Updated Honda Unicorn launched at Rs 1.10 lakh, gets OBD-2 complianceHonda Unicorn : ಹೋಂಡಾ ಯೂನಿಕಾರ್ನ್​ ಅಪ್​ಡೇಟೆಡ್​ ಆವೃತ್ತಿ ಬಿಡುಗಡೆ; ಏನಿದೆ ವಿಶೇಷತೆ? - Vistara News

ಆಟೋಮೊಬೈಲ್

Honda Unicorn : ಹೋಂಡಾ ಯೂನಿಕಾರ್ನ್​ ಅಪ್​ಡೇಟೆಡ್​ ಆವೃತ್ತಿ ಬಿಡುಗಡೆ; ಏನಿದೆ ವಿಶೇಷತೆ?

ಬಿಎಸ್​-6 ಎರಡನೇ ಹಂತದ ಮಾನದಂಡ ಸೇರ್ಪಡೆಗೊಳಿಸಲಾಗಿದ್ದು ಬೈಕ್​ನ ಬೆಲೆ 4,000 ರೂಪಾಯಿಗಳಷ್ಟು ದುಬಾರಿಯಾಗಿದೆ.

VISTARANEWS.COM


on

Honda Unicorn
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹೋಂಡಾ ಮೋಟಾರ್​ಸೈಕಲ್​ ತನ್ನ ಜನಪ್ರಿಯ ಬೈಕ್​ ಯೂನಿಕಾರ್ನ್ 150 ಸಿಸಿ ಅನ್ನು ಒಬಿಡಿ 2 ಮಾನದಂಡದೊಂದಿಗೆ ಅಪ್​ಡೇಟ್​ ಮಾಡಿ ಬಿಡುಗಡೆ ಮಾಡಿದೆ. ಅದೇ ರೀತಿ ಬೈಕಿಗೆ ಹೊಸ ವಾರಂಟಿ ಯೋಜನೆಯನ್ನೂ ಸಹ ಪರಿಚಯಿಸಿದೆ. ಎರಡು ನವೀಕರಣದೊಂದಿಗೆ ಬೈಕ್​ ಮಾರುಕಟ್ಟೆಗೆ ಇಳಿಯುವ ಜತೆಗೆ ಬೆಲೆಯನ್ನೂ ಏರಿಸಿಕೊಂಡಿದೆ. ಬೈಕ್​ನ ಬೆಲೆ ಈಗ 1,09,800 ರೂಪಾಯಿ(ಎಕ್ಸ್ ಶೋ ರೂಮ್​ ದೆಹಲಿ). ಇದು ಹಿಂದಿನ ಬೆಲೆಯಾದ 1,05,718 ರೂ.ಗಿಂತ 4,082 ರೂ.ಗಳ ಹೆಚ್ಚಳ.

ಯೂನಿಕಾರ್ನ್ 160 ಏರ್ ಕೂಲ್ಡ್, 162.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದರು 7,500 ಆರ್​​ಪಿಎಮ್​ನಲ್ಲಿ 12.9 ಬಿಎಚ್​​ಪಿ ಪವರ್ ಮತ್ತು 5,500 ಆರ್​ಪಿಎಂನಲ್ಲಿ 14 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸೀಟ್ ಎತ್ತರ 715 ಎಂಎಂ ಆಗಿದ್ದು, 13 ಲೀಟರ್ ಪಟ್ರೋಲ್​ ಟ್ಯಾಂಕ್​ ಹೊಂದಿದೆ. ಇದು 140 ಕೆಜಿ ತೂಕವಿದೆ. ಯೂನಿಕಾರ್ನ್ ಸಿಂಗಲ್-ಚಾನೆಲ್ ಎಬಿಎಸ್ ಸೆಟಪ್​​ನೊಂದಿಗೆ ಬರುತ್ತದೆ, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇದ್ದು, ಡಿಸ್ಕ್​ ಬ್ರೇಕ್​ ಆಯ್ಕೆಯನ್ನು ಕೊಟ್ಟಿಯಲ್ಲ. ಹೀಗಾಗಿ ಡ್ಯುಯಲ್​ ಚಾನೆಲ್​ ಎಬಿಎಸ್​ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ.

ವಿಶೇಷ ವಾರಂಟಿ:

ಹೋಂಡಾ ಯೂನಿಕಾರ್ನ್​ಗಾಗಿ ವಿಶೇಷ ವಾರಂಟಿ ಪ್ರೋಗ್ರಾಂ ಪರಿಚಯಿಸಿದೆ ಹೋಂಡಾ ಮೋಟಾರ್​ಸೈಕಲ್​. ಇದು 3 ವರ್ಷಗಳ ಸ್ಟಾಂಡರ್ಡ್​ ವಾರಂಟಿಯನ್ನು ಹೊಂದಿದೆ. ಜತೆಗೆ ಏಳು ವರ್ಷಗಳ ವಿಸ್ತೃತ ವಾರಂಟಿಯೂ ನೀಡಿದೆ. ಗ್ರಾಹಕರು ಈ ವಿಸ್ತೃತ ವಾರಂಟಿ ಖರೀದಿಸಲು ಬಯಸಿದರೆ, ಹೊಸ ಯುನಿಕಾರ್ನ್ 10 ವರ್ಷಗಳ ವಾರಂಟಿ ವ್ಯಾಪ್ತಿಗೆ ಸೇರ್ಪಡೆಯಾಗುತ್ತದೆ.

ಹೋಂಡಾ ಕಂಪನಿಯು ತನ್ನ ಎಸ್​​ಪಿ 125, ಆಕ್ಟಿವಾ 125 ಮತ್ತು ಡಿಯೋಗಳನ್ನು ಕೆಲವು ದಿನಗಳ ಹಿಂದೆ ಅಪ್​​ಡೇಟ್ ಮಾಡಿದೆ. ಹೊಸ ಎಮಿಷನ್ ಮಾನದಂಡಗಳನ್ನು ಪೂರೈಸಲು ತನ್ನ ಸಂಪೂರ್ಣ ದ್ವಿಚಕ್ರ ವಾಹನ ಪೋರ್ಟ್ ಫೋಲಿಯೊವನ್ನು ನವೀಕರಿಸುತ್ತಿದೆ ಹೋಂಡಾ.

ಹೊಸ ಒಬಿಡಿ 2 ಕಾಂಪ್ಲೈಂಟ್ 2023 ಯುನಿಕಾರ್ನ್ ಬಿಡುಗಡೆಯ ಬಗ್ಗೆ ಮಾತನಾಡಿದ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ, ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ತ್ಸುಟ್ಸುಮು ಒಟಾನಿ, 2 ದಶಕಗಳಿಂದ ಯೂನಿಕಾರ್ನ್ ಭಾರತೀಯ ಮೋಟಾರ್​ ಸೈಕಲ್​ ಪ್ರೇಮಿಗಳ ಆದ್ಯತೆಯ ಆಯ್ಕೆಯಾಗಿದೆ. ಹೊಸ ಬೈಕ್​ ಮಾಲಿನ್ಯ ಮಾನದಂಡಗಳನ್ನು ಪೂರೈಸುತ್ತದೆ. ಈ ಮೂಲಕ ನಮ್ಮ ಬದ್ಧತೆಯನ್ನು ಪ್ರಸ್ತುತಪಡಿಸಿದ್ದೇವೆ. ನಮ್ಮ ನಿಷ್ಠಾವಂತ ಗ್ರಾಹಕರ ಬೆಂಬಲಕ್ಕಾಗಿ ಅವರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Honda Dio: ಸ್ಮಾರ್ಟ್​ ಆಗಿ ಬಿಡುಗಡೆಗೊಂಡ 2023ರ ಹೋಂಡಾ ಡಿಯೋ

