IND vs AUS T20: ಎಮೋಜಿ ಮೂಲಕವೇ ಆಯ್ಕೆ ಸಮಿತಿಗೆ ತಿವಿದ ಯಜುವೇಂದ್ರ ಚಹಲ್ Vistara News

ಕ್ರಿಕೆಟ್

IND vs AUS T20: ಎಮೋಜಿ ಮೂಲಕವೇ ಆಯ್ಕೆ ಸಮಿತಿಗೆ ತಿವಿದ ಯಜುವೇಂದ್ರ ಚಹಲ್

ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಮಾಡದ ಸಿಟ್ಟಿನಲ್ಲಿ ಯಜುವೇಂದ್ರ ಚಹಲ್(Yuzvendra Chahal)​ ಅವರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

VISTARANEWS.COM


on

Yuzvendra Chahal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ(IND vs AUS T20) ಆಯ್ಕೆಯಾಗದ ಯಜುವೇಂದ್ರ ಚಹಲ್(Yuzvendra Chahal)​ ಅವರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಹಾಕಿ ಅಸಮಾಧಾನ ಹೊರಹಾಕಿದ್ದಾರೆ. ಅಳುತ್ತಿರುವ ಎಮೋಜಿಯನ್ನು ಹಾಕಿದ್ದಾರೆ. ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Post)​ ಆಗಿದೆ.

ಆಸೀಸ್​ ವಿರುದ್ಧದ ಟಿ20 ಸರಣಿಗೆ ಸೋಮವಾರ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿತ್ತು. ಏಷ್ಯಾಕಪ್​ ಮತ್ತು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಯಜುವೇಂದ್ರ ಚಹಲ್​, ಸಂಜು ಸ್ಯಾಮ್ಸನ್​ ಮತ್ತು ಭುವನೇಶ್ವರ್​ ಕುಮಾರ್​ ಅವರು ಈ ಸರಣಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಆಯ್ಕೆ ಸಮಿತಿ ಮುಂದಿನ ವರ್ಷದ ಟಿ20 ವಿಶ್ವಕಪ್​ ದೃಷ್ಟಿಯಲ್ಲಿ ಯುವ ಆಟಗಾರರಿಗೆ ಮಣೆ ಹಾಕಿತು. ಇದರಿಂದ ಬೇಸರಗೊಂಡ ಚಹಲ್​ ಅವರು ಪೋಸ್ಟ್​ ಒಂದನ್ನು ಮಾಡುವ ಮೂಲಕ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ IND vs AUS Final: ವಿಶ್ವಕಪ್​ ಸೋಲಿನ ನೋವು ಮರೆಯಲು ಒಂದು ದಿನ ರಜೆ ಕೊಟ್ಟ ಕಂಪನಿ

ಚಹಲ್​ ಮಾಡಿರುವ ಪೋಸ್ಟ್​

ಕೆಲವು ವಿಷಯಗಳು ನಮ್ಮ ಕೈಯಲ್ಲಿಲ್ಲ; ಚಹಲ್​

ವಿಶ್ವಕಪ್​ಗೆ ಆಯ್ಕೆಯಾಗದಿದ್ದಾಗ ಕೂಡ ಚಹಲ್​ ಅವರು ಇದೇ ರೋತಿಯ ಪೋಸ್ಟ್​ ಮಾಡಿ ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದರು. “ಕೆಲವು ವಿಷಯಗಳು ನಮ್ಮ ಕೈಯಲ್ಲಿಲ್ಲ, ಆದ್ದರಿಂದ ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನನ್ನ ಗಮನವು ಅತ್ಯುತ್ತಮ ಪ್ರದರ್ಶನವನ್ನು ನೀಡುವುದು ಮತ್ತು ನಾನು ಆಟವನ್ನು ಆಡುವವರೆಗೂ ಉತ್ತಮ ಪ್ರದರ್ಶನ ನೀಡುವುದು. ಯಾವುದೇ ಪಂದ್ಯವಾಗಿರಲಿ, ನನ್ನ ಗುರಿ ಶೇಕಡಾ 100 ಉತ್ತಮ ಪ್ರದರ್ಶನ ನೀಡುವುದು. ಆಯ್ಕೆ ನಮ್ಮ ಕೈಯಲ್ಲಿಲ್ಲ “ಎಂದು ಹೇಳಿದ್ದರು. ಇದು ಮಾತ್ರವಲ್ಲದೆ ಆಸೀಸ್​ ವಿರುದ್ಧದ ಸರಣಿಯಲ್ಲಿ ಅಶ್ವಿನ್ ಅವರು ಮೂರು ವಿಕೆಟ್​ ಕಿತ್ತ ಸಂದರ್ಭದಲ್ಲಿ ಟ್ವಿಟ್​ ಮಾಡಿ, ಲೆಜೆಂಡರಿ ಆಟಗಾರ ಎಂದು ಹೇಳಬೇಕಿಲ್ಲ ಎಂಬ ಪೋಸ್ಟ್​ ಮಾಡಿದ್ದರು.

ಸಂಜು ಸ್ಯಾಮ್ಸನ್(Sanju Samson)​ ಅವರನ್ನು ಆಯ್ಕೆ ಮಾಡದ ಕಾರಣ ಅವರ ಅಭಿಮಾನಿಗಳು ಕೂಡ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜು ಅವರನ್ನು ಬೇಕಂತಲೇ ಟಾರ್ಗೆಟ್​ ಮಾಡಿ ಈ ರೀತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಐರ್ಲೆಂಡ್ ಸರಣಿಯಲ್ಲಿ ವಿಕೆಟ್​ ಕೀಪಿಂಗ್​ ಜತೆಗೆ ಬ್ಯಾಟಿಂಗ್​ ಸಹ ಮಾಡಿದ್ದ ಸಂಜು ಸ್ಯಾಮ್ಸನ್​ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಜಿತೇಶ್ ಶರ್ಮಾ ಅವರನ್ನೇ ಪ್ರಮುಖ ಕೀಪರ್​ ಆಗಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಜು ಅವರಿಗೆ ಈ ರೀತಿ ಅನ್ಯಾಯವಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಉತ್ತಮ ಫಾರ್ಮ್​ನಲ್ಲಿದ್ದರೂ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ.

