Monsoon trekking: ರಕ್ತ ಹೀರುವ ಜಿಗಣೆಗಳಿಗೆ ಹೆದರುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ! - Vistara News

ಪ್ರವಾಸ

Monsoon trekking: ರಕ್ತ ಹೀರುವ ಜಿಗಣೆಗಳಿಗೆ ಹೆದರುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ!

ಪುಟಾಣಿ ಜೀವಿಗಳಾದ ಜಿಗಣೆ (leech) ಗಳ ಬಗೆಗೆ ಕೊಂಚ ತಿಳಿದುಕೊಳ್ಳುವ ಮೂಲಕ ಈ ಭಯವನ್ನು ಮೊದಲೇ ಹೋಗಲಾಡಿಸಿಕೊಂಡರೆ ನಿಮ್ಮ ಮಳೆಗಾಲದ ಪಯಣ ಅಥವಾ ಚಾರಣ (monsoon trekking) ಸುಖಕರವಾಗಬಹುದು.

VISTARANEWS.COM


on

leech on hand
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಳೆಗಾಲದ ಪ್ರವಾಸದಲ್ಲಿ (monsoon travel) ಚಾರಣದಲ್ಲಿ (monsoon trekking) ಕೈಕಾಲುಗಳಲ್ಲಿ ನಡುಕ ಹುಟ್ಟಿಸಬಲ್ಲ ತಾಕತ್ತಿರುವ ಏಕೈಕ ಜೀವಿ ಎಂದರೆ ಲೀಚ್‌ (Leech) ಅಥವಾ ಜಿಗಣೆ ಅಥವಾ ಉಂಬಳ. ಈ ಜಿಗಣೆಯ ಭಯದಲ್ಲಿ ಅನೇಕರು ಮಳೆಗಾಲದ ಪ್ರವಾಸವನ್ನೇ ನಿರ್ಲಕ್ಷ್ಯ ಮಾಡುವುದುದಂಟು. ಅನೇಕರಿಗೆ ಮಳೆಗಾಲದಲ್ಲಿ ಪಯಣ ಇಷ್ಟವಿದ್ದರೂ ಜಿಗಣೆಗೆ ಹೆದರಿ ಮನೆಯಲ್ಲೇ ಕೂರುವುದುಂಟು. ಇನ್ನೂ ಕೆಲವರು ಜಿಗಣೆ ಮೈಗೆ ಹತ್ತಿದ ಕೂಡಲೇ ಗಾಬರಿಯಾಗಿ ನಡುಕ ಹುಟ್ಟಿ, ಕೈಕಾಲು ಬಡಿದುಕೊಂಡು ಕಾಡು ಬೆಟ್ಟ ನಡುಗಿಹೋಗುವಂತೆ ಕಿರುಚಾಡುವುದುಂಟು. ಆದರೆ ಈ ಪುಟಾಣಿ ಜೀವಿಗಳ ಬಗೆಗೆ ಕೊಂಚ ತಿಳಿದುಕೊಳ್ಳುವ ಮೂಲಕ ಈ ಭಯವನ್ನು ಮೊದಲೇ ಹೋಗಲಾಡಿಸಿಕೊಂಡರೆ ನಿಮ್ಮ ಮಳೆಗಾಲದ ಪಯಣ ಅಥವಾ ಚಾರಣ ಸುಖಕರವಾಗಬಹುದು. ಹಾಗಾದರೆ ಬನ್ನಿ, ಜಿಗಣೆಯ ಕೆಲವು ವಿಶೇಷತೆಗಳನ್ನು ತಿಳಿಯುವ ಮೂಲಕ ಅವುಗಳ ಕಾಟದಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬುದನ್ನು ನೋಡೋಣ.

1. ಜಿಗಣೆಗಳಿಗೆ ಕಿವಿ ಕೇಳುವುದಿಲ್ಲ. ಹಾಗಾಗಿ ನೀವು ಎಷ್ಟು ಕಿರುಚಾಡಿ, ಕುಣಿದಾಡಿದರೂ ಅದು ಒಮ್ಮೆ ಕಚ್ಚಿದ ಮೇಲೆ ನಿಮ್ಮನ್ನು ಬಿಡಲಾರದು. ಆದರೂ ಅವು ತಮ್ಮ ದೇಹದ ವೈಬ್ರೇಶನ್‌ ಮೂಲಕ ಹೊರಗಿನ ವಿಚಾರಗಳಿಗೆ ಸ್ಪಂದಿಸುತ್ತವೆ.

2. ಇವಕ್ಕೆ ಕಣ್ಣು ಕಾಣಿಸದು. ಆದರೂ ಇವಕ್ಕೆ ಅತ್ಯಂತ ಶಕ್ತಿಯುತವಾದ ರುಚಿ ಹಾಗೂ ಸ್ಪರ್ಶ ಸಾಮರ್ಥ್ಯ ಇವೆ.

3. ನೆರಳುಗಳಿಗೆ ಜಿಗಣೆಗಳು ಸುಲಭವಾಗಿ ಆಕರ್ಷಿತವಾಗುತ್ತವೆ. ಅಷ್ಟೇ ಅಲ್ಲ, ಅವು ಸುಲಭವಾಗಿ ನಾವು ಬಿಡುಗಡೆ ಮಾಡುವ ಕಾರ್ಬನ್‌ ಡೈ ಆಕ್ಸೈಡ್‌ಗೂ ಪ್ರತಿಕ್ರಿಯಿಸುತ್ತವೆ.

4. ಅವುಗಳ ಬಾಯಿಯ ಜಾಗದಲ್ಲಿ ಅಗಲವಾದ ಎರಡೂ ಬದಿಗಳಿಗೆ ಚಾಚಿಕೊಂಡಿರುವ ರಕ್ತ ಹೀರಲು ಸಹಾಯವಾಗುವ ರಚನೆಗಳಿದ್ದು ಇದು ಬಹಳ ಹೊತ್ತಿನವರೆಗೆ ಗಟ್ಟಿಯಾಗಿ ಒಂದೇ ಜಾಗದಲ್ಲಿ ಹಿಡಿದು ರಕ್ತ ಹೀರಬಲ್ಲ ಶಕ್ತಿಯನ್ನು ಹೊಂದಿದೆ.

5. ಜಿಗಣೆ ಒಮ್ಮೆ ಕಚ್ಚಿ ಹಿಡಿದರೆ ಅದನ್ನು ಗ್ರಹಿಸಬಲ್ಲ ಶಕ್ತಿ ನಿಮಗಿಲ್ಲ. ಜಿಗಣೆ ನಮಗೆ ನೋವಾದಂತೆ ರಕ್ತ ಹೀರಬಲ್ಲ ಅಪರೂಪದ ಶಕ್ತಿ ಹೊಂದಿದ್ದು, ಅದು ನಿಮ್ಮ ದೇಹಕ್ಕೆ ಹತ್ತಿದೆ, ರಕ್ತ ಹೀರಲು ಶುರು ಮಾಡಿದೆ ಎಂಬುದೂ ನಿಮಗೆ ತಿಳಿಯುವುದಿಲ್ಲ. ನಿಮ್ಮ ಕಣ್ಣಿಗೆ ಅದು ಬಿದ್ದಾಗ ಇದ್ದಕ್ಕಿದ್ದಂತೆ ಗಾಬರಿಯಾಗಿ ಎಳೆಯಲು ಪ್ರಯತ್ನಿಸುತ್ತೀರಿ. ಕಿರುಚಾಡಿ, ಭೂಮಿ ಆಕಾಶ ಒಂದು ಮಾಡುತ್ತೀರಿ. ಆದರೆ, ಹೀಗೆ ಮಾಡುವುದರಿಂದ ಪ್ರಯೋಜನವಿಲ್ಲ. ನಿಧಾನವಾಗಿ ತಾಳ್ಮೆಯಿಂದ ಅದನ್ನು ನಿಮ್ಮ ದೇಹದಿಂದ ಬೇರ್ಪಡಿಸಲು ಪ್ರಯತ್ನಿಸಿ. ಎಳೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಅದರ ಬಾಯಿಯ ಭಾಗ ಚರ್ಮದಲ್ಲೇ ಅಂಟಿಕೊಂಡು, ದೇಹ ಪ್ರತ್ಯೇಕವಾಗಿ ಅದು ಬೀಳಬಹುದು. ಇದರಿಂದ ಚರ್ಮದ ಮೇಲೆ ಕಜ್ಜಿಯಾಗಬಹುದು.

