Border Security Force : ಗಡಿಯಲ್ಲಿ ಭಯೋತ್ಪಾದನೆ ಹೆಚ್ಚಳ; ಬಿಎಸ್​ಎಫ್​ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದು ಹಾಕಿದ ಕೇಂದ್ರ ಸರ್ಕಾರ - Vistara News

ಪ್ರಮುಖ ಸುದ್ದಿ

Border Security Force : ಗಡಿಯಲ್ಲಿ ಭಯೋತ್ಪಾದನೆ ಹೆಚ್ಚಳ; ಬಿಎಸ್​ಎಫ್​ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದು ಹಾಕಿದ ಕೇಂದ್ರ ಸರ್ಕಾರ

Border Security Force : ಅಗರ್ವಾಲ್ ಅವರು ಕಳೆದ ವರ್ಷ ಜೂನ್​​ನಲ್ಲಿ ಬಿಎಸ್ಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಖುರಾನಿಯಾ ಅವರು ವಿಶೇಷ ಡಿಜಿ (ಪಶ್ಚಿಮ) ಆಗಿ ಪಾಕಿಸ್ತಾನ ಗಡಿಯಲ್ಲಿ ಪಡೆ ರಚನೆಯ ನೇತೃತ್ವ ವಹಿಸಿದ್ದರು. ಕ್ಯಾಬಿನೆಟ್​ನಲ್ಲಿ ನೇಮಕಾತಿ ಸಮಿತಿ ಹೊರಡಿಸಿದ ಪ್ರತ್ಯೇಕ ಆದೇಶಗಳಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ “ಅಕಾಲಿಕವಾಗಿ” ವಾಪಸ್ ಕಳುಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

VISTARANEWS.COM


on

Border Security Force
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಗಡಿಯ ಮೂಲಕ ಪಾಕಿಸ್ತಾನದ ಉಗ್ರರ ನುಸುಳುವಿಕೆ ವರದಿಯಾದ ಬೆನ್ನಲ್ಲೇ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ. ಶುಕ್ರವಾರ ಗಡಿ ಭದ್ರತಾ ಪಡೆ (Border Security Force) ಡೈರೆಕ್ಟರ್​ ನಿತಿನ್ ಅಗರ್ವಾಲ್ ಮತ್ತು ಅವರ ಡೆಪ್ಯುಟಿ ಡೈರೆಕ್ಟರ್​ (ಪಶ್ಚಿಮ) ವೈಬಿ ಖುರಾನಿಯಾ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ರಾಜ್ಯ ಕೇಡರ್​ಗಳಿಗೆ ವಾಪಸ್ ಕಳುಹಿಸಿದೆ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಅಗರ್ವಾಲ್ ಅವರು 1989ರ ಬ್ಯಾಚ್​​ನ ಕೇರಳ ಕೇಡರ್ ಅಧಿಕಾರಿಯಾಗಿದ್ದು, ಖುರಾನಿಯಾ 1990ರ ಬ್ಯಾಚ್​ನ ಒಡಿಶಾ ಕೇಡರ್​ಗೆ ಸೇರಿದವರಾಗಿದ್ದಾರೆ.

ಅಗರ್ವಾಲ್ ಅವರು ಕಳೆದ ವರ್ಷ ಜೂನ್​​ನಲ್ಲಿ ಬಿಎಸ್ಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಖುರಾನಿಯಾ ಅವರು ವಿಶೇಷ ಡಿಜಿ (ಪಶ್ಚಿಮ) ಆಗಿ ಪಾಕಿಸ್ತಾನ ಗಡಿಯಲ್ಲಿ ಪಡೆ ರಚನೆಯ ನೇತೃತ್ವ ವಹಿಸಿದ್ದರು. ಕ್ಯಾಬಿನೆಟ್​ನಲ್ಲಿ ನೇಮಕಾತಿ ಸಮಿತಿ ಹೊರಡಿಸಿದ ಪ್ರತ್ಯೇಕ ಆದೇಶಗಳಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ “ಅಕಾಲಿಕವಾಗಿ” ವಾಪಸ್ ಕಳುಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: High Speed Road Corridor : 8 ಹೊಸ ಹೈಸ್ಪೀಡ್​ ರೋಡ್​ ಕಾರಿರಾಡ್​ಗೆ ಒಪ್ಪಿಗೆ ಕೊಟ್ಟ ಕೇಂದ್ರ ಸರ್ಕಾರ

ಅಂತರರಾಷ್ಟ್ರೀಯ ಗಡಿಯಿಂದ ನಿರಂತರ ಒಳನುಸುಳುವಿಕೆ ಹಿನ್ನೆಲೆಯಲ್ಲಿ ಈ ಕ್ರಮ ಎಂದು ಹೇಳಲಾಗಿದೆ. ಸಮನ್ವಯದ ಕೊರತೆ ಸೇರಿದಂತೆ ನಿರ್ಣಾಯಕ ವಿಷಯಗಳ ಬಗ್ಗೆ ಬಿಎಸ್ಎಫ್ ಮುಖ್ಯಸ್ಥರ ವಿರುದ್ಧ ದೂರುಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. ಬಿಎಸ್ಎಫ್ ಸುಮಾರು 2.65 ಲಕ್ಷ ಸಿಬ್ಬಂದಿಯನ್ನು ಹೊಂದಿದೆ ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನ ಮತ್ತು ಪೂರ್ವದಲ್ಲಿ ಬಾಂಗ್ಲಾದೇಶದ ಗಡಿಗಳನ್ನು ಕಾಯುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Oylmpics 2024 : ಹಳದಿ ಬಣ್ಣದ ಜೆರ್ಸಿಯವರನ್ನು ಸೋಲಿಸುವುದೆಂದರೆ ಖುಷಿ; ಹಾಕಿ ತಂಡದ ಗೆಲುವನ್ನು ಮುಂದಿಟ್ಟುಕೊಂಡು ಸಿಎಸ್​​ಕೆಯನ್ನು ಲೇವಡಿ ಮಾಡಿದ ಆರ್​ಸಿಬಿ

