Lanka On Fire | ಲಂಕಾ ಕ್ರಿಕೆಟಿಗನಿಗೆ ಅಭ್ಯಾಸಕ್ಕೆ ಹೋಗಲೂ ಪೆಟ್ರೋಲ್‌ ಸಿಗುತ್ತಿಲ್ಲ - Vistara News

ಕ್ರಿಕೆಟ್

Lanka On Fire | ಲಂಕಾ ಕ್ರಿಕೆಟಿಗನಿಗೆ ಅಭ್ಯಾಸಕ್ಕೆ ಹೋಗಲೂ ಪೆಟ್ರೋಲ್‌ ಸಿಗುತ್ತಿಲ್ಲ

ಆರ್ಥಿಕ ತುರ್ತು ಪರಿಸ್ಥಿತಿ (Lanka On Fire) ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಪೆಟ್ರೋಲ್‌ ಸಿಗದ ಕಾರಣ ಕ್ರಿಕೆಟಿಗ ಚಾಮಿಕ ಕರಣಾರತ್ನೆಗೆ ಅಭ್ಯಾಸಕ್ಕೆ ತೆರಳಲೂ ಸಾಧ್ಯವಾಗುತ್ತಿಲ್ಲ.

VISTARANEWS.COM


on

lanka on fire
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಲಂಬೊ: ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ತುರ್ತು ಪರಿಸ್ಥಿತಿ (Lanka On Fire ) ಬಿಗಡಾಯಿಸುತ್ತಿದ್ದು, ದಿನದಿಂದ ದಿನಕ್ಕೆ ಜನಜೀವನ ದುಸ್ತರವಾಗುತ್ತಿದೆ. ಪ್ರಮುಖವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ಕೊರತೆ ತಲೆದೋರಿದ್ದು, ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುವುದೂ ಕಷ್ಟ ಎನಿಸಿದೆ. ಶ್ರೀಲಂಕಾ ಕ್ರಿಕೆಟ್‌ ತಂಡದ ಆಟಗಾರ ಚಾಮಿಕಾ ಕರುಣಾರತ್ನೆಗೂ ಇದೇ ಸಮಸ್ಯೆ ಎದುರಾಗಿದ್ದು, ಕಾರಿಗೆ ಪೆಟ್ರೋಲ್‌ ಸಿಗದೇ ಅಭ್ಯಾಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

೨೬ ವರ್ಷದ ಯುವ ಆಟಗಾರ ಚಾಮಿಕಾ ಕರುಣಾರತ್ನೆ ಮುಂಬರುವ ಏಷ್ಯಾ ಕಪ್‌ಗೆ ಅಭ್ಯಾಸ ನಡೆಸುವ ಉದ್ದೇಶ ಹೊಂದಿದ್ದಾರೆ. ಆದರೆ ಅವರಿಗೆ ಕ್ಲಬ್‌ ಹಾಗೂ ಬೇರೆ ಬೇರೆ ಗ್ರೌಂಡ್‌ಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಪೆಟ್ರೋಲ್‌ ಸಿಗದ ಕಾರಣ ಮನೆಯಿಂದ ಹೊರಗೆ ಕಾಲಿಡಲೂ ಸಾಧ್ಯವಾಗುತ್ತಿಲ್ಲ.

ಚಾಮಿಕಾ ಅವರು ಎಎನ್‌ಐ ಜತೆ ಮಾತನಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಣಗೊಳ್ಳುತ್ತಿದೆ “ಏಷ್ಯಾ ಕಪ್‌ ಶ್ರೀಲಂಕಾದಲ್ಲಿ ನಡೆಯಬೇಕಾಗಿದೆ. ಅಲ್ಲದೆ, ನಾನು ಕೊಲಂಬೊಗೆ ಅಭ್ಯಾಸಕ್ಕೆ ತೆರಳಬೇಕಾಗಿದೆ. ಅಥವಾ ಕ್ಲಬ್‌ಗೆ ನೆಟ್‌ ಪ್ರಾಕ್ಟೀಸ್‌ಗೆ ತೆರಳಬೇಕು. ಆದರೆ ಎರಡು ದಿನಗಳಿಂದ ಪೆಟ್ರೋಲ್‌ ಬಂಕ್‌ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದೇನೆ. ಇದೀಗ ೧೦೦೦೦ ರೂಪಾಯಿಗೆ ಪೆಟ್ರೋಲ್‌ ದೊರಕಿದೆ. ಅದೂ ಒಂದೆರಡು ದಿನಗಳಿಗೆ ಸಾಕಾಗಬಹುದು. ಮುಂದೇನು ಮಾಡುವುದು ಗೊತ್ತಿಲ್ಲʼ ಎಂದು ಚಾಮಿಕಾ ಅವರು ಹೇಳಿದ್ದಾರೆ.

ಭಾರತಕ್ಕೆ ಥ್ಯಾಂಕ್ಸ್‌

“ಭಾರತ ನಮ್ಮ ಸಹೋದರ ದೇಶ. ನಾವು ಸಂಕಷ್ಟದಲ್ಲಿ ಇದ್ದ ವೇಳೆ ಭಾರತ ದೇಶ ನಮ್ಮ ನೆರವಿಗೆ ಬಂದಿದೆ. ನಮಗೆ ಸಾಕಷ್ಟು ನೆರವು ನೀಡಿದೆ. ಅವರಿಗೆ ಧನ್ಯವಾದಗಳು,ʼʼ ಎಂದು ಚಾಮಿಕಾ ಹೇಳಿದ್ದಾರೆ.

