Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್​ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ! Vistara News
Connect with us

ವೈರಲ್ ನ್ಯೂಸ್

Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್​ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!

ಇಂಥ ಹೊಸ ಮಾದರಿಯ, ವಿಭಿನ್ನ ಆಟೋದ ವಿಡಿಯೊ ಶೇರ್​ ಆಗಿದ್ದು autorikshaw_kerala ಎಂಬ ಇನ್​ಸ್ಟಾಗ್ರಾಂನಲ್ಲಿ. ಈಗಾಗಲೇ ಮಿಲಿಯನ್​ಗಳಷ್ಟು ವೀವ್ಸ್​ ಕಂಡಿದೆ. ಸಿಕ್ಕಾಪಟೆ ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ.

VISTARANEWS.COM


on

Man Converts Autorickshaw Into Rolls Royce Car Viral Video
Koo

ಕಸದಿಂದ ರಸ ತಯಾರಿಸುವಲ್ಲಿ ನಾವು ಭಾರತೀಯರು ನಿಸ್ಸೀಮರು. ಹಳೇ ಯಾವುದೋ ವಸ್ತುವನ್ನು ಮಾರ್ಪಡಿಸಿ, ಬೇರೆ ಯಾವುದೋ ಕೆಲಸಕ್ಕೆ ಬಳಸಿಕೊಳ್ಳುವುದೆಲ್ಲ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಇಂಥ ಹತ್ತು ಹಲವು ಉದಾಹರಣೆಗಳನ್ನು ನಾವು ನೋಡುತ್ತಿರುತ್ತೇವೆ. ನೀವು ನಿಮ್ಮ ಮನೆಯಲ್ಲಿ ಇಂಥ ಪ್ರಯೋಗಗಳನ್ನೆಲ್ಲ ಮಾಡಿರಬಹುದಲ್ಲ..!

ಅಂಥದ್ದೇ ಒಂದು ಉದಾಹರಣೆ ಇಲ್ಲಿದೆ. ಈ ಆಟೋ ಚಾಲಕ ತನ್ನ ಆಟೋವನ್ನು ರೋಲ್ಸ್-ರಾಯ್ಸ್ ಕಾರಿನಂತೆ ಮಾಡಿದ್ದಾನೆ. ಇಡೀ ಆಟೋಕ್ಕೆ ಗುಲಾಬಿ ಬಣ್ಣದ ಪೇಂಟಿಂಗ್ ಮಾಡಿರುವ ಆತ ಐಷಾರಾಮಿ ಸೀಟುಗಳನ್ನು ಹಾಕಿದ್ದಾನೆ. ಅದೂ ಕೂಡ ಬಿಳಿ-ಗುಲಾಬಿ ಮಿಶ್ರಿತ ಸೀಟ್. ನೋಡಲು ಸಿಕ್ಕಾಪಟೆ ಚೆಂದವಾಗಿದೆ. ಅದೆಲ್ಲದರ ಜತೆ ಆಟೋದ ಬಗ್ಗೆ ವಿಶೇಷವಾಗಿ ಗಮನಸೆಳೆಯುವುದು ಅದರ ಮೇಲ್ಭಾಗ. ನೀವು ರೋಲ್ಸ್ ರಾಯ್ಸ್​ ಕಾರನ್ನು ನೋಡಿದ್ದೀರಲ್ಲ. ಅದರಲ್ಲಿ ಮೇಲ್ಮುಚ್ಚು ಇಲ್ಲದಿರುವ ಕಾರುಗಳೂ ಇವೆ. ಇನ್ನು ಕೆಲವು ಆಧುನಿಕ ಕಾರುಗಳಿಗೆ ಒಂದು ಬಟನ್ ಒತ್ತಿದರೆ ಸಾಕು, ಕಾರಿನ ರೂಫ್​​ ತೆರೆದುಕೊಳ್ಳುವ ಆಯ್ಕೆ ಇರುತ್ತದೆ. ಈಗ ಈ ಚಾಲಕ ತನ್ನ ಆಟೋವನ್ನೂ ಹೀಗೆ ಮಾರ್ಪಾಡು ಮಾಡಿದ್ದಾನೆ. ಆಟೋದ ಸ್ಟೀರಿಂಗ್​ ಬಳಿ ಇರುವ ಬಟನ್​ ಒತ್ತಿದರೆ, ಆ ಆಟೋದ ಮೇಲ್ಭಾಗ ತೆರೆದುಕೊಳ್ಳುವುದನ್ನು ವಿಡಿಯೊದಲ್ಲಿ ನೋಡಬಹುದು.

ಇಂಥ ಹೊಸ ಮಾದರಿಯ, ವಿಭಿನ್ನ ಆಟೋದ ವಿಡಿಯೊ ಶೇರ್​ ಆಗಿದ್ದು autorikshaw_kerala ಎಂಬ ಇನ್​ಸ್ಟಾಗ್ರಾಂನಲ್ಲಿ. ಈಗಾಗಲೇ ಮಿಲಿಯನ್​ಗಳಷ್ಟು ವೀವ್ಸ್​ ಕಂಡಿದೆ. ಸಿಕ್ಕಾಪಟೆ ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಇದನ್ನು ರೋಲ್ಸ್ ರಾಯ್ಸ್​ ಆಫ್ ಆಟೋ ಎನ್ನುತ್ತಿದ್ದಾರೆ. ಇನ್ನೂ ಕೆಲವರು, ಇದು ನಿಜಕ್ಕೂ ಜೋಕ್​ ಎನ್ನುತ್ತಿದ್ದಾರೆ. ಹಾಗೇ, ಕಾರಿನ ಸೌಂದರ್ಯಕ್ಕೆ ಹಲವರು ಮಾರುಹೋಗಿದ್ದಾರೆ.

