Bengaluru tour : ಬೆಂಗಳೂರು ಸುತ್ತಮುತ್ತ ನೀವು ನೋಡಲೇಬೇಕಾದ ಟಾಪ್‌ 10 ಪ್ರವಾಸಿ ತಾಣಗಳಿವು - Vistara News

ಪ್ರವಾಸ

Bengaluru tour : ಬೆಂಗಳೂರು ಸುತ್ತಮುತ್ತ ನೀವು ನೋಡಲೇಬೇಕಾದ ಟಾಪ್‌ 10 ಪ್ರವಾಸಿ ತಾಣಗಳಿವು

ಉದ್ಯಾನ ನಗರಿ ಬೆಂಗಳೂರು ಸುತ್ತಮುತ್ತ ನೀವು ನೋಡಲೇಬೇಕಾದ ಟಾಪ್‌ 10 ಪ್ರವಾಸಿ ತಾಣಗಳ (Bengaluru tour) ವಿವರ ಇಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು ಭಾರತದಲ್ಲಿಯೇ ಅತ್ಯಂತ ಆಕರ್ಷಣೀಯ ನಗರ. ಈ ಉದ್ಯಾನ ನಗರಿ ನೋಡುವುದಕ್ಕೆ ದೇಶ ಮಾತ್ರವಲ್ಲದೆ ವಿದೇಶಿಗರೂ ಕೂಡ ಆಗಮಿಸುವುದು ವಿಶೇಷ. ಕೆಂಪೇಗೌಡರು ನಿರ್ಮಿಸಿದ ಈ ಕರುನಾಡ ರಾಜಧಾನಿಯಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೇನೂ ಕಡಿಮೆಯಿಲ್ಲ. ಲಾಲ್‌ಬಾಗ್‌, ಕಬ್ಬನ್‌ಪಾರ್ಕ್‌ನಿಂದ ಹಿಡಿದು ನಂದಿಬೆಟ್ಟದವರೆಗೆ ಹಲವಾರು ಅದ್ಭುತ ಸ್ಥಳಗಳು ಇಲ್ಲಿವೆ. ಈ ನಮ್ಮ ಬೆಂಗಳೂರಿನಲ್ಲಿ ನೀವು ನೋಡಲೇಬೇಕಾದ ಟಾಪ್‌ 10 ಪ್ರವಾಸಿ ತಾಣಗಳ (Bengaluru tour) ವಿವರ ಇಲ್ಲಿದೆ.

ಲಾಲ್‌ಬಾಗ್‌


ಇದು ನಗರದ ಅತ್ಯಂತ ಹಳೆಯ ಉದ್ಯಾನವನ. ಇದು ಪ್ರವಾಸಿಗರಿಗೆ ಬೆಂಗಳೂರಿನಲ್ಲಿ ಭೇಟಿ ನೀಡಲು ಅತ್ಯಂತ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ. ವಿಶಿಷ್ಟ ಜಾತಿಯ ಸಸ್ಯಗಳು, ಹೂವಿನ ಗಿಡಗಳು ಹಾಗೂ ಮರಗಳನ್ನು ನೀವಿಲ್ಲಿ ನೋಡಬಹುದು. ಪ್ರತಿ ವರ್ಷ ಗಣರಾಜ್ಯೋತ್ಸವದ ದಿನದ ಸಮಯದಲ್ಲಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ವಿಶೇಷವಾದ ಪುಷ್ಪ ಪ್ರದರ್ಶನ ಇಲ್ಲಿ ನಡೆಯುತ್ತದೆ.

ನಂದಿಬೆಟ್ಟ


ನಂದಿ ಬೆಟ್ಟಗಳು ಬೆಂಗಳೂರಿಗರಿಗೆ ವಾರಾಂತ್ಯದ ಸ್ಥಳವಾಗಿದೆ. ನೀವು ಪ್ರಕೃತಿ ಪ್ರೇಮಿಗಳಾಗಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಚಳಿಗಾಲದ ಸಮಯದಲ್ಲಂತೂ ಮಂಜು ಕವಿದಿರುವ ಬೆಟ್ಟವನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಇದು ಒಂದು ರೀತಿಯಲ್ಲಿ ಬೆಂಗಳೂರಿನಲ್ಲಿರುವ ಊಟಿ ಎಂದೇ ಹೇಳಬಹುದು. ಬೆಂಗಳೂರಿನಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿರುವ ನಂದಿ ಬೆಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ.

ವಂಡರ್ಲಾ


ಬೆಂಗಳೂರಿನಲ್ಲಿ ಮನೋರಂಜನೆ ಬೇಕೆಂದರೆ ನೀವು ವಂಡರ್ಲಾಕ್ಕೆ ಭೇಟಿ ನೀಡಬಹುದು. 50ಕ್ಕೂ ಹೆಚ್ಚು ವಿಶೇಷ ರೀತಿಯ ಸಾಹಸಮಯ ಆಟಗಳು ಇಲ್ಲಿವೆ. ಹೆಚ್ಚು ಧೈರ್ಯವಂತರಾಗಿದ್ದರೆ ರೋಲರ್‌ ಕೋಸ್ಟರ್‌ಗಳನ್ನು ಆಡಬಹುದು. ನೀರಿನಲ್ಲಿ ಆಟವಾಡಲು ಇಷ್ಟಪಡುವವರಾದರೆ ಅನೇಕ ವಾಟರ್‌ ಗೇಮ್‌ಗಳೂ ಇಲ್ಲಿವೆ. ರೈನ್‌ ಡಿಸ್ಕೋ ಸೇರಿ ವಿಶೇಷ ರೀತಿಯ ಆಟಗಳು ಇಲ್ಲಿವೆ.

ಕಬ್ಬನ್‌ ಪಾರ್ಕ್‌


ಬೆಂಗಳೂರಿಗರ ಆಲ್‌ ಟೈಮ್‌ ಫೇವರಿಟ್‌ ಸ್ಥಳಗಳಲ್ಲಿ ಕಬ್ಬನ್‌ ಪಾರ್ಕ್‌ ಕೂಡ ಒಂದು. ಮೈಸೂರಿನ ಮುಖ್ಯ ಇಂಜಿನಿಯರ್ ಆಗಿದ್ದ ರಿಚರ್ಡ್ ಸ್ಯಾಂಕಿ ಈ ಪಾರ್ಕ್‌ ಅನ್ನು ನಿರ್ಮಿಸಿದ್ದು. ಈ ಕಬ್ಬನ್‌ಪಾರ್ಕ್ 300 ಎಕರೆ ಪ್ರದೇಶಕ್ಕೆ ಹರಡಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಅದು ರಾಣಿ ವಿಕ್ಟೋರಿಯಾ, ಸರ್ ಮಾರ್ಕ್ ಕಬ್ಬನ್, ಚಾಮರಾಜೇಂದ್ರ ಒಡೆಯರ್ ಸೇರಿ ಹಲವು ಜನಪ್ರಿಯ ವ್ಯಕ್ತಿಗಳ ಪ್ರತಿಮೆಗಳು. ಡಾಲ್ ಮ್ಯೂಸಿಯಂ, ಚೆಷೈರ್ ಡೈಯರ್ ಮೆಮೋರಿಯಲ್ ಹಾಲ್, ಸರ್ಕಾರಿ ವಸ್ತುಸಂಗ್ರಹಾಲಯ ಸೇರಿ ಹಲವು ಆಕರ್ಷಣೆಗಳು ಇಲ್ಲಿವೆ.

ಇಸ್ಕಾನ್‌ ದೇಗುಲ


ಬೆಂಗಳೂರಿನ ಇಸ್ಕಾನ್ ದೇವಾಲಯವನ್ನು ಶ್ರೀ ರಾಧಾ ಕೃಷ್ಣ ದೇವಾಲಯ ಎಂದೂ ಕರೆಯಲಾಗುತ್ತದೆ. ಇದು ವಿಶ್ವದ ಅತಿದೊಡ್ಡ ಇಸ್ಕಾನ್ ದೇವಾಲಯವಾಗಿದೆ. ನಗರದ ರಾಜಾಜಿನಗರ ಭಾಗದಲ್ಲಿರುವ ಈ ದೇವಾಲಯವು ತನ್ನ ವಿಶಿಷ್ಟ ವಾಸ್ತುಶಿಲ್ಪದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇಗುಲಕ್ಕೆ ಭೇಟಿ ನೀಡುವವರು ಪ್ರಸಾದ ಸ್ವೀಕರಿಸಿ, ಆಧ್ಯಾತ್ಮಕ್ಕೆ ಸಂಬಂಧಿಸಿರುವ ಪುಸ್ತಕಗಳನ್ನು ಖರೀದಿಸಬಹುದು.

