Vistara Explainer : What are women wrestlers, wrestling federation wrestling ವಿಸ್ತಾರ Explainer : ಏನಿದು ಮಹಿಳಾ ಕುಸ್ತಿಪಟುಗಳು, ಕುಸ್ತಿ ಒಕ್ಕೂಟದ ಜಂಗೀ ಕುಸ್ತಿ? - Vistara News

EXPLAINER

ವಿಸ್ತಾರ Explainer : ಏನಿದು ಮಹಿಳಾ ಕುಸ್ತಿಪಟುಗಳು, ಕುಸ್ತಿ ಒಕ್ಕೂಟದ ಜಂಗೀ ಕುಸ್ತಿ?

ನಾಲ್ಕು ತಿಂಗಳ ಹಿಂದೆ ಆರಂಭಗೊಂಡ ಕುಸ್ತಿ ಪಟುಗಳು ಹಾಗೂ ಕುಸ್ತಿ ಒಕ್ಕೂಟದ ನಡುವಿನ ಜಿದ್ದಾಜಿದ್ದಿ ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

Vistara Explainer : What are women wrestlers, wrestling federation wrestling
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ಕ್ರೀಡಾ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಜಗದಗಲಕ್ಕೂ ಹಾರಿಸಿದ್ದ ಏಳು ಮಹಿಳಾ ಕುಸ್ತಿಪಟುಗಳು ಕಳೆದ ಭಾನುವಾರದಿಂದ (ಏಪ್ರಿಲ್​ 23ರಂದ) ನವದೆಹಲಿಯ ಜಂತರ್​ ಮಂಥರ್​ನಲ್ಲಿ ಆಹೋರಾತ್ರಿ ಪ್ರತಿಭಟನೆಗೆ ಕುಳಿತಿದ್ದಾರೆ. ನಮ್ಮ ಮೇಳೆ ಲೈಂಗಿಕ ದೌರ್ಜನ್ಯ ಎಸಗಿರುವ ಕುಸ್ತಿ ಒಕ್ಕೂಟದ ಅಧ್ಯಕ್ಷರಾದ ಬ್ರಿಜ್​ಭೂಷಣ್ ಶರಣ್​ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಟ್ಟು ಹಿಡಿದಿದ್ದಾರೆ. ನಮಗೆ ಅನ್ಯಾಯ ಆಗಿದ್ದರೂ ಯಾರೂ ನಮ್ಮ ಧನಿಯನ್ನು ಯಾರೂ ಕೇಳುತ್ತಿಲ್ಲ. ಈ ವಿಚಾರವಾಗಿ ತನಿಖೆ ನಡೆಸಿರುವ ಮೇಲುಸ್ತುವಾರಿ ಸಮಿತಿ ಒಕ್ಕೂಟದ ಅಧ್ಯಕ್ಷರ ಪರ ನ್ಯಾಯ ನೀಡಿದೆ. ಇದು ಪಕ್ಷಪಾತಿ ಧೋರಣೆ ಎಂದು ಅವರು ಆರೋಪಿಸಿದ್ದಾರೆ. ಅತ್ತ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್​ಭೂಷಣ್ ಸಿಂಗ್​, ನನ್ನನ್ನು ಹಣಿಯಲಾಗುತ್ತಿದೆ. ಒಂದು ವೇಳೆ ನಾನು ಸೋಲುವ ಸಂದರ್ಭದ ಬಂದರೆ ಸಾವಿಗೆ ಶರಣಾಗುವೆ ಎಂದು ವಿಡಿಯೊ ಹೇಳಿಕೆ ಕೊಟ್ಟಿದ್ದಾರೆ. ಈ ವಿವಾದ ಇದೀಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರಿಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕುಸ್ತಿ ಒಕ್ಕೂಟದ ಮಾನ ಹರಾಜಾಗುತ್ತಿರುವ ರಾಜಕೀಯ ಪವರ್​ ಹಾಗೂ ಕ್ರೀಡಾಪಟುಗಳ ನಡುವಿನ ತೋಳ್ಬಲ ಪ್ರದರ್ಶನಕ್ಕೆ ವೇದಿಕೆಯಾಗುತ್ತಿದೆ. ಇಷ್ಟೊಂದು ಸದ್ದು ಮಾಡುತ್ತಿರುವ ಈ ವಿವಾದದ ಕುರಿತ ವಿಸ್ತಾರ Explainer ಇಲ್ಲಿದೆ.

ಪ್ರಕರಣ ಮತ್ತೆ ಸುದ್ದಿಯಲ್ಲಿರುವುದು ಯಾಕೆ?

ತಮಗೆ ನ್ಯಾಯ ಕೊಡಿಸುವ ಭರವಸೆ ಕೊಟ್ಟು ರಚಿಸಲಾದ ಮೇಲುಸ್ತುವಾರಿ ಸಮಿತಿ ನಮ್ಮ ಆರೋಪಗಳು ಸುಳ್ಳು ಎಂದು ವರದಿ ನೀಡಿದೆ. ಇದು ಏಕಪಕ್ಷೀಯ ತೀರ್ಪು. ಈ ಬಗ್ಗೆ ನಾವು ಪೊಲೀಸ್​ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಕುಸ್ತಿಪಟುಗಳು ಜಂತರ್​​ಮಂತ್​​ನಲ್ಲಿ ಧರಣಿ ಕುಳಿತಿದ್ದಾರೆ. ಅವರಿಗೆ ಪುರುಷ ಕುಸ್ತಿಪಟುಗಳ ಬೆಂಬಲ ಕೊಟ್ಟಿದ್ದಾರೆ. ಅವರೂ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

2012 ರಿಂದ 2022ರವರೆಗೆ 10 ವರ್ಷಗಳ ಅವಧಿಯಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಏಳು ಮಹಿಳಾ ಕುಸ್ತಿಪಟುಗಳು ಸಂಸದರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪ ಹೊರಿಸಿ ಏಪ್ರಿಲ್ 21 ರಂದು ಪ್ರತ್ಯೇಕ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ. ಆದರೆ ಡೆಲ್ಲಿ ಪೊಲೀಸರು ಬ್ರಿಷ್​ಭೂಷಣ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಕುಸ್ತಿಪಟುಗಳು ಮಂಗಳವಾರ ಸುಪ್ರೀಮ್​ ಕೋರ್ಟ್​ ಮೊರೆ ಹೋಗಿದ್ದರು. ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಮ್​ ಕೋರ್ಟ್​​ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದೆ.

ಈ ಬಾರಿ ಪ್ರತಿಭಟನೆ ಕುಳಿತಿರುವ ಕುಸ್ತಿಪಟುಗಳು ಕೇಂದ್ರ ಸರಕಾರ, ಕ್ರೀಡಾ ಸಚಿವಾಲಯ ಹಾಗೂ ಇನ್ನಿತರ ಪ್ರಭಾವಿ ಕುಸ್ತಿಪಟುಗಳ ವಿರುದ್ಧ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಚಿವೆ ಸ್ಮೃತಿ ಇರಾನಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಯಾರೂ ನಮ್ಮ ನೆರವಿಗೆ ಬರುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಇದೀಗ ರಾಜಕೀಯ ಪಕ್ಷಗಳು ಕುಸ್ತಿಪಟುಗಳಿಗೆ ಬೆಂಬಲ ಕೊಡುತ್ತಿದ್ದಾರೆ. ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲಿಕ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕ್ರೀಡಾಪಟುಗಳು ಕೂಡ ಪ್ರತಿಭಟನಾಕಾರರ ಪರವಾಗಿ ಮಾತನಾಡಲು ಶುರು ಮಾಡಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಕೊನೆ ಹಾಡಲು ಸರಕಾರ ಮುಂದೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ದೂರು ಕೊಟ್ಟವರು ಯಾರು? ಪ್ರತಿಭಟನೆಯಲ್ಲಿ ಇರುವವರು ಯಾರು?

ಬ್ರಿಜ್ ಭೂಷಣ್ ವಿರುದ್ಧ ಪೊಲೀಸ್ ದೂರು ದಾಖಲಿಸಿರುವ ಏಳು ಮಹಿಳಾ ಕುಸ್ತಿಪಟುಗಳ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ದೂರುದಾರರ ಗುರುತನ್ನು ರಕ್ಷಿಸಲು ಅವರ ಹೆಸರುಗಳನ್ನು ನ್ಯಾಯಾಂಗ ದಾಖಲೆಗಳಿಂದ ತೆಗೆದುಹಾಕಲಾಗುವುದು ಎಂದು ಸಿಜೆಐ ಚಂದ್ರಚೂಡ್ ಮಂಗಳವಾರ ಹೇಳಿದ್ದಾರೆ.

ಒಲಿಂಪಿಕ್ ಕಂಚಿನ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಮತ್ತು ವಿಶ್ವ ಪದಕ ವಿಜೇತ ವಿನೇಶ್ ಫೋಗಟ್ ಜನವರಿಯ ಆರಂಭದಿಂದಲೂ ಪ್ರತಿಭಟನೆಯ ಮುಂಚೂಣಿಯಲ್ಲಿದ್ದಾರೆ. ಮೊದಲ ಸುತ್ತಿನ ಪ್ರತಿಭಟನೆಯ ಸಮಯದಲ್ಲಿ, ಅನ್ಶು ಮಲಿಕ್, ಸೋನಮ್ ಮಲಿಕ್, ರವಿ ದಹಿಯಾ ಮತ್ತು ದೀಪಕ್ ಪುನಿಯಾ ಅವರಂತಹ ಯುವ ಕುಸ್ತಿಪಟುಗಳು ಇದ್ದರು. ಆದಾಗ್ಯೂ, ಭಾನುವಾರ ಪ್ರಾರಂಭವಾದ ಎರಡನೇ ಸುತ್ತಿನ ಪ್ರತಿಭಟನೆಯಲ್ಲಿ, ಕಳೆದೊಂದು ದಶಕದಲ್ಲಿ ಭಾರತಕ್ಕಾಗಿ ಡಜನ್​ಗಟ್ಟಲೆ ಪ್ರಶಸ್ತಿ ತಂದುಕೊಟ್ಟಿರುವ ಸಾಕ್ಷಿ ಮಲಿಕ್​, ವಿನೇಶ್ ಫೋಗಟ್​​ ಮತ್ತು ಬಜರಂಗ್ ಪೂನಿಯಾ ಮಾತ್ರ ಇದ್ದಾರೆ. ಇತರ ಕುಸ್ತಿಪಟುಗಳು ಇನ್ನೂ ಕಾಣಿಸಿಕೊಂಡಿಲ್ಲ.

ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳ ಆರೋಪ ಏನು?

ಡಬ್ಲ್ಯುಎಫ್ಐನ ಕಾರ್ಯನಿರ್ವಹಣೆಯಲ್ಲಿ ಹಣಕಾಸಿನ ದುರುಪಯೋಗ ನಡೆದಿದೆ. ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂಬುದಾಗಿ ಕುಸ್ತಿಪಟುಗಳು ಆರೋಪಿಸಿದ್ದಾರೆ. ಇಲ್ಲಿ ಮಹಿಳಾ ಕುಸ್ತಿಪಟುಗಳು ಮಾಡಿರುವ ಗಂಭೀರ ಆರೋಪವೆಂದರೆ ಲೈಂಗಿಕ ಕಿರುಕುಳ.

