INDvsNZ T20 | ಭಾರತದ ದ್ವಿಶತಕದ ಸಾಧಕರಿಂದ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಪಂದ್ಯದಲ್ಲಿ ಇನಿಂಗ್ಸ್​ ಆರಂಭ! - Vistara News

ಕ್ರಿಕೆಟ್

INDvsNZ T20 | ಭಾರತದ ದ್ವಿಶತಕದ ಸಾಧಕರಿಂದ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಪಂದ್ಯದಲ್ಲಿ ಇನಿಂಗ್ಸ್​ ಆರಂಭ!

ನ್ಯೂಜಿಲ್ಯಾಂಡ್​ (INDvsNZ T20) ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶುಭ್​ಮನ್​ ಗಿಲ್ ಹಾಗೂ ಇಶಾನ್​ ಕಿಶನ್​ ಇನಿಂಗ್ಸ್​​ ಆರಂಭಿಸಲಿದ್ದಾರೆ.

VISTARANEWS.COM


on

Rohit sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಂಚಿ : ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯ (INDvsNZ T20) ಮೊದಲ ಪಂದ್ಯದಲ್ಲಿ ವಿಕೆಟ್​ಕೀಪರ್​ ಬ್ಯಾಟರ್​ ಇಶಾನ್​ ಕಿಶನ್​ ಅವಕಾಶ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಲಿದ್ದಾರೆ. ಅತ್ತ ಉತ್ತಮ ಫಾರ್ಮ್​ನಲ್ಲಿರುವ ಶುಭ್​​ಮನ್​ ಗಿಲ್​ ಕೂಡ ಆರಂಭಿಕರಾಗಿ ಬ್ಯಾಟ್​ ಮಾಡುತ್ತಾರೆ ಎಂಬುದಾಗಿ ನಾಯಕ ಹಾರ್ದಿಕ್ ಪಾಂಡ್ಯ ಘೋಷಿಸಿದ್ದಾರೆ. ಈ ಮೂಲಕ ಭಾರತ ತಂಡದ ಪರ ಏಕ ದಿನ ಮಾದರಿಯಲ್ಲಿ ದ್ವಿ ಶತಕದ ಸಾಧನೆ ಮಾಡಿದ ಇಬ್ಬರು ಇನಿಂಗ್ಸ್​ ಆರಂಭಿಸಿದಂತಾಗುತ್ತದೆ.

ಇಶಾನ್​ ಕಿಶನ್​ ಬಾಂಗ್ಲಾದೇಶ ಪ್ರವಾಸದಲ್ಲಿ 131 ಎಸೆತಗಳಲ್ಲಿ 210 ರನ್​ ಬಾರಿಸಿದ್ದರು. ಶುಬ್ಮನ್ ಗಿಲ್​ ನ್ಯೂಜಿಲ್ಯಾಂಡ್​ ವಿರುದ್ಧದ ಏಕ ದಿನ ಸರಣಿಯಲ್ಲಿ 208 ರನ್ ಬಾರಿಸಿದ್ದಾರೆ. ಇಬ್ಬರೂ ಉತ್ತಮ ಫಾರ್ಮ್​ನಲ್ಲಿ ಇರುವ ಕಾರಣ ಅವರಿಗೆ ಆರಂಭಿಕರಾಗಿ ಬ್ಯಾಟ್​ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಇಶಾನ್ ಕಿಶನ್​ ಸೇರ್ಪಡೆಯಿಂದಾಗಿ ಅವಕಾಶಕ್ಕಾಗಿ ಕಾಯುತ್ತಿದ್ದ ಪೃಥ್ವಿ ಶಾ ಅವರಿಗೆ ನಿರಾಸೆಯಾಗಿದೆ. ಇಶಾನ್​ಗೆ ಅವಕಾಶ ನೀಡದೇ ಹೋಗಿದ್ದರೆ ಪೃಥ್ವಿ ಶಾ ತಂಡಕ್ಕೆ ಸೇರ್ಪಡೆಯಾಗುತ್ತಿದ್ದರು.

ಜಾರ್ಖಂಡ್​ ಇಶಾನ್​ ಕಿಶನ್​ ಅವರ ತವರೂರು. ಧೋನಿಯಂತೆ ಅವರು ಕೂಡ ಜೆಎಸ್​ಸಿಎ ಇಂಟರ್​ನ್ಯಾಷನಲ್​ ಸ್ಟೇಡಿಯಮ್​ ಕಾಂಪ್ಲೆಕ್ಸ್​ನಲ್ಲಿ ಆಡಿದವರು. ತವರಿನಲ್ಲಿ ಅವರಿಗೆ ಮಿಂಚುವ ಅವಕಾಶ ಇರುವ ಕಾರಣ ಆಡುವ 11ರ ಬಳಗದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಇದನ್ನೂ ಓದಿ : IND VS NZ | ಇದು ಕ್ರಿಕೆಟ್​ ಅಲ್ಲ, ಇಶಾನ್​ ಕಿಶನ್​ಗೆ ಸುನೀಲ್​ ಗವಾಸ್ಕರ್​ ಎಚ್ಚರಿಕೆ ನೀಡಿದ್ದು ಏಕೆ?

ಭಾರತ ತಂಡದ ಪರವಾಗಿ ದ್ವಿ ಶತಕದ ಸಾಧಕರು ಇನಿಂಗ್ಸ್​ ಆರಂಭ ಮಾಡುವುದು ಇದೇ ಮೊದಲಲ್ಲ. ಏಕ ದಿನ ಸರಣಿ ಪಂದ್ಯಗಳಲ್ಲಿ ರೋಹಿತ್​ ಶರ್ಮ ಹಾಗೂ ಶುಬ್ಮನ್ ಗಿಲ್​ ಇನಿಂಗ್ಸ್​ ಆರಂಭ ಮಾಡಿದಾಗಲೂ ಇದೇ ದಾಖಲೆ ಸೃಷ್ಟಿಯಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

Virat kohli: ಕೆಕೆಆರ್​ನ ಹರ್ಷಿತ್ ರಾಣಾ ಅವರ ಹೈಫುಲ್​ಟಾಸ್​ಗೆ ಕೊಹ್ಲಿ ಔಟ್ ಆಗಿದ್ದರು. ಡಿಆರ್​ಎಸ್​​ ಕೋರಿದ ಹಿನ್ನೆಲೆಯಲ್ಲಿ ನಿರ್ಧಾರವನ್ನು ಮೂರನೇ ಅಂಪೈರ್​ಗೆ ಶಿಫಾರಸು ಮಾಡಲಾಯಿತು. ರಿಪ್ಲೇಗಳು ಅಪೂರ್ಣವಾಗಿದ್ದರೂ, ಮೈದಾನದಲ್ಲಿನ ನಿರ್ಧಾರಕ್ಕೆ ಅಂಪೈರ್​ ಬೆಂಬಲ ಕೊಟ್ಟರು. ಇದರ ಪರಿಣಾಮವಾಗಿ ಕೊಹ್ಲಿ ಏಳು ಎಸೆತಗಳಲ್ಲಿ 18 ರನ್ ಗಳಿಸಿದ ನಂತರ ಕ್ರೀಸ್​ನಿಂದ ನಿರ್ಗಮಿಸಬೇಕಾಯಿತು.