ಬೆಂಗಳೂರು ಅರಮನೆ


19ನೇ ಶತಮಾನದಲ್ಲಿ ಚಾಮರಾಜ ಒಡೆಯರ್ ಅವರು ಈ ಅರಮನೆಯನ್ನು ನಿರ್ಮಿಸಿದರು. ಟ್ಯೂಡರ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಈ ಅರಮನೆಯು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್‌ನಿಂದ ಪ್ರೇರಿತವಾಗಿದೆ. ಅರಮನೆಯು 430 ಎಕರೆಗಳಷ್ಟು ವಿಶಾಲವಾದ ಉದ್ಯಾನವನಗಳಿಂದ ಆವೃತವಾಗಿದೆ. ಬೆಂಗಳೂರಿನ ಹಲವು ಅದ್ಧೂರಿ ಕಾರ್ಯಕ್ರಮಗಳು, ಸಂಗೀತ ಕಚೇರಿಗಳು, ಪ್ರದರ್ಶನಗಳು ನಡೆಯುವ ಸ್ಥಳ ಇದಾಗಿದೆ. ಅರಮನೆಯ ಒಳಾಂಗಣವು ರಾಜಮನೆತನದವರು ತಮ್ಮ ಜೀವನವನ್ನು ಹೇಗೆ ನಡೆಸುತ್ತಿದ್ದರು ಎಂಬುದರ ಒಳನೋಟವನ್ನು ನಿಮಗೆ ನೀಡುತ್ತದೆ.

ಟಿಪ್ಪು ಸುಲ್ತಾನ್‌ ಅರಮನೆ


ಈ ಅರಮನೆಯು ಭಾರತದಲ್ಲಿನ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಒಂದು ಉತ್ತಮ ಉದಾಹರಣೆ. ಇದು ಆಗಿನ ಮೈಸೂರು ದೊರೆ ಟಿಪ್ಪು ಸುಲ್ತಾನನ ಬೇಸಿಗೆ ನಿವಾಸವಾಗಿತ್ತು. ಬೆಂಗಳೂರು ಕೋಟೆಯೊಳಗೆ ಹೈದರ್ ಅಲಿ ಅವರು ಈ ಅರಮನೆಯ ನಿರ್ಮಾಣವನ್ನು ಪ್ರಾರಂಭಿಸಿದರು. ನಂತರ ಇದನ್ನು 1791ರಲ್ಲಿ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಪೂರ್ಣಗೊಳಿಸಲಾಯಿತು. ಅರಮನೆಯ ಕುಶಲತೆ ಮತ್ತು ಶಿಲ್ಪಕಲೆಯು ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುವಂತಿದೆ.

ವಿಧಾನ ಸೌಧ


ಕಬ್ಬನ್‌ಪಾರ್ಕ್‌ ಹತ್ತಿರದಲ್ಲೇ ಇರುವ ವಿಧಾನಸೌಧ 1956ರಲ್ಲಿ ನಿರ್ಮಾಣವಾಯಿತು. ಈ ಕಟ್ಟಡವು ನವ-ದ್ರಾವಿಡ ವಾಸ್ತುಶಿಲ್ಪದ ಉದಾಹರಣೆಯಾಗಿದೆ. ವಿಧಾನಸೌಧದ ನಾಲ್ಕು ಮೂಲೆಗಳಲ್ಲಿ ನಾಲ್ಕು ಗುಮ್ಮಟಗಳಿವೆ. ಇದು ಕರ್ನಾಟಕ ಸರ್ಕಾರದ ವಿಧಾನಸಭೆ ಹಾಗೂ ಅನೇಕ ಇತರ ಸರ್ಕಾರಿ ಇಲಾಖೆಗಳು ಇದರಲ್ಲಿವೆ. ಈ ಕಟ್ಟಡದ ಒಳಗೆ ಜನರಿಗೆ ಪ್ರವೇಶವಿಲ್ಲವಾದರೂ ಸೌಧದ ಎದುರು ನಿಂತು ವೀಕ್ಷಣೆ ಮಾಡಬಹುದು.

ಕರ್ನಾಟಕ ಚಿತ್ರಕಲಾ ಪರಿಷತ್ತು


ನೀವು ಕಲಾತ್ಮಕ ವ್ಯಕ್ತಿಯಾಗಿದ್ದು, ಕಲೆಯನ್ನು ಪ್ರೀತಿಸುವವರಾದರೆ ಬೆಂಗಳೂರಿನ ಪ್ರಸಿದ್ಧ ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಬೇಕು. ಈ ಸಂಕೀರ್ಣವು ವರ್ಣಚಿತ್ರಗಳು, ಶಿಲ್ಪಗಳು ಮತ್ತು ಜಾನಪದ ಕಲೆಗಳ ವಿಸ್ತಾರವಾದ ಸಂಗ್ರಹವನ್ನು ಹೊಂದಿದೆ. ಇದರಲ್ಲಿ ಹಲವಾರು ರೀತಿಯ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿರುತ್ತದೆ ಹಾಗೂ ಅಲ್ಲಿಗೆ ಪ್ರಪಂಚದಾದ್ಯಂತದ ಪ್ರವಾಸಿಗರು ಭೇಟಿ ನೀಡುತ್ತಾರೆ.

ಜವಾಹರಲಾಲ್ ನೆಹರು ತಾರಾಲಯ


ಜವಾಹರಲಾಲ್ ನೆಹರು ತಾರಾಲಯವು ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾದ ಮತ್ತೊಂದು ಆಕರ್ಷಣೀಯ ಸ್ಥಳವಾಗಿದೆ. ಇದೊಂದು ಖಗೋಳಶಾಸ್ತ್ರದ ಕೇಂದ್ರವಾಗಿದೆ. ಆಗಸದಲ್ಲಿ ಉಂಟಾಗುವ ವಿಸ್ಮಯಗಳ ಮಾದರಿಯನ್ನು ನೀವಿಲ್ಲಿ ಕಾಣಬಹುದು. ವರ್ಷವಿಡೀ ತಾರಾಲಯದಲ್ಲಿ ಅನೇಕ ಕಾರ್ಯಾಗಾರಗಳು ಮತ್ತು ಪ್ರದರ್ಶನಗಳು ನಡೆಯುತ್ತಿರುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!

Summer Tour: ಬೇಸಿಗೆ ರಜೆಯನ್ನು ಬೆಟ್ಟಗುಡ್ಡಗಳ ನಡುವೆ ಪ್ರಶಾಂತವಾದ ಸ್ಥಳದಲ್ಲಿ ಕಳೆಯುವ ಆಸೆ ಇದೆಯೇ ಹಾಗಿದ್ದರೆ ಇಲ್ಲಿ ಹೇಳಿರುವ ಐದು ಪ್ರದೇಶಗಳಿಗೆ ಪ್ರವಾಸ ಹೊರಡುವ ಪ್ಲಾನ್ ಈಗಲೇ ಮಾಡಿಕೊಳ್ಳಿ.

VISTARANEWS.COM


on

By

Summer Tour
Koo

ಭಾರತದಲ್ಲಿ (india) ಹಲವಾರು ಸುಂದರ, ಮನೋಹರ ತಾಣಗಳಿರುವಂತೆ ರುದ್ರರಮಣೀಯ ಸ್ಥಳಗಳೂ ಇವೆ. ಬೇಸಿಗೆಯ ರಜೆಯನ್ನು (Summer Tour) ಬೆಟ್ಟ ಗುಡ್ಡಗಳ ನಡುವೆ ಕಳೆಯಬೇಕು, ನಗರದ ಜಂಜಾಟದಿಂದ ದೂರವಾಗಿ ಮನಸ್ಸಿಗೆ ಶಾಂತಿ ಸೀಗುವ ಸ್ಥಳದಲ್ಲಿ ಕೆಲಕಾಲ ಇದ್ದು ಬರಬೇಕು ಎನ್ನುವ ಯೋಚನೆ ಇದ್ದರೆ ಭಾರತದ ಈ ಐದು ಗಿರಿಧಾಮಗಳಿಗೊಮ್ಮೆಯಾದರೂ (Hill Stations) ಭೇಟಿ ನೀಡಬಹುದು.

ಭಾರತದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಅದರಲ್ಲಿ ಕೆಲವು ಜೀವನದಲ್ಲಿ ರೋಮಾಂಚಕಾರಿ ಅನುಭವವನ್ನು ನೀಡುತ್ತದೆ. ನಾವು ರಜೆಯ ಬಗ್ಗೆ ಯೋಚಿಸಿದಾಗ ನಮಗೆ ಬೇಕಾಗಿರುವುದು ಜನಸಂದಣಿಯಿಲ್ಲದ ಸ್ಥಳ, ರುಚಿಕರವಾದ ಆಹಾರ, ಸಮ್ಮೋಹನಗೊಳಿಸುವ ನೋಟಗಳು ಮತ್ತು ಶಾಂತ ವಾತಾವರಣ.

29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಿರುವ ಭಾರತದಲ್ಲಿ ಸುಂದರವಾದ ವಿಹಾರ ತಾಣಗಳು ಹಲವಾರು ಇವೆ. ಅವುಗಳಲ್ಲಿ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಐದು ಗಿರಿಧಾಮಗಳು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Haridwara Travel: ಹರಿದ್ವಾರಕ್ಕೆ ಭೇಟಿ ನೀಡಿದಾಗ ಈ ಸ‍್ಥಳಗಳನ್ನು ಮಿಸ್ ಮಾಡದೇ ನೋಡಿ!


ಮಾವ್ಲಿನ್ನಾಂಗ್ (Mawlynnong)

‘ಏಷ್ಯಾದ ಸ್ವಚ್ಛ ಗ್ರಾಮ’ ಎಂದು ಕರೆಯಲ್ಪಡುವ ಮೇಘಾಲಯದ ಮಾವ್ಲಿನ್ನಾಂಗ್ ಪರಿಸರ ಸ್ನೇಹಿ ಜೀವನ ಹೊಂದಿದೆ. ನಿತ್ಯಹರಿದ್ವರ್ಣ ಪರಿಸರ, ಧುಮ್ಮಿಕ್ಕುವ ತೊರೆಗಳು, ಹಣ್ಣಿನ ತೋಟಗಳು ಮತ್ತು ತೂಗಾಡುವ ತಾಳೆ ಮರಗಳು ಮೇಘಾಲಯದ ಹೃದಯಭಾಗದಲ್ಲಿ ರಜೆಯ ಸುಂದರ ಅನುಭವವನ್ನು ನೀಡುತ್ತವೆ. ನೋಹ್ವೆಟ್ ಲಿವಿಂಗ್ ರೂಟ್ ಬ್ರಿಡ್ಜ್ ಕೂಡ ಈ ಸ್ಥಳದಲ್ಲಿದೆ. ಇಲ್ಲಿನ ತ್ಯಾಜ್ಯವನ್ನು ಬಿದಿರಿನ ಡಸ್ಟ್‌ಬಿನ್‌ಗಳಲ್ಲಿ ಸಂಗ್ರಹಿಸಿ ಅನಂತರ ಗೊಬ್ಬರವಾಗಿ ಬಳಸುವುದರಿಂದ ಮಾವ್ಲಿನ್ನಾಂಗ್ ಸ್ವಚ್ಛತೆಗೆ ಹೆಸರುವಾಸಿಯಾಗಿದೆ.

ನೊಹ್ವೆಟ್‌ನ ಲಿವಿಂಗ್ ರೂಟ್ ಬ್ರಿಡ್ಜ್ ಇಲ್ಲಿಯ ಪ್ರಮುಖ ಆಕರ್ಷಣೆ ಮಾತ್ರವಲ್ಲ ಮಾವ್ಲಿನ್ನಾಂಗ್‌ನಲ್ಲಿರುವ ಎಪಿಫ್ಯಾನಿ ಚರ್ಚ್ ಒಂದು ಶತಮಾನಕ್ಕೂ ಹೆಚ್ಚು ಹಳೆಯದಾಗಿದೆ. ಈ ಸೊಂಪಾದ ಮತ್ತು ಹಸಿರು ಉಷ್ಣವಲಯದ ಸ್ವರ್ಗದ ಮಧ್ಯದಲ್ಲಿ ಐರೋಪ್ಯ ವಾಸ್ತುಶಿಲ್ಪದ ಒಂದು ಸುಂದರ ಭಾಗವಾಗಿದೆ. ಚರ್ಚ್‌ಗೆ ಹತ್ತಿರವಿರುವ ಮರದ ಮನೆಗಳನ್ನು ಏರಿ ದೂರದವರೆಗೂ ಬಯಲು ಪ್ರದೇಶಗಳನ್ನು ಕಾಣಬಹುದು.


ಹಳೇಬೀಡು (Halebidu)

ಹಳೇಬೀಡು ಕರ್ನಾಟಕದ ಹಾಸನ ಜಿಲ್ಲೆಯಲ್ಲಿದೆ. ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಹಾಸನದ ಒಂದು ಸಣ್ಣ ಪಟ್ಟಣವಾಗಿದ್ದು, ಹೊಯ್ಸಳ ಸಾಮ್ರಾಜ್ಯದ ರಾಜರಾಜಧಾನಿಯಾಗಿತ್ತು. ಈ ಸ್ಥಳವು ತನ್ನ ಭವ್ಯವಾದ ದೇವಾಲಯಗಳಿಗೆ ಹೆಸರುವಾಸಿಯಾಗಿರುವುದರಿಂದ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬೇಲೂರಿನಿಂದ ಕೇವಲ 17 ಕಿ.ಮೀ. ದೂರದಲ್ಲಿರುವ ಹೊಯ್ಸಳರ ಪ್ರಾಚೀನ ರಾಜಧಾನಿ ಹಳೇಬೀಡು. ಕ್ರಿ.ಶ 1121 ರಲ್ಲಿ ನಿರ್ಮಿಸಲಾದ ಹೊಯ್ಸಳೇಶ್ವರ ಮತ್ತು ಕೇದಾರೇಶ್ವರದ ಸುಂದರವಾದ ಹೊಯ್ಸಳ ದೇವಾಲಯಗಳಿಗೆ ಇದು ಹೆಸರುವಾಸಿಯಾಗಿದೆ. ಲೋಹದಂತಹ ಹೊಳಪು ಹೊಂದಿರುವ ಸೂಕ್ಷ್ಮ ಮತ್ತು ಸಂಕೀರ್ಣವಾದ ಕೆತ್ತನೆಗಳು ಪ್ರವಾಸಿಗರನ್ನು ಮಂತ್ರಮುಗ್ಧರಾಗುವಂತೆ ಮಾಡುತ್ತದೆ.


ಕುದುರೆಮುಖ (Kudremukh)

ಕರ್ನಾಟಕದ ಕುದುರೆಮುಖ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಪರ್ವತ ಶ್ರೇಣಿ. ಇದು ಮಲಬಾರ್ ಟ್ರೋಗನ್, ಮಲಬಾರ್ ಶಿಳ್ಳೆ ಥ್ರಷ್ ಮತ್ತು ಸಾಮ್ರಾಜ್ಯಶಾಹಿ ಪಾರಿವಾಳದಂತಹ ವಿವಿಧ ಪಕ್ಷಿಗಳಿಗೆ ನೆಲೆಯಾಗಿದೆ. ಉಷ್ಣವಲಯದ ಜೈವಿಕ ಶ್ರೀಮಂತಿಕೆಯಿಂದಾಗಿ ಈ ಸ್ಥಳವನ್ನು ವಿಶ್ವದ 34 ಜೈವಿಕ ಹಾಟ್‌ಸ್ಪಾಟ್‌ಗಳಲ್ಲಿ ಒಂದೆಂದು ಘೋಷಿಸಲಾಗಿದೆ.

