Carla belluci: ಇವಳ ಮದುವೆಯಲ್ಲಿ ಟಿಕೆಟ್‌ ಹಣ ಕೊಟ್ಟು ಆಗಮನವೇ ಆಶೀರ್ವಾದ, ದುಡ್ಡು ಕೊಟ್ಟರೇ ಊಟ! - Vistara News

ಪ್ರಮುಖ ಸುದ್ದಿ

Carla belluci: ಇವಳ ಮದುವೆಯಲ್ಲಿ ಟಿಕೆಟ್‌ ಹಣ ಕೊಟ್ಟು ಆಗಮನವೇ ಆಶೀರ್ವಾದ, ದುಡ್ಡು ಕೊಟ್ಟರೇ ಊಟ!

Carla Belluci ಎಂಬ ಮಾಡೆಲ್‌ ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾಳೆ. ತನ್ನ ಮದುವೆಗೆ ಬರುವ ಗೆಸ್ಟ್‌ಗಳು ಟಿಕೆಟ್‌ ಹಣ ನೀಡಿ ಬರಬೇಕು ಎಂದಿದ್ದಾಳೆ.

VISTARANEWS.COM


on

carla belluci
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟಿಕೇಟು ಖರೀದಿಸಿ ಸಿನೆಮಾ ನೋಡುತ್ತೇವೆ. ಸರ್ಕಸ್ಸು, ನಾಟಕ ನೋಡುತ್ತೇವೆ. ದುಡ್ಡು ಕೊಟ್ಟು ರೆಸಾರ್ಟ್‌ ಬುಕ್‌ ಮಾಡಿ ಊಟ ತಿಂಡಿ ಮೋಜು ಮಸ್ತಿಗೆಲ್ಲಾ ದುಡ್ಡು ಖರ್ಚು ಮಾಡುತ್ತೇವೆ. ಏನೆಲ್ಲಾ ಸಾಧ್ಯವೋ ಅವನ್ನೆಲ್ಲ ಟಿಕೇಟು ಕೊಟ್ಟು ನೋಡುತ್ತೇವೆ, ಭಾಗವಹಿಸುತ್ತೇವೆ. ಆದರೆ ಇಂಥದ್ದೊಂದನ್ನು ಮಾತ್ರ ಈವರೆಗೆ ಅಷ್ಟಾಗಿ ಯಾರೂ ಯೋಚಿಸಿಲ್ಲ. ಇಲ್ಲೊಬ್ಬಳು ಸುಂದರಿ ನನ್ನ ಮದುವೆ ನೋಡಬೇಕೆಂದರೆ ಟಿಕೇಟು ಹಣ ಕೊಟ್ಟು ಭಾಗವಹಿಸಿ ಎನ್ನುತ್ತಿದ್ದಾಳೆ!

ತಮಾಷೆಯಲ್ಲ, ಇದು ಸತ್ಯ. ಇಂದು ಡೆಸ್ಟಿನೇಷನ್‌ ವೆಡ್ಡಿಂಗ್‌ ಹೆಸರಿನಲ್ಲಿ ನಡೆಯುವ ಮದುವೆಗಳನ್ನು ನೋಡಬೇಕಿದ್ದರೆ ಇದು ಸಕಾಲ. ಆಕೆಯ ಮದುವೆಯನ್ನು ಭರ್ಜರಿ ಜಾಗವೊಂದರಲ್ಲಿ ನೋಡಿಕೊಂಡು, ಭರ್ಜರಿಯಾಗಿ ಉಂಡು, ಅಲ್ಲೇ ತಿರುಗಾಡಿ ಬರಬೇಕೆಂದಿದ್ದರೆ ಆಕೆಯ ಮದುವೆಯ ಟಿಕೆಟ್‌ ಖರೀದಿಸಿ ಮದುವೆ ನೋಡಿ ಚೆನ್ನಾಗಿ ಉಂಡು ತೇಗಿ ಬರಬಹುದು. ಆದರೆ ಊಟಕ್ಕೂ ಪ್ರತ್ಯೇಕ ದರವಿದೆ. ಜೊತೆಗೆ ಅಲ್ಲಿಗೆ ಹೋಗಿ ಬರುವ ಖರ್ಚು, ವಿಮಾನ ದರ ಎಲ್ಲವನ್ನೂ ನೀವೇ ನೋಡಿಕೊಳ್ಳಬೇಕು ಎಂದು ಆಕೆ ಹೇಳಿದ್ದಾಳೆ.

೪೦ರ ಹರೆಯದ ಇಂಗ್ಲೆಂಡ್‌ ಮೂಲದ ಮಾಡೆಲ್‌ ಕಾರ್ಲಾ ಬೆಲ್ಲೂಸಿ ತನ್ನ ೫೨ರ ಹರೆಯದ ಪ್ರಿಯಕರ ಜೋವನ್ನಿ ಜೊತೆಗೆ ಸುಮಾರು ೪೦ ಸಾವಿರ ಪೌಂಡ್‌ ವೆಚ್ಚದ ಭಾರೀ ಬಜೆಟ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾಳೆ. ಈ ಸಂದರ್ಭದಲ್ಲಿ ಕೊಂಚವಾದರೂ ಹಣ ಉಳಿಸಬೇಕೆನ್ನುವ ಯೋಚನೆ ಮಾಡಿರುವ ಈಕೆ, ಯಾರಿಗಾದರೂ ತನ್ನ ಅದ್ದೂರಿ ಮದುವೆ ನೋಡಬೇಕೆಂದಿದ್ದಲ್ಲಿ ೧೦೦ ಪೌಂಡ್‌ ಕೊಟ್ಟು ಸೀಟು ಬುಕ್‌ ಮಾಡಿಕೊಳ್ಳಬಹುದು ಎಂದು ಆಕೆ ಹೇಳಿದ್ದಾಳೆ.

ಇದನ್ನೂ ಓದಿ: ದುರ್ಗಾಪುರದ ಯುವಕರಿಗೆ ನಿತ್ಯವೂ ಬೇಕು ರಾಶಿ ರಾಶಿ ಕಾಂಡೊಮ್‌; ಇವರಿಗೆ ನಶೆಯ ಚಟ !

ಹಾಗಂತ ನಾನು ಯಾರನ್ನೂ ನನ್ನ ಮದುವೆಗೆ ಬನ್ನಿ ಎಂದು ಒತ್ತಾಯ ಮಾಡುವುದಿಲ್ಲ. ಅದು ಅವರವರ ಆಸಕ್ತಿ, ಇಷ್ಟಕ್ಕೆ ಬಿಟ್ಟದ್ದು. ಮದುವೆಯಲ್ಲಿ ಭಾಗವಹಿಸಲು ಯಾರಾದರೂ ಅವರಾಗಿಯೇ ಆಸಕ್ತಿ ತೋರಿಸಿದರೆ ಅವರು ಈ ದರ ನೀಡಿ  ಭಾಗವಹಿಸಲು ಅನುವು ಮಾಡಿಕೊಡಲಾಗುತ್ತದೆ ಎಂದಿದ್ದಾಳೆ.

