ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..! - Vistara News

ಪ್ರವಾಸ

ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!

ಇವರಿಬ್ಬರ ಜರ್ನಿ ಬಗ್ಗೆ ಕಾರಣ ಕೇಳಿದ್ರೆ ಎಂತವರಾದರೂ ಭಾವುಕರಾಗೋದು ಖಂಡಿತ
ಹೆಲ್‌ ಮೆಟ್‌ ಮತ್ತು ಗೊಗಲ್ ಧರಿಸಿ ಇವರಿಬ್ಬರೂ ಪ್ರಯಾಣ ಮಾಡುವ ದೃಶ್ಯ ಎಂಥವರನ್ನೂ ನಾಚಿಸುತ್ತವೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಣಜಿ : ನಾಯಿ ಬಗ್ಗೆ ಸಾಕಷ್ಟು ಹಾಡುಗಳನ್ನು ಹಾಗೇ ಅಲ್ಲಲ್ಲಿ ನಾಯಿ ಪ್ರೇಮಿಗಳನ್ನ ನಾವು ನೋಡ್ತಾ ಇರ್ತೇವೆ. ಅಷ್ಟೇ ಅಲ್ಲದೇ ಸಾಕಷ್ಟು ಶ್ವಾನಗಳ ರೀಲ್ಸ್‌ಗಳು, ಶ್ವಾನದ ಸ್ಪರ್ಧೆ ಹಾಗೇ ಅನೇಕ ಸಿನಿಮಾಗಳು, ಕಾರ್ಟೂನ್‌ ಹೀಗೆ ಪಟ್ಟಿ ಮಾಡ್ತಾ ಹೋದ್ರೆ ಸಾಕಷ್ಟು ವಿಚಾರಗಳು ಸಿಗುತ್ತಲೇ ಇರುತ್ತವೆ. ನಾಯಿಯ ಕೇಂದ್ರಿತವಾದ ಕಥೆಯನ್ನಾಧರಿಸಿದ ಚಾರ್ಲಿ ಚಲನಚಿತ್ರ ಸದ್ಯದಲ್ಲೆ ಕನ್ನಡದಲ್ಲಿ ತೆರೆ ಕಾಣಲು ಸಿದ್ಧವಾಗುತ್ತಿದೆ. ಇಲ್ಲಿನ ಕಥೆಯಲ್ಲಿ ಅದೇ ರೀತಿಯಲ್ಲಿ, ಶ್ವಾನ ಪ್ರೇಮಿಯ ಭಾವನಾತ್ಮಕವಾದ ಸಂಬಂಧ ಹೊಂದಿರುವ ವಿಶೇಷ ಪಯಣ ಇದೆ.

ತನ್ನ ಶ್ವಾನಕ್ಕೋಸ್ಕರ ಆಲ್‌ ಇಂಡಿಯಾ ಟೂರ್‌ ಮಾಡ್ತಾ ಇರೋ ವಿಶೇಷ ವ್ಯಕ್ತಿತ್ವ ಇರೋದು ಮಧ್ಯಪ್ರದೇಶದಲ್ಲಿ. 26 ವರ್ಷದ ರಜತ್‌ ಪರಾಶರ ಅವರು ತನ್ನ ಸಾಕಿದ ನಾಯಿಯೊಡನೆ ಆಲ್‌ ಇಂಡಿಯಾ ಟೂರ್‌ ಮಾಡ್ತಾ ಇರೋ ನಾಯಿ ಪ್ರೇಮಿ. ಹೌದು. ಜರ್ಮನ್‌ ಶೆಫರ್ಡ್‌ ತಳಿಯ ಮ್ಯಾಗಿ ಎಂದೇ ಕ್ಯೂಟ್‌ ಆಗಿ ಹೆಸರನ್ನು ಹೊಂದಿದ ಈ ಶ್ವಾನಕ್ಕೆ ಆಲ್‌ ಇಂಡಿಯಾ ಪ್ರವಾಸವನ್ನ ಮಾಲಿಕ ತೋರಿಸ್ತಾ ಇರೋದು ವಿಶೇಷ. ಸದ್ಯ ಇವರು ಅನೇಕ ಸ್ಥಳಗಳನ್ನು ನೋಡಿಕೊಂಡು ಗೋವಾದ ಪಣಜಿಗೆ ಆಗಮಿಸಿದ್ದಾರೆ.

ಬುಲೆಟ್‌ ಬೈಕ್‌ನಲ್ಲಿ ಹಿಂದೆ ನಾಯಿಗೆ ಎಂತಲೇ ಸೀಟನ್ನು ತಯಾರಿಸಿದ್ದು, ಕ್ಟೂಟ್‌ ಕಪಲ್ಸ್‌ ತಿರುಗಾಡುವಂತೆ ಇವರಿಬ್ಬರ ಜರ್ನಿ ಶುರುವಾಗಿದೆ. ಆದರೆ ಇವರಿಬ್ಬರ ಜರ್ನಿ ಬಗ್ಗೆ ಕಾರಣ ಕೇಳಿದ್ರೆ ಎಂತವರಾದರೂ ಭಾವುಕರಾಗೋದು ಖಂಡಿತ. ದುರಾದೃಷ್ಟವಶಾತ್‌ ನಾಯಿಗೆ ಟ್ಯೂಮರ್‌ ಆಗಿದ್ದು, ಆಪ್‌ರೇಷನ್‌ ಕೂಡ ಮಾಡಲಾಗಿತ್ತು. ಆದರೆ ವೈದ್ಯರು ಹೇಳಿರುವ ಪ್ರಕಾರ ನಾಯಿ ಉಳಿಯುವುದು ಸ್ವಲ್ಪ ದಿನ ಎಂದು ತಿಳಿದುಬಂದಿದೆ. ಇರುವಷ್ಟು ದಿನ ತನ್ನ ಶ್ವಾನವನ್ನು ಸಂತೋಷವಾಗಿ ಇಡಬೇಕು ಎನ್ನುವುದೇ ರಜತ್‌ ಪರಾಶರ ಅವರ ಆಸೆಯಾಗಿತ್ತು. ಮ್ಯಾಗಿ ಜೊತೆ ಮ್ಯಾರವಲ್‌ ಕೂಡ ಪ್ರಯಾಣದಲ್ಲಿ ಸಹಭಾಗಿ ಅನ್ನೋದು ತಿಳಿದರಲೇ ಬೇಕು.

ಇದನ್ನೂ ಓದಿ | ಖಲಿಸ್ತಾನ್‌ ಲಿಂಕ್ ಹೊಂದಿದ್ದ ನಾಲ್ವರ ಸೆರೆ, ತೆಲಂಗಾಣಕ್ಕೆ ಸಾಗುತ್ತಿತ್ತು ಭಾರಿ ಪ್ರಮಾಣದ ಶಸ್ತ್ರಾಸ್ತ್ರ

ಮ್ಯಾಗಿಗೆ ಜರ್ನಿ ಮಾಡುವಾಗ ಹೈರಾಣು ಆಗಬಾರದು ಎಂದು ಕುಷನ್‌ ಬಾಸ್ಕೆಟ್‌ ಫಾಸ್ಟ್‌ನ್ಡ್‌ ಸೀಟು ಜೊತೆ ಪಿಲ್ಲೋ, ಸೀಟ್‌ ಬೆಲ್ಟ್‌ ಬಾರುಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಹೆಲ್‌ ಮೆಟ್‌ ಮತ್ತು ಗೊಗಲ್ ಧರಿಸಿ ಇವರಿಬ್ಬರೂ ಪ್ರಯಾಣ ಮಾಡುವ ದೃಶ್ಯ ಏಂಥವರನ್ನೂ ನಾಚಿಸುವಂತಿದೆ. ಮ್ಯಾಗಿ ನಮ್ಮ ಕುಟುಂಬದ ಸದಸ್ಯಳಲ್ಲಿ ಒಬ್ಬಳು. ನಮಗೂ ಮ್ಯಾಗಿಗೂ ಸ್ಟ್ರಾಂಗ್‌ ಬಾಂಡಿಂಗ್‌ ಇದೆ ಎನ್ನುತ್ತಾರೆ ರಜತ್.‌ ಬೈಕ್‌ ಸೌಂಡ್‌ ಕೇಳಿದರೆ ಸಾಕು ಸದಾ ಕುಪ್ಪರಿಸಿ ನೆಗೆಯುವ ಅವಳ ಸಂತೋಷಕ್ಕೆ, 2020 ರಲ್ಲಿ ಅವಳಿಗೆ ಟ್ಯೂಮರ್‌ ಖಾಯಿಲೆ ಇದೆ ಎಂಬ ಸುದ್ದಿ ಬಿದ್ದ ಕೂಡಲೇ ಟೂರ್‌ಗೆ ಕರೆದುಕೊಂಡು ಹೋಗಲು ನಿರ್ಧರಿಸಿದೆ. ಟ್ಯೂಮರ್‌ ಬಂದಾಗ ಅವಳು ಊಟವನ್ನು ಮಾಡುತ್ತ ಇರಲಿಲ್ಲ, ಐದು ಟ್ಯೂಮರ್‌ ಗಳು ಅದಾಗಲೇ ಅವಳನ್ನು ಆವರಿಸಿತ್ತು. ಮುಂಬೈನ ವೆಟರ್ನರಿ ಕ್ಯಾನ್ಸ್‌ರ್‌ ಹಾಸ್ಟಿಟಲ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನೂ ಕೂಡ ನೀಡಲಾಗಿತ್ತು.

