ಟೂವೀಲರ್‌ಗಳಿಗೆ ಮತ್ತೆ ಹೆಚ್ಚಿದ ಡಿಮ್ಯಾಂಡ್‌ ಹತ್ತು ತಿಂಗಳ ಬಳಿಕ  ಉದ್ಯಮದಲ್ಲಿ ತಂಗಾಳಿ - Vistara News

ಆಟೋಮೊಬೈಲ್

ಟೂವೀಲರ್‌ಗಳಿಗೆ ಮತ್ತೆ ಹೆಚ್ಚಿದ ಡಿಮ್ಯಾಂಡ್‌ ಹತ್ತು ತಿಂಗಳ ಬಳಿಕ  ಉದ್ಯಮದಲ್ಲಿ ತಂಗಾಳಿ

ಕಳೆದ ಏಪ್ರಿಲ್‌ಗೆ ಹೋಲಿಸಿದರೆ ಈ ಬಾರಿ ದ್ವಿಚಕ್ರ ವಾಹನ ಮಾರಾಟ ಏರುಗತಿಯನ್ನು ಕಂಡಿದೆ. ಕೊರೊನಾ ಕಾರಣದಿಂದ ಕುಸಿದಿದ್ದ ಮಾರುಕಟ್ಟೆಯಲ್ಲೀಗ ಹೊಸ ಕಳೆ. ಹಾಗಿದ್ದರೆ ಇದರ ಲಾಭ ಯಾರಿಗಾಗಿದೆ?

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ದೇಶದಲ್ಲಿ ದ್ವಿಚಕ್ರ ವಾಹನಗಳ ಬೇಡಿಕೆ ಒಮ್ಮಿಂದೊಮ್ಮೆಗೇ ಹೆಚ್ಚಿದೆ. ಕಳೆದ 10 ತಿಂಗಳಲ್ಲಿ ನಾನಾ ಕಾರಣಗಳಿಗಾಗಿ ನಿಧಾನ ಗತಿಯಲ್ಲಿದ್ದ ಟೂವೀಲರ್‌ ಮಾರಾಟ ಏಪ್ರಿಲ್‌ ತಿಂಗಳಲ್ಲಿ ವೇಗವನ್ನು ಪಡೆದುಕೊಂಡಿದೆ. ಹೀಗಾಗಿ ಉದ್ಯಮದಲ್ಲಿ ಸಂಭ್ರಮ ಕಾಣಿಸಿಕೊಂಡಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನ ಖರೀದಿ ಕಡಿಮೆಯಾಗಿದ್ದರಿಂದ ಮಾರಾಟಕ್ಕೆ ಹಿನ್ನಡೆಯಾಗಿತ್ತು. ಈಗ ಕೊರೊನಾ ಕಡಿಮೆಯಾದ ಬಳಿಕ ಗ್ರಾಮೀಣ ಮಾರ್ಕೆಟ್‌ ತೆರೆದುಕೊಳ್ಳುತ್ತಿರುವುದು ದ್ವಿಚಕ್ರ ವಾಹನಗಳ ಡಿಮ್ಯಾಂಡ್‌ ಹೆಚ್ಚಲು ಮುಖ್ಯ ಕಾರಣ ಎಂದು ಉದ್ಯಮದ ಮೂಲಗಳು ಹೇಳಿವೆ.

ಯಾರಿಗೆ ದೊಡ್ಡ ಗೆಲುವು?

ಬೇಡಿಕೆ ಹೆಚ್ಚಿಸಿಕೊಂಡಿರುವ ಮಾರುಕಟ್ಟೆಯಲ್ಲಿ ಯಾರಿಗೆ ಹೆಚ್ಚು ಲಾಭವಾಗಿದೆ ಎನ್ನುವುದು ಕುತೂಹಲಕಾರಿ ಸಂಗತಿ.

ಟೂ ವೀಲರ್‌ ಮಾರ್ಕೆಟ್‌ನ ಲೀಡರ್‌ ಎಂದೇ ಗುರುತಿಸಲಾಗಿರುವ ಹೀರೊ ಮೋಟಾರ್‌ ಕಾರ್ಪ್‌ ಸಂಸ್ಥೆ 2021ರ ಏಪ್ರಿಲ್‌ನಲ್ಲಿ 342490 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದರೆ ಈ ಏಪ್ರಿಲ್‌ನಲ್ಲಿ ಅದು 398490ಕ್ಕೇರಿದೆ. ಅಂದರೆ ಶೇಕಡಾ 16ರಷ್ಟು ಹೆಚ್ಚಳ ಕಂಡಿದೆ.

ಹೋಂಡಾ ಮೋಟಾರ್‌ ಸೈಕಲ್‌ ಮತ್ತು ಸ್ಕೂಟರ್‌ ಇಂಡಿಯಾದ ಮಾರ್ಕೆಟ್‌ ಈ ಬಾರಿ ಶೇಕಡಾ 33ರಷ್ಟು ವಿಸ್ತರಣೆಯಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ 240122 ಯುನಿಟ್‌  ಮಾರಾಟವಾಗಿದ್ದರೆ ಈ ಬಾರಿ ಅದು 318732 ವಾಹನಗಳು ಮಾರಾಟವಾಗಿವೆ.

ಇದನ್ನೂ ಓದಿ I ಮಾರುಕಟ್ಟೆಗೆ ಬರಲಿದೆ ಟಾಟಾ ‘ಅವಿನ್ಯ’ EV

ಅತಿ ಹೆಚ್ಚು ಲಾಭ ಟಿವಿಎಸ್‌ಗೆ

ಶೇಕಡಾವಾರು ಲೆಕ್ಕಾಚಾರ ನೋಡಿದರೆ ಅತಿ ಹೆಚ್ಚು ಲಾಭ ಆಗಿರುವುದು ತಮಿಳುನಾಡು ಮೂಲದ ಟಿವಿಎಸ್‌ ಮೋಟಾರ್‌ ಕಂಪನಿಗೆ. ಅದು ಶೇ. 37ರಷ್ಟು ವ್ಯಾಪಾರ ಪ್ರಗತಿ ಕಂಡಿದೆ.  ಕಳೆದ ವರ್ಷ 131386 ದ್ವಿಚಕ್ರ ವಾಹನ ಮಾರಾಟವಾಗಿದ್ದರೆ ಈ ವರ್ಷ ಅದು 18೦533 ಆಗಿದೆ. ವಿಶೇಷವೆಂದರೆ ಟಿವಿಎಸ್‌ ವಾಹನಗಳ ಬೇಡಿಕೆ ಕಳೆದ ಸೆಪ್ಟೆಂಬರ್‌ವರೆಗೂ ಒಂದು ಹದದಲ್ಲೇ ಇತ್ತು. ಬಳಿಕ ಸ್ವಲ್ಪ ಕಳೆಗುಂದಿದ್ದು, ಈ ಏಪ್ರಿಲ್‌ನಲ್ಲಿ ಮತ್ತೆ ಚೇತರಿಸಿಕೊಂಡಿದೆ. ರಾಯಲ್‌ ಎನ್‌ಫೀಲ್ಡ್‌ ತನ್ನ ಮಾರಾಟ ಸಂಖ್ಯೆಯನ್ನು 48789ರಿಂದ 53852ಕ್ಕೇರಿಸಿಕೊಂಡಿದೆ.

ಕೆಲವು ಕಂಪನಿಗಳಿಗೆ ಹಿನ್ನಡೆ

ದ್ವಿಚಕ್ರ ವಾಹನಗಳ ಮಾರಾಟ ಒಟ್ಟಾರೆಯಾಗಿ ಹೆಚ್ಚಾಗಿದ್ದರೂ ಬಜಾಜ್‌ ಕಂಪನಿಯ ಪಲ್ಸರ್‌, ಸುಝುಕಿ ಕಂಪನಿಯ ಸ್ಕೂಟರ್‌ಗಳ ಮಾರಾಟ ಕಡಿಮೆಯಾಗಿದೆ. ಪಲ್ಸರ್‌ ಮಾರಾಟ ಕಳೆದ ವರ್ಷದ ಏಪ್ರಿಲ್‌ (126570)ಗೆ  ಹೋಲಿಸಿದರೆ, ಈ ವರ್ಷ ಕಡಿಮೆ (93233) ಆಗಿದೆ. ಶೇ. ೨೬ರಷ್ಟು ಕುಸಿತ ಕಂಪನಿಗೆ ಆಘಾತ ನೀಡಿದೆ. ಸುಝುಕಿ ವಾಹನಗಳು ಶೇಕಡಾ ೧೫ರಷ್ಟು ಮಾರಾಟ ಕುಸಿತ ಕಂಡಿವೆ.