ಇದನ್ನೂ ಓದಿ | Lanka on fire| ಶ್ರೀಲಂಕಾ ಬಿಟ್ಟು ಹೋಗದಂತೆ ಮಾಜಿ ಪ್ರಧಾನಿ ಮಹೀಂದ್ರಾ ರಾಜಪಕ್ಸಗೆ ನಿರ್ಬಂಧ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

RCB vs SRH: 300 ರನ್​ ಹೊಡೆಸಿಕೊಳ್ಳದಿರಲಿ ಆರ್​ಸಿಬಿ; ನಾಳೆ ಸನ್​ರೈಸರ್ಸ್ ವಿರುದ್ಧ ಕಣಕ್ಕೆ

RCB vs SRH: ಆರ್​ಸಿಬಿ(RCB) ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 7 ಸೋಲು ಕಂಡು ಪ್ಲೇ ಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ ಆರ್​ಸಿಬಿ ಸನ್​ರೈಸರ್ಸ್(RCB vs SRH)​ ವಿರುದ್ಧ ಪಂದ್ಯ ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು.

VISTARANEWS.COM


on

RCB vs SRH
Koo

ಹೈದರಾಬಾದ್​: ಮೊದಲ ಮುಖಾಮುಖಿಯಲ್ಲಿ ಸನ್​ರೈಸರ್ಸ್(RCB vs SRH)​ ವಿರುದ್ಧ ದಾಖಲೆಯ 287 ರನ್​ ಚಚ್ಚಿಸಿಕೊಂಡು ಸೋಲು ಕಂಡಿದ್ದ ಆರ್​ಸಿಬಿ ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿ ನಾಳೆ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ, ಸದ್ಯದ ಆರ್​ಸಿಬಿ ಪರಿಸ್ಥಿತಿ ನೋಡುವಾಗ ಇದು ಅಸಾಧ್ಯವೆನ್ನುವಂತೆ ತೋರುತ್ತಿದೆ. ಏಕೆಂದರೆ ಆರ್​ಸಿಬಿ(RCB) ಇದುವರೆಗೆ ಆಡಿದ 8 ಪಂದ್ಯಗಳಲ್ಲಿ 7 ಸೋಲು ಕಂಡು ಪ್ಲೇ ಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಹೀಗಾಗಿ ಆರ್​ಸಿಬಿ ಪಾಲಿಗೆ ಇದೊಂದು ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು.

ಪ್ರತಿ ಐಪಿಎಲ್‌(IPL 2024) ಆರಂಭದ ಸಂದರ್ಭದಲ್ಲಿಯೂ ಆರ್‌ಸಿಬಿ ಒಂದು ಕ್ರೇಜ್‌ ಹುಟ್ಟಿಸುತ್ತದೆ. ದುರಾದೃಷ್ಟವಶಾತ್‌ ಈ ಕ್ರೇಜ್‌ ಬಹುಕಾಲ ಉಳಿಯುವುದಿಲ್ಲ. ಈ ಬಾರಿಯೂ ಅದೇ ರಾಗ ಅದೇ ಹಾಡು. ಅದರಲ್ಲಿಯೂ ಈ ಬಾರಿ ಹೊಸ ಅಧ್ಯಾಯ ಎಂದು ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಆದರೆ ಇದೀಗ ಕ್ಷಮಿಸಿ ನಮ್ಮದು ಮುದಿದು ಹೋದ ಅಧ್ಯಾಯ ಎನ್ನುವ ಹಂತಕ್ಕೆ ತಲುಪಿದೆ. ಹೊಸ ಅಧ್ಯಾಯ ಅಂತ ಆರ್‌ಸಿಬಿ ಆಟಗಾರರು ಹೇಳಿಕೊಂಡಿದ್ದ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು. ಆದರೆ, ಇದೀಗ ಆರ್‌ಸಿಬಿ ನಿರಂತರ ಸೋಲು ಅನುಭವಿಸುತ್ತಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಇತರ ತಂಡಗಳ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

ತವರಿನಲ್ಲೇ ಹೈದರಾಬಾದ್​ ವಿರುದ್ಧ ಸರಿಯಾಗಿ ಚಚ್ಚಿಸಿಕೊಂಡಿದ್ದ ಆರ್​ಸಿಬಿ ಮತ್ತೊಂದು ಪಂದ್ಯ ಆಡುತ್ತದೆ ಎನ್ನುವಾಗಲೇ ಅಭಿಮಾನಿಗಳು ಸೋಲು ಖಚಿತ ಆದರೆ, ಟಾಸ್​ ಗೆದ್ದು ಆರ್​ಸಿಬಿ ಮೊದಲು ಬ್ಯಾಟಿಂಗ್​ ನಡೆಸಲಿ ಎಂದು ಹಾರೈಸಿದ್ದಾರೆ. ಏಕೆಂದರೆ ಹೈದರಾಬಾದ್​ ಮೊದಲು ಬ್ಯಾಟಿಂಗ್​ ನಡೆಸಿದೆ 300 ರನ್​ ಬಾರಿಸುವು ನಿಶ್ಚಿತ ಎಂದು ಸ್ವತಃ ಆರ್​ಸಿಬಿ ಅಭಿಮಾನಿಗಳೇ ಹೇಳತೊಡಗಿದ್ದಾರೆ.

