Tyre Care : ಎಸ್‌ಯುವಿ ಕಾರುಗಳಿಗೆ ಯಾವ ರೀತಿಯ ಟೈರ್‌ಗಳು ಸೂಕ್ತ? ಇಲ್ಲಿವೆ ಕೆಲವು ಟಿಪ್ಸ್‌ Vistara News

ಆಟೋಮೊಬೈಲ್

Tyre Care : ಎಸ್‌ಯುವಿ ಕಾರುಗಳಿಗೆ ಯಾವ ರೀತಿಯ ಟೈರ್‌ಗಳು ಸೂಕ್ತ? ಇಲ್ಲಿವೆ ಕೆಲವು ಟಿಪ್ಸ್‌

ಎಸ್‌ಯುವಿ ಕಾರುಗಳಿಗೆ ಟೈರ್‌ಗಳನ್ನು (Tyre Care) ಆಯ್ಕೆ ಮಾಡುವ ವೇಳೆ ಕೆಲವೊಂದು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡರೆ ಪ್ರಯಾಣ ಆರಾಮ ಹಾಗೂ ಬಾಳಿಕೆಯೂ ಹೆಚ್ಚು.

VISTARANEWS.COM


on

Car Tyre
Follow us on
Koo

ಬೆಂಗಳೂರು: ನಡೆಯಲು, ಟ್ರೆಕ್ಕಿಂಗ್‌ ಮಾಡಲು ಉತ್ತಮ ಶೂ ಅಥವಾ ಚಪ್ಪಲಿಗಳನ್ನು ಆಯ್ಕೆ ಮಾಡಿದಂತೆಯೇ ನೀವು ಪ್ರಯಾಣ ಮಾಡುವ ಕಾರುಗಳಿಗೆ ಉತ್ತಮ ಟೈರ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಸರಿಯಾಗಿ ಹೊಂದಿಕೆಯಾಗದ ಟೈರ್‌ಗಳನ್ನು ಹಾಕಿಕೊಂಡರೆ ಪ್ರಯಾಣ ಸುಖಕರವಾಗಿರುವುದಿಲ್ಲ. ಕಾರು ಮತ್ತು ರಸ್ತೆಯ ನಡುವಿನ ಏಕೈಕ ಸಂಪರ್ಕವಾಗಿರುವುದರಿಂದ ಅದರ ಕಡೆಗೆ ಹೆಚ್ಚಿನ ಗಮನ ಕೊಡಬೇಕಾಗತ್ತದೆ. ಯಾಕೆಂದರೆ ಸುರಕ್ಷತೆ ವಿಚಾರ ಬಂದಾಗ ಟೈರ್‌ಗಳ ಆಯ್ಕೆಯೂ ಪ್ರಮುಖ ಸ್ಥಾನ ಪಡೆಯುತ್ತದೆ. ಈ ಲೇಖನದಲ್ಲಿ ನೀವು ಎಸ್‌ಯುವಿ ಕಾರುಗಳ ಮಾಲೀಕರಾಗಿದ್ದರೆ ಯಾವ ರೀತಿಯ ಟೈರ್‌ಗಳು ಸೂಕ್ತ ಎಂಬ ಮಾಹಿತಿ ಕೊಡಲಾಗಿದೆ.

ಇಂದು ಹೆಚ್ಚಿನ ಕಾರುಗಳು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿರುತ್ತವೆ. ಇನ್ನು ಕೆಲವು ಕಾರುಗಳು ಇನ್ನೂ ಟ್ಯೂಬ್ ಟೈರ್‌ಗಳನ್ನೇ ಹೊಂದಿವೆ. ಹೆಚ್ಚಿನ ಕಂಪನಿಗಳು ಈಗ ಟ್ಯೂಬ್‌ಲೆಸ್ ಟೈರ್‌ಗಳನ್ನೇ ಬಳಸುತ್ತಿವೆ. ಏಕೆಂದರೆ ಆ ಟೈರ್‌ಗಳು ಹೆಚ್ಚು ವಿಶ್ವಾಸಾರ್ಹ ಮತ್ತು ಸುರಕ್ಷಿತ, ಇದರಲ್ಲಿ ಗಾಳಿ ಒತ್ತಡವೂ ಬೇಗ ಕಡಿಮೆಯಾಗುವುದಿಲ್ಲ. ದೀರ್ಘಕಾಲ ಬಾಳಿಕೆ ಬರುತ್ತವೆ. ಪ್ರಯಾಣದ ನಡುವೆ ಸುಲಭವಾಗಿ ಪಂಕ್ಚರ್ ಆಗುವುದಿಲ್ಲ. ಆದ್ದರಿಂದ, ನೀವು ಹೊಸ ಟೈರ್‌ಗಳಿಗಾಗಿ ಹುಡುಕಾಡುತ್ತಿದ್ದರೆ ಟ್ಯೂಬ್ ಲೆಸ್ ಟೈರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ. ಅದಕ್ಕಿಂತ ಮೊದಲು ನಿಮ್ಮ ಕಾರಿನ ರಿಮ್‌ ಟ್ಯೂಬ್‌ಲೆಸ್‌ಗೆ ಹೊಂದಿಕೆಯಾಗುವುದೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.

ಇದನ್ನೂ ಓದಿ : MotoGp : ಭಾರತದಲ್ಲಿ ನಡೆಯುವ ಬೃಹತ್‌ ಬೈಕ್‌ ರೇಸ್‌ನ ಟಿಕೆಟ್‌ ಮಾರಾಟ ಆರಂಭ; ದರ ಸಿಕ್ಕಾಪಟ್ಟೆ ದುಬಾರಿ!

ವಾತಾವರಣ

ಭಾರತದಲ್ಲಿ ಎಲ್ಲ ಕಡೆಯೂ ಒಂದೇ ರೀತಿಯ ಹವಾಮಾನ ಇರುವುದಿಲ್ಲ. ಪ್ರದೇಶದಿಂ ಪ್ರದೇಶಗಳಿಗೆ ವ್ಯತ್ಯಾಸವಾಗುತ್ತವೆ. ಹೀಗಾಗಿ ಭಾರತದಲ್ಲಿ ಹೆಚ್ಚಾಗಿ ಎಲ್ಲ ಹವಾಗುಣಗಳಿಗೆ ಸೂಕ್ತವಾಗುವ ಟೈರ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ, ಕೆಲವೊಂದು ಪ್ರದೇಶದಲ್ಲಿ ವಿಪರೀತ ಚಳಿ ಇರುತ್ತದೆ. ಇಂಥ ಕಡೆ ಚಳಿಗಾಲಕ್ಕೆ ಸೂಕ್ತವಾಗುವ ಟೈರ್‌ ಬಳಸಿ ಈ ಟೈರ್‌ಗಳಲ್ಲಿ ನೈಸರ್ಗಿಕ ರಬ್ಬರ್ ಹೆಚ್ಚಿರುತ್ತದೆ. ಇದು ಕಡಿಮೆ ತಾಪಮಾನದಲ್ಲಿ ಟೈರ್‌ ಮೃದುವಾಗಿರಲು ನೆರವು ನೀಡುತ್ತದೆ. ಹಿಮ ಪ್ರದೇಶಗಳಿಗೆ ಪ್ರಯಾಣ ಹೋಗುವುದಾದರೆ ಹೆಚ್ಚು ಥ್ರೆಡ್‌ ಹೊಂದಿರುವ ಟೈರ್‌ಗಳನ್ನು ಅಳವಡಿಸಿಕೊಳ್ಳಬೇಕಾಗುದೆ .

ಬಾಳಿಕೆ ಬಗ್ಗೆ ಗಮನವಿರಲಿ

ಟೈರ್ ತಯಾರಕರು ಉತ್ತಮ ಕಾರ್ಯಕ್ಷಮತೆ, ದಕ್ಷತೆ ಮತ್ತು ಬಾಳಿಕೆಗಾಗಿ ನೈಸರ್ಗಿಕ ಮತ್ತು ಸಂಶ್ಲೇಷಿತ ರಬ್ಬರ್, ಸಿಲಿಕಾ ಮತ್ತು ಕಾರ್ಬನ್ ಬ್ಲ್ಯಾಕ್ ಉತ್ಪಾದನೆ ವೇಳೆ ಬಳಸುತ್ತಾರೆ. ಈ ವಸ್ತುಗಳ ಕಠಿಣ ಮಿಶ್ರಣವು ದೀರ್ಘಾಯುಷ್ಯ ನೀಡುತ್ತದೆ. ಆದರೆ ಇದು ರಸ್ತೆ ಮೇಲೆ ಕಡಿಮೆ ಹಿಡಿತ ಹೊಂದಿರುತ್ತದೆ. ಬ್ರೇಕ್‌ ಹಾಕುವಾಗ ಜಾರು ಸಾಧ್ಯತೆ ಹೆಚಚು. ಹೀಗಾಗಿ ಟೈರ್ ಖರೀದಿಸುವಾಗ, ವಿವರಣೆಯನ್ನು ಓದಿಕೊಳ್ಳಬೇಕು.