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಯೋಗೇಶ್ ಮಾಥುರ್ ಮಾತನಾಡಿ ಹೋಂಡಾ ಯೂನಿಕಾರ್ನ್ ತನ್ನ ಸಾಟಿಯಿಲ್ಲದ ಶೈಲಿ, ವಿನ್ಯಾಸ, ಶಕ್ತಿ ಮತ್ತು ಸುಧಾರಿತ ಎರ್ಗೊನಾಮಿಕ್ಸ್ ಮೂಲಕ ಟ್ರೆಂಡ್ ಸೆಟ್ಟರ್​ ಎನಿಸಿಕೊಂಡಿದೆ. ಹೊಸ ಒಬಿಡಿ 2 ಕಾಂಪ್ಲೈಂಟ್ ಪಿಜಿಎಂ-ಎಫ್ಐ ಎಂಜಿನ್ ಮೂಲಕ ಇನ್ನೊಂದು ಹೆಜ್ಜೆ ಮುಂದೆ ಇಡಲಾಗಿದೆ. ಹೊಸ ಯೂನಿಕಾರ್ನ್ ಈಗ ಆಕರ್ಷಕ ಪರ್ಲ್ ಸೈರನ್ ನೀಲಿ ಬಣ್ಣದಲ್ಲೂ ಲಭ್ಯವಿದೆ. ನಮ್ಮ ಮೌಲ್ಯಯುತ ಗ್ರಾಹಕರಿಗೆ ಈ ಮೋಟಾರ್ ಸೈಕಲ್ ನೀಡಲು ನಮಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Toyota Kirloskar Motor: ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮದಡಿ ವಿದ್ಯಾರ್ಥಿ ವೇತನ

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) 66ನೇ ಟೊಯೋಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿ-ಟಿಇಪಿ) ಮತ್ತು ಟಿ-ಟಿಇಪಿ ಅಡಿಯಲ್ಲಿ “ತಾಂತ್ರಿಕ ಶಿಕ್ಷಣ ಮತ್ತು ಮಾನ್ಯತೆಗಾಗಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು (ಸ್ಟಾರ್) ಬರೇಲಿಯ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿದೆ.

VISTARANEWS.COM


on

Toyota Technical Education Programme started at Bareilly Government Polytechnic by TKM
Koo

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) 66ನೇ ಟೊಯೋಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿ-ಟಿಇಪಿ) ಮತ್ತು ಟಿ-ಟಿಇಪಿ ಅಡಿಯಲ್ಲಿ “ತಾಂತ್ರಿಕ ಶಿಕ್ಷಣ ಮತ್ತು ಮಾನ್ಯತೆಗಾಗಿ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು (ಸ್ಟಾರ್) ಬರೇಲಿಯ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಾರಂಭಿಸುವುದಾಗಿ (Toyota Kirloskar Motor) ಘೋಷಿಸಿದೆ.

ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ ಸಮುದಾಯಗಳನ್ನು ಸಬಲೀಕರಣಗೊಳಿಸಲು, ಟಿಕೆಎಂ ತನ್ನ ಪ್ರಮುಖ ಕಾರ್ಯಕ್ರಮಗಳಾದ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಮತ್ತು ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿ-ಟಿಇಪಿ) ಯೊಂದಿಗೆ ಮುಂಚೂಣಿಯಲ್ಲಿದೆ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ, ಈ ಕಾರ್ಯಕ್ರಮಗಳು ಆರ್ಥಿಕವಾಗಿ ಸವಾಲಿನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ತರಬೇತಿಯನ್ನು ಒದಗಿಸುವತ್ತ ಗಮನ ಹರಿಸಿವೆ. ‘ಸ್ಕಿಲ್ ಇಂಡಿಯಾ’ ಅಭಿಯಾನಕ್ಕೆ ಗಮನಾರ್ಹ ಕೊಡುಗೆ ನೀಡಿವೆ.

ಇದನ್ನೂ ಓದಿ: Kannada Short Movie: ಪತ್ರಕರ್ತೆ ಸುನಯನಾ ಸುರೇಶ್ ಈಗ ನಿರ್ದೇಶಕಿ; ‘ಮೌನ ರಾಗ’ ಕಿರುಚಿತ್ರಕ್ಕೆ ನಿರ್ದೇಶನ

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು 2023 ರ ಜುಲೈ 29 ಮತ್ತು 30 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಕ್ರಮದ 3 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಂವಹನ ನಡೆಸುವ ಗೌರವವನ್ನು ಪಡೆದ ಟಿಟಿಟಿಐ ಹಳೆಯ ವಿದ್ಯಾರ್ಥಿ ಮತ್ತು 2022 ರ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಮೆಕಾಟ್ರಾನಿಕ್ಸ್ ಕಂಚಿನ ಪದಕ ವಿಜೇತ ಅಖಿಲೇಶ್ ನರಸಿಂಹ ಮೂರ್ತಿ ಒಂದು ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ.

ಟಿ-ಟಿಇಪಿ ಒಂದು ಸಮಗ್ರ ವರ್ಷ ವಿಡೀ ನಡೆಯುವ ಕಾರ್ಯಕ್ರಮವಾಗಿದೆ. ಇದು ಆನ್-ದಿ-ಜಾಬ್ ಟ್ರೈನಿಂಗ್ (ಒಜೆಟಿ) ಅನ್ನು ಒಳಗೊಂಡಿದೆ ಮತ್ತು ಅಂತಿಮ ವರ್ಷದ ಐಟಿಐ / ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಅನುಗುಣವಾಗಿದೆ. ಈ ಕಾರ್ಯಕ್ರಮದ ಪ್ರಮುಖ ಲಕ್ಷಣಗಳಲ್ಲಿ ಟೊಯೊಟಾದಿಂದ ಟಿ-ಟಿಇಪಿಯ ಪ್ರಮುಖ ತರಬೇತುದಾರರಿಗೆ ವಿಶೇಷ ತರಬೇತಿ, ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಟೊಯೊಟಾ ಡೀಲರ್ ಶಿಪ್‌ಗಳಲ್ಲಿ ಪ್ರಾಯೋಗಿಕ ಕೌಶಲ್ಯ ಅಭಿವೃದ್ಧಿ ಮತ್ತು ಭಾರತೀಯ ವಾಹನ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಸುಧಾರಿತ ತಂತ್ರಜ್ಞಾನಗಳ ತಾಂತ್ರಿಕ ಜ್ಞಾನವನ್ನು ನೀಡಲು ವಿನ್ಯಾಸಗೊಳಿಸಲಾದ ಪಠ್ಯಕ್ರಮ ಸೇರಿವೆ. ಕಳೆದ ವರ್ಷ ಆರ್ಥಿಕವಾಗಿ ಸವಾಲಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡಲು ಟಿಕೆಎಂ ಸ್ಟಾರ್ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ, 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಟಿ-ಟಿಇಪಿ ಮೂಲಕ ತರಬೇತಿ ಪಡೆದಿದ್ದಾರೆ. 70% ಕ್ಕೂ ಹೆಚ್ಚು ಜನರು ದೇಶಾದ್ಯಂತ ವಿವಿಧ ಆಟೋಮೊಬೈಲ್ ಕಂಪನಿಗಳು ಮತ್ತು ಅವುಗಳ ಡೀಲರ್‌ಶಿಪ್‌ಗಳಲ್ಲಿ ಉದ್ಯೋಗವನ್ನು ಪಡೆದಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: World Blood Donors Day: ವಿಶ್ವ ರಕ್ತದಾನಿಗಳ ದಿನ; ಜಾಗೃತಿ ಜಾಥಾಕ್ಕೆ ದಿನೇಶ್ ಗುಂಡೂರಾವ್‌ ಚಾಲನೆ