ಇದನ್ನೂ ಓದಿ: Viral Video : ಒಡೆದ ಮೊಟ್ಟೆಯಲ್ಲೇ ಮರಿ ಮಾಡಿಸಿದ ವ್ಯಕ್ತಿ! ಅಬ್ಬಬ್ಬಾ ಎನ್ನುವಂತಿದೆ ಈ ವಿಡಿಯೊ ನೋಡಿ

ಹೀಗೆ ಮಾರ್ಪಾಡಿತ ಆಟೋ ರಿಕ್ಷಾಗಳ ವಿಡಿಯೊ ವೈರಲ್ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಉದ್ಯಮಿ ಹರ್ಷ ಗೋಯೆಂಕಾ ಅವರು, ಐಷಾರಾಮಿ ಕಾರಿನ ಮಾದರಿಯಲ್ಲೇ ರೂಪಿಸಲಾಗಿದ್ದ ಆಟೋ ರಿಕ್ಷಾವೊಂದರ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದರು. ಹಾಗೇ, ಕಳೆದ ವರ್ಷ ದೆಹಲಿಯಲ್ಲಿ ಒಬ್ಬ ಚಾಲಕ ತಮ್ಮ ಆಟೋದ ಮೇಲ್ಭಾಗದಲ್ಲಿ ಸಣ್ಣ ಉದ್ಯಾನವನವನ್ನೇ ಸೃಷ್ಟಿಸಿಕೊಂಡಿದ್ದು ಸುದ್ದಿಯಾಗಿತ್ತು. ಸೆಖೆಯಿಂದ ಪಾರಾಗಲು ಅವರು ಹೀಗೆ ಮಾಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ವೈರಲ್ ನ್ಯೂಸ್

Viral Post: ಸಾಮಾಜಿಕ ಜಾಲತಾಣದಲ್ಲಿ ಕೋಟಿಗಟ್ಟಲೆ ದುಡಿಯುವ ನಾಯಿಯಿದು!

ಗೋಲ್ಡನ್‌ ರಿಟ್ರೀವರ್‌ ತಳಿಯ ನಾಯಿಯೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ಸೆಲೆಬ್ರಿಟಿ. ಇದು ವರ್ಷಕ್ಕೆ ಒಂದು ಮಿಲಿಯನ್‌ ಡಾಲರ್‌ಗೂ ಅಧಿಕ ಹಣ ಸಂಪಾದಿಸುತ್ತಿದೆಯಂತೆ.

VISTARANEWS.COM


on

Edited by

social influencer pet
Koo

ಸಾಮಾಜಿಕ ಜಾಲತಾಣಗಳು ಬಂದ ಮೇಲೆ, ಇನ್‌ಫ್ಲುಯೆಂಜರ್‌ಗಳ ಜೀವನದ ಬಗೆಗೆ ಸಾಕಷ್ಟು ಚರ್ಚೆಗಳಾಗಿವೆ. ಇನ್ಸ್‌ಟಾಗ್ರಾಂನಂತಹ ಜಾಲತಾಣದಲ್ಲಿ ಇನ್ಫ್ಲುಯೆಂಜರ್‌ಗಳು ಎಷ್ಟು ದುಡ್ಡು ಸಂಪಾದಿಸಬಹುದು ಎಂಬ ಬಗ್ಗೆ ಸದಾ ಎಲ್ಲರಿಗೂ ಕುತೂಹಲ. ʻಇದರಲ್ಲಿ ಸಾಕಷ್ಟು ದುಡ್ಡು ಮಾಡಬಹುದು, ಕೋಟಿಗಟ್ಟಲೆ ದುಡ್ಡು ಸಂಪಾದಿಸಬಹುದುʼ ಎಂಬ ನಂಬಿಕೆಯೇ ಲಕ್ಷಾಂತರ ಯುವಮಂದಿಯನ್ನು ಇದು ತನ್ನತ್ತ ಸೆಳೆದಿದೆ. ಅಷ್ಟೇ ಅಲ್ಲ, ಈ ಮೂಲಕ ಹಣವನ್ನೂ ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ ಕೂಡಾ.

ಆದರೆ, ನಾಯಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುತ್ತಿರುವುದು ಗೊತ್ತೇ? ನಾಯಿ ಸಾಕುವುದಕ್ಕೇ ಸಾಕಷ್ಟು ದುಡ್ಡು ಬೇಕು, ಆದರೆ, ನಾಯಿ ಹೇಗೆ ಸಂಪಾದಿಸೀತು ಎನ್ನುತ್ತೀರಾ? ಹಾಗಾದರೆ ಇಲ್ಲಿ ಕೇಳಿ. ಗೋಲ್ಡನ್‌ ರಿಟ್ರೀವರ್‌ ತಳಿಯ ನಾಯಿಯೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ಸೆಲೆಬ್ರಿಟಿ. ಇದು ವರ್ಷಕ್ಕೆ ಒಂದು ಮಿಲಿಯನ್‌ ಡಾಲರ್‌ಗೂ ಅಧಿಕ ಹಣ ಸಂಪಾದಿಸುತ್ತಿದೆಯಂತೆ. ಅಂದರೆ ವರ್ಷಕ್ಕೆ ಸುಮಾರು ಎಂಟುಕಾಲು ಕೋಟಿಗಳಷ್ಟು ಹಣ ವರ್ಷಕ್ಕೆ ಸಂಪಾದನೆ ಮಾಡುತ್ತಿದೆ.