ಮುಂದುವರಿದ ಸಂಕಷ್ಟದ ಸ್ಥಿತಿ

ಸಮಗ್ರವಾಗಿ ನೋಡಿದರೆ ಮಾರಾಟ ಹೆಚ್ಚಿದ್ದರೂ ದ್ವಿಚಕ್ರ ವಾಹನಗಳ ಉದ್ಯಮದ ಸವಾಲು ತೀವ್ರಗೊಳ್ಳುತ್ತಲೇ ಇದೆ. ಕೊರೊನಾ ಮತ್ತು ಸೆಮಿ ಕಂಡಕ್ಟರ್‌ಗಳ ಕೊರತೆ ಹಲವು ರೀತಿಯ ಹೊಡೆತಗಳನ್ನು ನೀಡುತ್ತಲೇ ಇದೆ.

ಬೇಡಿಕೆ ಕೊರತೆಯೊಂದೇ ಕಾರಣವಲ್ಲ

ಕೊರೊನಾ ಮತ್ತಿತರ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಟೂ ವೀಲರ್‌ಗಳ ಡಿಮ್ಯಾಂಡ್‌ ಕಡಿಮೆಯಾಗಿದೆ ಎನ್ನುವುದು ನಿಜವೇ ಆದರೂ ಕೆಲವೊಂದು ಕಂಪನಿಗಳು ಬೇಡಿಕೆಯಷ್ಟು ಪ್ರಮಾಣದ ದ್ವಿಚಕ್ರ ಪೂರೈಸಲು ಸಾಧ್ಯವಾಗದೆ ಹಿನ್ನಡೆಯಾಗಿದೆ ಎಂದು ಟಿವಿಎಸ್‌ ಮತ್ತು ಎನ್‌ಫೀಲ್ಡ್‌ ಕಂಪನಿಗಳು ಹೇಳಿಕೊಂಡಿವೆ. ಅವುಗಳನ್ನು ಪ್ರಮುಖವಾಗಿ ಕಾಡಿದ್ದು ಸೆಮಿ ಕಂಡಕ್ಟರ್‌ಗಳ ಕೊರತೆ. ಈ ನಡುವೆ, ಇನ್ನೊಂದು ಮೂಲದ ಪ್ರಕಾರ, ದ್ವಿಚಕ್ರ ವಾಹನಗಳ ಬೆಲೆ ವಿಪರೀತ ಏರಿದ್ದರಿಂದ ಜನರು ಖರೀದಿಗೆ ಯೋಚನೆ ಮಾಡುತ್ತಿರುವುದು ಹಿನ್ನಡೆಗೆ ಇರುವ ಕಾರಣಗಳಲ್ಲಿ ಒಂದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

BGauss RUV350 : ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಆರ್‌ಯುವಿ350 ಬಿಡುಗಡೆ ಮಾಡಿದ ಬಿಗಾಸ್

BGauss RUV350 : ಬಿಗಾಸ್ ಆರ್‌ಯುವಿ350 ಜುಲೈನಿಂದ ಎಲ್ಲಾ 120 ಬಿಗಾಸ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಬಿಗಾಸ್ ಆರ್‌ಯುವಿ350ಯ ಸ್ಪರ್ಧಾತ್ಮಕ ಆರಂಭಿಕ ಬೆಲೆ ರೂ. 1,09,999/- (ಎಕ್ಸ್ ಶೋ ರೂಂ) ಈ ದ್ವಿಚಕ್ರ ವಾಹನವನ್ನು ವಿಸ್ತಾವಾದ ಗ್ರಾಹಕ ಜಗತ್ತಿಗೆ ಸುಲಭವಾಗಿ ದೊರಕಿಸುವಂತೆ ಮಾಡಲು ವಿವಿಧ ಹಣಕಾಸು (ಫೈನಾನ್ಸಿಂಗ್) ಆಯ್ಕೆಗಳನ್ನು ಸಹ ನೀಡಲಾಗುತ್ತದೆ.

VISTARANEWS.COM


on

BGauss RUV350
Koo

ಮುಂಬೈ : ಆರ್ ಆರ್ ಗ್ಲೋಬಲ್‌ನ ಬಿಗಾಸ್ ತನ್ನ ಹೊಚ್ಚ ಹೊಸ ಮಾಡೆಲ್ ಆರ್‌ಯುವಿ350 (BGauss RUV350 ) ಎಲೆಕ್ಟ್ರಿಕ್​ ಸ್ಕೂಟರ್ ಬಿಡುಗಡೆ ಮಾಡಿದೆ. ನಗರ ಕೇಂದ್ರೀತ ಸ್ಕೂಟರ್​ ಆರ್‌ಯುವಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದ್ದು, ಅತ್ಯುತ್ತಮ ರೈಡಿಂಗ್ ಅನುಭವವನ್ನು ನೀಡುತ್ತಿದೆ. ಅದಕ್ಕಾಗಿ ವಿಭಿನ್ನ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಬಿಗಾಸ್ ಆರ್‌ಯುವಿ350 ಜುಲೈನಿಂದ ಎಲ್ಲಾ 120 ಬಿಗಾಸ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಬಿಗಾಸ್ ಆರ್‌ಯುವಿ350ಯ ಸ್ಪರ್ಧಾತ್ಮಕ ಆರಂಭಿಕ ಬೆಲೆ ರೂ. 1,09,999/- (ಎಕ್ಸ್ ಶೋ ರೂಂ) ಈ ದ್ವಿಚಕ್ರ ವಾಹನವನ್ನು ವಿಸ್ತಾವಾದ ಗ್ರಾಹಕ ಜಗತ್ತಿಗೆ ಸುಲಭವಾಗಿ ದೊರಕಿಸುವಂತೆ ಮಾಡಲು ವಿವಿಧ ಹಣಕಾಸು (ಫೈನಾನ್ಸಿಂಗ್) ಆಯ್ಕೆಗಳನ್ನು ಸಹ ನೀಡಲಾಗುತ್ತದೆ.

ನಗರ ಪ್ರಯಾಣಿಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿರುವ ಬಿಗಾಸ್ ಆರ್‌ಯುವಿ350 ಉನ್ನತ- ಕಾರ್ಯಕ್ಷಮತೆ ಒದಗಿಸುವ, ದಕ್ಷತೆ ಹಾಗೂ ವಿಶ್ವಾಸಾರ್ಹತೆಗೆ ಹೆಚ್ಚಿನ ಒತ್ತು ನೀಡುವ ಇನ್ ವೀಲ್ ಹೈಪರ್ ಡ್ರೈವ್ ಮೋಟಾರ್‌ ಹೊಂದಿದೆ. ಸಾಂಪ್ರದಾಯಿಕ ಬೆಲ್ಟ್- ಚಾಲಿತ ವ್ಯವಸ್ಥೆಗಳಿಗಿಂತ ಭಿನ್ನವಾಗಿರುವ ಆರ್‌ಯುವಿ350ಯ ಡೈರೆಕ್ಟ್ ಡ್ರೈವ್ ಮೋಟಾರ್ ವ್ಯವಸ್ಥೆಯು ಬ್ಯಾಟರಿ ಚಾರ್ಜ್​ (ವಿದ್ಯುತ್) ನಷ್ಟ ಆಗುವುದನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಉತ್ತಮ ದಕ್ಷತೆ ಮತ್ತು ಹೆಚ್ಚುನ ಕಾರ್ಯಕ್ಷಮತೆಗೆ ನೀಡುತ್ತದೆ. ಈ ವಿನ್ಯಾಸವು ಶಕ್ತಿಯುತ ಮತ್ತು ಮೃದುವಾದ ಆಕ್ಸಲರೇಷನ್ ಆಗುವಂತೆ ನೋಡಿಕೊಳ್ಳುತ್ತದೆ.