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉತ್ತರ ಪ್ರದೇಶ ಸರ್ಕಾರದ ವಿಧಾನ ಪರಿಷತ್ ಸದಸ್ಯ ಡಿ.ಸಿ. ವರ್ಮಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಕೌಶಲ್ಯಗಳೊಂದಿಗೆ ನಮ್ಮ ಯುವಕರನ್ನು ಸಬಲೀಕರಣಗೊಳಿಸುವ ಟಿಕೆಎಂನ ಬದ್ಧತೆಯನ್ನು ನಾವು ಶ್ಲಾಘಿಸುತ್ತೇವೆ. ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿ-ಟಿಇಪಿ) ನಂತಹ ಉಪಕ್ರಮಗಳು ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ನಮ್ಮ ಧ್ಯೇಯದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿವೆ. ವಿಶೇಷವಾಗಿ ಗ್ರಾಮೀಣ ಮತ್ತು ಆರ್ಥಿಕವಾಗಿ ಸವಾಲಿನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಟಿ-ಟಿಇಪಿ ಮತ್ತು ಸ್ಟಾರ್ ವಿದ್ಯಾರ್ಥಿವೇತನ ಬೆಂಬಲವು ವಿದ್ಯಾರ್ಥಿಗಳಿಗೆ ಟೊಯೊಟಾದ ಮೌಲ್ಯಗಳು, ಉತ್ತಮ ಅಭ್ಯಾಸಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ.

ಆ ಮೂಲಕ ಅವರ ಒಟ್ಟಾರೆ ಕೌಶಲ್ಯ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಹೆಚ್ಚುವರಿಯಾಗಿ ಟೊಯೊಟಾದಂತಹ ಉದ್ಯಮ ಪಾಲುದಾರರ ಸಹಯೋಗದ ಪ್ರಯತ್ನಗಳು ಉತ್ತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ವಿಶ್ವದರ್ಜೆಯ ಕಾರ್ಯಪಡೆಯ ಲಭ್ಯತೆಯನ್ನು ಹೆಚ್ಚಿಸುತ್ತದೆ, ಅವರ ವೃತ್ತಿಜೀವನದ ಆಕಾಂಕ್ಷೆಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ವಾಹನ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದ್ದಾರೆ.

ಈ ವೇಳೆ ಕಾರ್ಪೊರೇಟ್ ವ್ಯವಹಾರ ಮತ್ತು ಆಡಳಿತದ ಕಂಟ್ರಿ ಹೆಡ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಮಾತನಾಡಿ, ಟಿಕೆಎಂನಲ್ಲಿ ಯುವ ಪ್ರತಿಭೆಗಳಿಗೆ ಸುಧಾರಿತ ತಾಂತ್ರಿಕ ಕೌಶಲ್ಯ ಮತ್ತು ಜ್ಞಾನವನ್ನು ಪಡೆಯಲು ಅವಕಾಶಗಳನ್ನು ಸೃಷ್ಟಿಸುವಲ್ಲಿ ತಾಂತ್ರಿಕ ತರಬೇತಿಯ ಪರಿವರ್ತಕ ಶಕ್ತಿಯನ್ನು ನಾವು ಗುರುತಿಸುತ್ತೇವೆ. ನಮ್ಮ ಟಿ-ಟಿಇಪಿ ಸೌಕರ್ಯ ಮತ್ತು ಸ್ಟಾರ್ ಕಾರ್ಯಕ್ರಮವು ಆಟೋಮೋಟಿವ್ ಉದ್ಯಮಕ್ಕೆ ನುರಿತ ಕಾರ್ಯಪಡೆಯನ್ನು ಬೆಳೆಸುವ ನಮ್ಮ ಬದ್ಧತೆಗೆ ಉದಾಹರಣೆಯಾಗಿದೆ. ಅದೇ ಸಮಯದಲ್ಲಿ ವಿಶಾಲವಾದ ‘ಸ್ಕಿಲ್ ಇಂಡಿಯಾ’ ಮಿಷನ್ ಅನ್ನು ಬೆಂಬಲಿಸುತ್ತದೆ, ಅಂತಿಮವಾಗಿ ನಮ್ಮ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ.

ಟಿ-ಟಿಇಪಿ ಉಪಕ್ರಮದ ಭಾಗವಾಗಿರುವ ಸ್ಟಾರ್ ಕಾರ್ಯಕ್ರಮವು ಅರ್ಹ ವಿದ್ಯಾರ್ಥಿಗಳನ್ನು, ವಿಶೇಷವಾಗಿ ಆರ್ಥಿಕವಾಗಿ ಸವಾಲಿನ ಹಿನ್ನೆಲೆಯಿಂದ ಬಂದವರನ್ನು ವಿದ್ಯಾರ್ಥಿವೇತನವನ್ನು ಒದಗಿಸುವ ಮೂಲಕ ಮತ್ತು ಆಟೋಮೋಟಿವ್ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನಕ್ಕಾಗಿ ಅಗತ್ಯ ಕೌಶಲ್ಯಗಳು ಮತ್ತು ಜ್ಞಾನದೊಂದಿಗೆ ಸಜ್ಜುಗೊಳಿಸುವ ಮೂಲಕ ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಪ್ರತಿಭೆಗಳನ್ನು ಪೋಷಿಸಲು, ವಿದ್ಯಾರ್ಥಿಗಳು ತಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪಲು ಮತ್ತು ವಾಹನ ಉದ್ಯಮ ಮತ್ತು ನಮ್ಮ ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಲು ನಾವು ಸಮರ್ಪಿತರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: RBI Penalty: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 1.45 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ; ಕಾರಣ ಏನು?

ಕಾರ್ಯಕ್ರಮದಲಲ್ಲಿ ಬರೇಲಿಯ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ನರೇಂದ್ರ ಕುಮಾರ್, ವಾಣಿಜ್ಯ ಟೊಯೊಟಾದ ನಿರ್ದೇಶಕ ಶಿವಂ ಗುಪ್ತಾ ಮಾತನಾಡಿದರು.

Continue Reading

ಕರ್ನಾಟಕ

Tata Motors: ಪಂಚ್. ಇವಿ, ನೆಕ್ಸಾನ್.ಇವಿಗೆ ಭಾರತ್-ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್

Tata Motors: ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆ ಮತ್ತು ಭಾರತದ ಇವಿ ಕ್ರಾಂತಿಯ ಪ್ರವರ್ತಕರಾಗಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂ) ಇಂದು ಮಹತ್ವದ ಪ್ರಕಟಣೆಯಲ್ಲಿ ಪಂಚ್.ಇವಿ ಮತ್ತು ನೆಕ್ಸಾನ್.ಇವಿ ಭಾರತ್-ಎನ್‌ಸಿಎಪಿಯಿಂದ 5-ಸ್ಟಾರ್ ರೇಟಿಂಗ್ ಪಡೆದಿದೆ ಎಂದು ಘೋಷಿಸಿದೆ. ಪಂಚ್.ಇವಿ ಇಲ್ಲಿಯವರೆಗೆ ಯಾವುದೇ ವಾಹನ ಕೂಡ ಗಳಿಸದೇ ಇದ್ದ ಅತ್ಯಧಿಕ ಸ್ಕೋರ್‌ ಪಡೆಯುವ ಮೂಲಕ ಮೈಲುಗಲ್ಲು ಸ್ಥಾಪಿಸಿದೆ.

