Viral Video: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಪತಿಯ ತುಟಿಗೆ ಚುಂಬಿಸಿದ ಅಧ್ಯಕ್ಷ ಜೋ ಬೈಡೆನ್​ ಪತ್ನಿ - Vistara News

ವೈರಲ್ ನ್ಯೂಸ್

Viral Video: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಪತಿಯ ತುಟಿಗೆ ಚುಂಬಿಸಿದ ಅಧ್ಯಕ್ಷ ಜೋ ಬೈಡೆನ್​ ಪತ್ನಿ

ಕ್ಯಾಪಿಟಲ್​ ಹಿಲ್​ನಲ್ಲಿ ಮಂಗಳವಾರ ಸಂಜೆ ಯುಎಸ್​ ಅಧ್ಯಕ್ಷ ಜೋ ಬೈಡೆನ್​ ಅವರು ಸ್ಟೇಟ್ಸ್​ ಆಫ್​ ನೇಶನ್​​ ಭಾಷಣ ಮಾಡಿದರು. ಈ ವೇಳೆ ಜಿಲ್​ ಬೈಡೆನ್​ ಕೂಡ ಪಾಲ್ಗೊಂಡಿದ್ದರು.

VISTARANEWS.COM


on

Joe Biden Wife Jill Biden kisses Kamala Harris Husband Doug Emhoff
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯುಎಸ್ ಅಧ್ಯಕ್ಷ ಜೋ ಬೈಡೆನ್​ ಪತ್ನಿ,​ ಪ್ರಥಮ ಮಹಿಳೆ (US First Lady) ಜಿಲ್ ಬೈಡೆನ್​ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಪತಿ ಡೌಗ್ ಎಂಹಾಫ್ ಅವರ ತುಟಿಗೆ ಮುತ್ತಿಟ್ಟಿದ್ದಾರೆ (Jill Biden kissed Doug Emhoff). ಈ ವಿಡಿಯೊವನ್ನು ಬೆನ್ನಿ ಜಾನ್ಸನ್​ ಎಂಬುವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಕ್ಯಾಪಿಟಲ್​ ಹಿಲ್​ನಲ್ಲಿ ಮಂಗಳವಾರ ಸಂಜೆ ಯುಎಸ್​ ಅಧ್ಯಕ್ಷ ಜೋ ಬೈಡೆನ್​ ಅವರು ಸ್ಟೇಟ್ಸ್​ ಆಫ್​ ನೇಶನ್​​ ಭಾಷಣ ಮಾಡಿದರು. ಸ್ಟೇಟ್ಸ್​ ಆಫ್​ ನೇಶನ್​ ಭಾಷಣದಲ್ಲಿ ಅವರು ದೇಶದ ಆರ್ಥಿಕತೆ, ಅಭಿವೃದ್ಧಿ, ಸಾಧನೆ ಬಗ್ಗೆ ಮಾತನಾಡಿದರು. ಅದಾದ ಬಳಿಕ ರಷ್ಯಾ-ಉಕ್ರೇನ್​ ಯುದ್ಧ, ಕೊವಿಡ್​ 19 ಸಾಂಕ್ರಾಮಿಕದ ಬಗ್ಗೆಯೂ ಉಲ್ಲೇಖ ಮಾಡಿದರು. ‘ಕೊವಿಡ್​ 19 ಸೋಂಕು ಮತ್ತು ರಷ್ಯಾ-ಉಕ್ರೇನ್​ ಯುದ್ಧದಿಂದ ಜಾಗತಿಕವಾಗಿ ಉಂಟಾಗುತ್ತಿರುವ ದುಷ್ಪರಿಣಾಮದ ಮಧ್ಯೆಯೂ ಇಡೀ ವಿಶ್ವದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಅಮೆರಿಕ’ ಎಂದು ಅವರು ಹೇಳಿದರು.

ಇದನ್ನೂ ಓದಿ: Joe Biden : ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ನಿವಾಸದಲ್ಲಿ ಎಫ್‌ಬಿಐ ಶೋಧ, 6 ರಹಸ್ಯ ದಾಖಲೆಗಳು ಪತ್ತೆ

ಕ್ಯಾಪಿಟಲ್​ ಹಿಲ್​​ನಲ್ಲಿ ನಡೆದ ಅಧ್ಯಕ್ಷರ ಸ್ಟೇಟ್ಸ್​ ಆಫ್​ ನೇಶನ್​ ಭಾಷಣದಲ್ಲಿ ಪಾಲ್ಗೊಂಡಿದ್ದ ಜೋ ಬೈಡೆನ್​ ಪತ್ನಿ ಜಿಲ್ ಬೈಡೆನ್​, ಅಲ್ಲಿಗೆ ಆಗಮಿಸಿದ್ದ ಉಪಾಧ್ಯಕ್ಷೆ ಜಿಲ್​ ಬೈಡೆನ್​ ಅವರು ಎಲ್ಲರಿಗೂ ಕೈಕುಲುಕಿ ವಿಶ್ ಮಾಡುತ್ತ ಬಂದಿದ್ದಾರೆ. ಕಮಲಾ ಹ್ಯಾರಿಸ್ ಪತಿ ಡೌಗ್ ಎಂಹಾಫ್​​ಗೆ ಮೊದಲು ಶೇಕ್​ ಹ್ಯಾಂಡ್ ಮಾಡಿ ಬಳಿಕ ತುಟಿಗೆ ಮುತ್ತಿಟ್ಟಿದ್ದಾರೆ. ಅಮೆರಿಕದಲ್ಲಿ ಪರಸ್ಪರ ಭೇಟಿಯಾದಾಗ ಹೀಗೆ ಅಪ್ಪಿಕೊಳ್ಳುವುದು-ಚುಂಬಿಸಿಕೊಳ್ಳುವುದು ದೊಡ್ಡ ವಿಷಯ ಅಲ್ಲದೆ ಹೋದರೂ, ಯುಎಸ್​ ಅಧ್ಯಕ್ಷನ ಪತ್ನಿ, ಉಪಾಧ್ಯಕ್ಷೆಯ ಪತಿಗೆ ಹೀಗೆ ಯುಎಸ್​ ಸದನದಲ್ಲೇ ತುಟಿಗೆ ಮುತ್ತಿಟ್ಟಿದ್ದರ ಬಗ್ಗೆ ಚರ್ಚೆ ಶುರುವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ‘ಕ್ಯಾಚ್ ಆಫ್ ದಿ ಐಪಿಎಲ್ 2024’; ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಶಬ್ಬಾಶ್ ಎಂದ ರವಿಶಾಸ್ತ್ರಿ