ಉನ್ನತ ಕಾರ್ಯಕ್ಷಮತೆ ಮತ್ತು ವೈವಿಧ್ಯಮಯತೆ

ಆರ್‌ಯುವಿ350ನ ಅಸಾಧಾರಣ ಫೀಚರ್ ಎಂದರೆ ಅದರ ಗ್ರೇಡೇಬಿಲಿಟಿ. ಇದು ಕಡಿದಾದ ಇಳಿಜಾರು ಹಾದಿಗಳಲ್ಲಿ ಸುಲಭವಾಗಿ ಸಾಗಲು ಅನುವು ಮಾಡಿಕೊಡುತ್ತದೆ. ಈ ದ್ವಿಚಕ್ರ ವಾಹನವು ವಿವಿಧ ರೀತಿಯ ಭೂಪ್ರದೇಶಗಳಿಗೂ ಉತ್ತಮ ಆಯ್ಕೆಯಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಅಥವಾ ಸಮತಟ್ಟಾದ ನಗರ ರಸ್ತೆಗಳಲ್ಲಿ ಹೀಗೆ ಎಲ್ಲೇ ಪ್ರಯಾಣಿಸುತ್ತಿರಲಿ ಆರ್‌ಯುವಿ350 ಸ್ಥಿರ ಮತ್ತು ವಿಶ್ವಾಸಾರ್ಹ ರೈಡಿಂಗ್ ಸೌಕರ್ಯವನ್ನು ಒದಗಿಸುತ್ತದೆ.

ಬಾಳಿಕೆ ಮತ್ತು ಸುರಕ್ಷತೆ

ಬಾಳಿಕೆ ಮತ್ತು ಸುರಕ್ಷತೆ ಎಂಬುದು ಆರ್‌ಯುವಿ350 ವಿನ್ಯಾಸದ ಅವಿಭಾಜ್ಯ ಅಂಗ. ವಾಹನವು ದೃಢವಾದ, ಗಟ್ಟಿಯಾದ ಲೋಹದ ಬಾಡಿ ಹೊಂದಿದ್ದು, ಆ ಮೂಲಕ ವಾಹನದ ಬಾಳಿಕೆ ಹೆಚ್ಚಿಸಲಾಗಿದೆ. ಜೊತೆಗೆ ಸವಾರನಿಗೆ ಹೆಚ್ಚುವರಿ ಸುರಕ್ಷತೆ ಒದಗಿಸುತ್ತದೆ. ಈ ಗಟ್ಟಿಮುಟ್ಟಾದ ವಾಹನವು 16-ಇಂಚಿನ ಚಕ್ರಗಳನ್ನು ಹೊಂದಿದ್ದು, ಆ ಚಕ್ರಗಳು ಹೆಚ್ಚಿನ ಸ್ಥಿರತೆ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ. ಚಕ್ರದ ದೊಡ್ಡ ಗಾತ್ರವು ಸವಾರಿಯ ಗುಣಮಟ್ಟವನ್ನು ಸುಧಾರಿಸುತ್ತದೆ, ಗುಂಡಿಗಳು ಮತ್ತು ಉಬ್ಬು ತಗ್ಗುಗಳನ್ನು ಹೊಂದಿರುವ ರಸ್ತೆಗಳ ಮೇಲ್ಮೈಗಳ ಮೇಲೆ ಸುಗಮವಾಗಿ ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ.

ರೈಡರ್ ನ ಆರಾಮದಾಯಕತೆ ಮತ್ತು ಅನುಕೂಲತೆ

ಆರ್‌ಯುವಿ350 ಅನ್ನು ರೈಡರ್ ಗೆ ಆರಾಮದಾಯಕತೆ ಮತ್ತು ಅನುಕೂಲತೆಯನ್ನು ಒದಗಿಸುವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಸೀಟಿಂಗ್ ವ್ಯವಸ್ಥೆಯು ಸುದೀರ್ಘ ಪ್ರಯಾಣದ ಸಮಯದಲ್ಲಿಯೂ ಉತ್ತಮ ಸೌಕರ್ಯವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಸೀಟು ವಿಶಾಲವಾಗಿದ್ದು, ಈ ವಿಶಾಲವಾದ ಸೀಟಿನ ಕೆಳಗೆ ಉತ್ತಮ ಸ್ಟೋರೇಜ್ ವ್ಯವಸ್ಥೆ ಕೂಡ ಇದೆ. ಈ ಮೂಲಕ ರೈಡರ್ ಗಳು ತಮ್ಮ ಅಗತ್ಯ ವಸ್ತುಗಳನ್ನು ಅನುಕೂಲಕರವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ. ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆಯು ಆಘಾತ, ವೈಬ್ರೇಷನ್ ಗಳು ಅಥವಾ ಕಂಪನಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಜೊತೆಗೆ ಉಬ್ಬು ತಗ್ಗು ರಸ್ತೆಗಳಲ್ಲಿ ಸುಗಮ ಸವಾರಿ ಮಾಡುವ ಸೌಕರ್ಯ ಒದಗಿಸುತ್ತದೆ.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

ಆಧುನಿಕ ಫೀಚರ್ ಗಳು ಮತ್ತು ಕನೆಕ್ಟಿವಿಟಿ ವ್ಯವಸ್ಥೆ

ಆಧುನಿಕ ಫೀಚರ್ ಗಳ ಶ್ರೇಣಿಯನ್ನು ಹೊಂದಿರುವ ಆರ್‌ಯುವಿ350 ಸವಾರರ ಒಟ್ಟಾರೆ ಅನುಭವ ಹೆಚ್ಚಿಸುವ ಗುರಿ ಹೊಂದಿದೆ. ಡಿಜಿಟಲ್ ಡಿಸ್ಪ್ಲೇ ಕಾಲ್ ನೋಟಿಫಿಕೇಷನ್ ಗಳು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಜಿಯೋ ಫೆನ್ಸಿಂಗ್, ವಾಹನ ಇಮ್ಮೊಬಿಲೈಸೇಷನ್, ಡ್ಯುಯಲ್ ಥೀಮ್, ಹಗಲು ರಾತ್ರಿ ಮೋಡ್, ಡಾಕ್ಯುಮೆಂಟ್ ಸ್ಟೋರೇಜ್, ವೇಗ, ಬ್ಯಾಟರಿ ಸ್ಥಿತಿ ಮತ್ತು ರೇಂಜ್ ನಂತಹ ನೈಜ-ಸಮಯದ ಮಾಹಿತಿ ಒದಗಿಸುತ್ತದೆ. ಈ ಮೂಲಕ ಸವಾರರು ಎಲ್ಲಾ ಅಗತ್ಯ ಮಾಹಿತಿಯು ಸುಲಭವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಇದಲ್ಲದೆ, ವಾಹನವು ಬ್ಲೂಟೂತ್ ಮತ್ತು ಟೆಲಿಮ್ಯಾಟಿಕ್ಸ್‌ ನಂತಹ ಸ್ಮಾರ್ಟ್ ಕನೆಕ್ಟಿವಿಟಿ ಫೀಚರ್ ಗಳನ್ನು ಒಳಗೊಂಡಿದೆ. ಈ ವ್ಯವಸ್ಥೆಯು ಸವಾರರು ಸಂಪರ್ಕದಲ್ಲಿರಲು ಮತ್ತು ಸುಲಭವಾಗಿ ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ.