VISTARANEWS.COM


on

Tata Motors Panch EV Nexon EV 5 star rating by Bharat NCAP
Koo

ಬೆಂಗಳೂರು: ಟಾಟಾ ಮೋಟಾರ್ಸ್‌ನ (Tata Motors) ಅಂಗಸಂಸ್ಥೆ ಮತ್ತು ಭಾರತದ ಇವಿ ಕ್ರಾಂತಿಯ ಪ್ರವರ್ತಕರಾಗಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂ) ಇಂದು ಮಹತ್ವದ ಪ್ರಕಟಣೆಯಲ್ಲಿ ಪಂಚ್.ಇವಿ ಮತ್ತು ನೆಕ್ಸಾನ್.ಇವಿ ಭಾರತ್-ಎನ್‌ಸಿಎಪಿಯಿಂದ 5-ಸ್ಟಾರ್ ರೇಟಿಂಗ್ ಪಡೆದಿದೆ ಎಂದು ಘೋಷಿಸಿದೆ.

ಪಂಚ್.ಇವಿ ಇಲ್ಲಿಯವರೆಗೆ ಯಾವುದೇ ವಾಹನ ಕೂಡ ಗಳಿಸದೇ ಇದ್ದ ಅತ್ಯಧಿಕ ಸ್ಕೋರ್‌ ಪಡೆಯುವ ಮೂಲಕ ಮೈಲಿಗಲ್ಲು ಸ್ಥಾಪಿಸಿದೆ. ಪಂಚ್.ಇವಿ ಅಡಲ್ಟ್ ಆಕ್ಯುಪೆಂಟ್ಸ್ ಪ್ರೊಟೆಕ್ಷನ್(ಎಓಪಿ) ಅಂದರೆ ವಯಸ್ಕರ ರಕ್ಷಣೆ ವಿಭಾಗದಲ್ಲಿ ದಾಖಲೆಯ 31.46/32 ಅಂಕಗಳು, ಚಿಲ್ಡ್ರನ್ ಆಕ್ಯುಪೆಂಟ್ ಪ್ರೊಟೆಕ್ಷನ್ (ಸಿಓಪಿ) ಅಂದರೆ ಮಕ್ಕಳ ರಕ್ಷಣೆ ವಿಭಾಗದಲ್ಲಿ 45/49 ಅಂಕಗಳನ್ನು ಪಡೆದುಕೊಂಡಿದೆ.

ನೆಕ್ಸಾನ್.ಇವಿ ಎಓಪಿ ಮತ್ತು ಸಿಓಪಿಯಲ್ಲಿ ಕ್ರಮವಾಗಿ 29.86/32 ಮತ್ತು 44.95/49 ಅಂಕಗಳನ್ನು ಗಳಿಸಿದೆ. ಈ ಮೂಲಕ ಟಾಟಾ ಮೋಟಾರ್ಸ್ ಈಗ ಭಾರತ್-ಎನ್‌ಸಿಎಪಿ ಮತ್ತು ಗ್ಲೋಬಲ್-ಎನ್‌ಸಿಎಪಿ ಪರೀಕ್ಷೆಗಳಲ್ಲಿ 5-ಸ್ಟಾರ್‌ಗಳನ್ನು ಗಳಿಸಿರುವ ಅತಿ ಸುರಕ್ಷಿತ ಶ್ರೇಣಿಯ ಎಸ್‌ಯುವಿ ಉತ್ಪನ್ನ ಶ್ರೇಣಿಗಳನ್ನು ಹೊಂದಿರುವ ಏಕೈಕ ಒಇಎಂ ಆಗಿದೆ.

ಇದನ್ನೂ ಓದಿ: Aliens: ಏಲಿಯನ್‌ಗಳು ಅನ್ಯಗ್ರಹ ಜೀವಿಗಳಲ್ಲ; ಈ ಭೂಮಿಯ ರಹಸ್ಯ ನಿವಾಸಿಗಳು! ಹಾರ್ವರ್ಡ್ ವಿಜ್ಞಾನಿಗಳ ಸಂಶೋಧನೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಈ ಕುರಿತು ಮಾತನಾಡಿ, “ನೆಕ್ಸಾನ್.ಇವಿ ಮತ್ತು ಪಂಚ್.ಇವಿ ಭಾರತ್-ಎನ್‌ಸಿಎಪಿಯಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಈ ಮಹತ್ವದ ಸಾಧನೆ ಮಾಡಿದ್ದಕ್ಕಾಗಿ ಟಾಟಾ ಮೋಟಾರ್ಸ್‌ಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇನೆ. ದೇಶದಲ್ಲಿ ಸುರಕ್ಷಿತ ವಾಹನಗಳು ಇರಬೇಕು ಎನ್ನುವ ಭಾರತ ಸರ್ಕಾರದ ದೃಷ್ಟಿಗೆ ಈ ಪ್ರಮಾಣೀಕರಣವು ಸೂಕ್ತವಾಗಿ ಹೊಂದಿಕೆಯಾಗುತ್ತದೆ ಮತ್ತು ಭಾರತದ ಆಟೋಮೊಬೈಲ್ ಉದ್ಯಮವನ್ನು ‘ಆತ್ಮನಿರ್ಭರ’ ಮಾಡುವಲ್ಲಿ ಭಾರತ್-ಎನ್‌ಸಿಎಪಿಯ ಪಾತ್ರವನ್ನು ಒತ್ತಿಹೇಳುತ್ತದೆ. ಭಾರತ್-ಎನ್‌ಸಿಎಪಿ ಕಾರು ಸುರಕ್ಷತಾ ಮಾನದಂಡವು ಭಾರತವನ್ನು ಜಾಗತಿಕ ಆಟೋಮೊಬೈಲ್ ಹಬ್ ಮಾಡಲು ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅವುಗಳ ರಫ್ತು ಯೋಗ್ಯತೆಯನ್ನು ಹೆಚ್ಚಿಸುವ ಸರ್ಕಾರದ ದೃಷ್ಟಿಯನ್ನು ಅರಿತುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಕುರಿತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಎಂಡಿ ಶೈಲೇಶ್ ಚಂದ್ರ ಮಾತನಾಡಿ, ಮೊದಲು ಬಹಳ ಕಡಿಮೆ ಚರ್ಚೆ ಆಗುತ್ತಿದ್ದ ಸುರಕ್ಷತೆ ವಿಚಾರ ಈಗ ಭಾರತೀಯ ಕಾರು ಖರೀದಿದಾರರ ಪ್ರಮುಖ ಆದ್ಯತೆಯಾಗಿದೆ. ಸುರಕ್ಷತೆ ಎಂಬುದು ಟಾಟಾ ಮೋಟಾರ್ಸ್‌ನ ನಮ್ಮ ಡಿಎನ್‌ಎಯಲ್ಲಿಯೇ ಇದೆ. ಅದರಿಂದಲೇ ನಾವು ಉದ್ಯಮದಲ್ಲಿ ಮಾನದಂಡ ಸ್ಥಾಪಿಸುವಂತಾಗಿದೆ.