ಮಹಿಳಾ ಕುಸ್ತಿಪಟುಗಳು 2012 ರಿಂದ 2022ರವರೆಗೆ ನಡೆದ ಹಲವಾರು ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ನಡೆದ ಕೆಲವೊಂದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯ ವೇಳೆ ಮಹಿಳಾ ಕುಸ್ತಿಪಟುಗಳ ಮೇಲೆ ಬ್ರಿಜ್​ ಭೂಷಣ್​ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಕುಸ್ತಿಪಟುಗಳು ಆರೋಪಿಸಿದ್ದಾರೆ. ನವದೆಹಲಿಯಲ್ಲಿರುವ ಬ್ರಿಜ್ ಭೂಷಣ್ ಅವರ ಅಧಿಕೃತ ಸಂಸದರ ಬಂಗಲೆಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಅನ್ಯಾಯಕ್ಕೆ ಒಳಗಾದವರಲ್ಲಿ ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟು ಕೂಡ ಇದ್ದಾರೆ ಎಂದು ಪ್ರತಿಭಟನಾಕಾರರು ಅರೋಪಿಸಿದ್ದಾರೆ. ಈ ಕುರಿತು ಪೊಲೀಸ್​ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಂಗಳವಾರ (ಏಪ್ರಿಲ್​ 25ಂದು) ಕುಸ್ತಿಪಟುಗಳು ಸುಪ್ರೀಂ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Wrestlers Protest : ನಮ್ಮ ಮನ್​ಕಿ ಬಾತ್​ ಆಲಿಸಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದ ಕುಸ್ತಿಪಟುಗಳು

ಕ್ರೀಡಾ ಸಚಿವಾಲಯವು ಭಾರತೀಯ ಒಲಿಂಪಿಕ್ ಸಂಸ್ಥೆಗೆ ಪತ್ರವೊಂದನ್ನು ಕಳುಹಿಸಿದ್ದು ಅದರಲ್ಲಿಯೂ ಕುಸ್ತಿಪಟುಗಳ ಆರೋಪಗಳು ಸೇರಿಕೊಂಡಿವೆ. ಅದರ ಪ್ರಕಾರ ಬ್ರಿಜ್ ಭೂಷಣ್ ಮಾತ್ರವಲ್ಲದೆ, ಫೆಡರೇಶನ್​ನ ಇತರ ಅಧಿಕಾರಿಗಳು ಮತ್ತು ತರಬೇತುದಾರರೂ ದೌರ್ಜನ್ಯ ಎಸಗಿದ್ದಾರೆ. ಪೊಲೀಸ್ ದೂರಿನಲ್ಲಿ ಬ್ರಿಜ್ ಭೂಷಣ್ ಬೆದರಿಕೆ ಒಡ್ಡಿರುವ ಆರೋಪವನ್ನೂ ಹೊರಿಸಲಾಗಿದೆ.

ಪ್ರತಿಭಟನಾ ನಿರತ ಕುಸ್ತಿಪಟುಗಳು ಏನು ಒತ್ತಾಯಿಸುತ್ತಿದ್ದಾರೆ?

ತಮ್ಮ ಪೊಲೀಸ್ ದೂರಿನ ಆಧಾರದ ಮೇಲೆ ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಮತ್ತು ದೂರುದಾರರಲ್ಲಿ ಒಬ್ಬರು ಅಪ್ರಾಪ್ತ ವಯಸ್ಕರಾಗಿರುವುದರಿಂದ ಅವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬಂಧಿಸಬೇಕು ಎಂದು ಕುಸ್ತಿಪಟುಗಳು ಒತ್ತಾಯಿಸುತ್ತಿದ್ದಾರೆ. ಅವರನ್ನು ಡಬ್ಲ್ಯುಎಫ್ಐ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕು ಮತ್ತು ಒಕ್ಕೂಟವನ್ನು ವಿಸರ್ಜಿಸಬೇಕು ಎಂದೂ ಪಟ್ಟು ಹಿಡಿದಿದ್ದಾರೆ.

ಮತ್ತೆ ಪ್ರತಿಭಟಿಸಲು ಕಾರಣವೇನು?

ಕುಸ್ತಿಪಟುಗಳು ಜನವರಿಯಲ್ಲಿ ಪ್ರತಿಭಟನೆ ಮಾಡಿದಾಗ ಕ್ರೀಡಾ ಸಚಿವಾಲಯದ ಮಧ್ಯಸ್ಥಿಕೆಯಲ್ಲಿ ತನಿಖೆಗೆ ಮೇಲುಸ್ತುವಾರಿ ಸಮಿತಿ ರಚನೆ ಮಾಡಿತ್ತು. ತನಿಖೆ ನಡೆಸಿದ ಸಮಿತಿಯು, ವರದಿಯನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ ಎಂದು ಕುಸ್ತಿಪಟುಗಳು ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ತನಿಖೆಯ ನಡುವೆಯೂ ಡಬ್ಲ್ಯುಎಫ್ಐ ತನ್ನ ಚಟುವಟಿಕೆಗಳನ್ನು ಪುನರಾರಂಭಿಸಿದೆ. ಬ್ರಿಜ್ ಭೂಷಣ್ ಇನ್ನೂ ನಮ್ಮ ಮೇಲೆ ಪ್ರತಿಕಾರ ತೀರಿಸುತ್ತಿದ್ದಾರೆ. ವಿವಾದ ಭುಗಿಲೆದ್ದ ನಡುವೆಯೂ ರಾಷ್ಟ್ರೀಯ ಮಟ್ಟದ ಕುಸ್ತಿ ಟೂರ್ನಿ ಅವರ ಊರು ಗೊಂಡಾದಲ್ಲಿ ಜಮೀನಿನಲ್ಲಿ ನಡೆದಿದೆ. ಹೀಗಾಗಿ ಎಲ್ಲರ ಬಗ್ಗೆ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಬಿಡಬ್ಲ್ಯುಎಫ್​ ಅಧ್ಯಕ್ಷ ಬ್ರಿಜ್​ ಭೂಷಣ್ ಶರಣ್​ ಸಿಂಗ್​ ಯಾರು?

ಹಿರಿಯ ರಾಜಕಾರಣಿ ಬ್ರಿಜ್ ಭೂಷಣ್ ಆರು ಬಾರಿ ಸಂಸದರಾಗಿ ಆಯ್ಕೆಗೊಂಡವರು. 1991 ಮತ್ತು 1999ರಲ್ಲಿ ಗೊಂಡಾ ಲೋಕಸಭಾ ಕ್ಷೇತ್ರದಲ್ಲಿ, 2004ರಲ್ಲಿ ಬಲರಾಂಪುರ ಮತ್ತು 2009, 2014 ಮತ್ತು 2019ರಲ್ಲಿ ಕೈಸರ್​ಗಂಜ್​ನಲ್ಲಿ ಗೆದ್ದಿದ್ದಾರೆ. ಅವರು 2009ರಲ್ಲಿ ಎಸ್ಪಿಯಲ್ಲಿ ಗೆದ್ದಿರುವುದು ಹೊರತುಪಡಿಸಿ ಉಳಿದೆಲ್ಲ ಬಾರಿಯೂ ಬಿಜೆಪಿ.

ಗೊಂಡಾ ಮೂಲದ 66 ವರ್ಷದ ಬ್ರಿಜ್ ಭೂಷಣ್ ಅವರು ರಾಮ ಜನ್ಮಭೂಮಿ ಚಳವಳಿಯೊಂದಿಗೆ ಪ್ರಖ್ಯಾತಿ ಪಡೆದವರು. 2019ರ ಚುನಾವಣಾ ಅಫಿಡವಿಟ್ ಪ್ರಕಾರ, ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅವರ ಹೆಸರಿತ್ತು.

ಸ್ವಯಂ ಘೋಷಿತ ಕುಸ್ತಿ ಪ್ರೇಮಿಯಾಗಿರುವ ಅವರು ಡಬ್ಲ್ಯುಎಫ್ಐ ಅಧ್ಯಕ್ಷರಾಗಿ, ಏಷ್ಯನ್ ರಸ್ಲಿಂಗ್​ ಫೆಡರೇಷನ್​ ಉಪಾಧ್ಯಕ್ಷರಾಗಿ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಗೆ ಕ್ರೀಡಾಪಟುಗಳನ್ನು ಗುರುತಿಸುವ ಮತ್ತು ಅವರ ತರಬೇತಿ ನೀಡುವ ಸರ್ಕಾರದ ಮಿಷನ್ ಒಲಿಂಪಿಕ್ ಸೆಲ್​ನ ಸದಸ್ಯರಾಗಿ ಕೆಲಸ ಮಾಡಿದ್ದರು. ಅಲ್ಲದೆ, ಹಲವು ಕ್ರೀಡಾ ಕ್ಷೇತ್ರಗಳ ಆಡಳಿತಾತ್ಮಕ ಕೆಲಸ ಮಾಡಿದ್ದಾರೆ.

ರಾಜಕೀಯ ಪ್ರಬಲ ವ್ಯಕ್ತಿ ಎಂದು ಕರೆಯಲ್ಪಡುವ ಬ್ರಿಜ್ ಭೂಷಣ್, ದೇಶೀಯವಾಗಿ ಕ್ರೀಡಾ ಕ್ಷೇತ್ರದ ಮೇಲೆ ಹೆಚ್ಚು ಪ್ರಭಾವ ಹೊಂದಿದ್ದಾರೆ. ಭಾರತೀಯ ಕುಸ್ತಿ ಕ್ಷೇತ್ರದ ವಿಚಾರಕ್ಕೆ ಬಂದಾಗ ಅವರ ಮಾತೇ ಕೊನೆ.

ದಶಕದಷ್ಟು ಹಳೆಯ ಪ್ರಕರಣ ಈಗ ಹೊರ ಬಂದಿದ್ದು ಯಾಕೆ?

ಇದಕ್ಕೆ ಸ್ಪಷ್ಟ ಕಾರಣ ಯಾರೂ ಕೊಟ್ಟಿಲ್ಲ. ಅದರೆ, ಜನವರಿಯಲ್ಲಿ ಪ್ರತಿಭಟನೆ ನಡೆಸುವ ವೇಳೆ ಮಾತನಾಡಿದ್ದ ಪ್ರತಿಭಟನಾಕಾರರು, ಲಖನೌನಲ್ಲಿ ಕೆಲವು ಮಹಿಳಾ ಕುಸ್ತಿಪಟುಗಳು ನಮಗೆ ಕರೆ ಮಾಡಿ ನಾವು ಅಸುರಕ್ಷಿತ ವಾತಾವರಣದಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಆ ಬಳಿಕ ವಿನೇಶ್ ಫೋಗಟ್​, ಸಾಕ್ಷಿ ಮಲಿಕ್ ಜತೆಯಾಗಿ ಇದರ ವಿರುದ್ಧ ಸೆಟೆದು ನಿಲ್ಲುವ ನಿರ್ಧಾರ ಕೈಗೊಂಡರು ಎಂದು ಹೇಳಿದ್ದರು. ಅಲ್ಲದೆ ಮೂರು ಬಾರಿ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಬ್ರಿಜ್​ ಭೂಷಣ್ ಅವರು ಮತ್ತೆ ಸ್ಪರ್ಧಿಸಲು ಅನರ್ಹ. ಇದೀಗ ಅವರ ಪುತ್ರ ಕರಣ್​ ಭೂಷಣ್​ ಸಿಂಗ್ ಅವರನ್ನು ಹುದ್ದೆಗೇರಿಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಡಬ್ಲ್ಯುಎಫ್ಐ ಹೇಗೆ ಪ್ರತಿಕ್ರಿಯಿಸಿದೆ?

