ವೈರಲ್ ನ್ಯೂಸ್
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
ಇಂಥ ಹೊಸ ಮಾದರಿಯ, ವಿಭಿನ್ನ ಆಟೋದ ವಿಡಿಯೊ ಶೇರ್ ಆಗಿದ್ದು autorikshaw_kerala ಎಂಬ ಇನ್ಸ್ಟಾಗ್ರಾಂನಲ್ಲಿ. ಈಗಾಗಲೇ ಮಿಲಿಯನ್ಗಳಷ್ಟು ವೀವ್ಸ್ ಕಂಡಿದೆ. ಸಿಕ್ಕಾಪಟೆ ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಕಸದಿಂದ ರಸ ತಯಾರಿಸುವಲ್ಲಿ ನಾವು ಭಾರತೀಯರು ನಿಸ್ಸೀಮರು. ಹಳೇ ಯಾವುದೋ ವಸ್ತುವನ್ನು ಮಾರ್ಪಡಿಸಿ, ಬೇರೆ ಯಾವುದೋ ಕೆಲಸಕ್ಕೆ ಬಳಸಿಕೊಳ್ಳುವುದೆಲ್ಲ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಇಂಥ ಹತ್ತು ಹಲವು ಉದಾಹರಣೆಗಳನ್ನು ನಾವು ನೋಡುತ್ತಿರುತ್ತೇವೆ. ನೀವು ನಿಮ್ಮ ಮನೆಯಲ್ಲಿ ಇಂಥ ಪ್ರಯೋಗಗಳನ್ನೆಲ್ಲ ಮಾಡಿರಬಹುದಲ್ಲ..!
ಅಂಥದ್ದೇ ಒಂದು ಉದಾಹರಣೆ ಇಲ್ಲಿದೆ. ಈ ಆಟೋ ಚಾಲಕ ತನ್ನ ಆಟೋವನ್ನು ರೋಲ್ಸ್-ರಾಯ್ಸ್ ಕಾರಿನಂತೆ ಮಾಡಿದ್ದಾನೆ. ಇಡೀ ಆಟೋಕ್ಕೆ ಗುಲಾಬಿ ಬಣ್ಣದ ಪೇಂಟಿಂಗ್ ಮಾಡಿರುವ ಆತ ಐಷಾರಾಮಿ ಸೀಟುಗಳನ್ನು ಹಾಕಿದ್ದಾನೆ. ಅದೂ ಕೂಡ ಬಿಳಿ-ಗುಲಾಬಿ ಮಿಶ್ರಿತ ಸೀಟ್. ನೋಡಲು ಸಿಕ್ಕಾಪಟೆ ಚೆಂದವಾಗಿದೆ. ಅದೆಲ್ಲದರ ಜತೆ ಆಟೋದ ಬಗ್ಗೆ ವಿಶೇಷವಾಗಿ ಗಮನಸೆಳೆಯುವುದು ಅದರ ಮೇಲ್ಭಾಗ. ನೀವು ರೋಲ್ಸ್ ರಾಯ್ಸ್ ಕಾರನ್ನು ನೋಡಿದ್ದೀರಲ್ಲ. ಅದರಲ್ಲಿ ಮೇಲ್ಮುಚ್ಚು ಇಲ್ಲದಿರುವ ಕಾರುಗಳೂ ಇವೆ. ಇನ್ನು ಕೆಲವು ಆಧುನಿಕ ಕಾರುಗಳಿಗೆ ಒಂದು ಬಟನ್ ಒತ್ತಿದರೆ ಸಾಕು, ಕಾರಿನ ರೂಫ್ ತೆರೆದುಕೊಳ್ಳುವ ಆಯ್ಕೆ ಇರುತ್ತದೆ. ಈಗ ಈ ಚಾಲಕ ತನ್ನ ಆಟೋವನ್ನೂ ಹೀಗೆ ಮಾರ್ಪಾಡು ಮಾಡಿದ್ದಾನೆ. ಆಟೋದ ಸ್ಟೀರಿಂಗ್ ಬಳಿ ಇರುವ ಬಟನ್ ಒತ್ತಿದರೆ, ಆ ಆಟೋದ ಮೇಲ್ಭಾಗ ತೆರೆದುಕೊಳ್ಳುವುದನ್ನು ವಿಡಿಯೊದಲ್ಲಿ ನೋಡಬಹುದು.