ಇದನ್ನೂ ಓದಿ: Pralhad Joshi: ಚುನಾವಣೆ ಸೋಲಿನ ಸೇಡಿಗಾಗಿ ಯಡಿಯೂರಪ್ಪ ಮೇಲೆ ರಾಜಕೀಯ ವೈಷಮ್ಯ; ಪ್ರಲ್ಹಾದ್‌ ಜೋಶಿ

ಸುರಕ್ಷತಾ ಮಾನದಂಡವನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾವು ಪ್ರವರ್ತಕರಾಗಿ ಮುಂದುವರೆದಿದ್ದೇವೆ. ಬೆಲೆಯನ್ನು ಲೆಕ್ಕಿಸದೆ ನಾವು ತಯಾರಿಸುವ ಪ್ರತಿಯೊಂದು ವಾಹನವೂ ಸುರಕ್ಷಿತವಾಗಿರಬೇಕು ಎಂಬುದರ ಕುರಿತು ನಾವು ಬದ್ಧವಾಗಿದ್ದೇವೆ. ನಾವು ಕಟ್ಟುನಿಟ್ಟಾದ ಸರ್ಕಾರಿ ಸುರಕ್ಷತಾ ಮಾನದಂಡಗಳನ್ನು ಒಪ್ಪಿಕೊಳ್ಳುತ್ತೇವೆ ಮತ್ತು ಅತ್ಯುತ್ತಮ ಫಲಿತಾಂಶಗಳನ್ನು ಪಡೆದು ಭಾರತ್-ಎನ್‌ಸಿಎಪಿ ಪ್ರೋಟೋಕಾಲ್ ಅನ್ನು ಪಾಲಿಸಿದ ಹಾಗೂ ಅಲ್ಲಿಗೆ ವಾಹನವನ್ನು ಕಳುಹಿಸಿದ ಮೊದಲ ವಾಹನ ತಯಾರಕರು ಎಂದು ಹೆಮ್ಮೆಪಡುತ್ತೇವೆ. ಪಂಚ್.ಇವಿ ಭಾರತದಲ್ಲಿ ಉತ್ಪಾದಿಸಲ್ಪಡುವ ಸುರಕ್ಷಿತ ಇವಿ ವಾಹನ ಎಂದು ಹೇಳಿಕೊಳ್ಳಲು ನಾವು ಸಂತೋಷಪಡುತ್ತೇವೆ. ಜತೆಗೆ ನೆಕ್ಸಾನ್.ಇವಿ 5-ಸ್ಟಾರ್ ರೇಟಿಂಗ್‌ ಪಡೆಯುವುದರ ಮೂಲಕ ಸುರಕ್ಷತೆಯ ಪರಂಪರೆಯನ್ನು ಮುಂದುವರೆಸಿದೆ.

ಒಟ್ಟಾಗಿ, ಭಾರತ್-ಎನ್‌ಸಿಎಪಿ ಅಡಿಯಲ್ಲಿ ಪರೀಕ್ಷೆಗೆ ಒಳಗಾದ ನಮ್ಮ ಎಲ್ಲಾ ನಾಲ್ಕು ಎಸ್‌ಯುವಿಗಳು 5-ಸ್ಟಾರ್ ರೇಟಿಂಗ್‌ಗಳನ್ನು ಪಡೆದಿವೆ. ಈ ಮೂಲಕ ಎಲ್ಲಾ ಪ್ರಯಾಣಿಕ ವಾಹನಗಳು ಅನುಸರಿಸಬಹುದಾದ ಮಾನದಂಡವನ್ನು ಸ್ಥಾಪಿಸಿವೆ. ಸುರಕ್ಷತೆಯ ಕುರಿತಾದ ನಮ್ಮ ಗಟ್ಟಿ ನಿಲುವು ಮುಂದುವರಿಯುತ್ತದೆ. ಅದಕ್ಕೆ ಬೇಕಾದ ಉತ್ತಮ ಆರ್ & ಡಿ ಬೆಂಬಲವು ನಮಗೆ ಈ ನಿಟ್ಟಿನಲ್ಲಿ ಬೆಳೆಯಲು ಹಾಗೂ ಪ್ರತಿ ಪ್ರಯಾಣಿಕರಿಗೆ ಸುರಕ್ಷಿತ ಭವಿಷ್ಯವನ್ನು ರಚಿಸಲು ದಾರಿ ಮಾಡಿಕೊಡಲು ನಮಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಪಂಚ್.ಇವಿ ಪ್ರಾರಂಭವಾದಾಗಿನಿಂದಲೂ ಇವಿ ಆಸಕ್ತರಿಗೆ ಮತ್ತು ಮೊದಲ ಬಾರಿಯ ಖರೀದಿದಾರರಲ್ಲಿ ಆಕರ್ಷಣೆ ಉಂಟು ಮಾಡಿದೆ. ಗ್ರಾಮೀಣ ಮಾರುಕಟ್ಟೆಗಳಲ್ಲಿ 35%ಕ್ಕಿಂತ ಹೆಚ್ಚು ಇವಿ ಮಾಲೀಕರು ಇದ್ದಾರೆ. ದೀರ್ಘ ರೇಂಜ್, ಉತ್ಕೃಷ್ಟ ಕಾರ್ಯಕ್ಷಮತೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರತೀ ವಿಭಾಗಗಳಲ್ಲಿ ಸಿಗುವ 2 – 3 ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿರುವ ಪಂಚ್.ಇವಿ ತನ್ನ ಕುಟುಂಬದಲ್ಲಿ 10,000 ಕ್ಕೂ ಹೆಚ್ಚು ಹೆಮ್ಮೆಯ ಸದಸ್ಯರನ್ನು ಹೊಂದಿದೆ. ಇದು ನಿಜವಾದ ವಿದ್ಯುತ್ ಎಸ್ ಯು ವಿ ಮಾತ್ರವಲ್ಲ, ಇದು ಚಲನಶೀಲತೆಯ ಭವಿಷ್ಯಕ್ಕೆ ಒಂದು ಮಹತ್ವದ ಹೆಜ್ಜೆಯಾಗಿದೆ. ಪಂಚ್.ಇವಿ ಅನುಕೂಲ ವಿಚಾರದಲ್ಲಿಯೂ ಹೆಚ್ಚು ಅಂಕ ಗಳಿಸುತ್ತದೆ ಮತ್ತು ಗ್ರಾಹಕರಿಗೆ ಸುಭವಾಗಿ ಪ್ರೀಮಿಯಂ ಅನುಭವವನ್ನು ನೀಡುತ್ತದೆ.

ಇದನ್ನೂ ಓದಿ: OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು

ಭಾರತದ ಇವಿ ಕ್ರಾಂತಿಯ ಕಿಕ್‌ಸ್ಟಾರ್ಟರ್ ಎಂದು ಮನ್ನಣೆ ಪಡೆದಿರುವ ನೆಕ್ಸಾನ್.ಇವಿ 2020ರಲ್ಲಿ ಪ್ರಾರಂಭವಾದಾಗಿನಿಂದ 68,000 ಯೂನಿಟ್‌ಗಳನ್ನು ಮಾರಾಟ ಮಾಡಿದೆ. 2023ರಲ್ಲಿ ಅನಾವರಣಗೊಂಡ ಎಸ್‌ಯುವಿಯ ನವೀಕರಿಸಿದ ಗೇಮ್‌ಚೇಂಜಿಂಗ್ ಹೊಸ ಅವತಾರವು ಇಡೀ ಭಾರತೀಯ ವಾಹನ ಉದ್ಯಮದ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಇದರ ಆಕರ್ಷಕ ಡಿಜಿಟಲ್-ಫಸ್ಟ್ ವಿನ್ಯಾಸ, ತಂತ್ರಜ್ಞಾನ- ಚಾಲಿತ ಚಾಲನಾ ಅನುಭವ ಮತ್ತು ಅದ್ಭುತ ಆವಿಷ್ಕಾರಗಳು ಇದನ್ನು ಚಕ್ರಗಳಿರುವ ಗ್ಯಾಜೆಟ್ ಎಂದು ಕರೆಯುವಂತೆ ಮಾಡಿದೆ ಮತ್ತು ಈ ಕಾರು ಭಾರತೀಯ ಇವಿ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.