IPL 2024: ರವೀಂದ್ರ ಜಡೇಜಾ ಅವರು ಈ ಪಂದ್ಯದಲ್ಲಿ 40 ಎಸೆತ ಎದುರಿಸಿ ಅಜೇಯ 57 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 1 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿದರು. ಬೌಲಿಂಗ್​ನಲ್ಲಿ 3 ಓವರ್​ ಎಸೆದು 32 ರನ್​ ಬಿಟ್ಟುಕೊಟ್ಟರು. ರಾಹುಲ್​ 53 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 82 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

VISTARANEWS.COM


on

IPL 2024
Koo

ಲಕ್ನೋ: ರವೀಂದ್ರ ಜಡೇಜಾ(Ravindra Jadeja) ಎಂದರೆ ನೆನಪಾಗುವುದೇ ಚುರುಕಿನ ಫೀಲ್ಡಿಂಗ್. ಮೈದಾನದಲ್ಲಿ ಪಾದರಸದಂತೆ ಓಡಾಡಿ ಅಸಾಧ್ಯವಾದದನ್ನು ಸಾಧ್ಯವಾಗಿಸುವ ತಾಕತ್ತು ಅವರಿಗಿದೆ. ಸೋಮವಾರ ನಡೆದ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧದ(IPL 2024) ಪಂದ್ಯದಲ್ಲಿಯೂ ಜಡೇಜಾ ಒನ್ ಹ್ಯಾಂಡೆಡ್​ ಕ್ಯಾಚ್(Jadeja’s One-Handed Catch)​ ಹಿಡಿದು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಈ ಪಂದ್ಯದಲ್ಲಿ ಅತ್ಯತ್ತಮ ಬ್ಯಾಟಿಂಗ್​ ನಡೆಸುತ್ತಿದ್ದ ಲಕ್ನೋ ತಂಡದ ನಾಯಕ ಕೆ.ಎಲ್​ ರಾಹುಲ್​ ಅವರು ಆಫ್​ ಸೈಡ್​ನಲ್ಲಿ ಬೌಂಡರಿ ಬಾರಿಸುವ ಪ್ರಯತ್ನದಲ್ಲಿ ಜಡೇಜಾಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಜಡೇಜಾ ಅವರು ಹಿಡಿದ ಈ ಕ್ಯಾಚ್​ ಕಂಡು ಒಂದು ಕ್ಷಣ ಸಹ ಆಟಗಾರರೇ ನಿಬ್ಬೆರಗಾದರು. ಅತ್ತ ಕಾಮೆಂಟ್ರಿ ಮಾಡುತ್ತಿದ್ದ ರವಿಶಾಸ್ತ್ರಿ ‘ಕ್ಯಾಚ್​ ಆಫ್​ ದಿ ದಿಸ್​ ಸೀಸನ್​’. ಬುಲೆಟ್​ ವೇಗದಲ್ಲಿ ಸಾಗಿದ ಚೆಂಡನ್ನು ಲೀಲಾಜಾಲವಾಗಿ ಹಿಡಿಯುವಲ್ಲಿ ಯಶಸ್ಸಿಯಾದರು. ನಿಜಕ್ಕೂ ಇದು ಅದ್ಭುತ” ಎಂದು ವರ್ಣಿಸಿದರು.

ರವೀಂದ್ರ ಜಡೇಜಾ ಅವರು ಈ ಪಂದ್ಯದಲ್ಲಿ 40 ಎಸೆತ ಎದುರಿಸಿ ಅಜೇಯ 57 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 1 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿದರು. ಬೌಲಿಂಗ್​ನಲ್ಲಿ 3 ಓವರ್​ ಎಸೆದು 32 ರನ್​ ಬಿಟ್ಟುಕೊಟ್ಟರು. ರಾಹುಲ್​ 53 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 82 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. 176 ರನ್​ಗಳ ಗುರಿ ಬೆನ್ನತ್ತಿದ ಕೆ. ಎಲ್​ ರಾಹುಲ್ (KL Rahul) 53 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಈ ಮೂಲಕ ಐಪಿಎಲ್​ನಲ್ಲಿ ಹೊಸ ದಾಖಲೆ ಮಾಡಿದರು. ಅವರು ಅತಿ ಹೆಚ್ಚು 50+ ರನ್ ಗಳಿಸಿದ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿಯ (MS Dhoni) ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ IPL 2024 : ಡಿಆರ್​ಎಸ್ ಅಕ್ರಮ; ಟಿಮ್ ಡೇವಿಡ್, ಕೀರನ್ ಪೊಲಾರ್ಡ್​ಗೆ ದಂಡ