ಇದನ್ನೂ ಓದಿ IND vs AUS T20: ಭಾರತ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸೀಸ್​

ಭಾರತ ತಂಡ

ಸೂರ್ಯಕುಮಾರ್‌ ಯಾದವ್‌ (ನಾಯಕ), ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಜಿತೇಶ್‌ ಶರ್ಮ, ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌, ಶಿವಂ ದುಬೆ, ರವಿ ಬಿಷ್ಣೋಯಿ, ಆರ್ಷದೀಪ್‌ ಸಿಂಗ್‌, ಪ್ರಸಿದ್ಧ್ ಕೃಷ್ಣ, ಆವೇಶ್‌ ಖಾನ್‌, ಮುಕೇಶ್‌ ಕುಮಾರ್‌.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

IPL 2024 : ಐಪಿಎಲ್ ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​​ರೌಂಡರ್​ಗಳು ಇವರು

IPL 2024 : ಫ್ರಾಂಚೈಸಿಗಳು ತಮ್ಮಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿಗಾಗಿ ಆಲ್​ರೌಂಡರ್​ಗಳನ್ನು ನೆಚ್ಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

VISTARANEWS.COM


on

IPL Auction 1
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೆಚ್ಚು ಯಶಸ್ಸು ಪಡೆಯುವುದು ಆಲ್​ರೌಂಡರ್​ಗಳು. ಹೀಗಾಗಿ ಅವರಿಗೆ ಹರಾಜಿನಲ್ಲಿ ಹಚ್ಚು ಬೇಡಿಕೆ ಇರುತ್ತದೆ. ಚಾಂಪಿಯನ್ ತಂಡಗಳಂತೂ ಆಲ್​ರೌಂಡರ್​ಗಳ ದೊಡ್ಡ ಬಣವನ್ನೇ ಹೊಂದಿತ್ತು. ಗುಜರಾತ್ ಟೈಟಾನ್ಸ್ ತಂಡವನ್ನು ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನಲ್ಲಿ ರವೀಂದ್ರ ಜಡೇಜಾ ಅವರ ಪಾತ್ರ ದೊಡ್ಡದಾಗಿದೆ. ಹೀಗಾಗಿ ಐಪಿಎಲ್ 2024 ಹರಾಜಿಗೆ ಕೇವಲ ಎರಡು ವಾರಗಳು ಬಾಕಿ ಇರುವಾಗ, ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​ರೌಂಡರ್​ಗಳ ಕುರಿತು ನೋಡೋಣ.

ಪ್ರಮುಖ ಆಲ್​ರೌಂಡರ್​ಗಳ ವಿವರ ಇಂತಿದೆ

  • ಶಾರ್ದೂಲ್ ಠಾಕೂರ್: ಭಾರತದ ಬೌಲಿಂಗ್ ಆಲ್ರೌಂಡರ್
  • ಶಾರುಖ್ ಖಾನ್ ಭಾರತದ ಬ್ಯಾಟಿಂಗ್ ಆಲ್ರೌಂಡರ್
  • ಅಜ್ಮತುಲ್ಲಾ ಒಮರ್ಜೈ ಅಫ್ಘಾನಿಸ್ತಾನ ಬ್ಯಾಟಿಂಗ್ ಆಲ್​​ರೌಂಡರ್​
  • ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ಬೌಲಿಂಗ್ ಆಲ್ರೌಂಡರ್
  • ಡೇವಿಡ್ ವಿಲ್ಲಿ, ಇಂಗ್ಲೆಂಡ್ ಬೌಲಿಂಗ್ ಆಲ್ರೌಂಡರ್
  • ಕೈಲ್ ಜೇಮಿಸನ್, ನ್ಯೂಜಿಲೆಂಡ್ ಬೌಲಿಂಗ್ ಆಲ್ರೌಂಡರ್
  • ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ಬ್ಯಾಟಿಂಗ್ ಆಲ್ರೌಂಡರ್
  • ವನಿಂದು ಹಸರಂಗ ಶ್ರೀಲಂಕಾದ ಬೌಲಿಂಗ್ ಆಲ್ರೌಂಡರ್
  • ಮೈಕಲ್ ಬ್ರೇಸ್ವೆಲ್, ನ್ಯೂಜಿಲೆಂಡ್ ಬ್ಯಾಟಿಂಗ್ ಆಲ್ರೌಂಡರ್
  • ಒಡಿಯನ್ ಸ್ಮಿತ್ ವೆಸ್ಟ್ ಇಂಡೀಸ್ ಬೌಲಿಂಗ್ ಆಲ್ರೌಂಡರ್

ಬೌಲಿಂಗ್ ಆಲ್ ರೌಂಡರ್ ಗಳು

ಶಾರ್ದೂಲ್ ಠಾಕೂರ್, ಪ್ಯಾಟ್ ಕಮಿನ್ಸ್, ಡೇವಿಡ್ ವಿಲ್ಲಿ, ಕೈಲ್ ಜೇಮಿಸನ್, ವನಿಂದು ಹಸರಂಗ ಮತ್ತು ಒಡಿಯನ್ ಸ್ಮಿತ್ ಈ ವರ್ಗಕ್ಕೆ ಸೇರುತ್ತಾರೆ. ಸಾಮಾನ್ಯವಾಗಿ ಈ ಕ್ರಿಕೆಟಿಗರು ತಮ್ಮ ಬೌಲಿಂಗ್ ಸಾಮರ್ಥ್ಯದ ಮೂಲಕ ಯಾವುದೇ ಇಲೆವೆನ್​ಗೆ ಸೇರುವ ಅವಕಾಶನವನ್ನು ಹೊಂದಿರುತ್ತಾರೆ.