ಇಂಥ ಹೊಸ ಮಾದರಿಯ, ವಿಭಿನ್ನ ಆಟೋದ ವಿಡಿಯೊ ಶೇರ್ ಆಗಿದ್ದು autorikshaw_kerala ಎಂಬ ಇನ್ಸ್ಟಾಗ್ರಾಂನಲ್ಲಿ. ಈಗಾಗಲೇ ಮಿಲಿಯನ್ಗಳಷ್ಟು ವೀವ್ಸ್ ಕಂಡಿದೆ. ಸಿಕ್ಕಾಪಟೆ ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಇದನ್ನು ರೋಲ್ಸ್ ರಾಯ್ಸ್ ಆಫ್ ಆಟೋ ಎನ್ನುತ್ತಿದ್ದಾರೆ. ಇನ್ನೂ ಕೆಲವರು, ಇದು ನಿಜಕ್ಕೂ ಜೋಕ್ ಎನ್ನುತ್ತಿದ್ದಾರೆ. ಹಾಗೇ, ಕಾರಿನ ಸೌಂದರ್ಯಕ್ಕೆ ಹಲವರು ಮಾರುಹೋಗಿದ್ದಾರೆ.
ಇದನ್ನೂ ಓದಿ: Viral Video : ಒಡೆದ ಮೊಟ್ಟೆಯಲ್ಲೇ ಮರಿ ಮಾಡಿಸಿದ ವ್ಯಕ್ತಿ! ಅಬ್ಬಬ್ಬಾ ಎನ್ನುವಂತಿದೆ ಈ ವಿಡಿಯೊ ನೋಡಿ
ಹೀಗೆ ಮಾರ್ಪಾಡಿತ ಆಟೋ ರಿಕ್ಷಾಗಳ ವಿಡಿಯೊ ವೈರಲ್ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಉದ್ಯಮಿ ಹರ್ಷ ಗೋಯೆಂಕಾ ಅವರು, ಐಷಾರಾಮಿ ಕಾರಿನ ಮಾದರಿಯಲ್ಲೇ ರೂಪಿಸಲಾಗಿದ್ದ ಆಟೋ ರಿಕ್ಷಾವೊಂದರ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದರು. ಹಾಗೇ, ಕಳೆದ ವರ್ಷ ದೆಹಲಿಯಲ್ಲಿ ಒಬ್ಬ ಚಾಲಕ ತಮ್ಮ ಆಟೋದ ಮೇಲ್ಭಾಗದಲ್ಲಿ ಸಣ್ಣ ಉದ್ಯಾನವನವನ್ನೇ ಸೃಷ್ಟಿಸಿಕೊಂಡಿದ್ದು ಸುದ್ದಿಯಾಗಿತ್ತು. ಸೆಖೆಯಿಂದ ಪಾರಾಗಲು ಅವರು ಹೀಗೆ ಮಾಡಿದ್ದರು.
ವೈರಲ್ ನ್ಯೂಸ್
Viral Post: ಸಾಮಾಜಿಕ ಜಾಲತಾಣದಲ್ಲಿ ಕೋಟಿಗಟ್ಟಲೆ ದುಡಿಯುವ ನಾಯಿಯಿದು!
ಗೋಲ್ಡನ್ ರಿಟ್ರೀವರ್ ತಳಿಯ ನಾಯಿಯೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ಸೆಲೆಬ್ರಿಟಿ. ಇದು ವರ್ಷಕ್ಕೆ ಒಂದು ಮಿಲಿಯನ್ ಡಾಲರ್ಗೂ ಅಧಿಕ ಹಣ ಸಂಪಾದಿಸುತ್ತಿದೆಯಂತೆ.
ಸಾಮಾಜಿಕ ಜಾಲತಾಣಗಳು ಬಂದ ಮೇಲೆ, ಇನ್ಫ್ಲುಯೆಂಜರ್ಗಳ ಜೀವನದ ಬಗೆಗೆ ಸಾಕಷ್ಟು ಚರ್ಚೆಗಳಾಗಿವೆ. ಇನ್ಸ್ಟಾಗ್ರಾಂನಂತಹ ಜಾಲತಾಣದಲ್ಲಿ ಇನ್ಫ್ಲುಯೆಂಜರ್ಗಳು ಎಷ್ಟು ದುಡ್ಡು ಸಂಪಾದಿಸಬಹುದು ಎಂಬ ಬಗ್ಗೆ ಸದಾ ಎಲ್ಲರಿಗೂ ಕುತೂಹಲ. ʻಇದರಲ್ಲಿ ಸಾಕಷ್ಟು ದುಡ್ಡು ಮಾಡಬಹುದು, ಕೋಟಿಗಟ್ಟಲೆ ದುಡ್ಡು ಸಂಪಾದಿಸಬಹುದುʼ ಎಂಬ ನಂಬಿಕೆಯೇ ಲಕ್ಷಾಂತರ ಯುವಮಂದಿಯನ್ನು ಇದು ತನ್ನತ್ತ ಸೆಳೆದಿದೆ. ಅಷ್ಟೇ ಅಲ್ಲ, ಈ ಮೂಲಕ ಹಣವನ್ನೂ ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ ಕೂಡಾ.