ಪರಿಸರ ಸ್ನೇಹಿ ಮತ್ತು ಆರ್ಥಿಕ ಸ್ನೇಹಿ

ಆರ್‌ಯುವಿ350 ಕೇವಲ ಹೆಚ್ಚಿನ ಕಾರ್ಯಕ್ಷಮತೆ ಒದಗಿಸುವ ವಾಹನ ಮಾತ್ರವೇ ಅಲ್ಲ, ಜೊತೆಗೆ ಪರಿಸರ ಸ್ನೇಹಿ ಆಯ್ಕೆಯೂ ಆಗಿದೆ. ಆ ಮೂಲಕ ಈ ವಾಹನವು ಸ್ವಚ್ಛ ಮತ್ತು ಆರೋಗ್ಯಕರ ಪರಿಸರಕ್ಕೆ ಕೊಡುಗೆ ನೀಡುತ್ತದೆ. ವಾಹನದ ಸಮರ್ಥ ವಿನ್ಯಾಸ ಮತ್ತು ಕಡಿಮೆ ನಿರ್ವಹಣಾ ಅಗತ್ಯತೆಗಳು ಇದನ್ನು ನಗರ ಪ್ರಯಾಣಿಕರಿಗೆ ಆರ್ಥಿಕವಾಗಿ ನೆರವಾಗುವ ಆಯ್ಕೆಯನ್ನಾಗಿಯೂ ಮಾಡುತ್ತದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದು

ಸ್ಕೂಟರ್​ ಬಿಡುಗಡೆ ಕುರಿತು ಬಿಗಾಸ್ ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹೇಮಂತ್ ಕಾಬ್ರಾ ಮಾತನಾಡಿ “ನಗರದ ಸಂಚಾರ ವ್ಯವಸ್ಥೆಗೆ ಹೊಸತನ ನೀಡಲೆಂದೇ ವಿನ್ಯಾಸಗೊಳಿಸಲಾದ ಕ್ರಾಂತಿಕಾರಿ ಬಿಗಾಸ್ಆರ್‌ಯುವಿ350 ಅನ್ನು ಪರಿಚಯಿಸಲು ಸಂತೋಷ ಪಡುತ್ತೇವೆ. ಇದು ನಾವೀನ್ಯತೆ ಕಡೆಗೆ ನಾವು ಹೊಂದಿರುವ ನಮ್ಮ ಬದ್ಧತೆಗೆ ಸಾಕ್ಷಿ. ಆರ್‌ಯುವಿ350ನ ಸುಧಾರಿತ ಫೀಚರ್ ಗಳು, ದೃಢ ವಿನ್ಯಾಸ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ನೀಡುತ್ತದೆ. ಆರ್‌ಯುವಿ350 ನಮ್ಮ ತಾಂತ್ರಿಕ ಹೆಚ್ಚುಗಾರಿಕೆಗೆ ಉದಾಹರಣೆ. ಇದು ಮೇಕ್ ಇನ್ ಇಂಡಿಯಾ ಉಪಕ್ರಮದೊಂದಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಗುಣಮಟ್ಟದ ಉತ್ಪನ್ನಗಳನ್ನು ದೇಶದಲ್ಲಿಯೇ ಉತ್ಪಾದಿಸುವ ನಮ್ಮ ಬದ್ಧತೆಯನ್ನು ಈ ವಾಹನ ತೋರಿಸುತ್ತದೆ. ಈ ವಾಹನವು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ ಎಂದು ನಾವು ನಂಬಿದ್ದೇವೆ” ಎಂದು ಹೇಳಿದರು.

Continue Reading

ಕರ್ನಾಟಕ

Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Tata Motors: ಟಾಟಾ ಮೋಟಾರ್ಸ್‌ನ ಎರಡು ಉತ್ಪನ್ನಗಳಾದ ಪಂಚ್ ಮತ್ತು ನೆಕ್ಸಾನ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಾಗಿ ಹೊರಹೊಮ್ಮಿರುವುದರಿಂದ ಆರ್ಥಿಕ ವರ್ಷ 24 ಅನ್ನು ಅತ್ಯುತ್ತಮ ರೀತಿಯಲ್ಲಿ ಆರಂಭಿಸಿದೆ. ಟಾಟಾ ನೆಕ್ಸಾನ್ ರೇಸ್‌ನಲ್ಲಿ ಇದ್ದಂತೆ ಪೋಲ್ ಪೊಸಿಷನ್ ಅನ್ನು ಪಡೆದುಕೊಂಡಿದ್ದು, ಈ ವಿಭಾಗದಲ್ಲಿ ಸತತ ಮೂರು ವರ್ಷಗಳ ಕಾಲ ಪ್ರಾಬಲ್ಯ ಸಾಧಿಸಿದೆ.

VISTARANEWS.COM


on

Tata Motors has taken the lead in the SUV market with Nexon Punch
Koo

ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕರಲ್ಲಿ ಒಂದಾದ ಟಾಟಾ ಮೋಟಾರ್ಸ್ (Tata Motors) ಅದರ ಎರಡು ಉತ್ಪನ್ನಗಳಾದ ಪಂಚ್ ಮತ್ತು ನೆಕ್ಸಾನ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಾಗಿ ಹೊರಹೊಮ್ಮಿರುವುದರಿಂದ ಆರ್ಥಿಕ ವರ್ಷ 24 ಅನ್ನು ಅತ್ಯುತ್ತಮ ರೀತಿಯಲ್ಲಿ ಮುಕ್ತಾಯಗೊಳಿಸಿದೆ. ಟಾಟಾ ನೆಕ್ಸಾನ್ ರೇಸ್‌ನಲ್ಲಿ ಇದ್ದಂತೆ ಪೋಲ್ ಪೊಸಿಷನ್ ಅನ್ನು ಪಡೆದುಕೊಂಡಿದ್ದು, ಈ ವಿಭಾಗದಲ್ಲಿ ಸತತ ಮೂರು ವರ್ಷಗಳ ಕಾಲ ಪ್ರಾಬಲ್ಯ ಸಾಧಿಸಿದೆ. ವಿಭಾಗದಲ್ಲಿ ಭಾರಿ ಸ್ಪರ್ಧೆಯ ಹೊರತಾಗಿಯೂ ಪಂಚ್ ಎರಡನೇ ಸ್ಥಾನದಲ್ಲಿದೆ.

Tata Punch

ಟಾಟಾ ನೆಕ್ಸಾನ್ ಇತ್ತೀಚೆಗೆ ತನ್ನ 7ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ 7 ಲಕ್ಷ ಯುನಿಟ್ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ್ದು, ಇದು ಭಾರತದ ಅತ್ಯಂತ ಪ್ರೀತಿಪಾತ್ರ ಎಸ್‌ಯುವಿ ಆಗಿದೆ.

ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಈ ವಿಭಾಗವು ಅತ್ಯಂತ ಸ್ಪರ್ಧಾತ್ಮಕ ಮತ್ತು ತೀವ್ರ ಪೈಪೋಟಿಯ ವಿಭಾಗವಾಗಿದೆ ಮತ್ತು ಟಾಟಾ ಮೋಟಾರ್ಸ್ ಈ ವಿಭಾಗದಲ್ಲಿರುವ ನಾಯಕರಲ್ಲಿ ಒಬ್ಬರಾಗಿದೆ. ನೆಕ್ಸಾನ್ ಮತ್ತು ಪಂಚ್‌ಗಾಗಿ ವಿವಿಧ ಆವಿಷ್ಕಾರಗಳನ್ನು ಪರಿಚಯಿಸಲು ಕಂಪನಿಯು ಮಾಡಿರುವ ಪ್ರಯತ್ನಗಳನ್ನು ಗಮನಿಸಬಹುದಾಗಿದೆ.

ಇದನ್ನೂ ಓದಿ: Agumbe Ghat: ಭಾರಿ ಮಳೆ; ಸೆ.15ರವರೆಗೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ!

2017ರಲ್ಲಿ ಪ್ರಾರಂಭವಾದಾಗಿನಿಂದಲೂ ನೆಕ್ಸಾನ್ ತನ್ನ ವಿಶಿಷ್ಟತೆ ಮತ್ತು ಔಟ್ ಆಫ್ ದಿ ಬಾಕ್ಸ್ ಗುಣ ಅಂದರೆ ವಿಭಿನ್ನತೆಯನ್ನು ಬಯಸುವ ಗ್ರಾಹಕರನ್ನು ಆಕರ್ಷಿಸಿದೆ ಮತ್ತು ಇದು ಅತ್ಯುತ್ತಮವಾದ ಕಾರ್ಯಕ್ಷಮತೆ ಮತ್ತು ಸೌಕರ್ಯವನ್ನು ಒದಗಿಸುತ್ತದೆ. ನೆಕ್ಸಾನ್‌ನ ಭವಿಷ್ಯಕ್ಕೆ ಸಲ್ಲುವ ವಿನ್ಯಾಸ, ಉನ್ನತ ಸುರಕ್ಷತಾ ಫೀಚರ್‌ಗಳು ಮತ್ತು ಸ್ಥಿರವಾದ ಬೆಳವಣಿಗೆಯಿಂದ ಇದು ಭಾರತೀಯ ಗ್ರಾಹಕರ ಜನಪ್ರಿಯ ಆಯ್ಕೆಯಾಗಿದೆ ಮತ್ತು ವಿಶ್ವಾಸಾರ್ಹತೆಯ ಖ್ಯಾತಿಯನ್ನು ಗಳಿಸಿದೆ.