ಪ್ಯಾಟ್ ಕಮಿನ್ಸ್ ಬೌಲಿಂಗ್ ಆಲ್ರೌಂಡರ್​​ಗೆ ಉತ್ತಮ ಉದಾಹರಣೆ. ಟೂರ್ನಿಯ 6 ಆವೃತ್ತಿಗಳಲ್ಲಿ ಆಡಿರುವ ಅವರು 42 ಪಂದ್ಯಗಳಲ್ಲಿ 45 ವಿಕೆಟ್ ಪಡೆದಿದ್ದಾರೆ. ಐಪಿಎಲ್​​ನಲ್ಲಿ ಅವರ ಬ್ಯಾಟಿಂಗ್ ಅಷ್ಟೊಂದು ಬಲವಾಗಿ ಇರದ ಹೊರತಾಗಿಯೂ ಒಮ್ಮೊಮ್ಮೆ ಅಚ್ಚರಿ ಮೂಡಿಸಿದ್ದೂ ಇದೆ. ವೇಗದ ಬೌಲಿಂಗ್ ಆಲ್ರೌಂಡರ್ 152.21 ಸರಾಸರಿಯಲ್ಲಿ ಬ್ಯಾಟ್​ ಮಾಡಿದ್ದಾರೆ. ಐಪಿಎಲ್​​ನಲ್ಲಿ 3 ನೇ ಅತಿವೇಗ ವೇಗದ ಅರ್ಧ ಶತಕ ಬಾರಿಸಿದ್ದಾರೆ.

ಬ್ಯಾಟಿಂಗ್ ಆಲ್ರೌಂಡರ್​ಗಳು

ಮೈಕೆಲ್ ಬ್ರೇಸ್ವೆಲ್, ಶಾರುಖ್ ಖಾನ್, ಅಜ್ಮತುಲ್ಲಾ ಒಮರ್ಜೈ ಮತ್ತು ಶಕೀಬ್ ಅಲ್ ಹಸನ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ಆಲ್ರೌಂಡರ್​ಗಳಿಗಿಂತ ಭಿನ್ನವಾಗಿ ಈ ಆಟಗಾರರು ಯಾವಾಗಲೂ ಅಗ್ರ ಕ್ರಮಾಂಕದ ಬ್ಯಾಟ್ಸ್​​ಮನ್​ಗಳಾಗಿರುವುದಿಲ್ಲ. ಅಜ್ಮತುಲ್ಲಾ ಮತ್ತು ಶಕೀಬ್ ತಮ್ಮ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಸಾಮರ್ಥ್ಯಗಳ ಆಧಾರದ ಮೇಲೆ ತಂಡವನ್ನು ರಚಿಸಬಹುದಾದರೂ ಬ್ರೇಸ್ವೆಲ್ ಮತ್ತು ಶಾರುಖ್ ಕೆಳ ಕ್ರಮಾಂಕದ ಬ್ಯಾಟರ್​ಗಳಾಗಿ ಮಾತ್ರ ಕರ್ತವ್ಯ ನಿರ್ವಹಿಸಬಲ್ಲರು.

ಇದನ್ನೂ ಓದಿ : Rahul Dravid : ರಿಚ್ಮಂಡ್​ ಸರ್ಕಲ್ ಫ್ಲೈಓವರ್​ ಕೆಳಗಡೆ ಕ್ರಿಕೆಟ್​ ಅಡಿದ ದ್ರಾವಿಡ್​, ಕುಂಬ್ಳೆ, ಶ್ರೀನಾಥ್​…

ಅಜ್ಮತುಲ್ಲಾ ಒಮರ್ಜೈ ಅಗ್ರ ಕ್ರಮಾಂಕಕ್ಕೆ ಸಂಪೂರ್ಣವಾಗಿ ಸರಿಹೊಂದುತ್ತಾರೆ. 2023 ರ ಏಕ ದಿನ ವಿಶ್ವ ಕಪ್​ನಲ್ಲಿ ಅವರು 9 ಪಂದ್ಯಗಳಲ್ಲಿ 350 ಕ್ಕೂ ಹೆಚ್ಚು ರನ್ ಮತ್ತು 7 ವಿಕೆಟ್​​ಗಳನ್ನು ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ನೂರ್ ಅಹ್ಮದ್ ಮತ್ತು ಫಜಲ್ಹಕ್ ಫಾರೂಕಿ ಅವರಿಗಿಂತ ನಂತರದಲ್ಲಿ 23 ವರ್ಷದ ವೇಗಿ ಪಂದ್ಯಾವಳಿಯಲ್ಲಿ ತಮ್ಮ ದೇಶದ ಎರಡನೇ ಅತಿ ಹೆಚ್ಚು ರನ್ ಸ್ಕೋರರ್ ಮತ್ತು ಐದನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ. ಟಿ 20 ಯಲ್ಲಿ ಅವರ ದಾಖಲೆಯೂ ತುಂಬಾ ಕಳಪೆಯಾಗಿಲ್ಲ. ಆಡಿದ 62 ಪಂದ್ಯಗಳಲ್ಲಿ, ಅವರು ಬ್ಯಾಟ್​ನಿಂದ 129.51 ಸರಾಸರಿಯಲ್ಲಿ ರನ್​ ಮಾಡಿದ್ದಾರೆ. 59 ವಿಕೆಟ್​​ಗಳನ್ನು ಪಡೆದಿದ್ದಾರೆ.

Continue Reading

ಕ್ರಿಕೆಟ್

IPL 2024 : ಐಪಿಎಲ್​ ಹರಾಜಿನಲ್ಲಿ ಆರ್​ಸಿಬಿ ಆಯ್ಕೆಮಾಡಿದ ಅತ್ಯುತ್ತಮ ಆಟಗಾರರ ವಿವರ ಇಲ್ಲಿದೆ

IPL 2024 : ಆರ್​ಸಿಬಿಯ ಅತ್ಯುತ್ತಮ ಆಯ್ಕೆಗಳಲ್ಲಿ ನಾಲ್ಕು ಬ್ಯಾಟರ್​ಗಳಲ್ಲಿ ಒಬ್ಬರು ಬೌಲರ್ ಇದ್ದಾರೆ. ಅವರು ಎಲ್ಲ ಕಾಲಕ್ಕೂ ಮಿಂಚಿದ್ದಾರೆ.