ಆದರೆ, ನಾಯಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುತ್ತಿರುವುದು ಗೊತ್ತೇ? ನಾಯಿ ಸಾಕುವುದಕ್ಕೇ ಸಾಕಷ್ಟು ದುಡ್ಡು ಬೇಕು, ಆದರೆ, ನಾಯಿ ಹೇಗೆ ಸಂಪಾದಿಸೀತು ಎನ್ನುತ್ತೀರಾ? ಹಾಗಾದರೆ ಇಲ್ಲಿ ಕೇಳಿ. ಗೋಲ್ಡನ್ ರಿಟ್ರೀವರ್ ತಳಿಯ ನಾಯಿಯೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ಸೆಲೆಬ್ರಿಟಿ. ಇದು ವರ್ಷಕ್ಕೆ ಒಂದು ಮಿಲಿಯನ್ ಡಾಲರ್ಗೂ ಅಧಿಕ ಹಣ ಸಂಪಾದಿಸುತ್ತಿದೆಯಂತೆ. ಅಂದರೆ ವರ್ಷಕ್ಕೆ ಸುಮಾರು ಎಂಟುಕಾಲು ಕೋಟಿಗಳಷ್ಟು ಹಣ ವರ್ಷಕ್ಕೆ ಸಂಪಾದನೆ ಮಾಡುತ್ತಿದೆ.
ಪ್ರಿಂಟೆಡ್ ಪೆಟ್ ಮೆಮೊರೀಸ್ ಎಂಬ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಟಕ್ಕರ್ ಬುಡ್ಜಿನ್ ಹೆಸರಿನ ಗೋಲ್ಡನ್ ರಿಟ್ರೀವರ್ ನಾಯಿ ವಿಶ್ವದ ಸಾಮಾಜಿಕ ಜಾಲತಾಣದಲ್ಲಿ ನಂಬರ್ ವನ್ ಸ್ಥಾನದಲ್ಲಿದೆಯಂತೆ. ಇದು ಸಾಕಷ್ಟು ಜಾಹಿರಾತುಗಳನ್ನೂ ನೀಡುವ ಮೂಲಕ ವರ್ಷಕ್ಕೆ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದೆಯಂತೆ. ಇನ್ಸ್ಟಾಗ್ರಾಂನಲ್ಲಿ ಮೂರರಿಂದ ಎಂಟು ಪೋಸ್ಟ್ಗಳಿಗೆ 20,000 ಡಾಲರ್ ಹಣವನ್ನು ಸಂಪಾದಿಸುತ್ತದೆಯಂತೆ. ೩೦ ನಿಮಿಷಗಳ ಯುಟ್ಯೂಬ್ ವಿಡಿಯೋಗೆ 40,000ದಿಂದ 60,000 ಡಾಲರ್ ಹಣ ಸಂಪಾದಿಸುತ್ತಿದೆಯಂತೆ.
ಟಕ್ಕರ್ನ ಯಜಮಾನಿ ಕೋರ್ಟ್ನಿ ಬುಡ್ಝಿನ್ ಹೇಳುವ ಪ್ರಕಾರ, 2018ರಲ್ಲಿ ಎಂಟು ವಾರಗಳಷ್ಟು ಪುಟಾಣಿಯಾಗಿದ್ದ ಈ ನಾಯಿಯನ್ನು ಮನೆಗೆ ತಂದ ಮೇಲೆ ಅವರು ಮತ್ತೆ ಹಿಂತಿರುಗಿ ನೋಡಿಲ್ಲವಂತೆ. ಮೊದಲ ವಿಡಿಯೋ ವೈರಲ್ ಆದ ಮೇಲೆ ಈ ನಾಯಿ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿ ಬಿಟ್ಟಿತು. ನಾಯಿಯ ಜನಪ್ರಿಯತೆ ಎಷ್ಟಾಯಿತು ಎಂದರೆ, ಇದರ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡಲು ಹಾಗೂ ನಾಯಿಯನ್ನು ನೋಡಿಕೊಳ್ಳಲೆಂದೇ ಬುಡಜಿನ್ ಅವರ ಗಂಡ ಮೈಕ್ ತನ್ನ ವೃತ್ತಿಯನ್ನು ತೊರೆದು ಪೂರ್ಣಾವಧಿ ಕಾಲ ನಾಯಿಯ ಜೊತೆಗೇ ಸಮಯ ಕಳೆಯುತ್ತಿದ್ದಾರಂತೆ.
ಕೇವಲ ಆರು ತಿಂಗಳಾದಾಗ ಈ ಟಕ್ಕರ್ಗೆ 60 ಸಾವಿರ ಫಾಲೋವರ್ಗಳಾದರಂತೆ. ನಂತರ ದಿನೇ ದಿನೇ ಫಾಲೋವರ್ಗಳ ಸಂಖ್ಯೆ ಏರುತ್ತಾ ಸಾಗಿದ್ದು ಸದ್ಯ 25 ಮಿಲಿಯನ್ಗೂ ಹೆಚ್ಚು ಫಾಲೋವರ್ಗಳು ಇದ್ದಾರೆ. ಟಿಕ್ಟಾಕ್, ಯುಟ್ಯೂಬ್, ಫೇಸ್ಬುಕ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣದಲ್ಲೂ ಮಿಲಿಯಗಟ್ಟಲೆಫಾಲೋವರ್ಗಳನ್ನು ಸಂಪಾದಿಸಿ ನಂಬರ್ 1 ಪೆಟ್ ಸೆಲೆಬ್ರಿಟಿಯಾಗಿ ಟಕ್ಕರ್ ಮಿಂಚುತ್ತಿದ್ದಾನೆ.