Paris Olympics 2024 : ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯವನ್ನು ಸದರ್ನ್ ಡರ್ಬಿ ಎಂದು ಕರೆಯಲಾಗುತ್ತದೆ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ. ಆಟಗಾರರ ವಿಷಯ ಬಿಡಿ. ಈ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಕಚ್ಚಾಡುವುದರಲ್ಲಿ ಫೇಮಸ್​. ಆರ್​ಸಿಬಿಯನ್ನು ಸಿಎಸ್​ಕೆ ಅಭಿಮಾನಿಗಳು ಒಂದೇ ಒಂದು ಕಪ್ ಗೆಲ್ಲದ ಗೊಡ್ಡು ತಂಡ ಎಂದು ಕರೆದರೆ, ಸಿಎಸ್​ಕೆ ಬೆಟ್ಟಿಂಗ್​ನಲ್ಲಿ ನಿಷೇಧವಾಗಿರುವ ತಂಡ ಎಂದು ಆರ್​​ಸಿಬಿ ಅಭಿಮಾನಿಗಳು ಸದಾ ಕಿಚಾಯಿಸುತ್ತಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಭಾರತ ಹಾಕಿ ತಂಡ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Oylmpics 2024 ) ವಿಶೇಷವಾದ ಸಾಧನೆಯೊಂದನ್ನು ಮಾಡಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ 3-2 ಗೋಲ್​ಗಳ ಗೆಲುವು ದಾಖಲಿಸಿದೆ. ಇದು ಭಾರತಕ್ಕೆ ಒಲಿಂಪಿಕ್ಸ್​​ನಲ್ಲಿ ಆಸೀಸ್ ತಂಡದ ವಿರುದ್ಧ 52 ವರ್ಷಗಳ ಬಳಿಕ ದೊರೆತ ಜಯವಾಗಿದೆ. ಅಲ್ಲದೆ ಕಳೆದ ಒಂದು ವರ್ಷದ 8ನೇ ಮುಖಾಮುಖಿಯಲ್ಲಿ ಮೊದಲ ವಿಜಯವೂ ಹೌದು. ಆದರೆ, ಈ ಸಂದರ್ಭವನ್ನೇ ಮುಂದಿಟ್ಟುಕೊಂಡು ಐಪಿಎಲ್​ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೇವಡಿ ಮಾಡಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹಚ್ಚಲು ಕಾರಣವಾಗಿದೆ. ಎರಡೂ ತಂಡಗಳ ಅಭಿಮಾನಿಗಳು ಈ ವಿಚಾರವಾಗಿ ಪರಸ್ಪರ ದೂಷಣೆಗಳನ್ನು ಶುರು ಮಾಡಿದ್ದಾರೆ.

ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯವನ್ನು ಸದರ್ನ್ ಡರ್ಬಿ ಎಂದು ಕರೆಯಲಾಗುತ್ತದೆ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ. ಆಟಗಾರರ ವಿಷಯ ಬಿಡಿ. ಈ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಕಚ್ಚಾಡುವುದರಲ್ಲಿ ಫೇಮಸ್​. ಆರ್​ಸಿಬಿಯನ್ನು ಸಿಎಸ್​ಕೆ ಅಭಿಮಾನಿಗಳು ಒಂದೇ ಒಂದು ಕಪ್ ಗೆಲ್ಲದ ಗೊಡ್ಡು ತಂಡ ಎಂದು ಕರೆದರೆ, ಸಿಎಸ್​ಕೆ ಬೆಟ್ಟಿಂಗ್​ನಲ್ಲಿ ನಿಷೇಧವಾಗಿರುವ ತಂಡ ಎಂದು ಆರ್​​ಸಿಬಿ ಅಭಿಮಾನಿಗಳು ಸದಾ ಕಿಚಾಯಿಸುತ್ತಾರೆ. 2024ರ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ ತಂಡ ಸಿಎಸ್​ಕೆಯನ್ನು ಸೋಲಿಸಿದ ಬಳಿಕ ಎರಡೂ ತಂಡಗಳ ಅಭಿಮಾನಿಗಳ ನಡುವೆ ನಡೆದಿರುವ ಮಾತಿನ ಸಮರ ದೊಡ್ಡ ಮಟ್ಟದ್ದರು. ಇಂಥ ಸೂಕ್ಷ್ಮವನ್ನು ಮುಂದಿಟ್ಟುಕೊಂಡ ಆರ್​ಸಿಬಿ ಸೋಶಿಯಲ್ ಮೀಡಿಯಾದ ಅಡ್ಮಿನ್​ ಆ ತಂಡದ ಕಾಲೆಳೆದಿದೆ.

ಐಪಿಎಲ್​ನಲ್ಲಿ ಆರ್​ಸಿಬಿ ಕೆಂಪು ದಿರಸನ್ನು ಹಾಕಿಕೊಂಡರೆ, ಸಿಎಸ್​ಕೆ ಹಳದಿ ಬಣ್ಣವನ್ನು ಧರಿಸುತ್ತದೆ. ಆರ್​ಸಿಬಿ ಆರಂಭದಿಂದ ಇಲ್ಲಿಯವರೆಗೆ ಹಲವು ಭಾರಿ ತಮ್ಮ ಜೆರ್ಸಿಯನ್ನು ಬದಲಾಯಿಸಿದೆ. ಆದರೆ ಸಿಎಸ್​ಕೆ ಎಂದಿದೂ ತಮ್ಮ ಯೆಲ್ಲೋ ಬಣ್ಣವನ್ನು ಬದಲಾಯಿಸಿಲ್ಲ. ಅದೇ ಬಣ್ಣದಲ್ಲಿ ಆಡಿ ಐದು ಕಪ್​ಗಳನ್ನು ಗೆದ್ದಿದೆ.