VISTARANEWS.COM


on

Virat Kohli
Koo

ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ (virat kohli))ವಿವಾದಕ್ಕೆ ಸಿಲುಕಿದ್ದಾರೆ. ಎರಡನೇ ಇನ್ನಿಂಗ್ಸ್​ನ ಮೂರನೇ ಓವರ್​ನಲ್ಲಿ ಸ್ಟಾರ್ ಬ್ಯಾಟ್ಸ್ಮನ್ ಔಟಾಗಿರುವ ರೀತಿ ಅಂಪೈರಿಂಗ್ ನಿರ್ಧಾರದ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿತು.

ಕೆಕೆಆರ್​ನ ಹರ್ಷಿತ್ ರಾಣಾ ಅವರ ಹೈಫುಲ್​ಟಾಸ್​ಗೆ ಕೊಹ್ಲಿ ಔಟ್ ಆಗಿದ್ದರು. ಡಿಆರ್​ಎಸ್​​ ಕೋರಿದ ಹಿನ್ನೆಲೆಯಲ್ಲಿ ನಿರ್ಧಾರವನ್ನು ಮೂರನೇ ಅಂಪೈರ್​ಗೆ ಶಿಫಾರಸು ಮಾಡಲಾಯಿತು. ರಿಪ್ಲೇಗಳು ಅಪೂರ್ಣವಾಗಿದ್ದರೂ, ಮೈದಾನದಲ್ಲಿನ ನಿರ್ಧಾರಕ್ಕೆ ಅಂಪೈರ್​ ಬೆಂಬಲ ಕೊಟ್ಟರು. ಇದರ ಪರಿಣಾಮವಾಗಿ ಕೊಹ್ಲಿ ಏಳು ಎಸೆತಗಳಲ್ಲಿ 18 ರನ್ ಗಳಿಸಿದ ನಂತರ ಕ್ರೀಸ್​ನಿಂದ ನಿರ್ಗಮಿಸಬೇಕಾಯಿತು.

ಈ ನಿರ್ಧಾರದಿಂದ ಅಸಮಾಧಾನಗೊಂಡ ಕೊಹ್ಲಿ ಆನ್ ಫೀಲ್ಡ್ ಅಂಪೈರ್ ಗಳೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು. ಅದೇ ಕೋಪವನ್ನು ಅವರು ಕೊನೇ ತನಕ ಇಟ್ಟುಕೊಂಡಿದ್ದರು. ಪಂದ್ಯ ಮುಗಿದ ಬಳಿಕ ಕೈಕುಲುಕಲು ನಿರಾಕರಿಸಿದ್ದರಯ. ಈ ಕ್ಷಣವನ್ನು ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಯಿತು.

ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ಪಂದ್ಯದ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಿದ ಐಪಿಎಲ್ ಅಧಿಕಾರಿಗಳು ಈ ಘಟನೆಯನ್ನು ಗಮನಿಸದೆ ಹೋಗಲಿಲ್ಲ.  ಐಪಿಎಲ್ ಹೇಳಿಕೆಯ ಪ್ರಕಾರ, ಕೊಹ್ಲಿಯ ಕ್ರಮಗಳು ನೀತಿ ಸಂಹಿತೆಯ ಆರ್ಟಿಕಲ್ 2.8 ರ ಅಡಿಯಲ್ಲಿ ಲೆವೆಲ್ 1 ಅಪರಾಧವಾಗಿದೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Fantasy Gaming : 8ನೇ ಕ್ಲಾಸ್​ ಫೇಲ್​, ಕ್ರಿಕೆಟ್​ ಗೊತ್ತಿಲ್ಲ; ಆದ್ರೂ ಒಲಿಯಿತು ಕ್ರಿಕೆಟ್​ ಫ್ಯಾಂಟಸಿ ಗೇಮ್​ನಲ್ಲಿ 1.5 ಕೋಟಿ ರೂ!

ಕ್ರಿಕೆಟ್ ಜಗತ್ತಿನಲ್ಲಿ ವಿವಾದಗಳು ಅಸಾಮಾನ್ಯವಲ್ಲವಾದರೂ, ಕೊಹ್ಲಿಯ ಪ್ರತಿಕ್ರಿಯೆಯು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಆಟಗಾರರು ಅನುಭವಿಸುವ ತೀವ್ರ ಭಾವನೆಗಳನ್ನು ಒತ್ತಿಹೇಳುತ್ತದೆ.

Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸೆಮಿಫೈನಲ್​ನಲ್ಲಿ ಪಂದ್ಯದಲ್ಲಿ ಭಾರತೀಯ ಬ್ಯಾಟರ್​ ವಿರಾಟ್ ಕೊಹ್ಲಿ (Virat Kohli) ತಮ್ಮ 50 ನೇ ಏಕದಿನ ಶತಕವನ್ನು ಗಳಿಸಿದ್ದರು. ಈ ಮೂಲಕ ಅವರು ಸಚಿನ್ ತೆಂಡೂಲ್ಕರ್​ ಅವರ 49 ಏಕ ದಿನ ಶತಕಗಳ ಸಾಧನೆಯನ್ನು ಮುರಿದಿದ್ದರು. ಹೀಗಾಗಿ ಅದು ಕ್ರೀಡಾ ಇತಿಹಾಸದಲ್ಲಿ ಚಾರಿತ್ರಿಕ ಘಟನೆಯಾಗಿದೆ. ಅವರು ಶತಕ ಬಾರಿಸಿದ ಬಳಿಕ ದೇಶ ವಿದೇಶಗಳ ಅಥ್ಲೀಟ್​ಗಳಿಂದ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಅವರ ಆ ಅವಿಸ್ಮರಣೀಯ ಶತಕಕ್ಕೆ ಅಂತಾರಾಷ್ಟ್ರೀಯ ಗೌರವವೊಂದು ದೊರಕಿದೆ ಎಂಬುದಾಗಿ ವರದಿಯಾಗಿದೆ. ಕೊಹ್ಲಿಯ ಅಭಿಮಾನಿ ಎಂಬ ಹೆಸರಲ್ಲಿ ಸೃಷ್ಟಿ ಮಾಡಿರುವ ಎಕ್ಸ್​ ಖಾತೆಯಲ್ಲಿ ಈ ಮಾಹಿತಿಹಂಚಿಕೊಳ್ಳಲಾಗಿದೆ.