ಪ್ರಿಂಟೆಡ್‌ ಪೆಟ್‌ ಮೆಮೊರೀಸ್‌ ಎಂಬ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಟಕ್ಕರ್‌ ಬುಡ್‌ಜಿನ್‌ ಹೆಸರಿನ ಗೋಲ್ಡನ್‌ ರಿಟ್ರೀವರ್‌ ನಾಯಿ ವಿಶ್ವದ ಸಾಮಾಜಿಕ ಜಾಲತಾಣದಲ್ಲಿ ನಂಬರ್‌ ವನ್‌ ಸ್ಥಾನದಲ್ಲಿದೆಯಂತೆ. ಇದು ಸಾಕಷ್ಟು ಜಾಹಿರಾತುಗಳನ್ನೂ ನೀಡುವ ಮೂಲಕ ವರ್ಷಕ್ಕೆ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದೆಯಂತೆ. ಇನ್ಸ್‌ಟಾಗ್ರಾಂನಲ್ಲಿ ಮೂರರಿಂದ ಎಂಟು ಪೋಸ್ಟ್‌ಗಳಿಗೆ 20,000 ಡಾಲರ್‌ ಹಣವನ್ನು ಸಂಪಾದಿಸುತ್ತದೆಯಂತೆ. ೩೦ ನಿಮಿಷಗಳ ಯುಟ್ಯೂಬ್‌ ವಿಡಿಯೋಗೆ 40,000ದಿಂದ 60,000 ಡಾಲರ್‌ ಹಣ ಸಂಪಾದಿಸುತ್ತಿದೆಯಂತೆ.

ಟಕ್ಕರ್‌ನ ಯಜಮಾನಿ ಕೋರ್ಟ್ನಿ ಬುಡ್ಝಿನ್‌ ಹೇಳುವ ಪ್ರಕಾರ, 2018ರಲ್ಲಿ ಎಂಟು ವಾರಗಳಷ್ಟು ಪುಟಾಣಿಯಾಗಿದ್ದ ಈ ನಾಯಿಯನ್ನು ಮನೆಗೆ ತಂದ ಮೇಲೆ ಅವರು ಮತ್ತೆ ಹಿಂತಿರುಗಿ ನೋಡಿಲ್ಲವಂತೆ. ಮೊದಲ ವಿಡಿಯೋ ವೈರಲ್‌ ಆದ ಮೇಲೆ ಈ ನಾಯಿ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿ ಬಿಟ್ಟಿತು. ನಾಯಿಯ ಜನಪ್ರಿಯತೆ ಎಷ್ಟಾಯಿತು ಎಂದರೆ, ಇದರ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಲು ಹಾಗೂ ನಾಯಿಯನ್ನು ನೋಡಿಕೊಳ್ಳಲೆಂದೇ ಬುಡಜಿನ್‌ ಅವರ ಗಂಡ ಮೈಕ್‌ ತನ್ನ ವೃತ್ತಿಯನ್ನು ತೊರೆದು ಪೂರ್ಣಾವಧಿ ಕಾಲ ನಾಯಿಯ ಜೊತೆಗೇ ಸಮಯ ಕಳೆಯುತ್ತಿದ್ದಾರಂತೆ.

ಕೇವಲ ಆರು ತಿಂಗಳಾದಾಗ ಈ ಟಕ್ಕರ್‌ಗೆ 60 ಸಾವಿರ ಫಾಲೋವರ್‌ಗಳಾದರಂತೆ. ನಂತರ ದಿನೇ ದಿನೇ ಫಾಲೋವರ್‌ಗಳ ಸಂಖ್ಯೆ ಏರುತ್ತಾ ಸಾಗಿದ್ದು ಸದ್ಯ 25 ಮಿಲಿಯನ್‌ಗೂ ಹೆಚ್ಚು ಫಾಲೋವರ್‌ಗಳು ಇದ್ದಾರೆ. ಟಿಕ್‌ಟಾಕ್‌, ಯುಟ್ಯೂಬ್‌, ಫೇಸ್‌ಬುಕ್‌ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣದಲ್ಲೂ ಮಿಲಿಯಗಟ್ಟಲೆಫಾಲೋವರ್‌ಗಳನ್ನು ಸಂಪಾದಿಸಿ ನಂಬರ್‌ 1 ಪೆಟ್‌ ಸೆಲೆಬ್ರಿಟಿಯಾಗಿ ಟಕ್ಕರ್‌ ಮಿಂಚುತ್ತಿದ್ದಾನೆ.

ಒಟ್ಟಾರೆ ಈಗ ನಾಯಿಯೇ ಸದ್ಯಕ್ಕೆ ಈ ಮನೆಯ ಯಜಮಾನ. ನಾಯಿಯೇ ಈ ಮನೆಮಂದಿಯ ಹೊಟ್ಟೆ ಹೊರೆತ್ತಿದೆ ಎಂದರೂ ತಪ್ಪಲ್ಲ. ಯಾರಿಗುಂಟು ಯಾರಿಗಿಲ್ಲ!

ಇದನ್ನೂ ಓದಿ: Viral Post: ಹವ್ಯಾಸವೇ ವೃತ್ತಿ: ಕೆಲಸಕ್ಕೆ ಗುಡ್‌ಬೈ ಹೇಳಿ ತಿರುಗಾಟವೇ ಕೆಲಸ!