ಥ್ರೆಡ್‌ಗಳು ಹೇಗಿರಬೇಕು?

ಮಣ್ಣಿನ ಭೂಪ್ರದೇಶ: ಹಾರ್ಡ್‌ ಕೋರ್‌ ಆಫ್ ರೋಡ್‌ಗಳಿಗಾಗಿ ನಿರ್ದಿಷ್ಟವಾದ ಈ ಟೈರ್‌ಗಳನ್ನು ಖರೀದಿಸಿ. ಅವರು ಚಂಕಿ ಥ್ರೆಡ್‌ನೊಂದಿಗೆ ಬರುತ್ತವೆ. ಮಣ್ಣು ಮತ್ತು ಕೆಸರಿಗೆ ಹೆಚ್ಚು ಸೂಕ್ತವಾಗಿರುತ್ತವೆ.

ಆಲ್‌ ಟೆರೈನ್‌: ಆಫ್-ರೋಡ್‌ಗೆ ಅಷ್ಟೊಂದು ಸೂಕ್ತವಲ್ಲ. ಆದರೆ, ಆದರೆ ಶುಷ್ಕ, ತೇವ ಮತ್ತು ಲಘು ಹಿಮದ ಪರಿಸ್ಥಿತಿಗಳು ಸೇರಿದಮತೆ ಸಾಮಾನ್ಯ ರಸ್ತೆಗಳಲ್ಲಿ ಸುರಕ್ಷಿತವಾಗಿ ಬಳಸಬಹುದು.

ಚಳಿಗಾಲ: ಹೆಚ್ಚಿನ ನೈಸರ್ಗಿಕ ರಬ್ಬರ್ ಇರುವ ಈ ಟೈರ್‌ಗಳು ಕಡಿಮೆ ತಾಪಮಾನದಲ್ಲಿ ಟೈರ್‌ ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಉತ್ತಮ ಟ್ರ್ಯಾಕ್ಷನ್‌ ಇರುತ್ತದೆ ಹಾಗೂ ಸಣ್ಣ ಕಂದಕಗಳು ಹಿಮ ಮತ್ತು ಕೆಸರಿಗೆ ಸೂಕ್ತವಾಗಿರುತ್ತದೆ.

ಏಕಮುಖ: ನೀರು ನಿಲ್ಲದಂತೆ ನೋಡಿಕೊಳ್ಳುತ್ತದೆ ಹಾಗೂ ರಸ್ತೆ ಮೇಲೇ ಪ್ರಯಾಣ ಮಾಡುವ ವೇಳೆ ಉಂಟಾಗುವ ಶಬ್ದವನ್ನು ಕಡಿಮೆ ಮಾಡುತ್ತದೆ.

ಸಾಂಪ್ರದಾಯಿಕ: ಆರ್ದ್ರ ಹವಾಮಾನ ಸೇರಿದಂತೆ ಎಲ್ಲ ಪರಿಸ್ಥಿತಿಗೆ ಸೂಕ್ತ. ಬ್ರೇಕಿಂಗ್ ದಕ್ಷತೆಯ ಹೆಚ್ಚಿರುತ್ತದೆ ಹಾಗೂ ವಾಹನದ ಮೇಲೆ ನಿಯಂತ್ರಣ ಸಾಧಿಸಲು ನೆರವಾಗುತ್ತದೆ.

ಅಸಿಮೆಟ್ರಿಕ್ ಟ್ರಿಡ್: ಕಾರ್ನರಿಂಗ್‌ ವೇಳೆ ರಸ್ತೆ ಮೇಲೆ ಹೆಚ್ಚು ಹಿಡಿತ ಸಾಧಿಸುವ ಟೈರ್‌ಗಳು ಇವು. ಇದು ಹೈಫರ್ಪಾಮೆನ್ಸ್‌ ಕಾರುಗಳಲ್ಲಿ ಬಳಕೆಯಾಗುತ್ತವೆ. ರೇಸ್‌ ಕಾರುಗಳಿಗೆ ಇದು ಸೂಕ್ತ.

ಲೋ ರೋಲಿಂಗ್‌ ರೆಸಿಸ್ಟೆನ್ಸ್‌: ಸುಲಭವಾಗಿ ರೋಲಿಂಗ್‌ ಆಗುವಂಥ ಟೈರ್‌ಗಳಿವು. ಇದು ಹೆಚ್ಚು ಇಂಧನ ದಕ್ಷತೆ ಕೊಡುತ್ತವೆ. ಸಾಮಾನ್ಯವಾಗಿ ಇವಿ ಕಾರುಗಳಲ್ಲಿ ಬಳಸಲಾಗುತ್ತದೆ.

ಹೈವೆಗಳಿಗೆ: ದೂರದ ಪ್ರಯಾಣ ಮಾಡುವ ವಾಹನಗಳಿಗೆ ಸೂಕ್ತ. ಕಡಿಮೆ ಸವೆತ ಆಗುವ ಕಾರಣ ಬಾಳಿಕೆಯೂ ಹೆಚ್ಚು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Hyundai Cars : ಹ್ಯುಂಡೈನ ಎಲ್ಲ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ಕಡ್ಡಾಯ

ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor) ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಏರ್​ ಬ್ಯಾಗ್​ ಸೇರಿದಂತೆ ಸುರಕ್ಷತಾ ಮಾನದಂಡಗಳ ಕುರಿತು ವಿವರಣೆ ನೀಡಿದ್ದಾರೆ.

VISTARANEWS.COM


on

Hyundai Verna
Koo

ನವ ದೆಹಲಿ : ಹ್ಯುಂಡೈ ಇಂಡಿಯಾ ಈಗ ತನ್ನ ಎಲ್ಲಾ ಮಾದರಿಗಳಲ್ಲಿ (Hyundai Cars) 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುವುದಾಗಿ ಘೋಷಿಸಿದೆ. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಕಾರು ತಯಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್ ಎಂಐಎಲ್) ಇತ್ತೀಚೆಗೆ ತನ್ನ ಹಾಟ್ ಸೆಲ್ಲಿಂಗ್ ಉತ್ಪನ್ನಗಳಲ್ಲಿ ಒಂದಾದ ವೆರ್ನಾವನ್ನು ಕ್ರ್ಯಾಶ್ ಟೆಸ್ಟ್ ಗಾಗಿ ಕಳುಹಿಸಿತ್ತು. ಕಾರ್​ ಗ್ಲೋಬಲ್ ಅನ್​ಕ್ಯಾಪ್​ನಿಂದ ಐದು ಸ್ಟಾರ್ ರೇಟಿಂಗ್ ಅನ್ನು ಸಾಧಿಸಿದೆ. ನಿರ್ಮಾಣ ಗುಣಮಟ್ಟದ ವಿಷಯದಲ್ಲಿ ಭಾರತದ ಪ್ರಮುಖ ಕಾರು ತಯಾರಕ ಕಂಪನಿ ಗ್ರಾಹಕರಿಂದ ವಿಶ್ವಾಸವನ್ನು ಗಳಿಸಲು ಹೆಣಗಾಡುತ್ತಿರುವ ಸಮಯದಲ್ಲಿ ಈ ಫಲಿತಾಂಶ ಬಂದಿದೆ. ಇದರ ಹಿನ್ನೆಲೆಯಲ್ಲಿ ಏರ್​ ಬ್ಯಾಗ್​ಗಳ ಮಾಹಿತಿಯನ್ನೂ ಪ್ರಕಟಿಸಿದೆ.

ಕಂಪನಿಯು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಅಲ್ಲಿ ಇನ್ನು ಮುಂದೆ ಪ್ರತಿ ವಾಹನವು ಎಲ್ಲಾ ವೇರಿಯೆಂಟ್​ಗಳಲ್ಲಿ 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ ಎಂದು ಹೇಳಿದೆ. ಈ ವೇಳೆ ಮಾತನಾಡಿದ ಕಂಪನಿಯ ಅಧಿಕಾರಿಗಳು, ಭಾರತ್ ಅನ್​ಕ್ಯಾಪ್​ನ ಸುರಕ್ಷತಾ ಪರೀಕ್ಷೆಗಾಗಿ ಕಂಪನಿಯ ಮೂರು ವಾಹನಗಳನ್ನು ಕಳುಹಿಸುವುದಾಗಿಯೂ ಹೇಳಿದೆ.