ಧೋನಿ ಹಿಂದಿಕ್ಕಿದ ರಾಹುಲ್​

ಕೆಎಲ್ ರಾಹುಲ್ ಐಪಿಎಲ್​​ನಲ್ಲಿ ಹೆಚ್ಚು 50+ ಸ್ಕೋರ್​ಗಳನ್ನು ಗಳಿಸಿದ ವಿಕೆಟ್ ಕೀಪರ್ ಆಗಿ ಸಿಎಸ್​ಕೆ ಮಾಜಿ ನಾಯಕನನ್ನು ಹಿಂದಿಕ್ಕಿದರು. ಇದು ಕೆ.ಎಲ್.ರಾಹುಲ್ ಅವರ 25ನೇ ಅರ್ಧಶತಕ. ಧೋನಿ ಈವರೆಗೆ 24 ಅರ್ಧಶತಕಗಳನ್ನು ಬಾರಿಸಿದ್ದಾರೆ. ಕೆಎಲ್ ರಾಹುಲ್ ಅವರ ಆರಂಭಿಕ ಪಾಲುದಾರ ಕ್ವಿಂಟನ್ ಡಿ ಕಾಕ್ 23 50+ ಸ್ಕೋರ್​​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಯುವತಿ ತಲೆಗೆ ಬಲವಂತವಾಗಿ ಹಿಜಾಬ್‌ ಹಾಕಿದ ಪಾಕ್‌ ಯುವಕ; ಮುಂದೇನಾಯ್ತು?

Viral Video: ಪಾಕಿಸ್ತಾನದಲ್ಲಿ ಮಹಿಳೆಯರು ಹೇಗಿರಬೇಕು, ಯಾವ ರೀತಿ ಉಡುಗೆಗಳನ್ನು ಧರಿಸಬೇಕು ಎಂದು ಹೇಳಲು ಮುಂದಾದ ವ್ಯಕ್ತಿಗೆ ಯೂಟ್ಯೂಬರ್ ಮಹಿಳೆ ನೀಡಿದ ದಿಟ್ಟ ಉತ್ತರವೇನು ಗೊತ್ತೇ?

VISTARANEWS.COM


on

By

Viral Video
Koo

ಇಸ್ಲಾಮಾಬಾದ್: ಯೂಟ್ಯೂಬರ್ (YouTuber) ಮಹಿಳೆಗೆ ಪಾಕಿಸ್ತಾನದ (Pakistan) ಯುವಕನೊಬ್ಬ ಬಲವಂತವಾಗಿ ತಲೆಗೆ ಸ್ಕಾರ್ಫ್ (scarf) ಹೊದಿಸಲು ಪ್ರಯತ್ನಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral video) ಆಗಿದ್ದು, ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿ ಯೂಟ್ಯೂಬರ್ ಶೈಲಾ ಖಾನ್ ನ (YouTuber Shaila Khan) ದಿಟ್ಟತನದ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯೂಟ್ಯೂಬರ್ ಶೈಲಾ ಖಾನ್ ದಾರಿಹೋಕರನ್ನು ಸಂದರ್ಶನ ಮಾಡುತ್ತಿರುತ್ತಾರೆ. ಈ ವೇಳೆ ವ್ಯಕ್ತಿಯೊಬ್ಬ ಆಕೆಗೆ ಎದುರಾಗಿ ಇಸ್ಲಾಮಿಕ್ ದೇಶದಲ್ಲಿ ಮಾಡಬೇಕಾದ ಸರಿಯಾದ ಕೆಲಸವನ್ನು ಹೇಳಲು ನಿರ್ಧರಿಸುತ್ತಾನೆ.

ಆತ ಯೂಟ್ಯೂಬರ್ ಶೈಲಾ ಖಾನ್ ಶಾಲು, ಸ್ಕಾರ್ಫ್ ಅನ್ನು ತಲೆಗೆ ಸುತ್ತಿಕೊಳ್ಳದೆ ತನ್ನ ಮುಂದೆ ನಿಂತಿರುವುದು ಆಕೆ ಮಾಡಿರುವ “ಅಪರಾಧ” ಎನ್ನುವಂತ ಮಾತನಾಡುತ್ತಾನೆ. ಮಹಿಳೆ ಹೇಗೆ ಡ್ರೆಸ್ ಮಾಡಿಕೊಳ್ಳಬೇಕು ಎಂಬ ಬಗ್ಗೆ ಆತ ಟೀಕೆಗಳನ್ನು ಮುಂದುವರಿಸುತ್ತಾನೆ. ಅಷ್ಟೇ ಅಲ್ಲದೇ ತನ್ನ ಕುತ್ತಿಗೆಯಲ್ಲಿದ್ದ ಶಾಲ್ ನಿಂದ ಆಕೆಯ ತಲೆಯನ್ನು ಮುಚ್ಚಲು ಪ್ರಯತ್ನಿಸುತ್ತಾನೆ. ಎಕ್ಸ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಯೂಟ್ಯೂಬರ್ ಶೈಲಾ ಖಾನ್ ಬೀದಿಯಲ್ಲಿ ನಿಂತಿದ್ದ ಕೆಲವು ಜನರಲ್ಲಿ ಸಂದರ್ಶಿಸುತ್ತಿರುತ್ತಾರೆ. ಇರಾನ್-ಇಸ್ರೇಲ್ ಸಂಘರ್ಷದ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳುತ್ತಿರುತ್ತಾರೆ. ಕೆಲವು ಸೆಕೆಂಡುಗಳ ಬಳಿಕ ವ್ಯಕ್ತಿಯೊಬ್ಬ ಆಕೆಯ ಬಳಿ ಮಾತನಾಡಲು ಮುಂದಾಗಿದ್ದಾನೆ. ನೀನು ಇಸ್ಲಾಮಿಕ್ ರಾಷ್ಟ್ರದಲ್ಲಿರುವೆ. ಅಲ್ಲಾನ ಆದೇಶಗಳನ್ನು ಅನುಸರಿಸಬೇಕು ಎಂದು ಹೇಳುತ್ತಾನೆ.