Continue Reading

ವೈರಲ್ ನ್ಯೂಸ್

Viral News : ನಿತ್ಯ ಶಾಪಿಂಗ್‌ಗೆಂದೇ 70 ಲಕ್ಷ ರೂ. ಖರ್ಚು ಮಾಡುತ್ತಾಳಂತೆ ಈ ಮಹಿಳೆ!

ದುಬೈನಲ್ಲಿ ಸೌದಿ ಹೆಸರಿನ ಮಹಿಳೆ ತಾನು ಒಮ್ಮೆ ಶಾಪಿಂಗ್‌ಗೆ ಹೋದರೆ 70 ಲಕ್ಷ ರೂ.ವರೆಗೆ ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆಕೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು (Viral News) ಮಾಡುತ್ತಿವೆ.

VISTARANEWS.COM


on

Edited by

soudi
Koo

ದುಬೈ: ಶಾಪಿಂಗ್‌ ಎಂದರೆ ಹೆಣ್ಣು ಮಕ್ಕಳಿಗೆ ಪ್ರೀತಿ. ಒಮ್ಮೆ ಶಾಪಿಂಗ್‌ ಹೋದರೆ ದುಡ್ಡಿನ ಲೆಕ್ಕಾಚಾರ ಮರೆತೇ ಹೋಗುವಂತೆ ಶಾಪಿಂಗ್‌ ಮಾಡಿಬಿಡುತ್ತಾರೆ. ಆದರೆ ಈ ಮಹಿಳೆಯ ಕಥೆ ಕೇಳಿಬಿಟ್ಟರೆ ಎಲ್ಲೆ ಮೀರಿ ಖರ್ಚು ಮಾಡುವ ಹೆಣ್ಣು ಮಕ್ಕಳೂ ಕೂಡ ಬಾಯಿ ಮೇಲೆ ಬೆರಳಿಡುತ್ತಾರೆ. ಏಕೆಂದರೆ ಈ ಮಹಿಳೆ ಒಮ್ಮೆ ಶಾಪಿಂಗ್‌ಗೆಂದು ಹೋದರೆ ಖರ್ಚು ಮಾಡುವುದು ಬರೋಬ್ಬರಿ 70 ಲಕ್ಷ ರೂ. (Viral News) ಅಂತೆ!

ಹೌದು ದುಬೈನ ಇನ್‌ಫ್ಲೂಯೆನ್ಸರ್‌ ಆಗಿರುವ ಸೌದಿ ಈ ರೀತಿಯಲ್ಲಿ ಹೇಳಿಕೊಂಡಿದ್ದಾಳೆ. ಆಕೆಯ ಗಂಡ ಜಮಾಲ್‌ ದುಬೈನ ಶ್ರೀಮಂತರಲ್ಲಿ ಒಬ್ಬನಂತೆ. ಹಾಗಾಗಿ ಆಕೆ ಒಮ್ಮೆ ಶಾಪಿಂಗ್‌ಗೆಂದು ಹೋದರೆ 70 ಲಕ್ಷ ರೂ.ವರೆಗೂ ಖರ್ಚು ಮಾಡಿ ಬರುತ್ತಾಳಂತೆ. ಅಂದ ಹಾಗೆ ಆಕೆ ಮಾಮೂಲಿ ವಸ್ತುಗಳನ್ನು ಮುಟ್ಟುವುದೇ ಇಲ್ಲವಂತೆ. ಆಕೆ ಬಳಸುವ ಪ್ರತಿ ವಸ್ತುವೂ ಬ್ರ್ಯಾಂಡೆಡ್‌ ವಸ್ತುವಂತೆ.

ಇದನ್ನೂ ಓದಿ: Viral News : ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಸಿಕ್ಕಿತು ಹಾವು! ಹಲವು ಮಕ್ಕಳು ಅಸ್ವಸ್ಥ
ಈ ಸೌದಿ ಟಿಕ್‌ಟಾಕ್‌ನಲ್ಲಿ ತನ್ನ ಬಗ್ಗೆ ಸಾಕಷ್ಟು ವಿಡಿಯೊಗಳನ್ನು ಮಾಡಿ ಬಿಟ್ಟಿದ್ದಾಳೆ. ಪ್ರತಿ ದಿನ ರಾತ್ರಿ ಆಕೆಯ ಪತಿ ಆಕೆಗೆ ಸರ್ಪೈಸ್‌ ಕೊಟ್ಟೇ ಮಲಗಿಸುವುದಂತೆ. ಹಾಗೆಯೇ ಒಮ್ಮೊಮ್ಮೆ ಲಕ್ಷಗಟ್ಟಲೆ ಹಣ ಕೊಟ್ಟು ಪೂರ್ತಿ ರೆಸ್ಟೋರೆಂಟ್‌ ಅನ್ನೇ ಬುಕ್‌ ಮಾಡಿಬಿಡುತ್ತಾನಂತೆ. ಆ ದಿನಕ್ಕೆ ಯಾವ ಬಟ್ಟೆ ಹಾಕಬೇಕು ಎಂದು ನಿರ್ಧರಿಸಿ ಅದನ್ನು ಕಳುಹಿಸಿಕೊಟ್ಟು ರೆಡಿಯಾಗುವುದಕ್ಕೆ ಹೇಳುತ್ತಾನಂತೆ.