ಒಟ್ಟಾರೆ ಈಗ ನಾಯಿಯೇ ಸದ್ಯಕ್ಕೆ ಈ ಮನೆಯ ಯಜಮಾನ. ನಾಯಿಯೇ ಈ ಮನೆಮಂದಿಯ ಹೊಟ್ಟೆ ಹೊರೆತ್ತಿದೆ ಎಂದರೂ ತಪ್ಪಲ್ಲ. ಯಾರಿಗುಂಟು ಯಾರಿಗಿಲ್ಲ!
ಇದನ್ನೂ ಓದಿ: Viral Post: ಹವ್ಯಾಸವೇ ವೃತ್ತಿ: ಕೆಲಸಕ್ಕೆ ಗುಡ್ಬೈ ಹೇಳಿ ತಿರುಗಾಟವೇ ಕೆಲಸ!
ವೈರಲ್ ನ್ಯೂಸ್
Viral News : ನಿತ್ಯ ಶಾಪಿಂಗ್ಗೆಂದೇ 70 ಲಕ್ಷ ರೂ. ಖರ್ಚು ಮಾಡುತ್ತಾಳಂತೆ ಈ ಮಹಿಳೆ!
ದುಬೈನಲ್ಲಿ ಸೌದಿ ಹೆಸರಿನ ಮಹಿಳೆ ತಾನು ಒಮ್ಮೆ ಶಾಪಿಂಗ್ಗೆ ಹೋದರೆ 70 ಲಕ್ಷ ರೂ.ವರೆಗೆ ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆಕೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು (Viral News) ಮಾಡುತ್ತಿವೆ.
ದುಬೈ: ಶಾಪಿಂಗ್ ಎಂದರೆ ಹೆಣ್ಣು ಮಕ್ಕಳಿಗೆ ಪ್ರೀತಿ. ಒಮ್ಮೆ ಶಾಪಿಂಗ್ ಹೋದರೆ ದುಡ್ಡಿನ ಲೆಕ್ಕಾಚಾರ ಮರೆತೇ ಹೋಗುವಂತೆ ಶಾಪಿಂಗ್ ಮಾಡಿಬಿಡುತ್ತಾರೆ. ಆದರೆ ಈ ಮಹಿಳೆಯ ಕಥೆ ಕೇಳಿಬಿಟ್ಟರೆ ಎಲ್ಲೆ ಮೀರಿ ಖರ್ಚು ಮಾಡುವ ಹೆಣ್ಣು ಮಕ್ಕಳೂ ಕೂಡ ಬಾಯಿ ಮೇಲೆ ಬೆರಳಿಡುತ್ತಾರೆ. ಏಕೆಂದರೆ ಈ ಮಹಿಳೆ ಒಮ್ಮೆ ಶಾಪಿಂಗ್ಗೆಂದು ಹೋದರೆ ಖರ್ಚು ಮಾಡುವುದು ಬರೋಬ್ಬರಿ 70 ಲಕ್ಷ ರೂ. (Viral News) ಅಂತೆ!
ಹೌದು ದುಬೈನ ಇನ್ಫ್ಲೂಯೆನ್ಸರ್ ಆಗಿರುವ ಸೌದಿ ಈ ರೀತಿಯಲ್ಲಿ ಹೇಳಿಕೊಂಡಿದ್ದಾಳೆ. ಆಕೆಯ ಗಂಡ ಜಮಾಲ್ ದುಬೈನ ಶ್ರೀಮಂತರಲ್ಲಿ ಒಬ್ಬನಂತೆ. ಹಾಗಾಗಿ ಆಕೆ ಒಮ್ಮೆ ಶಾಪಿಂಗ್ಗೆಂದು ಹೋದರೆ 70 ಲಕ್ಷ ರೂ.ವರೆಗೂ ಖರ್ಚು ಮಾಡಿ ಬರುತ್ತಾಳಂತೆ. ಅಂದ ಹಾಗೆ ಆಕೆ ಮಾಮೂಲಿ ವಸ್ತುಗಳನ್ನು ಮುಟ್ಟುವುದೇ ಇಲ್ಲವಂತೆ. ಆಕೆ ಬಳಸುವ ಪ್ರತಿ ವಸ್ತುವೂ ಬ್ರ್ಯಾಂಡೆಡ್ ವಸ್ತುವಂತೆ.
