UPI Payment : Gpay ​ಮಾಡುತ್ತೀರಾ? ನಿಮ್ಮ ಬ್ಯಾಂಕ್​ಗಳು ನೀಡಿರುವ ಮಿತಿ ಎಷ್ಟಿದೆ ಎಂದು ಇಲ್ಲಿ ತಿಳಿದುಕೊಳ್ಳಿ - Vistara News

ತಂತ್ರಜ್ಞಾನ

UPI Payment : Gpay ​ಮಾಡುತ್ತೀರಾ? ನಿಮ್ಮ ಬ್ಯಾಂಕ್​ಗಳು ನೀಡಿರುವ ಮಿತಿ ಎಷ್ಟಿದೆ ಎಂದು ಇಲ್ಲಿ ತಿಳಿದುಕೊಳ್ಳಿ

ಜಿಪೇ ಯುಪಿಐ ಪಾವತಿಗೆ (UPI Payment) ನೀಡಲಾಗಿರುವ ವರ್ಗಾವಣೆ ಮಿತಿಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಿಮ್ಮ ಬ್ಯಾಂಕ್​ನಲ್ಲಿ ಎಷ್ಟಿದೆ ಎಂಬುದನ್ನು ಬೇಗ ಚೆಕ್​ ಮಾಡಿಕೊಳ್ಳಿ.

VISTARANEWS.COM


on

Are you using GPay? Find out the limit given by your banks here
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಯುಪಿಐ ಪೇಮೆಂಟ್​ಗಳು ಚಾಲ್ತಿಗೆ ಬಂದ ಬಳಿಕ ಹಣ ಪಾವತಿ ಸಿಕ್ಕಾಪಟ್ಟೆ ಸರಳ ಎನಿಸಿಕೊಂಡಿದೆ. ಜತೆಗೆ ನೋಟುಗಳ ಚಿಂತೆಯಿಲ್ಲದೆ ಎಲ್ಲಿಗೆ ಬೇಕಾದರೂ ಹೋಗಬಹದು. ಪರ್ಸ್​ ಮನೆಯಲ್ಲಿ ಬಿಟ್ಟು ಹೋಗಿದ್ದರೂ ಚಿಂತೆಯಿಲ್ಲದೆ ವಹಿವಾಟು ಮುಗಿಸಬಹುದು. ಆದಾಗ್ಯೂ ಯುಪಿಐ ಪೇಮೆಂಟ್​ (UPI Payment) ಮಾಡುವಾಗ ನಿರ್ದಿಷ್ಟ ಮೊತ್ತದ ವಹಿವಾಟಿಗೆ ಮಿತಿ ಹಾಕಲಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಅದಕ್ಕಾಗಿ ಗೂಗಲ್​ ಕಂಪನಿಯ ಜಿಪೆ (Gpay) ಇತ್ತೀಚೆಗೆ ಹೊಸ ಪಟ್ಟಿಯೊಂದನ್ನು ಪ್ರಕಟಿಸಿದ್ದು ಅದರಲ್ಲಿ ಯಾವ ಯಾವ ಬ್ಯಾಂಕ್​ಗಳು ಎಷ್ಟು ಮೊತ್ತದ ಮಿತಿ ನಿಗದಿ ಮಾಡಿದೆ ಎಂಬುದಾಗಿ ತಿಳಿಸಲಾಗಿದೆ. ಸ್ಟೇಟ್​ಬ್ಯಾಂಕ್​ ಆಫ್​ ಇಂಡಿಯಾ, ಎಚ್​ಡಿಎಫ್​ಸಿ, ಐಸಿಸಿ ಸೇರಿದಂತೆ ಹಲವು ಬ್ಯಾಂಕ್​ಗಳ ಪಟ್ಟಿಯನ್ನು ನೀಡಿದೆ. ತಕ್ಷಣವೇ ನಿಮ್ಮ ಬ್ಯಾಂಕ್​ನಲ್ಲಿ ಒಂದು ಬಾರಿಗೆ ಎಷ್ಟು ಕಳುಹಿಸಲು ಸಾಧ್ಯ ಇದೆ ಎಂಬುದನ್ನು ಅರಿತುಕೊಳ್ಳಿ.

ಇದನ್ನೂ ಓದಿ : Mann Ki Baat: ಇ ಸಂಜೀವಿನಿ ಆ್ಯಪ್, ಯುಪಿಐ ಕುರಿತು ಮನ್‌ ಕಿ ಬಾತ್‌ನಲ್ಲಿ ಮೋದಿ ಮೆಚ್ಚುಗೆ

ಒಂದು ಮೊಬೈಲ್ ಆ್ಯಪ್​ ಮೂಲಕ ಹಲವಾರು ಬ್ಯಾಂಕ್​ಗಳ ಖಾತೆಯನ್ನು ನಿರ್ವಹಣೆ ಮಾಡುವುದಕ್ಕೆ ಯುಪಿಐ (Unified Payment Interface) ಎಂದು ಕರೆಯುತ್ತೇವೆ. ಇದರಲ್ಲಿ ಮರ್ಚೆಂಟ್​ ಪೇಮೆಂಟ್​, ಹಣಕಾಸಿನ ವರ್ಗಾವಣೆ ಸೇರಿದಂತೆ ಹಲವಾರು ಸೇವೆಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ. ಈ ಆ್ಯಪ್​ ಮೂಲಕ ಹಣವನ್ನು ಕಳುಹಿಸುವ ಜತೆಗೆ ಹಣ ಬೇಡಿಕೆ ಇಟ್ಟು ಮನವಿ ಕೂಡ ಮಾಡಲು ಸಾಧ್ಯವಿದೆ.