ನೆಕ್ಸಾನ್ 2018 ರ ಭಾರತದ ಮೊದಲ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದ ವಾಹನವಾಗಿದೆ, ಆ ಮೂಲಕ ಇದು ಎಲ್ಲಾ ಭಾರತೀಯ ಆಟೋಮೊಬೈಲ್‌ಗಳಿಗೆ ಅನುಸರಿಸಲು ಮಾನದಂಡವನ್ನು ಸ್ಥಾಪಿಸಿದೆ. ಅಂದಿನಿಂದ ಇಂದಿನವರೆಗೂ ಪರಂಪರೆ ಮುಂದುವರಿದಿದೆ. 2024ರ ಫೆಬ್ರವರಿಯಲ್ಲಿ ಹೊಸ ಜನರೇಷನ್‌ನ ನೆಕ್ಸಾನ್ ವರ್ಧಿತ 2022 ಪ್ರೋಟೋಕಾಲ್ ಪ್ರಕಾರ ತನ್ನ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿತು. ಅದರ ಬೆನ್ನಲ್ಲೇ ನೆಕ್ಸಾನ್.ಇವಿ ಈ ತಿಂಗಳು ಭಾರತ್- ಎನ್‌ಸಿಎಪಿಯಿಂದ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಅನ್ನು ಪಡೆಯಿತು.

ಭಾರತೀಯ ರಸ್ತೆಗಳಲ್ಲಿ 7 ಲಕ್ಷ ನೆಕ್ಸಾನ್‌ ಇವೆ ಮತ್ತು ನೆಕ್ಸಾನ್ 41 ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿವೆ. ಅದರ ಅತ್ಯದ್ಭುತ ಕಾರ್ಯಕ್ಷಮತೆ ಅದರ ಮಾರಾಟದ ಬೆಳವಣಿಗೆಯಲ್ಲಿ ಪ್ರಮುಖ ಕೊಡುಗೆ ನೀಡಿರುವುದು ಎಲ್ಲರೂ ಗಮನಿಸಬಹುದಾಗಿದೆ. ಕಳೆದ ಎರಡು ವರ್ಷಗಳಲ್ಲಿ (2022 ಮತ್ತು 2023) ನೆಕ್ಸಾನ್ ನ 3 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ. ನೆಕ್ಸಾನ್ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ನ ಬಹು ಪವರ್‌ಟ್ರೇನ್‌ಗಳಲ್ಲಿ ಲಭ್ಯವಿದೆ. ನೆಕ್ಸಾನ್ ಕಾಲ ಕಾಲಕ್ಕೆ ದೃಢವಾಗಿ ಬೆಳೆದಿದೆ ಮತ್ತು ಅದರ ವಿಭಾಗ ಪ್ರಮುಖ ವಿನ್ಯಾಸ, ವಿಭಾಗದ ಅತ್ಯುತ್ತಮ ಫೀಚರ್ ಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದಾಹಿ ನಿಷ್ಠಾವಂತ ಅಭಿಮಾನಿಗಳನ್ನು ಗಳಿಸಿದೆ.

ಇದನ್ನೂ ಓದಿ: Lakshmi Hebbalkar: ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆಯಾದರೆ ಉಪನಿರ್ದೇಶಕರ ಮೇಲೆ ಕಠಿಣ ಕ್ರಮ: ಹೆಬ್ಬಾಳಕರ್

ಟಾಟಾ ಪಂಚ್: ಮತ್ತೊಂದೆಡೆ ಟಾಟಾ ಪಂಚ್ ಎಸ್‌ಯುವಿ ಗುಣಲಕ್ಷಣಗಳನ್ನು ಎಲ್ಲರೂ ಮೆಚ್ಚುವಂತೆ ಮಾಡಿದೆ. ಪಂಚ್‌ನ ಅದ್ಭುತ ವಿನ್ಯಾಸ, ಸೌಕರ್ಯ ಮತ್ತು ಅಪ್ರತಿಮ ಸಾಮರ್ಥ್ಯವು ಈಗಾಗಲೇ ಕಾರು ಹೊಂದಿರುವ ಮತ್ತು ಮೊದಲ ಬಾರಿಯ ಕಾರು ಖರೀದಿದಾರರಿಗೂ ಆಸಕ್ತಿ ಹುಟ್ಟುವಂತೆ ಮಾಡುತ್ತದೆ.

ಪಂಚ್ ಎಸ್‌ಯುವಿಯು ಅದ್ಭುತ ನಿಲುವು, ವಿಶಾಲವಾದ ಇಂಟೀರಿಯರ್‌ಗಳು ಮತ್ತು ವಿಭಾಗದಲ್ಲಿಯೇ ಅತ್ಯುನ್ನತ ಸುರಕ್ಷತಾ ರೇಟಿಂಗ್ (ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್) ಅನ್ನು ಹೊಂದಿದ್ದು, ನಿಸ್ಸಂದೇಹವಾಗಿ ಸಮಗ್ರ ಪ್ಯಾಕೇಜ್ ಹೊಂದಿರುವ ಕಾರ್ ಆಗಿದೆ. ಅದಲ್ಲದೆ, ಪಂಚ್.ಇವಿ ಇತ್ತೀಚೆಗೆ 5-ಸ್ಟಾರ್ ಬಿ ಎನ್ ಸಿ ಎ ಪಿ ರೇಟಿಂಗ್ ಅನ್ನು ಪಡೆದುಕೊಂಡಿದೆ, ಆ ಮೂಲಕ ಇದು ಭಾರತದ ಸುರಕ್ಷಿತ ಇವಿ ವಾಹನ ಎಂಬ ಹೆಗ್ಗಳಿಕೆ ಗಳಿಸಿದೆ.

ಒಟ್ಟಾರೆಯಾಗಿ, ಪಂಚ್ ಉಪ-ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮುಂಚೂಣಿ ಸಾಧಿಸಿದೆ ಮತ್ತು ಆರ್ಥಿಕ ವರ್ಷ 24ರಲ್ಲಿ ಶ್ಲಾಘನೀಯ 170,076 ಯುನಿಟ್‌ಗಳನ್ನು ಮಾರಾಟ ಮಾಡಿದೆ ಮತ್ತು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ಮಾರ್ಚ್ 2024ರ ಸಮಯದಲ್ಲಿ ಪಂಚ್ ಉದ್ಯಮದಲ್ಲಿ #1 ಮಾರಾಟವಾದ ಕಾರು ಎಂಬ ಮನ್ನಣೆ ಗಳಿಸಿತ್ತು.

