Video: ಬೇಸ್‌ಬಾಲ್‌ ಬ್ಯಾಟ್‌ ಹಿಡಿದು ಜೀಪ್‌ನಲ್ಲಿ ಸ್ಟಂಟ್‌ ಮಾಡಿದವನಿಗೆ ಶಾಕ್‌ ಕೊಟ್ಟ ಪೊಲೀಸ್‌ ! - Vistara News

ವೈರಲ್ ನ್ಯೂಸ್

Video: ಬೇಸ್‌ಬಾಲ್‌ ಬ್ಯಾಟ್‌ ಹಿಡಿದು ಜೀಪ್‌ನಲ್ಲಿ ಸ್ಟಂಟ್‌ ಮಾಡಿದವನಿಗೆ ಶಾಕ್‌ ಕೊಟ್ಟ ಪೊಲೀಸ್‌ !

ತುಂಬ ನಗುತ್ತ ಹುಚ್ಚು ಸ್ಟಂಟ್‌ ಮಾಡುತ್ತಿದ್ದ ವ್ಯಕ್ತಿಯ ಸ್ಥಿತಿ ಕೆಲವೇ ಹೊತ್ತಲ್ಲಿ ಬದಲಾಗಿತ್ತು. ತುಂಬ ದಯನೀಯವಾಗಿ ಬಿಟ್ಟು ಬಿಡಿ ಎಂದು ಬೇಡಿಕೊಳ್ಳುತ್ತಿದ್ದ.

VISTARANEWS.COM


on

Viral Video Stunt
ಬೇಸ್‌ ಬಾಲ್‌ ಬ್ಯಾಟ್‌ ಹಿಡಿದು ಜೀಪ್‌ ಚಲಾಯಿಸಿದ ವ್ಯಕ್ತಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

Viral News: ಬೈಕ್‌, ಕಾರು, ಜೀಪ್‌ಗಳಲ್ಲಿ ಸ್ಟಂಟ್‌ ಮಾಡುತ್ತ ಡ್ರೈವ್‌ ಮಾಡುವವರನ್ನು ನಾವು ನೋಡಿದ್ದೇವೆ. ವೃತ್ತಿಪರರನ್ನು ನೋಡಿ, ಅರ್ಧಂಬರ್ಧ ತಿಳಿದುಕೊಂಡವರೆಲ್ಲ ಸ್ಟಂಟ್‌ ಮಾಡಲು ಹೋಗಿ ಅಪಾಯ ಮೈಮೇಲೆ ಎಳೆದುಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಒಂದಷ್ಟು ಜನರಂತೂ ಹುಚ್ಚು ಸಾಹಸ ಮಾಡಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಹೀಗಾಗಿ ರಸ್ತೆಯ ಮೇಲೆ ಯಾವುದೇ ವಾಹನದ ಮೇಲೆ ಸ್ಟಂಟ್‌ ಮಾಡುವವರ ಮೇಲೆ ಪೊಲೀಸರು ಕಣ್ಣಿಟ್ಟಿರುತ್ತಾರೆ. ಇಷ್ಟು ಪೀಠಿಕೆ ಯಾಕೆಂದರೆ, ಉತ್ತರ ಪ್ರದೇಶದ ನೊಯ್ಡಾದಲ್ಲೊಬ್ಬ ವ್ಯಕ್ತಿ ಮಹೀಂದ್ರಾ ಥಾರ್‌ ಮೇಲೆ ಕುಳಿತು ಸ್ಟಂಟ್‌ ಮಾಡುತ್ತ ಚಲಾಯಿಸಿ ಇದೀಗ ಪೊಲೀಸರಿಂದ ಅರೆಸ್ಟ್‌ ಆಗಿದ್ದಾನೆ. ಆತ ಕ್ಷಮಾಪಣೆಯನ್ನೂ ಕೇಳಿದ್ದಾನೆ.

ಉತ್ತರ ಪ್ರದೇಶ ಪೊಲೀಸರು ಆ ವ್ಯಕ್ತಿಯ ಸ್ಟಂಟ್‌ನ ವಿಡಿಯೋವನ್ನೂ ಶೇರ್‌ ಮಾಡಿಕೊಂಡಿದ್ದಾರೆ. ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತಿರುವ ಈತ ಎಡಗೈಯ್ಯಯಲ್ಲಿ ಸ್ಟೇರಿಂಗ್‌ ಹಿಡಿದಿದ್ದರೆ, ಬಲಗೈನಲ್ಲಿ ಬೇಸ್‌ಬಾಲ್‌ ಬ್ಯಾಟ್‌ ಹಿಡಿದಿದ್ದಾನೆ. ಆ ಬೇಸ್‌ಬಾಲ್‌ ಬ್ಯಾಟ್‌ನ್ನು ಜೀಪ್‌ನ ಕಿಟಕಿಯ ಹೊರಗೆ ಹಿಡಿದು ಎಲ್ಲರಿಗೂ ತೋರಿಸುತ್ತ ವಾಹನ ಓಡಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಈತ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ನೋಡಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆತನನ್ನು ಬಂದಿಸಿದ್ದಾರೆ. ಹಾಗೇ, ಮಹೀಂದ್ರಾ ಥಾರ್‌ನ್ನು ಜಪ್ತಿಮಾಡಿ ಟೋಯಿಂಗ್‌ ಮೂಲಕ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: Viral Video: ಭಯ ಹುಟ್ಟಿಸುವ ಮದುವೆ; ಹೂವಲ್ಲ, ಹಾವಿನ ಹಾರ ಹಾಕಿಕೊಂಡ ವಧು-ವರ