ಈ ಮದುವೆ ಮುಂದಿನ ವರ್ಷ ಜುಲೈನಲ್ಲಿ ಆಫ್ರಿಕಾದ ಕೇಪ್‌ ವರ್ಡ್‌ನಲ್ಲಿ ನಡೆಯಲಿದ್ದು, ಈಕೆಯ ಮದುವೆಗೆ ಆಸೆಪಟ್ಟು ನೋಡಲು ಬರುವವರಿಂದ ೩,೦೦೦ ಪೌಂಡ್‌ ಊಟಕ್ಕೆ ಪೀಕಿಸಲಿದ್ದಾಳಂತೆ. ʻʻನನ್ನ ಮದುವೆಗೆ ಜನರು ಟಿಕೆಟ್‌ ದರ ಕೊಟ್ಟು ಬಂದು ನೋಡುತ್ತಾರೆ ಎಂದರೆ ಅದಕ್ಕಿಂತ ಸಂತೋಷದ ವಿಷಯ ಇನ್ಯಾವುದಿದೆ? ನನಗಂತೂ ಇದು ನನ್ನ ಕನಸಿನ ಮದುವೆ. ಹಾಗೂ ಕೊನೆಯ ಮದುವೆ. ನನಗೆ ಮುಂದೆ ಇನ್ನು ಮದುವೆಯಾಗುವ ಯೋಚನೆಗಳಿಲ್ಲ. ಹಾಗಾಗಿ ಇದನ್ನು ಎಷ್ಟು ಸಾಧ್ಯವೋ ಅಷ್ಟು ಖುಷಿಯ ಗಳಿಗೆಯನ್ನಾಗಿ ಪರಿವರ್ತಿಸುವ ಆಸೆಯಿದೆʼʼ ಎಂದಿದ್ದಾಳೆ.

ಮದುವೆಗಾಗಿ ೬,೦೦೦ ಪೌಂಡ್‌ ಬೆಲೆಯ ಡ್ರೆಸ್‌ ಈಕೆ ಹೊಲಿಸಿಕೊಂಡಿದ್ದು, ಸುಮಾರು ೬,೦೦೦ ಪೌಂಡ್‌ ಬೆಲೆಯ ಉಂಗುರವನ್ನು ಈಗಾಗಲೇ ತನ್ನ ನಿಶ್ಚಿತಾರ್ಥದ ಉಂಗುರವಾಗಿ ಧರಿಸಿದ್ದಾಳೆ.

ಈಗಾಗಲೇ ನಾಲ್ಕು ಮಕ್ಕಳನ್ನು ಹೊಂದಿರುವ ಈಕೆ ಮಕ್ಕಳನ್ನು ಮದುವೆಯ ನಂತರ ಇಂಗ್ಲೆಂಡ್‌ಗೆ ಕಳುಹಿಸಿ ತಾನು ತನ್ನ ಹೊಸ ಗಂಡನ ಜೊತೆಗೆ ಹನಿಮೂನ್‌ ಆಚರಿಸಿ ಮತ್ತೆ ಇಂಗ್ಲೆಂಡ್‌ಗೆ ಮರಳುತ್ತೇನೆ ಎಂದಿದ್ದಾಳೆ. ತನ್ನ ಹಾಗೂ ಜೋವನ್ನಿ ನಡುವಿನ ಪ್ರೀತಿಯ ಸೀಕ್ರೇಟ್ಟೇ ಇಂಥದ್ದು. ವಾರಕ್ಕೊಮ್ಮೆ ರೊಮ್ಯಾಂಟಿಕ್‌ ಡಿನ್ನರ್‌ ಹಾಗೂ ಮಕ್ಕಳನ್ನು ಬಿಟ್ಟು ನಾವಿಬ್ಬರೇ ಹೋಗುವ ಐಷಾರಾಮಿ ಪ್ರವಾಸಗಳು ನಮಗೆ ಖುಷಿಕೊಡುತ್ತವೆ. ನಾನು ಇಷ್ಟು ಮಾಡಿದರೆ ಜೋವನ್ನಿ ಸಂತೋಷವಾಗಿರುತ್ತಾನೆ ಎಂದು ಆಕೆ ಹೇಳಿದ್ದಾಳೆ. ಕಳೆದ ವರ್ಷ ಆಸ್ಟ್ರೇಲಿಯಾದ ವಧುವೊಬ್ಬರು ತಮ್ಮ ಮದುವೆಗೆ ಬರಲಿಚ್ಛಿಸುವವರಿಗೆ ಇದೇ ರೀತಿ ೯೯ ಡಾಲರ್‌ ಟಿಕೆಟ್‌ ದರ ವಿಧಿಸಿದ್ದಳು. ಇದು ಮದುವೆಯಲ್ಲಿ ಭಾಗವಹಿಸಿ ಊಟವನ್ನೂ ಒಳಗೊಂಡಿತ್ತು.

ಇದನ್ನೂ ಓದಿ: Viral News | ಪಾಕಿಸ್ತಾನದ ವಕ್ರ ಕುತ್ತಿಗೆಯ ಬಾಲಕಿಗೆ ದೇವರಾದ ಭಾರತದ ಡಾಕ್ಟರ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : ಐಪಿಎಲ್​ಗೆ ಅರ್ಧದಲ್ಲೇ ವಿದಾಯ ಹೇಳಿದ ಮುಸ್ತಾಫಿಜುರ್​ಗೆ ಸಹಿ ಹಾಕಿದ ಜೆರ್ಸಿ ನೀಡಿದ ಧೋನಿ

IPL 2024: ಮುಸ್ತಾಫಿಜುರ್ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ಹಿಡಿದುಕೊಂಡಿರುವ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಒಂದೇ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಎಲ್ಲಾ ಕಲಿಕೆಗಾಗಿ ಬಾಂಗ್ಲಾದೇಶದ ವೇಗಿ ಧೋನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಧೋನಿಯನ್ನು ಭೇಟಿಯಾಗಿ ಅವರೊಂದಿಗೆ ಮತ್ತೆ ಆಡುವ ಬಯಕೆ ಅವರು ವ್ಯಕ್ತಪಡಿಸಿದ್ದಾರೆ.