ಜಿಪೇ ಬಿಡುಗಡೆ ಮಾಡಿರುವ ಬ್ಯಾಂಕ್​ವಾರು ಪಟ್ಟಿ ಇಲ್ಲಿದೆ

  1. ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ: ಒಂದು ಬಾರಿ 1 ಲಕ್ಷ ರೂಪಾಯಿ ಕಳುಹಿಸಬಹುದು. ದಿನವೊಂದಕ್ಕೆ ಗರಿಷ್ಠ 1 ಲಕ್ಷ ರೂ. ವಹಿವಾಟು ಮಾತ್ರ ನಡೆಸಲು ಸಾಧ್ಯ.
  2. ಎಚ್​ಡಿಎಫ್​ಸಿ ಬ್ಯಾಂಕ್​: ಒಂದು ಬಾರಿಗೆ ಗರಿಷ್ಠ 1 ಲಕ್ಷ ರೂಪಾಯಿ ಕಳುಹಿಸಬಹುದು. ಆದರೆ, ಮೊದಲ ಬಾರಿಗೆ ನೋಂದಣಿ ಮಾಡಿಕೊಂಡ ಗ್ರಾಹಕರಿಗೆ 5000 ರೂಪಾಯಿ ಮಿತಿ ನಿಗದಿ ಮಾಡಲಾಗಿದೆ. ದಿನವೊಂದಕ್ಕೆ ಗರಿಷ್ಠ 1 ಲಕ್ಷ ರೂಪಾಯಿ ವಹಿವಾಟು ಮಾಡುವ ಅವಕಾಶ ನೀಡಿದೆ.
  3. ಐಸಿಐಸಿಐ ಬ್ಯಾಂಕ್​: ಯುಪಿಐ ವರ್ಗಾವಣೆ ಮಿತಿ ಹಾಗೂ ದೈನಂದಿನ ಮಿತಿ ಒಂದು ಲಕ್ಷ ರೂಪಾಯಿ.
  4. ಆಕ್ಸಿಸ್​ ಬ್ಯಾಂಕ್​: ಯುಪಿಐಯಲ್ಲಿ ಗರಿಷ್ಠ 1 ಲಕ್ಷ ರೂಪಾಯಿ ಕಳುಹಿಸಬಹುದು ಹಾಗೂ ದೈನಂದಿನ ಮಿತಿಯೂ 1 ಲಕ್ಷ ರೂಪಾಯಿ.
  5. ಬ್ಯಾಂಕ್​ ಆಫ್​ ಬರೋಡಾ: ಈ ಬ್ಯಾಂಕ್​ನ ಗ್ರಾಹಕರಿಗೆ ಒಂದು ಬಾರಿಯ ಹಣ ವರ್ಗಾವಣೆ ಮಿತಿ 25000 ರೂಪಾಯಿ. ಆದರೆ, ದೈನಂದಿನ ಮಿತಿಯನ್ನು ಇನ್ನೂ ನಿಗದಿ ಮಾಡಿಲ್ಲ.

ಇನ್ನಷ್ಟು ಬ್ಯಾಂಕ್​ಗಳ ಖಾತೆದಾರರ ಮಿತಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ.

ಎಷ್ಟು ಹಣಕ್ಕೆ ಮನವಿ ಸಲ್ಲಿಸಬಹುದು?

ತುರ್ತು ಅಗತ್ಯಕ್ಕೆ ಹಣ ಬೇಕಾದಾಗ ನಿಮ್ಮ ಆಪ್ತರಿಗೆ ಜಿಪೇ ಮೂಲಕವೇ ಮನವಿ ಸಲ್ಲಿಸಲು ಸಾಧ್ಯವಿದೆ. ಗರಿಷ್ಠ 2000 ರೂಪಾಯಿ ಮಾತ್ರ ಕಳುಹಿಸಲು ಕೋರಲು ಸಾಧ್ಯವಿದೆ. ಅದನ್ನು ಹೇಗೆ ಮಾಡುವುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

  • ಗೂಗಲ್​ ಪೇ ಆ್ಯಪ್​ ಓಪನ್ ಮಾಡಿ.
  • ಕಾಂಟಾಕ್ಟ್​ ಲಿಸ್ಟ್​ಗೆ ಹೋಗಿ, ಯಾರಿಂದ ಹಣ ಪಡೆಯಬೇಕೊ ಅವರ ನಂಬರ್​ ಮೇಲೆ ಟ್ಯಾಪ್​ ಮಾಡಿ.
  • ಕೆಳಗೆ ಇರುವ ರಿಕ್ವೆಸ್ಟ್​ (Request) ಆಯ್ಕೆಯನ್ನು ಒತ್ತಿ.
  • ಹಣ ಹಾಗೂ ಅಗತ್ಯ ಮಾಹಿತಿಯನ್ನು ಟೈಪ್​ ಮಾಡಿ.
  • ರಿಕ್ವೆಸ್ಟ್​ ಕಳುಹಿಸಿ.
  • ಒಂದು ವೇಳೆ ನೀವು ಕಳುಹಿಸಿದ ವ್ಯಕ್ತಿ ಅದನ್ನು ತಿರಸ್ಕರಿಸಿದರೆ ನಿಮಗೊಂದು ನೋಟಿಫಿಕೇಷನ್ ಬರುತ್ತದೆ. ಹಣ ಬಂದರೆ ಅದರ ಸಂದೇಶವೂ ಸಿಗುತ್ತದೆ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Juice Jacking: ಸಾರ್ವಜನಿಕ ಸ್ಥಳಗಳ ಮೊಬೈಲ್​ ಚಾರ್ಜರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

Juice Jacking: ‘ಜ್ಯೂಸ್ ಜಾಕಿಂಗ್​’ ಎಂದು ಕರೆಯುವ ಹ್ಯಾಕಿಂಗ್ ಮಾದರಿ ಮೂಲಕ ಡೇಟಾ ಸುರಕ್ಷತಾ ಬೆದರಿಕೆಗಳು ಹೆಚ್ಚಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಯುಎಸ್​ಸಿಬಿ ಚಾರ್ಚರ್​ಗಳ ಮೂಲಕ ಮೊಬೈಲ್ ಮತ್ತು ಲ್ಯಾಪ್​ಟಾಪ್ ಚಾರ್ಜ್ ಮಾಡದಂತೆ ಭಾರತೀಯ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್​ (CRET-in) ಸೂಚನೆ ನೀಡಿದೆ. ಹ್ಯಾಕರ್​ಗಳು ಸಾರ್ವಜನಿಕ ಯುಎಸ್​ಬಿ ಚಾರ್ಜಿಂಗ್ ಕೇಂದ್ರಗಳಲ್ಲಿ ಮಾಲ್ವೇರ್ ಅನ್ನು ಸ್ಥಾಪಿಸುವ ಮೂಲಕ ಅಥವಾ ಅವರ ಹಾರ್ಡ್​ವೇರ್​ ಬದಲಾಯಿಸುವ ಮೂಲಕ ಮಾಹಿತಿ ಕದಿಯುತ್ತಾರೆ. ಬ್ಯಾಂಕ್​ ಸೇರಿದಂತೆ ಎಲ್ಲ ಡೇಟಾವನ್ನು ಕದಿಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದೆ.