ಹ್ಯುಂಡೈ ಮೋಟಾರ್​ ಇಂಡಿಯಾ ಈಗಾಗಲೇ ತನ್ನ ಐಷಾರಾಮಿ ಕಾರುಗಳಲ್ಲಿ 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿತ್ತು. ಆದರೆ, ಗ್ರ್ಯಾಂಡ್ ಐ 10 ನಿಯೋಸ್, ಔರಾ ಮತ್ತು ವೆನ್ಯೂವಿನಲ್ಲಿ ಕೊಟ್ಟಿರಲಿಲ್ಲ. ಇಲ್ಲಿಯವರೆಗೆ, ಈ ಮಾಡೆಲ್​ಗಳು 4 ಏರ್ ಬ್ಯಾಗ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತಿದ್ದವು. ಈಗ ಎಲ್ಲಾ ವೇರಿಯೆಂಟ್​ಗಳಲ್ಲಿ 6 ಏರ್ ಬ್ಯಾಗ್ ಗಳನ್ನು ಪಡೆಯುತ್ತವೆ.

ಸೀಟ್​ ಬೆಲ್ಟ್​ ರಿಮೈಂಡರ್​

2023ರ ವರ್ಷಾರಂಭದಲ್ಲಿ ಹ್ಯುಂಡೈ ಎಲ್ಲಾ ಕಾರುಗಳಲ್ಲಿ ಸೀಟ್ ಬೆಲ್ಟ್ ರಿಮೈಂಡರ್ ಸ್ಟ್ಯಾಂಡರ್ಡ್ ಆಗಿ ನೀಡಿತ್ತು. 3 ಪಾಯಿಂಟ್ ಸೀಟ್ ಬೆಲ್ಟ್ ಗಳನ್ನು ತಯಾರಿಸಿತ್ತು. ವಿಶೇಷವೆಂದರೆ, ಹ್ಯುಂಡೈ ಭಾರತದಲ್ಲಿ ಮಾರಾಟವಾಗುತ್ತಿರುವ 13 ಮಾದರಿಗಳಲ್ಲಿ, 10 ಇಎಸ್ಸಿ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿವೆ. ಎಕ್ಸ್​ಟೆರ್​ ಗ್ರ್ಯಾಂಡ್ ಐ 10 ನಿಯೋಸ್ ಮತ್ತು ಔರಾ ಮಾತ್ರ ಹೊಂದಿಲ್ಲ .

ಹ್ಯುಂಡೈ ಕಂಪನಿಯು 3 ಮಾದರಿಗಳನ್ನು ಕ್ರ್ಯಾಶ್ ಟೆಸ್ಟಿಂಗ್ ಗಾಗಿ ಭಾರತ್ ಎನ್ ಸಿಎಪಿಗೆ ಕಳುಹಿಸಿದೆ ಎಂದು ಹೇಳಿಕೊಂಡಿದೆ. ಆದಾಗ್ಯೂ ಈ ಮಾದರಿಗಳು ಯಾವುವು ಎಂಬುದನ್ನು ಇನ್ನೂ ನಿರ್ದಿಷ್ಟಪಡಿಸಿಲ್ಲ. ಮುಂಬರುವ ತಿಂಗಳುಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದೇನು?

ಕಂಪನಿಯ ಸಾಧನೆಗಳ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿಯ ಎಂಡಿ ಮತ್ತು ಸಿಇಒ ಉನ್ಸೂ ಕಿಮ್, ಎಲ್ಲರಿಗೂ ಸುರಕ್ಷತೆ ನೀಡುವುದು ನಮ್ಮ ಅತ್ಯಂತ ಆದ್ಯತೆಯಾಗಿದೆ. ವಾಹನ ಸುರಕ್ಷತಾ ವೈಶಿಷ್ಟ್ಯಗಳ ಪ್ರಮಾಣೀಕರಣದಲ್ಲಿ ನಾವು ಮಾನದಂಡಗಳನ್ನು ಸೃಷ್ಟಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Hyundai Creta : ಅಡ್ವೆಂಚರ್ ಪ್ರೇಮಿಗಳಿಗೆ ಇದೋ ಬಂದಿದೆ ಹ್ಯುಂಡೈನ ಎರಡು ಕಾರುಗಳು

ಸುರಕ್ಷಿತ ಪ್ರಯಾಣಕ್ಕಾಗಿ ಹ್ಯುಂಡೈ ಮೊದಲು ಮೈಲಿಗಲ್ಲನ್ನು ಸಾಧಿಸಿದೆ, ಹ್ಯುಂಡೈ ವೆರ್ನಾವ ಗ್ಲೋಬಲ್ ಅನ್​ಕ್ಯಾಪ್​ನಿಂದ ಹಿರಿಯರ ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಗಾಗಿ 5-ಸ್ಟಾರ್ ಎಂದು ರೇಟಿಂಗ್ ಪಡೆದುಕೊಂಡಿದೆ. ನಾವು ಸ್ಮಾರ್ಟ್ ಮೊಬಿಲಿಟಿ ಪರಿಹಾರಗಳನ್ನು ಒದಗಿಸುವವರು ಮಾತ್ರವಲ್ಲ, ಸುರಕ್ಷಿತ ಚಲನಶೀಲತೆ ಪರಿಹಾರಗಳನ್ನು ಸಹ ಒದಗಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಹ್ಯುಂಡೈ ವರ್ನಾ ಸುರಕ್ಷತೆ

ಎಚ್ಎಂಐಎಲ್ ವೆರ್ನಾವನ್ನು ಬಿಡುಗಡೆ ಮಾಡಿದಾಗಿನಿಂದ, ಗ್ರಾಹಕರಿಂದ ಬೇಡಿಕೆ ಪಡೆಯುತ್ತಿದೆ. ಅದರ ನಿರ್ಮಾಣ ಗುಣಮಟ್ಟ ಮತ್ತು ವಿಎಸ್ಎಂ (ವಾಹನ ಸ್ಥಿರತೆ ನಿರ್ವಹಣೆ), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ಎಸಿ), ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ಲಾಕ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್ಎಸ್), ಐಎಸ್ಒಫಿಕ್ಸ್, ಹೆಡ್ಲ್ಯಾಂಪ್ ಎಸ್ಕಾರ್ಟ್ ಫಂಕ್ಷನ್ ಸುರಕ್ಷತೆಯನ್ನು ಹೆಚ್ಚಿಸಿದೆ. ಲೆವೆಲ್ 2 ಎಡಿಎಎಸ್, ಫ್ರಂಟ್ ಪಾರ್ಕಿಂಗ್ ಸೆನ್ಸರ್​ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಇತರ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Continue Reading

ಆಟೋಮೊಬೈಲ್

Car Sales: ಆಟೊಮೊಬೈಲ್‌ ವಲಯ ಚೇತರಿಕೆ, ಸೆಪ್ಟೆಂಬರ್‌ನಲ್ಲಿ ಕಾರುಗಳ ಸಾರ್ವಕಾಲಿಕ ದಾಖಲೆ ಮಾರಾಟ

ಸೆಪ್ಟೆಂಬರ್ ತಿಂಗಳಿನಲ್ಲಿ ಕಾರುಗಳ ಮಾರಾಟ ದಾಖಲೆ ಬರೆದಿದೆ. ಮಾರಾಟವಾದ ಎಲ್ಲ ಕಂಪನಿಗಳ ಕಾರುಗಳ ಒಟ್ಟಾರೆ ಸಂಖ್ಯೆ 3,63,733.

VISTARANEWS.COM


on

Car Sales
Koo

ಹೊಸದಿಲ್ಲಿ: ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಕಾರುಗಳ ಮಾರಾಟ (Car Sales) ದಾಖಲೆ ಸಂಖ್ಯೆ ಮುಟ್ಟಿದ್ದು, ಆಟೊಮೊಬೈಲ್‌ ವಲಯದಲ್ಲಿ (Automobile industry) ಹರ್ಷ ಮೂಡಿಸಿದೆ. ಬಹುತೇಕ ಎಲ್ಲ ಕಂಪನಿಗಳ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.