ಈ ಜೋಡಿ ಈಗಾಗಲೇ ಸಾಕಷ್ಟು ದೇಶಗಳನ್ನು ಪ್ರವಾಸ ಮಾಡಿದೆಯಂತೆ. ಮೂರ್ನಾಲ್ಕು ತಿಂಗಳಿಗೆ ಒಮ್ಮೆಯಾದರೂ ಲಂಡನ್‌ಗೆ ಹೋಗುತ್ತಿರುತ್ತಾರಂತೆ. ಎಲ್ಲಿಗೇ ಹೋದರೂ ಲಕ್ಷಗಟ್ಟಲೆ ಹಣ ಖರ್ಚಾಗುತ್ತದೆಯಂತೆ. ಇತ್ತೀಚೆಗೆ ಮಾಲ್ಡೀವ್ಸ್‌ ಪ್ರಯಾಣ ಮಾಡಿದ್ದಾರಂತೆ. ಅದಕ್ಕೆಂದು ಅವರಿಗೆ 13 ಲಕ್ಷ ರೂ. ಖರ್ಚಾಗಿದೆಯಂತೆ. ಹಾಗೆಯೇ ಸೌದಿ ಬಳಿ ಕೆಜಿಗಟ್ಟಲೆ ಚಿನ್ನಾಭರಣವಿದ್ದು, ಅದನ್ನೂ ಆಕೆ ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.

Continue Reading

ವೈರಲ್ ನ್ಯೂಸ್

Viral News : ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಸಿಕ್ಕಿತು ಹಾವು! ಹಲವು ಮಕ್ಕಳು ಅಸ್ವಸ್ಥ

ಸರ್ಕಾರಿ ಶಾಲೆಯಲ್ಲಿ ಕೊಡಲಾಗುವ ಬಿಸಿಯೂಟದಲ್ಲಿ ಹಾವು ಸಿಕ್ಕಿರುವ ಘಟನೆ ಬಿಹಾರದಲ್ಲಿ (Viral News) ನಡೆದಿದೆ. ಊಟ ಸೇವಿಸಿರುವ ಹಲವಾರು ಮಕ್ಕಳು ಅಸ್ವಸ್ಥರಾಗಿದ್ದಾರೆ.

VISTARANEWS.COM


on

Edited by

Snake Found In Mid Day Meal
Koo

ಪಾಟ್ನಾ: ಸರ್ಕಾರಿ ಶಾಲೆಯ ಮಕ್ಕಳಿಗೆಂದು ಸರ್ಕಾರ ಬಿಸಿಯೂಟ ಯೋಜನೆ ನಡೆಸುತ್ತಿದೆ. ಆದರೆ ಅದೇ ಊಟದಲ್ಲಿ ಹಾವು (Snake Found In Mid-Day Meal) ಸಿಕ್ಕಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಅಲ್ಲಿನ ಅರಾರಿಯಾ ಜಿಲ್ಲೆಯ ಫೋರ್ಬ್ಸ್‌ಗಂಜ್ ನಗರದಲ್ಲಿ ಈ ಘಟನೆ ನಡೆದಿದೆ. ಬಿಸಿಯೂಟ ಮಾಡಿರುವ ಅನೇಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸುದ್ದಿ ಈಗ ಭರ್ಜರಿ ವೈರಲ್ ((Viral News) ಆಗುತ್ತಿದೆ.

ಎನ್‌ಜಿಒ ಒಂದು ತಯಾರಿಸಿದ್ದ ಕಿಚಡಿಯನ್ನು ಶಾಲೆಯ ಮಕ್ಕಳಿಗೆ ಬಡಿಸಲಾಗಿತ್ತು. ಅದರಲ್ಲಿ ವಿದ್ಯಾರ್ಥಿಯೊಬ್ಬರಿಗೆ ಸತ್ತು ಬಿದ್ದಿರುವ ಹಾವು ಸಿಕ್ಕಿದೆ. ಅದು ಕಂಡೊಡನೆ ಗಾಬರಿಗೊಂಡ ಶಿಕ್ಷಕರು ಬಿಸಿಯೂಟ ಹಾಕುವುದನ್ನು ನಿಲ್ಲಿಸುವಂತೆ ತಿಳಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಹಲವು ಮಕ್ಕಳು ಊಟ ಮಾಡಿಬಿಟ್ಟಿದ್ದರು. ಅವರಿಗೆ ಕೆಲ ಸಮಯದಲ್ಲೇ ವಾಂತಿ ಸೇರಿ ಕೆಲವು ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಫೋರ್ಬ್ಸ್‌ಗಂಜ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

ಇದನ್ನೂ ಓದಿ: Viral Video: ಸಲ್ಮಾನ್ ಖಾನ್​ರನ್ನು ಮಾತಾಡಿಸಲು ಬಂದ ವಿಕ್ಕಿ ಕೌಶಲ್​​ಗೆ ಅವಮಾನ?-ಬಾಡಿಗಾರ್ಡ್ಸ್ ಮಾಡಿದ್ದೇನು?
ಶಾಲೆಯಲ್ಲಿ ಈ ರೀತಿಯ ಘಟನೆ ನಡೆದಿರುವುದು ತಿಳಿಯುತ್ತಿದ್ದಂತೆಯೇ ಎಸ್‌ಡಿಎಂ, ಎಸ್‌ಡಿಒ ಮತ್ತು ಡಿಎಸ್‌ಪಿ ಸೇರಿದಂತೆ ಅನೇಕ ಅಧಿಕಾರಿಗಳು ಶಾಲೆಗೆ ಹಾಗೂ ಅಸ್ವಸ್ಥ ವಿದ್ಯಾರ್ಥಿಗಳನ್ನು ದಾಖಲಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ಹೆಚ್ಚಿನ ವರದಿ ಇನ್ನೂ ಬರಬೇಕಿದೆ.

