Goldman of Bihar: ಈತ ಬಂಗಾರದ ಮನುಷ್ಯ! ಕೊರಳಲ್ಲಿದೆ 5 ಕೆಜಿ ಚಿನ್ನ! ಬೈಕ್‌ನಲ್ಲೂ ಇದೆ ಬಂಗಾರ! - Vistara News

ವೈರಲ್ ನ್ಯೂಸ್

Goldman of Bihar: ಈತ ಬಂಗಾರದ ಮನುಷ್ಯ! ಕೊರಳಲ್ಲಿದೆ 5 ಕೆಜಿ ಚಿನ್ನ! ಬೈಕ್‌ನಲ್ಲೂ ಇದೆ ಬಂಗಾರ!

ಬಿಹಾರದ ಗೋಲ್ಡ್ ಮ್ಯಾನ್ (Goldman of Bihar) ಎಂದೇ ಕರೆಯಲ್ಪಡುವ ಪ್ರೇಮ್ ಸಿಂಗ್ ಅವರು ಚಿನ್ನವನ್ನು ಹೆಚ್ಚು ಇಷ್ಟ ಪಡುತ್ತಾರೆ. ಅವರು ಸುಮಾರು ಐದು ಕಿಲೋಗ್ರಾಂಗಳಷ್ಟು ಚಿನ್ನವನ್ನು ಧರಿಸಿಕೊಂಡೇ ಓಡಾಡುತ್ತಾರೆ. ಮಾತ್ರವಲ್ಲದೇ ಅವರು ಚಿನ್ನದ ಬೈಕ್ ಅನ್ನೂ ಹೊಂದಿದ್ದಾರೆ. ಇವರ ಕುರಿತ ಕುತೂಹಲಕಾರಿ ವರದಿ ಇಲ್ಲಿದೆ.

VISTARANEWS.COM


on

Goldman of Bihar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಐದು ಕಿಲೋ ಗ್ರಾಂನಷ್ಟು ಚಿನ್ನವನ್ನು ಧರಿಸಿಕೊಂಡು ಚಿನ್ನದ ಬೈಕ್ ನಲ್ಲಿ ಆತ ಸವಾರಿ ಮಾಡುತ್ತಿದ್ದರೆ ಎಲ್ಲರೂ ಹುಬ್ಬೇರಿಸಿಕೊಂಡು ನೋಡುತ್ತಾರೆ. ಬಿಹಾರದ (bihar) ಗೋಲ್ಡ್ ಮ್ಯಾನ್ (Goldman of Bihar) ಎಂದೇ ಕರೆಯಲಾಗುವ ಆತನಿಗೆ ಚಿನ್ನದ ಮೇಲಿನ ಪ್ರೀತಿ ಈಗ ದೇಶಾದ್ಯಂತ ಚರ್ಚೆಯಲ್ಲಿದೆ. ಆತನ ಕುರಿತಾದ ವಿಡಿಯೋ, ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (viral video) ಆಗುತ್ತಿದೆ.

ಬಿಹಾರದ ಗೋಲ್ಡ್ ಮ್ಯಾನ್ ಎಂದೇ ಕರೆಯಲ್ಪಡುವ ಪ್ರೇಮ್ ಸಿಂಗ್ ಅವರು ಚಿನ್ನವನ್ನು ಹೆಚ್ಚು ಇಷ್ಟಪಡುತ್ತಾರೆ. ಅವರು ಸುಮಾರು ಐದು ಕಿಲೋಗ್ರಾಂಗಳಷ್ಟು ಚಿನ್ನವನ್ನು ಧರಿಸಿಕೊಂಡೇ ಓಡಾಡುತ್ತಾರೆ. ಮಾತ್ರವಲ್ಲದೇ ಅವರು ಚಿನ್ನದ ಬೈಕ್ ಅನ್ನೂ ಹೊಂದಿದ್ದಾರೆ. ಇದನ್ನು ಬೆಂಗಳೂರಿನಲ್ಲಿ ರಚಿಸಲಾಗಿದೆ. ಇದರ ನಿರ್ಮಾಣಕ್ಕೆ ಏಳರಿಂದ ಎಂಟು ತಿಂಗಳು ಬೇಕಾಯಿತು ಮತ್ತು 11 ರಿಂದ 12 ಲಕ್ಷ ರೂ. ಖರ್ಚಾಗಿದೆ ಎನ್ನಲಾಗಿದೆ.


ಬಿಹಾರದ ಬಂಗಾರದ ಮನುಷ್ಯ ಪ್ರೇಮ್ ಸಿಂಗ್ ಅವರಿಗೆ ತಾವು ಧರಿಸುವ ಚಿನ್ನದಿಂದಲೇ ಸುದ್ದಿಯಲ್ಲಿದ್ದಾರೆ. ಇವರ ಕುರಿತು ವಿಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: Viral Video: ರೀಲ್ಸ್‌ಗಾಗಿ ಸಿಗರೇಟ್‌ ದಂ ಹೊಡೆದ ಯುವತಿ; ಮನೇಲಿ ಹಿಗ್ಗಾಮುಗ್ಗಾ ಹೊಡೆದ ಅಪ್ಪ!

ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದ್ದು, ಹೀಗಾಗಿ ಯಾವುದೇ ಕಳ್ಳರ ಭಯವಿಲ್ಲದೆ ಇಷ್ಟೊಂದು ಚಿನ್ನವನ್ನು ಧರಿಸಿಕೊಂಡು ಓಡಾಡುತ್ತೇನೆ. ಬೈಕ್‌ಗೂ 150 ರಿಂದ 200 ಗ್ರಾಂ ಚಿನ್ನವನ್ನು ಹಾಕಿದ್ದೇನೆ. ಇದು ಬಿಹಾರ ಸರ್ಕಾರ ಹಾಗೂ ಪೊಲೀಸರ ಪಾಲಿಗೆ ಗೌರವದ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾರುಖ್‌ ಖಾನ್‌ ನನ್ನು ಕಾಪಿ ಮಾಡಲು ಹೋಗಿ ಯೂಟ್ಯೂಬರ್‌ಗಳು ಜೈಲು ಪಾಲು

ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಲೈಕ್ಸ್ , ಕಾಮೆಂಟ್‌ ಪಡೆಯಲು ಯುವಕರು ಅನೇಕ ದುಸ್ಸಾಹಸಗಳಿಗೆ ಕೈ ಹಾಕಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅದೇ ರೀತಿ ಇದೀಗ ಯುವಕರು ಸಿನಿಮಾವೊಂದರಲ್ಲಿ ಹೀರೊ ಲುಕ್‌ ಅನ್ನು ನಕಲು ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.