6. ಜಿಗಣೆ ನಿಮ್ಮ ದೇಹದಲ್ಲಿ ರಕ್ತ ಕುಡಿಯುವುದು ಕಂಡರೆ, ಹೆದರದೆ ಸಮಾಧಾನವಾಗಿಯೇ ಇರಲು ಪ್ರಯತ್ನಿಸಿ. ಹೆಚ್ಚೆಂದರೆ ಅದು ನಿಮ್ಮ ದೇಹಕ್ಕಂಟಿ ೨೦ರಿಂದ ೩೦ ನಿಮಿಷಗಳ ಕಾಲ ಕೆಲವು ಹನಿ ರಕ್ತ ಹೀರಬಹುದು. ಖಂಡಿತವಾಗಿಯೂ ಇದು ಒಳ್ಳೆಯ ಅನುಭವವಲ್ಲದಿದ್ದರೂ, ಆದಷ್ಟೂ ಸಮಾಧಾನವಾಗಿರಲು ಪ್ರಯತ್ನಿಸಿ. ಹಾಗೆ ನೋಡಿದರೆ ಜಿಗಣೆ ರಕ್ತ ಹೀರುವುದರಿಂದ ನಿಮ್ಮ ಆರೋಗ್ಯದ ಮೇಲೆ ಯಾವ ಕೆಟ್ಟ ಪರಿಣಾಮವೂ ಆಗದು. ಹಾಗೆ ನೋಡಿದರೆ ವೈದ್ಯಕೀಯವಾಗಿ ಜಿಗಣೆ ರಕ್ತ ಹೀರುವುದು ವರವೇ. ಬಹಳಷ್ಟು ಸಂದರ್ಭಗಳಲ್ಲಿ ಜಿಗಣೆಯನ್ನು ವೈದ್ಯಕೀಯ ನೆರವಿಗಾಗಿಯೂ ಬಳಸಿಕೊಳ್ಳಲಾಗುತ್ತದೆ. ಹಾಗಾಗಿ ಈ ಬಗ್ಗೆ ಭಯ ಬೇಡ.

ಇಷ್ಟಾಗಿಯೂ ಜಿಗಣೆ ಮೈಮೇಲೆ ಹತ್ತಿಸಿಕೊಳ್ಳುವುದು ಯಾರಿಗೂ ಬೇಕಾಗಿಲ್ಲ ಎಂಬುದು ನಿಜವೇ. ಹಾಗಾಗಿ ಜಿಗಣೆಯಿಂದ ಪಾರಾಗಲು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು. ಮೈಗೆ ಸಾನಿಟೈಸರ್‌, ಸೊಳ್ಳೆ ರಿಪಲೆಂಟ್‌, ಡೆಟಾಲ್‌, ಒಡೋಮಸ್‌, ತಂಬಾಕಿನ ರಸ, ಸೀಮೆಎಣ್ಣೆ ಇತ್ಯಾದಿಗಳನ್ನು ಮೊದಲೇ ಹಚ್ಚಿಕೊಳ್ಳುವ ಮೂಲಕ, ದೇಹವನ್ನು ಸಂಪೂರ್ಣ ಮುಚ್ಚುವ ಬಟ್ಟೆಗಳನ್ನು ಹಾಕುವುದರಿಂದ, ಜಿಗಣೆ ನಿರೋಧಕ ಸಾಕ್ಸ್‌ ಬಳಸುವುದರಿಂದ, ಗಮ್‌ ಬೂಟ್‌ ಧರಿಸುವುದರಿಂದ ಪಾರಾಗಬಹುದು.

ಇದನ್ನೂ ಓದಿ: Health tips for Monsoon : ಮಳೆಗಾಲದ ಖುಷಿ ಅನುಭವಿಸಿ, ಆದರೆ ರೋಗಗಳನ್ನು ದೂರ ಇರಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

ಏಪ್ರಿಲ್‌ 26ರಂದು‌ ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯ ಮತದಾನ (Lok Sabha Election 2024) ನಡೆಯಲಿದೆ. ಈ ನಿಟ್ಟಿನಲ್ಲಿ ಸಾರ್ವತ್ರಿಕ ರಜೆ ಇರಲಿದ್ದು, ಮತದಾನವನ್ನು ಮತದಾರರು ತಪ್ಪಿಸಬಾರೆಂದು ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿಷೇದ ಹೇರಲಾಗಿದೆ. ಗುರುವಾರ ಸಂಜೆಯಿಂದಲೇ ನಂದಿ ಬೆಟ್ಟ ಕ್ಲೋಸ್‌ ಆಗಲಿದ್ದು, ಬನ್ನೇರುಘಟ್ಟ ಉದ್ಯಾನವನಕ್ಕೂ (Bannerghatta National Park) ನಿಷೇಧಿಸಲಾಗಿದೆ.

VISTARANEWS.COM


on

By

Lok sabha election 2024
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಲೋಕಸಭೆ ಚುನಾವಣೆ (Lok sabha Election 2024) ಹಿನ್ನೆಲೆಯಲ್ಲಿ ಶೇ 100ಕ್ಕೆ 100ರಷ್ಟು ಮತದಾನ (Voting) ಆಗಬೇಕೆಂದು, ಚುನಾವಣಾ ಆಯೋಗ ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಸದ್ಯ ಚುನಾವಣಾ ಆಯೋಗಕ್ಕೆ ಸಾಥ್‌ ನೀಡಿರುವ ನಂದಿ ಹಿಲ್ಸ್‌ (Nandi hills) ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta National Park) ಆಡಳಿತ ಮಂಡಳಿ ಮತದಾನದ ದಿನದಂದು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿದೆ.

ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ರಾಜಕೀಯ ಪಕ್ಷಗಳಂತೆ ಚುನಾವಣಾ ಆಯೋಗವೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತದಾನ ನಡೆಯುವ (Voting Day) ಆ ಎರಡು ದಿನವೂ ಸಾರ್ವತ್ರಿಕ ರಜೆಯನ್ನು (Government Holiday) ಘೋಷಿಸಲಾಗಿದೆ. ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆಯನ್ನು (Paid leave) ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಏಪ್ರಿಲ್ 26 ರಂದು ಅಂದರೆ ನಾಳೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. 2ನೇ ಹಂತದ ಮತದಾನವು ಮೇ 7ರಂದು ನಡೆಯಲಿದೆ. ಈ ದಿನಗಳಂದು ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಎಲ್ಲ ವ್ಯಾವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕಾಯಂ ಆಗಿ ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ.

ರಜೆ ಸಿಕ್ಕ ಖುಷಿಯಲ್ಲಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಹೀಗಾಗಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಝೂ, ಸಫಾರಿ ಮತ್ತು ಚಿಟ್ಟೆ ಪಾರ್ಕ್ ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರುವುದಿಲ್ಲ. ಏಪ್ರಿಲ್‌ 26ರಂದು ಮತದಾನ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ರಜೆ ಘೋಷಿಸಲಾಗಿದೆ. ಲೋಕಸಭಾ ಚುನಾವಣೆಯ ಮತದಾನದಲ್ಲಿ ಜನರು ಸಕ್ರಿಯವಾಗಿ ಭಾಗಿಯಾಗಲೆಂದು ರಜೆ ಘೋಷಣೆ ಮಾಡಲಾಗಿದೆ.

ಮತದಾನದ ಪ್ರಮಾಣ ಹೆಚ್ಚಳ ಮಾಡುವ ದೃಷ್ಟಿಯಿಂದ ಏಪ್ರಿಲ್‌ 26ರಂದು ಬನ್ನೇರುಘಟ್ಟ ಪಾರ್ಕ್‌ ರಜೆ ಇರಲಿದೆ. 26 ಬದಲಾಗಿ ಏಪ್ರಿಲ್‌ 30ರಂದು ಪಾರ್ಕ್‌ ತೆರೆಯಲಿದೆ. ಬನ್ನೇರುಘಟ್ಟ ಪಾರ್ಕ್‌ ಪ್ರತಿ ಮಂಗಳವಾರ ರಜೆ ಇರುತ್ತಿತ್ತು. ಆದರೆ 26ರ ರಜೆಯನ್ನು ಸರಿದೂಗಿಸುವ ಸಲುವಾಗಿ ಏಪ್ರಿಲ್‌ 30ರಂದು ಪ್ರವಾಸಿಗರ ವೀಕ್ಷಣೆಗೆ ಲಭ್ಯ ಇರಲಿದೆ.