ಆರ್​​ಸಿಬಿಯ ಸೋಶಿಯಲ್​ ಮೀಡಿಯಾ ಮೆಸೇಜ್ ನೋಡಿದ ಸಿಎಸ್​ಕೆ ಅಭಿಮಾನಿಗಳು ಕೆರಳಿದ್ದಾರೆ. ಟ್ವೀಟ್​ನ ಪ್ರತಿಕ್ರಿಯೆಯೂ ಆಸಕ್ತಿಕಾರವಾಗಿದೆ. ಯೆಲ್ಲೊ ಜೆರ್ಸಿಯಿಂದ ಹೊಡೆಸಿಕೊಳ್ಳುವುದು ಕೂಡ ಖುಷಿಯ ವಿಚಾರ ಅಲ್ವೇ ಎಂದು ಒಬ್ಬರು ಕೇಳಿದರೆ, ವಿಷಲ್​ಪೋಡು ಸಿಎಸ್​​ಕೆ ಫ್ಯಾನ್​ ಪೇಜ್​, ನಾವು ಹಳದಿ ಬಣ್ಣ ಧರಿಸುವುದಕ್ಕೆ ಖುಷಿಯಿದೆ. ಆ ಕೆಂಪು ಮತ್ತು ಬಂಗಾರದ ಬಣ್ಣ ಧರಿಸಿದ್ದರೆ ನಮ್ಮ ಕತೆ ಕೇಳುವುದೇ ಬೇಡ ಎಂದು ತಿರುಗೇಟು ಕೊಟ್ಟಿದೆ.

ಹಾಖಿ ಪಂದ್ಯದಲ್ಲಿ ಏನಾಯಿತು?

ಒಲಿಂಪಿಕ್ಸ್​ನ ಡಿ ಗುಂಪಿನ ಈ ಪಂದ್ಯದಲ್ಲಿ ಭಾರತವು ಆಕ್ರಮಣಕಾರಿ ಆಟವಾಡಿತು. ಭಾರತದ ದಾಳಿಯ ಬೆದರಿಕೆಯನ್ನು ಎದುರಿಸಲು ಆಸ್ಟ್ರೇಲಿಯಾದ ಆಟಗಾರ ನಿಧಾನವಾಗಿ ಆಟ ಪ್ರಾರಂಭಿಸಿತು.

ಮೊದಲ ಕ್ವಾರ್ಟರ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ತಂಡ ಎರಡು ಗೋಲುಗಳ ಮುನ್ನಡೆ ಸಾಧಿಸಿತು. ಫಾರ್ವರ್ಡ್ ಆಟಗಾರ ಅಭಿಷೇಕ್ 12ನೇ ನಿಮಿಷದಲ್ಲಿ ಭಾರತದ ಪರ ಮೊದಲ ಗೋಲು ಗಳಿಸಿದರು. ಒಂದು ನಿಮಿಷದ ನಂತರ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.

ಇದನ್ನೂ ಓದಿ: Lakshya Sen : ಒಲಿಂಪಿಕ್ಸ್​ನ ಸೆಮಿ ಫೈನಲ್​ಗೇರಿ ಇತಿಹಾಸ ನಿರ್ಮಿಸಿದ ಷಟ್ಲರ್ ಲಕ್ಷ್ಯ ಸೇನ್​

25ನೇ ನಿಮಿಷದಲ್ಲಿ ಕ್ರೇಗ್ ಥಾಮಸ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಅಂತರವನ್ನು ಒಂದು ಗೋಲಿಗೆ ಇಳಿಸಿದರು. 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 55ನೇ ನಿಮಿಷದಲ್ಲಿ ಬ್ಲೇಕ್ ಗ್ರೋವರ್ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಮೂಲಕ ಆಸ್ಟ್ರೇಲಿಯಾ ನಾಲ್ಕನೇ ಕ್ವಾರ್ಟರ್​ನಲ್ಲಿ ಭಾರತಕ್ಕೆ ಬೆದರಿಕೆ ಒಡ್ಡಿತು. ಕೊನೆಯ ನಿಮಿಷಗಳಲ್ಲಿ ಸಮಬಲದ ಹೋರಾಟ ತೋರಿದ ಆಸೀಸ್ ಕಠಿಣ ಪ್ರಯತ್ನ ನಡೆಸಿದರೂ ಗೋಲು ಗಳಿಸಲು ವಿಫಲವಾಯಿತು.

Continue Reading

ಪ್ರಮುಖ ಸುದ್ದಿ

Lakshya Sen : ಒಲಿಂಪಿಕ್ಸ್​ನ ಸೆಮಿ ಫೈನಲ್​ಗೇರಿ ಇತಿಹಾಸ ನಿರ್ಮಿಸಿದ ಷಟ್ಲರ್ ಲಕ್ಷ್ಯ ಸೇನ್​

Lakshya Sen:

VISTARANEWS.COM


on

Koo

ಬೆಂಗಳೂರು: ಭಾರತದ ಯುವ ಷಟ್ಲರ್​ ಲಕ್ಷ್ಯ ಸೇನ್ (Lakshya Sen ) ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಇತಿಹಾಸ ಬರೆದಿದ್ದಾರೆ. 22 ವರ್ಷದ ಆಟಗಾರ ಒಲಿಂಪಿಕ್ಸ್​​ನಲ್ಲಿ ಸೆಮಿಫೈನಲ್ ಹಂತವನ್ನು ತಲುಪಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. ಪ್ಯಾರಿಸ್ ಗೇಮ್ಸ್ ನಲ್ಲಿ ಲಕ್ಷ್ಯ ಅವರು ತೈವಾನ್ ನ 12ನೇ ಶ್ರೇಯಾಂಕದ ಚೌ ಟಿಯೆನ್ ಚೆನ್ ಅವರನ್ನು ಸೋಲಿಸಿ ಫ್ರೆಂಚ್ ರಾಜಧಾನಿಯಲ್ಲಿ ಕಿಕ್ಕಿರಿದ ಬ್ಯಾಡ್ಮಿಂಟನ್ ಅಖಾಡದಲ್ಲಿ ಭಾರತೀಯ ಪ್ರೇಕ್ಷಕರ ಅಭಿಮಾನಕ್ಕೆ ಪಾತ್ರರಾದರು.