VISTARANEWS.COM


on

Juce Jacking
Koo

ಬೆಂಗಳೂರು: ವ್ಯಕ್ತಿಗಳು ತಮ್ಮ ಫೋನ್​​ನ ಬ್ಯಾಟರಿ ಕಡಿಮೆಯಾದಾಗ ಚಾರ್ಜಿಂಗ್ ಪೋರ್ಟ್​ಗಳೊಂದಿಗೆ ಸಮೀಪದ ಕಾಫಿ ಶಾಪ್​ಗಳು, ಮಾಲ್​ಗಳು ಸೇರಿದಂತೆ ನಾನಾ ಕಡೆ ಹೋಗಿ ಕುಳಿತು ಚಾರ್ಚ್ ಮಾಡಲು ಯತ್ನಿಸುತ್ತಾರೆ. ಆದರೆ, ಇದು ಅತ್ಯಂತ ಅಪಾಯಕಾರಿ ನಡೆ ಎಂಬುದನ್ನು ವರ್ಷಗಳ ಹಿಂದಿನಿಂದಲೇ ಹೇಳುತ್ತಾ ಬರಲಾಗುತ್ತಿದೆ. ಆದಾಗ್ಯೂ ಜನರ ಹವ್ಯಾಸ ಕಡಿಮೆಯಾಗದಿರುವ ಕಾರಣ ಸರ್ಕಾರ ಪದೇ ಪದೆ ಎಚ್ಚರಿಕೆ ನೀಡುತ್ತಿದೆ. ಇದು ನಿಮ್ಮ ಮಾಹಿತಿಯನ್ನು ಕದಿಯಲು ಸೈಬರ್ ಕಳ್ಳರಿಗೆ ಅವಕಾಶ ಕೊಟ್ಟ (Juice Jacking) ಹಾಗೆ ಎಂದು ಹೇಳಲಾಗುತ್ತದೆ. ಅಂತೆಯೇ ಇದೀಗ ಭಾರತೀಯ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್​ (CRET-in) ಹೊಸ ಸೂಚನೆ (Juice Jacking) ನೀಡಿದ್ದು ಈ ರೀತಿಯ ಸಾಮಾನ್ಯ ಅಭ್ಯಾಸಗಳು ಸೈಬರ್ ವಂಚನೆಗೆ ಬಲಿಯಾಗುವಂತೆ ಮಾಡಬಹುದು ಎಂದು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದೆ.

ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) kUw ಮೊಬೈಲ್ ಫೋನ್ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ನೀಡಿತ್ತು. ಸಾರ್ವಜನಿಕ ಚಾರ್ಜರ್​ಗಳ ಮೂಲಕ ತಮ್ಮ ಎಲೆಕ್ಟ್ರಾನಿಕ್​ ಸಾಧನಗಳನ್ನು ಚಾರ್ಜ್ ಮಾಡದಂತೆ ಸಲಹೆ ನೀಡಿತ್ತು. “ಜ್ಯೂಸ್ ಜಾಕಿಂಗ್” (Juice Jacking) ಸೈಬರ್ ದಾಳಿಯಿಂದ ಉಂಟಾಗುವ ಭದ್ರತಾ ಸುರಕ್ಷತೆಯ ಆತಂಕದ ಕಾರಣಕ್ಕೆ ಈ ಎಲ್ಲ ಸಂಸ್ಥೆಗಳು ಎಚ್ಚರಿಕೆಗಳನ್ನು ನೀಡುತ್ತಿವೆ.

ಜ್ಯೂಸ್ ಜಾಕಿಂಗ್ ಎಂದರೇನು?

“ಜ್ಯೂಸ್ ಜಾಕಿಂಗ್” ಎಂಬ ಪದವನ್ನು ಮೊದಲು 2011 ರಲ್ಲಿ ಸೈಬರ್ ಭದ್ರತಾ ತಜ್ಞ ಬ್ರಿಯಾನ್ ಕ್ರೆಬ್ ರಚಿಸಿದ್ದಾರೆ. ಇದು ಒಂದು ರೀತಿಯ ಸೈಬರ್ ದಾಳಿಯಾಗಿದ್ದು. ಹ್ಯಾಕರ್​ಗಳು ಸಾರ್ವಜನಿಕ ಯುಎಸ್​ಬಿ ಚಾರ್ಜಿಂಗ್ ಕೇಂದ್ರಗಳಲ್ಲಿ ಮಾಲ್ವೇರ್ ಅನ್ನು ಸ್ಥಾಪಿಸಿ ಮಾಹಿತಿ ಕದಿಯುವ ಮಾದರಿ ಇದು. ಯಾರಿಗೂ ಗೊತ್ತಿಲ್ಲದೇ ಇಲ್ಲಿ ಲಿಂಕ್ ಮಾಡಿದ ಸಾಧನಗಳಿಂದ ಡೇಟಾವನ್ನು ಕದಿಯಲಾಗುತ್ತದೆ.

ಪ್ರಮುಖವಾಗಿ ವಿಳಾಸಗಳು, ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳು ಮತ್ತು ಪಾಸ್ವರ್ಡ್​ಗಳು ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಹ್ಯಾಕರ್​ಗಳು ಪಡೆಯುತ್ತಾರೆ. ಮಾಲ್ ಗಳು, ಹೋಟೆಲ್ ಗಳು, ಕೆಫೆಗಳು ಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ದಾಳಿಗಳು ಸುಲಭವಾಗಿ ನಡೆಯುತ್ತವೆ.

ಇದನ್ನೂ ಓದಿ: Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

ಕಿಯೋಸ್ಕ್​ನ ಪರದೆಯ ಮೇಲೆ ಉಚಿತ ಸೆಲ್ ಫೋನ್ ಚಾರ್ಜಿಂಗ್ ಸ್ಟೇಷನ್ ಎಂದು ಬರೆದಿರುತ್ತದೆ. ಆದರೆ ಗ್ರಾಹಕರು ತಮ್ಮ ಫೋನ್​ಗಳನ್ನು ಪ್ಲಗ್ ಇನ್ ಮಾಡಿದ ತಕ್ಷಣ ಮಾಲ್ವೇರ್​ಗಳನ್ನು ಅಪ್​ಲೋಡ್ ಮಾಡಿ ಮಾಹಿತಿ ಕದಿಯುತ್ತಾರೆ.

ಇದು ಹೇಗೆ ಕೆಲಸ ಮಾಡುತ್ತದೆ?

ಮಾಹಿತಿಯೇ ಇರುವುದಿಲ್ಲ: ಇಂಥ ಚಾರ್ಜಿಂಗ್ ಪಾಯಿಂಟ್​ಗಳ ಮೂಲಕ ಜನರನ್ನು ಸುಲಭವಾಗಿ ವಂಚಿಸಬಹುದು. ಯಾಕೆಂದರೆ ಇಲ್ಲಿಗೆ ಚಾರ್ಜ್ ಮಾಡಲು ಬರುವವರಿಗೆ ಸಣ್ಣ ಅರಿವು ಕೂಡ ಇರುವುದಿಲ್ಲ. ಅವರೆಲ್ಲರಿಗೆ ಮಾಹಿತಿ ಕದ್ದರೂ ಗೊತ್ತಾಗುವುದಿಲ್ಲ.