ಸ್ಪೇನ್ ನ ಮ್ಯಾಡ್ರಿಡ್ ನ ಪಲಾಸಿಯೊ ಡಿ ಸಿಬೆಲೆಸ್ ನಲ್ಲಿ ಸೋಮವಾರ (ಏಪ್ರಿಲ್ 22) ನಡೆದ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ ನಲ್ಲಿ ಕೊಹ್ಲಿಯ ಈ ಅಸಾಧಾರಣ ಸಾಧನೆಯನ್ನು ಉನ್ನತ ಕ್ರೀಡಾ ಕ್ಷಣಗಳಲ್ಲಿ ಒಂದಾಗಿ ಗೌರವಿಸಲಾಗಿದೆ ಎಂದು ಎಕ್ಸ್​ನಲ್ಲಿ ಬರೆಯಲಾಗಿದೆ.

ಈ ಮನ್ನಣೆ ನಿಸ್ಸಂದೇಹವಾಗಿ ಅರ್ಹವಾಗಿದೆ. ಏಕೆಂದರೆ ಮುಂಬೈನ ಕ್ರಿಕೆಟ್​ ಪ್ರೇಕ್ಷಕರು ಕೊಹ್ಲಿ ಇತಿಹಾಸವನ್ನು ನಿರ್ಮಿಸುವುದಕ್ಕೆ ಸಾಕ್ಷಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ ಶತಕ ಬಾರಿಸುವ ಮೂಲಕ ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೊಹ್ಲಿ, ವಿಶ್ವಕಪ್​ನ ಮೊದಲ ಸೆಮಿಫೈನಲ್​​ನಲ್ಲಿ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು.

ಎರಡು ದಶಕಗಳ ಕಾಲ ರಾಷ್ಟ್ರದ ಭರವಸೆಗಳನ್ನು ಹೊತ್ತ ಬ್ಯಾಟಿಂಗ್ ದಂತಕಥೆ ಸಚಿನ್ ಅವರ ಹೆಜ್ಜೆಗಳನ್ನು ಅನುಸರಿಸಿ, ಸಚಿನ್ ತೆಂಡೂಲ್ಕರ್ ಅವರ ಸ್ಮರಣೀಯ ವಿಶ್ವಕಪ್ ವಿದಾಯದ 12 ವರ್ಷಗಳ ನಂತರ, ಕೊಹ್ಲಿ 50 ನೇ ಏಕದಿನ ಶತಕವನ್ನು ತಲುಪಿದರು.

Continue Reading

ಕ್ರೀಡೆ

Fantasy Gaming : 8ನೇ ಕ್ಲಾಸ್​ ಫೇಲ್​, ಕ್ರಿಕೆಟ್​ ಗೊತ್ತಿಲ್ಲ; ಆದ್ರೂ ಒಲಿಯಿತು ಕ್ರಿಕೆಟ್​ ಫ್ಯಾಂಟಸಿ ಗೇಮ್​ನಲ್ಲಿ 1.5 ಕೋಟಿ ರೂ!

Fantasy Gaming: ನನಗೆ ತುಂಬಾ ಸಂತೋಷವಾಯಿತು. ನಂಬಲಾಗಲಿಲ್ಲ. ಆರಂಭದಲ್ಲಿ ಇದು ವಂಚನೆ ಎಂದು ಭಾವಿಸಿದೆ. ಅಪ್ಲಿಕೇಶನ್ ಗಳಲ್ಲಿ ಎಂದಿಗೂ ಹಣ ಬರುವುದಿಲ್ಲ ಎಂದು ನಂಬಿದ್ದೆ .ನಾನು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತೇನೆ. ನಡುವೆ ನಾನು ಕಳೆದ ಆರು ತಿಂಗಳಿನಿಂದ ಫ್ಯಾಂಟಸಿ ಗೇಮಿಂಗ್ ಆಡುತ್ತಿದ್ದೇನೆ. ಭಾನುವಾರ, ನನಗೆ ಯಾವುದೇ ಕೆಲಸವಿರಲಿಲ್ಲ ಎಂದು ಓಜಾ ಹೇಳಿದ್ದಾನೆ.

VISTARANEWS.COM


on

Fantasy Gaming
Koo

ಬೆಂಗಳೂರು: ಅದೃಷ್ಟ ಯಾವಾಗ ಬಾಗಿಲು ಬಡಿದು ಮನೆಯೊಳಗೆ ನುಗ್ಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಅದು ಅನಿರೀಕ್ಷಿತ, ಅಚ್ಚರಿ ಮತ್ತು ಅಪರೂಪ. ಇಂಥದ್ದೇ ಒಬ್ಬ ಅದೃಷ್ಟ ಶಾಲಿಯ ಪರಿಚಯವನ್ನು ನಿಮಗೆ ಮಾಡಿಸಬೇಕಾಗಿದೆ. ಅವರೇ ಬಿಹಾರದ ದೀಪು ಓಜಾ. ಭಾನುವಾರ ನಡೆದ ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯದ ವೇಳೆ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್​ನಲ್ಲಿ (Fantasy Gaming) ಐಪಿಎಲ್ ಫ್ಯಾಂಟಸಿ ಗೇಮಿಂಗ್ (Fantasy Gaming) ಆಡುವ ಮೂಲಕ ಬಿಹಾರದ ಅರ್ರಾ ಜಿಲ್ಲೆಯ ಕೊಹ್ಡಾ ಗ್ರಾಮದ ಈತ 1.5 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾನೆ. ಅವರು ಪಂದ್ಯದಲ್ಲಿ ಆಂಡ್ರೆ ರಸೆಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಅದೃಷ್ಟಶಾಲಿ ಎನಿಸಿಕೊಂಡಿದ್ದಾರೆ. ಅಂದ ಹಾಗೆ ಓಜಾ 8 ನೇ ತರಗತಿಯಲ್ಲಿ ಫೇಲ್​, ಹಾಗೂ ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಾನೆ. ಕ್ರಿಕೆಟ್​ನ ಗಂಧ ಗಾಳಿ ಗೊತ್ತಿಲ್ಲ.