VISTARANEWS.COM


on

IPL 2024
Koo

ಚೆನ್ನೈ: ರಾಷ್ಟ್ರೀಯ ಬದ್ಧತೆಯ ಕಾರಣಕ್ಕೆ ಬಾಂಗ್ಲಾದೇಶದ ಬೌಲರ್​ ಮುಸ್ತಾಫಿಜುರ್ ರೆಹಮಾನ್ ಐಪಿಎಲ್ ತೊರೆದಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಶಿಬಿರ ಬಿಟ್ಟಿದ್ದಾರೆ. ಹೀಗೆ ಐಪಿಎಲ್ 2024 ಗೆ (IPL 2024 ) ವಿದಾಯ ಹೇಳುವ ಮೊದಲು ಮುಸ್ತಾಫಿಜುರ್ ರೆಹಮಾನ್ (Mustafizur Rahman) ಲೆಜೆಂಡ್​ ಕ್ರಿಕೆಟಿಗ ಎಂಎಸ್ ಧೋನಿಯಿಂದ ಸಹಿ ಮಾಡಿದ ಜೆರ್ಸಿ ಸ್ವೀಕರಿಸಿದರು. ಬಾಂಗ್ಲಾದೇಶ (Bangladesh Cricket Team) ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ 20 ಐ ಸರಣಿಯಲ್ಲಿ ಕಾಣಿಸಿಕೊಳ್ಳಬೇಕಾಗಿರುವ ಕಾರಣ ವೇಗಿ ಮೇ 1, 2024 ರ ನಂತರ ಸಿಎಸ್ಕೆಗೆ ಲಭ್ಯವಿರುವುದಿಲ್ಲ ಎಂದು ಈ ಹಿಂದೆ ತಿಳಿಸಲಾಗಿತ್ತು.

ಮುಸ್ತಾಫಿಜುರ್ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ಹಿಡಿದುಕೊಂಡಿರುವ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಒಂದೇ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಎಲ್ಲಾ ಕಲಿಕೆಗಾಗಿ ಬಾಂಗ್ಲಾದೇಶದ ವೇಗಿ ಧೋನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಧೋನಿಯನ್ನು ಭೇಟಿಯಾಗಿ ಅವರೊಂದಿಗೆ ಮತ್ತೆ ಆಡುವ ಬಯಕೆ ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rohit Sharma : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

“ಎಲ್ಲದಕ್ಕೂ ಧನ್ಯವಾದಗಳು ಮಹಿ ಭಾಯ್. ನಿಮ್ಮಂತಹ ದಂತಕಥೆಯೊಂದಿಗೆ ಡ್ರೆಸ್ಸಿಂಗ್ ಕೋಣೆ ಹಂಚಿಕೊಳ್ಳುವುದು ವಿಶೇಷ ಭಾವನೆ. ಪ್ರತಿ ಬಾರಿಯೂ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅಮೂಲ್ಯ ಸಲಹೆಗಳನ್ನು ಸ್ಮರಿಸುತ್ತೇನೆ. ನಾನು ಹೇಳಿದ ವಿಷಯಗಳನ್ನು ನೆನಪಿಸಿಕೊಳ್ಳುತ್ತೇನೆ. ಶೀಘ್ರದಲ್ಲೇ ನಿಮ್ಮನ್ನು ಮತ್ತೆ ಭೇಟಿಯಾಗಲು ಮತ್ತು ಆಡಲು ಎದುರು ನೋಡುತ್ತಿದ್ದೇನೆ, “ಎಂದು ಮುಸ್ತಾಫಿಜುರ್ ಬರೆದುಕೊಂಡಿದ್ದಾರೆ.

ಟಿ 20 ಐ ಸರಣಿಗಾಗಿ ಮುಸ್ತಾಫಿಜುರ್ ತಮ್ಮ ದೇಶಕ್ಕೆ ಮರಳಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಏಪ್ರಿಲ್ 30 ರ ಗಡುವು ನಿಗದಿಪಡಿಸಿತ್ತು. ಆದರೆ, ಮೇ 1 ರಂದು ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಪಿಬಿಕೆಎಸ್ ವಿರುದ್ಧ ಸಿಎಸ್ಕೆ ಪಂದ್ಯದ ಕಾರಣ ಗಡುವನ್ನು ವಿಸ್ತರಿಸಲಾಯಿತು. ಚೆನ್ನೈ ತಂಡ ಮತ್ತು ಬಿಸಿಸಿಐನಿಂದ ವಿನಂತಿಯನ್ನು ಸ್ವೀಕರಿಸಿದ ನಂತರ ಮಂಡಳಿಯು ಗಡುವನ್ನು ವಿಸ್ತರಿಸಿತು.

“ನಾವು ಮುಸ್ತಾಫಿಜುರ್​ಗೆ ಏಪ್ರಿಲ್ 30 ರವರೆಗೆ ಐಪಿಎಲ್​ನಲ್ಲಿ ಆಡಲು ರಜೆ ನೀಡಿದ್ದೆವು, ಆದರೆ ಮೇ 1 ರಂದು ಚೆನ್ನೈನಲ್ಲಿ ಪಂದ್ಯ ಇರುವುದರಿಂದ, ಚೆನ್ನೈ ಮತ್ತು ಬಿಸಿಸಿಐನಿಂದ ವಿನಂತಿಯನ್ನು ಸ್ವೀಕರಿಸಿದ ನಂತರ ನಾವು ಅವರ ರಜೆಯನ್ನು ಒಂದು ದಿನ ವಿಸ್ತರಿಸಿದ್ದೇವೆ” ಎಂದು ಬಾಂಗ್ಲಾದೇಶ ಕ್ರಿಕೆಟ್​ ಸಂಸ್ಥೇಯ ಕ್ರಿಕೆಟ್ ಕಾರ್ಯಾಚರಣೆಗಳ ಉಪ ವ್ಯವಸ್ಥಾಪಕ ಶಹರಿಯಾರ್ ನಫೀಸ್ ಇಎಸ್ಪಿಎನ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.

ಪರ್ಪಲ್ ಕ್ಯಾಪ್ ಗೆಲ್ಲುವ ಸ್ಪರ್ಧೆಯಲ್ಲಿದ್ದ ಮುಸ್ತಾಫಿಜುರ್ ಐಪಿಎಲ್ 2024 ರಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನ ಪಡೆದರು. 9 ಪಂದ್ಯಗಳನ್ನಾಡಿರುವ ವೇಗಿ 9.26ರ ಸರಾಸರಿಯಲ್ಲಿ 14 ವಿಕೆಟ್ ಕಬಳಿಸಿದ್ದಾರೆ.

ಪಿಬಿಕೆಎಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಸೋತಿದ್ದ ಸಿಎಸ್ಕೆಗೆ ರೆಹಮಾನ್ ಅಲಭ್ಯತೆ ಕಾಡಲಿದೆ. ಯಾಕೆಂದರೆ ಸ್ಟ್ರೈಕ್ ಬೌಲರ್​ , ದೀಪಕ್ ಚಹರ್ ಗಾಯಗೊಂಡ ನಂತರ ಮೈದಾನ ತೊರೆದಿದ್ದರು.

