊಳಿಸುವ ಕ್ರೂರ ಪದ್ಧತಿ!

high-speed road corridor
ಪ್ರಮುಖ ಸುದ್ದಿ6 hours ago

High Speed Road Corridor : 8 ಹೊಸ ಹೈಸ್ಪೀಡ್​ ರೋಡ್​ ಕಾರಿಡಾರ್​​​ಗೆ ಒಪ್ಪಿಗೆ ಕೊಟ್ಟ ಕೇಂದ್ರ ಸರ್ಕಾರ

RRB ALP Recruitment
ಕರ್ನಾಟಕ6 hours ago

RRB ALP Recruitment: ರೈಲ್ವೆ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅವಕಾಶ

Sri Vidyashreesha Theertha Swamiji ashirvachan at Vyasaraja Matha of Sosale village
ಮೈಸೂರು6 hours ago

Mysore News: ದೇವರ ಅನುಗ್ರಹ ದೊರೆತರೆ ಜೀವನದ ಎಲ್ಲ ತಾಪಗಳೂ ನಿವಾರಣೆ: ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ

Minister Shivaraj tangadagi visited and inspected Tungabhadra river side villages
ಮಳೆ6 hours ago

Koppala News: ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು; ನದಿಪಾತ್ರದ ಗ್ರಾಮಗಳಿಗೆ ತಂಗಡಗಿ ಭೇಟಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