ಪರ್ವತದ ಬದಿಯು ಕುದುರೆಯ ಮುಖದ ಆಕಾರವನ್ನು ಹೋಲುವುದರಿಂದ ಇಲ್ಲಿಗೆ ಕುದುರೆಮುಖ ಎಂದು ಹೆಸರಾಗಿದೆ. ಈ ಶಿಖರವು ಸಂಸೆಗೆ ಹತ್ತಿರವಾಗಿರುವುದರಿಂದ ಐತಿಹಾಸಿಕ ಪುಟಗಳಲ್ಲಿ ‘ಸಂಸೆಪರ್ವತ’ ಎಂದೂ ಕರೆಯಲಾಗಿದೆ.


ಖಜ್ಜಿಯಾರ್ (Khajjiar)

ಖಜ್ಜಿಯಾರ್ ಹಿಮಾಚಲ ಪ್ರದೇಶದಲ್ಲಿ ಒಂದು ಗುಪ್ತ ರತ್ನವಾಗಿದೆ. ಇದು ಚಂಬಾ ಕಣಿವೆಯಲ್ಲಿರುವ ದೇವದಾರು-ಹೊದಿಕೆಯ ತಟ್ಟೆ-ಆಕಾರದ ಹಿಮಾಲಯನ್ ಪಟ್ಟಣವಾಗಿದೆ. ಸುಂದರ ಪರಿಸರಗಳು, ದಟ್ಟಣೆಯ ಹಸಿರು ಮತ್ತು ಸಾಹಸಗಳಿಗಾಗಿ ಜನಪ್ರಿಯ ಸ್ಥಳ ಇದಾಗಿದೆ.

ಖಜ್ಜಿಯಾರ್ ಅನ್ನು ಭಾರತದ ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲಾಗುತ್ತದೆ. ದಟ್ಟವಾದ ಪೈನ್ ಕಾಡುಗಳು, ಸೊಂಪಾದ ಹುಲ್ಲುಗಾವಲುಗಳು ಮತ್ತು ಹಿಮದಿಂದ ಆವೃತವಾದ ಪರ್ವತಗಳಿಂದ ಆವೃತವಾಗಿರುವ ಖಜ್ಜಿಯಾರ್ ಪ್ರತಿಯೊಬ್ಬ ಪ್ರವಾಸಿಗನು ಇಷ್ಟಪಡುವಂತಿದೆ.


ತವಾಂಗ್ (Tawang)

ತವಾಂಗ್ ಅರುಣಾಚಲ ಪ್ರದೇಶದ ಪಶ್ಚಿಮ ಭಾಗದಲ್ಲಿದ್ದು ಟಿಬೆಟ್‌ನ ಲಾಸಾದ ಹೊರಗೆ ವಿಶ್ವದ ಅತಿದೊಡ್ಡ ಬೌದ್ಧ ಮಠ ಎಂದು ಕರೆಯಲಾಗುತ್ತದೆ. 10,000 ಅಡಿ ಎತ್ತರದಲ್ಲಿರುವ ತವಾಂಗ್ 400 ವರ್ಷಗಳಷ್ಟು ಹಳೆಯದಾದ ಬೌದ್ಧ ಮಠಕ್ಕೆ ವಿಶ್ವ ಪ್ರಸಿದ್ಧವಾಗಿದೆ. ಐದನೇ ದಲೈ ಲಾಮಾ ಅವರ ಸಮಕಾಲೀನರಾದ ಸನ್ಯಾಸಿ ಮೇರಾ ಲಾಮಾ ಅವರು ಇಲ್ಲಿ ಮಠವನ್ನು ಸ್ಥಾಪಿಸಿದರು. ಆರನೇ ದಲೈ ಲಾಮಾ ಇಲ್ಲಿ ಜನಿಸಿದ್ದರು. ಪಟ್ಟಣದ ಹೃದಯಭಾಗದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಇದು ನೆಲೆಯಾಗಿದೆ.

Continue Reading

ಪ್ರವಾಸ

Special Food In Kashi: ನೀವು ಕಾಶಿಗೆ ಹೋದರೆ ಈ ತಿಂಡಿಗಳ ರುಚಿ ನೋಡಲು ಮರೆಯದಿರಿ!

ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಈ ಕುರಿತ ಮಾಹಿತಿ (Special Food In Kashi) ಇಲ್ಲಿದೆ.

VISTARANEWS.COM


on

Special Food In Kashi
Koo

ಕಾಶಿ ಅಥವಾ ವಾರಣಾಸಿಗೆ ಜೀವನದಲ್ಲೊಮ್ಮೆಯಾದರೂ ಹೋಗಬೇಕು, ಕಾಶಿ ವಿಶ್ವನಾಥನ ದರ್ಶನ ಮಾಡಬೇಕು. ಗಂಗೆಯನ್ನು ಕಂಡು ಕೈಮುಗಿದು ಮುಳುಗೆದ್ದು ಗಂಗಾರತಿಯನ್ನು ನೋಡಿ ಈ ಬದುಕು ಧನ್ಯ ಎಂದು ನೆಮ್ಮದಿ ಪಡೆಯಬೇಕು ಎಂಬುದು ಬಹುತೇಕ ಹಿಂದೂಗಳ ಜೀವಿತಾವಧಿಯ ಕನಸು. ಹಿಂದೆಲ್ಲ ಕಾಶಿಗೆ ಹೋಗುವುದೇ ಜೀವಿತಾವಧಿಯ ಅತ್ಯುನ್ನತವಾದ ದೊಡ್ಡ ಕನಸು. ಬಹಳ ದೂರ ಎಂಬ ಕಾರಣದಿಂದ ಹಿಡಿದು ಬದುಕಿನ ಜಂಜಡಗಳನ್ನೆಲ್ಲ ಮುಗಿಸಿದ ಮೇಲೆ ವೃದ್ಧಾಪ್ಯ ಸಮೀಪಿಸುವ ಹೊತ್ತಿಗೆ ಕಾಶಿಗೊಮ್ಮೆ ಹೇಗಾದರೂ ಮಾಡಿ ಹೋಗಿ ನೋಡಿ ಪ್ರಾಣ ಬಿಡುತ್ತೇನೆ ಎಂಬ ಸ್ಥಿತಿ ಹಲವರದ್ದಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜಗತ್ತು ಬದಲಾಗಿದೆ. ಕಾಶಿಯನ್ನು ನೋಡಲು ವೃದಾಪ್ಯದವರೆಗೆ ಕಾಯುವ ತಾಳ್ಮೆ ಯಾರಿಗೂ ಇಲ್ಲ. ಅಂದುಕೊಂಡ ತಕ್ಷಣ ವಿಮಾನದಲ್ಲೋ, ರೈಲಿನಲ್ಲೋ ಯುವಜನರೂ ಕೂಡಾ ಕಾಶಿಗೆ ಹೋಗಿ ಧನ್ಯರಾಗುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಕಾಶಿಯ ವಿಶ್ವನಾಥನನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಷ್ಟೇ ಅಲ್ಲ, ಯುವಜನರ ಸಂಖ್ಯೆಯಲ್ಲಿಯೂ ಭಾರೀ ಏರಿಕೆಯಾಗಿದೆ.
ಆದರೆ, ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಬನ್ನಿ, ಕಾಶಿಯ ಗಲ್ಲಿಗಳಲ್ಲೊಮ್ಮೆ ಸುತ್ತಾಡಿ, ಇಲ್ಲಿ ಬಂದರೆ ತಿನ್ನಲೇಬೇಕಾದ ತಿನಿಸುಗಳು ಯಾವುವು ಎಂಬುದನ್ನು ನೋಡಿಕೊಂಡು (Special Food In Kashi) ಬರೋಣ.