ಭಾರತೀಯ ಪ್ರಯಾಣಿಕ ವಾಹನ (Passenger Vehicles) ಮಾರುಕಟ್ಟೆಯ ವಹಿವಾಟಿನಲ್ಲಿ ಸೆಪ್ಟೆಂಬರ್‌ನಲ್ಲಿ ಬಹಳಷ್ಟು ಹೆಚ್ಚಳ ಕಂಡುಬಂತು. ಕಳೆದ ಎರಡು ವರ್ಷಗಳಲ್ಲಿ ಆಟೊಮೊಬೈಲ್‌ ಕ್ಷೇತ್ರ ಕೋವಿಡ್‌ ಸಂದರ್ಭದ ಲಾಕ್‌ಡೌನ್‌ ಪರಿಣಾಮ ತತ್ತರಿಸಿತ್ತು. ನಂತರ ಸೆಮಿ ಕಂಡಕ್ಟರ್‌ಗಳ (Semi conductor) ಕೊರತೆ ಉಂಟಾಗಿತ್ತು. ಇದೀಗ ಆಟೊಮೊಬೈಲ್‌ ತಯಾರಿಕರಿಗೆ ಸಿಹಿ ಸುದ್ದಿ ಬಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕಾರುಗಳ ಮಾರಾಟ ದಾಖಲೆ ಬರೆದಿದೆ. ಮಾರಾಟವಾದ ಎಲ್ಲ ಕಂಪನಿಗಳ ಕಾರುಗಳ ಒಟ್ಟಾರೆ ಸಂಖ್ಯೆ 3,63,733. ಇದು ಮಾಸಿಕ ಮಾರಾಟದ ಸಾರ್ವಕಾಲಿಕ ದಾಖಲೆ. ಇನ್ನಷ್ಟು ಸಂತಸದ ಸಂಗತಿಯೆಂದರೆ ಬೇಡಿಕೆಯು ಏರುತ್ತಿದೆ ಮತ್ತು ಉತ್ಪಾದನಾ ನಿರ್ಬಂಧಗಳು ಈಗ ಮರೆಯಾಗುತ್ತಿವೆ.

ಮಾರುತಿ ಸುಜುಕಿಯನ್ನೇ (Maruti Suzuki) ತೆಗೆದುಕೊಂಡರೆ, ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಇದು 1,81,343 ಕಾರುಗಳನ್ನು ಮಾರಿದೆ. ಇದು ಹೊಸ ವೈಯಕ್ತಿಕ ದಾಖಲೆ. ಇದು ಒಂದು ತಿಂಗಳ ಇದುವರೆಗಿನ ಗರಿಷ್ಠ. ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಕಂಪನಿಯ ಒಟ್ಟು ಮಾರಾಟ 10 ಲಕ್ಷ ಯುನಿಟ್‌ಗಳನ್ನು ಮೀರಿದೆ.

“ಸೆಮಿಕಂಡಕ್ಟರ್ ಸಮಸ್ಯೆ ಕಡಿಮೆಯಾಗಿದೆ. ಬೇಡಿಕೆ ಹೆಚ್ಚುತ್ತಿದೆ. ನಮ್ಮ ಹೊಸ ಮಾಡೆಲ್‌ಗಳು, ವಿಶೇಷವಾಗಿ ವಿಟಾರಾ ಬ್ರೆಝಾ ಹೆಚ್ಚು ಬೇಡಿಕೆ ಹೊಂದಿದೆ” ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ. ಸದ್ಯ 40,000 ಬ್ರೆಝಾ, 23,000 ವಿಟಾರಾ ಬ್ರೆಝಾ, 20,000 ಫ್ರಾಂಕ್ಸ್‌, 10,000 ಜಿಮ್ಮಿ, 7,500 ಇನ್‌ವಿಕ್ಟೊಗಳಿಗೆ ಬೇಡಿಕೆ ಇದೆ.

ಇತರ ಕಂಪನಿಗಳಾದ ಹ್ಯುಂಡೈ, ಮಹಿಂದ್ರ, ಟೊಯೊಟಾ ಕೂಡ ದಾಖಲೆ ಮಾರಾಟ ಮಾಡಿವೆ. ಹ್ಯುಂಡೈ ಕಂಪನಿ 71,641 ಕಾರುಗಳನ್ನು ಮಾರಿದೆ. ಇದರಲ್ಲಿ ಕ್ರೆಟಾ, ವೆನ್ಯೂ, ಎಕ್ಸ್‌ಟರ್‌ ಸೇರಿವೆ.
ಮಹಿಂದ್ರದ ಎಸ್‌ಯುವಿಗಳು 41,267ರಷ್ಟು ಮಾರಾಟವಾಗಿವೆ.

ಹೆಚ್ಚಿನ ಕಾರುಗಳ ಮಾರಾಟ ಆಗಿರುವುದು ಎಸ್‌ಯುವಿಗಳ ವಿಭಾಗದಲ್ಲಿ. ಸಣ್ಣ ಕಾರುಗಳ ಮಾರಾಟ ಸ್ವಲ್ಪ ಕಡಿಮೆ ಇದೆ. ಮಾರುತಿಯನ್ನು ಸಣ್ಣ ಮತ್ತು ಕೈಗೆಟುಕುವ ಕಾರುಗಳ ಚಾಂಪಿಯನ್ ಎಂದು ದೀರ್ಘಕಾಲದಿಂದ ಪರಿಗಣಿಸಲಾಗಿದೆ. ಮಾರಾಟದಲ್ಲೂ ಅದು ನಿಜವಾಗಿದೆ. ಅದರ ಆಲ್ಟೊ ಮತ್ತು ಎಸ್-ಪ್ರೆಸ್ಸೊ ಮಾದರಿಗಳು 2022ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ಸೆಪ್ಟೆಂಬರ್‌ನಲ್ಲಿ 65 ಪ್ರತಿಶತದಷ್ಟು ಕುಸಿದಿವೆ. ಅಂದರೆ ಇಲ್ಲೂ ಎಸ್‌ಯುವಿಗಳದೇ ಪ್ರಾಬಲ್ಯ.

ಹೆಚ್ಚು ಹೆಚ್ಚು ಭಾರತೀಯರು ಸಮೂಹ- ಮಾರುಕಟ್ಟೆ ವಿಭಾಗದಲ್ಲಿ ಹೆಚ್ಚು ಪ್ರೀಮಿಯಂ ವಾಹನಗಳನ್ನು ಖರೀದಿಸುತ್ತಿದ್ದರೂ ಸಹ, ತಯಾರಕರು ಇನ್ನಷ್ಟು ಹೆಚ್ಚಿನ ವ್ಯಾಪಾರವನ್ನು ಅಕ್ಟೋಬರ್‌ನಲ್ಲಿ ನಿರೀಕ್ಷಿಸುತ್ತಿದ್ದಾರೆ. ಸಾಕಷ್ಟು ಹಬ್ಬಗಳು ಹಾಗೂ ಫೆಸ್ಟಿವ್‌ ಆಫರ್‌ಗಳು ಈ ಮಾಸದಲ್ಲಿವೆ.

ಇದನ್ನೂ ಓದಿ: Car sales up | ಆಗಸ್ಟ್‌ನಲ್ಲಿ ಕಾರುಗಳ ಬಂಪರ್‌ ಮಾರಾಟ, 30% ಹೆಚ್ಚಳ

Continue Reading

ಆಟೋಮೊಬೈಲ್

Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು

ಮೊಬೈಲ್​ ಕೊಡದ ಕೋಪಕ್ಕೆ 11 ವರ್ಷದ ಅಕ್ಕ ಹಾಗೂ 10 ವರ್ಷದ ತಮ್ಮ ಅಮ್ಮನ ಕಾರಿನಲ್ಲಿಯೇ (Viral News) ಮನೆ ಬಿಟ್ಟು ಹೋಗಿದ್ದರು.

VISTARANEWS.COM


on

Viral News
Koo

ವಾಷಿಂಗ್ಟನ್​: ಹೆತ್ತವರ ವಾಹನವನ್ನು ರಸ್ತೆಯಲ್ಲಿ ಓಡಿಸಿ ಪೊಲೀಸರಿಗೆ ಸಿಕ್ಕಿ ಬೀಳುವ ಹಲವಾರು ಪ್ರಕರಣಗಳು ನಡೆಯುತ್ತಿರುತ್ತವೆ. ಬಹುತೇಕ ಪ್ರಕರಣಗಳು ಹದಿ ಹರೆಯದ ಮಕ್ಕಳ ಶೋಕಿಗೆ ನಡೆದಿರುತ್ತವೆ. ಆದರೆ, ಈ ಘಟನೆಯಲ್ಲಿ ಮಕ್ಕಳು ಅಮ್ಮನ ಮೇಲಿನ ಕೋಪಕ್ಕೆ ಅವರ ಕಾರನ್ನೇ ಎತ್ತಿಕೊಂಡು 300 ಕಿಲೋ ಮೀಟರ್​ ದೂರ ಸಾಗಿದ ಮೇಲೆ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ. 11 ವರ್ಷದ ಅಕ್ಕ ಹಾಗೂ 10 ವರ್ಷದ ತಮ್ಮನನ್ನು ಪೊಲೀಸರು ಅಡ್ಡಗಟ್ಟಿ ಹಿಡಿದು ಅವರ ಪೋಷಕರ ಮೇಲೆ ಕೇಸ್​ ಜಡಿದು ಮನೆಗೆ ವಾಪಸ್​ ಕಳುಹಿಸಿದ್ದಾರೆ ಎಂಬುದಾಗಿ (Viral News) ವರದಿಯಾಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಭಾರತದಲ್ಲಿ ಅಲ್ಲ. ಅಮೆರಿಕದಲ್ಲಿ.