ಇದನ್ನೂ ಓದಿ: Voter ID: ವೋಟರ್‌ ಐಡಿ ಕಾರ್ಡ್‌ ಸಿಕ್ಕಿಲ್ಲವೆ? ಡೋಂಟ್‌ ವರಿ. ಈ 12 ದಾಖಲೆಗಳಲ್ಲಿ ಒಂದಿದ್ದರೆ ಸಾಕು!

ಏ.25ರ ಸಂಜೆಯಿಂದಲೇ ನಂದಿ ಬೆಟ್ಟ ಕ್ಲೋಸ್‌

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು (ಏ.25) ಸಂಜೆ ಐದು ಗಂಟೆಯಿಂದ‌ ನಂದಿ ಬೆಟ್ಟಕ್ಕೆ ನಿಷೇಧ ಹೇರಲಾಗಿದೆ. ನಂದಿಗಿರಿಧಾಮ ನಿಷೇಧ ಏರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.

ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಸಂಜೆ 7 ಗಂಟೆವರೆಗೂ ನಂದಿ ಹಿಲ್ಸ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧವಿದೆ. ಮತದಾನಕ್ಕೆಂದು ರಜೆ ಜತೆಗೆ ವೀಕೆಂಡ್ ಇರುವುದರಿಂದ ಮತದಾನ ಬಿಟ್ಟು ನಂದಿ ಹಿಲ್ಸ್‌ಗೆ ಮೋಜು ಮಸ್ತಿ ಮಾಡಲು ಪ್ರವಾಸಿಗರ ದಂಡು ಬರುತ್ತದೆ. ಇದನ್ನೂ ತಪ್ಪಿಸಲು ವಿಶ್ವವಿಖ್ಯಾತ ನಂದಿಗಿರಿಧಾಮದ ಪ್ರವೇಶ ಬಂದ್‌ ಮಾಡಲಾಗುತ್ತಿದೆ.

ಏಪ್ರಿಲ್‌ 26ರಂದು ಮತದಾನ ನಡೆಯುವ ಕ್ಷೇತ್ರಗಳು: ದಕ್ಷಿಣ ಕರ್ನಾಟಕ

1.ಉಡುಪಿ-ಚಿಕ್ಕಮಗಳೂರು (ಸಾಮಾನ್ಯ)
2.ಹಾಸನ (ಸಾಮಾನ್ಯ)
3.ದಕ್ಷಿಣ ಕನ್ನಡ (ಸಾಮಾನ್ಯ)
4.ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)
5. ತುಮಕೂರು (ಸಾಮಾನ್ಯ)
6.ಮಂಡ್ಯ (ಸಾಮಾನ್ಯ)
7.ಮೈಸೂರು-ಕೊಡಗು (ಸಾಮಾನ್ಯ)
8.ಚಾಮರಾಜನಗರ (ಪರಿಶಿಷ್ಟ ಜಾತಿ ಮೀಸಲು)
9. ಬೆಂಗಳೂರು ಗ್ರಾಮಾಂತರ (ಸಾಮಾನ್ಯ)
10 ಬೆಂಗಳೂರು ಉತ್ತರ (ಸಾಮಾನ್ಯ)
11. ಬೆಂಗಳೂರು ಕೇಂದ್ರ (ಸಾಮಾನ್ಯ)
12. ಬೆಂಗಳೂರು ದಕ್ಷಿಣ (ಸಾಮಾನ್ಯ)
13.ಚಿಕ್ಕಬಳ್ಳಾಪುರ (ಸಾಮಾನ್ಯ)
14.ಕೋಲಾರ (ಪರಿಶಿಷ್ಟ ಜಾತಿ ಮೀಸಲು)

Lok Sabha Election 2024 Karnataka declares 2 day general holiday
Lok Sabha Election 2024 Karnataka declares 2 day general holiday

ಮೇ 7ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳು: ಉತ್ತರ ಕರ್ನಾಟಕ

1.ಚಿಕ್ಕೋಡಿ (ಸಾಮಾನ್ಯ)
2.ಬೆಳಗಾವಿ (ಸಾಮಾನ್ಯ)
3.ಬಾಗಲಕೋಟೆ (ಸಾಮಾನ್ಯ)
4.ಬಿಜಾಪುರ (ಪರಿಶಿಷ್ಟ ಜಾತಿ ಮೀಸಲು)
5.ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು)
6.ರಾಯಚೂರು(ಪರಿಶಿಷ್ಟ ಪಂಗಡ ಮೀಸಲು)
7.ಬೀದರ್ (ಸಾಮಾನ್ಯ)
8.ಕೊಪ್ಪಳ (ಸಾಮಾನ್ಯ)
9.ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು)
10. ಹಾವೇರಿ (ಸಾಮಾನ್ಯ)
11. ಧಾರವಾಡ (ಸಾಮಾನ್ಯ)
12.ಉತ್ತರ ಕನ್ನಡ (ಸಾಮಾನ್ಯ)
13.ದಾವಣಗೆರೆ (ಸಾಮಾನ್ಯ)
14.ಶಿವಮೊಗ್ಗ (ಸಾಮಾನ್ಯ)

Lok Sabha Election 2024 Karnataka declares 2 day general holiday

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರವಾಸ

Summer Tour: ಬೇಸಿಗೆ ಪ್ರವಾಸಕ್ಕೆ ಸೂಕ್ತ ಈ 5 ಅದ್ಭುತ ಗಿರಿಧಾಮಗಳು!

Summer Tour: ಬೇಸಿಗೆ ರಜೆಯನ್ನು ಬೆಟ್ಟಗುಡ್ಡಗಳ ನಡುವೆ ಪ್ರಶಾಂತವಾದ ಸ್ಥಳದಲ್ಲಿ ಕಳೆಯುವ ಆಸೆ ಇದೆಯೇ ಹಾಗಿದ್ದರೆ ಇಲ್ಲಿ ಹೇಳಿರುವ ಐದು ಪ್ರದೇಶಗಳಿಗೆ ಪ್ರವಾಸ ಹೊರಡುವ ಪ್ಲಾನ್ ಈಗಲೇ ಮಾಡಿಕೊಳ್ಳಿ.

VISTARANEWS.COM


on

By

Summer Tour
Koo

ಭಾರತದಲ್ಲಿ (india) ಹಲವಾರು ಸುಂದರ, ಮನೋಹರ ತಾಣಗಳಿರುವಂತೆ ರುದ್ರರಮಣೀಯ ಸ್ಥಳಗಳೂ ಇವೆ. ಬೇಸಿಗೆಯ ರಜೆಯನ್ನು (Summer Tour) ಬೆಟ್ಟ ಗುಡ್ಡಗಳ ನಡುವೆ ಕಳೆಯಬೇಕು, ನಗರದ ಜಂಜಾಟದಿಂದ ದೂರವಾಗಿ ಮನಸ್ಸಿಗೆ ಶಾಂತಿ ಸೀಗುವ ಸ್ಥಳದಲ್ಲಿ ಕೆಲಕಾಲ ಇದ್ದು ಬರಬೇಕು ಎನ್ನುವ ಯೋಚನೆ ಇದ್ದರೆ ಭಾರತದ ಈ ಐದು ಗಿರಿಧಾಮಗಳಿಗೊಮ್ಮೆಯಾದರೂ (Hill Stations) ಭೇಟಿ ನೀಡಬಹುದು.

ಭಾರತದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಅದರಲ್ಲಿ ಕೆಲವು ಜೀವನದಲ್ಲಿ ರೋಮಾಂಚಕಾರಿ ಅನುಭವವನ್ನು ನೀಡುತ್ತದೆ. ನಾವು ರಜೆಯ ಬಗ್ಗೆ ಯೋಚಿಸಿದಾಗ ನಮಗೆ ಬೇಕಾಗಿರುವುದು ಜನಸಂದಣಿಯಿಲ್ಲದ ಸ್ಥಳ, ರುಚಿಕರವಾದ ಆಹಾರ, ಸಮ್ಮೋಹನಗೊಳಿಸುವ ನೋಟಗಳು ಮತ್ತು ಶಾಂತ ವಾತಾವರಣ.