ಉತ್ತರ ಪ್ರದೇಶದ ಬುಲಂದ್ ಶಹರ್‌ನ ದಿಬಾಯ್‌ನಲ್ಲಿ ಆರು ಯುಟ್ಯೂಬರ್‌ಗಳು ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರು ಬ್ಯಾಂಡೇಜ್ ಧರಿಸಿದ ಲುಕ್ ಅನ್ನು ನಕಲು ಮಾಡಿ ಇಡೀ ಪಟ್ಟಣವನ್ನು ಸುತ್ತಿದ್ದಾರೆ. ಇವರನ್ನು ಕಂಡು ಸ್ಥಳೀಯರು ಗಾಬರಿಗೊಂಡಿದ್ದಾರೆ ಎನ್ನಲಾಗಿದೆ.

ಈ ವಿಡಿಯೋದಲ್ಲಿ ಆರು ಮಂದಿ ಯುವಕರು ರಕ್ತದಂತೆ ಕಾಣುವ ಬಣ್ಣವನ್ನು ಬ್ಯಾಂಡೇಜ್‌ಗೆ ಬಳಿದುಕೊಂಡು ಅದನ್ನು ಮುಖಕ್ಕೆ ಸುತ್ತಿಕೊಂಡು ಕೈಯಲ್ಲಿ ಕೋಲುಗಳನ್ನು ಹಿಡಿದು ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರ ಲುಕ್ ಅನ್ನು ನಕಲು ಮಾಡಿ ಇಡೀ ಪಟ್ಟಣವನ್ನು ಸುತ್ತಿಹಾಕಿದ್ದಾರೆ. ಇವರಲ್ಲಿ ಒಬ್ಬ ಶರ್ಟ್ ಧರಿಸಿದೆ ತನ್ನ ಇಡೀ ದೇಹವನ್ನು ರಕ್ತದ ಕಲೆಯಂತೆ ಕಾಣುವ ಬ್ಯಾಂಡೇಜ್‌ನಿಂದ ಮುಚ್ಚಿಕೊಂಡಿದ್ದಾನೆ. ಇವರನ್ನು ಕಂಡು ಸ್ಥಳೀಯರು ಗಾಬರಿಗೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ವಿಡಿಯೋ ಸೋಶಿಯಲ್ ವೀಡಿಯಾದಲ್ಲಿ ವೈರಲ್ ಆಗಿದ್ದು, ಮಾತ್ರವಲ್ಲ ಇದರಿಂದ ಪೊಲೀಸರು ಇವರನ್ನು ಹುಡುಕಿಕೊಂಡು ಬರುವಂತಾಗಿದೆ. ಈ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ವಿಡಿಯೋ 15 ನಿಮಿಷಗಳ ಕಾಲವಿದ್ದು, ಸಮಾಜದ ಜನತೆಗೆ ಉಪದ್ರವ ನೀಡುವಂತಹ ಈ ರೀಲ್ಸ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇದಕ್ಕೆ ಶೀರ್ಷಿಕೆ ನೀಡಲಾಗಿದೆ.

ಈ ಆರು ಮಂದಿ ಸ್ಥಳೀಯರನ್ನು ಹೆದರಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಾಗೇ ಮುಂದೆ ಇಂತಹ ಕುಚೇಷ್ಠೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Eknath Shinde: ಗಾಯಗೊಂಡು ರಸ್ತೆಯಲ್ಲಿ ಪರದಾಡುತ್ತಿದ್ದ ಜೈನ ಸನ್ಯಾಸಿಗಳಿಗೆ ನೆರವಾದ ಮಹಾರಾಷ್ಟ್ರ ಸಿಎಂ

Eknath Shinde: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನಕ್ಕಾಗಿ ಥಾಣೆಯಿಂದ ವಿಧಾನಸಭಾ ಭವನಕ್ಕೆ ಹೋಗುತ್ತಿದ್ದಾಗ ಘಾಟ್ಕೋಪರ್‌ನ ರಮಾಬಾಯಿ ಅಂಬೇಡ್ಕರ್ ನಗರದ ಬಳಿ ಇಬ್ಬರು ಜೈನ ಸಾಧ್ವಿಗಳು ಸಂಕಷ್ಟದ ಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ತಮ್ಮ ವಾಹನಗಳನ್ನು ನಿಲ್ಲಿಸಲು ಹೇಳಿ ವಾಹನದಿಂದ ಇಳಿದು ಇಬ್ಬರು ಜೈನ ಮಹಿಳಾ ಸನ್ಯಾಸಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ.

VISTARANEWS.COM


on

Viral Video
Koo

ಮುಂಬೈ: ಯಾರಾದರೂ ಸಂಕಷ್ಟದಲ್ಲಿದ್ದಾಗ ಕೆಲವರು ಕಂಡೂ ಕಾಣದಂತೆ ಹೋಗುತ್ತಿರುತ್ತಾರೆ. ಅಂತಹ ಘಟನೆಗಳನ್ನು ನಾವು ಹಲವಾರು ಕಡೆಗಳಲ್ಲಿ ಕಂಡಿರುತ್ತೇವೆ. ಅಲ್ಲಿ ಸಹಾಯಕ್ಕೆ ಬರುವವರು ಒಬ್ಬರು-ಇಬ್ಬರು ಮಾತ್ರ. ಉಳಿದವರು ನಮಗೇಕೆ ಪರರ ಚಿಂತೆ ಎಂದು ತಮ್ಮ ಪಾಡಿಗೆ ತಾವು ಹೋಗುತ್ತಿರುತ್ತಾರೆ. ಸಾಮಾನ್ಯ ಜನರೇ ಈ ರೀತಿ ವರ್ತಿಸುವಾಗ ಇನ್ನೂ ದೊಡ್ಡ ಮನುಷ್ಯರೆನಿಸಿಕೊಂಡರು ಅಲ್ಲಿ ಏನಾಗಿದೆ ಎಂದು ಕಣ್ಣೆತ್ತಿ ಕೂಡ ನೋಡುವುದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ರಸ್ತೆಯಲ್ಲಿ ಸಂಕಷ್ಟಕ್ಕೀಡಾದ ಇಬ್ಬರು ವ್ಯಕ್ತಿಗಳ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ (Viral Video) ಆಗಿದೆ.

ಹೌದು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನಕ್ಕಾಗಿ ಥಾಣೆಯಿಂದ ವಿಧಾನಸಭಾ ಭವನಕ್ಕೆ ಹೋಗುತ್ತಿದ್ದಾಗ ಘಾಟ್ಕೋಪರ್‌ನ ರಮಾಬಾಯಿ ಅಂಬೇಡ್ಕರ್ ನಗರದ ಬಳಿ ಇಬ್ಬರು ಜೈನ ಸಾಧ್ವಿಗಳು (ಜೈನ ಮಹಿಳಾ ಸನ್ಯಾಸಿನಿಗಳು) ಸಂಕಷ್ಟದ ಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ತಮ್ಮ ವಾಹನಗಳನ್ನು ನಿಲ್ಲಿಸಲು ಹೇಳಿ ವಾಹನದಿಂದ ಇಳಿದು ಇಬ್ಬರು ಜೈನ ಮಹಿಳಾ ಸನ್ಯಾಸಿಗಳಿಗೆ ಸಹಾಯ ಮಾಡಲು ಬಂದಿದ್ದಾರೆ.