VISTARANEWS.COM


on

RCB Team
Koo

ಬೆಂಗಳೂರು: ಈ ಹಿಂದಿನ ಐಪಿಎಲ್ ಹರಾಜುಗಳಲ್ಲಿ (IPL 2024) ರಾಯಲ್ ಚಾಲೆಂಜರ್ಸ್ (RCB) ಗೆ ಅದ್ಭುತಗಳನ್ನು ಮಾಡಿದ ಆಟಗಾರರನ್ನು ಆಯ್ಕೆ ಮಾಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್​​ನ ಕಳೆದ 16 ಆವೃತ್ತಿಗಳಲ್ಲಿ, ಹಲವಾರು ಆಟಗಾರರು ಈ ತಂಡಕ್ಕೆ ತಮ್ಮ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವನ್ನು ನೀಡಿದ್ದಾರೆ. ಈ ಆಟಗಾರರು ತಮಗೆ ನೀಡಲಾದ ಬೆಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ನ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಆರ್​ಸಿಬಿ ಒಂದಾಗಲು ಅವರೆಲ್ಲರೂ ಸಹಾಯ ಮಾಡಿದ್ದಾರೆ. ಆದ್ದರಿಂದ, ಐಪಿಎಲ್ ಹರಾಜು ಇತಿಹಾಸದಲ್ಲಿ ಆರ್​ಸಿಬಿಯ ಅತ್ಯುತ್ತಮ ಆಯ್ಕೆಗಳು ಯಾವುದೆಂದು ನೋಡೋಣ.

  • ವಿರಾಟ್ ಕೊಹ್ಲಿ 2008 $30,000
  • ಎಬಿ ಡಿವಿಲಿಯರ್ಸ್ 2011 – 5.6 ಕೋಟಿ ರೂ.
  • ಕ್ರಿಸ್ ಗೇಲ್ 2011 – 2.9 ಕೋಟಿ ರೂ.
  • ಯಜುವೇಂದ್ರ ಚಾಹಲ್ 2014 – 10 ಲಕ್ಷ ರೂ.
  • ಗ್ಲೆನ್ ಮ್ಯಾಕ್ಸ್ವೆಲ್ 2021 – 14.25 ಕೋಟಿ ರೂ.

ಯಾವ ವರ್ಷ ಯಾವ ಆಟಗಾರ

ವಿರಾಟ್ ಕೊಹ್ಲಿ: ಕೇವಲ 30 ಸಾವಿರ ಡಾಲರ್​​ಗೆ ಆಯ್ಕೆಯಾದ ಕೊಹ್ಲಿ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶ್ರೇಷ್ಠ ಆಟಗಾರ ಹಾಗೂ ಅವಿಭಾಗ್ಯ ಅಂಗ. ಆರ್​ಸಿಬಿ ಎಂದರೆ ಕೊಹ್ಲಿ, ಕೊಹ್ಲಿ ಎಂದರೆ ಆರ್​​ಸಿಬಿ ಎನ್ನುವಷ್ಟು ಮಟ್ಟಕ್ಕಿದೆ. ಅವರು ತಂಡಕ್ಕೆ ಕೊಟ್ಟ ಹಣವನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಿದ್ದಾರೆ ಎನ್ನಬಹುದು. ಲೀಗ್​ನ 16 ಆವೃತ್ತಿಗಳಲ್ಲಿ ಆಡಿರುವ ಕೊಹ್ಲಿ ಈ ಬಾರಿಯೂ ಅದೇ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿದ್ದಾರೆ. 237 ಪಂದ್ಯಗಳನ್ನಾಡಿರುವ ಕೊಹ್ಲಿ 6, 624 ರನ್ ಬಾರಿಸಿದ್ದಾರೆ. ಇದರಲ್ಲಿ ಐದು ಶತಕಗಳು ಹಾಗೂ 44 ಫೋರ್​ಗಳು ಸೇರಿಕೊಂಡಿವೆ.

ಎಬಿ ಡಿವಿಲಿಯರ್ಸ್: ಸಾರ್ವಕಾಲಿಕ ಅತ್ಯುತ್ತಮ ಟಿ 20 ಬ್ಯಾಟರ್​​ ಎಂದು ಪರಿಗಣಿಸಲ್ಪಟ್ಟ ಎಬಿ ಡಿವಿಲಿಯರ್ಸ್ 2011 ರಿಂದ 2021 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 157 ಪಂದ್ಯಗಳನ್ನು ಆಡಿದ್ದಾರೆ. 360 ಡಿಗ್ರಿ ಬ್ಯಾಟ್ಸ್ಮನ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಈ ಫ್ರಾಂಚೈಸಿಯಲ್ಲಿಯೇ ಕೊನೆಗೊಳಿಸಿದ್ದಾರೆ. 158.33 ಸ್ಟ್ರೈಕ್ ರೇಟ್​ನಲ್ಲಿ ಅವರು 4522 ರನ್ ಗಳಿಸಿದ್ದಾರೆ.

ಕ್ರಿಸ್ ಗೇಲ್: ಯೂನಿವರ್ಸಲ್ ಬಾಸ್ ಟಿ 20 ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಗೇಲ್ 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು ಮತ್ತು ಮುಂದಿನ 7 ಋತುಗಳಲ್ಲಿ ಎಲ್ಲ ತಂಡಗಳ ಬೌಲರ್​ಗಳ ಮೇಲೆ ಪ್ರಾಬಲ್ಯ ಸಾಧಿಸಿದರು. 43.29ರ ಸರಾಸರಿಯಲ್ಲಿ 154.40ರ ಸ್ಟ್ರೈಕ್ ರೇಟ್​ನಲ್ಲಿ ಅವರು 3420 ರನ್ ಗಳಿಸಿದ್ದಾರೆ. ಅವರು ಕೊನೆಯಲ್ಲಿ ಪಂಜಾಬ್​ ಕಿಂಗ್ಸ್​ ಸೇರಿಕೊಂಡರು. ಅಲ್ಲಿಂದ ಅವರು ನಿವೃತ್ತಿ ಪಡೆದುಕೊಂಡರು.