29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಿರುವ ಭಾರತದಲ್ಲಿ ಸುಂದರವಾದ ವಿಹಾರ ತಾಣಗಳು ಹಲವಾರು ಇವೆ. ಅವುಗಳಲ್ಲಿ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಐದು ಗಿರಿಧಾಮಗಳು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Haridwara Travel: ಹರಿದ್ವಾರಕ್ಕೆ ಭೇಟಿ ನೀಡಿದಾಗ ಈ ಸ‍್ಥಳಗಳನ್ನು ಮಿಸ್ ಮಾಡದೇ ನೋಡಿ!


ಮಾವ್ಲಿನ್ನಾಂಗ್ (Mawlynnong)

‘ಏಷ್ಯಾದ ಸ್ವಚ್ಛ ಗ್ರಾಮ’ ಎಂದು ಕರೆಯಲ್ಪಡುವ ಮೇಘಾಲಯದ ಮಾವ್ಲಿನ್ನಾಂಗ್ ಪರಿಸರ ಸ್ನೇಹಿ ಜೀವನ ಹೊಂದಿದೆ. ನಿತ್ಯಹರಿದ್ವರ್ಣ ಪರಿಸರ, ಧುಮ್ಮಿಕ್ಕುವ ತೊರೆಗಳು, ಹಣ್ಣಿನ ತೋಟಗಳು ಮತ್ತು ತೂಗಾಡುವ ತಾಳೆ ಮರಗಳು ಮೇಘಾಲಯದ ಹೃದಯಭಾಗದಲ್ಲಿ ರಜೆಯ ಸುಂದರ ಅನುಭವವನ್ನು ನೀಡುತ್ತವೆ. ನೋಹ್ವೆಟ್ ಲಿವಿಂಗ್ ರೂಟ್ ಬ್ರಿಡ್ಜ್ ಕೂಡ ಈ ಸ್ಥಳದಲ್ಲಿದೆ. ಇಲ್ಲಿನ ತ್ಯಾಜ್ಯವನ್ನು ಬಿದಿರಿನ ಡಸ್ಟ್‌ಬಿನ್‌ಗಳಲ್ಲಿ ಸಂಗ್ರಹಿಸಿ ಅನಂತರ ಗೊಬ್ಬರವಾಗಿ ಬಳಸುವುದರಿಂದ ಮಾವ್ಲಿನ್ನಾಂಗ್ ಸ್ವಚ್ಛತೆಗೆ ಹೆಸರುವಾಸಿಯಾಗಿದೆ.

ನೊಹ್ವೆಟ್‌ನ ಲಿವಿಂಗ್ ರೂಟ್ ಬ್ರಿಡ್ಜ್ ಇಲ್ಲಿಯ ಪ್ರಮುಖ ಆಕರ್ಷಣೆ ಮಾತ್ರವಲ್ಲ ಮಾವ್ಲಿನ್ನಾಂಗ್‌ನಲ್ಲಿರುವ ಎಪಿಫ್ಯಾನಿ ಚರ್ಚ್ ಒಂದು ಶತಮಾನಕ್ಕೂ ಹೆಚ್ಚು ಹಳೆಯದಾಗಿದೆ. ಈ ಸೊಂಪಾದ ಮತ್ತು ಹಸಿರು ಉಷ್ಣವಲಯದ ಸ್ವರ್ಗದ ಮಧ್ಯದಲ್ಲಿ ಐರೋಪ್ಯ ವಾಸ್ತುಶಿಲ್ಪದ ಒಂದು ಸುಂದರ ಭಾಗವಾಗಿದೆ. ಚರ್ಚ್‌ಗೆ ಹತ್ತಿರವಿರುವ ಮರದ ಮನೆಗಳನ್ನು ಏರಿ ದೂರದವರೆಗೂ ಬಯಲು ಪ್ರದೇಶಗಳನ್ನು ಕಾಣಬಹುದು.


ಹಳೇಬೀಡು (Halebidu)

ಹಳೇಬೀಡು ಕರ್ನಾಟಕದ ಹಾಸನ ಜಿಲ್ಲೆಯಲ್ಲಿದೆ. ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಹಾಸನದ ಒಂದು ಸಣ್ಣ ಪಟ್ಟಣವಾಗಿದ್ದು, ಹೊಯ್ಸಳ ಸಾಮ್ರಾಜ್ಯದ ರಾಜರಾಜಧಾನಿಯಾಗಿತ್ತು. ಈ ಸ್ಥಳವು ತನ್ನ ಭವ್ಯವಾದ ದೇವಾಲಯಗಳಿಗೆ ಹೆಸರುವಾಸಿಯಾಗಿರುವುದರಿಂದ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬೇಲೂರಿನಿಂದ ಕೇವಲ 17 ಕಿ.ಮೀ. ದೂರದಲ್ಲಿರುವ ಹೊಯ್ಸಳರ ಪ್ರಾಚೀನ ರಾಜಧಾನಿ ಹಳೇಬೀಡು. ಕ್ರಿ.ಶ 1121 ರಲ್ಲಿ ನಿರ್ಮಿಸಲಾದ ಹೊಯ್ಸಳೇಶ್ವರ ಮತ್ತು ಕೇದಾರೇಶ್ವರದ ಸುಂದರವಾದ ಹೊಯ್ಸಳ ದೇವಾಲಯಗಳಿಗೆ ಇದು ಹೆಸರುವಾಸಿಯಾಗಿದೆ. ಲೋಹದಂತಹ ಹೊಳಪು ಹೊಂದಿರುವ ಸೂಕ್ಷ್ಮ ಮತ್ತು ಸಂಕೀರ್ಣವಾದ ಕೆತ್ತನೆಗಳು ಪ್ರವಾಸಿಗರನ್ನು ಮಂತ್ರಮುಗ್ಧರಾಗುವಂತೆ ಮಾಡುತ್ತದೆ.


ಕುದುರೆಮುಖ (Kudremukh)

ಕರ್ನಾಟಕದ ಕುದುರೆಮುಖ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಪರ್ವತ ಶ್ರೇಣಿ. ಇದು ಮಲಬಾರ್ ಟ್ರೋಗನ್, ಮಲಬಾರ್ ಶಿಳ್ಳೆ ಥ್ರಷ್ ಮತ್ತು ಸಾಮ್ರಾಜ್ಯಶಾಹಿ ಪಾರಿವಾಳದಂತಹ ವಿವಿಧ ಪಕ್ಷಿಗಳಿಗೆ ನೆಲೆಯಾಗಿದೆ. ಉಷ್ಣವಲಯದ ಜೈವಿಕ ಶ್ರೀಮಂತಿಕೆಯಿಂದಾಗಿ ಈ ಸ್ಥಳವನ್ನು ವಿಶ್ವದ 34 ಜೈವಿಕ ಹಾಟ್‌ಸ್ಪಾಟ್‌ಗಳಲ್ಲಿ ಒಂದೆಂದು ಘೋಷಿಸಲಾಗಿದೆ.

ಪರ್ವತದ ಬದಿಯು ಕುದುರೆಯ ಮುಖದ ಆಕಾರವನ್ನು ಹೋಲುವುದರಿಂದ ಇಲ್ಲಿಗೆ ಕುದುರೆಮುಖ ಎಂದು ಹೆಸರಾಗಿದೆ. ಈ ಶಿಖರವು ಸಂಸೆಗೆ ಹತ್ತಿರವಾಗಿರುವುದರಿಂದ ಐತಿಹಾಸಿಕ ಪುಟಗಳಲ್ಲಿ ‘ಸಂಸೆಪರ್ವತ’ ಎಂದೂ ಕರೆಯಲಾಗಿದೆ.