ಇದನ್ನೂ ಓದಿ: Viral News : ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಸಿಕ್ಕಿತು ಹಾವು! ಹಲವು ಮಕ್ಕಳು ಅಸ್ವಸ್ಥ
ಈ ಸೌದಿ ಟಿಕ್ಟಾಕ್ನಲ್ಲಿ ತನ್ನ ಬಗ್ಗೆ ಸಾಕಷ್ಟು ವಿಡಿಯೊಗಳನ್ನು ಮಾಡಿ ಬಿಟ್ಟಿದ್ದಾಳೆ. ಪ್ರತಿ ದಿನ ರಾತ್ರಿ ಆಕೆಯ ಪತಿ ಆಕೆಗೆ ಸರ್ಪೈಸ್ ಕೊಟ್ಟೇ ಮಲಗಿಸುವುದಂತೆ. ಹಾಗೆಯೇ ಒಮ್ಮೊಮ್ಮೆ ಲಕ್ಷಗಟ್ಟಲೆ ಹಣ ಕೊಟ್ಟು ಪೂರ್ತಿ ರೆಸ್ಟೋರೆಂಟ್ ಅನ್ನೇ ಬುಕ್ ಮಾಡಿಬಿಡುತ್ತಾನಂತೆ. ಆ ದಿನಕ್ಕೆ ಯಾವ ಬಟ್ಟೆ ಹಾಕಬೇಕು ಎಂದು ನಿರ್ಧರಿಸಿ ಅದನ್ನು ಕಳುಹಿಸಿಕೊಟ್ಟು ರೆಡಿಯಾಗುವುದಕ್ಕೆ ಹೇಳುತ್ತಾನಂತೆ.
ಈ ಜೋಡಿ ಈಗಾಗಲೇ ಸಾಕಷ್ಟು ದೇಶಗಳನ್ನು ಪ್ರವಾಸ ಮಾಡಿದೆಯಂತೆ. ಮೂರ್ನಾಲ್ಕು ತಿಂಗಳಿಗೆ ಒಮ್ಮೆಯಾದರೂ ಲಂಡನ್ಗೆ ಹೋಗುತ್ತಿರುತ್ತಾರಂತೆ. ಎಲ್ಲಿಗೇ ಹೋದರೂ ಲಕ್ಷಗಟ್ಟಲೆ ಹಣ ಖರ್ಚಾಗುತ್ತದೆಯಂತೆ. ಇತ್ತೀಚೆಗೆ ಮಾಲ್ಡೀವ್ಸ್ ಪ್ರಯಾಣ ಮಾಡಿದ್ದಾರಂತೆ. ಅದಕ್ಕೆಂದು ಅವರಿಗೆ 13 ಲಕ್ಷ ರೂ. ಖರ್ಚಾಗಿದೆಯಂತೆ. ಹಾಗೆಯೇ ಸೌದಿ ಬಳಿ ಕೆಜಿಗಟ್ಟಲೆ ಚಿನ್ನಾಭರಣವಿದ್ದು, ಅದನ್ನೂ ಆಕೆ ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.
ವೈರಲ್ ನ್ಯೂಸ್
Viral News : ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಸಿಕ್ಕಿತು ಹಾವು! ಹಲವು ಮಕ್ಕಳು ಅಸ್ವಸ್ಥ
ಸರ್ಕಾರಿ ಶಾಲೆಯಲ್ಲಿ ಕೊಡಲಾಗುವ ಬಿಸಿಯೂಟದಲ್ಲಿ ಹಾವು ಸಿಕ್ಕಿರುವ ಘಟನೆ ಬಿಹಾರದಲ್ಲಿ (Viral News) ನಡೆದಿದೆ. ಊಟ ಸೇವಿಸಿರುವ ಹಲವಾರು ಮಕ್ಕಳು ಅಸ್ವಸ್ಥರಾಗಿದ್ದಾರೆ.
ಪಾಟ್ನಾ: ಸರ್ಕಾರಿ ಶಾಲೆಯ ಮಕ್ಕಳಿಗೆಂದು ಸರ್ಕಾರ ಬಿಸಿಯೂಟ ಯೋಜನೆ ನಡೆಸುತ್ತಿದೆ. ಆದರೆ ಅದೇ ಊಟದಲ್ಲಿ ಹಾವು (Snake Found In Mid-Day Meal) ಸಿಕ್ಕಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಅಲ್ಲಿನ ಅರಾರಿಯಾ ಜಿಲ್ಲೆಯ ಫೋರ್ಬ್ಸ್ಗಂಜ್ ನಗರದಲ್ಲಿ ಈ ಘಟನೆ ನಡೆದಿದೆ. ಬಿಸಿಯೂಟ ಮಾಡಿರುವ ಅನೇಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸುದ್ದಿ ಈಗ ಭರ್ಜರಿ ವೈರಲ್ ((Viral News) ಆಗುತ್ತಿದೆ.