ಕ್ರಿಕೆಟ್ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂಬುದಾಗಿ ಓಜಾ ಹೇಳಿದ್ದಾನೆ. ನನಗೆ ಬೇರೆ ಕೆಲಸವಿಲ್ಲದ ಕಾರಣ ಆಕಸ್ಮಿಕವಾಗಿ ತಂಡವನ್ನು ಆಯ್ಕೆ ಮಾಡಿದೆ ಎಂದಿದ್ದಾನೆ. “ನನಗೆ ತುಂಬಾ ಸಂತೋಷವಾಯಿತು. ನಂಬಲಾಗಲಿಲ್ಲ. ಆರಂಭದಲ್ಲಿ ಇದು ವಂಚನೆ ಎಂದು ಭಾವಿಸಿದೆ. ಅಪ್ಲಿಕೇಶನ್ ಗಳಲ್ಲಿ ಎಂದಿಗೂ ಹಣ ಬರುವುದಿಲ್ಲ ಎಂದು ನಂಬಿದ್ದೆ .ನಾನು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತೇನೆ. ನಡುವೆ ನಾನು ಕಳೆದ ಆರು ತಿಂಗಳಿನಿಂದ ಫ್ಯಾಂಟಸಿ ಗೇಮಿಂಗ್ ಆಡುತ್ತಿದ್ದೇನೆ. ಭಾನುವಾರ, ನನಗೆ ಯಾವುದೇ ಕೆಲಸವಿರಲಿಲ್ಲ. ಹೀಗಾಗಿ ತಂಡವನ್ನು ರಚಿಸಿದೆ. ಇದು ಕೆಕೆಆರ್ ಮತ್ತು ಆರ್​​ಸಿಬಿ ನಡುವಿನ ಪಂದ್ಯ ಎಂದು ಎಂದು ಓಜಾ ಹೇಳಿದ್ದಾನೆ.

ಇದನ್ನೂ ಓದಿ: Mohammad Rizwan : ಪಾಕ್​ ಬ್ಯಾಟರ್​ನನ್ನು ಬ್ರಾಡ್ಮನ್ ಎಂದು ಹೊಗಳಿದ ನಾಯಕ; ಗೊಳ್ಳೆಂದು ನಗುತ್ತಿರುವ ನೆಟ್ಟಿಗರು!

ಸಿಕ್ಕಿರುವ ದುಡ್ಡನ್ನು ಏನು ಮಾಡಬೇಕೆಂದು ಆತ ಇನ್ನೂ ನಿರ್ಧರಿಸಿಲ್ಲವಂತೆ. ಅಂದ ಹಾಗೆ ಫ್ಯಾಂಟಿಸಿ ಗೇಮ್​ಗಳು ಲೀಗ್​ ಕ್ರಿಕೆಟ್​ ಬೆಳವಣಿಗೆ ಬಳಿಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕ್ರಿಕೆಟ್​ ನೋಡುವ ಜತೆಗೆ ಆಟ ಆರಂಭಕ್ಕೆ ಮೊದಲು ತಂಡಗಳನ್ನು ರಚಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದಾರೆ. ಫ್ಯಾಂಟಸಿ ಗೇಮ್​ಗಳು ಒಂದರ್ಥದಲ್ಲಿ ಬದಲಾದ ಜಗತ್ತಿನಲ್ಲಿ ಹೊಸ ಸ್ಪರ್ಧಾ ವೇದಿಕೆಯಾಗಿದೆ. ಆದರೆ, ಅಪಾಯಕಾರಿಯೂ ಹೌದು. ಆ್ಯಪ್​​ಗಳಲ್ಲಿ ಆಡುವಾಗ ಅದಕ್ಕಾಗಿ ನಿರ್ದಿಷ್ಟ ಮೊತ್ತವನ್ನು ಕಷ್ಟಬೇಕಾಗುತ್ತದೆ. ಒಂದರ್ಥದಲ್ಲಿ ಕಾನೂನುಬದ್ಧ ಜೂಜು. ಹಣದಾಸೆಗೆ ಬೀಳುವ ಕೆಲವರು ಇದೇ ವೇದಿಕೆಗಳ ಮೂಲಕ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಆಗಿವೆ. ಮದ್ಯಪಾನದ ರೀತಿಯಲ್ಲಿಯೇ ಫ್ಯಾಂಟಸಿ ಗೇಮ್​ಗಳ ಜಾಹೀರಾತು ನೀಡುವಾಗ ಮುಂದಾಗುವ ಅಪಾಯಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.

Rohit Sharma : ಇಶಾನ್​ ಕಿಶನ್ ಜತೆ ಮಗುವಿನಂತೆ ಕ್ರಿಕೆಟ್​ ಆಡಿದ ರೋಹಿತ್​ ಶರ್ಮಾ

ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ (Rajastan Royals ) ಮತ್ತು ಮುಂಬೈ ಇಂಡಿಯನ್ಸ್ (Mumbai Indians ) ನಡುವಿನ ಬಹುನಿರೀಕ್ಷಿತ ಐಪಿಎಲ್​ 2024ರ (IPL 2024) ಮುಖಾಮುಖಿಗೆ ಸಿದ್ಧತೆ ನಡೆಸುವ ವೇಳೆ ರೋಹಿತ್ ಶರ್ಮಾ (Rohit Sharma) ಅವರ ಬ್ಯಾಟಿಂಗ್​ ನೆಟ್ಟಿಗರ ಗಮನ ಸೆಳೆದಿದೆ. ಅವರ ಇಶಾನ್ ಕಿಶನ್​ಗೆ ವಿಕೆಟ್​ಕೀಪಿಂಗ್​ ಅಭ್ಯಾಸ ಮಾಡಲು ಮಕ್ಕಳಂತೆ ಬ್ಯಾಟ್ ಹಿಡಿದು ಬೀಸಿದ ಪ್ರಸಂಗ ನಡೆಯಿತು. ಏಪ್ರಿಲ್ 22 ರ ಸೋಮವಾರ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮುಖಾಮುಖಿಗೆ ಮುಂಚಿತವಾಗಿ ಇವರಿಬ್ಬರು ಕ್ಯಾಚಿಂಗ್ ಅಭ್ಯಾಸದಲ್ಲಿ ತೊಡಗಿದ್ದರು. ಅದು ಸಣ್ಣ ಮಕ್ಕಳು ಆಡುವಂತೆ ಕಂಡು ಬಂತು.

ಮುಂಬೈ ಇಂಡಿಯನ್ಸ್ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರೋಹಿತ್ ಶರ್ಮಾ ಇಶಾನ್ ಕಿಶನ್ ಅವರ ವಿಕೆಟ್ ಕೀಪಿಂಗ್ ಕೌಶಲವನ್ನು ಹೆಚ್ಚಿಸಲು ಬ್ಯಾಟ್​ನಿಂದ ಸಣ್ಣ ಸಣ್ಣ ಹೊಡೆತಗಳನ್ನು ಹೊಡೆಯುತ್ತಿದ್ದರು. ಅದನ್ನು ಇಶಾನ್​ ಹಿಡಿಯುತ್ತಿದ್ದರು. ಈ ಅಭ್ಯಾಸದಿಂದ ಇಬ್ಬರಿಗೂ ಸಾಕಷ್ಟು ಲಾಭವಾಗುತ್ತದೆ.