ಖಜ್ಜಿಯಾರ್ (Khajjiar)

ಖಜ್ಜಿಯಾರ್ ಹಿಮಾಚಲ ಪ್ರದೇಶದಲ್ಲಿ ಒಂದು ಗುಪ್ತ ರತ್ನವಾಗಿದೆ. ಇದು ಚಂಬಾ ಕಣಿವೆಯಲ್ಲಿರುವ ದೇವದಾರು-ಹೊದಿಕೆಯ ತಟ್ಟೆ-ಆಕಾರದ ಹಿಮಾಲಯನ್ ಪಟ್ಟಣವಾಗಿದೆ. ಸುಂದರ ಪರಿಸರಗಳು, ದಟ್ಟಣೆಯ ಹಸಿರು ಮತ್ತು ಸಾಹಸಗಳಿಗಾಗಿ ಜನಪ್ರಿಯ ಸ್ಥಳ ಇದಾಗಿದೆ.

ಖಜ್ಜಿಯಾರ್ ಅನ್ನು ಭಾರತದ ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲಾಗುತ್ತದೆ. ದಟ್ಟವಾದ ಪೈನ್ ಕಾಡುಗಳು, ಸೊಂಪಾದ ಹುಲ್ಲುಗಾವಲುಗಳು ಮತ್ತು ಹಿಮದಿಂದ ಆವೃತವಾದ ಪರ್ವತಗಳಿಂದ ಆವೃತವಾಗಿರುವ ಖಜ್ಜಿಯಾರ್ ಪ್ರತಿಯೊಬ್ಬ ಪ್ರವಾಸಿಗನು ಇಷ್ಟಪಡುವಂತಿದೆ.


ತವಾಂಗ್ (Tawang)

ತವಾಂಗ್ ಅರುಣಾಚಲ ಪ್ರದೇಶದ ಪಶ್ಚಿಮ ಭಾಗದಲ್ಲಿದ್ದು ಟಿಬೆಟ್‌ನ ಲಾಸಾದ ಹೊರಗೆ ವಿಶ್ವದ ಅತಿದೊಡ್ಡ ಬೌದ್ಧ ಮಠ ಎಂದು ಕರೆಯಲಾಗುತ್ತದೆ. 10,000 ಅಡಿ ಎತ್ತರದಲ್ಲಿರುವ ತವಾಂಗ್ 400 ವರ್ಷಗಳಷ್ಟು ಹಳೆಯದಾದ ಬೌದ್ಧ ಮಠಕ್ಕೆ ವಿಶ್ವ ಪ್ರಸಿದ್ಧವಾಗಿದೆ. ಐದನೇ ದಲೈ ಲಾಮಾ ಅವರ ಸಮಕಾಲೀನರಾದ ಸನ್ಯಾಸಿ ಮೇರಾ ಲಾಮಾ ಅವರು ಇಲ್ಲಿ ಮಠವನ್ನು ಸ್ಥಾಪಿಸಿದರು. ಆರನೇ ದಲೈ ಲಾಮಾ ಇಲ್ಲಿ ಜನಿಸಿದ್ದರು. ಪಟ್ಟಣದ ಹೃದಯಭಾಗದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಇದು ನೆಲೆಯಾಗಿದೆ.

Continue Reading

ಪ್ರವಾಸ

Special Food In Kashi: ನೀವು ಕಾಶಿಗೆ ಹೋದರೆ ಈ ತಿಂಡಿಗಳ ರುಚಿ ನೋಡಲು ಮರೆಯದಿರಿ!

ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಈ ಕುರಿತ ಮಾಹಿತಿ (Special Food In Kashi) ಇಲ್ಲಿದೆ.

VISTARANEWS.COM


on

Special Food In Kashi
Koo

ಕಾಶಿ ಅಥವಾ ವಾರಣಾಸಿಗೆ ಜೀವನದಲ್ಲೊಮ್ಮೆಯಾದರೂ ಹೋಗಬೇಕು, ಕಾಶಿ ವಿಶ್ವನಾಥನ ದರ್ಶನ ಮಾಡಬೇಕು. ಗಂಗೆಯನ್ನು ಕಂಡು ಕೈಮುಗಿದು ಮುಳುಗೆದ್ದು ಗಂಗಾರತಿಯನ್ನು ನೋಡಿ ಈ ಬದುಕು ಧನ್ಯ ಎಂದು ನೆಮ್ಮದಿ ಪಡೆಯಬೇಕು ಎಂಬುದು ಬಹುತೇಕ ಹಿಂದೂಗಳ ಜೀವಿತಾವಧಿಯ ಕನಸು. ಹಿಂದೆಲ್ಲ ಕಾಶಿಗೆ ಹೋಗುವುದೇ ಜೀವಿತಾವಧಿಯ ಅತ್ಯುನ್ನತವಾದ ದೊಡ್ಡ ಕನಸು. ಬಹಳ ದೂರ ಎಂಬ ಕಾರಣದಿಂದ ಹಿಡಿದು ಬದುಕಿನ ಜಂಜಡಗಳನ್ನೆಲ್ಲ ಮುಗಿಸಿದ ಮೇಲೆ ವೃದ್ಧಾಪ್ಯ ಸಮೀಪಿಸುವ ಹೊತ್ತಿಗೆ ಕಾಶಿಗೊಮ್ಮೆ ಹೇಗಾದರೂ ಮಾಡಿ ಹೋಗಿ ನೋಡಿ ಪ್ರಾಣ ಬಿಡುತ್ತೇನೆ ಎಂಬ ಸ್ಥಿತಿ ಹಲವರದ್ದಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜಗತ್ತು ಬದಲಾಗಿದೆ. ಕಾಶಿಯನ್ನು ನೋಡಲು ವೃದಾಪ್ಯದವರೆಗೆ ಕಾಯುವ ತಾಳ್ಮೆ ಯಾರಿಗೂ ಇಲ್ಲ. ಅಂದುಕೊಂಡ ತಕ್ಷಣ ವಿಮಾನದಲ್ಲೋ, ರೈಲಿನಲ್ಲೋ ಯುವಜನರೂ ಕೂಡಾ ಕಾಶಿಗೆ ಹೋಗಿ ಧನ್ಯರಾಗುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಕಾಶಿಯ ವಿಶ್ವನಾಥನನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಷ್ಟೇ ಅಲ್ಲ, ಯುವಜನರ ಸಂಖ್ಯೆಯಲ್ಲಿಯೂ ಭಾರೀ ಏರಿಕೆಯಾಗಿದೆ.
ಆದರೆ, ಕಾಶಿಗೆ ಹೋದರೆ ದರ್ಶನ, ಗಂಗಾತೀರ, ಗಂಗಾರತಿ, ಮಣಿಕರ್ಣಿಕಾ, ಕಾಳಭೈರವ ಮತ್ತಿತರ ದರ್ಶನ ಮಾತ್ರವಲ್ಲ, ಕಾಶಿಯ ಜೀವನಶೈಲಿ, ಊಟ ಇತ್ಯಾದಿಗಳ ದರ್ಶನವನ್ನೂ ಮಾಡಬೇಕು. ಕಾಶಿಯೊಳಗೆ ಹೊಕ್ಕರೆ ಸಾಕು, ಆಹಾರ ಪ್ರಿಯರಿಗೆ ನೆಮ್ಮದಿ ನೀಡುವ ನಾಳಿಗೆ ಚಪ್ಪರಿಸುವ ಸಾಕಷ್ಟು ಜಾಗಗಳಿವೆ. ಬಗೆಬಗೆಯ ಖಾದ್ಯಗಳೂ, ವಾರಣಾಸಿಯಲ್ಲಿ ಮಾತ್ರ ದಕ್ಕುವ ಆಹಾರ ವೈವಿಧ್ಯಗಳೂ ಇವೆ. ಬನ್ನಿ, ಕಾಶಿಯ ಗಲ್ಲಿಗಳಲ್ಲೊಮ್ಮೆ ಸುತ್ತಾಡಿ, ಇಲ್ಲಿ ಬಂದರೆ ತಿನ್ನಲೇಬೇಕಾದ ತಿನಿಸುಗಳು ಯಾವುವು ಎಂಬುದನ್ನು ನೋಡಿಕೊಂಡು (Special Food In Kashi) ಬರೋಣ.