ಯಜುವೇಂದ್ರ ಚಹಲ್: 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯುಜ್ವೇಂದ್ರ ಚಹಲ್ ಅವರನ್ನು ಖರೀದಿಸಿತು. ಆ ವೇಳೆ ಅವರು ಕೇವಲ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಲೆಗ್ ಸ್ಪಿನ್ನರ್​ ಫ್ರಾಂಚೈಸಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿ 100ಕ್ಕೂ ಹೆಚ್ಚು ವಿಕೆಟ್ ಪಡೆದ ಆರ್​ಸಿಬಿ ಬೌಲರ್ ಎಂಬ ಹೆಗ್ಗಳಿಕೆಗೆ ಚಹಲ್ ಪಾತ್ರರಾಗಿದ್ದಾರೆ. ಆದರೆ, ಅವರು ಬಳಿಕ ಕೈಬಿಡಲಾಯಿತು. ಅವರು ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡು ಮಿಂಚುತ್ತಿದ್ದಾರೆ. ಅವರನ್ನು ತಂಡ ಕೈಬಿಟ್ಟಿರುವುದು ದೊಡ್ಡ ಮಟ್ಟದ ಅಚ್ಚರಿಕೆ ಕಾರಣವಾಗಿತ್ತು. ಹಿರಿಯ ಆಟಗಾರನಾದ ವಿರಾಟ್​ ಕೊಹ್ಲಿ ಅಸಮಾಧಾನಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ : IPL 2024 : ರೋಹಿತ್​, ಪಾಂಡ್ಯ ಅಲ್ಲ; ಮುಂಬಯಿ ಇಂಡಿಯನ್ಸ್​ ತಂಡಕ್ಕೆ ಈ ಬಾರಿ ಹೊಸ ನಾಯಕ?

ಗ್ಲೆನ್ ಮ್ಯಾಕ್ಸ್ವೆಲ್: ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ಬ್ಯಾಟರ್​​ 2021 ರಲ್ಲಿ ಫ್ರಾಂಚೈಸಿಗೆ ಸೇರಿದರು. ಕೇವಲ 42 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್​ವೆಲ್ ಈಗಾಗಲೇ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರ 1214 ರನ್​ಗಳ ದಾಖಲೆಯ 161.43 ಸ್ಟ್ರೈಕ್ ರೇಟ್​ನ ಬ್ಯಾಟಿಂಗ್​ನಲ್ಲಿ ಬಂದಿವೆ. ಇದು ಆರ್​ಸಿಬಿ ತಂಡದ ಇತಿಹಾಸಲ್ಲಿಯೇ ಅತಿ ಹೆಚ್ಚು.

Continue Reading

ಕ್ರಿಕೆಟ್

Rahul Dravid : ರಿಚ್ಮಂಡ್​ ಸರ್ಕಲ್ ಫ್ಲೈಓವರ್​ ಕೆಳಗಡೆ ಕ್ರಿಕೆಟ್​ ಅಡಿದ ದ್ರಾವಿಡ್​, ಕುಂಬ್ಳೆ, ಶ್ರೀನಾಥ್​…

Rahul Dravid: ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಹಲವರ ಚಿತ್ರಗಳನ್ನು ಫೈಓವರ್​ಗಳ ಪಿಲ್ಲರ್​ಗಳಲ್ಲಿ ಬಿಡಿಸಿ ಅಭಿಮಾನಿಗಳಿಗೆ ಖುಷಿ ಕೊಡಲಾಗಿದೆ.

VISTARANEWS.COM


on

Rahul Dravid
Koo

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರಿಕೆಟ್​ ಸಂಸ್ಕೃತಿ ವ್ಯಾಪಕವಾಗಿದೆ. ಈ ನಗರದಲ್ಲಿ ಕ್ರಿಕೆಟ್ ಆಟವನ್ನು ಆಟವನ್ನು ಹಾಗೂ ಆಟಗಾರರನ್ನು ಆರಾಧಿಸುತ್ತಾರೆ. ಹೀಗಾಗಿ ಬೆಂಗಳೂರು ಕೇಂದ್ರಿದವಾಗಿ ಕರ್ನಾಟಕದಿಂದ ಹಲವಾರು ಅಂತಾರಾಷ್ಟ್ರಿಯ ಕ್ರಿಕೆಟಿಗರು ಮೂಡಿ ಬಂದಿದ್ದಾರೆ. ಅವರೆಲ್ಲರೂ ಕ್ರಿಕೆಟ್​ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು. ಗುಂಡಪ್ಪ ವಿಶ್ವನಾಥ್​, ಜಾವಗಲ್​ ಶ್ರೀನಾಥ್​, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ಅನಿಲ್​ ಕುಂಬ್ಳೆ ಈ ಪಟ್ಟಿಯ ಅಗ್ರಗಣ್ಯರು. ಇವರೆಲ್ಲರೂ ಸೇರಿಕೊಂಡು ಈಗ ಬೆಂಗಳೂರಿನ ಹೃದಯ ಭಾಗದಲ್ಲಿರುವ ರಿಚ್ಮಂಡ್​ ಸರ್ಕಲ್​ ಬಳಿ ಇರುವ ಫ್ಳೈಓವರ್​ ಕೆಳಗೆ ಆಡಿದರೆ ಹೇಗಿರುತ್ತದೆ. ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅದು ಖಂಡಿತವಾಗಿಯೂ ಹಬ್ಬ. ಹಾಗಾದರೆ ಖಂಡಿತ ಬಂದು ನೋಡಿ. ಅವರೆಲ್ಲರೂ ಇಲ್ಲಿ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ.