ಹೈದರಾಬಾದ್​ ಬಲಿಷ್ಠ


ಈ ಬಾರಿಯ ಐಪಿಎಲ್​ನಲ್ಲಿ ರನ್​ ಮಳೆಯೇ ಹರಿಸುತ್ತಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಇದು ತವರಿನ ಪಂದ್ಯ. ಬಲಿಷ್ಠ ಬ್ಯಾಟಿಂಗ್​ ಲೈನ್​ ಅಪ್​ ಹೊಂದಿರುವ ಹೈದರಾಬಾದ್​ ಪರ ಅಭಿಷೇಕ್​ ಶರ್ಮ ಮತ್ತು ಟ್ರಾವಿಸ್​ ಹೆಡ್​ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. 5 ಓವರ್​ನಲ್ಲಿಯೇ 100 ರನ್​ ಬಾರಿಸುವ ಸಾಮರ್ಥ ಇವರಲ್ಲಿದೆ. ಅದರಲ್ಲೂ ಕಳಪೆ ಬೌಲಿಂಗ್​ ಹೊಂದಿರುವ ಆರ್​ಸಿಬಿ ವಿರುದ್ಧ ಮೊದಲು ಬ್ಯಾಟಿಂಗ್​ ನಡೆಸಿದರೆ 300 ರನ್​ ಬಾರಿಸುವ ಸಾಮರ್ಥವೂ ತಂಡಕ್ಕಿದೆ.

ಇದನ್ನೂ ಓದಿ IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ, ಟ್ರಾವಿಸ್​ ಹೆಡ್​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್​ ಕ್ಲಾಸೆನ್​, ಐಡೆನ್​ ಮಾರ್ಕ್ರಮ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

ಸಂಭಾವ್ಯ ತಂಡಗಳು


ಆರ್​ಸಿಬಿ:
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್,ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಸಿರಾಜ್.

ಸನ್​ರೈಸರ್ಸ್​ ಹೈದರಾಬಾದ್​: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್​, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ , ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್.

Continue Reading

ಕ್ರೀಡೆ

MS Dhoni: ಸಿಟ್ಟಿನಲ್ಲಿ ಕ್ಯಾಮೆರಾಗೆ ನೀರಿನ ಬಾಟಲ್​ ಎಸೆಯಲು ಮುಂದಾದ ಧೋನಿ; ವಿಡಿಯೊ ವೈರಲ್​

MS Dhoni: ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಕಳೆದ ವರ್ಷ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು.

VISTARANEWS.COM


on

MS Dhoni
Koo

ಚೆನ್ನೈ: ವಿದಾಯದ ಐಪಿಎಲ್(IPL 2024)​ ಟೂರ್ನಿ ಆಡುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್(CSK)​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಕ್ಯಾಮೆರಾಮೆನ್​ಗಳು ಧೋನಿಯನ್ನು ಪಂದ್ಯದ ನಡುವೆ ತೋರಿಸಿದಾಗಲೆಲ್ಲವೂ ಸ್ಟೇಡಿಯಂನಲ್ಲಿ ಧೋನಿಯ ಹೆಸರು ಜೋರಾಗಿ ಕೇಳಿ ಬರುತ್ತದೆ. ಮಂಗಳವಾರದ ಲಕ್ನೋ(Lucknow Super Giants) ವಿರುದ್ಧದ ಪಂದ್ಯದ ವೇಳೆಯೂ ಧೋನಿ ಬ್ಯಾಟಿಂಗ್​ಗೆ ರೆಡಿಯಾಗಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಇರುವುದನ್ನು ದೊಡ್ಡ ಪರದೆಯಲ್ಲಿ ತೋರಿಸಲಾಯಿತು. ಈ ವೇಳೆ ಧೋನಿ ಕೋಪಗೊಂಡು ಕ್ಯಾಮೆರಾಗೆ ನೀರಿನ ಬಾಟಲ್​ ಎಸೆಯಲು ಮುಂದಾಗಿದ್ದಾರೆ. ತಕ್ಷಣ ಕ್ಯಾಮೆರಾಮೆನ್​ ತನ್ನ ಕ್ಯಾಮೆರಾವನ್ನು ಬೇರೆಡೆಗೆ ತಿರುಗಿಸಿದ್ದಾನೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ.

ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಕಳೆದ ವರ್ಷ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಕಳೆದ ಮುಂಬೈ ಮತ್ತು ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿದ ವೇಳೆ ಕುಂಟುತಾ ನಡೆದಾಡಿದ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು. ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯಗೆ ಹ್ಯಾಟ್ರಿಕ್​ ಸಿಕ್ಸರ್​ಗಳ ರುಚಿ ತೋರಿಸಿದ್ದರು. ವಯಸ್ಸು 42 ಆದರೂ, ತಮ್ಮ ಬ್ಯಾಟಿಂಗ್​ ಫಾರ್ಮ್​ ಮಾತ್ರ ಈ ಹಿಂದಿನಂತೆಯೇ ಇದೆ.​

ಇದನ್ನೂ ಓದಿ IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

ಧೋನಿ ಅವರು ಲಕ್ನೋ ವಿರುದ್ಧ ಕೇವಲ ಒಂದು ಎಸೆತ ಎದುರಿಸಿ ಬೌಂಡರಿ ಮೂಲಕ ಅಜೇಯ 4 ರನ್ ಗಳಿಸಿದರು. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಲಕ್ನೋ 19.3 ಓವರ್‌ ಗಳಲ್ಲಿ 4 ವಿಕೆಟ್‌ಗೆ 213 ರನ್‌ ಗಳಿಸಿ, 6 ವಿಕೆಟ್‌ ಗಳಿಂದ ಜಯಭೇರಿ ಬಾರಿಸಿತು.