Continue Reading

ವೈರಲ್ ನ್ಯೂಸ್

Viral Video: ಪ್ರಿನ್ಸಿಪಾಲ್ ಆದರೇನು, ಟೀಚರ್ ಆದರೇನು? ಹೆಂಗಸರ ಬಡಿದಾಟ ಇರೋದೇ ಹೀಗೆ! ವಿಡಿಯೊ ನೋಡಿ

Viral Video: ಉತ್ತರ ಪ್ರದೇಶದ ಆಗ್ರಾದಲ್ಲಿರುವ ಶಾಲೆಯೊಂದರಲ್ಲಿ, “ನನ್ನ ನೀನು ಗೆಲ್ಲಲಾರೆ” ಎಂಬ ಧೋರಣೆಯಲ್ಲಿ ನುಗ್ಗಿದ ಪ್ರಾಂಶುಪಾಲೆಯು, ಶಿಕ್ಷಕಿಯ ಕೆನ್ನೆಗೆ ತಿವಿದಿದ್ದಾರೆ. ಇದಕ್ಕೆ ಶಿಕ್ಷಕಿಯೂ, “ನಾ ನಿನ್ನ ಬಿಡಲಾರೆ” ಎಂಬಂತೆ ಅವರ ಬಟ್ಟೆ ಎಳೆದು ಸೇಡು ತೀರಿಸಿಕೊಂಡಿದ್ದಾರೆ. ಶಾಲೆಯಲ್ಲಿಯೇ ಶಿಕ್ಷಕಿಯರು ಹೀಗೆ ಬಡಿದಾಡಿಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

VISTARANEWS.COM


on

Viral Video
Koo

ಲಖನೌ: ”ಎರಡು ಜಡೆಗಳು ಒಟ್ಟಿಗೆ ಸೇರಲ್ಲ” ಎಂಬ ಮಾತಿದೆ. ಇನ್ನು ಸರ್ಕಾರಿ ಬಸ್‌ಗಳು, ಅಕ್ಕಪಕ್ಕದ ಮನೆಗಳಲ್ಲಿ ಹೆಣ್ಣುಮಕ್ಕಳು ಬಡಿದಾಡಿಕೊಳ್ಳುವ, ಹಿಗ್ಗಾಮುಗ್ಗ ಬೈದು ಜಗಳವಾಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ವೈಷಮ್ಯ, ಜಗಳ, ಸುತ್ತಮುತ್ತಲಿನವರ ಬಗ್ಗೆ ಗಾಸಿಪ್‌ ಮಾಡುವ ಕಾರಣಕ್ಕಾಗಿಯೇ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತು ಚಾಲ್ತಿಗೆ ಬಂದಿರಬೇಕು. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿರುವ (Agra) ಶಾಲೆಯೊಂದರಲ್ಲಿ ಪ್ರಾಂಶುಪಾಲೆ ಹಾಗೂ ಸಹ ಶಿಕ್ಷಕಿ ಮಧ್ಯೆ ಶಾಲೆಯಲ್ಲಿಯೇ ಮಾರಾಮಾರಿ ನಡೆದಿದೆ. ಈ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಹೌದು, ಉತ್ತರ ಪ್ರದೇಶದ ಆಗ್ರಾದಲ್ಲಿರುವ ಶಾಲೆಯೊಂದರಲ್ಲಿ ಪ್ರಾಂಶುಪಾಲೆ ಹಾಗೂ ಸಹ ಶಿಕ್ಷಕಿಯು ಬಡಿದಾಡಿಕೊಂಡಿದ್ದಾರೆ. ಇಬ್ಬರೂ ಅವಾಚ್ಯ ಶಬ್ದಗಳಿಂದ ಪರಸ್ಪರ ಬೈದಿದ್ದಾರೆ. ಅಷ್ಟೇ ಅಲ್ಲ, ಪ್ರಾಂಶುಪಾಲೆಯು, ನಾನು ಯಾವುದಕ್ಕೂ ಏನು ಕಡಿಮೆ ಇಲ್ಲ ಎಂಬಂತೆ, ಶಿಕ್ಷಕಿಯ ಕೆನ್ನೆಗೆ ತಿವಿದಿದ್ದಾರೆ. ಶಿಕ್ಷಕಿಯೂ ರೊಚ್ಚಿಗೆದ್ದು, ಪ್ರಾಂಶುಪಾಲೆಯ ಬಟ್ಟೆ ಹಿಡಿದು ಎಳೆದಿದ್ದಾರೆ. ಇಬ್ಬರ ನಡುವಿನ ಈ ಜಂಗಿಕುಸ್ತಿಯು ಜಾಲತಾಣಗಳಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಾನು ಇವಳನ್ನು ಬಿಡಲ್ಲ ಎಂಬ ರೀತಿ ಪ್ರಾಂಶುಪಾಲೆ ಮುನ್ನುಗ್ಗಿದರೆ, ಕುರ್ಚಿ ಮೇಲೆಯೇ ಕುಳಿತ ಶಿಕ್ಷಕಿಯು ತಿರುಗೇಟು ನೀಡಿದ್ದಾರೆ. ಇವರ ಸಹೋದ್ಯೋಗಿಗಳು ಎಷ್ಟು ಜಗಳ ಬಿಡಿಸಿದರೂ ಇಬ್ಬರ ನಟುವಿನ ಜಟಾಪಟಿ ಮಾತ್ರ ನಿಂತಿಲ್ಲ. ನಿಮ್ಮಿಬ್ಬರದ್ದು ಇದೇ ಆಯಿತು, ವಿಡಿಯೊ ಮಾಡಿ ಅಪ್‌ಲೋಡ್‌ ಮಾಡುತ್ತೇನೆ, ನಿಮ್ಮ ಘನತೆಗೆ ತಕ್ಕಂತೆ ನೀವು ವರ್ತಿಸುತ್ತಿಲ್ಲ ಎಂಬುದಾಗಿ ವಿಡಿಯೊ ಮಾಡುವವರು ಹೇಳಿದರೂ, ಪ್ರಾಂಶುಪಾಲೆ ಹಾಗೂ ಶಿಕ್ಷಕಿಯು ಪಟ್ಟಿಗೆ ಬಿದ್ದು ಜಗಳವಾಡಿದ್ದಾರೆ.