Continue Reading

ದೇಶ

96 ಸಾವಿರ ರೂ.ಮೌಲ್ಯದ ಮೊಬೈಲ್​ಗಾಗಿ 21 ಲಕ್ಷ ಲೀಟರ್​ ನೀರು ಖಾಲಿ ಮಾಡಿಸಿದ ಸರ್ಕಾರಿ ಅಧಿಕಾರಿ

ಸೋಮವಾರದಿಂದ ಶುರುವಾದ ನೀರು ಖಾಲಿ ಮಾಡುವ ಕಾರ್ಯ ಗುರುವಾರದವರೆಗೆ ಅಂದರೆ ಮೂರು ದಿನಗಳ ಕಾಲ ನಡೆಯಿತು. ನೀರು ಸಂಪೂರ್ಣವಾಗಿ ಖಾಲಿಯಾಗುವ ಹಂತದಲ್ಲಿ ಇದ್ದಾಗ ಅಲ್ಲಿಗೆ ಧಾವಿಸಿದ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ಸ್ವಲ್ಪ ಕಠಿಣವಾಗಿ ಬೈದು ಪಂಪ್​ಸೆಟ್​ಗಳನ್ನೆಲ್ಲ ಆಫ್ ಮಾಡಿಸಿದ್ದಾರೆ.

VISTARANEWS.COM


on

Edited by

21 lakh litres water pumped to Find officer smartphone
Koo

ಈಗಿನ ಕಾಲದಲ್ಲಿ ಮನುಷ್ಯನಿಗೆ ಮೊಬೈಲ್​​ನಷ್ಟು ‘ಅಮೂಲ್ಯ’ ವಸ್ತು ಇನ್ನೊಂದು ಇರಲಿಕ್ಕೆ ಇಲ್ಲ ಬಿಡಿ !. ಏನಿರತ್ತದೆಯೋ ಬಿಡುತ್ತದೆಯೋ ಕೈಯಲ್ಲಿ ಮೊಬೈಲ್​ ಅಂತೂ ಇರಲೇಬೇಕು. ಅದು ಕಳೆದು ಹೋದರೆ, ಕೆಟ್ಟು ಹೋದರೆ ಆಗುವ ಚಡಪಡಿಕೆ ಅಷ್ಟಿಷ್ಟಲ್ಲ. ಒಟ್ನಲ್ಲಿ ಮೊಬೈಲ್​ ಅನ್ನೋದು ಜೀವನದ ಬೇಸಿಕ್ ಅವಶ್ಯಕತೆ ಎಂಬಂತಾಗಿದೆ. ಅಂಥ ಅಮೂಲ್ಯವಾದ ಮೊಬೈಲ್​​ನ್ನು ಕಳೆದುಕೊಂಡ ಛತ್ತೀಸ್​ಗಢ ಸರ್ಕಾರಿ ಆಸ್ಪತ್ರೆ ಅಧಿಕಾರಿಯೊಬ್ಬ, ಜಲಾಶಯದಲ್ಲಿದ್ದ 21 ಲಕ್ಷ ಲೀಟರ್​ ನೀರನ್ನು ಖಾಲಿ ಮಾಡಿಸಿ (Drains 21 Lakh Litres Water), ಈಗ ಅಮಾನತುಗೊಂಡಿದ್ದಾರೆ !

ಛತ್ತೀಸ್​ಗಢ್​ನ ಕೋಯಾಲಿಬೇಡಾ ಬ್ಲಾಕ್​​ನ ಆಹಾರ ಅಧಿಕಾರಿ (Food Inspector) ರಾಜೇಶ್​ ವಿಶ್ವಾಸ್​ ಈಗ ತಮ್ಮ ಮೂರ್ಖತನದ ನಿರ್ಧಾರದಿಂದಾಗಿ ಅಮಾನತುಗೊಂಡಿದ್ದಾರೆ. ಇವರು ಭಾನುವಾರ ರಜಾದಿನ ಕಳೆಯಲು ಖೇರ್ಕಟ್ಟಾ ಪರಕೋಟ್ ಎಂಬ ಜಲಾಶಯದ ಬಳಿ, ಸ್ನೇಹಿತರೊಟ್ಟಿಗೆ ಹೋಗಿದ್ದರು. ಆಗ ಅವರ ಕೈಯಲ್ಲಿದ್ದ 96 ಸಾವಿರ ರೂಪಾಯಿ ಮೌಲ್ಯದ ಸ್ಯಾಮ್ಸಂಗ್​ ಎಸ್​23 ಮೊಬೈಲು ಜಲಾಶಯದ ನೀರಲ್ಲಿ, 15 ಅಡಿ ಆಳಕ್ಕೆ ಬಿದ್ದು ಹೋಯಿತು.