ಅಮೆರಿಕದ ಉತ್ತರ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಅಸಮಾಧಾನಗೊಂಡ ಇಬ್ಬರು ಮಕ್ಕಳು ತಮ್ಮ ತಾಯಿಯ ಕಾರನ್ನು ತೆಗೆದುಕೊಂಡು ಗಂಟೆಗಳ ಕಾಲ ಓಡಿಸಲು ನಿರ್ಧರಿಸಿದ್ದರು. ಮನೆಯಲ್ಲಿ ಗಲಾಟೆ ಮಾಡಿಕೊಂಡ ಮಕ್ಕಳು ಮನೆ ತೊರೆಯಲು ನಿರ್ಧರಿಸಿದ್ದರು.

ಉತ್ತರ ಫ್ಲೋರಿಡಾದ ಪೊಲೀಸರು ಗುರುವಾರ ಮುಂಜಾನೆ 3: 50 ರ ಸುಮಾರಿಗೆ ಅಲಚುವಾದಲ್ಲಿ ಮಕ್ಕಳಿಬ್ಬರು ವಾಹನ ಚಾಲನೆ ಮಾಡುತ್ತಿರುವುದನ್ನು ಗಮನಿಸಿ ಅವರನ್ನು ಬೆನ್ನಟ್ಟಿದ್ದಾರೆ. 10 ವರ್ಷದ ಬಾಲಕ ಮತ್ತು ಅವನ 11 ವರ್ಷದ ಸಹೋದರಿಯನ್ನು ತಡೆದಿದ್ದಾರೆ. ಅದಕ್ಕಿಂತ ಮೊದಲು ಮಕ್ಕಳ ತಾಯಿ ಪೊಲೀಸರಿ ಅವರಿಬ್ಬರೂ ಪರಾರಿಯಾಗಿರುವ ದೂರು ನೀಡಿದ್ದರು. 10 ವರ್ಷದ ಬಾಲಕ ಕಾರನ್ನು ಓಡಿಸಿದ್ದರೆ ಆತನ ಸಹೋದರೆ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದಳು ಎಂದು ಪೊಲೀಸರ ತಿಳಿಸಿದ್ದಾರೆ.

ಮೊಬೈಲ್ ಕೊಡದಕ್ಕೆ ಕೋಪ

ಇಬ್ಬರೂ ಮಕ್ಕಳು ಅತಿಯಾದ ಮೊಬೈಲ್ ಗೀಳಿಗೆ ಬಿದಿದ್ದರು. ಹೀಗಾಗಿ ತಾಯಿ ಹೊರಗೆ ಹೋಗುವಾಗ ಎಲ್ಲ ಎಲೆಕ್ಟ್ರಾನಿಕ್​ ಸಾಧನಗಳನ್ನು ತೆಗೆದುಕೊಂಡು ಹೋಗಿದ್ದರು. ಇದಕ್ಕೆ ಕೋಪಗೊಂಡ ಅಕ್ಕ , ತಮ್ಮ ಅಮ್ಮನ ಕಾರನ್ನೇ ಎತ್ತಿಕೊಂಡು ಮನೆ ಬಿಟ್ಟು ಹೋಗಿದ್ದಾರೆ.

ಮಕ್ಕಳನ್ನು ಹಿಡಿದ ಪೊಲೀಸರು ಅವರನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಈ ವೇಳೆ ಪೋಷಕರಿಗೆ ಪೊಲೀಸರು ಬುದ್ಧಿ ಹೇಳಿದ್ದಾರೆ. ಇವೆಲ್ಲದರ ನಡುವೆ ತಾಯಿ ಮಕ್ಕಳ ಮೇಲೆಯೂ ಕಾರು ಕಳ್ಳತನದ ದೂರು ದಾಖಲಿಸಿದ್ದರು. ಪೊಲೀಸರು ಮಧ್ಯಸ್ಥಿಕೆಯಲ್ಲಿ ಎಲ್ಲ ದೂರುಗಳನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ : Viral News: ಎಲ್​ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು ​, ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ

ಅಜಾಗರೂಕ ಚಾಲನೆಯ ಕೇಸನ್ನೂ ಮಕ್ಕಳ ಮೇಲೆ ಹಾಕಿಲ್ಲ. ತಾಯಿ ಎಲ್ಲ ದೂರುಗಳನ್ನು ವಾಪಸ್​ ಪಡೆದರೂ ಅಜಾಗರೂಕ ಚಾಲನೆಯ ಕೇಸ್​ ಮಕ್ಕಳ ಮೇಲೆ ಹಾಕಿದ್ದರು. ಆದರೆ ಅಲ್ಲಿನ ನ್ಯಾಯಾಲಯ ಮಕ್ಕಳ ಮೇಲಿನ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಿಲ್ಲ. ಹೀಗಾಗಿ ಪೊಲೀಸರೂ ಆ ಕೇಸನ್ನೂ ಕೈಬಿಟ್ಟಿದ್ದಾರೆ.

ಭಾರತದಲ್ಲಿ ಪೋಷಕರಿಗೆ ಜೈಲು ಶಿಕ್ಷೆ

ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವ ಪ್ರಕರಣಗಳು ಭಾರತದಲ್ಲಿ ಸಾಮಾನ್ಯವಾಗಿದೆ. ಅಪ್ರಾಪ್ತ ವಯಸ್ಕರು ಲೈಸೆನ್ಸ್​ ಇಲ್ಲದೆ ವಾಹನ ಚಲಾಯಿಸುವುದು ಅಥವಾ ಸವಾರಿ ಮಾಡಿ ಸಿಕ್ಕಿಬಿದ್ದಾಗ, ಅವರನ್ನು ಬಂಧಿಸಿ ನಂತರ ಬಾಲಾಪರಾಧಿ ನ್ಯಾಯಾಲಯಗಳಿಗೆ ಕಳುಹಿಸಲಾಗುತ್ತದೆ. ಬಾಲಾಪರಾಧಿ ಕಸ್ಟಡಿಯಲ್ಲಿದ್ದಾಗ ಆಪ್ತ ಸಲಹೆಗಳನ್ನು ಪಡೆಯುತ್ತಾರೆ. ಆದರೆ ಅವರಿಗೆ ವಾಹನ ಓಡಿಸಲು ಬಿಟ್ಟ ಪೋಷಕರನ್ನು ಕಠಿಣ ಜೈಲು ಶಿಕ್ಷೆಗಳಿಗೆ ಒಳಪಡಿಸಲಾಗುತ್ತದೆ.

ಅಪರಾಧಗಳಲ್ಲಿ ಪದೇ ಪದೇ ತೊಡಗುವ ಅಪ್ರಾಪ್ತ ವಯಸ್ಕರು ದೀರ್ಘಾವಧಿಯ ಸೆರೆವಾಸ ಸೇರಿದಂತೆ ಹೆಚ್ಚು ಕಠಿಣ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ನ್ಯಾಯಾಲಯವು ಪೋಷಕರಿಗೆ ನಿರ್ದಿಷ್ಟ ಶಿಕ್ಷೆಗಳನ್ನು ನಿರ್ಧರಿಸುತ್ತದೆ. ಔಪಚಾರಿಕ ಮತ್ತು ಕಾನೂನುಬದ್ಧ ಪರವಾನಗಿ ಪಡೆಯುವವರೆಗೆ ತಮ್ಮ ಮಕ್ಕಳು ವಾಹನಗಳನ್ನು ಓಡಿಸುವುದಿಲ್ಲ ಎಂದು ಬುದ್ಧಿ ಹೇಳಲಾಗುತ್ತದೆ.

Continue Reading

ಆಟೋಮೊಬೈಲ್

Car Tyre : ಟೈರ್​​ಗಳು ಹೆಚ್ಚು ಬಾಳಿಕೆ ಬರಬೇಕೆಂದರೆ ಏನು ಮಾಡಬೇಕು? ಇಲ್ಲಿದೆ ಕೆಲವು ಸಿಂಪಲ್​ ಟಿಪ್ಸ್​​

ವಾಹನದ ಸಂಪೂರ್ಣ ಭಾರ ಟೈರ್​ಗಳ ಮೇಲೆ ಬೀಳುತ್ತವೆ. ಅದರ ಉತ್ತಮ (Car Tyre) ನಿರ್ವಹಣೆಯಿಂದ ಹೆಚ್ಚು ಬಾಳಿಕೆ ಬರುತ್ತದೆ ಹಾಗೂ ಅವಘಡವನ್ನು ತಪ್ಪಿಸಬಹುದು.