“ಶಾಲೆಯಲ್ಲಿ ಹೇಗೆ ವರ್ತಿಸಬೇಕು ಎಂಬುದೇ ಗೊತ್ತಿರದ ಇವರು, ಮಕ್ಕಳಿಗೆ ಯಾವ ಶಿಕ್ಷಣ ನೀಡುತ್ತಾರೆ? ಇಬ್ಬರನ್ನೂ ವಜಾಗೊಳಿಸಬೇಕು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು, “ಇಂತಹ ಶಿಕ್ಷಕರ ಕೈಯಲ್ಲಿ ಕಲಿತ ಮಕ್ಕಳು ಕೂಡ ಹಾಳಾಗುತ್ತಾರೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯದ ಬಗ್ಗೆ ಮರುಕವಿದೆ” ಎಂದು ಇನ್ನೊಬ್ಬರು ಹೇಳಿದ್ದಾರೆ. ಹೀಗೆ, ನೂರಾರು ಜನ ಪ್ರತಿಕ್ರಿಯಿಸಿ, ಪ್ರಾಂಶುಪಾಲೆ ಹಾಗೂ ಶಿಕ್ಷಕಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಇವರ ವಿರುದ್ಧ ಕ್ರಮ ತೆಗೆದುಕೊಂಡಿರುವ ಕುರಿತು, ನೋಟಿಸ್‌ ನೀಡಿರುವ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

ಇದನ್ನೂ ಓದಿ: Asaduddin Owaisi: ಅಸಾದುದ್ದೀನ್‌ ಓವೈಸಿಯ ಭರ್ಜರಿ ಬೈಕ್‌ ರೈಡ್‌;ವಿಡಿಯೋ ವೈರಲ್‌

Continue Reading

ಪ್ರಮುಖ ಸುದ್ದಿ

Rohit Sharma : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

Rohit Sharma : ಮುಂಬರುವ ಟಿ 20 ವಿಶ್ವಕಪ್​​ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ ಮತ್ತು ಸಾಂಪ್ರದಾಯಿಕ ಎದುರಾಳಿ ತಂಡ ವಿಶ್ವದ ಅಗ್ರ ಎಡಗೈ ವೇಗಿಗಳಲ್ಲಿ ಒಬ್ಬರಾದ ಶಾಹೀನ್ ಅಫ್ರಿದಿ ಅವರನ್ನು ಹೊಂದಿದ್ದಾರೆ. ಇದಲ್ಲದೆ ಇತರ ನುರಿತ ಎಡಗೈ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Rohit Sharma
Koo

ಬೆಂಗಳೂರು: ಹಾಲಿ ಆವೃತ್ತಿಯಲ್ಲಿ ಐಪಿಎಲ್​ನಲ್ಲಿ (IPL 2024) ಮುಂಬೈ ಇಂಡಿಯನ್ಸ್ (Mumbai Indian’s) ತಂಡದ ಆರಂಭಿಕ ಬ್ಯಾಟರ್​ ರೋಹಿತ್ ಶರ್ಮಾ (Rohit Sharma) ಮಿಂಚುತ್ತಿಲ್ಲ. ಅವರು ಕನಿಷ್ಠ ಮೊತ್ತಗಳಿಗೆ ಔಟ್​ ಆಗುತ್ತಿದ್ದಾರೆ. ಬಲಗೈ ಬ್ಯಾಟರ್​​ ಕಳೆದ ತಿಂಗಳು ಸಿಎಸ್ಕೆ (CSK) ವಿರುದ್ಧ ಶತಕ ಬಾರಿಸಿದರೂ ಅದನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಿಲ್ಲ. ಅಂತೆಯೇ ಕಳೆದ ಮೂರು ಇನಿಂಗ್ಸ್​ಗಳಲ್ಲಿ ರೋಹಿತ್ ಎರಡಂಕಿ ಮೊತ್ತವನ್ನು ಮುಟ್ಟಲು ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ, ಅವರು ಈ ಋತುವಿನಲ್ಲಿ ಇಲ್ಲಿಯವರೆಗೆ 10 ಇನಿಂಗ್ಸ್​​ಗಳಲ್ಲಿ 35 ಸರಾಸರಿ ಮತ್ತು 158.29 ಸ್ಟ್ರೈಕ್ ರೇಟ್​ನೊಂದಿಗೆ 315 ರನ್ ಗಳಿಸಿದ್ದಾರೆ.

ಟಿ 20 ವಿಶ್ವಕಪ್ 2024 ಸಮೀಪಿಸುತ್ತಿರುವುದರಿಂದ ರೋಹಿತ್ ಶರ್ಮಾ ಅವರ ಫಾರ್ಮ್ ಮತ್ತು ಅವರು ಔಟಾಗುತ್ತಿರುವ ವಿಧಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅನುಭವಿ ಆರಂಭಿಕ ಆಟಗಾರ ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಎಡಗೈ ವೇಗಿಗಳಿಂದ ಆಗಾಗ್ಗೆ ತೊಂದರೆಗೀಡಾಗಿದ್ದಾರೆ. ಟ್ರೆಂಟ್ ಬೌಲ್ಟ್ ಎರಡು ಬಾರಿ ವಿಕೆಟ್ ಪಡೆದರೆ, ರೋಹಿತ್ ಶರ್ಮಾ ಅವರನ್ನು ಸ್ಯಾಮ್ ಕರ್ರನ್, ಖಲೀಲ್ ಅಹ್ಮದ್ ಮತ್ತು ಮೊಹ್ಸಿನ್ ಖಾನ್ ತಲಾ ಒಂದು ಬಾರಿ ಔಟ್ ಮಾಡಿದ್ದಾರೆ.

ಮುಂಬರುವ ಟಿ 20 ವಿಶ್ವಕಪ್​​ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ ಮತ್ತು ಸಾಂಪ್ರದಾಯಿಕ ಎದುರಾಳಿ ತಂಡ ವಿಶ್ವದ ಅಗ್ರ ಎಡಗೈ ವೇಗಿಗಳಲ್ಲಿ ಒಬ್ಬರಾದ ಶಾಹೀನ್ ಅಫ್ರಿದಿ ಅವರನ್ನು ಹೊಂದಿದ್ದಾರೆ. ಇದಲ್ಲದೆ ಇತರ ನುರಿತ ಎಡಗೈ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಕೆಕೆಆರ್ ವಿರುದ್ಧದ ಮುಂಬೈ ಇಂಡಿಯನ್ಸ್ನ ಮುಂದಿನ ಪಂದ್ಯಕ್ಕೆ ಮುಂಚಿತವಾಗಿ, ಭಾರತದ ಮಾಜಿ ಬ್ಯಾಟ್ಸ್ಮನ್ ವಾಸಿಮ್ ಜಾಫರ್ ಎಡಗೈ ವೇಗದ ಬೌಲರ್​ಗಳ ವಿರುದ್ಧ ರೋಹಿತ್ ಶರ್ಮಾ ಯಾಕೆ ವೈಫಲ್ಯ ಹೊಂದುತ್ತಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ.