Kachodi Subji

ಕಚೋಡಿ ಸಬ್ಜಿ

ಕಾಶಿಯಲ್ಲಿ ನೀವು ಯಾವದೇ ಹೊಟೇಲಿನಲ್ಲಿ ಉಳಿದುಕೊಂಡರೂ, ತಿನ್ನಲೆಂದು ಕಾಶಿಯ ಯಾವುದೇ ಗಲ್ಲಿಗಿಳಿದರೂ ಸಾಕು ನಿಮ್ಮನ್ನು ಕಚೋಡಿ ಸಬ್ಜಿ ಸ್ವಾಗತಿಸುತ್ತದೆ. ಕಾಶಿಯ ಬೆಳಗ್ಗಿನ ಉಪಹಾರಗಳ ಪೈಕಿ ಕಚೋಡಿ ಸಬ್ಜಿ ಪ್ರಮುಖವಾದುದು. ಒಳಗಡೆ ಬೇಳೆಕಾಳುಗಳ ಹೂರಣ ಹಾಕಿ ವಡೆಯಂತೆ ತಟ್ಟಿ ಎಣ್ಣಿಯಲ್ಲಿ ಬೇಯಿಸಿ ಆಲೂಗಡ್ಡೆಯ ಸಬ್ಜಿಯೊಂದಗೆ ಅವರು ಸವಿಯಲು ಕೊಡುವ ಕಚೋಡಿಯು ಆಹಾ ಎಂಬ ರುಚಿ. ವೃದ್ಧರಿಂದ ಮಕ್ಕಳವರೆಗೆ ಎಲ್ಲರೂ ಸವಿದು ಚಪ್ಪರಿಸುವ ಈ ಬೆಳಗಿನ ತಿಂಡಿಯನ್ನು ಕಾಶಿಯಲ್ಲಿದ್ದಾಗ ತಿನ್ನದೇ ಇದ್ದರೆ ಏನೋ ಕಳೆದುಕೊಂಡಂತೆ.

Tomato chaat

ಟಮಾಟರ್‌ ಚಾಟ್‌

ಕಾಶಿಯ ಜನಪ್ರಿಯ ಚಾಟ್‌ ಎಂದರೆ ಟಮಾಟರ್‌ ಚಾಟ್‌. ಇಲ್ಲಿನ ಸ್ಥಳೀಯರೂ, ಇಲ್ಲಿಗೆ ಬರುವ ಪ್ರವಾಸಿಗರೂ ಇಷ್ಟಪಟ್ಟು ತಿನ್ನುವ ಚಾಟ್‌ ಇದು. ಗೋಲ್‌ಗಪ್ಪ, ಸೇವ್‌ಪುರಿ, ದಹಿ ಪುರಿ, ಟಿಕ್ಕಿ ಚಾಟ್‌ ಮತ್ತಿತರ ಚಾಟ್‌ಗಳು ಎಲ್ಲೆಡೆಯೂ ದೊರೆತರೂ, ಈ ಟಮಾಟರ್‌ ಚಾಟ್‌ ಮಾತ್ರ ಕಾಶಿಯ ಸ್ಪೆಷಲ್‌. ಇಲ್ಲಿ ಟಮಾಟರ್‌ ಚಾಟ್‌ನ ರುಚಿ ಜೀವನದಲ್ಲೊಮ್ಮೆಯಾದರೂ ನೋಡಬೇಕು ಎನ್ನುತ್ತಾರೆ ಚಾಟ್‌ ಪ್ರಿಯರು.

malaiyo sweet

ಮಲೈಯೋ

ಬಾಯಿಗಿಟ್ಟರೆ ಕರಗುವ ಹಾಲಿನ ಕೆನೆಯಿಂದಲೇ ಮಾಡುವ ಈ ಸಿಹಿತಿನಿಸು ಐಸ್‌ಕ್ರೀಮಿನಂತೆ. ಆಹಾ ಎನ್ನುವ ರುಚಿಯ, ಕೇಸರಿಯ ಘಮದ ತಿನಿಸು. ಕೇವಲ ಚಳಿಗಾಲದಲ್ಲಿ ಮಾತ್ರ ಲಭ್ಯವಿರುವ ಈ ತಿನಿಸು, ಚಳಿಗಾಲದಲ್ಲಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಾರೆ ಕೂಡ.

Rabdi Jalebi

ರಬ್ಡಿ ಜಿಲೇಬಿ

ರಬ್ಡೀ ಜೊತೆಗೆ ಜೀಲೇಬಿ ಸೇರಿಸಿ ತಿನ್ನುವ ಮಜಾವೇ ಬೇರೆ. ಹಾಲಿನಿಂದ ಮಾಡುವ ರಬ್ಡೀ ಎಂಬ ಸಿಹಿತಿನಿಸನ್ನು ಹಾಗೆಯೇ ತಿನ್ನಬಹುದಾದರೂ, ಬಿಸಿಬಿಸಿ ಜಿಲೇಬಿ ಜೊತೆಗೆ ಚಳಿಚಳಿಯಾಗ ರಬ್ಡೀ ಸುರಿದು ತಿಂದರೇನೇ ರುಚಿ.

Banarasi Paan

ಬನಾರಸಿ ಪಾನ್‌

ಭರ್ಜರಿ ಊಟವೊಂದನ್ನು ಉಂಡ ಮೇಲೆ ಒಂದು ಪಾನ್‌ ಹಾಕಿ ಬಾಯಿ ಚಪ್ಪರಿಸದಿದ್ದರೆ ಊಟ ಉಂಡಂತಾಗದು. ಕಾಶೀಯ ಪಾನ್‌ನ ರುಚಿಯನ್ನು ವರ್ಣಿಸಿ ಬರೆಯದ ಕವಿತೆಗಳಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಕಾಶಿಗೆ ಹೋಗಿ ಕವಳ ಹಾಕದಿದ್ದರೆ ಅದು ವ್ಯರ್ಥ ಜೀವನವೇ ಸರಿ.

Banarasi Lassi

ಲಸ್ಸೀ

ಲಸ್ಸಿಯ ನಿಜವಾದ ರುಚಿಯನ್ನು ಸವಿಯಬೇಕೆಂದಿದ್ದರೆ ಕಾಶಿಗೆ ಹೋಗಬೇಕು. ದಪ್ಪ ಮೊಸರಿನಿಂದ ಮಾಡಿದ ಈ ಲಸ್ಸಿಯ ಮೇಲೆ ಕೆನೆಯನ್ನೂ ಹಾಕಿ ಮಣ್ಣಿನ ಕಪ್‌ಗಳಲ್ಲಿ ನೀಡಿದರೆ, ಹೊಟ್ಟೆಗೂ ಮನಸ್ಸಿಗೂ ತಂಪು. ಕಾಶಿ ಗಲ್ಲಿಗಳಲ್ಲೆಲ್ಲ ಸುತ್ತಾಡಿ ಸುಸ್ತಾದ ಮೇಲೆ ಒಂದು ಲಸ್ಸಿ ಕುಡಿದರೆ ಸುಸ್ತೆಲ್ಲ ಮಾಯ!

ಇದನ್ನೂ ಓದಿ: Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

Continue Reading

ಪ್ರವಾಸ

Haridwara Travel: ಹರಿದ್ವಾರಕ್ಕೆ ಭೇಟಿ ನೀಡಿದಾಗ ಈ ಸ‍್ಥಳಗಳನ್ನು ಮಿಸ್ ಮಾಡದೇ ನೋಡಿ!

Haridwara Travel: ಪವಿತ್ರತೆಗೆ ಹೆಸರಾದ ಗಂಗೆಯ ದಡದಲ್ಲಿರುವ ಹರಿದ್ವಾರ ಪುರಾಣಗಳಿಗೆ ಸಂಬಂಧಿಸಿದ ಮತ್ತು ಐತಿಹಾಸಿಕ ದೇವಾಲಯಗಳನ್ನು ಹೊಂದಿದೆ. ಹಾಗಾಗಿ ಈ ಸ್ಥಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇಲ್ಲಿಗೆ ಬರುವವರು ತಪ್ಪದೇ ಈ ಸ್ಥಳಗಳಿಗೆ ಭೇಟಿ ನೀಡಿದರೆ ದೇವಾಲಯಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು! ಹರಿದ್ವಾರದ ಪ್ರಮುಖ ಸ್ಥಳಗಳ ಪರಿಚಯಾತ್ಮಕ ವಿವರ ಇಲ್ಲಿದೆ.