Kachodi Subji

ಕಚೋಡಿ ಸಬ್ಜಿ

ಕಾಶಿಯಲ್ಲಿ ನೀವು ಯಾವದೇ ಹೊಟೇಲಿನಲ್ಲಿ ಉಳಿದುಕೊಂಡರೂ, ತಿನ್ನಲೆಂದು ಕಾಶಿಯ ಯಾವುದೇ ಗಲ್ಲಿಗಿಳಿದರೂ ಸಾಕು ನಿಮ್ಮನ್ನು ಕಚೋಡಿ ಸಬ್ಜಿ ಸ್ವಾಗತಿಸುತ್ತದೆ. ಕಾಶಿಯ ಬೆಳಗ್ಗಿನ ಉಪಹಾರಗಳ ಪೈಕಿ ಕಚೋಡಿ ಸಬ್ಜಿ ಪ್ರಮುಖವಾದುದು. ಒಳಗಡೆ ಬೇಳೆಕಾಳುಗಳ ಹೂರಣ ಹಾಕಿ ವಡೆಯಂತೆ ತಟ್ಟಿ ಎಣ್ಣಿಯಲ್ಲಿ ಬೇಯಿಸಿ ಆಲೂಗಡ್ಡೆಯ ಸಬ್ಜಿಯೊಂದಗೆ ಅವರು ಸವಿಯಲು ಕೊಡುವ ಕಚೋಡಿಯು ಆಹಾ ಎಂಬ ರುಚಿ. ವೃದ್ಧರಿಂದ ಮಕ್ಕಳವರೆಗೆ ಎಲ್ಲರೂ ಸವಿದು ಚಪ್ಪರಿಸುವ ಈ ಬೆಳಗಿನ ತಿಂಡಿಯನ್ನು ಕಾಶಿಯಲ್ಲಿದ್ದಾಗ ತಿನ್ನದೇ ಇದ್ದರೆ ಏನೋ ಕಳೆದುಕೊಂಡಂತೆ.

Tomato chaat

ಟಮಾಟರ್‌ ಚಾಟ್‌

ಕಾಶಿಯ ಜನಪ್ರಿಯ ಚಾಟ್‌ ಎಂದರೆ ಟಮಾಟರ್‌ ಚಾಟ್‌. ಇಲ್ಲಿನ ಸ್ಥಳೀಯರೂ, ಇಲ್ಲಿಗೆ ಬರುವ ಪ್ರವಾಸಿಗರೂ ಇಷ್ಟಪಟ್ಟು ತಿನ್ನುವ ಚಾಟ್‌ ಇದು. ಗೋಲ್‌ಗಪ್ಪ, ಸೇವ್‌ಪುರಿ, ದಹಿ ಪುರಿ, ಟಿಕ್ಕಿ ಚಾಟ್‌ ಮತ್ತಿತರ ಚಾಟ್‌ಗಳು ಎಲ್ಲೆಡೆಯೂ ದೊರೆತರೂ, ಈ ಟಮಾಟರ್‌ ಚಾಟ್‌ ಮಾತ್ರ ಕಾಶಿಯ ಸ್ಪೆಷಲ್‌. ಇಲ್ಲಿ ಟಮಾಟರ್‌ ಚಾಟ್‌ನ ರುಚಿ ಜೀವನದಲ್ಲೊಮ್ಮೆಯಾದರೂ ನೋಡಬೇಕು ಎನ್ನುತ್ತಾರೆ ಚಾಟ್‌ ಪ್ರಿಯರು.

malaiyo sweet

ಮಲೈಯೋ

ಬಾಯಿಗಿಟ್ಟರೆ ಕರಗುವ ಹಾಲಿನ ಕೆನೆಯಿಂದಲೇ ಮಾಡುವ ಈ ಸಿಹಿತಿನಿಸು ಐಸ್‌ಕ್ರೀಮಿನಂತೆ. ಆಹಾ ಎನ್ನುವ ರುಚಿಯ, ಕೇಸರಿಯ ಘಮದ ತಿನಿಸು. ಕೇವಲ ಚಳಿಗಾಲದಲ್ಲಿ ಮಾತ್ರ ಲಭ್ಯವಿರುವ ಈ ತಿನಿಸು, ಚಳಿಗಾಲದಲ್ಲಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಾರೆ ಕೂಡ.

Rabdi Jalebi

ರಬ್ಡಿ ಜಿಲೇಬಿ

ರಬ್ಡೀ ಜೊತೆಗೆ ಜೀಲೇಬಿ ಸೇರಿಸಿ ತಿನ್ನುವ ಮಜಾವೇ ಬೇರೆ. ಹಾಲಿನಿಂದ ಮಾಡುವ ರಬ್ಡೀ ಎಂಬ ಸಿಹಿತಿನಿಸನ್ನು ಹಾಗೆಯೇ ತಿನ್ನಬಹುದಾದರೂ, ಬಿಸಿಬಿಸಿ ಜಿಲೇಬಿ ಜೊತೆಗೆ ಚಳಿಚಳಿಯಾಗ ರಬ್ಡೀ ಸುರಿದು ತಿಂದರೇನೇ ರುಚಿ.

Banarasi Paan

ಬನಾರಸಿ ಪಾನ್‌

ಭರ್ಜರಿ ಊಟವೊಂದನ್ನು ಉಂಡ ಮೇಲೆ ಒಂದು ಪಾನ್‌ ಹಾಕಿ ಬಾಯಿ ಚಪ್ಪರಿಸದಿದ್ದರೆ ಊಟ ಉಂಡಂತಾಗದು. ಕಾಶೀಯ ಪಾನ್‌ನ ರುಚಿಯನ್ನು ವರ್ಣಿಸಿ ಬರೆಯದ ಕವಿತೆಗಳಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಕಾಶಿಗೆ ಹೋಗಿ ಕವಳ ಹಾಕದಿದ್ದರೆ ಅದು ವ್ಯರ್ಥ ಜೀವನವೇ ಸರಿ.

Banarasi Lassi

ಲಸ್ಸೀ

ಲಸ್ಸಿಯ ನಿಜವಾದ ರುಚಿಯನ್ನು ಸವಿಯಬೇಕೆಂದಿದ್ದರೆ ಕಾಶಿಗೆ ಹೋಗಬೇಕು. ದಪ್ಪ ಮೊಸರಿನಿಂದ ಮಾಡಿದ ಈ ಲಸ್ಸಿಯ ಮೇಲೆ ಕೆನೆಯನ್ನೂ ಹಾಕಿ ಮಣ್ಣಿನ ಕಪ್‌ಗಳಲ್ಲಿ ನೀಡಿದರೆ, ಹೊಟ್ಟೆಗೂ ಮನಸ್ಸಿಗೂ ತಂಪು. ಕಾಶಿ ಗಲ್ಲಿಗಳಲ್ಲೆಲ್ಲ ಸುತ್ತಾಡಿ ಸುಸ್ತಾದ ಮೇಲೆ ಒಂದು ಲಸ್ಸಿ ಕುಡಿದರೆ ಸುಸ್ತೆಲ್ಲ ಮಾಯ!

ಇದನ್ನೂ ಓದಿ: Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

Continue Reading

ಪ್ರವಾಸ

Haridwara Travel: ಹರಿದ್ವಾರಕ್ಕೆ ಭೇಟಿ ನೀಡಿದಾಗ ಈ ಸ‍್ಥಳಗಳನ್ನು ಮಿಸ್ ಮಾಡದೇ ನೋಡಿ!

Haridwara Travel: ಪವಿತ್ರತೆಗೆ ಹೆಸರಾದ ಗಂಗೆಯ ದಡದಲ್ಲಿರುವ ಹರಿದ್ವಾರ ಪುರಾಣಗಳಿಗೆ ಸಂಬಂಧಿಸಿದ ಮತ್ತು ಐತಿಹಾಸಿಕ ದೇವಾಲಯಗಳನ್ನು ಹೊಂದಿದೆ. ಹಾಗಾಗಿ ಈ ಸ್ಥಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇಲ್ಲಿಗೆ ಬರುವವರು ತಪ್ಪದೇ ಈ ಸ್ಥಳಗಳಿಗೆ ಭೇಟಿ ನೀಡಿದರೆ ದೇವಾಲಯಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು! ಹರಿದ್ವಾರದ ಪ್ರಮುಖ ಸ್ಥಳಗಳ ಪರಿಚಯಾತ್ಮಕ ವಿವರ ಇಲ್ಲಿದೆ.

VISTARANEWS.COM


on

Haridwara Travel
Koo

ಬೆಂಗಳೂರು: ರಜಾ ದಿನಗಳಲ್ಲಿ ಕೆಲವರು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ ಇನ್ನೂ ಕೆಲವರಿಗೆ ದೇವಾಲಯಗಳಿಗೆ ಸುತ್ತುವುದೆಂದರೆ ತುಂಬಾ ಇಷ್ಟ. ಹಾಗಾಗಿ ಅಂಥವರು ಹರಿದ್ವಾರಕ್ಕೆ (Haridwara Travel) ಭೇಟಿ ನೀಡಿ. ಪವಿತ್ರತೆಗೆ ಹೆಸರಾದ ಗಂಗೆಯ ದಡದಲ್ಲಿರುವ ಹರಿದ್ವಾರ ಪುರಾಣಗಳಿಗೆ ಸಂಬಂಧಿಸಿದ ಮತ್ತು ಐತಿಹಾಸಿಕ ದೇವಾಲಯಗಳನ್ನು ಹೊಂದಿದೆ. ಹಾಗಾಗಿ ಈ ಸ್ಥಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇಲ್ಲಿಗೆ ಬರುವವರು ತಪ್ಪದೇ ಈ ಸ್ಥಳಗಳನ್ನು ವೀಕ್ಷಿಸಿ.