ಎಡಗೈ ವೇಗಿಗಳ ವಿರುದ್ಧ ಅವರು ಸಾಖಷ್ಟು ಸಮಸ್ಯೆ ಹೊಂದಿದ್ದಾರೆ. ಅವರು ತನ್ನ ಮುಂಭಾಗದ ಕಾಲನ್ನು ಇಡುವ ರೀತಿಯಿಂದಲೇ ತೊಂದರೆಯಾಗುತ್ತಿದೆ. ಎಲ್ಲರಿಗೂ ಅದು ಅರ್ಥವಾಗಿದೆ. ಬಲಗೈ ಬೌಲರ್​ಗಳ ಸಹ ಅವರನ್ನು ಔಟ್ ಮಾಡಲು ಒಂದು ಮಾರ್ಗ ಕಂಡುಕೊಂಡಿದ್ದಾರೆ. ಆದರೆ ಎಡಗೈ ಆಟಗಾರರು ಕೋನವನ್ನು ಸೃಷ್ಟಿಸಿ ಬೌಲಿಂಗ್ ಮಾಡುತ್ತಾರೆ. ಅದು ಅವರಿಗೆ ಕಷ್ಟಕರವಾಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅವರು ಅವರ ಹಿಂದಕ್ಕೆ ಹೋಗಿ ಚೆಂಡನ್ನು ಎದುರಿಸುತ್ತಾರೆ. ಕೆಲವೊಮ್ಮೆ ಸ್ವಿಂಗ್ ಆಗುವುದನ್ನು ತಪ್ಪಿಸಲು ಮುಂದಕ್ಕೆ ನಡೆಯುತ್ತಾರೆ,” ಎಂದು ಜಾಫರ್ ಹೇಳಿದ್ದಾರೆ.

ಇದನ್ನೂ ಓದಿ: Rohit Sharm : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

ರೋಹಿತ್​ಗೆ ತನ್ನದೇ ಆದ ಸಮಸ್ಯೆಗಳಿದ್ದವು. ಟ್ರೆಂಟ್ ಬೌಲ್ಟ್ ಅವರನ್ನು ಲಾಂಗ್ ಸ್ವಿಂಗ್​ನೊಂದಿಗೆ ಔಟ್ ಮಾಡುತ್ತಾರೆ. ಖಲೀಲ್ ವಿರುದ್ಧವೂ ತನ್ನ ಚಲನೆಯನ್ನು ತಪ್ಪಾಗಿ ಮಾಡಿದರು. ನಾನು ಇದನ್ನು ಯೋಜಿತ ವಿಕೆಟ್​ ಎಂದು ಕರೆಯುವುದಿಲ್ಲ. ಆದರೂ ಅವರ ಆಟದಲ್ಲಿ ಒಂದು ಲೋಪದೋಷವಿದೆ. ಅದು ರೋಹಿತ್​ಗೆ ತಿಳಿದಿದೆ. ಅವರು ಪ್ರತಿದಾಳಿ ಮಾಡಲು ಪ್ರಯತ್ನಿಸುತ್ತಾರೆ. ತಮ್ಮ ಆಕ್ರಮಣಕಾರಿ ಕೌಶಲ್ಯದ ಮೂಲಕ ಸಮಸ್ಯೆಯನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ, “ಎಂದು ಜಾಫರ್ ಹೇಳಿದ್ದಾರೆ.

ಸಲಹೆ ನೀಡಿದ ಜಾಫರ್​

ಇದೇ ವೇಳೆ ಜಾಫರ್​ ಬ್ಯಾಟಿಂಗ್ ಸಲಹೆಯನ್ನೂ ನೀಡಿದ್ದಾರೆ. ಆಕ್ರಮಣಕಾರಿ ಮಾರ್ಗವನ್ನು ತೆಗೆದುಕೊಳ್ಳಬಾರದು. ಬದಲಿಗೆ ಮೊದಲ ಎರಡು ಓವರ್​ಗಳಲ್ಲಿ ಚೆಂಡನ್ನು ಟೈಮಿಂಗ್ ಮಾಡುವತ್ತ ಗಮನ ಹರಿಸಬೇಕು ಎಂದು ಜಾಫರ್ ರೋಹಿತ್ಗೆ ಸಲಹೆ ನೀಡಿದರು.

ರೋಹಿತ್ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ತಮ್ಮ ಇನ್ನಿಂಗ್ಸ್ ನ ಆರಂಭದಲ್ಲಿಯೇ ಚೆಂಡನ್ನು ಬಾರಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಚೆಂಡನ್ನು ತುಂಬಾ ಜೋರಾಇ ಹೊಡೆಯಲು ಪ್ರಯತ್ನಿಸುವ ಬದಲು ಒಂದೆರಡು ಓವರ್​ಗಳನ್ನು ತೆಗೆದುಕೊಳ್ಳಬಹುದು ಮತ್ತು ಸಮಯವನ್ನು ನೋಡಬಹುದು. “ಎಂದು ಅವರು ಹೇಳಿದರು.

Continue Reading

ಕ್ರೈಂ

Prajwal Revanna Case: ವಿಡಿಯೊದಲ್ಲಿ ಪ್ರಜ್ವಲ್‌ ಮುಖ ಕಾಣಲ್ಲ; ಗಂಡಸ್ತನವಿದ್ದರೆ ರಾಹುಲ್‌ ಗಾಂಧಿಗೆ ನೋಟಿಸ್‌ ಕೊಡಿ: ಸಿಎಂಗೆ ಎಚ್‌ಡಿಕೆ ಸವಾಲು

Prajwal Revanna Case: ನಿಮಗೆ ಬೇಕಿರುವುದು ಆ ಸಂತ್ರಸ್ತರಿಗೆ ಪರಿಹಾರ ಕೊಡಿಸುವುದಲ್ಲ. ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡು ಗೆಲ್ಲಬೇಕು ಹಾಗೂ ಪ್ರಧಾನಿ ನರೇಂದ್ರ‌ ಮೋದಿಯವರ ಹೆಸರು ಕೆಡಿಸಬೇಕು ಎಂಬುದಷ್ಟೇ ನಿಮಗೆ ಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಅದರಲ್ಲಿ ಏನೂ ರಾಜೀ‌ ಇಲ್ಲ. ನಾವೂ ಎಲ್ಲ ರೀತಿಯ ದಾಖಲೆಗಳನ್ನೂ ತರುತ್ತೇವೆ. ನಾವೇನೂ ಪಲಾಯನವಾದಿಗಳಲ್ಲ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಪಾತ್ರವಾಗಲೀ, ನನ್ನ ಪಾತ್ರವಾಗಲೀ ಈ ಪ್ರಕರಣದಲ್ಲಿ ಇಲ್ಲ. ಆದರೂ ನಮ್ಮ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Prajwal Revanna Case face not visible in videos says HD Kumaraswamy
Koo