ಜೈಲಿನಲ್ಲಿ ನಿಂತ ವ್ಯಕ್ತಿ ಕ್ಷಮೆ ಕೇಳುತ್ತಿದ್ದಾನೆ. ಇನ್ನೆಂದೂ ಇಂಥ ಸಾಹಸ ಮಾಡುವುದಿಲ್ಲ, ನನ್ನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾನೆ. ವಿಡಿಯೋ ಹಂಚಿಕೊಂಡಿರುವ ಉತ್ತರ ಪ್ರದೇಶ ಪೊಲೀಸರು, ʼಯಾರು ರೋಡ್‌ ಮೇಲೆ ಸ್ಟಂಟ್‌ ಮಾಡುತ್ತಾರೋ, ಅವರನ್ನು ನಾವು ಹಂಟ್‌ ಮಾಡುತ್ತೇವೆ. ನಿಮ್ಮ ವಾಹನವನ್ನು ವಶಕ್ಕೆ ಪಡೆಯುತ್ತೇವೆ ಮತ್ತು ನೀವು ಲಾಕ್‌ ಅಪ್‌ ಸೇರುತ್ತೀರಿʼ ಎಂದು ಕ್ಯಾಪ್ಷನ್‌ ಬರೆದಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಉತ್ತರ ಪ್ರದೇಶ ಪೊಲೀಸರನ್ನು ಜನರು ಹೊಗಳುತ್ತಿದ್ದಾರೆ.

ಇದನ್ನೂ ಓದಿ: Viral News: ಆಕೆ 36 ವರ್ಷ ಪುರುಷ ವೇಷದಲ್ಲಿ ಬದುಕಿದರು, ಎಲ್ಲವೂ ಮಗಳಿಗಾಗಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Kim Jong Un: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಸುಖಕ್ಕೆ ಬೇಕು ಪ್ರತಿ ವರ್ಷ 25 ಹುಡುಗಿಯರು! ಏನಿದು ಆಹ್ಲಾದ ತಂಡ?

Kim Jong Un: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಕುರಿತಾದ ಇನ್ನೊಂದು ಬೆಚ್ಚಿ ಬೀಳಿಸುವ ಸಂಗತಿ ಹೊರ ಬಿದ್ದಿದೆ. ಕಿಮ್‌ ಜಾಂಗ್‌ ಉನ್‌ ಪ್ರತಿ ವರ್ಷ ತನ್ನ ʼಆಹ್ಲಾದ ತಂಡʼಕ್ಕಾಗಿ 25 ಹುಡುಗಿಯರನ್ನು ಆರಿಸಿಕೊಳ್ಳುತ್ತಾನೆ ಎಂದು ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡಿರುವ ಯುವತಿಯೊಬ್ಬಳು ತಿಳಿಸಿದ್ದಾಳೆ. ಶಾಲೆಯಲ್ಲಿ ಓದುತ್ತಿರುವ ಚಂದದ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ ಅವರನ್ನು ಸರ್ವಾಧಿಕಾರಿಯ ಲೈಂಗಿಕ ಬಯಕೆಯನ್ನು ತೀರಿಸಲು ಬಳಸಲಾಗುತ್ತದೆ ಎಂದು ಯುವತಿ ವಿವರಿಸಿದ್ದಾಳೆ.

VISTARANEWS.COM


on

Kim Jong Un
Koo

ಫ್ಯೊಂಗ್ಯಾಂಗ್‌: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ (Kim Jong Un) ಬಗ್ಗೆ ವಿವಿಧ ಕಥೆಗಳನ್ನು ಕೇಳಿದ್ದೇವೆ. ಇದೀಗ ಆ ದೇಶದ ಯುವತಿಯೊಬ್ಬಳು ಬೆಚ್ಚಿ ಬೀಳಿಸುವ ಘೋರ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾಳೆ. ಕಿಮ್‌ ಜಾಂಗ್‌ ಉನ್‌ ಪ್ರತಿ ವರ್ಷ ತನ್ನ ʼಆಹ್ಲಾದ ತಂಡʼ (Pleasure Squad)ಕ್ಕಾಗಿ 25 ಹುಡುಗಿಯರನ್ನು ಆರಿಸಿಕೊಳ್ಳುತ್ತಾನೆ ಎಂದು ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡಿರುವ ಈ ಯುವತಿ ಹೇಳಿದ್ದಾಳೆಂದು ವರದಿಯೊಂದು ತಿಳಿಸಿದೆ. ವಿಶೇಷವೆಂದರೆ ಹುಡುಗಿಯರನ್ನು ಅವರ ರೂಪ ಮತ್ತು ರಾಜಕೀಯ ನಿಷ್ಠೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದೂ ಯುವತಿ ವಿವರಿಸಿದ್ದಾಳೆ.

ಕಿಮ್‌ನ ಈ ಆಹ್ಲಾದ ತಂಡಕ್ಕಾಗಿ ಅವರನ್ನು ತನ್ನನ್ನು ಎರಡು ಬಾರಿ ಪರಿಗಣಿಸಿದ್ದರು. ಆದರೆ ತನ್ನ ಕುಟುಂಬದ ಸ್ಥಾನಮಾನದಿಂದಾಗಿ ಆಯ್ಕೆಯಾಗಿರಲಿಲ್ಲ ಎಂಬ ವಿಚಾರವನ್ನೂ ಆಕೆ ತಿಳಿಸಿದ್ದಾಳೆ.

ಆಯ್ಕೆ ಹೇಗೆ?

ಇನ್ನು ಈ ಕರಾಳ ಸಂಗತಿಯನ್ನು ಯುವತಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಕಿಮ್‌ ಜಾಂಗ್‌ ಉನ್‌ ತಂಡದ ಸದಸ್ಯರು ಶಾಲೆಗಳಿಗೆ ತೆರಳಿ ಚಂದದ ಹುಡುಗಿಯರನ್ನು ಹುಡುಕುತ್ತಾರೆ. ಒಂದಷ್ಟು ಜನರನ್ನು ಆಯ್ಕೆ ಮಾಡುವ ಅವರು ಬಳಿಕ ಆ ಹುಡುಗಿಯರ ಕುಟುಂಬದ ಸ್ಥಿತಿ ಮತ್ತು ರಾಜಕೀಯ ನಿಲುವುಗಳನ್ನು ಶೋಧಿಸುತ್ತಾರೆ. ಹೀಗೆ ಪರಿಶೀಲಿಸುವ ವೇಳೆ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಬಂದ ಕುಟುಂಬಕ್ಕೆ ಸೇರಿದ ಮತ್ತು ದಕ್ಷಿಣ ಕೊರಿಯಾ ಅಥವಾ ಇತರ ದೇಶಗಳಲ್ಲಿ ಸಂಬಂಧಿಕರು ಹೊಂದಿರುವ ಹುಡುಗಿಯರನ್ನು ಕೈಬಿಡಲಾಗುತ್ತದೆ ಎಂದು ಹೇಳಿದ್ದಾಳೆ.