ಮೊಬೈಲ್​ ಬೀಳುತ್ತಿದ್ದಂತೆ ರಾಜೇಶ್ ವಿಶ್ವಾಸ್ ಗಾಬರಿಗೊಂಡರು. ಸ್ಥಳೀಯರು ಕೆಲವರು ಈಜು ಬರುವವರು ಜಲಾಶಯಕ್ಕೆ ಧುಮುಕಿ ಹುಡುಕಿದ್ದಾರೆ. ಆದರೆ ಎಷ್ಟೇ ಹುಡುಕಿದರೂ ಮೊಬೈಲ್​ ಸಿಗಲಿಲ್ಲ. 96 ಸಾವಿರ ಮೊಬೈಲ್​ ಅದು. ಹೀಗಾಗಿ ಅದನ್ನು ನೀರಿನಲ್ಲಿ ಬಿಟ್ಟು ಹೋಗಲೂ ರಾಜೇಶ್​ಗೆ ಇಷ್ಟವಿರಲಿಲ್ಲ. ಕೂಡಲೇ ನೀರಾವರಿ ಇಲಾಖೆ ಕಚೇರಿಗೆ ಭೇಟಿ ಕೊಟ್ಟು, ಮೊಬೈಲ್​ ಹೇಗೆ ಪಡೆಯಬಹುದು ಎಂಬ ಬಗ್ಗೆ ಚರ್ಚೆ ನಡೆಸಿದರು. ಜಲಾಶಯದ ನೀರು ಖಾಲಿ ಮಾಡಿಸಿಕೊಡುವಂತೆ ಮನವಿಯನ್ನೂ ಮಾಡಿದರು. ಆದರೆ ನೀರಾವರಿ ಇಲಾಖೆಯವರು ಈ ಸಮಸ್ಯೆ ಬಗ್ಗೆ ಏನೂ ಸ್ಪಂದಿಸಲಿಲ್ಲ. ಅದಾದ ಬಳಿಕ ರಾಜೇಶ್​ ವಿಶ್ವಾಸ್​ ಅವರೇ ಖುದ್ದಾಗಿ 30 ಎಚ್​​ಪಿ ಡೀಸೆಲ್ ಪಂಪ್​ಗಳನ್ನು ಜಲಾಶಯಕ್ಕೆ ತರಿಸಿ, ಅದರಲ್ಲಿದ್ದ ಅಷ್ಟೂ ನೀರನ್ನೂ ಖಾಲಿ ಮಾಡಿಸಿದ್ದಾರೆ.

ಇದನ್ನೂ ಓದಿ: Honnavara News: ಸಣ್ಣ ನೀರಾವರಿ ಇಲಾಖೆಯ ಭ್ರಷ್ಟಾಚಾರದಿಂದ ರೈತರಿಗೆ ಸಂಕಟ: ಅನಂತ ನಾಯ್ಕ ಆರೋಪ

ಸೋಮವಾರದಿಂದ ಶುರುವಾದ ನೀರು ಖಾಲಿ ಮಾಡುವ ಕಾರ್ಯ ಗುರುವಾರದವರೆಗೆ ಅಂದರೆ ಮೂರು ದಿನಗಳ ಕಾಲ ನಡೆಯಿತು. ನೀರು ಸಂಪೂರ್ಣವಾಗಿ ಖಾಲಿಯಾಗುವ ಹಂತದಲ್ಲಿ ಇದ್ದಾಗ ಅಲ್ಲಿಗೆ ಧಾವಿಸಿದ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ಸ್ವಲ್ಪ ಕಠಿಣವಾಗಿ ಬೈದು ಪಂಪ್​ಸೆಟ್​ಗಳನ್ನೆಲ್ಲ ಆಫ್ ಮಾಡಿಸಿದ್ದಾರೆ. ಅಷ್ಟರಲ್ಲಿ 21 ಲಕ್ಷ ಅಂದರೆ 41,104 ಕ್ಯೂಬಿಕ್ ಮೀಟರ್​ಗಳಷ್ಟು ನೀರು ಒಣ ಹೊಲಗಳಿಗೆ ಹರಿದುಹೋಗಿತ್ತು. ನೀರು ದುರ್ಬಳಕೆಯಾಗಿತ್ತು. ಇನ್ನು ಮೊಬೈಲ್ ಕೂಡ ಸಿಕ್ಕಿದೆ. ಆದರೆ ಪ್ರಯೋಜನವೇನು? ಮೂರು ದಿನ ನೀರಿನಲ್ಲಿಯೇ ಇದ್ದ 96ಸಾವಿರ ರೂ.ಮೌಲ್ಯದ ಮೊಬೈಲ್​ ಸಂಪೂರ್ಣ ಹಾಳಾಗಿದೆ. ಆದರೆ ಈ ಜಲಾಶಯದಿಂದ ಸುತ್ತಮುತ್ತ 1500 ಎಕರೆ ಕೃಷಿ ಭೂಮಿಗೆ ನೀರು ಸರಬರಾಜು ಆಗುತ್ತದೆ. ಆದರೆ ಒಂದು ಮೊಬೈಲ್​ಗಾಗಿ ಅಷ್ಟೂ ನೀರನ್ನು ವ್ಯರ್ಥ ಮಾಡಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಯಾವುದೇ ಮೊಬೈಲ್​ ಆದರೂ ನೀರಿನಲ್ಲಿ ಮುಳುಗಿ ಬಹುಕಾಲ ಇದ್ದರೆ ಅದು ಹಾಳಾಗುತ್ತದೆ ಎಂಬ ಕಾಮನ್​ ಸೆನ್ಸ್​ ಕೂಡ ಆ ಅಧಿಕಾರಿಗೆ ಇಲ್ಲವಲ್ಲ. ಅದಕ್ಕಾಗಿ ಇಷ್ಟು ನೀರನ್ನು ಖಾಲಿ ಮಾಡಿಸಬೇಕಿತ್ತಾ? ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮರ್ಥನೆ ಮಾಡಿಕೊಂಡ ಅಧಿಕಾರಿ?!
ಇಷ್ಟೆಲ್ಲ ಆದ ಮೇಲೆ ರಾಜೇಶ್ ವಿಶ್ವಾಸ್​ ಅವರು ತಮ್ಮ ಕೆಲಸವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಜಲಾಶಯದಲ್ಲಿ ಇದ್ದ ಆ ನೀರು ಕೃಷಿ ಭೂಮಿ ನೀರಾವರಿಗಾಗಿ ಇದ್ದಿದ್ದಲ್ಲ. ಅದು ತ್ಯಾಜ್ಯದ ನೀರಾಗಿತ್ತು. ಇನ್ನು ಮೊಬೈಲ್​ನಲ್ಲಿ ಮಹತ್ವದ ದಾಖಲೆಗಳು, ಅನೇಕರ ಸಂಪರ್ಕ ನಂಬರ್​ಗಳು ಇದ್ದವು. 3-4 ಅಡಿ ನೀರನ್ನು ಖಾಲಿ ಮಾಡಲು ಕಂಕೇರ್​ ನೀರಾವರಿ ಡಿಪಾರ್ಟ್​ಮೆಂಟ್​​ನ ಮುಖ್ಯಾಧಿಕಾರಿ ಅನುಮತಿ ಕೊಟ್ಟಿದ್ದರು. ಡೀಸೆಲ್ ಪಂಪ್​ನಿಂದ ನೀರು ಖಾಲಿ ಮಾಡಿದ್ದೇವೆ. ಇದಕ್ಕೆ 7000 ರೂ.-8000 ರೂ.ವರೆಗೆ ಖರ್ಚು ಆಗಿದೆ. ಯಾವುದೇ ರೈತರಿಗೂ ತೊಂದರೆಯಾಗಿಲ್ಲ ಎಂದಿದ್ದಾರೆ. ಆದರೆ ಈ ವಿಷಯ ಮಾಧ್ಯಮಗಳಲ್ಲಿ ದೊಡ್ಡದಾಗುತ್ತಿದ್ದಂತೆ ರಾಜೇಶ್ ವಿಶ್ವಾಸ್​ ಅಮಾನತುಗೊಂಡಿದ್ದಾರೆ.