ರಾಯಚೂರು: ಪ್ರಜ್ವಲ್ ರೇವಣ್ಣ (Prajwal Revanna Case) 400 ಮಹಿಳೆಯರನ್ನು ರೇಪ್ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳುತ್ತಾರೆ. ಅವರಿಗೆ ಈ ಮಾಹಿತಿ ಕೊಟ್ಟವರು ಯಾರು? ನೀವು (ಸರ್ಕಾರದವರು) ಕೊಟ್ಟಿದ್ದೀರಾ? ಈ ಕುರಿತು ಬೇಕಾಬಿಟ್ಟಿ ಹೇಳಿಕೆ ನೀಡಿರುವ ರಾಹುಲ್‌ಗೆ ನೋಟಿಸ್‌ ಕೊಡುವಂತೆ ಎಸ್‌ಐಟಿಗೆ ನಿರ್ದೇಶನ ನೀಡಿ. ಈ ಸರ್ಕಾರಕ್ಕೆ‌ ಮಾನ, ಮರ್ಯಾದೆ ಇದ್ದಿದ್ದರೆ, ಹೆಣ್ಣು‌ಮಕ್ಕಳ‌ ಫೋಟೊಗಳನ್ನು ಇಡೀ ದೇಶಕ್ಕೆ ಕಳುಹಿಸುತ್ತಿರಲಿಲ್ಲ. ನಿಮಗೆ‌ ಹೆಣ್ಣು ಮಕ್ಕಳ ಮೇಲೆ ಗೌರವ ಇದೆಯಾ? ನಿಮಗೆ‌ ಗಂಡಸ್ತನ, ತಾಕತ್ತಿದ್ದರೆ ರಾಹುಲ್ ಗಾಂಧಿಗೆ ನೋಟಿಸ್‌ ಕೊಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದರು.

ಈ ಕುರಿತು ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನೀವು‌ ಬಿಟ್ಟಿರುವ ವಿಡಿಯೊಗಳಲ್ಲಿ ಪ್ರಜ್ವಲ್ ಮುಖವೇ ಇಲ್ಲ. ಹಾಗಂತ ನಾನೇನು ಆ ವಿಡಿಯೊಗಳನ್ನು ನೋಡಿಲ್ಲ. ಇಷ್ಟಾದರೂ ಸಹಿಸಿಕೊಂಡಿದ್ದೇವೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನ ಮಹಾನಾಯಕ ತೋಟದಲ್ಲಿ‌ ಏನೇನಾಗಿದೆ? ನೀನೇನು 6 – 7 ಜನರನ್ನು ಹೋಟೆಲ್‌ನಲ್ಲಿ ತೆಗೆದುಕೊಂಡು ಹೋಗಿ ಇಟ್ಟೀದಿಯಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಾವೂ ಎಲ್ಲ ರೀತಿಯ ದಾಖಲೆಗಳನ್ನೂ ತರುತ್ತೇವೆ

ನಿಮಗೆ ಬೇಕಿರುವುದು ಆ ಸಂತ್ರಸ್ತರಿಗೆ ಪರಿಹಾರ ಕೊಡಿಸುವುದಲ್ಲ. ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡು ಗೆಲ್ಲಬೇಕು ಹಾಗೂ ಪ್ರಧಾನಿ ನರೇಂದ್ರ‌ ಮೋದಿಯವರ ಹೆಸರು ಕೆಡಿಸಬೇಕು ಎಂಬುದಷ್ಟೇ ನಿಮಗೆ ಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಅದರಲ್ಲಿ ಏನೂ ರಾಜೀ‌ ಇಲ್ಲ. ನಾವೂ ಎಲ್ಲ ರೀತಿಯ ದಾಖಲೆಗಳನ್ನೂ ತರುತ್ತೇವೆ. ನಾವೇನೂ ಪಲಾಯನವಾದಿಗಳಲ್ಲ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಪಾತ್ರವಾಗಲೀ, ನನ್ನ ಪಾತ್ರವಾಗಲೀ ಈ ಪ್ರಕರಣದಲ್ಲಿ ಇಲ್ಲ. ಆದರೂ ನಮ್ಮ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪೆನ್‌ಡ್ರೈವ್‌ ಲೀಕ್‌ ಬಗ್ಗೆ ಹೊರಜಗತ್ತಿಗೆ ಗೊತ್ತಾದ ದಿನವೇ ಹೇಳಿದ್ದೇನೆ. ಈ ನೆಲದ ಕಾನೂನಿಗೆ ತಲೆ ಬಾಗಬೇಕು. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಹೇಳಿದ್ದೇನೆ. ಆದರೂ‌ ಕ್ಯಾಮರಾ ಹಿಡಿದು ನನ್ನ ಮುಂದೆಯೇ ಏಕೆ ಬರುತ್ತೀರಿ? ಎಂದು ಮಾಧ್ಯಮದವರಿಗೆ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಏನೋ‌ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ.
ಎಸ್.ಐ.ಟಿ. ಜತೆ ಚಿಂತನೆ ಮಾಡುತ್ತೇವೆ ಎಂದು ಹೇಳಿ ಏಪ್ರಿಲ್‌ 28ಕ್ಕೆ ಎಫ್.ಐ.ಆರ್ ಮಾಡಿಸಿದ್ದೀರಿ. ಈ ವಿಚಾರದಲ್ಲಿ ಪದೇ ಪದೆ ಪ್ರಧಾನಿ ಮೋದಿ ಹಾಗೂ ಬಿಜೆಪಿಯವರನ್ನು ಏಕೆ ಎಳೆಯುತ್ತೀರಿ? ಅದಕ್ಕೂ‌ ಪ್ರಧಾನಿಗೂ ಸಂಬಂಧ ಏನು? ಎಂದು ಎಚ್‌.ಡಿ. ಕುಮಾರಸ್ವಾಮಿ ಕೇಳಿದರು.

ಸುಮ್ಮನೆ ನನ್ನನ್ನು ಕೆಣಕಿದ್ದಾರೆ

ನೋಟಿಸ್ ಕೊಟ್ಟ ನಂತರ ಒಂದು ವಾರ ಸಮಯ ಕೇಳಲಾಗಿದೆ. ರೇವಣ್ಣ ಅವರು ಎರಡು ದಿನ ಸಮಯ‌ ಕೇಳಿದ್ದಾರೆ. 8, 10 ಹತ್ತು ಬಾರಿ ಸಮನ್ಸ್ ಕೊಟ್ಟು ಸಮನ್ಸ್‌ಗೇ ಗೌರವ ಕಳಿದಿದ್ದೀರಿ. ದೇವೇಗೌಡರನ್ನು, ಪ್ರಧಾನಿಯವರನ್ನು ಎಳೆದು ತಂದಿದ್ದೀರಿ. ನಿಮ್ಮ ಸರ್ಕಾರದಲ್ಲಿ ನೀವೇ ಈ ರೀತಿಯ ಹೇಳಿಕೆಗಳನ್ನು ಕೊಡುವುದರ ಮುಖಾಂತರ ತನಿಖೆಯ ಹಾದಿಯನ್ನು ತಪ್ಪಿಸುವುದಲ್ಲದೆ, ಪ್ರಚಾರಕ್ಕೋಸ್ಕರ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದೀರಿ. ಕೆಲವರು ಕುಮಾರಸ್ವಾಮಿಯೇ ಈ‌ ಪೆನ್‌ಡ್ರೈವ್‌ ಬಿಟ್ಟಿದ್ದಾಗಿ ಹೇಳುತ್ತಾರೆ. ಇಲ್ಲಿ‌ ನನ್ನ ಹೆಸರನ್ನು ತರಲಾಗಿದೆ. ಸುಮ್ಮನೆ ನನ್ನನ್ನು ಕೆಣಕಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿ ಗುಡುಗಿದರು.