ಕನ್ಯತ್ವ ಪರೀಕ್ಷೆ

ಎಲ್ಲ ಕೂಲಂಕುಷವಾಗಿ ಪರಿಶೀಲಿಸಿದ ನಂತರ ಉಳಿದುಕೊಳ್ಳುವ ಹುಡುಗಿಯರ ಕನ್ಯತ್ವ ಪರೀಕ್ಷಿಸಲು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಈ ವೇಳೆ ಸಣ್ಣ ಗಾಯ ಕಂಡು ಬಂದರೂ ಆಕೆಯನ್ನು ಕೈ ಬಿಡಲಾಗುತ್ತದೆ. ಹೀಗೆ ಹಲವು ಕಠಿಣ ಹಂತಗಳನ್ನು ದಾಟಿದ ಹುಡುಗಿಯರ ಪೈಕಿ ಕೆಲವರನ್ನು ಫ್ಯೊಂಗ್ಯಾಂಗ್‌ಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ನ ಎಲ್ಲ ಆಸೆಗಳನ್ನು ಪೂರೈಸಬೇಕಾಗುತ್ತದೆ ಎಂದು ಯುವತಿ ತಿಳಿಸಿದ್ದಾಳೆ.

ಮೂರು ಗುಂಪು

ಆಯ್ಕೆಯಾದ ಹುಡುಗಿಯರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಒಂದು ತಂಡಕ್ಕೆ ಮಸಾಜ್‌ ತರಬೇತಿ ನೀಡಿದರೆ ಇನ್ನೊಂದು ಗುಂಪಿಗೆ ಹಾಡು ಮತ್ತು ನೃತ್ಯವನ್ನು ಹೇಳಿಕೊಡಲಾಗುತ್ತದೆ. ಮೂರನೇ ತಂಡ ಸರ್ವಾಧಿಕಾರಿ ಮತ್ತು ಆತನ ಆಪ್ತರಿಗೆ ಲೈಂಗಿಕವಾಗಿ ಸಹಕರಿಸಬೇಕು. ಅವರು ಸರ್ವಾಧಿಕಾರಿ ಮತ್ತು ಇತರ ಪುರುಷರ ಲೈಂಗಿಕ ವಾಂಛೆಗೆ ಸಹಕರಿಸಬೇಕು. ಪುರುಷರನ್ನು ಹೇಗೆ ಮೆಚ್ಚಿಸಬೇಕು ಎನ್ನುವುದನ್ನು ಅವರಿಗೆ ಕಲಿಸಲಾಗುತ್ತದೆ ಎಂದು ಯುವತಿ ವಿವರಿದ್ದಾಳೆ.

ಇದನ್ನೂ ಓದಿ: Viral Video: ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಉತ್ತರ ಕೊರಿಯಾ ಸರ್ವಾಧಿಕಾರಿ!

ಅತ್ಯಂತ ಆಕರ್ಷಕ ಹುಡುಗಿಯರನ್ನು ಸರ್ವಾಧಿಕಾರಿಯ ಸೇವೆ ಮಾಡಲು ಆಯ್ಕೆ ಮಾಡಿದರೆ, ಇತರರನ್ನು ಕೆಳದರ್ಜೆಯ ಜನರಲ್‌ಗಳು ಮತ್ತು ರಾಜಕಾರಣಿಗಳನ್ನು ತೃಪ್ತಿಪಡಿಸಲು ನಿಯೋಜಿಸಲಾಗುತ್ತದೆ. ವಿಶೇಷ ಎಂದರೆ ಹುಡುಗಿಯರ ವಯಸ್ಸು ಇಪ್ಪತ್ತು ದಾಟಿದ ನಂತರ ಅವರನ್ನು ತಂಡದಿಂದ ಕೈ ಬಿಡಲಾಗುತ್ತದೆ. ಆ ಪೈಕಿ ಕೆಲವರು ಬಾಡಿಗಾರ್ಡ್‌ ಅನ್ನು ಮದುವೆಯಾಗುತ್ತಾರೆ. ಈ ʼಆಹ್ಲಾದ ತಂಡʼ ಕಿಮ್ ಜಾಂಗ್ ಉನ್‌ನ ತಂದೆ ಕಿಮ್ ಜಾಂಗ್-2 ಕಾಲದಲ್ಲಿಯೇ ಇತ್ತು. ಅವರು ಹೀಗೆ ಲೈಂಗಿಕ ಸಂಬಂಧ ಹೊಂದುವುದು ಅಮರತ್ವವನ್ನು ನೀಡುತ್ತದೆ ಎಂದು ನಂಬಿದ್ದರು ಎಂದು ಯುವತಿ ಕರಾಳ ದಂಧೆಯ ಮೇಲೆ ಬೆಳಕು ಚೆಲ್ಲಿದ್ದಾಳೆ. ಕಿಮ್ ಜಾಂಗ್-2 2011ರಲ್ಲಿ ತಮ್ಮ 70ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.