ಇಶಾನ್ ರೋಹಿತ್ ಕಡೆಗೆ ಚೆಂಡುಗಳನ್ನು ಎಸೆದಾಗ ಇಬ್ಬರು ಆಟಗಾರರ ನಡುವಿನ ಸ್ನೇಹವು ಸ್ಪಷ್ಟವಾಯಿತು. ರೋಹಿತ್ ಶರ್ಮಾ ಕಿಶನ್​​ಗೆ ಕಡಿಮೆ ಅಂತರ ಕ್ಯಾಚ್​ಗಳನ್ನು ನೀಡುವಲ್ಲಿ ಅತಿ ಹೆಚ್ಚು ಉತ್ಸಾ ಹ ತೋರಿದ್ದರು. ಹಿರಿಯ ಆಟಗಾರರು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಇಂತಹ ನಿದರ್ಶನಗಳು ಮುಂಬೈ ಇಂಡಿಯನ್ಸ್ ನಂಥ ತಂಡಗಳಲ್ಲಿ ಮಾತ್ರ ಕಾಣಿಸುತ್ತದೆ. ಉಳಿದಂತೆ ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿ ಇಂಥದ್ದಕ್ಕೆಲ್ಲ ನೆರವಾಗುತ್ತಾರೆ.

Continue Reading

ಕ್ರೀಡೆ

Mohammad Rizwan : ಪಾಕ್​ ಬ್ಯಾಟರ್​ನನ್ನು ಬ್ರಾಡ್ಮನ್ ಎಂದು ಹೊಗಳಿದ ನಾಯಕ; ಗೊಳ್ಳೆಂದು ನಗುತ್ತಿರುವ ನೆಟ್ಟಿಗರು!

Mohammad Rizwan: ಮೊಹಮ್ಮದ್ ರಿಜ್ವಾನ್, ಟಿ20 ಐನಲ್ಲಿ ವೇಗವಾಗಿ 3000 ರನ್ ಗಳಿಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಾದಿಯಲ್ಲಿ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ರಿಜ್ವಾನ್ 2 92 ನೇ ಟಿ 20 ಅಂತರರಾಷ್ಟ್ರೀಯ ಪಂದ್ಯ ಮತ್ತು 79 ನೇ ಇನ್ನಿಂಗ್ಸ್​ನಲ್ಲಿ ಈ ವೈಯಕ್ತಿಕ ಮೈಲಿಗಲ್ಲನ್ನು ತಲುಪಿದ್ದಾರೆ. 81 ಇನ್ನಿಂಗ್ಸ್​​ಗಳಲ್ಲಿ 3000 ಟಿ 20 ರನ್ ಗಳಿಸಿದ ವೈಟ್-ಬಾಲ್ ನಾಯಕ ಬಾಬರ್ ಅಜಮ್ ಅವರನ್ನೂ 31 ವರ್ಷದ ಆಟಗಾರ ಹಿಂದಿಕ್ಕಿದ್ದಾರೆ.

VISTARANEWS.COM


on

Mohammad Rizwan
Koo

ಬೆಂಗಳೂರು: ಪಾಕಿಸ್ತಾನದ ಮಾಜಿ ಟಿ 20 ಐ ಮಾಜಿ ನಾಯಕ ಹಾಗೂ ವೇಗದ ಬೌಲರ್​​ ಶಾಹೀನ್ ಅಫ್ರಿದಿ ತಂಡದ ಸಹ ಆಟಗಾರ ಮೊಹಮ್ಮದ್ ರಿಜ್ವಾನ್ ಅವರನ್ನು ಟಿ 20 ಕ್ರಿಕೆಟ್ನ ಬ್ರಾಡ್ಮನ್ ಎಂದು ಹೊಗಳಿರುವುದು ನೆಟ್ಟಿಗರ ಪಾಲಿಗೆ ತಮಾಷೆಯ ಸುದ್ದಿಯಾಗಿ ಪರಿವರ್ತನೆಗೊಂಡಿದೆ. ಸೋಶೀಯಲ್​ ಮೀಡಿಯಾಗಳಲ್ಲಿ ಇದನ್ನು ವರ್ಷದ ಜೋಕ್ ಎಂದರೆ ಕರೆದರೆ ಕೆಲವರು ಬಿದ್ದು ಬಿದ್ದು ನಗುತ್ತಿದ್ದಾರೆ.

ಏಪ್ರಿಲ್ 21 ರಂದು ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ 20 ಐ ಸರಣಿಯ 3 ನೇ ಪಂದ್ಯದಲ್ಲಿ ರಿಜ್ವಾನ್ ಕ್ರಿಕೆಟ್​ ಚುಟುಕು ಸ್ವರೂಪದಲ್ಲಿ 3000 ರನ್ ಪೂರೈಸಿದ್ದಾರೆ. ಹೀಗಾಗಿ ಅಫ್ರಿದಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಭಯಂಕರ ಹೇಳಿಕೆ ನೀಡಿದ್ದಾರೆ. ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಡೆದ 2ನೇ ಟಿ 20 ಪಂದ್ಯದಲ್ಲಿ ಪಾಕ್ ತಂಡ ಗೆದ್ದಿತ್ತು. ಆದರೆ, 3ನೇ ಪಂದ್ಯವನ್ನು 7 ವಿಕೆಟ್​ಗಳಿಂದ ಕಳೆದುಕೊಂಡಿತ್ತು.

“ಟಿ20 ಕ್ರಿಕೆಟ್​ನ ಬ್ರಾಡ್ಮನ್ ಮತ್ತು ಟಿ 20ಐನಲ್ಲಿ 3,000 ರನ್ ಗಳಿಸಿದ ಪಾಕಿಸ್ತಾನದ ಸೂಪರ್​ಮ್ಯಾನ್​ ಮೊಹಮ್ಮದ್ ರಿಜ್ವಾನ್ ಅವರಿಗೆ ಅಭಿನಂದನೆಗಳು! 🏏🌟 ನಿಮ್ಮ ಪ್ರಭಾವವು ಆಟದ ರೀತಿಯನ್ನು ಪರಿವರ್ತಿಸಿದೆ ಮತ್ತು ಟೀಕಾಕಾರರನ್ನು ಮೌನಗೊಳಿಸಿದೆ. ಬೆಳೆಯುತ್ತಲೇ ಇರಿ, ಚಾಂಪಿಯನ್! ನೀವು ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ” ಎಂದು ಶಾಹೀನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಈ ಪೋಸ್ಟ್​​ ತಮಾಷೆಯ ಸಂಗತಿಯಾಗಿ ಮಾರ್ಪಟ್ಟಿದೆ.