ಇಬ್ಬರು ಜೈನ ಮಹಿಳಾ ಸನ್ಯಾಸಿಗಳಿಗೆ ಘಾಟ್ಕೋಪರ್‌ನ ರಮಾಬಾಯಿ ಅಂಬೇಡ್ಕರ್ ನಗರದ ಬಳಿ ಅಪಘಾತವಾಗಿದ್ದು, ಅವರನ್ನು ಕಂಡು ಅವರ ಪರಿಸ್ಥಿತಿ ತಿಳಿದ ಸಿಎಂ ತಕ್ಷಣ ಗಾಯಗೊಂಡ ಮಹಿಳಾ ಸನ್ಯಾಸಿಗಳನ್ನು ಆಸ್ಪತ್ರೆಗೆ ಸಾಗಿಸಲು ತಮ್ಮ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಆ್ಯಂಬುಲೆನ್ಸ್‌ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ವಿಡಿಯೊವನ್ನು ಸಿಎಂ ಏಕನಾಥ್ ಶಿಂಧೆ ಅವರ ಅಧಿಕೃತ ಹ್ಯಾಂಡಲ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು ವೈರಲ್ ಆಗಿದೆ. ಸಿಎಂ ಮಹಾನ್ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೆಟ್ಟಿಲುಗಳ ಮೇಲೆ ಬೈಕ್‌ ಸವಾರಿ; ರೋಚಕ ವಿಡಿಯೊ ವೈರಲ್‌

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ಸಹಾಯ ಮಾಡಲು ಮುಂದಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಮುಂಬೈ ಮತ್ತು ಥಾಣೆಯಲ್ಲಿ ಲೋಕಸಭಾ ಚುನಾವಣೆಯ ಮಧ್ಯೆ, ಆಟೋ ರಿಕ್ಷಾ ಅಪಘಾತಕ್ಕೀಡಾದ ಮಹಿಳೆಗೆ ಸಿಎಂ ಶಿಂಧೆ ಸಹಾಯ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು.

ಮಹಾರಾಷ್ಟ್ರ ಸಿಎಂ ತಮ್ಮ ಕಾರಿನಿಂದ ಇಳಿದು, ಮಹಿಳೆಗೆ ಮತ್ತೊಂದು ವಾಹನದಲ್ಲಿ ಆಸ್ಪತ್ರೆಗೆ ಹೋಗಲು ಸಹಾಯ ಮಾಡಿದ್ದರು ಮತ್ತು ಅವಳ ಗಾಯಗಳಿಗೆ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

Continue Reading

ಪ್ರವಾಸ

Rainy Season Tourism: ಮಳೆಗಾಲದ ಪ್ರವಾಸ ಮಾಡುವ ಮುನ್ನ ಈ 10 ಎಚ್ಚರಿಕೆಗಳನ್ನು ಪಾಲಿಸಿ

Rainy Season Tourism: ಪ್ರತಿ ಮಳೆಗಾಲದಲ್ಲೂ ಅನಾಹುತದ ಒಂದಿಲ್ಲೊಂದು ಪ್ರಕರಣಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ. ಈ ಪ್ರಕೃತಿಯ ಹಸಿರು ಸೆರಗಿನಲ್ಲಿ ಕಳೆದುಹೋಗುವ ಮುನ್ನ ಮೈಮರೆಯಬಾರದು ಎಂಬ ಎಚ್ಚರಿಕೆ ಸದಾ ನಮಗೆ ಇರಬೇಕು. ಕಾರಣ, ಮಳೆ ಭೋರ್ಗರೆದು ಸುರಿದರೆ, ಪ್ರವಾಹ, ನೆರೆ, ಭೂಕುಸಿತ ಇತ್ಯಾದಿ ಅವಘಡಗಳು ಸರ್ವೇಸಾಮಾನ್ಯ. ಕೊಂಚ ಎಡವಿದರೂ ಪ್ರಾಣಕ್ಕೇ ಕುತ್ತು. ಮಳೆಗಾಲದಲ್ಲಿ ಪ್ರವಾಸ ಮಾಡುವ ಮುನ್ನ ಈ ಎಚ್ಚರಿಕೆಯನ್ನು ಸದಾ ವಹಿಸಿ.

VISTARANEWS.COM


on

Rainy Season Tourism
Koo

ಮಹಾರಾಷ್ಟ್ರದ ಲೋನವಾಲದ ಬುಶಿ ಅಣೆಕಟ್ಟಿನ ಬಳಿ ಮಳೆಗಾಲದ ಪ್ರವಾಹದಲ್ಲಿ (Rainy Season Tourism) ಕೊಚ್ಚಿಹೋದ ಕುಟುಂಬದ ಮನಮಿಡಿಯುವ ದೃಶ್ಯಗಳು ವೈರಲ್‌ ಆಗುವ ಮೂಲಕ, ಇದೀಗ ಮಳೆಗಾಲದಲ್ಲಿ ಪ್ರವಾಸದ ಸಂದರ್ಭ ನಾವು ವಹಿಸಬೇಕಾದ ಎಚ್ಚರಿಕೆಯ ಕರೆಗಂಟೆಯಾಗಿದೆ. ಪ್ರತಿ ಮಳೆಗಾಲದಲ್ಲೂ ಇಂತಹ ಒಂದಿಲ್ಲೊಂದು ಪ್ರಕರಣಗಳು, ಪದೇ ಪದೇ, ಪ್ರಕೃತಿಯ ಶಕ್ತಿಯ ಮುಂದೆ ನಾವು ಎಂದಿಗೂ ಹುಲು ಮಾನವರೇ ಎಂಬ ಸತ್ಯವನ್ನು ನಮಗೆ ನೆನಪಿಸುತ್ತಲೇ ಇರುತ್ತವೆ. ಮಳೆಗಾಲ ಎಂತಹ ಕಲ್ಲು ಹೃದಯಿಯನ್ನೂ ಕರಗಿಸುತ್ತದೆ. ಎಂತಹ ಅರಸಿಕನಲ್ಲೂ ರಸಿಕತೆಯನ್ನು ಚಿಗುರಿಸುತ್ತದೆ. ಮಳೆಯಲ್ಲಿ ಪ್ರಕೃತಿಯ ಸೊಬಗಿಗೆ ಮಾರು ಹೋಗದವರಾರಿಲ್ಲ ಹೇಳಿ! ಇನ್ನು ಪ್ರವಾಸ ಪ್ರಿಯರ ಮಾತೇಕೆ? ಪ್ರವಾಸವನ್ನು ಇಷ್ಟಪಡುವವರು ಮಳೆಗಾಲದಲ್ಲೊಮ್ಮೆ ಪ್ರಕೃತಿಯಲ್ಲಿ ಆಂದವಾಗಿ ಕಾಲ ಕಳೆಯಲು, ಮಳೆನೀರಲ್ಲಿ ಮನಸೋ ಇಚ್ಛೆ ಮೀಯಲು, ಮಳೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಸದಾ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಈ ಪ್ರಕೃತಿಯ ಹಸಿರ ಸೆರಗಿನಲ್ಲಿ ಕಳೆದುಹೋಗುವ ಮುನ್ನ ಮೈಮರೆಯಬಾರದು ಎಂಬ ಎಚ್ಚರಿಕೆ ಸದಾ ನಮಗೆ ಇರಬೇಕು. ಕಾರಣ, ಮಳೆ ಭೋರ್ಗರೆದು ಸುರಿದರೆ, ಪ್ರವಾಹ, ನೆರೆ, ಭೂಕುಸಿತ ಇತ್ಯಾದಿ ಅವಘಡಗಳು ಸರ್ವೇಸಾಮಾನ್ಯ. ಕೊಂಚ ಎಡವಿದರೂ ಪ್ರಾಣಕ್ಕೇ ಕುತ್ತು. ಬನ್ನಿ, ಮಳೆಗಾಲದಲ್ಲಿ ಪ್ರವಾಸ ಮಾಡುವ ಮುನ್ನ ಈ ಎಚ್ಚರಿಕೆಯನ್ನು ಸದಾ ನೀವು ವಹಿಸಿ. ಮರೆಯದಿರಿ.