ನೀವು ನಿಮ್ಮ ತಲೆಯನ್ನು ಮುಚ್ಚಿಕೊಳ್ಳದೆ ಇಸ್ಲಾಮಿಕ್ ದೇಶದಲ್ಲಿ ನನ್ನ ಮುಂದೆ ನಿಂತಿದ್ದೀರಿ ಎಂದು ಆ ವ್ಯಕ್ತಿ ಯೂಟ್ಯೂಬರ್‌ ಶೈಲಾ ಖಾನ್ ಗೆ ಹೇಳುತ್ತಾನೆ. ಅನಂತರ, ಅವನು ಅವಳ ತಲೆಗೆ ಶಾಲನ್ನು ಸುತ್ತಲು ಪ್ರಯತ್ನಿಸುತ್ತಿರುವಾಗ ಶೈಲಾ ಖಾನ್ ಅದನ್ನು ತೀವ್ರವಾಗಿ ವಿರೋಧಿಸುತ್ತಾರೆ ಮತ್ತು ತಕ್ಷಣವೇ ಅವನಿಗೆ ತನ್ನ ಒಪ್ಪಿಗೆ ಇದಕ್ಕೆ ಎಷ್ಟು ಮುಖ್ಯ ಎಂಬುದನ್ನು ಹೇಳುತ್ತಾಳೆ. ಆತನ ಕೃತ್ಯವನ್ನು ಖಂಡಿಸಿದ ಆಕೆ, ಇಸ್ಲಾಮಿಕ್ ನಂಬಿಕೆಗಳು ಮತ್ತು ನೈತಿಕತೆಗಳು ಯಾವಾಗಲೂ ದುಪಟ್ಟಾ ಧರಿಸಲು ಏಕೆ ಸೀಮಿತವಾಗಿದೆ ಎಂದು ಪ್ರಶ್ನಿಸಿದ್ದಾಳೆ.


ಶಾಲನ್ನು ಆತನಿಗೆ ಹಿಂದಿರುಗಿಸುತ್ತಾ, ಅವಳು ತನ್ನದೇ ಆದ ಶಿರಸ್ತ್ರಾಣವನ್ನು ಹೊಂದಿದ್ದಾಳೆ ಎಂದು ಪ್ರತಿಪಾದಿಸುತ್ತಾಳೆ. ಅವಳು ತನ್ನ ತಲೆಯನ್ನು ಮುಚ್ಚಲು ಬಯಸುತ್ತಾಳೆಯೇ ಎಂಬುದಕ್ಕೆ ಅದು ತನ್ನ “ನಿರ್ಧಾರ” ಎಂದು ಹೇಳುತ್ತಾಳೆ. ಅವಳ ಅನುಮತಿಯಿಲ್ಲದೆ ಅವನು ಅವಳನ್ನು ಮುಟ್ಟಿದ್ದೇ ದೊಡ್ಡ ಪಾಪ ಎಂದು ಅವಳು ಅವನಿಗೆ ಹೇಳುತ್ತಾಳೆ. ಇಸ್ಲಾಂ ನಿಮಗೆ ಕಲಿಸುವುದು ಇದನ್ನೇ? ಎಂದು ಅವಳು ಆತನನ್ನು ಪ್ರಶ್ನಿಸಿದ್ದಾಳೆ.

ಸಾಮಾಜಿಕ ಕಿರುಕುಳದ ಆಧಾರದ ಮೇಲೆ ತನ್ನ ನಡವಳಿಕೆಗಾಗಿ ಆತನನ್ನು ಬಂಧಿಸಬಹುದು ಎಂದು ಯೂಟ್ಯೂಬರ್ ಶೈಲಾ ಖಾನ್ ಆತನನ್ನು ಎಚ್ಚರಿಸುತ್ತಾಳೆ. ಆದರೆ ಆತ ತಾನು ಮಾಡಿರುವುದು ತಪ್ಪು ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ ಮತ್ತು ತನ್ನದೇ ಸರಿ ಎಂದು ಅಭಿಪ್ರಾಯ ಮಂಡಿಸುತ್ತಾನೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಗೆ ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಮತಾಂಧ ವ್ಯಕ್ತಿಯ ವಿರುದ್ಧ ದಿಟ್ಟವಾಗಿ ಮಾತನಾಡಿದ ಯೂಟ್ಯೂಬರ್ ಮಹಿಳೆಯನ್ನು ಸಾಕಷ್ಟು ಮಂದಿ ಹೊಗಳಿದ್ದಾರೆ.