Continue Reading

ವೈರಲ್ ನ್ಯೂಸ್

Viral News: ದೂರದ ಇಂಗ್ಲೆಂಡ್‌ನಲ್ಲಿಯೂ ಕೇರಳ ಕಲರವ; ನೆಟ್ಟಿಗರ ಗಮನ ಸೆಳೆದ ವಿಡಿಯೊ ಇಲ್ಲಿದೆ

Viral News: ಕೇರಳ ಪ್ರವಾಸೋದ್ಯಮ ಇಲಾಖೆಯು ಬಸ್ ಬ್ರ್ಯಾಂಡಿಂಗ್ ಮೂಲಕ ಕೇರಳದ ಹಿರಿಮೆಯನ್ನು ವಿದೇಶಗಳಲ್ಲಿ ಪಸರಿಸಲು ಮುಂದಾಗಿದೆ. ದೂರದ ಇಂಗ್ಲೆಂಡ್‌ನಲ್ಲಿ ಇದೀಗ ಕೇರಳದ ಪ್ರಾಕೃತಿಕ ಸೌಂದರ್ಯ ಬಹು ಜನಪ್ರಿಯ. ಅದಕ್ಕೆ ಕಾರಣವಾಗಿದ್ದು ಲಂಡನ್‌ನ ಡಬಲ್ ಡೆಕ್ಕರ್ ಬಸ್‌ನ ಅಲಂಕರಿಸಿರುವ ಕೇರಳದ ಅದ್ಭುತ ದೃಶ್ಯಗಳು. ಸದ್ಯ ಬಸ್‌ ರಸ್ತೆಯಲ್ಲಿ ಸಂಚರಿಸುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

Viral News
Koo

ಲಂಡನ್‌: ದೇವರ ಸ್ವಂತ ನಾಡು (God’s Own Country) ಎಂದು ಕರೆಯಲ್ಪಡುವ ಕೇರಳ (Kerala) ಪ್ರಾಕೃತಿಕವಾಗಿ ಸಂಪತ್ಭರಿತ ರಾಜ್ಯ. ಇದೇ ಕಾರಣಕ್ಕೆ ದೇಶ-ವಿದೇಶದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಇದೀಗ ಕೇರಳ ಪ್ರವಾಸೋದ್ಯಮ ಇಲಾಖೆಯು ಬಸ್ ಬ್ರ್ಯಾಂಡಿಂಗ್ ಮೂಲಕ ಕೇರಳದ ಹಿರಿಮೆಯನ್ನು ವಿದೇಶಗಳಲ್ಲಿ ಪಸರಿಸಲು ಮುಂದಾಗಿದೆ. ದೂರದ ಇಂಗ್ಲೆಂಡ್‌ನಲ್ಲಿ ಇದೀಗ ಕೇರಳದ ಪ್ರಾಕೃತಿಕ ಸೌಂದರ್ಯ ಬಹು ಜನಪ್ರಿಯ. ಅದಕ್ಕೆ ಕಾರಣವಾಗಿದ್ದು ಲಂಡನ್‌ನ ಡಬಲ್ ಡೆಕ್ಕರ್ ಬಸ್‌ನ ಅಲಂಕರಿಸಿರುವ ಕೇರಳದ ಅದ್ಭುತ ದೃಶ್ಯಗಳು. ಸದ್ಯ ಬಸ್‌ ರಸ್ತೆಯಲ್ಲಿ ಸಂಚರಿಸುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral News) ಆಗಿದೆ.

ಡಬಲ್ ಡೆಕ್ಕರ್ ಬಸ್‌ನ ಸುತ್ತ ಕೇರಳದ ಸುಂದರ ಹಿನ್ನೀರಿನ ದೃಶ್ಯಗಳನ್ನು ಅಳವಡಿಸಲಾಗಿದೆ. ಈ ಮನವೋಹಕ ದೃಶ್ಯವನ್ನು ನೋಡಿದ ಎಂತಹವರೂ ತಲೆದೂಗಲೇಬೇಕು. ಕೇರಳದತ್ತ ಆಕರ್ಷಿತರಾಗಲೇಬೇಕು. ರಾಜ್ಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಈ ಜಾಹೀರಾತು ಈಗಾಗಲೇ ಹಲವರ ಗಮನ ಸೆಳೆದಿದೆ. ವಿಶೇಷವಾಗಿ ಬೇಸಿಗೆ ರಜಾದಿನಗಳಲ್ಲಿ ಪ್ರವಾಸಿಗರನ್ನು ಇನ್ನಷ್ಟು ರಾಜ್ಯದತ್ತ ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಕೇರಳ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜಾಹೀರಾತು ಹೊತ್ತ ಬಸ್‌ ದೂರದ ಲಂಡನ್‌ನಲ್ಲಿ ಸಂಚರಿಸುತ್ತಿರುವುದನ್ನು ನೋಡಿ ಅನೇಕರು ರೋಮಾಂಚಿತರಾಗಿದ್ದಾರೆ. ಬಸ್‌ನಲ್ಲಿ ಚಿತ್ರೀಕರಿಸಿರುವ ಹಿನ್ನೀರಿನ ದೃಶ್ಯಗಳನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಬಳಿಕ ವಿಡಿಯೊ ಬಸ್‌ನ ಸಂಪೂರ್ಣ ಚಿತ್ರಣವನ್ನು ಒದಗಿಸುತ್ತದೆ. ಅಲಪ್ಪುಳದ ಹೌಸ್‌ ಬೋಟ್‌, ಸ್ನೇಕ್ ಬೋಟ್ ರೇಸ್‌ ಮತ್ತು ನದಿ, ಹಸಿರಿನ ಚಿತ್ರದೊಂದಿಗೆ ಈ ಬಸ್‌ ಕೇರಳ ಪ್ರವಾಸೋದ್ಯಮದ ಲಾಂಛನವನ್ನೂ ಒಳಗೊಂಡಿದೆ. ಬಸ್‌ನ ಒಂದು ಬದಿಯಲ್ಲಿ #TravelForGood ಎಂದು ಹ್ಯಾಶ್ ಬರೆಯಲಾಗಿದೆ.