ಸರ್ಜರಿ ಆದ ಬಳಿಕ ಮ್ಯಾಗಿ ಸ್ವಲ್ಪ ಚೇತರಿಸಿಕೊಂಡಿದ್ದಳು. ಅವಳೊಂದಿಗೆ ಅವತ್ತೆ ಟ್ರಿಪ್‌ ಹೋಗಲು ನಿರ್ಧರಿಸಿದ್ದೆ. ಈಗ ಅವಳು ಬೈಕ್‌ ರೈಡ್‌ ಅನ್ನು ತುಂಬಾ ಎಂಜಾಯ್‌ ಮಾಡುತ್ತಿದ್ದಾಳೆ ಎನ್ನುತ್ತಾರೆ ರಜತ್.‌

ಟ್ಯೂಮರ್‌ ಆದ ಸ್ವಲ್ಪ ದಿನದಲ್ಲಿಯೇ ಆರು ತಿಂಗಳ ಹಿಂದೆ ಗ್ವಾಲಿಯರ್‌, ಮಹಾರಾಷ್ಟ್ರ, ದೆಲ್ಲಿ, ಪಂಜಾಬ್‌, ಹರಿಯಾಣ, ರಾಜಸ್ತಾನ, ಕಾಶ್ಮೀರ್‌, ಅದಾಗಲೇ ಟೂರ್‌ ಮಾಡಿದ್ದರು. ಜಮ್ಮು ಕ್ಯಾಂಪೇನ್‌ ಸಮಯದಲ್ಲಿ ವಾಸ ವಿದ್ದಾಗ ಮ್ಯಾಗಿಯ (@dogebiker) ಐಡಿಯನ್ನು ನೋಡಿ ಎಷ್ಟೋ ಜನರು ನಮ್ಮನ್ನು ಮನೆಗೂ ಆಹ್ವಾನಿಸುತ್ತಿದ್ದರು. ಗೋವಾದಲ್ಲಿ ಕೂಡ ಇದೇ ಸಂಗತಿಗಳು ಎದುರಾಗಿತ್ತು.

ಸರಳ ಆಹಾರವನ್ನ ಇಷ್ಟ ಪಡುವ ಮ್ಯಾಗಿ ಸದಾ ಹಾಲು ಮತ್ತು ಟೊಮ್ಯಾಟೋ, ಚಪಾತಿ ಅನ್ನು ಇಷ್ಟ ಪಡುತ್ತಾಳೆ. ಆದರೆ ಈಗ ಸ್ವಲ್ಪ ಹಣದ ಸಮಸ್ಯೆಯನ್ನು ಎದುರಿಸುತ್ತಿರುವ ಪರಾಶರ್‌ ದಕ್ಷಿಣದ ಪ್ರವಾಸಕ್ಕೆ ಹೋಗದೆ ಪ್ರವಾಸವನ್ನು ನಿಲ್ಲಿಸಿದ್ದಾರೆ. ಇದೀಗ ರಜತ್‌ ಪರಾಶರ ತನ್ನ ನಾಯಿ ಪ್ರೇಮಕ್ಕೆ ಮ್ಯಾಗಿ ಹೆಸರಲ್ಲಿ ಚಾರಿಟಿ ಅನ್ನು ಶುರು ಮಾಡುವ ಕನಸನ್ನು ಹೊತ್ತಿದ್ದಾರೆ. ಅಂತೆಯೇ ಸಾಕು ಪ್ರಾಣಿಗಳಿಗೆ ಸಹಾಯ ಮಾಡುವ ಅಭಿಲಾಷೆ ಮತ್ತು ಮ್ಯಾಗಿ ಜೀವಂತ ಇರುವವರೆಗೆ ಅವಳನ್ನು ಸದಾ ಖುಷಿಯಲ್ಲಿ ಇರಿಸುವ ಬಯಕೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ | ಬಾಗಲಕೋಟೆಯಲ್ಲಿ ಮೊಸಳೆ ಪಾರ್ಕ್‌ ಆರಂಭಿಸಿ ಎಂದು ಅಂಗಲಾಚುತ್ತಿರುವ ಜನರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Mangalore Tour: ಮಂಗಳೂರಿಗೆ ಬಂದರೆ ಈ ಸ್ಥಳಗಳಿಗೆ ಭೇಟಿ ಕೊಡಲು ಮರೆಯದಿರಿ

ಮಂಗಳೂರು ಎಂದಾಗ ನೆನಪಾಗುವುದೇ ಸಮುದ್ರ ಮತ್ತು ಸಮುದ್ರಾಹಾರ. ಇಲ್ಲಿ ಕೇವಲ ಇದಿಷ್ಟೇ ಅಲ್ಲ ಇನ್ನೂ ಹಲವು ಪ್ರವಾಸಿಗರ (Mangalore Tour) ನೆಚ್ಚಿನ ತಾಣಗಳಿವೆ. ಹೀಗಾಗಿ ಇಲ್ಲಿ ಭೇಟಿ ನೀಡಿದಾಗ ಮಿಸ್ ಮಾಡಲೇಬಾರದ ಕೆಲವು ತಾಣಗಳ ಕುರಿತು ಕಿರು ಮಾಹಿತಿ ಇಲ್ಲಿದೆ.

VISTARANEWS.COM


on

By

Mangalore Tour
Koo

ನೇತ್ರಾವತಿ (netravati) ಮತ್ತು ಗುರುಪುರ (Gurupur) ನದಿಗಳ ಮುಖಜ ಭೂಮಿಯಲ್ಲಿ ಕುಳಿತಿರುವ ಮಂಗಳೂರು ಬೀಚ್ (mangaluru beach) ಪ್ರಿಯರಿಗೆ ಸೂಕ್ತ ತಾಣ. ಚಿನ್ನದ ಬಣ್ಣದ ಮರಳು ಮತ್ತು ಆಕಾಶ ನೀಲಿ ಸಮುದ್ರದ ನೋಟವನ್ನು ಕಣ್ತುಂಬಿಕೊಳ್ಳುವ ಜೊತೆಗೆ ಸಮುದ್ರಾಹಾರವನ್ನು (see food) ಸವಿಯಲು ಇಷ್ಟಪಡುವವರಿಗೆ ಮಂಗಳೂರಿನಲ್ಲಿ (Mangalore Tour) ಸಾಕಷ್ಟು ವೆರೈಟಿಗಳಿವೆ.

ನಗರದ ಸಮೀಪದಲ್ಲಿ ಹಲವಾರು ಗಿರಿಧಾಮಗಳಿವೆ. ದಕ್ಷಿಣ ಭಾರತದ (south india) ಇತರ ನಗರಗಳಂತೆ ಮಂಗಳೂರು ಆಧ್ಯಾತ್ಮಿಕ ಭಾವನೆಯನ್ನು ಹೊಂದಿದೆ. ಇಲ್ಲಿ ಎಲ್ಲರೂ ಇಷ್ಟಪಡುವ ಹಲವಾರು ತಾಣಗಳಿದ್ದು, ಅವುಗಳಲ್ಲಿ ಕೆಲವು ಅತ್ಯುತ್ತಮ ಸ್ಥಳಗಳು ಇಂತಿವೆ.


ಮಂಗಳಾದೇವಿ ದೇವಸ್ಥಾನ

ಮಂಗಳೂರು ಜನತೆಯ ಆರಾಧ್ಯ ದೈವ ಮಂಗಳಾದೇವಿ ದೇವಾಲಯದಿಂದಾಗಿಯೇ ಮಂಗಳೂರನ್ನು ಹಿಂದೆ ಮಂಗಳಾಪುರ ಎಂದು ಕರೆಯಲಾಗುತ್ತಿತ್ತು. ಬೋಳಾರ್‌ನಲ್ಲಿರುವ 19ನೇ ಶತಮಾನದ ದೇವಾಲಯವನ್ನು ಅಹೇಪಾ ರಾಜವಂಶದ ರಾಜ ಸ್ಥಾಪಿಸಿದ ಎನ್ನಲಾಗುತ್ತದೆ. ಮಂಗಳೂರಿನಲ್ಲಿ ನೋಡಬಹುದಾದ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಇದು ಒಂದಾಗಿದೆ. ದಸರಾದ ಮೊದಲು, ನವರಾತ್ರಿಯ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯ. ರಾತ್ರಿ 9 ಗಂಟೆಗೆ ದೇವಾಲಯವನ್ನು ಮುಚ್ಚಲಾಗುತ್ತದೆ.