ಇದನ್ನೂ ಓದಿ: KMH CUP: ʼಕೆಎಂಎಚ್‌ ಕಪ್‌ʼ ಕ್ರಿಕೆಟ್‌ಗೆ ನಟಿ ಭಾವನಾ ರಾಮಣ್ಣ ರಾಯಭಾರಿ

ಭಾರತದಲ್ಲಿನ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯು ಕಳೆದ ಕೆಲವು ವರ್ಷಗಳಲ್ಲಿ ಗಣನೀಯ ಬೆಳವಣಿಗೆಯನ್ನು ಕಂಡಿದೆ. ಮಾರುಕಟ್ಟೆಯ ಸ್ಥಿರ ಬೆಳವಣಿಗೆಯಿಂದ ಈ ವಿಚಾರ ವ್ಯಕ್ತವಾಗಿದೆ. ಉದ್ಯಮವು ಈ ವಿಭಾಗದಲ್ಲಿ ಮಾರುಕಟ್ಟೆ ಪಾಲಿನಲ್ಲಿ 4% ರಿಂದ 7%ಗೆ ಏರಿಕೆ ಕಂಡಿದೆ ಮತ್ತು ದೊಡ್ಡ ಎಸ್‌ಯುವಿ ಮಾರುಕಟ್ಟೆಯಲ್ಲಿ, ಮಾರುಕಟ್ಟೆ ಪಾಲು 8% ರಿಂದ 14%ಗೆ ಬೆಳೆದಿದೆ. ಈ ಅಭಿವೃದ್ಧಿಯು ಆಟೋಮೋಟಿವ್ ಕ್ಷೇತ್ರದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳ ಹೆಚ್ಚುತ್ತಿರುವ ಬೇಡಿಕೆ ಮತ್ತು ಅದರ ಮೇಲೆ ಹೆಚ್ಚುತ್ತಿರುವ ಆಕರ್ಷಣೆಯನ್ನು ಸಾರುತ್ತದೆ ಮತ್ತು ಉದ್ಯಮದಲ್ಲಿ ಪ್ರಮುಖ ಶಕ್ತಿಯಾಗಿ ಅದರ ಸ್ಥಾನವನ್ನು ಗಟ್ಟಿಗೊಳಿಸುತ್ತದೆ.

Continue Reading

ಪ್ರಮುಖ ಸುದ್ದಿ

Nitin Gadkari : ಕೆಟ್ಟದಾಗಿರುವ ಹೈವೆಗಳಿಗೆ ಟೋಲ್​ ಶುಲ್ಕ ಕಟ್ಟಬೇಡಿ; ನಿತಿನ್​ ಗಡ್ಕರಿ ಸೂಚನೆ

Nitin Gadkari: ಶುಲ್ಕವನ್ನು ಸಂಗ್ರಹಿಸಲು ಮತ್ತು ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಟೋಲ್​​ಗಳನ್ನು ಪರಿಚಯಿಸುವ ಅವಸರದಲ್ಲಿದ್ದೇವೆ. ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸುವಲ್ಲಿ ಬಳಕೆದಾರ ಶುಲ್ಕವನ್ನು ವಿಧಿಸಬೇಕು ಎಂದು ಗಡ್ಕರಿ ಅವರು ಹೇಳಿದ್ದಾರೆ.

VISTARANEWS.COM


on

Nitin Gadkari
Koo

ಬೆಂಗಳೂರು: ಕಳಪೆ ಗುಣಮಟ್ಟದ ರಸ್ತೆಗಳಿದ್ದರೆ ವಾಹನಗಳ ಮಾಲೀಕರಿಗೆ ಹೆದ್ದಾರಿ ಅಧಿಕಾರಿಗಳು ಟೋಲ್ ಶುಲ್ಕ ವಿಧಿಸಬಾರದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ. ಪ್ರಸಕ್ತ (2024-25) ಹಣಕಾಸು ವರ್ಷದಲ್ಲಿ 5,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪರಿಚಯಿಸಲಾಗುವ ಜಿಪಿಎಸ್​ ಆಧಾರಿತ ಟೋಲ್ ಪಾವತಿ ವ್ಯವಸ್ಥೆಗಳ ಕುರಿತ ಜಾಗತಿಕ ಕಾರ್ಯಾಗಾರದಲ್ಲಿ ಮಾತನಾಡಿದ ಬಿಜೆಪಿ ನಾಯಕ, ” ಗುಣಮಟ್ಟದ ಸೇವೆಯನ್ನು ಒದಗಿಸದಿದ್ದರೆ, ನೀವು ಟೋಲ್ ವಿಧಿಸಬಾರದು” ಎಂದು ಹೇಳಿದ್ದಾರೆ.

“ಶುಲ್ಕವನ್ನು ಸಂಗ್ರಹಿಸಲು ಮತ್ತು ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಟೋಲ್​​ಗಳನ್ನು ಅಳಡಿಸಿಕೊಂಡು ಹೋಗಲಾಗುತ್ತಿದೆ. ಅದಕ್ಕೆ ಅವಸರ ಮಾಡಲಾಗುತ್ತಿದೆ. ವಾಸ್ತವದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸಿದರೆ ಮಾತ್ರ ಬಳಕೆದಾರ ಶುಲ್ಕ ವಿಧಿಸಬೇಕು. ಗುಂಡಿಗಳು ಮತ್ತು ಮಣ್ಣಿನಿಂದ ಕೂಡಿದ ರಸ್ತೆಗಳಲ್ಲಿ ನೀವು ಟೋಲ್ ವಿಧಿಸಿದರೆ, ಜನರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ” ಎಂದು ರಸ್ತೆ ಮತ್ತು ಸಾರಿಗೆ ಸಚಿವರು ಹೇಳಿದ್ದಾರೆ.

ಪ್ರಸ್ತುತ ಫಾಸ್ಟ್ತಾಗ್​ ವ್ಯವಸ್ಥೆಯಡಿ ಜಿಎನ್ಎಸ್ಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಯನ್ನು ಪರಿಚಯಿಸಲು ಸರ್ಕಾರಿ ಸ್ವಾಮ್ಯದ ಎನ್ಎಚ್ಎಐ ಉದ್ದೇಶಿಸಿದೆ. ಆರಂಭದಲ್ಲಿ ಆರ್​ಎಫ್​ಐಡಿ ಆಧಾರಿತ ಮತ್ತು ಜಿಎನ್ಎಸ್ಎಸ್ (ಗ್ಲೋಬಲ್ ನ್ಯಾವಿಗೇಷನ್​ ಸ್ಯಾಟ್​ಲೈಟ್​ ಸಿಸ್ಟಮ್​) ಆಧಾರಿತ ಟೋಲ್ ವ್ಯವಸ್ಥೆಗಳ ಮೂಳಕ ಹೈಬ್ರಿಡ್ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಗೌಪ್ಯತೆ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಮೊದಲು ವಾಣಿಜ್ಯ ವಾಹನಗಳಿಗೆ ಮತ್ತು ನಂತರ ಖಾಸಗಿ ವಾಹನಗಳಿಗೆ ಈ ವ್ಯವಸ್ಥೆ ಜಾರಿಗೆ ತರಲು ಎನ್ಎಚ್ಎಐ ಯೋಜಿಸಿದೆ. ವಂಚನೆ ಪತ್ತೆಹಚ್ಚಲು ಚಾಲಕರ ನಡವಳಿಕೆ ವಿಶ್ಲೇಷಣೆ ಮತ್ತು ಬ್ಯಾಕ್ ಎಂಡ್ ಡೇಟಾ ವಿಶ್ಲೇಷಣೆಯೂ ನಡೆಯಲಿದೆ.

ಬ್ಯಾಂಕ್​ನಿಂದ ಟೋಲ್​ ಸಾಲ

ಜಿಎನ್​ಎಸ್​ಎಸ್​ ಮೂಲಕ ಪಾವತಿ ವಿಧಾನಗಳನ್ನು ಪ್ರಿಪೇಯ್ಡ್​​ನಿಂದ ಪೋಸ್ಟ್​​​ಪೇಯ್ಡ್​ಗೆ ಬದಲಾಯಿಸಬಹುದು. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಪ್ರಯಾಣದ ಯೋಜನೆಗಳ ಆಧಾರದ ಮೇಲೆ ತ್ವರಿತ ಸಾಲ ನೀಡಬಹುದು ಎಂದು ಎನ್ಎಚ್ಎಐ ಹೇಳಿದೆ.

ಇದನ್ನೂ ಓದಿ:Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ

ಹೈಬ್ರಿಡ್ ವರ್ಷಾಶನ ಮಾದರಿ (ಎಚ್ಎಎಂ) ಅಡಿಯಲ್ಲಿ, ಹೆದ್ದಾರಿ ನಿರ್ಮಾಣವನ್ನು ಹೊಂದಿಕೊಳ್ಳುವ ಮತ್ತು ಮಾರುಕಟ್ಟೆ ಚಾಲಿತವಾಗಿಸಬಹುದು ಎಂದು ಗಡ್ಕರಿ ಮಂಗಳವಾರ ಹೇಳಿದ್ದಾರೆ. “ಗುತ್ತಿಗೆದಾರರು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ನಾನು ನಂಬುತ್ತೇನೆ.”