ಬ್ರಿಜ್ ಭೂಷಣ್ ಅವರು ಲೈಂಗಿಕ ಕಿರುಕುಳದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಆರೋಪ ಸಾಬೀತಾದರೆ ಗಲ್ಲಿಗೇರಲು ಸಿದ್ಧ ಎಂದು ಜನವರಿಯಲ್ಲಿ ಹೇಳಿದ್ದಾರೆ. ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕೋರಿ ಮಾಡಿದ ಕರೆಗಳಿಗೆ ಅವರು ಪ್ರತಿಕ್ರಿಯಿಸುತ್ತಿಲ್ಲ. ತನ್ನ ಕಾರ್ಯನಿರ್ವಹಣೆಯಲ್ಲಿ ಹಣಕಾಸಿನ ದುರುಪಯೋಗವನ್ನು ಡಬ್ಲ್ಯುಎಫ್ಐ ಕೂಡ ನಿರಾಕರಿಸಿದೆ.

ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ?

ಜನವರಿಯಲ್ಲಿ ಕುಸ್ತಿಪಟುಗಳನ್ನು ಮನವೊಲಿಸಿದ್ದ ಸರ್ಕಾರ, ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳನ್ನು ಪರಿಶೀಲಿಸುವ ಮತ್ತು ಡಬ್ಲ್ಯುಎಫ್ಐನ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವ ಮೇಲ್ವಿಚಾರಣಾ ಸಮಿತಿ ರಚಿಸಿತ್ತು. ಬಾಕ್ಸಿಂಗ್ ದಂತಕಥೆ ಎಂ.ಸಿ.ಮೇರಿ ಕೋಮ್ ನೇತೃತ್ವದ ಆರು ಸದಸ್ಯರ ಸಮಿತಿಗೆ ವರದಿ ನೀಡಲು ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು. ಅದು ತನ್ನ ವರದಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಸಲ್ಲಿಸಿದೆ. ಅಂದಿನಿಂದ ಸಮಿತಿಯನ್ನು ವಿಸರ್ಜಿಸಲಾಗಿದೆ.

ಹೊಸ ಪ್ರತಿಭಟನೆ ಆರಂಭಗೊಂಡ ಬಳಿಕ, ಮೇ 7ರಂದು ನಿಗದಿಯಾಗಿದ್ದ ಡಬ್ಲ್ಯುಎಫ್ಐ ಚುನಾವಣೆ ಪ್ರಕ್ರಿಯೆಯನ್ನು ಸರ್ಕಾರ ಅನೂರ್ಜಿತಗೊಳಿಸಿದೆ. 45 ದಿನಗಳಲ್ಲಿ ಚುನಾವಣೆಗಳನ್ನು ನಡೆಸುವ ಮತ್ತು ಹೊಸ ಸದಸ್ಯರು ಅಧಿಕಾರ ವಹಿಸಿಕೊಳ್ಳುವವರೆಗೆ ಡಬ್ಲ್ಯುಎಫ್ಐನ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವ ತಾತ್ಕಾಲಿಕ ಸಮಿತಿಯನ್ನು ರಚಿಸುವಂತೆ ಸೂಚನೆ ನೀಡಿದೆ.

ಮೇಲ್ವಿಚಾರಣಾ ಸಮಿತಿಯ ವಿವರಣೆ ಏನು?

ಮೇರಿಕೋಮ್​ ನೇತೃತ್ವದ ಸಮಿತಿ ನೀಡಿದ ವರದಿ ಪರಿಶೀಲನೆಯಲ್ಲಿದೆ. ಇನ್ನೂ ಬಹಿರಂಗಗೊಂಡಿಲ್ಲ. ಕ್ರೀಡಾ ಸಚಿವಾಲಯವು ಸೋಮವಾರ ವರದಿಯ ಪ್ರಮುಖ ಅಂಶಗಳನ್ನು ಹಂಚಿಕೊಂಡಿದೆ. ಲೈಂಗಿಕ ಕಿರುಕುಳ ತಡೆ ಕಾಯ್ದೆ 2013 ರ ಅಡಿಯಲ್ಲಿ ದೂರು ಸಲ್ಲಿಸಲು ಸಮಿತಿ ಇಲ್ಲ ಹಾಗೂ ಕ್ರೀಡಾಪಟುಗಳಿಗೆ ಜಾಗೃತಿ ಮೂಡಿಸುವ ಕ್ರಮವೂ ಸರಿಯಿಲ್ಲ ಎಂದಷ್ಟೇ ಹೇಳಿದೆ. ಕುಸ್ತಿ ಪಟುಗಳು ಮಾಡಿರುವ ಆರೋಪಗಳು ಹಾಗೂ ಆ ಕುರಿತ ತನಿಖಾ ಪ್ರಗತಿಯನ್ನು ವಿವರಿಸಿಲ್ಲ.

ಮುಂದೆ ಏನಾಗಬಹುದು?

ಏಪ್ರಿಲ್ 28ರ ಶುಕ್ರವಾರ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಕುಸ್ತಿಪಟುಗಳು ಹೇಳಿದ್ದಾರೆ. ಮಂಗಳವಾರದಿಂದ ರಾಜಕೀಯ ಮುಖಂಡರು ಪ್ರತಿಭಟನೆ ಬರಲು ಆರಂಭಿಸಿರುವ ಕಾರಣ ಪ್ರಕರಣ ಇನ್ನಷ್ಟು ಬಿಗಡಾಯಿಸಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಚಿನ್ನದ ದರ

Gold Price Explainer: ಚಿನ್ನದ ದರ ಇಷ್ಟೊಂದು ಏರಲು ಏನು ಕಾರಣ? ಬಂಗಾರದ ಮೇಲೆ ಹೂಡಿಕೆಗಿದು ಸಕಾಲವೇ?

Gold Price Explainer: ಚಿನ್ನದ ಬೆಲೆ ಇತ್ತೀಚಿನ ದಿನಗಳಲ್ಲಿ ಗಗನಕ್ಕೇರುತ್ತಿದೆ. ಆದರೂ ಶುಭ ಸಮಾರಂಭಗಳ ಸೀಸನ್ ಗಳಲ್ಲಿ ಎಲ್ಲರೂ ಚಿನ್ನ ಖರೀದಿಗೆ ಮುಗಿ ಬೀಳುತ್ತಾರೆ. ಚಿನ್ನದ ದರ ನಿರಂತರ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಈ ಕುರಿತ ವಿಸ್ತೃತ ವಿಶ್ಲೇಷಣೆ ಇಲ್ಲಿದೆ.

VISTARANEWS.COM


on

By

Gold price
Koo

ನವದೆಹಲಿ: ಚಿನ್ನ (gold) ಯಾರಿಗೆ ಪ್ರಿಯವಿಲ್ಲ ಹೇಳಿ? ಆದರೆ ಇತ್ತೀಚೆಗೆ ವಿಪರೀತ ಏರುತ್ತಿರುವ ಚಿನ್ನದ ದರ ಶೀಘ್ರದಲ್ಲೇ ಲಕ್ಷದ ಗಡಿ ದಾಟುವ ಹಾಗೆ ತೋರುತ್ತಿದೆ. ಚಿನ್ನ ಎಷ್ಟೇ ದುಬಾರಿಯಾದರೂ ಮದುವೆ ಇತ್ಯಾದಿ ಶುಭ ಸಂದರ್ಭಗಳಲ್ಲಿ ಇದರ ಖರೀದಿಗೆ (shopping) ಜನ ಮುಗಿಬೀಳುತ್ತಾರೆ. ಜಾಗತಿಕ ಅನಿಶ್ಚಿತತೆ ಪರಿಣಾಮವಾಗಿ ಶೀಘ್ರದಲ್ಲೇ ಫೆಡರಲ್ ರಿಸರ್ವ್ (Federal Reserve) ದರ ಇಳಿಸುವ ನಿರೀಕ್ಷೆ, ಮದುವೆ ಸೀಸನ್ (Wedding season) ಪ್ರಾರಂಭ ಇತ್ಯಾದಿ ಕಾರಣಗಳಿಂದ ಈ ಬಾರಿ ಚಿನ್ನದ ದರ (Gold Price Explainer) ಮಾತ್ರ ಸಾರ್ವಕಾಲಿಕ ದಾಖಲೆ ಬರೆದಿದೆ. 24 ಕ್ಯಾರೆಟ್‌ನ ಪ್ರತಿ ಹತ್ತು ಗ್ರಾಮ್‌ ಚಿನ್ನದ ದರ 71,652 ರೂ. ಗರಿಷ್ಠ ಮಟ್ಟವನ್ನು ತಲುಪಿದೆ.

ಚಿನ್ನ ಎಷ್ಟೇ ದುಬಾರಿಯಾದರೂ ಖರೀದಿ ಮಾಡುವವರು ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿಯೇ ಇದು ಹೂಡಿಕೆ ದಾರರನ್ನು ಸದಾ ಆಕರ್ಷಿಸುತ್ತಿದೆ.

ಚಿನ್ನ ಯಾಕೆ ದುಬಾರಿಯಾಗುತ್ತಿದೆ?

ಚಿನ್ನದಲ್ಲಿ ಹೂಡಿಕೆ ಸುರಕ್ಷಿತವಾಗಿರುವುದರಿಂದಲೇ ಚಿನ್ನ ಹೆಚ್ಚು ದುಬಾರಿಯಾಗುತ್ತಿದೆ. ಆರ್ಥಿಕ ಅನಿಶ್ಚಿತತೆ, ಭೌಗೋಳಿಕ, ರಾಜಕೀಯ ಪ್ರಕ್ಷುಬ್ಧತೆಯ ಅವಧಿಯಲ್ಲಿ ಸ್ಥಿರತೆಯನ್ನು ಬಯಸುವ ಹೂಡಿಕೆದಾರರಿಗೆ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿ ಕಾಣುತ್ತಿದೆ. ಹೀಗಾಗಿಯೇ ಚಿನ್ನದ ದರ ಗಗನಕ್ಕೇರುತ್ತಿದೆ.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ಮತ್ತೆ ದಾಖಲೆ ಏರಿಕೆ; 10 ಗ್ರಾಂಗೆ 73,000 ಮೀರಿಸಿದ ಬೆಲೆ

1. ಹಣದುಬ್ಬರ

ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೆಡ್ಜ್ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ ತೆಗೆದಿರುಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ. ಈ ಮೂಲಕ ದೇಶದಲ್ಲಿ ಕರೆನ್ಸಿಗಳ ಮೌಲ್ಯ ಕಾಪಾಡಿಕೊಳ್ಳಬಹುದು.