VISTARANEWS.COM


on

Car Tyre maintenances
Koo

ಬೆಂಗಳೂರು: ನಿಮ್ಮ ಕಾರು ಅಥವಾ ಇನ್ಯಾವುದೇ ವಾಹನಗಳಲ್ಲಿ ಟೈರ್​ಗಳು (Car Tyre) ಬಹುಮುಖ್ಯ ಭಾಗ. ಎಂಜಿನ್​ ಸೃಜಿಸುವ ಶಕ್ತಿಯನ್ನು ಟೈರ್​ಗೆ ರವಾನಿಸಿ ತಿರುಗುವಂತೆ ಮಾಡಿದಾಗ ಮಾತ್ರ ವಾಹನ ಮುಂದಕ್ಕೆ ಹೋಗುತ್ತದೆ. ಅದೂ ಅಲ್ಲದೆ, ವಾಹನ ಮತ್ತು ನೆಲದ ಜತೆ ಸಂಪರ್ಕ ಹೊಂದಿರುವ ಪ್ರಮುಖ ಭಾಗವೇ ಟೈರ್. ಎಂಥದ್ದೇ ಒರಟು ರಸ್ತೆಯಲ್ಲಿ ಸಲೀಸಾಗಿ ಪ್ರಯಾಣ ಮಾಡುವಂತಾದರೆ ಅದರ ಸಂಪೂರ್ಣ ಕ್ರೆಡಿಟ್​ ಟೈರ್​​ಗಳಿಗೆ ಸಲ್ಲುತ್ತದೆ. ಆದರೆ, ವಾಹನದೊಳಗಿನ ಎಸಿ, ಮ್ಯೂಸಿಕ್​ ಸಿಸ್ಟಮ್​ ಕೊಡುವಷ್ಟು ಗಮನವನ್ನು ಬಹುತೇಕ ಮಂದಿ ಟೈರ್​ಗಳಿಗೆ ಕೊಡುವುದಿಲ್ಲ. ಇಂಥ ವರ್ತನೆ ಅಪಘಾತಗಳಿಗೆ ಕಾರಣವಾಗುವ ಜತೆಗೆ ಪ್ರಯಾಣವನ್ನೇ ಯಾತನಾಮಯ ಮಾಡಬಹುದು.

ಮಣ್ಣಾಗಾಲಿ, ಟಾರು ರಸ್ತೆಯೇ ಆಗಲಿ ವಾಹನ ಸವಾರಿ ಅನುಭವ ಹೆಚ್ಚಿಸುವಲ್ಲಿ ನಿಮ್ಮ ಕಾರಿನ ಟೈರ್ ಗಳು ಪ್ರಮುಖ ಪಾತ್ರವಹಿಸುತ್ತವೆ. ಇಳಿಜಾರು ಅಥವಾ ಏರು ರಸ್ತೆಯಲ್ಲಿ, ವಾಹನ ಜಾರದಂತೆಯೂ ಟೈರ್​ಗಳು ನೋಡಿಕೊಳ್ಳುತ್ತದೆ. ಇಷ್ಟೆಲ್ಲ ಅಗತ್ಯವಿರುವ ಟೈರ್​ಗಳು ​ ಹಳೆಯದಾದರೂ, ಸವೆದು ಹೋದರೂ ಮಾಲೀಕರು ಅದರ ಕಡೆಗೆ ಗಮನ ಹರಿಸುವುದಿಲ್ಲ. ಈ ರೀತಿ ಟೈರ್​ಗಳ ಬಗ್ಗೆ ಕಾಳಜಿ ವಹಿಸದ ಕಾರಣ ಟೈರ್​ಗಳು ಬೇಗ ಹಾಳಾಗಿ ಪ್ರಯಾಣದ ಖುಷಿ ನಾಶವಾಗುತ್ತದೆ. ಹಾಗಾದರೆ ಟೈರ್​ಗಳ ಜೀವಿತಾವಧಿ ಹೇಗೆ ಹೆಚ್ಚಿಸುವುದು ಎಂಬ ಕೆಲವು ಸಲಹೆಗಳು ಇಲ್ಲಿವೆ. ಅದೇ ರೀತಿ ಕಾರಿನ ಟೈರ್ ಗಳನ್ನು ಯಾವಾಗ ಬದಲಾಯಿಸಬೇಕು ಎಂಬುದರ ಮಾಹಿತಿಯೂ ಇಲ್ಲಿದೆ.

ಹಠಾತ್ ಬ್ರೇಕಿಂಗ್ ಮತ್ತು ಏಕಾಏಕಿ ವೇಗವರ್ಧನೆಯನ್ನು ತಪ್ಪಿಸಿ

ಹಾರ್ಡ್ ಆಕ್ಸಿಲರೇಶನ್ (ಏಕಾಏಕಿ ವೇಗ ಹೆಚ್ಚಿಸುವುದು) ಅಥವಾ ಹೆವಿ ಬ್ರೇಕಿಂಗ್ ನಿಮ್ಮ ಕಾರಿನ ಟೈರ್ ಗಳ ಜೀವಿತಾವಧಿಯ ಮೇಲೆ ಪರಿಣಾಮ ಬೀರುತ್ತದೆ. ವೇಗವನ್ನು ಹೆಚ್ಚಿಸುವಾಗ ಅಥವಾ ತುಂಬಾ ಗಟ್ಟಿಯಾಗಿ ಬ್ರೇಕಿಂಗ್ ಮಾಡುವಾಗ ಹೆಚ್ಚಿನ ಘರ್ಷಣೆ ಉತ್ಪತ್ತಿಯಾಗುವುದು ಇದಕ್ಕೆ ಕಾರಣ. ಅಪಘಾತಗಳನ್ನು ತಪ್ಪಿಸಲು ಬ್ರೇಕ್​ ಹಾಕುವುದು ಅನಿವಾರ್ಯ. ಆದರೆ, ಅನಗತ್ಯವಾಗಿ ಭಾರಿ ವೇಗವರ್ಧನೆ ಅಥವಾ ಅತಿಯಾದ ಬ್ರೇಕಿಂಗ್ ಪ್ರಯೋಗಿಸದೇ ಇರುವುದು ಉತ್ತಮ. ಟೈರ್​ನ ಟ್ರೆಡ್​ ಸಮರ್ಪಕವಾಗಿದ್ದರೆ ವಾಹನ ಸವಾರಿಯ ಅನುಭವ ಹೆಚ್ಚುತ್ತದೆ ಹಾಗೂ ಅವಘಡದಿಂದ ದೂರವಿರಲೂ ಸಾಧ್ಯವಾಗುತ್ತದೆ.

ಕಂಪನಿ ಶಿಫಾರಸು ಮಾಡಿದ ಟೈರ್​ ಮತ್ತು ರಿಮ್ ಮಾತ್ರ ಬಳಸಿ

ಅನೇಕ ವಾಹನ ಬಳಕೆದಾರರು ಸೌಂದರ್ಯ ಹೆಚ್ಚಳ ಹಾಗು ಆಕರ್ಷಣೆಗಾಗಿ ತಮ್ಮ ಕಾರಿನ ರಿಮ್ ಮತ್ತು ಟೈರ್​ಗಳನ್ನು ಬದಲಾಯಿಸುತ್ತಾರೆ. ದೊಡ್ಡ ಗಾತ್ರದ ರಿಮ್ ಬಳಸುತ್ತಾರೆ. ಈ ತಪ್ಪು ಮಾಡಲೇಬಾರದು. ವಾಹನ ತಯಾರಿಕಾ ಕಂಪನಿಯು ಶಿಫಾರಸು ಮಾಡಿದ ಟೈರ್ ಮತ್ತು ರಿಮ್​ಗಳನ್ನು ಮಾತ್ರ ಬಳಸಬೇಕು. ಒಂದು ವೇಳೆ ಬದಲಾಯಿಸಬೇಕಾದರೆ ಟೈರ್- ಸ್ಪೆಷಲಿಸ್ಟ್ ಅನ್ನು ಸಂಪರ್ಕಿಸಿ. ಹೆಚ್ಚು ಅಗಲವಾದ ಟೈರ್ ಗಳನ್ನು ಬಳಸುವುದು (ಕಡಿಮೆ ಪ್ರೊಫೈಲ್ ಹೊಂದಿರುವವು) ಅದರದ್ದೇ ಅದ ಪ್ರಯೋಜನಗಳನ್ನು ಹೊಂದಿದೆ, ಆದರೆ ಟೈರ್ ಹಾಗೂ ಇಂಧನ ಮೈಲೇಜ್​ ಕೊಡುವುದು ಕಡಿಮೆ.