ಅಂದ ಹಾಗೆ ಅವರು ನಿಜವಾಗಿಯೂ ಕ್ರಿಕೆಟ್​​ ಆಡುತ್ತಿಲ್ಲ. ಅವರ ಚಿತ್ರವನ್ನು ಅಲ್ಲಿನ ಪಿಲ್ಲರ್​ಗಳಲ್ಲಿ ಬಿಡಿಸಲಾಗಿದೆ. ಹಾಗೆಂದು ನಿರಾಸೆಯಾಗುವುದು ಬೇಡ. ಆ ಚಿತ್ರಗಳನ್ನು ನೋಡುವುದು ಕೂಡ ಖುಷಿಯ ವಿಚಾರವೇ ಸರಿ. ಫ್ಲೈಓವರ್ ಗಳ ಕೆಳಗಿರುವ ಜಾಗವನ್ನು ಹೆಚ್ಚಿಸುವ ಉದ್ದೇಶದಿಂದ ‘ಬ್ರಾಂಡ್ ಬೆಂಗಳೂರು’ ಉಪಕ್ರಮದ ಭಾಗವಾಗಿ ಬೆಂಗಳೂರಿನ ಫ್ಲೈಓವರ್ ನ ಕಂಬಗಳ ಮೇಲೆ ರಾಜ್ಯದ ಕ್ರಿಕೆಟ್ ಐಕಾನ್ ಗಳನ್ನು ಭಿತ್ತಿಚಿತ್ರಗಳನ್ನು ಬರೆಯಲಾಗಿದೆ. ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ, ವಿ ಸುಬ್ರಮಣ್ಯ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾವಗಲ್ ಶ್ರೀನಾಥ್ ಅವರಂತಹ ಪೂಜ್ಯ ಆಟಗಾರರಿಗೆ ಈ ಭಿತ್ತಿಚಿತ್ರಗಳ ಮೂಲಕ ಗೌರವ ಸಲ್ಲಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಹೊರತುಪಡಿಸಿ ಸಾರ್ವಜನಿಕ ಸ್ಥಳದಲ್ಲಿ ಇಂತಹ ಉಪಕ್ರಮ ಕೈಗೊಂಡಿರುವುದು ಇದೇ ಮೊದಲು. ಹೀಗಾಗಿ ಬೆಂಗಳೂರಿನ ಕ್ರಿಕೆಟ್​ ಪ್ರೇಮಿಗಳಿಗೆ ಇದು ಖುಷಿಯ ವಿಚಾರವಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ ಲಾಭರಹಿತ ಸಂಸ್ಥೆಯಾದ ಇಂಡಿಯಾ ರೈಸಿಂಗ್ ಟ್ರಸ್ಟ್ (ಐಆರ್​ಟಿ) ಈ ಭಿತ್ತಿಚಿತ್ರಗಳನ್ನು ಬಿಡಿಸಿದೆ. ಕರ್ನಾಟಕದ ಪ್ರಸಿದ್ಧ ಕ್ರಿಕೆಟಿಗರ ಅಸಾಧಾರಣ ಕೌಶಲ್ಯ ಮತ್ತು ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಈ ಚಿತ್ರಗಳನ್ನು ಮಾಡಲಾಗಿದೆ.

ಜಿ.ಆರ್.ವಿಶ್ವನಾಥ್ ಅವರ ಸೊಗಸಾದ ಸ್ಕ್ವೇರ್​ ಜಟ್, ಬಿ.ಎಸ್.ಚಂದ್ರಶೇಖರ್ ಅವರ ಅಸಾಮಾನ್ಯ ಲೆಗ್ ಸ್ಪಿನ್, ಶಾಂತಾ ರಂಗಸ್ವಾಮಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಇಎಎಸ್ ಪ್ರಸನ್ನ ಅವರ ಅಪರೂಪದ ಸ್ಪಿನ್ ಬೌಲಿಂಗ್​ ಕೌಶಲವನ್ನು ಚಿತ್ರಗಳ ಮೂಲಕ ವಿವರಿಸಲಾಗಿದೆ.

ಇದನ್ನೂ ಓದಿ : Chetan Sakariya : ಹರಾಜಿಗೆ ಮೊದಲೇ ಎಂಗೇಜ್ಮೆಂಟ್​ ಮಾಡಿಕೊಂಡ ಐಪಿಎಲ್​ನ ಸ್ಟಾರ್​ ಬೌಲರ್​

ಡಬಲ್ ರೋಡ್ (ಕೆಎಚ್ ರಸ್ತೆ) ಫ್ಲೈಓವರ್ ಮೂಲಕ ಹಾದುಹೋಗುವಾಗ, ಜನರು ಕರ್ನಾಟಕದ ಈ ಪ್ರಸಿದ್ಧ ಕ್ರಿಕೆಟಿಗರ ಪ್ರಯಾಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹೆಚ್ಚುವರಿಯಾಗಿ. ಈ ಹಿಂದೆ ಡಬಲ್ ರೋಡ್ ಜಂಕ್ಷನ್ ಎಂದು ಕರೆಯಲ್ಪಡುತ್ತಿದ್ದ ರಿಚ್ಮಂಡ್ ಸರ್ಕಲ್ ಫ್ಲೈಓವರ್ ಕೆಳಗಿರುವ ಜಾಗವನ್ನು ‘ಕ್ರೀಡಾ ಜಂಕ್ಷನ್’ ಎಂದು ಮರುನಾಮಕರಣ ಮಾಡಲಾಗಿದೆ.

ಈ ಸ್ಥಳ ಏಕೆ?

ಚಿನ್ನಸ್ವಾಮಿ ಕ್ರೀಡಾಂಗಣ (ಕೆಎಸ್ ಸಿಎ), ಕಂಠೀರವ ಕ್ರೀಡಾಂಗಣ, ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್ ಎಚ್ ಎ), ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣ ಮತ್ತು ಕಬ್ಬನ್ ಪಾರ್ಕ್ ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (ಕೆಎಸ್ ಎಲ್ ಟಿಎ) ನಗರದ ಐದು ಪ್ರಮುಖ ಕ್ರೀಡಾ ಸ್ಥಳಗಳು ಫ್ಲೈಓವರ್ ನ ಒಂದು ಮೈಲಿ ವ್ಯಾಪ್ತಿಯಲ್ಲಿವೆ. ಕ್ರೀಡಾ ಜಂಕ್ಷನ್ ಎಂಬ ಹೆಸರು ಅದಕ್ಕೆ ಸೂಕ್ತವಾಗಿದೆ. ಇಲ್ಲಿಂದ ಹಾದು ಹೋಗುವ ಎಲ್ಲ ರಸ್ತೆಗಳು ನಾನಾ ಕ್ರೀಡಾಂಗಣಗಳಿಗೆ ಹೋಗುತ್ತವೆ. ಬಲವಾದ ಕ್ರೀಡಾ ಸಂಸ್ಕೃತಿ ಹೊಂದಿರುವ ಹಲವಾರು ಶಾಲೆಗಳು (ಪ್ರತಿಷ್ಠಿತ ಅಂತರ-ಶಾಲಾ ಪಂದ್ಯಾವಳಿಗಳನ್ನು ಆಯೋಜಿಸುತ್ತವೆ), ಮತ್ತು ರಾಜ್ಯದ ಅನೇಕ ಐಕಾನ್​​ ಓದಿರುವ ಶಾಲೆಗಳು ಜಂಕ್ಷನ್​ನ ಹತ್ತಿರದಲ್ಲಿವೆ. ಸೇಂಟ್ ಜೋಸೆಫ್ಸ್ ಬಾಯ್ಸ್ & ಇಂಡಿಯನ್ ಹೈಸ್ಕೂಲ್ಸ್, ಬಿಷಪ್ ಕಾಟನ್, ಬಾಯ್ಸ್ & ಗರ್ಲ್ಸ್, ಬಾಲ್ಡ್ವಿನ್ ಹುಡುಗರು ಮತ್ತು ಹುಡುಗಿಯರು, ಕ್ಯಾಥೆಡ್ರಲ್, ಸೇಕ್ರೆಡ್ ಹಾರ್ಟ್ ಗರ್ಲ್ಸ್​​ ಈ ಪಟ್ಟಿಯಲ್ಲಿದೆ.