VISTARANEWS.COM


on

Haridwara Travel
Koo

ಬೆಂಗಳೂರು: ರಜಾ ದಿನಗಳಲ್ಲಿ ಕೆಲವರು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ ಇನ್ನೂ ಕೆಲವರಿಗೆ ದೇವಾಲಯಗಳಿಗೆ ಸುತ್ತುವುದೆಂದರೆ ತುಂಬಾ ಇಷ್ಟ. ಹಾಗಾಗಿ ಅಂಥವರು ಹರಿದ್ವಾರಕ್ಕೆ (Haridwara Travel) ಭೇಟಿ ನೀಡಿ. ಪವಿತ್ರತೆಗೆ ಹೆಸರಾದ ಗಂಗೆಯ ದಡದಲ್ಲಿರುವ ಹರಿದ್ವಾರ ಪುರಾಣಗಳಿಗೆ ಸಂಬಂಧಿಸಿದ ಮತ್ತು ಐತಿಹಾಸಿಕ ದೇವಾಲಯಗಳನ್ನು ಹೊಂದಿದೆ. ಹಾಗಾಗಿ ಈ ಸ್ಥಳ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇಲ್ಲಿಗೆ ಬರುವವರು ತಪ್ಪದೇ ಈ ಸ್ಥಳಗಳನ್ನು ವೀಕ್ಷಿಸಿ.

Haridwara Travel

ಹರ್ ಕಿ ಪೌರಿ

ಹರಿದ್ವಾರದ ಅತ್ಯಂತ ಪ್ರಸಿದ್ಧವಾದ ಹರ್ ಕಿ ಪೌರಿಯಲ್ಲಿ ಪುರಾಣಗಳ ಪ್ರಕಾರ ನದಿ ದಡದಲ್ಲಿ ಹಿಂದೂ ದೇವರ ಮುದ್ರೆಗಳನ್ನು ಹೊಂದಿದೆಯಂತೆ. ಇದನ್ನು ಭಗವಾನ್ ವಿಷ್ಣುವಿನ ಹೆಜ್ಜೆ ಗುರುತು ಎಂದು ಭಾವಿಸಲಾಗುತ್ತದೆಯಂತೆ. ಇಲ್ಲಿನ ವಿಶೇಷವೆಂದರೆ ಸಂಜೆಯ ವೇಳೆ ಗಂಗಾ ನದಿಯಲ್ಲಿ ಧೂಪ, ದೀಪ ಮತ್ತು ಗಂಟೆಗಳೊಂದಿಗೆ ಆರತಿಯನ್ನು ಬೆಳಗಲಾಗುತ್ತದೆಯಂತೆ. ಇಲ್ಲಿ ಈ ಸಮಯದಲ್ಲಿ ಅನೇಕ ಜನರು ಸೇರುತ್ತಾರಂತೆ.

Haridwara Travel

ಮಾನಸ ದೇವಿ ದೇವಸ್ಥಾನ

ಅರಣ್ಯದಿಂದ ಕೂಡಿದ ಬಿಲ್ವಪರ್ವತದ ಬೆಟ್ಟಗಳ ಮೇಲಿರುವ ಈ ದೇವಸ್ಥಾನಕ್ಕೆ ನವವಿವಾಹಿತರು ಮತ್ತು ಭಕ್ತರು ದೇವಿಯ ಆಶೀರ್ವಾದವನ್ನು ಪಡೆಯಲು ಬರುತ್ತಾರೆ. ಪುರಾಣಗಳ ಪ್ರಕಾರ ಮಾನಸ ದೇವಿ ಬ್ರಹ್ಮಾಂಡದಲ್ಲಿ ವಿಲೀನರಾಗುವ ಮೊದಲು ಇಲ್ಲಿ ತಪಸ್ಸನ್ನು ಮಾಡಿದರು ಎನ್ನಲಾಗುತ್ತದೆ. ಇಲ್ಲಿ ರಮಣೀಯವಾದ ಮಾನಸ ದೇವಿಯ ಪ್ರತಿಮೆಗಳಿರುವ ಗರ್ಭಗುಡಿ ಇದೆ ಮತ್ತು ಬೆಳ್ಳಿ ಲೇಪಿತ ಸಿಂಹದ ವಿಗ್ರಹಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.

Haridwara Travel

ಚಂಡಿ ದೇವಿ ದೇವಸ್ಥಾನ

ಇದು ಹರಿದ್ವಾರದ ಹೆಸರಾಂತ ದೇವಾಲಯ. ಸುಂದರವಾದ ನೀಲ್ ಪರ್ವತದ ಶಿಖರದ ಮೇಲಿರುವ ಈ ದೇವಾಲಯದಲ್ಲಿ ಪಾರ್ವತಿ ದೇವಿಯ ಉಗ್ರ ಅವತಾರಾದ ಚಂಡಿ ದೇವಿಯನ್ನು ಪೂಜಿಸಲಾಗುತ್ತದೆ. ದಂತ ಕಥೆಯ ಪ್ರಕಾರ ಚಂಡಿ ದೇವಿ ಶುಂಭ-ನಿಶುಂಭ ರಾಕ್ಷಸರನ್ನು ಸಂಹರಿಸಲು ಇಲ್ಲಿ ನೆಲೆಸಿದ್ದಳು ಎನ್ನಲಾಗಿದೆ. ಇಲ್ಲಿ ಪ್ರಾಚೀನ ವಾಸ್ತು ಶಿಲ್ಪ ಮತ್ತು ವಿವಿಧ ಹಿಂದೂ ದೇವತೆಗಳ ಕಥೆಗಳನ್ನು ಪ್ರದರ್ಶಿಸುವ ಉಬ್ಬುಶಿಲ್ಪಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.

Haridwara Travel

ಮಾಯಾ ದೇವಿ ದೇವಸ್ಥಾನ

ಇಲ್ಲಿ ಮಾಯಾದೇವಿಯ ಕಪ್ಪು ಕಲ್ಲಿನ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ಇದು ಉತ್ತರ ಭಾರತದ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಮಾಯ ದೇವಿ ಶಿವನ ಪತ್ನಿ ಶಕ್ತಿಯ ಒಂದು ಅವತಾರವಾಗಿದೆ. ಈ ಸ್ಥಳದಲ್ಲಿ ಗಂಗೆ ಭೂಮಿಗೆ ಇಳಿದಿದ್ದರಿಂದ ಇಲ್ಲಿ ಭಗೀರಥನನ್ನು ಪೂಜಿಸಲಾಗುತ್ತದೆ.

Haridwara Travel

ಭಾರತ್ ಮಾತಾ ಮಂದಿರ

ಇದು ದೇಶಭಕ್ತಿಗೆ ಸಮರ್ಪಿತವಾದ ವಿಶೇಷ ದೇವಾಲಯವಾಗಿದೆ. ಇಲ್ಲಿ ದೇವರುಗಳ ಬದಲಿಗೆ ಪರಿಹಾರ ನಕ್ಷೆಯನ್ನು ಪೂಜಿಸಲಾಗುತ್ತದೆ. ಈ ಮಂದಿರವು ಭಾರತೀಯ ಉಪಖಂಡವನ್ನು ಚಿತ್ರಿಸುವ 8×8 ಅಮೃತಶಿಲೆಯಲ್ಲಿ ಕೆತ್ತಿದ ಪರಹಾರ ನಕ್ಷೆಯನ್ನು ಹೊಂದಿದೆ. ಇದನ್ನು “ ಮದರ್ ಇಂಡಿಯಾ” ಎಂದು ಕರೆಯಲಾಗುತ್ತದೆ. ಇಲ್ಲಿ ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಚಿತ್ರಿಸುವ ಭಿತ್ತಿಚಿತ್ರಗಳು ಗೋಡೆಗಳಲ್ಲಿ ಕಂಡುಬರುತ್ತದೆ. ಇದು ಬೆಳಿಗ್ಗೆ 8 ಗಂಟೆಯಿಂದ 12 ಗಂಟೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯ ವೇಳೆ ತೆರೆದಿರುತ್ತದೆ.