ಲಕ್ಷ್ಯ ಸೇನ್ ಈಗ ತಮ್ಮ ಚೊಚ್ಚಲ ಒಲಿಂಪಿಕ್ಸ್ ನಲ್ಲಿ ಪದಕವನ್ನು ಖಚಿತಪಡಿಸಲು ಒಂದು ಗೆಲುವಿನ ದೂರದಲ್ಲಿದ್ದಾರೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ ಕಣದಲ್ಲಿ ಉಳಿದಿರುವ ಏಕೈಕ ಬ್ಯಾಡ್ಮಿಂಟ್ ಆಟಗಾ ಅವರು. ಹೀಗಾಗಿ ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರದ ಭರವಸೆಯನ್ನು ಹೊತ್ತಿದ್ದಾರೆ. ಚಿನ್ನದ ಪದಕದ ಸ್ಪರ್ಧಿಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗುರುವಾರ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್​​ನಲ್ಲಿ ಸೋತಿದ್ದು. ಎರಡು ಬಾರಿಯ ಪದಕ ವಿಜೇತೆ ಪಿ.ವಿ.ಸಿಂಧು ಮಹಿಳಾ ಸಿಂಗಲ್ಸ್ ರೌಂಡ್ ಆಫ್ 16 ರಲ್ಲಿ ನಿರ್ಗಮಿಸಿದ್ದಾರೆ.

ಲಕ್ಷ್ಯ ಸೇನ್ ತೈವಾನ್​​ನ ಚೌ ಟಿಯೆನ್ ಚೆನ್ ಅವರನ್ನು 19-21, 21-15, 21-12 ಗೇಮ್ ಗಳಿಂದ ಸೋಲಿಸಿದರು. ಒಂದು ಗಂಟೆ 15 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಲಕ್ಷ್ಯ ಗೆಲುವು ತಮ್ಮದಾಗಿಸಿಕೊಂಡರು.

ಅಸಹಜವಾಗಿ ಆಕ್ರಮಣಕಾರಿಯಾಗಿದ್ದ 12 ನೇ ಶ್ರೇಯಾಂಕದ ಚೌ ವಿರುದ್ಧ ಲಕ್ಷ್ಯ ಶ್ರೇಯಾಂಕರಹಿತ ಆಟಗಾರನಾಗಿ ಹೋರಾಡಿದರು. ರೌಂಡ್ ಆಫ್ 16 ರಲ್ಲಿ ತಮ್ಮ ಸಹ ಆಟಗಾರ ಎಚ್.ಎಸ್.ಪ್ರಣಯ್ ವಿರುದ್ಧ ನೇರ ಗೇಮ್ ಗೆಲುವು ಸಾಧಿಸಿದ್ದ ಅವರಿಗೆ ಈ ಪಂದ್ಯದಲ್ಲಿ ಹೆಚ್ಚು ಸವಾಲು ಎದುರಾಯಿತು. ಲಕ್ಷ್ಯ 75 ನಿಮಿಷಗಳ ಸ್ಪರ್ಧೆಯುದ್ದಕ್ಕೂ ಹೆಚ್ಚು ಉತ್ಸಾಹ ತೋರಿದರು. ಅಂದ ಹಾಗೆ ತೈವಾನ್ ಶಟ್ಲರ್ ವಿರುದ್ಧ ಲಕ್ಷ್ಯ ಇದುವರೆಗಿನ ಐದು ಪಂದ್ಯಗಳಲ್ಲಿ ಎರಡನೇ ಗೆಲುವು ಸಾಧಿಸಿದರು.

ಲಕ್ಷ್ಯ ಮತ್ತು ಚೌ ಇಬ್ಬರೂ ಒಲಿಂಪಿಕ್ಸ್​​ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದರು. ಶಾಟ್-ಮೇಕಿಂಗ್ ಮತ್ತು ರಿಸೀವಿಂಗ್ ಉತ್ತಮ ಮಟ್ಟದಲ್ಲಿತ್ತು. ಇಬ್ಬರೂ ಶಟ್ಲರ್ ಗಳು ತಮ್ಮ ವೇಗ ಮತ್ತು ಪ್ರತಿಕ್ರಿಯೆನ್ನು ಉತ್ತಮವಾಗಿ ಪ್ರದರ್ಶಿಸಿದರು. ವಾಯಿತು. ಆರಂಭಿಕ ಗೇಮ್ ನಲ್ಲಿ ಸರ್ವಿಸ್ ಎಕ್ಸ್ ಚೇಂಜ್ ಅಗಿದ್ದರಿಂದ ಲಕ್ಷ್ಯ ಮತ್ತು ಚೌ ಪರಸ್ಪರ ಒಂದಿಂಚೂ ಬಿಟ್ಟುಕೊಡಲಿಲ್ಲ. ಆರಂಭಿಕ ಗೇಮ್ ನಲ್ಲಿ ಚೌ 11-10ರ ಮುನ್ನಡೆ ಸಾಧಿಸುವ ಮೊದಲು 7-7ರ ವರೆಗೆ ಹೋರಾಟ ಮುಂದುವರಿದಿತ್ತು.

ಲಕ್ಷ್ಯಗಿಂತ 10 ವರ್ಷ ಹಿರಿಯರಾದ ಚೌ, ತಮ್ಮ ಆಕ್ರಮಣಕಾರಿ ಆಟದಿಂದ ಭಾರತೀಯ ಶಟ್ಲರ್ ಅನ್ನು ಅಚ್ಚರಿಗೊಳಿಸುತ್ತಿದ್ದರು. ತೈವಾನ್ ನ ಶಟರ್ ಆ ಶಕ್ತಿಯುತ ಸ್ಮ್ಯಾಶ್ ಗಳ ಜತೆಗೆ ನೆಟ್ ಸಮೀಪ ಧಾವಿಸಿ ಭಾರತೀಯನ ಮೇಲೆ ಒತ್ತಡ ಹೇರಿದರ. ದೀರ್ಘ ರ್ಯಾಲಿಗಳನ್ನು ಆಡಲು ಮತ್ತು ಎದುರಾಳಿ ಸುಸ್ತಾಗುವಂತೆ ಮಾಡಲು ಚೌ ಯತ್ನಿಸಿದರು.