ನೆಟ್ಟಿಗರ ಪ್ರತಿಕ್ರಿಯೆ

ವಿಡಿಯೊ ನೋಡಿದ ನೆಟ್ಟಿಗರು ಖುಷಿಯ ಉದ್ಘಾರ ತೆಗೆದಿದ್ದಾರೆ. ʼʼವಾವ್‌! ಇಡೀ ಆಲಪ್ಪುಳವೇ ಈ ಒಂದು ಬಸ್‌ನಲ್ಲಿದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಆಳಪ್ಪುಳ ಮತ್ತು ಕುಟ್ಟನಾಡು ತನ್ನ ಸೌಂದರ್ಯದಿಂದ ವಿದೇಶಿಗರನ್ನೂ ಸೆಳೆಯುತ್ತದೆʼʼ ಎಂದಿದ್ದಾರೆ ಮತ್ತೊಬ್ಬರು. ಇನ್ನೊಬ್ಬರು ಕಮೆಂಟ್‌ ಮಾಡಿ ʼʼಪ್ರಪಂಚದಾದ್ಯಂತದ ಜನರು ಭಾರತವನ್ನು ಕೇರಳದ ಮೂಲಕ ಗುರುತಿಸುತ್ತಿರುವುದು ಹೆಮ್ಮೆಯ ಸಂಗತಿʼʼ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮಗದೊಬ್ಬರು ಈ ಜಾಹೀರಾತಿನ ಯೋಚನೆಯನ್ನು ಶ್ಲಾಘಿಸಿದ್ದಾರೆ. ʼʼಅತ್ಯುತ್ತಮ ಯೋಜನೆ ಇದು. ಕೇರಳ ಪ್ರವಾಸೋದ್ಯಮಕ್ಕೆ ಇಲಾಖೆಗೆ ಹ್ಯಾಟ್‌ಆಫ್‌ʼʼ ಎಂದಿದ್ದಾರೆ.

ಇದನ್ನೂ ಓದಿ: Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

ಕೇರಳ ಪ್ರವಾಸೋದ್ಯ,ಮ ಸಚಿವ ಪಿ.ಎ..ಮೊಹಮ್ಮದ್‌ ರಿಯಾಸ್‌ ಈ ವಿಡಿಯೊವನ್ನು ಶೇರ್‌ ಮಾಡಿದ್ದಾರೆ. ʼʼಕೇರಳ ಟೂರಿಸಂನ ಹೊಸ ಅಭಿಯಾನ ಇದು. ನಮ್ಮ ಆಲಪ್ಪುಳ ಮತ್ತು ಹೌಸ್‌ಬೋಟ್‌ ಲಂಡನ್‌ನ ಬಸ್ಸಿನಲ್ಲಿ ರಾರಾಜಿಸುತ್ತಿದೆ. ಇನ್ನಷ್ಟು ದೇಶಗಳಲ್ಲಿ ಈ ರೀತಿಯ ಜಾಹೀರಾತು ಅಭಿಯಾನ ಮುಂದುವರಿಸಲಿದ್ದೇವೆʼʼ ಎಂದು ತಿಳಿಸಿದ್ದಾರೆ. ಕೇರಳದ ಈ ರೀತಿಯ ಸೃಜನಶೀಲತೆ ಹಿಂದೆಯೂ ವಿದೇಶಿಗರ ಗಮನ ಸೆಳೆದಿತ್ತು. 2018ರಲ್ಲಿಯೂ ಲಂಡನ್‌ನ ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಕೇರಳದ ಪ್ರವಾಸಿ ತಾಣಗಳನ್ನು ಪ್ರಚುರಪಡಿಸಲಾಗಿತ್ತು. ಒಟ್ಟಿನಲ್ಲಿ ಕೇರಳದ ಈ ಐಡಿಯ ಸೂಪರ್‌ ಎಂದಿದ್ದಾರೆ ನೆಟ್ಟಿಗರು.

Continue Reading

ವೈರಲ್ ನ್ಯೂಸ್

Viral Video:ಶಾಕಿಂಗ್‌ ವಿಡಿಯೋ! ಮಗನನ್ನು ಟ್ರೆಡ್‌ಮಿಲ್‌ನಲ್ಲಿ ಓಡಿಸಿ ಪ್ರಾಣವನ್ನೇ ತೆಗೆದ ಪಾಪಿ ತಂದೆ

Viral Video: ಆರು ವರ್ಷದ ಮಗನನ್ನು ದಪ್ಪ ಇದ್ದಾನೆಂದು ಬಲವಂತವಾಗಿ ಟ್ರೆಡ್‌ಮಿಲ್‌ನಲ್ಲಿ ಓಡಿಸಿದ ಪಾಪಿ ತಂದೆ ಮಗನನ್ನೇ ಬಲಿ ತೆಗೆದುಕೊಂಡಿರುವ ಘಟನೆ ಅಮೆರಿಕದ ನ್ಯೂ ಜೆರ್ಸಿಯಲ್ಲಿ ನಡೆದಿದೆ. 2021ರಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದೆ.

VISTARANEWS.COM


on

Viral video
Koo

ಅಮೆರಿಕ: ಪ್ರಪಂಚದಲ್ಲಿ ಎಂತೆಂಥಾ ವಿಕೃತ ಮನಸ್ಸಿನ ವ್ಯಕ್ತಿಗಳಿರುತ್ತಾರೆ ಅಂದ್ರೆ ಕೆಲವೊಮ್ಮೆ ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬ ಪಾಪಿ ತಂದೆಯ ಹುಚ್ಚಾಟಕ್ಕೆ ಪುಟ್ಟ ಬಾಲಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಆರು ವರ್ಷದ ಮಗನನ್ನು ದಪ್ಪ ಇದ್ದಾನೆಂದು ಬಲವಂತವಾಗಿ ಟ್ರೆಡ್‌ಮಿಲ್‌(Treadmill) ನಲ್ಲಿ ಓಡಿಸಿದ ಪಾಪಿ ತಂದೆ ಮಗನನ್ನೇ ಬಲಿ ತೆಗೆದುಕೊಂಡಿರುವ ಘಟನೆ ಅಮೆರಿಕ(America)ದ ನ್ಯೂ ಜೆರ್ಸಿಯಲ್ಲಿ ನಡೆದಿದೆ. 2021ರಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣ(Social Media)ದಲ್ಲಿ ಈ ವಿಡಿಯೋ ವೈರಲ್‌(Viral video) ಆಗುತ್ತಿದೆ.