ಡೇಟಾ ಕಳ್ಳತನ: ಹ್ಯಾಕರ್​ಗಳ ಮೋಸಕ್ಕೆ ಬಲಿಯಾಗುವ ಬಳಕೆದಾರರು ತಮ್ಮ ಸಾಧನವನ್ನು ಹ್ಯಾಕ್ ಮಾಡಿದ ಚಾರ್ಜಿಂಗ್ ಸಂಪರ್ಕಕ್ಕೆ ಸಂಪರ್ಕಿಸಿದ ತಕ್ಷಣ ದುರುದ್ದೇಶಪೂರಿತ ಸಾಫ್ಟ್ ವೇರ್ ಅಥವಾ ಹಾರ್ಡ್ ವೇರ್ ಸಂಪರ್ಕಿತ ಸಾಧನಕ್ಕೆ ಲೋಡ್ ಆಗುತ್ತದೆ. ಅದರ ಮೂಲಕ ಕಾಲಕಾಲಕ್ಕೆ ಮಾಹಿತಿ ಕದಿಯಬಹುದು.

ಮಾಲ್ವೇರ್ ಇಂಜೆಕ್ಷನ್: ಕೆಲವು ಹಗರಣಗಳಲ್ಲಿ, ವ್ಯಕ್ತಿಯ ಫೋನ್ ಅಥವಾ ಟ್ಯಾಬ್ಲೆಟ್ ಮಾಲ್ವೇರ್​ಗಳಿಂದ ತುಂಬಿಕೊಳ್ಳುತ್ತದೆ. ಅಂಥ ಸಾಧನಗಳ ಮಾಹಿತಿ ಸೋರಿಕೆಯಾಗುವ ಜತೆಗೆ ಬಳಕೆ ಮಾಡಲಾಗದ ಸ್ಥಿತಿಗೆ ಬರುತ್ತದೆ.

ನೀವು ಏನು ಮಾಡಬಹುದು?

ಜ್ಯೂಸ್-ಜಾಕಿಂಗ್ ಹಗರಣಕ್ಕೆ ಬಲಿಯಾಗದಂತೆ ರಕ್ಷಿಸಲು ನೀವು ಇನ್ನೂ ಕೆಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬಹುದು. “ಯುಎಸ್​ಬಿ ಕಾಂಡೋಮ್​ಗಳು ” ಎಂದೂ ಕರೆಯಲ್ಪಡುವ ಯುಎಸ್​ಬಿ ಡೇಟಾ ಬ್ಲಾಕರ್​ಗಳನ್ನು ಬಳಸಬೇಕು. ಅವು ಸಣ್ಣ ಅಡಾಪ್ಟರ್​ಗಳು. ಅವು ಡೇಟಾದ ಹರಿವನ್ನು ತಡೆಗಟ್ಟುವ ಜತೆಗೆ ಚಾರ್ಜಿಂಗ್​ಗೆ ಮಾತ್ರ ಅವಕಾಶ ಕೊಡತ್ತದೆ. ಚಾರ್ಜಿಂಗ್ ಮಾಡುವಾಗ ಯಾವುದೇ ಡೇಟಾ ವಿನಿಮಯವನ್ನು ಸಾಧ್ಯವಿಲ್ಲ.

ಸಿಇಆರ್​ಟಿ ಎಚ್ಚರಿಕೆಯೇನು?

  • ಸೈಬರ್ ಅಪರಾಧಿಗಳು ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್ ಗಳು ಮತ್ತು ಬಸ್ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾದ ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಗಳನ್ನು ದುರುದ್ದೇಶಪೂರಿತ ಚಟುವಟಿಕೆಗಳಿಗೆ ಬಳಸಬಹುದು.
  • ಅಂತಹ ಸೋಂಕಿತ ಯುಎಸ್ ಬಿ ಚಾರ್ಜಿಂಗ್ ಕೇಂದ್ರಗಳಲ್ಲಿ ನಿಮ್ಮ ಎಲೆಕ್ಟ್ರಾನಿಕ್ ಸಾಧನವನ್ನು ಚಾರ್ಜ್ ಮಾಡಿದರೆ, ನೀವು ಜ್ಯೂಸ್-ಜಾಕಿಂಗ್ ಸೈಬರ್ ದಾಳಿಗೆ ಬಲಿಯಾಗಬಹುದು.

ಉತ್ತಮ ಅಭ್ಯಾಸಗಳು

  • ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು ಅಥವಾ ಪೋರ್ಟಬಲ್ ವಾಲ್ ಚಾರ್ಜರ್ ಗಳಿಗೆ ಪ್ಲಗ್ ಮಾಡುವ ಮೊದಲು ಎರಡು ಬಾರಿ ಯೋಚಿಸಿ.
  • ನಿಮ್ಮ ಮೊಬೈಲ್ ಸಾಧನವನ್ನು ಚಾರ್ಜ್ ಮಾಡಲು ಎಲೆಕ್ಟ್ರಿಕಲ್ ವಾಲ್ ಔಟ್ ಲೆಟ್ ಬಳಸಿ.
  • ನಿಮ್ಮ ಸ್ವಂತ ವೈಯಕ್ತಿಕ ಕೇಬಲ್ ಅಥವಾ ಪವರ್ ಬ್ಯಾಂಕ್ ಅನ್ನು ಒಯ್ಯಲು ಪ್ರಯತ್ನಿಸಿ.
  • ನಿಮ್ಮ ಮೊಬೈಲ್ ಸಾಧನವನ್ನು ಲಾಕ್ ಮಾಡಿ ಮತ್ತು ಸಂಪರ್ಕಿತ ಸಾಧನದೊಂದಿಗೆ ಜೋಡಿಸುವುದನ್ನು ನಿಷ್ಕ್ರಿಯಗೊಳಿಸಿ.
  • ನಿಮ್ಮ ಫೋನ್ ಸ್ವಿಚ್ ಆಫ್ ಸ್ಥಿತಿಯಲ್ಲಿದ್ದಾಗ ಅದನ್ನು ಚಾರ್ಜ್ ಮಾಡಲು ಪ್ರಯತ್ನಿಸಿ.
    ಸೈಬರ್ ವಂಚನೆ ಘಟನೆಯನ್ನು https://www.cybercrime.gov.in ಗಂಟೆಗೆ ವರದಿ ಮಾಡಿ ಅಥವಾ 1930 ಗೆ ಕರೆ ಮಾಡಿ
    ಭದ್ರತೆ ನಮ್ಮ ಮೊದಲ ಆದ್ಯತೆ
    ಹೆಚ್ಚಿನ ಸುರಕ್ಷತಾ ಸಲಹೆಗಳಿಗಾಗಿ ಭೇಟಿ ನೀಡಿ: https://www.cert-in.org.in ಮತ್ತು https://www.csk.gov.in
Continue Reading

ಪ್ರಮುಖ ಸುದ್ದಿ

Xiaomi Car: ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಿದ ಮೊಬೈಲ್ ಕಂಪನಿ ರೆಡ್​ಮಿ

Xiaomi Car: ಶಿಯೋಮಿ ತನ್ನ ಕೈಗೆಟುಕುವ ಸ್ಮಾರ್ಟ್​ಫೋನ್​ಗಳು ಮತ್ತು ಗೃಹೋಪಯೋಗಿ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಇದೀಗ MI SU 7 ಇವಿಯೊಂದಿಗೆ ತನ್ನ ಖ್ಯಾತಿಯನ್ನು ಹೆಚ್ಚಿಸಲು ಮುಂದಾಗಿದೆ.