ಒಬ್ಬ ಬಳಕೆದಾರ “ಬ್ರೇವ್ ಪಾಕಿಸ್ತಾನಿ ಗರ್ಲ್ ಯೂಟ್ಯೂಬರ್” ಎಂದು ಹೇಳಿದ್ದು, ಮತ್ತೊಬ್ಬ “ತಮ್ಮ ಪರವಾಗಿ ನಿಂತಿರುವ ಹುಡುಗಿಗೆ ಹ್ಯಾಟ್ಸ್ ಆಫ್!! ಅಂತಹ ದೇಶದಲ್ಲಿ ಹಾಗೆ ಮಾಡಲು ಧೈರ್ಯ ಬೇಕು!! ಎಂದು ಕಾಮೆಂಟ್ ಮಾಡಿದ್ದಾನೆ. ಪಾಕಿಸ್ತಾನದಲ್ಲಿ ಈ ವ್ಯಕ್ತಿಯ ವರ್ತನೆ ಎಲ್ಲಿಯವರೆಗೆ ವ್ಯಾಪಕವಾಗಿದೆಯೋ ಅಲ್ಲಿಯವರೆಗೆ ಅದು ಕೆಳಗಿಳಿಯುತ್ತದೆ ಮತ್ತು ಹೊರಗಿರುತ್ತದೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾನೆ.

ಇದನ್ನೂ ಓದಿ: Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

Continue Reading

ಬೆಂಗಳೂರು

Forest Bathing: ಬೆಂಗಳೂರಲ್ಲೂ ಶುರು ಫಾರೆಸ್ಟ್‌ ಬಾಥಿಂಗ್‌; ಕಬ್ಬನ್ ಪಾರ್ಕ್‌ನಲ್ಲಿ ಮರ ಅಪ್ಪಲು ಕೊಡಬೇಕು 1500 ರೂ.!

Forest Bathing: ಬೆಂಗಳೂರಿನಲ್ಲಿ ಕಂಪನಿಯೊಂದು ಕೊಟ್ಟ ಆಫರ್‌ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ನೆಟ್ಟಿಗರ ಬ್ಯಾಕ್‌ ಟು ಬ್ಯಾಕ್‌ ಕಾಮೆಂಟ್‌ಗಳ ಸುರಿಮಳೆಯೇ ಸುರಿಯುತ್ತಿದೆ . ಇಷ್ಟಕ್ಕೂ ಕಂಪನಿ ಕೊಟ್ಟ ಆಫರ್‌ ಏನು ಅಂತೀರಾ ಇಲ್ಲಿದೆ ನೋಡಿ ಡಿಟೈಲ್ಸ್‌.

VISTARANEWS.COM


on

By

Forest bathing activity begins at Cubbon Park
Koo

ಬೆಂಗಳೂರು : ಬೆಂಗಳೂರಿಗರ ನೆಚ್ಚಿನ ಉದ್ಯಾನವನದಲ್ಲಿ ಕಬ್ಬನ್‌ಪಾರ್ಕ್‌ (Cubbon park) ಕೂಡ ಒಂದು. ಜನರ ನೆಚ್ಚಿನ ತಾಣವಾದ ಕಬ್ಬನ್‌ ಪಾರ್ಕ್‌ನಲ್ಲಿ ಮರ ತಬ್ಬಿಕೊಳ್ಳಲು 1500 ರೂ. ಶುಲ್ಕ ಕೊಡಬೇಕು. ಅರೇ ಸರ್ಕಾರ ಯಾವಾಗ ಈ ರೂಲ್ಸ್‌ ತಂದಿದೆ ಅಂತ ಅಂದುಕೊಂಡ್ರಾ? ಖಂಡಿತ ಇಲ್ಲ, ಇದು ಕಂಪೆನಿಯೊಂದು ಶುರು ಮಾಡಿರುವ (Forest Bathing) ಫಾರೆಸ್ಟ್‌ ಬಾಥಿಂಗ್‌.. ಟ್ರೋವ್ ಹೆಸರಿನ ಸಂಸ್ಥೆಯೊಂದು (Trove Experinces) ಫಾರೆಸ್ಟ್‌ ಬಾಥಿಂಗ್‌ ಚಟುವಟಿಕೆಯನ್ನು ಆಯೋಜಿಸಿದೆ. ಇದೇ ಏಪ್ರಿಲ್ 28ರಂದು ನಡೆಯಲಿರುವ ಈವೆಂಟ್‌ಗೆ ಎಂಟ್ರಿ ಫೀಸ್‌ ಕೂಡ ಇದೆ. ಈ ಫಾರೆಸ್ಟ್‌ ಬಾಥಿಂಗ್‌ ಅನುಭವ ಪಡೆಯಲು ಬರೋಬ್ಬರಿ 1,500 ರೂ. ಟಿಕೆಟ್‌ ಬೆಲೆಯನ್ನು ನಿಗಧಿ ಮಾಡಲಾಗಿದೆ.