ಗೋಕರ್ಣನಾಥೇಶ್ವರ ದೇವಸ್ಥಾನ

ಶಿವನಿಗೆ ಅರ್ಪಿತವಾಗಿರುವ ಗೋಕರ್ಣನಾಥೇಶ್ವರ ದೇವಾಲಯವು ಮಂಗಳೂರಿನಲ್ಲಿ ನೋಡಲೇಬೇಕಾದ ಮತ್ತೊಂದು ತಾಣ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಕೊಡಿಯಾಲ್ ಬೈಲ್‌ನ ಕುದ್ರೋಳಿಯಲ್ಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಎಂದೂ ಕರೆಯಲ್ಪಡುವ ಈ ದೇವಾಲಯವು 60 ಅಡಿ ಎತ್ತರದ ಚಿನ್ನದ ಬಣ್ಣದ ಗೋಪುರವನ್ನು ಹೊಂದಿದೆ ಮತ್ತು ಗಾರೆ ಆಕೃತಿಗಳಿಂದ ಅಲಂಕರಿಸಲ್ಪಟ್ಟಿದೆ. ಈ ದೇವಾಲಯದ ಸೌಂದರ್ಯವನ್ನು ಹೆಚ್ಚಿಸುವ ಕೆಲವು ಸೊಗಸಾದ ರಾಕ್ ಕೆತ್ತನೆ ಮತ್ತು ಶಿಲ್ಪಗಳನ್ನು ಪ್ರದರ್ಶಿಸುತ್ತದೆ. ದೇವಾಲಯದ ಗೋಪುರವನ್ನು ಹಿಂದೂ ದಂತಕಥೆಗಳ ದೃಶ್ಯಗಳನ್ನು ಚಿತ್ರಿಸುವ ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ.

ನವರಾತ್ರಿಯ ಸಮಯದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಯಾಕೆಂದರೆ ಇಲ್ಲಿ ದಸರಾ ಹಬ್ಬವನ್ನು ಹೆಚ್ಚು ಉತ್ಸಾಹದಿಂದ ಆಚರಿಸಲಾಗುತ್ತದೆ. ದೇವಾಲಯವು ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಮತ್ತು ಸಂಜೆ 4.30ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ.


ಪಣಂಬೂರು ಬೀಚ್

ಮಂಗಳೂರಿನಿಂದ 13 ಕಿಲೋಮೀಟರ್ ದೂರದಲ್ಲಿರುವ ಪಣಂಬೂರು ಬೀಚ್ ಅತ್ಯಂತ ಜನಪ್ರಿಯ ತಾಣವಾಗಿದೆ. ಸೂರ್ಯೋದಯ, ಸೂರ್ಯಾಸ್ತಗಳನ್ನು ವೀಕ್ಷಿಸಲು ಪರಿಪೂರ್ಣ ಸ್ಥಳಗಳಲ್ಲಿ ಇದು ಒಂದಾಗಿದೆ. ಇಲ್ಲಿ ಜಲಕ್ರೀಡೆಯನ್ನು ಮಾಡಬಹುದು. ಬೀಚ್‌ಗೆ ಭೇಟಿ ನೀಡಲು ಪ್ಯಾರಾಸೈಲಿಂಗ್, ಜೆಟ್ ಸ್ಕೀಯಿಂಗ್, ದೋಣಿ ಸವಾರಿ ನಡೆಸಬಹುದು.
ಸೆಪ್ಟೆಂಬರ್ ಮತ್ತು ಮಾರ್ಚ್ ತಿಂಗಳ ನಡುವಿನ ಮುಂಜಾನೆ ಅಥವಾ ತಡ ಮಧ್ಯಾಹ್ನ ಪಣಂಬೂರು ಬೀಚ್‌ಗೆ ಭೇಟಿ ನೀಡಲು ಉತ್ತಮ ಸಮಯ.


ಸುರತ್ಕಲ್ ಬೀಚ್

ಕಡಲತೀರದ ಪ್ರವಾಸಿಗರಿಗೆ ಅನ್ವೇಷಿಸಲು ಮತ್ತೊಂದು ಸ್ಥಳವೆಂದರೆ ಸುರತ್ಕಲ್ ಬೀಚ್. ತನ್ನ ಪ್ರಾಚೀನ ಪರಿಸರಕ್ಕೆ ಹೆಸರುವಾಸಿಯಾದ ಸುರತ್ಕಲ್ ಮುಖ್ಯ ನಗರದಿಂದ 18 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿನ ಮತ್ತೊಂದು ಆಕರ್ಷಣೆ ಕಡಲತೀರದ ದೀಪಸ್ತಂಭ. ಇದು ಬೆಟ್ಟದ ಮೇಲೆ ಇದೆ ಮತ್ತು ಸಮುದ್ರ ಮತ್ತು ಗ್ರಾಮಾಂತರದ ಕೆಲವು ಉತ್ತಮ ನೋಟವನ್ನು ಒದಗಿಸುತ್ತದೆ. ಈ ಬೀಚ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ನವೆಂಬರ್ ಮತ್ತು ಫೆಬ್ರವರಿ ನಡುವೆ. ಲೈಟ್‌ಹೌಸ್ ಸಂಜೆ 4ರಿಂದ 5 ಗಂಟೆಯವರೆಗೆ ಮಾತ್ರ ತೆರೆಯುತ್ತದೆ.


ಪಿಲಿಕುಳ ನಿಸರ್ಗಧಾಮ

ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳು ಪಿಕ್ನಿಕ್‌ಗಳಿಗೆ ಸಾಕಷ್ಟು ಸೂಕ್ತವಾಗಿದೆ. ಅಂತಹ ಒಂದು ಪರಿಪೂರ್ಣ ಸ್ಥಳವೆಂದರೆ ಪಿಲಿಕುಳ ನಿಸರ್ಗಧಾಮ. ಇದು ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. 370 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಪಿಲಿಕುಳ ನಿಸರ್ಗಧಾಮ ಅಥವಾ ಪಿಲಿಕುಳವು ನಗರದ ಸಮೀಪವಿರುವ ಅತ್ಯಂತ ಆದ್ಯತೆಯ ಪಿಕ್ನಿಕ್ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ವನ್ಯಜೀವಿ ಪ್ರಭೇದಗಳು, ಬೊಟಾನಿಕಲ್ ಗಾರ್ಡನ್, ಮೃಗಾಲಯದಲ್ಲಿ ಹುಲಿ, ಚಿರತೆ, ಕರಡಿ ಮತ್ತು ವಿವಿಧ ಸರೀಸೃಪಗಳು ಮತ್ತು ಹಾವುಗಳನ್ನು ಕಾಣಬಹುದು. ಆವರಣದಲ್ಲಿ ಗಾಲ್ಫ್ ಕೋರ್ಸ್ ಅನ್ನು ಸಹ ಕಾಣಬಹುದು.

ಅಕ್ಟೋಬರ್ ಮತ್ತು ಫೆಬ್ರುವರಿ ನಡುವೆ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯ. ಪಿಲಿಕುಳ ನಿಸರ್ಗಧಾಮ ಸೋಮವಾರ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 9.30 ರಿಂದ ಸಂಜೆ 5.30ರವರೆಗೆ ತೆರೆದಿರುತ್ತದೆ.


ಸೇಂಟ್ ಅಲೋಶಿಯಸ್ ಚರ್ಚ್

ಮಂಗಳೂರಿನ ಸೇಂಟ್ ಅಲೋಶಿಯಸ್ ಚರ್ಚ್ ತನ್ನ ಅದ್ಭುತ ವಾಸ್ತುಶಿಲ್ಪ ಮತ್ತು ಒಳಾಂಗಣಕ್ಕೆ ಹೆಸರುವಾಸಿಯಾಗಿದೆ. ಈ ಚರ್ಚ್ 1880 ರಲ್ಲಿ ನಿರ್ಮಿಸಲಾಯಿತು. ಇಟಾಲಿಯನ್ ಕಲಾವಿದ ಆಂಟೋನಿಯೊ ಮೊಸ್ಚೆನಿ ಅವರ ವಿಶಿಷ್ಟ ವರ್ಣಚಿತ್ರಗಳು ಇಲ್ಲಿನ ಹೆಚ್ಚಿನ ಗೋಡೆಗಳನ್ನು ಅಲಂಕರಿಸಿದೆ. ಪೇಂಟಿಂಗ್‌ಗಳು ಅಲೋಶಿಯಸ್ ಅವರ ಜೀವನವನ್ನು ಚಿತ್ರಿಸುತ್ತವೆ. ಸ್ವಲ್ಪ ಕಾಲ ಶಾಂತವಾಗಿ ಕಾಲ ಕಳೆಯಲು ಬಯಸುವವರಿಗೆ ಇದು ಸೂಕ್ತ ತಾಣ.