ಮೊಹಮ್ಮದ್ ರಿಜ್ವಾನ್, ಟಿ20 ಐನಲ್ಲಿ ವೇಗವಾಗಿ 3000 ರನ್ ಗಳಿಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಾದಿಯಲ್ಲಿ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ರಿಜ್ವಾನ್ 2 92 ನೇ ಟಿ 20 ಅಂತರರಾಷ್ಟ್ರೀಯ ಪಂದ್ಯ ಮತ್ತು 79 ನೇ ಇನ್ನಿಂಗ್ಸ್​ನಲ್ಲಿ ಈ ವೈಯಕ್ತಿಕ ಮೈಲಿಗಲ್ಲನ್ನು ತಲುಪಿದ್ದಾರೆ. 81 ಇನ್ನಿಂಗ್ಸ್​​ಗಳಲ್ಲಿ 3000 ಟಿ 20 ರನ್ ಗಳಿಸಿದ ವೈಟ್-ಬಾಲ್ ನಾಯಕ ಬಾಬರ್ ಅಜಮ್ ಅವರನ್ನೂ 31 ವರ್ಷದ ಆಟಗಾರ ಹಿಂದಿಕ್ಕಿದ್ದಾರೆ.

ರೆಕಾರ್ಡ್​ ಮಾತ್ರ, ಗೆಲುವು ಇಲ್ಲ

ಮೊಹಮ್ಮದ್ ರಿಜ್ವಾನ್ ಮತ್ತು ಪಾಕಿಸ್ತಾನ ಇಬ್ಬರಿಗೂ ರಾತ್ರಿ ಅಂತಿಮವಾಗಿ ಉತ್ತಮವಾಗಿ ಕೊನೆಗೊಳ್ಳಲಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ತಮ್ಮ 3000 ನೇ ಟಿ 20 ರನ್ ತಲುಪಿದ ಕೂಡಲೇ ಗಾಯಗೊಂಡರು. ಪಾಕಿಸ್ತಾನ 178 ರನ್ ಗಳಿಸಿದ್ದ ಮೊದಲ ಇನಿಂಗ್ಸ್​​ನಲ್ಲಿ 21 ಎಸೆತಗಳಲ್ಲಿ 22 ರನ್ ಗಳಿಸಿದ ನಂತರ ರಿಜ್ವಾನ್ ಡ್ರೆಸ್ಸಿಂಗ್ ರೂಮ್​ಗೆ ಮರಳಿದರು. ಪ್ರತಿಯಾಗಿ ಆಡಿದ ಮೈಕೆಲ್ ಬ್ರೇಸ್ವೆಲ್ ನೇತೃತ್ವದ ನ್ಯೂಜಿಲ್ಯಾಂಡ್ ತಂಡ 19 ನೇ ಓವರ್​ನ ಎರಡನೇ ಎಸೆತದಲ್ಲಿ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.

ಇದನ್ನೂ ಓದಿ : Suresh Raina : ಧೋನಿ ನೇತೃತ್ವದಲ್ಲಿ ವಿಶ್ವ ಕಪ್ ಗೆದ್ದಿರುವುದು ಪೂರ್ವ ನಿಯೋಜಿತ; ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ ರೈನಾ!

ರಿಜ್ವಾನ್ ತನ್ನ ವೃತ್ತಿಜೀವನದಲ್ಲಿ ಬ್ರಾಡ್ಮನ್ ಹೊಂದಿದ್ದ ಸರಾಸರಿಗೆ ಹತ್ತಿರದಲ್ಲಿಯೂ ಇಲ್ಲ. ಹಾಗಿರುವಾಗ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಶಾಹೀನ್ ಅವರನ್ನು ಪ್ರಶ್ನಿಸಿದ್ದಾರೆ. ರಿಜ್ವಾನ್​ ಅವರನ್ನು ಬ್ರಾಡ್ಮನ್ ಎಂದು ಕರೆಯಲು ಹೇಗೆ ಸಾಧ್ಯ ಎಂದ ಪ್ರಶ್ನಿಸಿದ್ದಾರೆ.

ಬಾಬರ್ ಅಜಮ್ ಅವರನ್ನು ಮತ್ತೆ ನೇಮಕ ಮಾಡಲು ಪಿಸಿಬಿ ಕಳೆದ ತಿಂಗಳು ಅವರನ್ನು ನಾಯಕತ್ವದಿಂದ ವಜಾಗೊಳಿಸಿದ ನಂತರ ಕೆಲವು ಅಭಿಮಾನಿಗಳು ಅವರ ಮಾನಸಿಕ ಸ್ಥಿರತೆಯ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಹೀಗಾಗಿಯೇ ಶಾಹೀನ್ ರಿಜ್ವಾನ್ ಅವರನ್ನು ಟಿ 20 ಕ್ರಿಕೆಟ್​​ ಬ್ರಾಡ್ಮನ್ ಎಂದು ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.

Continue Reading

ಪ್ರಮುಖ ಸುದ್ದಿ

Suresh Raina : ಧೋನಿ ನೇತೃತ್ವದಲ್ಲಿ ವಿಶ್ವ ಕಪ್ ಗೆದ್ದಿರುವುದು ಪೂರ್ವ ನಿಯೋಜಿತ; ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ ರೈನಾ!

Suresh Raina: ಆ ವಿಶ್ವಕಪ್ ಆವೃತ್ತಿಯಲ್ಲಿ ಸುರೇಶ್ ಟೀಮ್ ಇಂಡಿಯಾ ಪರ ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಅವರು ತಂಡದ ಭಾಗವಾಗಿದ್ದರು. ವಿಶ್ವಕಪ್ ಗೆಲುವಿನ ವೇಳೆಯಲ್ಲಿ ಘಟಿಸಿರು ಪ್ರತಿಯೊಂದು ವಿಷಯವನ್ನೂ ತಿಳಿದಿದ್ದರು. ರೈನಾ ಕಡಿಮೆ ಪಂದ್ಯಗಳನ್ನು ಆಡಿರಬಹುದು. ಆದರೆ ಆಡಿದ ಪಂದ್ಯಗಳು ಬಹಳ ಮುಖ್ಯವಾಗಿದ್ದವು.