Continue Reading

ಕ್ರಿಕೆಟ್

Shubman Gill: ಶತಕದ ಐಪಿಎಲ್​ ಪಂದ್ಯವನ್ನಾಡಲು ಸಜ್ಜಾದ ಗಿಲ್​; ಸಾಧನೆ ಹೇಗಿದೆ?

shubman gill: 2018ರಲ್ಲಿ ಕೆಕೆಆರ್ ತಂಡದ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್​ ಜರ್ನಿ ಆರಂಭಿಸಿದ ಶುಭಮನ್​ ಗಿಲ್​ ಇದುವರೆಗೆ 99 ಪಂದ್ಯಗಳನ್ನಾಡಿ ಮೂರು ಶತಕ, 20 ಅರ್ಧಶತಕ ಮತ್ತು ಒಂದು ಬಾರಿ ಆರೆಂಜ್​ ಕ್ಯಾಪ್​ ಗೆದ್ದಿದ್ದಾರೆ. ಜತೆಗೆ ಟ್ರೋಫಿ ಗೆದ್ದ ತಂಡದ ಸದ್ಯಸನೂ ಆಗಿದ್ದಾರೆ.

VISTARANEWS.COM


on

shubman gill
Koo

ನವದೆಹಲಿ: ಇಂದು ನಡೆಯುವ ಐಪಿಎಲ್(IPL 2024) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ಮತ್ತು ಗುಜರಾತ್​ ಟೈಟಾನ್ಸ್(Gujarat Titans)​ ಕಣಕ್ಕಿಳಿಯಲಿದೆ. ಈ ಪಂದ್ಯ ಟೀಮ್​ ಇಂಡಿಯಾದ ಯುವ ಆಟಗಾರ, ಗುಜರಾತ್​ ತಂಡದ ನಾಯಕ ಶುಭಮನ್​ ಗಿಲ್(Shubman Gill)​ ಅವರಿಗೆ 100ನೇ ಐಪಿಎಲ್​ ಪಂದ್ಯವಾಗಿದೆ. ಹೀಗಾಗಿ ಅವರ ಮೇಲೆ ಇಂದಿನ ಪಂದ್ಯದಲ್ಲಿ ಅಭಿಮಾನಿಗಳು ಭಾರೀ ನಿರೀಕ್ಷೆ ಇರಿಸಿದ್ದಾರೆ.

2018ರಲ್ಲಿ ಕೆಕೆಆರ್ ತಂಡದ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್​ ಜರ್ನಿ ಆರಂಭಿಸಿದ ಶುಭಮನ್​ ಗಿಲ್​ ಇದುವರೆಗೆ 99 ಪಂದ್ಯಗಳನ್ನಾಡಿ ಮೂರು ಶತಕ, 20 ಅರ್ಧಶತಕ ಮತ್ತು ಒಂದು ಬಾರಿ ಆರೆಂಜ್​ ಕ್ಯಾಪ್​ ಗೆದ್ದಿದ್ದಾರೆ. ಜತೆಗೆ ಟ್ರೋಫಿ ಗೆದ್ದ ತಂಡದ ಸದ್ಯಸನೂ ಆಗಿದ್ದಾರೆ. ಇದೀಗ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. 3088 ರನ್​ ಕೂಡ ಬಾರಿಸಿದ್ದಾರೆ. ಸದ್ಯ ಗುಜರಾತ್‌ ಎಂಟರಲ್ಲಿ 4 ಪಂದ್ಯ ಗೆದ್ದು 6ನೇ ಸ್ಥಾನದಲ್ಲಿದೆ. ಇಂದು ಗೆದ್ದರೆ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಬಹುದು.

ಗುಜರಾತ್​ಗೆ ಸೇಡಿನ ಪಂದ್ಯ


ಈ ಪಂದ್ಯ ಗುಜರಾತ್​ಗೆ ಸೇಡಿನ ಪಂದ್ಯವಾಗಿದೆ. ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಅದು ಕೂಡ ತವರಿನ ಅಂಗಳದಲ್ಲಿ ಕೇವಲ 89 ರನ್​ಗೆ ಆಲೌಟ್​ ಆಗುವ ಮೂಲಕ ತವರಿನ ಪ್ರೇಕ್ಷಕರ ಮುಂದೆಯೇ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಇದೀಗ ಈ ಸೋಲಿಗೆ ಡೆಲ್ಲಿಗೆ ತವರಿನಲ್ಲೇ ಸೋಲುಣಿಸಿ ಸೇಡು ತೀರಿಸುವ ತವಕದಲ್ಲಿದೆ. ಗುಜರಾತ್‌ ಬ್ಯಾಟಿಂಗ್‌ ಸರದಿಯಲ್ಲಿ ಸಾಯಿ ಸುದರ್ಶನ್‌, ಡೇವಿಡ್‌ ಮಿಲ್ಲರ್‌, ಒಮರ್‌ಜಾಯ್‌, ತೆವಾಟಿಯ ಇನ್ನಿಂಗ್ಸ್‌ ಬೆಳೆಸುವ ಜತೆಗೆ ಬಿರುಸಿನ ಆಟ ಆಡಬೇಕಿದೆ.