ಇದನ್ನೂ ಓದಿ: IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈನಲ್ಲಿ ಮುಕ್ತಾಯ

ಆರಂಭಿಕ ಗೇಮ್ನಲ್ಲಿ ಚೌ 14-9 ರಿಂದ ಮುನ್ನಡೆ ಸಾಧಿಸಿದರು, ನಂತರ ಲಕ್ಷ್ಯ ತನ್ನ ಆಟಕ್ಕೆ ವೇಗ ಕೊಟ್ಟರು. ಹೀಗಾಗಿ ಲಕ್ಷ್ಯ 18-16ರಲ್ಲಿ ಮುನ್ನಡೆ ಸಾಧಿಸಿದರು. ಆದಾಗ್ಯೂ, ಚೌ ತಮ್ಮ ಆಟವನ್ನು ಹೆಚ್ಚಿಸಿದರು ಮತ್ತು ಮೊದಲ ಪಂದ್ಯವನ್ನು 21-19 ರಿಂದ ಗೆದ್ದರು.

ಲಕ್ಷ್ಯ ಏಕಾಗ್ರತೆಯ ಆಟ

ಎರಡನೇ ಗೇಮ್ ನಲ್ಲಿ ಲಕ್ಷ್ಯ ಒತ್ತಡದಲ್ಲಿದ್ದರು . ಆಟದ ಮಧ್ಯದ ವಿರಾಮದ ಸಮಯದಲ್ಲಿ ಚೇರ್ ಅಂಪೈರ್ ನೊಂದಿಗೆ ವಾದಿಸಿದರು. ಭಾರತದ ಕೋಚಿಂಗ್ ಬೆಂಚ್ ನಲ್ಲಿದ್ದ ಪ್ರಕಾಶ್ ಪಡುಕೋಣೆ ಮತ್ತು ವಿಮಲ್ ಕುಮಾರ್ ಅವರು ಲಕ್ಷ್ಯ ಅವರನ್ನು ಶಾಂತಗೊಳಿಸಿದರು. ಏಕಾಗ್ರತೆಯ ಸಣ್ಣ ಕುಸಿತವು ಅವರ ಆಟದ ಮೇಲೆ ಪರಿಣಾಮ ಬೀರಲು ಅವಕಾಶ ನೀಡಲಿಲ್ಲ, ಏಕೆಂದರೆ ಆ ಗೇಮ್ ಅನ್ನು ಅವರು 17 ನಿಮಿಷಗಳಲ್ಲಿ 21-15 ಅಂಕಗಳಿಂದ ಗೆದ್ದರು.

ನಿರ್ಣಾಯಕ ಗೇಮ್​ನಲ್ಲಿ ಲಕ್ಷ್ಯ ತನ್ನ ಸಂವೇದನಾಶೀಲರಾಗಿ ಆಡಿದರು. ಆಕ್ರಮಣಕಾರಿ ಮತ್ತು ಎಚ್ಚರಿಕೆಯ ಉತ್ತಮ ಮಿಶ್ರಣದೊಂದಿಗೆ 11-7 ಮುನ್ನಡೆ ಸಾಧಿಸಿದರು. ಕೊನೆಯಲ್ಲಿ ಆಟವನ್ನು 21-12 ರಲ್ಲಿ ಸುಲಭವಾಗಿ ಮುಗಿಸಿದರು. ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು ಮಾಜಿ ಆಲ್ ಇಂಗ್ಲೆಂಡ್ ಫೈನಲಿಸ್ಟ್ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Continue Reading

ಕ್ರಿಕೆಟ್

IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

IND vs SL ODI: ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿದ ಲಂಕಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 230 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 47.5 ಓವರ್​ಗಳಲ್ಲಿ 230 ರನ್​ಗಳಿಗೆ ಆಲ್​ಔಟ್ ಆಯಿತು. ಭಾರತ ತಂಡದ ಪರ ರೋಹಿತ್ ಶರ್ಮಾ (58 ರನ್​) ಬಾರಿಸಿದ ಅರ್ಧ ಶತಕ ವ್ಯರ್ಥಗೊಂಡಿತು. ಇದೇ ವೇಳೆ ಲಂಕಾ ಪರ ದುನಿತ್ ವೆಲ್ಲಾಲಗಿ ಬ್ಯಾಟಿಂಗ್​ನಲ್ಲಿ ಅಜೇಯ 67 ರನ್ ಹಾಗೂ ಬೌಲಿಂಗ್​ನಲ್ಲಿ ಕೊನೇ 2 ವಿಕೆಟ್ ಉರುಳಿಸುವ ಮೂಲಕ ಆ ತಂಡ ಮರ್ಯಾದೆ ಕಾಪಾಡಿದರು.