Continue Reading

ಕ್ರಿಕೆಟ್

Chetan Sakariya : ಹರಾಜಿಗೆ ಮೊದಲೇ ಎಂಗೇಜ್ಮೆಂಟ್​ ಮಾಡಿಕೊಂಡ ಐಪಿಎಲ್​ನ ಸ್ಟಾರ್​ ಬೌಲರ್​

‘ಮುಂದಿನ ಹೆಜ್ಜೆಯನ್ನು ಒಟ್ಟಿಗೆ ಇಡುವ ಅಚಲ ನಿರ್ಧಾರ ‘ ಎಂದು ಚೇತನ್ ಸಕಾರಿಯಾ (Chetan Sakariya) ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

VISTARANEWS.COM


on

Chetan Sakariya
Koo

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮಾಜಿ ವೇಗಿ ಚೇತನ್ ಸಕಾರಿಯಾ ಮಂಗಳವಾರ (ಡಿಸೆಂಬರ್ 5) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಡಗೈ ವೇಗಿ ತನ್ನ ಸಂಗಾತಿಯೊಂದಿಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮ ಹ್ಯಾಂಡಲ್​ಗಳಲ್ಲಿ ಅಪ್ಲೋಡ್ ಮಾಡಿದ್ದಾರೆ, ಅವರು ತಮ್ಮ ಪೋಸ್ಟ್​ಗೆ . ಮುಂದಿನ ಹೆಜ್ಜೆಯನ್ನು ಜತೆಯಾಗಿ ಇಡುವ ಅಚಲ ನಿರ್ಧಾರ ಎಂದು ಶೀರ್ಷಿಕೆ ನೀಡಿದ್ದಾರೆ. ವಿಶೇಷವೆಂದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂ​ ಇತ್ತೀಚೆಗೆ ಬಿಡುಗಡೆ ಮಾಡಿದ ನಂತರ ಚೇತನ್ ಸಕಾರಿಯಾ ಮುಂಬರುವ ಐಪಿಎಲ್ 2024 ರ ಹರಾಜಿನಲ್ಲಿ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.

2021ರ ಐಪಿಎಲ್ ಮೆಗಾ ಹರಾಜಿನಲ್ಲಿ ಚೇತನ್ ಸಕಾರಿಯಾ ಡೆಲ್ಲಿ ಕ್ಯಾಪಿಟಲ್ಸ್​ನೊಂದಿಗೆ 4.2 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು. ಆದಾಗ್ಯೂ, ಎಡಗೈ ವೇಗಿಗೆ ಐಪಿಎಲ್​ನಲ್ಲಿ ಡಿಸಿಯನ್ನು ಪ್ರತಿನಿಧಿಸಲು ಬಹಳ ಕಡಿಮೆ ಅವಕಾಶಗಳು ಪಡೆದುಕೊಂಡರು. ಕ್ಯಾಪಿಟಲ್ಸ್ ಪರ ಆಡುವ ಮೊದಲು ಸಕಾರಿಯಾ ತಮ್ಮ ಚೊಚ್ಚಲ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು.

ಐಪಿಎಲ್​​ನಲ್ಲಿ ಚೇತನ್ ಸಕಾರಿಯಾ ಅವರ ಅಂಕಿ ಅಂಶಗಳ ಬಗ್ಗೆ ಮಾತನಾಡಿವುದಾದರೆ ಎಡಗೈ ವೇಗಿ 19 ಪಂದ್ಯಗಳನ್ನು ಆಡಿದ್ದಾರೆ ಮತ್ತು 29.95 ಸರಾಸರಿಯಲ್ಲಿ 20 ವಿಕೆಟ್​​ಗಳನ್ನು ಪಡೆದಿದ್ದಾರೆ. ಸಕಾರಿಯಾ 8.44 ಎಕಾನಮಿ ರೇಟ್ ಹೊಂದಿದೆ. ಅಂತಾರಾಷ್ಟ್ರೀಯ ಪಂದ್ಯಗಳ ವಿಚಾರಕ್ಕೆ ಬಂದರೆ 25 ವರ್ಷದ ವೇಗಿ ಎರಡು ಟಿ 20 ಮತ್ತು ಒಂದು ಏಕದಿನ ಪಂದ್ಯವನ್ನು ಆಡಿದ್ದು, ಒಟ್ಟು ಮೂರು ವಿಕೆಟ್​ಗಳನ್ನು ಪಡೆದಿದ್ದಾರೆ.

ಸಕಾರಿಯಾ ಮುಂಬರುವ ಐಪಿಎಲ್ 2024 ಹರಾಜಿನಲ್ಲಿ ಲಭ್ಯವಿರುತ್ತಾರೆ. ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳಲ್ಲಿ ಉತ್ತಮ ಎಡಗೈ ವೇಗದ ಬೌಲರ್​ಗಳ ಕೊರತೆಯಿದೆ. ಇದರ ಪರಿಣಾಮವಾಗಿ, ಮುಂಬರುವ ಐಪಿಎಲ್ ಹರಾಜಿನಲ್ಲಿ ಅವರು ಚೇತನ್ ಸಕಾರಿಯಾ ಅವರನ್ನು ಗುರಿಯಾಗಿಸಬಹುದು.