ಸರಿಯಾದ ಗಾಳಿಯ ಒತ್ತಡ

ವಾಹನಗಳ ಟೈರ್ ನಲ್ಲಿ ಸೂಕ್ತ ಪ್ರಮಾಣದ ಗಾಳಿಯ ಒತ್ತಡವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ, ಟೈರ್ ಗಳ ಅತಿಯಾದ ಅಥವಾ ಕಡಿಮೆ ಗಾಳಿಯ ಒತ್ತಡದಲ್ಲಿ ಓಡುವುದನ್ನು ತಪ್ಪಿಸುವುದು ಉತ್ತಮ. ಕಂಪನಿಯು ನಿಗದಿ ಮಾಡಿದ ಗಾಳಿಯ ಒತ್ತಡವನ್ನೇ ಟೈರ್​ಗಳಲ್ಲಿ ಮೆಂಟೇನ್ ಮಾಡಬೇಕು. ವಾಹನದ ಚಾಲಕನ ಬಾಗಿಲು, ಡ್ರೈವರ್-ಸೈಡ್ ಬಿ-ಪಿಲ್ಲರ್ ಅಥವಾ ಬಳಕೆದಾರ ಕೈಪಿಡಿಯಲ್ಲಿ ಕಂಪನಿ ಶಿಫಾರಸು ಮಾಡಿದ ಟೈರ್​ ಪ್ರೆಶರ್​ ಮಾಹಿತಿ ನೀಡಿರಲಾಗುತ್ತದೆ. ಕಡಿಮೆ ಗಾಳಿಯು ಟೈರ್ ಗಳಲ್ಲಿ ಹೆಚ್ಚಿನ ಸವೆತಕ್ಕೆ ಕಾರಣವಾಗುತ್ತದೆ. ಅಲ್ಲದೆ, ಇದು ವೇಗವರ್ಧನೆ ಮತ್ತು ಬ್ರೇಕಿಂಗ್ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಅತಿಯಾದ ಗಾಳಿಯ ಒತ್ತಡ ಬ್ರೇಕಿಂಗ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜೊತೆಗೆ, ಟೈರ್ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತವೆ. ಸಿಮೆಂಟ್ ರಸ್ತೆಗಳಲ್ಲಿ ನಿಮ್ಮ ಕಾರನ್ನು ಬಳಸಲು ಹೊರಟರೆ ಟೈರ್​ಗಳ ಗಾಳಿಯ ಒತ್ತಡ ಸ್ವಲ್ಪ ಹೆಚ್ಚಿಸಬೇಕು. ಏಕೆಂದರೆ ಸಿಮೆಂಟ್ ರಸ್ತೆಗಳಲ್ಲಿ ವೇಗವನ್ನು ಹೆಚ್ಚಿಸುವಾಗ ಅಥವಾ ಬ್ರೇಕಿಂಗ್ ಮಾಡುವಾಗ ಹೆಚ್ಚಿನ ಘರ್ಷಣೆ ಉಂಟಾಗುತ್ತದೆ.

ನಿಯಮಿತ ವೀಲ್​ ಅಲೈನ್​ಮೆಂಟ್​

ವಾಹನ ಚಕ್ರಗಳನ್ನು ಆಗಾಗ ಅಲೈನ್​ಮೆಂಟ್ ಗೆ ಒಳಪಡಿಸುವುದರಿಂದ ಹೆಚ್ಚಿನ ಲಾಭವಿದೆ. ವೇಗವಾಗಿ ಹೋಗುವಾಗ ಉಂಟಾಗುವ ಘರ್ಷಣೆಗಳಿಂದಾಗಿ ಸಾಮಾನ್ಯವಾಗಿ ಅಲೈನ್​ಮೆಂಟ್ ಏರುಪೇರಾಗುತ್ತದೆ. ಇದು ಟೈರ್​​ಗಳು ಓರೆ ಕೋರೆ ಸವೆಯಲು ಕಾರಣವಾಗುತ್ತದೆ. ಹೀಗಾಗಿ ನಿಯಮಿತವಾಗಿ ಟೈರ್ ಅಲೈನ್​ಮೆಂಟ್​ ಮಾಡಿಸುವುದು ಉತ್ತಮ. ಸಸ್ಪೆನ್ಷನ್​ನಲ್ಲಿ ಸಮಸ್ಯೆ ಇದ್ದರೂ ಈ ಪ್ರಕ್ರಿಯೆಯಲ್ಲಿ ಗೊತ್ತಾಗುತ್ತದೆ. ಆದ್ದರಿಂದ, ವಾಹನದ ಟೈರ್ ಗಳು ಮತ್ತು ನಿಮ್ಮ ಕಾರಿನ ಸಸ್ಪೆಂಷನ್ ಘಟಕಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ವೀಲ್ ಅಲೈನ್ ಮೆಂಟ್ ಅನ್ನು ಆಗಾಗ ಮಾಡಿದಬೇಕು. ಇದರಿಂದ ಟೈರ್​ಗಳು ಹೆಚ್ಚು ಬಾಳಿಕೆ ಬರುತ್ತವೆ.

ಟೈರ್​ಗಳನ್ನು ಹಿಂದೆ ಮುಂದೆ ಬದಲಾಯಿಸಿ (ರೊಟೇಷನ್​)

ಎಲ್ಲಾ ಟೈರ್ ಗಳ ಟ್ರೆಡ್ ಸವೆತವನ್ನು ಏಕ ರೂಪದಲ್ಲಿ ಇರುವಂತೆ ನೋಡಿಕೊಳ್ಳುವುದಕ್ಕೆ ಇದು ಉತ್ತಮ ಮಾರ್ಗವಾಗಿದೆ. ವಾಸ್ತವವಾಗಿ, ಲೈವ್ ಆಕ್ಸಲ್ ನಲ್ಲಿರುವ (ಎಂಜಿನ್​ನಿಂದ ಶಕ್ತಿ ರವಾನೆಯಾಗುವ) ಚಕ್ರಗಳ ಟೈರ್ ಗಳು ಹೆಚ್ಚಿದ ಸವೆತಕ್ಕೆ ಒಳಗಾಗುತ್ತವೆ. ವೇಗೋತ್ಕರ್ಷದ ಸಮಯದಲ್ಲಿ ಕಡಿಮೆ ಘರ್ಷಣೆಯ ಉತ್ಪಾದನೆಯಿಂದಾಗಿ ಫ್ರೀ ಆಕ್ಸಲ್ ನಲ್ಲಿರುವ ಟೈರ್​ಗಳು ಕಡಿಮೆ ಸವೆತ ಕಾಣುತ್ತದೆ. ಆದ್ದರಿಂದ, ನಿಯಮಿತವಾಗಿ ಚಕ್ರಗಳನ್ನು ಬದಲಾಯಿಸಬೇಕು ಅದೇ ರೀತಿ ಸ್ಪೇರ್​ ಟೈರ್​ಗಳನ್ನೂ ನಿಯಮಿತವಾಗಿ ಬಳಸಬೇಕು. ಇದು ಎಲ್ಲಾ ಐದು ಟೈರ್ ಗಳಲ್ಲಿ ಸಮ ರೀತಿಯಲ್ಲಿ ಥ್ರೆಡ್​ ಸವೆತವನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ.

ವಾಹನದ ಟೈರ್​ಗಳನ್ನು ಯಾವಾಗ ಬದಲಾಯಿಸಬೇಕು?