Haridwara Travel

ಹರ್ ಕಿ ಪೌರಿ

ಹರಿದ್ವಾರದ ಅತ್ಯಂತ ಪ್ರಸಿದ್ಧವಾದ ಹರ್ ಕಿ ಪೌರಿಯಲ್ಲಿ ಪುರಾಣಗಳ ಪ್ರಕಾರ ನದಿ ದಡದಲ್ಲಿ ಹಿಂದೂ ದೇವರ ಮುದ್ರೆಗಳನ್ನು ಹೊಂದಿದೆಯಂತೆ. ಇದನ್ನು ಭಗವಾನ್ ವಿಷ್ಣುವಿನ ಹೆಜ್ಜೆ ಗುರುತು ಎಂದು ಭಾವಿಸಲಾಗುತ್ತದೆಯಂತೆ. ಇಲ್ಲಿನ ವಿಶೇಷವೆಂದರೆ ಸಂಜೆಯ ವೇಳೆ ಗಂಗಾ ನದಿಯಲ್ಲಿ ಧೂಪ, ದೀಪ ಮತ್ತು ಗಂಟೆಗಳೊಂದಿಗೆ ಆರತಿಯನ್ನು ಬೆಳಗಲಾಗುತ್ತದೆಯಂತೆ. ಇಲ್ಲಿ ಈ ಸಮಯದಲ್ಲಿ ಅನೇಕ ಜನರು ಸೇರುತ್ತಾರಂತೆ.

Haridwara Travel

ಮಾನಸ ದೇವಿ ದೇವಸ್ಥಾನ

ಅರಣ್ಯದಿಂದ ಕೂಡಿದ ಬಿಲ್ವಪರ್ವತದ ಬೆಟ್ಟಗಳ ಮೇಲಿರುವ ಈ ದೇವಸ್ಥಾನಕ್ಕೆ ನವವಿವಾಹಿತರು ಮತ್ತು ಭಕ್ತರು ದೇವಿಯ ಆಶೀರ್ವಾದವನ್ನು ಪಡೆಯಲು ಬರುತ್ತಾರೆ. ಪುರಾಣಗಳ ಪ್ರಕಾರ ಮಾನಸ ದೇವಿ ಬ್ರಹ್ಮಾಂಡದಲ್ಲಿ ವಿಲೀನರಾಗುವ ಮೊದಲು ಇಲ್ಲಿ ತಪಸ್ಸನ್ನು ಮಾಡಿದರು ಎನ್ನಲಾಗುತ್ತದೆ. ಇಲ್ಲಿ ರಮಣೀಯವಾದ ಮಾನಸ ದೇವಿಯ ಪ್ರತಿಮೆಗಳಿರುವ ಗರ್ಭಗುಡಿ ಇದೆ ಮತ್ತು ಬೆಳ್ಳಿ ಲೇಪಿತ ಸಿಂಹದ ವಿಗ್ರಹಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.

Haridwara Travel

ಚಂಡಿ ದೇವಿ ದೇವಸ್ಥಾನ

ಇದು ಹರಿದ್ವಾರದ ಹೆಸರಾಂತ ದೇವಾಲಯ. ಸುಂದರವಾದ ನೀಲ್ ಪರ್ವತದ ಶಿಖರದ ಮೇಲಿರುವ ಈ ದೇವಾಲಯದಲ್ಲಿ ಪಾರ್ವತಿ ದೇವಿಯ ಉಗ್ರ ಅವತಾರಾದ ಚಂಡಿ ದೇವಿಯನ್ನು ಪೂಜಿಸಲಾಗುತ್ತದೆ. ದಂತ ಕಥೆಯ ಪ್ರಕಾರ ಚಂಡಿ ದೇವಿ ಶುಂಭ-ನಿಶುಂಭ ರಾಕ್ಷಸರನ್ನು ಸಂಹರಿಸಲು ಇಲ್ಲಿ ನೆಲೆಸಿದ್ದಳು ಎನ್ನಲಾಗಿದೆ. ಇಲ್ಲಿ ಪ್ರಾಚೀನ ವಾಸ್ತು ಶಿಲ್ಪ ಮತ್ತು ವಿವಿಧ ಹಿಂದೂ ದೇವತೆಗಳ ಕಥೆಗಳನ್ನು ಪ್ರದರ್ಶಿಸುವ ಉಬ್ಬುಶಿಲ್ಪಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.

Haridwara Travel

ಮಾಯಾ ದೇವಿ ದೇವಸ್ಥಾನ

ಇಲ್ಲಿ ಮಾಯಾದೇವಿಯ ಕಪ್ಪು ಕಲ್ಲಿನ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ಇದು ಉತ್ತರ ಭಾರತದ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಮಾಯ ದೇವಿ ಶಿವನ ಪತ್ನಿ ಶಕ್ತಿಯ ಒಂದು ಅವತಾರವಾಗಿದೆ. ಈ ಸ್ಥಳದಲ್ಲಿ ಗಂಗೆ ಭೂಮಿಗೆ ಇಳಿದಿದ್ದರಿಂದ ಇಲ್ಲಿ ಭಗೀರಥನನ್ನು ಪೂಜಿಸಲಾಗುತ್ತದೆ.

Haridwara Travel

ಭಾರತ್ ಮಾತಾ ಮಂದಿರ

ಇದು ದೇಶಭಕ್ತಿಗೆ ಸಮರ್ಪಿತವಾದ ವಿಶೇಷ ದೇವಾಲಯವಾಗಿದೆ. ಇಲ್ಲಿ ದೇವರುಗಳ ಬದಲಿಗೆ ಪರಿಹಾರ ನಕ್ಷೆಯನ್ನು ಪೂಜಿಸಲಾಗುತ್ತದೆ. ಈ ಮಂದಿರವು ಭಾರತೀಯ ಉಪಖಂಡವನ್ನು ಚಿತ್ರಿಸುವ 8×8 ಅಮೃತಶಿಲೆಯಲ್ಲಿ ಕೆತ್ತಿದ ಪರಹಾರ ನಕ್ಷೆಯನ್ನು ಹೊಂದಿದೆ. ಇದನ್ನು “ ಮದರ್ ಇಂಡಿಯಾ” ಎಂದು ಕರೆಯಲಾಗುತ್ತದೆ. ಇಲ್ಲಿ ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಚಿತ್ರಿಸುವ ಭಿತ್ತಿಚಿತ್ರಗಳು ಗೋಡೆಗಳಲ್ಲಿ ಕಂಡುಬರುತ್ತದೆ. ಇದು ಬೆಳಿಗ್ಗೆ 8 ಗಂಟೆಯಿಂದ 12 ಗಂಟೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯ ವೇಳೆ ತೆರೆದಿರುತ್ತದೆ.

Haridwara Travel

ರಾಜಾಜಿ ರಾಷ್ಟ್ರೀಯ ಉದ್ಯಾನವನ

ಇದು 820 ಚದರ ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಇಲ್ಲಿ ಆಕರ್ಷಕ ಭೂದೃಶ್ಯಗಳು, ಸಮೃದ್ಧವಾದ ವನ್ಯಜೀವಿಗಳು ಮತ್ತು 23ಕ್ಕೂ ಹೆಚ್ಚು ಜಾತಿಯ ಆರ್ಕಿಡ್ ಗಳಿವೆ. ಇದಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಿ.ರಾಜಗೋಪಾಲಾಚಾರಿ ಅವರ ಹೆಸರನ್ನು ಇಡಲಾಗಿದೆ. ಇಲ್ಲಿ ಹರಿಯುವ ನದಿಗಳು, ಕಣಿವೆಗಳು, ಹುಲ್ಲುಗಾವಲು, ಅಪರೂಪ ಪಕ್ಷಿಗಳು ಕಂಡುಬರುತ್ತಿದೆ. ಇದು ಪ್ರತಿದಿನ ಮುಂಜಾನೆಯಿಂದ ಮುಸ್ಸಂಜೆಯವರೆಗೂ ತೆರೆದಿರುತ್ತದೆ.