VISTARANEWS.COM


on

Suresh Raina
Koo

ನವದೆಹಲಿ: ಎಂಎಸ್ ಧೋನಿ (MS Dhoni) ನಾಯಕತ್ವದಲ್ಲಿ ಭಾರತ ತಂಡ 2011ರ ಏಕ ದಿನ ವಿಶ್ವ ಕಪ್​ (2011 ODI World Cup) ಗೆದ್ದಿದೆ. ಆ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಸುರೇಶ್ ರೈನಾ (Suresh Raina) ಕೂಡಾ ಭಾರತ ತಂಡದ ಭಾಗವಾಗಿದ್ದರು. ಅವರೀಗ ವಿಶ್ವ ಕಪ್​ ಗೆಲುವಿನ ಕುರಿತು ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ್ದು ಅದು ಪೂರ್ವ ನಿಯೋಜಿತ ಗೆಲುವು ಎಂದು ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ಫೈನಲ್​​ ಫೈನಲ್ ಗೆಲುವು ಸೇರಿದಂತೆ ಇಡೀ ಪಂದ್ಯಾವಳಿಯುನ್ನು ಮೊದಲೇ ಪ್ಲ್ಯಾನ್ ಮಾಡಲಾಗಿತ್ತು ಎಂದು ಎಂದು ರೈನಾ ಇತ್ತೀಚೆಗೆ ಲಾಲಾಂಟಾಪ್ ಸಂದರ್ಶನದಲ್ಲಿ ಹೇಳಿದ್ದಾರೆ. ಮಾಜಿ ಎಡಗೈ ಬ್ಯಾಟರ್​ ಆ ಸಂದರ್ಶನದಲ್ಲಿ ಇನ್ನಷ್ಟು ಆಸಕ್ತಿದಾಯಕ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಗಮನ ಸೆಳೆದಿರುವುದು ವಿಶ್ವ ಕಪ್ ಗೆಲುವು

ಆ ವಿಶ್ವಕಪ್ ಆವೃತ್ತಿಯಲ್ಲಿ ಸುರೇಶ್ ಟೀಮ್ ಇಂಡಿಯಾ ಪರ ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಅವರು ತಂಡದ ಭಾಗವಾಗಿದ್ದರು. ವಿಶ್ವಕಪ್ ಗೆಲುವಿನ ವೇಳೆಯಲ್ಲಿ ಘಟಿಸಿರು ಪ್ರತಿಯೊಂದು ವಿಷಯವನ್ನೂ ತಿಳಿದಿದ್ದರು. ರೈನಾ ಕಡಿಮೆ ಪಂದ್ಯಗಳನ್ನು ಆಡಿರಬಹುದು. ಆದರೆ ಆಡಿದ ಪಂದ್ಯಗಳು ಬಹಳ ಮುಖ್ಯವಾಗಿದ್ದವು. 50 ಓವರ್​ಗಳ ವಿಶ್ವಕಪ್​ನಲ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈನಲ್ಲಿ ಪಾದಾರ್ಪಣೆ ಮಾಡಿದ್ದರು.

ರೈನಾ ಚೊಚ್ಚಲ ವಿಶ್ವಕಪ್ ಆವೃತ್ತಿ

ಅಹ್ಮದಾಬಾದ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್​​ನ 2 ನೇ ಕ್ವಾರ್ಟರ್ ಫೈನಲ್​​ನಲ್ಲಿ ಸುರೇಶ್ ರೈನಾ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದರು ಅಲ್ಲಿ ಭಾರತವು ಹಾಲಿ ಚಾಂಪಿಯನ್​ಗಳನ್ನು ಸೋಲಿಸಿತು. ನಂತರ ಅವರು ಮೊಹಾಲಿಯಲ್ಲಿ ಪಾಕಿಸ್ತಾನ ವಿರುದ್ಧ ಸೆಮಿಫೈನಲ್​​ನಲ್ಲಿ ಆಡಿದರು. ಅವರ 4ನೇ ಪಂದ್ಯವು ಮುಂಬೈನಲ್ಲಿ ನಡೆದ ಫೈನಲ್ ಆಗಿತ್ತು. ಅಲ್ಲಿ ಭಾರತೀಯರು ಶ್ರೀಲಂಕಾವನ್ನು 6 ವಿಕೆಟ್​ಗಳಿಂದ ಸೋಲಿಸಿ 1983ರ ನಂತರ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದರು.

ಗೆಲವು ಹೇಗೆ ಪೂರ್ವ ನಿಯೋಜಿತ ಎಂಬ ಸುರೇಶ್ ರೈನಾ ವಿವರಣೆ ಹೀಗಿದೆ

ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ಬೇಗ ಔಟ್ ಆದ ತಕ್ಷಣ ಡ್ರೆಸ್ಸಿಂಗ್ ಕೋಣೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು ಎಂಬುದನ್ನು ಸುರೇಶ್ ರೈನಾ ಮೊದಲು ಒಪ್ಪಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ 3 ನೇ ವಿಕೆಟ್​​ಗೆ ಉತ್ತಮ ಜೊತೆಯಾಟ ನೀಡಿದಾಗ ಭರವಸೆಗಳು ಉಂಟಾದವು. ಕೊಹ್ಲಿ ನಿರ್ಗಮನದ ನಂತರ ಎಂಎಸ್ ಧೋನಿ ತಮ್ಮ ಪ್ರಧಾನ ಫಾರ್ಮ್​ನಲ್ಲಿದ್ದ ಯುವರಾಜ್ ಸಿಂಗ್ ಬದಲಿಗೆ ಬ್ಯಾಟಿಂಗ್ ಮಾಡಲು ಹೊರನಡೆದಿದ್ದು ಅಚ್ಚರಿ ರೈನಾ ನೆನಪಿಸಿಕೊಂಡರು.

ಇದನ್ನೂ ಓದಿ: Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

ಮುರಳೀಧರನ್ ಅವರ ಸ್ಪಿನ್ ದಾಳಿಯನ್ನು ನಿಭಾಯಿಸಲು ಯೋಜಿಸಿದ ಧೋನಿ, ಎಡಗೈ ಮತ್ತು ಬಲಗೈ ಸಂಯೋಜನೆಯನ್ನು ಬಯಸಿದ್ದರು. ಅದಕ್ಕಾಗಿ ಯುವರಾಜ್ ಅವರಿಗಿಂತ ಮೊದಲು ಧೋನಿ ಬ್ಯಾಟಿಂಗ್ ಮಾಡಲು ಮುಂದಾದರು ಎಂದು ಸುರೇಶ್ ರೈನಾ ಹೇಳಿದ್ದಾರೆ. ಮ್ಯಾನ್​ ಆಫ್​​​ ದಿ ಟೂರ್ನಮೆಂಟ್​ ಪ್ರಶಸ್ತಿ ಪಡೆದ ಯುವರಾಜ್ ಅವರಿಗಿಂತ ಮುಂದೆ ಹೋಗುವ ಧೋನಿಯ ನಿರ್ಧಾರವು ಮಾಸ್ಟರ್ ಸ್ಟ್ರೋಕ್ ಆಗಿತ್ತು. ಇವೆಲ್ಲವೂ ಪೂರ್ವ ನಿಯೋಜಿತ ಎಂದರು. ಅಂದ ಹಾಗೆ ಈ ನಿಯೋಜನೆಯನ್ನು ಮಾಡಿದ್ದು ಯಾರು ಎಂದು ಕೇಳಿದ ಪ್ರಶ್ನೆಗೆ ‘ಮೇಲಿರುವ ಭಗವಂತ’ ಎಂದು ಉತ್ತರಿಸಿದ್ದಾರೆ.