ಜೋಳದ ರೊಟ್ಟಿ (Jolad rotti) ಎಂಬ ಎಕ್ಸ್‌ ಅಕೌಂಟ್‌ನಲ್ಲಿ ಅಜಯ್‌ (Ajayawhy) ಎಂಬುವವರು ಫಾರೆಸ್ಟ್‌ ಬಾಥಿಂಗ್‌ ಫೋಟೊವನ್ನು ಹಂಚಿಕೊಂಡಿದ್ದಾರೆ. ಫೋಟೊ ಅಡಿಬರಹದಲ್ಲಿ ಮಾರ್ಕೆಟ್‌ನಲ್ಲಿ ಹೊಸ ಸ್ಕ್ಯಾಮ್‌ ಬಂದಿದೆ ನೋಡಿ ಎಂದು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಪಾಸ್‌ ಆಗುತ್ತಿದ್ದು, ಬಹುತೇಕರು ಕಬ್ಬನ್‌ ಪಾರ್ಕ್‌ನಲ್ಲಿ ಉಚಿತವಾಗಿಯೇ ಮರಗಳನ್ನು ಒಪ್ಪಿಕೊಳ್ಳಬಹುದು, ಈ ಚಟುವಟಿಕೆಗೆ ಹಣ ಕೊಡುವ ಅಗತ್ಯ ಏನಿದೆ. ಇದೆಲ್ಲ ಹಣ ಮಾಡುವ ಹೊಸ ಸ್ಕ್ಯಾಮ್‌ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಹೈಕೋರ್ಟ್‌ ಹಿಂಭಾಗದಲ್ಲಿರುವ ಕಬ್ಬನ್‌ ಪಾರ್ಕ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ದಿ ಹೀಲಿಂಗ್‌ ಪವರ್‌ ಆಫ್‌ ಫಾರೆಸ್ಟ್‌ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಫಾರೆಸ್ಟ್‌ ಬಾಥಿಂಗ್‌ ಅನುಭವವನ್ನು ಪಡೆದು ಒತ್ತಡವನ್ನು ದೂರ ಮಾಡಿ ಎಂದು ಪೋಸ್ಟ್‌ ಹಾಕಲಾಗಿದೆ.

ಇದನ್ನೂ ಓದಿ: Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

ಇನ್ನೂ ನೆಟ್ಟಿಗರಿಂದ ಪರ-ವಿರೋಧದದ ಪ್ರತಿಕ್ರಿಯೆಗಳು ಬಂದಿವೆ. ದೈನಂದಿನ ಜೀವನದಲ್ಲಿ ಮನೆ- ಕಚೇರಿಗೆ ಸೀಮಿತವಾಗಿದ್ದರೆ, ಕಬ್ಬನ್ ಪಾರ್ಕ್ ಖಂಡಿತವಾಗಿಯೂ ಕಾಡಿನಂತೆ ಭಾಸವಾಗುತ್ತದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಂದಿಷ್ಟು ಜನ ಫಾರೆಸ್ಟ್‌ ಬಾಥಿಂಗ್‌ ಅಂದರೇನು ಎಂದು ಪ್ರಶ್ನೆ ಕೇಳಿದ್ದು ಮಾತ್ರವಲ್ಲದೇ ಕಬ್ಬನ್‌ಪಾರ್ಕ್‌ಗೆ ಹೋಗಲು ಸಾವಿರಾರು ರೂಪಾಯಿ ಕೊಡಬೇಕಾ ಎಂದು ಕಾಲೆಳೆದಿದ್ದಾರೆ.

Forest Bathing

ಅರಣ್ಯ ಸ್ನಾನದ ಕಲ್ಪನೆಗೆ ನನ್ನ ವಿರೋಧವಿಲ್ಲ. ಇದು ಅನೇಕ ರೀತಿಯಲ್ಲಿ ಪ್ರಯೋಜನಕಾರಿ ಎಂದು ನನಗೆ ಖಾತ್ರಿಯಿದೆ. ಆದರೆ ಸ್ಥಳ ಮತ್ತು ಶುಲ್ಕ 18% ಜಿಎಸ್‌ಟಿ ಬಗ್ಗೆ ನನ್ನ ತಕಾರರು ಇದೆ. ಕಬ್ಬನ್‌ ಪಾರ್ಕ್‌ ಒಳಗೆ ಹೋಗಲು ಓಡಾಡಲು ಈ ದುಬಾರಿ ಶುಲ್ಕ ಯಾಕೆ ಎಂದಿದ್ದಾರೆ. ಕಬ್ಬನ್‌ ಪಾರ್ಕ್‌ ಕಾಡಲ್ಲ, ಮತ್ಯಾಕೆ ಫಾರೆಸ್ಟ್‌ ಬಾಥಿಂಗ್‌ ಹೆಸರಿನಲ್ಲಿ ಮೋಸ ಎಂದು ಕಿಡಿಕಾರಿದ್ದಾರೆ.

https://x.com/AJayAWhy/status/1780167988504625242

ಏನಿದು ಫಾರೆಸ್ಟ್‌ ಬಾಥಿಂಗ್‌?

ಅಂದಹಾಗೇ ಫಾರೆಸ್ಟ್‌ ಬಾಥಿಂಗ್‌ ಎಂಬ ಪರಿಕಲ್ಪನೆಯು ನಮ್ಮ ದೇಶದಲ್ಲ, ಬದಲಿಗೆ ಜಪಾನಿನಲ್ಲಿ ಹೆಚ್ಚು ಸಕ್ರಿಯವಾಗಿದೆ. ಜಪಾನಿನಲ್ಲಿ ಶಿನ್ರಿನ್-ಯೋಕು (shinrin-yoku) ಎಂದೂ ಕರೆಯಲ್ಪಡುವ ಈ ಫಾರೆಸ್ಟ್‌ ಬಾಥಿಂಗ್‌ ಅಥವಾ ಅರಣ್ಯ ಸ್ನಾನವು ಪ್ರಕೃತಿ ಜತೆಗಿನ ಒಡನಾಟದೊಂದಿಗೆ ಒತ್ತಡವನ್ನು ದೂರ ಮಾಡಲು ಥೆರಪಿಯಂತೆ ಬಳಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral Video: ಎಸಿ ಕೋಚ್ ಸಿಗದಕ್ಕೆ ಸಿಟ್ಟಿಗೆದ್ದು ರೈಲಿನ ಬಾಗಿಲಿನ ಗಾಜನ್ನೇ ಪುಡಿ ಪುಡಿ ಮಾಡಿದ!