ಇದನ್ನೂ ಓದಿ: Prajwal Revanna Case‌: ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆ ಪ್ರಜ್ವಲ್‌ರಿಂದ ರೇಪ್‌? ಎಫ್‌ಐಆರ್‌ನಲ್ಲಿದೆ ಇಂಚಿಂಚು ಡಿಟೇಲ್ಸ್!

ತಂದೆ – ತಾಯಿಗೆ ಆತ್ಮಸ್ಥೈರ್ಯ ತುಂಬಲು ಹೋಗಿದ್ದೆ

ರಾಜ್ಯದ‌ ಮುಖ್ಯಮಂತ್ರಿಗೆ ತಂದೆ – ತಾಯಿ‌ ಮೇಲೆ ಗೌರವ ಇದೆಯೇ? ಸಿದ್ದರಾಮಯ್ಯ ಅವರಿಗೆ ಮನುಷ್ಯತ್ವ ಇಲ್ಲದಿರಬಹುದು. ಆದರೆ, ನಮಗೆ ಇದೆ. ನಾನು ಬಂದಿರುವ ಸಂಸ್ಕೃತಿ ನಮಗೆ ಇದನ್ನು ಕಲಿಸಿದೆ. ನನ್ನ ತಂದೆ – ತಾಯಿ ನೋವಿನಲ್ಲಿದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬುವುದಕ್ಕೆ ನಾನು ಅವರ ಜತೆ ಎರಡು ದಿನ ಇದ್ದೆ. ನಮ್ಮ ಮನೆಗೆ ಯಾವ ವಕೀಲರು ಬಂದಿದ್ದರು? ಇವತ್ತು ಆರೋಪಿ‌ ಸ್ಥಾನದಲ್ಲಿ‌ ನಿಲ್ಲಿಸಿದ್ದೀರಿ ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

Continue Reading
Advertisement
Summer Tour
ಪ್ರವಾಸ9 mins ago

Summer Tour: ಕಾಶ್ಮೀರ ಪ್ರವಾಸ ಮಾಡಲೊಂದು ಚಾನ್ಸ್! ಐ ಆರ್ ಸಿ ಟಿ ಸಿಯಿಂದ ವಿಶೇಷ ಪ್ಯಾಕೇಜ್

IPL 2024
ಕ್ರೀಡೆ13 mins ago

IPL 2024 : ಐಪಿಎಲ್​ಗೆ ಅರ್ಧದಲ್ಲೇ ವಿದಾಯ ಹೇಳಿದ ಮುಸ್ತಾಫಿಜುರ್​ಗೆ ಸಹಿ ಹಾಕಿದ ಜೆರ್ಸಿ ನೀಡಿದ ಧೋನಿ

Tips for bedroom corner
ಲೈಫ್‌ಸ್ಟೈಲ್15 mins ago

Tips for Bedroom Corner: ಮಲಗುವ ಕೋಣೆಯ ಮೂಲೆಗಳನ್ನು ಆಕರ್ಷಕವಾಗಿಸಲು ಕೆಲವು ಟಿಪ್ಸ್

Viral Video
ವೈರಲ್ ನ್ಯೂಸ್18 mins ago

Viral Video: ಪ್ರಿನ್ಸಿಪಾಲ್ ಆದರೇನು, ಟೀಚರ್ ಆದರೇನು? ಹೆಂಗಸರ ಬಡಿದಾಟ ಇರೋದೇ ಹೀಗೆ! ವಿಡಿಯೊ ನೋಡಿ

Rohit Sharma
ಪ್ರಮುಖ ಸುದ್ದಿ28 mins ago

Rohit Sharma : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

Prajwal Revanna Case face not visible in videos says HD Kumaraswamy
ಕ್ರೈಂ33 mins ago

Prajwal Revanna Case: ವಿಡಿಯೊದಲ್ಲಿ ಪ್ರಜ್ವಲ್‌ ಮುಖ ಕಾಣಲ್ಲ; ಗಂಡಸ್ತನವಿದ್ದರೆ ರಾಹುಲ್‌ ಗಾಂಧಿಗೆ ನೋಟಿಸ್‌ ಕೊಡಿ: ಸಿಎಂಗೆ ಎಚ್‌ಡಿಕೆ ಸವಾಲು

Covishield Vaccine
ಪ್ರಮುಖ ಸುದ್ದಿ44 mins ago

Covishield Vaccine: ಕೋವಿಶೀಲ್ಡ್ ಪಡೆದವರು ಫ್ರಿಡ್ಜ್ ನೀರು, ಐಸ್ ಕ್ರೀಂ, ಕೂಲ್‌ ಡ್ರಿಂಕ್ಸ್‌ ಸೇವಿಸಬಾರದು: ತಪ್ಪು ಮಾಹಿತಿ ಕೊಟ್ಟ ಕಾಲೇಜುಗಳಿಗೆ ನೋಟಿಸ್

T20 World Cup
ಪ್ರಮುಖ ಸುದ್ದಿ49 mins ago

T20 World Cup : ವಿಶ್ವ ಕಪ್​​ ಟೂರ್ನಿಗೆ ಭಾರತದ ಇಬ್ಬರು ಅಂಪೈರ್​ಗಳು ಆಯ್ಕೆ; ಯಾರೆಲ್ಲ ಅವರು?

Namesakes
ದೇಶ53 mins ago

Namesake: ರಾಹುಲ್‌ಗಳು, ಲಾಲುಗಳು; ಒಂದೇ ಹೆಸರಿನವರ ಸ್ಪರ್ಧೆ ಕುರಿತು ಕೋರ್ಟ್‌ ಮಹತ್ವದ ಹೇಳಿಕೆ

Saanya Iyer
ಫ್ಯಾಷನ್1 hour ago

Saanya Iyer: ಗ್ರ್ಯಾಂಡ್‌ ಲೆಹೆಂಗಾದಲ್ಲಿ ರಾಣಿಯಂತೆ ಕಂಗೊಳಿಸಿದ ನಟಿ ಸಾನ್ಯಾ ಅಯ್ಯರ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ2 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ13 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ23 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