Haridwara Travel

ದಕ್ಷೇಶ್ವರ ಮಹಾದೇವ ದೇವಸ್ಥಾನ

ಇದು ಕಂಖಾಲ್ ಪಟ್ಟಣದ ಸೋಲಾನಿ ನದಿಯ ದಡದಲ್ಲಿದೆ. ಪುರಾಣದಲ್ಲಿ ಇದನ್ನು ರಾಜ ದಕ್ಷನ ಅರಮನೆ ಮತ್ತು ಯಜ್ಞದ ಅಖಾಡವನ್ನು ಹೊಂದಿರುವ ಸ್ಥಳ ಎನ್ನಲಾಗುತ್ತದೆ. ಶಿವನಿಗಾದ ಅವಮಾನವನ್ನು ಸಹಿಸದೆ ಸತಿ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಳು ಎನ್ನಲಾಗುತ್ತದೆ. 18 ಶಿಖರವನ್ನುಹೊಂದಿರುವ ಈ ದೇವಾಲಯಕ್ಕೆ ಶಿವನ ಭಕ್ತರು ಭೇಟಿ ನೀಡುತ್ತಾರೆ. ಇದು ಬೆಳಿಗ್ಗೆ 6ರಿಂದ ಸಂಜೆ 8ಗಂಟೆಯವರೆಗೆ ತೆರೆದಿರುತ್ತದೆ.

Haridwara Travel

ಭೀಮಗೋಡ ಟ್ಯಾಂಕ್

ಇದು ಹರ್ ಕಿ ಪೌರ್‌ಗೆ ಸಮೀಪದಲ್ಲಿರುವ ಮಾನವ ನಿರ್ಮಿತ ಜಲಾಶಯವಾಗಿದೆ. ಇದರ ಮೂಲ ಮಹಾಭಾರತದ ಪಾಂಡವರು ಎನ್ನಲಾಗುತ್ತದೆ. ಪಾಂಡವರಲ್ಲಿ ಒಬ್ಬನಾದ ಬಲಶಾಲಿ ಭೀಮನು ನೀರಿಗಾಗಿ ಇಲ್ಲಿ ನೆಲವನ್ನು ಒಡೆಯುವುದರ ಮೂಲಕ ಈ ಕುಂಡವನ್ನು ರಚಿಸಿದನು ಎನ್ನಲಾಗುತ್ತದೆ. ಸೊಂಪಾದ ಉದ್ಯಾನವನ , ದೇವಾಲಯಗಳಿಂದ ಸುತ್ತುವರಿದ ಈ ಸ್ಥಳಕ್ಕೆ ಭಕ್ತರು ಪೂರ್ವಜರಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದು ಸ್ನಾನ ಮಾಡುತ್ತಾರಂತೆ. ಇದಕ್ಕೆ ಪ್ರವೇಶ ಶುಲ್ಕವಿಲ್ಲ.

ಇದನ್ನೂ ಓದಿ: Salman Khan: ನಟ ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ಮನೆ ನೋಡಿ ಅಭಿಮಾನಿಗಳಿಗೆ ಫುಲ್ ಶಾಕ್!

ಸಪ್ತ ಋಷಿ ಆಶ್ರಮ

ಇದು ಗಂಗಾ ನದಿಯ ದಡದಲ್ಲಿದೆ. ಈ ಪ್ರದೇಶ ತುಂಬಾ ಶಾಂತವಾಗಿದೆ. ಇಲ್ಲಿ ಕೆಲವು ವಿದ್ವಾಂಸರು ಗ್ರಂಥ ಪಠಣೆ ಮಾಡಲು ಬರುತ್ತಾರಂತೆ. ಇಲ್ಲಿ ಗಂಗಾ ಆರತಿ ಕಾರ್ಯಕ್ರಮ ನಡೆಯುತ್ತದೆ.

Continue Reading

ಲೈಫ್‌ಸ್ಟೈಲ್

Shirdi Tour: ಶಿರಡಿಗೆ ಹೋದಾಗ ಮರೆಯದೇ ಈ ಸ್ಥಳಗಳನ್ನು ನೋಡಿ

Shirdi Tour: ಶಿರಡಿ ಸಂತ ಸಾಯಿ ಬಾಬಾರ ಪುಣ್ಯ ಭೂಮಿಯಾಗಿದೆ. ಇಲ್ಲಿ ಶ್ರೀ ಸಾಯಿ ಬಾಬರು ಜೀವಂತ ಸಮಾಧಿಯಾಗಿ ಭಕ್ತರ Understood ನಿವಾರಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಶಿರಡಿಯ ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ.

VISTARANEWS.COM


on

Shirdi Tour
Koo

ಬೆಂಗಳೂರು: ಬೇಸಿಗೆಯಲ್ಲಿ ಜನರು ಒಂದಲ್ಲ ಒಂದು ಕಡೆಗೆ ಪ್ರವಾಸಕ್ಕೆ ಹೋಗುತ್ತಾರೆ. ಪ್ರಕೃತಿ ಪ್ರಿಯರು ಪ್ರಕೃತಿ ಸೌಂದರ್ಯವನ್ನು ಸವಿಯುವಂತಹ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಿದರೆ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಆಸಕ್ತಿ ಇರುವವರು ಪುರಾಣದ ದೇವಾಲಯಗಳಿಗೆ, ಮಂದಿರಗಳಿಗೆ ಭೇಟಿ ನೀಡುತ್ತಾರೆ. ಹಾಗಾಗಿ ನೀವು ಶಿರಡಿಗೆ (Shirdi Tour) ಭೇಟಿ ನೀಡಲು ಮುಂದಾಗಿದ್ದಾರೆ. ಅಲ್ಲಿ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ. ಇದರಿಂದ ನಿಮ್ಮ ಶಿರಡಿಯ ಪ್ರವಾಸದ ಅನುಭವ ಉತ್ತಮವಾಗಿರುತ್ತದೆ. ಶಿರಡಿ ಸಂತ ಸಾಯಿ ಬಾಬಾರ ಪುಣ್ಯ ಭೂಮಿಯಾಗಿದೆ. ಇಲ್ಲಿ ಶ್ರೀ ಸಾಯಿ ಬಾಬರು ಜೀವಂತ ಸಮಾಧಿಯಾಗಿ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಶಿರಡಿಯ ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ.