ಎನ್ಜಿಒ ಒಂದು ತಯಾರಿಸಿದ್ದ ಕಿಚಡಿಯನ್ನು ಶಾಲೆಯ ಮಕ್ಕಳಿಗೆ ಬಡಿಸಲಾಗಿತ್ತು. ಅದರಲ್ಲಿ ವಿದ್ಯಾರ್ಥಿಯೊಬ್ಬರಿಗೆ ಸತ್ತು ಬಿದ್ದಿರುವ ಹಾವು ಸಿಕ್ಕಿದೆ. ಅದು ಕಂಡೊಡನೆ ಗಾಬರಿಗೊಂಡ ಶಿಕ್ಷಕರು ಬಿಸಿಯೂಟ ಹಾಕುವುದನ್ನು ನಿಲ್ಲಿಸುವಂತೆ ತಿಳಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಹಲವು ಮಕ್ಕಳು ಊಟ ಮಾಡಿಬಿಟ್ಟಿದ್ದರು. ಅವರಿಗೆ ಕೆಲ ಸಮಯದಲ್ಲೇ ವಾಂತಿ ಸೇರಿ ಕೆಲವು ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಫೋರ್ಬ್ಸ್ಗಂಜ್ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.
ಇದನ್ನೂ ಓದಿ: Viral Video: ಸಲ್ಮಾನ್ ಖಾನ್ರನ್ನು ಮಾತಾಡಿಸಲು ಬಂದ ವಿಕ್ಕಿ ಕೌಶಲ್ಗೆ ಅವಮಾನ?-ಬಾಡಿಗಾರ್ಡ್ಸ್ ಮಾಡಿದ್ದೇನು?
ಶಾಲೆಯಲ್ಲಿ ಈ ರೀತಿಯ ಘಟನೆ ನಡೆದಿರುವುದು ತಿಳಿಯುತ್ತಿದ್ದಂತೆಯೇ ಎಸ್ಡಿಎಂ, ಎಸ್ಡಿಒ ಮತ್ತು ಡಿಎಸ್ಪಿ ಸೇರಿದಂತೆ ಅನೇಕ ಅಧಿಕಾರಿಗಳು ಶಾಲೆಗೆ ಹಾಗೂ ಅಸ್ವಸ್ಥ ವಿದ್ಯಾರ್ಥಿಗಳನ್ನು ದಾಖಲಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ಹೆಚ್ಚಿನ ವರದಿ ಇನ್ನೂ ಬರಬೇಕಿದೆ.
ದೇಶ
96 ಸಾವಿರ ರೂ.ಮೌಲ್ಯದ ಮೊಬೈಲ್ಗಾಗಿ 21 ಲಕ್ಷ ಲೀಟರ್ ನೀರು ಖಾಲಿ ಮಾಡಿಸಿದ ಸರ್ಕಾರಿ ಅಧಿಕಾರಿ
ಸೋಮವಾರದಿಂದ ಶುರುವಾದ ನೀರು ಖಾಲಿ ಮಾಡುವ ಕಾರ್ಯ ಗುರುವಾರದವರೆಗೆ ಅಂದರೆ ಮೂರು ದಿನಗಳ ಕಾಲ ನಡೆಯಿತು. ನೀರು ಸಂಪೂರ್ಣವಾಗಿ ಖಾಲಿಯಾಗುವ ಹಂತದಲ್ಲಿ ಇದ್ದಾಗ ಅಲ್ಲಿಗೆ ಧಾವಿಸಿದ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ಸ್ವಲ್ಪ ಕಠಿಣವಾಗಿ ಬೈದು ಪಂಪ್ಸೆಟ್ಗಳನ್ನೆಲ್ಲ ಆಫ್ ಮಾಡಿಸಿದ್ದಾರೆ.
ಈಗಿನ ಕಾಲದಲ್ಲಿ ಮನುಷ್ಯನಿಗೆ ಮೊಬೈಲ್ನಷ್ಟು ‘ಅಮೂಲ್ಯ’ ವಸ್ತು ಇನ್ನೊಂದು ಇರಲಿಕ್ಕೆ ಇಲ್ಲ ಬಿಡಿ !. ಏನಿರತ್ತದೆಯೋ ಬಿಡುತ್ತದೆಯೋ ಕೈಯಲ್ಲಿ ಮೊಬೈಲ್ ಅಂತೂ ಇರಲೇಬೇಕು. ಅದು ಕಳೆದು ಹೋದರೆ, ಕೆಟ್ಟು ಹೋದರೆ ಆಗುವ ಚಡಪಡಿಕೆ ಅಷ್ಟಿಷ್ಟಲ್ಲ. ಒಟ್ನಲ್ಲಿ ಮೊಬೈಲ್ ಅನ್ನೋದು ಜೀವನದ ಬೇಸಿಕ್ ಅವಶ್ಯಕತೆ ಎಂಬಂತಾಗಿದೆ. ಅಂಥ ಅಮೂಲ್ಯವಾದ ಮೊಬೈಲ್ನ್ನು ಕಳೆದುಕೊಂಡ ಛತ್ತೀಸ್ಗಢ ಸರ್ಕಾರಿ ಆಸ್ಪತ್ರೆ ಅಧಿಕಾರಿಯೊಬ್ಬ, ಜಲಾಶಯದಲ್ಲಿದ್ದ 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿ (Drains 21 Lakh Litres Water), ಈಗ ಅಮಾನತುಗೊಂಡಿದ್ದಾರೆ !