2. ಜಾಗತಿಕ ಉದ್ವಿಗ್ನತೆಗಳು

ಇತ್ತೀಚಿನ ದಿನಗಳಲ್ಲಿ ಭೌಗೋಳಿಕ, ರಾಜಕೀಯ ಘರ್ಷಣೆಗಳು ಮಾರುಕಟ್ಟೆಯ ಅಸ್ಥಿರತೆಯನ್ನು ಉಂಟು ಮಾಡುತ್ತಿದೆ. ಇದು ಹೂಡಿಕೆದಾರರಿಗೆ ಚಿನ್ನದಂತಹ ಸುರಕ್ಷಿತ ಸ್ವತ್ತುಗಳನ್ನು ಖರೀದಿಸಲು ಪ್ರೇರೇಪಿಸುತ್ತದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಸಮಯದಲ್ಲಿ ಅದು ಮೌಲ್ಯವನ್ನು ಉಳಿಸಿಕೊಳ್ಳುತ್ತದೆ. ಉಕ್ರೇನ್‌ ಯುದ್ಧ ಮುಂದುವರಿಯುತ್ತಿರುವಾಗಲೇ ಈಗ ಇರಾನ್‌-ಇಸ್ರೇಲ್‌ ಯುದ್ಧದ ಛಾಯೆ ಆವರಿಸಿದೆ. ಇಂಥ ಸನ್ನಿವೇಶದಲ್ಲಿ ಸಹಜವಾಗಿಯೇ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತದೆ. ಆಗ ದರ ಏರಿಕೆಯಾಗುತ್ತದೆ.

3. ಚೀನಾದ ಪ್ರಭಾವ

ಇತ್ತೀಚೆಗೆ ಚೀನಾದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿದೆ. ಚೀನಾದ ಸೆಂಟ್ರಲ್ ಬ್ಯಾಂಕ್ ತನ್ನ ಸಂಗ್ರಹಕ್ಕೆ ಗಣನೀಯ ಪ್ರಮಾಣದ ಚಿನ್ನವನ್ನು ಸೇರಿಸುತ್ತಿದೆ. ಇದು ಅಮೆರಿಕ ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

4. ಕಡಿಮೆ ಬಡ್ಡಿ ದರಗಳು

ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.


5. ಹೂಡಿಕೆ ಮಾಡಬಹುದೆ?

ಚಿನ್ನದ ಬೆಲೆಗಳು ಹೆಚ್ಚಾದಾಗ ಸಾಮಾನ್ಯವಾಗಿ ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮೊದಲೇ ಚಿನ್ನದ ಮೇಲೆ ಹೂಡಿಕೆ ಮಾಡಬೇಕು. ಇದರಿಂದ ಮಾರುಕಟ್ಟೆಯಲ್ಲಿ ಏರಿಳಿತದ ಅಪಾಯ ಕೊಂಚ ಕಡಿಮೆಯಾಗುತ್ತದೆ. ಹೂಡಿಕೆಯ ಉದ್ದೇಶವನ್ನು ಮೊದಲೇ ನಿರ್ಣಯಿಸುವುದು ಮತ್ತು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವುದು ಕೂಡ ಬಹಳ ಮುಖ್ಯ. ಉದಾಹರಣೆಗೆ ಮದುವೆ ಅಥವಾ ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಚಿನ್ನವನ್ನು ಖರೀದಿಸುವ ಉದ್ದೇಶ ಮೊದಲೇ ಇರುತ್ತದೆ. ಇದಕ್ಕೆ ಮುಂಚಿತವಾಗಿ ಹೂಡಿಕೆ ಮಾಡಬಹುದು. ಇದರಿಂದ ಬೆಲೆಗಳು ಸ್ಥಿರವಾಗಿದ್ದಾಗ ತಕ್ಷಣ ಖರೀದಿ ಮಾಡಬಹುದು.

6. ದರ ಹೆಚ್ಚಳದ ಪರಿಣಾಮ ಏನು?

ಈ ವರ್ಷದ ಆರಂಭದಿಂದಲೂ ಮಾರುಕಟ್ಟೆ ಹೆಚ್ಚು ಸಕ್ರಿಯವಾಗಿದೆ. ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಮಾರುಕಟ್ಟೆ ಮೇಲೆ ಪರಿಣಾಮ ಬಿರುತ್ತಿದೆ. ಇದೇ ಬೆಳವಣಿಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಎರಡಕ್ಕೂ ಹೆಚ್ಚಿನ ಲಾಭವಿದೆ. ದರ ಕಡಿತದ ನಿರೀಕ್ಷೆಗಳು ಡಾಲರ್ ಸೂಚ್ಯಂಕ ಮತ್ತು ಯುಎಸ್ ಉತ್ಪಾದನೆಯ ಮೇಲೆ ಚಂಚಲತೆಯನ್ನು ಹೆಚ್ಚಿಸಿದೆ. ಚಿನ್ನದ ಟ್ರೆಂಡ್ ಇನ್ನೂ ಸಕಾರಾತ್ಮಕವಾಗಿದೆ. ಇದು ಮುಂದಿನ ಅವಧಿಯಲ್ಲಿ 72,800 ತಲುಪುವ ನಿರೀಕ್ಷೆ ಇದ್ದು, 70,000 ರೂ. ಗಿಂತ ಕಡಿಮೆ ಕುಸಿಯುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಹಾಗಾಗಿ ಚಿನ್ನದ ಮೇಲೆ ಹಣ ಹೂಡಿದರೆ ನಷ್ಟವಿಲ್ಲ ಎಂಬುದು ಆರ್ಥಿಕ ಪರಿಣತರ ಅಭಿಮತವಾಗಿದೆ.

Continue Reading

ವಿದೇಶ

Iran-Israel War Explainer: ಇಸ್ರೇಲ್ ಮೇಲೆ ಇರಾನ್ ದಾಳಿಗೆ ಕ್ಷಣಗಣನೆ; ಮುಂದೇನಾಗಬಹುದು?

Iran-israel War Explainer: ಇಸ್ರೇಲ್ ವಿರುದ್ಧ ಯುದ್ಧ ಸನ್ನದ್ಧವಾಗಿ ನಿಂತಿರುವ ಇರಾನ್ ಅದರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಈ ನಡುವೆ ದೇಶಾದ್ಯಂತ ಯುದ್ಧದ ಸನ್ನಿವೇಶ ಉದ್ಭವವಾಗಿದ್ದು, ಇರಾನ್ ಗೆ ಯುದ್ಧ ನಡೆಸದಂತೆ ತಡೆಯುವ ಪ್ರಯತ್ನವನ್ನು ಯುಎಸ್ ಮಾಡುತ್ತಿದೆ.

VISTARANEWS.COM


on

By

Iran-israel War fear
Koo

ಇರಾನ್: ಇಸ್ರೇಲ್ (israel) ಮೇಲೆ ದಾಳಿ ನಡೆಸಲು ಇರಾನ್ (iran) ಸಜ್ಜಾಗಿದ್ದು, ಯಹೂದಿ ಬಹುಸಂಖ್ಯಾತರಿರುವ ರಾಷ್ಟ್ರವು ಇದಕ್ಕೆ ಪ್ರತಿ ದಾಳಿ ನಡೆಸಲು ಸಿದ್ಧವಾಗಿದೆ. ಇಸ್ರೇಲ್ ಈಗಾಗಲೇ ತನ್ನ ರಾಜಧಾನಿ ಟೆಲ್ ಅವಿವ್‌ನಲ್ಲಿ (tel aviv) ಮಿಲಿಟರಿ ನೆಲೆಗಳನ್ನು ಸ್ಥಾಪನೆ ಮಾಡಿರುವ ಹಿನ್ನೆಲೆಯಲ್ಲಿ ಮತ್ತೊಂದು ಯುದ್ಧದ ಭೀತಿ (Iran-israel War Explainer) ವಿಶ್ವದಲ್ಲಿ ಉದ್ವಿಗ್ನತೆ ಹೆಚ್ಚಾಗುವಂತೆ ಮಾಡಿದೆ.

ಇರಾನ್ ದಾಳಿ ಭೀತಿಯ ಹಿನ್ನೆಲೆಯಲ್ಲಿ ಅಮೆರಿಕ (US) ತನ್ನ ರಾಷ್ಟ್ರದ ಪ್ರಜೆಗಳಿಗೆ ಪ್ರಯಾಣವನ್ನು ನಿರ್ಬಂಧಿಸಿದ್ದು, ಜೆರುಸಲೆಮ್‌ನಿಂದ (jerusalem) ಹೊರಗೆ ಹೋಗದಂತೆ ಸೂಚಿಸಿದೆ.

ಯಾಕೆ ಯುದ್ಧ ಪ್ರಾರಂಭ?

11 ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್‌ನ ದೂತಾವಾಸ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್ ಕ್ರಮವನ್ನು ಖಂಡಿಸಿ ಇರಾನ್ ಯುದ್ಧ ಪ್ರಾರಂಭಿಸಲು ಮುಂದಾಗಿದೆ. ಈಗಾಗಲೇ ಇರಾನ್‌ ಪ್ರೇರಿತ ಹೆಜ್ಬೊಲ್ಲಾ ಉಗ್ರರು ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ಶುರು ಮಾಡಿದ್ದಾರೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ 13 ಮಂದಿ ಮೃತಪಟ್ಟಿದ್ದರು.
ಇಸ್ರೇಲ್ ನ ಕ್ರಮಕ್ಕೆ ಪ್ರತೀಕಾರವಾಗಿ ಶೀಘ್ರದಲ್ಲೇ ಇರಾನ್ ಇಸ್ರೇಲ್ ನ ಟೆಹ್ರಾನ್ ಮೇಲೆ ದಾಳಿ ಇರಾನ್‌ ಅಧಿಕೃತವಾಗಿ ನಡೆಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: Iran- Israel War : ಮುಂದಿನ 48 ಗಂಟೆಗಳೊಳಗೆ ಇರಾನ್-ಇಸ್ರೇಲ್ ಭೀಕರ ಯುದ್ಧ ಶುರು!

ಯುದ್ಧ ತಡೆಗೆ ಅಮೆರಿಕ ಪ್ರಯತ್ನ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ತಡೆಯಲು ಅಮೆರಿಕ ಪ್ರಯತ್ನಿಸುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಚೀನಾ, ಟರ್ಕಿ, ಸೌದಿ ಅರೇಬಿಯಾ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿರುವ ತಮ್ಮ ಸಹವರ್ತಿಗಳೊಂದಿಗೆ ಇರಾನ್ ಗೆ ಇಸ್ರೇಲ್ ಮೇಲೆ ದಾಳಿ ನಡೆಸದಂತೆ ಪ್ರಯತ್ನಿಸಲು ಹೇಳಿದ್ದಾರೆ. ಯುದ್ಧ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಯಾವ ದೇಶದ ಹಿತಾಸಕ್ತಿಗೂ ಇದು ಸರಿಯಲ್ಲ. ಹೀಗಾಗಿ ಇರಾನ್‌ನ ಮಿತ್ರ ರಾಷ್ಟ್ರಗಳು ಯುದ್ಧದ ಸನ್ನಿವೇಶವನ್ನು ತಡೆಯಲು ಒತ್ತಾಯಿಸಬೇಕು ಎಂದು ಹೇಳಿದರು.