ಡೆಲ್ಲಿ ಬ್ಯಾಟಿಂಗ್‌ ಸರದಿಯ ಸಮಸ್ಯೆಯೆಂದರೆ ಓಪನಿಂಗ್‌ ವೈಫ‌ಲ್ಯ. ವಾರ್ನರ್‌-ಪೃಥ್ವಿ ಶಾ ಬಡಬಡಣೆ ಒಂದೆರಡು ಬೌಂಡರಿ ಬಾರಿಸಿ ವಿಕೆಟ್​ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾಗುತ್ತಿದ್ದಾರೆ. ಹೀಗಾಗಿ ಪವರ್‌ ಪ್ಲೇಯಲ್ಲಿ ರನ್‌ ಹರಿದು ಬರುತ್ತಿಲ್ಲ. ಬದಲಿ ಆಟಗಾರನಾಗಿ ತಂಡ ಸೇರಿದ ಆಸ್ಟ್ರೇಲಿಯಾದ ಯುವ ಬ್ಯಾಟರ್​ ಫ್ರೇಜರ್​- ಮೆಕ್‌ಗರ್ಕ್‌, ಇಂಪ್ಯಾಕ್ಟ್​ ಆಟಗಾರ ಅಭಿಷೇಕ್​ ಪೊರೆಲ್‌ ಮತ್ತು ನಾಯಕ ಪಂತ್‌ ಹೊರತುಪಡಿಸಿ ಉಳಿದವರೆಲ್ಲ ರನ್‌ ಬರಗಾಲದಲ್ಲಿದ್ದಾರೆ. ಬೌಲಿಂಗ್​ ಕೂಡ ಅಷ್ಟಕ್ಕಷ್ಟೇ. ಖಲೀಲ್​ ಅಹ್ಮದ್​ ದುಬಾರಿಯಾಗುತ್ತಿದ್ದಾರೆ.

ಇದನ್ನೂ ಓದಿ IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

ಸಂಭಾವ್ಯ ತಂಡಗಳು


ಗುಜರಾತ್​: ವೃದ್ಧಿಮಾನ್ ಸಹಾ, ಶುಭಮನ್ ಗಿಲ್ (ನಾಯಕ), ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ನೂರ್ ಅಹ್ಮದ್, ಸಂದೀಪ್ ವಾರಿಯರ್, ಮೋಹಿತ್ ಶರ್ಮಾ.

ಡೆಲ್ಲಿ ಕ್ಯಾಪಿಟಲ್ಸ್​: ಡೇವಿಡ್ ವಾರ್ನರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ರಿಷಭ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್.

Continue Reading

ಕ್ರಿಕೆಟ್

Sachin Birthday: ಕ್ರಿಕೆಟ್ ದೇವರ ಕುರಿತ 30 ಕುತೂಹಲಕರ ಸಂಗತಿಗಳಿವು

Sachin Birthday: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಗ್ಗೆ ಸಾಕಷ್ಟು ವಿಚಾರಗಳು ನಮಗೆ ತಿಳಿದಿದೆ. ಆದರೂ ಮತ್ತಷ್ಟು ತಿಳಿಯಬೇಕೆನ್ನುವ ಆಸೆಯಂತೂ ಎಲ್ಲರಿಗೂ ಇದೆ. ಇಂದು 51ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿರುವ ಸಚಿನ್ ಅವರ ಬಗೆಗಿನ 30 ಪ್ರಮುಖ ಸಂಗತಿಗಳು ಇಂತಿವೆ.

VISTARANEWS.COM


on

By

Sachin Tendulkar
Koo

ಕ್ರಿಕೆಟ್ (Cricket) ದೇವರು ಸಚಿನ್ ತೆಂಡೂಲ್ಕರ್ (Sachin Birthday) ಅವರಿಗೆ ಇಂದು 51 ಜನ್ಮ ದಿನದ (birthday) ಸಂಭ್ರಮ. ಭಾರತದ (india) ಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಸಚಿನ್ ಅವರ ಜನ್ಮ ದಿನವನ್ನು ಇಡೀ ಜಗತ್ತೇ ಇಂದು ಆಚರಿಸುತ್ತಿದೆ. ಜೀವನದ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಸಾಧನೆ ಮಾಡಿದ ತೆಂಡೂಲ್ಕರ್ ಅವರು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

ಭಾರತದ ಪ್ರತಿಷ್ಠಿತ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್‌ ಏಪ್ರಿಲ್ 24ರಂದು 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಜೀವನದ 30 ಆಕರ್ಷಕ ವಿಷಯಗಳನ್ನು ತಿಳಿಯೋಣ.

1. ಸಚಿನ್ ತೆಂಡೂಲ್ಕರ್ ರಣಜಿ ತಂಡಕ್ಕೆ ಸೇರಿದಾಗ ಅವರಿಗೆ 14 ವರ್ಷ. ಆಗ ರಣಜಿ ತಂಡಕ್ಕೆ ಸೇರಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯೂ ಅವರದಾಗಿತ್ತು.

2. ಸಚಿನ್ ತೆಂಡೂಲ್ಕರ್ 1987ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಬಾಲ್‌ಬಾಯ್ ಆಗಿದ್ದರು.

3. ಸಚಿನ್ ತೆಂಡೂಲ್ಕರ್ ಅವರು ಕಾಲಿಗೆ ಪ್ಯಾಡ್ ಕಟ್ಟುವಾಗ ಮೊದಲು ಎಡ, ಬಳಿಕ ಬಲ ಬದಿಯ ಪ್ಯಾಡ್ ಅನ್ನು ಹಾಕುತ್ತಾರೆ. ಇದರಿಂದ ಉತ್ತಮವಾಗಿ ಆಡಬಹುದು ಎನ್ನುವ ನಂಬಿಕೆ ಅವರದಾಗಿತ್ತು.

4. ನಿದ್ದೆಯಲ್ಲಿ ಮಾತನಾಡುವುದು, ನಡೆಯುವುದು ಸಚಿನ್ ತೆಂಡೂಲ್ಕರ್ ಅವರ ಅಭ್ಯಾಸವಾಗಿತ್ತು. ಸಂದೀಪ್ ಪಾಟೀಲ್ ಮತ್ತು ಕ್ಲೇಟನ್ ಮುರ್ಜೆಲ್ಲೊ ಅವರ ಪುಸ್ತಕ ಕ್ಯಾಟ್ ಟೋಲ್ಡ್: ಹ್ಯೂಮರಸ್ ಕ್ರಿಕೆಟಿಂಗ್ ಅನೆಕ್ಡೋಟ್ಸ್‌ ನಲ್ಲಿ ಇದನ್ನು ಹೇಳಲಾಗಿದೆ.