Island During Golden Hour And Upcoming Storm

ಹವಾಮಾನ ಚೆಕ್‌ ಮಾಡಿಕೊಳ್ಳಿ

ಮಳೆಗಾಲದ ಪ್ರವಾಸ ಖುಷಿ ಕೊಡುತ್ತದೆ ನಿಜ. ಆದರೆ, ನೀವು ಪ್ರವಾಸ ಮಾಡುವ ಮೊದಲು ನೀವು ಹೋಗುವ ಜಾಗದ ಸುತ್ತಮುತ್ತಲ ಹವಾಮಾನ ಹೇಗಿದೆ ಎಂದು ಚೆಕ್‌ ಮಾಡಿಕೊಳ್ಳಿ. ಈಗೆಲ್ಲ ಮುಂಚಿತವಾಗಿ ಹವಾಮಾನ ಚೆಕ್‌ ಮಾಡಿಕೊಳ್ಳುವುದು ಕಷ್ಟವೇನಲ್ಲ. ಬೆರಳ ತುದಿಗೇ ಎಲ್ಲ ಮಾಹಿತಿಗಳನ್ನೂ ನೀವು ನಿಮ್ಮ ಫೋನ್‌ ಮೂಲಕವೇ ಪಡೆಯಬಹುದು. ಹೋಗುವ ಜಾಗದ ಬಗೆಗಿನ ವರ್ತಮಾನದ ಮಾಹಿತಿ ತಿಳಿದಿರುವುದೂ ಕೂಡಾ ಅತ್ಯಂತ ಮುಖ್ಯ. ಅತಿಯಾದ ಮಳೆ ಸಂಭವ ಇದ್ದರೆ ಹೊರಡಲೇಬೇಡಿ. ಮನೆಯಲ್ಲೇ ಸೇಫ್‌ ಆಗಿರಿ.

When changing direction on wet ground change the direction of the leg first then turn the body Avoid Slips Trips And Falls In Rainy Seasons

ಸೂಕ್ತ ಬಟ್ಟೆ ಹಾಗೂ ಶೂ ಜೊತೆಗಿರಲಿ

ಮಳೆಗಾಲದ ಪ್ರವಾಸಕ್ಕೆ ಯಾವಾಗಲೂ ಸೂಕ್ತ ಬಟ್ಟೆ ಹಾಗೂ ಶೂ ನಿಮ್ಮ ಜೊತೆಗಿರಲಿ. ಸರಿಯಾದ ಶೂ ಇಲ್ಲದಿದ್ದರೆ ಜಾರುವ ಸಂಭವ ಹೆಚ್ಚು. ಬೇಗನೆ ಒಣಗಬಹುದಾದ ಬಟ್ಟೆ, ರೇನ್‌ಕೋಟ್‌ ಇತ್ಯಾದಿಗಳಿರಲಿ.

ಸೂಚನಾ ಫಲಕ ಗಮನಿಸಿ

ಪ್ರವಾಸಕ್ಕೆ ಹೋದ ಜಾಗದಲ್ಲಿ ಸೂಚನಾ ಫಲಕ, ಸೆಕ್ಯೂರಿಟಿಯವರು, ಪೊಲೀಸ್‌ ಹಾಗೂ ಸ್ಥಳೀಯರು ನೀಡುವ ಎಚ್ಚರಿಕೆಯನ್ನು ಪಾಲನೆ ಮಾಡಿ. ಅವರ ಎಚ್ಚರಿಕೆಯ ಮಾತುಗಳಿಗೆ ಗೌರವ ಕೊಡಿ.

 Landscape During Rainy Season

ಬಂಡೆ ಹತ್ತುವಾಗ ಎಚ್ಚರ

ಹರಿಯುತ್ತಿರುವ ಹೊಳೆ, ತೊರೆ, ನದಿ, ಜಲಪಾತ ಇತ್ಯಾದಿಗಳಲ್ಲಿ ಮಳೆಗಾಲದಲ್ಲಿ ಇಳಿಯುವುದು, ಫೋಟೋಗಾಗಿ ನೀರಲ್ಲೇ ನಿಂತು ಪೋಸ್‌ ಕೊಡುವುದು, ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ತೆಗೆಯುವುದು ಹಾಗೂ ತೆಗೆಸಿಕೊಳ್ಳುವುದು, ಈಜುವ ವಿಡಿಯೋ, ರೀಲ್‌ ಮಾಡುವುದು, ಡೈವ್‌ ಮಾಡುವುದು ಇತ್ಯಾದಿಗಳನ್ನು ಮಾಡಬೇಡಿ. ಮಳೆಗಾಲದಲ್ಲಿ ಇವೆಲ್ಲ ಖಂಡಿತವಾಗಿಯೂ ಸೇಫ್‌ ಅಲ್ಲ.