Haridwara Travel

ರಾಜಾಜಿ ರಾಷ್ಟ್ರೀಯ ಉದ್ಯಾನವನ

ಇದು 820 ಚದರ ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಇಲ್ಲಿ ಆಕರ್ಷಕ ಭೂದೃಶ್ಯಗಳು, ಸಮೃದ್ಧವಾದ ವನ್ಯಜೀವಿಗಳು ಮತ್ತು 23ಕ್ಕೂ ಹೆಚ್ಚು ಜಾತಿಯ ಆರ್ಕಿಡ್ ಗಳಿವೆ. ಇದಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಿ.ರಾಜಗೋಪಾಲಾಚಾರಿ ಅವರ ಹೆಸರನ್ನು ಇಡಲಾಗಿದೆ. ಇಲ್ಲಿ ಹರಿಯುವ ನದಿಗಳು, ಕಣಿವೆಗಳು, ಹುಲ್ಲುಗಾವಲು, ಅಪರೂಪ ಪಕ್ಷಿಗಳು ಕಂಡುಬರುತ್ತಿದೆ. ಇದು ಪ್ರತಿದಿನ ಮುಂಜಾನೆಯಿಂದ ಮುಸ್ಸಂಜೆಯವರೆಗೂ ತೆರೆದಿರುತ್ತದೆ.

Haridwara Travel

ದಕ್ಷೇಶ್ವರ ಮಹಾದೇವ ದೇವಸ್ಥಾನ

ಇದು ಕಂಖಾಲ್ ಪಟ್ಟಣದ ಸೋಲಾನಿ ನದಿಯ ದಡದಲ್ಲಿದೆ. ಪುರಾಣದಲ್ಲಿ ಇದನ್ನು ರಾಜ ದಕ್ಷನ ಅರಮನೆ ಮತ್ತು ಯಜ್ಞದ ಅಖಾಡವನ್ನು ಹೊಂದಿರುವ ಸ್ಥಳ ಎನ್ನಲಾಗುತ್ತದೆ. ಶಿವನಿಗಾದ ಅವಮಾನವನ್ನು ಸಹಿಸದೆ ಸತಿ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಳು ಎನ್ನಲಾಗುತ್ತದೆ. 18 ಶಿಖರವನ್ನುಹೊಂದಿರುವ ಈ ದೇವಾಲಯಕ್ಕೆ ಶಿವನ ಭಕ್ತರು ಭೇಟಿ ನೀಡುತ್ತಾರೆ. ಇದು ಬೆಳಿಗ್ಗೆ 6ರಿಂದ ಸಂಜೆ 8ಗಂಟೆಯವರೆಗೆ ತೆರೆದಿರುತ್ತದೆ.

Haridwara Travel

ಭೀಮಗೋಡ ಟ್ಯಾಂಕ್

ಇದು ಹರ್ ಕಿ ಪೌರ್‌ಗೆ ಸಮೀಪದಲ್ಲಿರುವ ಮಾನವ ನಿರ್ಮಿತ ಜಲಾಶಯವಾಗಿದೆ. ಇದರ ಮೂಲ ಮಹಾಭಾರತದ ಪಾಂಡವರು ಎನ್ನಲಾಗುತ್ತದೆ. ಪಾಂಡವರಲ್ಲಿ ಒಬ್ಬನಾದ ಬಲಶಾಲಿ ಭೀಮನು ನೀರಿಗಾಗಿ ಇಲ್ಲಿ ನೆಲವನ್ನು ಒಡೆಯುವುದರ ಮೂಲಕ ಈ ಕುಂಡವನ್ನು ರಚಿಸಿದನು ಎನ್ನಲಾಗುತ್ತದೆ. ಸೊಂಪಾದ ಉದ್ಯಾನವನ , ದೇವಾಲಯಗಳಿಂದ ಸುತ್ತುವರಿದ ಈ ಸ್ಥಳಕ್ಕೆ ಭಕ್ತರು ಪೂರ್ವಜರಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದು ಸ್ನಾನ ಮಾಡುತ್ತಾರಂತೆ. ಇದಕ್ಕೆ ಪ್ರವೇಶ ಶುಲ್ಕವಿಲ್ಲ.

ಇದನ್ನೂ ಓದಿ: Salman Khan: ನಟ ಸಲ್ಮಾನ್ ಖಾನ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ಮನೆ ನೋಡಿ ಅಭಿಮಾನಿಗಳಿಗೆ ಫುಲ್ ಶಾಕ್!

ಸಪ್ತ ಋಷಿ ಆಶ್ರಮ

ಇದು ಗಂಗಾ ನದಿಯ ದಡದಲ್ಲಿದೆ. ಈ ಪ್ರದೇಶ ತುಂಬಾ ಶಾಂತವಾಗಿದೆ. ಇಲ್ಲಿ ಕೆಲವು ವಿದ್ವಾಂಸರು ಗ್ರಂಥ ಪಠಣೆ ಮಾಡಲು ಬರುತ್ತಾರಂತೆ. ಇಲ್ಲಿ ಗಂಗಾ ಆರತಿ ಕಾರ್ಯಕ್ರಮ ನಡೆಯುತ್ತದೆ.

Continue Reading
Advertisement
Implement the work without damaging the drinking water pipelines says ZP CEO Sadashiva Prabhu
ವಿಜಯನಗರ15 mins ago

Vijayanagara News: ಕುಡಿಯುವ ನೀರಿನ ಪೈಪ್‌ಲೈನ್‌ಗಳು ಹಾಳಾಗದಂತೆ ಕಾಮಗಾರಿ ಅನುಷ್ಠಾನಗೊಳಿಸಿ: ಜಿಪಂ ಸಿಇಒ

Congress leader Rahul Gandhi speech in Ballari
ಕರ್ನಾಟಕ16 mins ago

Lok Sabha Election 2024: ದೇಶ, ರಾಜ್ಯಕ್ಕೆ ಬಿಜೆಪಿಯಿಂದ ಖಾಲಿ ಚೊಂಬು ಕೊಟ್ಟಿದ್ದಾರೆ: ರಾಹುಲ್‌ ಗಾಂಧಿ

lok sabha election
ಪ್ರಮುಖ ಸುದ್ದಿ37 mins ago

ವಿಸ್ತಾರ ಸಂಪಾದಕೀಯ: ಗ್ರಾಮಾಂತರ ಜನರ ಮತೋತ್ಸಾಹ ನಗರದ ‘ಬುದ್ಧಿವಂತ’ ಮತದಾರರಲ್ಲಿ ಏಕಿಲ್ಲ?

Neha Murder Case
ಕರ್ನಾಟಕ55 mins ago

Neha Murder Case: ನೇಹಾ ತಂದೆಗೆ ಗನ್ ಮ್ಯಾನ್, ಮನೆಗೆ ಪೊಲೀಸ್ ಭದ್ರತೆ ಏರ್ಪಡಿಸಿದ ರಾಜ್ಯ ಸರ್ಕಾರ

IPL 2024
ಪ್ರಮುಖ ಸುದ್ದಿ56 mins ago

IPL 2024 : ಬೈರ್​ಸ್ಟೋವ್​ ಸ್ಫೋಟಕ ಶತಕ; ಕೆಕೆಆರ್​ ವಿರುದ್ಧ ಪಂಜಾಬ್​​ಗೆ ವಿಶ್ವ ದಾಖಲೆಯ ವಿಜಯ

Bike Accident
ಕರ್ನಾಟಕ2 hours ago

Bike Accident: ಮತದಾನ ಮಾಡಿ ತೆರಳುತ್ತಿದ್ದ ವೇಳೆ ಬೈಕ್‌ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ

lok sabha election
Lok Sabha Election 20242 hours ago

Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ

Hassan News
ಕರ್ನಾಟಕ2 hours ago

Hassan News: ಎರಡು ಗುಂಪುಗಳ ನಡುವೆ ಮಾರಾಮಾರಿ; ಕೈ ಕಾರ್ಯಕರ್ತನಿಗೆ ಗಂಭೀರ ಗಾಯ

Pandya brothers
ಕ್ರೀಡೆ2 hours ago

Pandya Brothers : ಪಾಂಡ್ಯ ಸಹೋದರರ ಮನೆಗೆ ಹೊಸ ಅತಿಥಿ ಆಗಮನ, ಖುಷಿಯಲ್ಲಿ ಕುಟುಂಬ

ಕರ್ನಾಟಕ3 hours ago

Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ12 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202413 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202414 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ20 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