ಹೈಬ್ರಿಡ್ ಆನ್ಯುಟಿ ಮಾಡೆಲ್​ ಅಡಿಯಲ್ಲಿ, ಯೋಜನಾ ವೆಚ್ಚದ ಸುಮಾರು ಶೇಕಡಾ 40 ಸರ್ಕಾರ ಭರಿಸಿದರೆ, ಉಳಿದದ್ದನ್ನು ಗುತ್ತಿಗೆದಾರರು ಭರಿಸುತ್ತಾರೆ. “ಗುತ್ತಿಗೆದಾರರು ಯೋಜನೆಯ ಶೇಕಡಾ 60 ಕ್ಕಿಂತ ಹೆಚ್ಚು ಹೂಡಿಕೆ ಮಾಡಲು ಸಿದ್ಧರಿದ್ದರೆ ಸರ್ಕಾರವು ಅದಕ್ಕೂ ಬದ್ಧವಾಗಿರುತ್ತದೆ. ನಮಗೆ ಬೇಕಾಗಿರುವುದು ಒಪ್ಪಂದ ಮತ್ತು ಚಾಲಿತ ಮಾರುಕಟ್ಟೆ ” ಎಂದು ಗಡ್ಕರಿ ಹೇಳಿದ್ದಾರೆ.

ಜಿಪಿಎಸ್​ ಮೂಲಕ ಟೋಲ್​ ಸಂಗ್ರಹ ಹೆಚ್ಚಳ

ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವನ್ನು ಪರಿಚಯಿಸುವುದರಿಂದ ಭಾರತದ ಒಟ್ಟು ಟೋಲ್ ಆದಾಯವನ್ನು ಕನಿಷ್ಠ 10,000 ಕೋಟಿ ರೂ.ಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಗಡ್ಕರಿ ಹೇಳಿದ್ದಾರೆ, 2023-24ರಲ್ಲಿ, ಭಾರತದಲ್ಲಿ ಒಟ್ಟು ಟೋಲ್ ಸಂಗ್ರಹವು 64,809.86 ಕೋಟಿ ರೂ.ಗೆ ತಲುಪಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 35 ರಷ್ಟು ಹೆಚ್ಚಳವಾಗಿದೆ.

Continue Reading

ಕರ್ನಾಟಕ

Mahindra Paddy Walker: ಮಹೀಂದ್ರಾ ಕಂಪನಿಯಿಂದ ʻ6ಆರ್‌ಒ ಪ್ಯಾಡಿ ವಾಕರ್ʼ ಭತ್ತ ನಾಟಿ ಯಂತ್ರ ಬಿಡುಗಡೆ

Mahindra Paddy Walker: : ಭತ್ತವನ್ನು ಪ್ರಮುಖ ಬೆಳೆಯುವ ಕರ್ನಾಟಕವು ವಿಶ್ವ ದರ್ಜೆಯ ಅಕ್ಕಿಗೆ ಹೆಸರುವಾಸಿಯಾಗಿದೆ ಮತ್ತು ಭತ್ತದ ಯಾಂತ್ರೀಕರಣ ತಂತ್ರಜ್ಞಾನಗಳನ್ನು ಆರಂಭಿಕವಾಗಿ ಅಳವಡಿಸಿಕೊಂಡ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬೆಳೆಯಲಾಗುತ್ತದೆ. ಹೊಸ ಪರಿಹಾರವು ನೀರಿನ ಸಂರಕ್ಷಣೆ, ಕಡಿಮೆ ಪರಿಸರ ಮಾಲಿನ್ಯ ತಡೆಯುತ್ತದೆ.

VISTARANEWS.COM


on

Mahindra Paddy Walker
Koo

ಬೆಂಗಳೂರು : ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ʻಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ʼನ ʻಕೃಷಿ ಉಪಕರಣಗಳ ವಿಭಾಗವುʼ (ಫಾರ್ಮ್‌ ಎಕ್ವಿಪ್‌ಮೆಂಟ್‌ ಸೆಕ್ಟರ್‌-ಎಫ್‌ಇಎಸ್) ಹೊಸ 6 ಸಾಲು ಭತ್ತದ ನಾಟಿ (Mahindra Paddy Walker) ಯಂತ್ರವನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ 4ಆರ್‌ಒ ವಾಕ್ ಬಿಹೈಂಡ್‌ ನಾಟಿಯಂತ್ರ (ಎಂಪಿ 461) ಮತ್ತು 4 ಆರ್​ಒ ರೈಡ್-ಆನ್ (ಪ್ಲಾಂಟಿಂಗ್ ಮಾಸ್ಟರ್ ಪ್ಯಾಡಿ 4 ಆರ್​ಒ) ಅನ್ನು ಯಶಸ್ವಿಯಾಗಿ ಪರಿಚಯಿಸಿದ ನಂತರ, ಮಹೀಂದ್ರಾ ಅವರ ಹೊಸ ʻ6ಆರ್​ಒ ಪ್ಯಾಡಿ ವಾಕರ್ʼ ಭತ್ತದ ನಾಟಿ ಯಂತ್ರವು ಭತ್ತ ನಾಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹೀಂದ್ರಾದ ಸ್ಥಿತಿಗತಿಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​!

ಈ ವಿಭಾಗದಲ್ಲಿ ಕಂಪನಿಯು ಈಗಾಗಲೇ ಮುಂಚೂಣಿ ಸ್ಥಾನ ಹೊಂದಿದ್ದು, ಇದನ್ನು ಮತ್ತಷ್ಟು ಉತ್ತಮಗೊಳಿಸಲು ಹೊಸ ಯಂತ್ರ ನೆರವಾಗಲಿದೆ. ಭತ್ತವನ್ನು ಪ್ರಮುಖ ಬೆಳೆಯುವ ಕರ್ನಾಟಕವು ವಿಶ್ವ ದರ್ಜೆಯ ಅಕ್ಕಿಗೆ ಹೆಸರುವಾಸಿಯಾಗಿದೆ ಮತ್ತು ಭತ್ತದ ಯಾಂತ್ರೀಕರಣ ತಂತ್ರಜ್ಞಾನಗಳನ್ನು ಆರಂಭಿಕವಾಗಿ ಅಳವಡಿಸಿಕೊಂಡ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬೆಳೆಯಲಾಗುತ್ತದೆ. ಹೊಸ ಪರಿಹಾರವು ನೀರಿನ ಸಂರಕ್ಷಣೆ, ಕಡಿಮೆ ಪರಿಸರ ಮಾಲಿನ್ಯ ತಡೆಯುತ್ತದೆ. ಇದರ ಜೊತೆಗೆ, ಕಾರ್ಮಿಕ-ಕೇಂದ್ರಿತ ತಂತ್ರಗಳಿಗೆ ಹೋಲಿಸಿದರೆ ಕಡಿಮೆ ಕಾರ್ಮಿಕ ವೆಚ್ಚ ಸೇರಿದಂತೆ, ಭತ್ತದ ಕೃಷಿಗೆ ಸಂಬಂಧಿಸಿದ ಒಟ್ಟಾರೆ ಲಾಭದಾಯಕತೆ ನೀಡುತ್ತದೆ.

ಹೊಸ ʻಮಹೀಂದ್ರಾ 6 ಆರ್​ಒ ಪ್ಯಾಡಿ ವಾಕರ್ʼ ಭತ್ತ ನಾಟಿ ಯಂತ್ರವು ಅತ್ಯುತ್ತಮ ಆಪರೇಟರ್ ದಕ್ಷತೆ ಒದಗಿಸುತ್ತದೆ. ನಿಖರತೆ ಮತ್ತು ಪರಿಣಾಮಕಾರಿ ನಾಟಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಭತ್ತದ ಕೃಷಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ. ಹಸ್ತಚಾಲಿತವಾಗಿ ನಿರ್ವಹಿಸಲ್ಪಡುವ ಹೊಸ ನಾಟಿ ಯಂತ್ರವು ವಿನ್ಯಾಸದಲ್ಲಿ ಚಿಕ್ಕದಾಗಿದೆ ಆಗಿದೆ ಮತ್ತು ಸೀಮಿತ ಸ್ಥಳಗಳಲ್ಲಿ ಸುಲಭವಾಗಿ ಇದನ್ನು ಕಾರ್ಯಾಚರಿಸಬಹುದಾಗಿದೆ.