VISTARANEWS.COM


on

Xiaomi Car in China
Koo

ಬೀಜಿಂಗ್: ಕಡಿಮೆ ಬೆಲೆಯಲ್ಲಿ ಸ್ಮಾರ್ಟ್​ಫೋನ್​​​ಗಳನ್ನು ಮಾರಾಟ ಮಾಡುವ ಮೂಲಕ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಶಿಯೋಮಿ (Xiaomi Car) ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್​ ಕಾರನ್ನು (EV Car) ಮಾರುಕಟ್ಟೆಗೆ ಇಳಿಸಿದೆ. ಇದು ಮೊಬೈಲ್​ನಂತೆಯೇ (Smart Phoni) ಹಲವಾರು ಫ್ಯಾನ್ಸಿ ಫೀಚರ್​ಗಳನ್ನು ಹೊಂದಿರುವ ಕಾರು ಎಂದು ಹೇಳಲಾಗಿದೆ. ಆದರೆ, ಈ ಕಾರು ಸದ್ಯ ಬಿಡುಗಡೆಗೊಂಡಿರುವುದು ಚೀನಾದಲ್ಲಿ. ಭಾರತಕ್ಕೆ ಬರುವುದೇ ಎಂದು ಗೊತ್ತಿಲ್ಲ.

ಚೀನಾದ ಗ್ರಾಹಕ ಟೆಕ್ ದೈತ್ಯ ಶಿಯೋಮಿ ಗುರುವಾರ ಬೀಜಿಂಗ್ ನಲ್ಲಿ ಈ ಕಾರನ್ನು ಬಿಡುಗಡೆ ಮಾಡಿದೆ. ಅಲ್ಲದೆ ವಿಶ್ವದ ಅತಿದೊಡ್ಡ ಕಾರು ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಗೆ ಇಳಿದಿದೆ. ಚೀನಾದ ಇವಿ ವಲಯವು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಆ ಕ್ಷೇತ್ರಕ್ಕೆ ಎಂಟ್ರಿ ಪಡೆದಿದೆ. ಶಿಯೋಮಿ ತನ್ನ ಕೈಗೆಟುಕುವ ಸ್ಮಾರ್ಟ್​ಫೋನ್​ಗಳು ಮತ್ತು ಗೃಹೋಪಯೋಗಿ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಇದೀಗ MI SU 7 ಇವಿಯೊಂದಿಗೆ ತನ್ನ ಖ್ಯಾತಿಯನ್ನು ಹೆಚ್ಚಿಸಲು ಮುಂದಾಗಿದೆ. ಚೀನಾದ ಕಾರು ಮಾರುಕಟ್ಟೆಯ ದೈತ್ಯ ಬಿವೈಡಿ ಮತ್ತು ಎಲೋನ್ ಮಸ್ಕ್ ಅವರ ಟೆಸ್ಲಾಗೆ ಸವಾಲು ಹಾಕುವುದು ಪಕ್ಕಾ.

ಮೂಲ ಎಸ್ ಯು 7 ಮಾದರಿಯ ಬೆಲೆ 215,900 ಯುವಾನ್ (24,90,198 ರೂಪಾಯಿ) ಎಂದು ಲೀ ಜುನ್ ಗುರುವಾರ ಸಂಜೆ ಬೀಜಿಂಗ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸ್ಪೋರ್ಟಿ ಎಸ್ ಯು 7 ಒಂಬತ್ತು ಬಣ್ಣಗಳಲ್ಲಿ ಲಭ್ಯವಿರುತ್ತದೆ ಮತ್ತು “ಸೌಂಡ್ ಸಿಮ್ಯುಲೇಶನ್” ಅನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಮೋದಿ ಅವರ ಡೀಸೆಲ್ ಚಾಲಿತ ವಿಶೇಷ ವಾಹನಗಳ ನೋಂದಣಿ ವಿಸ್ತರಣೆ ತಿರಸ್ಕರಿಸಿದ ಎನ್‌ಜಿಟಿ; ಕಾರಣವೇನು?

ಇದು ಕರೋಕೆ ಉಪಕರಣಗಳು ಮತ್ತು ಮಿನಿ-ಫ್ರಿಜ್ ನಂತಹ ಸಾಕಷ್ಟು ಇತರ ಆಕರ್ಷಕ ಫೀಚರ್​ಗಳನ್ನು ಹೊಂದಿದೆ. 500,000 ಯುವಾನ್ ಗಿಂತ ಕಡಿಮೆ ಬೆಲೆಯ “ಅತ್ಯುತ್ತಮವಾಗಿ ಕಾಣುವ, ಅತ್ಯುತ್ತಮವಾಗಿ ಚಲಿಸುವ ಮತ್ತು ಸ್ಮಾರ್ಟ್ ಕಾರು” ಎಂದು ಶಿಯೋಮಿ ಹೇಳಿದೆ. ಈ ಕಾರಿನ ಬೆಲೆಯು ಉಳಿದ ಕಾರಿಗಿಂತ ಹೆಚ್ಚು ಸ್ಪರ್ಧಾತ್ಮಕವಾಗಿದೆ.

ಟೆಸ್ಲಾಗೆ ಹೋಲಿಕೆ

ಲೀ ಜುನ್ ಗುರುವಾರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಂಪನಿಯ ಚೊಚ್ಚಲ ವಾಹನವನ್ನು ಟೆಸ್ಲಾದ ಮಾಡೆಲ್ 3 ಗೆ ಹೋಲಿಸಬಹುದು ಮತ್ತು ಕೆಲವು ಅಂಶಗಳಲ್ಲಿ ಅಮೇರಿಕನ್ ತಯಾರಕರ ಸೆಡಾನ್ ಅನ್ನು ಮೀರಿಸಿದೆ ಎಂದು ಹೇಳಿಕೊಂಡಿದ್ದಾರೆ.

ಶಿಯೋಮಿ ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಕ ಕಂಪನಿಯಾಗಿದ್ದು, ಆ ವಲಯದಲ್ಲಿ ಅದರ ಅನುಭವವು ಅದರ ಇವಿ ಕಾರ್ಯತಂತ್ರವನ್ನು ರೂಪಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಕಟುವಾದ ಮಾರುಕಟ್ಟೆ

“ಪ್ರೀಮಿಯಂ ವಿಭಾಗವನ್ನು ಪ್ರವೇಶಿಸುವ ಮೂಲಕ, ಶಿಯೋಮಿ ಟೆಸ್ಲಾ ಮತ್ತು ನಿಯೋದಂತಹ ಸ್ಥಾಪಿತ ಬ್ರಾಂಡ್​ಗ ಳಿಗೆ ಪೈಪೋಟಿ ನೀಡಬಹುದು” ಎಂದು ರೈಸ್ಟಾಡ್ ಎನರ್ಜಿಯ ಹಿರಿಯ ಎಲೆಕ್ಟ್ರಿಕ್ ವಾಹನ ವಿಶ್ಲೇಷಕ ಅಭಿಷೇಕ್ ಮುರಳಿ ಎಎಫ್ಪಿಗೆ ತಿಳಿಸಿದರು.