ಚಳಿಗಾಲವು ಸೇಂಟ್ ಅಲೋಶಿಯಸ್ ಚರ್ಚ್‌ಗೆ ಭೇಟಿ ನೀಡಲು ಉತ್ತಮ ಸಮಯ. ಈ ಸಂದರ್ಭದಲ್ಲಿ ಚರ್ಚ್ ಬೆಳಗ್ಗೆ 9ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ.


ಸುಲ್ತಾನ್ ಬತ್ತೇರಿ

ಮಂಗಳೂರಿನಿಂದ ಸುಮಾರು 4 ಕಿಲೋ ಮೀಟರ್ ದೂರದಲ್ಲಿರುವ ಬೋಳೂರಿನಲ್ಲಿರುವ ಸುಲ್ತಾನ್ ಬತ್ತೇರಿ ಕ್ರಿ.ಶ. 1784 ರಲ್ಲಿ ಚಕ್ರವರ್ತಿ ಟಿಪ್ಪು ಸುಲ್ತಾನನ ಕಾಲದಲ್ಲಿ ನಿರ್ಮಿಸಲಾಗಿದೆ. ಟಿಪ್ಪು ಸುಲ್ತಾನ್ ನಾಶಪಡಿಸಿದ 23 ಚರ್ಚ್‌ಗಳ ಅದೇ ಕಲ್ಲುಗಳಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇದು ಗಡಿಯಾರ ಗೋಪುರವಾಗಿದ್ದರೂ ಫಿರಂಗಿಗಳನ್ನು ಸ್ಥಾಪಿಸುವ ಸ್ಥಳಗಳನ್ನು ಹೊಂದಿರುವ ಕೋಟೆಯಂತೆ ಕಾಣುತ್ತದೆ. ಗೋಪುರದ ಅಡಿಯಲ್ಲಿ ಭೂಗತ ಶೇಖರಣಾ ಪ್ರದೇಶವಿದೆ. ಇದನ್ನು ಒಮ್ಮೆ ಗನ್‌ಪೌಡರ್ ಸಂಗ್ರಹಿಸಲು ಬಳಸಲಾಗುತ್ತಿತ್ತು. ಇದರ ಮೇಲೇರಿದರೆ ಅರಬ್ಬಿ ಸಮುದ್ರದ ವಿಹಂಗಮ ನೋಟವನ್ನು ಕಾಣಬಹುದು.

ಅದ್ಭುತವಾದ ಸೂರ್ಯಾಸ್ತವನ್ನು ಇಲ್ಲಿ ವೀಕ್ಷಿಸಬಹುದು. ಈ ಸ್ಥಳವು ಬೆಳಗ್ಗೆ 9 ರಿಂದ ಸಂಜೆ 7.30 ರವರೆಗೆ ತೆರೆದಿರುತ್ತದೆ.


ಮೂಲ್ಕಿಯಲ್ಲಿ ಸರ್ಫಿಂಗ್

ಮೂಲ್ಕಿಯಲ್ಲಿರುವ ಸರ್ಫಿಂಗ್ (ಜಲ ಕ್ರೀಡೆ) ಕೇಂದ್ರವು ಸರ್ಫರ್‌ಗಳ ಸ್ವರ್ಗವಾಗಿದೆ. ಮಂಗಳೂರಿನ ಉತ್ತರಕ್ಕೆ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ. ವರ್ಷಪೂರ್ತಿ ಸರ್ಫ್ ಮಾಡಬಹುದಾದರೂ ಮೇನಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ಅಕ್ಟೋಬರ್‌ವರೆಗೆ ಉತ್ತಮ ಸಮಯ.

ಇದನ್ನೂ ಓದಿ: Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

ಸ್ವಾದಿಷ್ಟ ಆಹಾರ ಸವಿಯಲು, ಶಾಪಿಂಗ್‌ಗೆ ಸೂಕ್ತ ತಾಣ

ಮಂಗಳೂರಿಗೆ ಭೇಟಿ ನೀಡಿದರೆ ಸ್ವಾದಿಷ್ಟ ಆಹಾರ ಗ್ಯಾರಂಟಿ. ಕೆಲವು ರುಚಿಕರವಾದ ಸಮುದ್ರಾಹಾರವನ್ನು ಸವಿಯಬಹುದು. ಫಿಶ್ ಪುಲಿಮುಂಚಿ ಮತ್ತು ಏಡಿ ಘೀ ರೋಸ್ಟ್ ಇಲ್ಲಿನ ಜನಪ್ರಿಯ ಖಾದ್ಯ. ಮಂಗಳೂರಿನಲ್ಲಿ ಜನಪ್ರಿಯವಾಗಿರುವ ಇತರ ಭಕ್ಷ್ಯಗಳೆಂದರೆ ನೀರ್ ದೋಸೆ ಮತ್ತು ಚಿಕನ್ ಕರಿ. ಸಸ್ಯಾಹಾರಿಗಳು ಅಧಿಕೃತ ಮಂಗಳೂರಿನ ಸಸ್ಯಾಹಾರಿ ಆಹಾರಕ್ಕಾಗಿ ಅಯೋಧ್ಯೆಗೆ ಭೇಟಿ ನೀಡಬಹುದು.

ಶಾಪಿಂಗ್ ಪ್ರಿಯರಿಗೆ ಮಂಗಳೂರು ನಗರದಲ್ಲಿ ಹಲವು ತಾಣಗಳಿವೆ. ಸೆಂಟ್ರಲ್ ಮಾರುಕಟ್ಟೆ ಹಂಪನಕಟ್ಟಾ ಮಾರುಕಟ್ಟೆ ಬಡಂಗ್‌ಪೇಟ್ ಮಾರುಕಟ್ಟೆ ಸಮುದ್ರಾಹಾರ ಮಾರುಕಟ್ಟೆ ದುಬೈ ಮಾರ್ಕೆಟ್ ಎಂಪೈರ್ ಮಾಲ್‌ಗೆ ಭೇಟಿ ನೀಡಬಹುದು.

Continue Reading

ಪ್ರವಾಸ

Trichy Tour: ದಾಂಪತ್ಯದ ಲವಲವಿಕೆಯನ್ನು ಮತ್ತೆ ಜೀವಂತಗೊಳಿಸಲು ತಿರುಚಿರಾಪಳ್ಳಿಗೆ ಹೋಗಿ ಬನ್ನಿ!

ನಿತ್ಯದ ಬದುಕಿನ ಒತ್ತಡದಲ್ಲಿ ದಂಪತಿಗೆ ಪರಸ್ಪರ ಸಮಯ ಕೊಡಲು ಅವಕಾಶವೇ ಸಿಗುವುದಿಲ್ಲ. ಇಂತವರು ಬಿಡುವು ಮಾಡಿಕೊಂಡು ಒಮ್ಮೆ ತಿರುಚಿರಾಪಳ್ಳಿಗೆ (Trichy Tour) ಬಂದರೆ ಬದುಕಿನಲ್ಲಿ ಮತ್ತೆ ಪ್ರೀತಿ ಹುಟ್ಟದೇ ಇರಲು ಸಾಧ್ಯವೇ ಇಲ್ಲ. ಅಂತಹ ರೊಮ್ಯಾಂಟಿಕ್ ಸ್ಥಳಗಳು ಇಲ್ಲಿವೆ.

VISTARANEWS.COM


on

By

Trichy Tour
Koo

ಒಟ್ಟಿಗೆ ಇದ್ದರೂ ಕೆಲಸದ ಒತ್ತಡವನ್ನೆಲ್ಲ ಬದಿಗೊತ್ತಿ ವರ್ಷದಲ್ಲೊಮ್ಮೆಯಾದರೂ ಪತಿ – ಪತ್ನಿ (Couple) ಏಕಾಂತವಾಗಿ ಸಮಯ ಕಳೆಯಬೇಕು ಎಂದು ಬಯಸುವುದು ಸಹಜ. ಇಂಥವರಿಗೆ ಸೂಕ್ತವೆನಿಸುವ ಹಲವಾರು ತಾಣಗಳು ಭಾರತದಲ್ಲಿ (india) ಇದೆ. ಅದರಲ್ಲಿ ತಿರುಚಿರಾಪಳ್ಳಿ (Trichy Tour) ಕೂಡ ಒಂದು.