trekking

ಚಾರಣ ಮಾಡುವಾಗ ಎಚ್ಚರ ವಹಿಸಿ

ಮಳೆಗಾಲದಲ್ಲಿ ಚಾರಣ ಮಾಡುತ್ತಿದ್ದರೂ ಎಚ್ಚರ ವಹಿಸಿ. ಹವಾಮಾನ ಪರೀಕ್ಷೆ ಮಾಡಿಕೊಳ್ಳಿ. ಮಳೆಯಿದ್ದರೆ, ಸೂಕ್ತ ಸಾಧನ ಸಲಕರಣೆಗಳು ನಿಮ್ಮ ಬಳಿ ಇರಲಿ. ಗೈಡ್‌ ಹೇಳಿದ ನಿಯಮಗಳನ್ನು ಪಾಲಿಸಿ. ಭೂಕುಸಿತ, ನೆರೆ ಇತ್ಯಾದಿಗಳ ಮುನ್ಸೂಚನೆಯಿದ್ದರೆ ಅಂತಹ ಸಂದರ್ಭ ಸುರಕ್ಷಿತ ಜಾಗಕ್ಕೆ ತೆರಳಿ. ಪರ್ವತ ಪ್ರದೇಶದಲ್ಲಿ ಕೆಲವೊಮ್ಮೆ ಯಾವ ಸುಳಿವೂ ಇಲ್ಲದೆ ಥಟ್ಟನೆ ಏನು ಬೇಕಾದರೂ ಸಂಭವಿಸಬಹುದು. ಅನವಶ್ಯಕ ಪರಿಸ್ಥಿತಿಗಳನ್ನು ನೀವೇ ಸೃಷ್ಟಿಸಬೇಡಿ.

ಸುರಕ್ಷಿತ ಜಾಗಕ್ಕೆ ತೆರಳಿ

ಜಲಪಾತಗಳು, ನದಿ ತೊರೆಯ ಸಮೀಪ ಹೋಗಿದ್ದರೆ, ಮಳೆ ಬರಲು ಆರಂಭವಾದರೆ, ಬರುವ ಸೂಚನೆಯಿದ್ದರೆ, ಅಲ್ಲೇ ನಿಂತಿರಬೇಡಿ. ಸುರಕ್ಷಿತ ಜಾಗಕ್ಕೆ ತೆರಳಿ. ನೀವು ನಿಂತ ಜಾಗದಲ್ಲಿ ಆಗಷ್ಟೇ ಮಳೆ ಬರಲು ಆರಂಭವಾದರೂ ಕೂಡಾ, ನದಿಯ ಹರಿವಿರುವ ಬೇರೆ ಜಾಗದಲ್ಲಿ ಅಗಾಧ ಮಳೆಯಾಗಿರಬಹುದು. ಒಡನೆಯೇ ನೆರೆ ಉಕ್ಕಿ ಹರಿದು ಬರಬಹುದು. ಮಿಂಚಿನ ವೇಗದಲ್ಲಿ ಇವು ಸಂಭವಿಸಬಹುದು. ಹಾಗಾಗಿ ಜಾಗರೂಕರಾಗಿ ಇರುವುದು ಅತ್ಯಂತ ಮುಖ್ಯ. ಫ್ಲ್ಯಾಶ್‌ ಫ್ಲಡ್‌ ಯಾವಾಗಲೂ ಮಿಂಚಿನ ವೇಗದಲ್ಲಿ ಸಂಭವಿಸುತ್ತದೆ.

Swimming in the lake

ಈಜಲು ಹೋಗಬೇಡಿ

ಮಳೆಗಾಲದಲ್ಲಿ ತೆರೆದ ನದಿ, ತೊರೆ, ಕೆರೆ, ಹೊಳೆಗಳಲ್ಲಿ ಈಜುವ ಸಾಹಸಕ್ಕೆ ಕೈ ಹಾಕಲೇಬೇಡಿ. ನಿಮಗೆಷ್ಟೇ ಈಜು ಗೊತ್ತಿದೆ ಎಂಬ ಧೈರ್ಯವಿದ್ದರೂ, ಮಳೆಗಾಲದಲ್ಲಿ ಇಂತ ನೀರಿನಲ್ಲಿ, ಶಕ್ತಿಯುತವಾದ ಸೆಳೆತ ಇರುವ ಸಂಭವವಿದ್ದು, ನಿಮ್ಮ ಯಾವ ನೈಪುಣ್ಯವೂ ಅದರ ಜೊತೆ ಸೋಲಬಹುದು. ಪ್ರಕೃತಿಗೆ ಸವಾಲೆಸೆಯುವುದು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಸಮುದ್ರ ತೀರದ ವಿಚಾರದಲ್ಲಿಯೂ ಇದೇ ಮಾತನ್ನು ನೆನಪಿಡಿ.

ಅನುಭವಿಗಳ ಸಲಹೆ ಅಗತ್ಯ

ಮಳೆಗಾಲದಲ್ಲಿ, ನಮಗೆ ಈ ಜಾಗ ಗೊತ್ತಿದೆ ಎಂಬ ಭಂಡಧೈರ್ಯದಿಂದ ಯಾರೂ ಅಷ್ಟಾಗಿ ಹೋಗದ, ಕಾಡಿನ ನಡುವಿನ ಜಲಪಾತಕ್ಕೆ ಚಾರಣ ಹೋಗುವುದು, ಬೆಟ್ಟ ಹತ್ತುವುದು ಮಾಡಬೇಡಿ. ಅನುಭವಿಗಳ ಸಲಹೆ ಅತ್ಯಂತ ಅಗತ್ಯ. ದಾರಿ ಗೊತ್ತಿದೆ ಎಂದು ನಿಮ್ಮಷ್ಟಕ್ಕೆ ಈ ಸಾಹಸಕ್ಕೆ ಇಳಿಯಬೇಡಿ. ಮಳೆಗಾಲದಲ್ಲಿ ಏನು ಬೇಕಾದರೂ ಸಂಭವಿಸಬಹುದು.

ಹುಚ್ಚು ಸಾಹಸ ಮಾಡಬೇಡಿ

ಯುವಕರು ದಯವಿಟ್ಟು ಬಿಸಿರಕ್ತದ ಉತ್ಸಾಹದಲ್ಲಿ ಹುಚ್ಚು ಸಾಹಸ ಮಾಡಬೇಡಿ. ಮನೆಯವರ ಮಾತಿಗೆ ಬೆಲೆಕೊಡಿ. ಇಂತಹ ಪ್ರವಾಸಗಳಿಗೆ ಮನೆಯವರಿಗೆ ತಿಳಿಸದೆ ಗೆಳೆಯರ ಜೊತೆಗೆ ಹೋಗುವುದು, ಹುಚ್ಚುಗಟ್ಟುವುದು ಇತ್ಯಾದಿಗಳನ್ನು ಮಾಡಬೇಡಿ. ನಿಮ್ಮನ್ನು ಬೆಟ್ಟದಷ್ಟು ಪ್ರೀತಿಸುವ ಹೆತ್ತವರಿದ್ದಾರೆ, ಅವರಿಗೆ ನಿಮ್ಮ ಭವಿಷ್ಯದ ಬಗ್ಗೆ ಕನಸು ಕಂಗಳಿವೆ, ಅದರ ಹಿಂದೆ ಅವರ ಅಪಾರ ಶ್ರಮವೂ ಇದೆ ಎಂಬುದನನ್ನು ಸದಾ ನೆನೆಪಿಡಿ.