ಚೀನಾ ವಿಶ್ವದಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ದೇಶ. ಹೀಗಾಗಿ 2035 ರ ವೇಳೆಗೆ ಹೆಚ್ಚಿನ ದೇಶೀಯ ಕಾರು ಮಾರಾಟವನ್ನು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಮಾದರಿಗಳಿಂದ ತಯಾರಿಸಲು ಯೋಜಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ವಿಶ್ವದ ಅಗ್ರ ಮಾರಾಟಗಾರ ಬಿವೈಡಿ ದಾಖಲೆಯ ವಾರ್ಷಿಕ ಲಾಭವನ್ನು ದಾಖಲಿಸಿದ ಕೆಲವೇ ದಿನಗಳ ನಂತರ ಎಸ್ ಯು 7 ಬಿಡುಗಡೆಯಾಗಿದೆ, ಏಕೆಂದರೆ ಇದು ಆಗ್ನೇಯ ಏಷ್ಯಾದ ದೇಶಗಳಿಗೆ ಮತ್ತು ಲ್ಯಾಟಿನ್ ಅಮೆರಿಕ ಮತ್ತು ಯುರೋಪ್ ಗೆ ವಿಸ್ತರಣೆಗೊಳ್ಳಬಹುದು.

Continue Reading

ದೇಶ

ಮೋದಿ ಅವರ ಡೀಸೆಲ್ ಚಾಲಿತ ವಿಶೇಷ ವಾಹನಗಳ ನೋಂದಣಿ ವಿಸ್ತರಣೆ ತಿರಸ್ಕರಿಸಿದ ಎನ್‌ಜಿಟಿ; ಕಾರಣವೇನು?

Narendra Nodi: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಭದ್ರತೆಯ ಉದ್ದೇಶಕ್ಕಾಗಿ ಅಗತ್ಯವಿರುವ ಮೂರು ಡೀಸೆಲ್ ಚಾಲಿತ ವಿಶೇಷ ಶಸ್ತ್ರಸಜ್ಜಿತ ವಾಹನಗಳ ನೋಂದಣಿಯನ್ನು ವಿಸ್ತರಿಸುವಂತೆ ವಿಶೇಷ ಸಂರಕ್ಷಣಾ ಗುಂಪು ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಿರಸ್ಕರಿಸಿದೆ. ಇದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

VISTARANEWS.COM


on

narendra modi
Koo

ನವದೆಹಲಿ: ಪ್ರಧಾನಿ ಮಂತ್ರಿ ನರೇಂದ್ರ ಮೋದಿ (Narendra Nodi) ಅವರ ಭದ್ರತೆಯ ಉದ್ದೇಶಕ್ಕಾಗಿ ಅಗತ್ಯವಿರುವ ಮೂರು ಡೀಸೆಲ್ ಚಾಲಿತ ವಿಶೇಷ ಶಸ್ತ್ರಸಜ್ಜಿತ ವಾಹನಗಳ ನೋಂದಣಿಯನ್ನು ವಿಸ್ತರಿಸುವಂತೆ ವಿಶೇಷ ಸಂರಕ್ಷಣಾ ಗುಂಪು (Special Protection Group) ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal) ತಿರಸ್ಕರಿಸಿದೆ.

ದೆಹಲಿ ಎನ್‌ಸಿಆರ್‌ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ.

“ಈ ಮೂರು ವಾಹನಗಳು ಸಾಮಾನ್ಯವಾಗಿ ಬಳಸಲ್ಪಡದ, ವಿಶೇಷ ಉದ್ದೇಶದ ವಾಹನಗಳಾಗಿವೆ. ಈ ವಾಹನಗಳು ಹತ್ತು ವರ್ಷಗಳಲ್ಲಿ ಬಹಳ ಕಡಿಮೆ ಚಲಿಸಿವೆ ಮತ್ತು ಪ್ರಧಾನಿ ಅವರ ಭದ್ರತೆಯ ನಿರ್ದಿಷ್ಟ ಉದ್ದೇಶಕ್ಕಾಗಿ ಅಗತ್ಯವಾಗಿವೆ. ಆದರೆ ಸುಪ್ರೀಂ ಕೋರ್ಟ್ 2018ರ ಅಕ್ಟೋಬರ್‌ 29ರಂದು ನೀಡಿದ ಆದೇಶದಂತೆ ಆ ವಾಹನಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ಎನ್‌ಜಿಟಿ ಹೇಳಿದೆ.

ʼʼಎಸ್‌ಪಿಜಿ ಅರ್ಜಿಯನ್ನು ತಿರಸ್ಕರಿಸಿದ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ಸದಸ್ಯ ಡಾ.ಎ.ಸೆಂಥಿಲ್ ವೇಲ್ ಅವರನ್ನೊಳಗೊಂಡ ಎನ್‌ಜಿಟಿ ಪ್ರಧಾನ ಪೀಠವು ಮಾರ್ಚ್ 22ರ ಆದೇಶದಲ್ಲಿ, ದೆಹಲಿ ಎನ್‌ಸಿಆರ್‌ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸುವ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ ತೀರ್ಪು ನೀಡಿದೆʼʼ ಎಂದು ಮೂಲಗಳು ತಿಳಿಸಿವೆ.

ಈ 3 ವಿಶೇಷ ಶಸ್ತ್ರಸಜ್ಜಿತ ವಾಹನಗಳ ನೋಂದಣಿ ಅವಧಿಯನ್ನು ಐದು ವರ್ಷಗಳವರೆಗೆ ಅಂದರೆ 2029ರ ಡಿಸೆಂಬರ್‌ 23ರವರೆಗೆ ವಿಸ್ತರಿಸಲು ಅನುಮತಿ ನೀಡುವಂತೆ ದೆಹಲಿಯ ಸಾರಿಗೆ ಇಲಾಖೆ, ನೋಂದಣಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಎಸ್‌ಪಿಜಿಯು ಎನ್‌ಜಿಟಿಯನ್ನು ಸಂಪರ್ಕಿಸಿತ್ತು.