Iran-israel War fear


ಅಮೆರಿಕವೇ ಹೊಣೆ ಎಂದ ಇರಾನ್

ಏಪ್ರಿಲ್ 1ರಂದು ಇರಾನ್ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಸಿರಿಯಾದ ಡಮಾಸ್ಕಸ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್‌ನ ಕುಡ್ಸ್ ಫೋರ್ಸ್‌ನಲ್ಲಿ ಇಬ್ಬರು ಜನರಲ್‌ಗಳು ಮತ್ತು ಐದು ಇತರ ಅಧಿಕಾರಿಗಳನ್ನು ಕೊಲ್ಲಲಾಗಿತ್ತು.
ಈ ದಾಳಿಯ ಬಳಿಕ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮಿರಬ್ದೊಲ್ಲಾಹಿಯಾನ್ ಅವರು, ಇಸ್ರೇಲ್ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇರಾನ್ ರಾಯಭಾರ ಕಚೇರಿಯ ಮೇಲಿನ ಇಸ್ರೇಲ್ ದಾಳಿಗೆ ಅಮೆರಿಕ ಹೊಣೆಯಾಗಿದೆ ಮತ್ತು ಜವಾಬ್ದಾರರಾಗಿರಬೇಕು ಎಂದು ಹೇಳಿದ್ದರು.

ಇರಾನ್‌ನ ರಾಯಭಾರ ಕಚೇರಿ ಮೇಲಿನ ಇಸ್ರೇಲ್ ದಾಳಿಯನ್ನು ಯುಎನ್ ಭದ್ರತಾ ಮಂಡಳಿಯು ಖಂಡಿಸಿದ್ದರೆ ಈ ಯುದ್ಧವನ್ನು ತಪ್ಪಿಸಬಹುದಿತ್ತು ಎಂದು ಅವರು ಹೇಳಿದ್ದರು.

ದಾಳಿ ಎಲ್ಲಿ ನಡೆಯಬಹುದು?

ಇಸ್ರೇಲ್‌ನ ವೈಮಾನಿಕ ದಾಳಿಯ ಅನಂತರ ಇರಾನ್ ಇಸ್ರೇಲ್‌ನೊಳಗಿನ ಕೆಲವು ನಿರ್ದಿಷ್ಟ ಸ್ಥಳಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಅಥವಾ ಡ್ರೋನ್‌ಗಳನ್ನು ಬಳಸಿಕೊಂಡು ದಾಳಿಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಯುಎಸ್ ಗುಪ್ತಚರ ವಿಭಾಗ ಬಹಿರಂಗಪಡಿಸಿದೆ.

ಟೆಲ್ ಅವೀವ್‌ನಲ್ಲಿರುವ ಇಸ್ರೇಲ್ ಸೇನಾ ಪ್ರಧಾನ ಕಚೇರಿ ಕಿರಿಯಾವನ್ನು ಗುರಿಯಾಗಿಸಲು ಇರಾನ್ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಯುಎಸ್ ಗುಪ್ತಚರ ಮಾಹಿತಿ ತಿಳಿಸಿದೆ. ಇದಲ್ಲದೇ ಮಧ್ಯ ಇಸ್ರೇಲ್‌ನ ಪಾಲ್ಮಾಚಿಮ್ ಅಥವಾ ಉತ್ತರದ ಮೆರಾನ್‌ನಲ್ಲಿರುವ ವಾಯು ನೆಲೆಗಳು, ನೆಸೆಟ್ (ಸಂಸತ್ತು೦ ಮತ್ತು ಜೆರುಸಲೆಮ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿ ಮೇಲೆ ದಾಳಿಯಾಗುವ ಸಾಧ್ಯತೆ ಇದೆ.

ದಕ್ಷಿಣ ಅಥವಾ ಉತ್ತರ ಇಸ್ರೇಲ್ ಮೇಲೆ ಇರಾನ್‌ನಿಂದ ನೇರ ದಾಳಿ ನಡೆಸಬಹುದು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಸಿರಿಯಾದಿಂದ ಇಸ್ರೇಲ್ ಸ್ವಾಧೀನಪಡಿಸಿಕೊಂಡ ವಿವಾದಿತ ಪ್ರದೇಶವಾದ ಗೋಲಾನ್‌ನಲ್ಲಿ ಅಥವಾ ಗಾಜಾದಲ್ಲಿ ಇರಾನ್ ದಾಳಿಯನ್ನು ಸಿದ್ಧಪಡಿಸುತ್ತಿದೆ ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.

ಇರಾನ್ ಯುದ್ಧ ತಯಾರಿ ನಡೆಸುತ್ತಿರುವ ಬಗ್ಗೆ ಇಸ್ರೇಲ್ ಪ್ರತಿಕ್ರಿಯೆಯನ್ನು ಆಧರಿಸಿ ದಾಳಿ ಆರಂಭಿಸುವ ಸಾಧ್ಯತೆ ಹೆಚ್ಚಾಗಿದೆ ಇದೆ ಎಂದು ಗುಪ್ತಚರ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಹಮಾಸ್, ಹೆಜ್ಬುಲ್ಲಾ, ಕತೀಬ್ ಹೆಜ್ಬುಲ್ಲಾ, ಹೌತಿಗಳು ಅಥವಾ ಬದ್ರ್ ಸಂಘಟನೆಗಳು ಗಡಿಯಲ್ಲಿ ದಾಳಿ ನಡೆಸಬಹುದು. ದಕ್ಷಿಣ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ಇಸ್ರೇಲ್ ಅನ್ನು ಗುರಿಯಾಗಿಸಲು ಬಳಸಬಹುದಾದ ಕ್ಷಿಪಣಿಗಳ ದೊಡ್ಡ ಸಂಗ್ರಹವನ್ನು ಹೊಂದಿದೆ. ಆದರೂ ಇಸ್ರೇಲ್‌ನೊಂದಿಗೆ ಪೂರ್ಣ ಪ್ರಮಾಣದ ಯುದ್ಧವನ್ನು ಮಾಡಲು ಹಿಜ್ಬುಲ್ಲಾ ಹಿಂಜರಿಯುತ್ತಿದೆ ಎನ್ನಲಾಗಿದೆ.


ಇಸ್ರೇಲ್‌ಗೆ ಅಮೆರಿಕ ಬೆಂಬಲ

ಇಸ್ರೇಲ್ ವಿರುದ್ಧ ಇರಾನ್ ದಾಳಿಯ ಸಾಧ್ಯತೆಯು ಬಗ್ಗೆ ವಿಶ್ವವೇ ಎಚ್ಚೆತ್ತುಕೊಂಡಿದೆ. ಯುನೈಟೆಡ್ ಸ್ಟೇಟ್ಸ್ ಯುದ್ಧ ತಡೆಯಲು ಇತರ ದೇಶಗಳಿಂದ ಸಹಾಯವನ್ನು ಕೋರುತ್ತಿದೆ ಮತ್ತು ಇಸ್ರೇಲ್ ಗೆ ಬೆಂಬಲ ನೀಡುವ ಪ್ರತಿಜ್ಞೆಯನ್ನೂ ಮಾಡಿದೆ.

ಈ ಕುರಿತು ಮಾತನಾಡಿರುವ ಯುಎಸ್ ಅಧ್ಯಕ್ಷ ಜೋ ಬಿಡೆನ್, ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕುತ್ತಿದೆ. ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ಹೇಳಿದಂತೆ, ಇರಾನ್ ಮತ್ತು ಅದರ ಪ್ರಾಕ್ಸಿಗಳಿಂದ ಈ ಬೆದರಿಕೆಗಳ ವಿರುದ್ಧ ಇಸ್ರೇಲ್‌ನ ಭದ್ರತೆಗೆ ನಮ್ಮ ಬದ್ಧತೆ ಇದೆ. ಇಸ್ರೇಲ್‌ ಅನ್ನು ರಕ್ಷಿಸಲು ನಾವು ನಮ್ಮ ಕೈಲಾದಷ್ಟು ಸಹಾಯ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಯುದ್ಧ ಸನ್ನಿವೇಶದ ಕುರಿತು ಪ್ರತಿಕ್ರಿಯಿಸಿ, ಇರಾನ್ ತನ್ನ ಪ್ರದೇಶದಿಂದ ದಾಳಿ ಮಾಡಿದರೆ, ಇಸ್ರೇಲ್ ಪ್ರತಿಕ್ರಿಯಿಸುತ್ತದೆ ಮತ್ತು ಇರಾನ್‌ ಮೇಲೆ ದಾಳಿ ನಡೆಸುತ್ತದೆ ಎಂದು ಹೇಳಿದ್ದಾರೆ.

ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಚೀನಾದ ವಾಂಗ್ ಯಿ ಅವರೊಂದಿಗೆ ಮಾತನಾಡಿದ್ದು, ಇರಾನ್‌ ಗೆ ಯುದ್ಧ ಮಾಡದಂತೆ ಸೂಚಿಸಲು ಒತ್ತಾಯಿಸಿದ್ದಾರೆ. ರಷ್ಯಾ, ಜರ್ಮನಿ ಮತ್ತು ಬ್ರಿಟನ್ ಕೂಡ ಇರಾನ್ ಮತ್ತು ಇಸ್ರೇಲ್ ಸಂಯಮ ತೋರಿಸುವಂತೆ ಒತ್ತಾಯಿಸಿದೆ.

ಪ್ರಜೆಗಳಿಗೆ ನಾನಾ ದೇಶಗಳ ಎಚ್ಚರಿಕೆ

ಇಸ್ರೇಲ್‌ನಲ್ಲಿನ ತನ್ನ ಉದ್ಯೋಗಿಗಳಿಗೆ ಅಮೆರಿಕ ಪ್ರಯಾಣವನ್ನು ನಿರ್ಬಂಧಿಸಿದೆ. ಜೆರುಸಲೆಮ್, ಟೆಲ್ ಅವಿವ್ ಅಥವಾ ಬೀರ್ ಶೆವಾ ಪ್ರದೇಶಗಳ ಹೊರಗೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಿದೆ.
ಯುಕೆ ವಿದೇಶಾಂಗ ಕಚೇರಿಯು ಇಸ್ರೇಲ್‌ಗೆ ಪ್ರಯಾಣ ನಡೆಸದಂತೆ ನಾಗರಿಕರಿಗೆ ಸೂಚಿಸಿದೆ. ಇಸ್ರೇಲ್ ಮೇಲಿನ ದಾಳಿ ಸಾಧ್ಯತೆಯನ್ನು ಇರಾನ್‌ ಹೆಚ್ಚಿಸಿದೆ ಎಂದು ಹೇಳಿದೆ.

ಯುದ್ಧದ ತಯಾರಿಯಲ್ಲಿ ಇದ್ದರೂ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುವುದಿಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಸ್ರೇಲ್‌ ಗೆ ಎಚ್ಚರಿಕೆ ನೀಡಲು ಯುದ್ಧದ ತಯಾರಿ ನಡೆಸುತ್ತಿದೆ. ಇಸ್ರೇಲ್‌ನ ಮಿಲಿಟರಿಯನ್ನು ನಿರಂತರ ಎಚ್ಚರಿಕೆಯ ಸ್ಥಿತಿಯಲ್ಲಿ ಇರಿಸುವ ಗುರಿಯನ್ನು ಹೊಂದಿದ್ದು, ಈ ಮೂಲಕ ಅದರ ದೌರ್ಬಲ್ಯಗಳನ್ನು ಪರಿಶೀಲಿಸುತ್ತಿದೆ ಎಂಬ ವಿಶ್ಲೇಷಣೆಯೂ ಕೇಳಿ ಬಂದಿದೆ.