ಆರು ಸಾಲುಗಳಲ್ಲಿ ಭತ್ತ ನಾಟಿ

ಏಕಕಾಲದಲ್ಲಿ ಆರು ಸಾಲುಗಳಲ್ಲಿ, ಒಂದೇ ಪಾಸ್ ನಲ್ಲಿ ಏಕರೂಪದ ನಾಟಿ ಮಾಡಲು ಇದು ಅವಕಾಶ ಕಲ್ಪಿಸಲಿದೆ. ಶಕ್ತಿ, ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯ ಮೇಲೆ ಗಮನ ಕೇಂದ್ರೀಕರಿಸಿ, ಹೊಸ ಭತ್ತ ನಾಟಿ ಯಂತ್ರವನ್ನು ತಯಾರಿಸಲಾಗಿದ್ದು, ಇದು ಹೆಚ್ಚು ಬಾಳಿಕೆ ಬರುವ ಗೇರ್‌ಬಾಕ್ಸ್ ಮತ್ತು 4-ಲೀಟರ್ ಸಾಮರ್ಥ್ಯದೊಂದಿಗೆ ಶಕ್ತಿಯುತ ಎಂಜಿನ್ ಅನ್ನು ಹೊಂದಿದೆ. ಇದು ಹೆಚ್ಚಿನ ಉತ್ಪಾದನೆ ಮತ್ತು ಕಡಿಮೆ ಇಂಧನ ಬಳಕೆಯನ್ನು ಖಾತರಿಪಡಿಸುತ್ತದೆ, ಭತ್ತದ ಕೃಷಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ಜೊತೆಗೆ ಸರ್ವೀಸ್‌ ಅಂತರ ಹೆಚ್ಚಿರುವ ಕಾರಣದಿಂದ ಸೇವಾ ವೆಚ್ಚವನ್ನು ಕಡಿಮೆ ಮಾಡುತ್ತದೆ.

2 ವರ್ಷಗಳ ಮರುಪಾವತಿ ಅವಧಿ ಮತ್ತು ಕೇವಲ 200 ಎಕರೆಗಳ ಕನಿಷ್ಠ ಕಾರ್ಯಾಚರಣಾ ಪ್ರದೇಶದೊಂದಿಗೆ, ಹೊಸ ಭತ್ತ ನಾಟಿ ಯಂತ್ರವು ಬಾಡಿಗೆ ವ್ಯವಹಾರಗಳಿಗೆ ಅತ್ಯುತ್ತಮ ಭವಿಷ್ಯ ಒದಗಿಸುತ್ತದೆ. ಕರ್ನಾಟಕದಲ್ಲಿ ಲಭ್ಯವಿರುವ ಮಹೀಂದ್ರಾದ ವ್ಯಾಪಕವಾದ ಕೃಷಿ ಯಂತ್ರೋಪಕರಣಗಳ ಡೀಲರ್ ನೆಟ್‌ವರ್ಕ್‌ ಮೂಲಕ ರೈತರು ಮನೆ ಬಾಗಿಲಿಗೆ ಸೇವೆ ಪಡೆಯಬಹುದು. ಇದನ್ನು ‘ಮಹೀಂದ್ರಾ ಸಾಥಿ’ ಎಂಬ ಹೊಸ ಬಳಕೆದಾರ-ಸ್ನೇಹಿ ಅಪ್ಲಿಕೇಶನ್ ಮೂಲಕ ಮೇಲ್ವಿಚಾರಣೆ ಮಾಡಬಹುದು. ಹೊಸ ಮಹೀಂದ್ರಾ ʻ6 ಆರ್ಒ ಪ್ಯಾಡಿ ವಾಕರ್ʼ ಮತ್ತು ಮಹೀಂದ್ರಾದ ಸಂಪೂರ್ಣ ಶ್ರೇಣಿಯ ಭತ್ತದ ನಾಟಿ ಯಂತ್ರಗಳನ್ನು ಮಹೀಂದ್ರ ಫೈನಾನ್ಸ್ ಮತ್ತು ಶ್ರೀರಾಮ್ ಫೈನಾನ್ಸ್‌ನಿಂದ ಅತ್ಯುತ್ತಮ ದರ್ಜೆಯ ಹಣಕಾಸು ಆಯ್ಕೆಗಳೊಂದಿಗೆ ನೀಡಲಾಗುವುದು.

Continue Reading
Advertisement
Tulu language
ತಂತ್ರಜ್ಞಾನ5 mins ago

Tulu Translate Google: ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆ

India is a secular nation because Hindus are the majority says Union Minister Pralhad Joshi
ಕರ್ನಾಟಕ11 mins ago

Pralhad Joshi: ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯತೀತವಾಗಿ ಉಳಿಯದು; ಪ್ರಲ್ಹಾದ್‌ ಜೋಶಿ ಆತಂಕ

IND vs SA
ಪ್ರಮುಖ ಸುದ್ದಿ18 mins ago

IND vs SA: ದಕ್ಷಿಣ ಆಫ್ರಿಕಾದ ಬೌಲಿಂಗ್​ ಶಕ್ತಿ ಭಾರತದ ಬ್ಯಾಟಿಂಗ್​ಗೆ ಲೆಕ್ಕಕ್ಕೇ ಇಲ್ಲ; ಮಾಜಿ ಆಟಗಾರನ ಭವಿಷ್ಯ

Rain News
ಕರ್ನಾಟಕ24 mins ago

Rain News: ಕಾರವಾರದಲ್ಲಿ ಭಾರಿ ಮಳೆಗೆ ಮಣ್ಣಿನ ಗೋಡೆ ಕುಸಿದು ವೃದ್ಧೆ ಸಾವು

Maharashtra Budget
ದೇಶ24 mins ago

ಮಹಿಳೆಯರಿಗೆ ಬಂಪರ್‌; ಮಾಸಿಕ 1,500 ರೂ. ಜಮೆ, 3 ಅಡುಗೆ ಅನಿಲ ಸಿಲಿಂಡರ್‌ ಫ್ರೀ ಘೋಷಣೆ

Rahyl Dravid
ಪ್ರಮುಖ ಸುದ್ದಿ49 mins ago

Rahul Dravid : ವಿಶ್ವ ಕಪ್​ ಗೆದ್ದು ಬನ್ನಿ ಅಭಿಯಾನದ ವಿರುದ್ಧ ಸಿಟ್ಟಿಗೆದ್ದ ರಾಹುಲ್ ದ್ರಾವಿಡ್​

Run4Research programme on June 30 in Bengaluru
ಕರ್ನಾಟಕ56 mins ago

Run4Research: ಬೆಂಗಳೂರಿನಲ್ಲಿ ಜೂ.30ರಂದು ʼರನ್4ರೀಸರ್ಚ್ʼ ಓಟ

MLA Dr N T Srinivas drives for crop insurance Awareness jatha in Kudligi
ವಿಜಯನಗರ58 mins ago

Vijayanagara News: ಕೂಡ್ಲಿಗಿಯಲ್ಲಿ ಬೆಳೆ ವಿಮೆ ಜಾಗೃತಿ ಜಾಥಾಕ್ಕೆ ಶಾಸಕ ಶ್ರೀನಿವಾಸ್ ಚಾಲನೆ

physical Abuse
ಕ್ರೈಂ59 mins ago

Physical Abuse: ಕಲಬುರಗಿಯಲ್ಲಿ 13 ವರ್ಷದ ಬಾಲಕಿ ಲೈಂಗಿಕ ದೌರ್ಜನ್ಯ, ತೀವ್ರ ರಕ್ತಸ್ರಾವವಾಗಿ ಸಾವು!

Viral Video
Latest1 hour ago

Viral Video: ಈ ಆರು ಯೂಟ್ಯೂಬರ್‌ಗಳು ಜೈಲು ಪಾಲಾಗಲು ಶಾರುಖ್‌ ಖಾನ್‌ ಕಾರಣವಂತೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ10 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