ಕ್ರಿಸ್ಟೋಫರ್‌ ಜಾರ್ಜ್‌ ಎಂಬ ವ್ಯಕ್ತಿ ಅಟ್ಲಾಂಟಿಕ್‌ ಫಿಟ್‌ನೆಸ್‌ ಕ್ಲಬ್‌ ಹೌಸ್‌ ಎಂಬ ಜಿಮ್‌ನಲ್ಲಿ ತನ್ನ ಆರು ವರ್ಷದ ಮಗ ಕೋರೆ ಮಿಕ್ಕಿಯೊಲೋನನ್ನು ಪದೇ ಪದೇ ಟ್ರೆಡ್‌ಮಿಲ್‌ನಲ್ಲಿ ಓಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ನೀನು ದಪ್ಪಗಿದ್ದಿಯಾ ಎಂದು ಪದೇ ಪದೇ ಹೇಳುತ್ತಾ ಟ್ರೆಡ್‌ಮಿಲ್‌ ವೇಗವನ್ನು ಸ್ಪೀಡಾಗಿ ಸೆಟ್‌ ಮಾಡಿ ಮಗನನ್ನು ಅದರಲ್ಲಿ ಓಡಿಸುತ್ತಾನೆ. ಮಗ ಟ್ರೆಡ್‌ಮಿಲ್‌ನಿಂದ ಬ್ಯಾಲೆನ್ಸ್‌ ತಪ್ಪಿ ಬಿದ್ದರೂ ಬಿಡದ ಕ್ರಿಸ್ಟೋಫರ್‌, ಮತ್ತೆ ಮತ್ತೆ ಬಾಲಕನನ್ನು ಬಲವಂತವಾಗಿ ಟ್ರೆಡ್‌ಮಿಲ್‌ ಮೇಲೆ ನಿಲ್ಲಿಸುತ್ತಾನೆ. ಬಾಲಕ ಎಷ್ಟೇ ಬೇಡ ಎಂದು ಅಳುತ್ತಿದ್ದರೂ ಕೇಳದ ಕ್ರಿಸ್ಟೋಫರ್‌ ಮತ್ತೆ ಮತ್ತೆ ಹಿಂಸೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ತಂದೆಯ ಹಿಂಸೆಯ ತಡೆಯಲಾರದೇ ತೀವ್ರ ಒತ್ತಡ ಅನುಭವಿಸಿದ್ದ ಬಾಲಕ ಕೋರೆ ತೀವ್ರವಾಗಿ ಅಸ್ವಸ್ತಗೊಂಡಿದ್ದ. ಕೋರೆ ದೇಹದ ಮೇಲೆ ಗಂಭೀರವಾದ ಗಾಯಗಳೂ ಆಗಿದ್ದವು. ಇದರಿಂದ ಬಾಲಕನ ತಾಯಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಬಾಲಕನ ಸಿಟಿ ಸ್ಕ್ಯಾನ್‌ ಮಾಡಿದಾಗ ಆತನಿಗೆ ಹೃದಯ ಸಂಬಂಧ ಖಾಯಿಲೆ ಇರುವುರು ವೈದ್ಯರಿಗೆ ತಿಳಿದು ಬಂದಿತ್ತು. ಈ ವೇಳೆ ವೈದ್ಯರ ಮಾಹಿತಿ ಮೇರೆಗೆ ಕ್ರಿಸ್ಟೋಫರ್‌ ಜಾರ್ಜ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಈ ವೇಳೆ ತಂದೆ ನೀಡುತ್ತಿದ್ದ ಹಿಂಸೆಯ ಬಗ್ಗೆ ಬಾಲಕ ತಿಳಿಸಿದ್ದ. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಳಿಕ ಕ್ರಿಸ್ಟೋಫರ್‌ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಕೋರ್ಟ್‌ ವಿಚಾರಣೆ ವೇಳೆ ಈ ವಿಡಿಯೋ ಪ್ರಸಾರ ಮಾಡಿ ಮಾಡಿದ್ದಾರೆ. ಆ ವಿಡಿಯೋ ನೋಡುತ್ತಿದ್ದಂತೆ ಕೊರ್ಟ್‌ನಲ್ಲಿ ಹಾಜರಿದ್ದ ಬಾಲಕನ ತಾಯಿ ಕಣ್ಣೀರು ಹಾಕಿದ್ದಾಳೆ.

ಇದನ್ನೂ ಓದಿ: Viral Video: ಕಾಲಿನ ಗಾಯವನ್ನು ಲೆಕ್ಕಿಸದೆ ರೋಲರ್ ಓಡಿಸಿ ಪಿಚ್​ ಸಿದ್ಧಪಡಿಸಿದ ಮೊಹಮ್ಮದ್​ ಶಮಿ

2022 ಮಾರ್ಷ್‌ 9ರಂದು ಕೊಲೆ ಪ್ರಕರಣದಲ್ಲಿ ಕ್ರಿಸ್ಟೋಫರ್‌ ಜಾರ್ಜ್‌ನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದರು. ಇದೀಗ ಜಾಮೀನು ರಹಿತ ಬಂಧನಕ್ಕೊಳಗಾಗಿರುವ ಆತನನ್ನು ಓಶಿಯನ್‌ ಸಿಟಿ ಜೈಲಿನಲ್ಲಿ ಇರಿಸಲಾಗಿದೆ. ಮಂಗಳವಾರ ವಿಚಾರಣೆಗೆ ಹಾಜರಾದ ಕ್ರಿಸ್ಟೋಫರ್‌ ಜಾರ್ಜ್‌ನ ಕೃತ್ಯವನ್ನು ಕಂಡು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕಂಡು ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು

Viral News: ಇದೊಂದು ವಿಚಿತ್ರ, ವಿರಳ ಪ್ರಕರಣ. ಮದುವೆ ಮುನ್ನವೇ ಎರಡು ಬಾರಿ ಗರ್ಭ ಧರಿಸಿದ ಅಪ್ರಾಪ್ತ ಬಾಲಕಿಯೊಬ್ಬಳು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಘಟನೆ ಇದು. ಅಕ್ರಮ ಸಂಬಂಧ ಹೊಂದಿದ್ದ ಆಕೆ ಇಬ್ಬರು ಬೇರೆ ಬೇರೆ ಪುರುಷರಿಂದ ಗರ್ಭ ಧರಿಸಿದ್ದಳು. ಈ ಪೈಕಿ ಒಂದು ಮಗುವನ್ನು ಪೋಷಕರು ತನಗೆ ತಿಳಿಯದೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಇದೀಗ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