VISTARANEWS.COM


on

IND vs SL ODI
Koo

ಕೊಲೊಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಏಕ ದಿನ (IND vs SL ODI ) ಪಂದ್ಯ ಟೈನಲ್ಲಿ ಮುಕ್ತಾಯಗೊಂಡಿದೆ. ಕೊನೇ ಹಂತದಲ್ಲಿ ನಡೆದ ನಾಟಕೀಯ ತಿರುವು ಮೂಲಕ ಲಂಕಾ ತಂಡವವು ಭಾರತಕ್ಕೆ ಗೆಲುವು ನಿರಾಕರಿಸಿತು. ಅಂದ ಹಾಗೆ ಇದು ಲಂಕಾ ಪ್ರವಾಸದಲ್ಲಿ ಸತತವಾಗಿ ಎರಡನೇ ಪಂದ್ಯ ಟೈ ಆಗುತ್ತಿರುವುದು. ಟಿ20 ಸರಣಿಯ ಮೂರನೇ ಪಂದ್ಯ ಟೈ ಆಗಿತ್ತು. ಬಳಿಕ ಸೂಪರ್ ಓವರ್​ನಲ್ಲಿ ಭಾರತ ಗೆಲುವು ಕಂಡಿತ್ತು. ಅದು ಮುಗಿದು ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮೂಡಿ ಬಂದಿರುವುದು ಕಾಕತಾಳೀಯವಾಗಿದೆ. ಶಿವಂ ದುಬೆ ಫೋರ್ ಬಾರಿಸಿದಾಗ ಭಾರತದ ಗೆಲುವು ಬಹುತೇಕ ನಿಶ್ಚಿತವಾಗಿತ್ತು. ಆದರೆ, ನಂತರದ ಎರಡು ಎಸೆತಗಳಲ್ಲಿ ಎರಡು ವಿಕೆಟ್​ ಕಳೆದುಕೊಂಡಾಗ ಭಾರತದ ಡ್ರೆಸಿಂಗ್​ ರೂಮ್ ಆಘಾತಕ್ಕೆ ಒಳಗಾಯಿತು.

ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿದ ಲಂಕಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 230 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 47.5 ಓವರ್​ಗಳಲ್ಲಿ 230 ರನ್​ಗಳಿಗೆ ಆಲ್​ಔಟ್ ಆಯಿತು. ಭಾರತ ತಂಡದ ಪರ ರೋಹಿತ್ ಶರ್ಮಾ (58 ರನ್​) ಬಾರಿಸಿದ ಅರ್ಧ ಶತಕ ವ್ಯರ್ಥಗೊಂಡಿತು. ಇದೇ ವೇಳೆ ಲಂಕಾ ಪರ ದುನಿತ್ ವೆಲ್ಲಾಲಗಿ ಬ್ಯಾಟಿಂಗ್​ನಲ್ಲಿ ಅಜೇಯ 67 ರನ್ ಹಾಗೂ ಬೌಲಿಂಗ್​ನಲ್ಲಿ ಕೊನೇ 2 ವಿಕೆಟ್ ಉರುಳಿಸುವ ಮೂಲಕ ಆ ತಂಡ ಮರ್ಯಾದೆ ಕಾಪಾಡಿದರು.

ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 101ರನ್​ಗಳಿ 5 ವಿಕೆಟ್ ಕಳೆದುಕೊಂಡಿತ್ತು. ಅಲ್ಲಿಂದ ಚೇತರಿಸಿಕೊಂಡು 230 ರನ್​ಗಳ ಹೋರಾಟದ ಮೊತ್ತವನ್ನು ದಾಖಲಿಸಿತು. ದುನಿತ್ ವೆಲ್ಲಾಲಗೆ ಅವರ ಚೊಚ್ಚಲ ಅರ್ಧಶತಕ ಆ ತಂಡಕ್ಕೆ ನೆರವಾಯಿತು. ಇದಕ್ಕೆ ಉತ್ತರವಾಗಿ ರೋಹಿತ್ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಭಾರತವು ಮೊದಲ ಪವರ್ ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 71 ರನ್ ಗಳಿಸಿತ್ತು. ಆದರೆ ನಂತರದಲ್ಲಿ ಶ್ರೀಲಂಕಾದ ಸ್ಪಿನ್ನರ್ ಗಳು ಭಾರತದ ವೇಗಕ್ಕೆ ಬ್ರೇಕ್ ಹಾಕಿದರು. ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದ ವಾಷಿಂಗ್ಟನ್ ಸುಂದರ್ ಬೌಂಡರಿ ಬಾರಿಸಿದ ನಂತರ ಔಟಾದರು. ಅನುಭವಿ ಜೋಡಿ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಹೆಚ್ಚು ಹೊತ್ತು ಆಡಲಿಲ್ಲ. ಶ್ರೀಲಂಕಾ ಅವರನ್ನು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್​ಗೆ ಕಳುಹಿಸಿತು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ್ದ ಭಾರತ ತಂಡ ಉತ್ತಮ ಸ್ಥಿತಿಯಲ್ಲಿ ಇದ್ದಂತೆ ಕಂಡಿತು. ಕೆಎಲ್ ರಾಹುಲ್ (31) ಮತ್ತು ಅಕ್ಷರ್ (33) ಸ್ವಲ್ಪ ಹೊತ್ತು ತಂಡಕ್ಕೆ ಆಧಾರವಾದರು. ಆದರೆ, ಹಸರಂಗ ರಾಹುಲ್ ಔಟ್ ಮಾಡಿದರೆ, ಅಕ್ಷರ್​ ಪಟೇಲ್​ಗೆ ಅಸಲಂಕಾ ಪೆವಿಲಿಯನ್ ದಾರಿ ತೋರಿದರು. ಬಳಿಕ ಕುಲ್ದೀಪ್ ಯಾದವ್​ ಹಸರಂಗ ಎಸೆತಕ್ಕೆ ಔಟಾದಾಗ ಗೆಲುವು ಲಂಕಾ ಕಡೆಗೆ ತಿರುಗಿತ್ತು. ಆದರೆ, ಅದಕ್ಕಿಂತ ಮೊದಲು ಬ್ಯಾಟ್ ಮಾಡಲು ಬಂದ ಶಿವಂ ದುಬೆ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸುವುದರೊಂದಿಗೆ ಭಾರತದ ಪಾಳೆಯದಲ್ಲಿ ನಗು ಮೂಡಿಸಿದರು. ಆದರೆ ಗೆಲ್ಲಲು ಒಂದು ರನ್ ಬೇಕಾಗಿದ್ದಾಗ ಅವರು ಔಟಾದರು. ನಂತರದ ಎಸೆತದಲ್ಲಿ ಅರ್ಶ್​ದೀಪ್ ಸಿಂಗ್ ಔಟಾಗಿ ನಿರ್ಗಮಿಸಿದರು.