ತಿರುಚಿರಾಪಳ್ಳಿ ಅಥವಾ ತಿರುಚಿ ಗಡಿಬಿಡಿಯ ಜೀವನದಿಂದ ದೂರವಿರಲು ಬಯಸುವ ದಂಪತಿ ಖಂಡಿತವಾಗಿಯೂ ಭೇಟಿ ನೀಡಬೇಕಾದ ಸ್ಥಳ. ಇಲ್ಲಿನ ಪುರಾತನ ದೇವಾಲಯಗಳು, ಶಾಂತವಾದ ನದಿ, ರುಚಿಕರವಾದ ಆಹಾರ, ಆಳವಾದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೊತೆಗೆ ಸುಂದರವಾದ ನೈಸರ್ಗಿಕ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬಹುದು. ರೋಮ್ಯಾಂಟಿಕ್ ಮತ್ತು ಸಾಹಸಮಯ ಪ್ರವಾಸಗಳಿಗೆ ಸೂಕ್ತವಾಗಿರುವ ತಿರುಚಿಯಲ್ಲಿ ಯಾವುದಾದರೂ ಹಳೆಯ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಕೈ ಹಿಡಿದುಕೊಂಡು ಹೋಗುತ್ತಿರುವಾಗ ಅಥವಾ ನದಿಯ ದಡದಲ್ಲಿ ಒಟ್ಟಿಗೆ ವಿವಿಧ ಭಕ್ಷ್ಯಗಳನ್ನು ಸವಿಯುತ್ತಿರುವಾಗ ನಿಮ್ಮ ಪ್ರೇಮ ಕಥೆಯ ಪ್ರಾರಂಭದ ದಿನಗಳ ನೆನಪು ಚಿಗುರೊಡೆಯದೆ ಇರಲಾರದು.

ತಿರುಚಿ ಎಂದೂ ಕರೆಯಲ್ಪಡುವ ತಿರುಚಿರಾಪಳ್ಳಿಯು ಇತಿಹಾಸ, ಸಂಸ್ಕೃತಿ ಮತ್ತು ಸೌಂದರ್ಯದ ನಗರವಾಗಿದೆ. ಇದು ಭಾರತದ ಅತ್ಯುತ್ತಮ ಪ್ರಣಯ ವಿಹಾರ ತಾಣಗಳಲ್ಲಿ ಒಂದಾಗಿದೆ. ತಮಿಳುನಾಡಿನ ದಕ್ಷಿಣ ರಾಜ್ಯದಲ್ಲಿರುವ ಪ್ರಾಚೀನ ವಾಸ್ತುಶೈಲಿಯು ಶಾಂತವಾದ ನೈಸರ್ಗಿಕ ಭೂದೃಶ್ಯಗಳು ಮತ್ತು ರುಚಿಕರವಾದ ಆಹಾರದೊಂದಿಗೆ ಬೆರೆತಿರುವ ಕೆಲವು ಕ್ಷಣಗಳನ್ನು ಜೀವಂತಗೊಳಿಸುತ್ತದೆ.

ಪ್ರಾಚೀನ ದೇವಾಲಯಗಳು

ಸ್ಥಳದ ಸುತ್ತಲೂ ಹರಡಿರುವ ಹಲವಾರು ದೇವಾಲಯಗಳಿಗಿಂತ ಹೆಚ್ಚು ಆಕರ್ಷಕವಾದದ್ದು ಯಾವುದು? ತಿರುಚ್ಚಿಯು ಅನೇಕ ಪವಿತ್ರ ದೇವಾಲಯಗಳೊಂದಿಗೆ ಅಗಾಧವಾದ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಅವುಗಳಲ್ಲಿ ದೈವಿಕ ವೈಭವ ಮತ್ತು ವಾಸ್ತುಶಿಲ್ಪದ ಅದ್ಭುತಗಳ ಸಾರಾಂಶವಾಗಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವೂ ಒಂದು. ಭಗವಾನ್ ವಿಷ್ಣುವಿನ ರಂಗನಾಥ ಅವತಾರದಲ್ಲಿ ನಿರ್ಮಿಸಲಾದ ಈ ದೇವಾಲಯದ ಸಂಕೀರ್ಣವು ತನ್ನ ಸಂಕೀರ್ಣವಾದ ಕೆತ್ತನೆಗಳು, ಎತ್ತರದ ಗೋಪುರಗಳು ಮತ್ತು ಪವಿತ್ರ ತೊಟ್ಟಿಗಳಿಂದ ಭಕ್ತರನ್ನು ಮೋಡಿಮಾಡುತ್ತದೆ. ಇಲ್ಲಿನ ವಿಸ್ಮಯಕಾರಿ ರಚನೆಗಳ ಮಧ್ಯೆ ದಂಪತಿ ಆಧ್ಯಾತ್ಮಿಕ ವಾತಾವರಣದಲ್ಲಿ ತಮ್ಮನ್ನು ತಾವು ನೆನೆಯಬಹುದು.


ರಾಕ್‌ಫೋರ್ಟ್ ಟೆಂಪಲ್

ತಪ್ಪಿಸಿಕೊಳ್ಳಬಾರದ ಮತ್ತೊಂದು ದೇವಾಲಯ ರಾಕ್‌ಫೋರ್ಟ್ ಟೆಂಪಲ್. ನಗರದ ಮೇಲೆ ಪಕ್ಷಿನೋಟವನ್ನು ನೀಡುವ ಬೃಹತ್ ಬಂಡೆಯ ಮೇಲೆ ಕುಳಿತಿರುವ ಈ ದೇಗುಲ 437 ಕಲ್ಲು ಮೆಟ್ಟಿಲುಗಳನ್ನು ಒಟ್ಟಿಗೆ ಹತ್ತುವುದು ಪ್ರೀತಿಯ ಸಂಬಂಧವನ್ನು ಪರೀಕ್ಷಿಸುತ್ತದೆ; ಅಕ್ಕಪಕ್ಕದಲ್ಲಿ ಸವಾಲುಗಳನ್ನು ಎದುರಿಸುವ ಮೂಲಕ ದಂಪತಿ ತಮ್ಮ ಸಂಬಂಧವನ್ನು ಬಲಪಡಿಸಲು ಇದು ಒಂದು ಉತ್ತಮ ಮಾರ್ಗವಾಗಿದೆ. ಅವರ ಉತ್ತುಂಗದಲ್ಲಿ ಗಣಪತಿ ಮತ್ತು ನಟರಾಜನಿಗೆ ಸಮರ್ಪಿತವಾದ ಪ್ರಾಚೀನ ಪಲ್ಲವ-ಯುಗದ ದೇವಾಲಯಗಳಿವೆ. ಅಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯ ಜೀವನದಲ್ಲಿ ಶಾಂತಿಗಾಗಿ ಪ್ರಾರ್ಥಿಸಬಹುದು.

ಕಾವೇರಿ ನದಿ ತೀರ

ಕಾವೇರಿ ನದಿಯ ದಡವು ರಮಣೀಯ ಸೌಂದರ್ಯದೊಂದಿಗೆ ಶಾಂತಿಯನ್ನು ನೀಡುತ್ತದೆ. ಗದ್ದಲದ ಸ್ಥಳಗಳಿಂದ ಸ್ವಲ್ಪ ದೂರವಾಗಿ ಶಾಂತತೆವಾಗಿ ಪ್ರಕೃತಿಯ ಮಧ್ಯೆ ಸುತ್ತಲು ಬಯಸಿದರೆ ಈ ತೀರದಲ್ಲಿ ನಿಧಾನವಾಗಿ ನಡೆಯಿರಿ. ದಂಪತಿ ಮೌನವಾಗಿ ದೋಣಿ ವಿಹಾರಕ್ಕೆ ಹೋಗಬಹುದು ಅಥವಾ ನದಿಯ ಪಕ್ಕದಲ್ಲಿ ಹಾಕಲಾದ ಬೆಂಚುಗಳ ಮೇಲೆ ಕುಳಿತುಕೊಳ್ಳಬಹುದು. ದೂರದ ಪರ್ವತಗಳ ಹಿಂದೆ ಸೂರ್ಯ ಮುಳುಗಿದ ಅನಂತರ ಕಿತ್ತಳೆ ಬಣ್ಣದ ಆಕಾಶವನ್ನು ವೀಕ್ಷಿಸಬಹುದು.


ಪಾಕಶಾಲೆ

ರೊಮ್ಯಾಂಟಿಕ್ ಗೆಟ್‌ವೇಗಳ ವಿಷಯಕ್ಕೆ ಬಂದಾಗ ಸ್ಥಳೀಯ ಆಹಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದಿರುವುದು ಹೇಗೆ? ತಿರುಚಿ ನಿಮಗೆ ಅದಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ಸಾಂಪ್ರದಾಯಿಕ ತಮಿಳುನಾಡಿನ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಪಾಕಪದ್ಧತಿಗಳವರೆಗೆ ರೆಸ್ಟೋರೆಂಟ್‌ಗಳು ಇಲ್ಲಿ ವಿಭಿನ್ನ ರುಚಿ ಮೊಗ್ಗುಗಳನ್ನು ಪೂರೈಸುತ್ತವೆ. ದಂಪತಿಗಳು ಸ್ಥಳೀಯ ತಿನಿಸುಗಳಲ್ಲಿ ದೋಸೆ, ಇಡ್ಲಿ ಮತ್ತು ಬಿರಿಯಾನಿಯನ್ನು ಪ್ರಯತ್ನಿಸಬೇಕು ಅಥವಾ ನದಿಯ ನೋಟವನ್ನು ಆನಂದಿಸುತ್ತಿರುವಾಗ ಉನ್ನತ ಮಟ್ಟದ ರೆಸ್ಟೋರೆಂಟ್‌ನಲ್ಲಿ ಕ್ಯಾಂಡಲ್‌ಲೈಟ್ ಡಿನ್ನರ್ ಮಾಡಬಹುದು.