Continue Reading
Advertisement
french open novak djokovic
ಕ್ರೀಡೆ6 mins ago

French Open 2023: ಇಂದಿನಿಂದ ಫ್ರೆಂಚ್‌ ಓಪನ್‌; ನಡಾಲ್‌ ದಾಖಲೆ ಮುರಿಯುವ ವಿಶ್ವಾಸದಲ್ಲಿ ಜೋಕೊ

Shah Rukh Khan And Akshay kumar Voice Over to New parliament building Video
ದೇಶ11 mins ago

ಪ್ರಧಾನಿ ಮೋದಿ ಮನವಿಗೆ ಸ್ಪಂದನೆ; ಸಂಸತ್​ ಭವನದ ವಿಡಿಯೊಕ್ಕೆ ಧ್ವನಿ ಕೊಟ್ಟ ಶಾರುಖ್​ ಖಾನ್​, ಅಕ್ಷಯ್​ ಕುಮಾರ್​

naresh and pavitra lokesh Live in Relationship
South Cinema22 mins ago

Telugu star Naresh: ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ನರೇಶ್‌, ಪವಿತ್ರಾ ಲೋಕೇಶ್‌ ಹೇಳಿದ್ದೇನು?

IIFA 2023 Winners Hrithik Roshan and anil Kapoor
South Cinema24 mins ago

IIFA 2023 Winners Full List: ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ; ವಿಜೇತರ ಪಟ್ಟಿ ಇಲ್ಲಿದೆ!

new Parliament building and coffin box
ದೇಶ28 mins ago

New Parliament Building: ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಪಕ್ಷ!

ipl records gill
ಕ್ರಿಕೆಟ್42 mins ago

IPL 2023: ಕೊಹ್ಲಿ ದಾಖಲೆ ಮುರಿಯುವರೇ ಶುಭಮನ್​ ಗಿಲ್​?

aditya ranjan ias
ಅಂಕಣ52 mins ago

ರಾಜ ಮಾರ್ಗ ಅಂಕಣ: ಆಧುನಿಕ ಅಂಗನವಾಡಿಗಳ ನಿರ್ಮಾಪಕ ಆದಿತ್ಯರಂಜನ್ IAS

New Parliament building inauguration Live Video Here
ದೇಶ1 hour ago

New Parliament Building: ನೂತನ ಸಂಸತ್​ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ

Tokyo Olympics Champion Risako Kawai
ಕ್ರೀಡೆ2 hours ago

Wrestlers Protest: ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಶ್ವ ಚಾಂಪಿಯನ್‌ ಕವಾಯ್

RTI Activist Harish Halli Died
ಕರ್ನಾಟಕ2 hours ago

ದಾವಣಗೆರೆಯಲ್ಲಿ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟ ಆರ್​ಟಿಐ ಕಾರ್ಯಕರ್ತ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Land Surveyor Recruitment
ಉದ್ಯೋಗ4 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

New Parliament building inauguration Live Video Here
ದೇಶ1 hour ago

New Parliament Building: ನೂತನ ಸಂಸತ್​ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ

horoscope today
ಪ್ರಮುಖ ಸುದ್ದಿ7 hours ago

Horoscope Today : ವಾರದ ರಜೆಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

Laxmi Hebbalkar oath taking as a minister
ಕರ್ನಾಟಕ18 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ2 days ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ2 days ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ2 days ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ3 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ3 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ4 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

ಟ್ರೆಂಡಿಂಗ್‌

error: Content is protected !!