ಭಾರತದ ಪಾತ್ರ ಏನು?

ಭಾರತದ ಬೆಂಬಲ ಯಾವಾಗಲೂ ಇಸ್ರೇಲ್‌ ಕಡೆಗೇ ಇರುತ್ತದೆ. ಹಾಗಂತ ಇರಾನ್‌ ಕೂಡ ಭಾರತದ ವೈರಿ ದೇಶ ಏನಲ್ಲ. ಹಾಗಾಗಿ ಭಾರತ ಎಚ್ಚರಿಕೆಯ ಹೆಜ್ಜೆ ಇಡಲಿದೆ. ಇಸ್ರೇಲ್‌-ಇರಾನ್‌ ಯುದ್ಧ ತಡೆಯಲು ಭಾರತ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಿದೆ. ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಈಗಾಗಲೇ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ತೈಲ ದರದ ಮೇಲ ಪರಿಣಾಮ ಏನು?

ಒಂದೊಮ್ಮೆ ಇಸ್ರೇಲ್‌-ಇರಾನ್‌ ನಡುವೆ ಯುದ್ಧ ಸ್ಫೋಟಗೊಂಡರೆ ಇದರ ಮೊದಲ ಪರಿಣಾಮ ಬೀರುವುದು ತೈಲ ದರದ ಮೇಲೆ. ವಿಶ್ವದಲ್ಲಿ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ತೈಲ ಪೂರೈಕೆ ಜಾಲ ಏರುಪೇರಾಗುತ್ತದೆ. ಅದರಲ್ಲೂ ಇರಾನ್‌ ತೈಲ ಪೂರೈಸುವ ಪ್ರಮುಖ ರಾಷ್ಟ್ರ ಆಗಿರುವುದರಿಂದ, ಯುದ್ಧ ಸಂಭವಿಸಿದರೆ ತೈಲ ದರ ಏರಿಕೆ ಆಗುವ ಅಪಾಯವಿದೆ.

Continue Reading

EXPLAINER

ವಿಸ್ತಾರ Explainer: ಕಚ್ಚಲು ಶುರು ಮಾಡಿದ ಕಚ್ಚತೀವು ವಿಚಾರ; ಏನಿದು ತಗಾದೆ? ಶ್ರೀಲಂಕೆಗೆ ಇಂದಿರಾ ಗಾಂಧಿ ಬಿಟ್ಟುಕೊಟ್ಟದ್ದೇಕೆ?

ವಿಸ್ತಾರ Explainer: ಭಾರತದ ತೀರದಿಂದ ಕೇವಲ 20 ಕಿಮೀ ದೂರದಲ್ಲಿರುವ, ಜನವಸತಿ ಇಲ್ಲದ, 1.9 ಚದರ ಕಿಮೀ ವಿಸ್ತೀರ್ಣದ ಕಚ್ಚತೀವು ದ್ವೀಪ (Katchatheevu Island) ಈಗ ರಾಜಕೀಯ ವಿವಾದದ ಕೇಂದ್ರಬಿಂದು.

VISTARANEWS.COM


on

Katchatheevu island 2
Koo

ಭಾರತ ಹಾಗೂ ಶ್ರೀಲಂಕೆಯ ನಡುವೆ ಇರುವ ಕಚ್ಚತೀವು ಎಂಬ ದ್ವೀಪ (Katchatheevu Island) ಈಗ ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಇದು ಪ್ರಾರಂಭವಾದದ್ದು ತಮಿಳುನಾಡಿನಲ್ಲಿ ಮೊನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಭಾಷಣದಲ್ಲಿ ಮಾಡಿದ ಒಂದು ಉಲ್ಲೇಖದಿಂದ. ಈ ವಿವಾದ ಹಾಗೂ ಕಚ್ಚತೀವು ದ್ವೀಪದ ಪೂರ್ವೇತಿಹಾಸಗಳ ಬಗ್ಗೆ ಒಂದು ಸಮಗ್ರ ನೋಟ ಇಲ್ಲಿದೆ.

1974ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ಶ್ರೀಲಂಕಾಕ್ಕೆ ಹಸ್ತಾಂತರಿಸಿದ ವಿವಾದಿತ ಕಚ್ಚತೀವು ದ್ವೀಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೀಗ ಕಚ್ಚತೀವು ದ್ವೀಪದ ಸುತ್ತಲಿನ ಚರ್ಚೆ ಪ್ರಸ್ತುತ ತಮಿಳುನಾಡು ರಾಜಕೀಯದಲ್ಲಿಯೂ ಅದರಾಚೆಗೂ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ.

ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕಾಂಗ್ರೆಸ್ ಹೇಗೆ “ಉದಾರವಾಗಿ” ಬಿಟ್ಟುಕೊಟ್ಟಿತು ಎಂಬುದರ ಕುರಿತು ಪಿಎಂ ಮೋದಿ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಇದು ಪ್ರತಿಯೊಬ್ಬ ಭಾರತೀಯನನ್ನೂ ಕೋಪಗೊಳಿಸಿತು. ಇದರಿಂದ, ನಾವು ಎಂದಿಗೂ ಕಾಂಗ್ರೆಸ್ ಅನ್ನು ನಂಬಲು ಸಾಧ್ಯವಿಲ್ಲ ಎಂಬ ವಿಚಾರ ಜನರ ಮನದಲ್ಲಿ ಉಳಿದುಬಿಟ್ಟಿದೆ” ಎಂದು ಅವರು ಹೇಳಿದ್ದಾರೆ. ಇದಕ್ಕೆ ಪೂರಕವಾದ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ಹಳೆಯ ವರದಿಯ ಸಾಕ್ಷಿಯನ್ನು ಮುಂದಿಟ್ಟಿದ್ದಾರೆ.

ಇದೇ ವೇಗದಲ್ಲಿ ಅವರು ಡಿಎಂಕೆಯನ್ನೂ ಟೀಕಿಸಿದ್ದಾರೆ. “ತಮಿಳುನಾಡಿನ ಹಿತಾಸಕ್ತಿಗಳನ್ನು ಕಾಪಾಡಲು ಡಿಎಂಕೆ ಮಾತು ಹೊರತುಪಡಿಸಿ ಬೇರೆ ಏನನ್ನೂ ಮಾಡಿಲ್ಲ. ಕಚ್ಚತೀವಿನಲ್ಲಿ ಹೊರಹೊಮ್ಮುತ್ತಿರುವ ಹೊಸ ವಿವರಗಳು ಡಿಎಂಕೆಯ ದ್ವಂದ್ವ ನೀತಿಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿವೆ. ಕಾಂಗ್ರೆಸ್ ಮತ್ತು ಡಿಎಂಕೆ ಕುಟುಂಬ ಘಟಕಗಳು. ಅವರು ತಮ್ಮ ಸ್ವಂತ ಪುತ್ರರು ಮತ್ತು ಹೆಣ್ಣುಮಕ್ಕಳು ಬೆಳೆಯಲು ಮಾತ್ರ ಕಾಳಜಿ ವಹಿಸುತ್ತಾರೆ. ಬೇರೆಯವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಚ್ಚತೀವು ಮೇಲಿನ ಅವರ ನಿರ್ದಯತೆ ನಮ್ಮ ಬಡ ಮೀನುಗಾರರು ಮತ್ತು ಮೀನುಗಾರ ಮಹಿಳೆಯರ ಹಿತಾಸಕ್ತಿಗಳಿಗೆ ಹಾನಿ ಮಾಡಿದೆ” ಎಂದು ಅವರು ಹೇಳಿದ್ದಾರೆ.

ಅಣ್ಣಾಮಲೈ ಹೊರತೆಗೆದ ಸತ್ಯ

ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಆರ್‌ಟಿಐ ಅರ್ಜಿಯ ಮೂಲಕ ಶ್ರೀಲಂಕಾ ಕಚ್ಚತೀವು ದ್ವೀಪವನ್ನು ಹೇಗೆ ತನ್ನದಾಗಿಸಿಕೊಂಡಿತು ಎಂದು ವಿವರಿಸುವ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಭಾರತದ ತೀರದಿಂದ ಕೇವಲ 20 ಕಿಮೀ ದೂರದಲ್ಲಿರುವ, 1.9 ಚದರ ಕಿಮೀ ವಿಸ್ತೀರ್ಣದ ಈ ದ್ವೀಪದ ಮೇಲೆ ಲಂಕೆ ಮೊದಲಿಂದಲೂ ಹಕ್ಕು ಸಾಧಿಸುತ್ತಿತ್ತು. ಭಾರತ ಅದನ್ನು ನಿರಾಕರಿಸುತ್ತಿತ್ತು.

ಸ್ವಾತಂತ್ರ್ಯದ ನಂತರ ಶ್ರೀಲಂಕಾ ತನ್ನ ಹಕ್ಕುಗಳನ್ನು ಒತ್ತಿಹೇಳಿತು ಮತ್ತು ತನ್ನ ಅನುಮತಿಯಿಲ್ಲದೆ ಭಾರತೀಯ ನೌಕಾಪಡೆಯು ದ್ವೀಪದಲ್ಲಿ ಕಾಲಿಡಲು ಅನುಮತಿಸಲಿಲ್ಲ. ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಈ ವಿಷಯವನ್ನು ಅಷ್ಟು ಮಹತ್ವದ್ದಲ್ಲ ಎಂದು ತಳ್ಳಿಹಾಕಿದರು. “ನಾನು ಈ ಚಿಕ್ಕ ದ್ವೀಪಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಮತ್ತು ಅದರ ಮೇಲಿನ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ” ಎಂದು ನೆಹರು ಮೇ 10, 1961 ರಂದು ಹೇಳಿದರು.

ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಿದಂತೆ, 1968ರಲ್ಲಿ ನೆಹರೂ ಅವರ ನಿರ್ಣಯವನ್ನು ಕಾಮನ್‌ವೆಲ್ತ್ ಕಾರ್ಯದರ್ಶಿ ವೈ.ಡಿ ಗುಂಡೆವಿಯಾ ಅವರು ಸಿದ್ಧಪಡಿಸಿದ್ದು, ಸಂಸತ್ತಿನ ಅನೌಪಚಾರಿಕ ಸಲಹಾ ಸಮಿತಿಯೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಇದನ್ನು “ಹಿನ್ನೆಲೆಯವರು” ಎಂದು ಹಂಚಿಕೊಂಡಿವೆ.