ಸಾಂಸ್ಕೃತಿಕ ಪ್ರದರ್ಶನ

ಸಂಸ್ಕೃತಿಗೆ ಹತ್ತಿರವಾಗುವುದು ನಿಮ್ಮ ಪ್ರೀತಿಪಾತ್ರರೊಂದಿಗಿನ ಯಾವುದೇ ಪ್ರವಾಸದ ಪ್ರಮುಖ ಭಾಗವಾಗಿದೆ ಮತ್ತು ಈ ನಿಟ್ಟಿನಲ್ಲಿ ತಿರುಚಿಯು ಸಾಕಷ್ಟು ಕೊಡುಗೆಗಳನ್ನು ಹೊಂದಿದೆ. ಪ್ರದೇಶದ ಶ್ರೀಮಂತ ಕಲಾತ್ಮಕ ಸಂಪ್ರದಾಯಗಳನ್ನು ಪ್ರದರ್ಶಿಸುವ ಶಾಸ್ತ್ರೀಯ ಸಂಗೀತ ಕಛೇರಿಗಳು ಮತ್ತು ನೃತ್ಯ ಕಾರ್ಯಕ್ರಮಗಳಿಗೆ ಹಾಜರಾಗಿ ಅಥವಾ ಪ್ರದೇಶದ ವಿಶಿಷ್ಟವಾದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ರೋಮಾಂಚಕ ಮಾರುಕಟ್ಟೆಗಳಿಗೆ ಭೇಟಿ ನೀಡಿ. ಯಾಕೆಂದರೆ ಮನೆಗೆ ಮರಳಿದ ಸ್ಮಾರಕಗಳು ಶಾಶ್ವತವಾಗಿ ಹತ್ತಿರದಲ್ಲಿ ಉಳಿಯುತ್ತವೆ. ಮಸಾಲೆಯುಕ್ತ ಗಾಳಿಯ ನಡುವೆ ಕೈ- ಕೈ ಹಿಡಿದು ಬಿಡುವಿಲ್ಲದ ಬೀದಿಗಳಲ್ಲಿ ನಡೆಯುವುದು ದಂಪತಿ ಹೃದಯದಲ್ಲಿ ದೀರ್ಘಕಾಲ ಬದುಕುವ ನೆನಪುಗಳನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: Dwarka Tour: ದ್ವಾರಕೆಗೆ ಹೋದಾಗ ಏನೇನು ನೋಡಬಹುದು?

ಪ್ರಕೃತಿಯ ನಡುವೆ ಒಂದಷ್ಟು ಹೊತ್ತು

ನಮ್ಮ ರಜಾದಿನಗಳಲ್ಲಿ ಬೇಕಾಗಿರುವುದು ಶಾಂತಿ. ನಗರಗಳು ಕೆಲವೊಮ್ಮೆ ನಮ್ಮನ್ನು ಬ್ಯುಸಿಯಾಗಿರುವಂತೆ ಮಾಡುತ್ತದೆ. ಆದ್ದರಿಂದ ತಿರುಚ್ಚಿಗೆ ಬಂದರೆ ಹೊರವಲಯವನ್ನು ನೋಡಬೇಡಿ. ಸುತ್ತಮುತ್ತಲಿನ ಹಚ್ಚ ಹಸಿರಿನಿಂದಾಗಿ ಪ್ರಶಾಂತ ವಾತಾವರಣವನ್ನು ನೋಡಿ. ಜಲಪಾತಗಳ ಶಬ್ದಗಳನ್ನು ಕಿವಿಕೊಟ್ಟು ಆಲಿಸಿ. ದಂಪತಿಗಳು ಪರಸ್ಪರ ಜೊತೆಯಾಗಿ ಪ್ರಕೃತಿಯೊಂದಿಗೆ ಇರಲು ಇದಕ್ಕಿಂತ ಹೆಚ್ಚು ನೆಮ್ಮದಿಯ ತಾಣ ಬೇರೆ ಇರಲಾರದು ಎಂದೆನಿಸಿದರೆ ತಪ್ಪಿಲ್ಲ.

Continue Reading

ಪ್ರವಾಸ

Russia Tourism: ವೀಸಾ ಇಲ್ಲದೆ ಭಾರತೀಯರಿನ್ನು ರಷ್ಯಾಕ್ಕೆ ಭೇಟಿ ನೀಡಬಹುದು!

ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಭಾರತೀಯರು ರಷ್ಯಾಕ್ಕೆ ವೀಸಾ ಇಲ್ಲದೇ (Russia Tourism) ತೆರಳಬಹುದು. ಈ ಕುರಿತು ಮಾತುಕತೆ ಜೂನ್‌ನಲ್ಲಿ ಪ್ರಾರಂಭವಾಗಲಿದೆ. ರಷ್ಯಾ ಮತ್ತು ಭಾರತವು ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯದ ಮೂಲಕ ಪ್ರವಾಸೋದ್ಯಮ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

VISTARANEWS.COM


on

By

Russia Tourism
Koo

ವಿಶ್ವವನ್ನು ಸುತ್ತಬೇಕು (world tour) ಎನ್ನುವ ಆಸೆ ಉಳ್ಳ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು (indians) ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ (Russia Tourism) ಮಾಡಬಹುದು. ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚಿಸಲು ಎರಡೂ ದೇಶಗಳು ಪ್ರಯಾಣದ ಪರಿಸ್ಥಿತಿಗಳನ್ನು ಸರಾಗಗೊಳಿಸಲು ಯೋಜನೆ ರೂಪಿಸುತ್ತಿವೆ.

ರಷ್ಯಾ ಮತ್ತು ಭಾರತ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಮಾನದಂಡಗಳನ್ನು ಅಂತಿಮಗೊಳಿಸಲು ಸಮಾಲೋಚನೆಗಳನ್ನು ಜೂನ್‌ ನಿಂದ ಪ್ರಾರಂಭಿಸಲಿದೆ. ವೀಸಾ ಮುಕ್ತ ಗುಂಪು ಪ್ರವಾಸಿ ವಿನಿಮಯವನ್ನು ಪ್ರಾರಂಭಿಸಿದ ಅನಂತರ ಭಾರತೀಯರು ರಷ್ಯಾಕ್ಕೆ ಸುಲಭವಾಗಿ ಪ್ರಯಾಣಿಸಬಹುದು.

ರಷ್ಯಾದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ಬಹುಪಕ್ಷೀಯ ಆರ್ಥಿಕ ಸಹಕಾರ ಮತ್ತು ವಿಶೇಷ ಯೋಜನೆಗಳ ವಿಭಾಗದ ನಿರ್ದೇಶಕಿ ನಿಕಿತಾ ಕೊಂಡ್ರಾಟ್ಯೆವ್, ಭಾರತವು ಆಂತರಿಕ ರಾಜ್ಯ ಸಮನ್ವಯದ ಅಂತಿಮ ಹಂತದಲ್ಲಿದೆ ಎಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ರಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಚಾರಗಳಿವೆ.

ರಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣ

ರಷ್ಯಾ ಮತ್ತು ಭಾರತದ ನಡುವಿನ ಮಾತುಕತೆಗಳು ಇನ್ನೂ ನಡೆಯುತ್ತಿವೆ ಮತ್ತು ಜೂನ್‌ನಲ್ಲಿ ಪ್ರಯಾಣವನ್ನು ಸರಾಗಗೊಳಿಸುವ ದ್ವಿಪಕ್ಷೀಯ ಒಪ್ಪಂದದ ಕುರಿತು ಉಭಯ ರಾಷ್ಟ್ರಗಳು ಸಮಾಲೋಚನೆಗಳನ್ನು ಪ್ರಾರಂಭಿಸುತ್ತವೆ. ಅಂತಿಮಗೊಳಿಸುವಿಕೆಯ ಅನಂತರ ರಷ್ಯಾ ಮತ್ತು ಭಾರತವು ಒಟ್ಟಾಗಿ ವೀಸಾ- ಮುಕ್ತ ಗುಂಪು ಪ್ರವಾಸಿ ವಿನಿಮಯವನ್ನು ಪ್ರಾರಂಭಿಸುತ್ತದೆ ಎಂದು ರಷ್ಯಾದ ಸಚಿವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.


ಯಾವಾಗ ಸಾಧ್ಯವಾಗುತ್ತದೆ?

ಕಜಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ “ರಷ್ಯಾ- ಇಸ್ಲಾಮಿಕ್ ವರ್ಲ್ಡ್: ಕಜಾನ್‌ಫೋರಮ್ 2024” ಭಾಗದಲ್ಲಿ ಸಚಿವರು ಈ ವರ್ಷದ ಅಂತ್ಯದ ವೇಳೆಗೆ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಇದನ್ನೂ ಓದಿ: Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

“ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯ ಕೇಂದ್ರಗಳನ್ನು ಪ್ರಾರಂಭಿಸಲು ಸಜ್ಜಾಗುತ್ತಿರುವಂತೆ ರಷ್ಯಾ ಮತ್ತು ಭಾರತವು ತಮ್ಮ ಪ್ರವಾಸೋದ್ಯಮ ಸಂಬಂಧಗಳನ್ನು ಬಲಪಡಿಸಲು ಸಜ್ಜಾಗಿದೆ. ಎರಡು ರಾಷ್ಟ್ರಗಳ ನಡುವಿನ ಮೊದಲ ಸುತ್ತಿನ ಸಮಾಲೋಚನೆಯನ್ನು ಜೂನ್‌ನಲ್ಲಿ ನಿಗದಿಪಡಿಸಲಾಗಿದೆ. ಇದು ದ್ವಿಪಕ್ಷೀಯ ಒಪ್ಪಂದವನ್ನು ಅಂತಿಮಗೊಳಿಸುವ ಗುರಿಯನ್ನು ಹೊಂದಿದೆ.


ಪ್ರಸ್ತುತ ಯಾರಿಗಿದೆ ಅವಕಾಶ?

ರಷ್ಯಾ ಈಗ ಚೀನಾ ಮತ್ತು ಇರಾನ್‌ನ ಜನರಿಗೆ ತನ್ನ ವೀಸಾ ಮುಕ್ತ ಪ್ರವಾಸಿ ವಿನಿಮಯ ಕಾರ್ಯಕ್ರಮದ ಮೂಲಕ ವೀಸಾ ಮುಕ್ತವಾಗಿ ಪ್ರವೇಶಿಸಲು ಅವಕಾಶ ನೀಡುತ್ತದೆ. ಸಚಿವರ ಪ್ರಕಾರ, ಕಾರ್ಯಕ್ರಮದ ಯಶಸ್ಸನ್ನು ಭಾರತದೊಂದಿಗೆ ಪುನರಾವರ್ತಿಸುವ ಗುರಿಯನ್ನು ದೇಶ ಹೊಂದಿದೆ. ರಷ್ಯಾ ಮತ್ತು ಚೀನಾ ನಡುವೆ ಮತ್ತು ರಷ್ಯಾ ಮತ್ತು ಇರಾನ್ ನಡುವೆ ವೀಸಾ-ಮುಕ್ತ ಗುಂಪು ಪ್ರವಾಸಿ ವಿನಿಮಯವು 2023ರ ಆಗಸ್ಟ್ 1ರಂದು ಪ್ರಾರಂಭವಾಯಿತು.

Continue Reading

ದೇಶ

Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

ತತ್ಕಾಲ್ ಸೇವೆಯ ವ್ಯವಸ್ಥೆಯನ್ನು ಬಳಸಿಕೊಂಡು ತಕ್ಷಣದ ಪ್ರಯಾಣದ ಯೋಜನೆಗಳಿಗೆ ಟಿಕೇಟ್‌ಗಳನ್ನು ಬುಕ್ ಮಾಡಬಹುದು. ಎಲ್ಲಾ ರೈಲುಗಳ ಕಾಯ್ದಿರಿಸಿದ ಕೋಚ್ ಗಳಲ್ಲಿ ಭಾರತೀಯ ರೈಲ್ವೇಯು ರೈಲು ಟಿಕೆಟ್‌ಗಳ ತತ್ಕಾಲ್ ಬುಕಿಂಗ್ (Tatkal Tickets) ಅನ್ನು ಅನುಮತಿಸುತ್ತದೆ. ತತ್ಕಾಲ್‌ ಟಿಕೆಟ್‌ ಪಡೆಯುವ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Tatkal Tickets
Koo

ಕೊನೆ ಘಳಿಗೆಯಲ್ಲಿ ಪ್ರವಾಸ (travel) ಹೊರಡುವ ಯೋಜನೆಯೇ ಅಥವಾ ತುರ್ತಾಗಿ ಬೇರೆ ನಗರಕ್ಕೆ ಹೋಗಬೇಕಿದೆಯೇ? ಆದರೆ ಇನ್ನೂ ರೈಲ್ವೇ ಟಿಕೇಟ್ ಕಾದಿರಿಸಿಲ್ಲ ಎಂಬ ಚಿಂತೆ ಬೇಡ. ಐಆರ್‌ಸಿಟಿಸಿಯ (IRCTC) ತತ್ಕಾಲ್ ಸೇವೆಯು (Tatkal Tickets) ಪ್ರಯಾಣಿಕರಿಗೆ ಹೊರಡುವ ಒಂದು ದಿನದ ಮುಂಚಿತವಾಗಿ ರೈಲು ಸೀಟುಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ.

ತತ್ಕಾಲ್ ಸೇವೆಯ ವ್ಯವಸ್ಥೆಯನ್ನು ಬಳಸಿಕೊಂಡು ತಕ್ಷಣದ ಪ್ರಯಾಣದ ಯೋಜನೆಗಳಿಗೆ ಟಿಕೇಟ್‌ಗಳನ್ನು ಬುಕ್ ಮಾಡಬಹುದು. ಎಲ್ಲಾ ರೈಲುಗಳ ಕಾಯ್ದಿರಿಸಿದ ಕೋಚ್‌ಗಳಲ್ಲಿ ಭಾರತೀಯ ರೈಲ್ವೇಯು ರೈಲು ಟಿಕೆಟ್‌ಗಳ ತತ್ಕಾಲ್ ಬುಕಿಂಗ್ ಅನ್ನು ಅನುಮತಿಸುತ್ತದೆ. ಆದ್ದರಿಂದ ನೀವು ಕೊನೆಯ ನಿಮಿಷದಲ್ಲಿ ಸ್ಲೀಪರ್, 3AC, 2AC, ಅಥವಾ 1AC ಯ ಟಿಕೆಟ್ ಖರೀದಿಸಬಹುದು.

ತತ್ಕಾಲ್ ಟಿಕೆಟ್ ಶುಲ್ಕ

ಐಆರ್‌ಸಿಟಿಸಿ ಬುಕಿಂಗ್‌ಗಳಿಗೆ ಹೆಚ್ಚುವರಿ ದರವನ್ನು ವಿಧಿಸುತ್ತದೆ. ಏಕೆಂದರೆ ಅದು ತತ್ಕಾಲ್ ಯೋಜನೆಗೆ ಸೀಟುಗಳನ್ನು ಕಾಯ್ದಿರಿಸಬೇಕು. ಉದಾಹರಣೆಗೆ ತತ್ಕಾಲ್ ಟಿಕೆಟ್‌ನ ಬೆಲೆ ಅಂದಾಜು 1,300 ರೂ. ಆಗಿರುತ್ತದೆ ಎಂದರೆ, ಸಾಮಾನ್ಯ ಟಿಕೆಟ್‌ಗಳ ಬೆಲೆ 900 ರೂ. ಆಗಿರುತ್ತದೆ. ಎರಡನೇ ದರ್ಜೆಯ (ಕುಳಿತುಕೊಳ್ಳುವಿಕೆ) ಹೊರತುಪಡಿಸಿ, ಐಆರ್‌ಸಿಟಿಸಿ ಎಲ್ಲಾ ಪ್ರಯಾಣಿಕರಿಗೆ ಮೂಲ ದರದ ಶೇ. 30 ಹೆಚ್ಚು ಶುಲ್ಕ ವಿಧಿಸುತ್ತದೆ.

ಬುಕ್ಕಿಂಗ್ ಸಮಯ

ತತ್ಕಾಲ್ ಟಿಕೆಟ್ ಬುಕ್ಕಿಂಗ್ ವಿಂಡೋವನ್ನು ಐಆರ್‌ಸಿಟಿಸಿಯಿಂದ ರೈಲು ಪ್ರಾರಂಭವಾಗುವ ನಿಲ್ದಾಣದಿಂದ ಹೊರಡುವ ಒಂದು ದಿನ ಮೊದಲು ತೆರೆಯಲಾಗುತ್ತದೆ. ಉದಾಹರಣೆಗೆ, ನೀವು ಕೋಲ್ಕತ್ತಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರೆ, ಕೋಲ್ಕತ್ತಾದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ ಪ್ರಯಾಣ ಪ್ರಾರಂಭಿಸಿಸುವ ಹಿಂದಿನ ದಿನದಿಂದ ಶುರುವಾಗುತ್ತದೆ. ಹೆಚ್ಚುವರಿಯಾಗಿ ಎಸಿ ವರ್ಗದ ಟಿಕೆಟ್‌ಗಳಿಗಾಗಿ (2A/3A/CC/EC/3E) ಖರೀದಿ ವಿಂಡೋ ಬೆಳಗ್ಗೆ 10 ಗಂಟೆಗೆ ತೆರೆಯುತ್ತದೆ. ಈ ಮಧ್ಯೆ ಎಸಿ ಅಲ್ಲದ ವರ್ಗ (SL/FC/2S) ತತ್ಕಾಲ್ ಟಿಕೆಟ್‌ಗಳು ಬೆಳಗ್ಗೆ 11 ಗಂಟೆಗೆ ಮಾರಾಟವಾಗುತ್ತವೆ.