Continue Reading

ಆಟೋಮೊಬೈಲ್

BMW Motorrad: ಐಷಾರಾಮಿ BMW R 1300 GS ಬೈಕ್‌ ಬಿಡುಗಡೆ; ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ವಿವರ

BMW Motorrad: ಬಿಎಂಡಬ್ಲ್ಯು ಮೋಟೊರಾಡ್ R 1300 ಜಿಎಸ್‌ (R 1300 GS) ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಬಿಎಂಡಬ್ಲ್ಯು R 1300 GS ಬೈಕ್ ಲೈಟ್ ವೈಟ್, ಟ್ರಿಪಲ್ ಬ್ಲ್ಯಾಕ್‌, ಜಿಎಸ್ ಟ್ರೋಫಿ ಮತ್ತು ಚಾಯ್ಸ್ 719 ಟ್ರಮುಂಟನಾ ಎಂಬ ನಾಲ್ಕು ಮಾದರಿಗಳಲ್ಲಿ ಲಭ್ಯ. ಯುವ ಜನತೆಯ ನಿದ್ದೆಗೆಡಿಸಿರುವ R 1300 GS ಬೈಕ್‌ನ ವಿತರಣೆ ಈ ತಿಂಗಳಲ್ಲೇ ನಡೆಯಲಿದ್ದು, ಪ್ರತಿಸ್ಪರ್ಧಿಗಳಿಗೆ ಠಕ್ಕರ್‌ ಕೊಡಲಿದೆ ಎಂದು ತಜ್ಞರು ಊಹಿಸಿದ್ದಾರೆ.

VISTARANEWS.COM


on

BMW Motorrad
Koo

ನವದೆಹಲಿ: ಬೈಕ್‌ಪ್ರಿಯರಿಗೆ ಐಷಾರಾಮಿ ದ್ವಿಚಕ್ರ ವಾಹನ ತಯಾರಕ ಕಂಪನಿ ಬಿಎಂಡಬ್ಲ್ಯು ಮೋಟೊರಾಡ್ (BMW Motorrad) ಗುಡ್‌ನ್ಯೂಸ್‌ ನೀಡಿದೆ. R 1300 ಜಿಎಸ್‌ (R 1300 GS) ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಬಿಎಂಡಬ್ಲ್ಯು R 1300 GS ಬೈಕ್ ಲೈಟ್ ವೈಟ್, ಟ್ರಿಪಲ್ ಬ್ಲ್ಯಾಕ್‌, ಜಿಎಸ್ ಟ್ರೋಫಿ ಮತ್ತು ಚಾಯ್ಸ್ 719 ಟ್ರಮುಂಟನಾ (Light White, Triple Black, GS Trophy, and Option 719 Tramuntana) ಎಂಬ ನಾಲ್ಕು ಮಾದರಿಗಳಲ್ಲಿ ಲಭ್ಯ. ಈ ಬೈಕ್‌ನ ವಿಶೇಷತೆ, ಒಳಗೊಂಡಿರುವ ಫೀಚರ್‌, ಬೆಲೆ ಮುಂತಾದ ಇಲ್ಲಿದೆ.

ಬೆಲೆ ಎಷ್ಟು?

ಈ R 1300 GS ಬೈಕ್‌ನ ಬೆಲೆ 20.95 ಲಕ್ಷ ರೂ. ಅಂದರೆ ಈ ಹಿಂದಿನ R 1250 GS ಮಾಡಲ್‌ಗಿಂತ ಸುಮಾರು 40 ಸಾವಿರ ರೂ. ಅಧಿಕ. ಇತರ ಐಷಾರಾಮಿ ಬೈಕ್‌ಗಳಾದ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಸರಣಿಯ ಬೈಕ್‌ಗೆ 21.48 ಲಕ್ಷ ರೂ.- 31.48 ಲಕ್ಷ ರೂ. ಮತ್ತು ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಸ್ಪೆಷಲ್ ಬೈಕ್‌ಗೆ 24.64 ಲಕ್ಷ ರೂ. ಇದೆ. ಟ್ರಯಂಫ್ ಟೈಗರ್ 1200 ಜಿಟಿ ಪ್ರೊ ಬೈಕ್‌ನ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ 19.19 ಲಕ್ಷ ರೂ. ಸದ್ಯ ಯುವ ಜನತೆಯ ನಿದ್ದೆಗೆಡಿಸಿರುವ R 1300 GS ಬೈಕ್‌ನ ವಿತರಣೆ ಈ ತಿಂಗಳಲ್ಲೇ ನಡೆಯಲಿದ್ದು, ಪ್ರತಿಸ್ಪರ್ಧಿಗಳಿಗೆ ಠಕ್ಕರ್‌ ಕೊಡಲಿದೆ ಎಂದು ತಜ್ಞರು ಊಹಿಸಿದ್ದಾರೆ.

ಎಂಜಿನ್‌ ಸಾಮರ್ಥ್ಯ

ಈ ಹೊಸ ಬಿಎಂಡಬ್ಲ್ಯು R 1300 GS ಬೈಕ್‌ 1,300cc, ಅವಳಿ-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,750rpmನಲ್ಲಿ 143 bhp ಮತ್ತು 6,500rpmನಲ್ಲಿ 149 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್‌ನ ತೂಕ 237 ಕೆಜಿ. R 1250 GSಗಿಂತ 12 ಕೆಜಿ ಹಗುರವಾಗಿದೆ. ಜತೆಗೆ 19 ಲೀಟರ್ ಫ್ಯೂಯಲ್ ಟ್ಯಾಂಕ್ ಹೊಂದಿದೆ.

ಈ ಬೈಕ್‌ನ ಟಾಪ್-ಸ್ಪೆಕ್ 719 ಟ್ರಾಮುಂಟಾನಾ ಮಾಡೆಲ್‌ ಆಕ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಫ್ರಂಟ್ ಕೊಲಿಷನ್ ವಾರ್ನಿಂಗ್ (Active Cruise Control and Front Collision Warning)ನಂತಹ ರಾಡಾರ್-ನೆರವಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಗಮನ ಸೆಳೆಯುವ ಹಸಿರು / ಹಳದಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯ. ಆದಾಗ್ಯೂ ಇದು ಅಡಾಪ್ಟಿವ್ ರೈಡ್ ಹೈಟ್ (Adaptive Ride Height -ARH) ವೈಶಿಷ್ಟ್ಯವನ್ನು ಒಳಗೊಂಡಿಲ್ಲ. ಟ್ರಿಪಲ್ ಬ್ಲ್ಯಾಕ್ ಮಾಡೆಲ್‌ನಲ್ಲಿ ಮಾತ್ರ ಎಆರ್‌ಎಚ್‌ ಲಭ್ಯ. ಎಲ್ಲ ಮಾದರಿಗಳು ಕ್ರಾಸ್-ಸ್ಪೋಕ್ಡ್ ಟ್ಯೂಬ್‌ಲೆಸ್ ವ್ಹೀಲ್ ಹೊಂದಿವೆ.

ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

R 1300 GSನ ಎಲ್ಲ ಮಾಡೆಲ್‌ಗಳು ಆಕರ್ಷಕ ಕೊಡುಗೆಗಳೊಂದಿಗೆ ಲಭ್ಯ. ಇದರಲ್ಲಿ ಎಲೆಕ್ಟ್ರಾನಿಕ್ ವಿಂಡ್ ಸ್ಕ್ರೀನ್, ಬೈಡಿರೆಕ್ಷನಲ್ ಕ್ವಿಕ್ ಶಿಫ್ಟರ್, ಸೆಂಟರ್ ಸ್ಟ್ಯಾಂಡ್ ಮತ್ತು ಪ್ರೊ ರೈಡಿಂಗ್ ಮೋಡ್‌ಗಳು ಸೇರಿವೆ. ಬೇಸ್ ಲೈಟ್ ವೈಟ್ ಮಾದರಿಯನ್ನು ಹೊರತುಪಡಿಸಿ ಎಲ್ಲ ಮಾಡೆಲ್‌ಗಳು ಟೂರಿಂಗ್ ಪ್ಯಾಕೇಜ್ ಹೊಂದಿವೆ. ಇದರಲ್ಲಿ ಪ್ಯಾನಿಯರ್ ಮೌಂಟ್‌, ಕ್ರೋಮ್ಡ್ ಎಕ್ಸಾಸ್ಟ್ ಹೆಡರ್ ಪೈಪ್, ಅಡಾಪ್ಟಿವ್ ಹೆಡ್ ಲೈಟ್, ನಕಲ್-ಗಾರ್ಡ್ ಎಕ್ಸ್ ಟೆಂಡರ್ ಮತ್ತು ಜಿಪಿಎಸ್ ಡಿವೈಸ್ ಮೌಂಟಿಂಗ್ ಸೇರಿವೆ.

Continue Reading

ಆಟೋಮೊಬೈಲ್

Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ

ಮಾರುತಿ ಸುಜುಕಿ (Maruti Suzuki) ತನ್ನ ಎಸ್ ಸಿಎನ್‌ಜಿ ಶ್ರೇಣಿಗಾಗಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಲು ಸಿದ್ಧವಾಗಿದೆ. ಕಂಪನಿಯು ಬಿಡುಗಡೆ ಮಾಡಿರುವ ಹೊಸ ಸಿಎನ್‌ಜಿ ಟೀಸರ್‌ನಲ್ಲಿ ಮಾರುತಿ ಸುಜುಕಿಯಲ್ಲಿನ ಅತ್ಯಾಕರ್ಷಕ ಬೆಳವಣಿಗೆಗಳ ಮುನ್ನೋಟವನ್ನು ನೀಡುತ್ತಿದೆ. ಸಿಎನ್‌ಜಿ ವಾಹನಗಳ ಕುರಿತಾದ ಮಾರುತಿ ಸುಜುಕಿಯ ಟೀಸರ್‌ ನೀವೇ ನೋಡಿ.

VISTARANEWS.COM


on

By

Maruti Suzuki
Koo

ಭಾರತದ (India) ಮಾರುಕಟ್ಟೆಗೆ (market) ಶೀಘ್ರದಲ್ಲೇ ಪ್ರವೇಶಿಸಲಿರುವ ಮಾರುತಿ ಸುಜುಕಿಯ (Maruti Suzuki) ಸಿಎನ್‌ಜಿ (CNG) ವಾಹನಗಳಲ್ಲಿರುವ ವಿಶೇಷತೆ ಕುರಿತು ಹೊಸ ಟೀಸರ್ (New Teaser) ಅನ್ನು ಬಿಡುಗಡೆ ಮಾಡಿದೆ. ಒಇಎಂ ಬಿಡುಗಡೆ ಮಾಡಿರುವ ಈ ಸಣ್ಣ ವಿಡಿಯೋ ಕ್ಲಿಪ್ ಸಿಎನ್‌ಜಿಯ ಮಾದರಿಗಳ ಮೇಲೆ ಕೇಂದ್ರೀಕರಿಸಿದೆ. ಇದು ಬ್ರ್ಯಾಂಡ್ ಎಸ್‌ಸಿಎನ್‌ಜಿ (S CNG) ಬ್ಯಾಡ್ಜ್‌ನೊಂದಿಗೆ ಬರಲಿದೆ. ಸಿಎನ್‌ಜಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅತ್ಯಾಧುನಿಕ ಸಾಧನಗಳನ್ನು ಹೊಂದಿವೆ.

ಮಾರುತಿ ಸುಜುಕಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದೆ. ಅದರ ಮಾರಾಟ ಸಂಖ್ಯೆಗೆ ದೊಡ್ಡ ಕೊಡುಗೆಯನ್ನು ಸಿಎನ್‌ಜಿ ಪವರ್‌ಟ್ರೇನ್‌ಗಳೊಂದಿಗೆ ಮಾಡೆಲ್‌ಗಳು ಮಾಡುತ್ತವೆ.
ಮಾರುತಿ ಸುಜುಕಿ ತನ್ನ ಹೆಚ್ಚಿನ ಫ್ಲೀಟ್ ಅನ್ನು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಒದಗಿಸುವ ಏಕೈಕ ವಾಹನ ತಯಾರಕ ಕಂಪೆನಿಯಾಗಿದೆ. ಗ್ರಾಹಕರಿಗೆ ಇಂಧನ ಸಾಮರ್ಥ್ಯ ಆಯ್ಕೆಯನ್ನು ನೀಡಲು ಬ್ರ್ಯಾಂಡ್ ತನ್ನ ಹೆಚ್ಚಿನ ಕಾರುಗಳಲ್ಲಿ ಎಸ್ ಸಿಎನ್ ಜಿ ಕಿಟ್‌ಗಳನ್ನು ನೀಡುತ್ತದೆ.

ಈಗ ಮಾರುತಿ ಸುಜುಕಿ ತನ್ನ ಎಸ್ ಸಿಎನ್‌ಜಿ ಶ್ರೇಣಿಗಾಗಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಲು ಸಿದ್ಧವಾಗಿದೆ. ಕಂಪೆನಿಯು ಬಿಡುಗಡೆ ಮಾಡಿರುವ ಹೊಸ ಸಿಎನ್‌ಜಿ ಟೀಸರ್ ನಲ್ಲಿ ಮಾರುತಿ ಸುಜುಕಿಯಲ್ಲಿನ ಅತ್ಯಾಕರ್ಷಕ ಬೆಳವಣಿಗೆಗಳು ನಡೆಯುತ್ತಿವೆ ಎಂಬುದನ್ನು ಸೂಚಿಸುತ್ತದೆ.


ಅವಳಿ ಸಿಲಿಂಡರ್ ನಿರೀಕ್ಷೆ

ಟಾಟಾದಂತಹ ಕಾರು ತಯಾರಕರು ತಮ್ಮ ಸಿಎನ್‌ಜಿ ಕೊಡುಗೆಗಳನ್ನು ಟ್ವಿನ್- ಸಿಲಿಂಡರ್ ತಂತ್ರಜ್ಞಾನ ಮತ್ತು ಸಿಎನ್‌ಜಿಗೆ ಹೊಂದಿಕೆಯಾಗುವ ಎಎಂಟಿ ಗೇರ್‌ಬಾಕ್ಸ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಹೆಚ್ಚಿಸಿದ್ದಾರೆ. ಸಿಎನ್‌ಜಿ ವಾಹನ ವಿಭಾಗದಲ್ಲಿನ ಈ ಸುಧಾರಣೆಯು ಟಾಟಾ ಸಿಎನ್‌ಜಿ ವಾಹನಗಳ ಮಾರಾಟವನ್ನು ಹೆಚ್ಚಿಸಿದೆ. ಮಾರುತಿ ಸುಜುಕಿ ಇನ್ನೂ ಒಂದೇ ಸಿಎನ್‌ಜಿ ಟ್ಯಾಂಕ್ ಅನ್ನು ನೀಡುತ್ತದೆ.