ಇದನ್ನೂ ಓದಿ: Travel Tips: ಪ್ರವಾಸಪ್ರಿಯರೇ, ನಿಮ್ಮ ವಿಮಾನ ಪ್ರಯಾಣ ಆರಾಮದಾಯಕವಾಗಬೇಕಿದ್ದರೆ ಈ ಟಿಪ್ಸ್‌‌ ಪಾಲಿಸಿ!

ತುರ್ತು ಕರೆಯ ಫೋನ್‌ ನಂಬರ್‌ ಗೊತ್ತಿರಲಿ

ಸದಾ ಸ್ಥಳೀಯ ತುರ್ತು ಕರೆಯ ಫೋನ್‌ ನಂಬರ್‌ ನಿಮಗೆ ಗೊತ್ತಿರಲಿ. ಯಾವುದೇ ಸಮಸ್ಯೆ ಬಂದಾಗಲೂ ತುರ್ತುಕರೆಯ ಮೊರೆ ಹೋಗಿ. ನಿಮ್ಮಷ್ಟಕ್ಕೆ ಏನೇನೋ ಊಹನೆಯಲ್ಲಿ ಕಷ್ಟದಲ್ಲಿರುವಾಗ ತಪ್ಪು ಹಾದಿ ಹಿಡಿದು ನಿಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡಿಕೊಳ್ಳಬೇಡಿ.

Continue Reading

Latest

Viral News: ಇಬ್ಬರು ಪತ್ನಿಯರು ಸೇರಿ ಗಂಡನಿಗೆ ಮೂರನೇ ಮದುವೆ ಮಾಡಿಸಿದರು! ವೆಡ್ಡಿಂಗ್‌ ಕಾರ್ಡ್‌ ನೋಡಿ!

Viral News: ಒಂದು ಮದುವೆಯಾಗಿ ಸರಿಯಾಗಿ ಸಂಸಾರ ಮಾಡದೇ ಡಿವೋರ್ಸ್ ತೆಗೆದುಕೊಳ್ಳುತ್ತಿರುವ ಈ ಕಾಲದಲ್ಲಿ ಆಂಧ್ರಪ್ರದೇಶದ ಈ ವ್ಯಕ್ತಿಯೊಬ್ಬ ಮಗುವಿಗಾಗಿ ಮೂರನೇ ಮದುವೆಯಾಗಿದ್ದಾನೆ. ಅಂದಹಾಗೇ ಇವನ ಮದುವೆಗೆ ಮೊದಲ ಇಬ್ಬರೂ ಹೆಂಡತಿಯರು ಒಪ್ಪಿಗೆ ಸೂಚಿಸಿರುವುದು ಇನ್ನಷ್ಟು ಆಚ್ಚರಿ ಮೂಡಿಸಿದೆ. ಮೊದಲ ಪತ್ನಿ ಪಾರ್ವತಮ್ಮ ಗರ್ಭಧರಿಸಲು ಸಾಧ್ಯವಾಗದಿದ್ದಾಗ ಪಂಡನಾ ಎರಡನೇ ಬಾರಿಗೆ ವಿವಾಹವಾಗಿದ್ದಾನೆ. 2007ರಲ್ಲಿ, ಎರಡನೇ ಪತ್ನಿ ಅಪ್ಪಲಮ್ಮನಿಂದ ಮಗು ಪಡೆದ ಬಳಿಕ ಮತ್ತೊಂದು ಮಗು ಪಡೆಯುವ ಆಸೆ ಆಗಿದೆ. ಗಂಡನ ಆಸೆಗೆ ಹೆಂಡತಿಯರಿಬ್ಬರೂ ಒಪ್ಪಿ ಮತ್ತೊಂದು ಮದುವೆಯಾಗಲು ಹೇಳಿದ್ದರು.

VISTARANEWS.COM


on

Viral News
Koo

ಸಾಮಾನ್ಯವಾಗಿ ಮಹಿಳೆಯರು ತನ್ನ ಗಂಡ ಇನ್ನೊಬ್ಬ ಮಹಿಳೆಯನ್ನು ನೋಡಿದರೆ ಸಾಕು ಕೆಂಡಮಂಡಲರಾಗುತ್ತಾರೆ. ಅಂತಹದರಲ್ಲಿ ಇಲ್ಲೊಬ್ಬ ವ್ಯಕ್ತಿ ಈಗಾಗಲೇ ಎರಡು ಮದುವೆಯಾಗಿದ್ದರೂ ಕೂಡ ಮೂರನೇ ಬಾರಿಗೆ ಮದುವೆಯಾಗಲು ಆತನ ಪತ್ನಿಯರು ಒಪ್ಪಿಗೆ ನೀಡಿದ್ದಾರಂತೆ. ಹಾಗಾಗಿ ಆತನ ಮದುವೆ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral News ) ಆಗಿದೆ.

ವ್ಯಕ್ತಿಯ ಹೆಸರು ಪಂಡನಾ ಎಂಬುದಾಗಿ ತಿಳಿದುಬಂದಿದೆ. ಮೊದಲ ಪತ್ನಿ ಪಾರ್ವತಮ್ಮ ಗರ್ಭಧರಿಸಲು ಸಾಧ್ಯವಾಗದಿದ್ದಾಗ ಪಂಡನಾ ಎರಡನೇ ಬಾರಿಗೆ ವಿವಾಹವಾಗಿದ್ದಾನೆ. 2007ರಲ್ಲಿ, ಎರಡನೇ ಪತ್ನಿ ಅಪ್ಪಲಮ್ಮನಿಂದ ಮಗು ಪಡೆದ ಬಳಿಕ ಮತ್ತೊಂದು ಮಗು ಪಡೆಯುವ ಆಸೆ ಆಗಿದೆ. ಗಂಡನ ಆಸೆಗೆ ಹೆಂಡತಿಯರಿಬ್ಬರೂ ಒಪ್ಪಿ ಮತ್ತೊಂದು ಮದುವೆಯಾಗಲು ಹೇಳಿದ್ದಾರೆ. ಹಾಗಾಗಿ ಆತ ಜೂನ್ 25, 2024ರಂದು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೆಡಬಯಾಲು ಮಂಡಲದಲ್ಲಿ ಲವ್ಯ ಎಂಬಾಕೆಯನ್ನು ವಿವಾಹವಾಗಿದ್ದಾನೆ.