5. ಪ್ರಸಿದ್ಧ ಆಸ್ಟ್ರೇಲಿಯಾದ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ 1987ರಲ್ಲಿ ಚೆನ್ನೈನ ಎಂಆರ್ ಎಫ್ ಪೇಸ್ ಅಕಾಡೆಮಿಯಲ್ಲಿ ಭಾಗಿಯಾಗುವ ಸಚಿನ್ ತಂಡೂಲ್ಕರ್ ಅವರ ಆಸೆಯನ್ನು ತಿರಸ್ಕರಿಸಿದ್ದರು!


6. ಸಚಿನ್ ತೆಂಡೂಲ್ಕರ್ ಅವರು ಬಾಂಬೆ ರಣಜಿ ತಂಡದೊಂದಿಗೆ ಪ್ರವಾಸದಲ್ಲಿದ್ದಾಗ ಓದಲು ತಮ್ಮ ಪಠ್ಯಪುಸ್ತಕಗಳನ್ನು ತಂದಿದ್ದರು!

7. ಸೋತ ತಂಡದ ಆಟಗಾರನಾಗಿ ಸಚಿನ್ ತೆಂಡೂಲ್ಕರ್ ಆರು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿರುವುದು ದಾಖಲೆಯಾಗಿದೆ.

8. ಯುನೈಟೆಡ್ ಕಿಂಗ್‌ಡಮ್‌ನಲ್ಲಿ 1990ರಲ್ಲಿ ಸಚಿನ್ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸಿದಾಗ ಅವರ ವಯಸ್ಸು 18. ಆಗ ಅವರಿಗೆ ಷಾಂಪೇನ್ ಬಾಟಲಿಯನ್ನು ಪಂದ್ಯಶ್ರೇಷ್ಠ ಟ್ರೋಫಿಯಾಗಿ ನೀಡಲಾಯಿತು. ಕಾನೂನುಬದ್ಧವಾಗಿ ಕುಡಿಯಬಹುದಾದ ವಯಸ್ಸಿನಲ್ಲಿದ್ದ ಸಚಿನ್ ಗೆ ಅದನ್ನು ತೆರೆಯಲು ಬರಲಿಲ್ಲ. 1998ರಲ್ಲಿ ಅವರ ಮಗಳು ಸಾರಾ ತಮ್ಮ ಮೊದಲ ಹುಟ್ಟುಹಬ್ಬದಂದು ಅದನ್ನು ಅಂತಿಮವಾಗಿ ತೆರೆದರು!


9. 1988ರಲ್ಲಿ ಇಂಟರ್-ಸ್ಕೂಲ್ ಪಂದ್ಯದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಭಾರತದ ಮಾಜಿ ಸ್ಟಾರ್ ಆಟಗಾರ ವಿನೋದ್ ಕಾಂಬ್ಳಿ 664 ರನ್‌ಗಳ ಜೊತೆಯಾಟದ ಮೂಲಕ ದಾಖಲೆಯನ್ನು ಬರೆದಿದ್ದರು.

10. 1992ರಲ್ಲಿ ಯಾರ್ಕ್‌ಷೈರ್‌ಗೆ ಮೊದಲ ವಿದೇಶಿ ಕ್ರಿಕೆಟಿಗರಾಗಿದ್ದ ಸಚಿನ್ ತೆಂಡೂಲ್ಕರ್ 19ನೇ ವಯಸ್ಸಿಗೆ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಭಾರತೀಯರು.

11. ಟಿವಿ ವಿಮರ್ಶೆಯ ಅನಂತರ ಮೂರನೇ ಅಂಪೈರ್‌ನಿಂದ ವಜಾಗೊಂಡ ಮೊದಲ ಆಟಗಾರ ಸಚಿನ್ ತೆಂಡೂಲ್ಕರ್. ಇದು ಭಾರತದ 1992-1993 ರ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ನಡೆದಿತ್ತು.

12. ಎಲ್ಲಾ ಮೂರು ಪ್ರಮುಖ ದೇಶೀಯ ಪ್ರಥಮ ದರ್ಜೆ ಪಂದ್ಯಾವಳಿಗಳಾದ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಇರಾನಿ ಕಪ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರು ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕಗಳನ್ನು ಗಳಿಸಿದ್ದರು.

13. ಭಾರತದ ಐಕಾನ್ ಸುನಿಲ್ ಗವಾಸ್ಕರ್ ಅವರು ಪಂದ್ಯದುದ್ದಕ್ಕೂ ಧರಿಸಿದ್ದ ಬ್ಯಾಟಿಂಗ್ ಪ್ಯಾಡ್‌ಗಳನ್ನು ಕರಾಚಿಯಲ್ಲಿ ಚೊಚ್ಚಲ ಟೆಸ್ಟ್ ಪಂದ್ಯಕ್ಕಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಲಾಯಿತು.

14. ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಸಚಿನ್ ತೆಂಡೂಲ್ಕರ್ 90ರ ದಶಕದಲ್ಲಿ 23 ಬಾರಿ ಔಟಾದರು. ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 200 ವಿಕೆಟ್ ಗಳನ್ನು ಗಳಿಸಿದ್ದಾರೆ. ಇದರಲ್ಲಿ ಟೆಸ್ಟ್ ನಲ್ಲಿ 45, ಓಡಿಐ ಗಳಲ್ಲಿ 154 ಮತ್ತು ಟಿ20 ಗಳಲ್ಲಿ ಒಂದು.