VISTARANEWS.COM


on

Viral News
Koo

ಮುಂಬೈ: 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮದುವೆ ಮುನ್ನವೇ ಎರಡು ಬಾರಿ ಗರ್ಭ ಧರಿಸಿರುವ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಸದ್ಯ ಈ ಘಟನೆ ಸಿನಿಮೀಯ ತಿರುವು ಪಡೆದುಕೊಂಡಿದೆ. ತನ್ನ ಒಂದು ಮಗುವನ್ನು ತನಗೆ ತಿಳಿಯದಂತೆಯೇ ಮಾರಾಟ ಮಾಡಲಾಗಿದೆ ಎಂದು ದೂರಿರುವ ಆಕೆ ಇದೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾಳೆ. ಪೋಷಕರು, ಶಿಕ್ಷಕರು, ವಕೀಲ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ(Viral News). ಮಹಾರಾಷ್ಟ್ರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 17 ವರ್ಷದ ಬಾಲಕಿ ಇಬ್ಬರು ವಿಭಿನ್ನ ಪುರುಷರ ಜತೆ ದೇಹ ಸಂಬಂಧ ಬೆಳೆಸಿದ್ದಳು. ಹೀಗಾಗಿ ಎರಡು ಬಾರಿ ಗರ್ಭ ಧರಿಸಿದ್ದಳು. ಈ ಪೈಕಿ ಒಂದು ನವಜಾತ ಶಿಶುವನ್ನು ತನ್ನ ಪೋಷಕರು, ಶಾಲಾ ಪ್ರಾಂಶುಪಾಲರು, ಇಬ್ಬರು ಮಹಿಳಾ ವೈದ್ಯರು, ಸಾಮಾಜಿಕ ಕಾರ್ಯಕರ್ತೆ, ವಕೀಲರು ಮತ್ತು ಇತರರು ಸೇರಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕಿಯ ಪೋಷಕರು ಸೇರಿದಂತೆ ಕನಿಷ್ಠ 16 ಮಂದಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆ (Juvenile Justice Act)ಯಡಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ವಿವರ

2021ರಲ್ಲಿ 23 ವರ್ಷದ ಅನ್ಯ ಕೋಮಿನ ಜತೆ ಅಕ್ರಮ ಸಂಬಂಧ ಹೊಂದಿದ್ದ ಬಾಲಕಿ ಮೊದಲ ಬಾರಿ ಗರ್ಭಿಣಿಯಾಗಿದ್ದಳು. ಆಕೆ ಗರ್ಭ ಧರಿಸಿರುವ ವಿಚಾರ ಪೋಷಕರ ಗಮನಕ್ಕೆ ಬಂದಿತ್ತು. ಬಳಿಕ ಪೋಷಕರು ಶಾಲೆಯ ಪ್ರಾಂಶುಪಾಲ ಮತ್ತು ಸಾಮಾಜಿಕ ಕಾರ್ಯಕರ್ತೆಗೆ ವಿಚಾರ ತಿಳಿಸಿ ಅವರ ಸಹಾಯ ಕೋರಿದರು.

7ನೇ ತರಗತಿಯ ಬಳಿಕ ಶಾಲೆಯಿಂದ ಹೊರಗುಳಿದ ಬಾಲಕಿಯ ನಿಯಮಿತ ತಪಾಸಣೆ ಮತ್ತು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ʼʼಇದಕ್ಕೂ ಮೊದಲು ಪೋಷಕರು ತನ್ನನ್ನು ಮುಂಬೈಯ ಯಾವುದೋ ಒಂದು ಸ್ಥಳಕ್ಕೆ ಕರೆದೊಯ್ದು ಅಲ್ಲಿ ವಕೀಲರ ಸಮ್ಮುಖದಲ್ಲಿ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿದ್ದರುʼʼ ಎಂದು ಬಾಲಕಿ ತಿಳಿಸಿದ್ದಾಳೆ ಎಂದು ಮೂಲಗಳು ವರದಿ ಮಾಡಿವೆ. 2021ರ ಸೆಪ್ಟೆಂಬರ್ 24ರಂದು ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮರುದಿನ ಆ ಮಗುವನ್ನು ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಹಸ್ತಾಂತರಿಸಲಾಯಿತು. ಹೆರಿಗೆಯ ಬಗ್ಗೆ ಯಾರಲ್ಲೂ ಮಾತನಾಡದಂತೆ ಆಕೆಗೆ ಪೋಷಕರು ಎಚ್ಚರಿಕೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಹೆರಿಗೆಯ ಆರು ತಿಂಗಳ ನಂತರ ಅಪ್ರಾಪ್ತೆ ಮಗುವಿನ ತಂದೆಯನ್ನು ಸಂಪರ್ಕಿಸಿದಳು. ಈ ವೇಳೆ ಆತ ಆಕೆಯನ್ನು ವರಿಸಲು ಸಿದ್ಧನಾಗಿರುವುದಾಗಿ ಹೇಳಿದ್ದ. ಆದರೆ ಪೋಷಕರು ಇದಕ್ಕೆ ಸಮ್ಮತಿ ನೀಡಲಿಲ್ಲ. ʼʼತನ್ನ ಪೋಷಕರು ಮಗುವನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಪೈಕಿ ಪೋಷಕರು ಮತ್ತು ಚಿಕ್ಕಪ್ಪ ತಲಾ 1.5 ಲಕ್ಷ ರೂ. ಪಡೆದರೆ, ಸಾಮಾಜಿಕ ಕಾರ್ಯಕರ್ತೆ ಮತ್ತು ಇತರ ಕೆಲವರು ಉಳಿದ 1 ಲಕ್ಷ ರೂ.ಗಳನ್ನು ಹಂಚಿಕೊಂಡಿದ್ದಾರೆʼʼ ಎಂದು ಅಪ್ರಾಪ್ತೆ ದೂರಿದ್ದಾಳೆ. ಈ ಬಗ್ಗೆ ಅವಳು ಪೋಷಕರನ್ನು ಪ್ರಶ್ನಿಸಿದಾಗ ಅಜ್ಜಿಯ ಮನೆಗೆ ಕಳುಹಿಸಿದ್ದರು. ಅಲ್ಲಿ ಅವಳ ಕುಟುಂಬವು 23 ವರ್ಷದ ವ್ಯಕ್ತಿಯೊಂದಿಗೆ ಮದುವೆಯನ್ನು ನಿಶ್ಚಯಿಸಿತ್ತು ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಅಪ್ರಾಪ್ತೆ ಮತ್ತೆ ತನ್ನ ವಿವಾಹ ನಿಶ್ಚಿತವಾದ ಯುವಕನೊಂದಿಗೆ ದೇಹ ಸಂಪರ್ಕ ಬೆಳೆಸಿದಳು. ಬಳಿಕ ಮತ್ತೊಮ್ಮೆ ಗರ್ಭ ಧರಿಸಿದಳು. ಈ ವೇಳೆ ಆತನಿಗೆ ಅಪ್ರಾಪ್ತೆಯ ಮೊದಲ ಮಗುವಿನ ಬಗ್ಗೆ ತಿಳಿದು ಬಂದಿತ್ತು. ಹೀಗಾಗಿ ವಿವಾಹವಾಗಲು ನಿರಾಕರಿಸಿದ. ನಂತರ ಬಾಲಕಿ ಅಜ್ಜಿ ಮನೆಯಿಂದ ತನ್ನ ಮನೆಗೆ ಮರಳಿದಳು. ಪರಿಚಯಸ್ಥರ ನೆರವಿನಿಂದ ಆಕೆ 2024ರ ಮಾರ್ಚ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಎರಡನೇ ಮಗುವನ್ನೂ ಮಾರಾಟ ಮಾಡುವಂತೆ ಪೋಷಕರು ಒತ್ತಡ ಹೇರುತ್ತಿರುವುದರಿಂದ ಆಕೆ ಇದೀಗ ಪೊಲೀಸ್‌ ಠಾಣೆಯ ಮೊರೆ ಹೋಗಿದ್ದಾಳೆ. ಮಾರಾಟವಾದ ಹೆಣ್ಣು ಮಗು ಎಲ್ಲಿದೆ ಎಂಬುದನ್ನು ಹುಡುಕಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Continue Reading
Advertisement
Actor Darshan React about Kaatera 2
ಸ್ಯಾಂಡಲ್ ವುಡ್2 mins ago