ನಿಮ್ಮ ಕಾರಿನ ಟೈರ್ ಗಳ ಮೇಲೆ ಎಷ್ಟು ಥ್ರೆಡ್​ ಇವೆ ಎಂಬುದು ಅದರ ಆರೋಗ್ಯವನ್ನು ಸೂಚಿಸುತ್ತದೆ. ರಸ್ತೆ ಮೇಲಿರುವ ಎಲ್ಲ ವಾಹನಗಳ ಟೈರ್ ಸೂಕ್ತ ಥ್ರೆಡ್​ ಇರಲೇಬೇಕು. ಈ ಅಭ್ಯಾಸ ಅನೇಕ ರೀತಿಯಲ್ಲಿ ಅಗತ್ಯ. ನಿಮ್ಮ ಕಾರನ್ನು ವಿವಿಧ ರಸ್ತೆ ಮೇಲ್ಮೈಗಳಲ್ಲಿ ಆರಾಮವಾಗಿ ಓಡಿಸಲು ಸಹಾಯ ಮಾಡುತ್ತದೆ. ರಸ್ತೆಯ ಮೇಲಿನ ಹಿಡಿತಕ್ಕೆ ಥ್ರೆಡ್​ ಕಾರಣ; ಕಾರ್ನರಿಂಗ್, ವೇಗ ಹೆಚ್ಚಳ ಮತ್ತು ಬ್ರೇಕಿಂಗ್​ಗೆ ಸಹಾಯ ಮಾಡುತ್ತದೆ. ಒದ್ದೆಯಾದ ಮೇಲ್ಮೈಗಳಲ್ಲಿ, ಥ್ರೆಡ್​ ನೀರನ್ನು ಟೈರ್ ಗಳಿಂದ ದೂರ ಹೋಗುವಂತೆ ಮಾಡುತ್ತದೆ. ಬ ಪ್ರಸ್ತುತ ಬರುವ ಟೈರ್​ಗಳಲ್ಲಿ ಥ್ರೆಡ್​ ಸವೆತ ಇಂಡಿಕೇಟರ್​ಗಳಿರುತ್ತವೆ. ನಿಮ್ಮ ವಾಹನದ ಟೈರ್ ಗಳನ್ನು ಯಾವಾಗ ಬದಲಾಯಿಸಬೇಕೆಂದು ನಿರ್ಧರಿಸಲು ಅದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಟೈರ್ ಗಳಲ್ಲಿ ಅಂತಹ ಯಾವುದೇ ಸೂಚಕವಿಲ್ಲದಿದ್ದರೆ ಸವೆತದ ಸ್ಥಿತಿಯನ್ನು ನಿರ್ಣಯಿಸಲು ನೀವು ನಾಣ್ಯದ ತಂತ್ರವನ್ನು ಬಳಸಬಹುದು. ನಾಣ್ಯವೊಂದನ್ನು ಥ್ರೆಡ್​ಗಳ ನಡುವೆ ಇಟ್ಟು ನೋಡಿ. ಹಾಗೂ ಅದನ್ನು ಸದಾ ಕಾರಿನಲ್ಲಿಟ್ಟುಕೊಳ್ಳಿ. ಹೊಸ ಟೈರ್​ ಹಾಕುವಾಗ ನಾಣ್ಯ ಎಷ್ಟು ಆಳಕ್ಕೆ ಹೋಗುತ್ತಿತ್ತೊ ಅದರ ಅರ್ಧಕ್ಕಿಂತಲೂ ಕಡಿಮೆಯಾಗಿದ್ದರೆ ಟೈರ್​ ಬದಲಾಯಿಸುವ ಸಮಯ ಬಂದಿದೆ ಎಂದರ್ಥ.

ಇದನ್ನೂ ಓದಿ : Hydrogen fuel cell Bus : ದೆಹಲಿಯಲ್ಲಿ ಸಂಚರಿಸಲಿದೆ ಅತ್ಯಾಧುನಿಕ ಹೈಡ್ರೋಜನ್ ಬಸ್​, ಏನಿದರ ಪ್ರಯೋಜನ?

ಅಸಮವಾಗಿರುವ ಸವತೆ ಕಂಡು ಬಂದರೆ

ಹಾರ್ಡ್ ಬ್ರೇಕಿಂಗ್ ಮತ್ತು ಏಕಾಏಕಿ ಸ್ಪೀಡ್​ ಹೆಚ್ಚಿಸುವ ಕಾರಣ ಟೈರ್​ನ ಥ್ರೆಡ್​ ಅಸಮ ಸವೆತಕ್ಕೆ ಒಳಗಾಗುತ್ತವೆ. ಕೆಲವು ಭಾಗಗಳಲ್ಲಿ ಟ್ರೆಡ್ ನ ಅಸಮ ಸವೆತವಿದ್ದರೆ, ಟೈರ್ ಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಲು ಪ್ರಾರಂಭಿಸುವ ಸಮಯವಾಗಿರುತ್ತದೆ ಅಸಮರ್ಪಕ ಗಾಳಿಯ ಒತ್ತಡವೂ ಅಸಮ ಟೈರ್ ಸವೆತಕ್ಕೆ ಮತ್ತೊಂದು ಕಾರಣ. ಹೀಗಾಗಿ ಟೈರ್​ಗಳ ಕಾಳಜಿ ಮಾಡುವ ಅಭ್ಯಾಸ ಇಲ್ಲದಿದ್ದರೆ ವರ್ಷಕ್ಕೆ ಒಂದು ಬಾರಿ ಟೈರ್​ಗಳಲ್ಲಿ ಅಸಮರ್ಪಕ ಸವತೆ ಇದೆಯಾ ಎಂಬುದನ್ನು ಪರಿಣತರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದೇ ಒಂದು ಕಡೆ ಹೆಚ್ಚು ಸವತೆ ಇದೆ ಎಂದಾದರೆ ತಕ್ಷಣ ಟೈರ್​ ಬದಲಾಯಿಸಿ.

ಹಾನಿಗೊಳಗಾದ ಸೈಡ್ ವಾಲ್

ನಿಮ್ಮ ವಾಹನದ ಟೈರ್ ಗಳು ಹಾನಿಗೊಳಗಾದ ಸೈಡ್ ವಾಲ್ ಹೊಂದಿವೆಯೇ ಹೊಂದಿದ್ದರೆ ತಕ್ಷಣ ಬದಲಾವಣೆ ನಿರ್ಧಾರ ತೆಗೆದುಕೊಳ್ಳಬಹುದು. ಟೈರ್ ನ ಸೈಡ್ ವಾಲ್ ವಾಹನ ಸಂಪೂರ್ಣ ಭಾರವನ್ನು ಹೊರಬೇಕಾಗುತ್ತದೆ. ಹೀಗಾಗಿ ಅದು ಸದಾ ಬಲಿಷ್ಠವಾಗಿರಬೇಕಾಗುತ್ತದೆ. ಆದ್ದರಿಂದ, ಸೈಡ್ ವಾಲ್ ಗೆ ಹಾನಿಯಾದರೆ ಬಹಳ ಗಂಭೀರವಾಗಿ ಪರಿಗಣಿಸಬೇಕು. ಸೈಡ್ ವಾಲ್ ನಲ್ಲಿ ಯಾವುದೇ ಉಬ್ಬು, ಬಿರುಕು ಅಥವಾ ಗುಳ್ಳೆಗಳು ಎದ್ದಿದ್ದರೆ ಅಪಾಯದ ಸಂಕೇತವಾಗಿರುತ್ತವೆ. ಇದು ಸ್ಫೋಟಗೊಂಡು ಅಪಘಾತ ಉಂಟು ಮಾಡಬಹುದು. ವಾಹನಗಳು ಅತಿವೇಗದಲ್ಲಿ ಚಲಿಸುವಾಗ ಸಿಕ್ಕಾಪಟ್ಟೆ ಒತ್ತಡವು ಟೈರ್​ಗಳ ಮೇಲೆ ಬೀಳುತ್ತದೆ. ಅತಿ ವೇಗದಲ್ಲಿ ಓಡುವ ವಾಹನವನ್ನು ನಿಯಂತ್ರಣಕ್ಕೆ ತರುವಾಗಲೂ ಇದೇ ರೀತಿಯ ಒತ್ತಡ ಎದುರಾಗುತ್ತದೆ. ಸೈಡ್​ ವಾಲ್ ಹಾಳಾಗಿದ್ದಾರೆ ತಕ್ಷಣ ಒತ್ತಡ ತಾಳಲಾರದೆ ಸ್ಫೋಟಗೊಳ್ಳುತ್ತದೆ.

Continue Reading
Advertisement
Hospital
ಪ್ರಮುಖ ಸುದ್ದಿ36 mins ago

ವಿಸ್ತಾರ ಸಂಪಾದಕೀಯ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿನ ಸರಣಿ ಸಾವು ಆಘಾತಕರ

dina bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Vivek Ramaswamy offering rs 80 lakh to nanny Says media report
ಪ್ರಮುಖ ಸುದ್ದಿ7 hours ago

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

MLC TA Sharavana
ಬೆಂಗಳೂರು7 hours ago

TA Sharavana: ಅನಾಮಿಕರಾಗಿದ್ದ ಜಮೀರ್‌ಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್: ಟಿ.ಎ.ಶರವಣ

Justin Trudeau
ದೇಶ7 hours ago

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

Netherlands cricket team
ಕ್ರಿಕೆಟ್8 hours ago

ICC World Cup 2023 : ವಿಶ್ವ ಕಪ್​ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್​​ ತಂಡದ ಬಲವೇನು? ದೌರ್ಬಲ್ಯವೇನು?

Modi and KTR
ದೇಶ8 hours ago

ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್

Child dies
ಕರ್ನಾಟಕ8 hours ago

Anekal News: ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು

MB Patil visits america
ಕರ್ನಾಟಕ8 hours ago

MB Patil : ಬೆಂಗಳೂರಿನಲ್ಲಿ 800 ಕೋಟಿ ರೂ. ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು: ಎಂ.ಬಿ. ಪಾಟೀಲ್

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

dina bhavishya
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

The maintenance train finally lifted Metro services as usual
ಕರ್ನಾಟಕ15 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ16 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ2 days ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ3 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

ಟ್ರೆಂಡಿಂಗ್‌