15. ಸಚಿನ್ ತೆಂಡೂಲ್ಕರ್ ಅವರು 2010ರ ಸೆಪ್ಟೆಂಬರ್ 3ರಂದು ಭಾರತೀಯ ವಾಯುಪಡೆಯಿಂದ ಗ್ರೂಪ್ ಕ್ಯಾಪ್ಟನ್ ಗೌರವ ಶ್ರೇಣಿಯನ್ನು ಪಡೆದ ಮೊದಲ ಆಟಗಾರರಾಗಿದ್ದಾರೆ.

16. 2012ರ ಜೂನ್ 4ರಂದು ಸಚಿನ್ ತೆಂಡೂಲ್ಕರ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರು ಅಧಿಕೃತವಾಗಿ ಸಂಸತ್ತಿನ ಸದಸ್ಯರಾದರು.

17. 1975ರಿಂದ 1996ರವರೆಗೆ ಪ್ರತಿ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ಜಾವೇದ್ ಮಿಯಾಂದಾದ್ 1992 ಮತ್ತು 2011 ರ ನಡುವೆ 50 ಓವರ್‌ಗಳ ವಿಶ್ವಕಪ್‌ನಲ್ಲಿ ಆರು ಬಾರಿ ಕಾಣಿಸಿಕೊಂಡಿದ್ದಾರೆ.

18. ಕೊಚ್ಚಿಯಲ್ಲಿ ಎರಡು ಬಾರಿ ಸಚಿನ್ ತೆಂಡೂಲ್ಕರ್ ಓಡಿಐನಲ್ಲಿ ತಲಾ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಅದು 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧ 5/32 ಮತ್ತು 2005ರಲ್ಲಿ ಪಾಕಿಸ್ತಾನದ ವಿರುದ್ಧ 5/50.

19. ಸಚಿನ್ ತೆಂಡೂಲ್ಕರ್ ಅವರ 51 ಟೆಸ್ಟ್ ಶತಕಗಳಲ್ಲಿ 20 ಜಯ, 11 ಸೋಲು. ಉಳಿದ ಇಪ್ಪತ್ತು ಡ್ರಾ ಪರೀಕ್ಷೆಗೆ ಬಂದಿತ್ತು.


20. ಸಚಿನ್ ತೆಂಡೂಲ್ಕರ್ ಜಿಂಬಾಬ್ವೆಯಲ್ಲಿ ಟೆಸ್ಟ್ ಶತಕ ದಾಖಲಿಸಿಲ್ಲ.

21. ಸಚಿನ್ ತೆಂಡೂಲ್ಕರ್ ಅವರ ಓಡಿಐ ಶತಕಗಳಲ್ಲಿ 33 ಗೆಲುವಿಗೆ ಕಾರಣವಾಗಿವೆ. 14 ಸೋಲು, ಒಂದು ಟೈನಲ್ಲಿ ಕೊನೆಗೊಂಡಿದ್ದು, ಒಂದು ಪಂದ್ಯ ಡ್ರಾ ಆಗಿದೆ.

22. ಓಡಿಐಗಳಲ್ಲಿ ಮೂರು ಬಾರಿ ಸಚಿನ್ ತೆಂಡೂಲ್ಕರ್ ಅವರನ್ನು 99 ರನ್‌ಗಳಿಗೆ ಔಟ್ ಆಗಿದ್ದು ಇವೆಲ್ಲವೂ 2007ರಲ್ಲಿ ನಡೆದಿತ್ತು.

23. ವಿಶ್ವಕಪ್ ಕ್ರಿಕೆಟ್‌ನಲ್ಲಿ 2,000 ಕ್ಕಿಂತ ಹೆಚ್ಚು ರನ್ ಮಾಡಿದ ಏಕೈಕ ಬ್ಯಾಟರ್ ಸಚಿನ್ ತೆಂಡೂಲ್ಕರ್. 45 ಪಂದ್ಯಗಳಲ್ಲಿ ಅವರು 2,278 ರನ್ ಗಳಿಸಿದ್ದಾರೆ.

24. 1995ರಲ್ಲಿ ವೇಷ ಹಾಕಿಕೊಂಡು ರೋಜಾ ಚಲನಚಿತ್ರವನ್ನು ನೋಡಲು ಹೋದರು. ಆದರೆ ಥಿಯೇಟರ್ನಲ್ಲಿ ಪ್ರೇಕ್ಷಕರು ಅವರನ್ನು ಗುರುತಿಸಿದ್ದರಿಂದ ಅವರು ತೊಂದರೆ ಅನುಭವಿಸಬೇಕಾಯಿತು.

25. ಲೆಜೆಂಡರಿ ಟೆನಿಸ್ ಆಟಗಾರ ಜಾನ್ ಮೆಕೆನ್ರೋ ಅವರ ಶ್ರೇಷ್ಠ ಅನುಯಾಯಿಯಾದ ತೆಂಡೂಲ್ಕರ್ ಅವರು ತಮ್ಮ ಕೂದಲನ್ನು ಬೆಳೆಸಿ ಅವರಂತೆ ಕಾಣುವ ಪ್ರಯತ್ನ ಮಾಡಿದ್ದರು.


26. ಸೌರವ್ ಗಂಗೂಲಿ ಅವರು ಸಚಿನ್ ಅವರನ್ನು “ಬಾಬು ಮೋಶಾಯ್” ಎಂದು ಉಲ್ಲೇಖಿಸುತ್ತಾರೆ. ಆದರೆ ಗಂಗೂಲಿ ಅವರನ್ನು “ಛೋಟಾ ಬಾಬು” ಎಂದು ಸಚಿನ್ ಹೇಳುತ್ತಾರೆ.