Viral Video ಸೆಕೆಯ ಕಿರಿಕಿರಿಗೆ ಕೋಪ ಕೂಡ ಹೆಚ್ಚಾಗುತ್ತದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಪ್ರಯಾಣಿಕನೊಬ್ಬ ರೈಲಿನಲ್ಲಿ ತಾನು ಕಾಯ್ದಿರಿಸಿದ ಎಸಿ ಕೋಚ್ ಹತ್ತಲು ಸಾಧ್ಯವಾಗದೇ ಕೋಪಗೊಂಡು ರೈಲಿನ ಬಾಗಿಲಿನ ಗಾಜನ್ನೆ ಒಡೆದು ಹಾಕಿದ ಘಟನೆ ಕೈಫಿಯಾತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ನಡೆದಿದೆ.

VISTARANEWS.COM


on

Viral Video
Koo

ಬೆಂಗಳೂರು: ಬೇಸಿಗೆಯಲ್ಲಿ ಬಿಸಿಲಿನ ತಾಪವನ್ನು ಸಹಿಸಲಾಗದೇ ಜನರು ಕಂಗಾಲಾಗಿದ್ದಾರೆ. ಫ್ಯಾನ್, ಕೂಲರ್ ಗಾಳಿ ಮೈಗೆ ತಟ್ಟದ ಕಾರಣ ಸಾಲವಾದರೂ ಪರ್ವಾಗಿಲ್ಲ ಎಸಿ ಹಾಕೋಣ ಅನ್ನುವ ಮಟ್ಟಿಗೆ ಈ ವರ್ಷದ ಬಿಸಿಲು ಚುರುಕು ಮುಟ್ಟಿಸಿದೆ. ಬಸ್, ರೈಲು, ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಇತರ ಯಾವುದೇ ಸ್ಥಳಕ್ಕೆ ಹೋಗುವಾಗ ಜನರು ಎಸಿ ಇದೆಯಾ ಎಂದು ಮೊದಲು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಮೊದಲೇ ಬಿಸಿಲಿನ ತಾಪ ತಾಳಲಾರದೇ ಮಂಡೇ ಬಿಸಿಯಾಗಿರುತ್ತದೆ. ಇದರ ಮಧ್ಯೆ ತಾನು ಆಯ್ಕೆ ಮಾಡಿದ ಎಸಿ ರೂಂಗಳು ಸಿಗದೇ ಹೋದರೆ ವ್ಯಕ್ತಿಯ ಪರಿಸ್ಥಿತಿ ಹೇಗಾಗಿರಬಹುದು ಹೇಳಿ? ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ತಾನು ಆಯ್ಕೆ ಮಾಡಿದ ಎಸಿ ಕೋಚ್ ಸಿಗದ ಕಾರಣ ವ್ಯಕ್ತಿಯೊಬ್ಬ ಮಾಡಿದ ಅವಾಂತರದ ವಿಡಿಯೋ ಈಗ ಎಲ್ಲೆಡೆ ವೈರಲ್ (Viral Video) ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡಿದೆ.

ಸೆಕೆಯ ಹೊಡೆತಕ್ಕೆ ಸಿಕ್ಕ ವ್ಯಕ್ತಿಯೊಬ್ಬ ರೈಲಿನಲ್ಲಿ ತಾನು ಕಾಯ್ದಿರಿಸಿದ ಎಸಿ ಕೋಚ್ ಹತ್ತಲು ಸಾಧ್ಯವಾಗದೇ ಕೋಪಗೊಂಡು ರೈಲಿನ ಬಾಗಿಲಿನ ಗಾಜನ್ನೆ ಒಡೆದು ಹಾಕಿದ ಘಟನೆ ಕೈಫಿಯಾತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ನಡೆದಿದೆ.

ವ್ಯಕ್ತಿ ಕೈಫಿಯಾತ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ಎಸಿ 3 ಕೋಚ್ ನಲ್ಲಿ ಸೀಟ್ ಬುಕ್ ಮಾಡಿದ್ದ. ಆದರೆ ಟಿಕೆಟ್ ಇಲ್ಲದ ಪ್ರಯಾಣಿಕರು ಅವರನ್ನು ಒಳಗೆ ಪ್ರವೇಶಿಸಲು ನಿರಾಕರಿಸಿದರು, ಇದರಿಂದ ಕೋಪಗೊಂಡ ವ್ಯಕ್ತಿ ರೈಲಿನ ಬಾಗಿಲಿನ ಗಾಜನ್ನು ಒಡೆದು ಪುಡಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 32 ಸೆಕೆಂಡುಗಳ ಈ ವಿಡಿಯೊ ಕ್ಲಿಪ್ ಗೆ 2 ಮಿಲಿಯನ್ ವೀವ್ಸ್ ಸಿಕ್ಕಿದೆ.