ಬುಕ್ ಮಾಡುವುದು ಹೇಗೆ?

ಐಆರ್‌ಸಿಟಿಸಿಯ ವೆಬ್‌ಸೈಟ್ irctc.co.in ಗೆ ಹೋಗಿ ಲಾಗ್ ಇನ್ ಮಾಡಲು ನಿಮ್ಮ ಐಆರ್‌ಸಿಟಿಸಿ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. “ಸೈನ್ ಅಪ್” ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಮತ್ತು ನೀವು ಈಗಾಗಲೇ ಒಂದನ್ನು ಹೊಂದಿಲ್ಲದಿದ್ದರೆ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ಐಆರ್ ಸಿಟಿಸಿ ಖಾತೆಯನ್ನು ರಚಿಸಬಹುದು. ಲಾಗ್ ಇನ್ ಮಾಡಿದ ಅನಂತರ “ಬುಕ್ ಟಿಕೆಟ್” ಕ್ಲಿಕ್ ಮಾಡಿ.


“ತತ್ಕಾಲ್” ಬುಕ್ಕಿಂಗ್ ಆಯ್ಕೆಯನ್ನು ಆರಿಸಿ ಮತ್ತು ಪ್ರಯಾಣದ ದಿನಾಂಕ, ಮೂಲ ಮತ್ತು ಗಮ್ಯಸ್ಥಾನದ ನಿಲ್ದಾಣಗಳಂತಹ ಎಲ್ಲಾ ಅಗತ್ಯ ಮಾಹಿತಿಯನ್ನು ನಮೂದಿಸಿ. ನಿಮ್ಮ ಪ್ರಯಾಣಕ್ಕಾಗಿ ನೀವು ಬಯಸುವ ರೈಲು ಮತ್ತು ವರ್ಗವನ್ನು ಆಯ್ಕೆಮಾಡಿ. ಮುಂದೆ ಪ್ರಯಾಣಿಕರ ಮಾಹಿತಿಯನ್ನು ನಮೂದಿಸಿ. ಹೆಚ್ಚುವರಿಯಾಗಿ, ನಿಮ್ಮ ಆದ್ಯತೆಯ ಬರ್ತ್ ಅನ್ನು ನೀವು ಆಯ್ಕೆ ಮಾಡಬಹುದು. ಆದಾಗ್ಯೂ, ನಿಮಗೆ ಬರ್ತ್ ಆಸನವನ್ನು ನಿಯೋಜಿಸಲಾಗುವುದು ಎಂದು ನೀವು ಖಾತರಿಪಡಿಸದಿರಬಹುದು.

ಶುಲ್ಕ ಮತ್ತು ಹೆಚ್ಚುವರಿ ಮಾಹಿತಿಯನ್ನು ಪರಿಶೀಲಿಸಿದ ಅನಂತರ, “ಪಾವತಿಗೆ ಮುಂದುವರಿಯಿರಿ” ಕ್ಲಿಕ್ ಮಾಡಿ. ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್, ಯುಪಿಐ ಮತ್ತು ಇತರ ಪರ್ಯಾಯ ವಿಧಾನಗಳು ನೀವು ವಹಿವಾಟಿಗೆ ಪಾವತಿಸಬಹುದಾದ ಮಾರ್ಗಗಳಾಗಿವೆ. ಮೀಸಲಾತಿಯನ್ನು ಪರಿಶೀಲಿಸಿ. ಎಲೆಕ್ಟ್ರಾನಿಕ್ ಟಿಕೆಟ್ ಪಡೆಯಿರಿ.

ಇದನ್ನೂ ಓದಿ: Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

ಐಆರ್‌ಸಿಟಿಸಿ ಅಪ್ಲಿಕೇಶನ್ ಬಳಸುವುದು ಹೇಗೆ?

ಐಆರ್‌ಸಿಟಿಸಿ ಅಪ್ಲಿಕೇಶನ್ ಅನ್ನು ರನ್ ಮಾಡಲು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹೊಂದಿಸಿ. ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮತ್ತು ನಿಮ್ಮ ಐಆರ್ ಸಿಟಿಸಿ ರುಜುವಾತುಗಳೊಂದಿಗೆ ಸೈನ್ ಇನ್ ಮಾಡಿ. ಈ ಹಂತದಲ್ಲಿ “ತತ್ಕಾಲ್ ಬುಕಿಂಗ್” ಆಯ್ಕೆ ಮಾಡಿ. ನೀವು ಟಿಕೇಟ್‌ಗಳನ್ನು ಕಾಯ್ದಿರಿಸಿದ್ದರೂ ಹಲವು ಬಾರಿ ಅವುಗಳನ್ನು ದೃಢೀಕರಿಸಲಾಗುವುದಿಲ್ಲ.

ಜನರು ತಮ್ಮ ರೈಲು ಟಿಕೆಟ್ ದೃಢೀಕರಿಸದಿರುವಾಗ ಅಥವಾ ಅವರು ಈಗಿನಿಂದಲೇ ತಮ್ಮ ಪ್ರಯಾಣದ ಯೋಜನೆಗಳನ್ನು ಮಾಡಿದರೆ ತತ್ಕಾಲ್ ಟಿಕೆಟ್ ಅಥವಾ ಪ್ರೀಮಿಯಂ ತತ್ಕಾಲ್ ಅನ್ನು ಆಯ್ಕೆ ಮಾಡುತ್ತಾರೆ. ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಸ್ವಲ್ಪ ಹೆಚ್ಚಿನ ಶುಲ್ಕವನ್ನು ಹೊಂದಿದ್ದರೂ ವೇಗವಾಗಿ ಸೀಟ್ ಲಭ್ಯವಾಗುವುದು.

Continue Reading
Advertisement
Mobile
ದೇಶ3 hours ago

ಪರೀಕ್ಷೆಗೆ ಓದುವುದು ಬಿಟ್ಟು ಮೊಬೈಲ್‌ನಲ್ಲೇ ತಲ್ಲೀನ; 22 ವರ್ಷದ ಮಗಳನ್ನೇ ಕೊಂದ ತಾಯಿ

Rameshwaram Cafe Blast
ಕರ್ನಾಟಕ3 hours ago

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಹುಬ್ಬಳ್ಳಿಯಲ್ಲಿ ಇಬ್ಬರು ಎನ್‌ಐಎ ವಶಕ್ಕೆ

LPL 2024
ಪ್ರಮುಖ ಸುದ್ದಿ3 hours ago

LPL 2024 : ಐಪಿಎಲ್ ಎಫೆಕ್ಟ್​, ಸಿಕ್ಕಾಪಟ್ಟೆ ದುಡ್ಡು ಬಾಚಿದ ಮಹೀಶ್ ಪತಿರಾನಾ

Porsche
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

Hajj pilgrimage
ಬೆಂಗಳೂರು3 hours ago

Hajj Pilgrimage: ಹಜ್ ಯಾತ್ರಿಗಳನ್ನು ಬೀಳ್ಕೊಟ್ಟ ಸಿಎಂ ಸಿದ್ದರಾಮಯ್ಯ; ಹಜ್ ಭವನ ನಿರ್ಮಾಣಕ್ಕೆ ಅನುದಾನ

IPL 2024
ಕ್ರೀಡೆ4 hours ago

IPL 2024 : ಕೆಕೆಆರ್​ 4ನೇ ಬಾರಿ ಐಪಿಎಲ್​​ನ​ ಫೈನಲ್​ಗೆ, ಎಸ್ಆರ್​ಎಚ್​ಗೆ ಇನ್ನೊಂದು ಅವಕಾಶ

Robert Vadra
ದೇಶ4 hours ago

Robert Vadra: ಸ್ವಂತ ಬಲದಿಂದ ರಾಜಕೀಯಕ್ಕೆ ಬರುವೆ, ಗಾಂಧಿ ಹೆಸರು ಬಳಸಲ್ಲ; ರಾಬರ್ಟ್‌ ವಾದ್ರಾ ಶಪಥ!

IPL 2024
ಕ್ರೀಡೆ4 hours ago

IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

Talking Digital Safety for Teens programme by Meta in Bengaluru
ಕರ್ನಾಟಕ5 hours ago

Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

MLC Election North East Graduates Constituency Election Prohibitory order imposed in Vijayanagar district from June 1
ವಿಜಯನಗರ5 hours ago

MLC Election: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ವಿಜಯನಗರ ಜಿಲ್ಲೆಯಲ್ಲಿ ಜೂ.1ರಿಂದ ನಿಷೇಧಾಜ್ಞೆ ಜಾರಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ9 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು14 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು15 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