ಈ ಫಲಿತಾಂಶದೊಂದಿಗೆ ಲಂಕಾ ತಂಡ ನಿರಾಳವಾಗಲಿದೆ. ಟಿ 20 ಪಂದ್ಯಗಳಲ್ಲಿ ನಾಟಕೀಯ ಕುಸಿತದಿಂದ ತಂಡ ಟೀಕೆಗಳನ್ನು ಎದುರಿಸಿತ್ತು. ಆದರೆ, ಈಗ ಭಾರತವನ್ನೇ ನಾಟಕೀಯವಾಗಿ ಕುಸಿಯುಂತೆ ಮಾಡಿದೆ. ಅದರಲ್ಲೂ ಸ್ಪಿನ್ನರ್​ಗಳು ಆ ತಂಡಕ್ಕೆ ಆಧಾರವಾದರು. ಭಾನುವಾರ ಇತ್ತಂಡಗಳ ನಡುವೆ ಎರಡನೇ ಪಂದ್ಯ ನಡೆಯಲಿದೆ.

Continue Reading

ಪ್ರಮುಖ ಸುದ್ದಿ

High Speed Road Corridor : 8 ಹೊಸ ಹೈಸ್ಪೀಡ್​ ರೋಡ್​ ಕಾರಿಡಾರ್​​​ಗೆ ಒಪ್ಪಿಗೆ ಕೊಟ್ಟ ಕೇಂದ್ರ ಸರ್ಕಾರ

high-speed road corridor :

VISTARANEWS.COM


on

high-speed road corridor
Koo

ಬೆಂಗಳೂರು: ಸರಕು ಸಾಗಾಟ ವ್ಯವಸ್ಥೆಯಲ್ಲಿ ದಕ್ಷತೆ ಹೆಚ್ಚಿಸುವ ಉದ್ದೇಶ ಹಾಗೂ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ದೇಶಾದ್ಯಂತ ಹೊಸ ರಸ್ತೆ ಜಾಲವನ್ನು (High Speed Road Corridor) ಸೃಷ್ಟಿಸಲು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಶುಕ್ರವಾರ ಒಪ್ಪಿಗೆ ಕೊಟ್ಟಿದೆ. ಅಂತೆಯೇ 50,655 ಕೋಟಿ ರೂ.ಗಳ ವೆಚ್ಚದಲ್ಲಿ 936 ಕಿ.ಮೀ ಉದ್ದದ 8ಎಂಟು ಪ್ರಮುಖ ರಾಷ್ಟ್ರೀಯ ಹೈಸ್ಪೀಡ್ ರಸ್ತೆ ಕಾರಿಡಾರ್ ಯೋಜನೆಗಳಿಗೆ ನರೇಂದ್ರ ಮೋದಿ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.

“ಸರಕು ಸಾಗಾಟದಲ್ಲಿ ವೇಗ ಹೆಚ್ಚಸಲು, ವಾಹನಗಳ ದಟ್ಟಣೆಯಿಂದ ಉಂಟಾಗುವ ಸಮಸ್ಯೆ ಕಡಿಮೆ ಮಾಡಲು ಮತ್ತು ದೇಶಾದ್ಯಂತ ರಸ್ತೆ ಸಂಪರ್ಕವನ್ನು ಹೆಚ್ಚಿಸಲು ಒಟ್ಟು 50,000 ಕೋಟಿ ರೂ.ಗಳ ವೆಚ್ಚದಲ್ಲಿ 936 ಕಿ.ಮೀ ಉದ್ದದ 8 ಪ್ರಮುಖ ರಾಷ್ಟ್ರೀಯ ಹೈಸ್ಪೀಡ್ ರಸ್ತೆ ಕಾರಿಡಾರ್ ಯೋಜನೆಗಳಿಗೆ ಕ್ಯಾಬಿನೆಟ್ ಇಂದು ಅನುಮೋದನೆ ನೀಡಿದೆ” ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಆರು ಪಥದ ಆಗ್ರಾ-ಗ್ವಾಲಿಯರ್ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್, ನಾಲ್ಕು ಪಥದ ಖರಗ್ಪುರ-ಮೊರೆಗ್ರಾಮ್ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್, ಆರು ಪಥದ ತರದ್ – ದೀಸಾ – ಮೆಹ್ಸಾನಾ – ಅಹಮದಾಬಾದ್ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್, ನಾಲ್ಕು ಪಥದ ಅಯೋಧ್ಯೆ ರಿಂಗ್ ರಸ್ತೆ, ರಾಯ್ಪುರ-ರಾಂಚಿ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್​ ಮತ್ತು ಪಥಲ್ಗಾಂವ್ ಮತ್ತು ಗುಮ್ಲಾ ನಡುವಿನ ಐದು ಪಥದ ರಸ್ತೆ , ಆರು ಪಥದ ಕಾನ್ಪುರ ರಿಂಗ್ ರಸ್ತೆ, ನಾಲ್ಕು ಪಥದ ಉತ್ತರ ಗುವಾಹಟಿ ಬೈಪಾಸ್ ಮತ್ತು ಅಸ್ತಿತ್ವದಲ್ಲಿರುವ ಗುವಾಹಟಿ ಬೈಪಾಸ್ ವಿಸ್ತರಣೆ ಹಾಗೂ ಪುಣೆ ಬಳಿಯ ನಾಸಿಕ್​ ಪಥ, ಕೇಡ್ ಕಾರಿಡಾರ್ ಇದರಲ್ಲಿ ಸೇರಿದೆ.