ಛತ್ತೀಸ್ಗಢ್ನ ಕೋಯಾಲಿಬೇಡಾ ಬ್ಲಾಕ್ನ ಆಹಾರ ಅಧಿಕಾರಿ (Food Inspector) ರಾಜೇಶ್ ವಿಶ್ವಾಸ್ ಈಗ ತಮ್ಮ ಮೂರ್ಖತನದ ನಿರ್ಧಾರದಿಂದಾಗಿ ಅಮಾನತುಗೊಂಡಿದ್ದಾರೆ. ಇವರು ಭಾನುವಾರ ರಜಾದಿನ ಕಳೆಯಲು ಖೇರ್ಕಟ್ಟಾ ಪರಕೋಟ್ ಎಂಬ ಜಲಾಶಯದ ಬಳಿ, ಸ್ನೇಹಿತರೊಟ್ಟಿಗೆ ಹೋಗಿದ್ದರು. ಆಗ ಅವರ ಕೈಯಲ್ಲಿದ್ದ 96 ಸಾವಿರ ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಎಸ್23 ಮೊಬೈಲು ಜಲಾಶಯದ ನೀರಲ್ಲಿ, 15 ಅಡಿ ಆಳಕ್ಕೆ ಬಿದ್ದು ಹೋಯಿತು.
ಮೊಬೈಲ್ ಬೀಳುತ್ತಿದ್ದಂತೆ ರಾಜೇಶ್ ವಿಶ್ವಾಸ್ ಗಾಬರಿಗೊಂಡರು. ಸ್ಥಳೀಯರು ಕೆಲವರು ಈಜು ಬರುವವರು ಜಲಾಶಯಕ್ಕೆ ಧುಮುಕಿ ಹುಡುಕಿದ್ದಾರೆ. ಆದರೆ ಎಷ್ಟೇ ಹುಡುಕಿದರೂ ಮೊಬೈಲ್ ಸಿಗಲಿಲ್ಲ. 96 ಸಾವಿರ ಮೊಬೈಲ್ ಅದು. ಹೀಗಾಗಿ ಅದನ್ನು ನೀರಿನಲ್ಲಿ ಬಿಟ್ಟು ಹೋಗಲೂ ರಾಜೇಶ್ಗೆ ಇಷ್ಟವಿರಲಿಲ್ಲ. ಕೂಡಲೇ ನೀರಾವರಿ ಇಲಾಖೆ ಕಚೇರಿಗೆ ಭೇಟಿ ಕೊಟ್ಟು, ಮೊಬೈಲ್ ಹೇಗೆ ಪಡೆಯಬಹುದು ಎಂಬ ಬಗ್ಗೆ ಚರ್ಚೆ ನಡೆಸಿದರು. ಜಲಾಶಯದ ನೀರು ಖಾಲಿ ಮಾಡಿಸಿಕೊಡುವಂತೆ ಮನವಿಯನ್ನೂ ಮಾಡಿದರು. ಆದರೆ ನೀರಾವರಿ ಇಲಾಖೆಯವರು ಈ ಸಮಸ್ಯೆ ಬಗ್ಗೆ ಏನೂ ಸ್ಪಂದಿಸಲಿಲ್ಲ. ಅದಾದ ಬಳಿಕ ರಾಜೇಶ್ ವಿಶ್ವಾಸ್ ಅವರೇ ಖುದ್ದಾಗಿ 30 ಎಚ್ಪಿ ಡೀಸೆಲ್ ಪಂಪ್ಗಳನ್ನು ಜಲಾಶಯಕ್ಕೆ ತರಿಸಿ, ಅದರಲ್ಲಿದ್ದ ಅಷ್ಟೂ ನೀರನ್ನೂ ಖಾಲಿ ಮಾಡಿಸಿದ್ದಾರೆ.