ʼಹಿನ್ನೆಲೆಯವರುʼ ದ್ವೀಪದ ಬಗ್ಗೆ ಭಾರತಕ್ಕೆ ಆಸಕ್ತಿ ಇಲ್ಲದಿರುವ “ನಿರ್ಧಾರ”ವನ್ನು ಬಹಿರಂಗಪಡಿಸಿದರು. 1974ರಲ್ಲಿ ಭಾರತ ತನ್ನ ಹಕ್ಕನ್ನು ಬಿಟ್ಟೇಕೊಟ್ಟಿತು. “ಭಾರತದ ಅಥವಾ ಶ್ರೀಲಂಕಾದ ಸಾರ್ವಭೌಮತ್ವದ ಹಕ್ಕುಗಳ ಬಲದ ಬಗ್ಗೆ ಯಾವುದೇ ಸ್ಪಷ್ಟವಾದ ತೀರ್ಮಾನವನ್ನು ತೆಗೆದುಕೊಳ್ಳಲಾಗಿಲ್ಲ” ಎಂದು MEA ಹೇಳಿದೆ.

ಈಸ್ಟ್ ಇಂಡಿಯಾ ಕಂಪನಿಯು ರಾಮನಾಡಿನ ರಾಜನಿಗೆ ಇಲ್ಲಿ ನೀಡಿದ ಜಮೀನ್ದಾರಿ ಹಕ್ಕುಗಳ ಸ್ಪಷ್ಟ ಉಲ್ಲೇಖವಿದೆ. ಭಾರತ ಇದರ ಮೇಲೆ ಭಾರತವು ಬಲವಾದ ಹಕ್ಕನ್ನು ಹೊಂದಿತ್ತು ಎಂದು 1960ರಲ್ಲಿ ಭಾರತದ ಅಟಾರ್ನಿ ಜನರಲ್ ಎಂ.ಸಿ ಸೆಟಲ್ವಾಡ್ ಹೇಳಿದ್ದರು. ಇದರ ಹೊರತಾಗಿಯೂ ಭಾರತ ಈ ನಿರ್ಧಾರಕ್ಕೆ ಬಂದಿತ್ತು.

ದ್ವೀಪ, ಇಲ್ಲಿನ ಮೀನುಗಾರಿಕೆ ಮತ್ತು ಅದರ ಸುತ್ತಲಿನ ಇತರ ಸಂಪನ್ಮೂಲಗಳು ಸೇರಿದಂತೆ ರಾಜನು 875ರಿಂದ 1948ರವರೆಗೆ ಕಚ್ಚತೀವಿನಲ್ಲಿ ಈ ಹಕ್ಕುಗಳನ್ನು ಅನುಭವಿಸಿದರು. ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಗೊಳಿಸಿದ ನಂತರ ಮದ್ರಾಸ್ ರಾಜ್ಯ ಇದನ್ನು ನೋಡಿಕೊಳ್ಳುತ್ತಿತ್ತು.

ದ್ವೀಪದ ಸ್ವಾಮ್ಯದ ಬಗ್ಗೆ ಹೇಗೆ ಭಾರತ ಖಚಿತವಾಗಿರಲಿಲ್ಲ ಎಂಬುದನ್ನು ದಾಖಲೆಗಳು ತೋರಿಸಿವೆ. ಎಂಇಎ ಜಂಟಿ ಕಾರ್ಯದರ್ಶಿ ಕೆ. ಕೃಷ್ಣ ರಾವ್ ಅವರು, “ಭಾರತವು ಮೀನುಗಾರಿಕೆ ಹಕ್ಕುಗಳನ್ನು ಇಲ್ಲಿ ಪಡೆದುಕೊಳ್ಳಲು ಕಾನೂನು ಬೆಂಬಲ ಹೊಂದಿರುವ ಪ್ರಕರಣವಿದು” ಎಂದು ತೀರ್ಮಾನಿಸಿದರು.

ಈ ವಿಚಾರ ಹೇಗೆ ರಾಜಕೀಯವಾಯಿತು?

1968ರಲ್ಲಿ ತಮ್ಮ ದ್ವೀಪವನ್ನು ಶ್ರೀಲಂಕಾ ತನ್ನದೆಂದು ನಕ್ಷೆಯಲ್ಲಿ ತೋರಿಸಿತು. ಆ ಸಂದರ್ಭದಲ್ಲಿ ಶ್ರೀಲಂಕಾದ ಪ್ರಧಾನಿ ದುದ್ಲೆ ಸೇನಾನಾಯಕೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಕ್ಕಾಗಿ ಪ್ರತಿಪಕ್ಷಗಳು ಇಂದಿರಾ ಗಾಂಧಿ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದವು. ಇಂದಿರಾ ಗಾಂಧಿ ಮತ್ತು ಸೇನಾನಾಯಕೆ ನಡುವೆ ಒಪ್ಪಂದದ ಮಾತುಕತೆ ನಡೆಯುತ್ತಿದೆ ಎಂಬ ಅನುಮಾನವನ್ನು ಪ್ರತಿಪಕ್ಷಗಳು ಸಂಸತ್ತಿನಲ್ಲಿ ಎತ್ತಿದವು.

ಒಪ್ಪಂದದ ಕುರಿತಾದ ಆರೋಪಗಳನ್ನು ಕಾಂಗ್ರೆಸ್ ತಳ್ಳಿಹಾಕಿತು. “ದ್ವೀಪವು ವಿವಾದಿತ ಸ್ಥಳ”ವಾಗಿರುವುದರಿಂದ ಮತ್ತು “ಉತ್ತಮ ದ್ವಿಪಕ್ಷೀಯ ಸಂಬಂಧಗಳ ಅಗತ್ಯವಿರುವುದರಿಂದ” “ಭಾರತ ಬಾಂಧವ್ಯವನ್ನು ಸಮತೋಲನ ಮಾಡಬೇಕಿ”ರುವುದರಿಂದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿತು.

1973ರಲ್ಲಿ ವಿವಾದಿತ ದ್ವೀಪದ ಬಗ್ಗೆ ಕೊಲಂಬೊದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗಳು ನಡೆದವು. ಒಂದು ವರ್ಷದ ನಂತರ, ಭಾರತದ ಹಕ್ಕು ತ್ಯಜಿಸುವ ನಿರ್ಧಾರವನ್ನು ವಿದೇಶಾಂಗ ಕಾರ್ಯದರ್ಶಿ ಕೇವಲ್ ಸಿಂಗ್ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರಿಗೆ ತಿಳಿಸಿದರು. ದ್ವೀಪವು ಜಾಫ್ನಾಪಟ್ಟಣಂ, ಡಚ್ ಮತ್ತು ಬ್ರಿಟಿಷ್ ನಕ್ಷೆಗಳ ಸಾಮ್ರಾಜ್ಯದ ಭಾಗವಾಗಿದೆ ಎಂದು ತೋರಿಸುವ “ದಾಖಲೆಗಳ” ಆಧಾರದ ಮೇಲೆ ಶ್ರೀಲಂಕಾ “ಅತ್ಯಂತ ಬಲವಾದ ಹಕ್ಕುಸ್ವಾಮ್ಯ” ಹೊಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಒತ್ತಿ ಹೇಳಿದರು.

1925ರಿಂದ ಶ್ರೀಲಂಕಾವು ಭಾರತದ ಪ್ರತಿಭಟನೆಯಿಲ್ಲದೆ ತನ್ನ ಸಾರ್ವಭೌಮತ್ವವನ್ನು ಅಲ್ಲಿ ಪ್ರತಿಪಾದಿಸಿದೆ ಎಂದು ಅವರು ಹೇಳಿದರು. 1970ರಲ್ಲಿ ಆಗಿನ ಅಟಾರ್ನಿ ಜನರಲ್ ಅವರು “ಕಚ್ಚತೀವು ಮೇಲಿನ ಸಾರ್ವಭೌಮತ್ವವು ಸಿಲೋನ್‌ಗೆ ಇದೆ, ಭಾರತದೊಂದಿಗೆ ಇಲ್ಲ” ಎಂದು ಉಲ್ಲೇಖಿಸಿದರು. 1974ರಲ್ಲಿ ಭಾರತ ಸರ್ಕಾರವು ದ್ವೀಪವನ್ನು ಶ್ರೀಲಂಕಾಕ್ಕೆ ದ್ವಿಪಕ್ಷೀಯ ಒಪ್ಪಂದದಲ್ಲಿ ಹಸ್ತಾಂತರಿಸಿತು.

ದ್ವೀಪದ ಇತಿಹಾಸ

ಕಚ್ಚತೀವು ಪಾಕ್ ಜಲಸಂಧಿಯಲ್ಲಿ ಜನವಸತಿ ಇಲ್ಲದ ದ್ವೀಪವಾಗಿದೆ. ಇದು 14ನೇ ಶತಮಾನದಲ್ಲಿ ಜ್ವಾಲಾಮುಖಿ ಸ್ಫೋಟಗಳಿಂದ ರೂಪುಗೊಂಡಿತು. ಇಲ್ಲಿನ 285 ಎಕರೆ ಭೂಮಿಯಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಡಳಿತ ನಡೆಸಿದ್ದವು.

ಮಧ್ಯಕಾಲೀನ ಅವಧಿಯಲ್ಲಿ, ದ್ವೀಪವು ಶ್ರೀಲಂಕಾದ ಜಾಫ್ನಾ ಸಾಮ್ರಾಜ್ಯದಿಂದ ನಿಯಂತ್ರಿಸಲ್ಪಟ್ಟಿತು. 17ನೇ ಶತಮಾನದಲ್ಲಿ, ರಾಮೇಶ್ವರಂನಿಂದ ವಾಯುವ್ಯಕ್ಕೆ ಸುಮಾರು 55 ಕಿಮೀ ದೂರದಲ್ಲಿರುವ ರಾಮನಾಥಪುರಂ ಮೂಲದ ರಾಮನಾಡ್ ಜಮೀನ್ದಾರರಿಗೆ ನಿಯಂತ್ರಣವನ್ನು ನೀಡಲಾಯಿತು. 1921ರಲ್ಲಿ, ಶ್ರೀಲಂಕಾ ಮತ್ತು ಭಾರತ ಎರಡೂ ಮೀನುಗಾರಿಕೆಗಾಗಿ ಹಕ್ಕು ಸಾಧಿಸಿದವು. ವಿವಾದ ಇತ್ಯರ್ಥವಾಗಲಿಲ್ಲ.

20ನೇ ಶತಮಾನದ ಆರಂಭದಲ್ಲಿ ರಚಿಸಿದ ಕ್ಯಾಥೋಲಿಕ್ ದೇವಾಲಯ ಸೇಂಟ್ ಆಂಥೋನಿ ಚರ್ಚ್, ದ್ವೀಪದಲ್ಲಿನ ಏಕೈಕ ಕಟ್ಟಡವಾಗಿದೆ. ಭಾರತ ಮತ್ತು ಶ್ರೀಲಂಕಾ ಎರಡರಿಂದಲೂ ಇಲ್ಲಿ ಕ್ರಿಶ್ಚಿಯನ್ ಪಾದ್ರಿಗಳು ಸೇವೆಯನ್ನು ನಡೆಸುತ್ತಾರೆ. ಎರಡೂ ದೇಶಗಳ ಭಕ್ತರು ವಾರ್ಷಿಕ ಉತ್ಸವದ ಸಮಯದಲ್ಲಿ ಇಲ್ಲಿಗೆ ತೀರ್ಥಯಾತ್ರೆ ಮಾಡುತ್ತಾರೆ. ಕಳೆದ ವರ್ಷ 2,500 ಭಾರತೀಯರು ಉತ್ಸವಕ್ಕಾಗಿ ರಾಮೇಶ್ವರಂನಿಂದ ಕಚ್ಚತೀವಿಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Narendra Modi: ಲಂಕಾಗೆ ಕಚ್ಚತೀವು ದ್ವೀಪ ಬಿಟ್ಟ ಕಾಂಗ್ರೆಸ್‌ ನಂಬಿಕೆಗೆ ಅರ್ಹವಲ್ಲ; ಮೋದಿ ವಾಗ್ದಾಳಿ

Continue Reading

EXPLAINER

New Tax Rules: ನಾಳೆಯಿಂದ ಹೊಸ ತೆರಿಗೆ ನಿಯಮ ಜಾರಿ; ಏನೆಲ್ಲ ಬದಲು? ಸ್ಲ್ಯಾಬ್‌ ಹೇಗಿದೆ?