ಕೆಲವು ಬುಡಕಟ್ಟು ಜನಾಂಗಗಳಲ್ಲಿ ಎರಡು ಬಾರಿ ಮದುವೆಯಾಗುವುದು ಸಾಮಾನ್ಯವಾಗಿದೆ. ಆದರೆ ಮೂರನೇ ಮದುವೆ ಅಪರೂಪ ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಗಮನ ಸೆಳೆದಿದೆ. ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದು, ಮತ್ತೊಂದು ಮಗುವನ್ನು ಬಯಸಿದರೆ, ನಾಲ್ಕನೇ ಬಾರಿಗೆ ಮದುವೆಯಾಗುತ್ತಾನಾ ಎಂದು ಹಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:  ಮೆಟ್ಟಿಲುಗಳ ಮೇಲೆ ಬೈಕ್‌ ಸವಾರಿ; ರೋಚಕ ವಿಡಿಯೊ ವೈರಲ್‌

ಈ ಹಿಂದೆ ಯೂಟ್ಯೂಬರ್ ಅರ್ಮಾನ್ ಮಲಿಕ್ ಕೂಡ ಎರಡು ಬಾರಿ ಮದುವೆಯಾಗಿದ್ದರು. ಇವರು ತನ್ನ ಇಬ್ಬರು ಹೆಂಡತಿಯರೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದಾರೆ. ಪಾಯಲ್ ಅವರನ್ನು ಪ್ರೀತಿಸಿದ ಮಲಿಕ್ ಅವರನ್ನು ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು. ನಂತರ, ಅವರ ಹಿರಿಯ ಮಗನ ಹುಟ್ಟುಹಬ್ಬದ ಸಮಾರಂಭಕ್ಕೆ ಆಗಮಿಸಿದ ಪಾಯಲ್ ಅವರ ಸ್ನೇಹಿತೆ ಕೃತಿಕಾ ಅವರನ್ನು ಪ್ರೀತಿಸಿ ವಿವಾಹವಾದರು. ಅವರಿಗೆ ಒಬ್ಬ ಮಗ ಇದ್ದಾನೆ. ಬಹುಪತ್ನಿತ್ವವನ್ನು ಉತ್ತೇಜಿಸಿದ್ದಕ್ಕಾಗಿ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಟೀಕೆಗಳು ಕೇಳಿಬಂದಿದ್ದವು. ಅಲ್ಲದೇ ಇತ್ತೀಚೆಗೆ, ಅರ್ಮಾನ್ ಮಲಿಕ್ ತನ್ನ ಇಬ್ಬರು ಹೆಂಡತಿಯರೊಂದಿಗೆ ಬಿಗ್‌ಬಾಸ್ ಒಟಿಟಿ 3 ಮನೆಗೆ ಪ್ರವೇಶಿಸಿ ಸುದ್ದಿ ಮಾಡಿದ್ದರು.

Continue Reading

ಹಾಸನ

Wild Animals Attack : ಕರೆಯದೆ ಬಂದ ಅತಿಥಿ; ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ!ಮುಂದೇನಾಯ್ತು?

Wild Animals Attack : ಕರೆಯದೇ ಮದುವೆಗೆ ಬಂದ ಕೋತಿಯೊಂದು ರಂಪಾಟವನ್ನೇ ನಡೆಸಿದೆ. ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ್ದಲ್ಲದೇ, ಊಟ ಮಾಡಲು ಹೋದವರ ಮೇಲೂ ಎರಗಿದೆ. ಮತ್ತೊಂದು ಕಾಡಾನೆ, ಕರಡಿ ಪ್ರತ್ಯಕ್ಷಗೊಂಡು ಅವಾಂತರವನ್ನೇ ಸೃಷ್ಟಿಸಿದೆ.

VISTARANEWS.COM


on

By

wild animals Attack
Koo

ಹಾಸನ: ಮದುವೆ ಮನೆಗೆ ನುಗ್ಗಿದ ಕೋತಿಯೊಂದು ರಂಪಾಟ (Wild Animals Attack) ನಡೆಸಿದೆ. ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ್ದಲ್ಲದೇ, ಊಟ ಮಾಡಲು ಹೋದವರಿಗೂ ತೊಂದರೆ ಕೊಟ್ಟಿದೆ. ಇಷ್ಟು ಮಾತ್ರವಲ್ಲದೇ ಮದುವೆಗೆ ಬಂದವರಿಗೆ ಮಂಗ (Monkey Attack) ಕಚ್ಚಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಘಟನೆ ನಡೆದಿದೆ.

wild Animals Attack

ಹಿರಿಸಾವೆಯ ನುಗ್ಗೆಹಳ್ಳಿ ರಸ್ತೆಯಲ್ಲಿ ನಡೆಯುತ್ತಿದ್ದ ಮದುವೆಗೆ ಕರೆಯದೇ ಬಂದ ಕೋತಿ ಕಾಟಕ್ಕೆ ಜನರು ಹೈರಣಾದರು. ಡೈನಿಂಗ್ ಹಾಲ್‌ನಲ್ಲಿ ಊಟ ಮಾಡುತ್ತಿದ್ದವರಿಗೂ ಕಿರಿಕಿರಿ ಮಾಡಿ, ಊಟ ಕಸಿದುಕೊಂಡಿದೆ. 8-10 ಮಂದಿ ಮೇಲೆ ದಾಳಿ ಮಾಡಿ ಕಚ್ಚಿದೆ. ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ , ತಿಮ್ಮೇಗೌಡ, ಗಿರಿಗೌಡ ಎಂಬುವವರಿಗೆ ಕೋತಿ ಕಚ್ಚಿದ್ದು, ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸುತ್ತಮುತ್ತಲಿನ ಹಳ್ಳಿಯಲ್ಲಿ ಓಡಾಡುತ್ತಿರುವ ಕೋತಿ ಹಿಡಿದು ಸ್ಥಳಾಂತರ ಮಾಡಲು ಆಗ್ರಹಿಸಿದ್ದಾರೆ.

wild animals Attack

ಇದನ್ನೂ ಓದಿ: Leopard attack : ರಸ್ತೆ ಮೇಲೆ ಸತ್ತಂತೆ ಬಿದ್ದಿದ್ದ ಚಿರತೆ; ಮುಟ್ಟಲು ಹೋದ ಬೈಕ್‌ ಸವಾರ, ಕ್ಯಾಬ್‌ ಚಾಲಕನ ಮೇಲೆ ದಾಳಿ

wild Animals Attack

ವಿಜಯನಗರದ ಎಪಿಎಂಸಿ ಆವರಣಕ್ಕೆ ಎಂಟ್ರಿ ಕೊಟ್ಟ ಕರಡಿ

ಇತ್ತೀಚೆಗೆ ಕರಡಿಗಳ ಹಾವಳಿ ಹೆಚ್ಚಾಗಿದೆ. ವಿಜಯನಗರದ ಹಗರಿಬೊಮ್ಮನ ಹಳ್ಳಿಯಲ್ಲಿರುವ ಎಪಿಎಂಸಿ (APMC) ಆವರಣದಲ್ಲಿ ಕರಡಿಯೊಂದು ಪತ್ತೆಯಾಗಿದೆ. ಮಂಗಳವಾರ ಬೆಳಗಿನ ಜಾವ ಕರಡಿ ಓಡಾಟ ಕಂಡು ರೈತರು ಹೌಹಾರಿದ್ದಾರೆ. ಕರಡಿ ಓಡಾಟವು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಹಿಂದೆಯೂ ನಾನಾ ಕಡೆ ಕರಡಿ ಪ್ರತ್ಯಕ್ಷವಾಗಿತ್ತು.