27. ತೆಂಡೂಲ್ಕರ್ ಅವರನ್ನು ಮೆಚ್ಚಿದ ಪ್ರಸಿದ್ಧ ಕ್ರೀಡಾ ವ್ಯಕ್ತಿಗಳಲ್ಲಿ ಅರ್ಜೆಂಟೀನಾದ ಫುಟ್‌ಬಾಲ್ ಆಟಗಾರ ಡಿಯಾಗೋ ಮರಡೋನಾ, ಟೆನಿಸ್ ಆಟಗಾರರಾದ ಪೀಟ್ ಸಾಂಪ್ರಾಸ್ ಮತ್ತು ಬೋರಿಸ್ ಬೆಕರ್ ಮತ್ತು ಅನೇಕರು ಸೇರಿದ್ದಾರೆ.

28. ಒಂಬತ್ತು ಓಡಿಐ ಶತಕಗಳೊಂದಿಗೆ ಸಚಿನ್ 1998ರ ಒಂದು ವರ್ಷದಲ್ಲಿ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಉಳಿಸಿಕೊಂಡಿದ್ದಾರೆ.

29. ಸಚಿನ್‌ ಅವರು ಪ್ರಸಿದ್ಧ ಸಾಹಿತ್ಯ ಸಹವಾಸ್ ನ ಬಾಂದ್ರಾ ಪೂರ್ವ ಆವರಣದ ಹಿಂದೆ ಹರಿಯುವ ತೊರೆಯಲ್ಲಿ ಗೊದಮೊಟ್ಟೆ ಮತ್ತು ಗಪ್ಪಿ ಮೀನುಗಾರಿಕೆಗೆ ಹೋಗುತ್ತಿದ್ದರು.

30. ತೆಂಡೂಲ್ಕರ್ ಅವರು ತಮ್ಮ ಫೆರಾರಿಯಲ್ಲಿ ಪತ್ನಿ ಅಂಜಲಿಯನ್ನು ಕರೆದುಕೊಂಡು ಹೋಗುವುದಿಲ್ಲ.

Continue Reading
Advertisement
Lok Sabha Election 2024 DK Shivakumar IT raids on Suresh close aides and Congress protests
Lok Sabha Election 20248 mins ago

Lok Sabha Election 2024: ಡಿ.ಕೆ. ಸುರೇಶ್‌ ಆಪ್ತರ ಮನೆ ಮೇಲೆ ಐಟಿ ರೇಡ್;‌ ಕಾಂಗ್ರೆಸ್‌ ಪ್ರತಿಭಟನೆ, ವಾಗ್ವಾದ

RCB vs SRH
ಕ್ರೀಡೆ11 mins ago

RCB vs SRH: 300 ರನ್​ ಹೊಡೆಸಿಕೊಳ್ಳದಿರಲಿ ಆರ್​ಸಿಬಿ; ನಾಳೆ ಸನ್​ರೈಸರ್ಸ್ ವಿರುದ್ಧ ಕಣಕ್ಕೆ

Mens Neck Chains Fashion
ಫ್ಯಾಷನ್12 mins ago

Mens Neck Chains Fashion: ಹುಡುಗರ ಕ್ರೇಜಿ ಫ್ಯಾಷನ್‌ಗೆ ಬಂತು ಫಂಕಿ ನೆಕ್‌ ಚೈನ್ಸ್‌

Summer Tour
ಪ್ರವಾಸ16 mins ago

Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!

Congress leader Rahul Gandhi election campaign on April 26 in Ballari
ಬಳ್ಳಾರಿ20 mins ago

Lok Sabha Election 2024: ಏ.26ರಂದು ರಾಹುಲ್‌ ಗಾಂಧಿ ಬಳ್ಳಾರಿಗೆ; ಕಾಂಗ್ರೆಸ್‌ ಅಭ್ಯರ್ಥಿ ತುಕಾರಾಂ ಪರ ಪ್ರಚಾರ

on April 26 Namma Metro Service extended till late night
Lok Sabha Election 202433 mins ago

Namma Metro: ಏಪ್ರಿಲ್‌ 26ರಂದು ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ತಡರಾತ್ರಿವರೆಗೂ ಸೇವೆ ವಿಸ್ತರಣೆ

Davanagere Lok Sabha constituency BJP candidate Gayatri Siddeshwar election campaign
ದಾವಣಗೆರೆ34 mins ago

Lok Sabha Election 2024: ಹರಿಹರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತಯಾಚನೆ

Lok sabha election 2024
ಕರ್ನಾಟಕ39 mins ago

Lok Sabha Election 2024: ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ರಾಜ್ಯ ಒಕ್ಕಲಿಗ ಸಂಘ; ಡಿಕೆಶಿಯನ್ನು ಸಿಎಂ ಮಾಡುವುದಾಗಿ ಶಪಥ

Top 10 Puddings
ಆಹಾರ/ಅಡುಗೆ42 mins ago

Top 10 Puddings: ಭಾರತದ ಫಿರ್ನಿ, ಖೀರು, ಸಿಹಿ ಪೊಂಗಲ್‌ಗೆ ವಿಶ್ವದ ಟಾಪ್‌ 10 ತಿಂಡಿ ಪಟ್ಟಿಯಲ್ಲಿ ಸ್ಥಾನ!

Nitin Gadkari
ದೇಶ50 mins ago

Nitin Gadkari: ಚುನಾವಣೆ ಪ್ರಚಾರದ ವೇಳೆ ದಿಢೀರ್ ಕುಸಿದು ಬಿದ್ದ ನಿತಿನ್‌ ಗಡ್ಕರಿ; ತುರ್ತು ಚಿಕಿತ್ಸೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