“140 ಕೋಟಿ ಭಾರತೀಯರು ಪ್ರಧಾನಿ ಮೋದಿಗೆ ಐತಿಹಾಸಿಕ ಜನಾದೇಶವನ್ನು ನೀಡಿದ್ದಾರೆ. ಅವರಿಗೆ ಧನ್ಯವಾದಗಳು. 60 ವರ್ಷಗಳ ನಂತರ ಸತತ ಮೂರನೇ ಅವಧಿಗೆ ಸರ್ಕಾರ ಅಧಿಕಾರಕ್ಕೆ ಮರಳಿದೆ. ವಾಧ್ವಾನ್​ ಬಂದರಿಗೂ 76,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುವುದು” ಎಂದು ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

ಮೂಲಸೌಕರ್ಯ ಅಭಿವೃದ್ಧಿಯು ದೇಶದ ಆರ್ಥಿಕ ಸಮೃದ್ಧಿಗೆ ಅಡಿಪಾಯವಾಗಿದೆ. ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಲು ನಿರ್ಣಾಯಕವಾಗಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಖರ್ಚು ಮಾಡುವ ಪ್ರತಿ ರೂಪಾಯಿ ಜಿಡಿಪಿಯ ಮೇಲೆ ಸುಮಾರು 2.5-3.0 ಪಟ್ಟು ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಖಾಸಗಿ ಹೂಡಿಕೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಒಟ್ಟು ಬಂಡವಾಳ ಹೂಡಿಕೆ 2013-14ರಲ್ಲಿ 50,000 ಕೋಟಿ ರೂ.ಗಳಿಂದ 2023-24ರಲ್ಲಿ ಸುಮಾರು 3.1 ಲಕ್ಷ ಕೋಟಿ ರೂ.ಗೆ 6 ಪಟ್ಟು ಹೆಚ್ಚಾಗಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹಿಂದಿನ ಯೋಜನೆ ಆಧಾರಿತ ಅಭಿವೃದ್ಧಿ ವಿಧಾನಕ್ಕೆ ಹೋಲಿಸಿದರೆ, ಸ್ಥಿರ ಮಾನದಂಡಗಳು, ಬಳಕೆದಾರರ ಅನುಕೂಲತೆ ಮತ್ತು ಲಾಜಿಸ್ಟಿಕ್ಸ್ ದಕ್ಷತೆಯನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಿ ಸರ್ಕಾರವು ಕಾರಿಡಾರ್ ಆಧಾರಿತ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ವಿಧಾನವನ್ನು ಅಳವಡಿಸಿಕೊಂಡಿದೆ.

Continue Reading
Advertisement
Paris Olympics 2024
ಪ್ರಮುಖ ಸುದ್ದಿ1 hour ago

Paris Oylmpics 2024 : ಹಳದಿ ಬಣ್ಣದ ಜೆರ್ಸಿಯವರನ್ನು ಸೋಲಿಸುವುದೆಂದರೆ ಖುಷಿ; ಹಾಕಿ ತಂಡದ ಗೆಲುವನ್ನು ಮುಂದಿಟ್ಟುಕೊಂಡು ಸಿಎಸ್​​ಕೆಯನ್ನು ಲೇವಡಿ ಮಾಡಿದ ಆರ್​ಸಿಬಿ

ಪ್ರಮುಖ ಸುದ್ದಿ2 hours ago

Lakshya Sen : ಒಲಿಂಪಿಕ್ಸ್​ನ ಸೆಮಿ ಫೈನಲ್​ಗೇರಿ ಇತಿಹಾಸ ನಿರ್ಮಿಸಿದ ಷಟ್ಲರ್ ಲಕ್ಷ್ಯ ಸೇನ್​

IND vs SL ODI
ಕ್ರಿಕೆಟ್2 hours ago

IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

Border Security Force
ಪ್ರಮುಖ ಸುದ್ದಿ3 hours ago

Border Security Force : ಗಡಿಯಲ್ಲಿ ಭಯೋತ್ಪಾದನೆ ಹೆಚ್ಚಳ; ಬಿಎಸ್​ಎಫ್​ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದು ಹಾಕಿದ ಕೇಂದ್ರ ಸರ್ಕಾರ

African Culture
ವಿದೇಶ3 hours ago

Breast Ironing: ಆಫ್ರಿಕಾದಲ್ಲಿದೆ ಬಿಸಿ ವಸ್ತುಗಳಿಂದ ಯುವತಿಯರ ಸ್ತನ ಚಪ್ಪಟೆಗೊಳಿಸುವ ಕ್ರೂರ ಪದ್ಧತಿ!

high-speed road corridor
ಪ್ರಮುಖ ಸುದ್ದಿ3 hours ago

High Speed Road Corridor : 8 ಹೊಸ ಹೈಸ್ಪೀಡ್​ ರೋಡ್​ ಕಾರಿಡಾರ್​​​ಗೆ ಒಪ್ಪಿಗೆ ಕೊಟ್ಟ ಕೇಂದ್ರ ಸರ್ಕಾರ

RRB ALP Recruitment
ಕರ್ನಾಟಕ3 hours ago

RRB ALP Recruitment: ರೈಲ್ವೆ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅವಕಾಶ

Sri Vidyashreesha Theertha Swamiji ashirvachan at Vyasaraja Matha of Sosale village
ಮೈಸೂರು3 hours ago

Mysore News: ದೇವರ ಅನುಗ್ರಹ ದೊರೆತರೆ ಜೀವನದ ಎಲ್ಲ ತಾಪಗಳೂ ನಿವಾರಣೆ: ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ

Minister Shivaraj tangadagi visited and inspected Tungabhadra river side villages
ಮಳೆ3 hours ago

Koppala News: ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು; ನದಿಪಾತ್ರದ ಗ್ರಾಮಗಳಿಗೆ ತಂಗಡಗಿ ಭೇಟಿ

Space mission
ಪ್ರಮುಖ ಸುದ್ದಿ4 hours ago

Space mission : ಇಂಡೊ- ಯುಎಸ್​ ಬಾಹ್ಯಾಕಾಶ ಯಾನಕ್ಕೆ ಭಾರತದ ಶುಭಾಂಶು ಶುಕ್ಲಾ ‘ಪ್ರಧಾನ ಗಗನಯಾತ್ರಿ’

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