  1. ಸಾಯಿ ಬಾಬಾರವರ ಸಮಾಧಿಯ ಗರ್ಭಗುಡಿ ವಸತಿಗೃಹದ ದರ್ಶನ ಮಾಡಿ. ಇಲ್ಲಿ ಬಿಳಿ ಅಮೃತಶಿಲೆಯ ಪ್ರತಿಮೆಯನ್ನು ಸಮಾಧಿ ಕಮಾನಿನ ಮೇಲೆ ಸ್ಥಾಪಿಸಲಾಗಿದೆ. ಇಲ್ಲಿ ಚಿನ್ನದ ಆಭರಣಗಳಿಂದ ಅಲಂಕರಿಸಲ್ಪಟ್ಟ ಗರ್ಭಗುಡಿ, ಭಕ್ತರ ಧನಸಹಾಯದಿಂದ ಕಸೂತಿ ಮಾಡಿದ ಕೆಂಪು ಸೀಲಿಂಗ್ ಅನ್ನು ನೋಡಬಹುದು.
Shirdi Tour
  1. ದೇವಾಲಯದ ಒಳ ಅಭಯಾರಣ್ಯದಿಂದ ಹಿತವಾದ ಕಾಕಡ್ ಆರತಿಯನ್ನು ದರ್ಶನ ಮಾಡಿ. ಅನಾದಿ ಕಾಲದ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುವ ಪಾರಂಪರಿಕ ಅರ್ಚಕರಿಂದ ಬೆಳಗುವ ಈ ಆರತಿ ಆನ್ ಲೈನ್ ಪಾಸ್ ಹೊಂದಿರುವವರಿಗೆ ಖಾಸಗಿ ಪ್ರವೇಶ ನೀಡಲಾಗುತ್ತದೆ. ಜನಸಂದಣಿಯಿಲ್ಲದ ಪ್ರಶಾಂತ ವಾತಾವರಣದಲ್ಲಿ ದೇವಾಲಯದ ಕೊಠಡಿಯ ಮೂಲಕ ಪ್ರತಿ ಧ್ವನಿಸುವ ಪವಿತ್ರ ಪಠಣಗಳನ್ನು ಕೇಳಿ ಧ್ಯಾನ ಮಗ್ನರಾಗಿ.
  2. ಸಾಯಿ ಬಾಬಾರ ಆಶ್ರಮದ ಸ್ಥಳವು ಬಾಬಾರ ಆರಾಧಕರಿಗೆ ಉತ್ತಮ ಸ್ಥಳವಾಗಿದೆ. ಇಲ್ಲಿ ಸಂಜೆಯ ವೇಳೆ ಶಾಸ್ರ್ತೋಕ್ತವಾಗಿ ಮೆರವಣಿಗೆ ನಡೆಯಲಿದ್ದು, ಈ ವೇಳೆ ಬಾಬಾ ಅವರು ಒಮ್ಮೆ ಬಳಸಿದ ಪವಿತ್ರ ವಸ್ತುಗಳನ್ನು ಪ್ರದರ್ಶನ ಮಾಡುತ್ತಾರೆ. ಈ ಕಟ್ಟಡದ ಹೊರಭಾಗದಲ್ಲಿ ಹಳ್ಳಿಯ ಶೈಲಿಯ ಕಲಾಕೃತಿ ಮತ್ತು ನೆಲದ ಮೇಲೆ ವರ್ಣ ಚಿತ್ರಗಳನ್ನು ನೋಡಬಹುದು.
  1. ಶಿರಡಿಯ ದ್ವಾರಕಾಮಾಯಿ ಮಠ- ಇಲ್ಲಿ ಬಾಬಾ ಅವರು ಬಳಸಿದ ಅವರ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಸ್ಥಳದಲ್ಲಿ ಬಾಬಾ ಅವರು ಬದುಕಿದ್ದು, ಇಲ್ಲಿ ಬಾಬಾ ಅವರು ಬದುಕಿದಾಗ ಹಲವಾರು ಪವಾಡಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ. ಇಲ್ಲಿ ನಿತ್ಯ ಉರಿಯುತ್ತಿರುವ ಧುನಿ ಪವಿತ್ರ ಅಗ್ನಿಯನ್ನು ಪಾವನರಾದ ಬಾಬಾರು ಹಚ್ಚಿದ್ದರು ಎನ್ನಲಾಗಿದೆ.
  2. ಹಾಗೇ ಸುಂದರವಾದ ಹಳೆಯ ದೇವಾಲಯಗಳನ್ನು ಆಧ್ಯಾತ್ಮಿಕ ಸ್ಮರಣಿಕೆಗಳನ್ನು ಮಾರಾಟ ಮಾಡುವ ಮಳಿಗೆಗಳಾಗಿ ಪರಿವರ್ತಿಸಲಾಗಿದೆ. ಇಲ್ಲಿ ಪವಿತ್ರ ಮಣಿಗಳು, ಕಡಗಗಳು ಮತ್ತು ಪ್ರಾರ್ಥನೆಯ ಪುಸ್ತಕಗಳನ್ನು ಖರೀದಿಸಬಹುದು.
  3. ಇಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ತಿಂಡಿ ತಿನಿಸುಗಳನ್ನು ಮತ್ತು ಮಿಸ್ಸಾಲ್ ನಂತಹ ಬಿಸಿಯಾದ ಉಪಾಹಾರದ ತಿಂಡಿಗಳು ಸಿಗುತ್ತದೆ. ದಿನವಿಡೀ ಸಾಬುದಾನ ವಡಾ, ಬಟಾಟ ವಡಾ ದೊರೆಯುತ್ತದೆ. ಶೀರಾ ಇಲ್ಲಿನ ವಿಶೇಷ ಸಿಹಿ ತಿಂಡಿ. ಬಹಳ ರುಚಿಕರವಾದ ಇದನ್ನು ತಿನ್ನುವುದನ್ನು ತಪ್ಪಿಸಬೇಡಿ.

ಇದನ್ನೂ ಓದಿ: Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

  1. ಇಲ್ಲಿ ಫ್ಲೋರಿಶಿಂಗ್ ಪಾರ್ಕ್ ಗಳು ಮತ್ತು ಗಾರ್ಡನ್ ಗಳಿದ್ದು, ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ನಗರದ ವಿಕಾಸ್ ಜಾಗೃತಿ ಪಾರ್ಕ್ ನಲ್ಲಿ ಹೂವಿನ ಪೊದೆಗಳ ನಡುವೆ ಪಿಕ್ ನಿಕ್ ಮಾಡಿ, ಪಾಲ್ಖಿಸ್ಥಾನಕ್ ನಲ್ಲಿ ಪುಟ್ಟ ಕೊಳಗಳು, ಸೇತುವೆಗಳನ್ನು ಹಾದುಹೋಗುವ ಸುಸಜ್ಜಿತ ವಾಕಿಂಗ್ ಟ್ರೇಲ್ಸ್ , ಸಾಯಿ ಸರೋವರದ ಮೇಲೆ ಹಾರಾಡುವ ಪಕ್ಷಿಗಳನ್ನು ನೋಟವನ್ನು ನೀವು ಸವಿಯಬಹುದು.
Continue Reading
Advertisement
IPL 2024
ಕ್ರೀಡೆ7 mins ago

IPL 2024: ಧೋನಿ, ಚೆನ್ನೈ ಪಂದ್ಯ ನೋಡಲು ದೆಹಲಿ ವರೆಗೂ ನಡೆದುಕೊಂಡು ಹೋಗುವೆ ಎಂದ ಶತಾಯುಷಿ ಅಭಿಮಾನಿ; ವಿಡಿಯೊ ವೈರಲ್​

Break Up
ದೇಶ15 mins ago

ಇದ್ದರೂ ಜತೆಗೆ, ಸತ್ತರೂ ಜತೆಗೆ; ಅಪಘಾತದಲ್ಲಿ ಪತ್ನಿ ಸಾವು, ನೊಂದ ಪತಿ ನೇಣಿಗೆ ಶರಣು

IPL 2024
ಕ್ರೀಡೆ44 mins ago

IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾದ ಆರ್​ಸಿಬಿ

Pakistan Teen
ದೇಶ44 mins ago

ಪಾಕಿಸ್ತಾನದ ಯುವತಿಯ ಪ್ರಾಣ ಉಳಿಸಿತು ಭಾರತದ ಹೃದಯ; ‘ಹಾರ್ಟ್‌’ ಟಚಿಂಗ್ ಸ್ಟೋರಿ ಇದು!

Comedy Khiladigalu Premier League From 27th April On Zee Kannada
ಕಿರುತೆರೆ44 mins ago

Comedy Khiladigalu Premier League: ಹೇಗಿರಲಿದೆ ಹೊಸ ಶೋ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ?

Pushpa The Rule first single on May 1
ಟಾಲಿವುಡ್1 hour ago

Pushpa The Rule: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ʻಪುಷ್ಪ 2ʼ: ಮೇ 1ಕ್ಕೆ ತಂಡದಿಂದ ಗುಡ್‌ ನ್ಯೂಸ್‌!

actress amulya father in law election officers ride
ಕ್ರೈಂ1 hour ago

Election Officer Raid: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡನ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ

Rahul Gandhi
ದೇಶ1 hour ago

Rahul Gandhi: ಶೀಘ್ರವೇ ಅಯೋಧ್ಯೆಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ; ರಾಮಲಲ್ಲಾನ ದರ್ಶನ!

IPL 2024
ಕ್ರೀಡೆ1 hour ago

IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ

Amitabh Bachchan, AR Rahman honoured with Deenanath Mangeshkar award
ಸಿನಿಮಾ2 hours ago

Amitabh Bachchan: ಅಮಿತಾಭ್‌ ಬಚ್ಚನ್, ಎ ಆರ್ ರೆಹಮಾನ್‌ ಸೇರಿ ಹಲವರಿಗೆ ʻದೀನನಾಥ್ ಮಂಗೇಶ್ಕರ್ ಪ್ರಶಸ್ತಿʼ ಗೌರವ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