Actor Darshan: ಗೆದ್ದ ಎತ್ತಿನ ಬಾಲ ಹಿಡಿಯಬಾರದು ಎಂದ ದರ್ಶನ್‌! ಕಾಟೇರ 2 ಬರತ್ತಾ?

KSET Exam 2023 provisional score list
ಪ್ರಮುಖ ಸುದ್ದಿ21 mins ago

KSET Exam 2023: ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆಸೆಟ್‌- 2023ರ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

Amith Shah
Lok Sabha Election 202425 mins ago

Amit Shah: ಅಮಿತ್‌ ಶಾ ವಿಡಿಯೊ ತಿರುಚಿದ ಪ್ರಕರಣ; ಕಾಂಗ್ರೆಸ್ ಐಟಿ ಸೆಲ್‌ನ ಐವರು ಸದಸ್ಯರ ಬಂಧನ

IPL 2024 Points Table
ಕ್ರೀಡೆ26 mins ago

IPL 2024 Points Table: ರೋಚಕ 1 ರನ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಹೈದರಾಬಾದ್​

Lok sabha Election 2024
ದೇಶ28 mins ago

Lok sabha Election 2024: ರಾಯ್‌ಬರೇಲಿಯಲ್ಲಿ ಕಣಕ್ಕಿಳಿದಿರುವ ದಿನೇಶ್‌ ಪ್ರತಾಪ್‌ ಸಿಂಗ್‌ ಹಿನ್ನೆಲೆ ಏನು?

Kaatera  Movie Rockline Venkatesh Gifts Car To Jadesh K Hampi Maasthi And Suraj
ಸ್ಯಾಂಡಲ್ ವುಡ್31 mins ago

Kaatera  Movie:  ಕಾಟೇರ ಗೆಲುವು: ಮೂವರಿಗೆ ಉಡುಗೊರೆಯಾಗಿ ಸಿಕ್ತು ಕಾರುಗಳು!

Lok sabha Election
ದೇಶ53 mins ago

Lok Sabha Election 2024: ರಾಯ್‌ಬರೇಲಿಯಿಂದ ರಾಹುಲ್‌ ಗಾಂಧಿ ಕಣಕ್ಕೆ, ಅಮೇಠಿಯಿಂದ ಕಿಶೋರಿಲಾಲ್‌ ಸ್ಪರ್ಧೆ

prajwal revanna case arrest
ಪ್ರಮುಖ ಸುದ್ದಿ59 mins ago

Prajwal Revanna Case: ಪ್ರಜ್ವಲ್ ರೇವಣ್ಣ ಮೇಲೆ ಮತ್ತೊಂದು ಟೈಟ್‌ ಎಫ್‌ಐಆರ್‌, ಇದರಲ್ಲಿ ಬಂಧನ ಖಚಿತ!

Kim Jong Un
ವಿದೇಶ1 hour ago

Kim Jong Un: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಸುಖಕ್ಕೆ ಬೇಕು ಪ್ರತಿ ವರ್ಷ 25 ಹುಡುಗಿಯರು! ಏನಿದು ಆಹ್ಲಾದ ತಂಡ?

Hassan Pen Drive case Prajwal Revanna case
ಪ್ರಮುಖ ಸುದ್ದಿ2 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಮೇಲೆ ಮೈಸೂರಿನಲ್ಲೂ ಒಂದು ಕೇಸ್‌; ತಾಯಿ ಮೇಲೆ ಲೈಂಗಿಕ ಕಿರುಕುಳ, ಅಪಹರಣ ಎಂದು ದೂರು ನೀಡಿದ ಮಗ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ14 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