“ಮೊದಲ ಎರಡು ವಿಕೆಟ್​ಗಳು ಬಿದ್ದ ನಂತರ ಡ್ರೆಸ್ಸಿಂಗ್ ರೂಮ್​​ನಲ್ಲಿ ಮೌನವಿತ್ತು. ಆದರೆ ಗೌತಮ್ ಗಂಭೀರ್​ ಮತ್ತು ವಿರಾಟ್ ನಡುವಿನ ಪಾಲುದಾರಿಕೆ (ಪಂದ್ಯವನ್ನು ಬದಲಾಯಿಸಿತು). ವಿರಾಟ್ ವಿಕೆಟ್ ಬಿದ್ದಾಗ ನಾನು ಡ್ರೆಸ್ಸಿಂಗ್ ರೂಮ್​ನಲ್ಲಿದ್ದೆ. ಧೋನಿ ಭಾಯ್ ಬ್ಯಾಟಿಂಗ್ ಮಾಡಲು ಹೊರಗೆ ಹೊರಟರು. ನಾನು ಇದ್ದಕ್ಕಿದ್ದಂತೆ ಏನಾಯಿತು ಎಂದು ನೋಡಿದಾಗ ನಾನು ಹಾಗೆ ಭಾವಿಸಿದೆ”ಎಂದು ಸುರೇಶ್ ರೈನಾ ಹೇಳಿದ್ದಾರೆ.

“ಧೋನಿ ಭಾಯ್ ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಮಾಸ್ಟರ್ ಸ್ಟ್ರೋಕ್​ಗಳಾಗಿದ್ದವು. ಏಕೆಂದರೆ ಆ ಸಮಯದಲ್ಲಿ ಸಿಎಸ್​ಕೆ ಪರ ಆಡುತ್ತಿದ್ದ ಮುರಳೀಧರನ್ ಎದುರಾಳಿ ತಂಡದಲ್ಲಿದೆ. ಆದ್ದರಿಂದ ಯುವಿ ಪ್ರಧಾನ ಫಾರ್ಮ್​ನಲ್ಲಿದ್ದರೂ ಅವರು ಎಡ-ಬಲ ಸಂಯೋಜನೆಯನ್ನು ಹೊಂದಲು ಬಯಸಿದರು ಎಂದು ಹೇಳಿದ್ದಾರೆ.

ಇಡಿ ಟೂರ್ನಿಯಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡಲಾಗಿದೆ. ಆಟಗಾರರನ್ನು ಬಳಸಿಕೊಳ್ಳಲಾಗಿದೆ. ಆದ್ದರಿಂದ ವಿಶ್ವಕಪ್ ಸ್ಕ್ರಿಪ್ಟ್ ಮಾಡಲಾಗಿದೆ ಎಂದು ನನಗೆ ಅನಿಸಿತು. ಏನಾಗುತ್ತಿದೆಯೋ ಅದು ಖಂಡಿತವಾಗಿಯೂ ಸಂಭವಿಸುತ್ತದೆ ಮತ್ತು ಅದನ್ನು ಮೇಲಿನ ಭಗವಂತ ಬರೆದಿದ್ದಾನೆ”ಎಂದು ರೈನಾ ಮುಕ್ತಾಯಗೊಳಿಸಿದರು.

Continue Reading
Advertisement
Lok Sabha Election 2024
Lok Sabha Election 20246 mins ago

Lok Sabha Election 2024: ರಾಹುಲ್‌ ಗಾಂಧಿಯ ಡಿಎನ್‌ಎ ಪರೀಕ್ಷಿಸಬೇಕು; ವಿವಾದ ಹುಟ್ಟುಹಾಕಿದ ಶಾಸಕ ಅನ್ವರ್ ಹೇಳಿಕೆ

DCM DK Shivakumar Election campaign for Bangalore Rural Lok Sabha Constituency Congress candidate DK Suresh In Ramanagara
ರಾಮನಗರ18 mins ago

Lok Sabha Election 2024: ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ತಾರತಮ್ಯ ಧೋರಣೆ: ಡಿ.ಕೆ. ಸುರೇಶ್

Priyanka Gandhi
ಕರ್ನಾಟಕ24 mins ago

Priyanka Gandhi: ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಮಂಗಳಸೂತ್ರ ಉಳಿಸೋದು ಗೊತ್ತಿಲ್ಲವೇ?; ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

Lok Sabha Election 2024
Lok Sabha Election 202454 mins ago

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Amit Shah
ಕರ್ನಾಟಕ59 mins ago

Amit Shah: ಬೆಂಗಳೂರಲ್ಲಿ ಅಮಿತ್‌ ಶಾ ಹವಾ; ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ

Public Sector Banks
ಪ್ರಮುಖ ಸುದ್ದಿ2 hours ago

Public Sector Banks : ಸಾರ್ವಜನಿಕ ಬ್ಯಾಂಕ್​ಗಳು ಸಾಲ ಕಟ್ಟದವರಿಗೆ ಲುಕ್ ಔಟ್ ನೋಟಿಸ್​ ನೀಡುವಂತಿಲ್ಲ, ಕೋರ್ಟ್​​ ಆದೇಶ

Union Minister Pralhad Joshi visit Sri Nuggikeri Anjaneya Swamy Temple in dharwad
ಕರ್ನಾಟಕ2 hours ago

Pralhad Joshi: ಸಚಿವ ಪ್ರಲ್ಹಾದ್‌ ಜೋಶಿಗೆ ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದ; ತಾವರೆ ಹೂ ರೂಪದಲ್ಲಿ ಪ್ರಸಾದ!

Kanguva Budget
ಸಿನಿಮಾ2 hours ago

Kanguva Budget: ಭಾರಿ ಸದ್ದು ಮಾಡುತ್ತಿರುವ ಕಂಗುವ ಚಿತ್ರದ ಬಜೆಟ್ ಎಷ್ಟು ಗೊತ್ತೇ?

ook between H and L
ಪ್ರಮುಖ ಸುದ್ದಿ2 hours ago

Look between H and L : ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್​ ಆದ H ಮತ್ತು L; ಏನಿದರ ಗಮ್ಮತ್ತು?

Lok Sabha Election-2024
ರಾಜಕೀಯ2 hours ago

Lok Sabha Election 2024: ಬಿಜೆಪಿ, ಕಾಂಗ್ರೆಸ್‌ ಜತೆ ಇರುವ ಮಿತ್ರ ಪಕ್ಷಗಳ ಯಾವವು? ಇಲ್ಲಿದೆ ಅಂತಿಮ ಚಿತ್ರಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ18 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