wild animals Attack

ಕೊಡಗಿನಲ್ಲಿ ಆಟೋ ಜಖಂ ಮಾಡಿದ ಕಾಡಾನೆ

ಕೊಡಗಿನಲ್ಲಿ ಆನೆ -ಮಾನವ ಸಂಘರ್ಷ ಮುಂದುವರಿದಿದೆ. ಮನೆ ಸಮೀಪ ನಿಲ್ಲಿಸಿದ್ದ ಆಟೋ ಮೇಲೆ ಕಾಡಾನೆ ದಾಳಿ ಮಾಡಿದೆ. ನಾಪೋಕ್ಲು ಸಮೀಪದ ಕಕ್ಕಬ್ಬೆಯ ಗ್ರಾಮದ ನಾಲಡಿ ವಾಟೆಕಾಡು ಎಂಬಲ್ಲಿ ಘಟನೆ ನಡೆದಿದೆ. ವಾಟೆಕಾಡು ನಿವಾಸಿ ದೇವಯ್ಯ ಎಂಬುವರ ಆಟೋವನ್ನು ಜಖಂಗೊಳಿಸಿ, ಸಮೀಪದ ತೋಟದಲ್ಲೂ ದಾಂಧಲೆ ನಡೆಸಿ ಕಾಲ್ಕಿತ್ತಿದೆ. ಆನೆ ಹಾವಳಿಯಿಂದ ಮುಕ್ತಿ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

wild Animals Attack

ಕೊಪ್ಪಳದಲ್ಲಿ ನಿಲ್ಲದ ಕರಡಿ ಆತಂಕ

ಕಳೆದ ಒಂದು ವಾರದಿಂದ ಕೊಪ್ಪಳ ಸುತ್ತಮುತ್ತ ಕರಡಿ ಪ್ರತ್ಯಕ್ಷಗೊಳ್ಳುತ್ತಿದೆ. ಇದೀಗ ಬಸ್‌ನಲ್ಲಿ ಹೋಗುತ್ತಿರುವವರಿಗೆ ಕರಡಿಯೊಂದು ದರ್ಶನ ಕೊಟ್ಟಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಿ – ಮಾಟಲದಿನ್ನಿ ಮಧ್ಯೆ ಕರಡಿ ಕಾಣಿಸಿಕೊಂಡಿದೆ. ಮಂಗಳವಾರ ಮುಂಜಾನೆ ಬಸ್‌ವೊಂದಕ್ಕೆ ಕರಡಿಯು ಅಡ್ಡಬಂದಿದೆ. ಇದನ್ನೂ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Narendra Modi
ಪ್ರಮುಖ ಸುದ್ದಿ12 mins ago

Narendra Modi: ಸಂಸತ್ತಲ್ಲಿ ಹಿಂದುಗಳಿಗೆ ಅವಮಾನ, ದೇವರಿಗೆ ಅಪಮಾನ, ಇದನ್ನು ಹಿಂದುಗಳು ಮರೆಯಲಾರರು ಎಂದ ಮೋದಿ

NEET PG exam
ಪ್ರಮುಖ ಸುದ್ದಿ15 mins ago

NEET PG exam : ಮೋಸ ತಡೆಯಲು ಕ್ರಮ; ನೀಟ್ ಪರೀಕ್ಷೆ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆ ತಯಾರಿ!

Viral Video
Latest19 mins ago

Eknath Shinde: ಗಾಯಗೊಂಡು ರಸ್ತೆಯಲ್ಲಿ ಪರದಾಡುತ್ತಿದ್ದ ಜೈನ ಸನ್ಯಾಸಿಗಳಿಗೆ ನೆರವಾದ ಮಹಾರಾಷ್ಟ್ರ ಸಿಎಂ

Rainy Season Tourism
ಪ್ರವಾಸ29 mins ago

Rainy Season Tourism: ಮಳೆಗಾಲದ ಪ್ರವಾಸ ಮಾಡುವ ಮುನ್ನ ಈ 10 ಎಚ್ಚರಿಕೆಗಳನ್ನು ಪಾಲಿಸಿ

Viral News
Latest31 mins ago

Viral News: ಇಬ್ಬರು ಪತ್ನಿಯರು ಸೇರಿ ಗಂಡನಿಗೆ ಮೂರನೇ ಮದುವೆ ಮಾಡಿಸಿದರು! ವೆಡ್ಡಿಂಗ್‌ ಕಾರ್ಡ್‌ ನೋಡಿ!

Narendra Modi
ದೇಶ36 mins ago

Narendra Modi: ಅಂಬೇಡ್ಕರ್‌ರನ್ನು ಷಡ್ಯಂತ್ರದಿಂದ ಸೋಲಿಸಿದ ನೆಹರೂ; ಕಾಂಗ್ರೆಸ್‌ನಿಂದ ದಲಿತರ ಶೋಷಣೆ ಎಂದ ಮೋದಿ

Pourakarmikas
ಕರ್ನಾಟಕ38 mins ago

Pourakarmikas: ಪೌರ ಕಾರ್ಮಿಕರಿಗೆ ಗುಡ್‌ ನ್ಯೂಸ್; ವಾರಕ್ಕೆ ಒಂದು ದಿನ ರಜೆ ನೀಡಿದ ಸರ್ಕಾರ

Super Computers
ಪ್ರಮುಖ ಸುದ್ದಿ41 mins ago

Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್​

sandalwood theft
ಕ್ರೈಂ43 mins ago

Sandalwood theft : ಶ್ರೀಗಂಧ ಕದಿಯಲು ಬಂದವನಿಗೆ ಗುಂಡೇಟು;‌ ಮತ್ತೊಬ್ಬ ಗಾಯಾಳು ಸೇರಿ ಹಲವರು ಪರಾರಿ

Narendra Modi
ದೇಶ51 mins ago

Narendra Modi: ರಾಹುಲ್‌ ಗಾಂಧಿಯನ್ನು ‘ಬಾಲ ಬುದ್ಧಿಯವನು’‌ ಎಂದ ಮೋದಿ; ಅವರು ಹೇಳಿದ ‘ಸೈಕಲ್‌ ಕತೆ’ಯೂ ಇಲ್ಲಿದೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