ಇದನ್ನೂ ಓದಿ : BCCI : ಬಿಸಿಸಿಐಗೆ ದೊಡ್ಡ ಮೊತ್ತ ಬಾಕಿ, ಬೈಜೂಸ್​ಗೆ ಮತ್ತೊಂದು ಸಂಕಷ್ಟ

ಸಕಾರಿಯಾ ಹೊರತುಪಡಿಸಿ, ಒಟ್ಟು 1166 ಆಟಗಾರರು ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ/ ಅದರಲ್ಲಿ 830 ಭಾರತೀಯರು ಮತ್ತು ಉಳಿದ 336 ವಿದೇಶಿ ಆಟಗಾರರು. ಈ ಪಟ್ಟಿಯಲ್ಲಿ 212 ಕ್ಯಾಪ್ಡ್ ಆಟಗಾರರು, 909 ಅನ್ಕ್ಯಾಪ್ಡ್ ಆಟಗಾರರು ಮತ್ತು 45 ಅಸೋಸಿಯೇಟ್ ಆಟಗಾರರು ಸೇರಿದ್ದಾರೆ. ಐಪಿಎಲ್ ಹರಾಜು ಡಿಸೆಂಬರ್ 19, 2023 ರಂದು ದುಬೈನ ಕೋಕಾ ಕೋಲಾ ಅರೆನಾದಲ್ಲಿ ನಡೆಯಲಿದೆ.

Continue Reading
Advertisement
war Between Sangeetha And Captain Snehith Gowda
ಬಿಗ್ ಬಾಸ್24 mins ago

BBK SEASON 10: ನೀನು ಯಾರಿಗೆ ʻಚೇಲಾʼ ಅಂತ ಗೊತ್ತು ʻಹೋಗೋಲೋʼ ಎಂದು ಸ್ನೇಹಿತ್‌ ಮೇಲೆ ರೊಚ್ಚಿಗೆದ್ದ ಸಂಗೀತಾ!

Captain Snehith Gowda Not Bother To Stop Physical Fight Between vinay and Karthik
ಬಿಗ್ ಬಾಸ್27 mins ago

BBK SEASON 10: ವಿನಯ್‌-ಕಾರ್ತಿಕ್‌ ನಡುವೆ ಫಿಸಿಕಲ್‌ ಅಟ್ಯಾಕ್‌; ಯಾವ ಸೀಮೆ ಕ್ಯಾಪ್ಟನ್ ಸ್ನೇಹಿತ್‌ ನೀನು?

woman eating
ಆರೋಗ್ಯ60 mins ago

Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

viral video pak military officer
ದೇಶ1 hour ago

Viral video: ಭಾರತ ವಶಕ್ಕೆ, ಮೋದಿಗೆ ಸರಪಳಿಯ ಬಂಧನ! ಜೋಕ್‌ ಆದ ಪಾಕ್‌ ಸೇನಾಧಿಕಾರಿ!

Sonia Gandhi Will not choose me to pm post; Book on Pranab Mukherjee
ದೇಶ1 hour ago

ಇಲ್ಲ, ಆಕೆ ನನ್ನನ್ನು ಪಿಎಂ ಮಾಡಲ್ಲ! ಪ್ರಣಬ್ ಮುಖರ್ಜಿ ಹಾಗೇಕೆ ಹೇಳಿದ್ದು?

IPL Auction 1
ಕ್ರಿಕೆಟ್1 hour ago

IPL 2024 : ಐಪಿಎಲ್ ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆಲ್​​ರೌಂಡರ್​ಗಳು ಇವರು

RCB Team
ಕ್ರಿಕೆಟ್2 hours ago

IPL 2024 : ಐಪಿಎಲ್​ ಹರಾಜಿನಲ್ಲಿ ಆರ್​ಸಿಬಿ ಆಯ್ಕೆಮಾಡಿದ ಅತ್ಯುತ್ತಮ ಆಟಗಾರರ ವಿವರ ಇಲ್ಲಿದೆ

arun murderd
ಕ್ರೈಂ2 hours ago

Murder Case: ಮುಂದಿನ ತಿಂಗಳು ಮದುವೆಯಾಗಲಿ‌ದ್ದ ಆಟೋ ಚಾಲಕನ ಬರ್ಬರ ಹತ್ಯೆ

dry fruits
ಆರೋಗ್ಯ2 hours ago

Dry Fruits Benefits: ಒಣಹಣ್ಣುಗಳನ್ನೂ, ಬೀಜಗಳನ್ನೂ ತಿನ್ನಿ: ಕ್ಯಾನ್ಸರ್‌ ನಿರೋಧಕತೆ ಬೆಳೆಸಿಕೊಳ್ಳಿ!

Sachin Pilot movements monitored, phone tracked Say OSD for Ashok Gehlot
ದೇಶ2 hours ago

ಸಚಿನ್ ಪೈಲಟ್ ಮೇಲೆ ನಿಗಾ, ಫೋನ್ ಕದ್ದಾಲಿಕೆ! ಸಿಎಂ ವಿಶೇಷ ಅಧಿಕಾರಿ ಹೇಳಿಕೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

read your daily horoscope predictions for december 6 2023
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ13 hours ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

R Ashok in assembly session
ಕರ್ನಾಟಕ13 hours ago

Belagavi Winter Session: ಟಿಸಿ ಬದಲಾಯಿಸಲು ಹಣ ಕೇಳ್ತಾರೆ, ರೈತರು ಬದುಕೋದು ಬೇಡವಾ? ಅಶೋಕ್‌ ಕ್ಲಾಸ್‌

R Ashok
ಕರ್ನಾಟಕ13 hours ago

Belagavi Winter Session: ಬರ ಪ್ರದೇಶಕ್ಕೆ ಹೋಗದ ಸಿಎಂ, ಸಚಿವರು; ಸರ್ಕಾರಕ್ಕೆ ಆರ್.‌ ಅಶೋಕ್‌ ಚಾಟಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ3 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ4 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

ಟ್ರೆಂಡಿಂಗ್‌