ಇದನ್ನೂ ಓದಿ: Honnavara News: ಸಣ್ಣ ನೀರಾವರಿ ಇಲಾಖೆಯ ಭ್ರಷ್ಟಾಚಾರದಿಂದ ರೈತರಿಗೆ ಸಂಕಟ: ಅನಂತ ನಾಯ್ಕ ಆರೋಪ
ಸೋಮವಾರದಿಂದ ಶುರುವಾದ ನೀರು ಖಾಲಿ ಮಾಡುವ ಕಾರ್ಯ ಗುರುವಾರದವರೆಗೆ ಅಂದರೆ ಮೂರು ದಿನಗಳ ಕಾಲ ನಡೆಯಿತು. ನೀರು ಸಂಪೂರ್ಣವಾಗಿ ಖಾಲಿಯಾಗುವ ಹಂತದಲ್ಲಿ ಇದ್ದಾಗ ಅಲ್ಲಿಗೆ ಧಾವಿಸಿದ ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ಸ್ವಲ್ಪ ಕಠಿಣವಾಗಿ ಬೈದು ಪಂಪ್ಸೆಟ್ಗಳನ್ನೆಲ್ಲ ಆಫ್ ಮಾಡಿಸಿದ್ದಾರೆ. ಅಷ್ಟರಲ್ಲಿ 21 ಲಕ್ಷ ಅಂದರೆ 41,104 ಕ್ಯೂಬಿಕ್ ಮೀಟರ್ಗಳಷ್ಟು ನೀರು ಒಣ ಹೊಲಗಳಿಗೆ ಹರಿದುಹೋಗಿತ್ತು. ನೀರು ದುರ್ಬಳಕೆಯಾಗಿತ್ತು. ಇನ್ನು ಮೊಬೈಲ್ ಕೂಡ ಸಿಕ್ಕಿದೆ. ಆದರೆ ಪ್ರಯೋಜನವೇನು? ಮೂರು ದಿನ ನೀರಿನಲ್ಲಿಯೇ ಇದ್ದ 96ಸಾವಿರ ರೂ.ಮೌಲ್ಯದ ಮೊಬೈಲ್ ಸಂಪೂರ್ಣ ಹಾಳಾಗಿದೆ. ಆದರೆ ಈ ಜಲಾಶಯದಿಂದ ಸುತ್ತಮುತ್ತ 1500 ಎಕರೆ ಕೃಷಿ ಭೂಮಿಗೆ ನೀರು ಸರಬರಾಜು ಆಗುತ್ತದೆ. ಆದರೆ ಒಂದು ಮೊಬೈಲ್ಗಾಗಿ ಅಷ್ಟೂ ನೀರನ್ನು ವ್ಯರ್ಥ ಮಾಡಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಯಾವುದೇ ಮೊಬೈಲ್ ಆದರೂ ನೀರಿನಲ್ಲಿ ಮುಳುಗಿ ಬಹುಕಾಲ ಇದ್ದರೆ ಅದು ಹಾಳಾಗುತ್ತದೆ ಎಂಬ ಕಾಮನ್ ಸೆನ್ಸ್ ಕೂಡ ಆ ಅಧಿಕಾರಿಗೆ ಇಲ್ಲವಲ್ಲ. ಅದಕ್ಕಾಗಿ ಇಷ್ಟು ನೀರನ್ನು ಖಾಲಿ ಮಾಡಿಸಬೇಕಿತ್ತಾ? ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮರ್ಥನೆ ಮಾಡಿಕೊಂಡ ಅಧಿಕಾರಿ?!
ಇಷ್ಟೆಲ್ಲ ಆದ ಮೇಲೆ ರಾಜೇಶ್ ವಿಶ್ವಾಸ್ ಅವರು ತಮ್ಮ ಕೆಲಸವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಜಲಾಶಯದಲ್ಲಿ ಇದ್ದ ಆ ನೀರು ಕೃಷಿ ಭೂಮಿ ನೀರಾವರಿಗಾಗಿ ಇದ್ದಿದ್ದಲ್ಲ. ಅದು ತ್ಯಾಜ್ಯದ ನೀರಾಗಿತ್ತು. ಇನ್ನು ಮೊಬೈಲ್ನಲ್ಲಿ ಮಹತ್ವದ ದಾಖಲೆಗಳು, ಅನೇಕರ ಸಂಪರ್ಕ ನಂಬರ್ಗಳು ಇದ್ದವು. 3-4 ಅಡಿ ನೀರನ್ನು ಖಾಲಿ ಮಾಡಲು ಕಂಕೇರ್ ನೀರಾವರಿ ಡಿಪಾರ್ಟ್ಮೆಂಟ್ನ ಮುಖ್ಯಾಧಿಕಾರಿ ಅನುಮತಿ ಕೊಟ್ಟಿದ್ದರು. ಡೀಸೆಲ್ ಪಂಪ್ನಿಂದ ನೀರು ಖಾಲಿ ಮಾಡಿದ್ದೇವೆ. ಇದಕ್ಕೆ 7000 ರೂ.-8000 ರೂ.ವರೆಗೆ ಖರ್ಚು ಆಗಿದೆ. ಯಾವುದೇ ರೈತರಿಗೂ ತೊಂದರೆಯಾಗಿಲ್ಲ ಎಂದಿದ್ದಾರೆ. ಆದರೆ ಈ ವಿಷಯ ಮಾಧ್ಯಮಗಳಲ್ಲಿ ದೊಡ್ಡದಾಗುತ್ತಿದ್ದಂತೆ ರಾಜೇಶ್ ವಿಶ್ವಾಸ್ ಅಮಾನತುಗೊಂಡಿದ್ದಾರೆ.
-
ಕರ್ನಾಟಕ22 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ22 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ21 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ16 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್12 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ5 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ13 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
EXPLAINER3 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?