2013ರಲ್ಲಿ ತಯಾರಿಸಿದ ಮತ್ತು 2014ರ ಡಿಸೆಂಬರ್‌ನಲ್ಲಿ ನೋಂದಾಯಿಸಲಾದ ಮೂರು ರೆನಾಲ್ಟ್ ಎಂಡಿ -5 (Renault MD-5) ವಿಶೇಷ ಶಸ್ತ್ರಸಜ್ಜಿತ ವಾಹನಗಳು 9 ವರ್ಷಗಳಲ್ಲಿ ಕ್ರಮವಾಗಿ ಸುಮಾರು 6,000 ಕಿ.ಮೀ., 9,500 ಕಿ.ಮೀ. ಮತ್ತು 15,000 ಕಿ.ಮೀ. ಕ್ರಮಿಸಿವೆ. ಈ ವಾಹನಗಳನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ.

ಈ ವಾಹನಗಳನ್ನು 2029ರ ವರೆಗೆ 15 ವರ್ಷಗಳ ಅವಧಿಗೆ ನೋಂದಾಯಿಸಲಾಗಿದೆ. ಆದರೆ ಈ ವಾಹನಗಳು 10 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಸುಪ್ರೀಂ ಕೋರ್ಟ್‌ನ ಆದೇಶದ ಅನುಗುಣವಾಗಿ 2024ರ ಡಿಸೆಂಬರ್‌ನಲ್ಲಿ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ.

ಇದನ್ನೂ ಓದಿ: Lok Sabha Election: ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ; ಇವರೇ ನೋಡಿ ಆ ಸ್ಟಾರ್‌ಗಳು

ಎಸ್‌ಪಿಜಿ ಸಲ್ಲಿಸಿದ ಮನವಿಯಲ್ಲಿ ಏನಿದೆ?

ನೋಂದಣಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿದ ಎಸ್‌ಪಿಜಿ ಅದಕ್ಕೆ ಕಾರಣವನ್ನೂ ನೀಡಿದೆ. ʼʼಈ ವಾಹನಗಳು ವಿನ್ಯಾಸ ಮತ್ತು ತಾಂತ್ರಿಕ / ಕಾರ್ಯತಂತ್ರಗಳ ವಿಚಾರದಲ್ಲಿ ಬಹಳ ವಿಶೇಷವಾಗಿವೆ ಮತ್ತು ಈ ಅಗತ್ಯಗಳನ್ನು ಪೂರೈಸುವ ವಾಹನಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವುದಿಲ್ಲʼʼ ಎಂದು ಎಸ್‌ಪಿಜಿ ತಿಳಿಸಿದೆ.

ಸುಪ್ರೀಂ ಕೋರ್ಟ್‌ನ 2018ರ ಆದೇಶಕ್ಕೆ ಮೊದಲು ಎನ್‌ಜಿಟಿ 2015ರ ಏಪ್ರಿಲ್‌ನಲ್ಲಿ ದೆಹಲಿ ಎನ್‌ಸಿಆರ್‌ ರಸ್ತೆಗಳಲ್ಲಿ 10 ವರ್ಷಕ್ಕಿಂತ ಹಳೆಯದಾದ ಎಲ್ಲ ಡೀಸೆಲ್ ವಾಹನಗಳನ್ನು ಓಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. 10 ವರ್ಷಕ್ಕಿಂತ ಹಳೆಯದಾದ ಯಾವುದೇ ಡೀಸೆಲ್ ವಾಹನವನ್ನು ನೋಂದಾಯಿಸದಂತೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ದೆಹಲಿ ಎನ್‌ಸಿಆರ್‌ನಲ್ಲಿನ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮವಾಗಿ ಎನ್‌ಜಿಟಿ ಮತ್ತು ಸುಪ್ರೀಂ ಕೋರ್ಟ್ ಈ ಆದೇಶಗಳನ್ನು ಹೊರಡಿಸಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Microsoft Windows: ಐಐಟಿ ಪದವೀಧರ ಪವನ್‌ ದಾವುಲೂರಿ ಮೈಕ್ರೋಸಾಫ್ಟ್‌ ವಿಂಡೋಸ್‌ ನೂತನ ಮುಖ್ಯಸ್ಥ

Microsoft Windows: ಪವನ್‌ ಅವರು ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ಅವರಂತೆ ಬಿಗ್ ಟೆಕ್ ಕಂಪನಿಗಳ ನಾಯಕತ್ವವನ್ನು ವಹಿಸಿದ ಇತ್ತೀಚಿನ ಭಾರತೀಯರಾಗಿದ್ದಾರೆ.

VISTARANEWS.COM


on

Pavan Davuluri Microsoft Windows
Koo

ಹೊಸದಿಲ್ಲಿ: ಐಐಟಿ ಮದ್ರಾಸಿನ (IIT Madras) ಹಳೆಯ ವಿದ್ಯಾರ್ಥಿಯಾಗಿರುವ ಪವನ್ ದಾವುಲೂರಿ (Pavan Davuluri) ಅವರು ʼಮೈಕ್ರೋಸಾಫ್ಟ್ ವಿಂಡೋಸ್ ಆ್ಯಂಡ್‌ ಸರ್ಫೇಸ್‌ʼ ಸಂಸ್ಥೆಯ (Microsoft Windows and Surface) ಹೊಸ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಪವನ್‌ ಅವರು ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ಅವರಂತೆ ಬಿಗ್ ಟೆಕ್ ಕಂಪನಿಗಳ ನಾಯಕತ್ವವನ್ನು ವಹಿಸಿದ ಇತ್ತೀಚಿನ ಭಾರತೀಯರಾಗಿದ್ದಾರೆ. ಮೈಕ್ರೋಸಾಫ್ಟ್‌ ವಿಂಡೋಸ್‌ ತೊರೆದು ಅಮೆಜಾನ್‌ಗೆ ಸೇರಿಕೊಂಡಿರುವ ದೀರ್ಘಕಾಲದ ಮುಖ್ಯಸ್ಥ ಪನೋಸ್ ಪನಾಯ್ ಅವರಿಂದ ದಾವುಲುರಿ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಹಿಂದೆ ದಾವುಲುರಿ ಅವರು ಸರ್ಫೇಸ್ ಗುಂಪನ್ನು ಮುನ್ನಡೆಸಿದ್ದರು. ಮಿಖಾಯಿಲ್ ಪರಖಿನ್ ವಿಂಡೋಸ್ ವಿಭಾಗದ ಮುಖ್ಯಸ್ಥರಾಗಿದ್ದರು. ಪರಖಿನ್ ಮತ್ತು ಪನಾಯ್ ಅವರು ತೊರೆದ ನಂತರ, ಪವನ್‌ ಅವರು ವಿಂಡೋಸ್ ಮತ್ತು ಸರ್ಫೇಸ್ ವಿಭಾಗಗಳನ್ನು ವಹಿಸಿಕೊಂಡಿದ್ದಾರೆ.