ವಿಡಿಯೊದಲ್ಲಿ ಕಂಡುಬಂದಂತೆ ಕೋಚ್ ಬಾಗಿಲಿನ ಮುಂಭಾಗದಲ್ಲಿ ನೆಲದ ಮೇಲೆ ಕುಳಿತಿರುವ ಜನರಿಂದ ತುಂಬಿತ್ತು. ಆ ವೇಳೆ ಒಬ್ಬ ಪ್ರಯಾಣಿಕ ಬಾಗಿಲನ್ನು ತೆರೆಯಲು ಜನರನ್ನು ಕೇಳಿದಾಗ ಅಲ್ಲಿದ್ದ ವ್ಯಕ್ತಿಯೊಬ್ಬ “ಅಲ್ಲಿ ಜಾಗವಿಲ್ಲ” ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಪ್ರಯಾಣಿಕ ರೈಲಿನ ಬಾಗಿಲಿನ ಗಾಜನ್ನು ಒಡೆದುಹಾಕಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಆಗಾಗ ರೈಲಿನ ಪ್ರಯಾಣದ ಕುರಿತಾದ ವಿಡಿಯೋಗಳು ಹರಿದಾಡುತ್ತಿದ್ದು, ಈ ಹಿಂದೆ ಕಾಶಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಭೀಕರ ಸ್ಥಿತಿಯನ್ನು ತೋರಿಸಿದೆ. ಕೋಚ್ ನಲ್ಲಿ ಎಸಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಆಹಾರ ಮತ್ತು ನೀರು ನೀಡಲಾಗಿಲ್ಲ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

ಹಾಗೇ ಭಾರತೀಯ ರೈಲ್ವೆಗೆ ಸಂಬಂಧಿಸಿದ ಮತ್ತೊಂದು ವಿಡಿಯೊದಲ್ಲಿ ಮಹಿಳೆಯೊಬ್ಬಳು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದು, ಈ ಬಗ್ಗೆ ತನ್ನ ಸಹ ಪ್ರಯಾಣಿಕರೊಂದಿಗೆ ಜಗಳವಾಡುತ್ತಿರುವ ಘಟನೆ ನಡೆದಿದೆ.

Continue Reading
Advertisement
Karnataka Weather Forecast
ಮಳೆ4 mins ago

Karnataka Weather : ಎತ್ತಿನ ಬಂಡಿಯಲ್ಲಿ ಬರುವಾಗ ಸಿಡಿಲು ಬಡಿದು ಬಾಲಕ ಸಾವು; ಭಾರಿ ಮಳೆಗೆ ನಲುಗಿದ ಜನರು

Trust Of The Nation 2024
ಪ್ರಮುಖ ಸುದ್ದಿ21 mins ago

Trust Of The Nation 2024 : ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ; ಡೈಲಿಹಂಟ್ ಸಮೀಕ್ಷೆ

Modi in Karnataka PM Modi to address rally in Bengaluru Here live video
Lok Sabha Election 202442 mins ago

Modi in Karnataka: ಬೆಂಗಳೂರಲ್ಲಿ ಮೋದಿ ಸಮಾವೇಶ; ಇಲ್ಲಿದೆ LIVE ವಿಡಿಯೊ

Narendra Modi
ದೇಶ44 mins ago

Narendra Modi: ಅಮೇಥಿಯಂತೆ ವಯನಾಡಿನಲ್ಲೂ ರಾಹುಲ್‌ ಗಾಂಧಿಗೆ ಸೋಲು; ಮೋದಿ ಭವಿಷ್ಯ!

Horseshoe Septum Ring Fashion
ಫ್ಯಾಷನ್45 mins ago

Horseshoe Septum Ring Fashion: ಅಲ್ಟ್ರಾ ಮಾಡರ್ನ್‌ ಸ್ಟೈಲಿಂಗ್‌ ಪ್ರಿಯರ ಮನಗೆದ್ದ ಹಾರ್ಸ್‌ ಶೂ ಸೆಪ್ಟಮ್‌ ರಿಂಗ್‌

Mrunal Thakur and Siddhant Chaturvedi to start shoot
ಟಾಲಿವುಡ್45 mins ago

Mrunal Thakur: ಸಿದ್ಧಾಂತ್ ಚತುರ್ವೇದಿ ಜತೆ ಮೃಣಾಲ್ ಠಾಕೂರ್ ರೊಮ್ಯಾನ್ಸ್‌!

IPL 2024
ಕ್ರೀಡೆ46 mins ago

IPL 2024: ‘ಕ್ಯಾಚ್ ಆಫ್ ದಿ ಐಪಿಎಲ್ 2024’; ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಶಬ್ಬಾಶ್ ಎಂದ ರವಿಶಾಸ್ತ್ರಿ

Viral Video
ವೈರಲ್ ನ್ಯೂಸ್46 mins ago

Viral Video: ಯುವತಿ ತಲೆಗೆ ಬಲವಂತವಾಗಿ ಹಿಜಾಬ್‌ ಹಾಕಿದ ಪಾಕ್‌ ಯುವಕ; ಮುಂದೇನಾಯ್ತು?

Murder Case
ಬೆಂಗಳೂರು48 mins ago

Murder case : ಬೆಂಗಳೂರಲ್ಲಿ ಮಹಿಳೆಯ ಬರ್ಬರ ಹತ್ಯೆ; ಹಂತಕರಿಗಾಗಿ ಪೊಲೀಸರ ಹುಡುಕಾಟ

Lok Sabha Election 2024
ಕರ್ನಾಟಕ51 mins ago

Lok Sabha Election 2024: ನಾಚಿಗೆ ಇಲ್ಲದೆ 3 ಸೀಟಿಗಾಗಿ ಬಿಜೆಪಿ ಜತೆ ಹೋಗಿದ್ದಾರೆ: ದೇವೇಗೌಡರ ವಿರುದ್ಧ ಸಿಎಂ ವಾಗ್ದಾಳಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ1 hour ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20242 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20244 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ5 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ6 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