ಈಗಿನ ಟೀಸರ್ ನಲ್ಲಿ ಮಾರುತಿ ಕೆಲವು ಹೊಸ ತಂತ್ರಜ್ಞಾನವನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಸೂಚಿಸುತ್ತದೆ. ಸಿಎನ್ ಜಿ ವಾಹನಗಳಲ್ಲಿ ನೇರ ಸಿಎನ್ ಜಿ ಪ್ರಾರಂಭ ಮತ್ತು ಸ್ವಿಚ್‌ಓವರ್ ವ್ಯವಸ್ಥೆಯೊಂದಿಗೆ ಅವಳಿ ಸಿಲಿಂಡರ್ ತಂತ್ರಜ್ಞಾನವನ್ನು ಬ್ರ್ಯಾಂಡ್ ಪ್ರಾರಂಭಿಸುತ್ತದೆ ಎಂಬುದನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

ಅವಳಿ ಸಿಲಿಂಡರ್ ತಂತ್ರಜ್ಞಾನವು ಎರಡು 25- 30 ಲೀಟರ್ ಸಿಲಿಂಡರ್‌ಗಳನ್ನು ಸ್ಪೇರ್ ವೀಲ್‌ನ ಜಾಗದಲ್ಲಿ ಇರಿಸುವ ನಿರೀಕ್ಷೆಯಿದೆ. ಬಿಡಿ ಚಕ್ರವನ್ನು ಬೂಟ್ ಅಡಿಯಲ್ಲಿ ಇರಿಸಬಹುದು. ಆದರೆ, ಹೊಸ ತಂತ್ರಜ್ಞಾನದಲ್ಲಿ ಏನನ್ನು ತರಲಿದೆ ಎಂಬುದನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ಅರೆನಾ ಔಟ್‌ಲೆಟ್‌ಗಳ ಮೂಲಕ ಮಾರಾಟವಾಗುವ ಮಾದರಿಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಡಿಜೈರ್, ಆಲ್ಟೊ, ಎರ್ಟಿಗಾ, ವ್ಯಾಗನ್ಆರ್, ಸೆಲೆರಿಯೊ, ಇಕೊ, ಎಸ್-ಪ್ರೆಸ್ಸೊ ಮತ್ತು ಬ್ರೆಝಾ ಸೇರಿವೆ. ಏತನ್ಮಧ್ಯೆ, ಫ್ರಾಂಕ್ಸ್, ಬಲೆನೊ, ಗ್ರ್ಯಾಂಡ್ ವಿಟಾರಾ ಮತ್ತು ಎಕ್ಸ್‌ಎಲ್ 6 ನಂತಹ ಇತರ ಮಾದರಿಗಳನ್ನು ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

Continue Reading
Advertisement
Teachers Transfer
ಪ್ರಮುಖ ಸುದ್ದಿ4 hours ago

Teachers Transfer: ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಟ; ಕಡ್ಡಾಯ, ಹೆಚ್ಚುವರಿ‌ ಟ್ರಾನ್ಸ್‌ಫರ್ ಇಲ್ಲ, ಕೋರಿಕೆ ವರ್ಗ ಮಾತ್ರ

T20 World Cup 2024
T20 ವಿಶ್ವಕಪ್5 hours ago

T20 World Cup 2024: ಭಾರತ-ಕೆನಡಾ ಪಂದ್ಯ ಮಳೆಯಿಂದ ರದ್ದು; ಅಗ್ರಸ್ಥಾನಿಯಾಗಿ ರೋಹಿತ್‌ ಪಡೆ ಸೂಪರ್‌ 8ಕ್ಕೆ ಎಂಟ್ರಿ

Hiriya vidwamsa Sagri Raghavendra Upadhyaya passed away
ಶ್ರದ್ಧಾಂಜಲಿ6 hours ago

Sagri Raghavendra Upadhyaya: ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ ನಿಧನ

Government has no money to clean tankers no ability to provide clean drinking water says R Ashok
ಪ್ರಮುಖ ಸುದ್ದಿ6 hours ago

R Ashok: ಟ್ಯಾಂಕರ್ ಸ್ವಚ್ಛಗೊಳಿಸಲೂ ಸಿದ್ದು ಸರ್ಕಾರದ ಬಳಿ ಹಣವಿಲ್ಲ; ಆರ್. ಅಶೋಕ್‌ ಆಕ್ರೋಶ

Union Minister Pralhad Joshi statement about increase in petrol and diesel prices in the state
ಕರ್ನಾಟಕ6 hours ago

Pralhad Joshi: ತೈಲ ಬೆಲೆ ಏರಿಸಿ ಕರ್ನಾಟಕದವರ ಕೈಗೆ ಗ್ಯಾರಂಟಿ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ

Bribe Case
ಕ್ರೈಂ6 hours ago

Bribe Case: ಕಸ ಗುಡಿಸುತ್ತಲೇ ಉನ್ನತ ಹುದ್ದೆಗೇರಿದ್ದ ಮಹಿಳೆ ಕಸ ಗುಡಿಸುವವರಿಂದಲೇ ಲಂಚ ಸ್ವೀಕರಿಸುವಾಗ ಬಂಧನ!

Minister dr G Parameshwar inaugurated the hasiru grama programme in Koratagere
ತುಮಕೂರು6 hours ago

Koratagere News: ಹಸಿರೇ ಉಸಿರು, ಹಸಿರಿದ್ದೆಡೆ ಮಾನವನ ಸರ್ವಾಂಗಿಣ ಪ್ರಗತಿ: ಸಚಿವ ಜಿ. ಪರಮೇಶ್ವರ್‌

Giorgia Meloni
ವಿದೇಶ6 hours ago

Giorgia Meloni: ಇಟಲಿ ಪ್ರಧಾನಿ ಮೆಲೋನಿ ಕಾರ್ಮಿಕ ಮಹಿಳೆಯ ಮಗಳು! ಅವರ ಕುರಿತ ಕುತೂಹಲಕರ ಸಂಗತಿಗಳಿವು

Sapthami Gowda
ಪ್ರಮುಖ ಸುದ್ದಿ6 hours ago

Sapthami Gowda: ಯುವ ಪತ್ನಿ ವಿರುದ್ಧ ಸಪ್ತಮಿಗೌಡ ಮಾನಹಾನಿ ಕೇಸ್; ನಟಿ ಹೆಸರು ಎಲ್ಲಿಯೂ ಬಳಸದಂತೆ ಕೋರ್ಟ್ ಆದೇಶ

Gold Heist
ವಿದೇಶ6 hours ago

Gold Heist: ಜ್ಯುವೆಲರಿ ಶಾಪ್‌ಗೆ ನುಗ್ಗಿ ಚಿನ್ನ ಕದ್ದ 20 ಕಳ್ಳರು; ಸಿನಿಮಾ ಸ್ಟೈಲಲ್ಲೇ ದರೋಡೆ ಮಾಡಿದ ವಿಡಿಯೊ ಇಲ್ಲಿದೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ13 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 day ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ1 day ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