New Tax Rules: ದೇಶಾದ್ಯಂತ ಏಪ್ರಿಲ್‌ 1ರಿಂದ ಹೊಸ ತೆರಿಗೆ ಪದ್ಧತಿಯ ನಿಯಮಗಳು ಜಾರಿಗೆ ಬರಲಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ವೇಳೆ ಪ್ರಸ್ತಾಪಿಸಿದಂತೆ ಹೊಸ ಹಣಕಾಸು ವರ್ಷದಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಯಾವೆಲ್ಲ ನಿಯಮ ಜಾರಿಗೆ ಬರಲಿವೆ? ಯಾವ ತೆರಿಗೆ ಪದ್ಧತಿ ಒಳ್ಳೆಯದು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

New Tax Rules
Koo

ನವದೆಹಲಿ: ದೇಶಕ್ಕೆ ದೇಶವೇ ಹೊಸ ಹಣಕಾಸು ವರ್ಷಕ್ಕೆ (New Financial Year) ಕಾಲಿಡುತ್ತಿದೆ. ಇನ್ನು, ಕಳೆದ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಘೋಷಿಸಿದಂತೆ ಏಪ್ರಿಲ್‌ 1ರಿಂದ ತೆರಿಗೆ ನಿಯಮಗಳಲ್ಲಿ ಭಾರಿ ಬದಲಾವಣೆಗಳು ಆಗಲಿವೆ. ಹೊಸ ತೆರಿಗೆ ನಿಯಮಗಳು (New Tax Rules) ಸೋಮವಾರದಿಂದಲೇ ಜಾರಿಗೆ ಬರಲಿವೆ. ಹಾಗಾದರೆ, ಹೊಸ ತೆರಿಗೆ ಪದ್ಧತಿಯಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆ? ತೆರಿಗೆ ವಿನಾಯಿತಿ ಮೊತ್ತ ಎಷ್ಟು? ಎಷ್ಟು ಗಳಿಕೆಗೆ ಎಷ್ಟು ತೆರಿಗೆ ಕಡಿತವಾಗುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತಿಳಿದುಕೊಳ್ಳಬೇಕಾದ ಸಿಂಪಲ್ ಅಂಶಗಳು

  • ಹೊಸ ತೆರಿಗೆ ನಿಯಮ ಜಾರಿಗೆ ಬಂದರೂ ಹಳೆಯ ತೆರಿಗೆ ಪದ್ಧತಿ ಜಾರಿಯಲ್ಲಿ ಇರಲಿದೆ. ನಮಗೆ ಬೇಕಾದ ತೆರಿಗೆ ಪದ್ಧತಿಯನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು
  • ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡವರಿಗೂ 50 ಸಾವಿರ ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಇರಲಿದೆ. ಇದು ಹಳೆಯ ಹಾಗೂ ಹೊಸ ಪದ್ಧತಿಗೂ ಅನ್ವಯವಾಗಲಿದೆ
  • 5 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ಇರುವವರಿಗೆ ಹೊಸ ತೆರಿಗೆ ಪದ್ಧತಿ ಅನ್ವಯ ಸರ್‌ಚಾರ್ಜ್‌ಅನ್ನು ಶೇ.37ರಿಂದ 25ಕ್ಕೆ ಇಳಿಕೆ ಮಾಡಲಾಗಿದೆ

ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್‌ ಹೀಗಿದೆ

ಆದಾಯವಿಧಿಸುವ ತೆರಿಗೆ
0-3 ಲಕ್ಷ ರೂ.ತೆರಿಗೆ ಇರಲ್ಲ
3-6 ಲಕ್ಷ ರೂ.5%
6-9 ಲಕ್ಷ ರೂ.10%
9-12 ಲಕ್ಷ ರೂ.15%
12-15 ಲಕ್ಷ ರೂ. 20%
15 ಲಕ್ಷ ರೂ.ಗಿಂತ ಹೆಚ್ಚು30%

ಇದನ್ನೂ ಓದಿ: Money Guide: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಎಷ್ಟು ಬಗೆಯ ಫಾರ್ಮ್‌ಗಳಿವೆ? ನಿಮಗೆ ಯಾವುದು ಸೂಕ್ತ? ಚೆಕ್‌ ಮಾಡಿ

ಹೊಸ ತೆರಿಗೆ ಎಂದರೆ ಇಷ್ಟೇ…

ಹೊಸ ತೆರಿಗೆ ಪದ್ಧತಿಯಲ್ಲಿ ಗರಿಷ್ಠ ಎಂದರೆ, 7.5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ. 7 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಇನ್ನು, 50 ಸಾವಿರ ರೂ. ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತ ಸೇರಿ 7.5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಪಾವತಿಸಬೇಕಿಲ್ಲ. ಆದರೆ, 7.51 ಲಕ್ಷ ರೂ. ಆದಾಯ ನಿಮ್ಮದಿದ್ದರೆ, ನೀವು ಇಡೀ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಹಾಗಾಗಿ, 7.5 ಲಕ್ಷ ರೂ.ಗಿಂತ ಹೆಚ್ಚು ಸಂಬಳ ಇರುವವರು ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಳ್ಳಲು ಒಮ್ಮೆ ಯೋಚಿಸಬೇಕು.

ಹಳೆಯ ತೆರಿಗೆಯ ಡಿಡಕ್ಷನ್‌ಗಳು ಏನೇನು?

ಹಳೆಯ ತೆರಿಗೆ ಪದ್ಧತಿಯಲ್ಲಿ ಹಲವು ಡಿಡಕ್ಷನ್‌ಗಳ ಲಾಭ ಪಡೆಯಬಹುದಾದ ಕಾರಣ ಹೆಚ್ಚಿನ ಆದಾಯ ಇರುವವರು ಈಗಲೂ ಇದೇ ಒಳ್ಳೆಯದು ಎಂದು ಅಭಿಪ್ರಾಯಪಡುತ್ತಿದ್ದಾರೆ. ಹಳೆಯ ತೆರಿಗೆ ಪದ್ಧತಿಯ 80C ಅಡಿಯಲ್ಲಿ ಹೂಡಿಕೆ ಮಾಡಿದ್ದರೆ 1.5 ಲಕ್ಷ ರೂ.ವರೆಗೆ ಡಿಡಕ್ಷನ್‌ ಪಡೆಯಬಹುದು. ಇನ್ನು ಜೀವ ವಿಮಾ ಹೂಡಿಕೆಯಲ್ಲಿ 1.5 ಲಕ್ಷ ರೂ., ಹೆಂಡತಿ-ಮಕ್ಕಳಿಗೆ ಆರೋಗ್ಯ ವಿಮೆ ಮಾಡಿಸಿದ್ದರೆ 25 ಸಾವಿರ ರೂ. ಡಿಡಕ್ಷನ್‌ನ ಲಾಭ ಪಡೆಯಬಹುದು. 60 ವರ್ಷ ದಾಟಿದ ಮನೆಯ ಹಿರಿಯರಿಗೆ ವಿಮೆ ಮಾಡಿಸಿದ್ದರೂ 50 ಸಾವಿರ ರೂ. ಡಿಡಕ್ಷನ್‌ ಇರಲಿದೆ. ಸ್ಡಾಂಡರ್ಡ್‌ ಡಿಡಕ್ಷನ್‌ ಕೂಡ 50 ಸಾವಿರ ರೂ. ಇರಲಿದೆ.

ಜೀವ ವಿಮಾ ತೆರಿಗೆ ನಿಯಮ ಬದಲು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಘೋಷಿಸಿರುವ ಪ್ರಕಾರ, ಏಪ್ರಿಲ್ 1, 2023ರಂದು ಅಥವಾ ನಂತರ ವಿತರಿಸಲಾದ ಜೀವ ವಿಮಾ ಪಾಲಿಸಿಗಳ ಮೆಚ್ಯೂರಿಟಿ ಆದಾಯ ಮತ್ತು ಒಟ್ಟು ಪ್ರೀಮಿಯಂ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಅದು ತೆರಿಗೆಗೆ ಒಳಪಟ್ಟಿರುತ್ತದೆ. ಸರ್ಕಾರೇತರ ಉದ್ಯೋಗಿಗಳಿಗೆ ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿಯನ್ನು 2022ರಿಂದ 3 ಲಕ್ಷ ರೂ.ಗಳಿಂದ ಈಗ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
UPSC Results 2023
ದೇಶ2 hours ago

ವಿಸ್ತಾರ ಸಂಪಾದಕೀಯ: ಯುಪಿಎಸ್‌ಸಿ ಸಾಧಕರ ಕತೆಗಳು ಇತರರಿಗೆ ಸ್ಫೂರ್ತಿಯಾಗಲಿ

Ram Navami
ಪ್ರಮುಖ ಸುದ್ದಿ2 hours ago

Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

State Administrative Reforms Commission Chairman R V Deshpande statement
ಉತ್ತರ ಕನ್ನಡ3 hours ago

Lok Sabha Election 2024: ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ: ಆರ್.ವಿ.ದೇಶಪಾಂಡೆ

IPL 2024
ಪ್ರಮುಖ ಸುದ್ದಿ3 hours ago

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

Murder Case
ಕರ್ನಾಟಕ3 hours ago

Chitradurga News: ಚಿತ್ರದುರ್ಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆ

amith shah
ದೇಶ3 hours ago

Amit Shah: ಶೀಘ್ರದಲ್ಲೇ ಭಾರತ ನಕ್ಸಲ್‌ ಮುಕ್ತವಾಗಲಿದೆ; ಅಮಿತ್ ಶಾ

Nitin Gadkari
ದೇಶ4 hours ago

Nitin Gadkari : ನಾಗ್ಪುರ ಕ್ಷೇತ್ರಕ್ಕೆ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ

UPSC Results 2023
ಕರ್ನಾಟಕ4 hours ago

UPSC Results 2023: ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದ ಶಾಂತಪ್ಪ ಕುರುಬರ; ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡ ಸಾಧಕ!

Dalip Singh Majithia
ಪ್ರಮುಖ ಸುದ್ದಿ4 hours ago

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Ayodhya Ram Mandir
ದೇಶ4 hours ago

Ayodhya Ram Mandir: ನಾಳೆ ಅಯೋಧ್ಯೆ ಶ್ರೀರಾಮನಿಗೆ ಸೂರ್ಯ ತಿಲಕ; ಮನೆಯಲ್ಲೇ ಕೂತು ಹೀಗೆ ಕಣ್ತುಂಬಿಕೊಳ್ಳಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ22 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20242 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ5 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20246 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