ಮೈಕ್ರೋಸಾಫ್ಟ್‌ನ ಎಕ್ಸ್‌ಪೀರಿಯೆನ್ಸಸ್‌ ಆ್ಯಂಡ್‌ ಡಿವೈಸಸ್‌ ವಿಭಾಗ ಮುಖ್ಯಸ್ಥ ರಾಜೇಶ್ ಝಾ ಅವರು ಈ ಕುರಿತು ಆಂತರಿಕ ನೋಟೀಸ್‌ ನೀಡಿದ್ದಾರೆ. ಸಂಸ್ಥೆಯಲ್ಲಿನ ಹೊಸ ನಾಯಕತ್ವ ಶ್ರೇಣಿಯನ್ನು ವಿವರಿಸಿದ್ದಾರೆ. ಈ ನಿರ್ಧಾರವು ಸಂಸ್ಥೆಯು ಎಐ ಯುಗದಲ್ಲಿ ತನ್ನ ನೂತನ ಗ್ಯಾಜೆಟ್‌ಗಳನ್ನು, ವರ್ಚುವಲ್‌ ಅನುಭವದ ಸಾಧನಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

“ಈ ಬದಲಾವಣೆಯ ಭಾಗವಾಗಿ, ನಾವು ಎಕ್ಸ್‌ಪೀರಿಯೆನ್ಸಸ್‌ ಆ್ಯಂಡ್‌ ಡಿವೈಸಸ್‌ (E+D) ವಿಭಾಗದ ಪ್ರಮುಖ ಭಾಗವಾಗಿ ತಂಡಗಳನ್ನು ಒಟ್ಟುಗೂಡಿಸುತ್ತಿದ್ದೇವೆ. ಪವನ್ ದಾವುಲೂರಿ ಅವರು ಈ ತಂಡವನ್ನು ಮುನ್ನಡೆಸುತ್ತಾರೆ. ವಿಂಡೋಸ್ ತಂಡವು ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ”‌ ಎಂದು ಅವರು ಹೇಳಿದರು.

ದಾವುಲುರಿ ಮೈಕ್ರೋಸಾಫ್ಟ್‌ನಲ್ಲಿ 23 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಸರ್ಫೇಸ್‌ಗಾಗಿ ಪ್ರೊಸೆಸರ್‌ಗಳನ್ನು ರಚಿಸಲು ಕ್ವಾಲ್ಕಾಮ್ ಮತ್ತು ಎಎಮ್‌ಡಿಯೊಂದಿಗೆ ಅದರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. “ವಿಶ್ವ ದರ್ಜೆಯ ಗ್ರಾಹಕ AI ಉತ್ಪನ್ನಗಳನ್ನು ನಿರ್ಮಿಸಲು ಮೈಕ್ರೋಸಾಫ್ಟ್ AI ದಿಟ್ಟ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಈ ತಂಡಕ್ಕೆ ಸಹಾಯ ಮಾಡಲು ನಾವು ಉತ್ಸುಕರಾಗಿದ್ದೇವೆ” ಎಂದು ಮೆಮೊ ಹೇಳಿದೆ.

ಗೂಗಲ್ ಡೀಪ್‌ಮೈಂಡ್ ಸಹ-ಸಂಸ್ಥಾಪಕ ಮತ್ತು ಇನ್‌ಫ್ಲೆಕ್ಷನ್ ಎಐ ಸಂಸ್ಥೆಯ ಮಾಜಿ ಸಿಇಒ ಮುಸ್ತಫಾ ಸುಲೇಮಾನ್ ಅವರು ಮೈಕ್ರೋಸಾಫ್ಟ್ ಹೊಸ ಎಐ ತಂಡದ ಸಿಇಒ ಆಗಿ ಸೇರಿದ ಕೆಲವು ದಿನಗಳ ನಂತರ ಈ ಪ್ರಕಟಣೆ ಬಂದಿದೆ.

ಇದನ್ನೂ ಓದಿ: Google Bard: ಜಾಟ್‌ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ಬಾರ್ಡ್, ಮೈಕ್ರೋಸಾಫ್ಟ್‌ಗೆ ಠಕ್ಕರ್

Continue Reading
Advertisement
Mukthar Ansari
ಪ್ರಮುಖ ಸುದ್ದಿ30 mins ago

Mukhtar Ansari : ನಿಜಕ್ಕೂ ಗ್ಯಾಂಗ್ ಸ್ಟರ್ ಅನ್ಸಾರಿ ಸತ್ತಿದ್ದು ಹೇಗೆ? ಬಂತು ಪೋಸ್ಟ್ ಮಾರ್ಟಮ್ ರಿಪೋರ್ಟ್!

Parliament Flashback
ಕರ್ನಾಟಕ35 mins ago

Parliament Flashback: ದೇಶದಲ್ಲಿ ಇಂದಿರಾ ಗಾಂಧಿ ವಿರೋಧಿ ಅಲೆ ಇದ್ದಾಗಲೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

Satyendar Jain
ಪ್ರಮುಖ ಸುದ್ದಿ49 mins ago

Satyendar Jain : ಆಪ್​ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್​ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ

Karnataka Weather
ಮಳೆ1 hour ago

Karnataka Weather : ಮುಂದಿನ 3 ದಿನ ಏರುತ್ತೆ ಟೆಂಪ್ರೇಚರು

Mussavir Hussain
ಪ್ರಮುಖ ಸುದ್ದಿ1 hour ago

Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

Provide infrastructure in polling booths says ZP Deputy Secretary Mallikarjuna thodalabagi
ಕೊಪ್ಪಳ1 hour ago

Koppala News: ಮತಗಟ್ಟೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ; ಜಿ.ಪಂ‌ ಉಪಕಾರ್ಯದರ್ಶಿ

18th CII ITC Sustainable Award Ceremony
ಬೆಂಗಳೂರು1 hour ago

Bengaluru News: ಸಿಎಸ್‌ಆರ್‌ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ

Car collided with electric pole The photographer died on the spot
ಕ್ರೈಂ1 hour ago

Road Accident: ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ; ಫೋಟೋಗ್ರಾಫರ್‌ ಸ್ಥಳದಲ್ಲೇ ಸಾವು

Ash Gourd Juice Benefits
ಆರೋಗ್ಯ1 hour ago

Ash Gourd Juice Benefits: ಬೂದುಕುಂಬಳಕಾಯಿ ಜ್ಯೂಸ್‌ ಕುಡಿಯುವುದರಿಂದ ಆಗುವ 10 ಪ್ರಯೋಜನಗಳಿವು

Lok Sabha Election 2024
ಕರ್ನಾಟಕ1 hour ago

Lok Sabha Election 2024: ಜೆಡಿಎಸ್ ಪಟ್ಟಿ ಬಿಡುಗಡೆ; ಮಂಡ್ಯದಿಂದ ಎಚ್‌ಡಿಕೆ, ಕೋಲಾರ, ಹಾಸನಕ್ಕೆ ಯಾರು?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ15 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